Introduction to translationAcademy

Introduction to translationAcademy

ಭಾಷಾಂತರ ಅಕಾಡೆಮಿಗೆ ಪೀಠಿಕೆ.

Introduction to translationAcademy

ಭಾಷಾಂತರ ಅಕಾಡೆಮಿಗೆ ಸ್ವಾಗತ.

“ಭಾಷಾಂತರ ಅಕಾಡೆಮಿ” ಯು ಪ್ರತಿಯೊಬ್ಬರೂ ಎಲ್ಲಿದ್ದರೂ ಸತ್ಯವೇದವನ್ನು ಅವರವರ ಭಾಷೆಯಲ್ಲಿ ಅತ್ಯತ್ತಮ ಮಟ್ಟದ ಭಾಷಾಂತರ ಮಾಡಲು ಸನ್ನದ್ಧರಾಗುವಂತೆ ಸಹಾಯಮಾಡುತ್ತದೆ.ಈ ಭಾಷಾಂತರ ಅಕಾಡೆಮಿಯನ್ನು ಎಲ್ಲ ವಿಚಾರಗಳು ಯಾರು ಬೇಕಾದರೂ ಸುಲಭವಾಗಿ ಸರಾಗವಾಗಿ ಭಾಷಾಂತರ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಇದನ್ನು ವ್ಯವಸ್ಥಿತವಾಗಿ, ಆಧುನಿಕ ತಂತ್ರಜ್ಞಾನದೊಂದಿಗೆ ಬಳಸಲು ಸಾಧ್ಯವಾಗುವಂತೆ ಮತ್ತು ಕಲಿಕೆಗಾಗಿ ಬಳಸಿಕೊಳ್ಳಲೂ ಅನುಕೂಲವಾಗುವಂತೆ ರಚಿಸಲಾಗಿದೆ ರಚನೆಯಲ್ಲಿ ಇದೊಂದು ಮಾದರಿ ಕೈಪಿಡಿಯಂತಿದೆ.

ಭಾಷಾಂತರ ಅಕಾಡೆಮಿಯಲ್ಲಿ ಈ ಕೆಳಗಿನ ಅಂಶಗಳು ಇವೆ.

  • ಪೀಠಿಕೆ - ಭಾಷಾಂತರ ಅಕಾಡೆಮಿ ಮತ್ತು ಅನಾವರಣಗೊಂಡ ಪದಯೋಜನೆಯನ್ನು ಪರಿಚಯಿಸುತ್ತದೆ.
  • ಪ್ರಕ್ರಿಯೆಯ ಕೈಪಿಡಿ – ಮುಂದಿನದು ಏನು ಎಂಬ ಪ್ರಶ್ನೆಗೆ ಉತ್ತರಿಸುತ್ತದೆ.
  • Translation Manual – ಭಾಷಾಂತರ ಕೈಪಿಡಿ ಭಾಷಾಂತರದ ಮೂಲಭೂತ ಸಿದ್ಧಾಂತ ಮತ್ತು ಪ್ರಾಯೋಗಿಕ ಭಾಷಾಂತರದ ಸಹಾಯ ಇವುಗಳನ್ನು ವಿವರಿಸುತ್ತದೆ.
  • ಪರಿಶೀಲನಾ ಕೈಪಿಡಿ - ಪರಿಶೀಲನಾ ಮೂಲಭೂತ ಸಿದ್ಧಾಂತ ಮತ್ತು ಜಾರಿಯಲ್ಲಿರುವ ಉತ್ತಮ ಪದ್ಧತಿಗಳನ್ನು ವಿವರಿಸುತ್ತದೆ.

ಸತ್ಯವೇದವನ್ನು ನಾವು ಏಕೆ ಭಾಷಾಂತರಿಸುತ್ತೇವೆ?

Introduction to translationAcademy :: Why We Translate the Bible

ಭಾಷಾಂತರ ಅಕಾಡೆಮಿಯ ಉದ್ದೇಶವೇನೆಂದರೆ ಸತ್ಯವೇದದ ಭಾಷಾಂತರಗಾರರನ್ನು ತರಬೇತಿಗೊಳಿಸುವುದು. ದೇವರ ವಾಕ್ಯಗಳನ್ನು ನಿಮ್ಮ ಭಾಷೆಗೆ ಭಾಷಾಂತರಿಸುವುದು , ನಿಮ್ಮ ಜನರನ್ನು ಯೇಸುಕ್ರಿಸ್ತನ ಶಿಷ್ಯರನ್ನಾಗಿ ಬೆಳೆಸುವ ಮುಖ್ಯ ಕರ್ತವ್ಯ ನಿಮಗೆ ಇದೆ. ನೀವು ಈ ಕರ್ತವ್ಯವನ್ನು ನಿರ್ವಹಿಸುವುದಕ್ಕೆ ಬದ್ಧರಾಗಿರಬೇಕು .ನಿಮ್ಮ ಹೊಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ಕಾರ್ಯದಲ್ಲಿ ದೇವರು ಸಹಾಯಮಾಡುವಂತೆ ಪ್ರಾರ್ಥಿಸಬೇಕು.

ಸತ್ಯವೇದದ ಮೂಲಕ ದೇವರು ನಮ್ಮೊಂದಿಗೆ ಮಾತನಾಡಿದ್ದಾನೆ. ಆತನು ಸತ್ಯವೇದವನ್ನು ಬರೆಯುವ ಬರಹಗಾರರಿಗೆ ಸ್ಫೂರ್ತಿಯಾಗಿದ್ದು ಆತನ ವಾಕ್ಯಗಳನ್ನು , ಮಾತುಗಳನ್ನು ಹಿಬ್ರೂ, ಅರಾಮಿಕ್, ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯುವಂತೆ ಪ್ರೇರೇಪಿಸಿದನು. ಕ್ರಿಸ್ತಪೂರ್ವ 1400ರಿಂದ ಕ್ರಿಸ್ತಶಕ 100ರವರೆಗೆ ಸುಮಾರು 40 ಬರಹಗಾರರು ಸತ್ಯವೇದವನ್ನು ಬರೆದರು. ಈ ಎಲ್ಲಾ ದಾಖಲೆಗಳನ್ನು ಮಧ್ಯಪೂರ್ವದೇಶದಲ್ಲಿ, ಉತ್ತರ ಆಫ್ರಿಕಾ ಮತ್ತು ಯೂರೋಪ್ ದೇಶಗಳಲ್ಲಿ ಬರೆಯಲಾಯಿತು. ಆತನ ಮಾತುಗಳನ್ನು ಅವರ ಭಾಷೆಯಲ್ಲಿ ದಾಖಲಿಸುವುದರೊಂದಿಗೆ ಆ ಕಾಲದಲ್ಲಿ ದೇವರು ಹೇಳಿದ ಮಾತುಗಳು ಆಯಾ ಸ್ಥಳದಲ್ಲಿದ್ದ ಜನರಿಗೆ ಅರ್ಥವಾಗುವಂತೆ ನೋಡಿಕೊಂಡರು.

ಪ್ರಸ್ತುತ ಇರುವ ನಿಮ್ಮ ದೇಶದ ಇಂದಿನ ಜನರು ಹಿಬ್ರೂ, ಅರಾಮಿಕ್ ಮತ್ತು ಗ್ರೀಕ್ ಭಾಷೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ದೇವರ ವಾಕ್ಯವನ್ನು ಅವರ ಭಾಷೆಯಲ್ಲಿ ಭಾಷಾಂತರಿಸಿದರೆ ಅವರು ಸುಲಭವಾಗಿ ಅರ್ಥಮಾಡಿಕೊಳ್ಳ ಬಲ್ಲರು. ಒಬ್ಬರ “ಮಾತೃಭಾಷೆ” ಅಥವಾ “ಹೃದಯದ ಭಾಷೆ” ಎಂದರೆ ಅವರು ಮಗುವಾಗಿ ಮಾತಾಡಿದ ಮೊದಲ ಭಾಷೆ ಮತ್ತು ಮನೆಯಲ್ಲಿ ಮಾತನಾಡುವ ಭಾಷೆ. ಈ ಭಾಷೆಯಲ್ಲೇ ಅವರು ತುಂಬಾ ಸುಲಲಿತವಾಗಿ, ಅನುಕೂಲಕರವಾಗಿ ಮತ್ತು ಅವರ ಭಾವನೆಗಳನ್ನು, ಆಲೋಚನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ದೇವರ ವಾಕ್ಯವನ್ನು ಅವರ ಹೃದಯದ ಭಾಷೆಯ ಮೂಲಕ ಓದಲು ಅನುಕೂಲ ಮಾಡಿಕೊಡುವುದು ಉತ್ತಮ. ಪ್ರತಿಯೊಂದು ಭಾಷೆಯೂ ಅತಿ ಮುಖ್ಯವಾದುದು ಮತ್ತು ಮೌಲ್ಯಯುತವಾದುದು.

ಅಲ್ಪಸಂಖ್ಯಾತ ಭಾಷೆಯೂ ಸಹ ನಿಮ್ಮ ರಾಷ್ಟ್ರೀಯ ಭಾಷೆಗಳಷ್ಟೇ ಮುಖ್ಯವಾದುದು ಮತ್ತು ಅದೇರೀತಿ ಅರ್ಥವನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುತ್ತದೆ. ಅವರವರ ಭಾಷೆಯನ್ನು ಮಾತನಾಡಲು ಯಾರೂ ನಾಚಿಕೆ ಪಡಬಾರದು. ಕೆಲವೊಮ್ಮೆ ಕೆಲವರು ತಮ್ಮ ಅಲ್ಪಸಂಖ್ಯಾತ ಗುಂಪಿನ ಭಾಷೆಗಳನ್ನು ರಾಷ್ಟ್ರದ ಬಹುಸಂಖ್ಯಾತ ಭಾಷೆ ಮಾತನಾಡುವವರ ಮಧ್ಯದಲ್ಲಿ ಮಾತನಾಡಲು ನಾಚಿಕೊಳ್ಳುವರು. ಆದರೆ ಸ್ಥಳೀಯ ಭಾಷೆಗಿಂತ ಸಹಜವಾಗಿ ಹೇಳುವುದಾದರೆ ಯಾವುದೂ ಅಷ್ಟು ಮುಖ್ಯವಲ್ಲ ಅಷ್ಟೊಂದು ಪ್ರತಿಷ್ಠೆಯ ವಿಷಯವಲ್ಲ ಅಥವಾ ರಾಷ್ಟ್ರೀಯ ಭಾಷೆಯಲ್ಲಿ ವಿದ್ಯಾವಂತರಾಗಬೇಕೆಂದಿಲ್ಲ. ಪ್ರತಿಯೊಂದು ಭಾಷೆಯಲ್ಲೂ ಸೂಕ್ಷ್ಮ ವ್ಯತ್ಯಾಸ ಮತ್ತು ಅರ್ಥಗಳ ಛಾಯೆ ಅಸಾಧಾರಣವಾದುದು. ನಮಗೆ ಯಾವ ಭಾಷೆ ಹಿತಕರವಾಗಿದೆಯೋ ಅದನ್ನೇ ನಾವು ಉಪಯೋಗಿಸಬೇಕು ಮತ್ತು ನಮಗೆ ಯಾವ ಭಾಷೆಯಲ್ಲಿ ಸಂವಹನ ಮಾಡಲು ಸುಲಭವಾಗುತ್ತದೋ ಆ ಭಾಷೆಯನ್ನು ಬಳಸಬೇಕು .

ಶ್ರದ್ಧೆ (Credits): “ಬೈಬಲ್ ಭಾಷಾಂತರ ಸಿದ್ಧಾಂತಗಳು ಮತ್ತು ಪ್ರಾಯೋಗಿಕ ಪಡೆದದ್ದು” by Todd Price, Ph.D. CC BY-SA 4.0


ಅನಾವರಣಗೊಂಡ ಪದಗಳ ಯೋಜನೆ.

Introduction to translationAcademy :: The unfoldingWord Project

** ನಿಬಂಧನೆಯಿಲ್ಲದ ಸತ್ಯವೇದದ ವಿಷಯವನ್ನು ಪ್ರತಿಯೊಂದು ಭಾಷೆಯಲ್ಲೂ ನಾವು ನೋಡಲು** ಅನಾವರಣಗೊಂಡ ಪದಗಳ ಯೋಜನೆ ಇರುವುದು ಯೇಸುಕ್ರಿಸ್ತನು “ಪ್ರತಿಯೊಂದು ಜನರ ಗುಂಪನ್ನು” ಆತನ ಶಿಷ್ಯರನ್ನಾಗಿ ಮಾಡುವಂತೆ ತನ್ನ ಶಿಷ್ಯರಿಗೆ ಅಪ್ಪಣೆ ಕೊಟ್ಟನು.

" ಯೇಸು ಅವರ ಬಳಿ ಬಂದು ಅವರನ್ನು ಕುರಿತು, ಭೂಪರಲೋಕಗಳಲ್ಲಿ ಮೇಲಿನ ಸರ್ವಾಧಿಕಾರವನ್ನು ನನಗೆ ಕೊಡಲ್ಪಟ್ಟಿದೆ ಎಂದು ಹೇಳಿದನು. ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿ. ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ. ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕಾಪಾಡಿಕೊಳ್ಳುವಂತೆ ಅವರಿಗೆ ಉಪದೇಶಮಾಡಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ, ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು’" (ಮತ್ತಾಯ 28:18-20 ULB)

ನಮಗೆ ವಾಗ್ದಾನ ಮಾಡಿದಂತೆ ಎಲ್ಲಾ ಭಾಷೆಯನ್ನು ಮಾತನಾಡುವ ಜನರು ಪರಲೋಕದಲ್ಲಿ ಇರುವರು:

“ಇವುಗಳಾದ ಮೇಲೆ ಇಗೋ, ಯಾರಿಂದಲೂ ಎಣಿಸಲಾಗದಂತಹ ಮಹಾ ಸಮೂಹವು ಸಿಂಹಾಸನದ ಮುಂದೆ ಯಜ್ಞದ ಕುರಿಯಾದಾತನ ಮುಂದೆಯು ನಿಂತಿರುವುದನ್ನು ಕಂಡೆನು. ಅವರು ಸಕಲ ಜನಾಂಗ, ಕುಲ, ಪ್ರಜೆಗಳವರು, ಸಕಲಭಾಷೆಗಳನ್ನು ಆಡುವವರು ಆಗಿದ್ದರು.” (ಪ್ರಕಟಣೆ 7:9 ULB)

ದೇವರ ವಾಕ್ಯಗಳನ್ನು ಹೃದಯದ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದು ಬಹು ಮುಖ್ಯವಾದುದು .

“ಆದ ಕಾರಣ ಸಾರಿದ ವಾರ್ತೆಯು ನಂಬಿಕೆಗೆ ಆಧಾರ, ಆ ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ.” (ರೋ.ಪ. 10:17 ULB)

ನಾವು ಇದನ್ನು ಹೇಗೆ ಮಾಡಬಹುದು ?

ನಿರ್ಬಂಧವಿಲ್ಲದ ಸತ್ಯವೇದದ ವಿಷಯದ ಉದ್ದೇಶವನ್ನು ಪ್ರತಿಯೊಂದು ಭಾಷೆಯಲ್ಲಿ ನಾವು ಹೇಗೆ ನಿರ್ವಹಿಸಬಹುದು?

ನಾವು ಏನು ಮಾಡಬೇಕು ?

  • ವಿಷಯ - ನಿರ್ಬಂಧವಿಲ್ಲದ ಸತ್ಯವೇದದ ವಿಷಯವನ್ನು ನಾವು ಸೃಷ್ಟಿಸಿ ಮತ್ತು ಲಭ್ಯವಿರುವುದನ್ನು ಭಾಷಾಂತರ ಮಾಡಲು ಒದಗಿಸುವುದು. ಸಂಪೂರ್ಣವಾದ ಸಂಪನ್ಮೂಲ ಮತ್ತು ಭಾಷಾಂತರಗಳ ಪಟ್ಟಿಯನ್ನು ಪಡೆಯಲು ನೋಡು See http://ufw.io/content/ ಇಲ್ಲಿ ಕೆಲವು ಮಾದರಿಯನ್ನು ನೀಡಿದೆ.
  • ಮುಕ್ತ ಸತ್ಯವೇದದ ಕತೆಗಳು - ಕಾಲಾನುಕ್ರಮವಾದ ಚಿಕ್ಕ ಸತ್ಯವೇದದಲ್ಲಿ 50 ಮುಖ್ಯಕತೆಗಳನ್ನು ಸೇರಿಸಿ ಮಾಡಲಾಗಿದೆ. ಇದರಲ್ಲಿ ಸೃಷ್ಟಿಯಿಂದ (ಆದಿಕಾಂಡ -ಪ್ರಕಟಣೆಯ ಗ್ರಂಥದವರೆಗೂ, ಸುವಾರ್ತೆ ಸಾರಲು ಮತ್ತು ಶಿಷ್ಯತ್ವಗಳನ್ನು ಕುರಿತು ಮುದ್ರಣದಲ್ಲಿ, ಆಡಿಯೋ ಮತ್ತು ವೀಡಿಯೋಗಳಲ್ಲಿ ಅಳವಡಿಸಿದೆ. (ನೋಡಿ http://ufw.io/stories/).
  • ಸತ್ಯವೇದ -ವು ಸ್ಪೂರ್ತಿದಾಯಕವಾಗಿ, ಸಹಜವಾಗಿ, ಸಂಪೂರ್ಣವಾಗಿ, ಅಧಿಕಾರಯುತವಾಗಿರುವ ದೇವರ ವಾಕ್ಯವನ್ನು ಮುಕ್ತಪರವಾನಗಿಯಡಿಯಲ್ಲಿ ದೊರೆಯುವಂತೆ ಮಾಡಿದುದಲ್ಲದೆ, ನಿರ್ಬಂಧವಿಲ್ಲದ ಭಾಷಾಂತರ ಮಾಡಲು, ಬಳಸಲು ಮತ್ತು ವಿತರಿಸಲು ಅವಕಾಶ ಮಾಡಿಕೊಟ್ಟಿದೆ. (ನೋಡಿ http://ufw.io/bible/).
  • ಭಾಷಾಂತರ ಟಿಪ್ಪಣಿಗಳು - ಭಾಷಾಶಾಸ್ತ್ರ, ಸಾಂಸ್ಕೃತಿಕ ಮತ್ತು ಸತ್ಯವೇದ ಅಭ್ಯಾಸಕ್ಕೆ ಬೇಕಾದ ಸಹಾಯವನ್ನು ಭಾಷಾಂತರಗಾರರಿಗೆ ನೀಡುವಂತದ್ದು. ಇವು ಮುಕ್ತ ಬೈಬಲ್ ಕತೆಗಳಿಗೆ ಮತ್ತು ಬೈಬಲ್ ಗೆ ಇರುವಂತದ್ದು. (ನೋಡಿ http://ufw.io/tn/).
  • ಭಾಷಾಂತರ ಪ್ರಶ್ನೆಗಳು -ಭಾಷಾಂತರಗಾರರು ಮತ್ತು ಪರಿಶೀಲನೆ ಮಾಡುವವರು ಪ್ರಶ್ನೆಕೇಳಲು ಒದಗಿಸುವ ವಾಕ್ಯಭಾಗದ ಚಿಕ್ಕಚಿಕ್ಕ ಭಾಗಗಳು. ಇವು ಅವರು ಮಾಡಿರುವ ಭಾಷಾಂತರಗಳು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆಯೇ ಎಂಬುದನ್ನು ದೃಢಪಡಿಸಲು ಸಹಾಯಮಾಡುತ್ತವೆ. ಮುಕ್ತ ಸತ್ಯವೇದದ ಕತೆಗಳು ಮತ್ತು ಸತ್ಯವೇದಗಳಿಗೆ ಲಭ್ಯವಿರುವಂತದ್ದು. (see http://ufw.io/tq/).

ನಂಬಿಕೆಯ ಹೇಳಿಕೆಗಳು.

Introduction to translationAcademy :: Statement of Faith

ಈ ದಾಖಲೆಯ ಪ್ರತಿಯು ಈ ಲಿಂಕ್ ನಲ್ಲಿ http://ufw.io/faith/ದೊರೆಯುತ್ತದೆ.

ಈ ಕೆಳಗಿನ ವಿಶ್ವಾಸಾರ್ಹ ಹೇಳಿಕೆಗಳು ಹೇಳಿರುವಂತಹ ಸಂಸ್ಥೆಯ ಸದಸ್ಯರು ಮತ್ತು. ಅನಾವರಣಗೊಂಡ ಪದಗಳು ಈ ಪ್ರಾಜೆಕ್ಟ್ ಗೆ ಕೊಡುಗೆ ನೀಡಿದವರೆಲ್ಲರೂ ಒಪ್ಪಿಗೆಯನ್ನು ನೀಡಿದ್ದಾರೆ ಇದೊಂದು ಒಪ್ಪಂದ – ಐತಿಹಾಸಿಕ ವಿಶ್ವಾಸ ಪ್ರಮಾಣ : ಅಪೋಸ್ತಲರ ವಿಶ್ವಾಸ ಪ್ರಮಾಣ, ನೈಸೀಯ ವಿಶ್ವಾಸ ಪ್ರಮಾಣ, ಮತ್ತು ಅತನೇಶಿಯನ್ ವಿಶ್ವಾಸ ಸೂತ್ರ ಮತ್ತು ಲೂಸಾನೆ ಒಡಂಬಡಿಕೆ.

ಕ್ರೈಸ್ತ ವಿಶ್ವಾಸವನ್ನು ಅವಶ್ಯವಿರುವ ವಿಶ್ವಾಸಗಳು ಮತ್ತು ಬಾಹ್ಯ ನಂಬಿಕೆ ಎಂದು ವಿಂಗಡಿಸಬಹುದು ಎಂದು ನಾವು ನಂಬುತ್ತೇವೆ. (ರೋಮಾಪುರದವರಿಗೆ ಬರೆದ ಪತ್ರಿಕೆ 14).

ಅವಶ್ಯವಿರುವ ನಂಬಿಕೆಗಳು.

ಯೇಸುವನ್ನು ಅನುಸರಿಸಿ ನಡೆಯುವವರ ಬಗ್ಗೆ ತೀರ್ಮಾನಿಸಲು ಅವಶ್ಯವಾದ ನಂಬಿಕೆಗಳು ಮತ್ತು ಇವುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ಅಥವಾ ಉದಾಸೀನ ಮಾಡಲು ಸಾಧ್ಯವಿಲ್ಲ.

  • ನಮ್ಮ ನಂಬಿಕೆಯಂತೆ ಬೈಬಲ್ (ಸತ್ಯವೇದ ಸ್ಪೂರ್ತಿದಾಯಕ, ಸನ್ಮಾರ್ಗದಲ್ಲಿ ನಡೆಯುವ, ಸಂಪೂರ್ಣವಾದ, ಅಧಿಕಾರಯುತವಾದ ದೇವರ ಮಾತುಗಳನ್ನು ಒಳಗೊಂಡಿರುವಂತದ್ದು (1 ಥೆಸಲೋನಿಕ 2:13; 2 ತಿಮೋಥಿ 3:16-17).
  • ದೇವರು ಒಬ್ಬನೆ, ನಿತ್ಯ ಶಾಶ್ವತವಾಗಿ ನೆಲೆಸಿರುವವನು ತ್ರಯೇಕ ಎಂದು ನಾವು ನಂಬಿದ್ದೇವೆ. ತಂದೆ ದೇವರು, ಮಗನಾದ ಯೇಸುಕ್ರಿಸ್ತನು ಪವಿತ್ರಾತ್ಮನು ಮೂವರು ಒಬ್ಬರೇ (ಮತ್ತಾಯ ಯೋಹಾನ 10:30).
  • ನಾವು ಯೇಸುಕ್ರಿಸ್ತನ ದೈವತ್ವವನ್ನು ನಂಬುತ್ತೇವೆ (ಯೋಹಾನ 1:1-4; ಪಿಲಿಪ್ಪಿಯರು 2:5-11; 2ನೇ ಪೇತ್ರ1:1).
  • ಯೇಸುಕ್ರಿಸ್ತನ ಮಾನವೀಯತೆಯನ್ನು ನಂಬುತ್ತೇವೆ. ಆತನ ಪರಿಶುದ್ಧವಾದ ಗುಟ್ಟನ್ನು, ಆತನ ಪಾಪರಹಿತ ಜೀವನಕ್ಕಾಗಿ, ಆತನ ಪವಾಡಗಳನ್ನು, ಆತನ ರಕ್ತಧಾರೆಯಿಂದ ಪಾಪಿಗಳ ರಕ್ಷಣೆಗಾಗಿ ಜೀವತೆತ್ತವನನ್ನು, ಆತನ ಪುನರುತ್ಥಾನವನ್ನು ಮತ್ತು ಆತನ ದಿವಾರೋಹಣವನ್ನು, ತಂದೆ ದೇವರ ಬಲಪಾರ್ಶ್ವದಲ್ಲಿ ಕುಳಿತಿರುವುದನ್ನು ನಾವು ನಂಬುತ್ತೇವೆ. (ಮತ್ತಾಯ 1:18,25; 1 ಕೊರಿಂಥ 15:1-8; ಇಬ್ರಿಯಾ 4:15; ಆ.ಕೃ 1:9-11; ಆ.ಕೃ 2:22-24).
  • ಪ್ರತಿಯೊಬ್ಬ ಮನುಷ್ಯನೂ ಅಂತರ್ಗತವಾಗಿ ಪಾಪಿಯಾಗಿರುತ್ತಾನೆ ಮತ್ತು ನಿರಂತರವಾಗಿ ನರಕವನ್ನು ಹೊಂದಲು ಅರ್ಹನಾಗಿರುತ್ತಾನೆ ಎಂಬುದನ್ನು ನಂಬುತ್ತೇವೆ. (ರೋ.ಪ. 3:23; ಯೆಶಾಯ 64:6-7).
  • ಪಾಪದಿಂದ ವಿಮೋಚನೆ ಪಡೆಯುವುದೆಂದರೆ ದೇವರಿಂದ ದೊರೆಯುವ ವರ, ಇದು ಯೇಸು ಕ್ರಿಸ್ತನ ತ್ಯಾಗಪೂರ್ಣ ಮರಣ ಮತ್ತು ಆತನ ಪುನರುತ್ಥಾನದಿಂದ , ಆತನ ಕೃಪೆ ಮತ್ತು ಭರವಸೆಯಿಂದ ದೊರೆಯುತ್ತದೆಯೇ ಹೊರತು ನಮ್ಮ ಕಾರ್ಯದಿಂದಲ್ಲ ಎಂದು ನಂಬುತ್ತೇವೆ. (ಯೋಹಾನ 3:16; ಯೋಹಾನ 14:6; ಎಫೇಸ 2:8-9, ತೀತ 3:3-7).
  • ನಿಜವಾದ ನಂಬಿಕೆ ಯಾವಾಗಲೂ ಪಶ್ಚಾತ್ತಾಪ ಮತ್ತು ಪವಿತ್ರಾತ್ಮನಿಂದ ಉಂಟಾಗುವ ಪುನರುಜ್ಜೀವನ ವನ್ನು ಒಳಗೊಂಡಂತೆ ದೊರೆಯುವಂತದ್ದು ಎಂದು ನಾವು ನಂಬುತ್ತೇವೆ. (ಯಾಕೋಬ 2:14-26; ಯೋಹಾನ 16:5-16; ರೋ.ಪ. 8:9).
  • ಪವಿತ್ರಾತ್ಮನಿಂದ ಉಂಟಾದ ದೇವರ ಸೇವೆ , ಯೇಸುಕ್ರಿಸ್ತನ ಹಿಂಬಾಲಕರಲ್ಲಿ ನೆಲೆಸಿರುವ ಪವಿತ್ರಾತ್ಮನಿಂದ ಆಗುವ ಸೇವೆ ದೈವೀಕವಾದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂಬುದನ್ನು ನಾವು ನಂಬುತ್ತೇವೆ. (ಯೋಹಾನ 14:15-26; ಎಫೇಸ 2:10; ಗಲಾತ್ಯ 5:16-18).
  • ನಮ್ಮ ಒಡೆಯನಾದ ಯೇಸು ಕ್ರಿಸ್ತನ ಆತ್ಮೀಕ ಐಕ್ಯತೆಯಲ್ಲಿ ಎಲ್ಲಾ ವಿಶ್ವಾಸಿಗಳು ಎಲ್ಲಾ ದೇಶದವರು , ಎಲ್ಲಾ ಭಾಷೆಯವರು , ಎಲ್ಲಾ ಜನಾಂಗಗಳು ಒಂದಾಗುತ್ತಾರೆ ಎಂದು ನಾವು ನಂಬುತ್ತೇವೆ. (ಪಿಲಿಪ್ಪಿ 2:1-4; ಎಫೇಸ 1:22-23; 1 ಕೊರಿಂಥ 12:12,27).
  • ಯೇಸುಕ್ರಿಸ್ತನು ವೈಯಕ್ತಿಕವಾಗಿಯೂ, ಭೌತಿಕವಾಗಿಯೂ ಪುನಃ ಬರುತ್ತಾನೆ ಎಂಬುದನ್ನು ನಾವು ನಂಬುತ್ತೇವೆ. (ಮತ್ತಾಯ 24:30; ಆ.ಕೃ.1:10-11).
  • ರಕ್ಷಿಸಲ್ಪಟ್ಟವನು ಮತ್ತು ರಕ್ಷಿಸಲ್ಪಡದವರ ಪುನರುತ್ಥಾನದ ಬಗ್ಗೆ ನಮಗೆ ನಂಬಿಕೆ ಇದೆ. ರಕ್ಷಣೆಗೆ ಒಳಪಡದವರು, ನಿರಂತರ ನಿತ್ಯ ದಂಡನೆಗೆ ಗುರಿಯಾದವರು ಮತ್ತು ರಕ್ಷಿಸಲ್ಪಟ್ಟವರು ಪರಲೋಕದಲ್ಲಿ ನಿರಂತರ ಆಶೀರ್ವಾದಕ್ಕೆ ಒಳಗಾಗುತ್ತಾರೆ ಎಂಬುದನ್ನು ನಾವು ನಂಬುತ್ತೇವೆ. (ಇಬ್ರಿಯ 9:27-28; ಮತ್ತಾಯ 16:27; ಯೋಹಾನ 14:1-3; ಮತ್ತಾಯ 25:31-46).

ಬಾಹ್ಯ ನಂಬಿಕೆಗಳು .

ಬಾಹ್ಯ ನಂಬಿಕೆಗಳು ಸತ್ಯವೇದದಲ್ಲಿ ಬರುವ ನಂಬಿಕೆಗಳಕುರಿತಾಗಿದ್ದು ಕ್ರಿಸ್ತನಿಗೆ ನಿಷ್ಠರಾಗಿರುವ ಭಕ್ತರು ಇದನ್ನು ಒಪ್ಪದೆ ಇರಬಹುದು (ಉದಾಹರಣೆಗೆ ದೀಕ್ಷಾಸ್ನಾನ, ಕರ್ತನ ರಾತ್ರಿ ಭೋಜನ, ಕ್ರಿಸ್ತನ ಗಾಯಗಳು ಮುಂತಾದವು).

ಈ ಎಲ್ಲಾ ವಿಷಯಗಳ ಬಗ್ಗೆ ಒಪ್ಪದೆ ಇದ್ದರೂ ಅಭಿಮತರಾಗಿರುತ್ತೇವೆ ಮತ್ತು ನಾವೆಲ್ಲರೂ ಸುವಾರ್ತೆ ಸಾರುವುದರ ಮೂಲಕ ಜನರನ್ನು ಕರ್ತನ ಶಿಷ್ಯರನ್ನಾಗಿ ಮಾಡುವ ಒಂದೇ ಸಾಮಾನ್ಯ ಉದ್ದೇಶವನ್ನು ನೆರವೇರಿಸಲು ಒಪ್ಪುತ್ತೇವೆ. (ಮತ್ತಾಯ 28:18-20).


ಭಾಷಾಂತರ ಮಾರ್ಗದರ್ಶನಗಳು.

Introduction to translationAcademy :: Translation Guidelines

ಈ ದಾಖಲೆಯ ಅಧಿಕೃತ ಪ್ರತಿಯನ್ನು ಈ ಲಿಂಕ್ ನಲ್ಲಿ ಪಡೆಯಬಹುದು. http://ufw.io/guidelines/.

ಈ ಕೆಳಗೆ ನೀಡಿರುವ ತತ್ವಗಳು ಮತ್ತು ವಿಧಾನಗಳನ್ನು ಭಾಷಾಂತರ ಮಾಡುವಾಗ ಉಪಯೋಗಿಸಲಾಗು -ತ್ತದೆ.ಇವುಗಳನ್ನು ಸಂಸ್ಥೆಯ ಸದಸ್ಯರು ಮತ್ತು ಕೊಡುಗೆದಾರರು ಪದ ಅನಾವರಣ ಪ್ರಾಜೆಕ್ಟ್ /ಯೋಜನೆಗೆ ಒಪ್ಪಿಗೆ ನೀಡುವವರಿದ್ದಾರೆ.(see https://unfoldingword.org). ಎಲ್ಲಾ ಭಾಷಾಂತರ ಪ್ರಕ್ರಿಯೆಗಳು ಈ ಸಾಮಾನ್ಯ ಮಾರ್ಗದರ್ಶನಗಳನ್ನು ಅನುಸರಿಸಿ ನಡೆಯುತ್ತವೆ.

  1. ನಿರ್ದಿಷ್ಟವಾದ — ಮೂಲಪಠ್ಯ /ವಿಷಯಗಳನ್ನು ನಿರ್ದಿಷ್ಟವಾಗಿ, ವಿಷಯವನ್ನು ಬಿಟ್ಟು ಬೇರೆಯದನ್ನು ಸೇರಿಸದೆ, ಬದಲಾಯಿಸದೆ ಇರುವ ಅರ್ಥವನ್ನು ಬಿಟ್ಟು ನಿಮ್ಮದೇ ಆದ ವಿವರವನ್ನು ನೀಡುವುದು ಇವು ಯಾವುದನ್ನೂ ಮಾಡದೆ ನಿರ್ದಿಷ್ಟವಾದ ಭಾಷಾಂತರ ಮಾಡಬೇಕು. ಭಾಷಾಂತರಿಸಿದ ವಿಷಯ ಪ್ರಾಮಾಣಿಕವಾಗಿ ಎಷ್ಟು ಸಂಕ್ಷಿಪ್ತವಾಗಿ ತಿಳಿಸಬಹುದೋ ಅಷ್ಟು ಸಂಕ್ಷಿಪ್ತವಾಗಿ, ಮೂಲ ವಿಷಯದ ಅರ್ಥಕೆಡದಂತೆ ಮೂಲ ಓದುಗರು ಅರ್ಥಮಾಡಿಕೊಂಡಂತೆ ತಿಳಿಸಲು ಭಾಷಾಂತರ ಮಾಡಬೇಕು. (see Create Accurate Translations)
  2. ಸ್ಪಷ್ಟವಾದ — ಭಾಷಾಂತರಿಸುವಾಗ ಅತ್ಯನ್ನತ ಮಟ್ಟದ ಗ್ರಹಿಕೆಗೆ ಅನುಗುಣವಾಗಿ ಯಾವ ಭಾಷಾರಚನೆಯನ್ನಾದರೂ ಅವಶ್ಯಕತೆಗೆ ತಕ್ಕಂತೆ ಬಳಸಬಹುದು. ಮೂಲ ವಿಷಯವನ್ನು ಸ್ಪಷ್ಟವಾಗಿ ತಿಳಿಸಲು ಎಷ್ಟು ಸಾಧ್ಯವೋ ಅಷ್ಟು ನಿಖರವಾಗಿ ಅವಶ್ಯವಿರುವ ಪದಗಳನ್ನು ಬಳಸಿ ಪುನರ್ ರಚಿಸಬಹುದು… (see Create Clear Translations)
  3. ಸಹಜವಾದ — ನಿಮ್ಮ ಭಾಷೆಯಲ್ಲಿ ಬಳಸಿರುವ ಅನುರೂಪ ವಿಷಯವನ್ನು ಸಹಜವಾಗಿ ತಿಳಿಸಲು ಭಾಷೆಯ ವಿವಿಧ ರೂಪವನ್ನು ಪರಿಣಾಮಕಾರಿಯಾಗಿ ಬಳಸುವುದರೊಂದಿಗೆ ಅದು ನಿಮ್ಮ ಭಾಷೆಯಲ್ಲಿ ಪ್ರತಿಬಿಂಬಿತವಾಗಿರಬೇಕು. (see Create Natural Translations)
  4. ವಿಶ್ವಾಸಪೂರ್ಣ — ನಿಮ್ಮ ಭಾಷಾಂತರದಲ್ಲಿ ಯಾವುದೇ ರಾಜಕೀಯ ವಿಷಯವನ್ನಾಗಲೀ ಪಂಗಡವನ್ನಾಗಲೀ ಸಿದ್ಧಾಂತಗಳನ್ನಾಗಲೀ, ಸಾಮಾಜಿಕ ಸಾಂಸ್ಕೃತಿಕ ಅಥವಾ ದೈವಶಾಸ್ತ್ರವಾಗಲೀ ಬರದಂತೆ ತಡೆಹಿಡಿಯಬೇಕು. ಮೂಲಸತ್ಯವೇದ ಆಧಾರಿತ ಭಾಷೆಗಳಲ್ಲಿ ಬರುವ ಭಾಷಾ ಸಂಪತ್ತಿಗೆ ನಿಷ್ಠೆಯುಳ್ಳ ಮುಖ್ಯಪದಗಳನ್ನು ಬಳಸಿಕೊಳ್ಳಿ. ತಂದೆ ದೇವರು ಮತ್ತು ದೇವಕುಮಾರನ ನಡುವೆ ಇರುವ ಸಂಬಂಧವನ್ನು ವಿವರಿಸಲು ಸಾಮಾನ್ಯವಾಗಿ ಬಳಸುವ ಭಾಷಾ ಪದಗಳನ್ನು ಸತ್ಯವೇದದಲ್ಲಿ ಬರುವ ಪದಗಳಿಗೆ ಪರ್ಯಾಯವಾಗಿ ಬಳಸಿಕೊಳ್ಳಿ. ಇವುಗಳನ್ನು ಅಡಿಟಿಪ್ಪಣಿಯಲ್ಲಿ ಅಥವಾ ಪೂರಕ ಸಂಪನ್ಮೂಲಗಳೊಂದಿಗೆ ಅವಶ್ಯವಿದ್ದರೆ (see ನಿಷ್ಠೆಯುಳ್ಳ ಭಾಷಾಂತರವನ್ನು ಸೃಷ್ಟಿಸಿ)
  5. ಅಧಿಕಾರವುಳ್ಳ — ಮೂಲ ಸತ್ಯವೇದ ವಾಕ್ಯದ ಭಾಷೆಯು ಸತ್ಯವೇದದ ವಿಷಯವನ್ನು ಭಾಷಾಂತರ ಮಾಡಲು ಉನ್ನತ ಅಧಿಕಾರವನ್ನು ಹೊಂದಿದೆ. ಇದನ್ನೇ ನಿಮ್ಮ ಭಾಷಾಂತರದಲ್ಲಿ ಬಳಸಬೇಕು. ನಂಬಲರ್ಹವಾದ ಸತ್ಯವೇದದ ವಿಷಯವನ್ನು ಇತರ ಭಾಷೆಗಳಲ್ಲಿ ಬಳಸುತ್ತಾರೆ. ಏಕೆಂದರೆ ಇದರ ನಿಖರತೆ ಮತ್ತು ಆಕರಗ್ರಂಥಗಳ ತಾತ್ಪೂರ್ತಿಕತೆಯನ್ನು ಕಂಡುಕೊಳ್ಳಲು ಬಳಸುತ್ತಾರೆ. (see Create Authoritative Translations)
  6. ಐತಿಹಾಸಿಕ — ಐತಿಹಾಸಿಕವಾಗಿ ನಡೆದ ಘಟನೆಗಳು ಮತ್ತು ವಾಸ್ತವಾಂಶಗಳನ್ನು ನಿಖರವಾಗಿ ತಿಳಿಸಬೇಕು, ಇದರೊಂದಿಗೆ ನಿಖರವಾಗಿ ತಿಳಿಸಬೇಕಾದ ಹೆಚ್ಚಿನ ಮಾಹಿತಿಗಳನ್ನು ತಿಳಿಸಲು ಉದ್ದೇಶಿಸಿರುವ ಮಾಹಿತಿಗಳನ್ನು ಮೂಲವಿಷಯವನ್ನು ತಿಳಿದಿರುವವರೊಂದಿಗೆ ಕೆಲವೊಮ್ಮೆ ಜನರು ಅದೇ ವಿಷಯವನ್ನ ಮತ್ತು ಸಂಸ್ಕೃತಿಯನ್ನು ಸರಿಯಾಗಿ ಹಂಚಿಕೊಳ್ಳತಕ್ಕದ್ದು. (see Create Historical Translations
  7. ಸಮಾನ — ಆಕರ ಗ್ರಂಥಗಳಲ್ಲಿ ಇರುವ ವಿಷಯದ ಜೊತೆಗೆ ಭಾವನೆಗಳನ್ನು ಮತ್ತು ಮನೋದೋರಣೆಗಳನ್ನು ಸಂವಹನ ಮಾಡತಕ್ಕದ್ದು. ಮೂಲ ವಾಕ್ಯಭಾಗದಲ್ಲಿರುವ ವಿವಿಧ ಸಾಹಿತ್ಯ ಪ್ರಕಾರಗಳನ್ನು ಯಥಾವತ್ತಾಗಿ ಇಡಲು ಪ್ರಯತ್ನಿಸಬೇಕು. ಇವುಗಳಲ್ಲಿ ನಿರೂಪಣಾ ಮಾದರಿಯ ವಿಷಯ, ಪದ್ಯರೂಪ , ಪ್ರವಾದನೆಗಳು, ಎಚ್ಚರಿಕೆಗಳು ಮುಂತಾದವುಗಳು ನೀಡುವ ಪರಿಣಾಮವನ್ನು ನಿಮ್ಮ ಭಾಷೆಯಲ್ಲೂ ಬಳಸಿ ಸಮಾನ ಭಾಷಾಂತರವನ್ನು ಕಾಯ್ದುಕೊಳ್ಳಬೇಕು. (see Create Equal Translations)

ಭಾಷಾಂತರದ ಗುಣಮಟ್ಟವನ್ನು ಗುರುತಿಸುವುದು ಮತ್ತು ಅದನ್ನು ನಿರ್ವಹಣೆ ಮಾಡುವುದು

ಭಾಷಾಂತರದ ಗುಣಮಟ್ಟವನ್ನು ಸಾಮಾನ್ಯವಾಗಿ ಮೂಲಪ್ರತಿಯ ಯಥಾವತ್ತು ಭಾಷಾಂತರ ಆಗಿದೆಯೇ ಎಂಬುದನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಇದರೊಂದಿಗೆ ಭಾಷಾಂತರ ಮಾಡಿರುವ ವಿಷಯವು ಆ ಭಾಷೆಯನ್ನು ಮಾತನಾಡುವ ಜನರಿಗೆ ಎಷ್ಟು ಪರಿಣಾಮಕಾರಿಯಾಗಿ ಅರ್ಥವಾಗುತ್ತದೆ ಎಂಬುದರ ಮೇಲೆ ಅವಲಂಭಿತವಾಗಿದೆ. ಭಾಷಾ ಸಮುದಾಯದೊಂದಿಗೆ ಭಾಷಾಂತರದ ಗುಣಮಟ್ಟವನ್ನು ಪರಿಶೀಲಿಸಲು ನಾವು ನೀಡುವ ಸಲಹೆ ಎಂದರೆ ಆ ಭಾಷೆಯ ಜನರಿಗೆ ಸುಲಭವಾಗಿ ಅರ್ಥವಾಗಬೆಕು ಮತ್ತು ಆ ಭಾಷೆಯಜನರ ಸಮೂಹವು ಮೂಲವಿಷಯದ ಯಥಾವತ್ತಾದ ಭಾಷಾಂತರ ಆಗಿರುವ ಬಗ್ಗೆ ಪರಿಶೀಲಿಸಿ ದೃಢಪಡಿಸಬೇಕು. ಭಾಷಾಂತರ ಯೋಜನೆಯ ಪ್ರಕ್ರಿಯೆಯಲ್ಲಿ ಭಾಷೆಯನ್ನು ಆಧಾರದ ಮೇಲೆ ನಿರ್ದಿಷ್ಟವಾದ ಹಂತಗಳು ಕೆಲವೊಮ್ಮೆ ವಿಶೇಷರೀತಿಯಲ್ಲಿ ಭಿನ್ನವಾಗಿರಬಹುದು.

ಸಾಮಾನ್ಯವಾಗಿ ಭಾಷಾಂತರ ಉತ್ತಮವಾಗಿದೆ ಎಂದು ನಿರ್ಧರಿಸಲು ಭಾಷಾಂತರ ಉತ್ತಮವಾಗಿದೆ ಎಂದು ನಿರ್ಧರಿಸಲು ಭಾಷಾಂತರ ಆಗಿರುವ ವಿಷಯ್ನ್ನು ಆ ಭಾಷೆಯನ್ನು ನಿರ್ಧರಿಸಲು ಭಾಷಾಂತರ ಆಗಿರುವ ವಿಷಯವನ್ನು ಆ ಭಾಷೆಯನ್ನು ಮಾತನಾಡುವ ಸಮುದಾಯದ ಜನರು ಮತ್ತು ಅದೇ ಭಾಷೆ ಮಾತನಾಡುವ ಚರ್ಚ್ ನ ನಾಯಕರು ಪುನರ್ ಪರಿಶೀಲನೆ ಮಾಡಿರಬೇಕು.

  1. ನಿಖರವಾದ, ಸಷ್ಟವಾದ, ಸಹಜವಾದ, ಮತ್ತು, ಸಮಾನವಾದ — ಮೂಲ ವಿಷಯಕ್ಕೆ ವಿಶ್ವಾಸಾರ್ಹವಾದ , ಅರ್ಥಪೂರ್ಣ ಭಾಷಾಂತರ ಉದ್ದೇಶದೊಂದಿಗೆ , ಸಭಾ ಜನರ ಗುಂಪು ನಿರ್ಧರಿಸಿದಂತೆ ಜಾಗತಿಕ ಮಟ್ಟದ ಚರ್ಚ್ ಮತ್ತು ಐತಿಹಾಸಿಕ ಮತ್ತು ಪರಿಣಾಮಕಾರಿಯಾಗಿ ಒಪ್ಪಂದ ಮಾಡಿಕೊಳ್ಳುವುದು .
  2. ಚರ್ಚ್ ನಿಂದ ದೃಢಪಡಿಸಿದ್ದು - ಚರ್ಚ್ ನಿಂದ ಬಳಸಿ ಮತ್ತು ದೃಢಪಡಿಸಿದ್ದು (ನೋಡಿ Create Church-Approved Translations)

ನಾವು ಇದರೊಂದಿಗೆ ಈ ಕೆಳಗಿನಂತೆ ಭಾಷಾಂತರ ಕಾರ್ಯ ಇರಬೇಕೆಂದು ಶಿಫಾರಸ್ಸು ಮಾಡುತ್ತೇವೆ:

  1. ಸಹಕಾರ — ಹೆಚ್ಚಿನ ಗುಣಮಟ್ಟವನ್ನು ಹೊಂದಿದ ಮತ್ತು ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಹಂಚಬಹುದಾದ ಈ ಭಾಷಾಂತರ ಮಾಡಿದ ವಿಷಯವನ್ನು ನಿಮ್ಮ ಭಾಷೆ ಮಾತನಾಡುವ ಇತರ ವಿಶ್ವಾಸಿಗಳೊಂದಿಗೆ ಸೇರಿ ಭಾಷಾಂತರ ಕಾರ್ಯವನ್ನು ಮಾಡಿ ಪರಿಶೀಲಿಸಿ ದೃಢಪಡಿಸಿ .(ನೋಡಿ Create Collaborative Translations)
  2. ನಿರಂತರವಾಗಿ ನಡೆಯುವ - ಭಾಷಾಂತರ ಕಾರ್ಯವು ನಿರಂತರವಾಗಿ ನಡೆಯುವ ಪ್ರಕ್ರಿಯೆ, ಎಂದಿಗೂ ಮುಗಿಯುವುದಿಲ್ಲ. ಭಾಷೆ ಮತ್ತು ಭಾಷಾಂತರದಲ್ಲಿ ವಿಶೇಷ ಕೌಶಲ ಹೊಂದಿರುವ ಜನರು ಭಾಷಾಂತರವಾಗಿರುವ ವಿಷಯವನ್ನು ಪರಿಶೀಲಿಸಿ ಅದನ್ನು ಉತ್ತಮಪಡಿಸಲು ಸಲಹೆನೀಡುವುದಾದರೆ ಅವನನ್ನು ಪ್ರೋತ್ಸಾಹಿಸಿ ಸಲಹೆ ಪಡೆಯಬಹುದು. ಭಾಷಾಂತರದಲ್ಲಿ ಕಂಡುಬರುವ ತಪ್ಪುಗಳನ್ನು ಆಗಿಂದಾಗ್ಗೆ ತಿದ್ದುಪಡಿ ಮಾಡಬೇಕು. ಆಗಾಗ ನಡೆಯುವ ಭಾಷಾಂತರದ ಪುನರ್ ಪರಿಶಿಲನೆಯನ್ನು ಉತ್ತೇಜಿಸುವುದಲ್ಲದೆ ಭಾಷಾಂತರ ಪುನರ್ ಕಾರ್ಯ ಅಥವಾ ಹೊಸ ಭಾಷಾಂತರ ಮಾಡಬೇಕಾದ ಪರಿಸ್ಥಿತಿ ಬಂದರೆ ಮುಕ್ತವಾಗಿ ಸ್ವೀಕರಿಸಿ ಮಾಡಬೇಕು. ಭಾಷಾ ಸಮುದಾಯದವರು ಭಾಷಾಂತರ ತಂಡವನ್ನು ರಚಿಸಿ ನಿರಂತರವಾಗಿ ನಡೆಯುತ್ತಿರುವ ಭಾಷಾಂತರ ಕಾರ್ಯದ ಮೇಲ್ವಿಚಾರಣೆ ಮಾಡಲು ನಾವು ಶಿಫಾರಸ್ಸು ಮಾಡುತ್ತೇವೆ. ಪದ ಅನಾವರಣ ಆನ್ ಲೈನ್ ಸಾಧನಗಳನ್ನು ಬಳಸಿ ಭಾಷಾಂತರದಲ್ಲಿ ನಡೆಯುವ ಈ ಬದಲಾವಣೆಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಮಾಡಬಹುದು. (ನೋಡಿ Create Ongoing Translations).

ಮುಕ್ತ ಪರವಾನಗಿ.

Introduction to translationAcademy :: Open License

ಸ್ವಾತಂತ್ರ್ಯವಾಗಿ ಕಾರ್ಯಮಾಡಲು ಪರವಾನಗಿ ಹೊಂದುವುದು.

ಪ್ರತಿಯೊಂದು ಭಾಷೆಯಲ್ಲೂ ನಿರ್ಬಂಧವಿಲ್ಲದ ಸತ್ಯವೇದದ ವಿಷಯವನ್ನು ಅಳವಡಿಸಿ ಸಾಧಿಸಲು ಜಾಗತಿಕ ಮಟ್ಟದಲ್ಲಿ ಸಭೆ ನೀಡುವ ಪರವಾನಗಿಯ ಅವಶ್ಯಕತೆ ಇದೆ. “ಇದು ನಿರ್ಬಂಧರಹಿತ“ ಪ್ರವೇಶ. ಚರ್ಚ್ ಇಂತಹ ನಿರ್ಬಂಧರಹಿತ ಅಪ್ಪಣೆ ನೀಡಿದರೆ ಈ ಕಾರ್ಯ ಯಾವುದೇ ತಡೆ ಇಲ್ಲದೆ ಸುಲಭವಾಗಿ ಮುಂದುವರೆಯುತ್ತದೆ ಎಂಬ ನಂಬಿಕೆ ನಮಗಿದೆ. The Creative Commons Attribution-ShareAlike 4.0 International License) ಭಾಷಾಂತರ ಮಾಡಲು ಬೇಕಾಗಿರುವ ಎಲ್ಲ ರೀತಿಯ ಹಕ್ಕುಗಳನ್ನು ಒದಗಿಸುತ್ತದೆ ಮತ್ತು ಸತ್ಯವೇದದ ವಿಷಯಗಳನ್ನು ಹಂಚುವಿಕೆ ಮತ್ತು ವಿಷಯವನ್ನು ಬಳಸಿಕೊಳ್ಳಲು ಮುಕ್ತವಾಗಿರುವಂತೆ ಇಡಲು ನಿಶ್ಚಿತಗೊಳಿಸುತ್ತದೆ. ಕೆಲವಾರು ವಿಷಯಗಳನ್ನು ಹೊರತುಪಡಿಸಿ CC BY-SA ಯಿಂದ ಪರವಾನಗಿ ಪಡೆದ ನಮ್ಮ ಎಲ್ಲಾ ವಿಷಯಗಳು ಸುರಕ್ಷಿತವಾಗಿವೆ.

Door43 ನ ಅಧಿಕೃತ ಪರವಾನಗಿಯು ಲಿಂಕ್ ನಲ್ಲಿ ದೊರೆಯುತ್ತದೆ. at https://door43.org/en/legal/license.

Creative Commons Attribution-ShareAlike 4.0 International (CC BY-SA 4.0)

ಇದು ಪ್ರತಿಯೊಬ್ಬರೂ ಓದಬಹುದಾದ ಸಾರಾಂಶ the license.

ನೀವು ಮುಕ್ತವಾಗಿ ಈ ಕೆಳಗೆ ಕೊಟ್ಟಿರುವವುಗಳನ್ನು ಮಾಡಲು ಅವಕಾಶವಿದೆ.

  • ಹಂಚಿಕೊಳ್ಳುವುದು — ಯಾವ ಮಾಧ್ಯಮದಲ್ಲಾದರೂ , ರೂಪದಲ್ಲಾದರೂ ಪ್ರತಿಮಾಡಿ – ಮರುಬಳಕೆ , ಹಾಗೂ ಹಂಚಲು ಉಪಯೋಗಿಸಿಕೊಳ್ಳಬಹುದು.
  • ಅಳವಡಿಸಿಕೊಳ್ಳಲು —ಪುನರ್ ಮಿಶ್ರಣ, ಪರಿವರ್ತಿಸಲು ಮತ್ತು ವಿಷಯವನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ. ಮತ್ತು ಇತರ ಯಾವುದೇ ಉದ್ಧೇಶಕ್ಕಾಗಲೀ , ವ್ಯಾವಹಾರಿಕ ಉದ್ದೇಶಕ್ಕಾಗಲೀ ಬಳಸಿಕೊಳ್ಳಬಹುದು. ಪರವಾನಗಿಯಲ್ಲಿರುವ ಕರಾರುಗಳನ್ನು ಸರಿಯಾಗಿ ಪಾಲಿಸುವವರೆಗೆ ಪರವಾನಗಿ ಪಡೆದವರು ಯಾವುದೇ ಆಕ್ಷೇಪಣೆ ಮಾಡುವಂತಿಲ್ಲ.

ಕೆಳಗಿನ ಕರಾರುಗಳನ್ನು ಅನುಸರಿಸುವಂತೆ:

  • ಇರುವ ಅಧಿಕಾರ —ನೀವು ಸೂಕ್ತವಾದ ಶ್ರದ್ಧೆಯನ್ನು ನೀಡಬೇಕು , ಪರವಾನಗಿಗೆ ಬೇಕಾದ ಲಿಂಕ್ ಅನ್ನು ಒದಗಿಸಬೇಕು , ಬದಲಾವಣೆ ಏನಾದರೂ ಮಾಡಿದರೆ ಅದನ್ನು ಸೂಚಿಸಬೇಕು. ನೀವು ಇದನ್ನು ಸಕಾರಣವಾದ ಎಲ್ಲಾ ಸಂದರ್ಭದಲ್ಲೂ ಮಾಡಬಹುದು ಆದರೆ ಪರವಾನಗಿ ಪಡೆದವರು ನಿಮ್ಮ ಬಳಕೆಯನ್ನು ದೃಢಪಡಿಸಲು ಯಾವುದೇ ರೀತಿಯಿಂದ ಸಲಹೆ ನೀಡಲಾಗುವುದಿಲ್ಲ.
  • ಸದೃಶ್ಯವಾದುದನ್ನು ಹಂಚಿಕೊಳ್ಳುವುದು — ನೀವೇನಾದರು ಇದನ್ನು ಪುನರ್ ಮಿಶ್ರಣ ಮಾಡಿದರೆ , ಪರಿವರ್ತಿಸಿದರೆ ಅಥವಾ ಈ ವಿಷಯವನ್ನು ಅಭಿವೃದ್ಧಿಪಡಿಸಿದರೆ ಇದೇ ಪರವಾನಗಿಯನ್ನು ಬಳಸಿ ಮೂಲ ವಿಷಯದೊಂದಿಗೆ ನಿಮ್ಮ ವಿಚಾರವನ್ನು ಸೇರಿಸಿಬಳಸಬಹುದು , ವಿತರಿಸಬಹುದು.
  • ಬೇರೆ ಹೆಚ್ಚಿನ ನಿರ್ಬಂಧಗಳು ಇಲ್ಲ - ನೀವು ನ್ಯಾಯಯುತವಾದ ಯಾವುದೇ ವಿಚಾರಗಳು , ತಾಂತ್ರಿಕ ತತ್ವಗಳು ಪರವನಾಗಿ ಅನುಮತಿಸುವ ನ್ಯಾಬದ್ಧವಾದ ವಿಚಾರಗಳನ್ನು ನಿರ್ಬಂಧಿಸಬಾರದು.

####ತಿಳಿವಳಿಕೆಗಳು :

ಸಾರ್ವಜನಿಕ ಕ್ಷೇತ್ರದಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪರವಾನಗಿಯ ಅಂಶಗಳಿಗೆ ವಿದೇಯರಾಗಿ ನಡೆದುಕೊಳ್ಳಬೇಕೆಂಬ ಕಡ್ಡಾಯವಿಲ್ಲ , ನೀವು ಬಳಸುವಂತಹ ಎಲ್ಲಾ ಪದಗಳಿಗೆ , ವಿಷಯಗಳಿಗೆ ಅನ್ವಯಿಸುವ ವಿನಾಯಿತಿಗಳು ಮತ್ತು ಮಿತಿಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಯಾವುದೇ ಖಾತರಿ ನೀಡಲಾಗುವುದಿಲ್ಲ

ನೀವು ನಿರೀಕ್ಷಿಸುವ ಎಲ್ಲಾ ಅನುಮತಿಗಳನ್ನು ಈ ಪರವಾನಗಿ ನೀಡುವುದಿಲ್ಲ. ಉದಾಹರಣೆಗೆ ಇತರ ಹಕ್ಕುಗಳಾದ ಪ್ರಚಾರ, ಖಾಸಗಿತನ, ನೈತಿಕ ಹಕ್ಕುಗಳು ಇವುಗಳ ಮಿತಿ ನೀವು ಅವುಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಆಧಾರವಾಗಿರುತ್ತದೆ. ದೃಢಪಡಿಸಿದ ಕಾರ್ಯಗಳಿಗೆ ಉತ್ಪನ್ನ ಪದಗಳನ್ನು ಬಳಸಲು ನೀಡಿರುವ ಸಲಹೆಗಳು: ಮೂಲಕಾರ್ಯಗಳನ್ನು Door43 ಜಾಗತಿಕ ಮಿಷನ್ ಕಮ್ಯುನಿಟಿಯಿಂದ ಸೃಷ್ಟಿಸಲಾಗಿದೆ , http://door43.org/, and released under a Creative Commons Attribution-ShareAlike 4.0 International License ಇದು (http://creativecommons.org/licenses/by-sa/4.0/ ).ಯಲ್ಲಿ ದೊರೆಯುತ್ತದೆ. ಇದು ಮೂಲ ವಿಷಯದಿಂದ ಬದಲಾಯಿಸಿದೆ ಮತ್ತು ಮೂಲ ಲೇಖಕರು ಈ ಕಾರ್ಯವನ್ನು ದೃಢೀಕರಿಸಿಲ್ಲ.

Door43 ಕೊಡುಗೆ ನೀಡಿದವರ ವಿಶೇಷ ಗುಣಗಳು.

Door43 ಯಲ್ಲಿ ಸಂಪನ್ಮೂಲಗಳನ್ನು ಅಳವಡಿಸುವಾಗ ಮೂಲವಿಷಯಗಳನ್ನು ನಿಶ್ಚಿತ ಹಾಗೂ ನಿಖರವಾದ ಉತ್ಪನ್ನಪದಗಳನ್ನು ಬಳಸುವುದಲ್ಲದೆ ಲಭ್ಯವಿರುವ ಮುಕ್ತ ಪರವಾನಗಿಯಡಿಯಲ್ಲಿ ಬಳಸಬೇಕು. ಉದಾಹರಣೆಗೆ ಮುಕ್ತ ಸತ್ಯವೇದದ ಕತೆಗಳಲ್ಲಿ ಬಳಸಿರುವ ಕಲೆ – ಚಿತ್ರಗಳು ಈ ಯೋಜನೆಯಲ್ಲಿ ಸ್ಪಷ್ಟವಾಗಿ, ಅಧಿಕೃತವಾಗಿ ಬಳಸಿದೆ. main page.

ಅಧಿಕೃತ ವಿಚಾರಗಳು ಸ್ವಯಂಚಾಲಿತವಾಗಿ ಇತಿಹಾಸದ ಪರಿಷ್ಕರಣೆ ಪ್ರತಿಪುಟದಲ್ಲೂ ಸಾಕಷ್ಟು ನಡೆದಿದೆ. Door43 ಯೋಜನೆಗೆ ಈ ಕೊಡುಗೆಗಳನ್ನು ನೀಡಿದೆ Door43ಗೆ ಕೊಡುಗೆ ನೀಡಿದ ಪ್ರತಿಯೊಬ್ಬರನ್ನು ಪಟ್ಟಿಮಾಡಿ “the Door43 World Missions Community” ಅಥವಾ ಪರಿಣಾಮಕ್ಕೆ ಇದನ್ನು ಸೇರಿಸುವುದು. ಪ್ರತಿಯೊಬ್ಬ ಕೊಡುಗೆದಾರನ ಕೊಡುಗೆಯನ್ನು ಇತಿಹಾಸದ ಪರಷ್ಕರಣೆಯಲ್ಲಿ ಸಂರಕ್ಷಿಸಲಾಗಿದೆ.

ಆಕರ ಗ್ರಂಥಗಳು.

ಆಕರ ಗ್ರಂಥಗಳಲ್ಲಿರುವ ಅಂಶಗಳನ್ನು ಬಳಸಲು ಈ ಕೆಳಗೆ ಕೊಟ್ಟಿರುವ ಪರವಾನಗಿಗಳಲ್ಲಿ ಒಂದನ್ನು ಹೊಂದಿರಬೇಕು.

See Copyrights, Licensing, and Source Texts for more information.


ಗೇಟ್ ವೇ ಭಾಷೆಗಳ ಕಾರ್ಯತಂತ್ರಗಳು .

Introduction to translationAcademy :: Gateway Languages Strategy
  • ಈ ದಾಖಲೆಗಳ ಅಧಿಕೃತ ಪ್ರತಿಗಳು at http://ufw.io/gl/.* ಲಿಂಕ್ ನಲ್ಲಿ ಕಾಣಬಹುದುಪಡೆಯಬಹುದು.

ವಿವರಣೆ / ಸ್ಪಷ್ಟೀಕರಣ .

ಗೇಟ್ ವೇ ಭಾಷೆಗಳ ಕಾರ್ಯತಂತ್ರದ ಉದ್ದೇಶ ವಿ ಶೇ. 100% ರಷ್ಟು ಜನರ ಗುಂಪನ್ನು ಒಳಗೊಂಡಂತೆ ಸಿದ್ಧಮಾಡುವುದಾಗಿದೆ. ಇದರೊಂದಿಗೆ . ಜಾಗತಿಕ ಮಟ್ಟದ ಸಭೆಗಳಲ್ಲಿ ಸತ್ಯವೇದದ ವಿಷಯಗಳ ಹಸ್ತಪ್ರತಿ ನಿರ್ಬಂಧಗಳನ್ನು ಬಿಡುಗಡೆ ಮಾಡಿಜನರು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಎಲ್ಲಾ ಭಾಷೆಗಳಲ್ಲಿ ದೊರೆಯುವಂತೆ ಮಾಡಿದೆ. (ಭಾಷೆ ಎಂದರೆ ವಿಸ್ತಾರವಾದ ಸಂಪರ್ಕ ಭಾಷೆ) ಇದರೊಂದಿಗೆ ಅನಿರ್ಬಂಧಿತ ಭಾಷಾಂತರ ತರಬೇತಿ ಮತ್ತು ಭಾಷಾಂತರ ಮಾಡಲು ಅನುಕೂಲವಾಗುವಂತಹ ಸಾಧನಗಳನ್ನು ಬಳಸಿಕೊಂಡು ಜನರಿಗೆ ಅರ್ಥವಾಗುವಂತಹ ಭಾಷೆಯಲ್ಲಿ ಭಾಷಾಂತರವಾಗಬೇಕು.(ಅವರ ಸ್ವಂತ ಭಾಷೆಗಳಲ್ಲಿ)

“ಗೇಟ್ ವೇ ಭಾಷೆ” ವ್ಯಾಪಕವಾದ ಸಂಪರ್ಕ ಹೊಂದಿರುವ ಭಾಷೆಯಾಗಿದ್ದು ಇದರ ಮೂಲಕ ಆ ಭಾಷೆಯ ದ್ವಿತೀಯ ಭಾಷೆಯನ್ನು ಮಾತನಾಡುವವರು, ವಿಷಯವನ್ನು ಸ್ವಾದೀನಪಡಿಸಿಕೊಳ್ಳಲು ಮತ್ತು ಅವರ ಭಾಷೆಗೆ ಅದನ್ನು ಭಾಷಾಂತರಿಸಲು ಸಮರ್ಥರಾಗುತ್ತಾರೆ. “ಗೇಟ್ ವೇ ಭಾಷೆ” ಜಾಗತಿಕ ಮಟ್ಟದಲ್ಲಿನ ಅಲ್ಪಸಂಖ್ಯೆಯ ಭಾಷೆಯನ್ನು ಒಳಗೊಂಡಿದ್ದು ದ್ವಿಭಾಷಿ ಅನುವಾದಕರ ಮೂಲಕ ವಿಷಯವನ್ನು ಇತರ ಪ್ರತಿಯೊಂದು ಭಾಷೆಗೆ ಭಾಷಾಂತರವನ್ನು ಮಾಡಲಾಗುವುದು

ಉದಾಹರಣೆಗೆ ಗೇಟ್ ವೇ ಭಾಷೆಯಲ್ಲಿನ ಫ್ರೆಂಚ್ ಭಾಷೆಯ ಫ್ರಾಂಕೋಫೋನ್ ಆಫ್ರಿಕಾದ ಅಲ್ಪಸಂಖ್ಯಾತ ಭಾಷೆ . ಫ್ರೆಂಚ್ ಭಾಷೆಗೆ ದ್ವಿಭಾಷೆ ಮಾತನಾಡುವವರಿಂದ ಫ್ರೆಂಚ್ ಮಾತನಾಡುವರ ಸ್ವಂತ ಭಾಷಿಕರಿಗೆ ಅನುಕೂಲವಾಗುವಂತೆ ಭಾಷಾಂತರ ಮಾಡಬೇಕು. ರಾಷ್ಟ್ರೀಯ ಮಟ್ಟದಲ್ಲಿ ಗೇಟ್ ವೇ ಭಾಷೆಯ ಸೂಚಿತ ದೇಶದ ಕೆಲವೇ ಭಾಷೆಗಳನ್ನು ವಿಸ್ತಾರವಾದ ಸಂಪರ್ಕಕ್ಕೆ ಬೇಕಾದ ಕೆಲವು ಭಾಷೆಗಳಾಗಿವೆ. ಇದರ ಮೂಲಕ. ಇದು ಅಲ್ಪಸಂಖ್ಯಾತ ಭಾಷೆಯಲ್ಲಿ ದ್ವಿಭಾಷೆ ಮಾತನಾಡುವವರಿಗೆ ಅಗತ್ಯವಿದ್ದು, ದೇಶೀಯ ಭಾಷೆಯ ಕುರಿತಾದ ವಿಷಯವನ್ನು ಪಡೆಯಲು ಇದು ಸಹಕಾರಿಯಾಗಿರುತ್ತದೆ.(ಕೆಲವೊಮ್ಮೆ ಇಂತವರು ವಲಸೆಯಿಂದ ಸಿಗದೆ ಹೋಗಬಹುದು.)

ಉದಾಹರಣೆಗೆ ಇಂಗ್ಲೀಷ್ ಭಾಷೆ ಉತ್ತರ ಕೊರಿಯಾ ಭಾಷೆಗೆ ಗೇಟ್ ವೇ ಭಾಷೆಯಾಗಿದೆ. ಉತ್ತರಕೊರಿಯಾ ದೇಶೀಯ ಗುಂಪಿನ ಜನರಿಗೆ ಸುಲಭವಾಗಿ ಅರ್ಥವಾಗುವಂತೆ, ವಿಷಯ ಸ್ಪಷ್ಟವಾಗಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಇಂಗ್ಲೀಷ್ ಭಾಷೆಯಿಂದ ಭಾಷಾಂತರಿಸಬೇಕು.

ಪರಿಣಾಮಗಳು.

ಈ ಮಾದರಿಯಲ್ಲಿ ಎರಡು ರೀತಿಯಾದ ಮೂಲಭೂತ ಪರಿಣಾಮಗಳಿವೆ : ಮೊದಲನೆಯದು ಇದು ಎಲ್ಲಾ ಭಾಷೆಗಳನ್ನು ವಿಷಯದ ಕಡೆಗೆ ಅವರವರ ಭಾಷೆಯಲ್ಲಿ ತಿಳಿದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಭಾಷೆಯ ಅಭಿವೃದ್ಧಿಗೆ ಬೇಕಾದುದನ್ನು ಪಡೆಯಲು ವಿಶೇಷ ಒತ್ತು ನೀಡಿ ಪ್ರತಿಯೊಂದು ಭಾಷೆಯ ಪದಗಳನ್ನು ಪಡೆಯಬೇಕು (ಗೇಟ್ ವೇ ಭಾಷೆಯಿಂದ)

ಎರಡನೆಯದಾಗಿ, ಇದು ಭಾಷಾಂತರವಾಗುವ ಕಾರ್ಯವನ್ನು ಮಿತಿಗೊಳಿಸುತ್ತದೆ. ಏಕೆಂದರೆ ಗೇಟ್ ವೇ ಭಾಷೆಯಿಂದ ಆಗುತ್ತಿರುವ ಭಾಷಾಂತರಗಳು ಇದಕ್ಕೆ ಸಹಾಯಮಾಡುವುದಲ್ಲದೆ, ಭಾಷಾಂತರ ಸುಗಮವಾಗಿ ಆಗುವಂತೆ ನೋಡಿಕೊಳ್ಳಬೇಕು. ಅನುವಾದವನ್ನು ಅರ್ಥಮಾಡಿಕೊಳ್ಳಲು ಯಾವುದೇ ಭಾಷೆ ಭಾಷಾಂತರದ ಸಹಾಯಕ ಪ್ರತಿಗಳನ್ನು ಅವಲಂಭನೆ ಮಾಡದೆ ಇರುವ ಕಾರಣದಿಂದ ಇತರ ಎಲ್ಲಾ ಭಾಷೆಗಳು ಸತ್ಯವೇದದ ವಿಷಯವನ್ನು ಭಾಷಾಂತರ ಮಾಡುತ್ತದೆ.


ಉತ್ತರಗಳನ್ನು ಹುಡುಕುವುದು.

Introduction to translationAcademy :: Finding Answers

ಉತ್ತರವನ್ನು ಹೇಗೆ ಪಡೆಯಬಹುದು.

ಪ್ರಶ್ನೆಗಳಿಗೆ ಉತ್ತರವನ್ನು ಲಭ್ಯವಿರುವ ಅನೇಕ ಮೂಲಗಳಿಂದ ಪಡೆಯಲು ಸಾಧ್ಯವಿದೆ.

  • ಭಾಷಾಂತರ ಅಕಾಡೆಮಿ – ಕೈಪಿಡಿ http://ufw.io/ta ಇದರಲ್ಲಿ ಲಭ್ಯವಿದ್ದು ಇದರಲ್ಲಿ ಅನೇಕ ಮಾಹಿತಿಗಳು ದೊರೆಯುತ್ತದೆ.
    • ಪೀಠಿಕೆ - ಅನಾವರಣಗೊಂಡ ಪದ ಯೋಜನೆಯನ್ನು ಪರಿಚಯಿಸುತ್ತದೆ.
    • ಕೈಪಿಡಿ ಪ್ರಕ್ರಿಯೆ – ಮುಂದಿನದು ಏನು ಎಂಬುದನ್ನು ಪ್ರಶ್ನೆಗಳಿಗೆ ಉತ್ತರಿಸುತ್ತದೆ.
    • ಭಾಷಾಂತರ ಕೈಪಿಡಿ – ಇದರಲ್ಲಿ ಮೂಲಭೂತ ಸಿದ್ಧಾಂತಗಳನ್ನು ಸ್ಪಷ್ಟವಾಗಿ ವಿವರಿಸುತ್ತದೆ ಮತ್ತು ಪ್ರಾಯೋಗಿಕ ಭಾಷಾಂತರಕ್ಕೆ ಸಹಾಯ ನೀಡುತ್ತದೆ.
    • ಪರಿಶೀಲನಾ ಕೈಪಿಡಿ – ಪರಿಶೀಲನೆಗೆ ಬೇಕಾದ ಮೂಲಭೂತ ಸಿದ್ಧಾಂತ ಮತ್ತು ಉತ್ತಮ ಪದ್ಧತಿ ಬಗ್ಗೆ ತಿಳಿಸುತ್ತದೆ.

ನಿಮ್ಮ ಪ್ರಶ್ನೆಗಳನ್ನು helpdesk ಗೆ ಕಳುಹಿಸಿ ನಿಮ್ಮ ಪ್ರಶ್ನೆಗಳಿಗೆ ನಿಜವಾದ ಉತ್ತರವನ್ನು ಈ ಲಿಂಕ್ ಮೂಲಕ “#helpdesk” (sign up at http:// ufw.io/ team43) ಪಡೆಯಿರಿ. ನಿಮ್ಮ ಪ್ರಶ್ನೆಗಳಿಗೆ ಸಹಾಯಕ

Process Manual

Process Manual

NO TITLE FOUND!

Process Manual :: NO TITLE FOUND!

ತಂಡವನ್ನು ಆರಿಸುವುದು

ನೀವು ಅನುವಾದವನ್ನು ಆಯ್ಕೆ ಮಾಡಲು ಮತ್ತು ತಂಡವನ್ನು ಪರಿಶೀಲಿಸಲು ಪ್ರಾರಂಭಿಸಿದಾಗ, ಹಲವಾರು ರೀತಿಯ ಜನರು ಮತ್ತು ಪಾತ್ರಗಳು ಬೇಕಾಗುತ್ತವೆ. ಪ್ರತಿ ತಂಡಕ್ಕೆ ನಿರ್ದಿಷ್ಟವಾದ ಅರ್ಹತೆಗಳೂ ಇವೆ.

  • [ಅನುವಾದ ತಂಡವನ್ನು ಆರಿಸುವುದು] (…/…/translate/choose-team/01.md) - ಅಗತ್ಯವಿರುವ ಹಲವು ಪಾತ್ರಗಳನ್ನು ವಿವರಿಸುತ್ತದೆ
  • [ಅನುವಾದಕ ಅರ್ಹತೆಗಳು] (…/…/translate/qualifications/01.md) - ಅನುವಾದಕರಿಗೆ ಅಗತ್ಯವಿರುವ ಕೆಲವು ಕೌಶಲ್ಯಗಳನ್ನು ವಿವರಿಸುತ್ತದೆ
  • ತಂಡದ ಪ್ರತಿಯೊಬ್ಬರೂ ಅವರು ಕೊಡಲಿರುವ ಹೇಳಿಕೆಗೆ ಸಹಿ ಮಾಡಬೇಕಾಗುತ್ತದೆ ಎಂಬುದನ್ನು ನೆನಪಿಡಿ (ಫಾರ್ಮ್‌ಗಳು http://ufw.io/forms/ ನಲ್ಲಿ ಲಭ್ಯವಿದೆ):
    • [ವಿಶ್ವಾಸದ ಹೇಳಿಕೆ] (…/…/intro/statement-of-faith/01.md)
    • [ಅನುವಾದ ಮಾರ್ಗಸೂಚಿಗಳು] (…/…/intro/translation-guidelines/01.md)
    • [ಮುಕ್ತ ಪರವಾನಗಿ] (…/…/intro/open-license/01.md)
  • ತಂಡದ ಪ್ರತಿಯೊಬ್ಬರೂ ಉತ್ತಮ ಅನುವಾದದ ಗುಣಗಳನ್ನು ಸಹ ತಿಳಿದುಕೊಳ್ಳಬೇಕು (ನೋಡಿ [ಉತ್ತಮ ಅನುವಾದದ ಗುಣಗಳು] (…/…/translate/guidelines-intro/01.md)).
  • ತಂಡವು ಉತ್ತರಗಳನ್ನು ಎಲ್ಲಿ ಪಡೆಯಬಹುದು ಎಂಬುದನ್ನು ಸಹ ತಿಳಿದುಕೊಳ್ಳಬೇಕು (ನೋಡಿ [ಉತ್ತರಗಳನ್ನು ಹುಡುಕುವುದು] (…/…/intro/finding-answers/01.md)).

ಅನುವಾದದ ನಿರ್ಧಾರಗಳು

ಅನುವಾದ ತಂಡವು ತೆಗೆದುಕೊಳ್ಳಬೇಕಾದ ಹಲವು ನಿರ್ಧಾರಗಳಿವೆ, ಅವುಗಳಲ್ಲಿ ಹಲವು ಯೋಜನೆಯ ಪ್ರಾರಂಭದಲ್ಲಿಯೇ ಇವೆ. ಈ ಕೆಳಗಿನವುಗಳನ್ನು ಒಳಗೊಂಡಿದೆ:

  • [ಮೂಲ ಪಠ್ಯವನ್ನು ಆರಿಸುವುದು] (…/…/translate/translate-source-text/01.md) - ಉತ್ತಮ ಮೂಲ ಪಠ್ಯವನ್ನು ಆರಿಸುವುದು ಬಹಳ ಮುಖ್ಯ
  • [ಕೃತಿಸ್ವಾಮ್ಯಗಳು, ಪರವಾನಗಿ ಮತ್ತು ಮೂಲ ಪಠ್ಯಗಳು] (…/…/translate/translate-source-licensing/01.md) - ಮೂಲ ಪಠ್ಯವನ್ನು ಆರಿಸುವಾಗ ಕೃತಿಸ್ವಾಮ್ಯ ಸಮಸ್ಯೆಗಳನ್ನು ಪರಿಗಣಿಸಬೇಕು
  • [ಮೂಲ ಪಠ್ಯಗಳು ಮತ್ತು ಆವೃತ್ತಿ ಸಂಖ್ಯೆಗಳು] (…/…/translate/translate-source-version/01.md) - ಮೂಲ ಪಠ್ಯದ ಇತ್ತೀಚಿನ ಆವೃತ್ತಿಯಿಂದ ಅನುವಾದಿಸುವುದು ಉತ್ತಮ
  • ಆಲ್ಫಾಬ್ et/Orthography - ಅನೇಕ ಭಾಷೆಗಳಲ್ಲಿ ವರ್ಣಮಾಲೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ
  • [ನಿಮ್ಮ ಭಾಷೆ ಬರೆಯುವ ನಿರ್ಧಾರಗಳು] (…/…/translate/writing-decisions/01.md) - ಬರವಣಿಗೆಯ ಶೈಲಿ, ವಿರಾಮಚಿಹ್ನೆ, ಹೆಸರುಗಳನ್ನು ಅನುವಾದಿಸುವುದು, ಕಾಗುಣಿತ ಮತ್ತು ಇತರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ
  • [ಅನುವಾದ ಶೈಲಿ] (…/…/translate/choose-style/01.md) - ಅನುವಾದ ಸಮಿತಿಯು ಮೂಲದ ಸ್ವರೂಪವನ್ನು ಅನುಕರಿಸಲು ಅವರು ಎಷ್ಟು ಬಯಸುತ್ತಾರೆ, ಪದಗಳನ್ನು ಎಷ್ಟು ಎರವಲು ಪಡೆಯುವುದು ಮತ್ತು ಇತರ ವಿಷಯಗಳ ಅರ್ಥದಲ್ಲಿ ಅನುವಾದದ ಶೈಲಿಯನ್ನು ಒಪ್ಪಿಕೊಳ್ಳಬೇಕು. ಅನುವಾದವನ್ನು [ಸ್ವೀಕಾರಾರ್ಹ] (…/…/checking/acceptable/01.md) ಮಾಡುವ ಕುರಿತು ಈ ವಿಭಾಗವನ್ನೂ ನೋಡಿ.
  • [ಏನು ಅನುವಾದಿಸಬೇಕೆಂದು ಆರಿಸುವುದು] (…/…/translate/translation-difficulty/01.md) – ಸಭೆಯ ಅಗತ್ಯತೆಗಳು ಮತ್ತು ಅನುವಾದದ ಸಮಸ್ಯೆಗಳನ್ನು ಆಧರಿಸಿ ಪುಸ್ತಕಗಳನ್ನು ಆರಿಸಬೇಕು

ಅನುವಾದ ಸಮಿತಿಯು ಈ ನಿರ್ಧಾರಗಳನ್ನು ತೆಗೆದುಕೊಂಡ ನಂತರ, ಅನುವಾದದಲ್ಲಿ ತೊಡಗಿರುವ ಪ್ರತಿಯೊಬ್ಬರೂ ಓದಬಹುದಾದ ಡಾಕ್ಯುಮೆಂಟ್‌ನಲ್ಲಿ ಅವುಗಳನ್ನು ಬರೆಯುವುದು ಒಳ್ಳೆಯದು. ಪ್ರತಿಯೊಬ್ಬರೂ ಒಂದೇ ರೀತಿಯ ಅನುವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಹಾಯ ಮಾಡುತ್ತದೆ ಮತ್ತು ಈ ವಿಷಯಗಳ ಕುರಿತು ಹೆಚ್ಚಿನ ವಾದಗಳನ್ನು ತಪ್ಪಿಸುತ್ತದೆ.

ಅನುವಾದ ತಂಡವನ್ನು ಆಯ್ಕೆ ಮಾಡಿದ ನಂತರ, ಅವರಿಗೆ [ಅನುವಾದ ತರಬೇತಿ] (…/pretranslation-training/01.md) ನೀಡಲು ಪ್ರಾರಂಭಿಸುವ ಸಮಯ ಇದು.


1 ವಿಷಯವನ್ನು ಹೇಗೆ ಹಂಚಿಕೊಳ್ಳುವುದು

Process Manual :: 1 ವಿಷಯವನ್ನು ಹೇಗೆ ಹಂಚಿಕೊಳ್ಳುವುದು

ಟಿಎಸ್ ಮತ್ತು ಟಿಸಿಯಿಂದ ವಿಷಯವನ್ನು ಹಂಚಿಕೊಳ್ಳಲಾಗುತ್ತಿದೆ

ಅನುವಾದ ಸ್ಟುಡಿಯೊದಲ್ಲಿರುವ ವಿಷಯವನ್ನು ಹಂಚಿಕೊಳ್ಳುವುದು ಸುಲಭ. ಆಫೈನ್ ಹಂಚಿಕೆಗಾಗಿ, ಟಿಎಸ್ ಮೆನುವಿನಿಂದ ಬ್ಯಾಕಪ್ ವೈಶಿಷ್ಟ್ಯವನ್ನು ಬಳಸಿ. ಆನ್‌ಲೈನ್ ಹಂಚಿಕೆಗಾಗಿ, ಟಿಎಸ್ ಮೆನುವಿನಿಂದ ಅಪ್‌ಲೋಡ್ ವೈಶಿಷ್ಟ್ಯವನ್ನು ಬಳಸಿ. ಅನುವಾದ ಕೋರ್‌ನಲ್ಲಿ, ಯೋಜನೆಗಳ ಪುಟದಲ್ಲಿ ಮೂರು-ಡಾಟ್ ಮೆನು ಬಳಸಿ. ಆಫ್‌ಲೈನ್ ಹಂಚಿಕೆಗಾಗಿ, ಯುಎಸ್‌ಎಫ್‌ಎಂಗೆ ರಫ್ತು ಮಾಡಿ ಅಥವಾ ಸಿಎಸ್‌ವಿಗೆ ರಫ್ತು ಮಾಡಿ. ಆನ್‌ಲೈನ್ ಹಂಚಿಕೆಗಾಗಿ, ಡೋರ್ 43 ಗೆ ಅಪ್‌ಲೋಡ್ ಬಳಸಿ.

ಡೋರ್ 43 ನಲ್ಲಿ ವಿಷಯವನ್ನು ಹಂಚಿಕೊಳ್ಳಲಾಗುತ್ತಿದೆ

ನಿಮ್ಮ ಕೆಲಸವನ್ನು ನೀವು ಅನುವಾದ ಸ್ಟುಡಿಯೋ ಅಥವಾ ಅನುವಾದಕೋರ್‌ನಿಂದ ಅಪ್‌ಲೋಡ್ ಮಾಡಿದರೆ, ಅದು ಸ್ವಯಂಚಾಲಿತವಾಗಿ ಆನ್‌ಲೈನ್‌ನಲ್ಲಿ ಡೋರ್ 43 ನಲ್ಲಿ ಕಾಣಿಸುತ್ತದೆ. ನಿಮ್ಮ ಎಲ್ಲಾ ಅಪ್‌ಲೋಡ್ ಮಾಡಲಾದ ವಿಷಯವು ನಿಮ್ಮ ಬಳಕೆದಾರ ಖಾತೆಯ ಅಡಿಯಲ್ಲಿ ಕಾಣಿಸುತ್ತದೆ. ಉದಾಹರಣೆಗೆ, ನಿಮ್ಮ ಬಳಕೆದಾರಹೆಸರು * test_user * ಆಗಿದ್ದರೆ ನಿಮ್ಮ ಎಲ್ಲಾ ಕೆಲಸಗಳನ್ನು https://git.door43.org/test_user/ ನಲ್ಲಿ ಕಾಣಬಹುದು. ನೀವು ಅಪ್‌ಲೋಡ್ ಮಾಡಿದ ಯೋಜನೆಗಳಿಗೆ ಲಿಂಕ್ ನೀಡುವ ಮೂಲಕ ನಿಮ್ಮ ಕೆಲಸವನ್ನು ಇತರರೊಂದಿಗೆ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬಹುದು.

ವಿಷಯವನ್ನು ಆಫ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ

ಡೋರ್ 43 ನಲ್ಲಿ ನಿಮ್ಮ ಯೋಜನೆ ಪುಟಗಳಿಂದ ನೀವು ಡಾಕ್ಯುಮೆಂಟ್‌ಗಳನ್ನು ರಚಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಒಮ್ಮೆ ನೀವು ಇವುಗಳನ್ನು ಡೌನ್‌ಲೋಡ್ ಮಾಡಿದ ನಂತರ, ಕಾಗದದ ಪ್ರತಿಗಳನ್ನು ಮುದ್ರಿಸುವುದು ಮತ್ತು ವಿತರಿಸುವುದು ಸೇರಿದಂತೆ ನೀವು ಬಯಸಿದರೂ ನೀವು ಅವುಗಳನ್ನು ಇತರರಿಗೆ ವರ್ಗಾಯಿಸಬಹುದು.


ಅನುವಾದ ಪ್ರಾರಂಭವಾಗುವ ಮೊದಲು ನೀಡುವ ತರಬೇತಿ

Process Manual :: ಅನುವಾದ ಪ್ರಾರಂಭವಾಗುವ ಮೊದಲು ನೀಡುವ ತರಬೇತಿ

ಅನುವಾದದ ಮೊದಲು ಏನು ತಿಳಿಯಬೇಕು

ನೀವು ಅನುವಾದಿಸುವಾಗ ಆಗಾಗ್ಗೆ [ಅನುವಾದ ಕೈಪಿಡಿ] (…/…/translate/translate-manual/01.md) ಅನ್ನು ಸಂಪರ್ಕಿಸಲು ಸೂಚಿಸಲಾಗುತ್ತದೆ. ನೀವು ಭಾಷಾಂತರಿಸಲು ಪ್ರಾರಂಭಿಸುವ ಮೊದಲು, ಅಕ್ಷರಶಃ ಅನುವಾದ ಮತ್ತು ಅರ್ಥ-ಆಧಾರಿತ ಅನುವಾದದ ನಡುವಿನ ವ್ಯತ್ಯಾಸವನ್ನು ನೀವು ತಿಳಿದುಕೊಳ್ಳುವವರೆಗೆ ಅನುವಾದ ಕೈಪಿಡಿಯ ಮೂಲಕ ನಿಮ್ಮ ಕೆಲಸವನ್ನು ಪ್ರಾರಂಭಿಸಲು ನಾವು ಶಿಫಾರಸು ಮಾಡುತ್ತೇವೆ. ಅನುವಾದ ಕೈಪಿಡಿಯ ಉಳಿದ ಭಾಗವನ್ನು “ಕೇವಲ-ಸಮಯದ” ಕಲಿಕೆಯ ಸಂಪನ್ಮೂಲವಾಗಿ ಬಳಸಬಹುದು.

ಅನುವಾದ ಯೋಜನೆಯನ್ನು ಪ್ರಾರಂಭಿಸುವ ಮೊದಲು ಅನುವಾದ ತಂಡದ ಪ್ರತಿಯೊಬ್ಬರೂ ಕಲಿಯಬೇಕಾದ ಕೆಲವು ಪ್ರಮುಖ ವಿಷಯಗಳು:

  • [ಉತ್ತಮ ಅನುವಾದದ ಗುಣಗಳು] (…/…/translate/guidelines-intro/01.md) - ಉತ್ತಮ ಅನುವಾದದ ವ್ಯಾಖ್ಯಾನ
  • [ಅನುವಾದ ಪ್ರಕ್ರಿಯೆ] (…/…/translate/translate-process/01.md) - ಉತ್ತಮ ಅನುವಾದವನ್ನು ಹೇಗೆ ಮಾಡಲಾಗಿದೆ
  • [ರೂಪ ಮತ್ತು ಅರ್ಥ] (…/…/translate/translate-fandm/01.md) - ರೂಪ ಮತ್ತು ಅರ್ಥದ ನಡುವಿನ ವ್ಯತ್ಯಾಸ
  • [ಅರ್ಥ ಆಧಾರಿತ ಅನುವಾದಗಳು] (…/…/translate/translate-dynamic/01.md) - ಅರ್ಥ ಆಧಾರಿತ ಅನುವಾದವನ್ನು ಹೇಗೆ ಮಾಡುವುದು

ನೀವು ಪ್ರಾರಂಭಿಸಿದಾಗ ಇತರ ಕೆಲವು ಪ್ರಮುಖ ವಿಷಯಗಳು ಸಹ ಸೇರಿವೆ:

  • [ಏನು ಅನುವಾದಿಸಬೇಕೆಂದು ಆರಿಸುವುದು] (…/…/translate/choose-style/01.md) - ಅನುವಾದವನ್ನು ಎಲ್ಲಿ ಪ್ರಾರಂಭಿಸಬೇಕು ಎಂಬ ಸಲಹೆಗಳು
  • [ಮೊದಲ ಕರಡು] (…/…/translate/translation-difficulty/01.md) - ಮೊದಲ ಕರಡನ್ನು ಹೇಗೆ ಮಾಡುವುದು
  • [ಅನುವಾದಕ್ಕೆ ಸಹಾಯ] (…/…/translate/first-draft/01.md) - ಅನುವಾದವನ್ನು ಬಳಸುವುದು ಸಹಾಯ ಮಾಡುತ್ತದೆ

ನೀವು [ಅನುವಾದ ತಂಡವನ್ನು ಹೊಂದಿಸಿ] (…/…/translate/translate-help/01.md) ಮತ್ತು ನಿಮ್ಮ ಅನುವಾದದ [ಮೊದಲ ಕರಡು] (…/setup-team/01.md) ಮಾಡಲು ಬಯಸಿದಾಗ, [ಅನುವಾದ ಸ್ಟುಡಿಯೋ] (…/…/translate/first-draft/01.md) ಬಳಸಿ. ನೀವು ಇದನ್ನು [ಅನುವಾದ ಪ್ರಕ್ರಿಯೆ] (…/setup-ts/01.md) ಅನುಸರಿಸಲು ಶಿಫಾರಸು ಮಾಡುತ್ತೇವೆ.


ಅನುವಾದ ಸ್ಟುಡಿಯೋ ಹೊಂದಿಸಲಾಗುತ್ತಿದೆ

Process Manual :: ಅನುವಾದ ಸ್ಟುಡಿಯೋ ಹೊಂದಿಸಲಾಗುತ್ತಿದೆ

ಮೊಬೈಲಿಗಾಗಿ ಟಿಎಸ್ ಸ್ಥಾಪಿಸಲಾಗುತ್ತಿದೆ

ಅನುವಾದ ಸ್ಟುಡಿಯೊದ ಮೊಬೈಲ್ (ಆಂಡ್ರಾಯ್ಡ್) ಆವೃತ್ತಿ [ಗೂಗಲ್ ಪ್ಲೇ ಸ್ಟೋರ್] (https://play.google.com/store/apps/details?id=com.translationstudio.androidapp) ನಿಂದ ಲಭ್ಯವಿದೆ ಅಥವಾ http: / /ufw.io/ts/. ನೀವು ಪ್ಲೇ ಸ್ಟೋರ್‌ನಿಂದ ಸ್ಥಾಪಿಸಿದರೆ, ಹೊಸ ಆವೃತ್ತಿ ಲಭ್ಯವಿರುವಾಗ ನಿಮಗೆ ಪ್ಲೇ ಸ್ಟೋರ್‌ನಿಂದ ಸೂಚಿಸಲಾಗುತ್ತದೆ. ಇಂಟರ್ನೆಟ್ ಅನ್ನು ಬಳಸದೆ ಅನುವಾದ ಸ್ಟುಡಿಯೋವನ್ನು ಇತರರೊಂದಿಗೆ ಹಂಚಿಕೊಳ್ಳಲು ನೀವು ಅನುಸ್ಥಾಪನಾ ಫೈಲ್ (ಎಪಿಕೆ) ಅನ್ನು ಇತರ ಸಾಧನಗಳಿಗೆ ನಕಲಿಸಬಹುದು ಎಂಬುದನ್ನು ಗಮನಿಸಿ.

ಡೆಸ್ಕ್‌ಟಾಪ್‌ಗಾಗಿ ಟಿಎಸ್ ಸ್ಥಾಪಿಸಲಾಗುತ್ತಿದೆ

ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳಿಗಾಗಿ (ವಿಂಡೋಸ್, ಮ್ಯಾಕ್, ಅಥವಾ ಲಿನಕ್ಸ್) ಅನುವಾದ ಸ್ಟುಡಿಯೊದ ಇತ್ತೀಚಿನ ಆವೃತ್ತಿ http://ufw.io/ts/ ನಿಂದ ಲಭ್ಯವಿದೆ. ಪ್ರೋಗ್ರಾಂ ಅನ್ನು ಸ್ಥಾಪಿಸಲು, “ಡೆಸ್ಕ್‌ಟಾಪ್” ವಿಭಾಗಕ್ಕೆ ನ್ಯಾವಿಗೇಟ್ ಮಾಡಿ ಮತ್ತು ಇತ್ತೀಚಿನ ಬಿಡುಗಡೆಯನ್ನು ಡೌನ್‌ಲೋಡ್ ಮಾಡಿ. ಇಂಟರ್ನೆಟ್ ಅನ್ನು ಬಳಸದೆ ಅನುವಾದ ಸ್ಟುಡಿಯೋವನ್ನು ಇತರರೊಂದಿಗೆ ಹಂಚಿಕೊಳ್ಳಲು ನೀವು ಅನುಸ್ಥಾಪನಾ ಫೈಲ್ ಅನ್ನು ಇತರ ಕಂಪ್ಯೂಟರ್‌ಗಳಿಗೆ ನಕಲಿಸಬಹುದು ಎಂಬುದನ್ನು ಗಮನಿಸಿ

ಟಿಎಸ್ ಬಳಸುವುದು

ಒಮ್ಮೆ ಸ್ಥಾಪಿಸಿದ ನಂತರ, ಅನುವಾದ ಸ್ಟುಡಿಯೊದ ಎರಡೂ ಆವೃತ್ತಿಗಳನ್ನು ಇದೇ ರೀತಿ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ. ಅನುವಾದ ಸ್ಟುಡಿಯೋ ಬಳಸಲು ನಿಮಗೆ * ಇಂಟರ್ನೆಟ್ ಸಂಪರ್ಕ ಅಗತ್ಯವಿಲ್ಲ! ಮೊದಲ ಬಾರಿಗೆ ಅನುವಾದ ಸ್ಟುಡಿಯೋವನ್ನು ಬಳಸುವಾಗ, ಸಾಫ್ಟ್‌ವೇರ್ ನಿಮ್ಮನ್ನು ಪರದೆಯತ್ತ ಕೊಂಡೊಯ್ಯುತ್ತದೆ, ಅಲ್ಲಿ ನೀವು [ನಂಬಿಕೆಯ ಹೇಳಿಕೆ] (…/…/intro/statement-of-faith/01.md), [ಅನುವಾದ ಮಾರ್ಗಸೂಚಿಗಳು] (…/…/intro/translation-guidelines/01.md) ಮತ್ತು [ಮುಕ್ತ ಪರವಾನಗಿ] (…/…/intro/open-license/01.md ).

ಈ ಮೊದಲ-ಬಳಕೆಯ ಪರದೆಯ ನಂತರ, ಸಾಫ್ಟ್‌ವೇರ್ ನಿಮ್ಮನ್ನು ಮುಖಪುಟಕ್ಕೆ ಕರೆದೊಯ್ಯುತ್ತದೆ, ಅಲ್ಲಿ ನೀವು ಹೊಸ ಯೋಜನೆಯನ್ನು ರಚಿಸಬಹುದು. ನೀವು ಯೋಜನೆಗೆ ಹೆಸರನ್ನು ನೀಡಬೇಕಾಗುತ್ತದೆ (ಸಾಮಾನ್ಯವಾಗಿ ಸತ್ಯವೇದ ಪುಸ್ತಕ), ಯೋಜನೆಯ ಪ್ರಕಾರವನ್ನು ಗುರುತಿಸಿ (ಸಾಮಾನ್ಯವಾಗಿ ಸತ್ಯವೇದ ಅಥವಾ ತೆರೆದ ಸತ್ಯವೇದ ಕಥೆಗಳು), ಮತ್ತು ಗುರಿ ಭಾಷೆಯನ್ನು ಗುರುತಿಸಿ. ನಿಮ್ಮ ಯೋಜನೆಯನ್ನು ರಚಿಸಿದ ನಂತರ, ನೀವು ಅನುವಾದವನ್ನು ಪ್ರಾರಂಭಿಸಬಹುದು. [ಉತ್ತಮ ಅನುವಾದದ ತತ್ವಗಳು] (…/pretranslation-training/01.md) ಅನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಮತ್ತು ಅನುವಾದ ಸ್ಟುಡಿಯೊದಲ್ಲಿ ನಿರ್ಮಿಸಲಾದ [ಅನುವಾದ ಸಹಾಯಗಳು] (…/…/translate/translate-help/01.md) ಅನ್ನು ಹೇಗೆ ಬಳಸಬೇಕೆಂದು ನಿಮಗೆ ತಿಳಿದಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಮೂಲ ಪಠ್ಯದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಮತ್ತು ಅದನ್ನು ಹೇಗೆ ಅನುವಾದಿಸಬೇಕು ಎಂದು ಇವು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಕೆಲಸವನ್ನು ಸ್ವಯಂಚಾಲಿತವಾಗಿ ಉಳಿಸಲಾಗಿದೆ ಎಂಬುದನ್ನು ಗಮನಿಸಿ. ನಿಮ್ಮ ಕೆಲಸವನ್ನು ವಿವಿಧ ಮಧ್ಯಂತರಗಳಲ್ಲಿ ಬ್ಯಾಕಪ್ ಮಾಡಲು, ಹಂಚಿಕೊಳ್ಳಲು ಅಥವಾ ಅಪ್‌ಲೋಡ್ ಮಾಡಲು ಸಹ ನೀವು ಆಯ್ಕೆ ಮಾಡಬಹುದು (ಈ ಕಾರ್ಯಗಳನ್ನು ಪ್ರವೇಶಿಸಲು ಮೆನು ಬಳಸಿ). ಅನುವಾದವನ್ನು ಹೇಗೆ ಪ್ರಾರಂಭಿಸಬೇಕು ಎಂಬುದರ ಕುರಿತು ಮಾರ್ಗಸೂಚಿಗಳಿಗಾಗಿ, [ಅನುವಾದ ಅವಲೋಕನ] (…/translation-overview/01.md) ಮತ್ತು [ಮೊದಲ ಕರಡನ್ನು ರಚಿಸುವುದು] (…/…/translate/first-draft/01.md) ನೋಡಿ.

ಅನುವಾದ ಸ್ಟುಡಿಯೋವನ್ನು ಹೇಗೆ ಬಳಸುವುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು https://ts-info.readthedocs.io/ ನಲ್ಲಿ ದಸ್ತಾವೇಜನ್ನು ನೋಡಿ.

ಟಿಎಸ್ ಬಳಸಿದ ನಂತರ

  1. ನಿಮ್ಮ ಕೆಲಸವನ್ನು ಪರೀಕ್ಷಿಸಲು ನಿಮಗೆ ಸಹಾಯ ಮಾಡುವ ಅನುವಾದ ತಂಡವನ್ನು ನೀವು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ (ನೋಡಿ [ಪರಿಶೀಲಿಸುವ ಮೊದಲು ತರಬೇತಿ] (…/prechecking-training/01.md) ನೋಡಿ).

  2. ಯಾವುದೇ ಸಮಯದಲ್ಲಿ, ಮೂರು-ಡಾಟ್ ಮೆನು ಕ್ಲಿಕ್ ಮಾಡಿ ಮತ್ತು ಅಪ್‌ಲೋಡ್ / ರಫ್ತು ಆಯ್ಕೆ ಮಾಡುವ ಮೂಲಕ ನಿಮ್ಮ ಕೆಲಸವನ್ನು [ಡೋರ್ 43] (https://git.door43.org) ಗೆ ಅಪ್‌ಲೋಡ್ ಮಾಡಬಹುದು. ನೀವು ಡೋರ್ 43 ನಲ್ಲಿ ಬಳಕೆದಾರರ ಹೆಸರನ್ನು ರಚಿಸಬೇಕಾಗುತ್ತದೆ.

  3. ಒಮ್ಮೆ ಅಪ್‌ಲೋಡ್ ಮಾಡಿದ ನಂತರ, ಡೋರ್ 43 ನಿಮ್ಮ ಕೆಲಸವನ್ನು ನಿಮ್ಮ ಬಳಕೆದಾರರ ಹೆಸರಿನಲ್ಲಿ ಭಂಡಾರದಲ್ಲಿ ಇಡುತ್ತದೆ ಮತ್ತು ನಿಮ್ಮ ಕೆಲಸವನ್ನು ನೀವು ಅಲ್ಲಿ ಪ್ರವೇಶಿಸಬಹುದು (ನೋಡಿ [ಪ್ರಕಾಶನ] (…/intro-publishing/01.md) ನೋಡಿ).


ಅನುವಾದಕ್ಕೆ ಒಂದು ವೇದಿಕೆಯನ್ನು ಆರಿಸುವುದು

Process Manual :: ಅನುವಾದಕ್ಕೆ ಒಂದು ವೇದಿಕೆಯನ್ನು ಆರಿಸುವುದು

ಶಿಫಾರಸು ಮಾಡಿದ ವೇದಿಕೆ

ಡೋರ್ 43 ಆನ್‌ಲೈನ್ ಸಮುದಾಯದಲ್ಲಿ ಸತ್ಯವೇದ ಅನುವಾದಗಳನ್ನು ತಯಾರಿಸಲು ಶಿಫಾರಸು ಮಾಡಲಾದ ವೇದಿಕೆಯೆಂದರೆ ಹೆಚ್ಚಿನ ಮಾಹಿತಿಗಾಗಿ ಅನುವಾದ ಸ್ಟುಡಿಯೋ (htt p://ufw.io/ts/). The recommended platform for checking Bible translations is translationCore (http://ufw.io/tc/). You may set up translationStudio on Android, Windows, Mac, or Linux devices (see Setting up translationStudio. ನೀವು ವಿಂಡೋಸ್, ಮ್ಯಾಕ್ ಅಥವಾ ಲಿನಕ್ಸ್ ಸಾಧನಗಳಲ್ಲಿ ಅನುವಾದ ಕೋರ್ ಅನ್ನು ಹೊಂದಿಸಬಹುದು. ಈ ವೇದಿಕೆಗಳು ಡೌನ್‌ಲೋಡ್ ಮಾಡಲು ಮತ್ತು ಬಳಸಲು ಉಚಿತವಾಗಿದೆ. ಅವರು ಯುಎಸ್ಎಫ್ಎಂ ರೂಪದಲ್ಲಿ ಸತ್ಯವೇದ ಪುಸ್ತಕಗಳನ್ನು ಆಮದು ಮಾಡಿಕೊಳ್ಳುತ್ತಾರೆ ಮತ್ತು ರಫ್ತು ಮಾಡುತ್ತಾರೆ

ಇತರ ಆಯ್ಕೆಗಳು

ಅನುವಾದ ಸ್ಟುಡಿಯೋವನ್ನು ಬಳಸುವುದು ನಿಮ್ಮ ತಂಡಕ್ಕೆ ಒಂದು ಆಯ್ಕೆಯಾಗಿಲ್ಲದಿದ್ದರೆ, ನೀವು ಇತರ ಆನ್‌ಲೈನ್ ಅಥವಾ ಆಫ್‌ಲೈನ್ ಪರಿಕರಗಳನ್ನು ಬಳಸುವುದನ್ನು ಪರಿಗಣಿಸಬಹುದು. ದಯವಿಟ್ಟು ಗಮನಿಸಿ: ನೀವು ಅನುವಾದ ಸ್ಟುಡಿಯೋವನ್ನು ಬಳಸದಿದ್ದರೆ, ಮತ್ತು ಆದರ ಇತರ ಸತ್ಯವೇದ ಅನುವಾದ ಸಾಫ್ಟ್‌ವೇರ್ಗಳನ್ನು ಬಳಸಲು ಬಯಸಿದರೆ, ನಿಮ್ಮ ಅನುವಾದಿತ ವಿಷಯವು ಯುಎಸ್‌ಎಫ್‌ಎಂ ಸ್ವರೂಪದಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ (ಹೆಚ್ಚಿನ ಮಾಹಿತಿಗಾಗಿ [ಫೈಲ್ ಫಾರ್ಮ್ಯಾಟ್‌ಗಳು] (…/…/translate/file-formats/01.md) ನೋಡಿ).


ಅನುವಾದದ ಅವಲೋಕನ

Process Manual :: ಅನುವಾದದ ಅವಲೋಕನ

OL ಅನುವಾದ ಪ್ರಕ್ರಿಯೆ

ಪ್ರಪಂಚದ ಹೆಚ್ಚಿನ ಭಾಷೆಗಳಾಗಿರುವ “ಇತರೆ ಭಾಷೆಗಳು” (ಒಎಲ್ ಗಳು, ಗೇಟ್‌ವೇ ಭಾಷೆಗಳನ್ನು ಹೊರತುಪಡಿಸಿ ಬೇರೆ ಭಾಷೆಗಳು), ಈ ಕೆಳಗಿನವು ಅನುವಾದದ ಪ್ರಕ್ರಿಯೆಯಾಗಿದ್ದು, ಅನುವಾದ ಸಂಪನ್ಮೂಲಗಳು ಮತ್ತು ಸಾಧನಗಳೊಂದಿಗೆ ಪದವನ್ನು ಶಿಫಾರಸು ಮಾಡುತ್ತದೆ ಮತ್ತು ಬೆಂಬಲಿಸುತ್ತದೆ.

[ಅನುವಾದ ಸಮಿತಿಯನ್ನು ಸ್ಥಾಪಿಸುವುದು] (…/setup-team/01.md) ಮತ್ತು [ಅನುವಾದ ತತ್ವಗಳು] (…/pretranslation-training/01.md) ನಲ್ಲಿ ಅನುವಾದಕರಿಗೆ ತರಬೇತಿ ನೀಡಿದ ನಂತರ ಮತ್ತು [ಅನುವಾದ ಸ್ಟುಡಿಯೋ] (…/setup-ts/01.md) ಅನ್ನು ಹೇಗೆ ಬಳಸಬೇಕೆಂದು ತಿಳಿಯಲು, ಈ ಪ್ರಕ್ರಿಯೆಯನ್ನು ಅನುಸರಿಸಲು ನಾವು ಶಿಫಾರಸು ಮಾಡುತ್ತೇವೆ:

  1. ಅನುವಾದ ಸ್ಟುಡಿಯೋ ಬಳಸಿ, ಓಪನ್ ಬೈಬಲ್ ಕಥೆಗಳ (ಒಬಿಎಸ್) ಕಥೆಯ [ಮೊದಲ ಕರಡು] (…/…/translate/first-draft/01.md) ಅನುವಾದ ಮಾಡಿ.

  2. ನಿಮ್ಮ ಅನುವಾದ ತಂಡದಲ್ಲಿ [ಪಾಲುದಾರರೊಂದಿಗೆ ] ನಿಮ್ಮ ಅನುವಾದವನ್ನು ಪರಿಶೀಲಿಸಿ (…/…/checking/peer-check/01.md).

  3. [ಪೂರ್ಣ ಅನುವಾದ ತಂಡದೊಂದಿಗೆ] ನಿಮ್ಮ ಅನುವಾದವನ್ನು ಪರಿಶೀಲಿಸಿ (…/…/checking/team-oral-chunk-check/01.md).

  4. [ಅನುವಾದ ಟಿಪ್ಪಣಿಗಳು] (…/…/checking/trans-note-check/01.md) ಮತ್ತು [ಅನುವಾದ ಪದಗಳು] (…/…/checking/important-term-check/01.md) ಬಳಸಿ ಅನುವಾದವನ್ನು ಪರಿಶೀಲಿಸಿ.

  5. [ಭಾಷಾ ಸಮುದಾಯದೊಂದಿಗೆ] ಅನುವಾದವನ್ನು ಪರಿಶೀಲಿಸಿ (…/…/checking/language-community-check/01.md).

  6. [ಭಾಷಾ ಸಮುದಾಯದ ಸಭಾ ಪಾಲಕರೊಂದಿಗೆ ] ನಿಮ್ಮ ಅನುವಾದವನ್ನು ಪರಿಶೀಲಿಸಿ (…/…/checking/church-leader-check/01.md).

  7. [ಸಭೆ ನೆಟ್‌ವರ್ಕ್‌ಗಳ ನಾಯಕರುನೊಂದಿಗೆ ಅನುವಾದವನ್ನು ಪರಿಶೀಲಿಸಿ] (…/…/checking/level3/01.md).

  8. ಡೋರ್ 43 ರಲ್ಲಿ, ಮುದ್ರಣ ಮತ್ತು ಆಡಿಯೋದಲ್ಲಿ ಮೂಲಕ ನೀವು ಬಯಸಿದಂತೆ ಅನುವಾದವನ್ನು [ಪ್ರಕಟಿಸಿ] (…/intro-publishing/01.md)

ನೀವು ಎಲ್ಲಾ ಐವತ್ತು ಕಥೆಗಳನ್ನು ಮುಗಿಸುವವರೆಗೆ ಓಪನ್ ಬೈಬಲ್ ಕಥೆಗಳ ಪ್ರತಿಯೊಂದು ಹಂತಗಳನ್ನು ಪುನರಾವರ್ತಿಸಿ.

ತೆರೆಯಲ್ಪಟ್ಟ ಸತ್ಯವೇದ ಕಥೆಗಳನ್ನು ಮುಗಿಸಿದ ನಂತರ, ಸತ್ಯವೇದ ಭಾಷಾಂತರಿಸಲು ಪ್ರಾರಂಭಿಸಲು ನೀವು ಸಾಕಷ್ಟು ಕೌಶಲ್ಯ ಮತ್ತು ಅನುಭವವನ್ನು ಗಳಿಸಿದ್ದೀರಿ ಅಂದರೆ [ತೊಂದರೆ ಮಟ್ಟ 2] (…/…/translate/translation-difficulty/01.md) ಪುಸ್ತಕದೊಂದಿಗೆ ಪ್ರಾರಂಭಿಸಲು ನಾವು ಶಿಫಾರಸು ಮಾಡುತ್ತೇವೆ. ನಂತರ ಈ ಪ್ರಕ್ರಿಯೆಯನ್ನು ಅನುಸರಿಸಿ:

  1. ಅನುವಾದ ಸ್ಟುಡಿಯೋ ಬಳಸಿ, ಸತ್ಯವೇದ ಪುಸ್ತಕದ [ಮೊದಲ ಕರಡು] (…/…/translate/first-draft/01.md) ಅನುವಾದ ಮಾಡಿ.
  2. ನಿಮ್ಮ ಅನುವಾದ ತಂಡದಲ್ಲಿ [ಪಾಲುದಾರನೊಂದಿಗೆ ಅನುವಾದವನ್ನು ಪರಿಶೀಲಿಸಿ] (…/…/checking/peer-check/01.md).
  3. [ಪೂರ್ಣ ಅನುವಾದ ತಂಡದೊಂದಿಗೆ ಅನುವಾದವನ್ನು ಪರಿಶೀಲಿಸಿ] (…/…/checking/team-oral-chunk-check/01.md).
  4. [ಅನುವಾದ ನೋಟ್ಸ್] (…/…/checking/trans-note-check/01.md) ಮತ್ತು [ಅನುವಾದ ಪದಗಳು] (…/…/checking/important-term-check/01.md) ಸಾಧನಗಳನ್ನು [ಅನುವಾದ ಕೋರ್] (…/setup-tc/01.md) ನಲ್ಲಿ ಬಳಸಿ ಅನುವಾದವನ್ನು ಪರಿಶೀಲಿಸಿ.
  5. [ಭಾಷಾ ಸಮುದಾಯದೊಂದಿಗೆ ಅನುವಾದವನ್ನು ಪರಿಶೀಲಿಸಿ] (…/…/checking/language-community-check/01.md).
  6. [ಭಾಷಾ ಸಮುದಾಯದಿಂದ ಸೇವಕರೊಂದಿಗೆ ಅನುವಾದವನ್ನು ಪರಿಶೀಲಿಸಿ] (…/…/checking/church-leader-check/01.md).
  7. [ಅನುವಾದ ಮೂಲ] (…/…/checking/alignment-tool/01.md) ನಲ್ಲಿ [ಜೋಡಿಸುವ ಸಾಧನ] (…/setup-tc/01.md) ಬಳಸಿ ಮೂಲ ಭಾಷೆಗಳೊಂದಿಗೆ ಅನುವಾದವನ್ನು ಜೋಡಿಸಿ.
  8. [ಸಭೆಯ ನೆಟ್‌ವರ್ಕ್‌ಗಳ ನಾಯಕನೊಂದಿಗೆ ಅನುವಾದವನ್ನು ಪರಿಶೀಲಿಸಿ] (…/…/checking/level3/01.md).
  9. [ಪ್ರಕಟಿಸು] (…/intro-publishing/01.md) ಡೋರ್ 43, ಮುದ್ರಣ ಮತ್ತು ಆಡಿಯೊದಲ್ಲಿ ಅನುವಾದವನ್ನು ಬಯಸಿದಂತೆ.

ಪ್ರತಿ ಸತ್ಯವೇದ ಪುಸ್ತಕದೊಂದಿಗೆ ಈ ಹಂತಗಳನ್ನು ಪುನರಾವರ್ತಿಸಿ.

ಅನುವಾದ ತಂಡದಿಂದ ಯಾರಾದರೂ [ಡೋರ್ 43] (http://git.door43.org) ನಲ್ಲಿ ಅನುವಾದವನ್ನು ಮುಂದುವರೆಸಲು ಯೋಜಿಸಿ, ದೋಷಗಳನ್ನು ಸರಿಪಡಿಸಲು ಮತ್ತು ಚರ್ಚ್ ಸಮುದಾಯದ ಸಲಹೆಗಳ ಪ್ರಕಾರ ಅದನ್ನು ಸುಧಾರಿಸಲು ಸಂಪಾದಿಸಿ. ಅನುವಾದವನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು ಮತ್ತು ಬಯಸಿದಷ್ಟು ಬಾರಿ ಮರುಮುದ್ರಣ ಮಾಡಬಹುದು.


ಅನುವಾದದ ಮೂಲ® ಸ್ಥಾಪಿಸುವುದು

Process Manual :: ಅನುವಾದದ ಮೂಲ® ಸ್ಥಾಪಿಸುವುದು

ಅನುವಾದದ ಮೂಲವನ್ನು ಹೇಗೆ ಪಡೆಯುವುದು

ಅನುವಾದಮೂಲ ಸತ್ಯವೇದ ಭಾಷಾಂತರಗಳನ್ನು ಪರಿಶೀಲಿಸಲು ಮುಕ್ತ-ಮೂಲ ಮತ್ತು ಮುಕ್ತ-ಪರವಾನಗಿ ಪಡೆದ ಸಾಫ್ಟ್‌ವೇರ್ ಕಾರ್ಯಕ್ರಮವಾಗಿದೆ. ಇದು ಬಳಸಲು ಸಂಪೂರ್ಣವಾಗಿ ಉಚಿತವಾಗಿದೆ. ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳಿಗಾಗಿ (ವಿಂಡೋಸ್, ಮ್ಯಾಕ್, ಅಥವಾ ಲಿನಕ್ಸ್) ಅನುವಾದಕೋರ್‌ನ ಇತ್ತೀಚಿನ ಆವೃತ್ತಿ https://translationcore.com/ ನಿಂದ ಲಭ್ಯವಿದೆ. ಪ್ರೋಗ್ರಾಂ ಅನ್ನು ಸ್ಥಾಪಿಸಲು, ಇತ್ತೀಚಿನ ಬಿಡುಗಡೆಯನ್ನು ಪಡೆಯಲು “ಡೌನ್‌ಲೋಡ್” ಕ್ಲಿಕ್ ಮಾಡಿ. ಇಂಟರ್ನೆಟ್ (ಅಂತರ್ಜಾಲ) ವನ್ನು ಬಳಸದೆ ಅನುವಾದವನ್ನು ಇತರರೊಂದಿಗೆ ಹಂಚಿಕೊಳ್ಳಲು ನೀವು ಅನುಸ್ಥಾಪನಾ ಫೈಲ್ ಅನ್ನು ಇತರ ಕಂಪ್ಯೂಟರ್ಗಳಿಗೆ ನಕಲಿಸಬಹುದು ಎಂಬುದನ್ನು ಗಮನಿಸಿ.

ಅನುವಾದವನ್ನು ಹೇಗೆ ಸ್ಥಾಪಿಸುವುದು

ಅನುವಾದ ಕೋರ್ ಅನ್ನು ಹೇಗೆ ಬಳಸುವುದು ಎಂಬುದರ ಕುರಿತು ಅವಲೋಕನವನ್ನು ಪಡೆಯಲು, ದಯವಿಟ್ಟು https://tc-documentation.readthedocs.io/ ನೋಡಿ. ಕೆಳಗಿನವು ಒಂದು ಅವಲೋಕನವಾಗಿದೆ.

ಲಾಗ್ ಇನ್ ಮಾಡಿ

ಪ್ರಾರಂಭಿಸಲು, ನೀವು ಬಳಕೆದಾರರ ಹೆಸರಿನೊಂದಿಗೆ ಲಾಗ್ ಇನ್ ಮಾಡಬೇಕಾಗುತ್ತದೆ. ನಿಮ್ಮ ಅನುವಾದವು ಡೋರ್ 43 ನಲ್ಲಿದ್ದರೆ, ನಿಮ್ಮ ಡೋರ್ 43 ಬಳಕೆದಾರರ ಹೆಸರನ್ನು ಬಳಸಿ. ನೀವು ಇಂಟರ್ನೆಟ್ ಅನ್ನು ಬಳಸಲು ಬಯಸದಿದ್ದರೆ, ನೀವು ಬಳಸಲು ಬಯಸುವ ಯಾವುದೇ ಹೆಸರನ್ನು ನೀವು ನಿಜವಾದ ಅಥವಾ ಕಾವ್ಯನಾಮವನ್ನು ನಮೂದಿಸಬಹುದು.

ಒಂದು ಯೋಜನೆ ಆಯ್ಕೆಮಾಡಿ

ನಿಮ್ಮ ಡೋರ್ 43 ಬಳಕೆದಾರರ ಹೆಸರಿನೊಂದಿಗೆ ನೀವು ಲಾಗ್ ಇನ್ ಆಗಿದ್ದರೆ, ಯಾವ ಅನುವಾದಗಳು ನಿಮಗೆ ಸೇರಿವೆ ಎಂದು ಅನುವಾದ ಕೋರ್ ತಿಳಿಯುತ್ತದೆ ಮತ್ತು ಅವುಗಳನ್ನು ಅನುವಾದ ಕೋರ್ಗೆ ಡೌನ್‌ಲೋಡ್ ಮಾಡಲು ಲಭ್ಯವಾಗುವಂತೆ ಮಾಡುತ್ತದೆ. ನೀವು ಪರಿಶೀಲಿಸಲು ಬಯಸುವ ಅನುವಾದ ಪ್ರಾಜೆಕ್ಟ್ ಅನ್ನು ಡೋರ್ 43 ರಲ್ಲಿ ನಿಮ್ಮ ಯೋಜನೆಗಳ ಪಟ್ಟಿಯಿಂದ ನೀವು ಆಯ್ಕೆ ಮಾಡಬಹುದು. ಇಂಟರ್ನೆಟ್ ಬಳಸದೆ ನಿಮ್ಮ ಕಂಪ್ಯೂಟರ್‌ನಲ್ಲಿ ಈಗಾಗಲೇ ಉಳಿಸಲಾದ ಅನುವಾದಗಳನ್ನು ಸಹ ನೀವು ಲೋಡ್ ಮಾಡಬಹುದು.

ಒಂದು ಉಪಕರಣವನ್ನು ಆರಿಸಿ

ಅನುವಾದ ಕೋರ್ ಪ್ರಸ್ತುತ ಮೂರು ಪರಿಶೀಲನಾ ಸಾಧನಗಳನ್ನು ಒಳಗೊಂಡಿದೆ:

  • [ಅನುವಾದ ಪದಗಳ ಸಾಧನ] (…/…/checking/important-term-check/01.md)
  • [ಅನುವಾದ ಟಿಪ್ಪಣಿಗಳ ಸಾಧನ] (…/…/checking/trans-note-check/01.md)
  • [ಪದ ಜೋಡಣೆ ಸಾಧನ] (…/…/checking/alignment-tool/01.md)

ಮೇಲಿನ ಉಪಕರಣದ ಹೆಸರನ್ನು ಕ್ಲಿಕ್ ಮಾಡುವುದರ ಮೂಲಕ ಪ್ರತಿ ಉಪಕರಣವನ್ನು ಬಳಸುವ ಸೂಚನೆಗಳನ್ನು ಕಾಣಬಹುದು

ಅನುವಾದವನ್ನು ಬಳಸಿದ ನಂತರ

ಯಾವುದೇ ಸಮಯದಲ್ಲಿ, ನಿಮ್ಮ ಕೆಲಸವನ್ನು ನೀವು [ಡೋರ್ 43] (http s://git.door43.org) by returning to the project list and clicking on the three-dot menu next to the project that you want to upload and choosing “Upload to Door43”. You can also save your project to a file on your computer. Once uploaded, Door43 will keep your work in a repository under your user name and you can access your work there (see Publishing ಗೆ ಅಪ್‌ಲೋಡ್ ಮಾಡಬಹುದು.


ಪರಿಶೀಲಿಸುವ ಮೊದಲು ತರಬೇತಿ ಪ್ರಾರಂಭವಾಗುತ್ತದೆ

Process Manual :: ಪರಿಶೀಲಿಸುವ ಮೊದಲು ತರಬೇತಿ ಪ್ರಾರಂಭವಾಗುತ್ತದೆ

ಪರಿಶೀಲಿಸುವ ಮೊದಲು

ನಿಮ್ಮ ಅನುವಾದವನ್ನು ಪರಿಶೀಲಿಸುವಾಗ ನೀವು ಆಗಾಗ್ಗೆ [ ಪರಿಶೀಲನ ಕೈಪಿಡಿಯನ್ನು] (…/…/checking/intro-check/01.md) ಅನ್ನು ಸಂಪರ್ಕಿಸಲು ಶಿಫಾರಸು ಮಾಡಲಾಗಿದೆ. ನೀವು ಪರಿಶೀಲಿಸಲು ಪ್ರಾರಂಭಿಸುವ ಮೊದಲು, ಪ್ರತಿ ಪರಿಶೀಲಿಸಲಾಗುತ್ತಿದೆ ಏನು ಬೇಕು ಎಂಬುದನ್ನು ನೀವು ಅರ್ಥಮಾಡಿಕೊಳ್ಳುವವರೆಗೆ ಕೈಪಿಡಿಯನ್ನು ಪರಿಶೀಲಿಸಲಾಗುತ್ತಿದೆ ಮೂಲಕ ನಿಮ್ಮ ಕೆಲಸವನ್ನು ಪ್ರಾರಂಭಿಸಲು ನಾವು ಶಿಫಾರಸು ಮಾಡುತ್ತೇವೆ. ನೀವು ಪರಿಶೀಲನಾ ಪ್ರಕ್ರಿಯೆಯ ಮೂಲಕ ಕೆಲಸ ಮಾಡುವಾಗ, ನೀವು ಆಗಾಗ್ಗೆ ಪರಿಶೀಲನಾ ಕೈಪಿಡಿಯನ್ನು ಸಂಪರ್ಕಿಸಬೇಕಾಗುತ್ತದೆ

ನೀವು ಪರಿಶೀಲಿಸಲು ಪ್ರಾರಂಭಿಸುವ ಮೊದಲು ಅನುವಾದ ತಂಡವು ತಿಳಿದಿರಬೇಕಾದ ಕೆಲವು ಮಾಹಿತಿ:

  • [ಪರಿಶೀಲಿಸುವ ಗುರಿ] (…/…/checking/goal-checking/01.md) - ಪರಿಶೀಲಿಸುವ ಉದ್ದೇಶವೇನು?
  • [ಅನುವಾದ ಪರಿಶೀಲನೆಯ ಪರಿಚಯ] (…/…/checking/intro-checking/01.md) - ಅನುವಾದವನ್ನು ಪರಿಶೀಲಿಸಲು ನಮಗೆ ಒಂದು ತಂಡ ಏಕೆ ಬೇಕು?

ಪ್ರಕಾಶಕರ ಪರಿಚಯ

Process Manual :: ಪ್ರಕಾಶಕರ ಪರಿಚಯ

ಪ್ರಕಾಶಕರ ಅವಲೋಕನ

ಕೃತಿಯನ್ನು ಡೋರ್ 43 ಗೆ ಒಳಪಡಿಸಿದ ನಂತರ, ಅದು ನಿಮ್ಮ ಬಳಕೆದಾರ ಖಾತೆಯಡಿಯಲ್ಲಿ ಸ್ವಯಂಚಾಲಿತವಾಗಿ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಇದನ್ನು ಸ್ವಯಂ ಪ್ರಕಾಶನ ಎಂದು ಕರೆಯಲಾಗುತ್ತದೆ. ನಿಮ್ಮ ಯೋಜನೆಯ ವೆಬ್ ಆವೃತ್ತಿಗೆ http://door43.org/u/user_name/project_name ನಲ್ಲಿ ನೀವು ಪ್ರವೇಶವನ್ನು ಹೊಂದಿರುತ್ತೀರಿ (ಅಲ್ಲಿ ಬಳಕೆದಾರ_ಹೆಸರು ನಿಮ್ಮ ಬಳಕೆದಾರ ಹೆಸರು ಮತ್ತು ಯೋಜನೆಯ_ಹೆಸರು ನಿಮ್ಮ ಅನುವಾದ ಯೋಜನೆಯಾಗಿದೆ). ಅನುವಾದ ಸ್ಟುಡಿಯೋ ಮತ್ತು ಅನುವಾದ ಕೋರ್ ಎರಡನ್ನೂ ನೀವು ಒಳಪಡಿಸುವಾಗ ಸರಿಯಾದ ಲಿಂಕ್ ಅನ್ನು ನೀಡುತ್ತದೆ. ನೀವು ಎಲ್ಲಾ ಕೃತಿಗಳನ್ನು http://door43.org ನಲ್ಲಿ ಬ್ರೌಸ್ ಮಾಡಬಹುದು (ಅಂತರ್ಜಾಲ ಶೋಧ ಮಾಡು).

ನಿಮ್ಮ ಡೋರ್ 43 ಯೋಜನೆ ಪುಟದಿಂದ ನೀವು ಹೀಗೆ ಮಾಡಬಹುದು

  • ಡೀಫಾಲ್ಟ್ ವಿನ್ಯಸದೊಂದಿಗೆ ನಿಮ್ಮ ಯೋಜನೆಯ ಅಂತರ್ಜಾಲದ ಆವೃತ್ತಿಯನ್ನು ನೋಡಿ
  • ನಿಮ್ಮ ಯೋಜನೆಯ ದಾಖಲೆಗಳನ್ನು ಡೌನ್‌ಲೋಡ್ ಮಾಡಿ (ಪಿಡಿಎಫ್‌ನಂತೆ)
  • ನಿಮ್ಮ ಯೋಜನೆಗಾಗಿ ಮೂಲ ಫೈಲ್‌ಗಳಿಗೆ (ಯುಎಸ್‌ಎಫ್‌ಎಂ ಅಥವಾ ಮಾರ್ಕ್‌ಡೌನ್) ಲಿಂಕ್‌ಗಳನ್ನು ಪಡೆಯಿರಿ
  • ನಿಮ್ಮ ಯೋಜನೆಯ ಬಗ್ಗೆ ಇತರರೊಂದಿಗೆ ಸಂವಹನ ನಡೆಸಿ
  • ನಿಮ್ಮ ಯೋಜನೆಯನ್ನು ಸಂಪಾದಿಸಲು ಮತ್ತು ಸುಧಾರಿಸಲು ಮುಂದುವರಿಸಿ ಮತ್ತು ಎಲ್ಲಾ ಬದಲಾವಣೆಗಳ ಜಾಡನ್ನು ಇರಿಸಿ

ನಿಮ್ಮ ಯೋಜನೆಯನ್ನು ಇತರರಿಗೆ ವಿತರಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, [ವಿತರಣೆ] (…/intro-share/01.md) ನೋಡಿ.


ಪ್ರಕ್ರಿಯೆ ಕೈಪಿಡಿಯ ಪರಿಚಯ

Process Manual :: ಪ್ರಕ್ರಿಯೆ ಕೈಪಿಡಿಯ ಪರಿಚಯ

ಸ್ವಾಗತ

ಸತ್ಯವೇದ ಅನುವಾದಕ್ಕೆ ಸುಸ್ವಾಗತ! ದೇವರ ಸಂದೇಶವನ್ನು ನಿಮ್ಮ ಜನರ ಭಾಷೆಗೆ ಭಾಷಾಂತರಿಸಲು ನೀವು ಬಯಸುತ್ತಿರುವುದು ನಮಗೆ ಸಂತೋಷವಾಗಿದೆ, ಇದು ಸತ್ಯವೇದ ಕಥೆಗಳ ಅನುವಾದದ ಮೂಲಕ ಅಥವಾ ಧರ್ಮಗ್ರಂಥಗಳ ಪುಸ್ತಕಗಳ ಮೂಲಕ ಮಾಡಬಹುದಾಗಿದೆ. ಈ ಪ್ರಕ್ರಿಯೆಯ ಕೈಪಿಡಿ ಯೋಜನೆಯ ಪ್ರಾರಂಭದಿಂದ ಪೂರ್ಣಗೊಳ್ಳುವವರೆಗೆ ಅವರು ಏನು ಮಾಡಬೇಕೆಂದು ಅನುವಾದ ತಂಡಗಳಿಗೆ ತಿಳಿಯಲು ಸಹಾಯ ಮಾಡುವ ಹಂತ-ಹಂತದ ಮಾರ್ಗದರ್ಶಿಯಾಗಿದೆ. ಈ ಮಾರ್ಗದರ್ಶಿ ಅನುವಾದ ತಂಡಕ್ಕೆ ಅನುವಾದ ಮತ್ತು ಪರಿಶೀಲನೆಯ ಪಠೄಗಳ ಪ್ರಾಥಮಿಕ ಸಿದ್ಧತೆಯಿಂದ ಅಂತಿಮ ಪ್ರಕಟಣೆಯ ವರೆಗೆ ಸಹಾಯ ಮಾಡುತ್ತದೆ.

ಪ್ರಾರಂಭ ಮಾಡುವುದು

ಅನುವಾದವು ಬಹಳ ಸಂಕೀರ್ಣವಾದ ಕಾರ್ಯವಾಗಿದ್ದು ಅದು ಬದ್ಧತೆ, ಸಂಘಟನೆ ಮತ್ತು ಯೋಜನೆಯನ್ನು ತೆಗೆದುಕೊಳ್ಳುತ್ತದೆ. ಕಲ್ಪನೆಯಿಂದ ಪೂರ್ಣಗೊಂಡ, ಪರಿಶೀಲಿಸಿದ, ವಿತರಿಸಿದ ಮತ್ತು ಬಳಕೆಯಲ್ಲಿರುವ ಅನುವಾದಕ್ಕೆ ಅನುವಾದವನ್ನು ತೆಗೆದುಕೊಳ್ಳಲು ಅಗತ್ಯವಿರುವ ಹಲವು ಹಂತಗಳಿವೆ. ಈ ಪ್ರಕ್ರಿಯೆ ಕೈಪಿಡಿಯಲ್ಲಿನ ಮಾಹಿತಿಯು ಅನುವಾದ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಎಲ್ಲಾ ಹಂತಗಳನ್ನು ತಿಳಿಯಲು ನಿಮಗೆ ಸಹಾಯ ಮಾಡುತ್ತದೆ.

ಸತ್ಯವೇದ ಭಾಷಾಂತರಿಸಲು ಅನೇಕ ಕೌಶಲ್ಯಗಳು ಬೇಕಾಗುತ್ತವೆ, ಆದ್ದರಿಂದ ನೀವು ಮೊದಲು ಯೋಚಿಸಬೇಕಾದದ್ದು ಈ ಕೆಲಸವನ್ನು ಮಾಡಬಹುದಾದ [ತಂಡವನ್ನು ಆರಿಸುವುದು] (…/setup-team/01.md)


ವಿತರಣೆ

Process Manual :: ವಿತರಣೆ

2### ವಿತರಣಾ ಅವಲೋಕನ

ಸತ್ಯವೇದದ ವಿಷಯವನ್ನು ಬಳಸದ ಹೊರತು ಅದು ನಿಷ್ಪ್ರಯೋಜಕವಾಗಿದೆ. ಡೋರ್ 43 ಅನುವಾದ ಮತ್ತು ಪ್ರಕಾಶನ ವೇದಿಕೆಯನ್ನು ಬಳಸುವ ಒಂದು ಪ್ರಯೋಜನವೆಂದರೆ, ಅದು ವಿಷಯವನ್ನು ವಿತರಿಸಬಹುದಾದ ಸರಳ ಮಾರ್ಗಗಳನ್ನು ಒದಗಿಸುತ್ತದೆ. ಡೋರ್ 43 ನಲ್ಲಿ:

  • ನಿಮ್ಮ ಅನುವಾದವನ್ನು ನೀವು ಸುರಕ್ಷಿತವಾಗಿ ಇರಿಸಬಹುದು
  • ಜನರು ನಿಮ್ಮ ಅನುವಾದವನ್ನು ನೋಡಬಹುದು
  • ನಿಮ್ಮ ಅನುವಾದವನ್ನು ಸುಧಾರಿಸಲು ಜನರು ಪ್ರಶ್ನೆಗಳನ್ನು ಮತ್ತು ಸಲಹೆಗಳನ್ನು ನೀಡಬಹುದು
  • ಜನರು ನಿಮ್ಮ ಅನುವಾದವನ್ನು ಓದಲು, ಮುದ್ರಿಸಲು ಮತ್ತು ಇತರರೊಂದಿಗೆ ಹಂಚಿಕೊಳ್ಳಲು ಡೌನ್‌ಲೋಡ್ ಮಾಡಬಹುದು

ಮುಕ್ತ ಪರವಾನಗಿ

ವಿಷಯದ ವಿತರಣೆಯನ್ನು ಶಕ್ತಗೊಳಿಸುವ ದೊಡ್ಡ ಅಂಶವೆಂದರೆ [ಮುಕ್ತ ಪರವಾನಗಿ] (…/…/intro/open-license/01.md), ಇದನ್ನು ಡೋರ್ 43 ನಲ್ಲಿನ ಎಲ್ಲಾ ವಿಷಯಗಳಿಗೆ ಬಳಸಲಾಗುತ್ತದೆ. ಈ ಪರವಾನಗಿ ಪ್ರತಿಯೊಬ್ಬರಿಗೂ ಅಗತ್ಯವಿರುವ ಸ್ವಾತಂತ್ರ್ಯವನ್ನು ನೀಡುತ್ತದೆ:

  • ** ಹಂಚಿಕೊಳ್ಳಿ ** - ಯಾವುದೇ ಮಾಧ್ಯಮ ಅಥವಾ ವಸ್ತುಗಳನ್ನು ನಕಲಿಸಿ ಮತ್ತು ಮರುಹಂಚಿಕೆ
  • ** ಹೊಂದಿಕೊಳ್ಳಿರಿ ** - ರೀಮಿಕ್ಸ್, ರೂಪಾಂತರ ಮತ್ತು ವಸ್ತುಗಳ ಮೇಲೆ ನಿರ್ಮಿಸಿ

ಯಾವುದೇ ಉದ್ದೇಶಕ್ಕಾಗಿ, ವಾಣಿಜ್ಯ ಸಹ, ವೆಚ್ಚವಿಲ್ಲದೆ. “ನೀವು ಉಚಿತವಾಗಿ ಸ್ವೀಕರಿಸಿದ್ದೀರಿ; ಉಚಿತವಾಗಿ ನೀಡಿ.” (ಮತ್ತಾಯ 10: 8)

ನಿಮ್ಮ ಅನುವಾದಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮಾರ್ಗಗಳಿಗಾಗಿ, [ವಿಷಯ ಹಂಚಿಕೆ] (…/share-content/01.md) ನೋಡಿ.

Translation Manual

Translation Manual

Introduction

Translation Manual :: Introduction

ಭಾಷಾಂತರ ಕೈಪಿಡಿಗೆ ಒಂದು ಪೀಠಿಕೆ.

Translation Manual :: Introduction :: Introduction to the Translation Manual

ಭಾಷಾಂತರ ಕೈಪಿಡಿ ನಮಗೆ ಏನನ್ನು ಬೋಧಿಸುತ್ತದೆ.?

ಈ ಪ್ರಯೋಗ ಕೈಪಿಡಿ ನಮಗೆ ಭಾಷಾಂತರ ಸಿದ್ಧಾಂತಗಳನ್ನು ಮತ್ತು ಬೇರೆ ಭಾಷೆಯಲ್ಲಿ ಹೇಗೆ ಒಳ್ಳೆ ಭಾಷಾಂತರ ಮಾಡಬಹುದು ಎಂದು ತಿಳಿಸುತ್ತದೆ. (OLs). ಈ ಭಾಷಾಂತರ ಕೈಪಿಡಿಯಲ್ಲಿ ಬರುವ ತತ್ವಗಳು “ಗೇಟ್ ವೇ” ಲಾಂಗ್ವೇಜ್ ಟ್ರಾನ್ಸ್ ಲೇಷನ್ ಗೂ ಅನ್ವಯಿಸುತ್ತದೆ. “ಗೇಟ್ ವೇ” ಭಾಷೆಯಲ್ಲಿ ಭಾಷಾಂತರ ತತ್ವ ಸಾಧನಗಳನ್ನು ಹೇಗೆ ಭಾಷಾಂತರ ಮಾಡಬೇಕು ಎಂಬುದರ ಬಗ್ಗೆ ನಿರ್ದಿಷ್ಟ ಸೂಚನೆಗಳಿಗಾಗಿ “ಗೇಟ್ ವೇ” ಲಾಂಗ್ವೇಜ್ ಮ್ಯಾನುಯಲ್ ನೋಡಿ. ಯಾವುದೇ ಭಾಷಾಂತರ ಕಾರ್ಯ ಪ್ರಾರಂಭಿಸುವ ಮೊದಲು ಭಾಷಾಂತರದ ಬಗ್ಗೆ ಇರುವ ಅನೇಕ ಕೈಪಿಡಿಗಳನ್ನು ಓದಿ ತಿಳಿದುಕೊಳ್ಳುವುದು ಅಗತ್ಯವಿದೆ. ಇತರ ಕೈಪಿಡಿಗಳು ಉದಾಹರಣೆಗೆ ವ್ಯಾಕರಣ ಅವಶ್ಯಕತೆ ಇದ್ದಾಗ ಮಾತ್ರ “ಆ ಕ್ಷಣದಲ್ಲಿ” ನೋಡುವಂತಹ ಗ್ರಂಥಗಳು. ಭಾಷಾಂತರ ಕೈಪಿಡಿಯಲ್ಲಿನ ಕೆಲವು ಪ್ರಮುಖ ಅಂಶಗಳು ;


ವಿಶಿಷ್ಟ ಪದಗಳನ್ನು ತಿಳಿದುಕೊಳ್ಳುವುದು.

Translation Manual :: Introduction :: Terms to Know

ಪ್ರಮುಖವಾದ ಪದಗಳನ್ನು ತಿಳಿದುಕೊಳ್ಳುವ ಬಗ್ಗೆ.

  • ಟಿಪ್ಪಣಿ: ಕೆಳಗೆ ಕೊಟ್ಟಿರುವ ವಿಶಿಷ್ಟ ಪದಗಳನ್ನು ಲೇಖನ ಪುಟಗಳಲ್ಲಿ ತಿಳಿಸಿದೆ. ಭಾಷಾಂತರಗಾರರು ಭಾಷಾಂತರ ಕೈಪಿಡಿ ಯನ್ನು ಉಪಯೋಗಿಸಲು ಇಂತಹ ಪದಗಳನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ.

ವಿಶಿಷ್ಟ ಪದ -ಒಂದು ಪದ ಅಥವಾ ಪದಗುಚ್ಛ,ಒಂದು ವಸ್ತು ಅಥವಾ ಒಂದು ಕ್ರಿಯೆಯನ್ನು ಕುರಿತು ತಿಳಿಸುತ್ತದೆ. ಉದಾಹರಣೆಗೆ, ಇಂಗ್ಲೀಷ್ ಭಾಷೆಯಲ್ಲಿ ’ pouring ’ ’ ಸುರಿಸು ’ ’ ಹೊಯ್ಯಿ ’ ಎಂಬ ಆಂಗ್ಲ ಪದ ಅರ್ಥ ಒಬ್ಬನ ಬಾಯಿಯಲ್ಲಿ “ಪಾನೀಯ.” ಸುರಿಯುವುದು / ಹೊಯ್ಯುವುದು. ಒಬ್ಬ ವ್ಯಕ್ತಿಯ ಜೀವನದಲ್ಲಿ ಒಂದು ಪ್ರಮುಖ ಸ್ಥಿತ್ಯಂತರವನ್ನು ಸೂಚಿಸಲು ಅಂದರೆ ನಡೆಯುವ ಸಂಭ್ರಮ, ಆಚರಣೆ ಮುಂತಾದ ಪ್ರಮುಖ ವಿಷಯಗಳನ್ನು ಹೇಳುವಾಗ ಅಂಗೀಕಾರದ ವಿಧಿ ಎಂಬ ಪದವನ್ನು ಬಳಸುತ್ತಾರೆ. ಒಂದು ಪದ ಅಥವಾ ಒಂದು ವಿಶಿಷ್ಟ ಪದಗಳ ನಡುವಿನ ವ್ಯತ್ಯಾಸವೇನೆಂದರೆ ಒಂದು ಪದದಲ್ಲಿ ಒಂದೇಪದ, ಆದರೆ ವಿಶಿಷ್ಟ ಪದದಲ್ಲಿ ಕೆಲವೊಮ್ಮೆ ಅನೇಕ ಅಕ್ಷರಗಳು ಸೇರಿರುತ್ತವೆ.

ವಾಕ್ಯಭಾಗ -ಒಬ್ಬ ಲೇಖಕ ಅಥವಾ ಒಬ್ಬ ಮಾತುಗಾರ ಯಾವುದಾದರು ಒಂದು ಸಂಗತಿಯನ್ನು ತನ್ನ ಶ್ರೋತೃಗಳಿಗೆ ಭಾಷೆಯ ಮೂಲಕ ತಿಳಿಸುವುದು. ಲೇಖಕ ಅಥವಾ ಒಬ್ಬ ಮಾತುಗಾರ ತನ್ನ ಮನಸ್ಸಿನಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಇಟ್ಟುಕೊಂಡಿದ್ದು, ವಿಷಯವನ್ನು ಖಚಿತಪಡಿಸಿಕೊಂಡು ಅದನ್ನು ಅರ್ಥವಾಗುವಂತೆ ತಿಳಿಸಲು ಭಾಷೆಯನ್ನು ಉಪಯೋಗಿಸುತ್ತಾನೆ.

ಸಂದರ್ಭ - (ಅರ್ಥಾನ್ವಯಪದ) – ಒಂದು ಪ್ರಶ್ನೆಯಲ್ಲಿರುವ ಪದ ಮತ್ತು ನುಡಿಗಟ್ಟನ್ನು ಆವರಿಸಿರುವ ಪದಗಳು, ಪದಗುಚ್ಛಗಳು, ವಾಕ್ಯಗಳು ಮತ್ತು ವಾಕ್ಯಬಂಧ (ಪ್ಯಾರಾ) ವಾಕ್ಯಗಳು. ವಾಕ್ಯಭಾಗದ ಸುತ್ತ ಇರುವ ವಾಕ್ಯಗಳನ್ನು ಪರಿಶೀಲಿಸಿ ಅರ್ಥಾನ್ವಯ ಸನ್ನಿವೇಶ ಅಥವಾ ಸಂದರ್ಭವನ್ನು ಸೂಚಿಸುತ್ತದೆ. ಪ್ರತಿಯೊಂದು ಪದ ಮತ್ತು ಪದಗುಚ್ಛಗಳಲ್ಲಿ ಅರ್ಥ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ.

ನಮೂನೆ - ಬರಹದ ಪುಟಗಳಲ್ಲಿ ಅಥವಾ ಮಾತನಾಡುವ ಸಂದರ್ಭದಲ್ಲಿ ಭಾಷೆಯ ರಚನೆ ಹೇಗೆ ಮೂಡಿ ಬರುತ್ತದೆ ಎಂಬುದನ್ನು ಸೂಚಿಸುವಂತದ್ದು. “ನಮೂನೆ” ಭಾಷೆಯಲ್ಲಿ ವ್ಯವಸ್ಥಿತವಾದ ರೀತಿಯಲ್ಲಿ ರಚನೆಯಾಗಿರುವಂತದ್ದು ಇದರಲ್ಲಿ ಪದಗಳು, ಪದಕ್ರಮಗಳು, ವ್ಯಾಕರಣ, ನುಡಿಗಟ್ಟುಗಳು ಇನ್ನೂ ಅನೇಕ ವಾಕ್ಯಭಾಗದ ಲಕ್ಷಣಗಳನ್ನು ಒಳಗೊಂಡಿರುತ್ತದೆ.

ವ್ಯಾಕರಣ - ಒಂದು ಭಾಷೆಯಲ್ಲಿ ಪದಗಳನ್ನು ಒಟ್ಟುಗೂಡಿಸಿ ಅರ್ಥಪೂರ್ಣ ವಾಕ್ಯಗಳನ್ನಾಗಿ ಮಾಡುವುದು. ಇದರಲ್ಲಿ ವಾಕ್ಯದಲ್ಲಿರುವ ಭಾಗಗಳು ಎಲ್ಲೆಲ್ಲಿ ಬರಬೇಕು ಎಂಬುದನ್ನು ತಿಳಿಸುತ್ತದೆ. ಉದಾಹರಣೆಗೆ ಕ್ರಿಯಾಪದ ವಾಕ್ಯದ ಪ್ರಾರಂಭದಲ್ಲಿ ಬರಬೇಕೇ ? ಮಧ್ಯದಲ್ಲಿ ಬರಬೇಕೇ ? ಇಲ್ಲವೇ ಕೊನೆಯಲ್ಲಿ ಬರಬೇಕೇ ? ಎಂಬುದನ್ನು ತಿಳಿಸುವಂತದ್ದು

ನಾಮಪದ - ಇದೊಂದು ವ್ಯಕ್ತಿ, ಸ್ಥಳ, ಪ್ರಾಣಿ, ವಸ್ತು ಇವುಗಳನ್ನು ಕುರಿತು ಹೇಳುವ ಪದ. proper noun/ ಅಂಕಿತ ನಾಮ ಇದು ವ್ಯಕ್ತಿಯ, ಸ್ಥಳದ ಪ್ರಾಣಿಯ ಹೆಸರನ್ನು ತಿಳಿಸುವ ಪದ. ಅಮೂರ್ತ ನಾಮಪದ: ಈ ನಾಮಪದವು ಸೂಚಿಸುವ ಪದಗಳನ್ನು ನಾವು ಸ್ಪರ್ಶಿಸಲು, ನೋಡಲು ಆಗುವುದಿಲ್ಲ. ಆದರೆ ಇವು ಅನುಭವಕ್ಕೆ ಬರುವ ಪದಗಳು ಉದಾಹರಣೆ ’ ಶಾಂತಿ ', ’ ಒಗ್ಗಟ್ಟು ', ’ ಪ್ರೀತಿ ', ’ ಸತ್ಯ ’ ಇತ್ಯಾದಿ ಈ ಪದ ಒಂದು ಉದ್ದೇಶವನ್ನು ಅಥವಾ ಯಾವುದಾದರೊಂದು ಸ್ಥಿತಿಯನ್ನು ತಿಳಿಸುವಂತದ್ದು. ಕೆಲವು ಭಾಷೆಗಳಲ್ಲಿ ಈ ಅಮೂರ್ತ ನಾಮಪದ ನಾಮಪದಗಳನ್ನು ಬಳಸುವುದಿಲ್ಲ.

ಕ್ರಿಯಾಪದ - ಇದು ಕ್ರಿಯೆಯನ್ನು ಸೂಚಿಸುವ ಪದ ಉದಾಹರಣೆಗೆ ನಡೆಯುವುದು, ಬರುವುದು, ಹಾಡುವುದು, ಓದುವುದು.

ರೂಪಾಂತರ ಪದ - ಒಂದು ಪದದ ಬಗ್ಗೆ ರೂಪಾಂತರಗೊಳಿಸಿ ಹೇಳುವ ಪದ. ನಾಮಪದದ ಗುಣ ಮತ್ತು ಕ್ರಿಯಾವಾಚಕಗಳು ರೂಪಾಂತರಗುಣಗಳನ್ನು ತಿಳಿಸುವ ಪದಗಳು.

ನಾಮ ಪದ ಗುಣವಾಚಕ - ಈ ಪದವು ನಾಮಪದಗಳ ಬಗ್ಗೆ ಅಥವಾ ನಾಮಪದಗಳ ವಿವರಣೆ ನೀಡುತ್ತದೆ. ಉದಾಹರಣೆಗೆ, " ಎತ್ತರ " ಎಂಬ ನಾಮಪದದ ಗುಣವಾಚಕ ಉದಾಹರಣೆಗೆ, ನಾನು ಎತ್ತರವಾದ ಒಬ್ಬ ಮನುಷ್ಯನನ್ನು ನೋಡುತ್ತಿದ್ದೇನೆ.

ಕ್ರಿಯಾ ಪದದ ಗುಣವಾಚಕ / ಕ್ರಿಯಾವಾಚಕ - ಇದು ಕ್ರಿಯಾ ಪದದ ಬಗ್ಗೆ ಅಂದರೆ ಅದರ ಗುಣವನ್ನು, ಅದು ಹೇಗೆ ನಡೆಯುತ್ತದೆ ಎಂಬುದನ್ನು ಹೇಳುತ್ತದೆ. " ಜೋರಾಗಿ " " ಮಾತನಾಡುವ " ಕ್ರಿಯೆಯ ಬಗ್ಗೆ ಹೇಳುವಂತದ್ದು ಉದಾಹರಣೆಗೆ ಜನರ ಗುಂಪನ್ನು ಉದ್ದೇಶಿಸಿ ಆ ಮನುಷ್ಯನು ಜೋರಾಗಿಮಾತನಾಡಿದನು.

ನುಡಿಗಟ್ಟು - ಒಂದು ಭಾವನೆಯನ್ನು ವ್ಯಕ್ತಪಡಿಸಲು ಅನೇಕ ಪದಗಳನ್ನು ಮತ್ತು ವಿಭಿನ್ನವಾಗಿ ಅರ್ಥನೀಡುತ್ತದೆ. ಇದು ಒಂದು ಇಡೀ ಪದವಾಗಿ ವಿವಿಧ ಅರ್ಥಗಳಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಪ್ರತ್ಯೇಕವಾಗಿ ಬಳಸಲು ತೊಡಗಿದಾಗ ವಿಭಿನ್ನವಾಗಿ ಅರ್ಥವಾಗುತ್ತದೆ. ಈ ನುಡಿಗಟ್ಟುಗಳನ್ನುನೇರವಾಗಿ, ಅಕ್ಷರಷಃ ಭಾಷಾಂತರಮಾಡಲು ಸಾಧ್ಯವಿಲ್ಲ ಆದರೆ ಬೇರೆ ಪದಗಳ ಅರ್ಥದೊಂದಿಗೆ ಪ್ರತ್ಯೇಕವಾಗಿ ಬಲಸಲು ಬರುವುದಿಲ್ಲ. ಉದಾಹರಣೆಗೆ, "he kicked the bucket " / " ಅವನು ಬಕೆಟನ್ನು ಕಾಲಿನಿಂದ ಒದೆದನು " ಎಂಬ ನುಡಿಗಟ್ಟು ಇಂಗ್ಲೀಷಿನಲ್ಲಿ " ಅವನು ಮರಣ ಹೊಂದಿದನು " ಎಂದು ಅರ್ಥ

ಅರ್ಥ - ಕೆಳಗೆ ಅಡ್ಡಗೆರೆಯಿಂದ ಗುರುತಿಸಿರುವ ವಾಕ್ಯಭಾಗದ ಉದ್ದೇಶ ಅಥವಾ ಪರಿಕಲ್ಪನೆ ಓದುಗರು ಮತ್ತು ಶ್ರೋತೃಗಳಿಗೆ ಅರ್ಥವಾಗುವಂತೆ ತಿಳಿಸುವಂತದ್ದು. ಒಬ್ಬ ಭಾಷಣಗಾರನು ಅಥವಾ ಬರಹಗಾರನು ಭಾಷೆಯ ವಿವಿಧ ನಮೂನೆಯನ್ನು ಬಳಸಿಕೊಂಡು ಒಂದೇ ಅರ್ಥ ಕೊಡುವ ಪದ ಬಳಸುವುದು, ಮತ್ತು ಅದೇ ಭಾಷೆಯ ನಮೂನೆ ವಿವಿಧ ಅರ್ಥಗಳ ಮೂಲಕ ಜನರು ಕೇಳುವಾಗ ಮತ್ತು ಓದುವಾಗ ವಿಭಿನ್ನವಾಗಿ ಅರ್ಥಮಾಡಿಕೊಳ್ಳಬಹುದು. ಇದರಿಂದ ನಮೂನೆ ಮತ್ತು ಅರ್ಥಗಳು ಒಂದೇ ರೀತಿ ಇರುವುದಿಲ್ಲ ಎಂದು ತಿಳಿದುಬರುತ್ತದೆ.

ಭಾಷಾಂತರ - ಮಾಡುತ್ತಿರುವ ಭಾಷೆಯಲ್ಲಿ ನಮೂನೆ / ಪ್ರಕ್ರಿಯೆಗಳನ್ನು ವ್ಯಕ್ತಪಡಿಸು ವಾಗ ಮೂಲಭಾಷೆಯಲ್ಲಿ ನಮೂನೆ ಪ್ರಕ್ರಿಯೆಗಳನ್ನು ಲೇಖಕ / ಭಾಷಣಗಾರ ವ್ಯಕ್ತಪಡಿಸಿರುವಂತೆ ಅರ್ಥಕೆಡದಂತೆ ತಿಳಿಸಬೇಕು.

ಮೂಲ ಭಾಷೆ / ಆಕರ ಗ್ರಂಥದ ಭಾಷೆ - ಭಾಷೆಯ ನಮೂನೆ ಯನ್ನು ಮೂಲಭಾಷೆಯಿಂದ ಭಾಷಾಂತರ ಮಾಡುವುದು.

ಮೂಲ ಗ್ರಂಥದ ವಾಕ್ಯ ಭಾಗ - ವಾಕ್ಯ ಭಾಗದ ಮಾದರಿಯಿಂದ ಭಾಷಾಂತರ ಮಾಡುವುದು.

ಭಾಷಾಂತರವಾಗುವ ಭಾಷೆ - ಯಾವ ಭಾಷೆಯಲ್ಲಿ ಭಾಷಾಂತರ ಮಾಡಲಾಗುತ್ತಿದೆ ಎಂಬುದು.

ಭಾಷಾಂತರವಾಗುತ್ತಿರುವ ಭಾಷೆಯ ವಾಕ್ಯಭಾಗ -ಮೂಲಭಾಷೆಯ ವಾಕ್ಯಭಾಗದಿಂದ ಒಬ್ಬ ಭಾಷಾಂತರಗಾರನು ಅಥವಾ ಭಾಷಾಂತರಗಾರಳು ಭಾಷಾಂತರ ಮಾಡುವಾಗ ಮೂಲ ಅರ್ಥ ಕೆಡದಂತೆ ಮಾಡಬೇಕು.

ಮೂಲ ಭಾಷೆ - ಸತ್ಯವೇದವನ್ನು ಪ್ರಾರಂಭದಲ್ಲಿ / ಮೊದಲು ಬರೆದ ಭಾಷೆ. ಹೊಸ ಒಡಂಬಡಿಕೆಯ ಮೂಲಭಾಷೆ ಗ್ರೀಕ್. ಹಳೆ ಒಡಂಬಡಿಕೆಯ ಬಹುಪಾಲು ಹಿಬ್ರೂ ಭಾಷೆಯಲ್ಲಿದೆ. ಹಾಗಾಗಿ ದಾನಿಯೇಲ ಮತ್ತು ಎಜ್ರಾ ಪುಸ್ತಕಗಳ ಕೆಲವು ಭಾಗಗಳ ಮೂಲಭಾಷೆ ಅರಾಮಿಕ್. ಮೂಲಭಾಷೆಯಲ್ಲಿರುವ ವಾಕ್ಯಭಾಗಗಳು ಯಾವಾಗಲೂ ನಿಖರವಾಗಿರುತ್ತದೆ., ಇದರಿಂದ ಭಾಷಾಂತರಿಸುವ ವಾಕ್ಯಭಾಗವು ನಿರ್ದಿಷ್ಟವಾಗಿರುತ್ತದೆ.

ವಿಸ್ತೃತ ಸಂಪರ್ಕವಿರುವ ಭಾಷೆ - ಒಂದು ಭಾಷೆಯನ್ನು ವಿಶಾಲವಾದ ಮತ್ತು ಹೆಚ್ಚು ಪ್ರದೇಶದಲ್ಲಿ ಮತ್ತು ಹೆಚ್ಚು ಜನರು ಮಾತನಾಡಲು ಮತ್ತು ಸಂವಹನಕ್ಕಾಗಿ ಬಳಸುವುದು. ಇಂತಹ ಭಾಷೆ ಅನೇಕರಿಗೆ ಮಾತೃ ಭಾಷೆ / ಮೊದಲ ಭಾಷೆ ಆಗಿರುವುದಿಲ್ಲ ಆದುದರಿಂದ ಆ ಪ್ರದೇಶದ ಜನರೊಂದಿಗೆ ಮಾತನಾಡಲು ತಮ್ಮ ಮಾತೃಭಾಷೆಯನ್ನು ಹೊರತುಪಡಿಸಿ ಆಯಾ ಪ್ರಾದೇಶಿಕ ಭಾಷೆಯನ್ನೇ ಉಪಯೋಗಿಸುತ್ತಾರೆ. ಕೆಲವರು ಇಂತಹ ಭಾಷೆಯನ್ನು ವ್ಯವಹಾರಿಕ ಭಾಷೆ ಎಂದು ಕರೆಯುತ್ತಾರೆ. ಸತ್ಯವೇದವನ್ನು ಭಾಷಾಂತರ ಮಾಡುವಾಗ ವ್ಯಾಪಕವಾಗಿ ಬಳಕೆಯಲ್ಲಿರುವ ಸಂಪರ್ಕಭಾಷೆಯನ್ನು ಮೂಲ ಭಾಷೆಯನ್ನಾಗಿ ಬಳಸಿಕೊಳ್ಳುತ್ತಾರೆ.

ಅಕ್ಷರಷಃ ಭಾಷಾಂತರ - ಆಕರ ಗ್ರಂಥದ ವಾಕ್ಯಭಾಗಗಳನ್ನು ಭಾಷಾಂತರ ಮಾಡುವ ಭಾಷೆ ಆಕರ ಗ್ರಂಥದಲ್ಲಿರುವ ಮಾದರಿಯನ್ನು / ನಮೂನೆಯನ್ನು ಯಥಾವತ್ತಾಗಿ ಭಾಷಾಂತರ ಮಾಡಬೇಕು.

ಅರ್ಥ ಆಧಾರಿತ ಭಾಷಾಂತರ (ಡೈನಮಿಕ್ ಭಾಷಾಂತರ) ಭಾಷಾಂತರ ಮಾಡುತ್ತಿರುವ ಭಾಷೆಗೆ ಆಕರ ಗ್ರಂಥದ ವಾಕ್ಯಭಾಗಗಳನ್ನು ಯಥಾವತ್ತಾಗಿ ಭಾಷಾಂತರಿಸುವಾಗ ನಮೂನೆ ಅಥವಾ ಮಾದರಿ ಸ್ವಲ್ಪ ಬದಲಾದರೂ ಅರ್ಥ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು.

Passage / ವಾಕ್ಯಭಾಗ -ಸತ್ಯವೇದದ ವಾಕ್ಯಭಾಗದಿಂದ ಆಯ್ದುಕೊಂಡ ಒಂದು ವಾಕ್ಯಭಾಗ. ಇದು ಒಂದು ಚಿಕ್ಕ ವಾಕ್ಯವಾಗಿರಬಹುದು. ಅನೇಕ ವಾಕ್ಯಗಳಿಂದ ಕೂಡಿದ ಒಂದು ಅಧ್ಯಾಯವಾಗಿರ ಬಹುದು.ಅಥವಾ ಒಂದು ಕತೆಯಾಗಿರಬಹುದು

Gateway Language / ಗೇಟ್ ವೇ ಭಾಷೆ -(GL) ಎಂಬುದು ವಿಶಾಲವಾಗಿ ಬಳಸುತ್ತಿರುವ ಸಂವಹನ, ಸಂಪರ್ಕ ಭಾಷೆ. ಇದನ್ನು ನಾವು ಎಲ್ಲಾ ಭಾಷಾಂತರ ನಿಯಮಗಳನ್ನು ಅಳವಡಿಸಿ ಮಾಡುವ ಭಾಷಾಂತರಗಳಲ್ಲಿ ಗುರುತಿಸಿ ಉಪಯೋಗಿಸುತ್ತೇವೆ. ಈ ‘ಗೇಟ್ ವೇ ಭಾಷೆ‘ ಎಲ್ಲಾ ಭಾಷೆಗಳಲ್ಲಿ ಚಿಕ್ಕ ಭಾಷೆಯಾಗಿದ್ದು ಪ್ರಪಂಚದ ಎಲ್ಲಾ ಭಾಷೆಗಳಲ್ಲೂ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಂಡು, ಬಳಸಲು ಅನುಕೂಲವಾಗಿ ಇರುವಂತದ್ದು.

ಇತರ ಭಾಷೆಗಳು - “ಇತರ ಭಾಷೆಗಳು“ ಎಂಬುದು ಪ್ರಪಂಚದಲ್ಲಿ ಬಳಕೆಯಾಗುತ್ತಿರುವ ಭಾಷೆ ಆದರೆ “ಗೇಟ್ ವೇ ಭಾಷೆಗಳಲ್ಲ.“ ನಾವು ಸತ್ಯವೇದದ ಭಾಷಾಂತರ ತಂತ್ರಗಳನ್ನು “ ಗೇಟ್ ವೇ ಭಾಷೆಯಲ್ಲೇ ಭಾಷಾಂತರಿಸುತ್ತೇವೆ. ಇದರಿಂದ ಜನರು ಈ ತಂತ್ರಗಳನ್ನು ಬಳಸಿ ಸತ್ಯವೇದವನ್ನು ಇತರ ಭಾಷೆಗಳಿಗೆ ಭಾಷಾಂತರಿಸುತ್ತಾರೆ.

End-user Bible - ಎಂಡ್ ಯುಸರ್ ಬೈಬಲ್ (ಬಳಕೆದಾರದ ಸತ್ಯವೇದ) ಜನರು ಭಾಷಾಂತರಿಸಿದ ಸತ್ಯವೇದ, ಇದು ತುಂಬಾ ಸರಳವಾಗಿದ್ದು ಭಾಷಾಂತರವಾದ ಭಾಷೆ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಾದ್ದು. ಇಂತಹ ಸತ್ಯವೇದವನ್ನೇ ಎಲ್ಲ ಸಭೆಗಳಲ್ಲಿ / ಚರ್ಚ್ ಗಳಲ್ಲಿ ಮತ್ತು ಮನೆಗಳಲ್ಲಿ ಬಳಸುತ್ತಾರೆ. ULB ಮತ್ತುUDB ಸತ್ಯವೇದಗಳನ್ನು ಭಾಷಾಂತರ ಸಾಧನಗಳನ್ನಾಗಿ ವಿಭಿನ್ನತೆಗಾಗಿ ಬಳಸುತ್ತಾರೆ. ಇವು ಯಾವುದೇ ಭಾಷೆಯಲ್ಲಿ ಸಹಜವಾಗಿ ಮತ್ತು UDB ನುಡಿಗಟ್ಟುಗಳನ್ನು, ಅಲಂಕಾರಗಳನ್ನು ಇತರ ಭಾಷಾಂತರಗಳಲ್ಲಿ ಸಹಜವಾಗಿ ಬಳಸುವಂತೆ ಇದರಲ್ಲಿ ಬಳಸುವುದನ್ನು ತಡೆಯುತ್ತದೆ. ಇಂತಹ ಭಾಷಾಂತರ ತಂತ್ರ / ಸಾಧನಗಳನ್ನು ಭಾಷಾಂತರಗಾರನು / ಳು ತನ್ನ ಭಾಷಾಂತರದಲ್ಲಿ ಬಳಸಿ end-user ಎಂಡ್ – ಯೂಸರ್ ಸತ್ಯವೇದವನ್ನು ಸೃಷ್ಟಿಸಬಹುದು.

ಭಾಗವಹಿಸುವವ- ಒಂದು ವಾಕ್ಯದಲ್ಲಿ ಪಾಲುತೆಗೆದುಕೊಳ್ಳುವ ಅಥವಾ ಪಾತ್ರವಹಿಸುವವ. ಇದು ಒಬ್ಬ ಮಾಡುವ ಕೆಲಸವಿರಬಹುದು ಅಥವಾ ನಡೆಯುತ್ತಿರುವ ಕ್ರಿಯೆಯ ಪರಿಣಾಮವನ್ನು ಹೊಂದುವವನಾಗಿರಬೇಕು ಅಥವಾ ತಾನು ಆ ಕಾರ್ಯದಲ್ಲಿ ಪಾತ್ರವಹಿಸುತ್ತಿರಬಹುದು. ಈ “ಭಾಗವಹಿಸುವ“ ಎಂಬ ಪದ ಒಂದು ವಸ್ತುವಿನ ಬಗ್ಗೆಯೂ ಇರಬಹುದು ಇದು ವಾಕ್ಯದಲ್ಲಿ ನಡೆಯುವ ಕ್ರಿಯೆಯನ್ನು ನಿರ್ವಹಿಸುವ, ವೀಕ್ಷಿಸುವ ಪಾತ್ರನಿರ್ವಹಿಸಬಹುದು.

ಉದಾಹರಣೆಗೆ ಕೆಳಗಿನ ವಾಕ್ಯದಲ್ಲಿ ಅಡ್ಡಗೆರೆ ಹಾಕಿ ಗುರುತಿಸಿರುವ ವ್ಯಕ್ತಿಗಳನ್ನು / ಭಾಗವಹಿಸುವವರನ್ನು ಗಮನಿಸಿ ಜಾನ್and ಮೇರಿಒಂದುಪತ್ರವನ್ನು ಆಂಡ್ರ್ಯೂಗೆ ಕಳುಹಿಸಿದರು. ಕೆಲವೊಮ್ಮೆ ಭಾಗವಹಿಸುವವರ ಬಗ್ಗೆ ಹೇಳದಿದ್ದರೂ ಅವು ವಾಕ್ಯದಲ್ಲಿನ ಕ್ರಿಯೆಯನ್ನು ನಿರ್ವಹಿಸುವ ಭಾಗವಹಿಸುವವರೇ ಇರುತ್ತಾರೆ. ಭಾಗವಹಿಸುವವರು / ಳು ಎಂದು ತಿಳಿದುಬಿಟ್ಟರೆ ಉದಾಹರಣೆಗೆ ಕೆಳಗಿನ ವಾಕ್ಯದಲ್ಲಿ ಇಬ್ಬರು ವ್ಯಕ್ತಿಗಳ ಬಗ್ಗೆ ಮಾತ್ರ ತಿಳಿಸಿದೆ. ಆಂಡ್ರ್ಯೂಸ್ವೀಕರಿಸಿದರು ಒಂದುಪತ್ರವನ್ನು . ಜಾನ್ ಮತ್ತು ಮೇರಿ ತಿಳಿದಂತವರು ಎಂಬುದ ಸೂಚನೆ. ಕೆಲವು ಭಾಷೆಗಳಲ್ಲಿ ಹೀಗೆ ತಿಳಿದಂತವರು. ಇದ್ದರೆ ಅವರನ್ನು ನೇರವಾಗಿ ಪರಿಚಯಿಸಲಾಗುತ್ತದೆ.


ಭಾಷಂತರ ಎಂದರೇನು ?

Translation Manual :: Introduction :: What is Translation

###ವ್ಯಾಖ್ಯೆ.

ವಿವಿದ ಭಾಷೆಗಳ ನಡುವೆ ನಡೆಯುವ ಪ್ರಕ್ರಿಯೆಯೇ ಭಾಷಾಂತರ. ಈ ಪ್ರಕ್ರಿಯೆಯನ್ನು ಮಾಡಲು ಒಬ್ಬ ವ್ಯಕ್ತಿಯ (ಭಾಷಾಂತರಗಾರನ) ಅವಶ್ಯಕತೆ ಇದೆ. ಇವರು ತಮಗೆ ಕೊಟ್ಟಿರುವ ವಾಕ್ಯಭಾಗವನ್ನು ಮೂಲ ಲೇಖಕರ ಉದ್ಧೇಶವನ್ನು ಅರ್ಥಮಾಡಿಕೊಂಡು, ಮೂಲಭಾಷೆಯಲ್ಲಿರುವ ವಿಷಯವನ್ನು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿನ ಓದುಗರಿಗೆ ಸ್ಪಷ್ಟವಾಗಿ, ಪರಿಣಾಮಕಾರಿಯಾಗಿ ಅರ್ಥವಾಗುವಂತೆ ಭಾಷಾಂತರ ಮಾಡಬೇಕು ಎಲ್ಲಾ ಸಮಯದಲ್ಲೂ ಇದೇ ರೀತಿಯ ಭಾಷಾಂತರ ಮಾಡಬೇಕು. ಕೆಲವೊಮ್ಮೆಭಾಷಾಂತರದ ಉದ್ದೇಶವು ಬೇರೆಯಾಗಿದ್ದು ಮೂಲಭಾಷೆಯ ಸ್ವರೂಪವನ್ನೇ ಪುನಃ ಬರೆಯಬೇಕಾದ ಉದ್ದೇಶವನ್ನು ಹೊಂದಿರುತ್ತದೆ. ಅದನ್ನು ನಾವು ನೋಡಿಕೊಳ್ಳೋಣ ಮೂಲಭೂತವಾಗಿ ಎರಡು ರೀತಿಯ ಭಾಷಾಂತರವಿದೆ. 1. ಅಕ್ಷರಷಃ 2. ಕ್ರಿಯಾತ್ಮಕ – (ಅರ್ಥಕ್ಕನುಸಾರವಾಗಿ)

ಅಕ್ಷರಷಃ ಭಾಷಾಂತರದಲ್ಲಿ ಮೂಲ ಭಾಷೆಯಲ್ಲಿ ಪದಗಳಿಗೆ ಸಮಾನವಾದ ಅರ್ಥಕೊಡುವ ಪದಗಳನ್ನು ಭಾಷಾಂತರವಾಗುತ್ತಿರುವ ಭಾಷೆಯಲ್ಲಿನ ಹುಡುಕಿ ಅರ್ಥಕೊಡುವ ಪದಗಳನ್ನು ಭಾಷಾಂತರ ಮಾಡುವುದು. ಇದರೊಂದಿಗೆ ಮೂಲ ಭಾಷೆಯ ನುಡಿಗಟ್ಟುಗಳನ್ನು ಸಹ ಸಮಾನ ಅರ್ಥಕೊಡುವ ನುಡಿಗಟ್ಟುಗಳನ್ನು ಭಾಷಾಂತರ ಮಾಡುವ ಭಾಷೆಯಲ್ಲೂ ಬಳಸಬೇಕು. ಇಂತಹ ಭಾಷಾಂತರ ಮೂಲಭಾಷೆಯ ರಚನೆಯನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆಯೇ ಹೊರತು ಮೂಲಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಓದುಗರಿಗೆ ಕಷ್ಟವಾಗಬಹುದು.

  • ಕ್ರಿಯಾತ್ಮಕ (dynamic) ಭಾಷಾಂತರದಲ್ಲಿ ಮೂಲಭಾಷೆಯ ಅರ್ಥದ ಮೇಲೆ ಆಧರಿಸಿರುತ್ತದೆ ಮತ್ತು ಸಮಾನ ಅದೇ ಅರ್ಥಕೊಡುವ ಇತರೆ ಪದಗಳನ್ನು ಉಪಯೋಗಿಸುವುದರ ಮೂಲಕ ವಾಕ್ಯದ ರಚನೆಗಳು ಓದುಗರಿಗೆ ಅರ್ಥವಾಗುವಂತೆ ಮಾಡುವಂತದ್ದು. ಕೆಲವೊಮ್ಮೆ ಇಂತಹ ಭಾಷಾಂತರ ಆಗುತ್ತಿರುವ ಭಾಷೆಯ ಓದುಗರಿಗೆ ಸುಲಭವಾಗಿ ಅರ್ಥವಾಗಲು ಸುಲಭ. ಈ ಭಾಷಾಂತರ ಕೈಪಿಡಿಯಲ್ಲಿ ಇತರ ಭಾಷೆಗಳ ಭಾಷಾಂತರದಲ್ಲಿ ಇಂತಹ ಭಾಷಾಂತರ ಮಾದರಿ ಬಳಸಬಹುದು ಎಂದು ತಿಳಿಸಿದೆ.

ULB ಅಕ್ಷರಷಃ ಭಾಷಾಂತರವನ್ನು ವಿನ್ಯಾಸಗೊಳಿಸಿದೆ, ಇದರಿಂದ ಇತರ ಭಾಷೆಯ ಭಾಷಾಂತರಗಾರರಿಗೆ ಮೂಲಭಾಷೆಯ ಸತ್ಯವೇದದ ರಚನೆಯನ್ನು ನೋಡಲು ಸಾಧ್ಯವಾಗಬಹುದು. UDB ಕ್ರಿಯಾತ್ಮಕ ಭಾಷಾಂತರ ಮಾದರಿಯಲ್ಲಿ ವಿನ್ಯಾಸಗೊಂಡಿದೆ. ಇದರಿಂದ ಇತರ ಭಾಷೆಯ ಭಾಷಾಂತರಗಾರರು ಸತ್ಯವೇದದಲ್ಲಿನ ರಚನೆ ಮತ್ತು ಪದಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಮೂಲಪ್ರತಿಗಳನ್ನು ಭಾಷಾಂತರ ಮಾಡುವಾಗ ULBಯನ್ನು ಅಕ್ಷರಷಃ ಮತ್ತು UDB ಯನ್ನು ಕ್ರಿಯಾತ್ಮಕ (dynamic) ರೀತಿಯಲ್ಲಿ ಮಾಡಿ. ಈ ಎಲ್ಲಾ ಮಾಹಿತಿಗಾಗಿ ಗೇಟ್ ವೇ ಕೈಪಿಡಿಯನ್ನು ನೋಡಿ ತಿಳಿದುಕೊಳ್ಳಿ. Gateway Language Manual.


ಭಾಷಾಂತರದ ಬಗ್ಗೆ ಹೆಚ್ಚಿನ ಮಾಹಿತಿ.

Translation Manual :: Introduction :: More about Translation

ಭಾಷಾಂತರ ಕಾರ್ಯಕ್ಕೆ ಒಬ್ಬ ವ್ಯಕ್ತಿಯ ಅಗತ್ಯವಿದ್ದು ಅವನು ವಿಭಿನ್ನ ಭಾಷೆಗಳು ಮತ್ತು ಮೂಲಭಾಷೆಯ ನಡುವೆ ನಡೆಯುವ ಒಂದು ಪ್ರಕ್ರಿಯೆ ಈ ಪ್ರಕ್ರಿಯೆಯನ್ನು ಮುಂದುವರೆಸಲು ಸಹಾಯಮಾದುತ್ತಾರೆ. ಮೂಲಭಾಷೆಯ ಲೇಖಕರ ಉದ್ದೇಶ ಮತ್ತು ಭಾಷಾಂತರ ಆಗುತ್ತಿರುವ ಭಾಷೆಯ ಓದುಗರ ನಿರೀಕ್ಷೆಯನ್ನು, ಅರ್ಥವಾಗುವಂತೆ ಭಾಷಾಂತರವನ್ನು ಮಾಡಬೇಕಾಗಿದೆ.

####ಜನರು ಏಕೆ ಪುಸ್ತಕಗಳನ್ನು ವಾಕ್ಯಭಾಗಗಳನ್ನು ಭಾಷಾಂತರಿಸುತ್ತಾರೆ?

ಸಾಮಾನ್ಯವಾಗಿ ಭಾಷಾಂತರಗಾರರಿಗೆ ಭಾಷಾಂತರ ಕಾರ್ಯ ಮಾಡಲು ಅನೇಕ ಕಾರಣಗಳು ಇರುತ್ತವೆ. ಅವರು ಭಾಷಾಂತರ ಮಾಡಲು ಇರುವ ಕಾರಣಗಳು ಅವರು ಭಾಷಾಂತರ ಮಾಡುವ ವಿಷಯ ಅಥವಾ ದಾಖಲೆಗಳನ್ನು ಅವಲಂಭಿಸಿರುತ್ತದೆ. ಇನ್ನೊಂದು ಕಾರಣವೆಂದರೆ ಭಾಷಾಂತರ ಮಾಡಲು ತಿಳಿಸಿದ ವ್ಯಕ್ತಿಯ ಬೇಡಿಕೆಗೆ ಅನುಗುಣವಾಗಿ ಇರುತ್ತದೆ. ಸತ್ಯವೇದವನ್ನು ಭಾಷಾಂತರ ಮಾಡುವಾಗ ಭಾಷಾಂತರ ಆಗುತ್ತಿರುವ ಭಾಷೆಯ ಜನರಿಗೆ ಸುಲಭವಾಗಿ ಸತ್ಯವೇದದ ಅಂಶಗಳು ಅರ್ಥವಾಗುವಂತಿರಬೇಕು. ಮೂಲಭಾಷೆಯ ಓದುಗರಿಗೆ ಯಾವ ರೀತಿಯಲ್ಲಿ ಅರ್ಥವಾಗುತ್ತದೋ ಅದೇ ರೀತಿ ಅರ್ಥವಾಗುವಂತೆ ಭಾಷಾಂತರ ಮಾಡಬೇಕು. ಏಕೆಂದರೆ ಸತ್ಯವೇದದಲ್ಲಿರುವ ದೇವರ ಉದ್ದೇಶಗಳು ನಮ್ಮನ್ನು ನಿತ್ಯಜೀವದ ಕಡೆಗೆ ಯೇಸುಕ್ರಿಸ್ತನ ಮೂಲಕ ನಡೆಸುತ್ತದೆ. ಭಾಷಾಂತರ ಆಗುತ್ತಿರುವ ಭಾಷೆಯ ಜನರಿಗೆ ಈ ಎಲ್ಲಾ ಉದ್ದೇಶಗಳು ಯಾವ ಅಡಚಣೆಯೂ ಇಲ್ಲದೆ ಸಂಪೂರ್ಣವಾಗಿ ಅರ್ಥವಾಗುವಂತಿರಬೇಕು ಎಂಬುದು ಭಾಷಾಂತರ ಮಾಡುವವರ ಉದ್ದೇಶ.

ಸತ್ಯವೇದದ ಭಾಷಾಂತರಗಾರರಾಗಿ ನಾವು ಸತ್ಯವೇದದ ಉದ್ದೇಶವನ್ನು ಹೇಗೆ ನಿರೀಕ್ಷಿಸಬಹುದು?

ಮೂಲ ಭಾಷೆಯ ವಾಕ್ಯಭಾಗದಲ್ಲಿರುವ ಉದ್ದೇಶಗಳನ್ನು ಅನೇಕ ರೀತಿಯಲ್ಲಿ ಭಾಷಾಂತರ ಮಾಡ ಬಹುದು. ಅವುಗಳನ್ನು ನಾವು ಪಟ್ಟಿ ಮಾಡಬಹುದು. ಇವುಗಳನ್ನು ಸಂಕ್ಷಿಪ್ತಗೊಳಿಸಿ ಕಡಿಮೆ ವಾಕ್ಯಗಳಲ್ಲಿ ಅರ್ಥಕೆಡದಂತೆ ಇಡಬಹುದು. ಚಿಕ್ಕ ಮಕ್ಕಳಿಗೆ ಬರೆಯುವ ಸತ್ಯವೇದದ ಕತೆಗಳಂತೆ, ಸುಲಭವಾಗಿ ಅರ್ಥವಾಗಲು ಸತ್ಯವೇದದ ಅಧ್ಯಯನಕ್ಕೆ ಸಹಾಯಕವಾಗಿರುವ ಸರಳ ಸತ್ಯವೇದವನ್ನು ಸರಳವಾಗಿ ಭಾಷಾಂತರ ಮಾಡಬಹುದು ಅಥವಾ ಕೆಲವು ವಿಷಯಗಳನ್ನುನಕ್ಷೆಯಮೂಲಕ ಅಥವಾ ಚಿತ್ರಗಳ ಮೂಲಕವೂ ಬರೆಯಬಹುದು.

ಸತ್ಯವೇದದ ಭಾಷಾಂತರಗಾರರು ಸಾಮಾನ್ಯವಾಗಿ ಸತ್ಯವೇದದ ಉದ್ದೇಶಗಳನ್ನು ಎಷ್ಟು ಸಾಧ್ಯವೋ ಅಷ್ಟು ಉತ್ತಮವಾಗಿ ಭಾಷಾಂತರ ಮಾಡಬೇಕು. ಇದರ ಇನ್ನೊಂದು ಅರ್ಥವೆಂದರೆ ಭಾಷಾಂತರಗಾರರು ಮೂಲಭಾಷೆಯಲ್ಲಿನ ಮೂಲ ದಾಖಲೆಗಳು ಮತ್ತು ವಾಕ್ಯಭಾಗಗಳನ್ನು ಯಾವ ಬದಲಾವಣೆಯೂ ಇಲ್ಲದೆ ಮರುಸೃಷ್ಟಿ ಮಾಡಬೇಕು ಪ್ರವಾದನೆಗಾಗಿ ಪ್ರವಾದನೆ, ಪತ್ರಕ್ಕಾಗಿ ಪತ್ರ, ಇತಿಹಾಸದ ಪುಸ್ತಕಕ್ಕಾಗಿ ಇತಿಹಾಸದ ಪುಸ್ತಕ ಹೀಗೆ ಎಲ್ಲವೂ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಮಾಡಬೇಕು) ಮೂಲಪಠ್ಯ/ವಾಕ್ಯಭಾಗಗಳಲ್ಲಿ ಇರುವ ಎಲ್ಲ ರೀತಿಯ ಉದ್ವೇಗ, ಭಾವನೆಗಳನ್ನು ತಮ್ಮ ಭಾಷಾಂತರದಲ್ಲಿ ಯಥಾವತ್ತಾದ ಮರುಸೃಷ್ಟಿ ಮಾಡಿದಂತೆ ಮಾಡಬೇಕು.

####ವಾಕ್ಯಭಾಗಗಳಲ್ಲಿ ಉದ್ವೇಗ/ ಒತ್ತಡಗಳು ಎಂದರೆ ಅರ್ಥವೇನು ?

ಕತೆಯಲ್ಲಿರುವ ಪಾತ್ರಗಳಿಗೆ ಮುಂದೆ ಏನಾಗುತ್ತದೋ ಎಂಬ ಉದ್ವೇಗ ಹಾಗೂ ಕುತೂಹಲವನ್ನು ಓದುಗರು ಆಶ್ಚರ್ಯದಿಂದ, ನಿರೀಕ್ಷಣೆಯಿಂದ ಕಾಯುವಂತೆ ಮಾಡುವಂತಿರಬೇಕು. ಪತ್ರಿಕಾ ಭಾಗದಲ್ಲಿ ಬರುವ ಎಚ್ಚರಿಕೆ, ಪ್ರೋತ್ಸಾಹ, ಪ್ರೇರಣೆ, ವಾದವಿವಾದಗಳು, ಎಲ್ಲವೂ ಅದೇ ಪರಿಣಾಮದಲ್ಲಿ ಬರುವಂತೆ ಭಾಷಾಂತರಿಸಬೇಕು. ದಾವೀದನ ಕೀರ್ತನೆಗಳನ್ನು ಓದುವಾಗ ಓದುಗರು ಆ ಒಂದು ಅನುಭವಿಸುವಂತೆ ಮಾಡಲು ಕಾರಂ ಭಾಷಾಂತರ ಮಾಡುವವರಿಗೆ ಕೀರ್ತನೆಗಳು ವಿಶೇಷ ಅನುಭವಕ್ಕೆ ನಡೆಸಿರುತ್ತದೆ. ಹಳೇ ಒಡಂಬಡಿಕೆಯಲ್ಲಿನ ಪ್ರವಾದನಾ ಪುಸ್ತಕದಲ್ಲಿ ಪ್ರವಾದಿಯು ಜನರ ಪಾಪಗಳಿಗಾಗಿ ಖಂಡಿಸುವುದು, ದೇವರ ಕಡೆಗೆ ತಿರುಗಿಕೊಳ್ಳಲು ಎಚ್ಚರಿಕೆಯನ್ನು ನೀಡುವುದನ್ನು ನೋಡುತ್ತೇವೆ. ಇತಂಹ ಸಂದರ್ಭದಲ್ಲಿ ಜನರು ವಿವರಗಳಿಗೆ ತಕ್ಕಂತೆ ಭಾವೋದ್ವೇಗಕ್ಕೆ ಒಳಗಾಗುತ್ತಾರೆ.

ಭವಿಷ್ಯದಲ್ಲಿ ನಡೆಯುವ ಕಾರ್ಯಗಳ ಬಗ್ಗೆ ದೇವರು ನೀಡುವ ವಾಗ್ದಾನಗಳ ಬಗ್ಗೆ ಓದಿದಾಗ ಜನರು ಈ ಬಗ್ಗೆ ಸಂತೋಷ ಹಾಗೂ ವಾಗ್ದಾನ ನೆರವೇರಿದಾಗ ಆಗುವ ಹರ್ಷೋಲ್ಲಾಸ, ಯಾವಾಗ ಆ ವಾಗ್ದಾನ ನೆರವೇರುವುದೋ ಎಂಬ ನಿರೀಕ್ಷೆಯ ಒತ್ತಡ ಅವರಲ್ಲಿರುತ್ತದೆ. ಒಳ್ಳೆ ಭಾಷಾಂತರಗಾರರು ಮೂಲಭಾಷೆಯಲ್ಲಿರುವ ಉದ್ವೇಗ, ಒತ್ತಡಗಳನ್ನು ಚೆನ್ನಾಗಿ ಓದಿ ಅರ್ಥಮಾಡಿಕೊಂಡು ಅನುಭವಿಸಿ ಅದೇ ರೀತಿಯ ಒತ್ತಡದ, ಭಾವನೆಗಳನ್ನು ಭಾಷಾಂತರ ಮಾಡುತ್ತಿರುವ ಭಾಷೆಯ ಜನರು ಅನುಭವಿಸುವಂತೆ ಮರುಸೃಷ್ಟಿಸುತ್ತಾರೆ. ಮೂಲಭಾಷೆಯ ಓದುಗರು ಅನುಭವಿಸುವಂತಹ ಅನುಭವವನ್ನೇ ಭಾಷಾಂತರ ಮಾಡುತ್ತಿರುವ ಭಾಷೆಯ ಜನರು ಅನುಭವಿಸುವಂತೆ ಮಾಡಲು ಮರುಸೃಷ್ಟಿಯ ಬೇರೆ ಮಾರ್ಗವನ್ನು ಹುಡುಕಬಹುದು. ಉದಾಹರಣೆಗೆ ಮೂಲ ಭಾಷೆಯಲ್ಲಿ ಮೂಲ ಓದುಗರಿಗೆ ಎಚ್ಚರಿಕೆ, ಖಂಡನೆ ಆಗಿದ್ದರೆ ಭಾಷಾಂತರ ಆಗುತ್ತಿರುವ ಭಾಷೆಯ ಜನರಿಗೂ ಅದೇ ಎಚ್ಚರಿಕೆ, ಖಂಡನೆಯ ಅನುಭವವಾಗುವಂತೆ ಭಾಷಾಂತರ ಮಾಡಬೇಕು. ಭಾಷಾಂತರಗಾರರು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಖಂಡನೆಯನ್ನು ವ್ಯಕ್ತಪಡಿಸುವಾಗ, ಇತರ ರೀತಿಯ ಸಂಪರ್ಕಗಳು ಇವುಗಳ ಬಗ್ಗೆ ಆಲೋಚಿಸಬೇಕು. ಇದರಿಂದ ಭಾಷಾಂತರದ ಪರಿಣಾಮ ಸೂಕ್ತ ರೀತಿಯಲ್ಲಿ ಆಗಲು ಸಾಧ್ಯ.


ಸತ್ಯವೇದದ ಭಾಷಾಂತರ ಮಾಡುವಾಗ ಯಾವ ಗುರಿ ಹೊಂದಿರಬೇಕು ?

Translation Manual :: Introduction :: How to Aim Your Bible Translation

ಒಬ್ಬ ಭಾಷಾಂತರಗಾರನು ಒಳ್ಳೆ ಬೇಟೆಗಾರನಂತೆ ಇರಬೇಕು.

ಒಬ್ಬ ಭಾಷಾಂತರಗಾರನು ಒಳ್ಳೆ ಬೇಟೆಗಾರನಂತೆ ತಾನು ಬೇಟೆಯಾಡಲು ನಿರ್ಧರಿಸಿರುವ ಪ್ರಾಣಿಯತ್ತ ತನ್ನ ಗುರಿಯನ್ನು ಕೇಂದ್ರೀಕರಿಸಿರಬೇಕು. ಅವನಿಗೆ ತಾನು ಬೇಟೆಯಾಡುವ ಪ್ರಾಣಿ ಯಾವುದು ಎಂದು ತಿಳಿದಿರಬೇಕು. ಏಕೆಂದರೆ ಅವರು ಜಿಂಕೆಯನ್ನು ಬೇಟೆಯಾಡಲು ಉದ್ದೇಶಿಸಿದ್ದರೆ ಅವನು ಬಳಸುವ ಬಂದೂಕು ಮತ್ತು ಗುಂಡುಗಳು ಅದಕ್ಕೆ ಮಾತ್ರ ಬಳಸುವಂತಾದ್ದು, ಪಕ್ಷಿಯನ್ನು ಬೇಟೆಯಾಡಲು ಬರುವುದಿಲ್ಲ. ನಾವು ಮಾತನಾಡುವಾಗಲೂ ಸಹ ಇದೇ ರೀತಿ ಮಾತುಗಳನ್ನು ಬಳಸುತ್ತೇವೆ.

ನಾವು ದೊಡ್ಡವರೊಂದಿಗೆ ಮಾತನಾಡುವಂತೆ ಚಿಕ್ಕ ಮಕ್ಕಳೊಂದಿಗೆ ಮಾತನಾಡುವುದಿಲ್ಲ ಕೆಲವು ಪದಗಳು ಚಿಕ್ಕವರೊಂದಿಗೆ ಮಾತನಾಡಲು ಬಳಸಲಾಗುವುದಿಲ್ಲ. ನಾವು ನಮ್ಮ ಸ್ನೇಹಿತರೊಂದಿಗೆ ಮಾತನಾಡುವಂತೆ ಬಳಸುವ ಪದಗಳನ್ನು ದೇಶದ ರಾಷ್ಟ್ರಪತಿಯೊಂದಿಗೆ ಇಲ್ಲವೇ ರಾಜ್ಯದ ಮುಖ್ಯಸ್ಥರೊಂದಿಗೆ ಮಾತನಾಡಲು ಅದೇ ಪದಗಳನ್ನು ಉಪಯೋಗಿಸಲು ಬರುವುದಿಲ್ಲ. ಈ ಎಲ್ಲಾ ವಿಚಾರಗಳಲ್ಲಿ ನಾವು ಬಳಸುವ ಪದಗಳು ಮತ್ತು ಅಭಿವ್ಯಕ್ತಿಗೊಳಿಸುವ ಭಾವನೆಗಳು ಭಿನ್ನವಾಗಿರುತ್ತದೆ.

ಉದಾಹರಣೆಗೆ ; ನಾವು ಚಿಕ್ಕಮಗುವಿನ ಬಳಿ ಸುವಾರ್ತೆಯ ಬಗ್ಗೆ ಹೇಳುವಾಗ “ಪಶ್ಚಾತ್ತಾಪ ಪಡು ಆಗ ಮಾತ್ರ ದೇವರು ನಿನಗೆ ಕೃಪೆ ತೋರಿಸುವನು” ಎಂದು ಹೇಳಲು ಬರುವುದಿಲ್ಲ. ಅದರ ಬದಲು ಮಗುವಿಗೆ “ನೀನು ಏನಾದರೂ ತಪ್ಪು ಮಾಡಿದರೆ ಅದನ್ನು ತಿಳಿದುಕೊಂಡು ಯೇಸುವಿನ ಬಳಿ ನಾನು ತಪ್ಪುಮಾಡಿದ್ದೇನೆ ಕ್ಷಮಿಸು ಎಂದು ಹೇಳಿದರೆ ದೇವರು ಕ್ಷಮಿಸುತ್ತಾನೆ” ಎಂದು ಹೇಳುವುದು ಒಳ್ಳೆಯದು. “ಆಗ ಆತನು ನಿನ್ನನ್ನು ಬರಮಾಡಿಕೊಳ್ಳುತ್ತಾನೆ ಏಕೆಂದರೆ ಆತನು ನಿನ್ನನ್ನು ಪ್ರೀತಿಸುತ್ತಾನೆ.” ಪ್ರತಿಯೊಂದು ಭಾಷೆಯಲ್ಲೂ ಹಿರಿಯರು ಉಪಯೋಗಿಸುವ ಪದಗಳು, ಮತ್ತು ಮಕ್ಕಳು ಉಪಯೋಗಿಸುವ ಪದಗಳು ಎಂದು ಬೇರೆ ಬೇರೆ ಇವೆ. ಮಕ್ಕಳು ಇನ್ನೂ ಕೆಲವು ಪದಗಳನ್ನು ಬಳಸಲು ಕಲಿತಿರುವುದಿಲ್ಲ. ಹೌದು, ಮಕ್ಕಳು ಕಾಲಕ್ರಮೇಣ ಇಂತಹ ಪದಗಳನ್ನು ಬಳಸಲು ಕಲಿಯುತ್ತಾರೆ.

ಆದರೆ ಮಕ್ಕಳೊಂದಿಗೆ ನಾವು ಅನೇಕ ಪದಗಳನ್ನು ಒಂದೇ ಸಲಕ್ಕೆ ಹೇಳಿದರೆ ಅವರಿಗೆ ಕಲಿಯಲು, ತಿಳಿದುಕೊಳ್ಳಲು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಇದರೊಂದಿಗೆ ಭಾಷೆಗಳು ಮರಗಳಿದ್ದಂತೆ ಮರಗಳಲ್ಲಿ ಹಳೆಯ ಎಲೆಗಳು ಉದುರಿ ಹೊಸ ಎಲೆಗಳು ಬರುವಂತೆ ಹೊಸಹೊಸ ಪದಗಳು ಬರುತ್ತಿದ್ದಂತೆ, ಕಲಿಯುತ್ತಿದ್ದಂತೆ ಹಳೆಯ ಪದಗಳು ಮರೆತುಹೋಗುವ ಸಾಧ್ಯತೆಗಳು ಇರುತ್ತದೆ. ಹಳೆಯ ಪದಗಳು ಹಳೆಯ ಎಲೆಗಳು ಒಣಗಿ ಉದುರಿಹೊಗುವಂತೆ ಕೆಲವೊಮ್ಮೆ ಹಿರಿಯರು ಮಾತ್ರ ಉಪಯೋಗಿಸುತ್ತಾರೆ. ಹೊಸ ಪೀಳಿಗೆಯವರು ಬರುತ್ತಿದ್ದಂತೆ ಕೆಲವು ಪದಗಳನ್ನು ಬಳಸದೆ ಬಿಟ್ಟುಬಿಡುತ್ತಾರೆ. ಕೆಲವು ಹಳೆಯ ಕಾಲದ ಪದಗಳನ್ನು ಹಿರಿಯರುಮರೆಯಾದಂತೆ ಅವರೊಂದಿಗೆ ಮರೆಯಾಗುತ್ತವೆ. ಹೊಸ ಪೀಳಿಗೆಯ ಜನರು ಇವುಗಳನ್ನು ಉಪಯೋಗಿಸುವುದಿಲ್ಲ.

ಇಂತಹ ಪದಗಳನ್ನು ಹಾಗೇ ಉಳಿಸಲು ನಿಘಂಟಿನಲ್ಲಿ ದಾಖಲಿಸಿದ್ದರೂ ಹೊಸ ಯುವ ಪೀಳಿಗೆಯವರು ಬಹುಶಃ ಈ ಪದಗಳನ್ನು ಬಳಸಿಕೊಳ್ಳುವುದಿಲ್ಲ. ಕಾರಣಗಳಿಂದ ಸತ್ಯವೇದ ಭಾಷಾಂತರಗಾರರು ಯಾರನ್ನು ಉದ್ದೇಶಿಸಿ ಭಾಷಾಂತರಿಸುತ್ತಿದ್ದಾರೆ, ಈ ಭಾಷಾಂತರವಾದ ಕೃತಿಯನ್ನು ಓದುವವರು ಯಾರು ಎಂದು ತಿಳಿದು ಭಾಷಾಂತರಿಸಬೇಕು. ಇಲ್ಲಿ ಕೆಲವು ಆಯ್ಕೆಗಳಿವೆ.

ಭವಿಷ್ಯದಲ್ಲಿ ಬಳಸಬೇಕಾಗಿರುವ ಉದ್ದೇಶದ ಗುರಿಗಳು.

ಭಾಷಾಂತರವಾಗುತ್ತಿರುವ ಭಾಷೆಯನ್ನು ಮಾತನಾಡುವ ಯುವ ತಾಯಿಯಂದಿರು ಮತ್ತು ಅವರ ಚಿಕ್ಕ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಭಾಷಾಂತರ ಮಾಡುತ್ತಾರೆ. ಏಕೆಂದರೆ ಇವರೇ ಭವಿಷ್ಯದಲ್ಲಿ ಈ ಭಾಷೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವವರು. ಭಾಷಾಂತರಗಾರರು ಈ ನಿಟ್ಟಿನಲ್ಲಿ ಮುಂದುವರೆದು ಹಳೆಯ ಪದಗಳನ್ನು ಯುವಜನಾಂಗದವರು ಬಳಸದೆ ಬಿಟ್ಟುಬಿಡುವ ಪದಗಳನ್ನು ಬಳಸುತ್ತಾ ಹೋದರೆ ಬಹುಶಃ ಆ ಪದಗಳ ಉಳಿವು ಆಗಬಹುದು

ಆದರೆ ಅದರ ಬದಲು ಸರಳವಾದ, ಸುಲಭವಾದ, ಪ್ರತಿತ್ಯ ಪಯೋಗಿಸುವ ಪದಗಳನ್ನು ಎಷ್ಟು ಸಾಧ್ಯವೋ ಅಷ್ಟು ಉಪಯೋಗಿಸಬೇಕು. ಇದರೊಂದಿಗೆ ಅಂತಹ ಭಾಷಾಂತರಗಾರರು ಈ ಕೆಳಗೆ ಕೊಟ್ಟಿರುವ ಕೆಲವು ನಿಯಮಗಳನ್ನು ಪಾಲಿಸ ಬಹುದು.

  1. ಅವರು ಸತ್ಯವೇದವನ್ನು ಭಾಷಾಂತರಿಸುತ್ತಿರುವ ಭಾಷೆಗೆ ಸತ್ಯವೇದದಲ್ಲಿನ ಕೆಲವು ಸಾಮಾನ್ಯಪದಗಳನ್ನು ಯಥಾವತ್ತಾಗಿ ಟ್ರಾನ್ಸ್ ಲಿಟರೇಟ್ – ಇಂಗ್ಲೀಷ್ ಪದವನ್ನು ಹಾಗೆಯೇ ಕನ್ನಡ ಅಕ್ಷರದಲ್ಲಿ ಬರೆಯುವ ಪ್ರಯತ್ನ ಮಾಡುತ್ತಿಲ್ಲ. ಉದಾಹರಣೆಗೆ ಸತ್ಯವೇದದಲ್ಲಿ ಬರುವ “synagogue” ಎಂಬ ಪದವನ್ನು “sinagog” ಎಂದು ಬರೆದು (ಯೆಹೂದ್ಯರ ಸಭಾಮಂದಿರ) ಅದರ ಅರ್ಥವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಾರೆ. ಸತ್ಯವೇದದಲ್ಲಿ ಬರುವ "angel " ಎಂಬ ಪದವನ್ನು "enjel"ಎಂದು ಬರೆದು ಅದರ ಅರ್ಥವನ್ನು ಭಾಷಾಂತರ ಮಾಡುತ್ತಿರುವ ಭಾಷೆಯ ಜನರಿಗೆ ತಿಳಿಸಲು ಪ್ರಯತ್ನಿಸುವುದಿಲ್ಲ.
  2. ಸತ್ಯವೇದದಲ್ಲಿ ಬರುವ ಕೆಲವು ಪದಗಳಿಗೆ ಕಂಡುಕೊಳ್ಳುವ ಅರ್ಥಗಳಿಗೆ ಹೊಸ ಪದಗಳನ್ನು ಸೃಷ್ಟಿಸಲು ಅವರು ಪ್ರಯತ್ನಿಸುವುದಿಲ್ಲ. ಉದಾಹರಣೆಗೆ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ "ಕೃಪೆ " (“grace” or “sanctify,”) " ಪರಿಶುದ್ಧಗೊಳಿಸು " ಎಂಬ ಪದಗಳಿಗೆ ಸೂಕ್ತವಾದ ಪದಗಳು ಕಂಡು ಬರದಿದ್ದಾರೆ. ಹೊಸ ಪದಗಳನ್ನು ಸೃಷ್ಟಿಸದೆ ಅದೇ ಪದವನ್ನು ಬಳಸುವರು. ಅದರ ಬದಲು ಸೂಕ್ತವಾದ, ಅರ್ಥ ಕೆಡದಂತೆ ಬಳಸುವ ಪದಗಳನ್ನು ಸತ್ಯವೇದದಲ್ಲಿ ಇರುವಂತೆಯೇ ಬರೆಯಲು ಪ್ರಯತ್ನಿಸಬೇಕು.
  3. ಭಾಷಾಂತರ ಆಗುತ್ತಿರುವ ಭಾಷೆಯಲ್ಲಿರುವ ಪದಗಳನ್ನು ತೆಗೆದುಕೊಳ್ಳದೆ ಹೊಸ ಪದಗಳನ್ನು ಬಳಸಿ ಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅವರು ಇದನ್ನು ಪ್ರಯತ್ನಿಸಿದರೆ ಜನರು ಹೊಸ ಅರ್ಥಗಳನ್ನು ಉಪೇಕ್ಷಿಸಬಹುದು. ಇದರ ಪರಿಣಾಮ ವಾಕ್ಯ ಭಾಗಗಳನ್ನು ಭಾಷಾಂತರಿಸುವಾಗ ಜನರು ಅದರ ಸರಿಯಾದ ಅರ್ಥವನ್ನು ಮಾಡಿಕೊಳ್ಳಲು ಅಸಮರ್ಥರಾಗುವರು.
  4. ಅವರು ಸತ್ಯವೇದದ ವಿಚಾರಗಳನ್ನು ಸಹಜವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸಲು ನೆನಪಿನಲ್ಲಿಟ್ಟು ಕೊಳ್ಳುತ್ತಾರೆ. (See: ಸ್ಪಷ್ಟವಾದ ಭಾಷಾಂತರದ ಸೃಷ್ಟಿ, ಸಹಜವಾದ ಭಾಷಾಂತರದ ಸೃಷ್ಟಿ ಇವುಗಳನ್ನು ನೋಡಿ)

ಭಾಷಾಂತರಗಾರರು ಈ ನಿಯಮಗಳನ್ನು ಪಾಲಿಸಿದರೆ ಪ್ರತಿಫಲವಾಗಿ ಸಾಮಾನ್ಯ ಭಾಷೆಯ ಪ್ರತಿಯಾಗಿ ದೊರೆಯುತ್ತದೆ. ಮೊದಲ ಸತ್ಯವೇದದ ಭಾಷೆಯ ಬಗ್ಗೆ ನೀವು ಕಾರ್ಯನಿರ್ವಹಿಸುತ್ತಿದ್ದರೆ ಈ ಕೆಳಗೆ ಕೊಟ್ಟಿರುವ ಮಾರ್ಗದರ್ಶನಗಳನ್ನು ಅನುಸರಿಸಿ. ಇಂಗ್ಲೀಷಿನ ಸಾಮಾನ್ಯ ಭಾಷಾ ಕೃತಿಗಳು ಇಂದಿನ ಇಂಗ್ಲೀಷ್ ಭಾಷಾಂತರ ಪ್ರತಿ ಮತ್ತು ಸಾಮಾನ್ಯ ಇಂಗ್ಲೀಷ್ ಸತ್ಯವೇದಗಳನ್ನು ಒಳಗೊಂಡಿರುತ್ತದೆ. ಈ ಇಂಗ್ಲೀಷ್ ಭಾಷೆಯ ಸತ್ಯವೇದಗಳಲ್ಲಿ ಕಂಡುಬರುವ ಭಾಷೆಗಿಂತ ಭಾಷಾಂತರಿಸುತ್ತಿರುವ ಭಾಷೆಯ ಮೂಲಕ ನೀವು ವ್ಯಕ್ತಪಡಿಸಲು ಬಯಸುತ್ತಿರುವ ಅನೇಕ ವಿಚಾರಗಳು ವಿಭಿನ್ನವಾಗಿರುತ್ತದೆ.

####ಸತ್ಯವೇದದ ಅಧ್ಯಯನಕ್ಕಾಗಿ ಅಧ್ಯಯನ ಸತ್ಯವೇದವನ್ನು ಭಾಷಾಂತರಿಸುವ ಗುರಿ.

ಭಾಷಾಂತರಗಾರರು ಸತ್ಯವೇದವನ್ನು ಆಳವಾಗಿ ಅಧ್ಯಯನ ಮಾಡುವ ಕ್ರೈಸ್ತರನ್ನ ಗುರಿಯಾಗಿಟ್ಟುಕೊಂಡು ಭಾಷಾಂತರ ಮಾಡಬೇಕು ಮತ್ತು ಅದು ಹೊಸದಾಗಿ ಕ್ರೈಸ್ತರಾದವರಿಗೂ ಓದಲು ಸುಲಭವಾಗಿರುವಂತೆ ಇರಬೇಕು ಮತ್ತು ಇವರಿಗಿಂತ ಹೆಚ್ಚು ಆಳವಾಗಿ ಅಧ್ಯಯನ ಮಾಡುವಂತಿರಬೇಕು. ಭಾಷಾಂತರಿಸುತ್ತಿರುವ ಭಾಷೆಯಲ್ಲಿ ಈಗಾಗಲೇ ಒಳ್ಳೆ ಸತ್ಯವೇದ ಇದ್ದರೆ ಅದು ಅವಿಶ್ವಾಸಿಗಳಿಗೂ ಹೊಸದಾಗಿ ಕ್ರೈಸ್ತರಾದವರಿಗೂ ಚೆನ್ನಾಗಿ ಅರ್ಥವಾಗುವ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಲು ಭಾಷಾಂತರಗಾರರು ನಿರ್ಧರಿಸಬೇಕು. ಭಾಷಾಂತರಗಾರರು ಈ ರೀತಿಯಲ್ಲಿ ನಿರ್ಧರಿಸಿದರೆ ಅವರು ಈ ರೀತಿಯೂ ನಿರ್ಧರಿಸಬಹುದು.

  1. ಸತ್ಯವೇದದ ಭಾಷೆಯಲ್ಲಿರುವ ವ್ಯಾಕರಣ ಅಂಶಗಳು ಮತ್ತು ರಚನೆಗಳನ್ನು ಆದಷ್ಟು ಅನುಕರಣೆ ಮಾಡುವುದು ಒಳ್ಳೆಯದು. ಉದಾಹರಣೆಗೆ ಸತ್ಯವೇದದಲ್ಲಿ “ದೇವರ ಪ್ರೀತಿ” ಎಂಬ ವಿಚಾರವನ್ನು ಗೂಡಾರ್ಥದಲ್ಲಿ ಇಡಬಹುದು. ಹೀಗೆ ಮಾಡುವುದರಿಂದ ಜನರು ದೇವರ ಬಗ್ಗೆ ಇಟ್ಟಿರುವ ಪ್ರೀತಿಯೋ ಅಥವಾ ದೇವರು ಜನರ ಬಗ್ಗೆ ಇಟ್ಟಿರುವ ಪ್ರೀತಿಯೋ ಎಂಬುದನ್ನು ನಿರ್ಧರಿಸಲಾಗದೆ ಗೊಂದಲಕ್ಕೆ ಒಳಗಾಗುವರು. ಸತ್ಯವೇದದಲ್ಲಿ “ನಾವು ಕ್ರಿಸ್ತ ಯೇಸುವಿನಲ್ಲಿ ಇಟ್ಟಿರುವ ಪ್ರೀತಿ” ಎಂಬುದನ್ನು ಭಾಷಾಂತರಗಾರರು ಇದನ್ನು “ಯೇಸುಕ್ರಿಸ್ತನಿಂದ” ಅಥವಾ “ಯೇಸು ಕ್ರಿಸ್ತನಲ್ಲಿ ಒಂದಾಗಿ” ಎಂದು ಹೇಳಬಾರದೆಂದು ನಿರ್ಧರಿಸಬಹುದು.
  2. ಭಾಷಾಂತರ ಮಾಡುವಾಗ ಆದಷ್ಟು ಹಿಬ್ರು ಮತ್ತು ಗ್ರೀಕ್ ಭಾಷೆಗಳಲ್ಲಿ ಹೇಳಿರುವ ಅರ್ಥ ಮತ್ತು ಭಾವನೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಭಾಷಾಂತರ ಮಾಡಬೇಕು. ಉದಾಹರಣೆ ಅವರುಇದನ್ನು ಅಡಿಟಿಪ್ಪಣಿಯಲ್ಲಿ ಬರೆಯುವ ಮೂಲಕ ತಿಳಿಸಿಕೊಳ್ಳಬೇಕು
  3. ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಸತ್ಯವೇದದ ಭಾಷೆಗಿಂತ ಹೆಚ್ಚಾದ ಅರ್ಥವನ್ನುನೀಡುವಂತಹ ಪದಗಳನ್ನು ಅಭಿವ್ಯಕ್ತಿಪಡಿಸುವ ಭಾವನೆಗಳನ್ನು ವ್ಯಕ್ತಪಡಿಸುವ ಹೊಸಪದಗಳನ್ನು ಇಲ್ಲಿ ಬಳಸಬಹುದು. ಭಾಷಾಂತರಗಾರರು ಈ ರೀತಿ ಮಾಡಿದರೆ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಹೆಚ್ಚು ಕ್ರಿಯಾತ್ಮಕವಾಗಿರುತ್ತದೆ.

ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಈಗಾಗಲೇ ಸ್ಪಷ್ಟ ಹಾಗೂ ಸಹಜ ರೀತಿಯಲ್ಲಿ ಸತ್ಯವೇದ ಭಾಷಾಂತರವಾಗಿದ್ದರೆ ಎರಡನೇ ರೀತಿಯನ್ನು ಅನುಸರಿಸುವಂತೆ ನಾವು ಸಲಹೆ ನೀಡುವುದಿಲ್ಲ.

Defining a Good Translation

Translation Manual :: Defining a Good Translation

ಉತ್ತಮ ಭಾಷಾಂತರದ ಗುಣಲಕ್ಷಣಗಳು.

Translation Manual :: Defining a Good Translation :: The Qualities of a Good Translation

ನಾಲ್ಕು ಮುಖ್ಯ ಗುಣಲಕ್ಷಣಗಳು.

ಉತ್ತಮ ಭಾಷಾಂತರದಲ್ಲಿ ನಾಲ್ಕು ಮುಖ್ಯ ಗುಣಲಕ್ಷಣಗಳಿವೆ.

ಅವು ಯಾವುವೆಂದರೆ:

ಈ ನಾಲ್ಕು ಗುಣಲಕ್ಷಣಗಳು ಕುರ್ಚಿಯ ನಾಲ್ಕು ಕಾಲುಗಳು ಇದ್ದಂತೆ. ಪ್ರತಿಯೊಂದು ಕಾಲು ಮುಖ್ಯವಾದುದು. ಒಂದು ಇಲ್ಲದಿದ್ದರೂ ಕುರ್ಚಿ ನೆಟ್ಟಗೆ ನಿಲ್ಲಲಾರದು. ಭಾಷಾಂತರದಲ್ಲಿ ಈ ನಾಲ್ಕು ಅಂಶಗಳು ತುಂಬಾ ಮುಖ್ಯವಾದುದು. ಚರ್ಚ್/ ಸಭೆಯ ಸಮ್ಮತಿಗೆ ಇವು ಅನುಕೂಲಕರ ಹಾಗೂ ವಿಶ್ವಾಸಾರ್ಹ ಭಾಷಾಂತರ.

ಸ್ಪಷ್ಟವಾದ.

ಉತ್ಕೃಷ್ಟಮಟ್ಟದ ವ್ಯಾಪ್ತಿಯನ್ನು ಹೊಂದಿದ ಭಾಷಾಂತರ ಮಾಡಲು ಯಾವ ಭಾಷೆಯಿಂದಲಾದರೂ ರಚನಾತ್ಮಕ ವಿಚಾರಗಳನ್ನು ಅಳವಡಿಸಬೇಕು. ಇದರೊಂದಿಗೆ ಸರಳೀಕೃತ ಪರಿಕಲ್ಪನೆಗಳು. ನಿಗಧಿತ ವಾಕ್ಯಭಾಗದ ಪುನರ್ ನಿರೂಪಣೆ, ಅವಶ್ಯಕತೆ ಇರುವ ಪದಗಳನ್ನು ಮೂಲವಾಕ್ಯಭಾಗದ ಅರ್ಥ ಕೆಡದಂತೆ ನಿಖರವಾಗಿ ಮಾಡಲು ಬಳಸುವುದು ಅಗತ್ಯ. ಸ್ಪಷ್ಟವಾದ./ ಪಾರದರ್ಶಕ ಭಾಷಾಂತರ ಮಾಡಲು ನೋಡಿ - ಸ್ಪಷ್ಟ / ಪಾರದರ್ಶಕ ಭಾಷಾಂತರ ಮಾಡುವುದು.

ಸಹಜವಾದ

ನಿಮ್ಮ ಭಾಷೆಗೆ ಸಂಬಂಧಿಸಿದ ವಾಕ್ಯಭಾಗಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಲು ಸೂಕ್ತಪದಗಳನ್ನು ಸಹಜರೀತಿಯಲ್ಲಿ ಬಳಸಬೇಕು. ಸಹಜವಾದ ಭಾಷಾಂತರಮಾಡಲು ನೋಡಿ ಸಹಜವಾದ ಭಾಷಾಂತರಗಳನ್ನು ಸೃಷ್ಟಿಸಿ / ಮಾಡಿ.

####ನಿರ್ದಿಷ್ಟ / ನಿಖರವಾದ ಭಾಷಾಂತರ.

ಮೂಲಭಾಷೆಯಿಂದ ಯಾವುದೇ ಬದಲಾವಣೆಯಾಗದಂತೆ, ಮೂಲಭಾಷೆಯನ್ನು ಅರ್ಥ ಮಾಡಿ ತೋರಿಸಿದ ಶ್ರೋತೃಗಳಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಭಾಷಾಂತರ ಮಾಡಬೇಕೆಂದರೆ ಈ ಅಂಶಗಳನ್ನು ಗಮನದಲ್ಲಿಡಬೇಕು. ನಿರ್ದಿಷ್ಟ, ನಿಖರವಾಗಿ,ಯಾವುದೇ ಬದಲಾವಣೆ ಇಲ್ಲದೆ, ಯಾವಅಂಶವನ್ನೂ ಬಿಡದೆ, ಯಾವ ಹೊಸ ಪದಗಳನ್ನೂ ಸೇರಿಸದೆ ಭಾಷಾಂತರ ಮಾಡಬೇಕು. ಮನಸ್ಸಿನಲ್ಲಿ ವಾಕ್ಯಭಾಗದ ಅರ್ಥಗಳನ್ನು ಸರಿಯಾಗಿ ಮನನ ಮಾಡಿ ಭಾಷಾಂತರ ಮಾಡಬೇಕು, ನಂತರ ಇದರೊಂದಿಗೆ ವಿಶ್ವಾಸಪೂರ್ಣ ಮಾಹಿತಿಯನ್ನು, ಗೊತ್ತಿರದ ಪರಿಕಲ್ಪನೆಗಳನ್ನು ಮತ್ತು ಅಲಂಕಾರಗಳನ್ನು ಸರಿಯಾಗಿ, ನಿರ್ದಿಷ್ಟವಾಗಿ, ನಿಖರವಾಗಿ ಭಾಷಾಂತರಿಸಿ ತಿಳಿಸಬೇಕು. ನಿಖರವಾದ ಭಾಷಾಂತರಮಾಡಲು ಕಲಿತುಕೊಳ್ಳ ಬೇಕೆಂದರೆ ನೋಡಿ ನಿಖರವಾದ ಭಾಷಾಂತರಗಳನ್ನು ಸೃಷ್ಟಿಸಿ / ಮಾಡಿ.

ಸಭೆಯಿಂದ / ಚರ್ಚನಿಂದ ಮಾನ್ಯತೆ ಪಡೆದ ಭಾಷಾಂತರ.

ಒಂದು ಭಾಷಾಂತರ.ಸ್ಪಷ್ಟವಾಗಿ, ಸಹಜವಾಗಿ ಮತ್ತು ನಿಖರವಾಗಿ ಇದ್ದು ಸಭೆ/ ಚರ್ಚ್ ನಿಂದ ಮಾನ್ಯತೆ ಪಡೆಯದಿದ್ದರೆ, ಸಮ್ಮತಿ ಪಡೆಯದಿದ್ದರೆ ಚರ್ಚ್ ಅಥವಾ ಸಭೆ ಆತ್ಮೋನ್ನತಿಗೆ ನೀತಿ ಬೋಧನೆ ಮಾಡುವ ಅಂತಿಮ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಆದುದರಿಂದಲೇ ಸಭೆ/ ಚರ್ಚ್ ಇಂತಹ ಭಾಷಾಂತರದಲ್ಲಿ ತೊಡಗಿಸಿಕೊಂಡು ಪರಿಶೀಲಿಸಿ ತಿದ್ದುಪಡಿ ಮಾಡುವುದು. ಮತ್ತು ಭಾಷಾಂತರಿಸಿದ ಮಾಹಿತಿಯನ್ನು ವಿತರಿಸುವುದರಲ್ಲಿ ಪಾತ್ರವಹಿಸಬೇಕು. ಸಭೆ/ ಚರ್ಚ್ ನಿಂದ ಮಾನ್ಯತೆ ಪಡೆಯುವಂತಹ ಭಾಷಾಂತರಮಾಡಲು ಕಲಿಯುವುದಕ್ಕಾಗಿ ನೋಡಿ ಚರ್ಚ್ ಅಥವಾ ಸಭೆಯಿಂದ ಮಾನ್ಯತೆ ಪಡೆಯುವಂತಹ ಭಾಷಾಂತರ ಮಾಡುವುದು.

ಆರು ಇತರ ಗುಣಲಕ್ಷಣಗಳು.

ಇದರೊಂದಿಗೆ ಸ್ಪಷ್ಟ/ ಪಾರದರ್ಶಕ, ಸ್ವಾಭಾವಿಕ / ಸಹಜವಾದ, ನಿಖರ ಮತ್ತು ಚರ್ಚ್/ ಸಭೆಯಿಂದ ಸಮ್ಮತಿ ಪಡೆದ ಉತ್ತಮ ಭಾಷಾಂತರಗಳು ಆಗಿರಬೇಕು.

ಉತ್ತಮ ಭಾಷಾಂತರದ ಗುಣಲಕ್ಷಣಗಳು.

Translation Manual :: Defining a Good Translation :: The Qualities of a Good Translation

ಸ್ಪಷ್ಟವಾದ ಭಾಷಾಂತರ ಮಾಡಿ.

Translation Manual :: Defining a Good Translation :: The Qualities of a Good Translation :: Create Clear Translations

ಸ್ಪಷ್ಟ ಭಾಷಾಂತರ.

ಸ್ಪಷ್ಟವಾದ ಭಾಷಾಂತರ ಯಾವ ಭಾಷೆಯಲ್ಲೇ ಆಗಲಿ ಬೇಕಾದ ಎಲ್ಲಾ ರೀತಿಯ ರಚನಾತ್ಮಕ ಅಂಶಗಳನ್ನು ಬಳಸಿ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡುವಂತದ್ದು. ಇದು ವಾಕ್ಯಭಾಗವನ್ನು ವಿವಿಧ ಮಾದರಿಯಲ್ಲಿ ಅಥವಾ ವ್ಯವಸ್ಥೆಯಲ್ಲಿ, ಅನೇಕ ಅಥವಾ ಕೆಲವೇ ಅವಶ್ಯವಿರುವ ಪದಗಳನ್ನು ಬಳಸಿ ಮೂಲ ಅರ್ಥ ಕೆಡದಂತೆ ತಿಳಿಸಲು ಪ್ರಯತ್ನ ಮಾಡುತ್ತದೆ

ಈ ಎಲ್ಲಾ ಭಾಷಾಂತರ ಮಾರ್ಗದರ್ಶನಗಳು ಇತರ ಭಾಷೆಗಳಿಗೆ ಅನ್ವಯಿಸುತ್ತದೆಯೇ ಹೊರತು ಗೇಟ್ ವೇ ಭಾಷಾಂತರಕ್ಕೆ ಅನ್ವಯಿಸುವುದಿಲ್ಲ. ಆದರೆ ULB ವಾಕ್ಯಭಾಗಗಳನ್ನು ಗೇಟ್ ವೇ ಭಾಷೆಯಲ್ಲಿ ಭಾಷಾಂತರಿಸುವಾಗ ಬದಲಾವಣೆಗಳು ಬೇಕಿಲ್ಲ. ಹಾಗೆಯೇ ಈ ಎಲ್ಲಾ ಬದಲಾವಣೆಗಳನ್ನು UDB ಯಿಂದ ಗೇಟ್ ವೇ ಭಾಷೆಗೆ ಭಾಷಾಂತರಿಸುವಾಗ ಮಾಡಬೇಕಿಲ್ಲ, ಏಕೆಂದರೆ ಈಗಾಗಲೇ ಅವೆಲ್ಲವನ್ನೂ ಮಾಡಲಾಗಿದೆ

ಮೂಲ ವಾಕ್ಯಭಾಗದಿಂದ ಭಾಷಾಂತರಿಸುವಾಗ ಪಾರದರ್ಶಕತೆಯನ್ನು ಉಳಿಸಿಕೊಳ್ಳಲು ಇಲ್ಲಿ ಕೆಲವು ಮಾರ್ಗಗಳನ್ನು ತಿಳಿಸಿವೆ.

ಸರ್ವನಾಮಗಳನ್ನು ಪರಿಶೀಲಿಸಿ.

ಮೂಲ ವಾಕ್ಯಗಳಲ್ಲಿ ಇರುವ ಸರ್ವನಾಮಗಳನ್ನು ಪರಿಶೀಲಿಸಿ. ಮತ್ತು ಅದನ್ನು ಯಾರ ಬಗ್ಗೆ ಇದೆ ಎಂದು ತಿಳಿದುಕೊಳ್ಳಿ ಅಥವಾ ಪ್ರತಿ ಸರ್ವನಾಮ ಯಾರನ್ನು ಉದ್ದೇಶಿಸಿ ಹೇಳಿದೆ ಎಂದು ತಿಳಿದುಕೊಳ್ಳಿ. ಸರ್ವನಾಮಗಳು ನಾಮಪದದ ಬದಲಾಗಿ ಬರುತ್ತವೆ ಅಥವಾ ನಾಮಪದದ ನುಡಿಗಟ್ಟುಗಳಾಗಿ ಪ್ರತಿನಿಧಿಸುತ್ತವೆ. ಅವು ಈಗಾಗಲೇ ಹೇಳಿರುವಂತಹ ಪದಗಳನ್ನು ಉದ್ದೇಶಿಸಿರುತ್ತವೆ.

ಸರ್ವನಾಮಗಳು ಯಾರನ್ನು ಉದ್ದೇಶಿಸಿ ಹೇಳಲಾಗುತ್ತಿದೆ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಿ ಅಥವಾ ಪ್ರತಿ ಸರ್ವನಾಮ ಯಾರನ್ನು ಉದ್ದೇಶಿಸಿದೆ ಎಂದು ನೋಡಿ. ಅದು ಸ್ಪಷ್ಟವಾಗಿ ಇಲ್ಲದಿದ್ದರೆ ವ್ಯಕ್ತಿಯ ಹೆಸರನ್ನು ಬಳಸಬಹುದು ಅಥವಾ ವಸ್ತುವನ್ನು ಸಹ ಸರ್ವನಾಮದ ಬದಲಾಗಿ ಬಳಸಬಹುದು.

ಸರ್ವನಾಮವಾಗಿ ಬಳಸುವ ವ್ಯಕ್ತಿಗಳು ಗುರುತಿಸುವುದು.

ನಂತರ ನೀವು ಇಲ್ಲಿ ಯಾರು ಕ್ರಿಯೆ ನಡೆಸುವವರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸ್ಪಷ್ಟವಾದ ಭಾಷಾಂತರ ಸರ್ವನಾಮದ ಭಾಗಿಗಳನ್ನು ಗುರುತಿಸುತ್ತದೆ

ಭಾಗೀದಾರರು.ಎಂದರೆ ಘಟನೆಯಲ್ಲಿ ಬರುವ ಜನರು ಅಥವಾ ವಸ್ತುಗಳು.

ಕರ್ತೃಪದ ಮಾಡುತ್ತಿರುವ ಕ್ರಿಯೆ ಮತ್ತು ಕರ್ಮಪದದೊಂದಿಗೆ ಇರುವ ಕ್ರಿಯೆಯ ಸಂಬಂಧ ಇಲ್ಲಿ ಬರುವ ಮುಖ್ಯ ಭಾಗೀದಾರರು.

ಕೆಲವೊಮ್ಮೆ ಘಟನೆ ಯನ್ನು ಕ್ರಿಯಾಪದದಂತೆ ಪುನರ್ ಅಭಿವ್ಯಕ್ತಿಸಿದರೆ ಆಗಿಂದಾಗ್ಗೆ ಯಾರು ಇದರ ಭಾಗೀದಾರರು ಎಂಬುದನ್ನು ಹೇಳುವ ಅಗತ್ಯವಿರುತ್ತದೆ. ಸಾಮಾನ್ಯವಾಗಿ ಇದು ವಾಕ್ಯಭಾಗದಿಂದ ಸ್ಪಷ್ಟವಾಗುತ್ತದೆ.

####ಘಟನೆಯ ಉದ್ಧೇಶಗಳನ್ನು, ವಿಷಯಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಿಸಿ.

ಗೇಟ್ ವೇ ಭಾಷೆಯಲ್ಲಿ ಅನೇಕ ಘಟನೆ ಗಳು ವಿಷಯಗಳು ನಾಮಪದಗಳಾಗಿ ಬರುತ್ತವೆ. ಸ್ಪಷ್ಟವಾದ ಭಾಷಾಂತರದಲ್ಲಿ ಘಟನೆ ಗಳನ್ನು ಕ್ರಿಯಾಪದದಂತೆ ವ್ಯಕ್ತಪಡಿಸಬೇಕು. ಭಾಷಾಂತರ ಮಾಡಲು ಸಿದ್ಧತೆಮಾಡಿಕೊಳ್ಳುವಾಗ ವಾಕ್ಯಭಾಗದಲ್ಲಿರುವ ಘಟನೆ ಗಳು ವಿಷಯಗಳನ್ನು ಗಮನಿಸಬೇಕು, ವಿಶೇಷವಾಗಿ ಕ್ರಿಯಾರೂಪದ ಪದಗಳಿಗಿಂತ ಭಿನ್ನವಾದ ಬಳಕೆ ಏನಾದರೂ ಇದ್ದರೆ ಅದನ್ನು ಗಮನದಲ್ಲಿಡಬೇಕು.

ಕ್ರಿಯಾಪದವನ್ನು ಬಳಸುವುದರ ಮೂಲಕ ವಾಕ್ಯದಲ್ಲಿರುವ ಅರ್ಥವನ್ನು ಪುನರ್ ವ್ಯಕ್ತಪಡಿಸಿ ಘಟನೆ ಯನ್ನು, ವಿಷಯವನ್ನು ಅಭಿವ್ಯಕ್ತಿಸಬಹುದು. ನಿಮ್ಮ ಭಾಷೆಯಲ್ಲಿ ನಾಮಪದವನ್ನು ಬಳಸಿ ** ಘಟನೆ** ವಿಷಯಗಳನ್ನು ಹೇಳುವುದಾದರೆ, ಘಟನೆ ಮತ್ತು ಕ್ರಿಯೆ ಸಹಜವಾದ ರೀತಿಯಲ್ಲಿ ಬಳಕೆಯಾಗುವುದಾದರೆ ಆಗ ನಾಮಪದವನ್ನೇ ಬಳಸಿ.

ಭಾವಸೂಚಕ ನಾಮಪದಗಳನ್ನು ನೋಡಿ

ಪ್ರತಿಯೊಂದು ಘಟನೆ ಯು ವಿಷಯವನ್ನು ಕರ್ತೃಪ್ರಯೋಗಗಳಲ್ಲಿ (Active clause) ಬದಲಾಯಿಸುವ ಅಗತ್ಯವಿರುತ್ತದೆ. ಮತ್ತು ಇದನ್ನು ಅರ್ಥಕೆಡದಂತೆ ಮಾಡಬೇಕು.

####ಕರ್ಮಣಿ ಕ್ರಿಯಾಪದಗಳು.

ಸ್ಪಷ್ಟವಾದ ಭಾಷಾಂತರಗಳಲ್ಲಿ ಕರ್ಮಣಿ ರೂಪದಲ್ಲಿರುವ ಕ್ರಿಯಾ ಪದಗಳನ್ನು ಕರ್ತರಿ ರೂಪಕ್ಕೆ ಬದಲಾಯಿಸಬೇಕಾಗಬಹುದು. ಕರ್ತರಿ ಅಥವಾ ಕರ್ಮಣಿ ನೋಡಿ

ಕರ್ತರಿ (Active) ರೂಪದ ವಾಕ್ಯದಲ್ಲಿರುವ ಕತೃಪದ (subject) ಒಬ್ಬ ವ್ಯಕ್ತಿಯಾಗಿದ್ದು ಕ್ರಿಯೆಯನ್ನು ಮಾಡುತ್ತದೆ. ಕರ್ಮಣಿ (Passive) ರೂಪದ ವಾಕ್ಯದಲ್ಲಿರುವವ್ಯಕ್ತಿ ಅಥವಾ ವಸ್ತುವಿನೊಂದಿಗೆ ಕ್ರಿಯೆಯನ್ನು ಮಾಡುತ್ತದೆ. ಉದಾಹರಣೆಗೆ “" ಜಾನ್ ಬಿಲ್ ನನ್ನು ಹೊಡೆದನು ". ಇದು ಕರ್ತರಿ (Active) ವಾಕ್ಯ. ““ಬಿಲ್ ಜಾನ್ ನಿಂದ ಹೊಡೆಯಲ್ಪಟ್ಟನು “”(Passive)- ಕರ್ಮಣಿ ವಾಕ್ಯ. ಅನೇಕ ಭಾಷೆಯಲ್ಲಿ ಕರ್ಮಣಿ (Passive) ವಾಕ್ಯಪ್ರಯೋಗವಿಲ್ಲ.

ಕರ್ತರಿ (Active)ರೂಪದ ವಾಕ್ಯ ಮಾತ್ರ ಇರುತ್ತದೆ. ಇಂತಹ ಸಂದರ್ಭದಲ್ಲಿ ಕರ್ಮಣಿ (Passive) ರೂಪದ ವಾಕ್ಯವನ್ನು ಕರ್ತರಿ(Active) ರೂಪದ ವಾಕ್ಯವನ್ನಾಗಿ ಬದಲಾಯಿಸಬೇಕು. ಕೆಲವು ಭಾಷೆಗಳಲ್ಲಿ ಕರ್ಮಣಿ ಪ್ರಯೋಗವನ್ನು ಬಯಸುತ್ತಾರೆ. ಭಾಷಾಂತರಗಾರರು ತಾವು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಸಹಜವಾಗಿ ಹೊಂದಿಕೊಳ್ಳುವ ರೂಪವನ್ನು ಬಳಸಿಕೊಳ್ಳಬೇಕು.

'Of ’ ಪದವನ್ನು ಗಮನಿಸಿ ಇದು ನಾಮವಾಚಕವನ್ನು, ಗುಣವಾಚಕ, ಕ್ರಿಯಾಪದಗಳೊಡನೆ ಸೇರಿಸಿ ಮುಂದೆ ಬರುವ ಸಂಬಂಧಗಳನ್ನು ಸೂಚಿಸುವುದುಉದಾಹರಣೆಗೆ 'ರ ’ ‘ಯಿಂದ ', ಕಡೆಗೆ, ’ ಅದಕ್ಕಾಗಿ ', ಕುರಿತು ಮುಂತಾದವು.

ಸ್ಪಷ್ಟವಾದ ಭಾಷಾಂತರ ಮಾಡುವಾಗ ಪ್ರತಿಯೊಂದು 'Of ’ ಪದಪ್ರಯೋಗವನ್ನು ಗುರುತಿಸಿ ನಾಮಪದಗಳು 'Of 'ಎಂಬ ಪದದ ಮೂಲಕ ಹೊಂದಿರುವ ಸಂಬಂಧವನ್ನು ಅರ್ಥವನ್ನು ಗುರುತಿಸಬೇಕು. ಮೂಲಭಾಷೆಯಲ್ಲಿರುವ ಸತ್ಯವೇದದಲ್ಲಿ ಇರುವ 'Of ’ ಪದದ ಪ್ರಯೋಗದ ತರ ಭಾಷೆಗಳಲ್ಲಿ ಇರುವುದಿಲ್ಲ. 'Of ’ ಪದವನ್ನು ವಾಕ್ಯಭಾಗದಲ್ಲಿರುವ ನಾಮಪದಗಳು ಮತ್ತು ಇತರ ಪದಗಳೊಂದಿಗೆ ಇರುವ ಸಂಬಂಧವನ್ನು, ಪ್ರತಿಯೊಂದು 'Of ’ ಪದದ ಪ್ರಯೋಗವನ್ನು ಅಧ್ಯಯನ ಮಾಡಿ.

ನೀವು ಭಾಷಾಂತರ ಮಾಡಿದ ಮೇಲೆ ಪ್ರತಿಯೊಂದನ್ನು ನಿಖರವಾಗಿ ಪರಿಶೀಲಿಸಿ ಎಲ್ಲವೂ ಸ್ಪಷ್ಟವಾಗಿ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡ ಮೇಲೆ ಭಾಷಾಂತರ ಆಗಿರುವ ಭಾಷೆಯನ್ನು ತಿಳಿದವರಿಗೆ, ಮಾತನಾಡುವವರಿಗೆ ಓದಿ ಹೇಳಿ.ಅದರಲ್ಲಿರುವ ಎಲ್ಲಾ ತಪ್ಪು ಒಪ್ಪುಗಳನ್ನು ಸರಿಪಡಿಸಿ. ಅವರಿಗೆ ಯಾವುದಾದರೂ ಪದ, ವಾಕ್ಯ ಭಾಗ ಅರ್ಥವಾಗದಿದ್ದರೆ ಆಗ ನೀವು ಭಾಷಾಂತರ ಮಾಡಿರುವುದು ಅಸ್ಪಷ್ಟವಾಗಿದೆ ಎಂದು ತಿಳಿದುಕೊಳ್ಳಬೇಕು. ಕೊನೆಯಲ್ಲಿ ಇಬ್ಬರು ಸೇರಿ ಸ್ಪಷ್ಟವಾದ, ಸರಿಯಾದ ಭಾಷಾಂತರ ಮಾಡಲು ಪ್ರಯತ್ನಿಸಿ. ನೀವು ಮಾಡಿರುವ ಭಾಷಾಂತರ ಸರಿಯಾಗಿದೆಯೆಂದು ಖಚಿತವಾಗುವವರೆಗೂ ಅನೇಕರೊಂದಿಗೆ ಚರ್ಚಿಸಿ ಖಚಿತಪಡಿಸಿ.

ನೆನಪಿನಲ್ಲಿ ಇರಬೇಕಾದ ಅಂಶಗಳು: ಭಾಷಾಂತರವೆನ್ನುವುದು ಪುನರುಚ್ಛರಿಸುವುದು /ಪುನಃ ಹೇಳುವುದು /ಮರುಸೃಷ್ಟಿ ಮೂಲದಲ್ಲಿ ಇರುವಂತೆಯೇ ಸೃಷ್ಟಿಸುವುದು., ಮೂಲ ಸಂದೇಶದ ಅರ್ಥವನ್ನು ಸ್ಪಷ್ಟವಾಗಿ, ಪಾರದರ್ಶಕವಾಗಿ, ಭಾಷಾಂತರ ಮಾಡುವ ಭಾಷೆಯಲ್ಲಿ ಭಾಷಾಂತರ ಮಾಡಬೇಕು.

ಸ್ಪಷ್ಟವಾಗಿ ಬರೆಯುವುದು.

ನೀವು ಕೆಳಗಿನ ಪ್ರಶ್ನೆಗಳನ್ನು ಆಗಾಗ ನಿಮಗೆ ನೀವು ಹಾಕಿಕೊಂಡರೆ ಉತ್ತಮವಾದ, ಸ್ಪಷ್ಟವಾದ ಭಾಷಾಂತರ ಮಾಡಲು, ಮೂಲವಿಷಯವನ್ನು ನಿಖರವಾಗಿ ತಿಳಿಸಲು ಸಾಧ್ಯ.

  • ನೀವು ಭಾಷಾಂತರ ಮಾಡುವಾಗ ಎಲ್ಲಾ ಲೇಖನ ಚಿಹ್ನೆಗಳನ್ನು ಬಳಸಿದ್ದೀರಾ ? ಮತ್ತು ಓದುಗರಿಗೆ ಎಲ್ಲಿ ಯಾವಾಗ ವಿರಾಮ ಕೊಡಬೇಕು, ಯಾವ ಉದ್ಘಾರಗಳನ್ನು ಉಪಯೋಗಿಸಬೇಕು ಎಂಬುದನ್ನು ತಿಳಿಸಿದ್ದೀರಾ?
  • ಯಾವ ಜಾಗದಲ್ಲಿ ಉದ್ಧರಣಾ ವಾಕ್ಯಗಳು (direct speech) ಬರುತ್ತದೆ ಎಂದು ಗುರುತಿಸಿದ್ದೀರಾ ?
  • ಪ್ರತಿಯೊಂದು " ಪ್ಯಾರಾ " ವನ್ನು ವಿಂಗಡಿಸಿ ಬರೆದಿದ್ದೀರಾ ?
  • ನಿಮ್ಮ ಬರವಣಿಗೆಯಲ್ಲಿ ಆಯಾ ವಿಷಯದ ತಲೆಬರಹವನ್ನು ಬರೆದಿದ್ದೀರಾ ?

ಸಾಮಾನ್ಯವಾದ ಭಾಷಾಂತರವನ್ನು ಸೃಷ್ಟಿಸಿ.

Translation Manual :: Defining a Good Translation :: The Qualities of a Good Translation :: Create Natural Translations

ಸ್ವಾಭಾವಿಕ / ಸಾಮಾನ್ಯವಾದ ಭಾಷಾಂತರ

ಸತ್ಯವೇದವನ್ನು ಸಹಜವಾಗಿ ಭಾಷಾಂತರಿಸುವುದು ಎಂದರೆ ಅದು ಸರಳವಾಗಿ ಇರುವಂತೆ ನೋಡಿಕೊಳ್ಳುವುದು:

ಇಲ್ಲಿ ಭಾಷಾಂತರ ಎಂದರೆ ಯಾವ ಭಾಷೆಗೆ ಭಾಷಾಂತರಿಸುತ್ತಿದ್ದೆವೋ ಆ ಭಾಷೆಯಲ್ಲಿ ಬರೆಯಲ್ಪಟ್ಟಿದೆ ಎಂಬ ಅರ್ಥಬರುತ್ತದೆಯೋ ಹೊರತು ಅನ್ಯ ಭಾಷೆಯವರು / ವಿದೇಶಿಯರು ಬರೆದಂತೆ ಅನಿಸುವುದಿಲ್ಲ. ಸಾಮಾನ್ಯವಾದ ಭಾಷಾಂತರ ಮಾಡಲು ಕೆಲವು ಸಲಹೆಗಳಿವೆ.

ಚಿಕ್ಕ ಚಿಕ್ಕ ವಾಕ್ಯಗಳನ್ನು ಬಳಸಿ.

ನಾವು ಮಾಡುವ ಭಾಷಾಂತರ ಸಹಜ ಸಾಮಾನ್ಯವಾಗಿ ಕಾಣಬೇಕೆಂದು ಅಂದುಕೊಂಡರೆ ಉದ್ದುದ್ದ ಸಂಕೀರ್ಣ ವಾಕ್ಯಗಳನ್ನು ಬಿಟ್ಟು ಚಿಕ್ಕ ಸರಳ ವಾಕ್ಯಗಳನ್ನು ಬಳಸಬೇಕು. ಗ್ರೀಕ್ ಭಾಷೆಯಲ್ಲಿ ಅಲ್ಲಲ್ಲಿ ಉದ್ದುದ್ದ ಮತ್ತು ವ್ಯಾಕರಣಬದ್ಧವಾದ ಕ್ಲಿಷ್ಟವಾಕ್ಯಗಳು ಇರುತ್ತವೆ. ಕೆಲವು ಸತ್ಯವೇದ ಭಾಷಾಂತರಗಳು ಇಂತಹ ಗ್ರೀಕ್ ವಾಕ್ಯರಚನೆಗಳನ್ನು ಬಳಸಿವೆ ಹಾಗೆಯೇ ಉದ್ದುದ್ದ ವಾಕ್ಯಗಳನ್ನು ಬಳಸಿವೆ. ಸಹಜವಾಗಿ ಸರಳವಾಗಿ ಇರುವ ವಾಕ್ಯಗಳನ್ನು ಬಳಸದೆ ಭಾಷಾಂತರ ಆಗುತ್ತಿರುವ ಭಾಷೆಯಲ್ಲಿ ಗೊಂದಲ ಉಂಟುಮಾಡಿವೆ. ಭಾಷಾಂತರಕ್ಕೆ ಸಿದ್ಧತೆ ಮಾಡಿಕೊಳ್ಳುವ ಮೊದಲು ವಾಕ್ಯಭಾಗವನ್ನು ಮೊದಲು ಓದಿ ಚಿಕ್ಕ ಚಿಕ್ಕ ವಾಕ್ಯಗಳಂತೆ ದೊಡ್ಡವಾಕ್ಯಗಳನ್ನು ಬದಲಾಯಿಸಿಬರೆದುಕೊಳ್ಳಬೇಕು.

ಇದರಿಂದ ಉತ್ತಮ ಹಾಗೂ ಅರ್ಥಪೂರ್ಣ ಭಾಷಾಂತರ ಮಾಡಲು ಸಾಧ್ಯವಾಗುತ್ತದೆ. ಅನೇಕ ಭಾಷೆಯಲ್ಲಿ ಈ ರೀತಿಯ ಚಿಕ್ಕ ಚಿಕ್ಕ ವಾಕ್ಯಗಳನ್ನು ಬಳಸಿ ಉದ್ದುದ್ದ ವಾಕ್ಯಗಳನ್ನು ಮತ್ತು ವಾಕ್ಯದಲ್ಲಿ ಗೊಂದಲವನ್ನು ತಡೆಯುವ ಉತ್ತಮ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಇಂತಹ ಪ್ರಯೋಗ, ದೊಡ್ಡವಾಕ್ಯಗಳನ್ನು ಅನೇಕ ಚಿಕ್ಕ ವಾಕ್ಯಗಳಾಗಿ ಪರಿವರ್ತಿಸುವುದರಿಂದ ಹೆಚ್ಚಿನ ಅನುಕೂಲವಿದೆ. ಅನೇಕ ಭಾಷೆಯಲ್ಲಿ ಸರಳವಾದ, ಒಂದು ಅಥವಾ ಎರಡು ಕೃದಂತಪದಗಳನ್ನು ಬಳಸಿ ವಾಕ್ಯಮಾಡುವುದರಿಂದ ಸಹಜವಾಗಿ ಸುಲಭವಾಗಿ ಅರ್ಥವಾಗುತ್ತದೆ. ಚಿಕ್ಕ ವಾಕ್ಯಗಳು ಓದುಗರು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುವುದಲ್ಲದೆ ಸ್ಪಷ್ಟವಾಗಿಯೂ ಇರುತ್ತದೆ.

ಈ ರೀತಿಯ ಚಿಕ್ಕ ವಾಕ್ಯಗಳನ್ನು ಮಾಡುವಾಗ ವಾಕ್ಯಗಳು ಪದಗಳ ನಡುವೆ ಸ್ಪಷ್ಟ ಸಂಬಂಧ, ಹೊಂದಾಣಿಕೆ ಇರುವಂತೆ ನೋಡಿಕೊಳ್ಳಬೇಕು. ಉದ್ದುದ್ದ ವಾಕ್ಯಗಳು, ಸಂಕೀರ್ಣವಾಕ್ಯಗಳನ್ನು ಚಿಕ್ಕ ವಾಕ್ಯವಾಗಿ ಪರಿವರ್ತಿಸುವಾಗ ಮುಖ್ಯಪದಗಳನ್ನು ಸರಿಯಾಗಿ ಗುರುತಿಸಿ, ನೇರವಾಗಿ ವಾಕ್ಯಗಳ ನಡುವೆ ಸಂಬಂಧ ಕಲ್ಪಿಸುವಂತೆ ಎಚ್ಚರ ವಹಿಸಬೇಕು. ಸಾಮಾನ್ಯವಾಗಿ ಕ್ರಿಯಾಪದ ಅಥವಾ ಕ್ರಿಯೆಯನ್ನು ಸೂಚಿಸುವ ಪದದಎರಡೂ ಕಡೆಯಲ್ಲಿ ಪದಗಳಿದ್ದು ಅದು ಕ್ರೀಯಾಪದದ ಕ್ರಿಯೆಯನ್ನು ಸೂಚಿಸುತ್ತದೆ. ಈ ತರದ ಪದಗುಚ್ಛಗಳು ತಮ್ಮದೇ ಆದ ಸ್ಥಾನವನ್ನು ಪಡೆದಿರುತ್ತವೆ ಮತ್ತು ಇವುಗಳನ್ನು ಸರಳವಾಕ್ಯಗಳ ಮೂಲಕ ಸ್ವತಂತ್ರ ಪದಗಳನ್ನಾಗಿ ಬಳಸಬೇಕು.

ಇಂತಹ ಪದಗುಚ್ಛಗಳನ್ನು ಒಂದೆಡೆ ಇಟ್ಟು ಸರಳ ವಾಕ್ಯಗಳನ್ನಾಗಿ ಮಾಡಿ ಒಂದೊಂದು ಉದ್ಧೇಶ ಅಥವಾ ಭಾಗವನ್ನು ಒಂದೊಂದು ಚಿಕ್ಕ ವಾಕ್ಯಗಳ ಮೂಲಕ ತಿಳಿಸಬಹುದು. ನೀವು ಈ ರೀತಿ ಮಾಡಿದ ವಾಕ್ಯಗಳನ್ನು ಮತ್ತೊಮ್ಮೆ ಓದಿ ಅವು ಸರಿಯಾ ಅರ್ಥ ನೀಡುತ್ತಿದೆಯೇ ಎಂದು ಪರಿಶೀಲಿಸಿ. ಇಂತಹ ಸಮಯದಲ್ಲಿ ಸಮಸ್ಯೆ ಎದುರಾದರೆ ದೊಡ್ಡವಾಕ್ಯವನ್ನು ಬೇರೆ ರೀತಿಯಲ್ಲಿ ಸರಳವಾಗಿ ಹೇಳಲು ಪ್ರಯತ್ನಿಸಬೇಕು. ನೀವು ಮಾಡಿದ ಹೊಸ ವಾಕ್ಯಗಳಲ್ಲಿನ ವಿಷಯ ನಿಮಗೆ ಚೆನ್ನಾಗಿ ಅರ್ಥವಾದರೆ ನೀವು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಸರಳ, ಚಿಕ್ಕ,ಸಾಮಾನ್ಯವಾದ ರೀತಿಯಲ್ಲಿ ಅರ್ಥಕೊಡುವಂತೆ ಭಾಷಾಂತರಿಸಿ. ಇದಾದ ಮೇಲೆ ಭಾಷಾಂತರವಾಗಿರುವ ಭಾಷೆಯ ಸಮುದಾಯದಿಂದ ಭಾಷೆಯನ್ನು ಚೆನ್ನಾಗಿ ಬಲ್ಲವರ ಮುಂದೆ ಓದಿ ಎಲ್ಲವೂ ಸರಿಯಾಗಿದೆಯೇ, ಪ್ರತಿಯೊಂದು ಪದದ ಧ್ವನಿ (ಸನ್ನಿವೇಶಕ್ಕೆ ತಕ್ಕ ಸ್ವರ ಉಚ್ಛಾರಣ ಶಬ್ಧವಿದೆಯೇ) ಸರಿಯಾಗಿದೆಯೇ ಎಂದು ದೃಢಪಡಿಸಿಕೊಳ್ಳಿ.

####ನಿಮ್ಮ ಜನರು ಮಾತನಾಡುವ ಸ್ವರ ಉಚ್ಛಾರಣೆಯಂತೆ ಬರೆಯಿರಿ, ಭಾಷಾಂತರ ಮಾಡಿ.

ಸತ್ಯವೇದದ ಪ್ರತಿಯೊಂದು ವಾಕ್ಯಭಾಗವನ್ನು ಚೆನ್ನಾಗಿ ಓದಿ “ಈ ವಾಕ್ಯದಲ್ಲಿ ಬರುವ ಸಂದೇಶ ಎಂತದ್ದು ?” ಎಂದು ತಿಳಿದುಕೊಳ್ಳಿ. ನಂತರ ನಿಮ್ಮ ಭಾಷಾಂತರ ಭಾಷೆಯಲ್ಲಿ ಈ ಸಂದೇಶವನ್ನು ಪರಿಣಾಮಕಾರಿಯಾಗಿ ತಿಳಿಸಲು ಸಾಧ್ಯವಾಗುವಂತೆ ವಾಕ್ಯಭಾಗಗಳು ಅಥವಾ ಅಧ್ಯಾಯಗಳನ್ನು ಭಾಷಾಂತರಿಸಿ

ಉದಾ : ನೀವು ಭಾಷಾಂತರಿಸುತ್ತಿರುವ ವಾಕ್ಯಬಾಗ ಪದ್ಯದ ರೂಪದಲ್ಲಿದ್ದರೆ, ಉದಾಹರಣೆಗೆ ದಾವೀದನ ಕೀರ್ತನೆಗಳು - ಆಗ ಅದೇ ರಚನೆಯ ಮಾದರಿಯಲ್ಲಿ ನಿಮ್ಮ ಭಾಷಾಂತರವಿದ್ದರೆ ನಿಮ್ಮ ಓದುಗರು ಇದೊಂದು ಪದ್ಯಭಾಗ ಎಂದು ಗುರುತಿಸಲು ಸಾಧ್ಯವಾಗುತ್ತದೆ.

ಅಥವಾ ವಾಕ್ಯಬಾಗವು ಜೀವನದ ಉತ್ತಮ ನಡವಳಿಕೆಯ ಬಗ್ಗೆ ಎಚ್ಚರಿಕೆ ಅಥವಾ ಬೋಧನೆಯ ರೂಪದಲ್ಲಿ ಇದ್ದರೆ ಉದಾ : ಹೊಸಒಡಂಬಡಿಕೆಯಲ್ಲಿನ ಪೌಲನ ಪತ್ರಗಳು ನಿಮ್ಮ ಜನರಿಗೆ ಸರಿಯಾದ ಸೂಕ್ತವಾದ ಮಾರ್ಗದರ್ಶನದ ಬೋಧನೆಯ ರೀತಿಯಲ್ಲಿ ಭಾಷಾಂತರಿಸಬೇಕು. ಅಥವಾ ವಾಕ್ಯಭಾಗವು ಗತಿಸಿಹೋದ ಸನ್ನಿವೇಶಗಳ ಕತೆಯಾಗಿದ್ದರೆ ಆಗ ನೀವು ಅದನ್ನು ನಿಜವಾಗಲೂ ನಡೆದ ಘಟನೆಯಂತೆ ಭಾಷಾಂತರಿಸಬೇಕು.

ಸತ್ಯವೇದದಲ್ಲಿ ಇಂತಹ ಅನೇಕ ಕಥೆಗಳು ಇವೆ. ಸರಿಯಾದ ಭಾಷಾಂತರವಾದರೆ ಜನರು ಇದನ್ನು ಓದಿ ಅರ್ಥಮಾಡಿಕೊಂಡು ಪರಸ್ಪರ ಒಬ್ಬರಿಗೊಬ್ಬರು ಈ ಕಥೆಗಳನ್ನು ಹೇಳುವರು, ಕೆಲವೊಮ್ಮೆ ತಮ್ಮದೇ ಧಾಟಿ / ಶೈಲಿಯಲ್ಲಿ ನಿರೂಪಣೆ ಮಾಡಬಹುದು. ಉದಾಹರಣೆಗೆ ಕಥೆಯಲ್ಲಿ ಬರುವ ಸನ್ನಿವೇಶಗಳಿಗೆ ತಕ್ಕಂತೆ ಎಲ್ಲಾ ರೀತಿಯ ಉದ್ಘಾರಗಳು ಆಶ್ಚರ್ಯ, ಭಯ, ಎಚ್ಚರಿಕೆ, ಹೊಗಳಿಕೆ ಖಂಡನೆ ಮುಂತಾದವುಗಳನ್ನು ವ್ಯಕ್ತಪಡಿಸಬಹುದು. ನೀವು ಮಾಡುವ ಭಾಷಾಂತರ ಪರಿಣಾಮಕಾರಿಯಾಗಿ, ಸಹಜವಾಗಿ ನಿಮ್ಮ ಜನರನ್ನು ತಲುಪಬೇಕೆಂದರೆ ಈ ಎಲ್ಲಾ ರೀತಿಯ ಉದ್ಘಾರಗಳನ್ನು ಆಶ್ಚರ್ಯ, ಭಯ, ಎಚ್ಚರಿಕೆ, ಹೊಗಳಿಕೆ ಖಂಡನೆ, ಕೋಪ ಎಲ್ಲವೂ ಬರುವಂತೆ ನೋಡಿಕೊಳ್ಳಬೇಕು. ಇಲ್ಲಿರುವ ಎಲ್ಲಾ ಸಂಗತಿಗಳನ್ನು, ವಿಭಿನ್ನತೆಯನ್ನು ನಿಮ್ಮ ಭಾಷಾಂತರದಲ್ಲಿ ತರಬೇಕೆಂದರೆ ನಿಮ್ಮ ಸುತ್ತಲಿರುವ ಜನರು ಹೇಗೆ ಮಾತನಾಡುತ್ತಾರೆ ಎಂಬುದನ್ನು ಕೇಳಲು, ಬರೆಯಲು ಅಭ್ಯಾಸ ಮಾಡಿ, ಆಗ ಜನರು ಇಂತಹ ಪದಗಳನ್ನು ಯಾವ ಸಂದರ್ಭದಲ್ಲಿ ಮತ್ತು ಏಕೆ ಬಳಸುತ್ತಾರೆ ಎಂಬುದು ತಿಳಿಯುತ್ತದೆ. ಒಳ್ಳೆಯ ಭಾಷಾಂತರವೆಂದರೆ ಭಾಷಾಂತರ ಆಗುತ್ತಿರುವ ಭಾಷೆಯ ಜನರು ತಮ್ಮ ಭಾಷಾ ಸಂಪತ್ತು ಮತ್ತು ಅಭಿವ್ಯಕ್ತಿ ರೂಪಗಳನ್ನು ಸಹಜವಾಗಿ ಹೇಗೆ ಉಪಯೋಗಿಸುತ್ತಾರೆ ಎಂದು ತಿಳಿದಿರುವುದು. ಇಂತಹ ಭಾಷಾಂತರ ಅವರಿಗೆ ಓದಲು ಮತ್ತು ಕೇಳಲು ಸುಲಭವಾಗಿ ಇರುತ್ತದೆ. ಭಾಷಾಂತರದಲ್ಲಿ ಯಾವುದೇ ಅಪರಿಚಿತ ಪದಗಳು ಅಭಾಸವಾದ ಪದಗಳು, ಅಸಂಬದ್ಧ ಪದಗಳು ಇರಬಾರದು. ಉತ್ತಮ ಭಾಷಾಂತರ ನಿಮ್ಮ ಆಪ್ತ ಸ್ನೇಹಿತ/ಳು ಬರೆದ ಪತ್ರದಂತೆ ಸುಲಭವಾಗಿ ಓದಿ ಅರ್ಥಮಾಡಿಕೊಳ್ಳುವಂತೆ ಇರಬೇಕು.

ಆದರೆ ಇದನ್ನು ಗೇಟ್ ವೇ ಭಾಷಾಂತರಕ್ಕಾಗಿ ಮಾಡಬಾರದು.

ಈ ನಿಯಮ ULB ಮತ್ತು UDBಯ “” ಗೇಟ್ ವೇ ಭಾಷಾಂತರಕ್ಕೆ ಅನ್ವಯಿಸುವುದಿಲ್ಲ. ಸತ್ಯವೇದಗಳು ಭಾಷಾಂತರ ಆಗುತ್ತಿರುವ ಭಾಷೆಯು ಸಹಜವಾಗಿ ಇರುವಂತೆ ಕಾಪಾಡಿಕೊಳ್ಳಲು ಬೇಕಾದ ಲಕ್ಷಣಗಳನ್ನು ವಿನ್ಯಾಸಗೊಳಿಸಿದೆ. ಅವು ಸತ್ಯವೇದ ಭಾಷಾಂತರದ ಸಾಧನೆಗಳೇ ಹೊರತು ಅದೇ ಅಂತಿಮ ಸತ್ಯವೇದವಲ್ಲ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ “Translating the ULB and “Translating the UDB” in the Gateway Languages” ಕೈಪಿಡಿಯನ್ನು ನೋಡಿ.


ಸರಿಯಾದ ಬಾಷಾಂತರ ಮಾಡಬೇಕು

Translation Manual :: Defining a Good Translation :: The Qualities of a Good Translation :: Create Accurate Translations

ಸರಿಯಾದ ಭಾಷಾಂತರ

ಸತ್ಯವೇದದ ಸರಿಯಾದ ಭಾಷಾಂತರ ಮಾಡುವುದು ಎಂದರೆ ಮೂಲಭಾಷೆಯ ಭಾಷಾಂತರದಲ್ಲಿರುವ ವಿಚಾರವನ್ನು ಯಥಾವತ್ತಾಗಿ ತಿಳಿಸುವುದು. ಇಲ್ಲಿ ಭಾಷಾಂತರ ಮಾಡಲು ಕೆಲವು ಹಂತಗಳನ್ನು ತಿಳಿಸಿದೆ.

  • ಒಂದು ವಾಕ್ಯಗಳ ಭಾಗವನ್ನು ಓದಿ ಅದರ ಸರಿಯಾದ ಅರ್ಥವನ್ನು ಕಂಡುಕೊಳ್ಳುವುದು.
  • ಮೂಲ ಉದ್ದೇಶವನ್ನು ಗುರುತಿಸುವುದು.
  • ಮೂಲ ಲೇಖಕರ ಉದ್ದೇಶ, ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅನುವಾದಿಸಬೇಕು.

ಅರ್ಥವನ್ನು ಅನಾವರಣಗೊಳಿಸಬೇಕು.


ಚರ್ಚ್ /ಸಭೆಯ ಸಮ್ಮತಿ ಪಡೆಯುವಂತಹ ಭಾಷಾಂತರ ಮಾಡಬೇಕು.

Translation Manual :: Defining a Good Translation :: The Qualities of a Good Translation :: Create Church-Approved Translations

ಚರ್ಚ್ / ಸಭೆಯಿಂದ ಮಾನ್ಯತೆ ಪಡೆದ ಭಾಷಾಂತರ.

ಉತ್ತಮವಾದ ಭಾಷಾಂತರದ ಮೂರು ಮುಖ್ಯ ಗುಣಗಳು ಯಾವುವೆಂದರೆ ಸ್ಪಷ್ಟವಾಗಿರಬೇಕು (ಸ್ಪಷ್ಟ ಭಾಷಾಂತರ ಮಾಡುವುದು ನೋಡಿ, ಸಹಜವಾದ (ಸಹಜವಾದ ಭಾಷಾಂತರ ಮಾಡುವುದು ನೋಡಿ), ಮತ್ತು ನಿರ್ದಿಷ್ಟ (ನಿರ್ದಿಷ್ಟ ವಾದ ಭಾಷಾಂತರ ಮಾಡುವುದು ನೋಡಿ). ಈ ಮೂರೂ ಇಲ್ಲದಿದ್ದರೆ ಭಾಷಾಂತರ ಮಾಡುವಾಗ ಅದು ಪದಗಳು ಮತ್ತು ಪದಗುಚ್ಛಗಳ ಮೇಲೆ ಪರಿಣಾಮ ಬೀರುತ್ತದೆ ಬಾಧಿಸಲ್ಪಡುತ್ತವೆ. ಭಾಷಾಂತರ ಮಾಡುವಾಗ ಈ ಮೂರರಲ್ಲಿ ಒಂದು ಇಲ್ಲದೆ ಪದಗಳನ್ನು ಬಳಸಿ ಅದನ್ನು ಮರುಜೋಡಣೆ ಮಾಡುವಾಗ ಖಂಡಿತವಾಗಿಯೂ ಸಮಸ್ಯೆಯನ್ನು ಉಂಟುಮಾಡುತ್ತವೆ, ಉತ್ತಮ ಭಾಷಾಂತರ ಆಗಲಾರದು. ನಾಲ್ಕನೇ ಗುಣಲಕ್ಷಣವೆಂದರೆ ಚರ್ಚ್ / ಸಭೆಯ ಸಮ್ಮತಿ ಪಡೆದ ಪದಗಳನ್ನು ಉಪಯೋಗಿಸಿರುವ ಬಗ್ಗೆ ಅಷ್ಟೇನೂ ಗಮನ ಕೊಡದೆ ಪ್ರಕ್ರಿಯೆಗಳ ಬಗ್ಗೆ ಗಮನ ಕೊಡುತ್ತದೆ.

ಭಾಷಾಂತರದ ಗುರಿ.

ಸತ್ಯವೇದ ವಾಕ್ಯಭಾಗಗಳನ್ನು ಭಾಷಾಂತರ ಮಾಡುವ ಉದ್ದೇಶ ಅತ್ಯುತ್ತಮ ಗುಣಮಟ್ಟದ ಭಾಷಾಂತರ ಮಾಡುವ ಗುರಿ. ಮಾತ್ರವಲ್ಲದೇ, ಮಾಡಿರುವ ಭಾಷಾಂತರದ ಗುಣಮಟ್ಟವನ್ನು ಚರ್ಚ್ / ಸಭೆಯವರು ಸಮ್ಮತಿಸಿ ಮಾನ್ಯತೆ ನೀಡಿ ಸಭೆಯಲ್ಲಿ ಬಳಸುವ ಒಲವು ತೋರಿಸಬೇಕು. ಅತ್ಯುತ್ತಮ ಭಾಷಾಂತರ ಸ್ಪಷ್ಟ, ಸಹಜ.ನಿರ್ದಿಷ್ಟವಾಗಿರಬೇಕು. ಚರ್ಚ್ / ಸಭೆಯಲ್ಲಿ ಬಳಸುವ ಭಾಷಾಂತರ ಸಭೆಯವರ ಒಲವು ಮತ್ತು ಸಮ್ಮತಿಯನ್ನು ಪಡೆಯಲೇಬೇಕು.

ಚರ್ಚ್ / ಸಭೆಯ ಮಾನ್ಯತೆ / ಸಮ್ಮತಿಪಡೆಯುವಂತಹ ಭಾಷಾಂತರವನ್ನು ಹೇಗೆ ಮಾಡುವುದು?

ಚರ್ಚ್ / ಸಭೆಯ ಮಾನ್ಯತೆ / ಸಮ್ಮತಿಪಡೆಯುವಂತಹ ಭಾಷಾಂತರ ಪರಿಶೀಲಿಸಿ ವಿತರಿಸುವ ಪ್ರಕ್ರಿಯೆಯನ್ನು ಒಳಗೊಂಡಿದೆ. ಚರ್ಚ್ / ಸಭೆಯ ಕಾರ್ಯಜಾಲಗಳು ಇಂತಹ ಪ್ರಕ್ರಿಯೆಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡರೆ ಭಾಷಾಂತರಗಳಿಗೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ.

ಯಾವುದೇ ಸತ್ಯವೇದದ ಭಾಷಾಂತರ ಕಾರ್ಯವನ್ನು ಪ್ರಾರಂಭಿಸುವ ಮೊದಲು ಚರ್ಚ್ ನ ಕಾರ್ಯಜಾಲವು ಎಷ್ಟು ಸಾಧ್ಯವೋ ಅಷ್ಟು ಚರ್ಚ್ ಗಳನ್ನು ಈ ಪ್ರಕ್ರಿಯೆಯಲ್ಲಿ ಭಾಗಿಗಳಾಗುವಂತೆ ನೋಡಿಕೊಳ್ಳಬೇಕು ಮತ್ತು ಅವರವರ ಚರ್ಚ್ ಗಳಲ್ಲಿ ಇರುವ ಸೂಕ್ತ ಜನರನ್ನು ಭಾಷಾಂತರ ತಂಡದಲ್ಲಿ ಸೇರಿಸಿ ಭಾಷಾಂತರ ಕಾರ್ಯವನ್ನು ಬಲಪಡಿಸಿ ಉತ್ತಮ ಭಾಷಾಂತರ ಮಾಡಲು ಸಹಕರಿಸಬೇಕು. ಅಂತಹ ವ್ಯಕ್ತಿಗಳೊಂದಿಗೆ ಮಾತನಾಡಿ ಅವರ ಅಭಿಪ್ರಾಯಗಳನ್ನು, ಸಲಹೆಗಳನ್ನು ಪಡೆದು ಭಾಷಾಂತರ ಕಾರ್ಯ ಯೋಜನೆಯ ಗುರಿ ಮತ್ತು ಪ್ರಕ್ರಿಯೆಗಳನ್ನು ಸಬಲಗೊಳಿಸಬೇಕು.

ಚರ್ಚ್ / ಸಭೆ ಈ ಭಾಷಾಂತರ ಕಾರ್ಯದಲ್ಲಿ ನೇರವಾಗಿ ಸಕ್ರಿಯವಾಗಿ ಭಾಗವಹಿಸಿ ಮುನ್ನಡೆಸಬೇಕು. ಸಹಕಾರಿಯಾಗಿರಬೇಕು ಎಂದೇನೂ ಇಲ್ಲ.ಆದರೆ ಯಾರು ಈ ಭಾಷಾಂತರ ಕಾರ್ಯವನ್ನು ಕೈಗೊಳ್ಳುತ್ತಾರೋ ಅವರ ಬಗ್ಗೆ ದೃಢೀಕರಣವನ್ನು ಚರ್ಚ್ ನ ಕಾರ್ಯಜಾಲವು ನೀಡಬೇಕು. ವಿಶೇಷವಾಗಿ ಈ ಭಾಷಾಂತರ ಪ್ರಕ್ರಿಯೆ ಪ್ರಾರಂಭವಾಗುವ ಮೊದಲೇ ಕಾರ್ಯಗತವಾಗಬೇಕು.

ಚರ್ಚ್ / ಸಭೆಯ ಮಾನ್ಯತೆ ಮತ್ತು ಪರಿಶೀಲನೆಯ ಹಂತಗಳು.

ಭಾಷಾಂತರವನ್ನು ಚರ್ಚ್ / ಸಭೆಯ ಮಾನ್ಯತೆ ಪಡೆಯುವುದು. ಪರಿಶೀಲನಾ ಹಂತದಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿತವಾಗುತ್ತದೆ. ಚರ್ಚ್ / ಸಭೆಯ ಮಾನ್ಯತೆ ಸಿಗಬೇಕೆಂದರೆ ಪರಿಶೀಲನಾ ಕಾರ್ಯದಲ್ಲಿ ವಿವರವಾದ ಭಾಷಾಂತರಕ್ಕೆ ಹಂತಗಳನ್ನು ಹೊಂದುವ ಅಗತ್ಯವಿದೆ.

  • ಮೊದಲ ಹಂತ - ಸಭೆ ಅಥವಾ ಚರ್ಚ್ ನಿಂದ ಮಾನ್ಯತೆ ಪಡೆದ ಭಾಷಾಂತರ ತಂಡ ಭಾಷಾಂತರವನ್ನು ಪರಿಶೀಲಿಸಿ ಸಮ್ಮತಿಸಿ ಮಾನ್ಯತೆ ನೀಡಬೇಕು.
  • ಎರಡನೇ ಹಂತ – ಸ್ಥಳೀಯ ಚರ್ಚ್ / ಸಭೆಯ ನಾಯಕರು ಮತ್ತು ಸಭಾಪಾಲಕರು ಈ ಭಾಷಾಂತರವನ್ನು ಸಮ್ಮತಿಸಿ ಮಾನ್ಯತೆ ನೀಡಬೇಕು
  • ಮೂರನೇ ಹಂತ – ಹೀಗೆ ಅನೇಕ ಸಭೆ /ಚರ್ಚ್ ಗಳಿಂದ ಭಾಷಾಂತರಕ್ಕೆ ಮಾನ್ಯತೆ ಪಡೆಯಬೇಕು.

ಪ್ರತಿಯೊಂದು ಹಂತದಲ್ಲೂ ಈ ಭಾಷಾಂತರ ಪ್ರಕ್ರಿಯೆಯನ್ನು ಮನ್ನಡೆಸುವವರು ಪ್ರತಿಯೊಂದು ಅಭಿಪ್ರಾಯವನ್ನು ಭಾಗವಹಿಸುವಿಕೆಯನ್ನು ಚರ್ಚ್ ನ ಕಾರ್ಯ ಜಾಲಗಳು ಪ್ರೋತ್ಸಾಹಿಸಿ ಸ್ವೀಕರಿಸ ಬೇಕು. ಹೀಗೆ ಅನೇಕ ಚರ್ಚ್ ಗಳ ಭಾಗವಹಿಸುವಿಕೆಯಿಂದ ಭಾಷಾಂತರ ಪ್ರಕ್ರಿಯೆ ಉತ್ತಮಗೊಳ್ಳುವುದರೊಂದಿಗೆ ಚರ್ಚ್ ಗೆ ಭಾಷಾಂತರದ ಹೊಣೆಗಾರಿಕೆಯನ್ನು ವಿತರಿಸಿ ವಹಿಸಿದಂತಾಗುತ್ತದೆ. ಇಂತಹ ಎಲ್ಲಾ ಪ್ರಕ್ರಿಯೆಗಳಿಂದ ಭಾಷಾಂತರಕ್ಕೆ ಯಾವುದೇ ಅಡೆತಡೆಗಳು ಬರುವುದಿಲ್ಲ.ಮತ್ತು ಚರ್ಚ್ ನಿಂದ ಸಬಲತೆಯನ್ನು,ಪ್ರೋತ್ಸಾಹ, ಪ್ರೇರಣೆಯನ್ನು ಪಡೆದಂತಾಗುತ್ತದೆ.


ವಿಶ್ವಾಸಾರ್ಹ ಭಾಷಾಂತರಗಳನ್ನು ಮಾಡುವುದು.

Translation Manual :: Defining a Good Translation :: The Qualities of a Good Translation :: Create Faithful Translations

ವಿಶ್ವಾಸಾರ್ಹ ಭಾಷಾಂತರಗಳು

ಸತ್ಯವೇದದ ವಿಶ್ವಾಸಾರ್ಹ ವಾದ ಭಾಷಾಂತರವಾಗ ಬೇಕೆಂದರೆ ನೀವು ರಾಜಕೀಯ, ಮತಾನುಸಾರ, ಭಾವನಾತ್ಮಕ, ಸಾಮಾಜಿಕ, ಸಾಂಸ್ಕೃತಿಕ ಅಥವಾ ದೈವಜ್ಞಾನ ಶಾಸ್ತ್ರವು ಯಾವುದರಿಂದಲೂ ಪ್ರಭಾವಿತರಾಗದೆ, ಪುರ್ವಾಗ್ರಹ ಪೀಡಿತರಾಗದೇ ಭಾಷಾಂತರ ಮಾಡಬೇಕು. ಮೂಲ ಸತ್ಯವೇದದಂತೆ ಭಾಷೆಯು ಮುಖ್ಯ ಪದಗಳನ್ನು ಬಳಸಿ ವಿಶ್ವಾಸಾರ್ಹ ಭಾಷಾಂತರಮಾಡಿ. ತಂದೆ ದೇವರು ಮತ್ತು ತಂದೆ ಮಗ ಇವರ ನಡುವಿನ ಸಂಬಂಧವನ್ನು ವಿವರಿಸಲು ಸತ್ಯವೇದದ ಪರಿಭಾಷೆಯನ್ನು ಬಳಸುವಾಗ ಅದಕ್ಕೆ ಸಮಾನವಾದ ಪದಗಳನ್ನು ಭಾಷಾಂತರಿಸುವ ಭಾಷೆಯಲ್ಲಿ ಬಳಸಬೇಕು.

ಇವುಗಳ ವಿವರವನ್ನು ಅಡಿ ಟಿಪ್ಪಣಿಯಲ್ಲಿ ಅಥವಾ ಪೂರಕ ಸಂಪನ್ಮೂಲಗಳಾಗಿ ಬಳಸಬಹುದು. ಸತ್ಯವೇದ ಭಾಷಾಂತರಗಾರರಾಗಿ ನಿಮ್ಮ ಉದ್ದೇಶವೇನೆಂದರೆ ಮೂಲ ಪ್ರತಿಯಲ್ಲಿ ಬರಹಗಾರರು ಬರೆದಿರುವ ಸಂದೇಶವನ್ನು ಯಾವ ಬದಲಾವಣೆಯೂ ಇಲ್ಲದೆ ತಿಳಿಸುವುದೇ ಆಗಿರುತ್ತದೆ. ಅಂದರೆ ನೀವು ಅರ್ಥಮಾಡಿಕೊಂಡಂತೆ ನಿಮ್ಮದೇ ಆದ ಸಂದೇಶವನ್ನು ಬರೆಯಬಾರದು, ಹಾಗೆಯೇ ನಿಮ್ಮ ಆಲೋಚನೆಯಂತೆ ಸತ್ಯವೇದದ ಸಂದೇಶವನ್ನು ತಿಳಿಸಬಾರದುನಿಮ್ಮ ಸಭೆ /ಚರ್ಚ್ ನಿಮ್ಮಂತೆ ಯೋಚಿಸಬೇಕೆಂದು ನಿರೀಕ್ಷಿಸಬಾರದು. ಯಾವುದೇ ಸತ್ಯವೇದದ ವಾಕ್ಯಭಾಗವನ್ನು, ಅದರ ಅರ್ಥವನ್ನು ಸರಿಯಾಗಿ ನಿಖರವಾಗವಾಗಿ ತಿಳಿಸುವ, ಅದು ಏನು ಹೇಳುತ್ತದೆ,ಅದರ ಅರ್ಥವೇನು ಎಂಬುದನ್ನು ಮಾತ್ರ ಮಾಡಬೇಕು.

ನಿಮ್ಮದೇ ಆದ ಅಭಿಪ್ರಾಯಗಳನ್ನು ಅನಿಸಿಕೆಗಳನ್ನು ಸೇರಿಸುವ ಯಾವುದೇ ಆಮಿಶಕ್ಕೆ ಒಳಗಾಗ ಬಾರದು. ಸತ್ಯವೇದದ ವಾಕ್ಯ ವಿಷಯಗಳನ್ನು ತಿಳಿಸುವಾಗ ಯಾವುದೇ ಹೊಸ ಅರ್ಥವನ್ನು ಸೇರಿಸುವುದಾಗಲೀ ವಾಕ್ಯಭಾಗದಲ್ಲಿ ಇಲ್ಲದೆ ಇರುವ ವಿಷಯಗಳನ್ನು, ಪದಗಳನ್ನು ಸೇರಿಸಬಾರದು. (ಸತ್ಯವೇದದಲ್ಲಿರುವ ಸಂದೇಶದ ವಾಕ್ಯ ಭಾಗವು ದೃಢ ವಿಶ್ವಾಸದ ಮಾಹಿತಿಗಳನ್ನು ಒಳಗೊಂಡಿರುತ್ತದೆ.) (ನೋಡಿ ಅಂಗೀಕರಿಸಿದ ಜ್ಞಾನ ಮತ್ತು ದೃಢ ವಿಶ್ವಾಸದ ಮಾಹಿತಿ)

ಸತ್ಯವೇದದ ಮೂಲ ಭಾಷೆಯ ಶಬ್ಧಕೋಶಕ್ಕೆ ನಿಷ್ಠವಾಗಿರುವ ಪ್ರಮುಖ ಪದಗಳನ್ನು ಸಹ ನೀವೇ ಬಳಸಬೇಕು. ಪದಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಅದರ ವ್ಯಾಖ್ಯಾನವನ್ನು ಓದಬೇಕು. ಮುಖ್ಯ ಪದಗಳೆಲ್ಲವೂ ಒಂದೇ ಅರ್ಥ ನೀಡುವಂತೆ ಅದನ್ನು ಸರಿಯಾದ ರೀತಿಯಲ್ಲಿ ಅನುವಾದ ಮಾಡಿರಿ. ನಿಮ್ಮ ನಾಯಕರನ್ನು ಸಭೆಯ ಪಾಲಕರನ್ನು ಮೆಚ್ಚುಸುವ ಸಲುವಾಗಿ ಬೇರೆ ಬೇರೆ ರೀತಿಯಲ್ಲಿ ಅದನ್ನು ಭಾಷಾಂತರ ಮಾಡಬೇಡಿರಿ.

ಎಲ್ಲಾ ಸಮಯದಲ್ಲಿ ವಿಶ್ವಾಸಾರ್ಹ ಭಾಷಾಂತರ ಮಾಡುವುದು ಕಷ್ಟವಾಗಬಹುದು. ಅದಕ್ಕೆ ಕಾರಣಗಳು:

  1. ಕೇವಲ ನಿಮ್ಮ ಸಭೆಯಲ್ಲಿ ವಾಕ್ಯ ಭಾಗದ ಅರ್ಥೈಸುವಿಕೆಗೆ ನೀವು ಹೊಂದಿಕೊಂಡಿದ್ದು ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಬಹುದು ಎಂಬ ಸಂಗತಿ ನಿಮಗೆ ತಿಳಿಯದಿರಬಹುದು

    • ಉದಾಹರಣೆ” ನೀವು ದೀಕ್ಷಾಸ್ನಾನ ಎಂಬ ಪದವನ್ನು ಅನುವಾದ ಮಾಡುವಾಗ ನೀವು ಅದನ್ನು “ಚಿಮುಕಿಸುವುದು” ಎಂಬ ಅರ್ಥವನ್ನು ನೀಡುವ ಪದವನ್ನು ಉಪಯೋಗಿಸಲು ಯೋಚಿಸಬೇಕು, ಇದಕ್ಕೆ ಕಾರಣ ಸಭೆಯಲ್ಲಿ ಅದನ್ನು ಹಾಗೆಯೇ ಅನುಸರಿಸುತ್ತಾರೆ. ಆದರೆ ಭಾಷಾಂತರದ ಇತರೆ ಪದಗಳನ್ನು ಅಂದರೆ “ಮುಳುಗುವುದು”, “ಮುಳುಗಿಸುವುದು”, ತೊಳೆಯುವುದು ಅಥವಾ “ಶುದ್ಧೀಕರಿಸುವುದು” ಎಂಬ ಬೇರೆಬೇರೆ ಅರ್ಥವನ್ನು ನೀಡುತ್ತದೆ ಎಂದು ತಿಳಿದುಬರುತ್ತದೆ
  2. ಸತ್ಯವೇದದ ವಾಖ್ಯಭಾಗವನ್ನು ಅದು ಬರೆಯಲಾದ ಅರ್ಥದ ಪ್ರಕಾರ ಅನುವಾದ ಮಾಡದೆ ನಿಮ್ಮ ಸಂಸ್ಕೃತಿಗೆ ಅನುಗುಣವಾಗಿ ಅನುವಾದ ಮಾಡಲು ಬಯಸಬಹುದು.

    • ಉದಾಹರಣೆ: 1 ಕೊರಿಂಥ 14:34 ರಲ್ಲಿ ಸ್ತ್ರೀಯರು ಸಭೆಯಲ್ಲಿ ಮಾತನಾಡಬಾರದು ಎಂದು ಪೌಲನು ತಿಳಿಸಿದ್ದಾನೆ. ಆದರೆ ಉತ್ತರ ಅಮೇರಿಕಾದಲ್ಲಿ ಸ್ತ್ರೀಯರು ಸಭೆಯಲ್ಲಿ ವಾಕ್ಯ ಹಂಚುವುದು ಸಹಜ. ಅವರಿಗೆ ಆ ಅಧಿಕಾರವಿದೆ. ಹೀಗಿರುವಾಗ ಅನುವಾದ ಮಾಡುವವನು ಆ ವಾಕ್ಯ ಭಾಗದ ಸರಿಯಾದ ಅರ್ಥ ಮತ್ತು ಅಂದಿನ ಸನ್ನಿವೇಶವನ್ನು ಸರಿಯಾಗಿ ವಿವರಿಸಿ ಅನುವಾದ ಮಾಡುತ್ತಾನೆ.
  3. ಸತ್ಯವೇದದಲ್ಲಿರುವ ಕೆಲವು ಸಂಗತಿಗಳು ನಿಮಗೆ ಸರಿ ಕಾಣದೆ ಇದ್ದು ಅದನ್ನು ಬದಲಾಯಿಸಬೇಕೆಂಬ ಯೋಚನೆ ಮೂಡಿಬರಬಹುದು

    • ಉದಾಹರಣೆ: ಯೋಹಾನ 6:53 ರಲ್ಲಿ ಇರುವ ಹಾಗೆ, “ನೀವು ಮನುಷ್ಯಕುಮಾರನ ಮಾಂಸವನ್ನು ತಿನ್ನದ ಮತ್ತು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ” ಎನ್ನುವ ಮಾತು ನಿಮಗೆ ಸರಿಕಾಣದೆ ಹೋಗಬಹುದು. ಇದು ನಿಮಗೆ ವಿಭಿನ್ನವಾಗಿ ಕಾಣಬಹುದು. ಆದರೆ ನೀವು ಅದನ್ನು ವಿಶ್ವಾಸರ್ಹವಾಗಿ ಅನುವಾದ ಮಾಡಬೇಕು.
  4. ನೀವು ಈ ರೀತಿಯಾಗಿ ಸತ್ಯವೇದದಲ್ಲಿ ಇರುವ ಸಂಗತಿಗಳನ್ನು ವಿಶ್ವಾಸಾರ್ಹವಾಗಿ ಮಾಡುವ ಅನುವಾದದ ನಿಮಿತ್ತ ನಿಮ್ಮ ಊರುಗಳಲ್ಲಿ ಜನರು ಏನನ್ನುತ್ತಾರೆ ಎಂದು ಭಯಪಡಬಹುದು.

    • ಉದಾಹರಣೆ: ಮತ್ತಾಯ 3:17, “ಇವನು ಪ್ರೀಯನಾಗಿರುವ ನನ್ನ ಮಗನು ನಾನು ಇವನ್ನನ್ನು ಮೆಚ್ಚಿದ್ದೇನೆ” ಎನ್ನುವ ವಾಕ್ಯದಲ್ಲಿ “ಮಗನು” ಎಂಬ ಅರ್ಥ ನೀಡದ ಪದವನ್ನು ಬೇರೆ ರೀತಿಯಲ್ಲಿ ಅನುವಾದ ಮಾಡಲು ಮನಸ್ಸಾಗಬಹುದು. ಆದರೆ ಸತ್ಯವೆದದಲ್ಲಿ ಇರುವ ಸಂಗತಿಗ ಅರ್ಥಗಳನ್ನು ಬದಲಾಯಿಸಲು ನಿಮಗೆ ಯಾವ ಅಧಿಕಾರವಿಲ್ಲ ಎಂದು ಮರೆಯಬಾರದು.
  5. ವಾಕ್ಯ ಭಾಗಕ್ಕೆ ಸಂಬಂಧಿಸಿದಂತೆ ನಿಮಗೆ ಹೆಚ್ಚಿನ ಮಾಹಿತಿ ತಿಳಿದಿದ್ದು ಅನುವಾದ ಮಾಡುವಾಗ ಅದನ್ನು ಉಪಯೋಗಿಸಬಹುದು ಎಂದು ಅಂದುಕೊಳ್ಳಬಹುದು.

    • ಉದಾಹರಣೆ: ”ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮಾಡುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ ಎಂದು ಮಾರ್ಕ 10:11 ರಲ್ಲಿ ಕಾಣುತ್ತೇವೆ. ಅದೇ ರೀತಿಯಲ್ಲಿ “ಹಾದರದ ಕಾರಣದಿಂದಲ್ಲದೆ…” ಎನ್ನುವ ವಾಕ್ಯವು ಸಹ ನಿಮಗೆ ತಿಳಿದದೆ. ಆದರೆ ಅನುವಾದ ಮಾಡುವಾಗ ಮತ್ತಾಯನ ಸುವಾರ್ತೆಯ ವಾಕ್ಯಭಾಗವನ್ನು ಮಾರ್ಕನ ಸುವಾರ್ತೆಯಲ್ಲಿ ಸೇರಿಸಬೇಡಿರಿ. ನಿಮ್ಮ ಸಭೆಯ ಬೋಧನೆಗಳನ್ನು ಸಹ ಇಲ್ಲಿ ಸೇರಿಸುವುದು ಸೂಕ್ತವಲ್ಲ.

ಇವೆಲ್ಲವುಗಳನ್ನು ಅದರಲ್ಲೂ ಮುಖ್ಯವಾಗಿ ನೀವು ತಿಳಿಯದ ಸಂಗತಿಗಳನ್ನು ಅರ್ಥಮಾಡಿಕೊಳ್ಳಬೇಕಾಗಿದ್ದಲ್ಲಿ, ಅನುವಾದಕ್ಕೆ ಸಂಬಂಧಿಸಿದ ಟಿಪ್ಪಣಿಗಳನ್ನು ಓದತಕ್ಕದ್ದು. (ನೋಡಿ http://ufw.io/tn/), ಅನುವಾದದ ಪದಗಳಿಗಾಗಿ (ನೋಡಿ http://ufw.io/tw/), ಅನ್ ಫೋಲ್ಡಿಂಗ್ (ಪ್ರಕಟವಾಗುವ) ಪದಗಳ ಸರಳವಾದ ಪಠೄ (ನೋಡಿ http://ufw.io/udb) ಅಥವಾ ಅನುವಾದಗಳನ್ನು ಮಾಡಲು ಸಹಾಯ ಮಾಡುವ ಇತರ ಸಂಗತಿಗಳು. ಇವುಗಳ ಮೂಲಕವಾಗಿ ಸತ್ಯವೇದ ಭಾಗಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಹೀಗೆ ನೀವು ಅನುವಾದವನ್ನು ಸ್ಪಷ್ಟವಾಗಿ ಮಾಡಲು ಅನುಕೂಲವಾಗುದು.

ನೀವು ಇದರ ವಿಡಿಯೋವನ್ನು ನೋದಬೇಕಾಗಿದ್ದಲ್ಲಿ (http://ufw.io/guidelines_faithful) ನೋಡಿ


ವಿಶ್ವಾಸಾರ್ಹ ಭಾಷಾಂತರಗಳನ್ನು ಮಾಡುವುದು.

Translation Manual :: Defining a Good Translation :: The Qualities of a Good Translation :: Create Faithful Translations
ದೇವರ ಮಗ ಮತ್ತು ತಂದೆ ದೇವರು.
Translation Manual :: Defining a Good Translation :: The Qualities of a Good Translation :: Create Faithful Translations :: Son of God and God the Father

###ದೇವರು ಒಬ್ಬನೆ, ಆತನು ತ್ರೈಯಕತ್ವದಲ್ಲಿ ಅಂದರೆ ತಂದೆ, ಮಗ ಮತ್ತು ಪವಿತ್ರಾತ್ಮನ ಹಾಗೆ ಇದ್ದಾನೆ.

ಸತ್ಯವೇದ ನಮಗೆ ದೇವರು ಒಬ್ಬನೇ ಎಂದು ಬೋಧಿಸುತ್ತದೆ.

ಹಳೆ ಒಡಂಬಡಿಕೆಯಲ್ಲಿ :

ಯೆಹೋವನ, ಹೊರತು ಬೇರೆ ದೇವರಿಲ್ಲ ! ಆತನೇ ದೇವರು. (I ಅರಸು 8:60 ULB)

ಹೊಸ ಒಡಂಬಡಿಕೆಯಲ್ಲಿ :

ಯೇಸು ಹೇಳಿದ್ದು------ ಒಬ್ಬನೇ ಸತ್ಯದೇವವಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನು ತಿಳಿಯುವುದೇ ನಿತ್ಯ ಜೀವವು. (ಯೋಹಾನ 17:3 ULB)

ಇದರೊಂದಿಗೆ ಇಲ್ಲಿ ಕೊಟ್ಟಿರುವ ವಾಕ್ಯಭಾಗಗಳನ್ನು ಓದಿ ನೋಡಿ. ಧರ್ಮೋಪದೇಶಕಾಂಡ 4:35 ಎಫೇಸ 4:5-6, 1 ತಿಮೋಥಿ 2:5, ಯಾಕೋಬ2:19)

ಹಳೆ ಒಡಂಬಡಿಕೆಯಲ್ಲಿ ಮೂವರು ದೇವರ ಮನುಷ್ಯರನ್ನು ಪ್ರಕಟಿಸುತ್ತದೆ.

ದೇವರುಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು -->ದೇವರ ಆತ್ಮವು ಜಲಸಮೂಹಗಳ ಮೇಲೆ ಚಲಿಸುತ್ತಿತ್ತು. " ಆಮೇಲೆ ದೇವರು ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟು ಮಾಡೋಣ." (ಆದಿಕಾಂಡ 1:26 ULB)

ಈ ಅಂತ್ಯ ದಿನಗಳಲ್ಲಿ ದೇವರು ತನ್ನ ಮಗನ..ಮುಖಾಂತರ ಮಾತನಾಡಿದ್ದಾನೆ ಮತ್ತು ಆತನ ಮೂಲಕವೇ ಜಗತ್ತನ್ನು ಉಂಟುಮಾಡಿದನು. ಆತನ ಮಗನು.. ದೇವರ ಪ್ರಭಾವದ ಪ್ರಕಾಶವೂ, ಆತನ ತತ್ವದ ಮೂರ್ತಿಯೂ ತನ್ನ ಶಕ್ತಿಯ ವಾಕ್ಯದಿಂದ ಆಧಾರವಾಗಿದ್ದಾನೆ ಎಂದು ತನ್ನ ಮಗನ..ಬಗ್ಗೆ ಹೇಳುತ್ತಾನೆ. " ಕರ್ತನೇ ಆದಿಯಲ್ಲಿ ನೀನು ಭೂಮಿಗೆ ಆಸ್ತಿವಾರಹಾಕಿದೆ ‘ ಗಗನ ಮಂಡಲವು ನಿನ್ನ ಕೈಕೆಲಸವಾಗಿದೆ " (ಇಬ್ರಿಯ1:2-3, ಮತ್ತು 8-10 ULB Psalm 102:25 ವಾಕ್ಯಗಳನ್ನು ತಿಳಿಸುತ್ತದೆ)

####ಹೊಸ ಒಡಂಬಡಿಕೆಯಲ್ಲಿ ಯೂ ಸಹ ದೇವರು ತ್ರೈಯತ್ವದಲ್ಲಿ ಮೂರು ವ್ಯಕ್ತಿಗಳಲ್ಲಿ ಇರುವಂತೆ ಹೇಳುವುದನ್ನು ಎಲ್ಲಾ ಚರ್ಚ್/ಸಭೆಯಲ್ಲಿ ದೃಢಪಡಿಸಿ ಹೇಳುತ್ತಾರೆ.

ತಂದೆ, ಮಗ ಮತ್ತು ಪವಿತ್ರಾತ್ಮ

ನೀನು ಹೊರಟುಹೋಗಿ ಎಲ್ಲಾ ದೇಶದ ಜನರನ್ನು ಶಿಷ್ಯರನ್ನಾಗಿ ಮಾಡಿರಿ ಅವರಿಗೆ ತಂದೆಯ, ಮಗನ, ಮತ್ತು ಪವಿತ್ರಾತ್ಮನ ." ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ " (ಮತ್ತಾಯ 28:19 ULB)

ಆತನು ತನ್ನ ಮಗನನ್ನು ,ಸ್ತ್ರೀಯಲ್ಲಿ ಹುಟ್ಟಿದವನಾಗಿರಲು ಕಳುಹಿಸಿಕೊಟ್ಟನು..... ದೇವರು ಅಪ್ಪಾ ತಂದೆಯೇ ಎಂದು ಕೂಗುವ ತನ್ನ ಮಗನ ಆತ್ಮವನ್ನು ನಮ್ಮ ಹೃದಯಗಳಲ್ಲಿ, ಕಳುಹಿಸಿಕೊಟ್ಟನು, "ಅಬ್ಬಾ, ತಂದೆಯೇ." (ಗಲಾತ್ಯ 4:4-6 ULB)

ಈ ಕೆಳಗೆಕೊಟ್ಟಿರುವ ವಾಕ್ಯಭಾಗಗಳನ್ನು ಓದಿನೋಡಿ. ಯೋಹಾನ 14:16-17, 1 ಪೇತ್ರ 1:2

ನಮಗಾದರೋ ಒಬ್ಬನೇ ದೇವರಿದ್ದಾನೆ ಎಂಬುದು ಸತ್ಯವೇದ ತಿಳಿಸಿದೆ.

ನಮಗಾದರೋ ಒಬ್ಬನೇ ದೇವರಿದ್ದಾನೆ ಆತನು ತಂದೆಯೆಂಬಾತನೇ… (1 ಕೊರಿಂಥ 8:6 ULB) ಆತನು ಸಮಸ್ತಕ್ಕೂ ಕಾರಣನು.

ತೋಮನು ಆತನಿಗೆ – ನನ್ನ ಸ್ವಾಮಿ ನನ್ನ ದೇವರು ! ಎಂದು ಹೇಳಿದನು ." ಯೇಸುಅವನಿಗೆ, ನೀನು ನನ್ನನ್ನು ನೋಡಿದ್ದರಿಂದ ನಂಬಿದ್ದೀ. "ನೋಡದೆ ನಂಬಿದವರು ಧನ್ಯರು ಎಂದು ಹೇಳಿದನು." (ಯೋಹಾನ 20:28-29 ULB)
ಆಗ ಪೇತ್ರನು ಅನನೀಯಾ, ಸೈತಾನನು ನಿನ್ನ ಹೃದಯದಲ್ಲಿ ತುಂಬಿಕೊಂಡಿ -ದ್ದೇನು ? ನೀನು ಏಕೆ ಆ ಹೊಲದ ಕ್ರಯದಲ್ಲಿ ಕೆಲವನ್ನು ಬಚ್ಚಿಟ್ಟುಕೊಂಡು ಪವಿತ್ರಾತ್ಮನನ್ನು ವಂಚಿಸಬೇಕೆಂದಿದ್ದೀ ? ನೀನು ಸುಳ್ಳು ಹೇಳಿದ್ದು ಮನುಷ್ಯರಿಗಲ್ಲ ದೇವರಿಗೆ .ಸುಳ್ಳಾಡಿದ್ದಿ " (ಆ.ಕೃ 5:3-4 ULB)

ಪ್ರತಿಯೊಬ್ಬ ವ್ಯಕ್ತಿಯೂ ಇತರ ಇಬ್ಬರು ವ್ಯಕ್ತಿಗಳಿಗಿಂತ ಭಿನ್ನವಾಗಿರುತ್ತಾನೆ. ಎಲ್ಲಾ ಮೂರು ವ್ಯಕ್ತಿಗಳು ಒಂದೇ ಸಮಯದಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳಬಹುದು. ಈ ಕೆಳಗಿನ ವಾಕ್ಯಗಳಲ್ಲಿ ದೇವರು ತನ್ನ ಮಗನಿಗೆ ದೀಕ್ಷಾಸ್ನಾನ ಆಗುವಾಗ ದೇವರ ಆತ್ಮವು ಕೆಳಗಿಳಿದು ಬಂದಿತು ಮತ್ತು ತಂದೆ ದೇವರು ಆಕಾಶದಿಂದ ಮಾತನಾಡಿದನು

ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡ ಕೂಡಲೇ ಯೇಸುನೀರಿನಿಂದ ಮೇಲೆ ಬಂದನು. ದೇವರ ಆತ್ಮ ತನ್ನ ಮೇಲೆ ಪಾರಿವಾಳದ ಹಾಗೆ ಇಳಿದು ಬರುವುದನ್ನು ಕಂಡನು, ಆಗ, “ಈತನು ಪ್ರಿಯನಾಗಿರುವ ನನ್ನ ಮಗನು, " ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಯಾಯಿತು …” [ತಂದೆಯ]. (ಮತ್ತಾಯ 3:16-17 ULB)


ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.
Translation Manual :: Defining a Good Translation :: The Qualities of a Good Translation :: Create Faithful Translations :: Translating Son and Father

ದೇವರನ್ನು ಕುರಿತು ಉಲ್ಲೇಖಿಸಿ ಮಾತನಾಡುವಾಗ Door43 ಈ ಪರಿಕಲ್ಪನೆಗಳು ಸತ್ಯವೇದದ ಭಾಷಾಂತ್ರವನ್ನು ಪ್ರತಿನಿಧಿಸಿ ಬೆಂಬಲಿಸುತ್ತದೆ.

###ಸತ್ಯವೇದದ ಸಾಕ್ಷಿಗಳು

  • " ತಂದೆ " ಮತ್ತು "ಮಗ "ಎಂಬ ಪದಗಳಿಂದ ದೇವರು ತನ್ನನ್ನು ಸತ್ಯವೇದದಲ್ಲಿ ಗುರುತಿಸಿಕೊಂಡಿದ್ದಾನೆ ಹಾಗೂ ಕರೆದುಕೊಂಡಿದ್ದಾನೆ

ಸತ್ಯವೇದವು ದೇವರು ತನ್ನ ಮಗನನನ್ನು “ಯೇಸು“ ಎಂದು ಕರೆದ ಬಗ್ಗೆ ತಿಳಿಸುತ್ತದೆ.

ಯೇಸುವಿಗೆ ದೀಕ್ಷಾಸ್ನಾನವಾದ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಆಕಾಶವು ತೆರೆಯಿತು ಮತ್ತು ದೇವರ ಆತ್ಮವು ಪಾರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವುದನ್ನು ಕಂಡನು. ಆಗ "ಈತನು ಪ್ರಿಯನಾಗಿರುವ ನನ್ನ ಮಗನು . ಈತನನ್ನು ನಾನು ಮೆಚ್ಚಿದ್ದೇನೆ.ಎಂದು ಆಕಾಶವಾಣಿ ಆಯಿತು. “ಈತನನ್ನು ನಾನು ಮೆಚ್ಚಿದ್ದೇನೆ.” (ಮತ್ತಾಯ 3:16-17 ULB)

ಸತ್ಯವೇದದಲ್ಲಿ ಯೇಸು ದೇವರನ್ನು ತನ್ನ ತಂದೆ ಎಂದು ಕರೆದಿದ್ದಾನೆ.

ಯೇಸು ಹೇಳಿದ್ದೇನೆಂದರೆ, "ಪರಲೋಕ ಭೂಲೋಕಗಳ ಒಡೆಯನೇ ತಂದೆಯೇ,ನಿನ್ನ ಹೊರತು ಮಗನನ್ನು , ತಿಳಿದವರಿಲ್ಲ, ಮಗನನ್ನು ಹೊರತು,ತಂದೆಯನ್ನು ಅರಿತವರಿಲ್ಲ (ಮತ್ತಾಯ 11:25-27 ULB) (ಮತ್ತು ನೋಡಿ: ಯೋಹಾನ 6:26-57)

ಕ್ರೈಸ್ತರು " ತಂದೆ " ಮತ್ತು " ಮಗ " ನ ಎಂಬ ಈ ಎರಡು ಕಲ್ಪನೆಗಳು ತ್ರ್ಯೇಕತ್ವದ ಮೊದಲ ಮತ್ತು ಎರಡನೆಯ ವ್ಯಕ್ತಿಗಳ ನಿತ್ಯವಾದ ಸಂಬಂಧವನ್ನು ಸೂಚಿಸುತ್ತದೆ ಎಂಬುದು ಕ್ರೈಸ್ತರ ಭಾವನೆ. ಸತ್ಯವೇದದಲ್ಲಿ ತಂದೆ ಮಗನ ಬಗ್ಗೆ ಅನೇಕ ರೀತಿಯಲ್ಲಿ ಉಲ್ಲೇಖಿಸಿ ಹೇಳಿದೆ. ಆದರೆ ಈ ಎರಡು ಪದಗಳನ್ನು ಬಿಟ್ಟರೆ ನಿರಂತರವಾದ ಪ್ರೀತಿ ಅವರ ಆತ್ಮೀಯ ಸಂಬಂಧ ಮತ್ತು ಪರಸ್ಪರ ಅವಲಂಬನೆ ಇವುಗಳ ವಿವರಣೆಯನ್ನು ನೀಡಲು ಸಾಧ್ಯವಿಲ್ಲ.

ಯೇಸು ತನ್ನ ತಂದೆಯಾದ ದೇವರನ್ನು ಕುರಿತು ಈ ಕೆಳಕಂಡಂತೆ ಉಲ್ಲೇಖಿಸಿ ಹೇಳಿದ್ದಾನೆ.

ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ . (ಮತ್ತಾಯ 28:19 ULB)

ತಂದೆ ಮತ್ತು ಮಗನ ನಡುವಿನ ಆತ್ಮೀಯವಾದ ಸಂಬಂಧ ಅವರಿಬ್ಬರಂತೆ ನಿತ್ಯ ನಿರಂತರವಾದುದು.

ತಂದೆ ತನ್ನ ಮಗನನ್ನು ಪ್ರೀತಿಸುತ್ತಾನೆ. (ಯೋಹಾನ 3:35-36; 5:19-20 ULB)

ನಾನು ತಂದೆಯನ್ನು ಪ್ರೀತಿಸುತ್ತೇನೆ ಎಂಬುದು ಲೋಕಕ್ಕೆ ತಿಳಿದಿರಬೇಕೆಂದು ತಂದೆಯು ನನಗೆ ಕೊಟ್ಟ ಆಜ್ಞೆಯ ಮೇರೆಗೆಇದನ್ನ ಮಾಡುತ್ತೇನೆ. (ಯೋಹಾನ 14:31 ULB)
.., ತಂದೆ ಎಂತವನು ಎಂದು ಮಗನ ಹೊರತು ಯಾರಿಗೂ ತಿಳಿಯದು ಮಗನು ಎಂತವನು ಎಂದು ತಂದೆ ಹೊರತು ಇನ್ಯಾರೂ ತಿಳಿದವನಲ್ಲ . (ಲೂಕ 10:22 ULB)

“ತಂದೆ” ಮತ್ತು “ಮಗ” ಎಂಬ ಪದಗಳು ತಂದೆ ಮತ್ತು ಮಗನ ಬಗ್ಗೆ ಒಂದೇ ಅರ್ಥವನ್ನು ಕೊಡುವಂತಾದ್ದು ಹಾಗೆಯೇ ಇಬ್ಬರೂ ನಿತ್ಯ ನಿರಂತರ ದೇವರು.

“ತಂದೆಯೇ” ಕಾಲಬಂದಿದೆ, ನಿನ್ನ ಮಗನನ್ನು ಮಹಿಮೆ ಪಡಿಸು ಆಗ ಮಗನು ನಿನ್ನನ್ನು ಮಹಿಮೆಪಡಿಸುವನು…ಎಂದು ಯೇಸು ಹೇಳಿದನು. ನಿನ್ನನ್ನು ಭೂಲೋಕದಲ್ಲಿ ಮಹಿಮೆಪಡಿಸಿದೆನು… ಈಗ ತಂದೆಯೇ ನೀನು ನಿನ್ನ ಬಳಿಯಲ್ಲಿ ನನ್ನನ್ನು ಮಹಿಮೆಪಡಿಸುವನು ಲೋಕ ಉಂಟಾಗುವುದಕ್ಕಿಂತ ಮೊದಲು ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆ ಪಡಿಸು ." (ಯೋಹಾನ 17:1-5 ULB)

ಈ ಅಂತ್ಯ ದಿನಗಳಲ್ಲಿ ತಂದೆಯಾದ ದೇವರು ನಮ್ಮ ಸಂಗಡ ಮಗನ ಮೂಲಕ ಮಾತನಾಡಿದ್ದಾನೆ ಈತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದ್ದಾನೆ, ಈತನ ಮೂಲಕವೇ ಜಗತ್ತನ್ನು ಉಂಟುಮಾಡಿದನು. ಈತನು ದೇವರ ಪ್ರಭಾವದ ಪ್ರಕಾಶವುಆತನ ತತ್ವದ ಮೂರ್ತಿಯೂ ಆಗಿದ್ದಾನೆ . ತನ್ನ ಶಕ್ತಿಯ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದಾನೆ. (ಇಬ್ರಿಯಾ 1:2-3 ULB)

ಯೇಸು ಫಿಲಿಪ್ಪನನ್ನು ಕುರಿತು, ಫಿಲಿಪ್ಪನೇ ನಾನು ಇಷ್ಟುದಿನ ನಿಮ್ಮ ಸಂಗಡ ಇದ್ದರೂ ನೀನು ಇನ್ನೂ ನನ್ನನ್ನು ಅರಿತುಕೊಳ್ಳಲಿಲ್ಲವೇ ? ನನ್ನನ್ನು ನೊಡಿದವನು ತಂದೆಯನ್ನು ನೋಡಿದ್ದಾನೆ . " ನಮಗೆ ತಂದೆಯನ್ನು ತೋರಿಸು ಎಂದು ಹೇಗೆ ಕೇಳುತ್ತೀರಿ? (ಯೋಹಾನ 14:9 ULB)

###ಮಾನವ ಸಂಬಂಧಗಳು

ಮಾನವ ತಂದೆಗಳು ಮತ್ತು ಮಕ್ಕಳು ಯಾರೂ ಪರಿಪೂರ್ಣರಲ್ಲ. ಆದರೆ ಸತ್ಯವೇದದಲ್ಲಿ ಈ ಪದಗಳನ್ನು ತಂದೆಮತ್ತು ಮಗ,ಎಂಬ ಪದಗಳನ್ನು ಬಳಸುತ್ತಾರೆ.ಯಾರು ಸಂಪೂರ್ಣರು

ಪ್ರಸ್ತುತ ದಿನಗಳಲ್ಲಿ ತಂದೆ ಮತ್ತು ಮಗನ ನಡುವಿನ ಪ್ರೀತಿ ಮತ್ತು ಸಂಬಂಧಗಳಂತೆ ಸತ್ಯವೇದದ ಕಾಲದಲ್ಲಿ ಪ್ರೀತಿ ಅಷ್ಟೊಂದು ಸಂಪೂರ್ಣವಾಗಿರಲಿಲ್ಲ ಆದರೆ ತಂದೆ ದೇವರು ಮತ್ತು ಮಗನ ನಡುವಿನ ಸಂಬಂಧ ಉತ್ತಮವಾಗಿದೆ. ಇದರ ಅರ್ಥ ತಂದೆ ಮತ್ತು ಮಗನ ಪರಿಕಲ್ಪನೆಯನ್ನು ಭಾಷಾಂತರ ಮಾಡುವವರು ಬದಲಾಯಿಸುವುದಾಗಲೀ, ತಪ್ಪಿಸುವುದಾಗಲೀ ಮಾಡಬಾರದು. ಸತ್ಯವೇದದಲ್ಲಿ ಈ ಪದಗಳನ್ನು ದೇವರನ್ನು ಉದ್ದೇಶಿಸಿ ಹೇಳಲು ಬಳಸುತ್ತಾರೆ ಇಲ್ಲಿ ಉಲ್ಲೇಖವಿದೆ. ಪರಿಪೂರ್ಣನಾದ ತಂದೆ ಆತನ ಮಗನು ಹಾಗು ಲೌಕಿಕ ಜಗತ್ತಿನ ಪಾಪಿಗಳಾದ ತಂದೆ ಮತ್ತು ಮಗನ ಬಗ್ಗೆ. ನಿಮ್ಮ ಭಾಷೆಯಲ್ಲಿ ವ್ಯಾಪಕವಾಗಿ ಬಳಸುವ ಮಾನವ “ತಂದೆ” ಮತ್ತು "ಮಗ"ಎಂಬ ಸಹಜವಾದ ಪದಗಳನ್ನು ಉಲ್ಲೇಖಿಸುವುದರ ಮೂಲಕ ದೇವರನ್ನು “ತಂದೆ” ಮತ್ತು “ಮಗ” ಎಂಬ ಪದಗಳ ಮೂಲಕ ಸೂಚಿಸಿರಿ

ಈ ರೀತಿ ಬರೆಯುವುದರಿಂದ ತಂದೆ ದೇವರು ಮತ್ತು ದೇವರ ಮಗ ಇಬ್ಬರೂ ಒಂದೇ ಎಂದು ತಿಳಿಯುತ್ತದೆ (ಇಬ್ಬರೂ ಒಂದೇ ದೇವರು) ಮಾನವ ತಂದೆ ಮತ್ತು ಮಗನ ನಡುವೆ ಅನೇಕ ಹೋಲಿಕೆಗಳು, ಗುಣಗಳು ಒಂದೇ ಆಗಿರುವಂತೆ ದೇವರು ಮತ್ತು ಆತನ ಮಗ ಒಂದೇ ಆಗಿರುತ್ತಾರೆ/

ಭಾಷಾಂತರ ಕೌಶಲ್ಯಗಳು

  1. ನಿಮ್ಮ ಭಾಷೆಯ " ತಂದೆ " ಮತ್ತು " ಮಗ " ಎಂಬ ಪದಗಳಿಗೆ ಎಷ್ಟು ಸಾಧ್ಯವೋ ಅಷ್ಟು ಅರ್ಥಕೊಡುವ ಪದಗಳನ್ನು ಬಳಸಬಹುದು. ದೈವಿಕವಾದ " ತಂದೆ " ಮತ್ತು " ಮಗ " ಪದಗಳಿಗೆ ಯಾವ ಉತ್ತಮ ಪದವನ್ನು ಬಳಸಬಹುದು ಎಂದು ನಿರ್ಧರಿಸಬೇಕು.
  2. ನಿಮ್ಮ ಭಾಷೆಯಲ್ಲಿ “ಮಗ” ಎಂಬ ಪದಕ್ಕೆ ಸಮಾನವಾದ ಬೇರೆ, ಮೊದಲ ಮಗ ಅಥವಾ ಏಕೈಕ ಪುತ್ರ ಎಂಬ ಎಂಬ ಅರ್ಥಕೊಡುವ ಪದವನ್ನು ಬಳಸಿರಿ.
  3. ನಿಮ್ಮ ಭಾಷೆಯಲ್ಲಿ ತಂದೆ ಎಂಬ ಪದಕ್ಕೆ ಸಮಾನ ಅರ್ಥ ಕೊಡುವ ಪದಗಳಿದ್ದರೆ, ಸಮೀಪವಾದ ಅರ್ಥಕೊಡುವ ಪದವಿದ್ದರೆ ಅಂದರೆ ಜನ್ಮ ನೀಡಿದ ತಂದೆ, ಕೆಲವೊಮ್ಮೆ ದತ್ತು ಪಡೆದ ತಂದೆ ಪದಗಳಿಗೆ ಸಮಾನ ಅರ್ಥಕೊಡುವ ಪದವಿದ್ದರೆ ಅದನ್ನು ಬಳಸಿರಿ

(ಭಾಷಾಂತರದ ಪದಗಳು ಇದರಲ್ಲಿ ತಂದೆಯಾದ ದೇವರು ಮತ್ತು* ಮಗನಾದ ದೇವರು* ಪುಟಗಳನ್ನು ನೋಡಿ “ತಂದೆ” ಮತ್ತು “ಮಗನು” ಎಂಬ ಪದಗಳನ್ನು ಭಾಷಾಂತರ ಮಾಡಲು.)

ಆಧಾರಪೂರ್ಣ ಅಧಿಕೃತವಾದ ಭಾಷಾಂತರಗಳನ್ನು ಸೃಷ್ಠಿಸಬೇಕು .

Translation Manual :: Defining a Good Translation :: The Qualities of a Good Translation :: Create Authoritative Translations

ಆಧಾರಪೂರ್ಣ ಅಧಿಕೃತ ಸತ್ಯವೇದದ ಭಾಷಾಂತರ ಸತ್ಯವೇದದ ಮೂಲವಿಷಯಗಳನ್ನು ಆಧರಿಸಿ ಇರುವುದಲ್ಲದೆ. ಮೂಲಭಾಷೆಯ ಸತ್ಯವೇದದ ವಿಷಯಗಳನ್ನು , ಅರ್ಥಗಳನ್ನು ಯಥಾವತ್ತಾಗಿ ತರುವಂತಹುದು.

ಸತ್ಯವೇದದ ಎರಡು ಅಥವಾ ಮೂರು ಭಾಷಾಂತರಗಳು ಯಾವುದಾದರೂ ಒಂದು ಭಾಗದ ಅರ್ಥವನ್ನು ಸರಿಯಾಗಿ ಆಗಿಲ್ಲ ಎಂದು ಹೇಳುವುದಾದರೆ ಮೂಲಭಾಷೆ ಯಲ್ಲಿರುವ ಸತ್ಯವೇದದ ಭಾಗಗಳೇ ಆಧಾರಪೂರ್ಣ , ಅಧಿಕೃತ ಅರ್ಥ ನೀಡುವಂತಾದ್ದು ಎಂದು ನಿರ್ಧರಿಸಬೇಕು. ಕೆಲವೊಮ್ಮೆ ಭಾಷಾಂತರಕಾರರು ಭಾಷಾಂತರ ಮಾಡುವಾಗ ಸತ್ಯವೇದದಲ್ಲಿನ ವಿಷಯಗಳಿಗೆ ತುಂಬಾ ನಿಷ್ಠೆಯಿಂದ ಇರುವವರು ಸಂಪೂರ್ಣವಾಗಿ ಓದುವ ಗುಣವುಳ್ಳವರು , ಸತ್ಯವೇದದ ಭಾಷಾಂತರವನ್ನು ನಿಷ್ಠೆಯಿಂದ ಮಾಡಿದವರೊಂದಿಗೆ ಚರ್ಚಿಸುವುದನ್ನು ಮಾಡುತ್ತಾರೆ.

ಅಂತಹ ಭಾಷಾಂತರಗಳು ಆಧಾರಪೂರ್ಣ ಅಧಿಕೃತವಾದ ವಿಚಾರಗಳನ್ನು ಹೊಂದಿರುತ್ತವೆ. ಏಕೆಂದರೆ ಅವು ಮೂಲಭಾಷೆಯಂತೆ ಆದ ಭಾಷಾಂತರಗಳು. ಮೂಲಭಾಷೆಯ ವಿಷಯಕ್ಕೆ ಸಂಬಂಧಿಸಿದಂತೆ ಭಾಷಾಂತರಗಳು ಯಾವಾಗಲೂ ಎರಡನೇ ಸ್ಥಾನವನ್ನು ಪಡೆಯುತ್ತವೆ. ಆದುದರಿಂದಲೇ ನಾವು ಭಾಷಾಂತರ ಮಾಡುವಾಗ ಮೂಲ ಸತ್ಯವೇದದ ಭಾಷೆಯನ್ನು ಪರಿಗ್ರಹಿಸಿ ನಂತರ ಸತ್ಯವೇದದ ಭಾಷಾಂತರ ಮಾಡಬೇಕು . ಎಲ್ಲಾ ಭಾಷಾಂತರ ತಂಡಗಳಲ್ಲಿ ಮೂಲ ಭಾಷೆಯಲ್ಲಿರುವ ಸತ್ಯವೇದವನ್ನು ಓದುವ ಸಾಮರ್ಥ್ಯವಿರುವುದಿಲ್ಲ. ಆದುದರಿಂದ ಸತ್ಯವೇದವನ್ನು ಭಾಷಾಂತರಿಸುವಾಗ ಎಲ್ಲಾ ಸಮಯದಲ್ಲೂ ಮೂಲ ಸತ್ಯವೇದದ ಭಾಷೆಯನ್ನು ಎಲ್ಲಾ ಸಮಯದಲ್ಲಿ ಅನ್ವಯಿಸಿ, ಪರಾಮರ್ಶಿಸಿ ನೋಡಲು ಸಾಧ್ಯವಿಲ್ಲ ಅದರ ಬದಲು ಭಾಷಾಂರ ಮಾಡುವವರು ಭಾಷಾಂತರ ಆಗಿರುವ ವಿಷಯವನ್ನು ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವೇ , ಮತ್ತು ಸತ್ಯವೇದದ ಭಾಷೆಯನ್ನು ಆಧರಿಸಿ ಭಾಷಾಂತರ ಆಗಿದೆಯೇ ಎಂದು ಗಮನಹರಿಸಬೇಕು.

ಗೇಟ್ ವೇ ಭಾಷೆಯಲ್ಲಿ ಆಗಿರುವ ಅನೇಕ ಭಾಷಾಂತರಗಳು ULB, ಸತ್ಯವೇದವನ್ನು ಒಳಗೊಂಡು ಸತ್ಯವೇದದ ಭಾಷೆಯಲ್ಲಿ ಆದ ಭಾಷಾಂತರಗಳು. ಆದರೆ ಕೆಲವು ಭಾಷಾಂತರಗಳು ಭಾಷಾಂತರಗಳಾಗಿವೆ . ಮೂಲ ಭಾಷೆಯಿಂದಾದ ಭಾಷಾಂತರದಲ್ಲಿ ಎರಡು ಅಥವಾ ಮೂರು ತಪ್ಪುಗಳು ಆಗುವುದನ್ನು ಕಂಡುಹಿಡಿಯುವುದು ಸುಲಭ. ಇಂತಹ ಸಮಸ್ಯೆಗಳನ್ನು ಸರಿಪಡಿಸಲು ಭಾಷಾಂತರ ಸಮಿತಿ / ತಂಡದವರು ಮೂರು ಸಂಗತಿಗಳನ್ನು ಇಲ್ಲಿ ನೀಡಬಹುದು .

  1. ಭಾಷಾಂತರ ಮಾಡುವ ತಂಡವು ಭಾಷಾಂತರದ ಟಿಪ್ಪಣಿಗಳನ್ನು, ಭಾಷಾಂತರದ ಪದಗಳನ್ನು ಬಳಸಲೇಬೇಕು ಮತ್ತು ಉತ್ತಮ ರೀತಿಯಲ್ಲಿ ಭಾಷಾಂತರ ಮಾಡಲು ಅವರಿಗೆ ಸಹಾಯಕವಾಗುವಂಥ ಇತರ ಯಾವುದೇ ಸಹಾಯಕ ಸಂಪನ್ಮೂಲಗಳನ್ನು ಕೂಡ ಬಳಸಿಕೊಳ್ಳಬಹುದು. ಸತ್ಯವೇದದ ಮೂಲ ಭಾಷೆಗಳನ್ನು ಚೆನ್ನಾಗಿ ಬಲ್ಲಂಥ ಸತ್ಯವೇದ ಪಡಿಂತರು ಈ ಸಹಾಯಕ ಸಂಪನ್ಮೂಲಗಳನ್ನು ಬರೆದಿದ್ದಾರೆ.

  2. ಇದು ಇತರ ಭಾಷಾಂತರಗಳಲ್ಲಿರುವ ಅದೇ ಸಂದೇಶವನ್ನು ತಿಳಿಸುತ್ತಿದ್ದೆ ಎಂದು ಖಚಿತಪಡಿಸಿಕೊಳ್ಳಲು, ಅವರು ಆದಷ್ಟೋ ತಮ್ಮ ಭಾಷಾಂತರವನ್ನು ಇತರ ವಿಶ್ವಾಸಾರ್ಹವಾದ ಭಾಷಾಂತರಗಳೊಂದಿಗೆ ಹೋಲಿಕೆಮಾಡಿ ನೋಡಬೇಕು.

  3. ಭಾಷಾಂತರವು ನಿಖರವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸತ್ಯವೇದದ ಭಾಷೆಗಳನ್ನು ಅಧ್ಯಯನ ಮಾಡಿದಂಥ ಯಾರಾದರೂ ಅದನ್ನು ಪರಿಶೀಲಿಸಬೇಕು. ಈ ವ್ಯಕ್ತಿಯು ಸಭೆಯ ನಾಯಕ, ಸಭಾಪಾಲಕ, ಸೆಮಿನರಿ ಪ್ರಾಧ್ಯಾಪಕ ಅಥವಾ ಸತ್ಯವೇದ ಭಾಷಾಂತರದ ವೃತ್ತಿಪರನು ಆಗಿರಬೇಕು.

ಕೆಲವೊಮ್ಮೆ ಸತ್ಯವೇದದ ಭಾಷಾಂತರಗಳು ವಿಭಿನ್ನವಾಗಿರುತ್ತವೆ ಏಕೆಂದರೆ ಸತ್ಯವೇದದಲ್ಲಿನ ಕೆಲವು ಭಾಗಗಳು ಸತ್ಯವೇದದ ಮೂಲ ಭಾಷೆಗಳಲ್ಲಿ ಅಸ್ಪಷ್ಟವಾದವುಗಳು ಅಥವಾ ದ್ವಂದ್ವಾರ್ಥವುಳ್ಳವುಗಳು ಆಗಿವೆ. ಅಂತಹ ಸಂದರ್ಭದಲ್ಲಿ, ಭಾಷಾಂತರದ ಟಿಪ್ಪಣಿಗಳಲ್ಲಿ, ಭಾಷಾಂತರದ ಪದಗಳಲ್ಲಿ, ಯುಎಸ್‌ಟಿಯಲ್ಲಿ ಮತ್ತು ಭಾಷಾಂತರದ ಇತರ ಸಹಾಯಕ ಸಂಪನ್ಮೂಲಗಳಲ್ಲಿ ಸತ್ಯವೇದದ ಪಡಿಂತರು ಹೇಳುವಂಥ ವಿಷಯಗಳ ಆಧಾರದ ಮೇಲೆ ಭಾಷಾಂತರ ಮಾಡುವ ತಂಡದವರು ಅವುಗಳಲ್ಲಿ ಸರಿಯಾದುದ್ದನ್ನು ಆಯ್ಕೆ ಮಾಡಿಕೊಳ್ಳಬೇಕು.


ಐತಿಹಾಸಿಕ ಭಾಷಾಂತರಗಳನ್ನು ಸೃಷ್ಟಿಸಿ.

Translation Manual :: Defining a Good Translation :: The Qualities of a Good Translation :: Create Historical Translations

(ಈ ವೀಡಿಯೋ ನೋಡಿ) " ಸತ್ಯವೇದದ ಭಾಷಾಂತರ – ಸಂಸ್ಕೃತಿ " http://ufw.io/trans_culture.)

ಐತಿಹಾಸಿಕ ವ್ಯಾಖ್ಯಾನ ಭಾಷಾಂತರ ಐತಿಹಾಸಿಕ ಘಟನೆಗಳನ್ನು – ಸಂಭವಗಳನ್ನು, ವಿಷಯಗಳನ್ನು ನಿಖರವಾಗಿ ತಿಳಿಸುವುದು. ಜನರಿಗೆ ತಿಳಿಸಬೇಕೆಂದಿರುವ ನಿರ್ದಿಷ್ಟ, ನಿಖರವಾದ ಮಾಹಿತಿಗೆ ಹೆಚ್ಚಿನ ಮಾಹಿತಿಯನ್ನು ನೀಡಬೇಕು. ಏಕೆಂದರೆ ಮೂಲ ವಿಷಯಕ್ಕೆ ಸಂಬಂಧಿಸಿದಂತೆ ಮೂಲ ಸಹೃದಯರಂತೆ ಬೇರೆ ಸನ್ನಿವೇಶ ಮತ್ತು ಸಂಸ್ಕೃತಿಯಿಂದ ಬಂದ ಜನ ಸ್ವೀಕರಿಸದೆ ಇರಬಹುದು.

ಐತಿಹಾಸಿಕ ವಿಚಾರಗಳನ್ನುನಿರ್ದಿಷ್ಟ ಹಾಗೂ ನಿಖರವಾಗಿ ತಿಳಿಸಲು ನೀವು 2 ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

  1. ಸತ್ಯವೇದವೂ ಒಂದು ಐತಿಹಾಸಿಕ ದಾಖಲೆ. ಸತ್ಯವೇದದಲ್ಲಿ ಇರುವ ಘಟನೆಗಳು ನಿಜವಾಗಲೂ ನಡೆದ ಘಟನೆಗಳು ಮತ್ತು ಇವುಗಳನ್ನು ಸತ್ಯವೇದವು ವಿವಿಧ ಸಮಯದಲ್ಲಿ ಐತಿಹಾಸಿಕವಾಗಿ ನಡೆದ ಘಟನೆಗಳನ್ನು ವಿವರವಾಗಿ ವಿವರಿಸುತ್ತದೆ. ಆದುದರಿಂದ ನೀವು ಸತ್ಯವೇದವನ್ನು ಭಾಷಾಂತರಿಸುವಾಗ ಈ ಘಟನೆಗಳು ನಿಜವಾಗಿ ನಡೆದವು ಎಂಬುದನ್ನು ತಿಳಿಸಬೇಕು. ಮತ್ತು ನೀವು ಇವುಗಳನ್ನು ಯಾವುದೇ ಬದಲಾವಣೆ ಮಾಡದೆ ವಿಷಯವನ್ನು ಹಾಗೇ ಉಳಿಸಬೇಕು.

  2. ಸತ್ಯವೇದದಲ್ಲಿ ಬರುವ ಪುಸ್ತಕಗಳು ಒಂದು ನಿರ್ದಿಷ್ಟ ಸಮಯದಲ್ಲಿ ನಡೆದ ಐತಿಹಾಸಿಕ ಘಟನೆ ಹಾಗೂ ಒಂದು ನಿರ್ದಿಷ್ಟ ಸಂಸ್ಕೃತಿಯ ಜನರೊಂದಿಗೆ ಬೆಳೆದ ಇತಿಹಾಸ. ಅಂದರೆ ಸತ್ಯವೇದದಲ್ಲಿರುವ ವಿಚಾರಗಳು ಮೂಲ ಶ್ರೋತೃಗಳಿಗೆ, ತುಂಬಾ ಸ್ಪಷ್ಟವಾಗಿ ಸತ್ಯೇದವನ್ನು ವಿವಿಧ ಸಾಂಸ್ಕೃತಿಕ ಹಿನ್ನಲೆಯಲ್ಲಿನ ಶೋತೃಗಳಿಗೆ ಅರ್ಥವಾಗುವುದಿಲ್ಲ, ಸಮಯದಲ್ಲಿ ಓದುವುದರಿಂದ ಅವರಿಗೆ ಮೊದಲ ಓದುಗರಿಗೆ ಸ್ಪಷ್ಟವಾಗಿ ಅರ್ಥವಾದಷ್ಟು ಸ್ಪಷ್ಟವಾಗಿ ಅರ್ಥವಾಗದೇ ಉಳಿಯಬಹುದು. ಏಕೆಂದರೆ ಇದು ಬರಹಗಾರರು ಮತ್ತು ಓದುಗರಿಗೆ ಅನೇಕ ವಿಚಾರಗಳು ಮತ್ತು ಪದ್ಧತಿಗಳು ಪರಿಚಯವಿರುವುದರಿಂದ ಬರಹಗಾರನು ಪ್ರತಿಯೊಂದನ್ನು ವಿವರವಾಗಿ ವಿವರಿಸಬಲ್ಲ. ಬೇರೆ ಸಮಯ ಸನ್ನಿವೇಶ ಮತ್ತು ಸಂಸ್ಕೃತಿಯಿಂದ ಬಂದಿದ್ದರೆ ಇವುಗಳ ಪರಿಚಯ ನಮಗೆ ಇರುವುದಿಲ್ಲ. ಆದುದರಿಂದ ಯಾರಾದರೂ ಬಂದು ನಮಗೆ ಇವುಗಳ ಪರಿಚಯ ಮಾಡಬೇದಾದ ಅವಶ್ಯಕತೆ ಇರುತ್ತದೆ. ಇಂತಹ ಮಾಹಿತಿಗಳನ್ನು ಸಂಶಯವಿಲ್ಲದ (ನಂಬಿಕೆಗೆ ಅರ್ಹವಾದ) ಮಾಹಿತಿ ಎಂದು ಕರೆಯುತ್ತಾರೆ. (ನೋಡಿ ಗಳಿಸಿದ ಜ್ಞಾನ ಮತ್ತು ವಿಶ್ವಾಸಪೂರ್ಣ ಮಾಹಿತಿ”)

ಭಾಷಾಂತರಗಾರರಾಗಿ ನೀವು ಐತಿಹಾಸಿಕ ಭಾಷಾಂತರವನ್ನು ನಿಖರವಾಗಿ ಮಾಡಬೇಕಿದೆ, ಆದರೆ ಕೆಲವೊಮ್ಮೆ ಓದುಗರಿಗೆ ಸರಿಯಾಗಿ ಅರ್ಥವಾಗಲು, ಪರಿಣಾಮಕಾರಿಯಾಗಿ ಪ್ರಭಾವ ಬೀರಲು ಅನುಕೂಲಕರವಾಗಿರುವಂತೆ ಭಾಷಾಂತರ ಮಾಡಬೇಕು.

  • ಉದಾಹರಣೆ ಆದಿಕಾಂಡ 12:16 ರಲ್ಲಿ ಒಂಟೆಗಳ ಕುರಿತಾಗಿ ನೋಡಬಹುದು. ಪ್ರಪಂಚದ ಯಾವ ದೇಶಗಳಲ್ಲಿ ಈ ಪ್ರಾಣಿಯ ಪರಿಚಯವಿಲ್ಲದಿದ್ದಲ್ಲಿ ಅದರ ವಿವರಣೆಯನ್ನು ನೀಡತಕ್ಕದ್ದು. ಇದನ್ನು ಅಡಿಟಿಪ್ಪಣಿ ಅಥವಾ ಅನುವಾದ ಪದಗಳ ಶಬ್ದ ಸಂಗ್ರಹ ಪಟ್ಟಿಯಲ್ಲಿ ಸೇರಿಸತಕ್ಕದ್ದು.

ವಿವರಗಳು ಸಂಕ್ಷಿಪ್ತವಾಗಿ ಇರುವವರೆಗೂ ಮತ್ತು ಓದುಗರನ್ನು ಅದರ ಮುಖ್ಯ ಉದ್ದೇಶದಿಂದ ಬೇರೆಡೆಗೆ ಸೆಳೆಯದಿರುವವರೆಗೂ ಕೆಲವರ ವಿವರಗಳನ್ನು ಪಠೄದಲ್ಲಿ ಸೆರಿಸಬಹುದು.

  • ಉದಾಹರಣೆ: ಹೊಸ ಒಡಂಬಡಿಕೆಯ ಬರಹಗಾರರು ಹಳೇ ಒಡಂಬಡಿಕೆಯ ಕೆಲವು ಸಂಗತಿಗಳನ್ನು ವಿವರಿಸದಿದ್ದರೂ ಅದರ ಕುರಿತಾಗಿ ಬರೆದಿದ್ದಾರೆ. ಜನರು ಅದನ್ನು ಅರ್ಥ ಮಾಡಿಕೊಳ್ಳಬಲ್ಲರು ಎಂಬುದೇ ಅದಕ್ಕೆ ಕಾರಣ. ಆದರೆ ಬೇರೆ ಸ್ಥಳ ಹಾಗೆ ಬರೆ ಸಮಯದಲ್ಲಿನ ಜನರಿಗೆ ಕೆಲವು ಬಾರಿ ಇವುಗಳ ವಿವರಣೆ ಬಹಳ ಅಗತ್ಯ.

ULT ಮತ್ತು UST ಅನುವಾದಗಳ 1 ಕೊರಿಂಥ 10:1 ರ ವಾಕ್ಯವನ್ನು ಹೋಲಿಸಿ ನೋಡೋಣ.

"ಸಹೋದರರೇ, ಮುಂದಿನ ಸಂಗತಿಗಳಲ್ಲಿ ನೀವು ಲಕ್ಷವಿಡಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅದೇನೆಂದರೆ ನಮ್ಮ ಪಿತೃಗಳೆಲ್ಲರೂ ಮೇಘದ ನೆರಳಿನಲ್ಲಿ ಇದ್ದರು, ಅವರೆಲ್ಲರೂ ಸಮುದ್ರವನ್ನು ದಾಟಿಹೋದರು…” (ULT) ಅನುವಾದ

“ನನ್ನ ಸಹೋದರರೇ ಮತ್ತು ಸಹೋದರಿಯರೇ, ಬಹಳ ವರ್ಷಗಳ ಹಿಂದೆ ನಮ್ಮ ಯೆಹೂದ್ಯರಾದ ಪೂರ್ವಿಕರು ಕೆಂಪು ಸಮುದ್ರವನ್ನು ದಾಟುವಾಗ ತಮ್ಮ ಪ್ರಯಾಣದ ಸಮಯದಲ್ಲಿ ತಮ್ಮನ್ನು ಮೋಡದೋಪಾದಿಯಲ್ಲಿ ಕಾಪಾಡಿ ಮುನ್ನಡೆಸಿದ ದೇವರನ್ನು ಹಿಂಬಾಲಿಸುತ್ತಿದ್ದರು” (UST)

UST ಅನುವಾದ ಅನೇಕ ಸಂಗತಿಗಳನ್ನು ಸ್ಪಷ್ಟವಾಗಿ ವಿವರಿಸುತ್ತದೆ” “ನಮ್ಮ ಪಿತೃಗಳು ಮೇಘದ ನೆರಳಿನಲ್ಲಿದ್ದರು” ಎಂಬ ವಾಕ್ಯ ದೇವರು ಯೆಹೂದ್ಯರಾದ ಪಿತೃಗಳನ್ನು ಮೇಘದೋಪಾದಿಯಲ್ಲಿ ನಡೆಸಿದನು ಎಂದು ತಿಳಿಸುತ್ತದೆ. “ನಮ್ಮ ಪಿತೃಗಳು ಸಮುದ್ರವನ್ನು ದಾಟಿದರು” ಎಂಬ ಮಾತು ಅವರು ಕೆಂಪು ಸಮುದ್ರವನ್ನು ದಾಟಿದ ಸಂಗತಿಯ ಕುರಿತಾಗಿದೆ. UST ಅನುವಾದಕರು ಈ ಚಾರಿತ್ರಿಕ ಸಂಗತಿಗಳನ್ನು ಸ್ಪಷ್ಟವಾಗಿ ವಿವರಿಸಬೇಕೆಂದು ತಿರ್ಮಾನಿಸಿ ಹೀಗೆ ಅನುವಾದ ಮಾಡಿದ್ದಾರೆ. ಹಳೇ ಒಡಂಬಡಿಕೆಯ ಕುರಿತು ಹೆಚ್ಚು ಮಾಹಿತಿಯನ್ನು ತಿಳಿಯದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಈ ರೀತಿಯಾದ ಸ್ಪಷ್ಟ ಅನುವಾದ ಮಾಡತಕ್ಕದ್ದು.

ನಿಮ್ಮ ಸಮುದಾಯದ ಜನರು ವಾಕ್ಯ ಭಾಗಗಳನ್ನು ಅರ್ಥ ಮಾಡಿಕೊಳ್ಳುವಂತೆಕೆಲವಾರು ಸ್ಪಷ್ಟವಾದ ವಿವರಗಳನ್ನು ಸೇರಿಸತಕ್ಕದ್ದು.

ಸಂದೇಶದಲ್ಲಿ ಅಡಗಿರುವ ನಿಖರವಾದ ಐತಿಹಾಸಿಕ ಸಂಗತಿಗಳನ್ನು ಹಾಗೆಯೇ ಉಳಿಸಿಕೊಳ್ಳಿರಿ. ಸತ್ಯವೇದ ಬರೆಯಲಾದ ಸಮಯದಲ್ಲಿ ನಡೆಯದ ಘಟನೆಯನ್ನು ಅಥವಾ ಆ ಸಮಯದಲ್ಲಿ ಇಲ್ಲದ ವಸ್ತುಗಳನ್ನು ನಿಮ್ಮ ಬರಹದಲ್ಲಿ ಉಪಯೋಗಿಸಿ ನಿಮ್ಮ ಅನುವಾದವನ್ನು ಆಧುನಿಕ ದಿನದ ಘಟನೆಯ ಹಾಗೆ ತೋರಿಸಬೇಡಿರಿ.

ನೆನೆಪಿನಲ್ಲಿಡಿ

  • ಐತಿಹಾಸಿಕ ಪಠೄವನ್ನು ನಿಜವೆನ್ನುವ ಹಾಗೆ ತೋರಿಸಿ. ಮೂಲ ಸಂದೇಶ, ಐತಿಹಾಸಿಕ ಘಟನೆಗಳು ಮತ್ತು ಸಾಂಸ್ಕೃತಿಕ ಹಿನ್ನೆಲೆಗಳು ಮೂಲ ಪ್ರತಿಯಲ್ಲಿ ಇರುವ ಹಾಗೆಯೇ ಇರಬೇಕು. ಉದಾಹರಣೆಗೆ, ಘಟನೆಗಳು ಬೇರೆ ಸ್ಥಳಗಳಲ್ಲಿ ಬೇರೆ ಸಮಯದಲ್ಲಿ ನಡೆದಿದೆ ಎಂದು ತೋರಿಸದ ರೀತಿಯಲ್ಲಿ ಅನುವಾದ ಇರಬೇಕು.
  • ಮೂಲ ಲೇಖಕ ಯಾವ ಅರ್ಥವನ್ನು ತಿಳಿಯಪಡಿಸಲು ಬಯಸುತ್ತಿದ್ದಾನೆ ಎಂದು ನಿಮ್ಮ ಅನುವಾದ ಓದಲಿರುವ ಜನರು ಅರ್ಥಮಾಡಿಕೊಳ್ಳುವ ಹಾಗೆ ಸಂದೇಶವನ್ನು ಸರಿಯಾಗಿ ತಿಳಿಸಿರಿ.
  • ಬೇರೆ ಸಂಸ್ಕೃತಿ ಬೇರೆ ಬೇರೆ ಸಂದರ್ಭದಲ್ಲಿ ಇರುವ ಜನರು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗ ಅವಶ್ಯವಿದ್ದಲ್ಲಿ ಆಗ ಮಾತ್ರ ಹೆಚ್ಚಿನ ವಿವರಗಳನ್ನು ನೀಡಿರಿ.

ಸಮಾನ ಭಾಷಾಂತರ ಸೃಷ್ಟಿಸಿ.

Translation Manual :: Defining a Good Translation :: The Qualities of a Good Translation :: Create Equal Translations

ಸಮಾನ ಭಾಷಾಂತರದಲ್ಲಿ ಮೂಲಭಾಷೆಯಲ್ಲಿನ ಅಭಿವ್ಯಕ್ತಿಸುವ ಅರ್ಥವನ್ನು ಭಾಷಾಂತರಮಾಡುವ ಭಾಷೆಯಲ್ಲಿ ಸರಿಯಾದ ರೀತಿಯಲ್ಲಿ ತಿಳಿಸುತ್ತದೆ. ಮೂಲಭಾಷೆಯಲ್ಲಿನ ಕೆಲವು ವಿಚಾರಗಳು ಮತ್ತು ಭಾವನೆಗಳನ್ನು ಭಾಷಾಂತರಮಾಡುವ ಭಾಷೆಯಲ್ಲಿ ಸ್ವಲ್ಪವೂ ಬದಲಾವಣೆ ಇಲ್ಲದೆ ಸಮಾನ ಅರ್ಥ ಬರುವಂತೆ, ಭಾವನೆಗಳು ವ್ಯಕ್ತವಾಗುವಂತೆ ಉಳಿಸಿಕೊಳ್ಳಲು ಪ್ರಯತ್ನಿಸುವುದು ಬಹು ಮುಖ್ಯ. ಇದಕ್ಕೆ ಉದಾಹರಣೆಯಾಗಿ ಕೆಲವು ಮಾದರಿಗಳನ್ನು ಕೆಳಗೆ ನೀಡಿದೆ.

ನುಡಿಗಟ್ಟುಗಳು

ವ್ಯಾಖ್ಯಾನ --ನುಡಿಗಟ್ಟು ಎಂಬುದು ಪದಗಳ ಗುಂಪು. ಪ್ರತಿಯೊಂದು ಪದವನ್ನು ನೋಡಿದಾಗ ಅದರದೇ ಅರ್ಥವಿರುತ್ತದೆ. ಆದರೆ ಗುಂಪಾಗಿ ನುಡಿಗಟ್ಟಾದಾಗ ಅದರ ಅರ್ಥ ವಿಭಿನ್ನವಾಗಿರುತ್ತದೆ. ನುಡಿಗಟ್ಟುಗಳು, ಗಾದೆ, ನಾಣ್ಣುಡಿ, ಅಲಂಕಾರಗಳು ಇವುಗಳ ಅರ್ಥವನ್ನು ತಿಳಿದು ಅವುಗಳ ಭಾವನೆ, ಅಭಿವ್ಯಕ್ತಿಗೆ ಕುಂದಿಲ್ಲದಂತೆ ನಿಮ್ಮ ಭಾಷೆಯಲ್ಲಿ ಸಮಾನ ಅರ್ಥಕೊಡುವ ಪದಗಳನ್ನು ಬಳಸಿ ಭಾಷಾಂತರಿಸಿ.

ವಿವರಣೆ -ಸಾಮಾನ್ಯವಾಗಿ ನುಡಿಗಟ್ಟುಗಳನ್ನು ಇನ್ನೊಂದು ಭಾಷೆಗೆ ಅಕ್ಷರಷಃ ಭಾಷಾಂತರಮಾಡಲು ಸಾಧ್ಯವಿಲ್ಲ. ಬೇರೆ ಭಾಷೆಯಲ್ಲಿ ಸಹಜವಾಗಿರುವಂತೆ ನುಡಿಗಟ್ಟು ಗಳ ಅರ್ಥವನ್ನು ಅಭಿವ್ಯಕ್ತವಾಗುವಂತೆ ಭಾಷಾಂತರಿಸಬೇಕು. ಇಲ್ಲಿ ಮೂರು ಭಾಷಾಂತರಗಳನ್ನು ಕಾಣಬಹುದು.ಎಲ್ಲವೂ ಒಂದೇರೀತಿಯ ಅರ್ಥವನ್ನು ಕೊಡುವಂತದ್ದು ಅಪೋಸ್ತಲ ಕೃತ್ಯಗಳು 18:6:ರಲ್ಲಿ ಬಂದಿರುವುದು.

  • " ನಿಮ್ಮ ರಕ್ತಪಾತವು ನಿಮ್ಮ ತಲೆಯ ಮೇಲೆ ಕಾದಿದೆ! ನಾನು ನಿರ್ದೋಷಿ." (RSV)
  • " ನಿಮ್ಮ, ನಾಶಕ್ಕೆ ನೀವೇ ಕಾರಣ, ನೀವೇ ಇದರ ಹೊಣೆಯನ್ನು ಹೊರಬೇಕು! ಇದಕ್ಕೆ ನಾನು ಹೊಣೆಯಲ್ಲ." (GNB)
  • " ದೇವರು ನಿಮ್ಮನ್ನು ಶಿಕ್ಷಿಸಿದರೆ ಅದಕ್ಕೆ ಕಾರಣ ನೀವು ಹೊರತು ನಾನಲ್ಲ !" (TFT)

ಇವೆಲ್ಲವೂ ಪಾಪಗಳನ್ನು ದೂಷಿಸುವ ವಿಚಾರಗಳು. ಇಲ್ಲಿ ಕೆಲವರು ಬೇರೆ ಪದಗಳನ್ನು ಬಳಸಿದ್ದಾರೆ,ಬಳಸಿರುವ ನುಡಿಗಟ್ಟುಗಳು "ರಕ್ತ "ಅಥವಾ " ಶಿಕ್ಷಿಸುವುದು " ಎಂಬ ನೇರವಾದ ಪದವನ್ನು ಬಳಸಲಾಗಿದೆ. ನಿಮ್ಮ ಭಾಷಾಂತರ ಸಮಾನವಾಗಿದೆ ಬೇಕಾದರೆಅದು ತಪ್ಪು ಹೊರಿಸುವಿಕೆಯನ್ನು ಭಾವನಾತ್ಮಕವಾದ ರೀತಿಯಲ್ಲಿ ವ್ಯಕ್ತಪಡಿಸಲಾಗುವುದು

ಅಲಂಕಾರಗಳು

ವ್ಯಾಖ್ಯಾನ --ಅಲಂಕಾರಗಳು ಎಂದರೆ ಅರ್ಥದ ಚಮತ್ಕಾರದಿಂದಲೂ ಮಾತಿನ ಸೌಂದರ್ಯವನ್ನು ಹೆಚ್ಚುಮಾಡಿ, ಭಾವನೆಗಳನ್ನು ಪರಿಣಾಮಕಾರಿಯಾಗಿ, ಮನಸೆಳೆಯುವಂತೆ ಬಳಸುವ ಪದಗಳು.

ವಿವರಣೆಗಳು - ಪ್ರತಿಯೊಂದು ಪದದ ಸಹಜವಾದ ಅರ್ಥ ಅಲಂಕಾರ ಪದಗಳ ಅರ್ಥಕ್ಕಿಂತ ಭಿನ್ನವಾಗಿರುತ್ತದೆ. ಇಲ್ಲಿ ಕೆಲವು ಉದಾಹರಣೆಗಳನ್ನು ನೀಡಲಾಗಿದೆ.

  • ನಾನು ಒಡೆದು ನುಚ್ಚುನೂರಾದೆ ! ಇಲ್ಲಿ ಮಾತನಾಡುತ್ತಿರುವ ವ್ಯಕ್ತಿ ‘ಒಡೆದು ನುಚ್ಚುನೂರಾದೆ’ ಎಂದು ಹೇಳುತ್ತಿರುವುದು, ಅಕ್ಷರಷಃ ಅರ್ಥದಲ್ಲಿ ಅಲ್ಲ, ತನ್ನ ಸ್ಥಿತಿ ತುಂಬಾ ಹೀನಾಯವಾಗಿದೆ ಎಂದು ಹೇಳಲು ಈ ಪದ ಬಳಸಿದ್ದಾನೆ.
  • ಅವನು ನಾನು ಮಾತನಾಡುತ್ತಿರುವುದನ್ನು ನೋಡಿ ಕಿವಿ ಮುಚ್ಚಿಕೊಂಡ.ಇದರ ಅರ್ಥ ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಕೇಳಲು ಇಷ್ಟವಿಲ್ಲ ಎಂದು ತಿಳಿಸುವುದಕ್ಕಾಗಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
  • ಗಾಳಿಯು ಮರಗಳಲ್ಲಿ ನರಳುತ್ತಿತ್ತು. ಇದರ ಅರ್ಥ ಮರಗಳ ಮೂಲಕ ಬೀಸುತ್ತಿರುವ ಗಾಳಿಯ ಶಬ್ದ ಮನುಷ್ಯರು ನರಳುವಂತೆ ಕೇಳಿಸುತ್ತಿತ್ತು.
  • ಇಡೀ ವಿಶ್ವವೇ ಸಭೆ ಸೇರಿ ಬಂದಿತ್ತು. ಅಂದರೆ ವಿಶ್ವದ ಪ್ರತಿಯೊಬ್ಬರು ಬಂದಿರಲಿಲ್ಲ. ಬಹುಶಃ ಬಹುತೇಕ ಜನರು ಈ ಸಭೆಯಲ್ಲಿ ಇದ್ದರು.

ಪ್ರತಿಯೊಂದು ಭಾಷೆಯು ವಿವಿಧ ಅಲಂಕಾರಗಳನ್ನು ಬಳಸುತ್ತದೆ. ಇವುಗಳನ್ನು ನೀವು ಖಚಿತ ಪಡಿಸಿಕೊಳ್ಳಿ:

  • ಅಲಂಕಾರ ಪದಗಳನ್ನು ವಾಕ್ಯದಲ್ಲಿ ಬಳಸಿರುವುದನ್ನು ಗುರುತಿಸಿ.
  • ಅಲಂಕಾರ ಪದ ಬಳಕೆಯ ಉದ್ದೇಶವನ್ನು ಗುರುತಿಸಿ ತಿಳಿದುಕೊಳ್ಳಿ.
  • ಬಳಸಿರುವ ಅಲಂಕಾರಪದದ ನಿಜವಾದ ಅರ್ಥವನ್ನು ತಿಳಿದುಕೊಳ್ಳಿ.

ಅಲಂಕಾರಪದದ ನಿಜವಾದ ಅರ್ಥ ನೀಡುವ ಪದವನ್ನು ನೀವು ಭಾಷಾಂತರ ಮಾಡುವ ಭಾಷೆಯಲ್ಲಿ ಭಾಷಾಂತರ ಮಾಡಬೇಕು. ಇಲ್ಲಿ ಪ್ರತಿಯೊಂದು ಪದಕ್ಕೂ ಪ್ರತ್ಯೇಕ ಅರ್ಥ ನಿಡುವ ಅವಶ್ಯಕತೆ ಇಲ್ಲ.

ಒಮ್ಮೆ ನೀವು ನಿಜವಾದ ಪದದ ಅರ್ಥವನ್ನು ತಿಳಿದುಕೊಂಡರೆ ಭಾಷಾಂತರ ಭಾಷೆಯಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಬೇಕಾದಪದವನ್ನು ಆಯ್ಕೆ ಮಾಡಿಕೊಳ್ಳಬಹುದು., ಈ ಪದವು ಮೂಲಪದಕ್ಕಿರುವ ಅರ್ಥ ಮತ್ತು ಭಾವನೆಗಳನ್ನು ತಿಳಿಸುವಂತದ್ದಾಗಿರಬೇಕು.

(ಹೆಚ್ಚಿನ ಮಾಹಿತಿಗಾಗಿ ಅಲಂಕಾರಗಳು ಅಧ್ಯಾಯದಲ್ಲಿರುವ ಮಾಹಿತಿಯನ್ನು ನೋಡಬಹುದು.)

ಅಲಂಕಾರಿಕ ಪ್ರಶ್ನೆಗಳು.

ವ್ಯಾಖ್ಯಾನ – ಅಲಂಕಾರಿಕ ಪ್ರಶ್ನೆಗಳು.ಒಂದು ರೀತಿಯ ಪ್ರಶ್ನೆಯ ಮಾದರಿಯಾಗಿ ಮಾತನಾಡುವವರು ಲೇಖಕರು ಓದುಗರ ಗಮನವನ್ನು ಸೆಳೆಯಲು ಪ್ರಯತ್ನಿಸಲು ಬಳಸುವಂತದ್ದು.

ವಿವರಣೆ – ಅಲಂಕಾರಿಕ ಪ್ರಶ್ನೆಗಳು ಒಂದು ಮಾದರಿಯ ಪ್ರಶ್ನೆ ಆದರೆ ಈ ಪ್ರಶ್ನೆಗಳು ಉತ್ತರವಾಗಲೀ, ಮಾಹಿತಿಯನ್ನಾಗಲೀ ನಿರೀಕ್ಷಿಸುವುದಿಲ್ಲ. ಇವು ಸಾಮಾನ್ಯವಾಗಿ ಭಾವನೆಗಳನ್ನು ವ್ಯಕ್ತಪಡಿಸುವಂತದ್ದಾಗಿರುತ್ತದೆ. ಅಂದರೆ ಗದರಿಕೆ, ಎಚ್ಚರಿಕೆ,ಐಶ್ವರ್ಯ ಅಥವಾ ಇನ್ನು ಹೆಚ್ಚಿನದನ್ನು ತಿಳಿಸುತ್ತದೆ. ಉದಾಹರಣೆಗಾಗಿ ಮತ್ತಾಯ 3:7:ನೋಡಿ

“ಎಲೈ ಸರ್ಪಜಾತಿಯವರೇ ಮುಂದೆ ಕಾಣಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಉಪದೇಶ ಮಾಡಿದವರು ಯಾರು ?” ಇಲ್ಲಿ ಯಾವ ಉತ್ತರವನ್ನೂ ನಿರೀಕ್ಷಿಸಿಲ್ಲ. ಇಲ್ಲಿ ಯೊಹಾನನು ಮಾಹಿತಿಗಾಗಿ ಪ್ರಶ್ನಿಸಿಲ್ಲ; ಆದರೆ ಅವರನ್ನು ಗದರಿಸುತ್ತಿದ್ದಾನೆ.

ದೈವಕೋಪದ ಬಗ್ಗೆ ಈ ಜನರನ್ನು ಎಚ್ಚರಿಸಿ ಗದರಿಸುವುದರಿಂದ ಯಾವ ಒಳ್ಳೆಯ ಪರಿಣಾಮ ಬೀರುವುದಿಲ್ಲ.ಏಕೆಂದರೆ ಅವರು ನಿರಾಕರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಬಹುದು, ಮತ್ತು ತಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡಲು ಪ್ರಯತ್ನಿಸದೆ ಇರಬಹುದು. ನಿಮ್ಮ ಭಾಷೆಯಲ್ಲಿ ಅಲಂಕಾರಿಕ ಪ್ರಶ್ನೆಗಳ ಬಳಕೆ ಇಲ್ಲದಿದ್ದರೆ ಭಾಷಾಂತರಿಸುವಾಗ ನೀವು ಈ ಅಲಂಕಾರಿಕ ಪ್ರಶ್ನೆಗಳನ್ನು ಸರಳ ವಾಕ್ಯವಾಗಿ ಪರಿವರ್ತಿಸಬೇಕು ಆದರೆ ನೀವು ನೆನಪಿನಲ್ಲಿಡಬೇಕಾದ ಸಂಗತಿ ಎಂದರೆ ಮೂಲ ಭಾಷೆಯಲ್ಲಿನ ಅಲಂಕಾರಿಕ ಪ್ರಶ್ನೆಗಳನ್ನುನಿಮ್ಮ ಭಾಷೆಯಲ್ಲಿ ಭಾಷಾಂತರಿಸುವಾಗ ಉದ್ದೇಶವನ್ನು ಮತ್ತು ಅರ್ಥವನ್ನು ಅದೇರೀತಿಯ ಭಾವನೆಯಲ್ಲಿ ವ್ಯಕ್ತಪಡಿಸುವಂತಿರಬೇಕು

ಅಲಂಕಾರಿಕ ಪ್ರಶ್ನೆಗಳ ಅರ್ಥ, ಉದ್ದೇಶ ಮತ್ತು ಭಾವನೆಗಳನ್ನು ನಿಮ್ಮ ಭಾಷೆಯಲ್ಲಿ ತಿಳಿಸುವಾಗ ವಿಭಿನ್ನವಾದ ಅಲಂಕಾರವನ್ನು ತಿಳಿಸುವಾಗ ಅಲಂಕಾರಗಳನ್ನು ಬಳಸಿಕೊಳ್ಳಬಹುದು. (ಅಲಂಕಾರಿಕ ಪ್ರಶ್ನೆಗಳನ್ನು. ನೋಡಿ.)

ಆಶ್ಚರ್ಯಸೂಚಕ ಚಿನ್ಹೆ.

ವ್ಯಾಖ್ಯಾನ – ಭಾಷೆಗಳಲ್ಲಿ ಭಾವಸೂಚಕ ಭಾವನೆಗಳನ್ನು ವ್ಯಕ್ತಪಡಿಸಲು ಚಿನ್ಹೆಗಳನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಈ ಭಾವಸೂಚಕ ಪದ ಅಥವಾ ಪದಗಳು ಹೆಚ್ಚಾಗಿ ಭಾವನೆಗಳನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆಯೇ ವಿನಃ ಅವುಗಳಿಗೆ ಅರ್ಥ ಇಲ್ಲದೇ ಇರಬಹುದು. ಉದಾಹರಣೆ ** ಅಯ್ಯೋ ಓಹ್ “alas” or “wow” ಇಂಗ್ಲೀಷ್ ಭಾಷೆಯಲ್ಲಿ.

ಉದಾಹರಣೆಗೆ ನೋಡಿ, 1 ಸಮುವೇಲ 4:8: ಅಯ್ಯೋ ಮುಂಚೆ ಹೀಗಿದ್ದಿಲ್ಲ ಅಯ್ಯೋ, ದೇವರುಗಳ ಕೈಯಿಂದ ನಮ್ಮನ್ನು ಬಿಡಿಸುವವರಾರು? (ULB) ಹಿಬ್ರೂ ಪದ “woe” (ಅಯ್ಯೋ) ಎಂದು ಭಾಷಾಂತರವಾಗುವಾಗ ಏನೋ ಕೆಟ್ಟದ್ದು ನಡೆಯುತ್ತದೆ ಎಂಬ ಬಲವಾದ ಭಾವನೆ ವ್ಯಕ್ತವಾಗುತ್ತದೆ. ನಿಮ್ಮ ಭಾಷೆಯಲ್ಲಿ ಇದೇ ರೀತಿ ಬಲವಾದ ಭಾವನೆಯನ್ನು ವ್ಯಕ್ತಪಡಿಸುವ ಭಾವ ಸೂಚಕಪದಗಳನ್ನು ಬಳಸಬಹುದು.

ಪದ್ಯ.

ವ್ಯಾಖ್ಯಾನ – ಪದ್ಯದ ಒಂದು ಉದ್ದೇಶವೆಂದರೆ ಯಾವುದಾದರು ಒಂದು ಸಂಗತಿಯ ಕುರಿತು ಭಾವನೆಗಳನ್ನು ವ್ಯಕ್ತಪಡಿಸುವಂತದ್ದು.

ವಿವರಣೆ - ಪದ್ಯವು ಅನೇಕ ವಿಧಗಳ ಮೂಲಕ ಅನೇಕ ರೀತಿಯಲ್ಲಿ ಅನೇಕ ಭಾಷೆಗಳಲ್ಲಿ ವಿವರಿಸುತ್ತದೆ. ಇವುಗಳನ್ನು ಅನೇಕ ರೀತಿಯಲ್ಲಿ ವಿವರಿಸುವುದರೊಂದಿಗೆ ಅಲಂಕಾರಗಳು, ಭಾವಸೂಚಕಗಳ ಮೂಲಕ ತಿಳಿಸುತ್ತದೆ. ಪದವು ವ್ಯಾಕರಣವನ್ನು ಸಾಮಾನ್ಯ ಭಾಷೆಗಿಂತ ವಿಭಿನ್ನವಾಗಿ ಬಳಸುತ್ತದೆ. ಅಥವಾ ಪದಬಳಕೆಯನ್ನು ಅಥವಾ ನಮೂನೆಪದ ಉಚ್ಛಾರಣೆಯನ್ನು ನಿರ್ದಿಷ್ಟ ಲಯ ಮತ್ತು ಭಾವನೆಗಳ ಮೂಲಕ ತಿಳಿಸುತ್ತದೆ.

ದಾ.ಕೀ. 36:5: ನ್ನು ಉದಾಹರಣೆಗಾಗಿ ನೋಡಿ. ಯೆಹೋವನೇ ವಿಶ್ವಾಸಪೂರ್ಣ ಹೊಸ ಒಡಂಬಡಿಕೆಯು, ನಿನ್ನ ಪ್ರೀತಿಯು ಆಕಾಶದಷ್ಟು ಉನ್ನತವಾಗಿದೆ [ಆಕಾಶವನ್ನು ಮುಟ್ಟುವಷ್ಟು] ನಿನ್ನ ನಂಬಿಕೆಯು ಮೇಘಮಾರ್ಗವನ್ನು [(ಮುಟ್ಟುವಷ್ಟು)] ಮುಟ್ಟುತ್ತದೆ. (ULB)

ಈ ಪದ್ಯಭಾಗದ ಸಾಲುಗಳು ಎರಡು ಸಾಲುಗಳಲ್ಲಿ ಸಮಾನವಾಗಿ ಹಿಬ್ರೂ ಭಾಷೆಯ ಪದ್ಯದ ಶೈಲಿಯಲ್ಲೂ ತಿಳಿಸಿದೆ. ಮೂಲ ಹಿಬ್ರೂ ಭಾಷೆಯಲ್ಲಿ ಕ್ರಿಯಾಪದಗಳಿಲ್ಲ, ಸಾಮಾನ್ಯ ಆಡುಭಾಷೆಯಲ್ಲಿ ಬಳಸುವ ವಿಭಿನ್ನ ರೀತಿಯ ವ್ಯಾಕರಣಪದಗಳಿವೆ. ನಿಮ್ಮ ಭಾಷೆಯಲ್ಲಿ ವಿಭಿನ್ನ ರೀತಿಯಲ್ಲಿ ಪದ್ಯವನ್ನು ಗುರುತಿಸಿ ಹೇಳಬಹುದು. ನೀವು ಪದ್ಯವನ್ನು ಭಾಷಾಂತರಿಸುವಾಗ ನಿಮ್ಮ ಭಾಷೆಯಲ್ಲಿನ ಪದ್ಯದ ಮಾದರಿಯನ್ನು ನಿಮ್ಮ ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಬೇಕು. ಮತ್ತು ಮೂಲಪದ್ಯದಲ್ಲಿರುವ ಭಾವನೆಗಳನ್ನು ತಿಳಿಸಲು ಪ್ರಯತ್ನಿಸಬೇಕು.

ನೆನಪಿನಲ್ಲಿ ಇಟ್ಟುಕೊಳ್ಳಬೇಕಾದುದು ಮೂಲವಾಕ್ಯದಲ್ಲಿರುವ ಭಾವನೆಗಳು ಮತ್ತು ದೋರಣೆಗಳನ್ನು ಸ್ವಲ್ಪವೂ ಮುಕ್ಕಾಗದಂತೆ ತಿಳಿಸಬೇಕು. ನಿಮ್ಮ ಭಾಷೆಯಲ್ಲಿ ಸಮಾನವಾದ ಭಾವನೆಗಳನ್ನು ತಿಳಿಸುವ ಮಾದರಿಗಳನ್ನು ಸರಿಯಾದ ಅರ್ಥ ಬರುವಂತೆ ಭಾಷಾಂತರಿಸಬೇಕು. ಭಾಷಾಂತರವನ್ನು ಮಾಡುವ ಭಾಷೆಯಲ್ಲಿ ಅತ್ಯುತ್ತಮವಾದ, ನಿಖರವಾದ, ಸ್ಪಷ್ಟವಾದ, ಸಮಾನವಾದ, ಮತ್ತು ಸಹಜವಾದ ಅಭಿವ್ಯಕ್ತಿಯೊಂದಿಗೆ ಭಾಷಾಂತರವಾಗುವಂತೆ ಗಮನವಹಿಸಬೇಕು.


ಸಹಯೋಜಿತವಾಗಿ ಮಾಡುವ ಭಾಷಾಂತರವನ್ನು ಸೃಷ್ಟಿಸಬೇಕು.

Translation Manual :: Defining a Good Translation :: The Qualities of a Good Translation :: Create Collaborative Translations

ಒಂದೇ ಭಾಷೆಯನ್ನು ಮಾತನಾಡುವ ಒಂದು ತಂಡದವರು ಒಟ್ಟಾಗಿ ಸೇರಿ ಸಹಕಾರದೊಂದಿಗೆ ಮಾಡುವ ಸತ್ಯವೇದದ ಭಾಷಾಂತರವನ್ನು ಸಹಯೋಜಿತ ಭಾಷಾಂತರ ಎಂದು ಹೇಳಬಹುದು

ನೀವು ಮಾಡಿರುವ ಭಾಷಾಂತರ ಉತ್ತಮ ಮಟ್ಟದ್ದು ಆಗಿರಬೇಕಾಗಿದ್ದಲ್ಲಿ, ನೀವು ಭಾಷಾಂತರ ಮಾಡಬೇಕಾದ ಭಾಷೆಯನ್ನು ಮಾತನಾಡುವ ವಿಶ್ವಾಸಿಗಳೊಂದಿಗೆ ಭಾಷಾಂತರ ಮಾಡುವುದು, ಪರಿಶೀಲಿಸುವುದು ಮತ್ತು ಭಾಷಾಂತರಿಸಿದ ವಿಷಯಗಳನ್ನು ಹಂಚುವುದು ಇತ್ಯಾದಿ ಮಾಡಲು ಯೋಜನೆ ಇರಬೇಕು. ನಿಮ್ಮ ಭಾಷಾಂತರವನ್ನು ಉತ್ತಮ ಗುಣಮಟ್ಟದ್ದಾಗಿರಬೇಕೆಂದರೆ ಇನ್ನಷ್ಟು ಉತ್ತಮ ಪಡಿಸ ಬೇಕೆಂದರೆ ಈ ಕೆಳಗೆ ಕೊಟ್ಟಿರುವ ಅಂಶಗಳನ್ನು ಅಳವಡಿಸಿ.

  • ನೀವು ಮಾಡಿರುವ ಭಾಷಾಂತರವನ್ನು ಇನ್ನೊಬ್ಬರಿಗೆ ಕೇಳಿಸುವಂತೆ ಓದಿ ಕೇಳಿಸಿ. ನೀವು ಓದಿದ ಮೇಲೆ ನಿಮ್ಮ ಭಾಷಾಂತರದಲ್ಲಿರುವ ವಾಕ್ಯಗಳು ಒಂದರೊಡನೊಂದು ಹೊಂದಿಕೊಂಡು ಸರಿಯಾದ ಅರ್ಥ ಕೊಡುವಂತೆ ಇದೆಯೇ ಕೇಳಿ ತಿಳಿದುಕೊಳ್ಳಿ

ನೀವು ಬಳಸಿರುವ ಪದಗಳು, ನುಡಿಗಟ್ಟುಗಳು, ಪದಗುಚ್ಛಗಳು ನಿರ್ದಿಷ್ಟ ಹಾಗೂ ನಿಖರವಾಗಿ ಬಳಸಲಾಗಿದೆಯೇ ಎಂದು ಕೇಳಿ ತಿಳಿದುಕೊಳ್ಳಿ. ನಿಮ್ಮ ಸಮುದಾಯದವರು ಅವರದೇ ಭಾಷೆ ಆಡುವುದರಿಂದ ಸರಿಯಾದ ಉಚ್ಛಾರಣೆ, ಅರ್ಥ ಸ್ಫುರಿಸುವಂತಿದೆಯೇ ಎಂದು ತಿಳಿದು ಬೇಕಾದ ಬದಲಾವಣೆಗಳನ್ನು ಮಾಡಬೇಕು.

  • ಇನ್ನೊಬ್ಬರ ಸಹಾಯ ಪಡೆದು ನಿಮ್ಮ ಭಾಷಾಂತರದಲ್ಲಿ ಆಗಿರುವ ಕಾಗುಣಿತ ತಪ್ಪುಗಳನ್ನು ಗುರುತಿಸಿ ಹೇಳುವಂತೆ ಮಾಡಿ. ಕೆಲವೊಮ್ಮೆ ನೀವು ಅವಶ್ಯಕತೆ ಇಲ್ಲದಿದ್ದರೂ ಕೆಲವು ಪದಗಳನ್ನು ವಿಭಿನ್ನವಾಗಿ ಉಪಯೋಗಿಸಿರಬಹುದು, ಅದನ್ನು ಗುರುತಿಸಿ ಸರಿಪಡಿಸಿ. ಕೆಲವು ಪದಗಳು ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತವೆ., ಇನ್ನು ಕೆಲವು ಪದಗಳು ಎಲ್ಲಾ ಸನ್ನಿವೇಶಗಳಲ್ಲೂ ಬದಲಾಗದೆ ಉಳಿಯಬಹುದು. ಇಂತಹ ಬದಲಾವಣೆಗಳ ಬಗ್ಗೆ ಗಮನಕೊಡಿ, ಇದರಿಂದ ನಿಮ್ಮ ಭಾಷಾಂತರದಲ್ಲಿ ನೀವು ಉಪಯೋಗಿಸಿರುವ ಪದಗಳ ಕುರಿತುಯಾವ ನಿರ್ಧಾರಗಳನ್ನು ತೆಗೆದುಕೊಂಡಿದ್ದೀರಿ ಎಂಬುದು ತಿಳಿಯುತ್ತದೆ.
  • ನಿಮ್ಮ ಭಾಷೆಯನ್ನು ಮಾತನಾಡುವ ಸಮುದಾಯದಲ್ಲಿರುವವರು ವಿವಿಧ ಭಾಷೆಯನ್ನು ಮಾತನಾಡುವವರಾಗಿದ್ದು ನೀವು ಬರೆದಿರುವುದನ್ನು ಸುಲಭವಾಗಿ ಗುರುತಿಸಲು, ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆಯೇ ಕೇಳಿ ತಿಳಿದುಕೊಳ್ಳಿ. ನಿಮ್ಮ ಭಾಷಾಂತರದಲ್ಲಿ ಅರ್ಥವಾಗದೇ ಇರುವಂತದ್ದು, ಅಸ್ಪಷ್ಟವಾಗಿರುವಂತದ್ದು ಯಾವುದಾದರೂ ಇದೆಯೇ ಎಂದು ಇತರರಿಂದ ಕೇಳಿ ತಿಳಿದುಕೊಳ್ಳಿ. ನಿಮ್ಮ ಭಾಷಾಂತರ ಕೃತಿಯನ್ನು ಓದುಗರಿಗೆ ಸಮರ್ಪಿಸುವ ಮೊದಲು ಎಲ್ಲಾ ರೀತಿಯ ಬದಲಾವಣೆಗಳನ್ನು ಮಾಡಿ ಸರಿಪಡಿಸಿ.

ನಿಮ್ಮ ಭಾಷೆಯನ್ನು ಮಾತನಾಡುವ ವಿಶ್ವಾಸಿಗಳು ನಿಮ್ಮ ಭಾಷೆಯಲ್ಲಿ ಭಾಷಾಂತರಮಾಡಲು ಇಚ್ಛಿಸುವವರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾದರೆ ಪ್ರಯತ್ನಿಸುವುದನ್ನು ನೆನಪಿನಲ್ಲಿಡಿ, ಇವರು ನಿಮ್ಮೊಂದಿಗೆ ಭಾಷಾಂತರ ಮಾಡುವುದಲ್ಲದೆ ಪರಿಶೀಲಿಸುವುದು, ಭಾಷಾಂತರಿಸಿದ ವಿಷಯವನ್ನು ಇತರರಿಗೆ ಹಂಚುವುದು, ಉತ್ತಮ ಗುಣಮಟ್ಟ ಹೊಂದಿರುವಂತದ್ದು ಮತ್ತು ಹೆಚ್ಚೆಚ್ಚು ಜನರು ಇವುಗಳನ್ನು ಓದುವಂತೆ ಕೈಗೊಳ್ಳವುದು ಇವೆಲ್ಲವನ್ನು ಮಾಡುವವರಾಗಿರಬೇಕು.

(ನೀವು ಈ ವಿಡಿಯೋವನ್ನು ನೋಡಬಹುದು at http://ufw.io/guidelines_collab.)


ನಿರಂತರವಾಗಿ ನಡೆಯುವ ಭಾಷಾಂತರವನ್ನು ಸೃಷ್ಟಿಸಬೇಕು.

Translation Manual :: Defining a Good Translation :: The Qualities of a Good Translation :: Create Ongoing Translations

ಸತ್ಯವೇದದ ಭಾಷಾಂತರ ನಿರಂತರ ವಾಗಿ ನಡೆಯುತ್ತಿರಬೇಕು. ಮಾಡಿದ ಭಾಷಾಂತರವನ್ನು ಇತರರೊಂದಿಗೆ ಹಂಚಿಕೊಂಡು ಅವರು ಇದರ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತೆ ಎಂದುನೋಡಬೇಕು. ಅವರು ನೀಡುವ ಹಿಮ್ಮಾಹಿತಿಯಿಂದ ನಿಮ್ಮ ಭಾಷಾಂತರವನ್ನು ಉತ್ತಮಪಡಿಸಬಹುದು. ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಮತ್ತು ನಿಖರತೆಯನ್ನು ಹೆಚ್ಚಿಸಿ ಭಾಷಾಂತರವನ್ನು ಪುನರ್ ನಿರೂಪಿಸುವುದು ಯಾವಾಗಲು ಒಳ್ಳೆಯದು.

ಯಾರಿಗಾದರೂ ನಿಮ್ಮ ಭಾಷಾಂತರವನ್ನು ಉತ್ತಮಪಡಿಸಿಕೊಳ್ಳುವ ಒಳ್ಳೆಯ ಉದ್ದೇಶವಿದ್ದರೆ, ಭಾಷಾಂತರ ವಿಷಯವನ್ನು ಪರಿಷ್ಕರಿಸಿ ಬದಲಾವಣೆಗಳನ್ನು ಅಳವಡಿಸಬೇಕು ನೀವು ಭಾಷಾಂತರ ಸ್ಟುಡಿಯೋ ಅಥವಾ ಎಲೆಕ್ಟ್ರಾನಿಕ್ ಪಠ್ಯವನ್ನು ಪರಿಷ್ಕರಿಸುವವರು ಇದ್ದರೆ ಪರಿಷ್ಕರಣೆ ಪ್ರಕ್ರಿಯೆ ಮತ್ತು ಉತ್ತಮಗೊಳಿಸುವ ಕಾರ್ಯವನ್ನು ಮುಂದುವರಿಸಿ.

  • ಇವುಗಳ ಭಾಷಾಂತರಗಳನ್ನು ಓದಿ ಸಂಬಂಧಸಿದ ವಿಷಯಗಳಲ್ಲಿರುವ ಪ್ರಮುಖ ಅಂಶಗಳನ್ನು ಗುರುತಿಸಿ, ಪುನರ್ ವಿಮರ್ಶಿಸುವವರ ಅಗತ್ಯವಿದೆ
  • ಜನರು ಭಾಷಾಂತರವನ್ನು ಓದಿರುವರೇ, ಅಥವಾ ರೆಕಾರ್ಡ್ ಮಾಡಿರುವ ಭಾಷಾಂತರವನ್ನು ಆಲಿಸಿದ್ದಾರೆಯೇ ? ಮೂಲ ಶೋತೃಗಳ ಮೇಲೆ ಬೀರಿದ ಪರಿಣಾಮವೇ ನಿಮ್ಮ ಭಾಷಾಂತರ ಓದುವ ನಿಮ್ಮ ಸಮುದಾಯದಲ್ಲಿ ಜನರ ಮೇಲೆ ಅದೇ ಪರಿಣಾಮ ಬೀರಿದೆಯೇ ಎಂಬುದನ್ನು ತಿಳಿಯಲಿ ಇದು ಸಹಾಯ ಮಾಡುತ್ತದೆ.
  • ಭಾಷಾಂತರ ಮಾಡಿರುವುದನ್ನು ಅನೇಕ ಸಲ ತಿದ್ದುಪಡಿ ಮಾಡುವುದರಿಂದ ಇನ್ನಷ್ಟು ನಿಖರವಾಗಿ, ತಪ್ಪಿಲ್ಲದೆ, ಹೆಚ್ಚು ಸಹಜವಾಗಿ ಇರಲು ಅವಕಾವಿರುತ್ತದೆ. ಮೂಲಗ್ರಂಥದ ಅರ್ಥ ಕೆಡದಂತೆ ತಿಳಿಸುವ ಉದ್ದೇಶವನ್ನು ಯಾವಾಗಲೂ ಕಾಪಾಡಿಕೊಂಡು ಬರಬಹುದು.

ಯಾವಾಗಲೂ ನಿಮ್ಮ ಭಾಷಾಂತರವನ್ನು ಇನ್ನಷ್ಟು ನಿಖರವಾಗಿ ಮಾಡಲು ಅವಕಾಶವಿದೆ ಎಂಬುದನ್ನು ಮರೆಯಬೇಡಿ. ಈ ವಿಚಾರಗಳ ಬಗ್ಗೆ ಇತರ ಜನರೊಂದಿಗೂ ಮಾತನಾಡಿ ತಿಳಿದುಕೊಳ್ಳಿ. ಅನೇಕ ಜನರು ಇವೆಲ್ಲವೂ ಒಳ್ಳೆ ಉದ್ದೇಶಗಳು ಎಂದು ಒಪ್ಪಿಕೊಂಡಲ್ಲಿ ಭಾಷಾಂತರದಲ್ಲಿ ಬದಲಾವಣೆ ಮಾಡಬಹುದು

ಈ ರೀತಿ ಭಾಷಾಂತರ ಉತ್ತಮ, ಉತ್ತಮೋತ್ತಮ ಗೊಳ್ಳುವುದು. (ನೀವು http://ufw.io/guidelines_ongoing ಲ್ಲಿ ಈ ವಿಡಿಯೋ ಮೂಲಕ ನೋಡಿ ತಿಳಿದು ಕೊಳ್ಳಬಹುದು.)

Meaning-Based Translation

Translation Manual :: Meaning-Based Translation

ಭಾಷಾಂತರ ಪ್ರಕ್ರಿಯೆ.

Translation Manual :: Meaning-Based Translation :: The Translation Process

ಭಾಷಾಂತರ ಹೇಗೆ ಮಾಡುವುದು ?

ಭಾಷಾಂತರದಲ್ಲಿ ಎರಡು ವಿಚಾರಗಳನ್ನು ಮಾಡಬಹುದು.

  1. ಭಾಷಾಂತರ ಮಾಡಬೇಕಾದ ಮೂಲ ಪಠ್ಯ ಅರ್ಥವನ್ನು ಕಂಡು ಕೊಳ್ಳಬೇಕು ಪಠ್ಯದ ಅರ್ಥವನ್ನು ಕಂಡು ಕೊಳ್ಳಬೇಕು
  2. ಭಾಷಾಂತರ ಮಾಡಬೇಕಾದ ಭಾಷೆಯಲ್ಲಿ ಮೂಲಭಾಷೆಯ ಪಠ್ಯದ ವಿಷಯವನ್ನು ಅರ್ಥವನ್ನು ಪುನಃ ಅದೇ ರೀತಿ ಹೇಳಬೇಕು/ಬಳಸಬೇಕು. ಭಾಷಾಂತರ ಮಾಡುವಾಗ ಕೆಲವೊಮ್ಮೆ ಈ ಎರಡು ವಿಚಾರಗಳು ಚಿಕ್ಕ ಚಿಕ್ಕ ಹಂತಗಳಾಗಿ ವಿಂಗಡಿಸಲ್ಪಡುತ್ತದೆ. (See: Re-telling the Meaning)

ಕೆಳಗೆ ಇರುವ ನಕ್ಷೆ ಈ ಎರಡು ವಿಚಾರಗಳನ್ನು ಭಾಷಾಂತರ ಪ್ರಕ್ರಿಯೆಯಲ್ಲಿ ಹೇಗೆ ಅಳವಡಿಸಬಹುದು ಎಂಬುದನ್ನು ತೋರಿಸುತ್ತದೆ.


ಭಾಷಾಂತರ ಪ್ರಕ್ರಿಯೆ.

Translation Manual :: Meaning-Based Translation :: The Translation Process

ಸತ್ಯವೇದದಲ್ಲಿನ ವಾಕ್ಯಭಾಗದ ಅರ್ಥವನ್ನು ಅನಾವರಣಗೊಳಿಸಿ.

Translation Manual :: Meaning-Based Translation :: The Translation Process :: Discover the Meaning of the Text

ಸತ್ಯವೇದದಲ್ಲಿನ ಪದಗಳ ಅರ್ಥವನ್ನು ಹೇಗೆ ಅನಾವರಣಗೊಳಿಸುವುದು.

ಸತ್ಯವೇದದಲ್ಲಿನ ವಾಕ್ಯಭಾಗಗಳ ಅರ್ಥವನ್ನು ಅನಾವರಣಗೊಳಿಸಲು ವಿವಿಧ ಮಾರ್ಗಗಳು ನಮಗೆ ಸಹಾಯಮಾಡುತ್ತವೆ. ಇದು ವಾಕ್ಯಭಾಗವು ನಮಗೆ ಏನನ್ನು ತಿಳಿಸಲು ಪ್ರಯತ್ನಿಸುತ್ತದೆ ಎಂದು ನಾವು ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲಿ ಕೆಲವು ಸಲಹೆಗಳಿವೆ.

  1. ಭಾಷಾಂತರಿಸಬೇಕಾದ ವಾಕ್ಯಭಾಗವನ್ನು ಭಾಷಾಂತರಿಸುವ ಮೊದಲು ಚೆನ್ನಾಗಿ ಓದಿಕೊಳ್ಳಬೇಕು. ನೀವು ಭಾಷಾಂತರಿಸುವ ವಾಕ್ಯಭಾಗವನ್ನು ಭಾಷಾಂತರ ಮಾಡಲು ಪ್ರಾರಂಭಿಸುವ ಮೊದಲು ಚೆನ್ನಾಗಿ ಅರ್ಥಮಾಡಿಕೊಂಡು ಪ್ರಮುಖ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಭಾಷಾಂತರಿಸಬೇಕಾದ ವಾಕ್ಯಭಾಗವು ನಿರೂಪಣೆಯ ಮಾದರಿಯಲ್ಲಿ ಇದ್ದರೆ ಉದಾಹರಣೆಗೆ ಯೇಸು ಮಾಡಿದ ಮಹತ್ಕಾರ್ಯಗಳಲ್ಲಿ ಒಂದಾಗಿದ್ದರೆ ಅದನ್ನು ಮೂಲ ಸನ್ನಿವೇಶಕ್ಕೆ ತಕ್ಕಂತೆ ಚಿತ್ರಿಸಿ (ಕಣ್ಣಿಗೆ ಕಟ್ಟುವಂತೆ ಹೇಳಿ). ನೀವೇ ಆ ಸನ್ನಿವೇಶ ನಡೆಯುವಾಗ ಅಲ್ಲಿ ಇದ್ದು ಅನುಭವಿಸಿದಂತೆ ಕಲ್ಪಿಸಿಕೊಳ್ಳಿ. ಅಲ್ಲಿದ್ದ ಜನರು ಹೇಗೆ ಆ ಅನುಭವವನ್ನು ಸ್ವೀಕರಿಸಿದರು ಎಂದು ಕಲ್ಪಿಸಿಕೊಳ್ಳಿ.

  2. ಸತ್ಯವೇದವನ್ನು ಭಾಷಾಂತರಿಸುವಾಗ ಕೊನೆಪಕ್ಷ ಎರಡು ರೀತಿಯ ಸತ್ಯವೇದದ ಪ್ರತಿಗಳನ್ನು ನೀವು ನಿಮ್ಮ ಆಕರಗ್ರಂಥಗಳಾಗಿ ಬಳಸಬೇಕು. ಇಂತಹ ಎರಡು ರೀತಿಯ ಪ್ರತಿಗಳನ್ನು ಬಳಸುವುದರಿಂದ, ಹೋಲಿಸಿ ನೋಡುವುದರಿಂದ ಪದಗಳ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಒಂದೇ ದೃಷ್ಟಿಕೋನದಲ್ಲಿ ಆಲೋಚಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ. ಆ ಎರಡು ಆಕರಗಳಾಗಿ ಬಳಸುವ ಸತ್ಯವೇದಗಳು:

    • ಮೂಲಪ್ರತಿಗೆ ಹತ್ತಿರವಾದ ಭಾಷೆಯನ್ನು ಹೊಂದಿರುವ ULB (Unlocked Literal Bible) ನ್ ಒಂದು ಪ್ರತಿ.
    • ಮತ್ತೊಂದು ಅರ್ಥ ಆಧಾರಿತ ಪ್ರತಿ ಅಂದರೆ Unlocked Dynamic Bible (UDB). ಆಗಿರಬೇಕು.
  3. ನಿಮಗೆ ತಿಳಿಯದ ಪದಗಳನ್ನು ಕಲಿತುಕೊಳ್ಳುವ ಸಲುವಾಗಿ ಅನುವಾದ ಪದಗಳ ಸಂಪನ್ಮೂಲಳನ್ನು ಉಪಯೋಗಿಸಿರಿ. ಆ ವಕ್ಯಭಾಗದಲ್ಲಿ ಇರುವ ಪದಗಳನ್ನು ಸರಿಯಾರಿ ಅರ್ಥಮಾಡಿಕೊಳ್ಳಬೇಕು. ULT ಸತ್ಯವೇದದಲ್ಲಿನ ಟಿಪ್ಪಣಿಗಳನ್ನುಉಪಯೋಗಿಸಿರಿ. ಇವು ಅನುವಾದದ ಸ್ಟುಡಿಯೋದಲ್ಲಿ ಮತ್ತು Door43 ಜಾಲತಾಣದಲ್ಲಿ ಲಭ್ಯವಿರುತ್ತದೆ. ಇವುಗಳು ವಾಕ್ಯಗಳ ವಿವರಣೆ ನೀಡುತ್ತದೆ. ಇತರ ಅನುವಾದಗಳ ಸತ್ಯವೇದ, ಸಾಧ್ಯವಾದರೆ ಸತ್ಯವೇದ ವ್ಯಾಖ್ಯಾನಗಳನ್ನು ಸತ್ಯವೇದ ನಿಘಂಟುಗಳನ್ನು ಉಪಯೋಗಿಸಿರಿ.


ಅರ್ಥವನ್ನು ಹೇಳುವುದು.

Translation Manual :: Meaning-Based Translation :: The Translation Process :: Re-telling the Meaning

###ಪದಗಳ ಅರ್ಥವನ್ನು ಪುನಃ ಹೇಳುವುದು ಹೇಗೆ?

ಕೆಳಗೆ ಕೆಲವು ಸಲಹೆಗಳನ್ನು ಅನುಸರಿಸುವ ಕ್ರಮ ನೀಡಿದೆ. ಭಾಷಾಂತರ ಮಾಡುವವರು, ಸಹಜವಾದ, ಅರ್ಥವಾಗುವಂತಹ, ನಿರ್ದಿಷ್ಟವಾಗಿ ಭಾಷಾಂತರ ಮಾಡಲು ಸಹಾಯಮಾಡುವುದೇ ಈ ಸಲಹೆಗಳ ಉದ್ದೇಶವಾಗಿದೆ. ಸಾಮಾನ್ಯವಾಗಿ ಎಲ್ಲಾ ಭಾಷಾಂತರಗಾರರು ಮಾಡುವ ತಪ್ಪು ಏನೆಂದರೆ ಭಾಷಾಂತರ ಆಗುತ್ತಿರುವ ಭಾಷೆಯಲ್ಲಿನ ವಾಕ್ಯಭಾಗಗಳನ್ನು ಭಾಷಾಂತರ ಮಾಡುವಾಗ ಸಾಮಾನ್ಯವಾದ ರೂಪವನ್ನು ಉಪಯೋಗಿಸದೆ ಇರುವುದು. ಈ ಹಂತಗಳನ್ನು ಭಾಷಾಂತರ ಮಾಡುವಾಗ ಬಳಸಿದರೆ ಭಾಷಾಂತರಗಾರರು ಹೆಚ್ಚು ಸರಳವಾದ ಹಾಗೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಭಾಷಾಂತರವನ್ನು ನೀಡಲು ಶಕ್ತನಾಗುತ್ತಾನೆ.

  1. ಮೊದಲು ಮೂಲಭಾಷೆಯಲ್ಲಿನ ವಾಕ್ಯಭಾಗಗಳನ್ನು ಚೆನ್ನಾಗಿ ಓದಿ ಈ ವಾಕ್ಯಭಾಗಗಳು ಒಂದು ಪ್ಯಾರವಾಗಿರಬಹುದು ಅಥವಾ ಕತೆಯಲ್ಲಿ ನಡೆದ ಸನ್ನಿವೇಶವಾಗಿರಬಹುದು ಅಥವಾ ಒಂದು ಇಡೀ ಭಾಗವಾಗಿರಬಹುದು. (ಸತ್ಯವೇದದ ಕೆಲವು ಕಡೆ ಒಂದು ಶೀರ್ಷಿಕೆಯಿಂದ ಇನ್ನೊಂದು ಶೀರ್ಷಿಕೆಯವರೆಗೆ ಇರುತ್ತದೆ). ಇನ್ನು ಕೆಲವು ಕ್ಲಿಷ್ಟವಾದ ವಾಕ್ಯಭಾಗದಲ್ಲಿ ಒಂದು ಅಥವಾ ಎರಡು ವಾಕ್ಯಗಳಾಗಿರಬಹುದು.

  2. ಮೂಲಭಾಷೆಯಲ್ಲಿನ ವಾಕ್ಯಭಾಗಗಳನ್ನು ನೋಡದೆ ಭಾಷಾಂತರ ಮಾಡುವ ಭಾಷೆಯಲ್ಲಿ ಪದಷಃ ವಾಕ್ಯಭಾಗವನ್ನು ಪುನರ್ ಉಚ್ಚರಿಸಬೇಕು. ಹೀಗೆ ಹೇಳುವ ಸಂದರ್ಭದಲ್ಲಿ ಕೆಲವು ವಿಷಯ ಮರೆತುಹೋದರೂ ಕೊನೆಯವರೆಗೂ ನಿಮಗೆ ನೆನಪಿರುವುದನ್ನು ಹೇಳಬಹುದು.

  3. ಮತ್ತೊಮ್ಮೆ ಮೂಲಭಾಷೆಯ ವಾಕ್ಯಭಾಗವನ್ನು ನೋಡಿರಿ. ಈಗ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಪುನಃ ಹೇಳಲು ಪ್ರಾರಂಭಿಸಿ.

  4. ಈಗ ಮತ್ತೊಮ್ಮೆ ಮೂಲಭಾಷೆಯ ವಾಕ್ಯಭಾಗವನ್ನು ಗಮನದಿಂದ ನೋಡಿ, ನೀವು ಹೇಳಲು ಮರೆತ ಪದಗಳನ್ನು, ವಾಕ್ಯಗಳನ್ನು ಪುನಃ ನೋಡಿ ಈಗ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ನೆನಪಿನಲ್ಲಿರುವ ವಿಚಾರವನ್ನು ಪುನಃ ಹೇಳಿ.

  5. ನೀವು ನೆನಪಿಸಿಕೊಂಡು ಪುನಃ ಹೇಳಿದ ಇಡೀ ವಾಕ್ಯಭಾಗವನ್ನು ಬರೆಯಿರಿ.

  6. ಬರೆದಾದ ಮೇಲೆ ಮೂಲಭಾಷೆಯ ವಾಕ್ಯಭಾಗವನ್ನು ಪರಿಶೀಲಿಸಿ ಯಾವುದಾದರೂ ಅಂಶಗಳನ್ನು ಬರೆಯಲು ಮರೆತಿರುವಿರಾ ಎಂದು ಪರಿಶೀಲಿಸಿ ಮರೆತ ವಿಚಾರಗಳು ವಾಕ್ಯದ ಸೂಕ್ತವಾದ ಸ್ಥಳದಲ್ಲಿ ಸರಳವಾಗಿರುವಂತೆ ಸೇರಿಸಿ.

  7. ನಿಮಗೇನಾದರೂ ಮೂಲಭಾಷೆಯಲ್ಲಿ ಅರ್ಥವಾಗದಿದ್ದರೆ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಅದನ್ನು ಹಾಗೆಯೇ ಬರೆದು[ಅರ್ಥವಾಗಲಿಲ್ಲ] ಎಂದು ಬರೆಯಿರಿ ಮತ್ತು ಉಳಿದ ವಾಕ್ಯಭಾಗವನ್ನು ಬರೆಯಲು ತೊಡಗಿ.

  8. ಈಗ ನೀವು ಬರೆದದ್ದನ್ನು ಓದಿ. ನೀವು ಬರೆದಿರುವುದು ನಿಮಗೆ ಸರಿಯಾಗಿ ಅರ್ಥವಾಗುತ್ತದೋ ಇಲ್ಲವೋ ಓದಿ ನೋಡಿ. ಯಾವ ವಾಕ್ಯಗಳನ್ನು ಉತ್ತಮಪಡಿಸಿ ಬರೆಯಬೇಕೆಂದು ಗುರುತಿಸಿ.

  9. ಮುಂದುವರೆದು ಮುಂದಿನ ಭಾಗವನ್ನು ನೋಡಿ. ಮೂಲಭಾಷೆಯಲ್ಲಿ ಮತ್ತೊಮ್ಮೆ ಓದಿ. 2 ಹಂತದಿಂದ ೮ ನೆ ಯ ಹಂತದ ವರೆಗಿನ ಸಲಹೆಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸಿ.

ಕೃತಜ್ಞತೆ: ಅನುಮತಿಯಿಂದ ಬಳಸುವುದು.© 2013, SIL International, Sharing Our Native Culture, p. 59.

ರೂಪ ಮತ್ತು ಅರ್ಥ

Translation Manual :: Meaning-Based Translation :: Form and Meaning

ರೂಪ ಮತ್ತು ಅರ್ಥಗಳ ವಿವಿರಣೆ

ಭಾಷಾಂತರ ವಾಕ್ಯಭಾಗದಲ್ಲಿ ಎರಡು ಮುಖ್ಯಪದಗಳನ್ನು ಉಪಯೋಗಿಸುತ್ತಾರೆ. "ರೂಪ " ಮತ್ತು “ಅರ್ಥ.” ಸತ್ಯವೇದ ಭಾಷಾಂತರದಲ್ಲಿ ಪದಗಳನ್ನು ವಿಶೇಷರೀತಿಯಲ್ಲಿ ಬಳಸಲಾಗುತ್ತದೆ. ಅವುಗಳಿಗೆ ಈ ಕೆಳಗೆ ವಿವರಣೆಗಳನ್ನು ನೀಡಿದೆ.

  • ರೂಪ - ಇದು ಭಾಷೆಯ ರಚನೆ ಪುಟದಲ್ಲಿ ಮಾಡುವಾಗ ಅಥವಾ ಮಾತನಾಡುವಾಗ ಬರುತ್ತದೆ. “ರೂಪ” ಪದಗಳನ್ನು ಸೇರಿಸಿ ಮಾಡುವ ವಾಕ್ಯಗಳು ಭಾಷೆಯ ರಚನೆ ಆಗುತ್ತದೆ. ಪದಗಳ ಕ್ರಮ, ವ್ಯಾಕರಣ, ನುಡಿಗಟ್ಟು ಮತ್ತು ಇನ್ನೂ ಅನೇಕ ಲಕ್ಷಣಗಳನ್ನು ವಾಕ್ಯಭಾಗದ ರಚನೆ ಹೊಂದಿರುತ್ತದೆ.
  • ಅರ್ಥ ಈ ಕೆಳಗೆ ಕೊಟ್ಟಿರುವ ಪರಿಕಲ್ಪನೆಗಳು ಅಥವಾ ಉದ್ಧೇಶ ವಾಕ್ಯಭಾಗಗಳಲ್ಲಿ ಓದುಗರಿಗೆ ಅಥವಾ ಕೇಳುಗರಿಗೆ ತಿಳಿ ಹೇಳುವುದು. ಮಾತನಾಡುವವ ಅಥವಾ ಲೇಖಕನು ಭಾಷೆಯ ವಿವಿಧ ರೂಪ/ ಮೂಲಕ ವಿಷಯವನ್ನು ತಿಳಿಸುತ್ತಾರೆ. ವಿವಿಧ ಜನರು ವಿವಿಧ ಅರ್ಥಗಳನ್ನು ಕೇಳುವ ಓದುವ ನಮೂನೆಗಳನ್ನು ಅದೇ ಭಾಷೆಯಲ್ಲಿ ತಿಳಿಸುತ್ತಾರೆ. ರೂಪ ಮತ್ತು ಅರ್ಥಗಳಲ್ಲಿ ಒಂದೇ ಅಲ್ಲ ಎಂಬ ವಿಷಯ ರೀತಿಯಿಂದ ತಿಳಿದುಬರುತ್ತದೆ.

ಒಂದು ಉದಾಹರಣೆ.

ನಮ್ಮ ಸಹಜ ಜೀವನದಿಂದ ಒಂದು ಉದಾಹರಣೆಯನ್ನು ನೋಡೋಣ. ನಿಮ್ಮ ಸ್ನೇಹಿತ/ಳು ನಿಮಗೆ ಒಂದು ವಿಷಯವನ್ನು ಬರೆದು ಕಳುಹಿಸಿದ್ದಾರೆ ಎಂದು ತಿಳಿಯಿರಿ.

  • “ಈ ವಾರ ನನಗೆ ತುಂಬಾ ಸಂಕಷ್ಟವುಂಟುಮಾಡಿದೆ. ನನ್ನ ತಾಯಿ ಅನಾರೋಗ್ಯದಿಂದ ನರಳುತ್ತಿದ್ದುದರಿಂದ ಅವಳನ್ನು ವೈದ್ಯರ ಬಳಿ ಕರೆದುಕೊಂಡುಹೋಗಿ ಔಷಧಿಯನ್ನು ಕೊಂಡುಕೊಳ್ಳಲು ನನ್ನಲ್ಲಿರುವ ಎಲ್ಲಾ ಹಣ ಖರ್ಚಾಯಿತು. ನನ್ನ ಬಳಿ ಏನೂ ಉಳಿದಿಲ್ಲ. ಮುಂದಿನವಾರದ ಕೊನೆಯವರೆಗೂ ನನ್ನ ಮಾಲಿಕ ನನಗೆ ಸಂಬಳಕೊಡುವುದಿಲ್ಲ. ನಾನು ಈ ವಾರವೆಲ್ಲಾ ಹೇಗೆ ಕಳೆಯುವುದೋ ಗೊತ್ತಿಲ್ಲ. ಆಹಾರ ಕೊಂಡುಕೊಳ್ಳಲು ಸಹ ನನ್ನ ಬಳಿ ಹಣವಿಲ್ಲ”

ಅರ್ಥ

ನಿಮ್ಮ ಸ್ನೇಹಿತ ಈ ಬರವಣಿಗೆಯನ್ನು ಏಕೆ ಕಳುಹಿಸಿದ ಎಂದು ಯೋಚಿಸುತ್ತೀರಾ? ಈ ವಾರದ ಬಗ್ಗೆ ಹೇಳಲು ಇರಬಹುದೇ? ಬಹುಷಃ ಇಲ್ಲ. ಅವನ ಉದ್ದೇಶ ನಿಮಗೆ ತನ್ನ ಸ್ಥಿತಿಯನ್ನು ಹೇಳುವುದು.

  • “ನೀನು ನನಗೆ ಹಣ ಕೊಡಬೇಕೆಂದು ಬಯಸಿದ್ದೆ”

ಇದು ನಿಮಗೆ ಪತ್ರ ಕಳುಹಿಸಿದ ವ್ಯಕ್ತಿಯು ಅವನಿಗೆ ಹಣ ನೀಡಬೇಕೆಂಬ ಪ್ರಾಥಮಿಕ ಅರ್ಥ ದ ಮೂಲಕ ತಿಳಿಸಿದ್ದಾನೆ. ಇದೊಂದು ವರದಿಯಲ್ಲ, ಆದರೆ ಇದೊಂದು ಬೇಡಿಕೆ. ಹೀಗೆ ತನ್ನ ಸ್ನೇಹಿತನನ್ನು ನೇರವಾಗಿ ಹಣ ಕೇಳುವುದು ಕೆಲವು ಸಂಸ್ಕೃತಿಯಲ್ಲಿ ಒರಟು ಅಥವಾ ಅಭಾಸವಾಗಿರುತ್ತದೆ.

ಆದುದರಿಂದ ಅವನು ರೂಪ ಮೂಲಕ ಬೇಡಿಕೆಯನ್ನು ಇಡುವುದರ ಮೂಲಕ ಅವನ ಅವಶ್ಯಕತೆಗೆ ಸಹಾಯ ಮಾಡಬೇಕೆಂದು ಅರ್ಥ ಮಾಡಿಕೊಳ್ಳುತ್ತಾನೆ. ಅವನು ಸಂಸ್ಕೃತಿಯಲ್ಲಿ ಸಮ್ಮತವಾಗಿರುವಂತೆ ತನ್ನ ಹಣದ ಅವಶ್ಯಕತೆ ಬಗ್ಗೆ ಬರವಣಿಗೆಯ ಮೂಲಕ ಕೋರುತ್ತಾನೆ. ಆದರೆ ನೀವು ಅದಕ್ಕೆ ಪ್ರತಿಕ್ರಿಯೆ ನೀಡಬೇಕೆಂದು ನಿರ್ಬಂಧಿಸಲಿಲ್ಲ.

ಅವನು ತನ್ನ ಬಳಿ ಹಣ ಇಲ್ಲದೆ ಇರಲು ಕಾರಣವನ್ನು ವಿವರಿಸಿದ (ಅವನ ತಾಯಿ ಅನಾರೋಗ್ಯದಿಂದ ನರಳುತ್ತಿದ್ದಳು) ಅವನ ಅವಶ್ಯಕತೆ ತಾತ್ಕಾಲಿಕವಾದುದು ಮಾತ್ರ ಅವನು ಹಿಂತಿರುಗಿಸಿಕೊಡುವವರೆಗೆ)ಏಕೆಂದರೆ ಅವನ ಪರಿಸ್ಥಿತಿ ತುಂಬಾ ಶೋಚನೀಯವಾಗಿತ್ತು (ಆಹಾರವಿಲ್ಲದೆ). ಇನ್ನು ಇತರರ ಸಂಸ್ಕೃತಿಯಲ್ಲಿ ಬೇಡಿಕೆಯನ್ನು ನೇರವಾಗಿ ಕೇಳುವ ರೂಪರೂಪ ಹೆಚ್ಚು ಸಮರ್ಪಕವಾಗಿ ತಿಳಿಸುವ ಅರ್ಥವುಳ್ಳದ್ದು

ರೂಪ/ ಮಾದರಿ

ಈ ಉದಾಹರಣೆಯಲ್ಲಿ ರೂಪ ವಾಕ್ಯಭಾಗದ ಇಡೀ ಅರ್ಥ ಈ ವಿಷಯದಲ್ಲಿದೆ. ಅರ್ಥ ಎಂಬುದು ಇಲ್ಲಿ "ನೀನು ನನಗೆ ಹಣ ಕೊಡಬೇಕೆಂದು ಬಯಸುತ್ತೇನೆ!” ಎಂಬುದು. ನಾವು ಈ ಪದಗಳನ್ನು ಇದೇ ರೀತಿಉಪಯೋಗಿಸುತ್ತೇವೆ ರೂಪ/ ಮಾದರಿ ನಾವು ಭಾಷಾಂತರಿಸುವ ಇಡೀ ವಾಕ್ಯಭಾಗವನ್ನು ಉಲ್ಲೇಖಿಸುವಂತದ್ದು ಅರ್ಥ ಎಂಬುದು ಉದ್ದೇಶ ಅಥವಾ ವಾಕ್ಯಭಾಗದ ಮೂಲಕ ತಿಳಿಸಲು ಪ್ರಯತ್ನಿಸುವ ಉದ್ದೇಶಗಳು, ವಿವಿಧ ಭಾಷೆ ಮತ್ತು ವಿವಿಧ ಸಂಸ್ಕೃತಿಯ ಮೂಲಕ ಅರ್ಥವನ್ನು ತಿಳಿಸುವ ರೀತಿಯೇ ಉತ್ತಮ ಮಾದರಿ.


ರೂಪ ಮತ್ತು ಅರ್ಥ

Translation Manual :: Meaning-Based Translation :: Form and Meaning

ಮಾದರಿಯ / ನಮೂನೆಯ ಪ್ರಾಮುಖ್ಯತೆ.

Translation Manual :: Meaning-Based Translation :: Form and Meaning :: The Importance of Form

ಆಕಾರವು ಏಕೆ ಮುಖ್ಯವಾದುದು?

ವಾಕ್ಯಭಾಗದ ಅರ್ಥ ತುಂಬಾ ನಿರ್ಣಾಯಕವಾದ ಮೂಲತತ್ವ. ಅದೇ ರೀತಿ ವಾಕ್ಯಭಾಗದ ಆಕಾರವು ಸಹ ಅಷ್ಟೇ ಪ್ರಮುಖವಾದುದು. ಇದು ಅರ್ಥ ಕೊಡುವ ಒಂದು ಸಾಧನ. ಕೆಲವೊಮ್ಮೆ ಇದರ ಅರ್ಥವನ್ನು ಅರ್ಥ ಮಾಡಿಕೊಳ್ಳಲು ಮತ್ತು ಅದನ್ನು ಸ್ವೀಕರಿಸಲು ಅಡ್ಡಿಮಾಡುವಂತಾಗಬಹುದು. ಆದುದರಿಂದ ಆಕಾರಗೆ ಅದರದೇ ಆದ ಅರ್ಥವಿರುತ್ತದೆ.

ಉದಾಹರಣೆ – ದಾವೀದನ.ಕೀರ್ತನೆ.9:1-2: ಈ ವಾಕ್ಯಗಳನ್ನು ಭಾಷಾಂತರಮಾಡಿರುವ ನಮೂನೆಯಲ್ಲಿ ಇರುವ ವ್ಯತ್ಯಾಸವನ್ನು ಗಮನಿಸಿ. ನ್ಯೂ ಲೈಫ್ ವರ್ಶನ್ ನಿಂದ :

ಯೆಹೋವನೇ ಹೃದಯಪೂರ್ವಕವಾಗಿ ನಿನಗೆ ಸ್ತೋತ್ರಸಲ್ಲಿಸುವೆನು. ನೀನು ಮಾಡಿದ ಅದ್ಭುತ ಕಾರ್ಯಗಳನ್ನು ವರ್ಣಿಸುವೆನು. ಪರಾತ್ಪರನೇ, ನಿನ್ನಲ್ಲಿ ನಾನು ಸಂತೋಷಿಸುವೆನು. ಉತ್ಸಾಹದಿಂದ ನಿನ್ನ ನಾಮವನ್ನು ಕೀರ್ತಿಸುವೆನು.

New Revised Standard ಅನುವಾದದಿಂದ

ಯೆಹೋವನೇ ನನ್ನ ಹೃದಯಪೂರ್ವಕವಾಗಿ, ನಿನಗೆ ಕೃತಜ್ಞತೆ ಸಲ್ಲಿಸುವೆನು. ನೀನು ಮಾಡಿದ ಮಹತ್ಕಾರ್ಯಗಳನ್ನು ವರ್ಣಿಸಿ ಕೊಂಡಾಡುವೆನು. ನಿನ್ನಲ್ಲಿ ಹರ್ಷಿಸಿ ಉತ್ಸಾಹಪಡುವೆನು. ಪರಾತ್ಪರನೇ, ಮಹೋನ್ನತನೇ, ನಿನ್ನ ನಾಮವನ್ನು ಮಹಿಮೆಪಡಿಸಿ ಕೊಂಡಾಡುವೆನು.

ಮೊದಲ ಪ್ರತಿಯು ಕಥನ ರೂಪದ ನಮೂನೆಯಲ್ಲಿ ಹೇಳುತ್ತದೆ. ಕೀರ್ತನೆಯ ಪ್ರತಿಯೊಂದು ಸಾಲನ್ನು ಪ್ರತ್ಯೇಕ ವಾಕ್ಯಗಳಂತೆ ಹೇಳಿದೆ. ಎರಡನೇ ಪ್ರತಿಯಲ್ಲಿ ವಾಕ್ಯದ ಸಾಲುಗಳನ್ನು ಪದ್ಯದರೂಪದಲ್ಲಿ ಬರೆಯಲಾಗಿದೆ. ಭಾಷಾಂತರವಾಗುವ ಭಾಷೆಯಲ್ಲೂ ಈ ರೀತಿ ಪದ್ಯದ ನಮೂನೆಯಲ್ಲಿ ಪ್ರತ್ಯೇಕ ವಾಕ್ಯಗಳಲ್ಲಿ ಬರೆಯಲಾಗಿದೆ. ಮೊದಲ ಎರಡು ಸಾಲುಗಳು ಒಂದು ಅಲ್ಪವಿರಾಮ ಚಿನ್ಹೆಯೊಂದಿಗೆ ಸಾಲುಗಳನ್ನು ಮುಂದುವರೆಸಿದೆ. ಇದು ಎರಡೂ ಸಾಲುಗಳು ಒಂದರೊಡನೊಂದು ಸಂಬಂಧಿಸಿದ್ದು ಎರಡೂ ಒಂದೇರೀತಿಯ ವಿಷಯಗಳನ್ನು ತಿಳಿಸುತ್ತವೆ. ಮೂರನೇ ಮತ್ತು ನಾಲ್ಕನೇ ಸಾಲುಗಳು ಸಹ ಇದೇ ರೀತಿಯ ವ್ಯವಸ್ಥೆಯಲ್ಲಿದೆ. ಎರಡನೇ ಪ್ರತಿಯನ್ನು ಓದಿದ ಓದುಗನಿಗೆ ಈ ಕೀರ್ತನೆ ಒಂದು ಪದ್ಯ ಅಥವಾ ಒಂದು ಹಾಡು ಎಂದು ತಿಳಿದುಕೊಳ್ಳುವನು, ಏಕೆಂದರೆ ಅದರ ಆಕೃತಿ ಆ ರೀತಿ ಇದೆ. ಮೊದಲನೆಯ ಓದುಗನೂ ಸಹ ಅದನ್ನು ಪದ್ಯ ನಮೂನೆಯಲ್ಲಿದೆ ಎಂದು ತಿಳಿದುಕೊಳ್ಳುವರು. ಏಕೆಂದರೆ ಇದನ್ನು ಗದ್ಯರೂಪದಲ್ಲಿ ಬರೆಯದೆ ಇರುವುದರಿಂದ. ಮೊದಲನೆ ಪ್ರತಿಯ ಓದುಗರು ಗೊಂದಲಕ್ಕೆ ಒಳಗಾಗಬಹುದು ಏಕೆಂದರೆ ದಾವೀದನ ಕೀರ್ತನೆಗಳು ಪದ್ಯದ ನಮೂನೆಯಲ್ಲಿದೆ. ಆದರೆ ಅದರಂತೆ ನಮೂದಿಸಿರುವುದಿಲ್ಲ. ಇಲ್ಲಿರುವ ಪದಗಳು ಸಂತೋಷಕರವಾದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಭಾಷಾಂತರಗಾರರಾಗಿ ನಿಮ್ಮ ಭಾಷೆಯಲ್ಲಿ ಸಂತೋಷಕರ ಹಾಡಿನಂತೆ ಇದನ್ನು ವ್ಯಕ್ತಪಡಿಸಬೇಕು.

New International Version: ನ 2ನೇ ಸಮುವೇಲ 18:33b ವಾಕ್ಯದ ನಮೂನೆಯಲ್ಲಿ ಗಮನಿಸಿ.

" ನನ್ನ ಮಗನೇ, ಅಬ್ಷಾಲೋಮನೇ! ನನ್ನ ಮಗನೇ ನನ್ನ ಮಗನಾದ ಅಬ್ಷಾಲೋಮನೇ! ನಿನ್ನ ಬದಲು ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ, ಮಗನೇ, ಈ ವಾಕ್ಯದಲ್ಲಿರುವ ಅರ್ಥ ಏನೆಂದು ಕೆಲವರು ಈ ರೀತಿ ಹೇಳಬಹುದು. " ನನ್ನ ಮಗನಾದ ಅಬ್ಷಾಲೋಮನ ಬದಲು ನಾನು ಸತ್ತುಹೋಗಿದ್ದರೆ ಚೆನ್ನಾಗಿತ್ತು ಎಂದು ಬಯಸುತ್ತೇನೆ.ಎಂದು.

ಈ ಮಾತುಗಳಲ್ಲಿ ಇರುವ ಅರ್ಥವನ್ನು ಸಂಕ್ಷಿಪ್ತಗೊಳಿಸಿ ತಿಳಿಸುತ್ತದೆ. ಇದರ ರೂಪ ವಿಷಯಕ್ಕಿಂತ ಹೆಚ್ಚಿನದ್ದನ್ನುಪರಿಣಾಮಕಾರಿಯಾಗಿ ತಿಳಿಸುತ್ತದೆ. ಇಲ್ಲಿ ಬಳಸಿರುವ “ಮಗನೇ, ಮಗನೇ” ಎಂಬ ಪದಗಳು, ಅಬ್ಷಾಲೋಮ್, ಓಹ್ ಎಂಬ ಪದಗಳು ಪದೇ ಪದೇ ಉಚ್ಛಾರವಾಗಿರುವುದರಿಂದ ಇದು ಮಗನನ್ನು ಕಳೆದುಕೊಂಡ ಒಬ್ಬ ತಂದೆಯ ತೀವ್ರವಾದ ಭಾವನೆಗಳನ್ನು ತಿಳಿಸುತ್ತದೆ. ಭಾಷಾಂತರಗಾರರಾಗಿ ಇಲ್ಲಿ ಕೇವಲ ಪದಗಳನ್ನು ಮಾತ್ರ ಭಾಷಾಂತರಿಸದೆ ಪದಗಳಲ್ಲಿರುವ ಭಾವನೆಗಳನ್ನು ಈ ಮಾದರಿಯಲ್ಲಿ ಹಿಡಿದಿಡುವುದನ್ನು ಗಮನಿಸಬೇಕು.

2 ನೇ ಸಮುವೇಲ 18:33b, ವಾಕ್ಯವನ್ನುಮೂಲಭಾಷೆಯಲ್ಲಿರುವ ಭಾವನೆಗೆ ಚ್ಯುತಿ ಬರದಂತೆ ಅರ್ಥಪೂರ್ಣವಾಗಿ ಅದೇ ಮಾದರಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಆದುದರಿಂದ ನಾವು ಸತ್ಯವೇದದ ವಾಕ್ಯಭಾಗವನ್ನು ಸರಿಯಾಗಿ ಓದಿನೋಡಿ ಪರೀಕ್ಷಿಸಿ ನಮ್ಮನ್ನು ನಾವೇ ಇಲ್ಲಿರುವ ನಮೂಣೆಯ ಬಗ್ಗೆ ಪ್ರಶ್ನಿಸಿಕೊಂಡು ಮೂಲ ಅರ್ಥಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಇಲ್ಲಿ ಯಾವ ಮನೋಧೋರಣೆ ಅಥವಾ ಭಾವನೆಗಳನ್ನು ಇದು ತಿಳಿಸುತ್ತಿದೆ? ಇನ್ನೂ ಅನೇಕ ಪ್ರಶ್ನೆಗಳು ನಮಗೆ ನಮೂನೆ ಮತ್ತು ಅದರ ಅರ್ಥ ತಿಳಿಯಲು ಸಹಾಯ ಮಾಡಬಲ್ಲವು. ಅವುಗಳೆಂದರೆ :

  • ಇದನ್ನು ಬರೆದವರು ಯಾರು ?
  • ಇದನ್ನು ಸ್ವೀಕರಿಸಿದವರು ಯಾರು ?
  • ಯಾವ ಸನ್ನಿವೇಶದಲ್ಲಿ ಇದನ್ನು ಬರೆಯಲಾಯಿತು ?
  • ಯಾವ ರೀತಿ ಪದಗಳು ಮತ್ತು ಪದಗುಚ್ಛಗಳನ್ನು ಇಲ್ಲಿ ಆಯ್ಕೆಮಾಡಿದೆ ಮತ್ತು ಏಕೆ ?
  • ಇಲ್ಲಿ ಬಳಸಿರುವ ಪದಗಳು ತುಂಬಾ ಭಾವನಾತ್ಮಕ ಪದಗಳೇ ಅಥವಾ ಈ ಪದಗಳ ನಮೂನೆಯಲ್ಲಿ ವಿಶೇಷತೆ ಏನಾದರೂ ಇದೆಯೇ ?

ನಾವು ಪದ ಮತ್ತು ನಮೂನೆಯ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಭಾಷಾಂತರ ಮಾಡುವ ಭಾಷೆ ಮತ್ತು ಸಂಸ್ಕೃತಿಗೆ ತಕ್ಕಂತೆ ಅರ್ಥ ಕೊಡುವ ಪದಗಳನ್ನು ಆಯ್ಕೆಮಾಡಬಹುದು.

ಸಂಸ್ಕೃತಿ ಕೆಲವೊಮ್ಮೆ ಅರ್ಥಕ್ಕೆ ಧಕ್ಕೆ ತರುತ್ತದೆ.

ನಮೂನೆಯ ಅರ್ಥವನ್ನುಸಂಸ್ಕೃತಿಯು ನಿರ್ಧರಿಸುತ್ತದೆ. ಒಂದು ನಮೂನೆಗೆ ವಿಭಿನ್ನ ಸಂಸ್ಕೃತಿಯಲ್ಲಿ ವಿಭಿನ್ನ ಅರ್ಥವಿರಬಹುದು. ಭಾಷಾಂತರದಲ್ಲಿ ಪದದ ಅರ್ಥ ಮತ್ತು ನಮೂನೆಯ ಅರ್ಥ ಬದಲಾಗದೆ ಸ್ಥಿರವಾಗಿರಬೇಕು. ಇದರ ಅರ್ಥ ವಾಕ್ಯಭಾಗದ ಮಾದರಿ ಸಂಸ್ಕೃತಿಗೆ ಅನುಗುಣವಾಗಿ ಬದಲಾಗಿ ಹೊಂದಿಕೊಳ್ಳುವಂತಿರಬೇಕು. ನಮೂನೆಯಲ್ಲಿ ವಾಕ್ಯಭಾಗದ ಭಾಷೆ, ಅದರ ವಿನ್ಯಾಸ, ಪುನರಾವರ್ತಿತ ವಿಚಾರಗಳು ಅಥವಾ ಭಾವಸೂಚಕ ಉದ್ಘಾರಗಳು " O." ಮತ್ತು ಅಭಿವ್ಯಕ್ತಿಗಳು ಒಳಗೊಂಡಿರುತ್ತದೆ. ನೀವು ಭಾಷಾಂತರ ಮಾಡುವಾಗ ಇವೆಲ್ಲವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಅವು ಯಾವ ಅರ್ಥಕೊಡುತ್ತದೆ, ಯಾವ ನಮೂನೆ ಅತ್ಯುತ್ತಮ ರೀತಿಯಲ್ಲಿ ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಅರ್ಥವನ್ನು ಅಭಿವ್ಯಕ್ತಿ ಪಡಿಸುತ್ತದೆ ಎಂಬುದನ್ನು ಗುರುತಿಸಿ ನಿರ್ಧರಿಸಬೇಕು.


ಅರ್ಥಗಳ ವಿವಿಧ ಹಂತಗಳು.

Translation Manual :: Meaning-Based Translation :: Form and Meaning :: Levels of Meaning

ಅರ್ಥಗಳ ಹಂತಗಳು

ಮೂಲಭಾಷೆಯಲ್ಲಿರುವ ಅರ್ಥವು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲೂ ಒಂದೇ ಆಗಿದ್ದರೆ ಉತ್ತಮ ಭಾಷಾಂತರ ಎನಿಸಿಕೊಳ್ಳುತ್ತದೆ. ಎಲ್ಲಾ ಗ್ರಂಥಗಳಲ್ಲೂ ಅರ್ಥಗಳ ಹಂತಗಳು ಇರುತ್ತವೆ. ಹಾಗೆಯೇ ಸತ್ಯವೇದದಲ್ಲೂ ಇದೆ. ಈ ಹಂತಗಳಲ್ಲಿ ಕಂಡು ಬರುವ ಅಂಶಗಳು :

  • ಪದಗಳ ಅರ್ಥ
  • ಪದಗುಚ್ಛಗಳ ಅರ್ಥ
  • ವಾಕ್ಯಗಳ ಅರ್ಥ
  • ಪ್ಯಾರ (ವಾಕ್ಯ ಭಾಗಗಳ) ಅರ್ಥ
  • ಅಧ್ಯಾಯಗಳ ಅರ್ಥ
  • ಪುಸ್ತಕಗಳ ಅರ್ಥ

ಪ್ರತಿಯೊಂದು ಪದಕ್ಕೂ ತನ್ನದೇ ಆದ ಅರ್ಥವಿದೆ.

ನಾವು ಎಷ್ಟೋಸಲ ವಾಕ್ಯ ಭಾಗದ ಅರ್ಥ ಪದಗಳಲ್ಲಿ ಇದೆ ಎಂದು ಯೋಚಿಸುತ್ತೇವೆ. ಆದರೆ ವಾಕ್ಯ ಭಾಗವು ಅದರಲ್ಲಿರುವ ಪ್ರತಿಯೊಂದು ಪದದ ಅರ್ಥವನ್ನು ಸಂಯೋಜಿಸಿ ಹಿಡಿದಿಡುತ್ತದೆ. ಅಂದರೆ ಪ್ರತಿಯೊಂದು ಪದದ ಅರ್ಥದ ವಿಭಿನ್ನ ಹಂತಗಳನ್ನು ಪದಗುಚ್ಛಗಳು, ವಾಕ್ಯಗಳು, ಪ್ಯಾರ, ವಾಕ್ಯಬಂಧಗಳಲ್ಲಿ ಒಳಗೊಂಡಿರುತ್ತದೆ. ಉದಾಹರಣೆಗೆ ಒಂದು ಚಿಕ್ಕ ಪದ “ಕೊಡು” ಈ ಕೆಳಗೆ ಕೊಟ್ಟಿರುವ ವಿವಿಧ ಅರ್ಥಗಳನ್ನು ಹೊಂದಿದೆ ಎಂಬುದನ್ನು ನೋಡೋಣ.

  • ಉಡುಗೊರೆ ಕೊಡುವುದು
  • ನಿರ್ನಾಮ ಅಥವಾ ಕುಸಿಯುವುದು.
  • ಶರಣಾಗುವುದು.
  • ಬಿಟ್ಟು ಬಿಡುವುದು.
  • ಒಪ್ಪಿಕೊಳ್ಳುವುದು.
  • ಸರಬರಾಜು ಮಾಡು.
  • ಮುಂತಾದುವು

###ವಿಶಾಲವಾದ ಅರ್ಥವನ್ನು ರಚಿಸುವುದು.

ಪ್ರತಿಯೊಬ್ಬ ಭಾಷಾಂತರಗಾರನು ಪ್ರತಿಯೊಂದು ಪದವು ಪ್ರತಿಯೊಂದು ಸಂದರ್ಭದಲ್ಲಿ ಯಾವ ಅರ್ಥ ನೀಡುತ್ತದೆ ಎಂದು ತಿಳಿದು ಅದನ್ನು ಭಾಷಾಂತರ ಮಾಡುವ ಪಠ್ಯಭಾಗದಲ್ಲಿ ಮರುಸೃಷ್ಟಿಸಬೇಕು. ಅಂದರೆ ಈ ಪದಗಳನ್ನು ಪ್ರತ್ಯೇಕವಾಗಿ ಭಾಷಾಂತರಮಾಡಲು ಆಗುವುದಿಲ್ಲ ಆದರೆ ಅವುಗಳು ಸರಿಯಾದ ಅರ್ಥವನ್ನು ಪದಗುಚ್ಛಗಳೊಂದಿಗೆ ಒಂದುಗೂಡಿಸಿ ಭಾಷಾಂತರ ಮಾಡಬೇಕು. ಆದುದರಿಂದಲೇ ಭಾಷಾಂತರಗಾರನು ಭಾಷಾಂತರ ಮಾಡುವ ಮೊದಲು ಪ್ಯಾರಾ, ವಾಕ್ಯ ಭಾಗವನ್ನು ಅಧ್ಯಾಯವನ್ನು ಅಥವಾ ಪುಸ್ತಕವನ್ನು ಚೆನ್ನಾಗಿ ಓದಿ ನಂತರ ಭಾಷಾಂತರಿಸಬೇಕು. ಹೀಗೆ ವಿವರವಾಗಿ ಓದುವುದರಿಂದ ವಾಕ್ಯಭಾಗವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಲ್ಲದೆ ಯಾವ ಹಂತದಲ್ಲಿ ಬೇಕಾದರೂ ಭಾಷಾಂತರಿಸಿ ಅರ್ಥವಾಗುವಂತೆ ಮಾಡಲು ಸಹಾಯವಾಗುತ್ತದೆ.

ಅಕ್ಷರಷಃ ಭಾಷಾಂತರಗಳು.

Translation Manual :: Meaning-Based Translation :: Literal Translations

###ವಿವರಣೆಗಳು

ಅಕ್ಷರಷಃ ಭಾಷಾಂತರಗಳು ಸಾಧ್ಯವಾದಷ್ಟು ಮೂಲಭಾಷೆಯ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಮರು ಸೃಷ್ಟಿಯಾಗುತ್ತದೆ.

ಇತರ ಹೆಸರುಗಳು.

ಅಕ್ಷರಷಃ ಭಾಷಾಂತರಗಳನ್ನು ಹೀಗೂ ಕರೆಯಬಹುದು.

  • ಒಂದೇ ರೂಪದ ಆಧಾರವಾಗಿರುತ್ತದೆ.
  • ಪದಕ್ಕಾಗಿ ಪದ

ಅಕ್ಷರಷಃ ರೂಪಾಂತರ.

ಮಾದರಿ / ನಮೂನೆ ಅರ್ಥಗಳು.

ಅರ್ಥಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ, ಅರ್ಥಮಾಡಿಕೊಳ್ಳಲು ಕಷ್ಟವಾದರೂ ಅಕ್ಷರಷಃ ಭಾಷಾಂತರದಲ್ಲಿ ಮೂಲಭಾಷೆಯ ವಾಕ್ಯಭಾಗಗಳ ರೂಪವನ್ನುನ್ನು ಆಡುವ ಭಾಷೆಯಲ್ಲಿ ಮರುಸೃಷ್ಟಿಸುವ ಕಡೆ ಕೇಂದ್ರಿಕರಿಸಲಾಗುತ್ತದೆ. ಅಕ್ಷರಷಃ ಭಾಷಾಂತರ ಉತ್ಕೃಷ್ಟತೆ ಎಂದರೆ ಅದು ಭಾಷಾಂತರವೇ ಅಲ್ಲ ಅದು ಅದೇ ಲಕ್ಷಣವನ್ನು ಹೊಂದಿರುತ್ತದೆ ಮತ್ತು ಮೂಲಭಾಷೆಯಲ್ಲಿನ ಪದಗಳನ್ನೇ ಬಳಸಲಾಗುತ್ತದೆ. ಇನ್ನೊಂದು ಹತ್ತಿರದ ಮಾರ್ಗವೆಂದರೆ ಮೂಲಭಾಷೆಯಲ್ಲಿನ ಪದಗಳನ್ನು ಭಾಷಾಂತರ ಆಗುತ್ತಿರುವ ಭಾಷೆಯಲ್ಲಿನ ಸಮಾನ ಪದಗಳಿಂದ ಬದಲಾಯಿಸಬಹುದು. ಭಾಷೆಗಳಲ್ಲಿನ ವ್ಯಾಕರಣದ ನಡುವೆ ಇರುವ ವ್ಯತ್ಯಾಸದ ಕಾರಣದಿಂದ ಬಹುಷಃ ಭಾಷಾಂತರ ಆಗುತ್ತಿರುವ ಭಾಷೆಯ ಜನರಿಗೆ ಅರ್ಥವಾಗದೆ ಇರಬಹುದು. ಕೆಲವೊಮ್ಮೆ ಸತ್ಯವೇದವನ್ನು ಭಾಷಾಂತರಿಸುವ ಕೆಲವು ಭಾಷಾಂತರಗಾರರು ಮೂಲ ವಾಕ್ಯಭಾಗಗಳಲ್ಲಿನ ಪದದ ಕ್ರಮವನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಹಾಗೆಯೇ ಅಳವಡಿಸಿ ಭಾಷಾಂತರ ಮಾಡುವ ಭಾಷೆಯಲ್ಲಿ ಪದಗಳನ್ನು ಬದಲಾಯಿಸಬಹುದು ಎಂಬ ತಪ್ಪು ಕಲ್ಪನೆಯಲ್ಲಿ ಅನೇಕ ಅನುವಾದಕರು ಇದ್ದಾರೆ. ಮೂಲಭಾಷೆಯ ವಾಕ್ಯಭಾಗವನ್ನು ದೇವರ ವಾಕ್ಯವೆಂದು ಗೌರವ ಸೂಚಿಸಬೇಕು ಎಂದು ತಪ್ಪಾಗಿ ತಿಳಿದು ಭಾಷಾಂತರ ಮಾಡುವರು. ಇಂತಹ ಭಾಷಾಂತರ ದೇವರ ವಾಕ್ಯವೆಂದು ಜನರು ಅರ್ಥಮಾಡಿಕೊಳ್ಳಲು ಅವಕಾಶ ಮಾಡುತ್ತದೆ. ಜನರು ಆತನ ವಾಕ್ಯವನ್ನುಅರ್ಥಮಾಡಿಕೊಳ್ಳಬೇಕೆಂದು ದೇವರು ಬಯಸುತ್ತಾನೆ. ಇದರಿಂದ ಸತ್ಯವೇದ ಮತ್ತು ದೇವರ ವಾಕ್ಯಗಳಿಗೆ ಗೌರವ ಕೊಡಬೇಕಲ್ಲದೆ, ಸತ್ಯವೇದವನ್ನು ಜನರಿಗೆ ಅರ್ಥವಾಗುವಂತೆ ಭಾಷಾಂತರ ಮಾಡಬೇಕು ಎಂಬ ಉದ್ದೇಶವಾಗಿರಬೇಕು.

####ಅಕ್ಷರಷಃ ಭಾಷಾಂತರದ ನ್ಯೂನ್ಯತೆಗಳು.

  • ಅಕ್ಷರಷಃ ಭಾಷಾಂತರಗಳು ಸಾಮಾನ್ಯವಾಗಿ ಈ ಕೆಳಗೆ ನಮೂದಿಸಿರುವ ಸಮಸ್ಯೆಗಳನ್ನು ಹೊಂದಿರುತ್ತದೆ,
  • ವಿದೇಶಿ ಭಾಷೆಯ ಪದಗಳನ್ನು ಭಾಷಾಂತರ ಆಗುತ್ತಿರುವ ಭಾಷೆಯ ಓದುಗರು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು.
  • ಭಾಷಾಂತರ ಆಗುತ್ತಿರುವ ಭಾಷೆಯ ಪದಕ್ರಮ /ವಾಕ್ಯಕ್ರಮ ಭಿನ್ನವಾಗಿ ತೋರಬಹುದು.
  • ನುಡಿಗಟ್ಟುಗಳನ್ನು ಉಪಯೋಗಿಸಿದರೆ ಭಾಷಾಂತರ ಆಗುತ್ತಿರುವ ಭಾಷೆಯ ಪರಿಚಯವಿಲ್ಲದ ಜನರಿಗೆ ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು.
  • ಭಾಷಾಂತರ ಆಗುತ್ತಿರುವ ಭಾಷೆಯಲ್ಲಿ ಸಂಸ್ಕೃತಿಯಲ್ಲಿ ವಸ್ತುಗಳ ಹೆಸರು ಇಲ್ಲದೇ ಇರಬಹುದು.
  • ಭಾಷಾಂತರ ಆಗುತ್ತಿರುವ ಭಾಷೆಯ ಸಂಸ್ಕೃತಿಯಲ್ಲಿ ಬರುವ ಸಂಪ್ರದಾಯ, ಪದ್ಧತಿಗಳ ವಿವರಗಳು ಅರ್ಥವಾಗದೇ ಇರಬಹುದು.
  • ಭಾಷಾಂತರ ಆಗುತ್ತಿರುವ ಭಾಷೆಯಲ್ಲಿನ ಪ್ಯಾರಾಗಳು / ವಾಕ್ಯಭಾಗಗಳು ಯಾವುದೇ ತರ್ಕಬದ್ಧವಾದ ಸಂಬಂಧವಿರುವುದಿಲ್ಲ.
  • ಕತೆಗಳು ಮತ್ತು ವಿವರಗಳು ಯಾವುದೇ ಪರಿಣಾಮವನ್ನು ಭಾಷಾಂತರ ಆಗುತ್ತಿರುವ ಭಾಷೆಯ ಮೇಲೆ ಬೀರುವುದಿಲ್ಲ.
  • ತಿಳಿದುಕೊಂಡ ಮಾಹಿತಿಗಳು ಕೆಲವೊಮ್ಮೆ ಉದ್ದೇಶಿತ ಅರ್ಥವನ್ನುಅರ್ಥಮಾಡಿಕೊಳ್ಳಲು ಅವಶ್ಯವಾಗಿರುವಾಗ ಅದು ಬಿಟ್ಟುಹೋಗುವ ಸಾಧ್ಯತೆ ಇರುತ್ತದೆ.

ಅಕ್ಷರಷಃ ಭಾಷಾಂತರ ಯಾವಾಗ ಮಾಡಬೇಕು ?

ಗೇಟ್ ವೇ ವಿಷಯವನ್ನು ಭಾಷಾಂತರ ಮಾಡುವಾಗ ಮಾತ್ರ ಅಕ್ಷರಷಃ ಭಾಷಾಂತರ ಮಾಡಬೇಕು.ಮತ್ತು ULBಯ ಭಾಷಾಂತರ ಮಾಡುವಾಗಲೂ ಇತರ ಭಾಷೆಯ ಭಾಷಾಂತರಗಾರರು ಇದನ್ನು ಪರಿಗಣಿಸಬೇಕು. ULBಯ ಉದ್ದೇಶವೆಂದರೆ ಮೂಲ ವಾಕ್ಯಭಾಗದಲ್ಲಿ ಇರುವ ವಿಚಾರಗಳನ್ನು ಭಾಷಾಂತರಗಾರಿಗೆ ತೋರಿಸಬೇಕಾಗಿರುವುದು. ಆದರೂ ULB ಅಷ್ಟೇನು ಖಂಡಿತವಾಗಿ ಯಥಾವತ್ತು ಭಾಷಾಂತರ ಮಾಡಲೇ ಬೇಕೆಂದು ಕಡ್ಡಾಯ ಮಾಡುವುದಿಲ್ಲ. ಇದೊಂದು ರೂಪಾಂತರಗೊಂಡ ಭಾಷಾಂತರ, ಭಾಷಾಂತರ ಆಗುತ್ತಿರುವ ಭಾಷೆಯ ವ್ಯಾಕರಣದಲ್ಲಿ ಉಪಯೋಗಿಸುವಂತದ್ದು, ಇದರಿಂದ ಓದುಗರು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು Modified Literal Translation). ಅಕ್ಷರಷಃ ರೂಪಾಂತರಗೊಂಡ ಭಾಷಾಂತರ. ULBರೂಪದಲ್ಲಿರುವ ಸತ್ಯವೇದದ ಮೂಲ ಅಭಿವ್ಯಕ್ತಿಯಲ್ಲಿ ಇರುವ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಕಷ್ಟ.ಆದುದರಿಂದಲೇ ನಾವು ಭಾಷಾಂತರ ಟಿಪ್ಪಣಿಗಳಲ್ಲಿ ವಿವರಣೆಯನ್ನು ಒದಗಿಸಿದ್ದೇವೆ.


ಅಕ್ಷರಷಃ ಭಾಷಾಂತರಗಳು.

Translation Manual :: Meaning-Based Translation :: Literal Translations

ಪದಕ್ಕೆ ಬದಲಾಗಿ ಪದ.

Translation Manual :: Meaning-Based Translation :: Literal Translations :: Word for Word Substitution

ವಿವರಣೆಗಳು.

ಒಂದು ಪದಕ್ಕೆ – ಒಂದು ಪದ ಬದಲಾಗಿ ಬಳಸುವುದು ಹೆಚ್ಚಾಗಿ ಅಕ್ಷರಶಃ ನಮೂನೆಯ ಭಾಷಾಂತರದಲ್ಲಿ. ಒಳ್ಳೆಯ ಭಾಷಾಂತರ ಮಾಡಲು ಇದು ಉತ್ತಮ ಆಯ್ಕೆಯಲ್ಲ. ಒಂದು ಪದಕ್ಕಾಗಿ ಒಂದು ಪದವನ್ನು ಭಾಷಾಂತರ ಮಾಡುವುದಾದರೆ ಸರಳವಾಗಿ ಬದಲೀಪದ ಅಥವಾ ಸಮಾನ ಪದವನ್ನು ಭಾಷಾಂತರಮಾಡುತ್ತಿರುವ ಭಾಷೆಯಲ್ಲಿ ಪ್ರತಿಪದಕ್ಕೂ ಮೂಲಭಾಷೆಯಿಂದ ಪದಗಳನ್ನು ಪಡೆಯಲು ಪ್ರಯತ್ನಿಸಬೇಕು.

ಪದಕ್ಕಾಗಿ – ಪದದ ಭಾಷಾಂತರ.

  • ಸಮಯಕ್ಕೆ ಒಂದು ಪದವನ್ನು ಕೇಂದ್ರೀಕರಿಸಬೇಕು.
  • ಸಹಜವಾದ ವಾಕ್ಯದ ರಚನೆ, ಪದಗುಚ್ಛಗಳ ರಚನೆ ಮತ್ತು ಅಲಂಕಾರಗಳು ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ನಿರ್ಲಕ್ಷಿಸಲಾಗಿದೆ.
  • ಪದಕ್ಕಾಗಿ – ಪದದ ಭಾಷಾಂತರದ ಪ್ರಕ್ರಿಯೆ ತುಂಬಾ ಸರಳವಾದುದು.
  • ಮೂಲವಾಕ್ಯಭಾಗದಲ್ಲಿನ ಮೊದಲ ಪದ ಸಮಾನ ಪದದಿಂದ ಭಾಷಾಂತರವಾಗುತ್ತದೆ.
  • ಅನಂತರ ಮುಂದಿನ ಪದವನ್ನು ಭಾಷಾಂತರಿಸಲಾಗುತ್ತದೆ. ಇದು ಪೂರ್ತಿ ವಾಕ್ಯವು ಭಾಷಾಂತರವಾಗುವವರೆಗೆ ಮುಂದುವರೆಯುತ್ತದೆ,.
  • ಪದಕ್ಕಾಗಿ – ಪದದ ಭಾಷಾಂತರದ ಪ್ರಯೋಗ ಸರಳವಾಗಿರುವುದರಿಂದ ಇದು ಆಕರ್ಷಕವಾಗಿರುತ್ತದೆ.

ಆದರೆ ಇದು ಕಳಪೆಮಟ್ಟದ ಭಾಷಾಂತರವಾಗಿ ಪ್ರತಿಫಲಿತವಾಗುತ್ತದೆ. ಪದಕ್ಕಾಗಿ – ಬದಲೀಪದದ ಭಾಷಾಂತರ ಓದಲು ಅಸಹಜವಾಗಿರುತ್ತದೆ. ಕೆಲವೊಮ್ಮೆ ಅವು ಗೊಂದಲ ಉಂಟುಮಾಡಬಹುದು, ತಪ್ಪು ಅರ್ಥ ನೀಡಬಹುದು ಅಥವಾ ಅರ್ಥರಹಿತ ವಾಗಿರ ಬಹುದು. ನೀವು ಇಂತಹ ಭಾಷಾಂತರ ಮಾಡುವುದನ್ನು ತಡೆಗಟ್ಟಬೇಕು. ಇಲ್ಲಿ ಕೆಲವು ಉದಾಹರಣೆಗಳಿವೆ.

ಪದಗಳ ಕ್ರಮ.

ಇಲ್ಲಿ ULBಯ ಲೂಕ 3:16ರ ಉದಾಹರಣೆ ಇದೆ.

ಯೋಹಾನನು ಅವರೆಲ್ಲರಿಗೆ – ನಾನಂತೂ ನಿಮಗೆ ನೀರಿನ ಸ್ನಾನ ಮಾಡಿಸುವವನು, ಆದರೆ ನನಗಿಂತ ಶಕ್ತನು ಬರುತ್ತಾನೆ ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ “ಆತನು ಪವಿತ್ರಾತ್ಮದಲ್ಲಿಯೂ, ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಮಾಡಿಸುವನು” ಈ ಭಾಷಾಂತರ ಸ್ಪಷ್ಟವಾಗಿ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗಿದೆ.

ಆದರೆ ಭಾಷಾಂತರಗಾರರು ಪದಕ್ಕಾಗಿ ಪದವನ್ನು ಭಾಷಾಂತರ ಮಾಡಿದ್ದರೆ. ಭಾಷಾಂತರ ಯಾವ ರೀತಿ ಇರುತ್ತಿತ್ತು? ಇಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮೂಲ ಗ್ರೀಕ್ ಭಾಷೆಯಲ್ಲಿದ್ದಂತೆ ಪದಗಳ ಕ್ರಮವನ್ನು ಭಾಷಾಂತರಿಸಲಾಗಿದೆ.

ನಾನಂತೂ ನಿಮಗೆ ನೀರಿನಿಂದ ದೀಕ್ಷಾ ಸ್ನಾನ ಮಾಡಿಸಿದ್ದೇನೆ. ಆದರೆ ನಂತರ ಬರುವವನು ನನಗಿಂತ ಶಕ್ತನಾಗಿರುತ್ತಾನೆ. ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೆ ನಾನು ಯೋಗ್ಯನಲ್ಲ. ಆತನು ಪವಿತ್ರಾತ್ಮ ದಲ್ಲಿಯೂ, ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಮಾಡಿಸುವನು ಈ ಭಾಷಾಂತರ ಅಷ್ಟೇನೂ ಚೆನ್ನಾಗಿಲ್ಲ ಇಂಗ್ಲೀಷ್ ಭಾಷೆಯಲ್ಲಿ ಇದು ಅಷ್ಟು ಅರ್ಥಪೂರ್ಣವಾಗಿಲ್ಲ ಮೇಲೆ ಕೊಟ್ಟಿರುವ ULB ಪ್ರತಿಯನ್ನು ನೋಡಿ.

ಇಂಗ್ಲೀಷ್ ಭಾಷೆಯಲ್ಲಿ ULB ಪ್ರತಿಯನ್ನು ಭಾಷಾಂತರಿಸಿದವರು ಮೂಲಗ್ರೀಕ್ ಭಾಷೆಯ ಪದಕ್ರಮವನ್ನು ಅನುಸರಿಸಿಲ್ಲ. ಇಂಗ್ಲೀಷ್ ಭಾಷೆಯ ವ್ಯಾಕರಣ ನಿಯಮಕ್ಕೆ ಅನುಗುಣವಾಗಿ ಪದಗಳನ್ನು ವಾಕ್ಯದಲ್ಲಿ ಎಲ್ಲೆಲ್ಲಿ ಸೇರಿಸಬಹುದೋ ಅಲ್ಲಲ್ಲಿ ಸೇರಿಸಿದ್ದಾರೆ. ಅವರು ಪದಗಳನ್ನು ಸಹ ಬದಲಾಯಿಸಿದ್ದಾರೆ ಉದಾಹರಣೆಗೆ ಇಂಗ್ಲೀಷ್ ULBಯಲ್ಲಿ, “ಯೋಹಾನನು ಅವರೆಲ್ಲರಿಗೆ ಹೀಗೆ ಉತ್ತರಿಸಿದನು.” ಎಂಬುದರ ಬದಲಾಗಿ “ಯೋಹಾನನು ಅವರೆಲ್ಲರನ್ನು ಕುರಿತು ಹೇಳಿದನು” ಎಂದಿದೆ.

ಅವರು ವಿಭಿನ್ನ ಕ್ರಮದಲ್ಲಿ ವಿಭಿನ್ನ ಪದಗಳನ್ನು ಬಳಸಿದ್ದಾರೆ. ಏಕೆಂದರೆ ಇದು ಮೂಲ ವಾಕ್ಯಭಾಗವನ್ನು ಸಹಜವಾಗಿರುವಂತೆ ಮಾಡಲು, ಯಶಸ್ವಿಯಾಗಿ ಮೂಲ ಅರ್ಥವನ್ನು ತಿಳಿಸಲು ಬಳಸಲಾಗಿದೆ. ಗ್ರೀಕ್ ಭಾಷೆಯ ವಾಕ್ಯಭಾಗದಲ್ಲಿರುವಂತೆಯೇ ಭಾಷಾಂತರಗಳು ತಿಳಿಸುವಂತಿರಬೇಕು. ಈ ಉದಾಹರಣೆಯಲ್ಲಿ ಇಂಗ್ಲೀಷ್ ನ ULB ಭಾಷಾಂತರವು ಕಳಪೆ ಮಟ್ಟದ ಪದಕ್ಕಾಗಿ ಪದದ ಭಾಷಾಂತರಕ್ಕಿಂತ ಉತ್ತಮವಾಗಿದೆ.

ಪದಗಳ ಅರ್ಥದ ಮಟ್ಟ

ಇದರೊಂದಿಗೆ ಪದಕ್ಕಾಗಿ ಬದಲಿ ಪದ ಬಳಸಿ ಮಾಡುವ ಭಾಷಾಂತರಗಳು ಸಾಮಾನ್ಯವಾಗಿ ಎಲ್ಲಾ ಭಾಷೆಗಳಲ್ಲೂ ಪರಿಗಣಿಸುವುದಿಲ್ಲ ಏಕೆಂದರೆ ಎಲ್ಲಾ ಭಾಷೆಗಳನ್ನು ಅಯಾ ಪದಗಳಿಗೆ ಅದರದೇ ಆದ ಗುಣಮಟ್ಟದ ಅರ್ಥವಿರುತ್ತದೆ. ಯಾವುದೇ ವಾಕ್ಯಭಾಗದಲ್ಲಿ ಸಾಮಾನ್ಯವಾಗಿ ಲೇಖಕನು ಪದಗಳಿಗೆ ಬೇಕಾದ ಸೂಕ್ತ ಅರ್ಥವನ್ನು ತನ್ನ ಮನದಲ್ಲಿ ನಿರ್ಧರಿಸಿರುತ್ತಾನೆ. ವಿಭಿನ್ನ ವಾಕ್ಯಭಾಗದಲ್ಲಿ ವಿಭಿನ್ನ ಸನ್ನಿವೇಶಗಳಲ್ಲಿ ವಿಭಿನ್ನ ಅರ್ಥವನ್ನು ಮನದಲ್ಲಿ ನಿರ್ಧರಿಸಬಹುದು. ಆದರೆ ಪದಕ್ಕಾಗಿ ಬದಲಿ ಪದ ಎಂಬ ಪರಿಕಲ್ಪನೆ ಇಟ್ಟುಕೊಂಡು ಮಾಡಿದ ಭಾಷಾಂತರದಲ್ಲಿ ಸಾಮಾನ್ಯವಾಗಿ ಒಂದೇ ಒಂದು ಪದವನ್ನು, ಅಋವನ್ನು ಆಯ್ಕೆಮಾಡಿ ಇಡೀ ಭಾಷಾಂತರ ಪ್ರಕ್ರಿಯೆಯಲ್ಲಿ ಅದನ್ನೇ ಬಳಸುವರು. ಉದಾಹರಣೆಗೆ ಗ್ರೀಕ್ ಪದವಾದ “aggelos” ಅಗ್ಗಿಲೋಸ್ ಒಬ್ಬ ಮಾನವ ಅಥವಾ ಒಬ್ಬ ದೇವದೂತನನ್ನು ಕುರಿತು ಹೇಳಿರುವಂತದ್ದು.

ಇಗೋ ಇಲ್ಲಿ ಬರೆದಿರುವುದನ್ನು ನೋಡಿ “ನನ್ನ ದೂತನು ನಿನ್ನ ಮುಂದೆ ಹೋಗಿ ಸರಿಮಾಡುವನು” (ಲೂಕ 7:27)

ಇಲ್ಲಿ “aggelos” ಎಂಬ ಪದ ಮಾನವ ಸಂದೇಶಕನನ್ನು ಕುರಿತು ಹೇಳಿದಂತಿದೆ. ಯೇಸು ಇಲ್ಲಿ ಸ್ನಾನಿಕನಾದ ಯೊಹಾನನ ಬಗ್ಗೆ ಮಾತನಾಡುತ್ತಿದ್ದಾನೆ.

ದೇವದೂತರು ಅವರ ಬಳಿಯಿಂದ ಪರಲೋಕಕ್ಕೆ ಹೊರಟುಹೋದರು (ಲೂಕ 2:15)

ಇಲ್ಲಿ “aggelos” ಎಂಬ ಪದ ಪರಲೋಕದಿಂದ ಬಂದ ದೇವದೂತರನ್ನು ಕುರಿತು ಹೇಳಿದ್ದು. ಪದಕ್ಕಾಗಿ – ಪದವನ್ನು ಭಾಷಾಂತರ ಮಾಡುವ ಪ್ರಕ್ರಿಯೆ ಎರಡೂ ವಾಕ್ಯಗಳಲ್ಲಿ ಒಂದೇ ಪದವನ್ನು ಬಳಸುತ್ತದೆ. ಇಲ್ಲಿ ಎರಡು ವಿಭಿನ್ನ ಪಾತ್ರಗಳಿದ್ದರೂ ಒಂದೇ ಪದ ಬಳಸುತ್ತದೆ. ಈ ರೀತಿಯ ಭಾಷಾಂತರ ಓದುಗರಿಗೆ ಗೊಂದಲ ಉಂಟುಮಾಡಬಹುದು.

ಅಲಂಕಾರಗಳು

ಅಂತಿಮವಾಗಿ ಹೇಳುವುದಾದರೆ ಅಲಂಕಾರಗಳ ಬಗ್ಗೆ ಹೇಳುವಾಗ ಪದಕ್ಕಾಗಿ – ಪದವನ್ನು ಭಾಷಾಂತರ ಮಾಡುವುದು ಸೂಕ್ತವಾಗಿರುವುದಿಲ್ಲ. ಅಲಂಕಾರಗಳಲ್ಲಿ ಬರುವ ಸ್ವತಂತ್ರ ಪದಗಳ ಅರ್ಥವು ವಿಭಿನ್ನವಾದ ಪದಗಳಾಗಿದ್ದು ಪದಕ್ಕಾಗಿ – ಪದವನ್ನು ಭಾಷಾಂತರ ಮಾಡಿದ್ದು ಸರಿಯಾಗಿ ಅನ್ವಯವಾಗುವುದಿಲ್ಲ. ಪದಕ್ಕಾಗಿ – ಪದ ಭಾಷಾಂತರವಾದಾಗ ಅಲಂಕಾರದ ಅರ್ಥ ಮತ್ತು ಸೊಗಸು ಕಳೆದು ಹೋಗುತ್ತದೆ. ಭಾಷಾಂತರವಾಗುತ್ತಿರುವ ಭಾಷೆಯ ಪದಕ್ರಮವನ್ನು ಬಳಸುವುದರಿಂದಲೂ ಅದರ ಸೊಗಸು ಕಳೆದು ಹೋಗುತ್ತದೆ. See the ಅಲಂಕಾರಗಳು ಈ ಪುಟವನ್ನು ನೋಡಿ ಸರಿಯಾದ ಭಾಷಾಂತರ ಮಾಡುವುದು ಹೇಗೆ ತಿಳಿಯಿರಿ.


ಅಕ್ಷರಷಃ ಭಾಷಾಂತರದ ಸಮಸ್ಯೆಗಳು

Translation Manual :: Meaning-Based Translation :: Literal Translations :: Problems with Literal Translations

ಸ್ವರೂಪ ಅರ್ಥಗಳು ಬದಲಾಗುವದು ಅರ್ಥವೇನು ?

ಅಕ್ಷರಷಃ ಭಾಷಾಂತರದಲ್ಲಿ ಆಕರ ಪಠೄವನ್ನೇ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಹಾಗೆ ಉಳಿಸಿಕೊಳ್ಳಿಳ್ಳುತ್ತದೆ. ಕೆಲವು ಭಾಷಾಂತರಗಾರರು ಇದನ್ನು ಹೀಗೆ ಮಾಡುತ್ತಾರೆ ಏಕೆಂದರೆ. ನಾವು ಬೋಧನಾ ಕೈಪಿಡಿಯಲ್ಲಿ “ಸ್ವರೂಪದ ಮುಖ್ಯತ್ವ,” ಎಂಬ ಭಾಗದಲ್ಲಿ ನೋಡಿದಂತೆ ಪಠೄದ ಸ್ವರೂಪ ಅದರ ಅರ್ಥದ ಮೇಲೆ ಪರಿಣಾಮ ಬೀರುತ್ತದೆ. ವಿಭಿನ್ನ ವಿವಿಧ ಸಂಸ್ಕೃತಿಯ ಜನರು ಇದನ್ನು ವಿಭಿನ್ನವಾಗಿ ಅರ್ಥಮಾಡಿಕೊಳ್ಳುವರು ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕು.

ವಿಭಿನ್ನ ಸಂಸ್ಕೃತಿಯಲ್ಲಿ ಒಂದೇ ಸ್ವರೂಪವು ವಿಭಿನ್ನ ರೀತಿಯಲ್ಲಿ ಅರ್ಥವಾಗಬಹುದು. ಮೂಲ ಸ್ವರೂಪವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಾಗ ಭಾಷಾಂತರದಲ್ಲಿ ಮೂಲ ಅರ್ಥವನ್ನು ಹಾಗೆ ಉಳಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು. ಮೂಲ ಸ್ವರೂಪವನ್ನು ಹೊಸ ಸ್ವರೂಪಕ್ಕೆ ಬದಲಾಯಿಸಿ ಅದರ ಅರ್ಥವನ್ನು ಹಾಗೇ ಉಳಿಸಿಕೊಳ್ಳಬೇಕು. ಇದೇ ಅರ್ಥವನ್ನು ಹೊಸ ಸಂಸ್ಕೃತಿಯ ಮೂಲಕ ತಿಳಿಸಲು ಪ್ರಯತ್ನಿಸಬೇಕು, ಹಳೇ ಸ್ವರೂಪವನ್ನು, ಹಳೇ ಸಂಸ್ಕೃತಿಯಲ್ಲಿ ಉಳಿಸಿಕೊಂಡಂತೆಯೇ ಮಾಡಬೇಕು.

ವಿಭಿನ್ನ ಭಾಷೆಗಳು ವಿಭಿನ್ನ ರೀತಿಯ ಪದಗಳನ್ನು ಮತ್ತು ನುಡಿಗಟ್ಟುಗಳನ್ನು ಬಳಸುತ್ತಾರೆ.

ಮೂಲಭಾಷೆಯ ಪದಗಳ ಕ್ರಮವನ್ನು ನಿಮ್ಮ ಭಾಷಾಂತರದಲ್ಲಿ ಉಳಿಸಿ ಕೊಂಡರೆ ನಿಮ್ಮ ಭಾಷೆ ಮಾತನಾಡುವವರಿಗೆ ಅರ್ಥಮಾಡಿಕೊಳ್ಳಲು ತುಂಬಾ ಕಷ್ಟ ಮತ್ತು ಕೆಲವೊಮ್ಮೆ ಅಸಾಧ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಸಹಜವಾದ ಪದಗಳ ಕ್ರಮವನ್ನು ಬಳಸಿದರೆ ನಿಮ್ಮ ಜನರಿಗೆ ಸುಲಭವಾಗಿ ವಾಕ್ಯಭಾಗದ ಅರ್ಥ ಆಗುತ್ತದೆ.

ವಿಭಿನ್ನ ಭಾಷೆಗಳು ವಿಭಿನ್ನ ನುಡಿಗಟ್ಟುಗಳು ಮತ್ತು ಅಭಿವ್ಯಕ್ತಿಯನ್ನು ಬಳಸುತ್ತವೆ.

ಪ್ರತಿಯೊಂದು ಭಾಷೆಯಲ್ಲಿ ಅದರದೇ ಆದ ಸ್ವಂತ ನುಡಿಗಟ್ಟುಗಳು, ಅಭಿವ್ಯಕ್ತಿಗಳು ಇರುತ್ತವೆ ಉದಾಃ ಭಾವನೆಗಳು ಮತ್ತು ಉಚ್ಛಾರಗಳನ್ನು ಪ್ರತಿನಿಧಿಸುವ ಪದಗಳು. ಭಾಷಾಂತರ ಮಾಡುವಾಗ ಪದಗಳನ್ನು ಭಾಷಾಂತರ ಮಾಡಿದರಷ್ಟೇ ಸಾಲದು, ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಬಳಸುವ ನುಡಿಗಟ್ಟುಗಳಿಗೆ ಅಥವಾ ಭಾವನೆಗಳಿಗೆ ಅರ್ಥ ಇರುವ ಪದಗಳನ್ನು ಬಳಸಿ. ಇದರಿಂದ ಮೂಲ ಭಾಷೆಯ ಅರ್ಥದಂತೆ ಭಾಷಾಂತರವಾಗುತ್ತಿರುವ ಭಾಷೆಯಲ್ಲೂ ಅರ್ಥವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಂದು ಪದವನ್ನು ಭಾಷಾಂತರಕ್ಕಾಗಿ ಭಾಷಾಂತರ ಮಾಡಿದರೆ ನುಡಿಗಟ್ಟುಗಳು ಮತ್ತು ಅಭಿವ್ಯಕ್ತಿಗಳಿಗೆ ತಪ್ಪಾದ ಅರ್ಥ ಬರಬಹುದು.

###ಕೆಲವು ಪದಗಳಿಗೆ ಬೇರೆ ಸಂಸ್ಕೃತಿಯಲ್ಲಿ ಸಮಾನ ಪದಗಳು ದೊರೆಯದೆ ಇರಬಹುದು.

ಸತ್ಯವೇದದಲ್ಲಿ ಇಂತಹ ಅನೇಕ ಪದಗಳು ಇವೆ ಮತ್ತು ಈ ಪದಗಳು ಈ ಬಳಕೆಯಲ್ಲಿ ಇಲ್ಲ. ಉದಾಹರಣೆಗೆ ಪುರಾತನ ಕಾಲದಲ್ಲಿ ಬಳಸುತ್ತಿದ್ದ ಪದಗಳು /ತೂಕ (ಸ್ಟೇಡಿಯಾ, ಕ್ಯುಬಿಕ್) ಹಣ / ನಾಣ್ಯ (ದಿನಾರಿಯಸ್,ಸ್ಪೇಟರ್) ಅಳತೆ/ ಮಾಪನ (ಹಿನ್, ಎಫಾ) ಕೆಲವೊಮ್ಮೆ ಪ್ರಾಣಿಗಳು ಸಹ ಕೆಲವು ಪ್ರದೇಶದಲ್ಲಿ ಇಲ್ಲದಿರಬಹುದು (ಉದಾ, ನರಿ ಒಂಟೆ, ಕಡಲಹಂದಿ) ಇನ್ನು ಕೆಲ ಪದಗಳು ಇತರ ಸಂಸ್ಕೃತಿಯವರಿಗೆ ಅಪರಿಚಿತವಾಗಿರಬಹುದು ಉದಾ. (ಮಂಜು, ಸುನ್ನತಿ) ಇಂತಹ ಸನ್ನಿವೇಶದಲ್ಲಿ ಈ ಪದಗಳಿಗೆ ಸಮಾನ ಪದಗಳು ದೊರೆಯದೆ ಇದ್ದಾಗ ಅದರ ಹತ್ತಿರದ ಪದಗಳನ್ನು ಬಳಸುವುದು ತಪ್ಪಾಗಬಹುದು. ಭಾಷಾಂತರಗಾರರು ಇಂತಹ ಪದಗಳು ಅರ್ಥವಾಗುವಂತೆ ಹೇಳಲು ದಾರಿ ಹುಡುಕಬೇಕು.

###ಸತ್ಯವೇದದಲ್ಲಿನ ಪದಗಳನ್ನು ಅರ್ಥವಾಗುವಂತೆ ಉದ್ದೇಶಿಸಲಾಗಿದೆ,

ಸತ್ಯವೇದದಲ್ಲಿ ಬರುವ ಸಾಕ್ಷಿಗಳೆ ಅರ್ಥವಾಗುವದಕ್ಕಾಗಿ ಬರೆಲಾಗಿದೆ ಎಂದು ತೋರಿಸ\ಸುವುದಕ್ಕೆ ಉದಾಹರಣೆಯಾಗಿದೆ ಉದಾಹರಣೆ. ಸತ್ಯವೇದವನ್ನು ಮೊದಲು ಮೂರು ಭಾಷೆಗಳಲ್ಲಿ ಬರೆಯಲಾಯಿತು, ಏಕೆಂದರೆ ವಿಭಿನ್ನ ದೇವ ಜನರು ವಿಭಿನ್ನ ಸಮಯದಲ್ಲಿ ಬಳಸುತ್ತಿದ್ದರು ಯಹೂದಿಗಳು ಐಗುಪ್ತ ಪ್ರದೇಶದಿಂದ ಬಿಡುಗಡೆಯಾಗಿ ಬಂದಾಗ ಅವರಿಗೆ ಹಿಬ್ರೂ ಭಾಷೆ ಮರೆತು ಹೋಗಿತ್ತು ಯಾಜಕರು ಹಳೇ ಒಡಂಬಡಿಕೆಯ ಗೊತ್ತಿದ್ದ ಮತ್ತು ಅವರಿಗೆ ಅರ್ಥವಾಗುವ ಭಾಗಗಳನ್ನು ಅರಾಮಿಕ್ ಭಾಷೆಗೆ ಭಾಷಾಂತರಿಸಿದರು (ನೆಹೆಮಿಯ 8:8).

ನಂತರ ಹೊಸ ಒಡಂಬಡಿಕೆಯನ್ನು ಅಂದು ಎಲ್ಲರಿಗೂ ಅರ್ಥವಾಗುತ್ತಿದ್ದ ಮತ್ತು ಬಹು ಜನರು ಮಾತನಾಡುತ್ತಿದ್ದ ಸಾಮಾನ್ಯ ಗ್ರೀಕ್ ಭಾಷೆಯಲ್ಲಿ ಬರೆದರು (ಹಿಬ್ರೂ ಅಥವಾ ಅರಾಮಿಕ್ ಅಥವಾ ಶಾಸ್ತ್ರೀಯವಾದ ಗ್ರೀಕ್ ಭಾಷೆಯು ಅರ್ಥಮಾಡಿಕೊಳ್ಳಲು ಸಾಮಾನ್ಯ ಜನರಿಗೆ ಕಷ್ಟವಾಗುತ್ತಿತ್ತು.) ಇವುಗಳಿಂದ ಮತ್ತು ಇತರ ಕಾರಣಗಳಿಂದ ತನ್ನ ಜನರು ವಾಕ್ಯವನ್ನು ಅರ್ಥಮಾಡಿಕೊಳ್ಳುವ ಸಾಮಾನ್ಯ ಭಾಷೆಯಲ್ಲಿ ಬರೆದರೆ ಮಾತ್ರ ಸಾಧ್ಯ ಎಂದು ದೇವರು ತೋರಿಸಿಕೊಟ್ಟಿದ್ದಾನೆ. ಇದರಿಂದ ನಮಗೆ ಸ್ಪಷ್ಟವಾಗಿತಿಳಿಯುವ ವಿಷಯವೇನೆಂದರೆ ಸತ್ಯವೇದವನ್ನು ಅರ್ಥಕ್ಕೆ ಸರಿಯಾಗಿ ಭಾಷಾಂತರಿಸಬೇಕೆ ವಿನಃ ಸತ್ಯವೇದವನ್ನು ಮರುಸೃಷ್ಟಿಸಬಾರದು. ಸತ್ಯವೇದದ ವಾಕ್ಯಗಳಿಗೆ ಸರಿಯಾದ ಅರ್ಥ ನೀಡುವುದು ಮುಖ್ಯವೇ ಹೊರತು ಅದರ ರೂಪವಲ್ಲ.

ಅರ್ಥ ಆಧಾರಿತ ಭಾಷಾಂತರ.

Translation Manual :: Meaning-Based Translation :: Meaning-Based Translations

ಪೀಠಿಕೆ.

ನಾವು ಅಕ್ಷರಶಃ ಭಾಷಾಂತರವನ್ನು ಬಹು ನಿಕಟವಾಗಿ ನೋಡಿ ತಿಳಿದುಕೊಂಡಿದ್ದೇವೆ. ಈಗ ನಾವು ಅರ್ಥ ಆಧಾರಿತ ಭಾಷಾಂತರವನ್ನು ನೋಡೋಣ. ಈ ಭಾಷಾಂತರವನ್ನು ಹೀಗೂ ಕರೆಯಬಹುದು.

  • ಸಮಾನ ಅರ್ಥವನ್ನು ಒಳಗೊಂಡ ಭಾಷಾಂತರ.
  • ಅನುರೂಪವಾದ (idiomatic)
  • ಕ್ರಿಯಾತ್ಮಕ

ಪ್ರಮುಖ ಲಕ್ಷಣಗಳು

ಅರ್ಥ ಆಧಾರಿತ ಭಾಷಾಂತರಗಳ ಪ್ರಮುಖ ಲಕ್ಷಣವೆಂದರೆ ಮೂಲವಾಕ್ಯಭಾಗದ ಮಾದರಿಯಂತೆ ಪ್ರಾಮುಖ್ಯತೆ ನೀಡಿ ಅರ್ಥ ಕೆಡದಂತೆ ಭಾಷಾಂತರ ಮಾಡುವುದು. ಇದು ಅವರು ಕೆಲವೊಮ್ಮೆ ಅರ್ಥ ಕೆಡದಂತೆ ಸ್ಪಷ್ಟವಾಗಿ ಉಳಿಸಿಕೊಳ್ಳಲು ವಾಕ್ಯಭಾಗದ ಕ್ರಮವನ್ನು ಅಗತ್ಯಬಿದ್ದರೆ ಬದಲಾಯಿಸುವರು. ಬಹುಪಾಲು ಇಂತಹ ಬದಲಾವಣೆಗಳನ್ನು ಹೊಂದಿರುವ ಅರ್ಥ – ಆಧಾರಿತ ಭಾಷಾಂತರಗಳು ಈ ವಿಚಾರಗಳನ್ನು ಒಳಗೊಂಡಿರುತ್ತದೆ.

  • ಭಾಷಾಂತರವಾಗುತ್ತಿರುವ ಭಾಷೆಯಲ್ಲಿನ ವ್ಯಾಕರಣಕ್ಕೆ ತಕ್ಕಂತೆ ಪದಕ್ರಮವನ್ನು ಸರಿಹೊಂದಿಸುವುದು.
  • ಸ್ಥಳೀಯ, ಸಹಜ ವ್ಯಾಕರಣ ರಚನೆಗಳ ಮೂಲಕ ಅನ್ಯಭಾಷೆಯ ವ್ಯಾಕರಣ ರಚನೆಯನ್ನು ಬದಲಾಯಿಸಿ.
  • ಭಾಷಾಂತರವಾಗುತ್ತಿರುವ ಭಾಷೆಯಲ್ಲಿನ ತರ್ಕದಂತೆ ಸಹಜವಾದ ಕ್ರಮವನ್ನು ಕಾರಣಗಳ ಕ್ರಮ ಮತ್ತು ಅದರ ಫಲಿತಾಂಶದೊಂದಿಗೆ ಹೊಂದಿಸಲು ಪ್ರಯತ್ನಿಸಬೇಕು.
  • ಬದಲೀ ಪದ ಅಥವಾ ನುಡಿಗಟ್ಟುಗಳನ್ನು ವಿವರಿಸಿ.
  • ಇತರ ಭಾಷೆಯ ಪದಗಳನ್ನು ಭಾಷಾಂತರಿಸಿ ವಿವರಿಸಿ (ಉದಾಹರಣೆಗೆ ("Golgotha"ಗೋಲ್ಗೋಥಾ =“place of the skull” - ಕಪಾಲ ಸ್ಥಳ)
  • ಮೂಲ ವಾಕ್ಯಭಾಗದಲ್ಲಿರುವ ಅಸಾಧಾರಣ ಪದಗಳಿಗೆ ಮತ್ತು ಕಠಿಣಪದಗಳಿಗೆ ಸಮಾನವಾದ ಏಕ ಪದವನ್ನು ಬಳಸಲು ಪ್ರಯತ್ನಿಸುವ ಬದಲು ಸುಲಭವಾದ, ಸರಳವಾದ ಪದವನ್ನು ಬಳಸಬೇಕು.
  • ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಅಪರಿಚಿತ ಪದಗಳಿದ್ದರೆ ಆ ಸಂಸ್ಕೃತಿಗೆ ಸಮಾನವಾದ ಅರ್ಥ ವಿವರಣೆ ದೊರೆಯದಿದ್ದರೆ ಅದನ್ನು ಬದಲಾಯಿಸಿ.
  • ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಸಂಬಂಧಕಾರಕ ಪದಗಳು ಇಲ್ಲದಿದ್ದರೆ ಭಾಷಾಂತರ ಮಾಡುವಾಗ ಅವನ್ನು ಬಳಸಬೇಡಿ.
  • ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಸಮಾನವಾದ ಅಲಂಕಾರಗಳು ಮೂಲ ವಾಕ್ಯಭಾಗದಲ್ಲಿರುವ ಅಲಂಕಾರಗಳಿಗೆ ಸಮಾನ ಅರ್ಥನೀಡುವುದಾದರೆ ಬಳಸಬಹುದು.
  • ವಾಕ್ಯಭಾಗದ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಾದರೆ ಅದರೊಂದಿಗೆ ಈಗಾಗಲೇ ತಿಳಿದ ಮಾಹಿತಿಯನ್ನು ಸೇರಿಸಬಹುದು.
  • ಅಸ್ಪಷ್ಟವಾದ ನುಡಿಗುಚ್ಛಗಳು ಮತ್ತು ರಚನೆಗಳನ್ನು ವಿವರಿಸಬೇಕು.

###ಅರ್ಥ ಆಧಾರಿತ ಭಾಷಾಂತರಗಳಿಗೆ ಉದಾಹರಣೆಗಳು.

ಅರ್ಥ ಆಧಾರಿತ ಭಾಷಾಂತರಗಳು ಹೇಗೆ ಕಂಡುಬರುತ್ತವೆ? ನಾವು ಇಲ್ಲಿ ಒಂದೇ ವಾಕ್ಯವನ್ನು ಹೇಗೆ ವಿವಿಧ ರೀತಿಯಲ್ಲಿ ಭಾಷಾಂತರಿಸಲಾಗಿದೆ ಎಂಬುದನ್ನು ನೋಡೋಣ. ಲೂಕ 3:8

ಗ್ರೀಕ್ ಭಾಷೆಯಲ್ಲಿ ಈ ವಾಕ್ಯಭಾಗದ ಅರ್ಥ ಭಾಗವು ಈ ಕೆಳಗೆ ತೋರಿಸಿದಂತಿದೆ.

Ποιήσατε οὖν καρποὺς ἀξίους τῆς μετανοίας

ಇಂಗ್ಲೀಷ್ ಭಾಷೆಯಲ್ಲಿ ಗ್ರೀಕ್ ಪದದ ಕ್ರಮದಂತೆ ಪದಗಳು ಬಂದಿವೆ ಇಲ್ಲಿ ಕೆಲವು ಪರ್ಯಾಯ ಇಂಗ್ಲೀಷ್ ಪದಗಳನ್ನು ನಿಮ್ಮ ಆಯ್ಕೆಗಾಗಿ ನೀಡಿದೆ.

ಮಾಡಿ / ಮಾಡಿ ತೋರಿಸಿ / ಉತ್ಪಾದನೆ ಮಾಡಿ ಆದುದರಿಂದ ಹಣ್ಣುಗಳು ಇವೆ/ ಪಶ್ಚಾತ್ತಾಪ ಪಡುವುದಕ್ಕೆ ಸೂಕ್ತವಾಗಿದೆ.

ಅಕ್ಷರಶಃ

ಅಕ್ಷರ ಭಾಷಾಂತರ ಸಾಮಾನ್ಯವಾಗಿ ಗ್ರೀಕ್ ವಾಕ್ಯಭಾಗಗಳ ಪದಗಳನ್ನು ಮತ್ತು ಕ್ರಮಗಳನ್ನು ಎಷ್ಟು ಸಾಧ್ಯವೋ ಅಷ್ಟು ಅನುಸರಿಸಲು ರಯತ್ನಿಸುತ್ತಾರೆ.ಉದಾಹರಣೆಗೆ.

ಹಾಗಾದರೆ ನಿಮ್ಮ ಮನಸ್ಸು ದೇವರ ಕಡೆಗೆ ಪಶ್ಚಾತ್ತಾಪದಿಂದ ತಿರುಗಿತೆಂಬುದನ್ನು ತಕ್ಕ ಫಲಗಳಿಂದ ತೋರಿಸಿರಿ. (ಲೂಕ 3:8 ULB)

ಇಂತಹ ಪರಿಷ್ಕೃತ ಅಕ್ಷರಶಃ ಭಾಷಾಂತರದಲ್ಲಿ " ತಕ್ಕಫಲ"ಮತ್ತು " ಪಶ್ಚಾತ್ತಾಪ " ಎಂಬ ಪದಗಳು ಹಾಗೆಯೇ ಉಳಿಯುವಂತೆ ನೋಡಿಕೊಳ್ಳುವ ಅಗತ್ಯವೆಂಬುದನ್ನು ಗಮನದಲ್ಲಿಡಬೇಕು. ಪದಗಳ ಕ್ರಮವನ್ನು ಸಹ ಗ್ರೀಕ್ ವಾಕ್ಯದಲ್ಲಿದ್ದಂತೆ ಇರುವಂತೆ ನೋಡಿಕೊಳ್ಳಬೇಕು. ಏಕೆಂದರೆ ULB ಭಾಷಾಂತರವು ಇತರ ಭಾಷಾಂತರಗಾರರಿಗೆ ಮೂಲವಾಕ್ಯಭಾಗದಲ್ಲಿರುವಂತೆ ಹೇಗೆ ಭಾಷಾಂತರಿಸ ಬೇಕು ಎಂಬುದನ್ನು ತೋರಿಸಿದೆ. ಆದರೆ ನಿಮ್ಮ ಭಾಷೆಗೆ ಭಾಷಾಂತರ ಮಾಡುವಾಗ ಭಾಷಾಂತರ ಮಾಡಿದ ವಾಕ್ಯಭಾಗ ಸಹಜವಾಗಿ ಮತ್ತು ಸ್ಪಷ್ಟವಾಗಿದ್ದು ಅರ್ಥಮಾಡಿಕೊಳ್ಳಲು ಹಾಗೂ ತಿಳಿಸಲು ಸುಭವಾಗಿರುವಂತೆ ನೋಡಿಕೊಳ್ಳಬೇಕು.

ಅರ್ಥಪೂರ್ಣಭಾಷಾಂತರ / ಅರ್ಥ ಆಧಾರಿತ

ಅರ್ಥಪೂರ್ಣ / ಅರ್ಥ ಆಧಾರಿತ ಭಾಷಾಂತರಗಳು ಇನ್ನೊಂದು ಕಡೆ ಪದಗಳ ಕ್ರಮವನ್ನು ಬದಲಾಯಿಸುವ ಸಾಧ್ಯತೆ ಇರುತ್ತದೆ. ಏಕೆಂದರೆ ಭಾಷಾಂತರಗಾರರು ತಮ್ಮ ಓದುಗರಿಗೆ ಸುಲಭವಾಗಿ ಅರ್ಥವಾಗುವುದರ ಕಡೆ ಗಮನವಹಿಸುವುದರಿಂದ ಹೀಗಾಗಬಹುದು. ಈ ಕೆಳಗೆ ಕೊಟ್ಟಿರುವ ಅರ್ಥ ಆಧಾರಿತ ಭಾಷಾಂತರಗಳನ್ನು ಪರಿಗಣಿಸಿ. ಲಿವಿಂಗ್ ಬೈಬಲ್ ನಿಂದ ಉದಾಹರಣೆಗಳು

… ನೀವು ನಿಮ್ಮ ಪಾಪಕಾರ್ಯಗಳಿಂದ ಪಶ್ಚಾತ್ತಾಪದಿಂದ ಬದಲಾಗಿದ್ದೀರಿ ಎಂಬುದನ್ನು ನೀವು ಮಾಡುವ ಒಳ್ಳೆ ಕಾರ್ಯಗಳಿಂದ ತೋರಿಸಿ.

New Living ಅನುವಾದದಿಂದ

ನೀವು ಮಾಡಿದ ಪಾಪಗಳನ್ನು ಅರಿತು ಪಶ್ಚಾತ್ತಾಪದಿಂದ ಬದಲಾಗಿ ಉತ್ತಮ ಜೀವನವನ್ನು ನಡಿಸುತ್ತಿದ್ದೀರಿ ಎಂಬುದನ್ನು ಸಾಬೀತು ಪಡಿಸಿ.

UDB the Unlocked Dynamic Bible ನಿಂದ

ನೀವು ನಿಮ್ಮ ಪಾಪಮಯವಾದ ನಡವಳಿಕೆಯಿಂದ ಪಶ್ಚಾತ್ತಾಪ ಪಟ್ಟು ಬದಲಾಗಿದ್ದೀರಿ ಎಂಬುದನ್ನು ನಿಮ್ಮ ಒಳ್ಳೆಯ ನಡತೆಯಿಂದ ತೋರಿಸಿ.

ಈ ಎಲ್ಲಾ ಭಾಷಾಂತರಿಸಿದ ವಾಕ್ಯಗಳು ಸಹಜವಾಗಿ, ಅರ್ಥಪೂರ್ಣವಾಗಿ ಅರ್ಥವಾಗುವಂತೆ ಪದಕ್ರಮಗಳನ್ನು ಬದಲಾಯಿಸಿ ಇಂಗ್ಲೀಷ್ ನಲ್ಲಿ ಭಾಷಾಂತರ ಆಗಿರುವುದನ್ನು ತೋರಿಸುತ್ತದೆ. ಆದರೂ ತಕ್ಕ “ಫಲಗಳು” ಎಂಬ ಪದ ವಾಕ್ಯಗಳಲ್ಲಿ ಬಂದಂತೆ ಕಾಣುತ್ತದೆ. ಲಿವಿಂಗ್ ಬೈಬಲ್ ಭಾಷಾಂತರವು ULBಯಲ್ಲಿ ಇರುವ ಬಹುಪಾಲು ಪದಗಳನ್ನು ಬಳಸಿಕೊಂಡಿಲ್ಲ ಮೂಲದಲ್ಲಿ ಬರುವ “ಫಲಗಳು” ಎಂಬ ಪದಕ್ಕೆ ಬದಲಾಗಿ ಅರ್ಥ ಆಧಾರಿತ ಭಾಷಾಂತರದಲ್ಲಿ “ಒಳ್ಳೆಯ ಕಾರ್ಯಗಳು” ಅಥವಾ ನಿಮ್ಮ ಜೀವನದಲ್ಲಿ ನೀವು ಅನುಸರಿಸಿ ನಡೆಯುವ ರೀತಿ ಎಂದು ಬಳಸಿದೆ. “ಫಲಗಳು” ಎಂಬುದು ಇಲ್ಲಿ “ರೂಪಕ” ವಾಗಿ ಬಳಕೆಯಾಗಿದೆ. ಇಲ್ಲಿ “ಫಲಗಳು” ಎಂಬ ಪದವನ್ನು “ರೂಪಕ” ವಾಗಿ ಬಳಸಿದೆ. ಈ ಪದವನ್ನು ಒಬ್ಬ ವ್ಯಕ್ತಿ ಮಾಡುವ ಒಳ್ಳೆಯ ಕೆಲಸವನ್ನು ಸೂಚಿಸುತ್ತದೆ. (ನೋಡಿ Metaphor) - ರೂಪಕ ಅಲಂಕಾರ – ನೋಡಿ

ಈ ಭಾಷಾಂತರದಲ್ಲಿ ವಿಷಯ ಆಧಾರಿತ ಹಾಗೂ ಅರ್ಥ ಆಧಾರಿತವಾಗಿ ಭಾಷಾಂತರವಾಗಿದೆಯೇ ಹೊರತು ಪದಕ್ರಮ ಅನುಸರಿಸಿ ಭಾಷಾಂತರ ಆಗಿಲ್ಲ. ಈ ಭಾಷಾಂತರಗಾರರು ಅರ್ಥಪೂರ್ಣವಾದ ಪದಗಳನ್ನು ಪದಗುಚ್ಛಗಳನ್ನು ಇಲ್ಲಿ ಬಳಸಿದ್ದಾರೆ. " ಪಾಪದಿಂದ ಹೊರಬಂದು " ಅಥವಾ " ಪಾಪಮಯವಾದ ನಡವಳಿಕೆಯಿಂದ ಬದಲಾಗಿ” ಎಂಬ ಪದಗಳನ್ನು ಬಳಸಿದ್ದಾರೆ.ಇಲ್ಲಿ "ಪಶ್ಚಾತ್ತಾಪ " ಎಂಬ ಒಂದೇ ಪದವನ್ನು ಬಳಸಿಲ್ಲ. ಅದರ ಬದಲು ಪಶ್ಚಾತ್ತಾಪದ ನಂತರ ಪಶ್ಚಾತ್ತಾಪ ಯಾವುದಕ್ಕೆ ಎಂಬುದನ್ನು ವಿವರಿಸಿದ್ದಾರೆ. ಅಂದರೆ ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಂಡರು ಎಂದು ಹೇಳಿದ್ದಾರೆ. ಈ ಎಲ್ಲಾ ವಾಕ್ಯಗಳಲ್ಲಿರುವ ಅರ್ಥ ಅದೇ, ಆದರೆ ಹೇಳಿರುವ ನಮೂನೆಗಳು ವಿಭಿನ್ನ. ಅರ್ಥ ಆಧಾರಿತ ಭಾಷಾಂತರದಲ್ಲಿ ಅರ್ಥವೂ ಹೆಚ್ಚು ಸ್ಪಷ್ಟವಾಗಿದೆ.

ಅರ್ಥ ಆಧಾರಿತ ಭಾಷಾಂತರ.

Translation Manual :: Meaning-Based Translation :: Meaning-Based Translations

ಅರ್ಥಕ್ಕಾಗಿ ಭಾಷಾಂತರ.

Translation Manual :: Meaning-Based Translation :: Meaning-Based Translations :: Translate for Meaning

ಒಂದು ಅರ್ಥದ ಪ್ರಾಮುಖ್ಯತೆ.

ಸತ್ಯವೇದವನ್ನು ಬರೆದ ಜನರಿಗೆ ದೇವರಿಂದ ಸಂದೇಶವು ದೊರೆಯಿತು, ಜನರು ಅದನ್ನು ಅರ್ಥಮಾಡಿಕೊಳ್ಳಬೇಕೆಂಬದೇ ದೇವರ ಉದ್ದೇಶವಾಗಿತ್ತು. ಈ ಮೂಲ ಲೇಖಕರು ಜನರು ಅಂದು ಮಾತನಾಡುತ್ತಿದ್ದ ಭಾಷೆಯನ್ನೇ ಬಳಸಿ ಈ ಸಂದೇಶಗಳನ್ನು ಸತ್ಯವೇದದಲ್ಲಿ ಬರೆದರು. ಏಕೆಂದರೆ ಈ ಭಾಷೆ ಅವರ ಆಡುಭಾಷೆ ಆದುದರಿಂದ ಅವರಿಗೆ ಸುಲಭವಾಗಿ ಅರ್ಥವಾಗುತ್ತಿತ್ತು. ಇಂದೂ ಸಹ ಜನರು ಆ ಸಂದೇಶಗಳನ್ನು ಅರ್ಥಮಾಡಿಕೊಳ್ಳಬೇಕೆಂದು ದೇವರು ಬಯಸುತ್ತಿದ್ದಾನೆ. ಆದರೆ ಬಹುವರ್ಷಗಳ ಹಿಂದೆ ಬರೆದ ಸತ್ಯವೇದದ ಭಾಷೆಯನ್ನು ಇಂದಿನ ಜನರು ಮಾತನಾಡುತ್ತಿಲ್ಲ.

ಆದುದರಿಂದ ದೇವರು ನಮಗೆ ಒಂದು ವಿಶೇಷ ಜವಾಬ್ದಾರಿಯನ್ನು ನೀಡಿ ಜನರಿಗೆ ಅರ್ಥವಾಗುವ, ಮಾತನಾಡುವ ಭಾಷೆಯಲ್ಲಿ ಸತ್ಯವೇದವನ್ನು ಭಾಷಾಂತರಿಸಲು ಅವಕಾಶ ಮಾಡಿಕೊಟ್ಟಿದ್ದಾನೆ. ದೇವರ ಸಂದೇಶವನ್ನು ಇತರರಿಗೆ ತಿಳಿಸಲು ಕೇವಲ ಒಂದು ನಿರ್ದಿಷ್ಟಭಾಷೆ ಇರಬೇಕೆಂಬುದು ಮುಖ್ಯವಲ್ಲ ಇದರಲ್ಲಿ ನಾವು ಬಳಸುವ ನಿರ್ದಿಷ್ಟ ಪದಗಳು ಮುಖ್ಯವಲ್ಲ. ಇಲ್ಲಿ ಮುಖ್ಯವಾದುದು ಏನೆಂದರೆ ತಿಳಿಸಬೇಕಾದ ವಿಷಯ ಸರಿಯಾಗಿ ಪರಿಣಾಮಕಾರಿಯಾಗಿ ತಲುಪಿತೆ ಎಂದು ನೋಡುವುದು. ಇದರ ಅರ್ಥ ಸಂದೇಶ ತಲುಪಬೇಕೇ ಹೊರತು ಪದಗಳಾಗಲೀ, ಭಾಷೆಯಾಗಲೀ, ಮುಖ್ಯವಲ್ಲ. ಮೂಲಭಾಷೆಯಲ್ಲಿರುವ ಪದಗಳಾಗಲೀ, ವಾಕ್ಯಗಳಾಗಲೀ, ಭಾಷೆಯಾಗಲೀ ನಾವು ಭಾಷಾಂತರ ಮಾಡುವುದು ಮುಖ್ಯವಲ್ಲ. ಆದರೆ ಸರಿಯಾದ ಅರ್ಥವನ್ನು ಗ್ರಹಿಸಿ ಯಾವ ಬದಲಾವಣೆ ಇಲ್ಲದಂತೆ ಭಾಷಾಂತರಿಸಬೇಕು. ಕೆಳಗೆ ಕೊಟ್ಟಿರುವ ಜೋಡಿ ವಾಕ್ಯಗಳನ್ನು ಗಮನಿಸಿ.

  • ರಾತ್ರಿಯೆಲ್ಲಾ ಮಳೆಬಂದಿತು / ಇಡೀ ರಾತ್ರಿ ಮಳೆ ಸುರಿಯಿತು.
  • ಜಾನ್ ಈ ಸುದ್ದಿಯನ್ನು ಕೇಳಿ ತುಂಬಾ ಆಶ್ಚರ್ಯಪಟ್ಟ / ಸುದ್ದಿಯನ್ನು ಕೇಳಿದ ಜಾನ್ ದಿಗ್ಭ್ರಮೆಗೊಂಡನು.
  • ಇದೊಂದು ಬಹು ಬಿಸಿಲಿನ ದಿನ / ದಿನ ಬಿಸಿಯಾಗಿತ್ತು
  • ಪೀಟರ್ ನ ಮನೆ / ಪೀಟರ್ ಗೆ ಸೇರಿದ ಮನೆ

ಈ ಮೇಲಿನ ವಾಕ್ಯಗಳು ಒಂದೇ ಅರ್ಥವನ್ನು ಕೊಡುವ ವಾಕ್ಯಗಳಾದರೂ ಬಳಸಿರುವ ಪದಗಳು ವಿಭಿನ್ನವಾಗಿವೆ. ಈ ರೀತಿಯ ವಾಕ್ಯಗಳು ಒಳ್ಳೆಯ ಭಾಷಾಂತರಕ್ಕೆ ಅವಕಾಶ ಮಾಡಿಕೊಡುತ್ತದೆ. ಮೂಲಗ್ರಂಥದಲ್ಲಿನ ಪದಗಳಿಗಿಂತಾ ವಿಭಿನ್ನ ಪದಗಳನ್ನು ನಾವು ಬಳಸಿದರೂ ಮೂಲ ಅರ್ಥಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೇವೆ. ನಾವು ಬಳಸುವ ಪದಗಳನ್ನು ನಮ್ಮ ಜನರು ಅರ್ಥಮಾಡಿಕೊಳ್ಳುತ್ತಾರೆ. ಅದನ್ನು ನಾವು ಹೇಗೆ ಬಳಸುತ್ತೇವೆ ಎಂದರೆ ಅದು ನಮ್ಮ ಭಾಷೆಗೆ ಸಹಜವಾಗಿ ಹೊಂದಿಕೊಳ್ಳುವಂತೆ ಇರುತ್ತದೆ. ಮೂಲ ವಾಕ್ಯಭಾಗದಲ್ಲಿರುವ ಅರ್ಥಕೆಡದಂತೆ ಸ್ಪಷ್ಟವಾಗಿ, ಸಹಜವಾಗಿ, ಅರ್ಥಪೂರ್ಣವಾಗಿ ನಮ್ಮ ಭಾಷೆಯಲ್ಲಿ ತಿಳಿಸುವುದೇ ಉತ್ತಮ ಭಾಷಾಂತರದ ಉದ್ದೇಶ.

ಕೃತಜ್ಞತೆಗಳು: ಉದಾಹರಣೆ ವಾಕ್ಯಗಳು Barnwell, pp. 19-20, © SIL International 1986, used by permission. ರಿಂದ ಮತ್ತು ಅವರ ಅನುಮತಿ ಪಡೆದು ಬಳಸಿದೆ

Before Translating

Translation Manual :: Before Translating

ಮೊದಲು ಕರಡು ಪ್ರತಿ ಸಿದ್ಧಮಾಡುವುದು.

Translation Manual :: Before Translating :: First Draft

ನಾನು ಕಾರ್ಯವನ್ನು ಹೇಗೆ ಪ್ರಾರಂಭಿಸಲಿ ?

  • ನೀವು ಭಾಷಾಂತರಿಸಲು ನಿರ್ಧರಿಸುವ ವಾಕ್ಯಭಾಗಗಳನ್ನು ಚೆನ್ನಾಗಿ ಓದಿ ಅರ್ಥಮಾಡಿಕೊಳ್ಳಲು ಬೇಕಾದ ಎಲ್ಲಾ ರೀತಿಯ ವಿವೇಕ,ವಿವೇಚನೆ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿರಿ. ಆಗ ಆತನು ನಿಮಗೆ ನೀವು ಭಾಷಾಂತರಿಸ ಬೇಕಾದ ಭಾಗಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ನಿಮ್ಮ ಭಾಷೆಯಲ್ಲಿ ಓದುಗರಿಗೆ ಉತ್ತಮವಾಗಿ ತಿಳಿಸುವ, ಅಭಿವ್ಯಕ್ತಿಸುವ ಸಾಮರ್ಥ್ಯ ನೀಡುವನು.
  • ನೀವು ಸತ್ಯವೇದದಲ್ಲಿನ ಕಥೆಗಳನ್ನು ಮುಕ್ತವಾಗಿ ಭಾಷಾಂತರಿಸುವುದಾದರೆ ಭಾಷಾಂತರ ಮಾಡುವ ಮೊದಲು ಇಡೀ ಕಥೆಗಳನ್ನು ಓದಬೇಕು. ಸತ್ಯವೇದವನ್ನು ಭಾಷಾಂತರಿಸುವುದಾದರೆ ಆಯಾ ಅಧ್ಯಾಯವನ್ನು ಮೊದಲು ಓದಿ ಗ್ರಹಿಸಬೇಕು. ಇದರಿಂದ ನೀವು ಭಾಷಾಂತರಿಸಬೇಕಾದ ವಿಷಯವನ್ನು ಅರ್ಥ ಮಾಡಿಕೊಂಡು ಭಾಷಾಂತರ ಮಾಡಿದ ವಿಷಯ ಉತ್ತಮವಾಗಿ ಮೂಡಿಬಂದು ತಲುಪಬೇಕಾದವರಿಗೆ ತಲುಪಿ ಸರಿಯಾಗಿ ಅರ್ಥವಾಗುವಂತೆ ಮಾಡಬೇಕು.
  • ನೀವು ಭಾಷಾಂತರಿಸಬೇಕೆಂದು ಯೋಚಿಸಿರುವ ವಿಷಯ ಭಾಗವನ್ನು ಓದುವುದರೊಂದಿಗೆ ಈ ಭಾಗದ ಬಗ್ಗೆ ಇರುವ ಇತರ ಭಾಷಾಂತರ ಭಾಗಗಳನ್ನು ಓದಿ ತಿಳಿಯುವುದು ಅಗತ್ಯ. ULB ಮೂಲ ವಿಷಯ ಭಾಗದ ಮೂಲಕ ಸಹಾಯ ಮಾಡುತ್ತದೆ. ಮತ್ತು UDB ಮೂಲಕ ಪಠ್ಯವಿಷಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಜನರು ಸುಲಭವಾಗಿ ಪಠ್ಯದ ವಿಷಯಗಳನ್ನು ಅವರ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಅನುಕೂಲವಾಗು - ವಂತೆ ಯೋಚಿಸಬೇಕು. ನೀವು ಭಾಷಾಂತರಿಸುವ ಸತ್ಯವೇದದ ವಿಷಯ ಭಾಗಗಳ ಬಗ್ಗೆ ಇರುವ ಅನೇಕ ಸತ್ಯವೇದ ರೂಪಾಂತರಗಳು, ವಿಮರ್ಶೆಗಳನ್ನು ಓದಿ ವಿಷಯಸಂಗ್ರಹಣ ಮಾಡಿಕೊಳ್ಳಬೇಕು.
  • ನೀವು ಭಾಷಾಂತರಿಸಲು ಯೋಚಿಸಿರುವ ಬಗ್ಗೆ ಇರುವ ಇತರ ಭಾಷಾಂತರ ಕೈಪಿಡಿ, ಟಿಪ್ಪಣಿಗಳನ್ನು ಓದಿ ತಿಳಿಯಬೇಕು.

ಅನುವಾದ ಮಾಡುವವರ ತಂಡದ ಆಯ್ಕೆ.

Translation Manual :: Before Translating :: Choosing a Translation Team

####ಅನುವಾದ ಮಾಡುವವರ ತಂಡದ ಪ್ರಾಮುಖ್ಯತೆ.

ಸತ್ಯವೇದವನ್ನು ಭಾಷಾಂತರ ಮಾಡುವುದು ತುಂಬಾ ಜವಾಬ್ದಾರಿ ಕೆಲಸ, ಅನೇಕ ಜನರ ಶ್ರಮ ಇದಕ್ಕೆ ಅವಶ್ಯಕ. ಈ ಮಾದರಿ ಪುಸ್ತಕದಲ್ಲಿ ಸತ್ಯವೇದ ಅನುವಾದ ಮಾಡುವ ತಂಡದ ಸದಸ್ಯರಿಗೆ ಇರಬೇಕಾದ ಅನುವಾದ ಕೌಶಲ, ಜವಾಬ್ದಾರಿಗಳು, ಇವುಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಕೆಲವರಿಗೆ ಅನೇಕ ಕೌಶಲಗಳು, ಜವಾಬ್ದಾರಿಗಳು ಇರುತ್ತವೆ ಆದರೆ ಕೆಲವರಿಗೆ ಕೆಲವೇ ಕೌಶಲ ಜವಾಬ್ದಾರಿ ಇರುತ್ತವೆ. ಆದರೆ ಸತ್ಯವೇದವನ್ನು ಅನುವಾದ ಮಾಡುವ ತಂಡದಲ್ಲಿ ಅವಶ್ಯವಿರುವಷ್ಟು ಕೌಶಲಪೂರ್ಣ ಜನರು ಇರುವುದು ಮತ್ತು ಈ ತಂಡವನ್ನು ಪ್ರತಿನಿಧಿಸುವುದು ಅಗತ್ಯ.

ಚರ್ಚ್ ನಾಯಕರು /ಸಭಾನಾಯಕರು

ಸತ್ಯವೇದ ಅನುವಾದ ಮಾಡುವ ಮೊದಲು ಎಲ್ಲಾ ಸಭೆಯವರನ್ನು ಜಾಲತಾಣದ (ನೆಟ್ ವರ್ಕ್) ಮೂಲಕ ಸಂಪರ್ಕಿಸಿ ಅನುವಾದ ಕಾರ್ಯದಲ್ಲಿ ಹೆಚ್ಚು ಜನರು ಭಾಗವಹಿಸಲು ಪ್ರೋತ್ಸಾಹ ನೀಡಬೇಕಿದೆ. ಸಭೆಯವರು ತಮ್ಮ ಸಭೆಯಲ್ಲಿರುವ ಅರ್ಹವ್ಯಕ್ತಿಗಳನ್ನು ಗುರುತಿಸಿ ಈ ಕಾರ್ಯಕ್ಕೆ ಕಳುಹಿಸಬೇಕು.

ಅನುವಾದಕ್ರಿಯೆಯ ಉದ್ದೇಶ, ಪ್ರಕ್ರಿಯೆಗಳ ಬಗ್ಗೆ, ಅನುವಾದ ಪ್ರಾಜೆಕ್ಟ್ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುವಂತೆ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು, ವಿಚಾರವಿನಿಮಯಮಾಡಲು ಅನುವಾದಕರು ಸಿದ್ಧರಿರಬೇಕು.

ಅನುವಾದಕರ ಸಮಿತಿ

ಸಭೆಯಲ್ಲಿನ ಸಮಿತಿ ಅನುವಾದ ಮಾಡುವವರನ್ನು ಗುರುತಿಸಿ ಅವರ ತಂಡಮಾಡಿ ಮಾರ್ಗದರ್ಶನನೀಡಿ ವಿಚಾರತಿಳಿಸಬೇಕು. ಸಮರ್ಥರಾದ ಅನುವಾದಕರನ್ನು ಆಯ್ಕೆಮಾಡುವುದು,ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವುದು, ಈ ಕೆಲಸ ಸಮರ್ಥ ರೀತಿಯಲ್ಲಿ ನಡೆಯಲು ಬೇಕಾದ ಆರ್ಥಿಕ ಸಹಾಯದ ಬಗ್ಗೆ ಪ್ರಾರ್ಥನೆ ಮಾಡುವುದು ಸಹ ಸಭೆಯ ಕರ್ತವ್ಯ ಎಂದು ಮನಗಾಣಬೇಕು.

ಸಭೆಯ ಮೂಲಕ ನೇಮಿಸಲ್ಪಟ್ಟ ಸಮಿತಿಯು ಮೇಲೆ ತಿಳಿಸಿರುವ ಕೆಲಸಗಳೊಂದಿಗೆ ಅನುವಾದ ಸರಿಯಾಗಿ ಆಗಿದೆಯೆ ಎಂದು ವಿಷಯ, ಪದಪ್ರಯೋಗ, ಅಕ್ಷರಬಳಕೆಯಲ್ಲಿನ ತಪ್ಪು ಮುಂತಾದವುಗಳನ್ನು ನೋಡಿ, ತಿದ್ದಿ ಸರಿಪಡಿಸಲು (2ನೇ ಮೂರನೇ ಹಂತದಲ್ಲಿ) ಸೂಕ್ತವ್ಯಕ್ತಿಗಳನ್ನು ಆಯ್ಕೆಮಾಡಬೇಕು.

ಸಮಯಬಂದಾಗ ಸಮಿತಿಯು ಭಾಷಾಂತರ ಮಾಡುವವರ ಬಗ್ಗೆ ಒಂದು ನಮೂನೆಯನ್ನು ರಚಿಸುವ ನಿರ್ಧಾರ ತೆಗೆದುಕೊಳ್ಳಬಹುದು, ಅದನ್ನು ಹೇಗೆ ವಿತರಿಸುವುದು, ಸಭೆ ಈ ಕಾರ್ಯದಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಹಾಗೂ ಭಾಷಾಂತರ ವಾದ ಸತ್ಯವೇದದ ಭಾಗಗಳನ್ನು, ಲೇಖನಗಳನ್ನು ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಪ್ರೋತ್ಸಾಹಿಸಿ ಪ್ರೇರಣೆ ನೀಡಬಹುದು.

ಅನುವಾದಕರು / ಭಾಷಾಂತರಗಾರರು

ಇವರು ಅನುವಾದ/ಭಾಷಾಂತರ ಮಾಡಿ ಅದರ ಕರಡು ಪ್ರತಿಗಳನ್ನು ಸಿದ್ಧಪಡಿಸುವರು. ಇವರನ್ನು ಭಾಷಾಂತರ/ಅನುವಾದ ಸಮಿತಿ ಆಯ್ಕೆ ಮಾಡುತ್ತದೆ. ಭಾಷಾಂತರ ಮಾಡುವವರು ಭಾಷಾಂತರ ಮಾಡಲು ಉದ್ದೇಶಿಸಿರುವ ಭಾಷೆಯನ್ನು ಮಾತಾಡುವ ಸ್ಥಳೀಯರಾಗಿರಬೇಕು. ಅವರಿಗೆ ಆ ಭಾಷೆಯಲ್ಲಿ ಓದುವ,ಬರೆಯುವ ಸಾಮರ್ಥ್ಯ ಮೂಲಭಾಷೆಯ ಪರಿಚಯ ಚೆನ್ನಾಗಿ ಇರಬೇಕು, ಇದರೊಂದಿಗೆ ಅವರು ಸಭೆಯಲ್ಲಿ, ಸಮುದಾಯದಲ್ಲಿ ಉತ್ತಮ ಸಂಪರ್ಕ ಹೊಂದಿದವರಾಗಿರಬೇಕು.

ಈ ಹೆಚ್ಚಿನ ಮಾಹಿತಿಗಾಗಿ [ಅನುವಾದಕರ/ ಭಾಷಾಂತರಗಾರರ ಅರ್ಹತೆಗಳು]ಲೇಖನವನ್ನು ಓದಿ ತಿಳಿಯಿರಿ. ಅನುವಾದಕರು / ಭಾಷಾಂತರಗಾರರು ಅವರಲ್ಲೇ ಒಂದು ತಂಡಮಾಡಿಕೊಂಡು ತಾವು ಅನುವಾದಿಸಿದ ಕರಡುಪ್ರತಿಯನ್ನು ಪರಸ್ಪರ ಹಂಚಿಕೊಂಡು ಪರಿಶೀಲಿಸಿ ತಿದ್ದುಪಡಿಮಾಡಬಹುದು.ಸಮುದಾಯದ ಭಾಷಾತಜ್ಞರೊಂದಿಗೆ ಇದನ್ನು ಪರಿಶೀಲಿಸಿ 2ನೇ ಮತ್ತು 3 ನೇ ಹಂತದ ಪರಿಶೀಲನಾ ಸಮಿತಿಯೊಂದಿಗೆ ಪರಿಶೀಲಿಸಿ ಸಲಹೆಗಳನ್ನು ಪಡೆಯಬಹುದು.

ಈ ಎಲ್ಲಾ ಪರಿಶೀಲನಾ ಕಾರ್ಯದ ನಂತರ ಅನುವಾದಕರು / ಭಾಷಾಂತರಗಾರರು ಅಗತ್ಯವಿರುವ ಕಡೆ ಸ್ವೀಕರಿಸಿದ ಸಲಹೆಗಳನ್ನು ಎಲ್ಲಿ ಸಮರ್ಪಕವಾಗಿ ಬಳಸಬಹುದು ಎಂಬುದನ್ನು ಗಮನಿಸಿ ಸೇರಿಸಬಹುದು. ಇದರಿಂದ ಭಾಷಾಂತರ ವಾಗಿರುವ ವಿಷಯವು ಅನೇಕ ಪರಿಶೀಲನೆಗೆ ಒಳಗಾಗಿ ಉತ್ತಮಗೊಳ್ಳುತ್ತದೆ.

ಬೆರಳಚ್ಚು ಮಾಡುವವರು /ಟೈಪ್ ಮಾಡುವವರು.

ಭಾಷಾಂತರಗಾರರು ಸ್ವತಃ ಬರೆದು ಸಿದ್ಧಪಡಿಸಿದ ಅನುವಾದದ ಕರಡುಪ್ರತಿಯನ್ನು ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್ನಲ್ಲಿ ಅಳವಡಿಸಲು ಆಗದಿದ್ದರೆ ಸಮಿತಿಯಲ್ಲಿರುವ ಇತರ ಸದಸ್ಯರು ಇದನ್ನು ಮಾಡಬಹುದು. ಟೈಪಿಂಗ್ ಮಾಡುವವರು ಹೆಚ್ಚು ತಪ್ಪುಗಳನ್ನು ಮಾಡದೆ ಇರುವವರಾಗಿದ್ದರೆ ಒಳಿತು.

ಇವರಿಗೆ ಟೈಪ್ ಮಾಡುವಾಗ ಎಲ್ಲೆಲ್ಲಿ ಯಾವ ಲೇಖನ ಚಿಹ್ನೆಗಳನ್ನು ಭಾಷೆಯಲ್ಲಿ ಬಳಸಬೇಕು ಎಂಬುದು ತಿಳಿದಿರಬೇಕು. ಇವರು ಪರಿಶೀಲನಾ ತಂಡದವರು ಮಾಡಿದ ತಿದ್ದುಪಡಿ ಮತ್ತು ಪರಿಷ್ಕೃತ ಅಂಶಗಳನ್ನು ಪುನಃ ಟೈಪ್ ಮಾಡಿ ಅಂತಿಮಪ್ರತಿಯನ್ನು ಸಿದ್ಧಪಡಿಸಬೇಕು.

####ಅನುವಾದ /ಭಾಷಾಂತರ ಪರಿಶೀಲನಾ ತಂಡದ ಸದಸ್ಯರು

ಉದ್ದೇಶಿತ ಭಾಷೆಯಲ್ಲಿನ ಎಲ್ಲಾ ಹೊಳಹುಗಳನ್ನು ಅನುವಾದದಲ್ಲಿ /ಭಾಷಾಂತರದಲ್ಲಿ ಅನುಸರಿಸಿದ್ದಾರಾ ಎಂದು ಪರಿಶೀಲಿಸಲು ಭಾಷೆಯ ಸಮುದಾಯದಲ್ಲಿನ ಸದಸ್ಯರು ಅನುವಾದಕ್ಕೆ ಸಂಬಂಧಿಸಿದ ಭಾಷೆಯಲ್ಲಿ ಸಮರ್ಪಕವಾಗಿ ಆಗಿದೆಯೇ? ಸ್ಪಷ್ಟ ಹಾಗೂ ನ್ಯೂನತೆ ಇಲ್ಲದೆ ಆಗಿದೆಯೇ ಎಂದು ಪರಿಶೀಲಿಸುವರು.

ಮೂಲಭೂತವಾಗಿ ಇವರು ಬಾಷಾಂತರಗಾರರಾದರೂ ಸಮಿತಿಯಲ್ಲಿ ಸದಸ್ಯರಾಗಿರದೆ ಇರುವವರು ಆಗಿರಬೇಕು. ಹೀಗೆ ಸಿದ್ಧವಾದ ಪ್ರತಿಗಳನ್ನು ಇವರು ಸಮುದಾಯದ ಜನರ ಮುಂದೆ ಓದಿ,ಅನುವಾದಿಸಿದ ವಿಷಯಗಳು ಅರ್ಥವಾಗುತ್ತಿದೆಯೇ ? ಎಂದು ಪ್ರಶ್ನೆಗಳನ್ನು ಕೇಳುವುದರ ಮೂಲಕ ಖಚಿತಪಡಿಸುತ್ತಾರೆ. ಇದರ ವಿವರಣೆಗಳಿಗೆ ಇತರ [ಮಾದರಿಗಳ ವಿಧಾನಗಳನ್ನು]ಪರಿಶೀಲಿಸಿ.

ಪರಿಶೀಲಿಸುವವರು.

ಉದ್ದೇಶಿತ ಮೂಲಭಾಷೆಯಲ್ಲಿ ಸತ್ಯವೇದವನ್ನು ಓದಿ ತಿಳಿದವರು ಈ ಅನುವಾದವನ್ನು/ ಭಾಷಾಂತರವನ್ನು ಪರಿಶೀಲಿಸಿ ಸೂಕ್ಷ್ಮವಾದ ವಿಚಾರಗಳೂ ಸಹ ಸಮರ್ಪಕವಾಗಿದೆ ಎಂದು ಪರಿಶೀಲಿಸುವವರಾಗಿರಬೇಕು. ಅವರು ಉದ್ದೇಶಿತ ಮೂಲಭಾಷೆಯನ್ನು ಚೆನ್ನಾಗಿ ಓದಲು ಸಮರ್ಥರಾಗಿರಬೇಕು.

ಸತ್ಯವೇದದಲ್ಲಿನ ಎಲ್ಲಾ ಅಂಶಗಳು ಸುಲಭವಾಗಿ ಅರ್ಥವಾಗುವಂತೆ ಅನುವಾದವಾಗಿದೆಯೇ? ಸಮರ್ಪಕವಾಗಿದೆಯೇ ಎಂದು ತಿಳಿದುಕೊಳ್ಳಲು ಅದನ್ನು ಮೂಲ ಭಾಷೆಯ ಸತ್ಯವೇದದೊಂದಿಗೆ ಹೋಲಿಸಿ ನೋಡಿ ತಿಳಿಸುವರು.

ಇವರು ಅನುವಾದ /ಭಾಷಾಂತರ ಮಾಡುವುದರಲ್ಲಿ ಸಕ್ತರಾಗಿರಬೇಕು ಮತ್ತು ಈ ಪರಿಶೀಲನಾ ಕಾರ್ಯ ಮಾಡಲು ಹೆಚ್ಚಿನ ಸಮಯವಕಾಶ ಇರುವವರಾಗಿರಬೇಕು. ವಿವಿಧ ಸಭೆಗಳಲ್ಲಿನ ಸದಸ್ಯರು ಉದ್ದೇಶಿತ ಮೂಲಭಾಷೆಯನ್ನು ತಿಳಿದವರು, ಮಾತನಾಡುವವರೂ, ಅನುವಾದ /ಭಾಷಾಂತರ ಮಾಡಿದ ವಿಷಯಗಳನ್ನು ಬಳಸಿಕೊಳ್ಳುವ ಸಾಮರ್ಥ್ಯ ಉಳ್ಳವರಾಗಿರಬೇಕು.

2 ನೇ ಹಂತದ ಪರಿಶೀಲಕರು ಸ್ಥಳೀಯ ಸಭೆಯ / ಚರ್ಚಿನ ನಾಯಕರಾಗಿರಬೇಕು. 3 ನೇ ಹಂತದ ಪರಿಶೀಲಕರು ಸ್ಥಳೀಯವಾಗಿ ಇರುವ ಅನೇಕ ಚರ್ಚ್/ ಸಭೆಗಳಲ್ಲಿ ನಾಯಕರಾಗಿ, ಆ ಭಾಷೆಗಳಲ್ಲಿ ವಿಶಾಲವಾದ ಅನುಭವ ಇರುವವರಾಗಿರಬೇಕು. ಇವರೆಲ್ಲರೂ ತಮ್ಮದೇ ಆದ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡವರಾದುದರಿಂದ ಇವರಿಗೆ ವಿವಿಧ ಪುಸ್ತಕಗಳು ಅಥವಾ ಅಧ್ಯಾಯಗಳನ್ನು ಹಂಚುವುದರಿಂದ ಒಬ್ಬರು/ಇಬ್ಬರಿಗೆ ಅನುವಾದ ಕಾರ್ಯದಲ್ಲಿ ಆಗುವ ಶ್ರಮವನ್ನು ಕಡಿಮೆ ಮಾಡಬಹುದು.


ಅನುವಾದ ಮಾಡುವವರ ತಂಡದ ಆಯ್ಕೆ.

Translation Manual :: Before Translating :: Choosing a Translation Team

ಭಾಷಾಂರಗಾರರ ಅರ್ಹತೆಗಳು.

Translation Manual :: Before Translating :: Choosing a Translation Team :: Translator Qualifications

ಭಾಷಾಂತರಗಾರರ ಅಥವಾ ಭಾಷಾಂತರ ತಂಡದ ಅರ್ಹತೆಗಳು.

ಸಭೆಯ / ಚರ್ಚ್ ನ ಕಾರ್ಯಜಾಲದ ನಾಯಕರು ಭಾಷಾಂತರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಾಗ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ತಕ್ಕಂತೆ ಆಲೋಚಿಸಿ ಭಾಷಾಂತರ ತಂಡದ ಸದಸ್ಯರನ್ನು ಆಯ್ಕೆಮಾಡಬೇಕು. ಈ ಪ್ರಶ್ನೆಗಳು ಚರ್ಚ್ ಮತ್ತು ಸಮುದಾಯದ ನಾಯಕರಿಗೆ ಭಾಷಾಂತರ ತಂಡದವರು ಸತ್ಯವೇದವನ್ನು ಪರಿಣಾಮಕಾರಿಯಾಗಿ ಹಾಗೂ ಯಶಸ್ವಿಯಾಗಿ ಭಾಷಾಂತರಮಾಡಲು ಸತ್ಯವೇದದ ಕಥೆಗಳನ್ನು ಮುಕ್ತವಾಗಿ ಭಾಷಾಂತರಿಸಲು ಅರ್ಹವ್ಯಕ್ತಿಗಳನ್ನು ಆಯ್ಕೆಮಾಡಲು ಸಹಕಾರಿಯಾಗಿವೆ.

  1. ಭಾಷಾಂತರ ಮಾಡಬೇಕಾದ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುವ ಮತ್ತು ಭಾಷಾಂತರಿಸುವ ಜ್ಞಾನ ಭಾಷಾಂತರ ಮಾಡುವವನಿಗೆ/ಳಿಗೆ ಇದೆಯೇ? ಭಾಷಾಂತರಗಾರನಿಗೆ ತಾನು ಭಾಷಾಂತರಿಸುವ ಭಾಷೆ ಚೆನ್ನಾಗಿ ಮಾತನಾಡಲು ಬರುತ್ತದೆಯೇ ?
  • ಭಾಷಾಂತರ ಮಾಡುವ ಭಾಷೆಯನ್ನು ಚೆನ್ನಾಗಿ ಓದಲು, ಬರೆಯಲು ಭಾಷಾಂತರಗಾರನಿಗೆ ಬರುತ್ತದೆಯೇ ?
  • ಭಾಷಾಂತರಿಸುವ ಭಾಷೆಯ ಸಮುದಾಯದಲ್ಲಿ ಭಾಷಾಂತರಗಾರರು ಎಷ್ಟು ಸಮಯದಿಂದ ವಾಸವಾಗಿದ್ದಾರೆ? ಇಂತಹ ಸಮುದಾಯದಿಂದ ದೀರ್ಘಕಾಲದವರೆಗೆ ದೂರ ವಾಸಿಸುತ್ತಿರುವ ಜನರಿಗೆ ಸಹಜವಾದ ಭಾಷಾಂತರ ಮಾಡಲು ಸಾಧ್ಯವಾಗುತ್ತದೆಯೇ ?
  • ಈ ವ್ಯಕ್ತಿ ಅವರದೇ ಆದ ಭಾಷೆಯನ್ನು ಮಾತನಾಡಿದರೆ ಜನರು ಅವನನ್ನು ಗೌರವಿಸುವರೇ ?
  • ಪ್ರತಿಯೊಬ್ಬ ಭಾಷಾಂತರಗಾರರ ವಯಸ್ಸು ಮತ್ತು ಸ್ಥಳೀಯ ಭಾಷೆಯ ಹಿನ್ನೆಲೆ ಏನಾಗಿರಬೇಕು?.

ಸಾಮಾನ್ಯವಾಗಿ ವಿವಿಧ ಭಾಷೆಯ ಜ್ಞಾನವಿರುವ, ವಿವಿಧ ಸ್ಥಳಗಳಿಂದ ಬಂದ ಜನರು ಭಾಷಾಂತರ ತಂಡದಲ್ಲಿ ಇರುವುದು ಒಳ್ಳೆಯದು. ಅನೇಕ ವಯಸ್ಸಿನ, ವಿವಿಧ ಸ್ಥಳಗಳಿಂದ ಬಂದ ಜನರು ಭಾಷಾಂತರಮಾಡುವಾಗ ವಿವಿಧ ಭಾಷೆಗಳನ್ನು ಜ್ಞಾನದ ಅನುಭವವನ್ನು ಬಳಸಲು ಸಾಧ್ಯವಾಗುತ್ತದೆ. ಇಂತಹ ವ್ಯಕ್ತಿಗಳಿಂದ ಉತ್ತಮ, ನಿರ್ದಿಷ್ಟ ಭಾಷಾಂತರ ಮಾಡುವುದನ್ನು ಒಪ್ಪಿಕೊಳ್ಳುತ್ತಾರೆ.

  1. ಭಾಷಾಂತರ ಮಾಡುವವನಿಗೆ / ಳಿಗೆ ಮೂಲಭಾಷೆಯ ಜ್ಞಾನ ಚೆನ್ನಾಗಿದೆಯೇ ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವೇ?
  • ಅವರಿಗೆ ಯಾವ ಹಂತದ ಶಿಕ್ಷಣವನ್ನು ಪಡೆದಿದ್ದಾರೆ ಮತ್ತು ಅವರು ಮೂಲಭಾಷೆಯಲ್ಲಿನ ಕೌಶಲಗಳನ್ನು ಹೇಗೆ ಪಡೆದಿದ್ದಾರೆ ಎಂಬುದನ್ನು ತಿಳಿಯಬೇಕು.
  • ಕ್ರೈಸ್ತ ಸಮುದಾಯವು ಸದರಿ ವ್ಯಕ್ತಿಗೆ ಮೂಲಭಾಷೆಯಲ್ಲಿ ಮಾತನಾಡಲು, ಭಾಷಾಂತರಿಸಲು, ಬೇಕಾದ ಎಲ್ಲಾ ಕೌಶಶಲಗಳು ಇದೆಯೇ ಎಂದು ಗುರುತಿಸಿದೆಯೇ ? ಟಿಪ್ಪಣಿಗಳನ್ನು ಮತ್ತು ವೇದಾಭ್ಯಾಸಕ್ಕೆ ಸಂಬಂಧಿಸಿದ ವಿಚಾರಗಳನ್ನು ಅರ್ಥಮಾಡಿಕೊಂಡು ಬಳಸಿಕೊಳ್ಳಲು ತಕ್ಕ ಶಿಕ್ಷಣ ಸಾಕಷ್ಟು ಇದೆಯೇ ?
  • ಮೂಲಭಾಷೆಯನ್ನು ಸುಲಲಿತವಾಗಿ ಓದಲು, ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವೇ?
  1. ಸಮುದಾಯದಲ್ಲಿ ಕ್ರಿಸ್ತನ ತತ್ವಗಳನ್ನು ಅನುಸರಿಸಿ ನಡೆಯುವವನು /ವಳು ಎಂದು ಮನ್ನಣೆ ಪಡೆದಿರುವರೇ?. ತಾನು ಮಾಡಿದ ಭಾಷಾಂತರವನ್ನು ಪರಿಶೀಲಿಸಿ ಸಲಹೆ ಮತ್ತು ತಿದ್ದುಪಡಿಗಳನ್ನು ಈ ಬಗ್ಗೆ ಕಾಳಜಿ ಇರುವವರು ಹೇಳಿದಾಗ ವಿನಯದಿಂದ ಕೇಳುವ ಇಚ್ಛೆ ಉಳ್ಳವನಾಗಿರಬೇಕು ಭಾಷಾಂತರಿಸುವವರು ಯಾವಾಗಲೂ ಇತರರಿಂದ ಕಲಿಯುವ ಇಚ್ಛೆಯನ್ನು ಉಳ್ಳವನಾಗಿರಬೇಕು
  • ಅವರು ಎಷ್ಟು ದಿನದಿಂದ ಕ್ರೈಸ್ತರಾಗಿದ್ದಾರೆ ? ಕ್ರೈಸ್ತ ಸಮುದಾಯದಲ್ಲಿ ಉತ್ತಮ ಸ್ಥಾನ ಹೊಂದಿದ್ದಾರೆಯೇ ?
  • ಕ್ರಿಸ್ತನ ಶಿಷ್ಯನಾಗಿ ಬದ್ಧತೆಯಿಂದ ಇವರು ನಡೆದುಕೊಳ್ಳುತ್ತಿದ್ದಾರಾ? ಸತ್ಯವೇದದ ಭಾಷಾಂತರ ಕಠಿಣವಾದುದು, ಏಕೆಂದರೆ ಅದರಲ್ಲಿ ಅನೇಕ ಪುನರಾವರ್ತನೆಗಳು, ಪರಿಷ್ಕರಣಗಳು ಇರುತ್ತವೆ.ಹಾಗೆಯೇ ಭಾಷಾಂತರ ಕಾರ್ಯಮಾಡಲು ಸಮರ್ಪಣಭಾವ ಇರಬೇಕು. ಭಾಷಾಂತರ ಕಾರ್ಯಮಾಡಲು ತೊಡಗಿದ ಸ್ವಲ್ಪ ಸಮಯದ ನಂತರ ಭಾಷಾಂತರ ತಂಡ ಭಾಷಾಂತರ ಸರಿಯಾದ ದಾರಿಯಲ್ಲಿ ನಡೆಯುತ್ತಿದೆಯೇ ಅದರ ಗುಣಮಟ್ಟ ಉತ್ತಮವಾಗಿದೆಯೇ ಎಂಬುದನ್ನು ಆಗಿಂದಾಗ್ಗೆ ಪರಿಶೀಲಿಸಬೇಕು. ಭಾಷಾಂತರ ಮಾಡುತ್ತಿರುವವರು ನಿಮ್ಮನ್ನು ಕೇಳಬಹುದು.
  • ಅವರು ಮಾಡುತ್ತಿರುವ ಭಾಷಾಂತರ ಕಾರ್ಯ ಸಹ ಭಾಷಾಂತರಗಾರ ಮತ್ತು ಸ್ಥಳೀಯ ಸಭೆಯ ನಾಯಕರ ನಿರೀಕ್ಷಿತ ಮಟ್ಟದಲ್ಲಿ ಇದೆಯೋ?

(ಇತರರೊಂದಿಗೆ ತಾವು ಮಾಡಿದ ಭಾಷಾಂತರವನ್ನು ಆಗಿಂದಾಗ್ಗೆ ಪರಿಶೀಲನೆಗೆ ಒಳಪಡಿಸಿ, ತಿದ್ದುಪಡಿ ಮಾಡಿಕೊಳ್ಳಲು ಇಚ್ಛೆ ಉಳ್ಳವರೇ?)

ಭಾಷಾಂತರ ಮಾಡಲು ಆಯ್ಕೆ ಮಾಡುವುದು ಹೇಗೆ ?

Translation Manual :: Before Translating :: Choosing What to Translate

###ನಾನು ಮೊದಲು ಯಾವುದನ್ನು ಭಾಷಾಂತರಿಸಬೇಕು ?

ಭಾಷಾಂತರ ತಂಡವು ಯಾವುದನ್ನು ಮೊದಲು ಭಾಷಾಂತರಿಸಬೇಕು ಎಂಬುದನ್ನು ಒಂದು ಹಂತದಲ್ಲಿ ನಿರ್ಧಿರಿಸುತ್ತಾರೆ. ಈಗಾಗಲೇ ಅವರು ಭಾಷಾಂತರ ಮಾಡಿದ್ದರೆ ಅದರ ನಂತರ ಯಾವುದನ್ನು ಭಾಷಾಂತರಿಸಬೇಕು ಎಂದು ನಿರ್ಧರಿಸುವರು.

  • ಈ ವಿಷಯದಲ್ಲಿ ಅನೇಕ ವಿಚಾರಗಳನ್ನು ಪರಿಗಣಿಸುವ ಅವಶ್ಯಕತೆ ಇದೆ.
  • ಚರ್ಚ್ / ಸಭೆಗಳು ಯಾವುದನ್ನು ಭಾಷಾಂತರಿಸಬೇಕು ಎಂದು ತಿಳಿಸುತ್ತವೆ.?
  • ಭಾಷಾಂತರ ತಂಡವು ಎಷ್ಟು ಅನುಭವ ಹೊಂದಿದೆ ?
  • ಸತ್ಯವೇದದ ವಿಷಯಗಳು ಈ ಭಾಷೆಯಲ್ಲಿ ಎಷ್ಟು ಭಾಷಾಂತರವಾಗಿದೆ?

ಈ ಪ್ರಶ್ನೆಗಳಿಗೆ ನೀಡುವ ಉತ್ತರ ತುಂಬಾ ಮುಖ್ಯವಾದುದು. ಆದರೆ ಇವುಗಳನ್ನು ನೆನಪಿನಲ್ಲಿಡಬೇಕು.

ಭಾಷಾಂತರ ಕ್ರಿಯೆ ಎಂಬುದು ಅನುಭವದೊಂದಿಗೆ ಬೆಳೆಯುವ ಕೌಶಲ. ಭಾಷಾಂತರ ಕ್ರಿಯೆ ಎಂಬುದು ಒಂದು ಕೌಶಲದ ಬೆಳವಣಿಗೆ ಅದರಿಂದ ಭಾಷಾಂತರ ಮಾಡುವಾಗ ಕ್ಲಿಷ್ಟ ವಿಷಯ ಆಯ್ಕೆಮಾಡದೆ ಸರಳವಾದ ವಿಷಯವನ್ನು ಆಯ್ಕೆಮಾಡಬೇಕು. ಇದರಿಂದ ಹೊಸದಾಗಿ ಭಾಷಾಂತರ ಮಾಡಲು ಕಲಿಯುವವರಿಗೆ ಭಾಷಾಂತರ ಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಕಾರಿಯಾಗಿರುತ್ತದೆ.

ಭಾಷಾಂತರದಲ್ಲಿನ ತೊಂದರೆಗಳು/ಅಡಚಣೆಗಳು.

ವಿಕ್ಲಿಫ್ ಸತ್ಯವೇದದ ಭಾಷಾಂತರಗಾರರು ಸತ್ಯವೇದದ ವಿವಿಧ ಪುಸ್ತಕಗಳನ್ನು ಭಾಷಾಂತರ ಮಾಡುವಾಗ ಎದುರಾಗುವ ಕ್ಲಿಷ್ಟತೆ, ಅಡಚಣೆಗಳನ್ನು ಅದರ ಪ್ರಮಾಣಕ್ಕೆ ತಕ್ಕಂತೆ ಕ್ರೋಢಿಕರಿಸಿದ್ದಾರಾ. ಅವರ ಶ್ರೇಣಿಕರಣದ ಪ್ರಕ್ರಿಯೆಯಲ್ಲಿ ಅತ್ಯಂತ ಕಷ್ಟವಾದ ಪುಸ್ತಕದ ಶ್ರೇಣಿ 05 ಎಂದು ನೀಡಿದ್ದಾರೆ. ಭಾಷಾಂತರ ಪ್ರಕ್ರಿಯೆಯಲ್ಲಿ ಸುಲಭವಾದ ಪುಸ್ತಕಕ್ಕೆ ಶ್ರೇಣಿ 01.ಎಂದು ನಿಗಧಿಪಡಿಸಿದ್ದಾರೆ. ಸಾಮಾನ್ಯವಾಗಿ ಭಾಷಾಂತರ ಮಾಡುವ ಪುಸ್ತಕದಲ್ಲಿ ಅರ್ಥಗಳು ಅಡಗಿರುವ ಭಾಗಗಳು ಮತ್ತು ದೈವಶಾಸ್ತ್ರಶಿಕ್ಷಣದ ವಿಷಯಗಳನ್ನು ಒಳಗೊಂಡಿರುವ ವಿಷಯಗಳು ಮತ್ತು ವಿಚಾರಗಳನ್ನು ಭಾಷಾಂತರಿಸಲು ಕಷ್ಟವಾಗಬಹುದು. ಕಥಾ ರೂಪದಲ್ಲಿರುವ ಪುಸ್ತಕಗಳು ಮತ್ತು ವಾಸ್ತವಿಕ ರೂಪದಲ್ಲಿರುವ ವಾಕ್ಯಭಾಗಗಳು ಭಾಷಾಂತರ ಮಾಡಲು ಸುಭವಾಗಿರುತ್ತವೆ.

####ಕ್ಲಿಷ್ಟತೆಯ 5ನೇ ಹಂತವೆಂದರೆ (ಕಷ್ಟಕರವಾದ ಭಾಷಾಂತರ).

  • ಹಳೆ ಒಡಂಬಡಿಕೆಯಲ್ಲಿ
  • ಯೋಬ, ಕೀರ್ತನೆಗಳು, ಯೆಶಾಯ,ಯೆರೆಮೀಯ ಮತ್ತು ಯೆಹೆಜ್ಕೇಲನ ಪ್ರವಾದನಾ ಗ್ರಂಥಗಳು.
  • ಹೊಸ ಒಡಂಬಡಿಕೆಯಲ್ಲಿ
  • ಪೌಲನು ಬರೆದ ಪತ್ರಗಳು – ರೋಮಾಪುರದವರಿಗೆ,ಗಲಾತ್ಯದವರಿಗೆ, ಎಫೇಸದವರಿಗೆ,ಫಿಲಿಪ್ಪಿಯವರಿಗೆ, ಕೊಲೊಸ್ಸೆಯವರಿಗೆ, ಇಬ್ರಿಯರಿಗೆ.

####ಕ್ಲಿಷ್ಟತೆಯ 4ನೇ ಹಂತ

  • ಹಳೆ ಒಡಂಬಡಿಕೆಯಲ್ಲಿ
  • ಯಾಜಕಕಾಂಡ, ಜ್ಞಾನೋಕ್ತಿಗಳು, ಪ್ರಸಂಗಿ, ಪರಮಗೀತೆಗಳು, ಪ್ರಲಾಪಗಳು, ದಾನಿಯೇಲ ಹೋಶೇಯ, ಯೋವೇಲ, ಆಮೋಸ, ಒಬೇದ್ಯ, ಮೀಕ, ನಹೂಮ, ಹಬಕ್ಕೂಕ, ಚೆಫನ್ಯ, ಹಗ್ಗಾಯ, ಜೆಕಾರ್ಯ, ಮಲಾಕಿ.
  • ಹೊಸ ಒಡಂಬಡಿಕೆಯಲ್ಲಿ
  • ಯೋಹಾನ,ಪೌಲನು ಕೊರಿಂಥದವರಿಗೆ ಬರೆದ 1ಮತ್ತು2ನೇ ಪತ್ರಗಳು. ಥೆಸಲೋನಿಕದವರಿಗೆ ಬರೆದ 1ಮತ್ತು2ನೇ ಪತ್ರಗಳು. ಪೇತ್ರನು ಬರೆದ 1ಮತ್ತು2ನೇ ಪತ್ರಗಳು, ಯೋಹಾನನು ಬರೆದ ಮೊದಲ ಪತ್ರ.

####ಕ್ಲಿಷ್ಟತೆಯ 3ನೇ ಹಂತ

  • ಹಳೆ ಒಡಂಬಡಿಕೆಯಲ್ಲಿ
  • ಆದಿಕಾಂಡ, ವಿಮೋಚನಾಕಾಂಡ, ಅರಣ್ಯಕಾಂಡ, ಧರ್ಮೋಪದೇಶಕಾಂಡ,
  • ಹೊಸ ಒಡಂಬಡಿಕೆಯಲ್ಲಿ
  • ಮತ್ತಾಯ, ಮಾರ್ಕ, ಲೂಕ, ಅಪೋಸ್ತಲಕೃತ್ಯಗಳು, ಪೌಲನು ಬರೆದ ಪತ್ರಗಳು.- ತಿಮೋಥಿಗೆ ಬರೆದ 1ಮತ್ತು2ನೇ ಪತ್ರಗಳು ತೀತ, ಫಿಲೇಮೋನ, ಯಾಕೋಬ, ಯೋಹಾನನು ಬರೆದ 2-3ನೇ ಪತ್ರಗಳು, ಪ್ರಕಟಣೆ.

####ಕ್ಲಿಷ್ಟತೆಯ 2ನೇ ಹಂತ

  • ಹಳೆ ಒಡಂಬಡಿಕೆಯಲ್ಲಿ
  • ಯೆಹೋಶುವ, ನ್ಯಾಯಸ್ಥಾಪಕರು, ರೂತ್, 1-2ನೇ ಸಮುವೇಲ, 1-2ನೇ ಅರಸುಗಳು, 1ಮತ್ತು 2ನೇಪೂರ್ವಕಾಲ ವೃತ್ತಾಂತ, ಎಜ್ರಾ, ನೆಹೆಮಿಯಾ, ಎಸ್ತೇರ್, ಯೋನ
  • ಹೊಸ ಒಡಂಬಡಿಕೆಯಲ್ಲಿ

ಯಾವುದೂ ಇಲ್ಲ

####ಕ್ಲಿಷ್ಟತೆಯ 1ನೇ ಹಂತ

ಯಾವುದೂ ಇಲ್ಲ

ಮುಕ್ತವಾದ ಸತ್ಯವೇದದ ಕತೆಗಳು.

ಮುಕ್ತವಾದ ಸತ್ಯವೇದದ ಕತೆಗಳನ್ನು ಶ್ರೇಣಿಕೃತ ಕ್ರಿಯೆಯಲ್ಲಿ ಹಂತಗಳಲ್ಲಿ ಅಳವಡಿಸದಿದ್ದರೂ ಇವುಗಳನ್ನು ಕ್ಲಿಷ್ಟತೆಯ ಮೊದಲಹಂತದಲ್ಲಿ ಸೇರಿಸಬಹುದು. ಆದುದರಿಂದ ನೀವು ಭಾಷಾಂತರ ಮಾಡುವಾಗ ಮುಕ್ತವಾದ ಸತ್ಯವೇದದ ಕತೆಗಳ ಮೂಲಕ ಪ್ರಾರಂಭಿಸಬಹುದು. ಹೀಗೆ ಮುಕ್ತ ಸತ್ಯವೇದದ ಕತೆಗಳನ್ನು ಭಾಷಾಂತರ ಮಾಡಲು ಪ್ರಾರಂಭಿಸುವುದಕ್ಕೆ ಅನೇಕ ಒಳ್ಳೆ ಕಾರಣಗಳಿವೆ.

  • ಮುಕ್ತ ಸತ್ಯವೇದದ ಕತೆಗಳು ಭಾಷಾಂತರಿಸಲು ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದೆ.
  • ಇದು ಬಹುಪಾಲು ಕಥನರೂಪದಲ್ಲಿದೆ.
  • ಅನೇಕ ಕ್ಲಿಷ್ಟವಾದ ಪದಗುಚ್ಛಗಳು ಮತ್ತು ಪದಗಳನ್ನು ಸರಳೀಕರಿಸಲಾಗಿದೆ.
  • ಭಾಷಾಂತರಗಾರರು ಇವುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಅನೇಕ ಚಿತ್ರಗಳನ್ನು ನೀಡಲಾಗಿದೆ.
  • ಮುಕ್ತ ಸತ್ಯವೇದದ ಕತೆಗಳು ಸತ್ಯವೇದಕ್ಕಿಂತ ಆಕಾರದಲ್ಲಿ ಚಿಕ್ಕದಾಗಿದ್ದು ಹೊಸ ಒಡಂಬಡಿಕೆಗಿಂತ ಚಿಕ್ಕದಾಗಿದೆ. ಇದರಿಂದ ಇದನ್ನು ಆದಷ್ಟು ಬೇಗ ಭಾಷಾಂತರಿಸಬಹುದು.
  • ಇದು ಧರ್ಮಗ್ರಂಥವಲ್ಲದೆ ದೇವರ ವಾಕ್ಯ ಮತ್ತು ಸತ್ಯವೇದದ ವಾಕ್ಯಭಾಗವಾಗದೆ ಇರುವುದರಿಂದ ಭಾಷಾಂತರಗಾರರು ಯಾವ ಭಯವಿಲ್ಲದೆ ಮುಕ್ತ ಸತ್ಯವೇದದ ಕತೆಗಳನ್ನು ನಿರಾಳವಾಗಿ ಭಾಷಾಂತರ ಮಾಡುವರು.
  • ಸತ್ಯವೇದವನ್ನು ಭಾಷಾಂತರ ಮಾಡುವ ಮೊದಲು ಈ ಮುಕ್ತ ಸತ್ಯವೇದದ ಕತೆಗಳನ್ನು ಭಾಷಾಂತರ ಮಾಡಿದರೆ ಭಾಷಾಂತರಗಾರರಿಗೆ ಇದೊಂದು ಉತ್ತಮರೀತಿಯಲ್ಲಿ ಭಾಷಾಂತರಿಸುವುದು. ಭಾಷಾಂತರಮಾಡಲು ತರಬೇತಿ ಹಾಗೂ ಅನುಭವ ಪಡೆದಂತೆ ಆಗುತ್ತದೆ. ಉತ್ತಮ ರೀತಿಯಲ್ಲಿ ಭಾಷಾಂತರಿಸುವರು.
  • ಮುಕ್ತ ಸತ್ಯವೇದದ ಕತೆಗಳನ್ನು ಭಾಷಾಂತರಿಸುವುದರಿಂದ ಭಾಷಾಂತರಮಾಡುವ ತಂಡ ಅನುಭವಗಳಿಸುತ್ತದೆ ಅವುಗಳಲ್ಲಿ.
  • ಭಾಷಾಂತರ ಮತ್ತು ಪರಿಶೀಲಿಸುವ ತಂಡವನ್ನು ಸೃಷ್ಟಿಸುವ ಅನುಭವ.
  • ಭಾಷಾಂತರಮಾಡುವ ಮತ್ತು ಪರಿಶೀಲಿಸುವ ಪ್ರಕ್ರಿಯೆಯ ಅನುಭವ.
  • Door43 ಭಾಷಾಂತರ ಸಾಧನಗಳನ್ನು ಬಳಸುವ ಅನುಭವ.
  • ಭಾಷಾಂತರ ಸಮಸ್ಯೆಗಳನ್ನು ಪರಿಹರಿಸುವ ಅನುಭವ.
  • ಚರ್ಚ್/ ಸಭೆ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಪಡೆಯುವ ಅನುಭವ.
  • ಭಾಷಾಂತರಿಸಿದ್ದನ್ನು ಪ್ರಕಟಿಸುವ ಮತ್ತು ವಿತರಿಸುವ ಅನುಭವ
  • ಮುಕ್ತ ಸತ್ಯವೇದದ ಕತೆಗಳು ಒಂದು ದೊಡ್ಡ ಸಾಧನವಾಗಿ ಚರ್ಚ್/ ಸಭೆಗೆ ಬೋಧಿಸುವ, ದಾರಿತಪ್ಪಿದವರಿಗೆ ಸುವಾರ್ತೆ ನೀಡುವುದು ಮತ್ತು ಸತ್ಯವೇದವನ್ನು ಭಾಷಾಂತರಿಸುವವರಿಗೆ ತರಬೇತಿ ನೀಡುವುದು.

ನೀವು ನಿಮಗೆ ಯಾವ ಕ್ರಮದಲ್ಲಿ ಭಾಷಾಂತರಿಸಲು ಅನುಕೂಲವಾಗುತ್ತದೋ ಅದನ್ನು ಅನುಸರಿಸಬಹುದು#31 (see http://ufw.io/en-obs-31) ನೋಡಿ. ಮೊದಲ ಕತೆಯನ್ನು ಭಾಷಾಂತರಿಸುವುದು ಒಳ್ಳೆಯದು ಮತ್ತು ಇದು ಚಿಕ್ಕದಾಗಿಯೂ ಅರ್ಥಮಾಡಿಕೊಳ್ಳಲು ಸುಲಭವಾಗಿಯೂ ಇದೆ.

ಮುಕ್ತಾಯ

ಅಂತಿಮವಾಗಿ ಚರ್ಚ್/ ಸಭೆ ಯಾವುದನ್ನು ಭಾಷಾಂತರಿಸಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಆದರೆ ಭಾಷಾಂತರಕ್ರಿಯೆ ಎಂಬುದು ಒಂದು ಕೌಶಲ, ಇದರಿಂದ ಭಾಷಾಂತರ ಮತ್ತು ಪರಿಶೀಲನೆ ಮಾಡುವ ತಂಡದವರು ಸತ್ಯವೇದವನ್ನು ಭಾಷಾಂತರಿಸಲು ಕಲಿಯುತ್ತಾರೆ. ಮುಕ್ತ ಸತ್ಯವೇದದ ಕತೆಗಳು ಈ ಕಲಿಕೆಗೆ ಪೂರಕವಾಗಿವೆ. ಈ ಮುಕ್ತ ಸತ್ಯವೇದದ ಕತೆಗಳು ಅತ್ಯಂತ ಉನ್ನತ ಮೌಲ್ಯಗಳನ್ನು ಹೊಂದಿರುವುದರಿಂದ ಸ್ಥಳೀಯ ಸಭೆಗಳಲ್ಲಿ ಬಳಸಲು ಅನುಕೂಲಕರವಾಗಿದೆ. ಆದುದರಿಂದ ಸತ್ಯವೇದ ಭಾಷಾಂತರ ಪ್ರಕ್ರಿಯೆ ಪ್ರಾರಂಭಿಸುವ ಮೊದಲು ಮುಕ್ತ ಸತ್ಯವೇದದ ಕತೆಗಳನ್ನು ಪ್ರಾರಂಭಿಸಬೇಕೆಂದು ಶಿಫಾರಸ್ಸು ಮಾಡಿದೆ.

ಮುಕ್ತ ಸತ್ಯವೇದದ ಕತೆಗಳನ್ನು ಭಾಷಾಂತರಿಸಿದ ಮೇಲೆ ಚರ್ಚ್/ ಸಭೆಗಳು ಎಲ್ಲವೂ (ಆದಿಕಾಂಡ, ವಿಮೋಚನಾಕಾಂಡ) ಅಥವಾ ಯೇಸುವಿನಿಂದ ಹೊಸ ಒಡಂಬಡಿಕೆಯ ಸುವಾರ್ತೆಗಳು ಪ್ರಾರಂಭವಾಗುತ್ತದೆ ಮತ್ತು ಅದು ಹೆಚ್ಚು ಉಪಯೋಗಕಾರಿ ಎಂಬುದು ಸ್ಪಷ್ಟವಾಗುತ್ತದೆ. ಎರಡು ವಿಷಯದಲ್ಲಿ ಸತ್ಯವೇದದ ಭಾಷಾಂತರವು ಕ್ಲಿಷ್ಟತೆಯ 2 ಮತ್ತು 3 ನೇ ಹಂತದ ಪುಸ್ತಕಗಳಿಂದ ಪ್ರಾರಂಭವಾದರೆ ಉತ್ತಮ.(ಉದಾಹರಣೆಗೆ ಆದಿಕಾಂಡ, ರೂತ್ ಮತ್ತು ಮಾರ್ಕ್) ಅಂತಿಮವಾಗಿ ಭಾಷಾಂತರತಂಡ ಪಡೆದ ಅನುಭವಗಳನಂತರ ಭಾಷಾಂತರದ ಕ್ಲಿಷ್ಟತೆಯ ಹಂತ 4 ಮತ್ತು 5ನ್ನು ಪ್ರಾರಂಭಿಸಬೇಕು ಉದಾಹರಣೆಗೆ (ಯೋಹಾನ, ಇಬ್ರಿಯ ಮತ್ತು ದಾವೀದನ ಕೀರ್ತನೆಗಳು). ಭಾಷಾಂತರ ತಂಡಗಳು ಈ ವಿವರಗಳನ್ನು ಅನುಸರಿಸಿದರೆ ಅತ್ಯಂತ ಕಡಿಮೆ ತಪ್ಪುಗಳೊಂದಿಗೆ ಉತ್ತಮ ಭಾಷಾಂತರ ಮಾಡಬಹುದು.


ಆಕರ ಗ್ರಂಥಗಳನ್ನು ಆಯ್ಕೆಮಾಡುವುದು.

Translation Manual :: Before Translating :: Choosing a Source Text

ಮೂಲಗ್ರಂಥದಲ್ಲಿನ ಅಂಶಗಳನ್ನು ಪರಿಗಣಿಸುವುದು.

ಮೂಲಗ್ರಂಥವನ್ನು ಆಯ್ಕೆ ಮಾಡಿಕೊಳ್ಳುವಾಗ ಅನೇಕ ಅಂಶಗಳನ್ನು ಗಮನದಲ್ಲಿಟ್ಟು ಪರಿಗಣಿಸಬೇಕು.

ಸಭೆಯ / ಚರ್ಚಿನ ನಾಯಕರು ಈ ಭಾಷೆಯನ್ನು ಅಂಗೀಕರಿಸಿ ಮೂಲಗ್ರಂಥವನ್ನು ಒಪ್ಪಿಕೊಳ್ಳುವುದು ಮುಖ್ಯವಾದುದು. ಓಪನ್ ಬೈಬಲ್ ಸ್ಟೋರಿಸ್ ಮೂಲಭಾಷೆಯಲ್ಲಿ ಓದಲು http://ufw.io/stories/. ನೋಡಿರಿ. ಕೆಲವಾರು ಸತ್ಯವೇದ ಭಾಷಾಂತರವಗಳಿದ್ದು ಅದನ್ನು ಈಗ ಆಂಗ್ಲ ಭಾಷೆಯಲ್ಲಿ ಮುಂದೆ ಇತರ ಭಾಷೆಗೆ ಮೂಲ ಅನುವಾದವಾಗಿ ಉಪಯೋಗಿಸಲಾಗುತ್ತದೆ.


ಆಕರ ಗ್ರಂಥಗಳನ್ನು ಆಯ್ಕೆಮಾಡುವುದು.

Translation Manual :: Before Translating :: Choosing a Source Text

ಗ್ರಂಥದ ಹಕ್ಕು, ಪರವಾನಗಿ ಮತ್ತು ಮೂಲ ಪಠ್ಯ.

Translation Manual :: Before Translating :: Choosing a Source Text :: Copyrights, Licensing, and Source Texts

###ಇದು ಏಕೆ ಪ್ರಮುಖವಾದುದು?

ಭಾಷಾಂತರ ಮಾಡಲು ಮೂಲ ಪಠ್ಯ ಆಯ್ಕೆ ಮಾಡುವಾಗ ಗ್ರಂಥದಹಕ್ಕು ಮತ್ತು ಪರವಾನಗಿಯನ್ನು ಪಡೆಯುವುದು ಎರಡು ಕಾರಣಗಳಿಂದ ಅತಿ ಮುಖ್ಯವಾದುದು. ಮೊದಲನೆಯದಾಗಿ ಗ್ರಂಥದ ಹಕ್ಕು ಯಾರದು ಎಂದು ತಿಳಿದು ಅವರ ಅನುಮತಿ ಇಲ್ಲದೆ ಭಾಷಾಂತರ ಮಾಡಿದರೆ ನೀವು ಕಾನೂನು ಉಲ್ಲಂಘಿಸಿದಂತೆ. ಮೂಲಲೇಖಕರು ತಮ್ಮ ಗ್ರಂಥದ ಹಕ್ಕು ಸಂಪೂರ್ಣ ಹೊಂದಿರುವುದರಿಂದ ಅದು ಕಾನೂನು ಬಾಹಿರವಾದುದು. ಕೆಲವು ಪ್ರದೇಶಗಳಲ್ಲಿ ಸರ್ಕಾರವು ಮೂಲ ಲೇಖಕರ ಅನುಮತಿ ಇಲ್ಲದೆ ಭಾಷಾಂತರಿಸುವುದು ಇಲ್ಲವೆ, ಗ್ರಂಥದ ಹಕ್ಕನ್ನು ಅತಿಕ್ರಮಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಬಹು ಗಂಭೀರವಾಗಿ ಪರಿಗಣಿಸುತ್ತದೆ.

ಎರಡನೆಯದಾಗಿ ಮೂಲ ಲೇಖಕರ ಅನುಮತಿ ಇಲ್ಲದೆ ಭಾಷಾಂತರಿಸುವುದು ಇಲ್ಲವೆ, ಮೂಲ ಪಠ್ಯದಲ್ಲಿ ಬದಲಾವಣೆ ತರುವುದು, ಮರುಪ್ರಕಟಣೆ ಇತ್ಯಾದಿ ಮಾಡಿದರೆ, ಮೂಲ ಲೇಖಕರ ಬೌದ್ಧಿಕ ಸಂಪತ್ತನ್ನು ಕೊಳ್ಳೆ ಹೊಡೆದಂತೆ ಆಗುತ್ತದೆ. ಮೂಲ ಲೇಖಕರು ತಮ್ಮ ಗ್ರಂಥದ ಸಂಪೂರ್ಣ ಹಕ್ಕನ್ನು ಉಳಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಪ್ರಕಾಶಕರಿಗೆ ವಹಿಸುತ್ತಾರೆ. ಈ ಕಾರಣದಿಂದಲೇ ಗ್ರಂಥಕರ್ತರ ಹಕ್ಕು ಮತ್ತು ಕಾನೂನು ಉಲ್ಲಂಘನೆ ಆಗದೆ ಇರುವ ಗ್ರಂಥಗಳನ್ನು ಮಾತ್ರ ಭಾಷಾಂತರಕ್ಕೆ ಬಳಸಿಕೊಳ್ಳುತ್ತಾರೆ.

###ನಾವು ಯಾವ ಪರವಾನಗಿಯನ್ನು ಉಪಯೋಗಿಸಬಹುದು?

ಪ್ರಕಟವಾಗುವ ಎಲ್ಲಾ ವಿಷಯಗಳು ಅಥವಾ ಗ್ರಂಥವು ಈ ಆಧಾರದಮೇಲೆ ಬಿಡುಗಡೆ ಆಗುತ್ತದೆ Creative Commons Attribution-ShareAlike 4.0 License (CC BY-SA) (see http://creativecommons.org/licenses/by-sa/4.0/).

ಈ ಪರವಾನಗಿ/ ಅನುಮತಿ ಚರ್ಚ್ ತುಂಬಾ ಸಹಾಯವಾಗುತ್ತದೆ. ಇದು ಭಾಷಾಂತರ ಮತ್ತು ಇತರ ಉತ್ಪನ್ನ ಶಬ್ದಗಳನ್ನು ಸೇರಿಸಿಕೊಳ್ಳುವುದರಿಂದ ಭಾಷಾಂತರದ ಅನುಮತಿ/ ಪರವಾನಗಿ ನಿರ್ಬಂಧಕ್ಕೆ ಒಳಗಾಗಬಹುದು. ಈ ವಿಷಯದ ಬಗ್ಗೆ ಸಂಪೂರ್ಣವಾದ ಚರ್ಚೆ ಮಾಡಲು, “The Christian Commons” ನ್ನು ಓದಿ (see http://thechristiancommons.com/).

ಯಾವ ಮೂಲ ಪಠ್ಯಭಾಗವನ್ನು ಉಪಯೋಗಿಸಬಹುದು?

ಮೂಲ ಪಠ್ಯವನ್ನು ಸಾರ್ವಜನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಅಥವಾ ಈ ಕೆಳಗೆ ಕೊಟ್ಟಿರುವ ಪರವಾನಗಿ/ ಅನುಮತಿ ಆಧಾರದ ಮೇಲೆ ಉಪಯೋಗಿಸಬಹುದು, ಈ ಪರವಾನಗಿ ಕ್ರಿಯೆಟಿವ್ ಕಾಮನ್ಸ್ ಅಟ್ರಿಬ್ಯುಷನ್ – ಕೇರ್ ಅಲೈಕ್ ಲೈಸೆನ್ಸ್ ಮೂಲಕ ಭಾಷಾಂತರವನ್ನು ಪ್ರಕಟಮಾಡಬಹುದು.

ಇತರ ಎಲ್ಲಾ ಪ್ರಶ್ನೆಗಳಿಗೆ ಈ ಮೇಲ್ ಸಂಪರ್ಕಿಸಿ help@door43.org.

ಗಮನಿಸಿ:

ಎಲ್ಲ ಮೂಲಗ್ರಂಥಗಳು, ವಿಷಯಗಳು ಮೂಲಪಠ್ಯವಾಗಿ ಭಾಷಾಂತರ ಸ್ಟುಡಿಯೋದಲ್ಲಿ ಪರಿಶೀಲನೆಗೆ ಒಳಗಾಗುತ್ತದೆ ಮತ್ತು ನ್ಯಾಯಬದ್ಧವಾಗಿ ಉಪಯೋಗಿಸಲು ಅವಕಾಶ ಮಾಡಿಕೊಡುತ್ತದೆ. ಯಾವುದೇ ಭಾಷಾಂತರ ಗ್ರಂಥವನ್ನು ಪ್ರಕಟಿಸುವ ಮೊದಲು ಬಳಸಿದ ಉತ್ಪನ್ನ ಪದಗಳೊಂದಿಗೆ ಸರಿಯಾಗಿ ಪರಿಶೀಲಿಸಿ ಮೇಲೆ ತಿಳಿಸಿರುವ ಪರವಾನಗಿ/ಅನುಮತಿ ಪದ್ಧತಿಯಂತೆ ಅನುಮತಿ ದೊರೆತಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ನೀವು ಭಾಷಾಂತರ ಪ್ರಾರಂಭಿಸುವ ಮೊದಲು ಮೂಲ ಪಠ್ಯಭಾಗವನ್ನು/ ಗ್ರಂಥವನ್ನು ಚೆನ್ನಾಗಿ ಪರಿಶೀಲಿಸಬೇಕು ಏಕೆಂದರೆ ಈ ಕಾರಣದಿಂದ ಮುಂದೆ ನಿಮ್ಮ ಭಾಷಾಂತರ ಅಪ್ರಕಟಿತವಾಗಿ ಉಳಿಯಬಹುದು.


ಆಕರ ಪಠ್ಯಗಳು ಮತ್ತು ಅನುವಾದದ ಸಂಖ್ಯೆಗಳು.

Translation Manual :: Before Translating :: Choosing a Source Text :: Source Texts and Version Numbers

ಇತರ ಗ್ರಂಥಗಳ ಸಂಖ್ಯೆ ಪ್ರಾಮುಖ್ಯತೆ.

ಪದಗಳನ್ನು ಅನಾವರಣಗೊಳಿಸುವಂತಹ ಇಂತಹ ಮುಕ್ತ ಯೋಜನೆಯಲ್ಲಿ ಪ್ರಕಟವಾಗಿರುವ ಗ್ರಂಥಗಳ ನ್ನು ನೋಡುತ್ತಲೇ ಇರುವುದುವುದು ಅಗತ್ಯ. ಇದು ತುಂಬಾ ಮುಖ್ಯವಾದುದು ಏಕೆಂದರೆ ಭಾಷಾಂತರಗಳು (ಆಕರ ಗ್ರಂಥಗಳ ಪಟ್ಟಿಗಳು) ಆಗಿಂದಾಗ್ಗೆ ಬದಲಾಗಬಹುದು. ಪ್ರತಿಯೊಂದು ಆಕರ ಗ್ರಂಥಗಳನ್ನು ಗುರುತಿಸಲು ಸಮರ್ಥರಾಗುವುದಲ್ಲದೆ ಭಾಷಾಂತರದಲ್ಲಿ ಸ್ಪಷ್ಟತೆಯನ್ನು ತರಲು ಮತ್ತು ಆಕ್ಷೇಪಣೆಯ ಬಗ್ಗೆಯೂ ಗಮನ ವಹಿಸಿಬೇಕು.

ಇಂತಹ ಇತರ ಆಕರಗ್ರಂಥಗಳ ಸಂಖ್ಯಗಳು ಬಹಳ ತುಂಬಾ ಮುಖ್ಯವಾದುದು ಏಕೆಂದರೆ ಎಲ್ಲಾ ಭಾಷಾಂತರಗಳು ಇತ್ತೀಚಿನವರೆಗಿನ ಮೂಲ ಗ್ರಂಥವನ್ನು ಒಳಗೊಂಡಿರಬೇಕು. ಆಕರ ಗ್ರಂಥವೇನಾದರೂ ಬದಲಾದರೆ ಅಂತಿಮವಾಗಿ ಭಾಷಾಂತರವನ್ನು ಇತ್ತೀಚಿನ ಆಕರ ಗ್ರಂಥದೊಂದಿಗೆ ಹೋಲಿಸಿನೋಡಬೇಕು. ಭಾಷಾಂತರಕಾರ್ಯವನ್ನು ಪ್ರಾರಂಭಿಸುವ ಮೊದಲು ದಯವಿಟ್ಟು ನಿಮ್ಮ ಬಳಿ ಇತ್ತಿಚ್ಚಿನ ಆಕರ ಗ್ರಂಥ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

###ಆಕರ ಗ್ರಂಥಗಳು ಹೇಗೆ ಕಾರ್ಯ ಮಾಡುತ್ತವೆ.?

ಗ್ರಂಥದ ಬಿಡುಗಡೆ ಸಮಯದಲ್ಲಿ, ಆಕರ ಗ್ರಂಥಗಳ ಪಟ್ಟಿ ನೀಡಲಾಗುತ್ತದೆ, ಆದರೆ ಆ ಗ್ರಂಥವನ್ನು ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ಪರಿಗಣಿಸುವುದಿಲ್ಲ. ಇತಿಹಾಸದ ಪುನರಾವರ್ತನೆ Door43,ಇಲ್ಲಿ ಇಟ್ಟಿದೆ.ಆದರೆ ಇದು ಇತರೆ ಗ್ರಂಥಗಳ ಸಂಖ್ಯೆಗಿಂತ ವಿಭಿನ್ನವಾಗಿರುತ್ತದೆ.

ಪ್ರತಿಯೊಂದು ಆಕರಗ್ರಂಥಗಳಿಗೆ ಒಂದು ಸಂಖ್ಯೆಯನ್ನು ನೀಡಿ ಬಿಡುಗಡೆಗೆ ಅನುಕೂಲಗುವಂತೆ ಕೊಡಬೇಕು (ಗ್ರಂಥ 1, 2, 3, ಇತ್ಯಾದಿ). ಪ್ರತಿಯೊಂದು ಭಾಷಾಂತರವೂ ಆಧರಿಸಿದ ಆಕರಗ್ರಂಥ ಬಳಸಿದ ಇತರೆ ಗ್ರಂಥಗಳ ಸಂಖ್ಯೆ ಮತ್ತು ಸೇರಿಸುವಂತದು.1 (OBS ಇಂಗ್ಲೀಷ್ ಭಾಷಾಂತರ ಇದರ ಗ್ರಂಥ 4, ಆದರೆ ಅದನ್ನು 4.1ಎಂದು ಬರೆಯಬೇಕು). ಮುಂದುವರಿದು ಆಗುವ ಭಾಷಾಂತರಗಳು ಮತ್ತು ಮಧ್ಯದಲ್ಲಿ ಆಗುವ ಭಾಷಾಂತರಗಳನ್ನು.1 ಇತರಗ್ರಂಥಗಳ ಸಂಖ್ಯೆಯನ್ನು ದಾಖಲಿಸುವುದು (ಉದಾಹರಣೆ 4.1.1). ಹೊಸ ಬಿಡುಗಡೆಗಳು ಯಾವುದೇ ಪಠ್ಯಗಳ ವಿಷಯವನ್ನು ಸೇರಿಸುವುದಾದರೆ "ದಶಮಾಂಶಸ್ಥಾನ " ನೀಡಬೇಕು 1. ದಯವಿಟ್ಟು ನೋಡಿ http://ufw.io/versioning for more details

###ಹೊಸ ಇತರ ಗ್ರಂಥಗಳ ವಿಷಯವನ್ನು ಎಲ್ಲಿ ಕಂಡುಕೊಳ್ಳಬಹುದು.

ಯಾವಾಗಲೂ ಇತ್ತೀಚೆಗೆ ಮುದ್ರಣವಾದ ಗ್ರಂಥಗಳ ಸಂಪನ್ಮೂಲಗಳು ಇರುತ್ತವೆ. ನೋಡಿ the Dashboard page at ಮುದ್ರಣ ಇತಿಹಾಸದ ಪ್ರತಿಯೊಂದು ಸಂಪನ್ಮೂಲವಾಗುತ್ತದೆ. * ಗಮನಿಸಿ : ಭಾಷಾಂತರ ಸ್ಟುಡಿಯೋ ಮತ್ತು ಅನಾವರಣಗೊಳ್ಳುವ ಪದದ ಆಪ್ ಯಾವಾಗಲೂ ಇತ್ತೀಚಿನ ಗ್ರಂಥಗಳು, ಇತ್ತೀಚಿನ ಮಾಹಿತಿಗಳನ್ನು ಹೊಂದಿರಲು ಸಾಧ್ಯವಿಲ್ಲ.

ನಿಮ್ಮ ಭಾಷೆಯಲ್ಲಿ ಬರೆಯುವ ನಿರ್ಧಾರ.

Translation Manual :: Before Translating :: Decisions for Writing Your Language

ಬರಹದ ಬಗ್ಗೆ ಇರುವ ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳು.

ಒಂದು ಭಾಷೆಯಲ್ಲಿ ಬರವಣಿಗೆ ಆದ ಮೇಲೆ ಭಾಷಾಂತರಕಾರ ಬರಹವಿರುವ ಭಾಷೆಗಳಲ್ಲಿ ಮುಖ್ಯ ಲಕ್ಷಣಗಳನ್ನು ಹೇಗೆ ಗುರುತಿಸಬೇಕು ಎಂಬುದನ್ನು ನಿರ್ಧರಿಸಬೇಕು. ಸ್ಥಳೀಯ ಭಾಷೆಯ ಬರಹಗಳನ್ನು ಭಾಷಾಂತರ ಮಾಡುವವರಿಗೆ ಈ ರೀತಿಯ ಪ್ರಶ್ನೆಗಳು ವಿಶಾಲವಾದ ಸಮುದಾಯದ ಅರ್ಥಗ್ರಹಣೆಯನ್ನು, ಪ್ರಾಥಮಿಕವಾಗಿ ತೆಗೆದುಕೊಳ್ಳಬಹುದಾದ ನಿರ್ಧಾರಗಳನ್ನು ಒದಗಿಸಿಕೊಡುತ್ತದೆ. ಇದರಿಂದ ಭಾಷಾಂತರ ವಿಷಯದಲ್ಲಿರುವ ಲೇಖನ ಚಿಹ್ನೆಗಳು, ಕಾಗುಣಿತ ಮತ್ತು ಸತ್ಯವೇದದಲ್ಲಿನ ಹೆಸರುಗಳನ್ನು ಬರೆಯಲು ಅವಕಾಶ ಮಾಡಿಕೊಡುತ್ತದೆ. ಭಾಷಾಂತರ ಸಮಿತಿ ಮತ್ತು ಸಮುದಾಯವು ಇದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಒಮ್ಮತದಿಂದ ಸಮ್ಮತಿಸಬೇಕು.

  • ನಿಮ್ಮ ಭಾಷೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ಮಾತುಗಳನ್ನು ಮುಖ್ಯ ಅಂಶವಾಗಿ ಹೇಳುವ ವ್ಯವಸ್ಥೆ ಇದೆಯೇ ? ಇದನ್ನು ಹೇಗೆ ತೋರಿಸಬಲ್ಲಿರಿ ?
  • ವಾಕ್ಯಗಳ ಸಂಖ್ಯೆಯನ್ನು ಹೇಳಲು,ಹೇಳಿಕೆಯ ವಾಕ್ಯಗಳನ್ನು ಮತ್ತು ಹಳೇ ಒಡಂಬಡಿಕೆ ಹೇಳಿಕೆಯ ವಾಕ್ಯ ಗಳನ್ನು ಸೂಚಿಸಲು ಯಾವ ಮಾರ್ಗದರ್ಶನವನ್ನು ಅನುಸರಿಸುವಿರಿ. (ನೀವು ರಾಷ್ಟ್ರೀಯ ಭಾಷೆಯ ಶೈಲಿಯನ್ನು ಅನುಸರಿಸುತ್ತಿರುವಿರಾ ? ನಿಮ್ಮ ಭಾಷೆಯಲ್ಲಿ ಯಾವ ವಿಭಿನ್ನತೆಗಳನ್ನು ಉಪಯೋಗಿಸಲು ನಿರ್ಧರಿಸುವಿರಿ?)
  • ಸತ್ಯವೇದದಲ್ಲಿನ ಹೆಸರುಗಳನ್ನು ಬರೆಯಲು ಯಾವ ರೀತಿ ಮಾರ್ಗದರ್ಶನವನ್ನು ಅನುಸರಿಸುವಿರಿ? ರಾಷ್ಟ್ರೀಯ ಭಾಷೆಯಲ್ಲಿರುವ ಸತ್ಯವೇದದಲ್ಲಿನ ಹೆಸರುಗಳನ್ನು ನೀವು ಉಪಯೋಗಿಸುತ್ತಿರುವಿರಾ ? ನಿಮ್ಮ ಸ್ವಂತ ಭಾಷೆಯಲ್ಲಿ ಸತ್ಯವೇದದಲ್ಲಿನ ಹೆಸರುಗಳನ್ನುಹೇಗೆ ಉಚ್ಛರಿಸಬೇಕು, ಅವುಗಳಿಗೆ ಜೊತೆಸೇರಿಸಿದ ಶೀರ್ಷಿಕೆಗಳನ್ನು ಬಳಸಲು ಮಾರ್ಗದರ್ಶನ ನಮ್ಮಲ್ಲಿ ಇದೆಯೇ ? (ಇಂತಹ ನಿರ್ಧಾರಗಳು ಸಮುದಾಯದಿಂದ ಸಮ್ಮತಿ ಹೊಂದಿದೆಯೇ ?)
  • ನೀವು ಕಾಗುಣಿತದ ವಿಧಿನಿಯಮಗಳ ಬಗ್ಗೆ ನೀವು ನಿಮ್ಮ ಭಾಷೆಯಲ್ಲಿ ಟಿಪ್ಪಣಿ ಮಾಡಿದ್ದೀರಾ ? ಇವುಗಳನ್ನು ನೀವು ಇತರರೊಂದಿಗೆ ಹಂಚಿಕೊಳ್ಳಬೇಕು, ಇಲ್ಲಿ ಒಂದು ಪದ ಅಥವಾ ಎರಡು ಪದಗಳು ಜೊತೆಯಾಗುವಾಗ ಯಾವ ಪದ ಬದಲಾಗುತ್ತದೆ ಎಂದು ಗಮನಿಸಬೇಕು. (ಈ ನಿಯಮಗಳು ಸಮುದಾಯದಲ್ಲಿ ಸ್ವೀಕೃತವಾಗಿದೆಯೇ ?)

ನಿಮ್ಮ ಭಾಷೆಯಲ್ಲಿ ಬರೆಯುವ ನಿರ್ಧಾರ.

Translation Manual :: Before Translating :: Decisions for Writing Your Language

ಅಕ್ಷರಮಾಲೆ / ಸರಿಯಾದ ಅಕ್ಷರ ಸಂಯೋಜನೆ.

Translation Manual :: Before Translating :: Decisions for Writing Your Language :: Alphabet/Orthography

ಅಕ್ಷರ ಸೃಷ್ಟಿ.

ಈ ಮೊದಲುನಿಮ್ಮ ಭಾಷೆಯನ್ನು ಬರೆಯದೆ ಇದ್ದರೆ, ನೀವು ಅಕ್ಷರ ಮಾಲೆಯನ್ನು ಸೃಷ್ಟಿಸಿ ಬರೆಯಲು ತೊಡಗಬಹುದು. ಒಂದು ಅಕ್ಷರವನ್ನು ಸೃಷ್ಟಿಸಬೇಕೆಂದರೆ ಅನೇಕ ವಿಚಾರಗಳ ಬಗ್ಗೆ ಆಲೋಚಿಸಬೇಕು ಮತ್ತು ಉತ್ತಮ ಅಕ್ಷರ ಸಂಯೋಜನೆ ನಿಜಕ್ಕೂ ಕಷ್ಟವಾದುದು. ನಿಮಗೆ ಇದು ಕಠಿಣವಾದ ಪ್ರಯತ್ನ ಎನಿಸಿದರೆ ನೀವು ಬರೆಯುವ ಮೂಲಕ ಭಾಷಾಂತರ ಮಾಡುವ ಬದಲು ಶ್ರವಣ ಮಾಧ್ಯಮದ ಭಾಷಾಂತರ ಮಾಡಬಹುದು. ಅಕ್ಷರ ಸಂಯೋಜನೆಯ ಉದ್ದೇಶವೇನೆಂದರೆ ಪ್ರತಿಯೊಂದು ಅಕ್ಷರಕ್ಕೂ ಅದರದೇ ಆದ ಧ್ವನಿ ಉಚ್ಛಾರಣೆ ನಿಮ್ಮ ಭಾಷೆಯಲ್ಲಿ ಪ್ರಇರುತ್ತದೆಯೇ ಎಂದು ತಿಳಿದುಕೊಳ್ಳುವುದುದಾಗಿದೆ. ನಿಮ್ಮ ನೆರೆಯ ಭಾಷೆಯಲ್ಲಿ ಅಕ್ಷರಮಾಲೆ ಇದ್ದರೆ ಮತ್ತು ಆ ಭಾಷೆಯಲ್ಲಿನ ಧ್ವನಿ ಉಚ್ಛಾರಣೆಗಳು ನಿಮ್ಮ ಭಾಷೆಯಲ್ಲಿ ಇದ್ದರೆ ಆಗ ಭಾಷಾಂತರ ಉತ್ತಮವಾಗಿ ಹೊಂದಿಕೊಂಡರೆ ಅದನ್ನು ಅಳವಡಿಸಿಕೊಳ್ಳಿ

ಇಲ್ಲದಿದ್ದರೆ ನೀವು ಶಾಲೆಯಲ್ಲಿ ಕಲಿತ ರಾಷ್ಟ್ರೀಯ ಭಾಷೆಯಿಂದ ಉತ್ತಮವಾಗಿರುವ ಧ್ವನಿ ಉಚ್ಛಾರಣಾ ಅಕ್ಷರಗಳನ್ನು ಪಡೆಯಬಹುದು. ರಾಷ್ಟ್ರೀಯ ಭಾಷೆಯಲ್ಲಿ ಧ್ವನಿ ಉಚ್ಛಾರಣೆಗಳು ಇಲ್ಲದೆ ನಿಮ್ಮ ಭಾಷೆಯಲ್ಲಿ ಇದ್ದರೆ ಆ ಅಕ್ಷರಗಳನ್ನು ಬಳಸಲು ಕಷ್ಟವಾದರೂ ನಿಮ್ಮ ಭಾಷೆಯ ಧ್ವನಿ ಉಚ್ಛಾರಣೆಗಳನ್ನು ಪ್ರತಿನಿಧಿಸಬಹುದು. ನಿಮ್ಮ ಭಾಷೆಯಲ್ಲಿ ಇರುವ ಧ್ವನಿ ಉಚ್ಛಾರಣೆಗಳನ್ನು ಬಳಸುವ ಬಗ್ಗೆ ಆಲೋಚಿಸುವುದು ಒಳ್ಳೆಯದು

ರಾಷ್ಟ್ರೀಯ ಭಾಷೆಯ ಅಕ್ಷರಗಳನ್ನು ಒಂದು ಕಾಗದದಲ್ಲಿ ಮೊದಲಿನಿಂದ ಕೊನೆಯವರೆಗೆ ಬರೆಯಿರಿ. ಹೀಗೆ ಸಾಲಾಗಿ ಬರೆದ ಈ ಅಕ್ಷರಗಳ ಪಕ್ಕದಲ್ಲೆ ನಿಮ್ಮ ಭಾಷೆಯ ಪದಗಳನ್ನು ಉಚ್ಛಾರಣೆಗೆ ತಕ್ಕ ಹಾಗೆ ಬರೆಯಿರಿ. ಪ್ರತಿಯೊಂದು ಪದದಲ್ಲಿ ಉಂಟಾಗುವ ಧ್ವನಿ ಉಚ್ಛಾರಣೆಗಳನ್ನು ಗುರುತಿಸಿರಿ. ರಾಷ್ಟ್ರೀಯ ಭಾಷೆಯಲ್ಲಿ ಇರುವ ಅಕ್ಷರಗಳು ನಿಮ್ಮ ಭಾಷೆಯಲ್ಲಿ ಬಳಸದೇ ಇರುವ ಅಕ್ಷರಗಳಾಗಿ ಇರಬಹುದು. ಆಗಲಿ ಇದೂ ಒಂದು ರೀತಿ ಒಳ್ಳೆಯದೆ. ಈಗ ಇಲ್ಲಿರುವ ಧ್ವನಿ ಉಚ್ಛಾರಣೆಗಳಿಗೆ ಅಕ್ಷರಗಳನ್ನು ಬರೆಯಲು ಕಷ್ಟವಾಗಿದ್ದರೆ, ಅದರ ಬದಲಾಗಿ ಅಕ್ಷರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಏನು ಮಾಡಬೇಕೆಂದು ಯೋಚಿಸಿ. ನೀವು ಸರಿಯಾದ ಧ್ವನಿ ಉಚ್ಛಾರಣಾ ಶಬ್ಧವನ್ನೋ, ಅಕ್ಷರವನ್ನೋ ಕಂಡುಕೊಂಡರೆ ಆಗ ಅದರ ಬದಲಾಗಿ ಬಳಸುವ ಅಕ್ಷರವನ್ನು ಕಂಡುಕೊಳ್ಳಲು ಪ್ರಯತ್ನಿಸಬಹುದು. ಉದಾಹರಣೆಗೆ – ನೀವು " ಎಸ್/s ",ಅಕ್ಷರವನ್ನು ಪ್ರತಿನಿಧಿಸುವ ಧ್ವನಿ ಉಚ್ಛಾರಣೆ ನಿಮ್ಮಲ್ಲಿದ್ದರೆ, ಅದೇ ರೀತಿಯ ಧ್ವನಿ ಉಚ್ಛಾರಣಾ ಅಕ್ಷರಗಳನ್ನು ನೀವು ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸಾಧ್ಯವಾಗುವ ಧ್ವನಿ ಉಚ್ಛಾರಣಾ ಅಕ್ಷರವನ್ನು/ ಶಬ್ಧವನ್ನು ’ or/ಅಥವಾ ^ or /ಅಥವಾ ~ ಎಂಬ ಗುರುತನ್ನು ಅಕ್ಷರದ ಮೇಲೆ ಗುರುತಿಸಬಹುದು. ರಾಷ್ಟ್ರೀಯ ಭಾಷೆಯ ಧ್ವನಿ ಉಚ್ಛಾರಣೆಗಿಂತ ನಿಮ್ಮ ಭಾಷೆಯ ಅಕ್ಷರಗಳ ಲ್ಲಿ ಒಂದೇಗುಂಪಿನಲ್ಲಿ ರೀತಿಯ ವ್ಯತ್ಯಾಸವಿದ್ದರೆ ಆಗ ಅದನ್ನು ಬದಲಾಯಿಸುವುದು ಒಳ್ಳೆಯದು.

ಒಮ್ಮೆ ಈ ಎಲ್ಲಾ ಬದಲಾವಣೆಗಳು, ಪ್ರಯತ್ನಗಳು ಆದ ಮೇಲೆ ಮತ್ತು ಇನ್ನು ಯಾವುದೇ ಧ್ವನಿ ಉಚ್ಛಾರಣೆ ನಿಮ್ಮ ಭಾಷೆಯಲ್ಲಿ ಮಾಡಲು ಆಗುವುದಿಲ್ಲ ಎಂದು ತಿಳಿದುಬಂದರೆ ಒಂದು ಕಥೆಯನ್ನು ಬರೆಯಿರಿ ಅಥವಾ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ಬರೆಯಿರಿ. ನೀವು ಬರೆಯುತ್ತಾ ಹೋದಂತೆ ಗುರುತಿಸುತ್ತಾ ಹೋದಂತೆ ಬಹುಶಃ ಇದೂವರೆಗೂ ನಿಮಗೆ ತಿಳಿಯದಂತಹ ಧ್ವನಿ ಉಚ್ಛಾರಣೆಯನ್ನು ನಿಮಗೆ ತಿಳಿಯಬಹುದು. ಇದೇ ರೀತಿ ಅಕ್ಷರಗಳ ಬದಲಾವಣೆಯನ್ನು ಧ್ವನಿ ಉಚ್ಛಾರಣೆಯನ್ನು ಮುಂದುವರೆಸಬೇಕು. ಈಗಾಗಲೇ ನೀವು ಮಾಡಿದ ಧ್ವನಿ ಉಚ್ಛಾರಣಾ ಅಕ್ಷರಗಳನ್ನು ಪಟ್ಟಿಯಲ್ಲಿ ಇದನ್ನು ಸೇರಿಸಿ. ಇತರ ಭಾಷೆಯನ್ನು ಮಾತನಾಡುವವರೊಂದಿಗೆ ನೀವು ಮಾಡಿದ ಪಟ್ಟಿಯನ್ನು ತೋರಿಸಿ ಹಾಗೂ ರಾಷ್ಟ್ರೀಯ ಭಾಷೆಯಲ್ಲಿ ಈ ಬಗ್ಗೆ ಏನು ಆಲೋಚಿಸುತ್ತಾರೆ ಎಂಬುದನ್ನು ನೋಡಿ ತಿಳಿಯಿರಿ. ಇದರಿಂದ ಅವರು ಇನ್ನೂ ಸುಲಭವಾದ, ಸರಳವಾದ ಅಕ್ಷರಗಳನ್ನು ನಿಮಗೆ ಸೂಚಿಸಬಹುದು. ಇದನ್ನು ಇತರರಿಗೂ ತೋರಿಸಿ ನೀವು ಬರೆದ ಕಥೆಯನ್ನು ಓದಲು ಹೇಳಿ, ನಂತರ ನೀವು ಮಾಡಿರುವ ಪಟ್ಟಿಯಲ್ಲಿನ ಪದಗಳನ್ನು ಅನುಸರಿಸಿ ಓದಲು ಹೇಳಿ ಮತ್ತು ಲಘು ಉಚ್ಛಾರಣೆಗಳನ್ನು ಗಮನಿಸಲು ತಿಳಿಸಿ.

ಅವರು ಇದನ್ನು ಸುಲಭವಾಗಿ ಓದಿದರೆ ಆಗ ನೀವು ಬಳಸಿರುವ ಪದಗಳು ಮತ್ತು ಅಕ್ಷರಗಳು ಚೆನ್ನಾಗಿವೆ ಎಂದು ತಿಳಿಯಬಹುದು. ಇದಲ್ಲದೆ ಓದಲು ಕಠಿಣವಾದರೆ, ಕಷ್ಟಪಟ್ಟರೆ ನೀವು ಬಳಸಿದ ಅಕ್ಷರ ಮತ್ತು ಪದಗಳು ಇನ್ನಷ್ಟು ಸುಲಭವಾದ ಮತ್ತು ಸರಳವಾದ ಪದಗಳ ಅಗತ್ಯವಿದೆ ಅಥವಾ ಇದೇ ಅಕ್ಷರಗಳು ವಿಭಿನ್ನ ಉಚ್ಛಾರಣೆ ಯನ್ನು ಪ್ರತಿನಿಧಿಸುವಂತಾಗಿರಬೇಕು. ಅಥವಾ ನೀವು ಬಳಸಿರುವ ಅಕ್ಷರಗಳನ್ನು ಬದಲಾಗಿ ಈ ಧ್ವನಿ ಉಚ್ಛಾರಣೆಗಾಗಿ ಬೇರೆ ಅಕ್ಷರ ಕಂಡುಕೊಳ್ಳಬೇಕಾಗಬಹುದು. ನಿಮ್ಮ ಭಾಷೆಯನ್ನು ಮಾತನಾಡುವವರು ರಾಷ್ಟ್ರೀಯ ಭಾಷೆಯನ್ನು ಚೆನ್ನಾಗಿ ಓದಿ ಅರ್ಥಮಾಡಿಕೊಳ್ಳ ಬಲ್ಲವರೊಂದಿಗೆ ಈ ಅಕ್ಷರಗಳನ್ನು ಇನ್ನಷ್ಟು ಪರಿಣಾಮಕಾರಿಯಾದ ಧ್ವನಿ ಉಚ್ಛಾರಣೆಯೊಂದಿಗೆ ಬಳಸಲು ಪ್ರಯತ್ನಿಸಬೇಕು. ಇಂತಹವರೊಂದಿಗೆ ಚರ್ಚಿಸಿ ಅತ್ಯುತ್ತಮವಾದ ಧ್ವನಿ ಉಚ್ಛಾರಣೆಯನ್ನು ಪ್ರತಿನಿಧಿಸುವ ಅಕ್ಷರಗಳನ್ನು ಪಡೆಯಲು ಪ್ರಯತ್ನಿಸಬೇಕು. ರಾಷ್ಟ್ರೀಯ ಭಾಷೆಯಲ್ಲಿ ಬರೆಯುವ ವ್ಯವಸ್ಥೆಯು ರೋಮನ್ ಅಕ್ಷರಗಳಿಗಿಂತ ಭಿನ್ನವಾಗಿದ್ದರೆ ಆಗ ನೀವು ಈ ಅಕ್ಷರಗಳನ್ನು ಚಿಹ್ನೆಗಳನ್ನು ಬದಲಾಯಿಸಬಹುದು ಮತ್ತು ಈ ಪದಗಳನ್ನು ಪ್ರತಿನಿಧಿಸುವ ಧ್ವನಿ ಉಚ್ಛಾರಣೆಯನ್ನು ಬಳಸಬಹುದು. ಈ ಚಿಹ್ನೆಗಳನ್ನು ನೀವು ಕಂಪ್ಯೂಟರ್ ನಲ್ಲಿ ಒಂದು ಕಡೆ ದಾಖಲಿಸಿ ಬೇಕಾದ ಸಂದರ್ಭದಲ್ಲಿ ಬಳಸಿಕೊಳ್ಳುವಂತೆ ಮಾಡಿದರೆ ಉತ್ತಮ. ನೀವು ಬರವಣಿಗೆಯ ಪದ್ಧತಿಯಲ್ಲಿ ವರ್ಡ್ ಪ್ರೋಸೆಸ್ಸರ್ ನಲ್ಲಿ ದಾಖಲಿಸುವ ಪ್ರಯೋಗ ಮಾಡಿದರೆ ಅಥವಾ ಭಾಷಾಂತರ ಕೀ ಬೋರ್ಡ್ ನಲ್ಲಿ) ದಾಖಲಿಸಿ ನಿಮಗೆ ಸಹಾಯ ಕೀ ಬೋರ್ಡ್ ದಾಖಲಿಸಲು ಬೇಕಾದರೆ ಈ ಮೇಲ್ ವಿಳಾಸಕ್ಕೆ ಈ ಮೇಲ್ ಬೇಡಿಕೆ ನೀಡಿ help@door43.org.

ನೀವು ಬಳಸುವ ಚಿಹ್ನೆಗಳನ್ನು ಕಂಪ್ಯೂಟರ್ ನ ಕೀ ಬೋರ್ಡ್ ನಲ್ಲಿ ಟೈಪ್ ಮಾಡಿದರೆ ನೀವು ಮಾಡಿದ ಭಾಷಾಂತರ ದಾಖಲಿಸಿ ರಕ್ಷಿಸಿಡಬಹುದು. ಪ್ರತಿ ಮಾಡಬಹುದು, ವಿದ್ಯುದ್ಮಾನಯಂತ್ರದ ಮೂಲಕ ವಿತರಿಸಬಹುದು. ಆಗ ತಿಳಿಯಲು ಆಸಕ್ತರಾಗಿರುವ ಜನರು ಸುಲಭವಾಗಿ, ಯಾವುದೇ ಕ್ರಯವಿಲ್ಲದೆ ಪ್ರತಿಗಳನ್ನು ಪಡೆಯಬಹುದು. ಟ್ಯಾಬ್ ಗಳಲ್ಲಿ, ಮೊಬೈಲ್ ಫೋನ್ ಗಳಲ್ಲಿ ಪ್ರತಿ ಮಾಡಿ ಓದಬಹುದು.


ವರ್ಣಮಾಲೆಯ ಅಭಿವೃದ್ಧಿ.

Translation Manual :: Before Translating :: Decisions for Writing Your Language :: Alphabet Development

ವಿವರಣೆ

ಜನರು ಮಾತನಾಡುವಾಗ ಹೊರಡಿಸುವ ಧ್ವನಿಗಳು ಪದಗಳಾಗಿ ಮೂಡಿಬರುವುದರ ಬಗ್ಗೆ ನೀಡುವ ವಿವರಗಳೇ ಇವು, ಮತ್ತು ಈ ಪದ ವಿಭಾಗಗಳ ವ್ಯಖ್ಯಾಯನವನ್ನು ತಿಳಿಸುತ್ತವೆ.

####ಕಾನ್ಸೊನೆಂಟ್ (ವ್ಯಂಜನಾಕ್ಷರಗಳು)

ಇಂತಹ ಧ್ವನಿಗಳ ಮೂಲಕ ಉಂಟಾಗುವ ಪದಗಳು ಜನರು ಮಾತನಾಡುವಾಗ ಉಸಿರು ಶ್ವಾಸಕೋಶದ ಮೂಲಕ ನಾಲಿಗೆ, ಹಲ್ಲು, ತುಟಿಗಳನ್ನು ಹಾದುಬರುವ ಸ್ವರಗಳು ಪದಗಳಾಗಿ ಬರುತ್ತವೆ. ವರ್ಣಮಾಲೆಯಲ್ಲಿನ ಬಹುಪಾಲು ಅಕ್ಷರಗಳು ವ್ಯಂಜನಾಕ್ಷರಗಳು. ಎಲ್ಲಾ ವ್ಯಂಜನಾಕ್ಷರಗಳು. (ಇಂಗ್ಲೀಷ್ ಭಾಷೆಯಲ್ಲಿ) ಒಂದೇ ಧ್ವನಿ ಹೊರಡಿಸುತ್ತದೆ.

Vowel - ಸ್ವರಾಕ್ಷರ

ಈ ಸ್ವರಗಳು ಬಾಯಿಯ ಮೂಲಕ ಹೊರಡುವಂತದಾಗಿದ್ದು ಉಸಿರು ಹಲ್ಲು, ನಾಲಿಗೆ ಮತ್ತು ತುಟಿಗಳ ತಡೆ ಇಲ್ಲದೆ ಹೊರಬರುವುದು. (ಇಂಗ್ಲೀಷ್ ಭಾಷೆಯಲ್ಲಿ ಸ್ವರ ಜೀವಾಕ್ಷರಗಳು ಎಂದರೆ a, e, i, o, u ಕೆಲವೊಮ್ಮೆ y.)

ಉಚ್ಚಾರಾಂಶಗಳು ಳ Syllable (syl-ab-al)

ಒಂದು ಪದದ ಒಂದು ಭಾಗವು ಒಂದು ಸ್ವರ ಜೀವಾಕ್ಷರದ ಧ್ವನಿಯನ್ನು ಒಳಗೊಂಡಿರುತ್ತದೆ. ಅಥವಾ ವ್ಯಂಜನಾಕ್ಷರಗಳಿಂದ ಕೂಡಿರುವುದಿಲ್ಲ. ಕೆಲವು ಪದಗಳಲ್ಲಿ ಒಂದೇ ಒಂದು ಉಚ್ಚಾರಾಂಶಗಳು ಇರುತ್ತದೆ.

ಪ್ರತ್ಯಯಗಳು (Affix)

ಕೆಲವೊಮ್ಮೆ ಒಂದು ಪದಕ್ಕೆ ಪ್ರತ್ಯಯಗಳನ್ನು ಸೇರಿಸಿದರೆ ಅದರ ಅರ್ಥ ಭಿನ್ನವಾಗಿರುತ್ತದೆ ಇಂತಹ ಪ್ರತ್ಯಯಗಳು ಪದದ ಪ್ರಾರಂಭ ಅಥವಾ ಕೊನೆಯಲ್ಲಿ ಅಥವಾ ಪದದೊಂದಿಗೆ ಸೇರಿಯೇ ಬರಬಹುದು.

ಮೂಲಪದ (Root)

ಎಲ್ಲಾ ಪ್ರತ್ಯಯಗಳನ್ನು ತೆಗೆದುಬಿಟ್ಟಾಗ ಉಳಿಯುವ ಮೂಲ ಪದ.

ಕನಿಷ್ಠತಮ ಅರ್ಥವುಳ್ಳ ಪದರೂಪ (Morpheme)

ಒಂದು ಪದ ಅಥವಾ ಪದದ ಒಂದು ಭಾಗಕ್ಕೆ ಅರ್ಥವಿದ್ದು ಮತ್ತು ಅದು ತೀರಾ ಚಿಕ್ಕಭಾಗವಲ್ಲದಿದ್ದರೂ ಅದು ಅರ್ಥವುಳ್ಳದ್ದಾಗಿರುತ್ತದೆ. (ಉದಾಹರಣೆಗೆ, “syllable” (ಉಚ್ಚಾರಾಂಶದಲ್ಲಿ ಮೂರು ಸ್ವರಾಕ್ಷರವಿದ್ದು ಒಂದೇ ಒಂದು ಮಾರ್ಫೀಮ್ ಇರುತ್ತದೆ, ಆದರೆ ಸ್ವರಾಕ್ಷಗಳಲ್ಲಿ (“syllables”) ಕೆಲವೊಮ್ಮೆ 3 ಉಚ್ಚಾರಾಂಶಗಳಿರುತ್ತವೆ, ಮತ್ತು ಎರಡು ಮಾರ್ಫೀಮ್ಸ್ ಇರುತ್ತದೆ(syl-lab-le s). (ಅಂತಿಮವಾಗಿ ಬರುವ “s” ಮಾರ್ಫೀಮ್ “ಬಹುವಚನ.” ರೂಪದ ಅರ್ಥವಿರುತ್ತದೆ.)

ಉಚ್ಚಾರಾಂಶಳು ಹೇಗೆ ಪದಗಳನ್ನು ಸೃಷ್ಟಿಸುತ್ತವೆ.?

ಪ್ರತಿಯೊಂದು ಭಾಷೆಯಲ್ಲೂ ಉಚ್ಚಾರಂಶಗಳನ್ನು ಧ್ವನಿಯ ಮೂಲಕವೇ ಸೃಷ್ಟಿಸುತ್ತಾರೆ. ಪದಗಳಿಗೆ ಸೇರಿಸಿದ ಪ್ರತ್ಯಯ ಅಥವಾ ಪದದ ಮೂಲ ಇವುಗಳಿಗೆ ಏಕಉಚ್ಚಾರಂಶವಿರುತ್ತದೆ. ಅಥವಾ ಕೆಲವೊಮ್ಮೆ ಅನೇಕ ಉಚ್ಚಾರಂಶಗಳು ಇರುತ್ತವೆ. ಧ್ವನಿಗಳು ಸೇರಿ ಉಚ್ಚಾರಂಶಗಳನ್ನು ಸೃಷ್ಟಿಸಿ ಜೊತೆಗೂಡಿ ಮಾರ್ಫೀಮ್ (ಕಾಗುಣಿತ ಮತ್ತು ಉಚ್ಚಾರಂಶಗಳನ್ನು ಸೃಷ್ಟಿಸುತ್ತದೆ). ಮಾರ್ಫೀಮ್ ಒಟ್ಟಾಗಿ ಅರ್ಥವುಳ್ಳ ಪದಗಳಾಗಿ ಮಾರ್ಪಡುತ್ತವೆ. ನಿಮ್ಮ ಭಾಷೆಯಲ್ಲಿ ಉಚ್ಚಾರಂಶಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹುಮುಖ್ಯವಾದುದು. ಈ ಉಚ್ಚಾರಂಶಗಳು ಹೇಗೆ ಒಂದಕ್ಕೊಂದು ಸಂಬಂಧಿಸಿವೆ, ಅಕ್ಷರಗಳ (spelling) ಕಾಗುಣಿತ ಅಕ್ಷರಗಳನ್ನು ಶುದ್ಧವಾಗಿ ಬರೆಯುವುದು. ಮತ್ತು ಹೀಗಿದ್ದರೆ ಜನರು ಸುಲಭವಾಗಿ ಕಲಿಯಲು, ಓದಲು ಅನುಕೂಲಕರವಾಗಿರುತ್ತದೆ.

ಸ್ವರಜೀವಾಕ್ಷರಗಳ ಧ್ವನಿ ಉಚ್ಚಾರಂಶಗಳ ಮೂಲಭಾಗ. ಇಂಗ್ಲೀಷ್ ಭಾಷೆಯಲ್ಲಿ ಐದು ಜೀವಾಕ್ಷರಗಳು ಇವೆ., “a, e, i, o, u”, ಆದರೆ ಅದಕ್ಕೆ ಹನ್ನೊಂದು ಜೀವಾಕ್ಷರಗಳ ಧ್ವನಿ ಇದೆ. ಇವು ಸ್ವರಾಕ್ಷರಗಳ ಜೊತೆಯಾಗಿ ಅನೇಕ ವಿಧದಲ್ಲಿ ಬಳಸಲಾಗುವುದು. ಇಂಗ್ಲೀಷ್ ಭಾಷೆಯಲ್ಲಿ ಪ್ರತ್ಯೇಕ ಧ್ವನಿಗಳುಳ್ಳ ಸ್ವರಾಕ್ಷರಗಳು ಇಲ್ಲಿ ಕೊಟ್ಟಿರುವ ಕೆಲವು ಪದಗಳಲ್ಲಿ ಕಂಡುಬರುತ್ತದೆ. ಉದಾ : “beat, bit, bait, bet, bat, but, body, bought, boat, book, boot.”

[ಸ್ಪಷ್ಟ ಉಚ್ಛಾರಣೆಯ ಪದ ಸೇರಿಸಬೇಕು]

ಇಂಗ್ಲೀಷ್ ಭಾಷೆಯ ಜೀವಾಕ್ಷರಗಳು

ಅಕ್ಷರಗಳು ನುಡಿಯುವಾಗ ಬಾಯಿಯಲ್ಲಿ ಉಂಟಾಗುವ ಸ್ವರ {MQ}ಮುಂದೆ {MQ}–{MQ} ಮಧ್ಯಭಾಗ {MQ} –{MQ} ಹಿಂದೆ Rounding ಸುತ್ತಿಬರುವುದು {MQ}(unrounded){MQ}(unrounded){MQ}(rounded) ನಾಲಿಗೆಯ ಉನ್ನತ ಭಾಗ {MQ}ಎತ್ತರ {MQ}i “beat”{MQ} u “boot” Mid-High{MQ} i “bit”{MQ} u “book” Mid{MQ} e “bait” {MQ}u “but” o “boat” Low-Mid{MQ} e “bet” {MQ} o “bought” Low {MQ} a “bat”{MQ}a “body”

(ಜೀವ ಸ್ವರಾಕ್ಷರಗಳಲ್ಲಿ ಅದರದೇ ಆದ ಚಿಹ್ನೆಗಳು ಅಂತರಾಷ್ಟ್ರೀಯ ಭಾಷಾಧ್ವನಿ ರೂಪಕಗಳು) ಅಕ್ಷರಗಳಲ್ಲಿ ಇರುತ್ತವೆ. ಪ್ರತಿಯೊಂದು syllable, ದ ಮಧ್ಯದಲ್ಲಿ ಜೀವಉಚ್ಚಾರಂಶಗಳ ಧ್ವನಿ ಇರುತ್ತದೆ. ಮತ್ತು ವ್ಯಂಜನಾಕ್ಷರಗಳು ಧ್ವನಿ ಸ್ವರಾಕ್ಷರ ಧ್ವನಿ ಇರುತ್ತದೆ. ಮತ್ತು ವ್ಯಂಜನಾಕ್ಷರಗಳು ಧ್ವನಿ ಸ್ವರಾಕ್ಷರ ಮೊದಲು ಇಲ್ಲಿ ಮೇಲೆ ಬರುತ್ತದೆ.

ಇದರೊಂದಿಗೆ ಸ್ಪಷ್ಟಸ್ಪಷ್ಟಉಚ್ಛಾರಣೆಯ ಪದಗಳು ಅಕ್ಷರಗಳನ್ನು ಉಚ್ಛಾರಣೆ ಮಾಡುವಾಗ ಬಾಯಿಯ ಮೂಲಕ ಅಥವಾ ಮೂಗಿನ ಮೂಲಕ ಉಂಟಾಗುವ ಧ್ವನಿಗಳನ್ನು ಗುರುತಿಸಿ ನಾವು ಏನು ಮಾತನಾಡುತ್ತಿದ್ದೇವೆ, ಯಾವ ಶಬ್ಧ ಉಚ್ಛರಿಸುತ್ತಿದ್ದೇವೆ ಎಂಬುದನ್ನು ಗುರುತಿಸಲು ಅಥವಾ, ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸ್ಪಷ್ಟ ಉಚ್ಛಾರಣೆಯ ಅಂಶಗಳು ಗಂಟಲಿನ ಸುತ್ತಾ ಅಥವಾ ಬಾಯಿಯಲ್ಲಿ ಗಾಳಿ ಹರಿದು ಬಂದು ಶಬ್ಧಗಳು ಉಂಟಾಗುತ್ತವೆ. ಸ್ಪಷ್ಟ ಉಚ್ಛಾರಣೆಯ ಪದಗಳಲ್ಲಿ ಕಂಡುಬರುವ ಸಾಮಾನ್ಯ ಅಂಶಗಳು ತುಟಿಗಳಲ್ಲಿ, ಹಲ್ಲಿಗೆ ನಾಲಿಗೆ ತಗಲುವು ಮೂಲಕ, ಹಲ್ಲು ಜೊತೆಗೂಡಿದ ತುದಿಯಲ್ಲಿ, ಅಂಗಳಿಗೆ ತಗುಲಿ ಬರುವ ಶಬ್ಧ, ಬಾಯಿಯ ಮೃದುಭಾಗದಲ್ಲಿ, ಕಿರುನಾಲಿಗೆ ಮತ್ತು ಶ್ವಾಸನಾಳದ್ವಾರದ ಮೂಲಕ ಉಂಟಾಗುವ ಧನಿ, ಶಬ್ಧಗಳು ಉಚ್ಛಾರಣೆ ತಿಳಿದು ಬರುತ್ತದೆ.

ಸ್ಪಷ್ಟ ಉಚ್ಛಾರಣೆಯ ಶಬ್ಧಗಳು ಬಾಯಿಯ ಮೂಲಕ ಉಂಟಾಗುವ ಶಬ್ಧಗಳ ಭಾಗಗಳು ವಿಶೇಷವಾಗಿ ನಾಲಿಗೆ ವಿಶೇಷ ಸ್ಪರ್ಶ ಮತ್ತು ಹೊಳಹುಗಳು ಹಾಗೂ ಬಾಯಿಯಲ್ಲಿನ ಗಾಳಿಯ ಚಲನೆ ಮೂಲಕ ಉಂಟಾಗುವ ಶಬ್ಧಗಳು. ನಾಲಿಗೆಯ ಮೂಲಕ ಉಂಟಾಗುವ ಶಬ್ಧಗಳು ನಾಲಿಗೆಯ ಮೂಲ ಭಾಗದಿಂದ, ಹಿಂದಿನ ಭಾಗದಿಂದ, ಹರಿತವಾದ ಭಾಗದಿಂದ, ಮತ್ತು ನಾಲಿಗೆಯ ತುದಿಯಿಂದ ಉಂಟಾಗುವ ಶಬ್ಧಗಳು. ಕೆಲವೊಮ್ಮೆ ತುಟಿಗಳ ಮೂಲಕ ನಿಧಾನವಾಗಿ ಬಾಯಿಯಿಂದ ಹೊರಡುವ ಶಬ್ಧಗಳು ನಾಲಿಗೆಯ ಸಹಾಯವಿಲ್ಲದೆ ಬರುತ್ತದೆ. ತುಟಿಗಳ ಮೂಲಕ ಉಂಟಾಗುವ ಶಬ್ಧಗಳು ವ್ಯಂಜನಾಕ್ಷರಗಳಾದ “b," “v,” ಮತ್ತು “m.” ಗಳು ಸೇರಿವೆ.

ಈ ಸ್ಪಷ್ಟ ಉಚ್ಛಾರಣೆಯ ಪದಗಳು ರೀತಿ ಬಾಯಿಯಿಂದ ಹರಿದು ಬರುವ ಗಾಳಿಯು ನಿಧಾನವಾಗಿ ಶಬ್ಧಗಳನ್ನು ಸೃಷ್ಟಿಸುತ್ತದೆ. ಇಲ್ಲಿ ಕೆಲವು ಅಕ್ಷರಗಳನ್ನು ಉಚ್ಛರಿಸುವಾಗ ಸಂಪೂರ್ಣ ನಿಲುಗಡೆ “p” ಅಥವಾ “b”,ಗಳನ್ನು ಪೂರ್ಣ ವ್ಯಂಜನಾಕ್ಷರಗಳು ಅಥವಾ ಸ್ಥಿರವಾದ ವ್ಯಂಜನ ಇವುಗಳಲ್ಲಿ ಹೆಚ್ಚಿನ ಒತ್ತುಕೊಟ್ಟು ಉಚ್ಛರಿಸುವ “f” ಅಥವಾ “v,” ಗಳನ್ನುಹೆಚ್ಚು ಒತ್ತಿನ ಅಕ್ಷರಗಳು ಎಂದುಕರೆಯುತ್ತಾರೆ. ಇವುಗಳನ್ನು ಸ್ವಲ್ಪ ಒತ್ತಿನ ಮೂಲಕ “w” ಅಥವಾ “y,”ಗಳು ಸ್ವರಾಕ್ಷರಗಳಂತೆ ಮುಕ್ತವಾಗಿರುವುದರಿಂದ ಅವುಗಳನ್ನು ಅರೆ ಸ್ವರಾಕ್ಷರಗಳು ಎಂದು ಕರೆಯುತ್ತಾರೆ.

ಧ್ವನಿಗಳು ಶ್ವಾಸನಾಳವನ್ನು ಗಾಳಿ ಪ್ರವೇಶಿಸಿದಾಗ ಅದರಲ್ಲಿ ಉಂಟಾಗುವ ಕಂಪನದಿಂದ ಹೊರಡುವ ಶಬ್ಧಗಳು ಧ್ವನಿಗಳಾಗಿ ಬರುತ್ತವೆ. ಬಹುಮಟ್ಟಿನ ಸ್ವರಜೀವಾಕ್ಷರಗಳು “a, e, i, u, o” ಸ್ವರ, ಶಬ್ಧಗಳು ಇರುವ ಪದಗಳು. ವ್ಯಂಜನಾಕ್ಷರಗಳು ಧ್ವನಿಯಾಗಿರುತ್ತವೆ. (+v), “b,d,g,v,” ಧ್ವನಿ ಇಲ್ಲದ (-v) ಉದಾಹರಣೆಗೆ “p,t,k,f." ಈ ಎಲ್ಲಾ ಸ್ಪಷ್ಟವಾದ ಉಚ್ಛಾರಣೆಯ ಶಬ್ಧಗಳು ಮತ್ತು ಅದೇ ಸ್ವರಗಳು ಮೊದಲು ತಿಳಿಸಿದ ವ್ಯಂಜನಾಕ್ಷರ ಗಳೊಂದಿಗೆ ಸೇರಿ ಬರುತ್ತವೆ. “b,d,g,v” ಮತ್ತು “p,t,k,f” ಧ್ವನಿ ಉಚ್ಛಾರಣೆಯ ನಡುವಿನ ಒಂದೇ ವ್ಯತ್ಯಾಸವೆಂದರೆ (+v and –v).

ಇಂಗ್ಲೀಷ್ ಭಾಷೆಯಲ್ಲಿನ ವ್ಯಂಜನಾಕ್ಷರಗಳು

Points of Articulation{MQ}Lips{MQ}Teeth{MQ}Ridge{MQ}Palate{MQ}Velum{MQ}Uvula{MQ}Glottis Voicing{MQ}-v/+v{MQ}-v/+v {MQ}-v/+v{MQ}-v/+v{MQ}-v/+v{MQ}-v/+v{MQ}-v/+v Articulator - Manner Lips - Stop{MQ}p / b Lip -{MQ}Fricative{MQ} f / v Tongue Tip - Stop{MQ} t / d Liquid {MQ} / l{MQ} / r Tongue Blade - Fricative{MQ} ch/dg Tongue Back - Stop{MQ} k / g Tongue Root - Semi-Vowel {MQ} / w{MQ} / y{MQ} h / Nose – Continuant{MQ} / m{MQ} / n

ಧ್ವನಿಗಳನ್ನು ಹೆಸರಿಸುವುದು ಎಂದರೆ ಅವುಗಳ ಲಕ್ಷಣಗಳನ್ನು ಗುರುತಿಸಿ ಹೇಳುವುದು

“b” ಎಂಬ ಅಕ್ಷರ ಉಚ್ಛರಿಸುವಾಗ ಎರಡು ತುಟಿಗಳು ಸ್ಪರ್ಶಿಸುವುದರ ಮೂಲಕ ಆಗುತ್ತದೆ “f” ಎಂಬ ಅಕ್ಷರ ತುಟಿ ಮತ್ತು ಹಲ್ಲುಗಳ ಸ್ಪರ್ಶಸಹಾಯದಿಂದ ಉಂಟಾಗುವ ಶಬ್ಧ. “n” ಎಂಬ ಅಕ್ಷರ ಮೂಗಿನ ಸಹಾಯ ಮತ್ತು ಹಲ್ಲಿನ ತುದಿ ಸಹಾಯದಿಂದ ಉಂಟಾಗುವ ಶಬ್ಧ.

ಶಬ್ಧಗಳನ್ನು ಅಕ್ಷರದ ಸಂಕೇತದಿಂದ ಗುರುತಿಸುವುದನ್ನು ಎರಡು ವಿಧಗಳಲ್ಲಿ ಮಾಡಬಹುದು. ಇಲ್ಲದಿದ್ದರೆ ಅಂತರಾಷ್ಟ್ರೀಯ ಧ್ವನಿರೂಪಕಗಳಲ್ಲಿ ಕಂಡುಬರುವ ಸಂಕೇತ ಅಕ್ಷರಗಳು ಅಥವಾ ಓದುಗರಿಗೆ ಅರ್ಥವಾಗುವ, ಗೊತ್ತಿರುವ ಅಕ್ಷರಗಳನ್ನು ಬಳಸಬೇಕು.

ವ್ಯಂಜನಾಕ್ಷರಗಳ ಪಟ್ಟಿ – ವ್ಯಂಜನಾಕ್ಷರಗಳ ಪಟ್ಟಿ ಯಾವುದೇ ಸ್ಪಷ್ಟ ಉಚ್ಛಾರಣೆಯಶಬ್ಧಗಳನ್ನು ತಿಳಿಸಿ ಹೇಳುವುದು. ನಿಮ್ಮ ಭಾಷೆಯಲ್ಲಿನ ಧ್ವನಿ, ಶಬ್ಧಗಳು, ಧ್ವನಿಗಳನ್ನು ಕೇಳಲು, ನಾಲಿಗೆ,ತುಟಿ ಮತ್ತು ಬಾಯಿಯಲ್ಲಿ ಯಾವಯಾವ ಸ್ಥಾನದಲ್ಲಿ ಯಾವ ಯಾವ ಶಬ್ಧಗಳು ಉಚ್ಛಾರಣೆ ಆಗುತ್ತದೋ ಅವುಗಳನ್ನು ಅನುಸರಿಸಿ ವ್ಯಂಜನಾಕ್ಷರಗಳ ಪಟ್ಟಿಯಲ್ಲಿ ಆ ಶಬ್ಧಗಳು ಮತ್ತು ಧ್ವನಿಗಳು ಯಾವ ಅಕ್ಷರವನ್ನು ಪ್ರತಿನಿಧಿಸುತ್ತದೋ ಎಂಬುದನ್ನು ತಿಳಿಸಿ.

Points of Articulation Lips Teeth Ridge Palate Velum Uvula Glottis Voicing -v/+v -v/+v -v/+v -v/+v -v/+v -v/+v -v/+v Manner Stop p/ b t/ d k/ g Fricative f/ v ch/dg Liquid /l /r Semi-vowel /w /y h/ Nasals /m /n

ನಮೂನೆಗಳ ಕಡತ.

Translation Manual :: Before Translating :: File Formats

ಪಾರಿಭಾಷಿಕ ಸ್ವಭಾವದ ಭಾಷಾಂತರ.

ಯಾವುದೇ ಭಾಷೆಯಲ್ಲಿ ಭಾಷಾಂತರ ಮಾಡುವಾಗ ಭಾಷೆ, ಪದಗಳು ಮತ್ತು ವಾಕ್ಯಗಳು ಎಷ್ಟು ಮುಖ್ಯವೋ ಅನುವಾದ ಪ್ರಮುಖ ಅಂಶ ಅದರ ಅದರ ತಾಂತ್ರಿಕ ಸ್ವರೂಪ ಎನ್ನುವುದು ಅಷ್ಟೇ ಮುಖ್ಯ. ವರ್ಣಮಾಲೆಯ ಮೂಲಕ ಅಕ್ಷರಗಳು, ಟೈಪ್ ಮಾಡುವುದು, ವಿನ್ಯಾಸರೂಪಿಸುವುದು,ನಮೂನೆಗಳನ್ನು ತಯಾರಿಸುವುದು, ಪ್ರಕಟಣೆ ಮಾಡುವುದು ಮತ್ತು ವಿಸ್ತರಿಸುವುದು, ಇಂತಹ ಅನೇಕ ತಾಂತ್ರಿಕ ಅಂಶಗಳು ಭಾಷಾಂತರ ಪ್ರಕ್ರಿಯೆಯಲ್ಲಿದೆ. ಈ ಎಲ್ಲಾ ಹಂತಗಳಲ್ಲಿ ಎಲ್ಲವನ್ನು ನಿರ್ವಹಿಸಲು ಕೆಲವು ಹಂತಗಳನ್ನು ಹಂತಗಳನ್ನು ಅಳವಡಿಸಬೇಕಾಗಿದೆ.

USFM:

ಸತ್ಯವೇದ ಭಾಷಾಂತರ ನಮೂನೆಗಳು. ಅನೇಕ ವರ್ಷಗಳಿಂದ ಸತ್ಯವೇದ ಭಾಷಾಂತರ ಮಾಡಲು USFM (Unified Standard Format Markers).ರವರು ಮಾಡಿರುವ ಉತ್ತಮ ದರ್ಜೆಯ ನಮೂನೆ ಎಂದು ನಿರ್ಧರಿಸಿರುವ ನಮೂನೆಯನ್ನೇ ಬಳಸಲಾಗುತ್ತಿದೆ. ನಾವೂ ಈ ನಮೂನೆಯನ್ನೇ ಬಳಸುತ್ತಿದ್ದೇವೆ.

USFM ಒಂದು ರೀತಿಯ markup ವಿಶೇಷವಾದ ಭಾಷೆಯಾಗಿದ್ದು ಇದು ಕಂಪ್ಯೂಟರ್ ಕ್ರಮವಿಧಿಗೆ ಸತ್ಯವೇದದ ವಾಕ್ಯಭಾಗವನ್ನು ಹೇಗೆ ಅಳವಡಿಸಬೇಕೆಂದು ಸೂಚಿಸುತ್ತದೆ. ಉದಾಹರಣೆಗೆ ಪ್ರತಿ ಅಧ್ಯಾಯವನ್ನೂ ‘’\c 1’’ or ‘’\c 33’‘. ಎಂದೂ ವಚನಗಳನ್ನು’‘\v 8’’ or ‘’\v 14’‘. ಎಂದೂ ಪ್ಯಾರಾಗಳನ್ನು ‘’\p’'. ಎಂದೂ ಮಾಡುತ್ತದೆ. ಇದರೊಂದಿಗೆ ಇನ್ನೂ ಅನೇಕ ಗುರುತು ಚಿಹ್ನೆಗಳು ವಿಶಿಷ್ಟ ಅರ್ಥವನ್ನು ಒಳಗೊಂಡಿರುತ್ತದೆ. ಅಂದರೆ ಉದಾ : ಈ ವಾಕ್ಯ ಭಾಗಗಳು ಯೋಹಾನ 1:1-2 ದು USFM ನಲ್ಲಿ ಈ ರೀತಿ ಕಂಡುಬರುತ್ತದೆ.

\c 1 \p \v 1 ಆದಿಯಲ್ಲಿ ವಾಕ್ಯವಿತ್ತು ಆ ವಾಕ್ಯವು ದೇವರ ಬಳಿ ಇತ್ತು ಮತ್ತು ಆ ವಾಕ್ಯವು ದೇವರಾಗಿತ್ತು. \v 2 ಇದು ಒಂದು, ವಾಕ್ಯವು ಆದಿಯಲ್ಲಿ ದೇವರ ಬಳಿ ಇತ್ತು.

ಕಂಪ್ಯೂಟರ್ ಪ್ರೋಗ್ರಾಂ ಇದನ್ನು ನೋಡಿ USFM ನಮೂನೆಯಲ್ಲಿ ಓದಿಕೊಳ್ಳುತ್ತದೆ ಮತ್ತು ಎಲ್ಲಾ ವಾಕ್ಯಭಾಗಗಳನ್ನು,ಅಧ್ಯಾಯಗಳನ್ನು ಚಿಹ್ನೆಗಳಿಂದ ಅದರ ನಮೂನೆಯಲ್ಲಿ ತರುತ್ತದೆ. (ಅಂದರೆ ಅದು ಎಷ್ಟೇ ಸಂಖ್ಯೆಯಲ್ಲಿ ಇದ್ದರೂ) ಎಲ್ಲಾ ವಚನಗಳ ಸಂಖ್ಯೆಯನ್ನು ಸಹ ಇದೇ ರೀತಿ ಮಾಡಬಲ್ಲದು, (ಉದಾಹರಣೆಗೆ ಅತೀ ಸಣ್ಣ ಸಂಖ್ಯೆಯ ಮೂಲಕ ಸಹ)

***ಸತ್ಯವೇದದ ಭಾಷಾಂತರ USFM ಮಾದರಿಯಲ್ಲೇ ಇದ್ದರೆ ಮಾತ್ರ ನಾವು ಅದನ್ನು ಬಳಸಲು ಅನುಕೂಲವಾಗುತ್ತದೆ. ***

USFM ಬಗ್ಗೆ ಓದಿ ಹೆಚ್ಚಿನ ವಿಷಯ ತಿಳಿದುಕೊಳ್ಳಲು ದಯವಿಟ್ಟು ಇದನ್ನುಓದಿ http://paratext.org/about/usfm.

####ಸತ್ಯವೇದದ ಭಾಷಾಂತರವನ್ನು USFM ನಲ್ಲಿ ಹೇಗೆ ಮಾಡುವುದು ?

ತುಂಬಾ ಜನರಿಗೆ USFM ಮಾದರಿಯಲ್ಲಿ ಬರೆಯಲು ಬರುವುದಿಲ್ಲ. ಈ ಕಾರಣದಿಂದಲೇ ನಾವು ಭಾಷಾಂತರ ಸ್ಟುಡಿಯೋ ನಿರ್ಮಿಸಿದ್ದೇವೆ. ಈ ಕಾರಣದಿಂದಲೇ ನಾವು ಭಾಷಾಂತರ ಸ್ಟುಡಿಯೋದಲ್ಲಿ ಭಾಷಾಂತರ ಮಾಡಿದಾಗ ವರ್ಡ್ ಪ್ರಾಸೆಸರ್ ಗೆ ಡಾಕ್ಯುಮೆಂಟ್ ಗೆ ಸಮಾನವಾಗಿ ಇದ್ದು ಯಾವುದೇ ವಿಶೇಷ (ಮಾರ್ಕ್ ಅಪ್) ಭಾಷೆಯ ಸಹಾಯವಿಲ್ಲದೆ ಮಾಡಬಹುದು

ಭಾಷಾಂತರ ಸ್ಟುಡಿಯೋದಲ್ಲಿ USFMನಲ್ಲಿ ಸತ್ಯವೇದ ಭಾಷಾಂತರ ಮಾಡಲು ನಮೂನೆಗಳನ್ನು ತಯಾರಿಸುವುದನ್ನು ಈ ಕೆಳಗೆ ನೋಡಬಹುದು

ನಿಮ್ಮ ಭಾಷಾಂತರವನ್ನು ಈ ನಮೂನೆಯಲ್ಲಿ ಭಾಷಾಂತರ ಸ್ಟುಡಿಯೋದಲ್ಲಿ ಅಪ್ ಲೋಡ್ ಮಾಡಿದಾಗ ಈಗಾಗಲೇ ಅಪ್ ಲೋಡ್ ಮಾಡಿರುವ USFM ಮಾದರಿಯಿಂದಾಗಿ ತತ್ ಕ್ಷಣವೇ ವಿವಿಧ ನಮೂನೆಯಲ್ಲಿ ಪ್ರಕಟಿಸಲು ಸಾಧ್ಯವಾಗುತ್ತದೆ.

ಭಾಷಾಂತರವನ್ನು USFMಗೆ ಹೇಗೆ ಪರಿವರ್ತಿಸಬಹುದು ?

ಭಾಷಾಂತರವನ್ನು USFM ಮಾದರಿಯಲ್ಲೇ ಮಾಡಬೇಕೆಂದು ಬಲವಾಗಿ ಪ್ರೋತ್ಸಾಹಿಸಿದ್ದರೂ ಕೆಲವೊಮ್ಮೆ ಭಾಷಾಂತರವನ್ನು USFM ಮಾರ್ಕ್ ಅಪ್ ಇಲ್ಲದೆಯೂ ಮಾಡಬಹುದು. ಈ ತರದ ಭಾಷಾಂತರಗಳನ್ನು ಇನ್ನು ಉಪಯೋಗಿಸಬಹುದು ಆದರೆ ಮೊದಲು USFM ಮಾರ್ಕ್ ರ್ ಗಳನ್ನು ಖಂಡಿತವಾಗಿ ಉಪಯೋಗಿಸಬಹುದು.

ಇದನ್ನು ಮಾಡಲು ಸುಲಭವಾದ ಮಾರ್ಗವೆಂದರೆ ಭಾಷಾಂತರ ಸ್ಟುಡಿಯೋದಲ್ಲಿ copy and paste ಮಾಡುವುದು ನಂತರ ವಾಕ್ಯಗಳನ್ನು ಗುರುತಿನ ಚಿಹ್ನೆಗಳನ್ನು ಸರಿಯಾದ ಜಾಗದಲ್ಲಿ ಗುರುತಿಸುವುದು ಒಂದು ಮಾರ್ಗ. ಇದನ್ನು ಮಾಡಿದ ನಂತರ ಭಾಷಾಂತರವನ್ನು USFMಗೆ ಕಳುಹಿಸಲು /export ಗೆ ಸಿದ್ಧವಾಗುತ್ತದೆ. ಇದೊಂದು ಕಠಿಣವಾದ ಕಾರ್ಯ, ಆದುದರಿಂದ ನಾವು ಸತ್ಯವೇದ ಭಾಷಾಂತರವನ್ನು ಪ್ರಾರಂಭದಿಂದಲೂ ಭಾಷಾಂತರ ಸ್ಟುಡಿಯೋದಲ್ಲಿ ಮಾಡಬೇಕು ಇಲ್ಲವೇ ಬೇರೆ ಯಾವುದಾದರೂ ಕಾರ್ಯಕ್ರಮ USFMನಲ್ಲಿದ್ದರೆ ಅದರಲ್ಲಿ ಮಾಡಬಹುದು

ಇತರ ವಿಷಯಗಳಿಗೆ ಅನ್ವಯಿಸುವ Markdown (ವೆಬ್ ಬರಹಗಾರರು ತಮ್ಮ ಬರಹಗಳನ್ನು HTML ಪರಿವರ್ತಿಸಲು ಉಪಯೋಗಿಸುವ ಸಾಧನವೇ Markdown”)

Markdown ಎಂಬುದು ಸಾಮಾನ್ಯವಾಗಿ markup ಭಾಷೆ, ಇಂಟರ್ ನೆಟ್ ನಲ್ಲಿ ಅನೇಕಕಡೆ ಇದನ್ನು ಉಪಯೋಗಿಸುತ್ತಾರೆ. Markdown ಬಳಸುವುದರಿಂದ ಒಂದೇ ವಾಕ್ಯಭಾಗವನ್ನು ಅನೇಕರೀತಿಯ formatಗಳಲ್ಲಿ ಉಪಯೋಗಿಸಲು ಸುಲಭವಾಗುತ್ತದೆ. (ಉದಾಹರಣೆಗೆ ವೆಬ್ ಪೇಜ್, ಮೊಬೈಲ್ ಆಪ್, ಪಿಡಿಎಫ್ ಇತ್ಯಾದಿ)

ಮಾರ್ಕ್ ಡೌನ್ supports bold and italic, written like this: ಮಾರ್ಕ್ ಡೌನ್ supports bold and italic. ಮಾರ್ಕ್ ಡೌನ್ also supports headings like this:

ಶೀರ್ಷಿಕೆ 1

ಶೀರ್ಷಿಕೆ 2

ಶೀರ್ಷಿಕೆ 3

ಮಾರ್ಕ್ ಡೌನ್ also ಬೆಂಬಲಿಸುವ ಸಂಪರ್ಕ ಸಾಧನ. ಈ ಸಂಪರ್ಕ ಸಾಧನ.ಗಳು ಈ ರೀತಿಯಾಗಿ ಕಾಣಿಸಿಕೊಳ್ಳುತ್ತದೆ display like this https://unfoldingword.org and are written like this: https://unfoldingword.org

Customized wording for links are also supported, like this: ವಿನ್ಯಾಸಗೊಳಿಸಿರುವ ಪದಗಳನ್ನು ಬೆಂಬಲಿಸುವ ಸಂಪರ್ಕ ಸಾಧನಗಳು ಹೀಗಿವೆ uW Website

Note that HTML is also valid ಮಾರ್ಕ್ ಡೌನ್. ಮಾರ್ಕ್ ಡೌನ್ ವಾಕ್ಯರಚನೆ ಸಂಪೂರ್ಣ ಪಟ್ಟಿಗಾಗಿ ದಯವಿಟ್ಟು. ನೋಡಿರಿ

ಒಟ್ಟಾರೆ ಅಭಿಪ್ರಾಯಗಳು.

ವಿಷಯಗಳನ್ನು USFMನಲ್ಲಿ ಮಾರ್ಕ್ಡ್ ಆಪ್ ಮಾಡಲು ಸುಲಭವಾದ ಮಾರ್ಗವೆಂದರೆ, ಅಥವಾ ಮಾರ್ಕ್ ಡೌನ್ ನ್ನು ಇದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿ ತಯಾರಿಸಿರುವ ಎಡಿಟರ್ ಉಪಯೋಗಿಸಬಹುದು. ವರ್ಡ್ ಪ್ರಾಸೆಸರ್ ಅಥವಾ ಟೆಕ್ಸ್ಟ್ ಎಡಿಟರ್ ಬಳಸಿದರೂ ಇವುಗಳನ್ನು ಗುರುತಿಸಲು ಕೈ ಬರಹ ಮಾಡಲೇಬೇಕು.

  • ಗಮನಿಸಿ: ಬರವಣಿಗೆಯ ವಿಷಯವನ್ನು ದೊಡ್ಡ ಅಕ್ಷರದಲ್ಲಿ ಮಾಡಲು, ಇಟಾಲಿಕ್ ಆಕಾರದಲ್ಲಿ ಮಾಡಲು ವರ್ಡ್ ಪ್ರಾಸೆಸರ್ ನಲ್ಲಿ ಅಂಡರ್ ಲೈನ್ ಮಾಡಿದ್ದರೂ ದೊಡ್ಡ ಅಕ್ಷರ ಮಾದರಿ, ಇಟಾಲಿಕ್ ಅಥವಾ ಮಾರ್ಕ್ ಆಪ್ ಭಾಷೆಯಲ್ಲಿ ಅಂಡರ್ ಲೈನ್ ಮಾಡಲು ಬರುವುದಿಲ್ಲ. ಈ ರೀತಿಯ ಪಾರ್ ಮೇಟಿಂಗ್ ನಿರ್ದಿಷ್ಟ ಚಿಹ್ನೆಗಳನ್ನು ಬರೆಯುವುದರ ಮೂಲಕ ಮಾಡಬಹುದು. ಯಾವ ಸಾಫ್ಟ್ ವೇರ್ ಬಳಸಬೇಕೆಂದು ಆಲೋಚಿಸುವಾಗ ದಯವಿಟ್ಟು ನೀವು ಭಾಷಾಂತರ ಕೇವಲ ಪದಗಳಲ್ಲ ಈ ಪ್ರಕ್ರಿಯೆಯಲ್ಲಿ ಅನೇಕ ಪಾರಿಭಾಷಿಕ ತಂತ್ರಗಳನ್ನು ಗಮನದಲ್ಲಿಡಬೇಕು ಎಂಬುದನ್ನು ತಿಳಿದಿರಬೇಕು. ಯಾವುದೇ ಸಾಫ್ಟ್ ವೇರ್ ಗಳನ್ನು ಬಳಸಿದರೂ ಅಂತಿಮವಾಗಿ ಸತ್ಯವೇದದ ಭಾಷಾಂತರ USFM,ನಲ್ಲೇ ಅಪ್ ಲೋಡ್ ಮಾಡಬೇಕು ಮತ್ತು ಎಲ್ಲವನ್ನು ಮಾರ್ಕ್ ಡೌನ್.ನಲ್ಲಿ ಸೇರಿಸಲೇ ಬೇಕು.

How to Start Translating

Translation Manual :: How to Start Translating

ಅನುವಾದ / ಭಾಷಾಂತರ ಮಾಡುವಾಗ ಇರುವ ಸಹಾಯ.

Translation Manual :: How to Start Translating :: Help with Translating

ಭಾಷಾಂತರ / ಅನುವಾದದ ಸಹಾಯಕ ವಿಚಾರಗಳನ್ನು ಬಳಸಿಕೊಳ್ಳವುದು.

ಅನುವಾದ ಮಾಡುವವರು ಅದನ್ನು ಅತ್ಯುತ್ತಮವಾಗಿ ಮಾಡುವಂತೆ ಅನುವಾದದ ಟಿಪ್ಪಣಿಗಳು, ಅನುವಾದದ ಪದಗಳು, ಮತ್ತು ಅನುವಾದದ ಪ್ರಶ್ನೆಗಳು ಇವುಗಳನ್ನು ಸಹಾಯಕಾಗಿ ನೀಡಲಾಗಿದೆ.

ಅನುವಾದದ ಟಿಪ್ಪಣಿಗಳು. ಅನುವಾದ ಮಾಡುವವರು ಸತ್ಯವೇದದ ಹಿನ್ನೆಲೆಯಲ್ಲಿ ಅದನ್ನು ಸ್ಪಷ್ಟವಾಗಿ ಮಾಡುವಂತೆ ಅದರ ಹಿನ್ನೆಲೆ, ಸಂಸ್ಕೃತಿ ಮತ್ತು ಭಾಷೆ ಇವುಗಳ ವಿವರಣೆ ನೀಡಲಾಗಿದೆ. ಒಂದೇ ವಿಷಯವನ್ನು ವಿವಿಧ ರೀತಿಯಲ್ಲಿ ಹೇಗೆ ತಿಳಿಸಬಹುದು ಎಂದು ಈ ಟಿಪ್ಪಣಿಗಳು ಮಾರ್ಗದರ್ಶನ ನೀಡುತ್ತವೆ. ವಿವರಣೆಗಳಿಗಾಗಿ ನೋಡಿ http://ufw.io/tn/.

ಅನುವಾದದ ಪದಗಳು: ಇವು ಸತ್ಯವೇದ ಮತ್ತು ತೆರೆದ ಸತ್ಯವೇದ ಕಥೆಗಳ ಗ್ರಂಥಲ್ಲಿ ಕಾಣುವ ಪ್ರಮುಖ ಪದಗಳಾಗಿವೆ. ಈ ಪದಗಳ ಕುರಿತು ಒಂದು ಸಣ್ಣ ಲೇಖನ ಮತ್ತು ಆ ಪದಗಳು ಸತ್ಯವೇದದಲ್ಲಿ ಮತ್ತು ತೆರೆದ ಸತ್ಯವೇದ ಕಥೆಗಳ ಗ್ರಂಥಲ್ಲಿ ಎಲ್ಲಿ ಬರುತ್ತವೆ ಎಂದು ಉಲ್ಲೇಖಿಸುತ್ತದೆ. ಅನುವಾದ ಮಾಡುವವರು ಸರಿಯಾದ ಪದವನ್ನು ಸರಿಯಾದ್ದ ಸ್ಥಳದಲ್ಲಿ ಉಪಯೋಗಿಸಲು ಇದು ಸಹಾಯ ಮಾಡುತ್ತದೆ. ವಿವರಣೆಗಳಿಗಾಗಿ ನೋಡಿ http://ufw.io/tw/.

ಅನುವಾದದ ಪ್ರಶ್ನೆಗಳು. ನಿಮ್ಮ ಅನುವಾದವನ್ನು ಸ್ವಯಂ ಪರಿಶೀಲನೆ ಮಾಡಲ ನೀವು ಬಳಿಸಬಹುದಾದ ಗ್ರಹಿಕೆಯ ಪ್ರಶ್ನೆಗಳು. ನೀವು ಅನುವಾದ ಮಾಡಲಿರುವ ಭಾಷೆಯಲ್ಲಿ ಈ ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೆ, ಆಗ ಅದು ಅದು ಅತ್ಯುತ್ತಮ ಅನುವಾದ ಎಂದು ಅಂದುಕೊಳ್ಳಬಹುದು. ಈ ಪ್ರಶ್ನೆಗಳು ಉದ್ದೇಶಿತ ಭಾಷಾ ಸಮುದಾಯದೊಂದಿಗೆ ಪರಿಶೀಲಿಸಲು ಉತ್ತಮ ಸಾಧನವಾಗಿದೆ. ವಿವರಣೆಗಳಿಗಾಗಿ ನೋಡಿ http://ufw.io/tw/.

ನೀವು ಅನುವಾದದ ಟಿಪ್ಪಣಿಗಳನ್ನು,ಅನುವಾದದ ಪದಗಳನ್ನು ಮತ್ತು ಅನುವಾದದ ಪ್ರಶ್ನೆಗಳನ್ನು ಸಮಾಲೋಚನೆ ಮಾಡಿದರೆ ಆಗ ನೀವು ಉತ್ತಮವಾದ ಅನುವಾದ ಮಾಡಲು ಸಿದ್ಧರೆಂದು ತಿಳಿದುಕೊಳ್ಳಬಹುದು.

ದಯವಿಟ್ಟು ಅನುವಾದದ ಟಿಪ್ಪಣಿಗಳನ್ನು, ಅನುವಾದದ ಪದಗಳನ್ನು ಮತ್ತು ಅನುವಾದದ ಪ್ರಶ್ನೆಗಳನ್ನು ಸರಿಯಾಗಿ ತಿಳಿದುಕೊಳ್ಳಿರಿ.

Unlocked Bible Text

Translation Manual :: Unlocked Bible Text

ಮೂಲ ಮತ್ತು ಆಕರ ಗ್ರಂಥ ಭಾಷೆಗಳು.

Translation Manual :: Unlocked Bible Text :: The Original and Source Languages

ಮೂಲಭಾಷೆಯಲ್ಲಿನ ಪಠ್ಯಭಾಗ ತುಂಬಾ ನಿಖರವಾಗಿರುತ್ತದೆ.

ಲಕ್ಷ ವ್ಯಾಖ್ಯಾನ - ಪ್ರಾರಂಭದಲ್ಲೇ ಮೂಲಭಾಷೆಯಲ್ಲಿ ಸತ್ಯವೇದದ ಎಲ್ಲಾ ವಾಕ್ಯಗಳನ್ನು ಬರೆಯಲಾಗಿದೆ.

ವಿವರಣೆ - ಹೊಸ ಒಡಂಬಡಿಕೆಯ ಮೂಲ ಭಾಷೆ ಗ್ರೀಕ್. ಹಳೆ ಒಡಂಬಡಿಕೆಯ ಮೂಲಭಾಷೆ ಹೆಚ್ಚಾಗಿ ಹಿಬ್ರೂ ಭಾಷೆಯಲ್ಲಿ ಬರೆಯಲ್ಪಟ್ಟಿದೆ.

ಹಾಗೆಯೇ ಕೆಲವು ಪುಸ್ತಕಗಳು ಅಂದರೆ ದಾನಿಯೆಲ ಮತ್ತು ಎಜ್ರ ಅರಾಮಿಕ್ ಭಾಷೆಯಲ್ಲಿ ಬರೆಯಲ್ಪಟ್ಟಿವೆ. ಮೂಲಭಾಷೆ ಯಾವಾಗಲೂ ಅತ್ಯಂತ ನಿಖರವಾದ ಭಾಷೆ ಇದರಲ್ಲಿ ಯಾವ ವಾಕ್ಯಭಾಗವನ್ನು ಭಾಷಾಂತರ ಮಾಡಬೇಕು ಎಂಬುದು ತಿಳಿಯುತ್ತದೆ. ಆಕರ ಗ್ರಂಥದ ಭಾಷೆ ಯಾವುದು ಮತ್ತು ಭಾಷಾಂತರ ಯಾವ ಮೂಲ ಭಾಷೆಯಿಂದ ಆಯಿತು ಎಂಬುದು ಮುಖ್ಯ . ಒಬ್ಬ ಭಾಷಾಂತರಗಾರ ಸತ್ಯವೇದವನ್ನು ಮೂಲಭಾಷೆಯಿಂದ ಭಾಷಾಂತರ ಮಾಡುತ್ತಾನೆ ಎಂದರೆ ಅವನಿಗೆ ಮೂಲಭಾಷೆ ಮತ್ತು ಆಕರ ಗ್ರಂಥದ ಭಾಷೆ ಎರಡೂ ಒಂದೇ ಆಗಿರುತ್ತದೆ. ಮೂಲಭಾಷೆಯನ್ನು ಯಾರು ಅನೇಕ ವರ್ಷಗಳಿಂದ ಅಧ್ಯಯನ ಮಾಡಿರುತ್ತಾರೋ ಅವರು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು.ಹಾಗೂ ಆಕರಗ್ರಂಥದ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಬಳಸಬಲ್ಲರು .

ಈ ಕಾರಣಕ್ಕಾಗಿ ಬಹುಮಂದಿ ಭಾಷಾಂತರಗಾರರು ಬಹು ಜನರಿಗೆ ಸುಲಭವಾಗಿ ಅರ್ಥವಾಗುವಂತಹ ಭಾಷೆಯಲ್ಲಿ ಬರೆಯಲ್ಪಟ್ಟ , ಭಾಷಾಂತರಿಸಲ್ಪಟ್ಟ ಸತ್ಯವೇದವನ್ನು ಭಾಷಾಂತರಿಸಲು ತೊಡಗಿ ಇದನ್ನು ಆಕರ ಗ್ರಂಥಭಾಷೆಯನ್ನಾಗಿ ಬಳಸಿಕೊಂಡರು. ಒಂದು ವೇಳೆ ನೀವು ವ್ಯಾಪಕ ಸಂಹನದ ಭಾಷೆಯಿಂದ ಅನುವಾದ ಮಾಡಲು ಯೋಚಿಸಿದರೆ ಆ ಬಾಷೆಯನ್ನು ಸರಿಯಾಗಿ ತಿಳಿದು, ಅದನ್ನು ಭಾಷಾಂತರ ಮಾಡುವ ವ್ಯಕ್ತಿಯ ಸಹಾಯವನ್ನು ಪಡೆಯುವುದು ಒಳ್ಳೆಯದು. ಮೂಲ ಭಾಷೆ ಮತ್ತು ಭಾಷಾಂತರ ಮಾಡಿದ ಭಾಷೆಯಲ್ಲಿನ ಅರ್ಥಗಳು ಸರಿಯಾಗಿ ಇರಬೇಕು. ಮಾಡಿರುವ ಭಾಷಾಂತರದ ಅರ್ಥಗಳು ಸರಿಯಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಅದೇ ಭಾಷೆಯಲ್ಲಿ ಬರೆಯಲಾಗಿರುವ ಸಹಾಯಕ ಪ್ರತಿಗಳನ್ನು ಅಂದರೆ ಭಾಷಾಂತರ ಪದಗಳು, ಭಾಷಾಂತರ ಟಿಪ್ಪಣಿಗಳು ಭಾಷಾಂತರ ವ್ಯಖ್ಯಾಯಾನಗಳು, ಅವುಗಳ ಪ್ರಶ್ನೆಗಳು ಮತ್ತು ಉತ್ತರ ಇವುಗಳ ಸಹಾಯ ಪಡೆಯಬಹುದು.

ಮೂಲ ಭಾಷೆಯಲ್ಲಿರುವ ಪ್ರತಿ ನಿಖರವಾಗಿಲ್ಲದೆ ಇರಬಹುದು.

ಅನುವಾದಕನಿಗೆ ಮೂಲ ಭಾಷೆ ಅರ್ಥವಾಗದೆ ಹೋದರೆ ಆಗ ಅವನು ವ್ಯಾಪಕ ಸಂಹನದ ಭಾಷೆಯನ್ನು ಮೂಲ ಭಾಷೆಯನ್ನಾಗಿ ಉಪಯೋಗಿಸಬೇಕು. ಭಾಷಾಂತರ ಹೇಗೆ ಮಾಡಲಾಗಿದೆ ಎಂಬ ಆದಾರದ ಮೇಲೆ ನಿಮ್ಮ ಮೂಲ ಭಾಷೆಯ ಅನುವಾದವನ್ನು ಅರ್ಥೈಸಬಹುದು. ಆದರೂ ಅದು ಸತ್ಯವೇದ ಬರೆಯಲಾದ ಭಾಷೆಗಿಂತ ಒಂದು ಹೆಜ್ಜೆ ಹಿಂದೆ ಇರುವುದು. ಕೆಲವು ಸಂದರ್ಭಗಳಲ್ಲಿ ಮೂಲವನ್ನು ವಾಸ್ತವವಾಗಿ, ಕೇವಲ ಎರಡು ಹೆಜ್ಜೆ ದೂರವಿರಿಸಿ ಇನ್ನೊಂದು ಮೂಲದಿಂದ ಅನುವಾದಿಸಬಹುದು.

ಈ ಕೆಳಕಂಡ ಉದಾಹರಣೆಯನ್ನು ಗಮನಸಿರಿ. ಒಬ್ಬ ಅನುವಾದಕ ಸ್ವಾಹಿಲಿ ಹೊಸ ಒಡಂಬಡಿಕೆಯನ್ನು ಮುಂದೆ ಭಾಷಾಂತರ ಮಾಡಲಿರುವ ಭಾಷೆಗೆ ಮೂಲ ಭಾಷೆಯನ್ನಾಗಿ ಇಟ್ಟುಕೊಳ್ಳಬಹುದು. ಹೇಗೂ ಅವನು ಉಪಯೋಗಿಸುವ ಈ ಸ್ವಾಹಿಲಿ ಸತ್ಯವೇದ ಅದು ಆಂಗ್ಲ ಭಾಷೆಯಿಂದ ಅನುವಾದವಾಗಿದೆ ಹೊರತು ಮೂಲ ಗ್ರೀಕ್ ಭಾಷೆಯಿಂದ ಅಲ್ಲ. ಹಾಗಾಗಿ ಭಾಷಾಂತರ ಪ್ರಯೋಗದಲ್ಲಿ ಕೆಲವಾರು ಅರ್ಥಗಳು ಬದಲಾಗಿರಬಹುದು.

ಮಾಡಿರುವ ಭಾಷಾಂತರ ನಿಖರವಾಗಿದೆಯೋ ಇಲ್ಲವೋ ಎಂದು ಸ್ಪಷ್ಟಪಡಿಸಿಕೊಳ್ಳಲು ಹೊಸ ಭಾಷಾಂತರವನ್ನು ಮೂಲ ಭಾಷಾಂತರಕ್ಕೆ ಹೋಲಿಸುವುದು. ಅದು ಸಾಧ್ಯವಾಗದೆ ಹೋದರೆ ಮೂಲ ಭಾಷೆಯಿಂದ ಭಾಷಾಂತರ ಮಾಡಲಾದ ಸತ್ಯವೇದದೊಂದಿಗೆ ULT ಇಟ್ಟುಕೊಂಡು ಅದರೊಂದಿಗೆ ಹೋಲಿಸಿ ನೋಡಿರಿ.


ಮೂಲ ಹಸ್ತಪ್ರತಿಗಳು.

Translation Manual :: Unlocked Bible Text :: Original Manuscripts

ಮೂಲಹಸ್ತಪ್ರತಿಗಳನ್ನು ಬರೆಯುವ ಬಗ್ಗೆ.

ದೇವರು ನೇಮಿಸಿದ ಪ್ರವಾದಿಗಳು ನೂರಾರು ವರ್ಷಗಳ ಹಿಂದೆ ಸತ್ಯವೇದವನ್ನು ಬರೆದರು. ಹಾಗೆಯೇ ಅಪೋಸ್ತಲರಿಗೂ ದೇವರು ನಿರ್ದೇಶಿಸಿದಂತೆ ಬರೆದರು. ಇಸ್ರಾಯೇಲ್ ಜನಾಂಗದವರು ಹಿಬ್ರೂ ಭಾಷೆ ಮಾತನಾಡಿದರು. ಆದುದರಿಂದ ಹಳೆ ಒಡಂಬಡಿಕೆಯ ಬಹುಪಾಲು ಪುಸ್ತಕಗಳು ಹಿಬ್ರೂ ಭಾಷೆಯಲ್ಲೇ ಬರೆಯಲಾಯಿತು. ಅವರು ಅಸ್ಯ ಮತ್ತು ಬ್ಯಾಬಿಲೋನ್ ದೇಶದಲ್ಲಿ ಅಪರಿಚಿತರಂತೆ ವಾಸಿಸಿದಾಗಲೂ ಅರಾಮಿಕ್ ಭಾಷೆ ಮಾತನಾಡಲು ಕಲಿತರು.ಆದುದರಿಂದ ಆಮೇಲಿನ ಕೆಲವು ಹಳೆ ಒಡಂಬಡಿಕೆ ಪುಸ್ತಕಗಳು ಅರಾಮಿಕ್ ಭಾಷೆಯಲ್ಲಿ ಬರೆಯಲ್ಪಟ್ಟವು. ಯೇಸುವಿನ ಜನನ ಆಗುವ ಮುನ್ನೂರು ವರ್ಷಗಳ ಮೊದಲು ಗ್ರೀಕ್ ಭಾಷೆ ಸಂಪರ್ಕ ಭಾಷೆಯಾಗಿ ಪ್ರಚಲಿತವಾಯಿತು.

ಯೂರೋಪಿನಲ್ಲಿ ಮತ್ತು ಪೂರ್ವ ಮಧ್ಯ ಪ್ರದೇಶದಲ್ಲಿ ಅನೇಕ ಜನರು ಗ್ರೀಕ್ ಭಾಷೆಯನ್ನು ತಮ್ಮ ದ್ವಿತೀಯ ಭಾಷೆಯನ್ನಾಗಿ ಮಾತನಾಡುತ್ತಿದ್ದರು. ಆದುದರಿಂದ ಆಗ ಹಳೆ ಒಡಂಬಡಿಕೆ ಪುಸ್ತಕಗಳು ಗ್ರೀಕ್ ಭಾಷೆಯಲ್ಲೂ ಭಾಷಾಂತರವಾಯಿತು. ಯೇಸುವಿನ ಜನನದ ನಂತರವೂ ಪೂರ್ವಮಧ್ಯಪ್ರದೇಶದ ಸುತ್ತ ಇರುವ ಜನರು ಗ್ರೀಕ್ ಭಾಷೆಯನ್ನು ತಮ್ಮ ದ್ವಿತೀಯ ಭಾಷೆಯನ್ನಾಗಿ ಮಾತನಾಡುತ್ತಿದ್ದರು. ನಂತರ ಹೊಸ ಒಡಂಬಡಿಕೆಯ ಎಲ್ಲಾ ಪುಸ್ತಕಗಳನ್ನು ಗ್ರೀಕ್ ಭಾಷೆಯಲ್ಲಿ ಬರೆಯಲಾಯಿತು. ಅಂದಿನ ಕಾಲದಲ್ಲಿ ಮುದ್ರಣಯಂತ್ರಗಳು ಇಲ್ಲದಿದ್ದುದರಿಂದ ಬರಹಗಾರರು ಎಲ್ಲಾ ಪುಸ್ತಕಗಳನ್ನು ಕೈಯಲ್ಲೇ ಬರೆದರು. ಇವುಗಳು ಮೂಲಹಸ್ತಪ್ರತಿಗಳು. ಇವುಗಳನ್ನು ಪ್ರತಿಮಾಡಿದವರೂ ಸಹ ತಮ್ಮ ಕೈಯಿಂದಲೇ ಬರೆದರು.

ಇವುಗಳೂ ಸಹ ಹಸ್ತಪ್ರತಿಗಳು. ಈ ಪುಸ್ತಕಗಳು ಅತ್ಯಂತ ಪ್ರಮುಖವಾದುದು, ಇಂತಹ ಪ್ರತಿಗಳನ್ನು ಸಿದ್ಧಪಡಿಸಿದವರಿಗೆ ಪ್ರತಿಗಳನ್ನು ಸಿದ್ಧಪಡಿಸುವಾಗ ನಿಖರವಾಗಿ ಬಹು, ಎಚ್ಚರಿಕೆಯಿಂದ ಪ್ರತಿ ಮಾಡುವಂತೆ ವಿಶೇಷ ತರಬೇತಿ ನೀಡಲಾಗುತ್ತಿತ್ತು. ನೂರಾರು ವರ್ಷಗಳಲ್ಲಿ ಸಾವಿರಾರು ಸತ್ಯವೇದದ ಪ್ರತಿಗಳನ್ನು ಅನೇಕ ಜನರು ಸಿದ್ಧಪಡಿಸಿದರು. ಆದರೆ ಮೂಲ ಲೇಖಕರು ಬರೆದ ಎಲ್ಲಾ ಹಸ್ತಪ್ರತಿಗಳು ಕಳೆದು ಹೋದುದಲ್ಲದೆ, ಮತ್ತು ಎಲ್ಲೋ ಕಾಣದಾಯಿತು. ಆದುದರಿಂದ ಈಗ ಅವು ನಮಗೆ ಲಭ್ಯವಿಲ್ಲ. ಆದರೆ ನಂತರ ಕೈಯಿಂದ ಬರೆದ ಕೆಲವು ಪ್ರತಿಗಳು ದೊರೆತಿವೆ. ಇಂತಹ ಕೆಲವು ಪ್ರತಿಗಳನ್ನು ಸಾವಿರ ಮತ್ತು ನೂರಾರು ವರ್ಷಗಳಿಂದ ರಕ್ಷಿಸಿ ಇಡಲ್ಪಟ್ಟಿವೆ,.


ಸತ್ಯವೇದದ ರಚನೆ.

Translation Manual :: Unlocked Bible Text :: Structure of the Bible

ಸತ್ಯವೇದವು 66"ಪುಸ್ತಕಗಳ." ಒಂದು ಗ್ರಂಥ. ಸತ್ಯವೇದದಲ್ಲಿ ಈ "ಪುಸ್ತಕ"ಗಳನ್ನು ಪುಸ್ತಕಗಳೆಂದು ಹೇಳಿದರೂ ಅವು ಗಾತ್ರದಲ್ಲಿ ಕೆಲವು ದೀರ್ಘವಾದುದು ಮತ್ತು ಸಂಕ್ಷಿಪ್ತವಾಗಿ ಒಂದು ಅಥವಾ ಎರಡು ಪುಟಗಳನ್ನು ಸಹಾ ಹೊಂದಿವೆ. ಬೈಬಲ್ ನಲ್ಲಿ ಎರಡು ಮುಖ್ಯ ಭಾಗಗಳಿವೆ. ಮೊದಲನೆ ಭಾಗವು ಮೊದಲು ಬರೆದದ್ದು ಇದನ್ನು ಹಳೆ ಒಡಂಬಡಿಕೆ ಎಂದು ಕರೆಯಲಾಗಿದೆ. ಎರಡನೆ ಭಾಗವು ನಂತರ ಬರೆದದ್ದು ಇದನ್ನು ಹೊಸ ಒಡಂಬಡಿಕೆ ಎಂದು ಕರೆಯುತ್ತಾರೆ, ಹಳೆಒಡಂಬಡಿಕೆಯಲ್ಲಿ ಒಟ್ಟು 39 ಪುಸ್ತಕಗಳು ಮತ್ತು ಹೊಸ ಒಡಂಬಡಿಕೆಯಲ್ಲಿ 27 ಪುಸ್ತಕಗಳಿವೆ. (ಹೊಸ ಒಡಂಬಡಿಕೆಯಲ್ಲಿನ ಹೆಚ್ಚಿನ ಪುಸ್ತಕಗಳು ಜನರಿಗೆ ಬರೆದ ಪತ್ರಗಳಾಗಿವೆ.)

ಪ್ರತಿಯೊಂದು ಪುಸ್ತಕದಲ್ಲಿಯೂ ಅಧ್ಯಾಯಗಳಂತೆ ವಿಭಜಿಸಿ ಬರೆಯಲಾಗಿದೆ. ಕೆಲವು ಪುಸ್ತಕಗಳಲ್ಲಿ ಒಂದಕ್ಕಿಂತಲೂ ಹೆಚ್ಚು ಅಧ್ಯಾಯಗಳಿವೆ. ಆದರೆ ಓಬೇದ್ಯ, ಫಿಲೋಮಿನ, ಯೋಹಾನನಿಗೆ ಬರೆದ 2ನೇ ಪತ್ರಿಕೆ 3ನೇ ಯೋಹಾನನಿಗೆ ಬರೆದ 3ನೇ ಪತ್ರಿಕೆ, ಯೂದ ಈ ಎಲ್ಲಾ ಪುಸ್ತಕದಲ್ಲಿ ಒಂದೊಂದೇ ಅಧ್ಯಾಯಗಳಿವೆ. ಎಲ್ಲಾ ಅಧ್ಯಾಯಗಳನ್ನು ವಾಕ್ಯಗಳನ್ನಾಗಿ ವಿಭಜಿಸಲಾಗಿದೆ. ನಾವು ಯಾವುದಾದರೂ ವಾಕ್ಯಗಳನ್ನು ಉದ್ದೇಶಿಸಿ ಮಾತನಾಡುವಾಗ, ಬರೆಯುವಾಗ ಮೊದಲು ಪುಸ್ತಕದ ಹೆಸರು,ನಂತರ ಅಧ್ಯಾಯ ಮೇಲೆ ವಾಕ್ಯಗಳನ್ನು ಬರೆಯುತ್ತೇವೆ, ಹೇಳುತ್ತೇವೆ. ಉದಾಹರಣೆಗೆ "ಯೋಹಾನ 3:16 " ಅಂದರೆ ಯೋಹಾನನು ಬರೆದ ಸುವಾರ್ತೆ, ಅಧ್ಯಾಯ 3, 16.ನೇ ವಾಕ್ಯ

ನಾವು ಎರಡು ಅದಕ್ಕಿಂತ ಹೆಚ್ಚಿನ ವಾಕ್ಯಗಳನ್ನು ಕುರಿತು ಹೇಳುವಾಗ, ಮುಂದುವರೆಯುವಾಗ ಮದ್ಯದಲ್ಲಿ ಒಂದು ಗೆರೆಯನ್ನು ಹಾಕಿ ಗುರುತಿಸುತ್ತೇವೆ. "ಯೋಹಾನ 3:2,-6, 9 "ಅಂದರೆ ಯೋಹಾನ, ಅಧ್ಯಾಯ 3: ವಾಕ್ಯಗಳು 16, 17, ಮತ್ತು 18. ಉದ್ದೇಶಿಸಿರುವ ವಾಕ್ಯಗಳು ಒಂದರನಂತರ ಒಂದರಂತೆ ನಿರಂತರವಾಗಿ ಇಲ್ಲದಿದ್ದರೆ ಅರ್ಧವಿರಾಮ (ಕಾಮ -,) ಗಳನ್ನು ಬಳಸಿ ಪ್ರತ್ಯೇಕ ಮಾಡಲಾಗುತ್ತದೆ. “ಯೋಹಾನ 3:2, 6, 9” ಅಂದರೆ ಯೋಹಾನನು ಬರೆದ ಸುವಾರ್ತೆ 3ನೇ ಅಧ್ಯಾಯ 2, 6, ಮತ್ತು 9ನೇ ವಾಕ್ಯಗಳು. ಈ ಅಧ್ಯಾಯಗಳು ಮತ್ತು ವಾಕ್ಯಗಳ ಸಂಖ್ಯೆ ನಂತರ ಸಂಕ್ಷೇಪ ಸಂಕೇತಾಕ್ಷರಗಳನ್ನು ಸತ್ಯವೇದ ಭಾಷಾಂತರ ಮಾಡಲು ಬಳಸುತ್ತೇವೆ. ಕೆಳಗಿನ ಉದಾಹರಣೆಗಳಲ್ಲಿ “ULB” ಎಂಬ ಸಂಕ್ಷಿಪ್ತ ಸಂಕೇತಾಕ್ಷರಗಳು "ಅನ್ ಲಾಕ್ಡ್ ಲಿಟರಲ್ ಬೈಬಲ್ "ಎಂಬುದನ್ನು ತಿಳಿಸುತ್ತದೆ.

ಭಾಷಾಂತರ ಅಕಾಡೆಮಿಯಲ್ಲಿ ಈ ಪದ್ಧತಿಯನ್ನು ಬಳಸಿ ಸತ್ಯವೇದದ ಯಾವ ಭಾಗದಿಂದ ಪ್ರಸ್ತುತ ಭಾಗ ಬಂದಿದೆ ಎಂದು ತಿಳಿಯಬಹುದು. ಅಂದರೆ ಇದರಿಂದ ಇಡೀ ವಾಕ್ಯದ ಅಥವಾ ವಾಕ್ಯ ಭಾಗವನ್ನು ಇಲ್ಲಿ ಹೇಳಲಾಗಿದೆ ಎಂದು ತಿಳಿಯಬಾರದು. ಕೆಳಗೆ ನೀಡಿರುವ ನ್ಯಾಯಸ್ಥಾಪಕರು, ಅಧ್ಯಾಯ 6, 28,ನೇ ವಚನ ಎಂದು ಹೇಳುವಾಗ ಇಡೀ ವಾಕ್ಯಭಾಗಎಂದು ಅರ್ಥವಲ್ಲ. ಈ ವಚನ ಕೊನೆಯಲ್ಲಿ ಹೆಚ್ಚಿನ ಅರ್ಥ ಹೊಂದಿರುತ್ತದೆ. ಭಾಷಾಂತರ ಅಕಾಡೆಮಿಯಲ್ಲಿ ನಾವು ಮಾತನಾಡಬೇಕಾಗಿರುವ ವಚನಗಳನ್ನು ಮಾತ್ರ ಹೇಳಿ ಅದರ ಬಗ್ಗೆ ಮಾತನಾಡುತ್ತೇವೆ.

ಆ ಊರಿನ ಜನರು ಬೆಳಿಗ್ಗೆ ಎದ್ದು ನೋಡಿದಾಗ ಬಾಳನ ಯಜ್ಞವೇದಿ ಎಲ್ಲಾ ಮುರಿದು ಬಿದ್ದಿತ್ತು… (ನ್ಯಾಯಸ್ಥಾಪಕರು 6:28 ULB)


ಅಧ್ಯಾಯಗಳು ಮತ್ತು ವಾಕ್ಯಗಳ ಸಂಖ್ಯೆ.

Translation Manual :: Unlocked Bible Text :: Chapter and Verse Numbers

ವಿವರಣೆ.

ಪ್ರಾರಂಭದಲ್ಲಿ ಸತ್ಯವೇದವನ್ನು ಬರೆದಾಗ ಅಧ್ಯಾಯಗಳಾಗಲಿ, ವಾಕ್ಯಗಳಾಗಲಿ ಯಾವ ಅಂತರವೂ ಇಲ್ಲದೆ ಹಾಗೆ ಬರೆಯಲಾಗಿತ್ತು

ಕ್ರಮೇಣ ಜನರು ಪ್ರತ್ಯೇಕ ಪುಸ್ತಕಗಳು, ಅಧ್ಯಾಯಗಳನ್ನು ಸಂಖ್ಯೆಯ ಮೂಲಕ ಗುರುತಿಸಿದರು. ನಂತರ ಪ್ರತಿಯೊಂದು ವಾಕ್ಯವನ್ನು ಸಂಖ್ಯೆಗೆ ಅನುಗುಣವಾಗಿ ಗುರುತಿಸಿದರು. ಇದರಿಂದ ಬದಲು, ಸತ್ಯವೇದದ ಯಾವಭಾಗ ಓದುತ್ತಿದ್ದೇವೆ ಎಂದು ಗುರುತಿಸಿಕೊಳ್ಳಲು ಸಹಾಯವಾಯಿತು. ಸತ್ಯವೇದವನ್ನು ಅನೇಕರು ಬರೆದಿರುವುದರಿಂದ ಸಂಖ್ಯೆಗಳನ್ನು ಕೊಡುವ ಪದ್ಧತಿಯಲ್ಲಿ ವ್ಯತ್ಯಾಸಗಳು ಕಂಡುಬಂದಿರಲು ಸಾಧ್ಯ ಹಾಗೆಯೇ ವಿವಿಧ ಭಾಷಾಂತರಗಾರರು ಸಹ ತಮ್ಮದೇ ರೀತಿಯಲ್ಲಿ ಸಂಖ್ಯೆನೀಡಿದ್ದಧಾರೆ. ULB ಸತ್ಯವೇದದಲ್ಲಿ ಒಂದು ರೀತಿಯ ಸಂಖ್ಯಾನುಕ್ರಮ ಪದ್ಧತಿ ಇದ್ದರೆ,ಇತರ ಸತ್ಯವೇದದಲ್ಲಿ ಮತ್ತು ನೀವು ಬಳಸುವ ಸತ್ಯವೇದದಲ್ಲಿ ಈ ಪದ್ಧತಿ ಭಿನ್ನವಾಗಿರುತ್ತದೆ. ನೀವು ಬಳಸುತ್ತಿರುವ ಸತ್ಯವೇದವನ್ನೇ, ಅದರ ಸಂಖ್ಯಾನು ಕ್ರಮವನ್ನೇ ಬಳಸಬಹುದು

ಕಾರಣ ಇದೊಂದು ಭಾಷಾಂತರ ತೊಡಕುಗಳು.

ನಿಮ್ಮ ಭಾಷೆ ಮಾತನಾಡುವ ಜನರು ಬೇರೆ ಭಾಷೆಯಲ್ಲಿ ಬರೆದಿರುವ ಸತ್ಯವೇದವನ್ನು ಬಳಸುತ್ತಿರಬಹುದು. ನೀವು ಭಾಷಾಂತರ ಮಾಡುವಾಗ ನೀವು ಬಳಸುವ ಸತ್ಯವೇದಕ್ಕೂ ಅವರು ಬಳಸುತ್ತಿರುವ ಸತ್ಯವೇದಕ್ಕೂ. ಅಧ್ಯಾಯಗಳಲ್ಲಿ, ವಾಕ್ಯಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದರೆ ಜನರಿಗೆ ಅರ್ಥಮಾಡಿಕೊಳ್ಳಲು, ಯಾವ. ಅಧ್ಯಾಯ ಯಾವ ವಾಕ್ಯದ ಬಗ್ಗೆ ನೀವು ಹೇಳುತ್ತಿರುವಿರಿ ಎಂದು ತಿಳಿಯದೆ ಗೊಂದಲವಾಗಬಹುದು.

###ಸತ್ಯವೇದದಿಂದ ಉದಾಹರಣೆಗಳು

14ನಾನು ನಿನ್ನನ್ನು ಬೇಗನೆ ನೋಡುತ್ತೇನೆ ಎಂದು ನಿರೀಕ್ಷಿಸುತ್ತೇನೆ ಆಗ ಮುಖಾಮುಖಿಯಾಗಿ ಮಾತನಾಡೋಣ 15ನಿನಗೆ ಶಾಂತಿ ಇರಲಿ ;. ಸ್ನೇಹಿತರು ನಿನಗೆ ವಂದನೆ ತಿಳಿಸಿದ್ದಾರೆ. ಸ್ನೇಹಿತರನ್ನು ಹೆಸರೆಸರಾಗಿ ವಂದಿಸು. (3 ಯೋಹಾನ 1:14-15 ULB)

3ನೇ ಯೋಹಾನದಲ್ಲಿ ಒಂದೇ ಒಂದು ಅಧ್ಯಾಯವಿರುವುದರಿಂದ ಕೆಲವು ಪ್ರತಿಗಳಲ್ಲಿ ಅಧ್ಯಾಯವನ್ನು ಗುರುತಿಸಿಲ್ಲ. ULB ಮತ್ತು UDB ಸತ್ಯವೇದಗಳಲ್ಲಿ ಅಧ್ಯಾಯ 1.ಎಂದೇ ಗುರುತಿಸಲಾಗಿದೆ. ಇದರೊಂದಿಗೆ ಕೆಲವು ಪ್ರತಿಗಳಲ್ಲಿ 14 ಮತ್ತು 15ನೇ ಎರಡು ವಾಕ್ಯಗಳಾಗಿ ವಿಂಗಡಿಸಿಲ್ಲ. ಅದರ ಬದಲು 14ನೇ ವಾಕ್ಯದಲ್ಲೇ ಎಲ್ಲವನ್ನೂ ತಿಳಿಸಿದ್ದಾರೆ.

ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ಬರೆದದ್ದು 1ಯೆಹೋವನೆ ನನ್ನ ಶತ್ರಗಳು ಎಷ್ಟೋ ಜನರು ಹೆಚ್ಚಾಗಿದ್ದಾರೆ. (ದಾ.ಕೀ. 3:1 ULB)

ಕೆಲವು ಕೀರ್ತನೆಗಳ ಪ್ರಾರಂಭದಲ್ಲಿ ಅದರ ವಿವರ ನೀಡಲಾಗಿದೆ. ULB ಮತ್ತು UDB ಸತ್ಯವೇದಗಳಲ್ಲಿ ನೀಡಿದಂತೆ ಕೆಲವು ಪ್ರತಿಗಳಲ್ಲಿ ವಿವರಗಳಿಗೆ ವಾಕ್ಯದ ಸಂಖ್ಯೆಯನ್ನು ನೀಡಿರುವುದಿಲ್ಲ. ಕೆಲವು ಪ್ರತಿಗಳಲ್ಲಿ ಕೀರ್ತನೆಯ ಪರಿಚಯ ಪ್ರಾರಂಭದಲ್ಲಿ ಬಂದು ವಾಕ್ಯ ಒಂದು ಎಂದು ನಮೂದಿಸಿರುತ್ತದೆ. ಹಾಗೂ ಕೀರ್ತನೆಯ ಪ್ರಾರಂಭ ವಾಕ್ಯಕ್ಕೆ ಎರಡು ಎಂಬ ಸಂಖ್ಯೆ ನೀಡಲಾಗಿರುತ್ತದೆ.

…ಮೇದ್ಯನಾದ ದಾರ್ಯವೇಶನು ರಾಜ್ಯವನ್ನು ಪಡೆದುಕೊಂಡನು ಆಗ ಅವನ ವಯಸ್ಸು ಅರವತ್ತೆರಡು ಆಗಿತ್ತು (ದಾನಿಯೇಲ 5:31 ULB)

ಕೆಲವು ಪ್ರತಿಗಳಲ್ಲಿ ಈ ವಾಕ್ಯವು ಐದನೇ ಅಧ್ಯಾಯದ ಕೊನೆಯ ವಾಕ್ಯವಾಗಿರುತ್ತದೆ. ಕೆಲವು ಪ್ರತಿಗಳಲ್ಲಿ ಈ ವಾಕ್ಯವು ಆರನೇ ಅಧ್ಯಾಯದ ಪ್ರಾರಂಭದ ವಾಕ್ಯವಾಗಿರುತ್ತದೆ.

ಭಾಷಾಂತರ ಕೌಶಲ್ಯಗಳು

  1. ನಿಮ್ಮ ಭಾಷೆಯ ಜನರು ಬೇರೆ ಸತ್ಯವೇದವನ್ನು ಉಪಯೋಗಿಸುತ್ತಿದ್ದರೆ ಅದರಂತೆ ಅಧ್ಯಾಯ ಮತ್ತು ವಾಕ್ಯಗಳ ಸಂಖ್ಯಾನುಕ್ರಮವನ್ನು ಅನುಸರಿಸಬಹುದು. translationStudio APP.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

ನಿಮ್ಮ ಭಾಷೆಯ ಜನರು ಬೇರೆ ಸತ್ಯವೇದವನ್ನು ಉಪಯೋಗಿಸುತ್ತಿದ್ದರೆ ಅದರಂತೆ ಅಧ್ಯಾಯ ಮತ್ತು ವಾಕ್ಯಗಳ ಸಂಖ್ಯಾನುಕ್ರಮವನ್ನು ಅನುಸರಿಸಬಹುದು

ಕೆಳಗೆ ಕೊಟ್ಟಿರುವ ಉದಾಹರಣೆ 3 ನೇ ಯೋಹಾನ ಮೊದಲನೆ ಅಧ್ಯಾಯದಿಂದ ನೀಡಿದೆ. ಕೆಲವು ಸತ್ಯವೇದದಲ್ಲಿ 14 ಮತ್ತು 15ನೇ ವಾಕ್ಯಗಳನ್ನು ಪ್ರತ್ಯೇಕವಾಗಿ ಹೇಳಿದರೆ, ಕೆಲವು ಪ್ರತಿಗಳಲ್ಲಿ ಎರಡನ್ನು 14ನೇ ವಾಕ್ಯದಲ್ಲೇ ತಿಳಿಸಿದೆ. ನೀವು ನಿಮ್ಮ ಇತರ ಸತ್ಯವೇದದಲ್ಲಿ ವಾಕ್ಯ, ಅಧ್ಯಾಯವನ್ನು ಗುರುತಿಸಿದಂತೆ ಗುರುತಿಸಿ.

14ನಾನು ಆದಷ್ಟು ಬೇಗ ನಿಮ್ಮನ್ನು ನೋಡುತ್ತೇನೆ ಎಂದು ನಿರೀಕ್ಷಿಸುತ್ತೇನೆ. ಆಗ ಮುಖಾಮುಖಿಯಾಗಿ ಮಾತನಾಡೋಣ. 15

ನಿಮಗೆ ಶಾಂತಿ ಇರಲಿ. ಸ್ನೇಹಿತರು ನಿನಗೆ ವಂದನೆ ತಿಳಿಸಿದ್ದಾರೆ. ನೀನೂ ಅವರಿಗೆ. ಹೆಸರುಹೆಸರಾಗಿ ವಂದಿಸು (3ನೇ ಯೋಹಾನ 1 1:14-15 ULB)

14ಆದರೆ ನಾನು ಆದಷ್ಟು ಬೇಗ ನಿಮ್ಮನ್ನು ಭೇಟಿಮಾಡುತ್ತೇನೆ.ಆಗ ಮುಖಾಮುಖಿ ಯಾಗಿ ನಿಮ್ಮೊಡನೆ ಮಾತನಾಡುತ್ತೇನೆ. ನಿನಗೆ ಶಾಂತಿ ಇರಲಿ. ಸ್ನೇಹಿತರು ನಿನಗೆ ವಂದನೆ ತಿಳಿಸಿದ್ದಾರೆ. ನೀನು ಸಹ ಅವರಿಗೆ ಹೆಸರುಹೆಸರಾಗಿ ವಂದಿಸು (3 ನೇ ಯೆಹಾನ 14)

ಮುಂದಿನದು 3 ನೇ ದಾವೀದನ ಕೀರ್ತನೆಯಿಂದ ಉದಾಹರಣೆ. ಕೆಲವು ಸತ್ಯವೇದದಲ್ಲಿ ಕೀರ್ತನೆಯ ಪರಿಚಯವನ್ನು ವಾಕ್ಯ 1 ಎಂದು ಗುರುತಿಸುವುದಿಲ್ಲ ಆದರೆ ಕೆಲವು ಪ್ರತಿಯಲ್ಲಿ ವಾಕ್ಯ ಒಂದು ಎಂದು ಗುರುತಿಸುತ್ತಾರೆ. ನಿಮ್ಮ ಇತರ ಸತ್ಯವೇದದಲ್ಲಿ ಇರುವಂತೆ ನೀವು ವಾಕ್ಯಗಳ ಸಂಖ್ಯೆಯನ್ನು ಬರೆಯಬಹುದು.

  • ಇದೊಂದು ದಾವೀದನ ಕೀರ್ತನೆ ಅವನು ತನ್ನ ಮಗ ಅಬ್ಷಾಲೋಮನಿಂದ ತಪ್ಪಿಸಿಕೊಂಡು ಓಡಿಹೋದಾಗ ಬರೆದದ್ದು.

1ಯೆಹೋವನೇ ನನ್ನ ಶತ್ರುಗಳು ಹೆಚ್ಚಾಗಿದ್ದಾರೆ !, **ನನಗೆ ವೈರಿಗಳಾಗಿ ನಿಂತವರು ಬಹಳಮಂದಿ ನನ್ನ ವಿರುದ್ಧವಾಗಿ ನಿಂತಿದ್ದಾರೆ ** 2 ಅನೇಕರು ನನ್ನ ವಿಷಯದಲ್ಲಿ ಹೇಳುವುದೇನೆಂದರೆ, **" “ಅವನಿಗೆ ದೇವರಿಂದ ಸಹಾಯವೂ ಬರುವುದಿಲ್ಲ.” ಸೆಲಾ

1ಇದೊಂದು ದಾವೀದನ ಕೀರ್ತನೆ ಅವನು ತನ್ನ ಮಗ ಅಬ್ಷಾಲೋಮನಿಂದ ತಪ್ಪಿಸಿಕೊಂಡು ಓಡಿಹೋಗುವಾಗ ರಚಿಸಿದ್ದು. 2ಯೆಹೋವನೇ ನನ್ನವೈರಿಗಳು ಎಷ್ಟೋ ಹೆಚ್ಚಿದ್ದಾರೆ. ಅನೇಕರು ನನ್ನ ವಿರುದ್ಧವಾಗಿ ತಿರುಗಿ ನನ್ನನ್ನು ಆಕ್ರಮಿಸಿದ್ದಾರೆ. 3ಅನೇಕರು ನನ್ನ ಬಗ್ಗೆ ಹೀಗೆ ಹೇಳುತ್ತಿದ್ದಾರೆ. "ಅವನಿಗೆ ದೇವರಿಂದ ಸಹಾಯವೂ ಬರುವುದಿಲ್ಲ ಸೆಲಾ


ULB ಮತ್ತು UDB ರಚನಾತ್ಮಕ ಸಂಕೇತಗಳು.

Translation Manual :: Unlocked Bible Text :: unfoldingWord Literal Text (ULT) and unfoldingWord Simplified Text (UST) Formatting Signals

ವಿವರಣೆ

Unlocked Literal Bible (ULB) ಮತ್ತು Unlocked Dynamic Bible (UDB)ಗಳಲ್ಲಿ ಪದಲೋಪ ಗುರುತುಗಳು (ellipsis marks,) ಉದ್ದ ಅಡ್ಡಗೆರೆಗಳು (long dashes) ಮತ್ತು ಪರಿಚ್ಛೇದದ ಗುರುತುಗಳು (indentation) ವಾಕ್ಯಭಾಗದಲ್ಲಿರುವ ಮಾಹಿತಿಗಳು ಹೇಗೆ ಒಂದರೊಡನೊಂದು ಸಂಬಂಧಪಟ್ಟಿದೆ ಹಾಗೂ ಹೊಂದಿಕೊಂಡಿದೆ ಎಂದು ತೋರಿಸಿಕೊಡುತ್ತದೆ.

(ಪದಲೋಪ ಗುರುತುಗಳು) Ellipsis marks

ಶಬ್ದಾರ್ಥ ನಿರೂಪನೆ / ವ್ಯಾಖ್ಯಾನ ಪದಲೋಪ ಗುರುತುಗಳು - Ellipsis marks (…) ವಾಕ್ಯವನ್ನು ಹೇಳಲು ಅಥವಾ ಬರೆಯಲು ಪ್ರಾರಂಭಿಸಿ ಇನ್ನು ಅದನ್ನು ಸಂಪೂರ್ಣವಾಗಿ ಮುಗಿಸಿಲ್ಲ ಎಂಬುದನ್ನು ತೋರಿಸಲುಬಳಸುವಂತಾದ್ದು ಅಥವಾ ಲೇಖಕನು ಇನ್ನೊಬ್ಬರು ಹೇಳಿದ ಮಾತುಗಳನ್ನು /ವಾಕ್ಯಗಳನ್ನು ಬಳಸಿಕೊಂಡು ಸಂಪೂರ್ಣವಾಗಿ ಹೇಳದೆ ಇನ್ನೂ ಇದೆ ಎಂಬುದನ್ನು ಸೂಚಿಸಲು ಬಳಸುವಂತದ್ದು. ಮತ್ತಾಯ 9:4-6,ರಲ್ಲಿ ಇಂತಹ ಪದಲೋಪ ಗುರುತುಗಳನ್ನು ಬಳಸಿಕೊಂಡಿರುವುದಕ್ಕೆ ಉದಾಹರಣೆಗಳಿವೆ. ಯೇಸುಶಾಸ್ತ್ರಿ ಪರಿಸಾಯರೊಂದಿಗೆ ಮಾತನಾಡುತ್ತಿದ್ದಾಗ ಒಬ್ಬ ಪಾರ್ಶ್ವವಾಯು ವ್ಯಕ್ತಿಯನ್ನು ಮಾತನಾಡುತ್ತಿದ್ದ ಸಂದರ್ಭ ಒಂದಕ್ಕೆ ಒಳ್ಳೆಯ ಉದಾಹರಣೆ.

ಇವನು ದೇವ ದೂಷಣೆ ಮಾಡುತ್ತಿದ್ದಾನೆ ಎಂದು ತಮ್ಮೊಳಗೆ ಮಾತನಾಡಿಕೊಂಡರು. ಯೇಸು ಅವರ ಅಲೋಚನೆಗಳನ್ನು ತಿಳಿದು,ನೀವು ಏಕೆ ನಿಮ್ಮಮನಸ್ಸಿನಲ್ಲಿ ಕೆಟ್ಟ ಅಲೋಚನೆಗಳನ್ನು ಮಾಡುತ್ತೀರಿ ? ಎಂದು ಕೇಳಿದನು ‘ಯಾವುದು ಸುಲಭ ? ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿದೆ ಅನ್ನುವುದೋ ಎದ್ದು ನಡೆ ಅನ್ನುವುದೋ?’ ಆದರೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂದು ನಿಮಗೆ ತಿಳಿಯಬೇಕು "ಎಂದು ಹೇಳಿ ಪಾರ್ಶ್ವವಾಯು ರೋಗಿಯನ್ನು ನೋಡಿ “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಅಂದನು (ULB) ಮಾರ್ಕ 11:31-33,

ರಲ್ಲಿ ಪದಲೋಪಗುರುತುಗಳು ಆ ಮಹಾಯಾಜಕರು ಶಾಸ್ತ್ರಿಗಳು ತಾವು ಹೇಳುವ ವಾಕ್ಯಗಳನ್ನು ಸಂಪೂರ್ಣ ಮಾಡಲಿಲ್ಲ ಅಥವಾ ಮಾರ್ಕನು ಅವರು ಹೇಳಿದ ವಾಕ್ಯಗಳನ್ನು ಸಂಪೂರ್ಣವಾಗಿ ದಾಖಲಿಸಲಿಲ್ಲ ಎಂಬುದನ್ನು ಸೂಚಿಸುತ್ತದೆ.

ಆಗ ಅವರು – ಪರಲೋಕದಿಂದ ಬಂತೆಂದು ನಾವು ಹೇಳಿದರೆ " ಹಾಗಾದರೆ ನೀವು ಅವನನ್ನು ಏಕೆ ನಂಬಲಿಲ್ಲ ? ಅಂದಾನು " " ಮನುಷ್ಯರಿಂದ ಬಂತೆಂದು ಹೇಳಿದರೆ ಏನಾಗುವುದೋ ?" ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. ಯೆಹೋವನು ಪ್ರವಾದಿ ಎಂದು ಜನರೆಲ್ಲರೂ ಯಾವ ಅನುಮಾನವಿಲ್ಲದೆ ತಿಳಿದುಕೊಂಡಿದ್ದರಿಂದ ಇವರಿಗೆ ಜನರ ಭಯವಿತ್ತು.

ಆದುದರಿಂದ ಅವರು" ನಾವು ಅರಿಯೆವು " ಎಂದು ಯೇಸುವಿಗೆ ಉತ್ತರ ಕೊಟ್ಟರು. ಆಗ ಯೇಸು ಅವರಿಗೆ " ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂದು ನಾನು ನಿಮಗೆ ಹೇಳುವುದಿಲ್ಲ " ಅಂದನು (ULB)

ಉದ್ದ ಅಡ್ಡ ಗೆರೆಗಳು (Long dashes (—)

ವ್ಯಾಖ್ಯಾನ - ಶಬ್ಧಾರ್ಥ ನಿರೂಪಣೆ - Long dashes (—) /ಉದ್ದ ಅಡ್ಡ ಗೆರೆಗಳು ಮೊದಲು ಬಂದ ವಿಚಾರಗಳ ಬಗ್ಗೆ ತಕ್ಷಣವೇ ನೀಡಬೇಕಾದ ಮಾಹಿತಿಯನ್ನು ಪರಿಚಯಿಸುವಾಗ (—) ಬಳಸುತ್ತೇವೆ. ಉದಾಹರಣೆಗೆ.

ಆಗ ಇಬ್ಬರು ಹೊಲದಲ್ಲಿರುವರು " ಒಬ್ಬರು ತೆಗೆದುಕೊಳ್ಳಲ್ಪಡುವನು, ಒಬ್ಬನು ಬಿಡಲ್ಪಡುವನು" ಇಬ್ಬರು ಹೆಂಗಸರು ಬೀಸುಕಲ್ಲಿನ ಮುಂದೆ ಕುಳಿತು ಬೀಸುತ್ತಿರುವರು ಒಬ್ಭಳು ತೆಗೆದು ಕೊಳ್ಳಲ್ಪಡುವಳು ಒಬ್ಬಳು ಬಿಡಲ್ಪಡುವಳು. ಹೀಗಿರಲು ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದುದರಿಂದ ಎಚ್ಚರವಾಗಿರಿ. (ಮತ್ತಾಯ 24:40-41 ULB)

Parentheses / ಆವರಣ/BRACKET. “()”

ವ್ಯಾಖ್ಯಾನ - Parentheses ಆವರಣ/BRACKET “()” ವಾಕ್ಯದಲ್ಲಿ ಬರುವ ಪದಗಳ ಬಗ್ಗೆ ಮಾಹಿತಿಯ ವಿವರಣೆ ಅಥವಾ ಅದಕ್ಕೆ ಸಂಬಂಧಿಸಿ ಇನ್ನೊಂದು ಸಮಾನ ಅರ್ಥ/ ಪದನಂತರ ತಿಳಿಸುವಂತದ್ದು. ಇದು ಹಿನ್ನೆಲೆಯಾಗಿ ಬರುವ ಮಾಹಿತಿಯಾಗಿದ್ದು ಓದುಗರಿಗೆ ಪರಿಪೂರ್ಣವಾಗಿ ಅರ್ಥವಾಗುವಂತೆ ಮಾಡಲು ಲೇಖಕನು ಬಳಸುವ ವಿಧಾನ. ಯೋಹಾನ 6:6,

ರಲ್ಲಿ ಯೇಸು ತಾನು ಏನು ಮಾಡಬೇಕೆಂಬುದನ್ನು ಮೊದಲೇ ತಿಳಿದವನಾಗಿದ್ದ ಎಂಬುದನ್ನು ತಾನು ಬರೆದ ಕಥೆಯಲ್ಲಿ ವ್ಯಕ್ತಪಡಿಸಿದ್ದಾನೆ. ಇದನ್ನು ಆವರಣದಲ್ಲಿ “()” ಬರೆಯಲಾಗಿದೆ.

5ಯೇಸು ಕಣ್ಣೆತ್ತಿ ನೋಡಿದಾಗ ಬಹುಜನರ ಗುಂಪು ತನ್ನ ಬಳಿಗೆ ಬರುವುದನ್ನು ಕಂಡು – ಇವರ ಊಟಕ್ಕೆ ಎಲ್ಲಿಂದ ರೊಟ್ಟಿ ಕೊಂಡು ತರೋಣ ? ಎಂದು ಫಿಲಿಪ್ಪನನ್ನು ಕೇಳಿದನು 6(ಯೇಸು ತಾನು ಮಾಡಬೇಕೆಂದಿದ್ದು ತನಗೆ ತಿಳಿದಿದ್ದರೂ ಅವನನ್ನು ಪರೀಕ್ಷಿಸುವುದಕ್ಕೆ ಈ ಮಾತನ್ನು ಹೇಳಿದನು .) 7ಅದಕ್ಕೆ ಫಿಲಿಪ್ಪನು ಒಬ್ಬೊಬ್ಬನಿಗೆ ಸ್ವಲ್ಪಸ್ವಲ್ಪ ಸಿಕ್ಕಬೇಕಾದರೆ ಇನ್ನೂರು ಹಣದ ರೊಟ್ಟಿಯಾದರೂ ಸಾಲದು ಅಂದನು." (ಯೋಹಾನ 6:5-7 ULB)

ಕೆಳಗೆ ಆವರಣದಲ್ಲಿ ಕೊಟ್ಟಿರುವ ಮಾತುಗಳು ಯೇಸು ಹೇಳಿದ ಮಾತುಗಳಲ್ಲ, ಆದರೆ ಮತ್ತಾಯನು ಓದುಗರಿಗೆ ಹೇಳಿದ ಮಾತುಗಳು. ಯೇಸು ಮಾತನಾಡುತ್ತಿದ್ದ ಮಾತುಗಳನ್ನು ಓದುಗರು ಅರ್ಥ ಮಾಡಿಕೊಳ್ಳಲು, ಆಲೋಚಿಸಲು, ಅಭಿವ್ಯಕ್ತಿಗೊಳಿಸಲು ತಿಳಿದುಕೊಳ್ಳುವಂತೆ ಎಚ್ಚರಿಸಿದ್ದಾನೆ.

“ಆದುದರಿಂದ ಪ್ರವಾದಿಯಾದ ದಾನಿಯೇಲನು ಹೇಳಿದಂತಹ ಹಾಳುಮಾಡುವಂತಹ ಅಸಹ್ಯ ವಸ್ತುವು ಪವಿತ್ರ ಸ್ಥಾನದಲ್ಲಿ ನಿಂತಿರುವುದನ್ನು ನೀವು ಕಾಣುವಾಗ " (ಇದನ್ನು ಓದುವವನು ತಿಳಿದುಕೊಳ್ಳಲಿ ), ಯುದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗೆ ಇರುವುದನ್ನು ತೆಗೆದುಕೊಳ್ಳಲು ಇಳಿಯದೆ, ಹೊಲದಲ್ಲಿ ಇರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವುದಕ್ಕೆ ಮನೆಗೆ ಹಿಂತಿರುಗದೆ ಓಡಿಹೋಗಲಿ.” (ಮತ್ತಾಯ 24:15-18 ULB)

Indentation/ ಪರಿಚ್ಛೇದದ ಗುರುತುಗಳು.

ವ್ಯಾಖ್ಯಾನ - ವಾಕ್ಯಭಾಗಗಳು ಪರಿಚ್ಛೇದಗಳಾಗಿ ಬರುವಾಗ ವಾಕ್ಯಭಾಗದ ಸಾಲುಗಳು ಪ್ರಾರಂಭವಾಗಿ ಮೇಲಿನ ಮತ್ತು ಕೆಳಗಿನ ವಾಕ್ಯಗಳನ್ನು ವಿಂಗಡಿಸಿ ಗುರುತಿಸಲ್ಪಡುತ್ತದೆ. ಇದು ಸಾಮಾನ್ಯವಾಗಿ ಪದ್ಯಭಾಗಗಳಲ್ಲಿ, ಕೆಲವು ಪದಗಳನ್ನು ಬಳಸಲಾಗುತ್ತದೆ,.ಯಾವ ಸಾಲಿನಿಂದ ಪ್ರಾರಂಭವಾಗಬೇಕು,ಯಾವ ಸಾಲಿನಲ್ಲಿ ಕೊನೆಗೊಳ್ಳಬೇಕು, ಮಧ್ಯಭಾಗದಲ್ಲಿ ಯಾವಯಾವ ಸಾಲಿನಲ್ಲಿ ಎಲ್ಲೆಲ್ಲಿ ನಿಲ್ಲಿಸ ಬೇಕು ಎಲ್ಲಿಮತ್ತು ಪ್ರಾರಂಭಿಸಬೇಕು ಎಂಬುದನ್ನು ತಿಳಿಸಲು ಬಳಸಲಾಗುತ್ತದೆ. ಉದಾಹರಣೆಗೆ:

5 ನಿಮಗೆ ಯುದ್ದದಲ್ಲಿ ಮುಖ್ಯಸ್ಥರಾಗಿ ಸಹಾಯಕರಾಗಿರ ಬೇಕಾದವರು ಯಾರು ಯಾರೆಂದರೆ     6ರೂಬೆನ್ ಕುಲದಿಂದ ಶೆದೇಯಾದನ ಮಗನಾದ ಎಲೀಚೂರ್     6ಸಿಮೆಯೋನ್ ಕುಲದಿಂದ ಚೂರೀಷದ್ದೈಯ ಮಗನಾದ ಶೆಲುಮೀಯೇಲ್.     7</sup ಯೆಹೂದನ ಕುಲದಿಂದ ಅಮಿನಾದಾಬನ ಮಗನಾದ ನಹಶೂನ್ (ಅರಣ್ಯಕಾಂಡ 1:5-7 ULB)


ಸತ್ಯವೇದವನ್ನು ಭಾಷಾಂತರಿಸುವಾಗ ULB ಮತ್ತು UDBಯನ್ನು ಹೇಗೆ ಬಳಸಬಹುದು ?

Translation Manual :: Unlocked Bible Text :: How to Use the ULT and UST when Translating the Bible

ಭಾಷಾಂತರಗಾರರಾಗಿ ULB ಮತ್ತು UDBಯನ್ನು ಹೇಗೆ ಉತ್ತಮರೀತಿಯಲ್ಲಿ ಬಳಸಬಹುದು ಎಂಬುದು ಈ ಕೆಳಗೆ ಕೊಟ್ಟಿರುವ ULB ಮತ್ತು UDB ನಡುವೆ ಇರುವ ವ್ಯತ್ಯಾಸವನ್ನು ನೋಡಿ ತಿಳಿಯಬಹುದು ಇದರೊಂದಿಗೆ ಭಾಷಾಂತರ ಆಗುತ್ತಿರುವ ಭಾಷೆಯಲ್ಲಿ ಹೇಗೆ ಉತ್ತಮ ರೀತಿಯಲ್ಲಿ ಇಂತಹ ವ್ಯತ್ಯಾಸಗಳನ್ನು ಪರಿಹಾರ ಮಾಡಬಹುದು ಎಂದು ತಿಳಿದುಕೊಳ್ಳಬೇಕು.

ಉದ್ದೇಶಗಳ ಕ್ರಮ

ಮೂಲ ಗ್ರಂಥದಲ್ಲಿ ಇರುವ ಕಲ್ಪನೆಗಳೇ ULBಯ ಕಂಡುಬರುವಂತೆ ಅದೇ ಕ್ರಮವನ್ನು ಹೊಂದಿರುತ್ತದೆ.

UDB ಉದ್ದೇಶಗಳ ಕ್ರಮವನ್ನು ಇಂಗ್ಲೀಷ್ ಭಾಷೆಯಲ್ಲಿನ ಸಹಜವಾದ ಕ್ರಮದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ ಅಥವಾ ಅದು ತಾರ್ಕಿಕವಾದ ಕ್ರಮವನ್ನು ಅಥವಾ ಸಮಯ, ಸನ್ನಿವೇಶಗಳಿಗೆ ಅನುಗುಣವಾದ ಕ್ರಮವನ್ನು ಅನುಸರಿಸುತ್ತದೆ.

ನೀವು ಭಾಷಾಂತರ ಮಾಡುವಾಗ ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ವಿಚಾರಗಳು ಕ್ರಮವಾಗಿ ಬರುವಂತೆ ನೋಡಿಕೊಳ್ಳಬೇಕು ಘಟನಾವಳಿಗಳ ಕ್ರಮ ಗಮನಿಸಿ

1ಯೇಸುವಿನ ಸೇವಕನಾದ ಪೌಲನನ್ನು ಅಪೋಸ್ತಲನಾಗುವುದಕ್ಕೆ ಕರೆಯಲ್ಪಟ್ಟವನು. ದೇವರ ಸುವಾರ್ತೆಯನ್ನು ಸಾರುವುದಕ್ಕೆ ನೇಮಿಸಲ್ಪಟ್ಟವನೂ ಆಗಿರುವ..7 ಪೌಲನು ರೋಮಾಪುರದವರಿಗೆ ಬರೆದ ಪತ್ರದಲ್ಲಿ “ ಯೇಸು ಕ್ರಿಸ್ತನವರಾಗುವುದಕ್ಕೆ ಕರೆಯಲ್ಪಟ್ಟ ನೀವೂ ಸಹ ಅನ್ಯಜನರೊಳಗಿನವರಾದುದರಿಂದ ನಿಮಗೆ ಬರೆಯುತ್ತಿದ್ದೇನೆ.” ಎಂದನು. (ರೋಮಾಪುರದವರಿಗೆ ಬರೆದ ಪತ್ರ 1:1,7 ULB)
1ಪೌಲನಾದ ನಾನು ಯೇಸುಕ್ರಿಸ್ತನ ಸೇವಕನಾಗಿ ರೋಮಾಪುರದಲ್ಲಿನ ವಿಶ್ವಾಸಿಗಳಿಗಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ. (ರೋಮಾಪುರದವರಿಗೆ 1:1 UDB)

ULBಯಲ್ಲಿ ಪೌಲನ ಶೈಲಿಯಲ್ಲಿ ಪತ್ರದ ಪ್ರಾರಂಭವಾಗಿದೆ. ಏಳನೇ ವಾಕ್ಯದವರೆಗೆ ಪೌಲನು ತನ್ನ ಶ್ರೋತೃಗಳು ಯಾರು ಎಂದು ಹೇಳಿಲ್ಲ. ಹೇಗಿದ್ದರೂ UDB ಇಂಗ್ಲೀಷ್ ಭಾಷೆಯಲ್ಲಿ ಹೆಚ್ಚು ಸಹಜವಾಗಿರುವಂತಹ ಮತ್ತು ಇಂದಿನ ಇತರ ಭಾಷೆಗಳಲ್ಲಿ ಈ ಶೈಲಿಯನ್ನು ಅನುಸರಿಸುತ್ತದೆ.

ಅರ್ಥವಾಗುವಂತಹ ಮಾಹಿತಿ.

ULBಯು ‘ಅರ್ಥವಾಗುವತಂತಹ‘ ಉದ್ದೇಶಗಳನ್ನು ಓದುಗರಿಗೆ ಅರ್ಥವಾಗುವಂತೆ ಪ್ರಾಮುಖ್ಯತೆ ನೀಡಿ ಭಾಷಾಂತರ ಮಾಡಿದೆ. UDB ಯಲ್ಲಿ ಆಗಿಂದಾಗ್ಗೆ ಇತರ ಉದ್ದೇಶಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ. UDB ಇಂತಹ ಉದ್ದೇಶಗಳನ್ನು ಸ್ಪಷ್ಟವಾಗಿ ಹೇಳಲು ಕಾರಣನೀವು ಭಾಷಾಂತರ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂಬುದೇ. ನಿಮ್ಮ ಶ್ರೋತೃಗಳು ಮತ್ತು ಓದುಗರು ಈ ಮಾಹಿತಿಗಳನ್ನು ಕ್ರಮವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುವುದು ಅಗತ್ಯ.

ಯಾವ ಮಾಹಿತಿಯನ್ನು ಸರಿಸದೆ ಹೋದರೂ ನಿಮ್ಮ ಶ್ರೋತೃಗಳು ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂದು ನೀವು ಭಾಷಾಂತರ ಮಾಡುವಾಗ ಗಮನದಲ್ಲಿಟ್ಟು ನಿರ್ಧರಿಸಬೇಕು. ನಿಮ್ಮ ಓದುಗರು ಅಥವಾ ಶ್ರೋತೃಗಳು ಸ್ಪಷ್ಟವಾದ ಮಾಹಿತಿಯನ್ನು ನೀಡದೆ ಇದ್ದರೂ ಅರ್ಥಮಾಡಿಕೊಳ್ಳಲು ಸಮರ್ಥರಾದರೆ ಆಗ ಸ್ಪಷ್ಟ ಮಾಹಿತಿಯನ್ನು ಬಳಸಿ. ನಿಮ್ಮ ಶ್ರೋತೃಗಳು ಹೇಗಿದ್ದರೂ ಅರ್ಥಮಾಡಿಕೊಳ್ಳುತ್ತಾರೆಂದು ಭಾವಿಸಿ ಅರ್ಥವಾಗುವಂತಹ ಮಾಹಿತಿಯನ್ನು ಉಲ್ಲಂಘಿಸಿ ಭಾಷಾಂತರಮಾಡುವುದು ಸರಿಯಲ್ಲ ಎಂಬುದು ನಿಮ್ಮ ನೆನಪಿನಲ್ಲಿರಲಿ (see Assumed Knowledge and Implicit Information)

ಯೇಸು ಸಿಮೋನನಿಗೆ - " ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವ ಬೆಸ್ತನಾಗವಿ " ." (ಲೂಕ 5:10 ULB)

ಆದರೆ ಯೇಸು ಸಿಮೋನನಿಗೆ " ಅಂಜಬೇಡ " ಎಂದು ಹೇಳಿದನು. " ನೀವು ಇದುವರೆಗೂ ಮೀನನನ್ನು ಹಿಡಿಯುತ್ತಿದ್ದಿರಿ, ಆದರೆ ಇಂದಿನಿಂದ ಮನುಷ್ಯರನ್ನು ಹಿಡಿಯುವವರಾಗಿ ನನ್ನ ಶಿಷ್ಯರಾಗುವಿರಿ." (ಲೂಕ5:10 UDB)

ಇಲ್ಲಿರುವ ವಾಕ್ಯಭಾಗಗಳಲ್ಲಿ UDB ಓದುಗರಿಗೆ ಸಿಮೋನನು ಮೀನು ಹಿಡಿಯುವವರಿಗಾಗಿ ವ್ಯಾಪಾರ ಮಾಡುತ್ತಿದ್ದನು ಎಂದು ನೆನೆಪಿಸುತ್ತದೆ. ಇದರೊಂದಿಗೆ ಯೇಸು ಸಿಮೋನನು ಮಾಡುತ್ತಿದ್ದ ಕೆಲಸಕ್ಕೂ ಮುಂದೆ ಮಾಡುವ ಕೆಲಸಕ್ಕೂ ಇರುವ ಸಮಾನತೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಇದರೊಂದಿಗೆ ಯೇಸು ಸಿಮೋನನನ್ನು"ಮನುಷ್ಯರನ್ನು ಹಿಡಿಯುವವರಾಗ ಬೇಕು " ಎಂದು ಹೇಳುವಾಗ ಅವನ ಉದ್ದೇಶವೇನೆಂದರೆ (ULB), ಮುಂದೆ ತನ್ನ ಜನರನ್ನು ನಡೆಸುವ ನಾಯಕನಾಗಬೇಕೆಂದು ಬಯಸುತ್ತಾನೆ " (UDB).

ಮೈಯೆಲ್ಲಾ ಕುಷ್ಠರೋಗದಿಂದ ತುಂಬಿದ ಮನುಷ್ಯನೊಬ್ಬನು ಯೇಸುವನ್ನು ಕಂಡೊಡನೆ ಆತನಿಗೆ ಅಡ್ಡಬಿದ್ದು - " ಸ್ವಾಮಿ ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ .ಎಂದು ಬೇಡಿಕೊಂಡನು " (ಲೂಕ 5:12 ULB)

ಅವನು ಯೇಸುವನ್ನು ನೋಡಿದೊಡನೆ ಆತನಿಗೆ ಸಾಷ್ಠಾಂಗವೆರೆಗಿದನು ,ಯೇಸುವನ್ನು ಕುರಿತು ಅವನೊಂದಿಗೆ " ಸ್ವಾಮಿ, ನೀನು ನನ್ನನ್ನು ಶುದ್ಧಮಾಡಿ ಗುಣಪಡಿಸಬಲ್ಲೆ ಏಕೆಂದರೆ ನೀನು ಮನಸ್ಸು ಮಾಡಿದರೆ ನನ್ನನ್ನು ಗುಣಪಡಿಸುವ , ಸಾಮರ್ಥ್ಯ ಹೊಂದಿರುವೆ "!" (ಲೂಕ 5:12 UDB)

ಇಲ್ಲಿ UDB ಸತ್ಯವೇದದಲ್ಲಿ ಆ ಕುಷ್ಠರೋಗಿಯು ಆಕಸ್ಮಿಕವಾಗಿ ಯೇಸುವಿನ ಕಾಲಿಗೆ ಅಡ್ಡಬೀಳಲಿಲ್ಲ. ಅದರ ಬದಲು ಎಲ್ಲವನ್ನೂತಿಳಿದೇ ಅಡ್ಡಬಿದ್ದು ಗುಣಪಡಿಸಲು ಕೇಳಿದ ಇದರೊಂದಿಗೆ UDB ಸತ್ಯವೇದದಲ್ಲಿ ಅವರು ಯೇಸುವನ್ನು ಕುರಿತು ತನ್ನನ್ನು ಗುಣಪಡಿಸುವಂತೆ ಹೇಳಿದ ಎಂಬುದನ್ನು ಸ್ಪಷ್ಟಪಡಿಸಿದೆ. ULB ಸತ್ಯವೇದದಲ್ಲಿ ಅವನು ಸ್ಪಷ್ಟವಾಗಿ ತನ್ನ ಕೋರಿಕೆಯನ್ನು ತಿಳಿಸಿದ.

###ಸಾಂಕೇತಿಕವಾದ ಕ್ರಿಯೆಗಳು.

ವ್ಯಾಖ್ಯಾನ - ಎಂಬುದು ನಿರ್ದಿಷ್ಟ ವಿಷಯವನ್ನು ತಿಳಿಸಲು ಕೆಲವು ಸಾಂಕೇತಿಕವಾದ ಕ್ರಿಯೆಗಳ ಮೂಲಕ ತಿಳಿಸುವುದನ್ನು ಸಾಂಕೇತಿಕ ಕ್ರಿಯೆಯೆಂದು ಕರೆಯುತ್ತಾರೆ.

ULB ಸತ್ಯವೇದದಲ್ಲಿ ಯಾವುದೇ ವಿವರಣೆ ಇಲ್ಲದೆ ಪದೇಪದೇ ಇಂತಹ ಸಾಂಕೇತಿಕ ಕ್ರಿಯೆಗಳನ್ನು ಬಳಸಲಾಗುತ್ತದೆ. UDB ಯಲ್ಲಿ ಆಗ್ಗಿಂದಾಗ್ಗೆ ಸಾಂಕೇತಿಕ ಪ್ರಕ್ರಿಯೆಗಳನ್ನು ಅರ್ಥ, ವ್ಯಾಖ್ಯಾನಗಳ ಮೂಲಕ ತಿಳಿಸಲಾಗುವುದು.

ನೀವು ಭಾಷಾಂತರಿಸುವಾಗ ನಿಮ್ಮ ಓದುಗರು ಸಾಂಕೇತಿಕ ಕ್ರಿಯೆಗಳನ್ನು ಸರಿಯಾಗಿ ಅರ್ಥಮಾಡಿ ಕೊಳ್ಳುತ್ತಾರೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ನಿಮ್ಮ ಓದುಗರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ UDB ಯಲ್ಲಿ ಮಾಡಿದಂತೆ ಮಾಡಬೇಕು.(ಸಾಂಕೇತಿಕ ಕ್ರಿಯೆಗಳು ನೋಡಿ)

ಮಹಾ ಯಾಜಕನು ತನ್ನ ಅಂಗಿಗಳನ್ನು ಹೆಣೆದುಕೊಂಡನು (ಮಾರ್ಕ 14:63 ULB)

ಯೇಸುವಿನ ಮಾತನ್ನು ಕೇಳಿ ಮಹಾಯಾಜಕನು ದಿಗಿಲುಗೊಂಡು ತನ್ನ ಮೇಲಂಗಿಗಳನ್ನು ಹೆಣೆದುಕೊಂಡನು.(ಮಾರ್ಕ 14:63 UDB)

ಇಲ್ಲಿ ಮಹಾಯಾಜಕನು ತನ್ನ ಮೇಲಂಗಿಯನ್ನು ಹರಿದುಕೊಂಡದ್ದು ಆಕಸ್ಮಿಕವಾದ ಘಟನೆಯಲ್ಲ ಎಂಬುದನ್ನು UDB ಸ್ಪಷ್ಟಪಡಿಸುತ್ತದೆ. ಅವನು ಬಹುಷಃ ತನ್ನ ಮೇಲಂಗಿಯನ್ನು ಹರಿದುಕೊಳ್ಳುವ ಮೂಲಕ ತನ್ನ ಸಿಟ್ಟನ್ನು ಇಲ್ಲವೆ ದುಃಖವನ್ನು ವ್ಯಕ್ತಪಡಿಸಲು ಇರಬಹುದು ಎಂಬುದನ್ನು UDB ತಿಳಿಸುತ್ತದೆ.

ಏಕೆಂದರೆ ಮಹಾಯಾಜಕನು ತನ್ನ ಮೇಲಂಗಿಯನ್ನು ಹರಿದುಕೊಂಡದ್ದು ಖಚಿತ ಎಂಬುದನ್ನು UDB ತಿಳಿಸುತ್ತದೆ. ಆದುದರಿಂದ ಸಾಂಕೇತಿಕವಾದ ಪ್ರಕ್ರಿಯೆ ನಡೆಯದಿದ್ದರೆ ನೀವು ಕ್ರಿಯೆಯಬಗ್ಗೆ ಹೇಳುವ / ಬರೆಯುವ ಅಗತ್ಯವಿರುವುದಿಲ್ಲ. ಇದಕ್ಕೆ ಉದಾಹರಣೆಗಳು ಈ ಕೆಳಗೆ ನೀಡಿರುವಂತಿದೆ.

ಇಂತದನ್ನು ನಿಮ್ಮ ದೇಶಾಧಿಪತಿಗೆ ಒಪ್ಪಿಸಿ, ಆಗ ನಿಮ್ಮನ್ನು ಮೆಚ್ಚುವನೋ ?ಇಲ್ಲವೇ ನಿಮ್ಮ ಬಗ್ಗೆ ಪ್ರಸನ್ನನಾಗಿ ಗೌರವಿಸಿ ಸ್ವೀಕರಿಸುವನೋ ? ?" (ಮಲಾಕಿ 1:8 ULB)

ನೀವು ನಿಮ್ಮ ದೇಶಾಧಿಪತಿಗೆ ಇಂತಹ ಕಾಣಿಕೆಗಳನ್ನು ಅರ್ಪಿಸುವ ಧೈರ್ಯಮಾಡಲಾರಿರಿ. ಅವನು ಅವುಗಳನ್ನು ಸ್ವೀಕರಿಸಲಾರ. ಅವನು ನಿಮ್ಮ ಇಂತಹ ಕಾಣಿಕೆಯಿಂದ ಅಸಮಾಧಾನಗೊಳ್ಳಬಹುದು ಮತ್ತುನಿಮ್ಮ ಕಾರ್ಯವನ್ನು ನಿರೀಕ್ಷಿಸುವುದಿಲ್ಲ.! (ಮಲಾಕಿ i 1:8 UDB)

“ನಿನ್ನನ್ನು ಮೆಚ್ಚಿ, ಪ್ರಸನ್ನನಾಗಿ ಗೌರವಿಸಿ ಸ್ವೀಕರಿಸುವನು,” ಎಂಬ ಸಾಂಕೇತಿಕ ಪ್ರತಿಕ್ರಿಯೆULB,ಯಲ್ಲಿ ತಿಳಿಸಿದಂತೆ UDB:ಯಲ್ಲೂ ಇದೆ. ನಿಮ್ಮ ಕಾರ್ಯದ ಬಗ್ಗೆ ಅವನು ಅಸಮಾಧಾನಗೊಳ್ಳುವುದರೊಂದಿಗೆ, ನಿಮ್ಮ ಕಾರ್ಯವನ್ನು ನಿರೀಕ್ಷಿಸುವುದಿಲ್ಲ. ಮಲಾಕಿ ಇಲ್ಲಿ ಯಾವ ಒಂದು ನಿರ್ಧಿಷ್ಟವಾದ ಕಾರ್ಯವನ್ನು ಹೇಗೆ ನಡೆಯಿತೋ ಎಂದು ಹೇಳಲ್ಲಿಲ್ಲ ಅದ್ದರಿಂದ ನೀವು ಅದನ್ನು ಈ ರೀತಿ ಹೇಳಬಹುದು. ಈ ಘಟನೆಯಿಂದ ವ್ಯಕ್ತವಾದ ಉದ್ದೇಶವನ್ನು ಕುರಿತು ಹೇಳುವುದೇ ಮಲಾಕಿಯ ಉದ್ದೇಶ.

ಕರ್ಮಣಿ ಕ್ರಿಯಾಪದಗಳ ನಮೂನೆಗಳು.

ಹಿಬ್ರೂ ಮತ್ತು ಗ್ರೀಕ್ ಸತ್ಯವೇದಗಳಲ್ಲಿ ಕರ್ಮಣಿ ಕ್ರಿಯಾಪದಗಳ ನಮೂನೆಗಳು ಬಳಕೆಯಾದರೂ ಇತರ ಭಾಷೆಗಳಲ್ಲಿ ಬಳಸುವ ಸಾಧ್ಯತೆ ಇರುವುದಿಲ್ಲ. ಮೂಲಭಾಷೆಯಲ್ಲಿ ಬಳಸಿದಂತೆ ULBಯಲ್ಲಿ ಇಂತಹ ಕರ್ಮಣಿ ಕ್ರಿಯಾಪದ ರೂಪಗಳನ್ನು ಬಳಸಲಾಗುತ್ತದೆ. ಆದರೆ UDBಯಲ್ಲಿ ಇಂತಹ ಕರ್ಮಣಿ ಕ್ರಿಯಾಪದ ನಮೂನೆಗಳನ್ನು ಬಳಸುವುದಿಲ್ಲ. ಇದರ ಫಲಿತಾಂಶದಿಂದ UDBಯಲ್ಲಿ ಅನೇಕ ಪದಗುಚ್ಛ ಗಳನ್ನು ಮರುರಚನೆ ಮಾಡುತ್ತದೆ.

ನೀವು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಇಂತಹ ಘಟನೆಗಳನ್ನು ಅಥವಾ ವಾಕ್ಯಗಳನ್ನು ಬಳಸುವಾಗ ಕರ್ಮಣಿ ಕ್ರಿಯಾಪದಗಳ ಅಭಿವ್ಯಕ್ತಿಯನ್ನು ಹೇಗೆ ಬಳಸಬಹುದು ಎಂದು ನಿರ್ಧರಿಸಬೇಕು. ಉದಾಹರಣೆಗೆ ಕೆಳಗೆ ನಮೂದಿಸಿರುವ ವಾಕ್ಯಗಳನ್ನು ಗಮನಿಸಿ. ನೀವು ಇಂತಹ ಕರ್ಮಣಿ ಕ್ರಿಯಾಪದ ನಮೂನೆಯನ್ನು ನಿಗಧಿತ ಸಂದರ್ಭದಲ್ಲಿ ಬಳಸಲಾಗದಿದ್ದರೆ UDB ಯಲ್ಲಿರುವ ಇದಕ್ಕೆ ಪರ್ಯಾಯವಾದ ಮರುರಚನೆಯಾದ ಪದಗುಚ್ಛಗಳನ್ನು ಬಳಸಬಹುದು (ಕರ್ತರಿ ಕರ್ಮಣಿ ಪ್ರಯೋಗವನ್ನು ನೋಡಿ)

ಸತ್ಯವೇದದಿಂದ ಉದಾಹರಣೆಗಳು

ಅವನಿಗೂ < u>ಅವನ ಸಂಗಡ ಇದ್ದವರೆಲ್ಲರೂ, ತಾವು ಹಿಡಿದ ಮೀನುಗಳನ್ನು ನೋಡಿ , ವಿಸ್ಮಯಗೊಂಡರು. (ಲೂಕ 5:9 ULB)

ಅವನು ಹೀಗೆ ಹೇಳಲು ಕಾರಣವೇನೆಂದರೆ ಮೀನುಗಳು ತುಂಬಿದ ಬಲೆಯನ್ನು ನೋಡಿ ಅವನು ವಿಸ್ಮಯಗೊಂಡನು ಅವನೊಂದಿಗೆ ಇದ್ದ ಎಲ್ಲರೂ ವಿಸ್ಮಯಗೊಂಡರು. (ಲೂಕ 5:9 UDB)

ULBಯಲ್ಲಿ ಬಳಸಿರುವ ಕರ್ಮಣಿ ಕ್ರಿಯಾಪದ ಬಳಕೆಯ ಬದಲಾಗಿ ಇಲ್ಲಿ UDB ಕರ್ತರಿ ಪ್ರಯೋಗದಲ್ಲಿ ಕ್ರಿಯಾಪದವಾಗಿ ಆಶ್ಚರ್ಯಚಕಿತರಾದರು ಪದವನ್ನು ಬಳಸುತ್ತಿದ್ದಾರೆ.

ಆತನ ಸುದ್ದಿಯು ಮತ್ತಷ್ಟು ಹರಡಿತು, ಜನರು ಆತನ ಉಪದೇಶವನ್ನು ಕೇಳುವುದಕ್ಕೆ ತಮ್ಮ ರೋಗಗಳಿಂದ ಗುಣಹೊಂದಲು ಗುಂಪು ಗುಂಪಾಗಿ ಕೂಡಿ ಬಂದರು. (ಲೂಕ 5:15 ULB)

ಇದರ ಪರಿಣಾಮವಾಗಿ ಜನರು ಗುಂಪು ಗುಂಪಾಗಿ ಯೇಸುವಿನ ಉಪದೇಶವನ್ನು ಕೇಳಲು ಮತ್ತು ಆತನಿಂದ ತಮ್ಮ ರೋಗ ಗುಣಪಡಿಸಿ ಕೊಳ್ಳಲು . ಬಂದರು. (ಲೂಕ 5:15 UDB)

ಇಲ್ಲಿ UDB ಮತ್ತು ULBಯಲ್ಲಿ ಬಳಕೆಯಾಗಿರುವ ಕರ್ಮಣಿಕ್ರಿಯಾಪದ ಬಳಕೆ ಮಾಡುವುದಿಲ್ಲ. ಇಲ್ಲಿ ಪದಗುಚ್ಛವನ್ನು ಮರುರಚಿಸಿ ಬಳಸಲಾಗಿದೆ. ಇಲ್ಲಿ ಯಾರು ಗುಣಹೊಂದುವವರು ಎಂಬುದನ್ನು ತಿಳಿಸಿದೆ. ಆತನಿಂದ ಅವರು ಗುಣಹೊಂದಲು ಬಯಸಿದರು.

ರೂಪಕ ಅಲಂಕಾರಗಳು ಮತ್ತು ಇತರ ಅಲಂಕಾರಗಳು

ವ್ಯಾಖ್ಯಾನ - ULB ಸತ್ಯವೇದದ ವಾಕ್ಯಭಾಗಗಳಲ್ಲಿ ಕಂಡುಬರುವ ಅಲಂಕಾರಗಳನ್ನು ಪ್ರತಿನಿಧಿಸಲು ಪ್ರಯತ್ನಿಸುತ್ತದೆ. ಆದರೆ UDB ಈ ಉದ್ದೇಶಗಳ ಅರ್ಥವನ್ನು ಬೇರೇ ರೀತಿಯಲ್ಲಿ ಹೇಳುತ್ತದೆ. ನೀವು ಭಾಷಾಂತರಿಸುತ್ತಿರುವ ಭಾಷೆಯ ಓದುಗರು ನೀವು ಬಳಸಿರುವ ಅಲಂಕಾರಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವರೋ, ಹೆಚ್ಚು ಪ್ರಯಾಸಪಡುತ್ತಾರೋ ಅಥವಾ ಅರ್ಥವೇ ಮಾಡಿಕೊಳ್ಳಲಾರರೋ,ತಿಳಿದುಕೊಳ್ಳಬೇಕು. ಅರ್ಥ ಮಾಡಿಕೊಳ್ಳಲು ಅವರು ಹೆಚ್ಚು ಪ್ರಯತ್ನಪಟ್ಟರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ನೀವು ಸರಿಯಾದ ಅರ್ಥನೀಡುವಂತೆ ಅಲಂಕಾರಗಳನ್ನು ಸರಿಯಾದ ರೀತಿಯಲ್ಲಿ ಬಳಸಬೇಕು.

ಕ್ರಿಸ್ತನ ವಿಷಯವಾದ ಸಾಕ್ಷಿಯು ನಿಮ್ಮಲ್ಲಿ ದೃಢವಾಗಿ ನೆಲೆಗೊಂಡ ಕಾರಣನೀವು ಎಲ್ಲಾ ನುಡಿಯಲ್ಲಿಯೂ ಎಲ್ಲಾ ತಿಳಿವಳಿಕೆಯಲ್ಲಿಯೂ ಆತನಲ್ಲಿ ಸಮೃದ್ಧಿಹೊಂದಿದವರಾಗಿದ್ದೀರಿ , (1 ಕೊರಿಂಥ 1:5 ULB)

ಕ್ರಿಸ್ತನು ನಿಮಗೆ ತುಂಬಾ ವಸ್ತುಗಳನ್ನು ನೀಡಿದ್ದಾನೆ . ಆತನ ತನ ಸತ್ಯವನ್ನು ಕುರಿತು ಮಾತನಾಡುವಂತೆಯೂ ದೇವರನ್ನು ಕುರಿತು ತಿಳಿದುಕೊಳ್ಳುವಂತೆ ಸಹಾಯಮಾಡುವನು. (1 ಕೊರಿಂಥ 1:5 UDB)

ಪೌಲನು “ಐಶ್ವರ್ಯ.” "ಭೌತಿಕವಾದ ಐಶ್ವರ್ಯ"ಎಂಬ ರೂಪಕ ಅಲಂಕಾರದೊಂದಿಗೆ ಬಳಸಿ ಹೇಳಿದ್ದಾನೆ. "ಎಲ್ಲಾ ನುಡಿಯಲ್ಲಿಯೂ,ಎಲ್ಲಾ ತಿಳಿವಳಿಕೆಯಲ್ಲಿಯೂ " ಎಂಬ ವಿಷಯವನ್ನು ಕುರಿತು ವರ್ಣಿಸಿ ಹೇಳಿದ್ದಾನೆ.ಆದರೆ ಇದನ್ನು ಕೆಲವು ಓದುಗರು ಅರ್ಥ ಮಾಡಿಕೊಳ್ಳಲಾರರು UDBಯಲ್ಲಿ ಇದನ್ನು ವಿಭಿನ್ನವಾಗಿ ಹೇಳಿದೆ “ಭೌತಿಕ ಐಶ್ವರ್ಯ” ಕುರಿತು ಯಾವುದೇ ರೂಪಕ ಅಲಂಕಾರ ಬಳಸದೇ ಹೇಳಿದೆ.(ರೂಪಕ ಅಲಂಕಾರ) ನೋಡಿ.

ತೋಳಗಳ ನಡುವೆ ಕುರಿಗಳನ್ನು ಹೊಗಿಸಿದಂತೆ , ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ (ಮತ್ತಾಯ 10:16 ULB)

ನಾನು ನಿಮ್ಮನ್ನು ಹೊರಗೆ ಕಳುಹಿಸಿದಾಗ ನೀವು ತೋಳಗಳಂತೆ ಅಪಾಯಕಾರಿಯಾದ ಜನರ ನಡುವೆ ರಕ್ಷಣೆ ಇಲ್ಲದ ಕುರಿಗಳಂತೆ ಇರುವಿರಿ. . (ಮತ್ತಾಯ 10:16 UDB)

ಯೇಸು ಆತನ ಶಿಷ್ಯರಾದ ಅಪೋಸ್ತಲರು ಇತರ ಜನರ ಬಳಿಗೆ ಹೋಗುವಾಗ ಕುರಿಗಳು ತೋಳಗಳ ನಡುವೆ ಹೋದಂತೆ ಎಂಬ ಉಪಮಾ ಅಲಂಕಾರವನ್ನು ಬಳಸಿ ಹೇಳುತ್ತಾನೆ. ಕೆಲವು ಓದುಗರು ಅಪೋಸ್ತಲರು ಕುರಿಗಳಂತೆ ಮತ್ತು ಇತರೆ ಜನಗಳು ತೋಳಗಳಂತೆ ಇರಲು ಹೇಗೆ ಸಾಧ್ಯ ಎಂದು ಯೋಚಿಸಬಹುದು. UDB ಇದಕ್ಕೆ ಸರಿಯಾದ ವಿವರ ನೀಡುತ್ತದೆ. – ಅಪೋಸ್ತಲರು ನಿರಾಯುಧರಾಗಿ, ಮುಗ್ಧರಾಗಿದ್ದರೆ, ಅವರ ಶತೃಗಳು, ನಿಂದಕರು ಅಪಾಕಾರಿಯಾಗಿರಬಹುದು (ಗಮನಿಸಿ. ಉಪಮಾ ಅಲಂಕಾರ)

ನಿಮ್ಮಲ್ಲಿ ಯಾರ್ಯಾರು ಕರ್ಮಗಳಿಂದ ನೀತಿವಂತರಾಗಬೇಕೆಂದು ಯೋಚಿಸುತ್ತಾರೋ ಅವರು ಕ್ರಿಸ್ತನಿಂದ ಅಗಲಿ ಹೋಗುವರು . ನೀವು ಕೃಪೆಯಿಂದ ದೂರವಾಗುವವರು. (ಗಲಾತ್ಯ 5:4 ULB)

ನೀವು ದೇವರ ದೃಷ್ಟಿಯಲ್ಲಿ ಒಳ್ಳೆಯವರೆಂದು ನಿರ್ಣಯಿಸಲ್ಪಡಬೇಕೆಂದು ನಿರೀಕ್ಷಿಸಿದರೆ, ನೀವು ನೀತಿವಂತರಾಗಿರಬೇಕು , ಆದರೆ ನೀವು ಕ್ರಿಸ್ತನನ್ನು ಅಗಲಿ ಆತನಿಂದ ಪ್ರತ್ಯೇಕವಾಗಿದ್ದೀರಿ ಇದರಿಂದ ದೇವರು ನಿಮಗೆ ಕೃಪಾಶೀರ್ವಾದಗಳನ್ನು ನೀಡುವುದಿಲ್ಲ. (ಗಲಾತ್ಯ 5:4 UDB)

ಅವರು ಧರ್ಮನೀತಿಗಳನ್ನು ಪಾಲಿಸುವವರಾದರೆ ಎಂದು ಹೇಳುವಾಗ ಪೌಲನು ವ್ಯಂಗ್ಯೋಕ್ತಿಯನ್ನು ಬಳಸುತ್ತಾನೆ. ಧರ್ಮ ಪ್ರಮಾಣದಲ್ಲಿ ಹೇಳಿರುವಂತೆ ಪ್ರತಿಯೊಬ್ಬರೂ ಮಾಡುವ ಹಂಗಿನಲ್ಲಿದ್ದಾರೆ ಎಂದು ಅವರಿಗೆ ಬೋಧಿಸಿದ್ದಾನೆ. ULB ಧರ್ಮ ಪ್ರಮಾಣದಂತೆ ಎಂಬ ಪದವನ್ನು ಆವರಣ ಚಿಹ್ನೆಗಳಲ್ಲಿ ಗುರುತಿಸಿ ಪೌಲನು ಅವರೆಲ್ಲರೂ ನೀತಿ ಪ್ರಮಾಣಗಳಿಗೆ ಬದ್ಧರಾಗಿರಬೇಕೆಂದು ತಿಳಿಸಿದ್ದಾನೆ. UDBಯಲ್ಲಿ ಇದೇ ಉದ್ದೇಶವನ್ನು ಇನ್ನೂ ಸ್ಪಷ್ಟವಾಗಿ ತಿಳಿಸುತ್ತಾ ಇತರರು ಇದು ಹೇಗೆ ನಂಬಿದ್ದಾರೆ ಎಂಬುದನ್ನು ತಿಳಿಸಿದೆ. (ಗಮನಿಸಿ ವ್ಯಂಗ್ಯೋಕ್ತಿ)

ಭಾವನಾಮಗಳ ಅಭಿವ್ಯಕ್ತಿ.

ULBಯಲ್ಲಿ ಪದೇಪದೇ ಭಾವನಾಮಗಳು, ಗುಣವಾಚಕಗಳು ಮತ್ತು ಇತರ ವಾಚಕಗಳನ್ನು ಬಳಸಲಾಗುತ್ತದೆ, ಏಕೆಂದರೆ ಸತ್ಯವೇದದ ವಾಕ್ಯಭಾಗಗಳನ್ನು ಅತ್ಯಂತ ಸೂಕ್ಷ್ಮವಾಗಿ ಹೋಲುತ್ತದೆ. UDBಯಲ್ಲಿ ಭಾವನಾಮಗಳ ಬಳಕೆ ಮಾಡಲಾಗಿದೆ, ಏಕೆಂದರೆ ಅನೇಕ ಭಾಷೆಯಲ್ಲಿ ಇಂತಹ ಭಾವನಾಮಗಳ ಆಭಿವ್ಯಕ್ತಿಯ ಬಳಕೆ ಇರುವುದಿಲ್ಲ.

ಇಂತಹ ವಿಚಾರಗಳನ್ನುನೀವು ಭಾಷಾಂತರಿಸುತ್ತಿರುವ ಭಾಷೆಯಲ್ಲಿ ಯಾವ ರೀತಿ ಅಭಿವ್ಯಕ್ತಿ ಪಡಿಸಿದರೆ ಸೂಕ್ತ ಎಂಬುದನ್ನು ನೀವು ನಿರ್ಧರಿಸಬೇಕು (see Abstract Nouns).

ಆತನು ನಿಮ್ಮನ್ನು ಎಲ್ಲಾ ನುಡಿಯಲ್ಲಿಯೂ ಸಕಲ ಜ್ಞಾನದಲ್ಲಿಯೂ, ತಿಳಿವಳಿಕೆಯಲ್ಲಿಯೂ ಸಮೃದ್ಧಿಯಾಗಿರುವಂತೆ .ಮಾಡಿದ್ದಾನೆ. (1 ಕೊರಿಂಥ1:5 ULB)

ಕ್ರಿಸ್ತನು ನಿಮಗೆ ಬೇಕಾದುದೆಲ್ಲವನ್ನೂ ಸಮೃದ್ಧಿಯಾಗಿ ನೀಡಿದ್ದಾನೆ. ಅವನು ಅವನ ಸತ್ಯವನ್ನು ಮಾತನಾಡಲು ಸಹಾಯ ಮಾಡಿದ್ದಲ್ಲದೆ ದೇವರನ್ನು ಕಂಡುಕೊಳ್ಳಲು ಸಹಾಯ ಮಾಡಿದ್ದಾನೆ. . (1 ಕೊರಿಂಥ 1:5 UDB)

ಇಲ್ಲಿ ULBಯಲ್ಲಿ "ಎಲ್ಲಾ ಮಾತುಗಳು / ನುಡಿಗಳು " ಮತ್ತು ಸಕಲ ಜ್ಞಾನ, ತಿಳಿವಳಿಕೆ ಎಂದು ಬಳಸುವುದು ಭಾವನಾಮಗಳಾಗಿ ಬಂದಿವೆ, abstract noun. ಇಲ್ಲಿ ಬರುವ ಒಂದು ಸಮಸ್ಯೆ ಎಂದರೆ ಓದುಗರಿಗೆ ಯಾರು ಮಾತನಾಡಬೇಕು, ಯಾವುದನ್ನು ಮಾತನಾಡ ಬೇಕು, ಯಾವ ಜ್ಞಾನ ತಿಳಿವಳಿಕೆ ತಿಳಿದುಕೊಳ್ಳಬೇಕು, ಹೇಗೆ ಳಿದುಕೊಳ್ಳಬೇಕು ಎಂಬ ಸಮಸ್ಯೆ ಬರುತ್ತದೆ. UDB ಈ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.

ಅಂತಿಮ ಅಭಿಪ್ರಾಯಗಳು

ಒಟ್ಟು ಅಭಿಪ್ರಾಯದ ಸಾರಾಂಶವೇನೆಂದರೆ ನಿಮಗೆ ಭಾಷಾಂತರಿಸಲು ಅನುಕೂಲವಾಗುವಂತೆ ಹೆಚ್ಚಿನ ಪ್ರಮಾಣದಲ್ಲಿ ಸತ್ಯವೇದದ ವಾಕ್ಯಗಳನ್ನು ಅರ್ಥ ಮಾಡಿಕೊಳ್ಳಲು ಮೂಲವಾಕ್ಯಭಾಗಗಳನ್ನು ತಿಳಿದುಕೊಳ್ಳಲು ULB ಸಹಾಯ ಮಾಡುತ್ತದೆ. UDB, ULBಯಲ್ಲಿನ ವಾಕ್ಯಭಾಗಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ಸತ್ಯವೇದದ ಮೂಲ ವಾಕ್ಯಭಾಗಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಎಲ್ಲ ಮಾರ್ಗಗಳನ್ನು ಪರಿಚಯಿಸಿ ಅರ್ಥಮಾಡಿಸುತ್ತದೆ.

Use the translationHelps when Translating

Translation Manual :: Use the translationHelps when Translating

ಲಿಂಕ್ ನೊಂದಿಗೆ ಟಿಪ್ಪಣಿ.

Translation Manual :: Use the translationHelps when Translating :: Notes with Links

ಭಾಷಾಂತರ ಟಿಪ್ಪಣಿಯಲ್ಲಿ ಎರಡು ರೀತಿಯ ಲಿಂಕ್ ಗಳಿವೆ ಭಾಷಾಂತರ ವಿಧ್ಯಾಸಂಸ್ಥೆಯ ವಿಷಯಕ್ಕೆ ಸಂಬಂಧಿಸಿದ ಲಿಂಕ್ ಪುಟ ಮತ್ತು) ಅದೇ ಪುಸ್ತಕದಲ್ಲಿರುವ ಪದಗಳು ಮತ್ತು ನುಡಿಟ್ಟುಗಳು.

ಭಾಷಾಂತರ ವಿಧ್ಯಾಸಂಸ್ಥೆಯ ವಿಷಯಗಳು

ಭಾಷಾಂತರ ವಿಧ್ಯಾಸಂಸ್ಥೆಯ ವಿಷಯಗಳು ಭಾಷಾಂತರ ಮಾಡುವ ಪ್ರತಿಯೊಬ್ಬರಿಗೂ ಭಾಷಾಂತರ ಪ್ರಕ್ರಿಯೆಯಲ್ಲಿ ಸಹಕಾರಿಯಾಗಿರುತ್ತದೆ ಸತ್ಯವೇದವನ್ನು ಅವರವರ ಭಾಷೆಗಳಲ್ಲಿ ಭಾಷಾಂತರಿಸಲು ಬೇಕಾದ ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳಲು ಹಾಗೂ ಬಳಸಲು ಸಹಕಾರಿಯಾಗಿರುತ್ತದೆ. ಇವುಗಳನ್ನು ಅಂತರ್ ಜಾಲದ ಮೂಲಕ, ಮೊಬೈಲ್,ವೀಡಿಯೋಗಳ ಮೂಲಕ ಕಲಿತುಕೊಳ್ಳಲು ಅತ್ಯಂತ ಸಹಜವಾಗಿ,ಸುಲಭವಾಗಿ ಬಳಸಲು ಸಹಕಾರಿಯಾಗಿದೆ.

ಪ್ರತಿಯೊಂದು ಭಾಷಾಂತರ ಟಿಪ್ಪಣಿಗಳು ULBಯಿಂದ ತೆಗೆದುಕೊಂಡ ನುಡಿಗಟ್ಟು ಭಾಷಾಂತರ ಮಾಡಬೇಕಾದ ನುಡಿಗಟ್ಟುಗಳನ್ನು ಭಾಷಾಂತರಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಕೆಲವು ವಾಕ್ಯಗಳು ಭಾಷಾಂತರವಾದ ಮೇಲೆ ಕೊನೆಯಲ್ಲಿ ಆವರಣವಾಕ್ಯಗಳಾಗಿ ಬರಬಹುದು ಎಂದು ಈ ಕೆಳಗೆ ನೀಡಿದೆ. ನೋಡಿ (ರೂಪಕ ಅಲಂಕಾರ).

ಹಸಿರು ಶಾಹಿಯಲ್ಲಿರುವ ಪದ ಅಥವಾ ಪದಗಳು ಭಾಷಾಂತರ ಅಕೆಡಾಮಿಯ ವಿಷಯಗಳಿಗೆ ಲಿಂಕ್ ಗಳಾಗಿವೆ. ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ವಿಷಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಭಾಷಾಂತರ ವಿಧ್ಯಾಸಂಸ್ಥೆಯ ವಿಷಯಗಳ ಮಾಹಿತಿಯನ್ನು ಓದಿ ತಿಳಿದುಕೊಳ್ಳಲು ಅನೇಕ ಕಾರಣಗಳಿವೆ.

  • ಈ ವಿಷಯಗಳನ್ನು ಕಲಿತುಗೊಳ್ಳುವುದರಿಂದ ನಿರ್ದಿಷ್ಟವಾಗಿ ಸರಿಯಾದ ಭಾಷಾಂತರ ಮಾಡಲು ಸಹಾಯವಾಗುತ್ತದೆ. ಭಾಷಾಂತರದ ತತ್ವಗಳನ್ನು, ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆವಿಷಯಗಳನ್ನು ಇಲ್ಲಿ ಆಯ್ಕೆ ಮಾಡಲಾಗಿದೆ.

ಉದಾಹರಣೆಗಳು

  • ಪ್ರಾತಃಕಾಲ ಮತ್ತು ಸಾಯಂಕಾಲ- ಇದು ಇಡೀ ದಿನವನ್ನು ಕುರಿತು ಹೇಳುತ್ತದೆ. ದಿನದ ಎರಡೂ ವೇಳೆಯನ್ನು ಅಂದರೆ ಇಲ್ಲಿ ಇಡೀ ದಿನವನ್ನು ಕುರಿತು ಹೇಳಲು ಬಳಸಿದೆ. ಯೆಹೂದಿಗಳ ಸಂಸ್ಕೃತಿಯಲ್ಲಿ ದಿನದ ಪ್ರಾರಂಭ ಸೂರ್ಯಸ್ತಮಾನದಿಂದ ಪ್ರಾರಂಭವಾಗುತ್ತದೆ. (ಮೆರಿಸಮ್ : Merism) ನೋಡಿ
  • ನಡೆಯುವುದು - “ವಿಧೇಯವಾಗಿರುವುದು” (ರೂಪಕಅಲಂಕಾರ)ನೋಡಿ.
  • ತಿಳಿದು ಕೊಳ್ಳುವಂತೆ ಮಾಡುವುದು - "ತಿಳಿಸುವುದು " (ನುಡಿಗಟ್ಟು: Idiom) ನೋಡಿ

ಪುಸ್ತಕದಲ್ಲಿ ಪುನರಾವರ್ತನೆಯಾದ ನುಡಿಗುಚ್ಛಗಳು.

ಕೆಲವೊಮ್ಮೆ ಒಂದು ಪದಗುಚ್ಛವನ್ನು ಒಂದು ಪುಸ್ತಕದಲ್ಲಿ ಅನೇಕಬಾರಿ ಬಳಸಿರುತ್ತಾರೆ. ಭಾಷಾಂತರ ವಿಧ್ಯಾಸಂಸ್ಥೆ ಟಿಪ್ಪಣಿಯಲ್ಲಿ – ಗ್ರೀನ್ ಚಾಪ್ಟರ್/ ಅಧ್ಯಾಯದಲ್ಲಿ ಒಂದು ಲಿಂಕ್ ಇದೆ ಬೇಕಾದ ವಾಕ್ಯದ ಸಂಖ್ಯೆ ಕ್ಲಿಕ್ ಮಾಡಿದರೆ ನೀವು ಭಾಷಾಂತರಮಾಡಿದ ಪದಗುಚ್ಛಗಳನ್ನು ತೋರಿಸುತ್ತದೆ. ಪದಗಳು ಅಥವಾ ಪದಗುಚ್ಛಗಳು ಈಗಾಗಲೇ ಭಾಷಾಂತರವಾಗಿದ್ದರೆ ಅಂತಹವುಗಳನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂಬುದಕ್ಕೆ ಅನೇಕ ಕಾರಣಗಳಿವೆ.

  • ಈ ನುಡಿಗುಚ್ಛಗಳನ್ನು ಭಾಷಾಂತರಿಸಲು ಸುಲಭವಾಗಿಸುತ್ತದೆ. ಮತ್ತು ಈಗಾಗಲೇ ಭಾಷಾಂತರಿಸಿದ ವಿಷಯವನ್ನು ನಿಮಗೆ ನೆನಪಿಸುತ್ತದೆ.
  • ನೀವು ಈಗಾಗಲೇ ಈ ರೀತಿಯ ಪದಗಳನ್ನು ಭಾಷಾಂತರಿಸಿರುವುದರಿಂದ ಮತ್ತು ನಿಮ್ಮ ನೆನಪಿನಲ್ಲಿ ಇರುವುದರಿಂದ ಭಾಷಾಂತರ ಕಾರ್ಯವು ವೇಗವಾಗಿಯೂ, ನಿಖರವಾಗಿಯೂ ನಡೆಯಲು ಅನುಕೂಲವಾಗುತ್ತದೆ.

ನೀವು ಈಗಾಗಲೇ ಭಾಷಾಂತರಮಾಡಿರುವ ಪದಗುಚ್ಛವಾದರೆ ಹೊಸ ಸನ್ನಿವೇಶಕ್ಕೆ ಹೊಂದದೆ ಇರಬಹುದು ಆಗ ನೀವು ಬೇರೆ ರೀತಿಯಲ್ಲಿ ಆ ಪದವನ್ನು ಬಳಸಿ ಭಾಷಾಂತರ ಮಾಡಬೇಕಾಗಬಹುದು. ಅಂತಹ ಸಮಯದಲ್ಲಿ ನೀವು ಇದರ ಬಗ್ಗೆ ಗುರುತು ಮಾಡಿಟ್ಟುಕೊಂಡು ಭಾಷಾಂತರ ತಂಡದ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಈ ಲಿಂಕ್ ಗಳು ನಿಮ್ಮನ್ನು ನೀವು ಭಾಷಾಂತರಿಸುತ್ತಿರುವ ಪುಸ್ತಕದ ಟಿಪ್ಪಣಿಯ ಕಡೆಗೆ ತಿರುಗಿ ನೋಡುವಂತೆ / ಮಾಡಬಹುದು.

ಉದಾಹರಣೆಗಳು

  • ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ -ನೀವು ಈ ವಾಕ್ಯವನ್ನು ಯಾವರೀತಿ ಭಾಷಾಂತರಿಸಿದ್ದೀರಿ ನೋಡಿ - ಆದಿಕಾಂಡ 1:28.
  • ನೆಲದ ಮೇಲೆ ಹರಿದಾಡುವ ಕ್ರಿಮುಕೀಟಗಳನ್ನು ಇದು ಎಲ್ಲಾ ಜಾತಿಯ ಕ್ರಿಮಿಕೀಟಗಳನ್ನು ಪ್ರತಿನಿಧಿಸುತ್ತದೆ. ಆದಿಕಾಂಡ 1:25.
  • will be blessed in him ನೀನು ಆಶೀರ್ವಾದದ ನಿಧಿಯಾಗುವಿ ಪರ್ಯಾಯ ಅನುವಾದ: ಅಬ್ರಹಾಮಿನಿಂದ ಆಶೀರ್ವದಿಸಲ್ಪಟ್ಟನು ಅಥವಾ ನಾನು ಅಬ್ರಹಾಮನನ್ನು ಆಶೀರ್ವಾದಿಸಿದ್ದರಿಂದ ಆಶೀರ್ವಾದಿಸಲ್ಪಡುವಿ. ಭಾಷಾಂತರಿಸುವಾಗ “ ಅವನಲ್ಲಿ” ಈ ಪದವನ್ನು ಭಾಷಾಂತರಿಸುವಾಗ “ನಿನ್ನ ಮೂಲಕ” ಎಂದಾಗಿದೆ ಆದಿಕಾಂಡ 12:3.

ಭಾಷಾಂತರ ಟಿಪ್ಪಣಿಗಳನ್ನು ಬಳಸುವುದು.

Translation Manual :: Use the translationHelps when Translating :: Using the translationNotes

ULB ಸತ್ಯವೇದದಿಂದ ಭಾಷಾಂತರ ಮಾಡಲು.

ULB ಸತ್ಯವೇದವನ್ನು ಚೆನ್ನಾಗಿ ಓದಿ. ಈ ಸತ್ಯವೇದವನ್ನು ಓದಿದಾಗ ನಿಮಗೆ ಚೆನ್ನಾಗಿ ಅರ್ಥವಾಗುತ್ತಿದೆಯೇ ಎಂದು ತಿಳಿದುಕೊಳ್ಳಿ. ಆಗ ನೀವು ವಾಕ್ಯಭಾಗಗಳನ್ನು ಚೆನ್ನಾಗಿ, ನಿಖರವಾಗಿ, ಸ್ಪಷ್ಟವಾಗಿ ಮತ್ತು ಸಹಜವಾಗಿ ಭಾಷಾಂತರ ಮಾಡಲು ಸಾಧ್ಯವಾಗುತ್ತದೆ.

  • ಹೌದಾದರೆ ? ಭಾಷಾಂತರ ಮಾಡಲು ಪ್ರಾರಂಭಿಸಿ.

  • ಇಲ್ಲವಾದರೆ ? UDB ಸತ್ಯವೇದವನ್ನು ನೋಡಿ. ULB ವಾಕ್ಯಭಾಗಗಳನ್ನು ಅರ್ಥಮಾಡಿಕೊಳ್ಳಲು UDB ಸಹಾಯಕವಾಗಿದೆಯೇ ?

  • ಹೌದಾದರೆ ? ಭಾಷಾಂತರ ಮಾಡಲು ಪ್ರಾರಂಭಿಸಿ.

  • ಇಲ್ಲವಾದರೆ ? ಭಾಷಾಂತರ ಟಿಪ್ಪಣಿಯನ್ನು ಓದಿ ಸಹಾಯಪಡೆದುಕೊಳ್ಳಿ. ಭಾಷಾಂತರ ಟಿಪ್ಪಣಿಯಲ್ಲಿ ಪದಗಳು ಅಥವಾ ಪದಗುಚ್ಛಗಳು ಪ್ರತಿಯಿಂದ ತೆಗೆದುಕೊಂಡು ವಿವರಿಸಿದಂತವು. ಇಂಗ್ಲೀಷ್ ಭಾಷೆಯಲ್ಲಿ ಪ್ರತಿಯೊಂದು ಟಿಪ್ಪಣಿಯೂ ULB ಯಿಂದ ಪ್ರಾರಂಭವಾಗಿ ವಿವರಿಸಿರುವಂತಾದ್ದು. ಇವು ಪ್ರಮುಖ ಅಂಶಗಳಂತೆ ದೊಡ್ಡ ಅಕ್ಷರಗಳಲ್ಲಿ ನಮೂದಿಸಲಾಗಿರುತ್ತದೆ, ಹಾಗಯೆ ಒಂದು ಸಣ್ಣಗೆರೆ ಮತ್ತು ಭಾಷಾಂತರಗಾರರಿಗೆ ಸಲಹೆ ಮತ್ತು ಮಾಹಿತಿಯನ್ನು ನೀಡುತ್ತದೆ. ಈ ಟಿಪ್ಪಣಿಗಳು ಈ ಕೆಳಗಿನ ನಮೂನೆಯನ್ನು ಹೊಂದಿರುತ್ತದೆ.

  • ULB ಪ್ರತಿಯಿಂದ ಪ್ರತಿಮಾಡಿದೆ ವಾಕ್ಯಭಾಗ - ಭಾಷಾಂತರ ಮಾಡಲು ಸಲಹೆಗಳು ಅಥವಾ ಭಾಷಾಂತರ ಮಾಡುವವರಿಗೆ ಮಾಹಿತನೀಡುತ್ತದೆ.

ಟಿಪ್ಪಣಿಗಳ ವಿಧಗಳು.

ಭಾಷಾಂತರ ಟಿಪ್ಪಣಿಗಳಲ್ಲಿ ಅನೇಕ ವಿಧದ ಟಿಪ್ಪಣಿಗಳಿವೆ. ಪ್ರತಿಯೊಂದು ವಿಧದ ಟಿಪ್ಪಣಿ ವಿವಿಧರೀತಿಯಲ್ಲಿ ವಿವರಣೆ ನಿಡುತ್ತದೆ. ಭಾಷಾಂತರಗಾರನಿಗೆ ಈ ಟಿಪ್ಪಣಿಗಳು ಭಾಷಾಂತರವನ್ನು ಯಾವರೀತಿ ಹಾಗೂ ಅತ್ಯುತ್ತಮ ಮಾರ್ಗವನ್ನು ಆಯ್ಕೆಮಾಡಿಕೊಳ್ಳಲು ಸಹಾಯಮಾಡುವುದಲ್ಲದೆ, ಅವರು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಸತ್ಯವೇದವನ್ನು ಉತ್ತಮವಾಗಿ ಭಾಷಾಂತರಿಸಲು ಸಾಧ್ಯವಾಗುತ್ತದೆ.

  • ವ್ಯಾಖ್ಯಾನದೊಂದಿಗೆ ಟಿಪ್ಪಣಿಗಳು – ಕೆಲವೊಮ್ಮೆ ULB ಯಲ್ಲಿನ ಪದಗಳಿಗೆ ಸರಿಯಾದ ಅರ್ಥ ನಿಮಗೆ ತಿಳಿಯದೆ ಹೋಗಬಹುದು. ಪದಗಳಿಗೆ ಅಥವಾ ಪದಗುಚ್ಛಗಳಿಗೆ ಸರಳವಾದ ವ್ಯಾಖ್ಯಾನಗಳನ್ನು ಗಳನ್ನು ಅಥವಾ ವಾಕ್ಯರೂಪವನ್ನು ಕೊಡದೆ ನೀಡುತ್ತದೆ.
  • ವಿವರ ನೀಡುವ ಟಿಪ್ಪಣಿಗಳು - ಪದಗಳ ಅಥವಾ ಪದಗುಚ್ಛಗಳ ಸರಳವಾದ ವಿವರವನ್ನು ವಾಕ್ಯದ ರೂಪದಲ್ಲಿ ವಿವರಿಸುತ್ತದೆ.
  • ಮತ್ತೊಂದು ರೀತಿಯ ಭಾಷಾಂತರ ಮಾಡುವುದನ್ನು ತಿಳಿಸುವ ಭಾಷಾಂತರ ಮಾಡುವುದನ್ನು ತಿಳಿಸುವ ಭಾಷಾಂತರ ಟಿಪ್ಪಣಿಗಳಿದ್ದು ಅವುಗಳನ್ನು ವಿವರವಾಗಿ ಈ ಕೆಳಗೆ ಕೊಟ್ಟಿರುವಂತೆ ವಿವರಿಸಿದೆ.

ಭಾಷಾಂತರಗಳಿಗೆ ನೀಡಿರುವ ಸಲಹೆಗಳಲ್ಲಿ ಅನೇಕ ವಿಧಗಳಿವೆ.

ಭಾಷಾಂತರ ಮಾಡಲು ನೀಡಿರುವ ಸಲಹೆಗಳಲ್ಲಿ ಅನೇಕ ವಿಧಗಳಿವೆ.

  • ಸಮಾನ ಅರ್ಥಕೊಡುವ ಟಿಪ್ಪಣಿಗಳು ಮತ್ತು ಸಮಾನ ಪದಗುಚ್ಛಗಳು ಇಂತಹ ಪದಗಳು ಅಥವಾ ಪದಗುಚ್ಛಗಳ ಬದಲಾವಣೆಯಿಂದ ಮೂಲ ವಾಕ್ಯಭಾಗದ ಅರ್ಥಕ್ಕೆ ಯಾವುದೇ ಧಕ್ಕೆ ಉಂಟುಮಾಡುವುದಿಲ್ಲ. ಈ ಸಮಾನಾರ್ಥಕ ಪದಗಳುಮತ್ತು ಸಮಾನ ಪದಗುಚ್ಛಗಳನ್ನು ಚಿನ್ಹೆಗಳೊಂದಿಗೆ ಗುರುತಿಸಲ್ಪಡುತ್ತದೆ. ಇದರ ಅರ್ಥ ULB ವಾಕ್ಯಭಾಗಗಳಲ್ಲಿ ಇರುವಂತೆ ಇರುತ್ತದೆ.
  • ಪರ್ಯಾಯ ಭಾಷಾಂತರದೊಂದಿಗಿನ ಟಿಪ್ಪಣಿಗಳು - ಪರ್ಯಾಯ ಭಾಷಾಂತರ ULB ವಿಷಯ ಅಥವಾ ನಮೂನೆಯ ಬಗ್ಗೆ ಬದಲಾವಣೆಗೆ ಸಲಹೆ ನೀಡಬಹುದು. ಏಕೆಂದರೆ ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಅನೇಕ ಬದಲಾವಣೆಗೆ ಅಗತ್ಯ ಬರಬಹುದು. ಈ ಪರ್ಯಾಯ ಭಾಷಾಂತರವನ್ನು ULB ನಮೂನೆ ಅಥವಾ ವಿಷಯವು ನಿಮ್ಮ ಭಾಷೆಗೆ ಭಾಷಾಂತರ ಮಾಡುವಾಗ ನಿಖರವಾಗಿ ಅಥವಾ ಸಹಜವಾಗಿ ಮೂಡಿ ಬರದಿದ್ದರೆ ಮಾತ್ರ ಮಾಡಬೇಕು.
  • UDB ಭಾಷಾಂತರವನ್ನು ಸ್ಪಷ್ಟಪಡಿಸುವ ಟಿಪ್ಪಣಿಗಳು - ULBಯ ವಿಷಯಕ್ಕೆ ಸರಿಯಾದ ಪರ್ಯಾಯ ಭಾಷಾಂತರವನ್ನು ನೀಡುವುದಾದರೆ ಪರ್ಯಾಯ ಭಾಷಾಂತರಕ್ಕೆ ಟಿಪ್ಪಣಿಯ ಅವಶ್ಯವಿರುವು ದಿಲ್ಲ. ಕೆಲವು ಸಂದರ್ಭಗಳಲ್ಲಿ ಈ ಟಿಪ್ಪಣಿಗಳು ಪರ್ಯಾಯ ಭಾಷಾಂತರದೊಂದಿಗೆ UDBಯಿಂದವಾಕ್ಯಭಾಗಗಳನ್ನು ಒದಗಿಸುತ್ತದೆ, ಕೆಲವೊಮ್ಮೆ UDBಯಿಂದ ವಾಕ್ಯಭಾಗಗಳನ್ನು ವಾಕ್ಯಗಳಂತೆ " ()"ಒಂದು ಪರ್ಯಾಯ ಭಾಷಾಂತರಕ್ಕೆ ಪೂರಕವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಈ ಟಿಪ್ಪಣಿಗಳು “(UDB)” ಎಂಬ ಗುರುತನ್ನುUDBವಾಕ್ಯಭಾಗಗಳನ್ನುಉದ್ಧರಿಸುವಾಗ ಬಳಸಲಾಗುತ್ತದೆ.
  • ಟಿಪ್ಪಣಿಗಳಿಗೆ ಪರ್ಯಾಯ ಅರ್ಥಗಳು - ಕೆಲವುಪದಗಳು ಮತ್ತು ಪದಗುಚ್ಛಗಳು ಒಂದಕ್ಕಿಂತ ಹೆಚ್ಚು ಅರ್ಥವನ್ನು ನೀಡುವ ಸಂದರ್ಭದಲ್ಲಿ ಕೆಲವು ಟಿಪ್ಪಣಿಗಳು ಪರ್ಯಾಯ ಅರ್ಥಗಳನ್ನು ನೀಡುತ್ತವೆ. ಈ ರೀತಿ ಆದಾಗ ಟಿಪ್ಪಣಿಗಳು ಹೆಚ್ಚು ಸೂಕ್ತವಾದ ಅರ್ಥವನ್ನು ಕೊಡುವ ಪದವನ್ನು ಬಳಸಲು ಸಲಹೆ ನೀಡುತ್ತದೆ.
  • ಸಂಭಾವ್ಯ ಮತ್ತು ಸಂಭವಿಸಬಹುದಾದ - ಅರ್ಥಗಳೊಂದಿಗಿರುವ ಟಿಪ್ಪಣಿಗಳು]ಕೆಲವೊಮ್ಮೆ ಸತ್ಯವೇದದ ವಿದ್ವಾಂಸರು ಸತ್ಯವೇದದಲ್ಲಿ ಬರುವ ವಾಕ್ಯಗಳ ಅರ್ಥದ ಬಗ್ಗೆ ನಿಖರವಾಗಿ ತಿಳಿಯದೆ ಅಥವಾ ಒಪ್ಪಿಕೊಳ್ಳಲು ನಿರಾಕರಿಸಬಹುದು. ಇದಕ್ಕೆ ಕೆಲವು ಉದಾಹರಣೆಗಳು : ಪುರಾತನ ಕಾಲದ ಸತ್ಯವೇದದ ವಾಕ್ಯಭಾಗಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇರಬಹುದು ಅಥವಾ ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥ ಇರಬಹುದು ಅಥವಾ ಕೆಲವೊಮ್ಮೆ ಕೆಲವು ಪದಗಳು ನಿರ್ದಿಷ್ಟ ಪದ ಅಥವಾ ಪದಗುಚ್ಛಗಳ ಬಗ್ಗೆ ಹೇಳುವಾಗ ಸ್ಪಷ್ಟತೆ ಇಲ್ಲದೆ ಇರಬಹುದು (ಉದಾಹರಣೆಗೆ ಸರ್ವನಾಮಗಳು) ಇಂತಹ ಸಂದರ್ಭದಲ್ಲಿ ಟಿಪ್ಪಣಿಗಳು ಅತ್ಯಂತ ಹೆಚ್ಚು ಸಂಭಾವ್ಯ ಅರ್ಥವನ್ನು ಅಥವಾ ಕೆಲವು ಸಂಭವಿಸುವ ಅರ್ಥ ನೀಡುವ ಪದಕ್ಕೆ ಮೊದಲ ಆಧ್ಯತೆ ಇರುತ್ತದೆ.
  • ಅಲಂಕಾರಗಳನ್ನು ಗುರುತಿಸುವ ಟಿಪ್ಪಣಿಗಳು – ULB ವಾಕ್ಯಭಾಗದಲ್ಲಿ ಅಲಂಕಾರ ಪದ ಇದ್ದರೆ, ಟಿಪ್ಪಣಿಯಲ್ಲಿನ ವಿವರಗಳು ಅಲಂಕಾರಗಳನ್ನು ಹೇಗೆ ಭಾಷಾಂತರಿಸಬೇಕು ಎಂಬ ವಿವರ ನೀಡುತ್ತದೆ. ಕೆಲವೊಮ್ಮೆ ಪರ್ಯಾಯಭಾಷಾಂತರ (AT:) ವನ್ನು ಒದಗಿಸಲಾಗುತ್ತದೆ.ಅಲಂಕಾರಗಳನ್ನು ಭಾಷಾಂತರಿಸಲು ಬೇಕಾದ ನಿಖರವಾದ ಅರ್ಥಕೊಡುವ ಪದಗಳನ್ನು ಬಳಸಲು ಭಾಷಾಂತರ ಗಳು ಮತ್ತು ಭಾಷಾಂತರ ಅಕಾಡೆಮಿಯ ಪುಟಗಳಲ್ಲಿ ಇರುವ ಹೆಚ್ಚುವರಿ ಮಾಹಿತಿಗಳು ಸಹಾಯಮಾಡುತ್ತವೆ.
  • ಪರೋಕ್ಷ ಮತ್ತು ಅಪರೋಕ್ಷ ಮಾತುಗಳನ್ನು ಗುರುತಿಸುವ ಟಿಪ್ಪಣಿಗಳು -ಎರಡು ರೀತಿಯ ಗಳಿವೆ ಅವುಗಳಲ್ಲಿ ಒಂದು ಪರೋಕ್ಷ ಇನ್ನೊಂದು ಅಪರೋಕ್ಷ ವಾಕ್ಯಗಳು. ವಾಕ್ಯಗಳನ್ನು ಭಾಷಾಂತರಿಸುವಾಗ ಆ ವಾಕ್ಯಗಳನ್ನು ಪರೋಕ್ಷವಾಕ್ಯಗಳಾಗಿ ಭಾಷಾಂತರಿಸ ಬೇಕೆ ಇಲ್ಲವೆ ಅಪರೋಕ್ಷ ವಾಕ್ಯವಾಗಿ ಭಾಷಾಂತರಿಸ ಬೇಕೆ ಎಂಬುದನ್ನು ಮೊದಲು ನಿರ್ಧರಿಸಬೇಕು. ಈ ಟಿಪ್ಪಣಿಗಳು ಭಾಷಾಂತರಗಾರರನ್ನು ಯಾವ ರೀತಿಯ ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಎಚ್ಚರಿಕೆ ನೀಡುತ್ತವೆ.
  • ULBಯ ಉದ್ದುದ್ದ ಪದಗುಚ್ಛಗಳಿಗೆ ಟಿಪ್ಪಣಿಗಳು - ಕೆಲವೊಮ್ಮೆ ಈ ಟಿಪ್ಪಣಿಗಳು ಒಂದು ಪದಗುಚ್ಛ ಮತ್ತು ಕೆಲವೊಮ್ಮೆ ಅನೇಕ ಪದಗುಚ್ಛಗಳ ವಾಕ್ಯಭಾಗವನ್ನು ಉದ್ದೇಶಿಸಿಯೂ ಇರಬಹುದು. ಇಂತಹ ಸಂದರ್ಭದಲ್ಲಿ ಉದ್ದುದ್ದ ಇರುವ ವಾಕ್ಯಭಾಗಗಳಿಗೆ ಮೊದಲು ಮತ್ತು ನಂತರ ಚಿಕ್ಕ ಪದಗುಚ್ಛಗಳಿಗೆ ಟಿಪ್ಪಣಿಯ ಅವಕಾಶವನ್ನು ನೀಡಬೇಕು. ಈ ರೀತಿ ಟಿಪ್ಪಣಿಗಳು ಭಾಷಾಂತರ ಸಲಹೆಗಳನ್ನು ಅಥವಾ ಇಡೀ ವಾಕ್ಯಭಾಗಕ್ಕೆ ಅಥವಾ ಚಿಕ್ಕ ಚಿಕ್ಕ ಭಾಗಗಳಿಗೆ ಟಿಪ್ಪಣಿಗಳನ್ನು ನೀಡುತ್ತದೆ.

ಭಾಷಾಂತರ ಟಿಪ್ಪಣಿಗಳನ್ನು ಬಳಸುವುದು.

Translation Manual :: Use the translationHelps when Translating :: Using the translationNotes

ಟಿಪ್ಪಣಿಗಳಲ್ಲಿರುವ ವಾಕ್ಯಗಳನ್ನು ಮತ್ತು ಸಾಮಾನ್ಯ ಮಾಹಿತಿಗಳನ್ನು ಹೊಂದಿಸುವುದು.

Translation Manual :: Use the translationHelps when Translating :: Using the translationNotes :: Connecting Statement and General Information in the Notes

ವಿವರಣೆ

ಟಿಪ್ಪಣಿಗಳು ಪಟ್ಟಿಯ ಮೇಲ್ಭಾಗದಲ್ಲಿ, ಸಂಪರ್ಕ ಕಲ್ಪಿಸುವ ವಾಕ್ಯಗಳು ಅಥವಾ ಸಾಮಾನ್ಯ ಮಾಹಿತಿಗಳನ್ನು ಹೊಂದಿರುತ್ತವೆ.

ಸಂಪರ್ಕ ಸೂಚಿಸುವ ವಾಕ್ಯಗಳು ಒಂದು ವಾಕ್ಯ ಭಾಗದ ಹೇಳಿಕೆಗಳು ಹಿಂದಿನ ಸತ್ಯವೇದದ ವಿಷಯಗಳೊಂದಿಗೆ ಹೇಗೆ ಸಂಪರ್ಕ ಸಾಧಿಸಿವೆ ಎಂದು ತಿಳಿಸುತ್ತವೆ. ಕೆಳಗೆ ಕೊಟ್ಟಿರುವ ಕೆಲವು ಮಾಹಿತಿಗಳು ಹೇಗೆ ಸಂಪರ್ಕಸಾಧಿಸುವ ವಾಕ್ಯಗಳಾಗಿ ಬರುತ್ತವೆ ಎಂಬುದನ್ನು ಹೇಳುತ್ತವೆ.

  • ಈ ಚಿಕ್ಕ ವಿಷಯ ಪ್ರಾರಂಭದಲ್ಲಿದೆಯೋ, ಮಧ್ಯಭಾಗದಲ್ಲಿದೆಯೋ ಅಥವಾ ವಾಕ್ಯಭಾಗದ ಕೊನೆಯಲ್ಲಿ ಬರುತ್ತದೋ ನೋಡಬೇಕು.
  • ಮಾತನಾಡುತ್ತಿರುವವರು ಯಾರು?
  • ಮಾತನಾಡುತ್ತಿರುವವರು ಯಾರೊಂದಿಗೆ ಮಾತನಾಡುತ್ತಿದ್ದಾರೆ.?

ಸಾಮಾನ್ಯ ಮಾಹಿತಿ ಟಿಪ್ಪಣಿಗಳು ಸಂಬಂಧಿತ ವಿಷಯಗಳನ್ನು ಚಿಕ್ಕ ಚಿಕ್ಕ ಭಾಗಗಳಲ್ಲಿ ಒಂದು ನುಡಿಗುಚ್ಛಕ್ಕಿಂತ ಹೆಚ್ಚಾಗಿ ಹೇಳಲು ಪ್ರಯತ್ನಿಸುತ್ತವೆ. ಈ ಕೆಳಗೆ ಕೊಟ್ಟಿರುವ ಕೆಲವು ಮಾಹಿತಿಗಳು ಸಾಮಾನ್ಯಮಾಹಿತಿ ನೀಡುವ ವಾಕ್ಯಗಳಾಗಿ ಸಾಮಾನ್ಯ ಮಾಹಿತಿ ನೀಡುವ ವಾಕ್ಯಗಳಾಗಿ / ಹೇಳಿಕೆಗಳಾಗಿ ಬಂದಿವೆ.

  • ಒಬ್ಬ ವ್ಯಕ್ತಿ ಅಥವ ವಸ್ತುವನ್ನು ಸರ್ವನಾಮಗಳಿಂದ ಗುರುತಿಸಿ ಹೇಳುವುದು.
  • ವಾಕ್ಯಭಾಗಗಳನ್ನು ಅರ್ಥಮಾಡಿಕೊಳ್ಳಲು ಬಹುಮುಖ್ಯ ಹಿನ್ನೆಲೆ ಅಥವಾ ತಿಳಿದ ಮಾಹಿತಿಗಳನ್ನು ಹೊಂದಿಕೊಳ್ಳುವುದು ಅವಶ್ಯ.
  • ತರ್ಕಬದ್ಧವಾದ ಚರ್ಚೆಗಳು ಮತ್ತು ಅಂತಿಮ ತೀರ್ಮಾನಗಳು. ಈ ಎರಡೂ ರೀತಿಯ ಟಿಪ್ಪಣಿಗಳು ನಿಮಗೆ ವಾಕ್ಯಭಾಗಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಭಾಷಾಂತರ ಕಾರ್ಯದಲ್ಲಿ ಎದುರಾಗುವ ವಿಷಯಗಳನ್ನು ಪರಿಹರಿಸಿಕೊಳ್ಳಲು ಸಹಾಯಕವಾಗಿರುತ್ತವೆ.

ಉದಾಹರಣೆಗಳು

ಈ ವಿಷಯ ಭಾಗಗಳು ವಾಕ್ಯದ ಪ್ರಾರಂಭದಲ್ಲಿ, ಮಧ್ಯಭಾಗದಲ್ಲಿ ಅಥವಾ ವಾಕ್ಯಭಾಗದ ಕೊನೆಯಲ್ಲಿ ಬರುತ್ತದೋ ಗಮನಿಸಬೇಕು.

1ಯೇಸುತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಬೇಕಾದುದನ್ನು ಹೇಳಿ ಮುಗಿಸಿದ ಬಳಿಕ ಸಮೀಪದ ಊರುಗಳಲ್ಲಿ ಉಪದೇಶ ಮಾಡುವುದಕ್ಕೂ, ಸುವಾರ್ತೆಯನ್ನು ಸಾರುವುದಕ್ಕೂ ಅಲ್ಲಿಂದ ಹೊರಟನು 2ಯೋಹಾನನು ಕ್ರಿಸ್ತನ ಕಾರ್ಯಗಳ ಸುದ್ದಿಯನ್ನು ಸೆರೆಮನೆಯಲ್ಲಿ ಕೇಳಿ ಆತನ ಬಳಿಗೆ ಶಿಷ್ಯರನ್ನು ಕಳುಹಿಸಿ 3ಬರಬೇಕಾದವನು ನೀನೋ, ನಾವು ಬೇರೊಬ್ಬನ ದಾರಿಯನ್ನು ನೋಡಬೇಕೋ ಎಂದು ಕಳುಹಿಸಿದನು ? "(ಮತ್ತಾಯ 11:1-3 ULB)

  • ಸಾಮಾನ್ಯ ಮಾಹಿತಿ - ಇದು ಕಥೆಯ ನೂತನ ಪ್ರಾರಂಭದ ಸುವಾರ್ತೆಯನ್ನು ಬರೆದವನು ಸ್ನಾನಿಕನಾದ ಯೋಹಾನನು ಕಳುಹಿಸಿದ ಶಿಷ್ಯರಿಗೆ ಯೇಸು ಹೇಗೆ ಪ್ರತಿಕ್ರಿಯಿಸಿದನು ಎಂಬುದನ್ನು ಹೇಳಿದಂತಿದೆ. (ಹೊಸ ವಿಷಯ / ಘಟನೆಯ ಪರಿಚಯ : ನೋಡಿ)

ಈ ಟಿಪ್ಪಣಿಯು ಹೊಸಕತೆ / ಹೊಸವಿಷಯದ ಪ್ರಾರಂಭ ಮಾಡುವುದರ ಬಗ್ಗೆ ಮತ್ತು ಭಾಷಾಂತರಿಸಬೇಕು ಎಂಬುದರ ಕಡೆಗೆ ನಮ್ಮನ್ನು ಎಚ್ಚರಿಸುತ್ತದೆ.

###ಮಾತನಾಡುತ್ತಿರುವುದು ಯಾರು ?

17ಯೂದನು ನಮ್ಮ ಲೆಕ್ಕದಲ್ಲಿ ಸೇರಿ ಈ ಸೇವೆಯಲ್ಲಿ ಪಾಲು ಹೊಂದಿದವನಾಗಿದ್ದನು 18(ಈ ಮನುಷ್ಯನು ತನ್ನ ದ್ರೋಹದಿಂದ ಸಂಪಾದಿಸಿದ ಹಣಕ್ಕೆ ಒಂದು ಹೊಲವನ್ನು ಕೊಂಡುಕೊಂಡನು. ನಂತರ ಅವನು ತಲೆಕೆಳಗಾಗಿ ಬಿದ್ದ ಅವನ ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಸುರಿದವು.19ಇದು ಯೆರೂಸಲೇಮ್, ಪಟ್ಟಣದ ನಿವಾಸಿಗಳಿಗೆಲ್ಲಾ ತಿಳಿದು ಬಂದುದರಿಂದ ಆ ಹೊಲಕ್ಕೆ ಅವರ ಭಾಷೆಯಲ್ಲಿ “ ಅಕೆಲ್ಡೆಮಾ “ ಅಂದರೆ ಜೀವಹತ್ಯೆಯ ಹೊಲ ಎಂಬ ಹೆಸರು ಬಂತು. (ಆ.ಕೃ. 1:17-19 ULB)

  • ಸಂಪರ್ಕಿಸುವ ವಾಕ್ಯ / ಹೇಳಿಕೆ - ಪೇತ್ರನು ಅಲ್ಲಿ ಕೂಡಿಬಂದ ವಿಶ್ವಾಸಿಗಳ ಮಧ್ಯದಲ್ಲಿ ನಿಂತು ಈ ರೀತಿ ಪ್ರಾರಂಭಿಸಿದನು.(ಆ.ಕೃ. 1:16.) ಈ ಟಿಪ್ಪಣಿ ನಮಗೆ ಪೇತ್ರನು ಇನ್ನು 17ನೇ ವಾಕ್ಯದಲ್ಲೂ ಮಾತನಾಡುತ್ತಿರುವ ಬಗ್ಗೆ ತಿಳಿಸುತ್ತದೆ.

####ಒಬ್ಬ ವ್ಯಕ್ತಿ ಅಥವಾ ವಸ್ತುಗಳನ್ನು ಸರ್ವನಾಮಗಳಿಂದ ಗುರುತಿಸಿ ಹೇಳುತ್ತಿದೆಯೋ.

20ಯೆಶಾಯ ತುಂಬಾ ಧೈರ್ಯವಾಗಿ ಇಲ್ಲಿ ಹೇಳುವುದೇನೆಂದರೆ, " ನನ್ನನ್ನು ಹುಡುಕದವರಿಗೂ ಸಿಕ್ಕಿದೆನು " "ನನ್ನ ವಿಷಯ ವಿಚಾರಮಾಡದವರಿಗೂ ಪ್ರತ್ಯಕ್ಷನಾದೆನು " 21ಆದರೆ ಅವನು ಇಸ್ರಾಯೇಲರನ್ನು ಕುರಿತು ನನ್ನ ಕೈಗೆ ಸಿಗದೆ ದೂರವಾಗಿ ಉಳಿದವರನ್ನು ದಿನವೆಲ್ಲಾ ಕೈಚಾಚಿ ಕರೆದೆ. ನನ್ನ ಮಾತಿಗೆ ವಿಧೇಯರಾಗಿ ಎದುರುಮಾತನಾಡುವ ಜನರನ್ನೂ ಕರೆದೆ (ರೋಮಾ10:20-21 ULB),

  • ಸಾಮಾನ್ಯ ಮಾಹಿತಿ : ಇಲ್ಲಿ ಬರುವ “ನಾನು,” “ನನ್ನ,” ಮತ್ತು “ನನಗೆ” ಎಂಬ ಪದಗಳು ದೇವರನ್ನು ಕುರಿತು ಹೇಳಿಕೊಳ್ಳುವಂತದ್ದು. ಈ ಟಿಪ್ಪಣಿ ಇಲ್ಲಿ ಬಳಸಿರುವ ಸರ್ವನಾಮಗಳು ಯಾರನ್ನು ಉದ್ದೇಶಿಸಿ ಹೇಳಿವೆಎಂದು ತಿಳಿಸುತ್ತದೆ. ಇಲ್ಲಿ ಯೆಶಾಯನು ತನ್ನ ಬಗ್ಗೆ ಹೇಳುತ್ತಿಲ್ಲ, ಆದರೆ ದೇವರ ಬಗ್ಗೆ ಹೇಳುತ್ತಿದ್ದಾನೆ ಎಂದು ತಿಳಿಸಲು ಓದುಗರಿಗೆ ಅರ್ಥವಾಗುವಂತೆ ನಿಮಗೆ ಬೇಕಾದ ಪದಗಳನ್ನು ಬಳಸುವ ಅಗತ್ಯವಿದೆಯೇ ನೋಡಿ ಬಳಸಿ.

ಮುಖ್ಯವಾದ ಹಿನ್ನೆಲೆ ಅಥವಾ ತಿಳಿಸಬೇಕಾದ ಮಾಹಿತಿ

26ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ ನೀನು ಎದ್ದು ದಕ್ಷಿಣದ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೊಗುವ ದಾರಿಯಲ್ಲಿ ಹೋಗು (ಅದು ಮರಳುಗಾಡು) 27ಅವನು ಎದ್ದು ಹೊರಟುಹೋದನು. ಹೋಗುತ್ತಿರುವಾಗ ಇಥಿಯೋಪಿಯಾ ದೇಶದ ಒಬ್ಬ ಮನುಷ್ಯನನ್ನು ಕಂಡನು ಅವನು ಕಂಚುಕಿಯು ಇಥಿಯೋಪಿಯಾ ದೇಶದ ರಾಣಿಯಾಗಿದ್ದ ಕಂದಾಕೆಯ ಬಳಿ ಅಧಿಕಾರಿಯಾಗಿದ್ದ.

ಆಕೆಯ ಎಲ್ಲ ಖಜಾನೆಯ ಮೇಲ್ವಿಚಾರಕನೂ ಆಗಿದ್ದ. ಅವನು ದೇವಾರಾಧನೆಗೋಸ್ಕರ 28ಯೆರೂಸಲೇಮಿಗೆ ಬಂದು ಹಿಂತಿರುಗಿ ಹೋಗುವಾಗ ತನ್ನ ರಥದಲ್ಲಿ ಕುಳಿತುಕೊಂಡು ಯೆಶಾಯ ಪ್ರವಾದಿಯ ಗ್ರಂಥವನ್ನು ಓದುತ್ತಿದ್ದನು. (ಆ.ಕೃ. 8:26-28 ULB)

  • ಸಾಮಾನ್ಯ ಮಾಹಿತಿ: - ಇದು ಫಿಲಿಪ್ಪಿ ಮತ್ತು ಇಥಿಯೋಪಿಯಾದ ಮನುಷ್ಯನ ಬಗ್ಗೆ ಹೇಳುತ್ತಿದ್ದ ಕತೆಯ ಪ್ರಾರಂಭದ ಭಾಗ. 27ನೇ ವಾಕ್ಯ ಇಥಿಯೋಪಿಯಾದಿಂದ ಬಂದ ಮನುಷ್ಯನ ಬಗ್ಗೆ ಹಿನ್ನೆಲೆ ಮಾಹಿತಿಯನ್ನು ನೀಡುತ್ತದೆ. (ಹಿನ್ನೆಲೆಗಳು ನೋಡಿ)

ಈ ಟಿಪ್ಪಣಿ ಕತೆಯ ನೂತನ ಭಾಗದ ಪ್ರಾರಂಭ ಮತ್ತು ಹಿನ್ನೆಲೆ ಮಾಹಿತಿಯನ್ನು ನಿಮ್ಮ ಭಾಷೆಯಲ್ಲಿ ಹೇಗೆ ಹೇಳಬಹುದು ಎಂಬುದರ ಬಗ್ಗೆ ತಿಳಿಸಲು ಎಚ್ಚರಿಕೆಯನ್ನು ನೀಡುತ್ತದೆ. ಹಿನ್ನೆಲೆ ಮಾಹಿತಿ ಪುಟಕ್ಕೆ ಈ ಟಿಪ್ಪಣಿ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಇಂತಹ ಮಾಹಿತಿಗಳನ್ನು ಹೇಗೆ ಭಾಷಾಂತರಿಸಬಹುದು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.


ವ್ಯಾಖ್ಯಾನಗಳೊಂದಿಗಿನ ಟಿಪ್ಪಣಿಗಳು.

Translation Manual :: Use the translationHelps when Translating :: Using the translationNotes :: Notes with Definitions

###ವಿವರಣೆ

ULB (Unlocked Literal Bible) ಸತ್ಯವೇದದಲ್ಲಿ ಇರುವ ಪದಗಳ ಅರ್ಥ ಕೆಲವೊಮ್ಮೆ ನಿಮಗೆ ತಿಳಿಯದೆ ಹೋಗಬಹುದು. ಟಿಪ್ಪಣಿಗಳಲ್ಲಿ ಲಕ್ಷಣ, ವ್ಯಾಖ್ಯಾನ ಅಥವಾ ವಿವರಣೆಗಳು ಪದಗಳ ಅಥವಾ ಪದಗುಚ್ಛಗಳ ಬಗ್ಗೆ ಕೊಡಲ್ಪಟ್ಟು ಅವುಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತವೆ.

###ಭಾಷಾಂತರ ಟಿಪ್ಪಣಿಗಳ ಉದಾಹರಣೆಗಳು.

ಕೆಲವೊಮ್ಮೆ ಪದಗಳ ಅಥವಾ ನುಡಿಗಟ್ಟುಗಳ ಬಗ್ಗೆ ಸರಳ ವ್ಯಾಖ್ಯಾನಗಳನ್ನು ಉದ್ಧರಣಾ ಪದಗಳು ಅಥವಾ ವಾಕ್ಯರೂಪಗಳನ್ನು ಸೇರಿಸದೆ ಮಾಡಬಹುದು. ಇಲ್ಲಿ ಕೆಲವು ಉದಾಹರಣೆಗಳು ಇವೆ.

ಮಕ್ಕಳು ಪೇಟೆ ಬೀದಿಗಳಲ್ಲಿ ಕುಳಿತು ತಮ್ಮ ಗೆಳೆಯರಿಗೆ " ನಿಮಗೋಸ್ಕರ ಕೊಳಲೂದಿದೆವುಎಂದರು (ಮತ್ತಾಯ 11:16-17 ULB)

  • ಪೇಟೆ ಬೀದಿ - ವಿಶಾಲವಾದ ತೆರೆದ ಜಾಗ ಅಲ್ಲಿ ಜನರು ತಮ್ಮ ವಸ್ತುಗಳನ್ನು ಮಾರುತ್ತಾರೆ.
  • ಕೊಳಲು - ಇದೊಂದು ಬಿದರಿನಿಂದ ಮಾಡಿದ ಉದ್ದವಾದ ಸಂಗೀತ ಸಾಧನ ಇದರಲ್ಲಿ ಅಲ್ಲಲ್ಲಿ ರಂಧ್ರವಿದ್ದು ಅದರ ಮೂಲಕ ಗಾಳಿಯನ್ನು ಲಯಬದ್ಧವಾಗಿ ಊದುವುದರ ಮೂಲಕ ಸಂಗೀತನಾದವನ್ನು ಹೊರಡಿಸ ಬಹುದು.

ಶೋಭಾಯಮಾನವಾದ ಉಡುಪನ್ನು ಧರಿಸಿರುವವರು, ಭೋಗದಲ್ಲಿ ಭಾಳುವವರು ರಾಜನ ಅರಮನೆಗಳಲ್ಲಿ ವಾಸಿಸುವವರು (ಲೂಕ 7:25 ULB)

  • ರಾಜನ ಅರಮನೆ - ವಿಶಾಲವಾದ, ದೊಡ್ಡ, ಭವ್ಯವಾದ ಆಡಂಬರದ ಮನೆ ಅಲ್ಲಿ ರಾಜನು ವಾಸಿಸುತ್ತಾನೆ.

ಭಾಷಾಂತರ ತತ್ವಗಳು.

  • ಸಾಧ್ಯವಾದಷ್ಟೂ ನಿಮ್ಮ ಭಾಷೆಯಲ್ಲಿರುವ ಪದಗಳನ್ನೇ ಬಳಸಿ.
  • ಭಾವಾಭಿವ್ಯಕ್ತಿಯ ವಾಕ್ಯಗಳನ್ನು, ಸನ್ನಿವೇಶಗಳನ್ನು ಆದಷ್ಟು ಸಂಕ್ಷಿಪ್ತವಾಗಿ ಹೇಳಿ.
  • ದೇವರ ಆಜ್ಞೆಗಳು ಮತ್ತು ಐತಿಹಾಸಿಕವಾದ,ನಿಖರವಾದ ಮಾಹಿತಿಗಳನ್ನು ಪುನರ್ ಉಲ್ಲೇಖಿಸಿ.

ಭಾಷಾಂತರ ಕೌಶಲ್ಯಗಳು.

ನೋಡಿ ಅಪರಿಚಿತ ಭಾಷಾಂತರ ಭಾಷಾಂತರ ಮಾಡುವ ಪದಗಳು, ಅಥವಾ ನುಡಿಗಟ್ಟುಗಳು ನಿಮ್ಮ ಭಾಷೆಯಲ್ಲಿ ಅಪರಿಚಿತವಾಗಿದ್ದರೆ ಹೆಚ್ಚಿನ ಮಾಹಿತಿ ದೊರೆಯುತ್ತದೆ.


. ವಿವರಣೆ ನೀಡುವ ಟಿಪ್ಪಣಿಗಳು

Translation Manual :: Use the translationHelps when Translating :: Using the translationNotes :: Notes that Explain

ವಿವರಣೆ

ಕೆಲವೊಮ್ಮೆ ಒಂದು ಪದ ಅಥವಾ ನುಡಿಗಟ್ಟು ULB,ಯಲ್ಲಿ ಯಾವ ರೀತಿಯ ಅರ್ಥ ನೀಡುತ್ತದೆ ಎಂದು ಗೊತ್ತಿರುವುದಿಲ್ಲ ಮತ್ತು ಇದನ್ನು UDBಯಲ್ಲಿ ಉಪಯೋಗಿಸಲಾಗುತ್ತದೆ. ಈ ವಿಚಾರದ ಬಗ್ಗೆ ಟಿಪ್ಪಣಿಯಲ್ಲಿ ವಿವರಿಸಲಾಗಿದೆ. ಈ ಎಲ್ಲಾ ವಿವರಣೆಗಳು ಪದ ಅಥವಾ ಒಂದು ನುಡಿಗಟ್ಟನ್ನು ಅರ್ಥಮಾಡಿಕೊಳ್ಳಲು ವಿವರಣೆ ಕೊಡುತ್ತದೆ. ವಿವರಣೆಗಳನ್ನು ನಿಮ್ಮ ಸತ್ಯವೇದದಲ್ಲಿ ಭಾಷಾಂತರಿಸಬಾರದು. ನೀವು ವಾಕ್ಯ ಭಾಗವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇದನ್ನು ಬಳಸಬೇಕು. ಇದರಿಂದ ನೀವು ಸತ್ಯವೇದವನ್ನು ನಿಖರವಾಗಿ ಭಾಷಾಂತರಿಸಲು ಸಾಧ್ಯವಾಗುತ್ತದೆ.

###ಭಾಷಾಂತರ ಟಿಪ್ಪಣಿಗಳ ಉದಾಹರಣೆಗಳು.

ಸರಳವಾದ ವಿವರಣೆಗಳು ಪದ ಅಥವಾ ನುಡಿಗಟ್ಟುಗಳ ಬಗ್ಗೆ ಪೂರ್ಣವಾಕ್ಯಗಳಲ್ಲಿ ಬರೆಯಲ್ಪಟ್ಟಿವೆ. ಇವುಗಳು ದೊಡ್ಡ ಅಕ್ಷರಗಳಿಂದ (capital letter) ಪ್ರಾರಂಭವಾಗಿ ಕಾಲಾವಧಿಯಿಂದ (“.”) ಕೊನೆಗೊಳ್ಳುತ್ತವೆ.

ಬೆಸ್ತರು ದೋಣಿಗಳಿಂದ ಹೊರಬಂದು ಬಲೆಗಳನ್ನು ತೊಳೆಯುತ್ತಿದ್ದರು .(ಲೂಕ 5:2 ULB)

  • ಅವರ ಬಲೆಗಳನ್ನು ತೊಳೆಯುತ್ತಿದ್ದರು - ಅವರು ಅವರ ಮೀನು ಹಿಡಿಯುವ ಬಲೆಗಳನ್ನು ತೊಳೆಯುತ್ತಿದ್ದರು. ಮೀನು ಹಿಡಿಯಲು ಬೆಸ್ತರು ಬಲೆಗಳನ್ನು ಬಳಸುತ್ತಾರೆ ಎಂದು ನಿಮಗೆ ಗೊತ್ತಿಲ್ಲದಿದ್ದರೆ. ಅವರು ಬಲೆಗಳನ್ನು ಏಕೆ ತೊಳೆಯುತ್ತಿದ್ದರು ಎಂದು ಆಶ್ಚರ್ಯ ಪಡುತ್ತಿದ್ದಿರಿ. ಈ ವಿವರಣೆ ನಿಮ್ಮನ್ನು “ತೊಳೆಯುತ್ತಿದ್ದರು” ಮತ್ತು “ಬಲೆಗಳು” ಎಂಬ ಪದಗಳಿಗೆ ಇನ್ನೂ ಒಳ್ಳೆಯ ಪರ್ಯಾಯ ಪದಗಳನ್ನು ಬಳಸಲು ಅನುಕೂಲವಾಗಬಹುದು

ಅವರು ತಮ್ಮ ಇನ್ನೊಂದು ದೋಣಿಯಲ್ಲಿದ್ದ ಜೊತೆಗಾರರನ್ನು ಕರೆದರು (ಲೂಕ 5:7 ULB)

  • ಸನ್ನೆಮಾಡಿದರು - ಅವರು ತಮ್ಮ ಜೊತೆಗಾರರು ದೋಣಿಯಿಂದ ದೂರವಿದ್ದುದರಿಂದ ಅವರನ್ನು ಸನ್ನೆಮಾಡಿ ಕರೆದರು ಇದರಿಂದ ನೀವು ಅವರು ಯಾವ ರೀತಿಯ ಸನ್ನೆ ಮಾಡಿರಬಹುದು ಎಂದು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಅವರು ಮಾಡಿದ ಸನ್ನೆಯನ್ನು ಜೊತೆಗಾರರು ಅವರ ದೋಣಿಯಿಂದ ನೋಡಲು ಸಾಧ್ಯವಾಗಿತ್ತು. ಈ ವಿವರಣೆ ಅವರು ಮಾಡಿದ ಸನ್ನೆಯನ್ನು ಇನ್ನೂ ಸೂಕ್ತವಾದ ಪದಗಳಿಂದ "ಹೇಳಲು " ಸಾಧ್ಯವಾಗುತ್ತದೆ.

ತಾಯಿಯ ಗರ್ಭದಲ್ಲಿರುವಾಗ ಪವಿತ್ರಾತ್ಮನಿಂದ ತುಂಬಿದವನಾಗಿದ್ದನು . (ಲೂಕ 1:14 ULB)

  • ಅವನು ಅವನ ತಾಯಿಯ ಗರ್ಭದಲ್ಲಿರುವಾಗಲೂ - “ಇರುವಾಗಲೂ” ಎಂಬ ಪದ ಆಶ್ಚರ್ಯಕರ ವಾದ ಅರ್ಥವನ್ನು ಧ್ವನಿಸುತ್ತದೆ. "ಜನರು ಪವಿತ್ರಾತ್ಮ ಭರಿತರಾಗಿದ್ದಾರೆ " ಎಂಬುದನ್ನು ಕೇಳಿ ತಿಳಿದಿದ್ದರೂ. ಗರ್ಭದಲ್ಲಿರುವ ಶಿಶು ಪವಿತ್ರಾತ್ಮ ಭರಿತವಾಗಿರುವುದೆಂದರೆ ಇದೊಂದು ಅದ್ಭುತ ಸಂಗತಿ. ಇದರಿಂದ ಈ ಟಿಪ್ಪಣಿ ಇಲ್ಲಿ “ಇರುವಾಗಲೂ” ಎಂಬ ಪದವನ್ನು ಅರ್ಥಮಾಡಿಕೊಳ್ಳಲು, ವಾಕ್ಯದಲ್ಲಿ ಅದು ಹೇಗೆ ಧ್ವನಿಸುತ್ತದೆ, ಹಾಗೆಯೇ ಇಂತಹ ಪದಗಳಿಂದ ಆಶ್ಚರ್ಯಕರವಾದ ಸಂಗತಿ ಹೇಗೆ ಪ್ರಕಟಮಾಡಲು ಸಾಧ್ಯ ಎಂಬುದು ತಿಳಿಯುತ್ತದೆ.

ಪರ್ಯಾಯ ಪದಗಳ ಮತ್ತು ಸಮಾನಾರ್ಥಕ ನುಡಿಗಟ್ಟುಗಳ ಟಿಪ್ಪಣಿ.

Translation Manual :: Use the translationHelps when Translating :: Using the translationNotes :: Notes with Synonyms and Equivalent Phrases

ವಿವರಣೆ

ಕೆಲವು ಟಿಪ್ಪಣಿಗಳು ULB ಪ್ರತಿಯಿಂದ ಉಲ್ಲೇಖಿಸಿದ್ದಂಥ ಪದವನ್ನು ಅಥವಾ ನುಡಿಗಟ್ಟನ್ನು ಬದಲಾಯಿಸುವಂಥ ಭಾಷಾಂತರದ ಸಲಹೆಗಳನ್ನು ಒದಗಿಸುತ್ತವೆ. ವಾಕ್ಯದ ಅರ್ಥದಲ್ಲಿ ಯಾವುದೇ ಬದಲಾವಣೆ ಮಾಡದೆ ಈ ಬದಲಾವಣೆಗಳನ್ನು ಇದರಲ್ಲಿ ಸರಿಹೊಂದುವ ಹಾಗೆ ಮಾಡಬಹುದು. ಇವು ಪರ್ಯಾಯ ಪದಗಳು ಮತ್ತು ಸಮಾನಾರ್ಥಕ ನುಡಿಗಟ್ಟುಗಳು ಆಗಿವೆ ಮತ್ತು ಅವುಗಳನ್ನು ಉದ್ಧರಣ ಚಿಹ್ನೆ (" ") ಗಳಿಂದ ಬರೆಯಲಾಗಿದೆ. ಇವುಗಳು ULB ಪಠ್ಯದಲ್ಲಿರುವ ವಿಷಯ ಒಂದೇ ಆಗಿರುತ್ತದೆ. ULB ಯಲ್ಲಿರುವ ಪದ ಅಥವಾ ನುಡಿಗಟ್ಟಿಗೆ ಸಮಾನಾರ್ಥಕವಾದ ಸಹಜವಾದ ಪದಗಳು ನಿಮ್ಮ ಭಾಷೆಯಲ್ಲಿ ಇಲ್ಲದಿದ್ದರೆ ಆಗ ಈ ರೀತಿಯ ಟಿಪ್ಪಣಿಗಳು ಅದೇ ವಿಷಯವನ್ನು ಬೇರೊಂದು ರೀತಿಯಲ್ಲಿ ಹೇಳಲು ಸಹಾಯಕವಾಗಿರುತ್ತದೆ.

###ಭಾಷಾಂತರ ಟಿಪ್ಪಣಿಗಳ ಉದಾಹರಣೆಗಳು

ಕರ್ತನ ದಾರಿಯನ್ನು ಸಿದ್ಧಮಾಡಿರಿ, (ಲೂಕ 3:4 ULB)

  • ದಾರಿ - “ಹಾದಿ” ಅಥವಾ “ರಸ್ತೆ”. ಈ ಉದಾಹರಣೆಯಲ್ಲಿ “ಹಾದಿ” ಅಥವಾ “ರಸ್ತೆ” ಎಂಬ ಪದಗಳನ್ನು ULB ಯಲ್ಲಿರುವ “ದಾರಿ” ಪದವನ್ನು ಬಳಸಿ ಬದಲಾಯಿಸಬಹುದು. ನಿಮ್ಮ ಭಾಷೆಯಲ್ಲಿ “ದಾರಿ” “ಹಾದಿ” ಅಥವಾ “ರಸ್ತೆ” ಇದರಲ್ಲಿ ಯಾವುದು ಸಹಜವಾಗಿ ಹೇಳುತ್ತಾರೆ ಎಂದು ನೀವು ನಿರ್ಧರಿಸಬಹುದು.

ಅದೇರೀತಿ Deacons/ಡೀಕನ್ ಗಳು (ಸಭಾಸೇವಕರು) , ಗೌರವಪೂರ್ಣರಾಗಿರಬೇಕು ಅವರು ಎರಡು ಮಾತಿನವರು ಆಗಿರಬಾರದು. (1 ನೇ ತಿಮೊಥೆ 3:8 ULB)

“ಸಭಾಸೇವಕರ, ಅದೇ ರೀತಿ” - ಅದರಂತೆ ಸಭಾಸೇವಕರು ಅಥವಾ ಮೇಲ್ವಿಚಾರಕರಂತಹ ಸಭಾಸೇವಕರು. ಈ ಉದಾಹರಣೆಯಲ್ಲಿ “ಈ ರೀತಿಯಾಗಿ ಸಭಾಸೇವಕರು,” ಅಥವಾ “ಸಭಾಸೇವಕರು, ಮೇಲ್ವಿಚಾರಕರಂತೆ” ಎಂಬ ಪದಗಳಿಂದ ULB ಯಲ್ಲಿರುವ “ಸಭಾಸೇವಕರು, ಹೀಗೆ” ಎಂಬ ಪದವನ್ನು ಬದಲಾಯಿಸಬಹುದು. ಭಾಷಾಂತರಕಾರರಾದ ನೀವು ನಿಮ್ಮ ಭಾಷೆಯಲ್ಲಿ ಯಾವುದು ಸಹಜವಾದದ್ದು ಎಂಬುದನ್ನು ನಿರ್ಧರಿಸಬೇಕು


ಪರ್ಯಾಯ ಭಾಷಾಂತರ ಟಿಪ್ಪಣಿಗಳೊಂದಿಗೆ (AT)

Translation Manual :: Use the translationHelps when Translating :: Using the translationNotes :: Notes with Alternate Translations (AT)

ವಿವರಣೆ

ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಭಾಷಾಂತರ ಮಾಡಲು ಅಥವಾ ವಿಭಿನ್ನ ಮಾದರಿ ಬೇಕೆಂದರೆ ಪರ್ಯಾಯ ಭಾಷಾಂತರದಿಂದ ULB ಮಾದರಿಯನ್ನು ಭಾಷಾಂತರಿಸುವ ಮಾರ್ಗ ದೊರೆಯುತ್ತದೆ. ULB ಮಾದರಿಯಲ್ಲಿ ಭಾಷಾಂತರ ಮಾಡುವಾಗ ಅಥವಾ ಈ ವಿಷಯ ಭಾಷಾಂತರವಾಗುವಾಗ ತಪ್ಪಾಗಿ ಭಾಷಾಂತರವಾಗುತ್ತದೆ ಇಲ್ಲವೇ, ಅಸ್ಪಷ್ಟ ಮತ್ತು ಅಸಹಜವಾಗಿ ಭಾಷಾಂತರವಾಗುತ್ತದೆ ಎಂಬ ಸಂದರ್ಭ ಬಂದಾಗ ಪರ್ಯಾಯ ಭಾಷಾಂತರದ ಅವಶ್ಯಕತೆ ಇರುತ್ತದೆ.

ಪರ್ಯಾಯ ಭಾಷಾಂತರದ ಸಲಹೆಗಳಲ್ಲಿ, ಈ ಕೆಲವು ವಿಷಯದಲ್ಲಿ ಭಾಷಾಂತರ ಆಗುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಧ್ವನಿತ / ಅಡಕವಾಗಿರುವ ಮಾಹಿತಿಯನ್ನುಸ್ಪಷ್ಟವಾಗಿ ತಿಳಿಸುವಾಗ ಕರ್ತರೀ ಕರ್ಮಣಿ ವಾಕ್ಯಗಳ ಬದಲಾವಣೆ, ಅಲಂಕಾರಿಕ ಪದಗಳನ್ನು /ವಾಕ್ಯಗಳನ್ನು ಹೇಳುವಾಗ ಪ್ರಶ್ನೆಗಳನ್ನು ಸರಳವಾಕ್ಯವಾಗಿ ಬದಲಾಯಿಸುವಾಗ ಇಂತಹ ಬದಲಾವಣೆ ಆಗುತ್ತದೆ. ಟಿಪ್ಪಣಿಯಲ್ಲಿ ಪರ್ಯಾಯ ಭಾಷಾಂತರ ಮಾಡುವಾಗ ವಿವರಣೆಯನ್ನು ನೀಡುವ ಸಂದರ್ಭದಲ್ಲಿ ವಿಷಯಗಳನ್ನು ವಿವರಿಸುವ ಪುಟದಲ್ಲಿನ ಲಿಂಕ್ ನೋಡಬೇಕಿದೆ

ಭಾಷಾಂತರದ ಟಿಪ್ಪಣಿ ಉದಾಹರಣೆಗಳು

“AT:” ಎನ್ನುವ ಪದ ಪರ್ಯಾಯ ಭಾಷಾಂತರ ಎಂದು ತೋರಿಸುತ್ತದೆ. ಕೆಲವು ಉದಾಹರಣೆಗಳು

ಅನನ್ಯವಾಗಿರುವ ಮಾಹಿತಿಯನ್ನು ಸ್ಪಷ್ಟಪಡಿಸುವುದು.

ರಾಜನು ವಿಧಿಸಿದ ಯಾವ ನಿಬಂಧನೆಯಾಗಲಿ, ನಿಯಮವಾಗಲಿ ರದ್ದಾಗಬಾರದು .ಎಂಬ ಧರ್ಮಸೂತ್ರವು ಮೇಧ್ಯರಲ್ಲಿಯೂ, ಪಾರಸಿಯರಲ್ಲಿಯೂ ಉಂಟೆಂಬುದು ನಿನಗೆ ಗೊತ್ತಿರಲಿ. (ದಾನಿಯೇಲ 6:15 ULB)

  • ಯಾವ ನಿಭಂದನೆಯಾಗಲೀ, ನಿಯಮವಾಗಲೀ ರದ್ದಾಗಬಾರದು. - ಎಂಬ ವಾಕ್ಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ಸೇರಿಸಬಹುದು. ಪರ್ಯಾಯ ಭಾಷಾಂತರ: ಯಾವ ನಿಭಂದನೆಯನ್ನು ರದ್ದುಮಾಡಲಾಗುವುದಿಲ್ಲ. ದಾನಿಯೇಲನನ್ನು ಸಿಂಹಗಳಿರುವ ಗವಿಯಲ್ಲಿ ಹಾಕಬೇಕು (ಸ್ಪಷ್ಟವಾದ ಮಾಹಿತಿಯನ್ನು ನೋಡಿ)

ವಾಕ್ಯಗಳಿಗೆ ಸಹಕಾರಿಯಾಗಿ ಬರುವ ವಾಕ್ಯಗಳು ರಾಜನು ಅರ್ಥಮಾಡಿಕೊಳ್ಳುವಂತೆ ಹೇಳಲಾಗಿದೆ, ರಾಜನ ನಿಬಂಧನೆಗಳು ಮತ್ತು ನಿಯಮಗಳನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಲಾಗುತ್ತಿದೆ. ಮೂಲ ಲೇಖಕ ಅಥವಾ ಮಾತನಾಡುತ್ತಿರುವ ವ್ಯಕ್ತಿ ಸ್ಪಷ್ಟವಾಗಿ ತಿಳಿಸಲು ಅಸಮರ್ಥವಾದ ವಿಷಯವನ್ನು ಭಾಷಾಂತರಗಾರರು ಸ್ಪಷ್ಟವಾಗಿ ತಿಳಿಸಲು ಪ್ರಯತ್ನಿಸಬೇಕು.

ಕರ್ಮಣಿ ಪ್ರಯೋಗದಿಂದ ಕರ್ತರೀ ಪ್ರಯೋಗಕ್ಕೆ ಬದಲಾವಣೆ.

ಪವಿತ್ರಾತ್ಮನನ್ನು ದೂಷಿಸಿದವನಿಗೆ ಕ್ಷಮಾಪಣೆಯಿಲ್ಲ (ಲೂಕ 12:10 ULB)

  • ಇದನ್ನು ಕ್ಷಮಿಸಲಾಗುವುದಿಲ್ಲ ಇದನ್ನು ಕರ್ತರಿ ಪ್ರಯೋಗದ ಮೂಲಕ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ ದೇವರು ಅವನನ್ನು ಕ್ಷಮಿಸುವುದಿಲ್ಲ ಇಲ್ಲಿರುವ ನಕಾರಾತ್ಮಕ ಕ್ರಿಯಾಪದವನ್ನು ಸಕಾರಾತ್ಮಕ ಕ್ರಿಯಾಪದ " ಕ್ಷಮೆ " ಇದರ ವಿರುದ್ಧಪದವನ್ನು ಬಳಸಿ ಅರ್ಥ ಕೆಡದಂತೆ ಬಳಸಬಹುದು. ಪರ್ಯಾಯ ಭಾಷಾಂತರ “ದೇವರು ಆತನನ್ನು ಯಾವಾಗಲೂ ತಪ್ಪಿತಸ್ಥನೆಂದು ನಿರ್ಧರಿಸುತ್ತಾನೆ” "(ನೋಡಿ: ಕರ್ತರಿ ಕರ್ಮಣಿ ಪ್ರಯೋಗ) ನೋಡಿ

ಈ ಟಿಪ್ಪಣಿ ನಮಗೆ ಭಾಷಾಂತರಗಾರರು ಈ ವಾಕ್ಯವನ್ನು ಈ ಕರ್ಮಣಿ ಪ್ರಯೋಗದಲ್ಲಿ ಬಳಸಲು ಒಂದು ಉದಾಹರಣೆಯಾಗಿ) ಸಹಾಯಮಾಡುತ್ತದೆ. ಅವರ ಭಾಷೆಯಲ್ಲಿ ಕರ್ಮಣಿ ಪ್ರಯೋಗ ಇಲ್ಲದಿದ್ದರೂ ಇದು ಸಹಾಯಮಾಡುತ್ತದೆ.

ಅಲಂಕಾರಿಕ ಪ್ರಶ್ನೆಗಳು

ಸಾಲನೇ, ಸಾಲನೇ ನನ್ನನ್ನು ಏಕೆ ಹಿಂಸೆ ಪಡಿಸುತ್ತಿದ್ದಿ?(ಆ.ಕೃ 9:4 ULB)

  • ನನ್ನ ಏಕೆ ಹಿಂಸೆ ಪಡಿಸುತ್ತಿದ್ದಿ? ಈ ಅಲಂಕಾರಿಕ ಪ್ರಶ್ನೆ ಸಾಲನ ತಿದ್ದುಪಡಿಗೆ ಬದಲಾವಣೆಯನ್ನು ತಿಳಿಸುತ್ತದೆ ಕೆಲವು ಭಾಷೆಯಲ್ಲಿ ಸರಳವಾಕ್ಯಗಳು ಹೆಚ್ಚು ಸಹಜವಾಗಿ ಮೂಡಿ ಬರುತ್ತವೆ): “ನೀನು ನನ್ನನ್ನು ಹಿಂಸಿಸುತ್ತಿದ್ದೀ !” ಅಥವಾ ಆದೇಶ ವಾಕ್ಯ ಬಳಸಬಹುದು.(ಪರ್ಯಾಯ ಭಾಷಾಂತರ): “ನನ್ನನ್ನು ಹಿಂಸಿಸುವುದನ್ನು ನಿಲ್ಲಿಸು!” (ನೊಡಿ: ಅಲಂಕಾರಿಕ ಪ್ರಶ್ನೆಗಳು)

ಭಾಷಾಂತರದ ಸಲಹೆಗಳು ಇಲ್ಲಿ ಪರ್ಯಾಯ ರೀತಿಯ ಭಾಷಾಂತರವನ್ನು ಒದಗಿಸುತ್ತದೆ (ಪರ್ಯಾಯ ಭಾಷಾಂತರ) ನಿಮ್ಮ ಭಾಷೆಯಲ್ಲಿ ತಿದ್ದುಪಡಿಗೆ / ಬದಲಾವಣೆ ತರಲು ಬಳಸುವು ಪರಿಣಾಮಕಾರಿಯಾದ ಪದಗಳು, ಪಶ್ನಾರ್ಥಕ ಪದಗಳು ಇಲ್ಲದಿದ್ದರೆ ಪರ್ಯಾಯಪದ ಬಳಸಬಹುದು.


UDB ಯಲ್ಲಿನ ಉಲ್ಲೇಖ (Quotes) ಹೊಂದಿರುವ ಟಿಪ್ಪಣಿಗಳು.

Translation Manual :: Use the translationHelps when Translating :: Using the translationNotes :: Notes that Clarify the UST Translation

ವಿವರಣೆ

ಕೆಲವೊಮ್ಮೆ UDB ಯಿಂದ ತೆಗೆದ ಭಾಷಾಂತರಕ್ಕಾಗಿ ಟಿಪ್ಪಣಿ ಸಲಹೆ ನೀಡುತ್ತದೆ. ಅಂತಹ ಸಂದರ್ಭದಲ್ಲಿ UDB ಯ ವಾಕ್ಯಭಾಗವು “UDB.” ಯಿಂದಲೇ ಅನುಸರಿಸಿ ಭಾಷಾಂತರವಾಗುವುದು

ಭಾಷಾಂತರ ಟಿಪ್ಪಣಿಗಳು ಉದಾಹರಣೆಗಳು.

ಪರಲೋಕದಲ್ಲಿ ಆಸನಾರೂಢನಾಗಿರುವಾತನು ಅವರನ್ನು ಪರಿಹಾಸ್ಯ ಮಾಡುವನು (ದಾ.ಕೀ.2:4 ULB) ಆದರೆ ಪರಲೋಕದಲ್ಲಿ ಸಿಂಹಾಸನಾರೂಢನಾಗಿರುವಾತನು ಅವರನ್ನು ನೋಡಿ ನಗುವನು (ದಾ.ಕೀ. 2:4 UDB)

ಈ ವಾಕ್ಯವಿರುವ ಟಿಪ್ಪಣಿ ಈ ರೀತಿ ಹೇಳುತ್ತದೆ.

  • ಪರಲೋಕದಲ್ಲಿ ಆತನು ಆಸನಾರೂಢನಾಗಿದ್ದಾನೆ - ಇಲ್ಲಿ ಆಸನಾರೂಢನಾಗಿದ್ದಾನೆ ಎಂಬುದು ಆಡಳಿತವನ್ನು ಪ್ರತಿನಿಧಿಸುತ್ತದೆ. ಆತನು ಕುಳಿತಿರುವುದನ್ನು ಸೂಚಿಸಿರುವುದು ಸ್ಪಷ್ಟವಾಗಿದೆ. AT: " ಪರಲೋಕದಲ್ಲಿ ಆಡಳಿತ ಅಥವಾ ಪರಲೋಕದಲ್ಲಿ ಆತನ ಸಿಂಹಾಸನದ ಮೇಲೆ ಕುಳಿತಿರುವಾತನು " " (UDB) (See: Metonymy and Explicit)

" ಇಲ್ಲಿ ಪರಲೋಕದಲ್ಲಿ ಸಿಂಹಾಸನಾರೂಢನಾಗಿ ಇರುವನು " ಎಂಬ ನುಡಿಗಟ್ಟನ್ನು ವಿವರಿಸಲು ಎರಡು ಮುಖ್ಯ ಅಂಶಗಳನ್ನು ಭಾಷಾಂತರಕ್ಕಾಗಿ ಶಿಫಾರಸ್ಸು ಮಾಡಿದೆ. ಮೊದಲನೆಯದು" ಸಿಂಹಾಸನಾರೂಢನಾಗಿರುವನು" ಎಂಬುದನ್ನು ಸ್ಪಷ್ಟವಾಗಿ ಪ್ರತಿನಿಧಿಸುತ್ತದೆ. ಎರಡನೆಯದು ಆಡಳಿತ ನಡೆಸುವ ಬಗ್ಗೆ ಸೂಚನೆ ನೀಡಿದರು ಆತನು ಸಿಂಹಾಸನದ ಮೇಲೆ ಕುಳಿತಿರುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಈ ಸಲಹೆ UDB ಯಿಂದ ದೊರೆತಿದೆ.

ಅವನು ಯೇಸುವನ್ನು ನೋಡಿದೊಡನೆ ಅವನು ಮುಖ ಅಡಿಮಾಡಿ ಬಿದ್ದನು (ಲೂಕ 5:12 ULB) ಅವನು ಯೇಸುವನ್ನು ನೋಡಿದಾಗ ನೆಲದಮೇಲೆ ಅಡ್ಡಬಿದ್ದು ನಮಸ್ಕರಿಸಿದನು . (ಲೂಕ5:12 UDB)

ಈ ವಾಕ್ಯದ ಟಿಪ್ಪಣಿ ಹೀಗೆ ಹೇಳುತ್ತದೆ.

  • ಅವನು ಮುಖ ಅಡಿಮಾಡಿ ಬಿದ್ದನು - - ಅಂದರೆ ಮಂಡಿಯೂರಿ ಮುಖವನ್ನು /ಹಣೆಯನ್ನು ನೆಲಕ್ಕೆ ಮುಟ್ಟಿಸಿದನು ಇಲ್ಲವೇ ಭೂಮಿಯವರೆಗೆ ಬಾಗಿ ನಮಸ್ಕರಿಸಿದ(UDB)

(UDB)ಯಿಂದ ಆಯ್ದ ಪದಗಳು ಭಾಷಾಂತರಕ್ಕೆ ಇನ್ನೊಂದು ಸಲಹೆಯನ್ನು ನೀಡಿದೆ.


ಪರ್ಯಾಯ ಅರ್ಥಗಳನ್ನು ಹೊಂದಿರುವ ಟಿಪ್ಪಣಿಗಳು.

Translation Manual :: Use the translationHelps when Translating :: Using the translationNotes :: Notes that have Alternate Meanings

####ವಿವರಣೆ

ಸತ್ಯವೇದದ ವಿದ್ವಾಂಸರು ಸತ್ಯವೇದದಲ್ಲಿ ಬರುವ ಪದಗಳು ಮತ್ತು ಪದಗುಚ್ಛಗಳಿಗೆ ವಿಭಿನ್ನವಾದ ಅರ್ಥಗಳನ್ನು ಹೊಂದಿರುತ್ತಾರೆ. ಅಂತಹ ಸಮಯದಲ್ಲಿ ಪರ್ಯಾಯ ಅರ್ಥ ನೀಡುವ ಪದಗಳನ್ನು ಪ್ರಸ್ತಾಪಮಾಡುತ್ತಾರೆ. ಟಿಪ್ಪಣಿಗಳು ULB ವಾಕ್ಯಭಾಗವನ್ನು ಅನುಸರಿಸಿ ವಿವರಣೆ ನೀಡಿ ಸಂಭವನೀಯ ಅರ್ಥ ನೀಡುವ ಪದಗಳಿಂದ ಪ್ರಾರಂಭಮಾಡಬಹುದು

ಅರ್ಥಗಳನ್ನು ಎಣಿಸಿ ಸಂಖ್ಯೆ ನೀಡಲಾಗುವುದು, ಸತ್ಯವೇದದ ವಿದ್ವಾಂಸರು ಮೊದಲ ಪದವನ್ನೇ ಸರಿಯಾದ ಪದವೆಂದು ಪರಿಗಣಿಸುತ್ತಾರೆ. ಒಂದು ಪದದ ಕ ಅರ್ಥ ಭಾಷಾಂತರ ಮಾಡುವಲ್ಲಿ ಸಹಾಯ ಮಾಡುವವರಾದರೆ ಅದನ್ನು ಉಪಯೋಗಿಸಬಹುದು. ಆದರೆ ಅದಕ್ಕೆ " " ಈ ಚಿಹ್ನೆಗಳನ್ನು ಬಳಸಬೇಕು. ಭಾಷಾಂತರಗಾರರು ಯಾವ ಪದವನ್ನು ಭಾಷಾಂತರ ಮಾಡಬೇಕೆಂದು ನಿರ್ಧರಿಸಬೇಕು. ಭಾಷಾಂತರಗಾರರು ಮೊದಲ ಅರ್ಥವನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಪರ್ಯಾಯ ಅರ್ಥ ನೀಡುವ ಪದವನ್ನು ಬಳಸಬಹುದು ಇದು ಭಾಷಾಂತರ ಆಗುತ್ತಿರುವ ಸಮುದಾಯದ ಜನರು ಸತ್ಯವೇದದ ಇತರ ಪ್ರತಿಗಳಲ್ಲಿರುವ ಅರ್ಥವನ್ನು ಅರ್ಥಮಾಡಿಕೊಂಡು ಗೌರವಿಸಿದರೆ ಆ ಪದವನ್ನು ಬಳಸಬಹುದು.

####ಭಾಷಾಂತರ ಟಿಪ್ಪಣಿಗಳ ಉದಾಹರಣೆಗಳು.

ಆದರೆ ಕಡೆಯದಾಗಿ ಉಳಿಸಿಕೊಂಡ ಕೆಲವು ಕೂದಲನ್ನು ನಿನ್ನ ಮೇಲಂಗಿಯ ಅಂಚಿನ ಮಡಿಕೆಯಲ್ಲಿ ಕಟ್ಟು . (ಯೆಹೆಜ್ಜೇಲ 5:3 ULB)

  • ಮೇಲಂಗಿಯ ಅಂಚಿನ ಮಡಿಕೆ - ಸಂಭವನೀಯ ಅರ್ಥಗಳು 1. ನಿನ್ನ ತೋಳಿನ ಮೇಲಿರುವ ಮೇಲಂಗಿ (ತೋಳಬಟ್ಟೆ) (UDB) or 2) ಮೇಲಂಗಿಯ ಕೊನೆಯ ಭಾಗ ಅಂಚಿನಭಾಗ 3. ಮೇಲಂಗಿಯನ್ನು ಮಡಚಿ ಹೊಲೆದಿರುವ ಭಾಗ ಸೊಂಟಪಟ್ಟಿಯಲ್ಲಿ ಸೇರಿರುವುದು

ಈ ಟಿಪ್ಪಣಿಯು ULB ವಾಕ್ಯಭಾಗವನ್ನು ಅನುಸರಿಸಿ ಮೂರು ಸಂಭವನೀಯ ಅರ್ಥವನ್ನು ಸೂಚಿಸುತ್ತದೆ. " ನಿನ್ನ ಮೇಲಂಗಿಯ ಮಡಚಿದ ಭಾಗ ಎಂದರೆ ಮೇಲಂಗಿಯ ಸಡಿಲವಾದ ಭಾಗ ಎಂಬುದನ್ನು ಸೂಚಿಸುತ್ತದೆ. ಬಹುಪಾಲು ವಿದ್ವಾಂಸರು ಇದು ತೋಳಿನ ಭಾಗದ ಬಟ್ಟೆಗೆ ಸಂಬಂಧಿಸಿದ್ದು ಎಂದು ಅಭಿಪ್ರಾಯ ಪಡುತ್ತಾರೆ. ಇದು ಮೇಲಂಗಿಯ ಕೆಳಗಿನ ಭಾಗವೂ ಆಗಿರಬಹುದು ಇಲ್ಲವೇ ಸೊಂಟದ ಬಳಿ ಇರುವ ನಡುಪಟ್ಟಿಯ ಭಾಗವೂ ಇರಬಹುದು.

ಆದರೆ ಸಿಮೋನ ಪೇತ್ರನು ಅದನ್ನು ನೋಡಿದೊಡನೆ ಯೇಸುವಿನ ಮೊಣಕಾಲಿನ ಮೇಲೆ ಬಿದ್ದನು (ಲೂಕ 5:8 ULB)

  • ಯೇಸುವಿನ ಮೊಣಕಾಲಿನ ಮೇಲೆ ಬಿದ್ದನು - ಸಂಭವನೀಯ ಅರ್ಥಗಳು 1. “ಯೇಸುವಿನ ಮುಂದೆ ಮೊಣಕಾಲೂರಿದನು”. 2. “ಯೇಸುವಿನ ಕಾಲಿಗೆ ಬಾಗಿ ನಮಸ್ಕರಿಸಿದನು” 3. “ಯೇಸುವಿಗೆ ಸಾಷ್ಠಾಂಗವೆರಗಿದನು”

ಪೇತ್ರನು ಆಕಸ್ಮಿಕವಾಗಿ ಬೀಳಲಿಲ್ಲ. ಅವನು ಯೇಸುವಿನ ಬಗ್ಗೆ ವಿಧೇಯತೆ ಮತ್ತು ಗೌರವದಿಂದ ಈ ರೀತಿ ಮಾಡಿದನೆಂಬುವುದಕ್ಕೆ ಗುರುತು. ಇಲ್ಲಿ ಟಿಪ್ಪಣಿಯಲ್ಲಿ ಯೇಸುವಿನ ಮೊಣಕಾಲಿನ ಮೇಲೆ ಏನು ಬಿದ್ದಿತು ಎಂದು ತಿಳಿಸುವ ಅರ್ಥ. ಮೊದಲು ನೀಡಿರುವ ಅರ್ಥ ಸರಿಯಾದರೂ ಇನ್ನೆರಡು ಅರ್ಥಗಳು ಸಹಾ ಸಂಭವನೀಯವಾದುದು. ನಿಮ್ಮ ಭಾಷೆಯಲ್ಲಿ ಈ ರೀತಿಯ ಸಾಮಾನ್ಯ ಅಭಿವ್ಯಕ್ತಿಗಳು ವಿವಿಧ ಕ್ರಿಯೆಗಳನ್ನು ಒಳಗೊಂಡಿದ್ದರೆ ನೀವು ಹೆಚ್ಚು ನಿರ್ದಿಷ್ಠವಾಗಿ ಹೇಳುವ ಸಂಭವನೀಯ ಅರ್ಥದ ಪದವನ್ನು ಪೇತ್ರ ನು ಮಾಡಿದ ಎಂಬುವುದರ ಬಗ್ಗೆ ಬಳಸಬಹುದು.

ಸೀಮೋನ ಪೇತ್ರ ಏಕೆ ಹೀಗೆ ಮಾಡಿದ ಎಂಬುದರ ಬಗ್ಗೆ ಆಲೋಚಿಸಲೂ ಸಹ ಇದು ಸಹಾಯ ಮಾಡುತ್ತದೆ ಮತ್ತು ಯಾವ ರೀತಿಯ ಕ್ರಿಯೆಯನ್ನು ಬಳಸಿ ಅದೇ ರೀತಿಯ ಮನೋಭಾವನೆಯನ್ನು ವ್ಯಕ್ತಪಡಿಸಲು, ವಿಧೇಯತೆ ಮತ್ತು ಗೌರವದ ಬಗ್ಗೆ ನಿಮ್ಮ ಸಂಸ್ಕೃತಿಯಲ್ಲಿರುವ ಸೂಕ್ತ ಪದವನ್ನು ಬಳಸಬಹುದು.


ಟಿಪ್ಪಣಿಯೊಂದಿಗೆ ಸಂಭವನೀಯ ಅರ್ಥಗಳು .

Translation Manual :: Use the translationHelps when Translating :: Using the translationNotes :: Notes with Probable or Possible Meanings

ವಿವರಣೆ

ಕೆಲವೊಮ್ಮೆ ಸತ್ಯವೇದ ವಿದ್ವಾಂಸರು ಸತ್ಯವೇದದಲ್ಲಿ ಬರುವ ನಿರ್ದಿಷ್ಟ ಪದಗುಚ್ಛಗಳು, ಅಥವಾ ವಾಕ್ಯಗಳಲ್ಲಿ ಬರುವ ಅರ್ಥಗಳನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. ಈ ಕೆಲವು ಕಾರಣಗಳು ಇಲ್ಲಿವೆ.

  1. ಪ್ರಾಚೀನ ಸತ್ಯವೇದದ ವಾಕ್ಯಭಾಗಗಳಲ್ಲಿ ಅನೇಕ ಚಿಕ್ಕ ವ್ಯತ್ಯಾಸಗಳು ಕಂಡುಬರುತ್ತವೆ.
  2. ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥಕೊಡುತ್ತದೆ. ಮತ್ತು ವಿವಿಧ ರೀತಿಯಲ್ಲಿ ಬಳಕೆಯಾಗುತ್ತದೆ.
  3. ಕೆಲವೊಮ್ಮೆ ಅದು ಯಾವ ಪದ ಎಂದು ಸ್ಪಷ್ಟವಾಗದೆ ಇರಬಹುದು (ಉದಾ: - ಸರ್ವನಾಮ) ಮತ್ತು ಕೆಲವೊಮ್ಮೆ ನಿರ್ದಿಷ್ಟ ಪದಗುಚ್ಛವನ್ನು ಉಲ್ಲೇಖಿಸಬಹುದು.

ಭಾಷಾಂತರದ ಟಿಪ್ಪಣಿಗಳ ಉದಾಹರಣೆಗಳು

ಕೆಲವೊಮ್ಮೆ ವಿದ್ವಾಂಸರು ಒಂದು ಪದ ಅಥವಾ ಪದಗುಚ್ಛದ ಅರ್ಥ ಒಂದು ವಿಷಯದ ಬಗ್ಗೆ ಅರ್ಥೈಸಿದರೆ ಇನ್ನೂ ಕೆಲವರು ಹೆಚ್ಚಾಗಿ ಸಾಮಾನ್ಯ ಅರ್ಥಕೊಡುವ ಬಗ್ಗೆ ಹೇಳುತ್ತಾರೆ. ನಮ್ಮ ಟಿಪ್ಪಣಿಗಳು ಇಂತಹ ಸನ್ನಿವೇಶಗಳಲ್ಲಿ ಸಂಬವನೀಯ ಅರ್ಥಗಳನ್ನು ಕೊಡಲು ಪ್ರಾರಂಭಿಸುವುದಲ್ಲದೆ ಇವುಗಳ ಒಂದು ಪಟ್ಟಿಯನ್ನು ಸಂಖ್ಯೆಗಳಲ್ಲಿ ಗುರುತಿಸಿ ತಿಳಿಸಬಹುದು. ಆದರೆ ನಾವು ಮೊದಲು ಕೊಟ್ಟ ಅರ್ಥವನ್ನು ಶಿಫಾರಸ್ಸು ಮಾಡಬಹುದು. ಹಾಗಾಗಿ ನಿಮ್ಮ ಸಮುದಾಯದಲ್ಲಿ ಇರುವ ಜನರು ಬೇರೆ ಸತ್ಯವೇದವನ್ನು ಬಳಸುವ ಸಾಧ್ಯತೆ ಇದ್ದರೆ ಆಗ ಅದರಲ್ಲಿ ಇನ್ನೊಂದು ಸಾಧ್ಯವಾದ ಅರ್ಥಗಳನ್ನು ಉಪಯೋಗಿಸುವ ಬಗ್ಗೆ ನೀವು ಅದೇ ಪದ ಬಳಸಲು ನಿರ್ಧರಿಸುವುದು ಉತ್ತಮ.

ಸಿಮೋನ್ ಪೇತ್ರನು, ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು , " ಸ್ವಾಮಿ, ನಾನು ಪಾಪಾತ್ಮನು, ನನ್ನನ್ನು ಬಿಟ್ಟು ಹೋಗಬೇಕು " ಎಂದು ಕೇಳಿದನು (ಲೂಕe 5:8 ULB)

  • ಯೇಸುವಿನ ಮೊಣಕಾಲಿಗೆ ಬಿದ್ದು - ಇದರ ಸಂಭವನೀಯ ಅರ್ಥಗಳು 1. “ಯೇಸುವಿನ ಮುಂದೆ ಮೊಣಕಾಲೂರಿ” ಅಥವಾ 2. "ಯೇಸುವಿನ ಕಾಲಿಗೆ ಬಾಗಿ ನಮಸ್ಕರಿಸಿದ " ಅಥವಾ 3. “ಯೇಸುವಿನ ಮುಂದೆ ಸಾಷ್ಠಾಂಗವಾಗಿ ನಮಸ್ಕರಿಸಿದ” ಎಂಬುದು ಇವೆ. ಪೇತ್ರನು ಆಕಸ್ಮಿಕವಾಗಿ ಕಾಲಿಗೆ ಬೀಳಲಿಲ್ಲ. ಇದು ಪೇತ್ರನ ವಿಧೇಯತೆಯ ಗುರುತಾಗಿದೆ ಮತ್ತು ಯೇಸುವಿಗೆ ಗೌರವ ಸೂಚಿಸುವುದು.

ಭಾಷಾಂತರ ಕೌಶಲ್ಯಗಳು

  1. ಓದುಗರು ಎರಡೂ ರೀತಿಯ ಸಂಭವನೀಯ ಅರ್ಥಗಳನ್ನು ಅರ್ಥಮಾಡಿಕೊಳ್ಳುವಂತೆ ಭಾಷಾಂತರ ಮಾಡಬೇಕು.
  2. ನಿಮ್ಮ ಭಾಷೆಯಲ್ಲಿ ಇದೇನೋ ಸಂಭವನೀಯವಾಗುವಂತೆ ಆಗದಿದ್ದರೆ ಸರಿಯಾದ ಸೂಕ್ತವಾದ ಅರ್ಥಕೊಡುವಂತೆ ಭಾಷಾಂತರ ಮಾಡಬೇಕು.
  3. ಓದುಗರು ಸಹಜವಾಗಿ ಅರ್ಥಮಾಡಿಕೊಳ್ಳುವಂತೆ ಸೂಕ್ತ ಪದವನ್ನು ಬಳಸಲು ಸಾಧ್ಯವಾಗದಿದ್ದರೆ ಅರ್ಥಕೊಡುವಂತಹ ಪದವನ್ನು ಹುಡುಕಿ ಭಾಷಾಂತರಿಸಿ.

ಅಲಂಕಾರಗಳನ್ನು ಗುರುತಿಸುವ ಟಿಪ್ಪಣಿ.

Translation Manual :: Use the translationHelps when Translating :: Using the translationNotes :: Notes that Identify Figures of Speech

ವಿವರಣೆ

ಅಲಂಕಾರಗಳು ಎಂದರೆ ಯಾವುದೇ ವಿಷಯವನ್ನು ಅಕ್ಷರಷಃ ನೇರವಾಗಿ ಹೇಳದೆ ಇತರ ಪದಗಳೊಂದಿಗೆ ಸೇರಿಸಿ ಹೇಳುವುದು

ಅಂದರೆ ಇರುವ ಯಥಾಸ್ಥಿತಿಯ ಅರ್ಥವನ್ನು ಕೊಡುವಂತೆ ನೇರವಾದ ವಿಷಯಕ್ಕೆ ಪದವನ್ನು ಬಳಸುವ ಬದಲು ಇನ್ನೊಂದು ಪದ (ಅಲಂಕಾರ ಪದ) ಬಳಸುವುದು. ಅನೇಕ ರೀತಿಯ ಅಲಂಕಾರ ಪದಗಳು ಇವೆ. ಭಾಷಾಂತರ ಟಿಪ್ಪಣಿಯಲ್ಲಿ ವಾಕ್ಯಭಾಗಗಳಲ್ಲಿ ಬರುವ ಅಲಂಕಾರ ಪದಗಳಿಗೆ ಇರುವ ಅರ್ಥದ ವಿವರಣೆಯನ್ನು ಕೊಟ್ಟಿರುತ್ತಾರೆ. ಕೆಲವೊಮ್ಮೆ ಪರ್ಯಾಯ ಭಾಷಾಂತರವನ್ನು ಕೊಡಲಾಗುತ್ತದೆ. ಇದನ್ನು “ಪರ್ಯಾಯ ಭಾಷಾಂತರ” ಎಂದು ಗುರುತಿಸಲಾಗಿರುತ್ತದೆ.

ಇದರೊಂದಿಗೆ ಭಾಷಾಂತರ ಅಕಾಡೆಮಿಯೊಂದಿಗೆ (tA) ಲಿಂಕ್ ಹೆಚ್ಚಿನ ಮಾಹಿತಿಯನ್ನು ಕೊಡುವುದಲ್ಲದೆ ಅಲಂಕಾರಗಳಿಗೆ ಬೇಕಾದ ಭಾಷಾಂತರ ಕೌಶಲ್ಯಗಳನ್ನು ಕೊಡುತ್ತದೆ. ಮೂಲಭಾಷೆಯಲ್ಲಿರುವ ಅಲಂಕಾರದ ಅರ್ಥವನ್ನು ಗುರುತಿಸಿ ಉತ್ತಮ ಭಾಷಾಂತರ ಮಾಡಲು ಇದು ಅನುಕೂಲ ಕಲ್ಪಿಸುತ್ತದೆ. ನೀವು ಭಾಷಾಂತರ ಮಾಡುವ ಭಾಷೆಯಲ್ಲಿ ಸಮಾನ, ಸೂಕ್ತ ಅಲಂಕಾರ ಪದ ಸಿಗದೆ ಭಾಷಾಂತರ ಮಾಡಲಾಗದಿದ್ದರೆ ಸರಿಯಾಗಿ ಅರ್ಥವಾಗುವಂತೆ ಸೂಕ್ತ ಪದವನ್ನು ನಿಮ್ಮ ಭಾಷೆಯ ರೀತಿಯಲ್ಲೇ ಬಳಸಿ.

ಭಾಷಾಂತರ ಟಿಪ್ಪಣಿಗಳಿಗೆ ಉದಾಹರಣೆಗಳು.

ಅನೇಕರು ಬಂದು ನನ್ನ ಹೆಸರೆತ್ತಿಕೊಂಡು ನಾನು ಕ್ರಿಸ್ತನು ನಾನು ಕ್ರಿಸ್ತನು ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು. (ಮಾರ್ಕ್ 13:6 ULB)

  • ನನ್ನ ಹೆಸರೆತ್ತಿ ಸಂಭಾವ್ಯ ಅರ್ಥಗಳು 1. ಪರ್ಯಾಯ ಭಾಷಾಂತರ ನನ್ನ ಅಧಿಕಾರವನ್ನು ಉಪಯೋಗಿಸುವವರು ಅಥವಾ 2.ದೇವರು ನಮ್ಮನ್ನು ಕಳುಹಿಸಿದನು ಎಂದು ಹೇಳುವುದು ಮಿಟೋನಿಮಿ ಮತ್ತು ನುಡಿಗಟ್ಟು ನೋಡಿ ತಿಳಿಯಿರಿ.

ಈ ಟಿಪ್ಪಣಿಯಲ್ಲಿರುವ ಅಲಂಕಾರದ ಹೆಸರು ಮಿಟೋನಿಮಿ. ಇಲ್ಲಿ ಬಳಸಿರುವ “ನನ್ನ ಹೆಸರಿನಲ್ಲಿ” ಎಂಬ ನುಡಿಗುಚ್ಛ /ನುಡಿಗಟ್ಟಿನಲ್ಲಿ ಮಾತನಾಡುತ್ತಿರುವವರ (ಯೇಸುವಿನ ಹೆಸರನ್ನು ಉಲ್ಲೇಖಿಸಿಲ್ಲ) ಆದರೆ ಆತನ ಬಗ್ಗೆ ಮತ್ತು ಆತನ ಅಧಿಕಾರದ ಬಗ್ಗೆ ಇದೆ. ಈ ಟಿಪ್ಪಣಿ ಮಿಟೋನಿಮಿಯನ್ನು ಈ ವಾಕ್ಯಭಾಗದಲ್ಲಿ ಎರಡು ಪರ್ಯಾಯಪದಗಳನ್ನು ಭಾಷಾಂತರದಲ್ಲಿ ವಿವರಿಸಲಾಗಿದೆ. ಭಾಷಾಂತರ ಅಕಾಡೆಮಿ tA ಪುಟದಲ್ಲಿ ಮಿಟೋನಿಮಿ ಬಗ್ಗೆ ಲಿಂಕ್ ಇದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಿಟೋನಿಮಿ ಬಗ್ಗೆ ಕಲಿಯಬಹುದು. ಮತ್ತು ಮಿಟೋನಿಮಿಗಳನ್ನು ಭಾಷಾಂತರಿಸಲು ಸಾಮಾನ್ಯ ಕೌಶಲ್ಯಗಳು. ಏಕೆಂದರೆ ಈ ಪದಗುಚ್ಛವನ್ನು ನುಡಿಗಟ್ಟು ಎಂದು ಕರೆಯಬಹುದು. ಈ ಟಿಪ್ಪಣಿ ಒಂದು ಲಿಂಕ್ ಹೊಂದಿದೆ tA ಪುಟದಲ್ಲಿ ನುಡಿಗಟ್ಟುಗಳ ಬಗ್ಗೆ ವಿವರಿಸಿದೆ.

"ಎಲೈ ಸರ್ಪಜಾತಿಯ ಸಂತಾನವೇ ! ಮುಂದೆ ಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ಉಪದೇಶಮಾಡಿದವರು ಯಾರು? (ಲೂಕ 3:7 ULB)

  • ಎಲೈ ಸರ್ಪಜಾತಿಯ ಸಂತಾನವೇ ಇದೊಂದು ರೂಪಕ ಅಲಂಕಾರ. ಜನರುನ್ನು ಇಲ್ಲಿ ಸರ್ಪಗಳಿಗೆ ಹೋಲಿಸಲಾಗಿದೆ. ಅವು ಮರಣಕರವಾದ ಅಥವಾ ಅಪಾಯವಾದ ಸರ್ಪಗಳು ಮತ್ತು ದುಷ್ಟತನವನ್ನು ಪ್ರತಿನಿಧಿಸುತ್ತವೆ. ಪರ್ಯಾಯ ಭಾಷಾಂತರ "ಎಲೈದುಷ್ಟ, ವಿಷಕಾರಿ ಸರ್ಪಗಳೇ ಅಥವಾ ವಿಷಕಾರಿ ಸರ್ಪಗಳಿಂದ ಜನರು ದೂರವಿರುವಂತೆ ನಿಮ್ಮಿಂದಲೂ ದೂರವಿರಬೇಕು.(Metaphor) ನೋಡಿ ತಿಳಿಯಿರಿ.

ಈ ಟಿಪ್ಪಣಿಯಲ್ಲಿ ಇರುವ ಅಲಂಕಾರವನ್ನುರೂಪಕ ಅಲಂಕಾರ ಎಂದು ಕರೆಯುತ್ತಾರೆ. ಇಲ್ಲಿರುವ ಟಿಪ್ಪಣಿ ರೂಪಕ ಅಲಂಕಾರ ಮತ್ತು ಎರಡು ಪರ್ಯಾಯ ಭಾಷಾಂತರವನ್ನು ವಿವರಿಸುತ್ತದೆ. ಇದರ ನಂತರ tA ಪುಟದಲ್ಲಿ ರೂಪಕ ಅಲಂಕಾರದ ಬಗ್ಗೆ ಲಿಂಕ್ ನೀಡಲಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ರೂಪಕ ಅಲಂಕಾರ ಮತ್ತು ಅವುಗಳನ್ನು ಭಾಷಾಂತರಿಸಲು ಬೇಕಾದ ಸಾಮಾನ್ಯ ಕೌಶಲ್ಯಗಳ ಬಗ್ಗೆ ಕಲಿಯಬಹುದು.


ಪ್ರತ್ಯಕ್ಷ ಮತ್ತು ಪರೋಕ್ಷ ಉಲ್ಲೇಖಗಳನ್ನು ಗುರುತಿಸಲು ಸಹಕಾರಿಯಾದ ಟಿಪ್ಪಣಿಗಳು.

Translation Manual :: Use the translationHelps when Translating :: Using the translationNotes :: Notes that Identify Indirect and Direct Quotes

ವಿವರಣೆಗಳು.

ಭಾಷೆಯಲ್ಲಿ ಎರಡು ರೀತಿಯ ಉಲ್ಲೇಖವಾಕ್ಯಗಳು ಇರುತ್ತವೆ ಪ್ರತ್ಯಕ್ಷ ಉಲ್ಲೇಖ ಮತ್ತು ಪರೋಕ್ಷ ಉದ್ಧರಣಗಳು. ಉಲ್ಲೇಖ ವಾಕ್ಯಗಳನ್ನು ಭಾಷಾಂತರ ಮಾಡುವಾಗ ಭಾಷಾಂತರಗಾರರು ಪರೋಕ್ಷ ಅಪರೋಕ್ಷ ವಾಕ್ಯಗಳು ಇದ್ದಂತೆಯೇ ಭಾಷಾಂತರ ಮಾಡಬೇಕೇ ಇಲ್ಲವೆ ಎಂಬುದರ ಬಗ್ಗೆ ಮೊದಲು ನಿರ್ಧರಿಸಬೇಕು. (ಅಪರೋಕ್ಷ ಮತ್ತು ಪರೋಕ್ಷ ಉಲ್ಲೇಖಗಳನ್ನು)

ULB,ಯಲ್ಲಿ ಅಪರೋಕ್ಷ, ಪರೋಕ್ಷ ಉದ್ಧರಣವಾಕ್ಯಗಳು ಇದ್ದರೆ ಟಿಪ್ಪಣಿಯಲ್ಲಿ ಬೇರೇ ರೀತಿಯ ವಾಕ್ಯಗಳನ್ನು ಮಾಡುವ ಅವಕಾಶವನ್ನು ನೀಡಲಾಗಿರುತ್ತದೆ. ಭಾಷಾಂತರ ನಿಯಮದ ಸಲಹೆಯಂತೆ ಇದನ್ನು ಪ್ರತ್ಯಕ್ಷ ವಾಕ್ಯದಂತೆ ಅಥವಾ ಅಪರೋಕ್ಷ ಉಲ್ಲೇಖ ವಾಕ್ಯದಂತೆ ಭಾಷಾಂತರ ಮಾಡಲು ಹೇಳಬಹುದು, ಇಲ್ಲವೆ ಉಲ್ಲೇಖ ವಾಕ್ಯದ ಸ್ವಭಾವವನ್ನು ಅನುಸರಿಸಬಹುದು.

ಅಪರೋಕ್ಷ ಮತ್ತು ಪರೋಕ್ಷ ಉದ್ಧರಣಗಳ ಬಗ್ಗೆ ಇರುವ ಮಾಹಿತಿ ಪುಟದಲ್ಲಿ ಎರಡು ಉದ್ಧರಣದ ಬಗ್ಗೆ ವಿವರಿಸಲಾಗಿದೆ. ಕೆಲವೊಮ್ಮೆ ಉಲ್ಲೇಖವಾಕ್ಯಗಳ ನಡುವೆ ಕೆಲವು ವಾಕ್ಯಗಳು ಸೇರಿಕೊಂಡಾಗ ಗೊಂದಲ ಉಂಟಾಗುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆಯೂ ಟಿಪ್ಪಣಿಯಲ್ಲಿ ಮಾಹಿತಿ ಇದೆ. ಕೆಲವು ಭಾಷೆಯಲ್ಲಿ ಈ ಅಪರೋಕ್ಷ, ಪ್ರತ್ಯಕ್ಷ ಉಲ್ಲೇಖಗಳನ್ನು ಭಾಷಾಂತರಿಸುವಾಗ ಸಹಜವಾದ ರೀತಿಯಲ್ಲಿ ಸರಳವಾಗಿ ಭಾಷಾಂತರ ಮಾಡಬಹುದು. ಇವುಗಳ ಟಿಪ್ಪಣಿಯು ಉದ್ಧರಣದೊಳಗೆ ಉಲ್ಲೇಖ “Quotes within Quotes

ಭಾಷಾಂತರ ಟಿಪ್ಪಣಿಯ ಉದಾಹರಣೆಗಳು.

ಆತನು ಅವನಿಗೆ ಯಾರಿಗೂ ಹೇಳಬೇಡ ಎಂದು ಹೇಳಿದನು.(ಲೂಕ 5:14 ULB)

  • “ಯಾರಿಗೂ ಹೇಳಬೇಡ” ಇದನ್ನು ಅಪರೋಕ್ಷ (direct quote) ಉದ್ಧರಣವಾಗಿ ಭಾಷಾಂತರಿಸಬಹುದು. " ಯಾರಿಗೂ ಹೇಳಬೇಡ" ನೀನು ಶುದ್ಧನಾದ ಬಗ್ಗೆ ಯಾರಿಗೂ ಹೇಳಬೇಡ"ಎಂದು ಆತನು ಅವನಿಗೆ ಹೇಳಿದನು (ಪರ್ಯಾಯ ಅನುವಾದ): “ನೀನು ಸ್ವಸ್ಥವಾಗಿದ್ದಿ ಎಂದು ಯಾರಿಗೂ ಹೇಳಬೇಡ” (ನೋಡಿ: Direct and Indirect Quotations and Ellipsis)

ಇಲ್ಲಿ ಭಾಷಾಂತರ ಟಿಪ್ಪಣಿಯು ಪರೋಕ್ಷ ಉದ್ಧರಣಗಳನ್ನು ಹೇಗೆ ಅಪರೋಕ್ಷ ಉದ್ಧರಣಗಳಾಗಿ ಬದಲಾಯಿಸಬಹುದು ಮತ್ತು ಭಾಷಾಂತರಿಸಲು ಉದ್ದೇಶಿಸಿರುವ ಭಾಷೆಯಲ್ಲಿ ಹೇಗೆ ಸಹಜವಾಗಿ ಹಿಡಿದಿಡಲು ಸಾಧ್ಯ ಎಂಬುದನ್ನು ತಿಳಿಸಿದೆ.

ಸುಗ್ಗಿಕಾಲದ ಸಮಯದಲ್ಲಿ ಬೆಳೆಕೊಯಿಲು ಮಾಡುವವರಿಗೆ " ಮೊದಲು ಹಣಜಿ ಕಳೆಯೆಲ್ಲವನ್ನು ಕೊಯ್ದು ಸುಡುವುದಕ್ಕಾಗಿ ಹೊರೆ ಕಟ್ಟಿ, ನಂತರ ಗೋಧಿಯನ್ನು ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು" ಎಂದನು . (ಮತ್ತಾಯ 13:30 ULB)

  • ನಾನು ಬೆಳೆಕೊಯಿಲು ಮಾಡುವವರಿಗೆ, ಮೊದಲು ಹಣಜಿ ಕಳೆಯನ್ನು ಕೊಯ್ದು ಸುಡುವುದಕ್ಕಾಗಿ ಹೊರೆ ಕಟ್ಟಿ, ಆದರೆ ಗೋಧಿಯನ್ನು ನನ್ನ ಕಣಜಕ್ಕೆ ತುಂಬಿರಿ" ಎಂದು ಹೇಳುವೆನು -ನೀವು ಇದನ್ನು ಪರೋಕ್ಷ ಉದ್ಧರಣವಾಗಿ ಬದಲಾಯಿಸಬಹುದು : ." ನಾನು ಬೆಳೆಕೊಯಿಲು ಮಾಡುವವರಿಗೆ, ಮೊದಲು ಹಣಜಿ ಕಳೆಯನ್ನು ಕೊಯ್ದು ಸುಡುವುದಕ್ಕಾಗಿ ಹೊರೆ ಕಟ್ಟಿ, ಆದರೆ ಗೋಧಿಯನ್ನು ನನ್ನ ಕಣಜಕ್ಕೆ ತುಂಬಿರಿ" ಎಂದು ಹೇಳುವೆನು -ನೀವು ಇದನ್ನು ಪರೋಕ್ಷ ಉದ್ಧರಣವಾಗಿ ಬದಲಾಯಿಸಬಹುದು (ನೋಡಿ: Direct and Indirect Quotations)

ಇಲ್ಲಿ ಭಾಷಾಂತರ ಟಿಪ್ಪಣಿ ಅಪರೋಕ್ಷ ಉಲ್ಲೇಖ ವಾಕ್ಯಗಳನ್ನು ಹೇಗೆ ಪರೋಕ್ಷ ಉಲ್ಲೇಖ ವಾಕ್ಯಗಳಾಗಿ ಬದಲಾಯಿಸಬಹುದು, ಭಾಷಾಂತರಿಸುವ ಭಾಷೆಯಲ್ಲಿ ಸಹಜತೆಯನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದರ ಬಗ್ಗೆಯೂ ತಿಳಿಸಿದೆ.


ULBಯಲ್ಲಿರುವ ದೀರ್ಘ /ಪದಗುಚ್ಛಗಳಿಗೆ ಟಿಪ್ಪಣಿಗಳು.

Translation Manual :: Use the translationHelps when Translating :: Using the translationNotes :: Notes for Long ULT Phrases

ವಿವರಣೆ

ಕೆಲವೊಮ್ಮೆ ಆ ನುಡಿಗಟ್ಟುಗಳಿಗೆ ಟಿಪ್ಪಣಿ ಇರುತ್ತದೆ ಮತ್ತು ಆ ನುಡಿಗಟ್ಟುಗಳ ಭಾಗಗಳಿಗೆ ಪ್ರತ್ಯೇಕ ಟಿಪ್ಪಣಿ ಇರುತ್ತದೆ. ಅಂತಹ ಸಂದರ್ಭದಲ್ಲಿ ದೀರ್ಘವಾಗಿರುವ ನುಡಿಗಟ್ಟುಗಳನ್ನು ಮೊದಲು ತಿಳಿಸಿ ನಂತರ ಚಿಕ್ಕ ನುಡಿಗಟ್ಟುಗಳನ್ನು ವಿವರಿಸಲಾಗುವುದು.

ಭಾಷಾಂತರ ಟಿಪ್ಪಣಿಗಳ ಉದಾಹರಣೆಗಳು

ಆದರೆ ನೀನು ನಿನ್ನ ಮೊಂಡತನವನ್ನು ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ ಅನುಸರಿಸುವುದರಿಂದ ನಿನಗೋಸ್ಕರ ದೇವರ ಕೋಪವನ್ನು ಕೂಡಿಟ್ಟುಕೊಳ್ಳುತ್ತಾ ಇದ್ದೀ (ರೋ.ಪ. 2:5 ULB)

  • ಆದರೆ ನೀನು ನಿನ್ನ ಮೊಂಡತನವನ್ನು ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ - ಎಂಬಲ್ಲಿ ಪೌಲನು ಪಶ್ಚಾತ್ತಾಪವಿಲ್ಲದ, ದೇವರಿಗೆ ವಿಧೇಯನಾಗಿ ಇಲ್ಲದ ಒಬ್ಬ ವ್ಯಕ್ತಿಯನ್ನು ಕಲ್ಲಿಗೆ ಸಮ ಎಂಬ ರೂಪಕ ಅಲಂಕಾರ ಬಳಸಿದ್ದಾನೆ. - ಪೌಲನು ಅಲ್ಲಿ "ಮಿಟೋನಿಮಿ "ಪದ “ಹೃದಯ / ಮನಸ್ಸು” ಎಂಬುದನ್ನು ಒಬ್ಬ ವ್ಯಕ್ತಿಯನ್ನು ಪ್ರತಿನಿಧಿಸುವಂತೆ ಬಳಸಿದ್ದಾನೆ. ಪರ್ಯಾಯ ಅಲಂಕಾರ ನೀನು ಆಲಿಸುವುದನ್ನು ಮತ್ತು ಪಶ್ಚಾತ್ತಾಪ ಪಡುವುದನ್ನು ನಿರಾಕರಿಸಿದರೆ " (ನೋಡಿ : ರೂಪಕ ಅಲಂಕಾರr ಮತ್ತು ಮಿಟೋನಿಮಿ)
  • ಕಠಿಣವಾದ ಮತ್ತು ಪಶ್ಚಾತ್ತಾಪವಿಲ್ಲದ ಹೃದಯ / ಮನಸ್ಸು – ಈ ನುಡಿಗಟ್ಟು "ಪಶ್ಚಾತ್ತಾಪವಿಲ್ಲದ ಹೃದಯ / ಮನಸ್ಸು " ಇಲ್ಲಿ ಕಠಿಣತೆಯನ್ನು ವಿವರಿಸುತ್ತದೆ. (ನೋಡಿ: ದ್ವಿರುಕ್ತಿ)

ಈ ಉದಾಹರಣೆಯಲ್ಲಿ ಮೊದಲನೆಯದು ರೂಪಕವನ್ನು ಮತ್ತು ಮಿಟೋನಮಿಯನ್ನು ವಿವರಿಸಿದರೆ, ಎರಡನೆಯದು ಅದೇ ವಿಷಯ ಭಾಗದಲ್ಲಿರುವ ದ್ವಿರುಕ್ತಿಯನ್ನು ವಿವರಿಸಿದೆ.


ಭಾಷಾಂತರ ಪದಗಳನ್ನು ಬಳಸುವುದು.

Translation Manual :: Use the translationHelps when Translating :: Using the translationNotes :: Using translationWords

ಭಾಷಾಂತರ ಪದಗಳು

ಸತ್ಯವೇದದ ಬರಹಗಾರರು ಯಾವ ಉದ್ದೇಶದಿಂದ ಓದುಗರಿಗೆ ತಿಳಿಸಲು ವಾಕ್ಯ ಭಾಗಗಳನ್ನು ಬರೆದರೋ ಅದೇ ಉದ್ದೇಶದಿಂದ ಪ್ರತಿಯೊಬ್ಬ ಭಾಷಾಂತರಗಾರನು ತಾನು ಭಾಷಾಂತರಿಸುವ ಸತ್ಯವೇದದ ವಾಕ್ಯಭಾಗಗಳಲ್ಲಿ ತನ್ನ ಅತ್ಯುತ್ತಮ ಸಾಮರ್ಥ್ಯವನ್ನು ಬಳಸಿ ಅದೇ ಅರ್ಥವನ್ನು ಕೊಡುವಂತೆ ಭಾಷಾಂತರ ಮಾಡುವುದು ಅವನ ಆಧ್ಯ ಕರ್ತವ್ಯವಾಗಿರುತ್ತದೆ. ಈ ಕ್ರಮವನ್ನು ಅನುಸರಿಸಿ ಭಾಷಾಂತರ ಮಾಡಲು ಅವನು ಸತ್ಯವೇದದ ವಿದ್ವಾಂಸರು ರಚಿಸಿರುವ ಭಾಷಾಂತರಕ್ಕೆ ಸಹಕಾರ ಮಾಡುವ ಲೇಖನವನ್ನು ಅಧ್ಯಯನ ಮಾಡಬೇಕು, ಇದರೊಂದಿಗೆ ಭಾಷಾಂತರ ಪದಗಳ ಸಂಪನ್ಮೂಲಗಳನ್ನು ಓದಿ ತಿಳಿಯಬೇಕು.

ಭಾಷಾಂತರ ಪದಗಳನ್ನು ಉಪಯೋಗಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ :

  1. ಮೂಲ ವಾಕ್ಯಭಾಗಗಳಲ್ಲಿ ಗೊಂದಲ ಉಂಟುಮಾಡುವ ಅಥವಾ ಅರ್ಥಮಾಡಿಕೊಳ್ಳಲು ಕಷ್ಟವೆನಿಸುವ ಪದಗಳನ್ನು ಮತ್ತು ಪ್ರಮುಖವಾದ ಪದಗಳನ್ನು ಗುರುತಿಸಿ ಪಟ್ಟಿಮಾಡಿ.
  2. " ಭಾಷಾಂತರ ಪದಗಳು" ಎಂಬ ವಿಭಾಗದ ಕಡೆ ಗಮನಿಸಿ.
  3. ನೀವು ಗುರುತಿಸಿರುವ ಪ್ರಮುಖ ಪದಗಳನ್ನು ಅಥವಾ ಕ್ಲಿಷ್ಟ ಪದಗಳು ಕಂಡುಹಿಡಿದು ಮೊದಲನೇ ಪದದ ಮೇಲೆ ಕ್ಲಿಕ್ ಮಾಡಿ.
  4. ಆ ಪದದ ಪ್ರವೇಶಕ್ಕೆ ಭಾಷಾಂತರ ಪದಗಳ ವಿಭಾಗವನ್ನು ಓದಿ.
  5. ಇದರಲ್ಲಿನ ವ್ಯಾಖ್ಯಾನವನ್ನು ಓದಿದ ಮೇಲೆ ಸತ್ಯವೇದದ ವಾಕ್ಯಭಾಗವನ್ನು ಪುನಃ ಓದುವಾಗ ಈಗಾಗಲೇ ನೀವು ಓದಿರುವ ಭಾಷಾಂತರ ವ್ಯಾಖ್ಯಾನದ ವಿಷಯವನ್ನು ಮನಸ್ಸಿನಲ್ಲೇ ಮನನ ಮಾಡಿಕೊಳ್ಳಬೇಕು.
  6. ಸತ್ಯವೇದದ ಸನ್ನಿವೇಶಕ್ಕೆ ಮತ್ತು ವ್ಯಾಖ್ಯಾನಕ್ಕೆ ಅನುಗುಣವಾಗಿ ನಿಮ್ಮ ಭಾಷೆಗೆ ಎಲ್ಲಾ ರೀತಿ ಸಾಧ್ಯವಾಗುವಂತೆ ಪದಗಳನ್ನು ಭಾಷಾಂತರಿಸಲು ಯೋಚಿಸಿ. ಇದರಿಂದ ನೀವು ಬಳಸಿರುವ ನಿಮ್ಮ ಭಾಷೆಯಲ್ಲಿನ ಪದಗಳು ಮತ್ತು ನುಡಿಗುಚ್ಛಗಳು ಸಮಾನ ಅರ್ಥ ಹೊಂದಿರುವುದನ್ನು ಹೋಲಿಸಿ ನೋಡಲು ಮತ್ತು ಪ್ರತಿಯೊಂದನ್ನು ಪ್ರಯತ್ನಿಸಿ ನೋಡಲು ಸಹಾಯಕವಾಗಿರುತ್ತದೆ.
  7. ನಿಮಗೆ ಯಾವುದು ಅತ್ಯುತ್ತಮ ಎನಿಸುತ್ತದೋ ಅದನ್ನು ಆಯ್ಕೆ ಮಾಡಿ ಮತ್ತು ಅದನ್ನು ಬರೆದಿಡಿ.
  8. ಮೇಲಿನ ಹಂತಗಳನ್ನು ನೀವು ಗುರುತಿಸಿರುವ ಭಾಷಾಂತರ ಪದಗಳೊಂದಿಗೆ ಪುನರಾವರ್ತಿಸಿ.
  9. ಪ್ರತಿ ಭಾಷಾಂತರ ಪದಗಳಿಗೆ ತಕ್ಕಂತೆ ಉತ್ತಮ ಭಾಷಾಂತರ ಮಾಡಲು ಯೋಚಿಸಿದಾಗ ಇಡೀ ವಾಕ್ಯಭಾಗವನ್ನು ಭಾಷಾಂತರಿಸಿ.
  10. ನೀವು ಭಾಷಾಂತರಿಸಿದ ವಾಕ್ಯಭಾಗವನ್ನು ಇತರರಿಗೆ ಓದಿ ಹೇಳುವುದರ ಮೂಲಕ ನಿಮ್ಮ ಭಾಷಾಂತರವನ್ನು ಪರೀಕ್ಷಿಸಬಹುದು. ಹಾಗೆ ಓದಿದಾಗ ಅವರಿಗೆ ಅರ್ಥವಾಗದೆ ಉಳಿದ ಪದಗಳು ಅಥವಾ ನುಡಿಗುಚ್ಛಗಳನ್ನು ಬೇರೆ ಅರ್ಥಪೂರ್ಣ ಪದ ಮತ್ತು ನುಡಿಗುಚ್ಛ ಸೇರಿಸಿ ಸರಿಪಡಿಸಿ.

ಒಮ್ಮೆ ಭಾಷಾಂತರಕ್ಕೆ ಉತ್ತಮ ಭಾಷಾಂತರ ಪದ ಕಂಡುಬಂದರೆ ನೀವು ಅದೇ ಪದವನ್ನು ಇಡೀ ಭಾಷಾಂತರ ಪ್ರಕ್ರಿಯೆಯಲ್ಲಿ ನಿರಂತರವಾಗಿ ಉಪಯೋಗಿಸಬಹುದು. ಭಾಷಾಂತರದ ಯಾವ ಸ್ಥಳದಲ್ಲಿ ಯಾವ ಪದ ಹೊಂದುತ್ತಿಲ್ಲ ಎಂದು ಕಂಡುಬಂದರೆ ಪುನಃ ಅದನ್ನು ತಿದ್ದುವ ಪ್ರಕ್ರಿಯೆಯನ್ನು ತೊಡಗಿಸಿಕೊಳ್ಳಬೇಕು. ಅಂದರೆ ಈ ಪದಕ್ಕಿಂತ ಉತ್ತಮ ಸಮಾನ ಪದ ಹೊಸ ವಾಕ್ಯಭಾಗದಲ್ಲಿ ಎಲ್ಲಿ ಸರಿಯಾಗಿ ಹೊಂದಿ ಕೊಳ್ಳುವಂತೆ ಎಂದು ನೋಡಿಕೊಳ್ಳಬೇಕು. ಪ್ರತಿಯೊಂದು ಭಾಷಾಂತರ ಪದವನ್ನು ಭಾಷಾಂತರಿಸಲು ಬಳಸುವ ಪದ ಅಥವಾ ಪದಗಳ ಬಗ್ಗೆ ಒಂದು ಲೆಕ್ಕ ಇಟ್ಟುಕೊಳ್ಳಬೇಕು ಮತ್ತು ಇದರ ಮಾಹಿತಿ ಭಾಷಾಂತರ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇದರಿಂದ ಭಾಷಾಂತರ ತಂಡದ ಸದಸ್ಯರಿಗೆ ಯಾವ ಪದಕ್ಕೆ ಯಾವ ಪದ ಬಳಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ.

ಅಪರಿಚಿತ ಉದ್ದೇಶಗಳು.

ಕೆಲವೊಮ್ಮೆ ಭಾಷಾಂತರ ಪದಗಳು ಒಂದು ವಸ್ತು ಅಥವಾ ಒಂದು ಸಂಪ್ರದಾಯ ನಮ್ಮ ಉದ್ದೇಶಿತ ಭಾಷೆಯಲ್ಲಿ ಅಪರಿಚಿತವಾಗಿ ಇರುತ್ತದೆ. ವಿವರವಾದ ನುಡಿಗುಚ್ಛಗಳನ್ನು ಉಪಯೋಗಿಸಲು ಸಾಧ್ಯವಾಗುವ ಪರಿಹಾರಗಳೆಂದರೆ ಸಮಾನವಾಗಿರುವ ಕೆಲವು ಪದಗಳನ್ನು ಬೆಂಬಲಿಸುವುದು, ಬೇರೆ ಭಾಷೆಯಿಂದ ವಿದೇಶಿ ಪದವನ್ನು ಬಳಸುವುದು, ಸರ್ವ ಸಾಮಾನ್ಯವಾಗಿರುವ ಪದ ಬಳಸುವುದು ಅಥವಾ ಹೆಚ್ಚು ನಿರ್ದಿಷ್ಟವಾದ ಪದಗಳನ್ನು ಬಳಸುವುದು. (ಅಪರಿಚಿತವಾದುದನ್ನು ಭಾಷಾಂತರಿಸಿ ಈ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ನೋಡಿ.

ಒಂದು ರೀತಿಯ ‘ಅಪರಿಚಿತ ಉದ್ದೇಶ’ ದ ಪದಗಳು ಯೆಹೂದಿ ಮತ್ತು ಕ್ರೈಸ್ತ ಧರ್ಮದ ಸಂಪ್ರದಾಯ ಪದ್ಧತಿ ಮತ್ತು ನಂಬಿಕೆಗಳನ್ನು ಕುರಿತು ಹೇಳುತ್ತವೆ. ಕೆಲವು ಸಾಮಾನ್ಯ ಅಪರಿಚಿತ ಉದ್ದೇಶಗಳು:

ಸ್ಥಳಗಳ ಹೆಸರು ಯಾವುವೆಂದರೆ :

  • ದೇವಾಲಯ (ಇಸ್ರಾಯೇಲರು ತಮ್ಮ ಕಾಣಿಕೆಗಳನ್ನು ದೇವರಿಗೆ ಅರ್ಪಿಸುವ ಕಟ್ಟಡ)
  • ಸಿನೆಗಾಗ್ / ಸಭಾಮಂದಿರ (ಯೆಹೂದಿಗಳು ತಮ್ಮ ದೇವರನ್ನು ಆರಾಧಿಸಲು ಕೂಡಿಬರುವ ಸ್ಥಳ / ಕಟ್ಟಡ)
  • ಯಜ್ಞವೇದಿಕೆ (ಒಂದು ಎತ್ತರವಾದ ವೇದಿಕೆಯ ಮೇಲೆ ಕಾಣಿಕೆ ಸಲ್ಲಿಸುವುದು ಅಥವಾ ದೇವರಿಗೆ ಅರ್ಪಿಸುವುದು)

ಜನರು ಹೊಂದಿರುವ ಅಧಿಕಾರದ / ಪದವಿಯ ಹೆಸರುಗಳು ಅಂದರೆ:

  • ಯಾಜಕ(ತನ್ನ ಜನರ ಪರವಾಗಿ ದೇವರಿಗೆ ಯಜ್ಞದ ಮೂಲಕ ಕಾಣಿಕೆಯನ್ನು ಅರ್ಪಿಸಲು ಆಯ್ಕೆಯಾದವ)
  • ಪರಿಸಾಯರು (ಯೇಸುವಿನ ಕಾಲದಲ್ಲಿ ಇಸ್ರಾಯೇಲರ ಧಾರ್ಮಿಕ ನಾಯಕರ ಗುಂಪು)
  • ಪ್ರವಾದಿ (ದೇವರಿಂದ ಆಯ್ಕೆಯಾಗಿ ದೇವರ ಸಂದೇಶವನ್ನು ಜನರಿಗೆ ತಿಳಿಸುವವ)
  • ಮನುಷ್ಯಕುಮಾರ.
  • ದೇವ ಕುಮಾರ / ಮಗ.
  • ರಾಜ (ಸ್ವತಂತ್ರ ನಗರವನ್ನು ಅಥವಾ ರಾಜ್ಯವನ್ನು ಅಥವಾ ದೇಶವನ್ನು ಆಳುವವ)

ಸತ್ಯವೇದದ ಪರಿಕಲ್ಪನೆಗಳಿಗೆ ಕೀಲಿಕೈ ಯಾವುವೆಂದರೆ :

  • ಕ್ಷಮಿಸುವುದು (ಒಬ್ಬ ವ್ಯಕ್ತಿ ನಮ್ಮನ್ನು ನೋಯಿಸಿದರೂ ಅವನ ಬಗ್ಗೆ ಅಸಮಾಧಾನ ವ್ಯಕ್ತ ಮಾಡದೆ ಮತ್ತು ಕೋಪಗಳ್ಳದೆ ಇರುವುದು)
  • ರಕ್ಷಿಸು / ರಕ್ಷಣೆ (ಕೆಟ್ಟತನದಿಂದ,ಶತ್ರುಗಳಿಂದ,ಅಪಾಯದಿಂದ ರಕ್ಷಿಸುವುದು ಅಥವಾ ಮುಕ್ತಗೊಳಿಸುವುದು)
  • ವಿಮೋಚನೆ (ನಮಗೆ ಸೇರಿದುದನ್ನು ಇತರರ ವಶದಿಂದ ಬಿಡಿಸುವುದು ಅಥವಾ ಇತರರ ಬಂಧನದಿಂದ ಬಿಡುಗಡೆ ಮಾಡುವುದು)
  • ಕರುಣೆ (ಅವಶ್ಯಕತೆ ಇರುವವರಿಗೆ ಸಹಾಯಮಾಡುವುದು)
  • ಕೃಪೆ (ಯಾರ ಬಳಿ ಯಾವುದು ಇಲ್ಲವೋ, ಹೊಂದಿಲ್ಲವೋ ಅವರಿಗೆ ಅದನ್ನು ನೀಡುವುದು ಇಲ್ಲವೆ ದೊರೆಯುವಂತೆ ಮಾಡುವದು, ಪಡೆಯಲು ಸಹಾಯಮಾಡುವುದು)

(ಇಲ್ಲಿ ಬರುವ ಎಲ್ಲವೂ ನಾಮಪದಗಳು ಆದರೆ ಅವು ಘಟನೆಗಳನ್ನು ಪ್ರತಿನಿಧಿಸುತ್ತಿವೆ (ಆದುದರಿಂದ ಇವುಗಳನ್ನು ಕ್ರಿಯಾಪದದ ವಾಕ್ಯಭಾಗದಿಂದ (ಕ್ರಿಯೆಯ ಮೂಲಕ) ಭಾಷಾಂತರಿಸಬೇಕು). ನೀವು ಇಂತಹ ಭಾಷಾಂತರ ಪದಗಳನ್ನು ಭಾಷಾಂತರ ತಂಡದ ಸದಸ್ಯರೊಂದಿಗೆ ಚರ್ಚಿಸುವ ಅಗತ್ಯವಿದೆ. ಅಥವಾ ನಿಮ್ಮ ಚರ್ಚಿನ ಸದಸ್ಯರು ಅಥವಾ ನಿಮ್ಮ ಊರಿನ ಜನರೊಂದಿಗೆ ಉತ್ತಮವಾದ ರೀತಿಯಲ್ಲಿ ಭಾಷಾಂತರಿಸುವ ಬಗ್ಗೆ ಚರ್ಚಿಸಿ ತಿಳಿದುಕೊಳ್ಳುವ ಅವಶ್ಯವಿದೆ.


ಭಾಷಾಂತರ ಪ್ರಶ್ನೆಗಳ ಬಳಕೆ.

Translation Manual :: Use the translationHelps when Translating :: Using the translationNotes :: Using translationQuestions

ಸತ್ಯವೇದದ ಮೂಲ ಲೇಖಕರು ಉದ್ದೇಶಿಸಿ ಅರ್ಥವನ್ನು ಭಾಷಾಂತರ ಮಾಡುವವರು ಸರಿಯಾಗಿ, ನಿಖರವಾಗಿ ಮಾಡಲು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಅವರ ಕರ್ತವ್ಯವಾಗಿರುತ್ತದೆ. ಹೀಗೆ ಉತ್ತಮ ಭಾಷಾಂತರ ಮಾಡಲು ಸತ್ಯವೇದ ಭಾಷಾಂತರಗಾರರು ಮತ್ತು ಸತ್ಯವೇದದ ವಿದ್ವಾಂಸರು ತಯಾರಿಸಿರುವ ಭಾಷಾಂತರ ಕೈಪಿಡಿಯನ್ನು ಮತ್ತು ಭಾಷಾಂತರ ಪ್ರಶ್ನೆಗಳ ಮಾಲಿಕೆಯನ್ನು ಓದಿ ಮನನ ಮಾಡಿಕೊಳ್ಳಬೇಕು. ULB ಅನುವಾದದ ಭಾಷಾಂತರ ಪ್ರಶ್ನೆಗಳು, ಸತ್ಯವೇದದ ವಾಕ್ಯಭಾಗಗಳನ್ನು ಆಧರಿಸಿದೆ. ಆದರೆ ಈ ಪ್ರಶ್ನೆಗಳನ್ನು ಸತ್ಯವೇದದ ಯಾವುದೇ ರೀತಿಯ ಭಾಷಾಂತರವನ್ನು ಪ್ರಶ್ನಿಸಲು ಪರಿಶೀಲಿಸಬಹುದು.

ಈ ಪ್ರಶ್ನೆಗಳು ಸತ್ಯವೇದದಲ್ಲಿನ ವಿಷಯವನ್ನು ಕುರಿತಾಗಿರಬಹುದು ಮತ್ತು ಯಾವುದೇ ಭಾಷೆಗೆ ಭಾಷಾಂತರವಾದರೂ ವಿಷಯಾಂತರವಾಗಿದೆ ಒಂದು ಚಿಕ್ಕ ಬದಲಾವಣೆಯೂ ಆಗದಿರಬೇಕು ಎಂಬುದು ತುಂಬಾ ಮುಖ್ಯ. ಪ್ರತಿಯೊಂದು ಪ್ರಶ್ನೆಗೂ ಭಾಷಾಂತರ ಪ್ರಶ್ನೆಗಳು ಸೂಕ್ತ ಉತ್ತರವನ್ನು ಸಲಹೆಯನ್ನು ನೀಡುತ್ತದೆ. ಈ ಪ್ರಶ್ನೆಗಳನ್ನು ಮತ್ತು ಉತ್ತರಗಳನ್ನು ಭಾಷಾಂತರದ ನಿಖರತೆಯನ್ನು ಪರಿಶೀಲಿಸಲು ಬಳಸಬಹುದು ಮತ್ತು ಇವುಗಳನ್ನು ಭಾಷಾಂತರಮಾಡುತ್ತಿರುವ ಭಾಷೆಯ ಸದಸ್ಯರೊಂದಿಗೆ ಉಪಯೋಗಿಸಿ ಭಾಷಾಂತರ ಸರಿಯಾಗಿದೆಯೇ ಪರಿಶೀಲಿಸಬಹುದು. ಭಾಷಾಂತರ ಮಾಡುತ್ತಿರುವ ಭಾಷೆಯ ಸಮುದಾಯದ ಸದಸ್ಯರೊಂದಿಗೆ ಈ ಪರಿಶೀಲನೆ ನಡಿಸಿದಾಗ ಭಾಷಾಂತರ ಪ್ರಶ್ನೆಗಳು ಭಾಷಾಂತರಗಾರರಿಗೆ ತಾವು ಮಾಡಿರುವ ಭಾಷಾಂತರ ಸರಿಯಾಗಿದೆಯೆಂದು ತಿಳಿದಿರಲು ಸಹಕಾರಿಯಾಗಿರುತ್ತದೆ. ಭಾಷಾಂತರವಾದ ಸತ್ಯವೇದದ ಅಧ್ಯಾಯಗಳನ್ನು ಓದಿ ತಿಳಿದು ಭಾಷಾಂತರ ಪ್ರಶ್ನೆಗಳಿಗೆ ಈ ಸಮುದಾಯದ ಜನರು ಸರಿಯಾಗಿ ಉತ್ತರಿಸಿದರೆ ಆಗ ಈ ಭಾಷಾಂತರ ಪರಿಪೂರ್ಣವಾಗಿದೆ ಎಂದು ಹೇಳಬಹುದು.

ಭಾಷಾಂತರವನ್ನು ಭಾಷಾಂತರ ಪ್ರಶ್ನೆಗಳೊಂದಿಗೆ ಪರಿಶೀಲಿಸುವುದು.

ಸ್ವಯಂ ಪರೀಕ್ಷೆಮಾಡುವಾಗ ಭಾಷಾಂತರ ಪ್ರಶ್ನೆಗಳನ್ನು ಬಳಸುವ ಹಂತಗಳು.

  1. ಸತ್ಯವೇದದ ಒಂದು ಅಧ್ಯಾಯವನ್ನು ಇಲ್ಲವೇ ಒಂದು ವಾಕ್ಯಭಾಗವನ್ನು ಭಾಷಾಂತರಿಸಿ.
  2. “ಪ್ರಶ್ನೆಗಳು.” ಈ ಭಾಗದ ಕಡೆ ಗಮನಕೊಡಿ.
  3. ಪ್ರತಿಯೊಂದು ವಾಕ್ಯಭಾಗದ ಪ್ರಾರಂಭದಲ್ಲಿ ಪ್ರಶ್ನೆಯ ಪ್ರಾರಂಭವನ್ನು ಓದಿ.
  4. ಭಾಷಾಂತರದಿಂದ ಪ್ರಶ್ನೆಗಳಿಗೆ ಉತ್ತರವನ್ನು ಆಲೋಚಿಸಿ. ಈ ಪ್ರಶ್ನೆಗಳಿಗೆ ಸತ್ಯವೇದದ ಭಾಷಾಂತರದಿಂದ ತಿಳಿದ ವಿಷಯಗಳ ಮೂಲಕ ಉತ್ತರಿಸಲು ಪ್ರಯತ್ನಿಸಬೇಡಿ.
  5. .ಪ್ರಶ್ನೆಯಮೇಲೆ ಕ್ಲಿಕ್ ಮಾಡಿದರೆ ಉತ್ತರ ಕಾಣಿಸಿಕೊಳ್ಳುತ್ತದೆ
  6. ನಿಮ್ಮ ಉತ್ತರ ಸರಿಯಾಗಿದ್ದರೆ ನೀವು ಮಾಡಿದ ಭಾಷಾಂತರ ಉತ್ತಮವಾಗಿದೆ ಎಂದು ಅರ್ಥ. ಆದರೂ ನೀವು ನಿಮ್ಮ ಭಾಷೆಯ ಸಮುದಾಯದ ಜನರೊಂದಿಗೆ ನಿಮ್ಮ ಭಾಷಾಂತರವನ್ನು ಓದಿ ಪರಿಶೀಲಿಸಿ ಸರಿಯಾದ ಅರ್ಥವನ್ನು ನೀಡುತ್ತಿದೆಯೇ ಎಂದು ಪರಿಶೀಲಿಸುವುದನ್ನು ಮರೆಯಬಾರದು. ಸಮುದಾಯದ ಸದಸ್ಯರೊಂದಿಗೆ ಭಾಷಾಂತರ ಪ್ರಶ್ನೆಗಳನ್ನು ಬಳಸುವಾಗ ಕೆಳಗೆ ಕೊಟ್ಟಿರುವ ಹಂತಗಳನ್ನು ಅಳವಡಿಸಿ.
  7. ನೀವು ಭಾಷಾಂತರ ಮಾಡಿ ಮುಗಿಸಿರುವ ಸತ್ಯವೇದದ ಅಧ್ಯಾಯಗಳನ್ನುಇಬ್ಬರಿಗಿಂತ ಹೆಚ್ಚು ಭಾಷಾ ಸಮುದಾಯದ ಸದಸ್ಯರಿಗೆ ಓದಿ ಸರಿಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಿ.
  8. ನೀವು ಓದಿ ಹೇಳುವ ಸದಸ್ಯರಿಗೆ ನೀವು ಭಾಷಾಂತರಮಾಡಿ ಓದುತ್ತಿರುವ ಸತ್ಯವೇದದ ಭಾಗವನ್ನು ಕುರಿತ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕೆಂದು ಹೇಳಬೇಕು. ಅವರು ಈಗಾಗಲೇ ಓದಿರುವ ತಿಳಿದಿರುವ ಇತರ ಸತ್ಯವೇದದ ಅಂಶಗಳನ್ನು ಆಧರಿಸಿ ಉತ್ತರಿಸಬಾರದು. ಏಕೆಂದರೆ ಇದು ನೀವು ಮಾಡಿರುವ ಸತ್ಯವೇದದ ಭಾಷಾಂತರದ ಬಗ್ಗೆ ನಡೆಯುತ್ತಿರುವ ಪರಿಶೀಲನೆಯೇ ಹೊರತು ಜನರ ಜ್ಞಾನದ ಪರಿಶೀಲನೆಯಲ್ಲ. ಇದರ ಬದಲು ಸತ್ಯವೇದದ ಬಗ್ಗೆ ಹೆಚ್ಚು ತಿಳಿಯದ ಜನರೊಂದಿಗೆ ಭಾಷಾಂತರದ ಪರಿಶೀಲನೆ ಮಾಡಿದರೆ ಬಹುಶಃ ಹೆಚ್ಚು ಉಪಯೋಗಕಾರಿ ಆಗಿರಬಹುದು.
  9. “ಪ್ರಶ್ನೆಗಳು.” ಎಂಬ ಭಾಗದ ಕಡೆ ಗಮನ ಹರಿಸಿ.
  10. ಪ್ರತಿಯೊಂದು ಅಧ್ಯಾಯದ ಪ್ರಾರಂಭದ ಮೊದಲ ಪ್ರಶ್ನೆಯನ್ನು ಓದಿ.
  11. ಭಾಷಾ ಸಮುದಾಯದ ಸದಸ್ಯರನ್ನು ಪ್ರಶ್ನೆಗಳಿಗೆ ಉತ್ತರಿಸುವಂತೆ ಹೇಳಿ. ನೀವು ಭಾಷಾಂತರ ಮಾಡಿರುವುದರ ಬಗ್ಗೆ ಮಾತ್ರ ಉತ್ತರಿಸುವಂತೆ ಹೇಳಲು ನೆನಪಿಡಿ.
  12. ಪ್ರಶ್ನೆಯ ಮೇಲೆ ಕ್ಲಿಕ್ ಮಾಡಿ ಉತ್ತರವನ್ನು ಪಡೆಯಲು ಪ್ರಯತ್ನಿಸಿ. ಪ್ರದರ್ಶಿತವಾದ ಉತ್ತರಕ್ಕೆ ಸರಿಯಾಗಿ ನಿಮ್ಮ ಸಮುದಾಯದ ಸದಸ್ಯರು ಉತ್ತರಿಸಿದರೆ ನಿಮ್ಮ ಭಾಷಾಂತರ ಸರಿಯಾದ ವಿಷಯವನ್ನು ಹೊಂದಿದೆ ಎಂದು ಖಚಿತ ಪಡಿಸಿಕೊಳ್ಳಿ. ಒಂದು ವೇಳೆ ಸರಿಯಾದ ಉತ್ತರ ಬರದೆ ತಪ್ಪು ಉತ್ತರ ಬಂದರೆ ಆಗ ನೀವು ಮಾಡಿದ ಭಾಷಾಂತರವನ್ನು ಪುನಃ ಸರಿಪಡಿಸಿ ಮಾಡಬೇಕಾಗುತ್ತದೆ
  13. ಇದೇ ರೀತಿ ಎಲ್ಲಾ ಅಧ್ಯಾಯಗಳನ್ನು ಇತರ ಪ್ರಶ್ನೆಗಳಿಂದ ಪರಿಶೀಲಿಸಿ ಭಾಷಾಂತರದಲ್ಲಿ ನಿಖರತೆಯನ್ನು ಸಾಧಿಸಬೇಕು.

Just-in-Time Learning Modules

Translation Manual :: Just-in-Time Learning Modules

Figures of Speech

Translation Manual :: Just-in-Time Learning Modules :: Figures of Speech

ಅಲಂಕಾರಗಳು.

Translation Manual :: Just-in-Time Learning Modules :: Figures of Speech

ಅಲಂಕಾರಗಳಿಗೆ ವಿಶೇಷ ಅರ್ಥವಿರುತ್ತದೆ. ಪ್ರತಿಯೊಂದು ಪದಗಳಿಗೆ ಇರುವಂತೆ ಇವುಗಳಿಗೆ ಅರ್ಥ ಹೇಳಲು ಬರುವುದಿಲ್ಲ. (ಮನುಷ್ಯರು ಅಲಂಕಾರ ಸಾಧನಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳುವಂತೆ ಸಾಹಿತ್ಯದಲ್ಲೂ ಕೆಲವು ಪದಗಳನ್ನು ಬಳಸಿ ವಾಕ್ಯ ಸೌಂದರ್ಯವನ್ನು, ಕಾವ್ಯ ಸೌಂದರ್ಯವನ್ನು ಹೆಚ್ಚಿಸುತ್ತವೆ).ಇಂತಹ ಪದಗಳನ್ನು ಅಲಂಕಾರಗಳು ಎಂದು ಕರೆಯುತ್ತೇವೆ.

ಅಲಂಕಾರಗಳಲ್ಲಿ ಅನೇಕ ವಿಧಗಳಿವೆ. ಸತ್ಯವೇದದಲ್ಲಿ ಬಳಸಿರುವ ಅಲಂಕಾರಗಳನ್ನು ಈ ಪುಟದಲ್ಲಿ ಪಟ್ಟಿಮಾಡಲಾಗಿದೆ.

ವಿವರಣೆಗಳು

ಅಲಂಕಾರಗಳು ಕಾವ್ಯಗಳಲ್ಲಿ ಬರುವ ವಿವರಗಳನ್ನು ಪದಗಳ ಮೂಲಕ ಹೇಳುವದರೊಂದಿಗೆ ಸಾಹಿತ್ಯಿಕ ಭಾಷೆಯಲ್ಲಿ ಹೇಳುತ್ತದೆ. ಆದುದರಿಂದ ಅಲಂಕಾರಗಳಲ್ಲಿರುವ ಅರ್ಥಗಳು ಪದಶಃ ಅರ್ಥಕ್ಕಿಂತ ಭಿನ್ನವಾಗಿರುತ್ತದೆ.

ವಾಕ್ಯಭಾಗಗಳ ಅರ್ಥವನ್ನು ಭಾಷಾಂತರಿಸಲು ಅಲಂಕಾರಗಳನ್ನು ಗುರುತಿಸಬೇಕು ಮತ್ತು ಮೂಲ ಭಾಷೆಯಲ್ಲಿ ಅಲಂಕಾರಗಳ ಅರ್ಥ, ಬಳಕೆ ಬಗ್ಗೆ ತಿಳಿದುಕೊಳ್ಳಬೇಕು. ಆಗ ನೀವು ಅಲಂಕಾರಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಇಲ್ಲವೇ ಅದೇ ಅರ್ಥ ಬರುವ ಪದಗಳನ್ನು ನಿಮ್ಮ ಭಾಷೆಯಲ್ಲಿ ತಿಳಿಸಲು ಪ್ರಯತ್ನಿಸಬಹುದು.

###ವಿಧಗಳು

ಈ ಕೆಳಗೆ ವಿವಿಧರೀತಿಯ ಅಲಂಕಾರಗಳನ್ನು ಪಟ್ಟಿಮಾಡಿ ಹೇಳಿದೆ. ನಿಮಗೆ ಹೆಚ್ಚಿನ ಮಾಹಿತಿ ಬೇಕೆಂದರೆ ಬಣ್ಣದ ಪದವನ್ನು ಒತ್ತಿ. ಅದು ವ್ಯಾಖ್ಯಾನ,ಉದಾಹರಣೆ ಮತ್ತು ವೀಡಿಯೋಗಳನ್ನು ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.

  • ಅಪೋಸ್ಟ್ರಫಿ -ತನ್ನ ಎದುರಿಗೆ ಇಲ್ಲದವರನ್ನು / ಇಲ್ಲದುದನ್ನು ಕಲ್ಪಿಸಿಕೊಂಡು ಮಾತನಾಡುವುದು, ಕೆಲವೊಮ್ಮೆ ಒಂದು ವಸ್ತುವಿನ ಬಗ್ಗೆ ಮಾತನಾಡುವುದು ಇದು ಇಂಗ್ಲೀಷಿನಲ್ಲಿರುವ ಅಲಂಕಾರ.
  • Doublet -ದ್ವಿರುಕ್ತಿ ದ್ವಿರುಕ್ತಿ ಗಳು ಜೋಡಿಪದಗಳು ಅಥವಾ ಚಿಕ್ಕ ಪದಗುಚ್ಛಗಳು ಒಂದೇ ಅರ್ಥಕೊಡುವ ಎರಡು ಪದಗಳನ್ನು ಪದಗುಚ್ಛವಾಗಿ ಬಳಸಲಾಗುವುದು, ಎರಡೆರಡು ಸಾರಿ ಬಳಸಲಾಗುವುದು. ಸತ್ಯವೇದದಲ್ಲಿ ಈ ದ್ವಿರುಕ್ತಿಪದಗಳನ್ನು ಪದ್ಯಭಾಗದಲ್ಲಿ, ಪ್ರವಾದನೆಗಳಲ್ಲಿ, ದೈವಸಂದೇಶಗಳಲ್ಲಿ ಅವುಗಳ ಬಗ್ಗೆ ಹೆಚ್ಚು ಒತ್ತು ಕೊಡಲು ಬಳಸಲಾಗುತ್ತದೆ.
  • ಸೌಮ್ಯೋಕ್ತಿಗಳು - ಅಪ್ರಿಯವಾದ ಅಥವಾ ಅಹಿತಕರವಾದ ವಿಚಾರಗಳನ್ನು ನಯವಾದ ರೀತಿಯಲ್ಲಿ ಹೇಳಲು ಬಳಸುವ ಪದಗಳೇ ಸೌಮ್ಯೋಕ್ತಿಗಳು. ಇದರ ಉದ್ದೇಶ ಇದನ್ನು ಓದುವ / ಕೇಳುವ ಜನರಿಗೆ ಒರಟಾದ ಪದಗಳಾಗಿರದೆ, ಅವರ ಭಾವನೆಗಳಿಗೆ ಧಕ್ಕೆತರದಂತೆ ಸೌಮ್ಯವಾದ ರೀತಿಯಲ್ಲಿ ಹೇಳುವ ಪದಗಳು.
  • Hendiadys -ಸಂಬಂಧಾವ್ಯಯಗಳು ಇದರಲ್ಲಿ ಒಂದೇ ವಿಚಾರವನ್ನು ಎರಡೂ ಪದಗಳಿಂದ ತಿಳಿಸುವಾಗ "ಅಂಡ್ / ಮತ್ತು "ಎಂಬ ಸಂಬಂಧವಾಚಕ ಪದವನ್ನು ಬಳಸುವುದು, ಒಂದು ಪದ ಇನ್ನೊಂದು ಪದವನ್ನು ಮಾರ್ಪಡಿಸಿ ಹೇಳಲು ಬಳಸಲಾಗುತ್ತದೆ.
  • Hyperbole - “ಅತಿಶಯೋಕ್ತಿ” ಅಲಂಕಾರ. ಇದು ಯಾವುದಾದರೂ ಒಂದು ಸನ್ನಿವೇಶವನ್ನು ಅಥವಾ ಒಂದು ವಿಷಯವನ್ನು ಕುರಿತು ಅತಿಯಾಗಿ ಭಾವಿಸಿ ಗೊತ್ತಿದ್ದೂ ಉತ್ಪ್ರೇಕ್ಷಮಾಡಿ ಹೇಳುವುದು.
  • ನುಡಿಗಟ್ಟು - ನುಡಿಗಟ್ಟು. ಇದು ಒಂದು ಪದಗಳ ಬಂಧ. ಇದುಗುಂಪಾಗಿ ವಿಶಿಷ್ಟವಾದ ಅರ್ಥವನ್ನು ಕೊಡುತ್ತದೆ.
  • Irony -ವ್ಯಂಗ್ಯೋಕ್ತಿ ಇದೊಂದು ಅಲಂಕಾರ. ಇದರಲ್ಲಿ ವ್ಯಕ್ತಿಯೊಬ್ಬ ತಾನು ತಿಳಿಸಬೇಕಾದ ವಿಚಾರವನ್ನು ನೇರವಾಗಿ ಹೇಳದೆ ಅದರ ವಿರುದ್ಧವಾದ ಅರ್ಥಬರುವಂತಹ ಪದಗಳನ್ನು ಬಳಸಿ ಹೇಳುವುದು.
  • ವ್ಯಂಗ್ಯಾರ್ಥಸೂಚಕಪದ -ಯಾವುದಾದರೂ ಒಂದು ವಿಷಯವನ್ನು ಹೇಳುವ ಬದಲು ನಕಾರಾತ್ಮಕ, ವಿರುದ್ಧವಾದ ಅರ್ಥಬರುವ ಪದ ಬಳಸುವುದು.
  • ಮೆರಿಸಂ -ಎಂಬುದು ಒಂದು ಅಲಂಕಾರ ಇದರಲ್ಲಿ ಒಬ್ಬ ವ್ಯಕ್ತಿ ತಾನು ಮಾತನಾಡುತ್ತಿರುವ ವಿಷಯದ / ವಸ್ತುವಿನ ವಿವಿಧ ಭಾಗಗಳನ್ನು ಪಟ್ಟಿಮಾಡಿಕೊಡುವುದು ಇಲ್ಲವೇ ಅತಿ ಮುಖ್ಯವಾದ ಎರಡು ಭಾಗಗಳ ಬಗ್ಗೆ ಮಾತನಾಡುವುದು.
  • ರೂಪಕ -ರೂಪಕ ಅಲಂಕಾರ ಒಂದು ವಿಷಯಕ್ಕೂ ಅಥವಾ ಒಂದು ವಸ್ತುವಿಗೂ ವ್ಯಕ್ತಿಗೂ ಇನ್ನೊಂದು ವಿಷಯ, ವಸ್ತು, ವ್ಯಕ್ತಿಗೂ, ಯಾವ ವ್ಯತ್ಯಾಸವಿಲ್ಲ, ಎರಡೂ ಒಂದೇ ಎಂದು ಹೇಳುವುದು. ಇದು ಓದುಗರನ್ನು ಹೇಗೆ ಬೇರೆ ಬೇರೆ ಸಂಬಂಧವಿಲ್ಲದ ವಿಷಯಗಳನ್ನು ಸಮಾನ ಎಂದು ಹೇಳಲಾಗುತ್ತದೆ. ಎಂದು ಯೋಚಿಸುವಂತೆ ಮಾಡುತ್ತದೆ. ರೂಪಕ ಅಲಂಕಾರ ಸಂಬಂಧವಿಲ್ಲದ ಎರಡು ವಿಷಯ ವಸ್ತುಗಳ ನಡುವೆ ಹೋಲಿಕೆ ಮಾಡಿ ಒಂದೇ ಎಂದು ಹೇಳುವುದು.
  • ಮಿಟೋನಮಿ -ಮಿಟೋನಮಿ ಇದೊಂದು ಅಲಂಕಾರ ಪದ. ಈ ಪದ ಒಂದು ವಸ್ತು ಅಥವಾ ಒಂದು ವಿಷಯವನ್ನು ಹೇಳುವಾಗ ಅದರ ಮೂಲ ಹೆಸರನ್ನು ಬಿಟ್ಟು ಅದಕ್ಕೆ ಸಂಬಂಧಿಸಿದ ಹತ್ತಿರದ ಪದವನ್ನು ಬಳಸಿ ಹೇಳುವುದು.ಹೇಳಬೇಕಾದ ವಿಷಯಕ್ಕೆ ಬದಲಾಗಿ ಅದರ ಲಕ್ಷಣ ಹೇಳುವ ಪದ ಬಳಸುವುದು. ಮಿಟೋನಮಿ ಒಂದು ಪದ / ಪದಗುಚ್ಛವಾಗಿ ಇನ್ನೊಂದು ಪದದ ಮೂಲಕ ಗುರುತಿಸಿ ಕೊಳ್ಳುವುದು.
  • ಸಾದೃಶ್ಯತೆ - ಸಾದೃಶ್ಯತೆ ಎರಡೂ ವ್ಯಕ್ತಿ, ವಸ್ತು, ವಿಷಯಗಳು ಸಮಾನಾಂತರ ಎಂದು ಹೇಳುವಂತದ್ದು. ಇಲ್ಲಿ ಎರಡು ಪದಗಳು ಅಥವಾ ಎರಡು ವಾಕ್ಯಗಳು ರಚನೆಯಲ್ಲಿ ಮತ್ತು ಕಲ್ಪನೆಯಲ್ಲಿ ಹೋಲುತ್ತವೆ,. ಇಂತಹ ಪದ / ವಾಕ್ಯ ಪ್ರಯೋಗಗಳು ಹಿಬ್ರೂ ಸತ್ಯವೇದದಲ್ಲಿ ಬಂದಿವೆ.ಕಾವ್ಯಪ್ರಧಾನವಾದ ದಾವೀದ ಕೀರ್ತನೆಗಳಲ್ಲಿ ಮತ್ತು ಜ್ಞಾನೋಕ್ತಿಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ.
  • ವ್ಯಕ್ತೀಕರಣ - “ಪರ್ ಸಾನಿಫಿಕೇಶನ್ “ ಇದೊಂದು ಅಲಂಕಾರ, ನಿರ್ಜೀವ ವಸ್ತುಗಳು,ವಿಷಯಗಳು ಇವುಗಳನ್ನು ಮನುಷ್ಯನಂತೆ ಕಲ್ಪಿಸಿ ಹೇಳುವುದು. ಇವು ಮನುಷ್ಯನಂತೆ ಕಾರ್ಯ ನಿರ್ವಹಿಸುವ ಬಗ್ಗೆ ಮನುಷ್ಯನಲ್ಲದ ವಸ್ತುವಿಗೆ ಮನುಷ್ಯನಿಗೆ ಇರುವ ಗುಣಲಕ್ಷಣಗಳನ್ನು ಕೊಟ್ಟು ಹೇಳುವುದು.
  • Predictive Past -ಇದೊಂದು ಭವಿಷ್ಯತ್ ಕಾಲದಲ್ಲಿ ನಡೆಯುವ ವಿಷಯವನ್ನು ಮೊದಲೇ ಮಾತನಾಡಿ ನಡೆದಂತೆ ಹೇಳುವುದು. ಇಂತಹ ಪ್ರಯೋಗಗಳು ಎಲ್ಲಾ ಭಾಷೆಯಲ್ಲೂ ಇರುವುದಿಲ್ಲ.ಕೆಲವು ಭಾಷೆಗಳಲ್ಲಿ ಮುಂದೆ ನಡೆಯುವ ವಿಷಯಗಳನ್ನು ಮೊದಲೇ ಮುಂದೆ ನಡದೇ ನಡೆಯುತ್ತದೆ ಎಂದು ಖಂಡಿತವಾಗಿ ಹೇಳುವುದು. ಪ್ರವಾದನೆಗಳು ಇದಕ್ಕೆ ಉತ್ತಮ ಉದಾಹರಣೆಗಳು ಇವುಗಳನ್ನು ಹೇಳುವವರು ಇದು ಖಂಡಿತವಾಗಿ ನಡದೇ ನಡೆಯುತ್ತದೆ ಎಂದು ಖಡಾಖಂಡಿತವಾಗಿ ಹೇಳುತ್ತಾರೆ.
  • ವಾಕ್ಚಾತೂರ್ಯದ ಪ್ರಶ್ನೆಗಳು (ರಿಟೋರಿಕ್ ಪ್ರಶ್ನೆ) ರಿಟೋರಿಕ್ ಪ್ರಶ್ನೆಗಳು ಭಾವೋತ್ತೇಜಕ ಪ್ರಶ್ನೆಗಳು. ಇವು ಮಾಹಿತಿ ಪಡೆಯುವ ಬದಲು ಬೇರೇ ಉದ್ದೇಶದಿಂದ ಕೇಳುವ ಪ್ರಶ್ನೆಗಳು. ಇದನ್ನು ಪ್ರಶ್ನೆ ಕೇಳುವವನ ಮನೋಭಾವ ವಿಷಯದ ಬಗ್ಗೆ ಮತ್ತು ಶ್ರೋತೃವಿನ ಬಗ್ಗೆ ಹೇಗಿದೆ ಎಂಬುದನ್ನು ಸೂಚಿಸುತ್ತದೆ. ಇಂತಹ ಮಾತುಗಳು ಸಾಮಾನ್ಯವಾಗಿ ಖಂಡಿಸಲು ಅಥವಾ ಬೈಯಲು ಉಪಯೋಗಿಸುತ್ತಾರೆ. ಆದರೆ ಬೇರೆ ಭಾಷೆಗಳಲ್ಲಿ ಇತರ ಉದ್ದೇಶಗಳಿಗೆ ಬಳಸುತ್ತಾರೆ.
  • ಉಪಮೆ -ಉಪಮಾ ಅಲಂಕಾರ. ಇದು ಎರಡು ವಸ್ತುಗಳ, ಇಬ್ಬರು ವ್ಯಕ್ತಿಗಳ ಮತ್ತು ವಿಷಯಗಳ ನಡುವಿನ ಹೋಲಿಕೆಗಳು ಸಮಾನವಾಗಿರುವಂತೆ ಸಮಾನ ಸಂಬಂಧವಾಚಕಗಳನ್ನು ಬಳಸಿ ಹೇಳುವುದು. ಎರಡೂ ವಾಕ್ಯಗಳಲ್ಲಿ ಸಮಾನತೆಯನ್ನು ಸೂಚಿಸುವ ಸಮಾನವಾಚಕ ಪದಗಳು “ಅಂತೆ,” “ಹಾಗೆ,” ಮುಂತಾದವು ಹೋಲಿಕೆಯನ್ನು ಹೆಚ್ಚು ಪ್ರಕಟವಾಗಿ ತಿಳಿಸುತ್ತದೆ.
  • Synecdoche -(ಸಿನೆಕ್ ಡೋಕಿ) ಇದೊಂದು ಇಂಗ್ಲೀಷ್ ಸಾಹಿತ್ಯದಲ್ಲಿ ಬರುವ ಅಲಂಕಾರ ಇದರಲ್ಲಿ 1) ಒಂದು ವಿಷಯದ ವಿವರವನ್ನು ಸಂಪೂರ್ಣವಾಗಿ ತಿಳಿಸಲು ಬಳಸಬಹುದು 2) ಸಂಪೂರ್ಣ ಭಾಗವನ್ನಾಗಿ ಕೇವಲ ಒಂದೇ ಭಾಗವನ್ನು ಸೂಚಿಸಲು ಬಳಸಬಹುದು.

ಅಪಾಸ್ಟ್ರಫಿ - ಚಹ್ನೆ

Translation Manual :: Just-in-Time Learning Modules :: Figures of Speech :: Apostrophe

ವ್ಯಾಖ್ಯಾನಗಳು

ಅಪಾಸ್ಟ್ರಫಿ (ಷಷ್ಟಿವಿಭಕ್ತಿಯು ಒಂದು ಅಲಂಕಾರವಾಗಿದೇ., ತಾನು ಹೇಳುತ್ತಿರುವ ಬಗ್ಗೆ ಗಮನ ಹರಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಓದುಗರ ಗಮನವನ್ನು ಮಾತನಾಡುವವನು ಬೇರೆಡೆ ಸೆಳೆಯುತ್ತಾನೆ.

ವಿವರಣೆ

ಅವನು ಇದನ್ನು ಮಾಡಲು ಕಾರಣವೇನೆಂದರೆ ಆತನ ಶ್ರೋತೃಗಳು ಅವನ ಸಂದೇಶಗಳನ್ನು ಅಥವಾ ಭಾವನೆಗಳನ್ನು ತಿಳಿಸುವುದರೊಂದಿಗೆ ಹೇಳುತ್ತಿರುವ ವ್ಯಕ್ತಿಯ ಬಗ್ಗೆ ಅಥವಾ ವಸ್ತುವಿನ ಬಗ್ಗೆ ಹೆಚ್ಚು ಪರಿಣಾಮಕಾರಿಯಾಗಿ ಹೇಳಲು ಪ್ರಯತ್ನಿಸುತ್ತಾನೆ.

ಇದಕ್ಕೆ ಭಾಷಾಂತರ ಸಮಸಯೇ ಕಾರಣ.

ಅನೇಕ ಭಾಷೆಯಲ್ಲಿ ಈ (ಅಪೋಸ್ಟಫಿ) ಷಷ್ಟಿ ವಿಭಕ್ತಿ ಪ್ರತ್ಯಯವನ್ನು ಪ್ರಯೋಗಿಸುವುದಿಲ್ಲ.ಇದರಿಂದ ಓದುಗರು ಗೊಂದಲಕ್ಕೀಡಾಗಬಹುದು. ಓದುಗರು ತಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ಯಾರು? ಇಂಥಹ ವಿಷಯಗಳನ್ನು ಮಾತನಾಡುವುದರಿಂದ ಆಗುವ ಉಪಯೋಗವೇನು ? ಅಥವಾ ತಮ್ಮ ಮಾತುಗಳನ್ನು ಕೇಳಿಸಿಕೊಂಡಿದ್ದಾರೆಯೇ? ಎಂಬುದರ ಬಗ್ಗೆ ವಿಸ್ಮಯದಿಂದ ಆಲೋಚಿಸಬಹುದು.

###ಸತ್ಯವೇದದಲ್ಲಿನ ಉದಾಹರಣೆಗಳು.

ಗಿಲ್ಬೋವಾ ಬೆಟ್ಟಗಳೇ, ನಿಮ್ಮ ಮೇಲೆ ಮಳೆಯಾಗಲಿ ಮಂಜಾಗಲಿ ಬೀಳದಿರಲಿ (2 ಸಮುವೇಲ 1:21 ULB)

ರಾಜನಾದ ಸೌಲನು ಗಿಲ್ಬೋವಾ ಬೆಟ್ಟದ ಮೇಲೆ ಕೊಲ್ಲಲ್ಪಟ್ಟಾಗ ದಾವೀದನು ಒಂದು ಶೋಕಗೀತೆಯನ್ನು ಹಾಡಿದನು. ಈ ರೀತಿ ಆ ಬೆಟ್ಟಗುಡ್ಡಗಳನ್ನು ಕುರಿತು ಅವುಗಳ ಮೇಲೆ ಮಂಜು ಅಥವಾ ಮಳೆ ಬೀಳಬಾರದೆಂದು ಬಯಸುವುದರ ಮೂಲಕ ಅವನಿಗೆ ಎಷ್ಟು ದುಃಖವಾಗಿದೆ ಎಂಬುದನ್ನು ವ್ಯಕ್ತಪಡಿಸಿದ್ದಾನೆ.

ಯೆರುಸೇಲಮೇ, ಯೆರುಸೇಲಮೇ ನಿನ್ನ ಬಳಿಗೆ ಕಳಿಸಿಕೊಟ್ಟ ಪ್ರವಾದಿಗಳನ್ನು ಕಲ್ಲೆಸದು ಕೊಲ್ಲುವವರು ಯಾರು. (ಲೂಕ 13:34 ULB)

ಯೇಸು ತನ್ನ ಅನಿಸಿಕೆಗಳನ್ನು, ಭಾವನೆಗಳನ್ನು ಯೆರುಸಲೇಮಿನ ಜನರ ಮುಂದೆ, ಶಿಷ್ಯರ ಮತ್ತು ಪರಿಸಾಯರ ಮುಂದೆ ವ್ಯಕ್ತಪಡಿಸುತ್ತಾ, ಅವರ ಬಗ್ಗೆ ತಾನು ಎಷ್ಟು ಕಾಳಜಿವಹಿಸುತ್ತೇನೆ ಎಂಬುದನ್ನು ತಿಳಿಸುತ್ತಿದ್ದ. ಯೇಸು ಇಲ್ಲಿ ಯೆರೂಸಲೇಮನ್ನು ಉದ್ದೇಶಿಸಿ ಮಾತನಾಡುತ್ತಾನೆ. ಯೆರುಸಲೆಮಿನ ಜನರು ಆತನ ಮಾತನ್ನು ಕೇಳುತ್ತಿದ್ದಾರೆ ಎಂದು ಅವರ ಬಗ್ಗೆ ತಾನು ಎಷ್ಟು ಕಾಳಜಿವಹಿಸುತ್ತೇನೆ ಎಂಬುದನ್ನು ತಿಳಿಸುತ್ತಾನೆ.

ಆ ಮನುಷ್ಯನು ಯೆಹೋವನ ಅಪ್ಪಣೆಯ ಮೇರೆಗೆ ಯಜ್ಞವೇದಿಯನ್ನು ಕುರಿತು "ವೇದಿಯೇ , ವೇದಿಯೇ ! ಎಂದು ಕೂಗಿದನು. ಇದನ್ನೇ ಯೆಹೋವನು ಹೇಳಿದ್ದು, ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವು (1 ಅರಸುಗಳು 13:2 ULB)

ಯೆಹೋವ ದೇವರು ಈ ಮಾತುಗಳನ್ನು ಆ ಯಜ್ಞವೇದಿಯನ್ನು ಕುರಿತು ಮಾತನಾಡಿದರೂ, ನಿಜವಾಗಲೂ ಆತನು ಅಲ್ಲಿ ನಿಂತಿದ್ದ ರಾಜನು ಅವನ ಮಾತುಗಳನ್ನು ಕೇಳಲಿ ಎಂದು ಹೇಳಿದ ಮಾತುಗಳು.

###ಅನುವಾದ /ಭಾಷಾಂತರ ತತ್ವಗಳು.

ಅಪೋಸ್ಟಫಿ /ಷಷ್ಠಿ ವಿಭಕ್ತಿ ಪ್ರತ್ಯಯ ನಿಮ್ಮ ಭಾಷೆಯಲ್ಲಿ ಸಹಜವಾದ, ಸರಿಯಾದ ಅರ್ಥಕೊಡುವುದಾದರೆ ಅವುಗಳನ್ನು ಬಳಸುವುದರಲ್ಲಿ ಅಡ್ಡಿ ಇಲ್ಲ. ಇದು ಆಗದಿದ್ದರೆ ಇನ್ನೊಂದು ಅವಕಾಶ ಇಲ್ಲಿದೆ.

  1. ಈ ರೀತಿ ಮಾತನಾಡುವುದು ನಿಮ್ಮ ಜನರಿಗೆ ಗೊಂದಲ ಉಂಟುಮಾಡುವುದಾದರೆ ಈ ರೀತಿ ಮಾತನಾಡುವವರು ಇದನ್ನು ಮುಂದುವರೆಸಲಿ. ಮಾತನಾಡುವವರು ತನ್ನ ಜನರನ್ನು ಕುರಿತು ತನ್ನ ಸಂದೇಶವನ್ನು ಅಥವಾ ಜನರ ಬಗ್ಗೆ ತನಗಿರುವ ಅಭಿಪ್ರಾಯಗಳನ್ನು ಅಥವಾ ತನ್ನ ಮಾತನ್ನು ಕೇಳಿಸಿಕೊಳ್ಳಲು ಆಗದೆ ಇರುವ ವಸ್ತುಗಳಿಗೂ ತಿಳಿಸುತ್ತಾನೆ.

ಅನುವಾದ /ಭಾಷಾಂತರ ತಂತ್ರಗಳನ್ನು ಅಳವಡಿಸುವ ಉದಾಹರಣೆಗಳು.

  1. ಈ ರೀತಿ ಮಾತನಾಡುವುದು ನಿಮ್ಮ ಜನರಿಗೆ ಗೊಂದಲ ಉಂಟಾಗುವುದಾದರೆ ಮಾತನಾಡುವವನು ಜನರನ್ನು ಉದ್ದೇಶಿಸಿ ಮಾತನಾಡುವುದನ್ನು ಮುಂದುವರೆಸಲಿ, ಆತನ ಮಾತನ್ನು ಆಲಿಸುವವರನ್ನು ಆತನ ಸಂದೇಶ / ಅಭಿಪ್ರಾಯಗಳನ್ನು ಕೇಳಿಸಿಕೊಳ್ಳಲು ಆಗದೇ ಇರುವ ವಸ್ತುಗಳಿಗೂ ತಿಳಿಸುವನು.
  • ಯೆಹೋವನ ಆಜ್ಞೆಯಂತೆ ಯಜ್ಞವೇದಿಯ ವಿರುದ್ಧವಾಗಿ : "ವೇದಿಯೇ, ವೇದಿಯೇ r! ಇದನ್ನೇ ಯೆಹೋವನು ಹೇಳಿದ್ದು… ನಿನ್ನ ಮೇಲೆ ಮಾನವರ ಎಲುಬುಗಳನ್ನು ಸುಡುವರು " (1 ಅರಸು 13:2 ULB)

    • ಆತನು ಯಜ್ಞವೇದಿಯನ್ನು ಕುರಿತು ಈ ಮಾತನ್ನು ಹೇಳಿದನು. “ಇದನ್ನೇ ಯೆಹೋವನು ಯಜ್ಞವೇದಿಯನ್ನು ಕುರಿತು ಹೇಳಿದ್ದು.ಮನುಷ್ಯರ ಎಲುಬುಗಳನ್ನು ಯಜ್ಞವೇದಿಯ ಮೇಲೆ ಸುಡುವರು .”
  • ಗಿಲ್ಬೋವ ಬೆಟ್ಟಗಳ ಮೇಲೆ , ಮಳೆಯಾಗಲೀ ಮಂಜಾಗಲೀ ಬೀಳದಿರಲಿ (2 ನೇ ಸಮುವೇಲ 1:21 ULB)

    • ಗಿಲ್ಬೋವ ಬೆಟ್ಟಗುಡ್ಡಗಳ ಮೇಲೆ , ಮಳೆಯಾಗಲೀ ಮಂಜಾಗಲೀ ಬೀಳದಿರಲಿ

ದ್ವಿರುಕ್ತಿಗಳು

Translation Manual :: Just-in-Time Learning Modules :: Figures of Speech :: Doublet

ವಿವರಣೆ

ಒಟ್ಟಿಗೆ ಬಳಸುವ ಮತ್ತು ಒಂದೇ ಅರ್ಥಕೊಡುವ ಅಥವಾ ಒಂದೇ ವಿಷಯಕ್ಕೆ ಹತ್ತಿರವಾದ ಅರ್ಥವಿರುವ ಎರಡು ಪದಗಳನ್ನು ಅಥವಾ ಪದಗುಚ್ಛಗಳನ್ನು ಸೂಚಿಸುವುದಕ್ಕಾಗಿ ದ್ವಿರುಕ್ತಿಯನ್ನು ನಾವು ಬಳಸುತ್ತೇವೆ. ಕೆಲವೊಮ್ಮೆ ಈ ಪದಗಳನ್ನು “ಮತ್ತು” ಎಂಬ ಪದದ ಸಹಿತ ಒಂದು ಪದವಾಗಿ ಬಳಸುತ್ತೇವೆ. ಇದು ದ್ವಿಪದಾಲಂಕಾರಗಳ ಹಾಗಲ್ಲ, ದ್ವಿಪದಾಲಂಕಾರದಲ್ಲಿ ಒಂದು ಪದವು ಇನ್ನೊಂದನ್ನು ಮಾರ್ಪಡಿಸುತ್ತದೆ, ದ್ವಿರುಕ್ತಿಯಲ್ಲಿ ಎರಡು ಪದಗಳು ಅಥವಾ ಪದಗುಚ್ಛಗಳು ಸಮಾನವಾಗಿರುತ್ತವೆ ಮತ್ತು ಎರಡು ಪದಗಳು ಅಥವಾ ಪದಗುಚ್ಛಗಳ ಮೂಲಕ ವ್ಯಕ್ತಪಡಿಸಿದ ವಿಚಾರವನ್ನು ಒತ್ತಿಹೇಳಲು ಅಥವಾ ತೀವ್ರಗೊಳಿಸಲು ಬಳಸಲಾಗುತ್ತದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಕೆಲವು ಭಾಷೆಗಳಲ್ಲಿ ಜನರು ದ್ವಿರುಕ್ತಿಗಳನ್ನು ಉಪಯೋಗಿಸುವುದಿಲ್ಲ, ಅಥವಾ ಅವರು ದ್ವಿರುಕ್ತಿಗಳನ್ನು ಕೆಲವು ಸನ್ನಿವೇಶಗಳಲ್ಲಿ ಮಾತ್ರ ಬಳಸಬಹುದು, ಆದ್ದರಿಂದ ಅವರ ಭಾಷೆಯಲ್ಲಿ ಕೆಲವೊಂದು ವಚನಗಳಲ್ಲಿ ದ್ವಿರುಕ್ತಿಯು ಅರ್ಥಹೀನವಾಗಿರುತ್ತದೆ. ಈ ವಚನವು ಒಂದೇ ವಿಚಾರವನ್ನು ಅಥವಾ ಕ್ರಿಯೆಯನ್ನು ವಿವರಿಸುತ್ತಿರುವಾಗಲೂ, ಜನರು ಇದುಎರಡು ವಿಚಾರಗಳನ್ನು ಅಥವಾ ಕ್ರಿಯೆಗಳನ್ನು ವಿವರಿಸುತ್ತಿದ್ದೆ ಎಂದು ಭಾವಿಸಬಹುದು. ಈ ಸಂಗತಿಯಲ್ಲಿ, ಭಾಷಾಂತರ ಮಾಡುವವರು ದ್ವಿರುಕ್ತಿಯು ವ್ಯಕ್ತಪಡಿಸಿರುವ ಅರ್ಥವನ್ನು ವ್ಯಕ್ತಪಡಿಸುವುದಕ್ಕೆ ಬೇರೆ ಯಾವುದಾದರೂ ಮಾರ್ಗವಿದೆಯೋ ಎಂದು ಕಂಡುಕೊಳ್ಳಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು

ಅರಸನಾದ ದಾವೀದನು ದಿನತುಂಬಿದ ಮುದುಕನಾಗಿದ್ದನು. (1 ಅರಸುಗಳು 1:1 ULT)

ದೊಡ್ಡ ಅಕ್ಷರಗಳಲ್ಲಿ ಇರುವ ಪದಗಳು ಒಂದೇ ಅರ್ಥವನ್ನು ಹೊಂದಿವೆ. ಎರಡೂ ಪದಗಳು ಅವನು ತುಂಬಾ ವಯಸ್ಸಾದವನು ಎಂಬುದನ್ನು ಸೂಚಿಸುತ್ತದೆ.

…ಅವನು ತನಗಿಂತ ಉತ್ತಮರೂ ಮತ್ತು ನೀತಿವಂತರು ಆದ ಇಬ್ಬರನ್ನು ಕೊಂದನು (1 ಅರಸುಗಳು 2:32 ULT)

ಇದರ ಅರ್ಥ ಅವರು ಅವನಿಗಿಂತ “ಹೆಚ್ಚು ನೀತಿವಂತರಾಗಿದ್ದರು.”

ನೀವು ಸುಳ್ಳು ಮತ್ತು ಮೋಸದ ಮಾತುಗಳನ್ನು ಹೇಳಲು ನಿರ್ಧರಿಸಿ ಸಿದ್ದವಾಗಿದ್ದೀರಿ (ದಾನಿಯೇಲ 2:9 ULT)

ಇದರ ಅರ್ಥವೇನಂದರೆ ಅವರು ಸುಳ್ಳು ಹೇಳುವುದಕ್ಕೆ ನಿರ್ಧರಿಸಿಕೊಂಡಿದ್ದರು, ಇದು ಅವರು ಜನರನ್ನು ಮೋಸಗೊಳಿಸಲು ಬಯಸಿದ್ದರು ಎಂದು ಹೇಳುವುದಕ್ಕಿರುವ ಮತ್ತೊಂದು ರೀತಿಯಾಗಿದೆ.

ಪೂರ್ಣಾಂಗವಾದ ಮತ್ತು ನಿಷ್ಕಳಂಕವಾದ ಕುರಿಯಾಗಿರುವ. (1 ಪೇತ್ರ 1:19 ULT)

ಆತನು ಯಾವುದೇ ಕುಂದುಕೊರತೆ ಇಲ್ಲದ ಕುರಿಯಂತೆ ಇದ್ದಾನೆ ಎಂಬುದು ಇದರ ಅರ್ಥವಾಗಿದೆ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ದ್ವಿರುಕ್ತಿಗಳನ್ನು ಬಳಸುವುದು ಸಹಜವಾಗಿದ್ದರೆ ಮತ್ತು ಅವು ಸರಿಯಾದ ಅರ್ಥಕೊಡುವುದಾದರೆ ಅದನ್ನು ಬಳಸಿರಿ. ಇಲ್ಲದಿದ್ದರೆ ಈ ಕೆಳಗೆ ಸೂಚಿಸಿರುವ ಕಾರ್ಯತಂತ್ರಗಳನ್ನು ಬಳಸಬಹುದು.

  1. ಎರಡರಲ್ಲಿ ಒಂದು ಪದವನ್ನು ಅಥವಾ ಪದಗುಚ್ಛವನ್ನು ಭಾಷಾಂತರ ಮಾಡಿರಿ.
  2. ಅರ್ಥವನ್ನು ತೀವ್ರಗೊಳಿಸಲು ದ್ವಿರುಕ್ತಿಯನ್ನು ಬಳಸಿದ್ದಲ್ಲಿ, ಎರಡರಲ್ಲಿ ಒಂದು ಪದವನ್ನು ಅಥವಾ ಪದಗುಚ್ಛವನ್ನು ಭಾಷಾಂತರ ಮಾಡಿರಿ ಮತ್ತು ಅದಕ್ಕೆ ತೀವ್ರಗೊಳಿಸುವ ಪದಗಳಾದ “ತುಂಬಾ”, “ಅಧಿಕ” ಅಥವಾ “ಬಹಳ” ಎಂಬ ಪದಗಳನ್ನು ಸೇರಿಸಿರಿ.
  3. ಅರ್ಥವನ್ನು ತೀವ್ರಗೊಳಿಸಲು ಅಥವಾ ಒತ್ತಿಹೇಳಲು ದ್ವಿರುಕ್ತಿಗಳನ್ನು ಬಳಸಿದ್ದಲ್ಲಿ, ನಿಮ್ಮ ಭಾಷೆಯಲ್ಲಿ ಅದಕ್ಕನುಗುಣವಾಗಿರುವ ಉತ್ತಮ ರೀತಿಯನ್ನು ಬಳಸಿ ಭಾಷಾಂತರ ಮಾಡಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿದೆ

(1) ಎರಡರಲ್ಲಿ ಒಂದು ಪದವನ್ನು ಭಾಷಾಂತರಿಸಿರಿ.

ನೀವು ಸುಳ್ಳು ಮತ್ತು ಮೋಸದ ಮಾತುಗಳನ್ನು ಹೇಳಲು ನಿರ್ಧರಿಸಿ ಸಿದ್ದವಾಗಿದ್ದೀರಿ (ದಾನಿಯೇಲ 2:9 ULT)

“ನೀವು ಸುಳ್ಳು ವಿಚಾರಗಳನ್ನು ಹೇಳಲು ನಿರ್ಧರಿಸಿದ್ದೀರೀ.”

(2) ಅರ್ಥವನ್ನು ತೀವ್ರಗೊಳಿಸಲು ದ್ವಿರುಕ್ತಿಯನ್ನು ಬಳಸಿದ್ದಲ್ಲಿ, ಎರಡರಲ್ಲಿ ಒಂದು ಪದವನ್ನು ಅಥವಾ ಪದಗುಚ್ಛವನ್ನು ಭಾಷಾಂತರ ಮಾಡಿರಿ ಮತ್ತು ಅದಕ್ಕೆ ತೀವ್ರಗೊಳಿಸುವ ಪದಗಳಾದ “ತುಂಬಾ”, “ಅಧಿಕ” ಅಥವಾ “ಬಹಳ” ಎಂಬ ಪದಗಳನ್ನು ಸೇರಿಸಿರಿ.

ಅರಸನಾದ ದಾವೀದನು ದಿನತುಂಬಿದ ಮುದುಕನಾಗಿದ್ದನು. (1 ಅರಸುಗಳು 1:1 ULT)

“ಅರಸನಾದ ದಾವೀದನು ತುಂಬಾ ವಯಸ್ಸಾದವನಾಗಿದ್ದನು.”

(3) ಅರ್ಥವನ್ನು ತೀವ್ರಗೊಳಿಸಲು ಅಥವಾ ಒತ್ತಿಹೇಳಲು ದ್ವಿರುಕ್ತಿಗಳನ್ನು ಬಳಸಿದ್ದಲ್ಲಿ, ನಿಮ್ಮ ಭಾಷೆಯಲ್ಲಿ ಅದಕ್ಕನುಗುಣವಾಗಿರುವ ಉತ್ತಮ ರೀತಿಯನ್ನು ಬಳಸಿ ಭಾಷಾಂತರ ಮಾಡಿರಿ.

ಪೂರ್ಣಾಂಗವಾದ ಮತ್ತು ನಿಷ್ಕಳಂಕವಾದ ಕುರಿ. (1 ಪೇತ್ರ 1:19 ULT) – ಆಂಗ್ಲ ಭಾಷೆಯಲ್ಲಿ ಇವುಗಳನ್ನು ಹೆಚ್ಚು ಒತ್ತು ಕೊಟ್ಟು ಹೇಳಲು “ಯಾವುದೇ” ಮತ್ತು “ಇಲ್ಲದ” ಎಂದು ಬಳಸಿದ್ದಾರೆ.

“…ಯಾವುದೇ ಕಳಂಕವಿಲ್ಲದೆ ಕುರಿಮರಿ…”


ಸೌಮ್ಯೋಕ್ತಿಗಳು.

Translation Manual :: Just-in-Time Learning Modules :: Figures of Speech :: Euphemism

ವಿವರಣೆ

ಸಾಹಿತ್ಯದಲ್ಲಿ ಕೆಲವೊಮ್ಮೆ ಅಹಿತಕರ ಘಟನೆಗಳು, ಗಲಿಬಿಲಿಗೊಳಿಸುವ ಮಾತುಗಳು ಸಂಕೋಚಕ್ಕೆ ಗುರಿಮಾಡುವ ಸಂಗತಿಗಳು, ಸಾಮಾಜಿಕವಾಗಿ ಸಮ್ಮತವಲ್ಲದ, ಎಲ್ಲರೆದುರಿಗೆ ಹೇಳಲಾರದಂಥ ಮಾತುಗಳಿದ್ದರೆ ಅವುಗಳನ್ನು ನಯವಾದ ಮಾತುಗಳಲ್ಲಿ ತಿಳಿಸುವುದನ್ನು ಸೌಮ್ಯೋಕ್ತಿಗಳೆಂದು ಕರೆಯುತ್ತೇವೆ. ಉದಾಹರನೆಗೆ ಸಾವಿನ ಬಗ್ಗೆ ಬಹಿರಂಗವಾಗಿ ಹೇಳದೆ ಅಥವಾ ಕೆಲಸಗಳ ಬಗ್ಗೆ ಹೇಳುವಾಗ ಉಪಯೋಗಿಸಬಹುದಾದ ನಯ ನುಡಿಗಳು.

… ಅವರು ಸೌಲನು ಮತ್ತು ಅವನ ಮೂವರು ಗಂಡುಮಕ್ಕಳು ಗಿಲ್ಟೋವಾ ಬೆಟ್ಟದ ಮೇಲೆ ಬಿದ್ದಿರುವುದನ್ನು ಕಂಡರು. (1 ನೇ ಪೂರ್ವಕಾಲ ವೃತ್ತಾಂತ 10:8 ULT)

ಸೌಲ ಮತ್ತು ಅವನ ಗಂಡುಮಕ್ಕಳು “ಸತ್ತುಹೋಗಿದ್ದರು” ಎಂಬುದು ಇದರ ಅರ್ಥ. ಇದೊಂದು ಸೌಮ್ಯೋಕ್ತಿ, ಏಕೆಂದರೆ ಇಲ್ಲಿ ಮುಖ್ಯ ವಿಷಯವೆಂದರೆ ಸೌಲ ಮತ್ತು ಅವನ ಮಕ್ಕಳ ಮರಣಹೊಂದಿರುವುದನ್ನು ಆದರೆ ಅಲ್ಲಿ ಅವರು ಬಿದ್ದಿದ್ದರು ಎಂದು ಹೇಳಲಾಗಿದೆ. ಕೆಲವೊಮ್ಮೆ ಜನರು ಸಾವಿನ ಬಗ್ಗೆ ನೇರವಾಗಿ ಮಾತನಾಡಲು ಹಿಂಜರಿಯುತ್ತಾರೆ. ಏಕೆಂದರೆ ಅದೊಂದು ಅಹಿತಕರವಾದ ಅನುಭವ.

ಕಾರಣವೇನಂದರೆ ಇದೊಂದು ಭಾಷಾಂತರ ಸಮಸ್ಯೆ

ಬೇರೆ ಬೇರೆ ಭಾಷೆಗಳಲ್ಲಿ ಬೇರೆಬೇರೆ ರೀತಿಯ ಸೌಮ್ಯೋಕ್ತಿಗಳನ್ನು ಬಳಸುತ್ತಾರೆ. ಮೂಲ ಭಾಷೆಯಲ್ಲಿರುವ ಸೌಮ್ಯೋಕ್ತಿಗಳಂತೆ ಭಾಷಾಂತರಿಸುವ ಭಾಷೆಯಲ್ಲಿ ಸೌಮ್ಯೋಕ್ತಿಗಳನ್ನು ಬಳಸಲು ಸಾಧ್ಯವಾಗದಿದ್ದರೆ, ಓದುಗರಿಗೆ ಸರಿಯಾದ ಅರ್ಥ ತಿಳಿಯದೆ ಹೋಗಬಹುದು. ಬರಹಗಾರರು ಬರೆದ ಕೇವಲ ಪದಶಃ ಅರ್ಥ ತಿಳಿಯಲು ಸಾಧ್ಯವಾಗುತ್ತದೆಯೇ ಹೊರತು ಅದರ ಒಳಾರ್ಥ ತಿಳಿಯದೆ ಹೋಗಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು

… ಅಲ್ಲಿದ್ದ ಗುಹೆಯಿತ್ತು. ಸೌಲನು ತನ್ನ ಪಾದಗಳನ್ನು ಮುಚ್ಚುವುದಕ್ಕಾಗಿ ಗುಹೆಯೊಳಗೆ ಹೋದನು. (1 ಸಮುವೇಲ 24:3 ULT)

ಮೂಲ ಓದುಗರು ಸೌಲನು ಆ ಗುಹೆಯೊಳಗೆ ತನ್ನ ಶೌಚಕಾರ್ಯಕ್ಕಾಗಿ ಹೋದನು ಎಂದು ಅರ್ಥಮಾಡಿಕೊಂಡಿದ್ದರು. ಆದರೆ ಇದನ್ನು ಬರೆದ ಲೇಖಕನು ಓದುಗರಿಗೆ ಮುಜುಗರವನ್ನು ಉಂಟುಮಾಡುವುದನ್ನಾಗಲಿ ಅಥವಾ ಗಮನವನ್ನು ಹಾಳಮಾಡುವುದನ್ನಾಗಲಿ ತಪ್ಪಿಸುವುದಕ್ಕಾಗಿ, ಸೌಲನು ಗುಹೆಯೊಳಗೆ ಏನು ಮಾಡಿದನು ಅಥವಾ ಅವನು ಅಲ್ಲಿ ಏನು ಬಿಟ್ಟು ಬಂದನು ಎಂದು ಅವನು ಅದನ್ನು ನಿರ್ದಿಷ್ಟವಾಗಿ ಹೇಳಲಿಲ್ಲ.

ಆದರೆ ಮರಿಯಳು ದೇವದೂತನಿಗೆ, “ಇದು ಹೇಗೆ ಸಾಧ್ಯ ನಾನು ಪುರುಷನನ್ನು ಅರಿತವಳಲ್ಲವಲ್ಲಾ?” ಎಂದು ಹೇಳಿದಳು. ಲೂಕ 1:34 ULT)

ನಯವಾಗಿ ಹೇಳಲು, ಮರಿಯಳು ಸೌಮ್ಯೋಕ್ತಿಯನ್ನು ಬಳಸಿ, ಆಕೆ ಇದುವರೆಗೂ ಯಾವ ಪುರುಷನ ದೈಹಿಕ ಸಂಪರ್ಕ ಮಾಡಿಲ್ಲ ಎಂದು ಹೇಳಿದಳು.

ಭಾಷಾಂತರದ ಕಾರ್ಯತಂತ್ರಗಳು

ಸೌಮ್ಯೋಕ್ತಿಗಳು ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತು ಸರಿಯಾದ ಅರ್ಥವನ್ನು ಕೊಡುವುದಾದರೆ ಅವುಗಳನ್ನೇ ಬಳಸಿರಿ. ಇಲ್ಲದಿದ್ದರೆ ಇಲ್ಲಿ ಕೊಟ್ಟಿರುವ ಕೆಲವು ಅಂಶಗಳನ್ನು ಗಮನಿಸಿರಿ:

(1) ನಿಮ್ಮ ಸಂಸ್ಕೃತಿಯಲ್ಲಿರುವ ಸೌಮ್ಯೋಕ್ತಿಯನ್ನು ಬಳಸಿರಿ.

(2) ಸೌಮ್ಯೋಕ್ತಿಯು ಅವಮಾನಕರವಾಗಿದೆ ಎಂದು ಅನ್ನಿಸುವುದಾದರೆ, ಅದರಲ್ಲಿರುವ ಮಾಹಿತಿಯನ್ನು ಸೌಮ್ಯೋಕ್ತಿಯನ್ನು ಬಳಸದೆ ಸರಳವಾಗಿ ಹೇಳಬಹುದು.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಿಯಿರುವ ಉದಾಹರಣೆಗಳು

(1) ನಿಮ್ಮ ಸಂಸ್ಕೃತಿಯಲ್ಲಿರುವ ಸೌಮ್ಯೋಕ್ತಿಯನ್ನು ಬಳಸಿರಿ.

… ಅಲ್ಲಿ ಗುಹೆಯಿತ್ತು. ಸೌಲನು ತನ್ನ ಪಾದಗಳನ್ನು ಮುಚ್ಚುವುದಕ್ಕಾಗಿ ಗುಹೆಯೊಳಗೆ ಹೋದನು. (1 ಸಮುವೇಲ 24:3 ULT) — ಕೆಲವು ಭಾಷೆಗಳಲ್ಲಿ ಹೀಗೆ ಸೌಮ್ಯೋಕ್ತಿಯನ್ನು ಬಳಬಹುದು:

“…ಅಲ್ಲಿ ಗುಹೆಯಿತ್ತು. ಸೌಲನು ಗುಹೆಯೊಳಗೆ ಹೋಗಿ ಅಲ್ಲಿ ಒಂದು ಗುಂಡಿಯನ್ನು ತೋಡಿದನು"

“…ಅಲ್ಲಿ ಗುಹೆಯಿತ್ತು. ಸೌಲನು ಗುಹೆಯೊಳಗೆ ಹೋದನು ಅಲ್ಲಿ ಸ್ವಲ್ಪ ಸಮಯ ಏಕಾಂತವಾಗಿದ್ದನು"

ಆದರೆ ಮರಿಯಳು ದೇವದೂತನಿಗೆ, “ಇದು ಹೇಗೆ ಸಾಧ್ಯ ನಾನು ಪುರುಷನನ್ನು ಅರಿತವಳಲ್ಲವಲ್ಲಾ?” ಎಂದು ಹೇಳಿದಳು. ಲೂಕ 1:34 ULT)

ಆದರೆ ಮರಿಯಳು ದೇವದೂತನಿಗೆ, “ ಇದು ಹೇಗೆ ನಡೆಯಲು ಸಾಧ್ಯ?, ನಾನು ಪುರುಷನೊಂದಿಗೆ ಮಲಗಿಲ್ಲವಲ್ಲಾ?" ಅಂದಳು.

(2) ಸೌಮ್ಯೋಕ್ತಿಯು ಅವಮಾನಕರವಾಗಿದೆ ಎಂದು ಅನ್ನಿಸುವುದಾದರೆ, ಅದರಲ್ಲಿರುವ ಮಾಹಿತಿಯನ್ನು ಸೌಮ್ಯೋಕ್ತಿಯನ್ನು ಬಳಸದೆ ಸರಳವಾಗಿ ಹೇಳಬಹುದು.

ಅವರು ಸೌಲನು ಮತ್ತು ಅವನ ಗಂಡು ಮಕ್ಕಳು ಗಿಲ್ಟೋವಾ ಬೆಟ್ಟದ ಮೇಲೆ ಬಿದ್ದಿರುವುದನ್ನು ಕಂಡರು. (1 ನೇ ಪೂರ್ವಕಾಲವೃತ್ತಾಂತ 10:8 ULB)

”ಅವರು ಸೌಲನು ಮತ್ತು ಅವನ ಗಂಡು ಮಕ್ಕಳು ಗಿಲ್ಟೋವಾ ಬೆಟ್ಟದ ಮೇಲೆ ಸತ್ತು ಬಿದ್ದಿರುವುದನ್ನು ಕಂಡರು."


ವಿಸ್ತರಿಸಿದ ರೂಪಕ ಅಲಂಕಾರ.

Translation Manual :: Just-in-Time Learning Modules :: Figures of Speech :: Extended Metaphor

ವಿವರಣೆ.

ವಿಸ್ತರಿಸಿದ ರೂಪಕ ಅಲಂಕಾರ ಎಂದರೆ ಒಂದು ಸನ್ನಿವೇಶ ಅಥವಾ ಒಂದು ವಿಷಯದ ಬಗ್ಗೆ ಒಬ್ಬರು ಮಾತನಾಡುವಾಗ ಇನ್ನೊಂದು ಸನ್ನಿವೇಶವನ್ನು ಉದ್ದೇಶಿಸಿ ಮಾತನಾಡುವುದು.

ಇಂತಹ ರೂಪಕ ಅಲಂಕಾರದಲ್ಲಿ ಪರಿಣಾಮಕಾರಿಯಾದ ಸನ್ನಿವೇಶವನ್ನು ವಿವರಿಸಲು ಮೊದಲನೆಯ ಸನ್ನಿವೇಶ ಎರಡನೆಯ ಸನ್ನಿವೇಶದಷ್ಟೇ ಸಮವಾಗಿದೆ ಎಂದು ತೋರಿಸುತ್ತದೆ ಎರಡನೇ ವಿಧದಲ್ಲಿ ಮನುಷ್ಯನನ್ನು, ವಸ್ತುಗಳನ್ನು ಮತ್ತು ಕ್ರಿಯೆಗಳನ್ನು ಕುರಿತು ಬಳಸುವ ** ಚಿತ್ರಣ** ಮೊದಲ ಸನ್ನಿವೇಶದಲ್ಲಿ ಪ್ರತಿನಿಧಿಸುತ್ತವೆ.

ಇದಕ್ಕೆ ಕಾರಣ ಇದೊಂದು ಭಾಷಾಂತರ ಪ್ರಕರಣ.

  • ಚಿತ್ರಣಗಳು ಬೇರೆ ವಿಚಾರಗಳನ್ನು ಪ್ರತಿನಿಧಿಸುತ್ತವೆ ಎಂದು ಜನರಿಗೆ ತಿಳಿಯದೇ ಇರಬಹುದು.
  • ಜನರಿಗೆ ಇಂತಹ * ಚಿತ್ರಣ* ಬಳಕೆ ಬಗ್ಗೆ ತಿಳಿಯದೆ /ಪರಿಚಯವಿಲ್ಲದೆ ಇರಬಹುದು.
  • ವಿಸ್ತರಿಸಿದ ರೂಪಕ ಅಲಂಕಾರ ಕೆಲವೊಮ್ಮೆ ಎಷ್ಟು ಪ್ರಬುದ್ಧವಾಗಿರುತ್ತದೆ ಎಂದರೆ ಭಾಷಾಂತರಗಾರನಿಗೆ ಇದನ್ನು ಸರಳವಾಗಿ ರೂಪಕ ಅಲಂಕಾರದ ಮೂಲಕ ವ್ಯಕ್ತಪಡಿಸಲು ಕಠಿಣವೆನಿಸಬಹುದು.

ಭಾಷಾಂತರದ ತತ್ವಗಳು.

  • ಮೂಲ ಓದುಗರಿಗೆ ಹೇಗೆ ಸ್ಪಷ್ಟವಾಗಿ ಅರ್ಥವಾಗುವಂತೆ ತಿಳಿಸುತ್ತೀರೋ ಹಾಗೆ ಭಾಷಾಂತರ ಮಾಡುತ್ತಿರುವ ಭಾಷೆಯ ಓದುಗರಿಗೆ ಅಷ್ಟೇ ಸ್ಪಷ್ಟವಾಗಿ ತಿಳಿಯುವಂತೆ, ಅರ್ಥವಾಗುವಂತೆ ತಿಳಿಸಬೇಕು.
  • ಮೂಲ ಓದುಗರಿಗೆ ತಿಳಿಸಿದಂತೆ ಭಾಷಾಂತರ ಮಾಡುತ್ತಿರುವ ಭಾಷೆಯ ಶ್ರೋತೃಗಳಿಗೆ ಅದರ ಅರ್ಥವನ್ನುವಿವರವಾಗಿ ಹೇಳಬೇಡಿರಿ.
  • ಯಾರಾದರೂ ವಿಸ್ತೃತ ರೂಪಕ ಅಲಂಕಾರವನ್ನು ಬಳಸಿದರೆ ಅವರು ಹೇಳುತ್ತಿರುವ ವಿಷಯದ ಚಿತ್ರಣಗಳು ಮುಖ್ಯವಾಗಿ ಇರುತ್ತವೆ.
  • ಭಾಷಾಂತರ ಮಾಡುತ್ತಿರುವ ಭಾಷೆಯ ಓದುಗರು ನೀವು ಭಾಷಾಂತರಿಸಿದ ಚಿತ್ರಣನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ವಿಸ್ತರಿಸಿದ ರೂಪಕ ಅಲಂಕಾರವನ್ನು ವಿವರಿಸಿ ಹೇಳಬೇಕು.

###ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು.

ದಾವೀದನ.ಕೀರ್ತನೆಗಳು.23:1-4,ಲೇಖಕನಾದ ದಾವೀದನು ದೇವರು ತನ್ನ ಜನರ ಬಗ್ಗೆ ಕಾಳಜಿಯಿಂದ ಸಂರಕ್ಷಣೆ ಮಾಡುತ್ತಾನೆ. ಕುರುಬನು ಹೇಗೆ ತನ್ನ ಕುರಿಗಳನ್ನು ಕಾಯುತ್ತಾನೋ, ಆರೈಕೆಮಾಡುತ್ತಾನೋ ಹಾಗೆ ದೇವರೂ ಸಹ ನಮ್ಮ ಬಗ್ಗೆ ಪ್ರೀತಿ, ಕಾಳಜಿ ತೋರಿಸುತ್ತಾನೆ.

ಕುರುಬರು ತಮ್ಮ ಕುರಿಗಳನ್ನು ಹಸಿರಿರುವ ಜಾಗ ಹುಡುಕಿ ಮೇಯಿಸಲು ಕರೆದುಕೊಂಡು ಹೋಗುತ್ತಾನೆ. ಅವುಗಳಿಗೆ ಏನು ಬೇಕು ಎಂಬುದನ್ನು ತಿಳಿದು ಒದಗಿಸುತ್ತಾನೆ, ಕಾಡುಮೃಗಗಳಿಂದ ರಕ್ಷಿಸಿ ಸರಿಯಾದ ದಾರಿಯಲ್ಲಿ ಕರೆದುಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳುತ್ತಾನೆ. ನಮ್ಮ ದೇವರು ಸಹ ನಮ್ಮನ್ನು ಇದೇ ರೀತಿ ಸಂರಕ್ಕಷಿಸಿ ಮಾರ್ಗದರ್ಶಿಸುತ್ತಾನೆ.

1ಯೆಹೋವನು ನನ್ನ ಕುರುಬನು : ನಾನು ಕೊರತೆ ಪಡೆನು. 2ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುತ್ತಾನೆ.

ವಿಶ್ರಾಂತಿಕರವಾದ ನೀರುಗಳ ಬಳಿಗೆ ನನ್ನನ್ನು ಬರಮಾಡುತ್ತಾನೆ

3ನನ್ನ ಪ್ರಾಣವನ್ನು ಉಜ್ಜೀವಿಸುವಂತೆ ಮಾಡುತ್ತಾನೆ.

ಆತನು ತನ್ನ ಹೆಸರಿಗೆ ತಕ್ಕಂತೆ ನೀತಿ ಮಾರ್ಗದಲ್ಲಿ ನನ್ನನ್ನು ನಡೆಸುತ್ತಾನೆ.

4ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ

ನೀನು ಹತ್ತಿರವಿರುವುದರಿಂದ ನಾನು ಯಾವ ಕೇಡಿಗೂ ಹೆದರೆನು. ನಿನ್ನ ದೊಣ್ಣೆಯು, ನಿನ್ನ ಕೋಲು ನನಗೆ ಧೈರ್ಯಕೊಡುತ್ತವೆ. (ULB)

ಯೆಶಾಯ 5:1-7, ದೇವರು ತನ್ನ ಜನರ ಬಗ್ಗೆ ನಿರಾಶೆಹೊಂದಿರುವ ಬಗ್ಗೆ ಹೇಳುತ್ತಾ ದ್ರಾಕ್ಷಿತೋಟದಲ್ಲಿ ಉತ್ತಮ ತಳಿ, ರುಚಿಹಣ್ಣು ಬೆಳೆಯಲು ಪ್ರಯತ್ನಿಸಿದರೆ ಕೆಟ್ಟ ರುಚಿ ಹಾಗೂ ಕೊಳೆತ ದ್ರಾಕ್ಷಿ ದೊರೆತರೆ ತೋಟಗಾರನಿಗೆ ಹೇಗೆ ನಿರಾಶೆಯಾಗುತ್ತದೋ ಹಾಗೆ ದೇವರೂ ಸಹ ನಿರಾಶನಾದನು ಎಂದು ಯೆಶಾಯನು ತೋರಿಸುತ್ತಾನೆ.

ರೈತರು, ತೋಟಗಾರರು ತಮ್ಮ ಹೊಲದಲ್ಲಿ, ತೋಟದಲ್ಲಿ ಉತ್ತಮ ತಳಿ ಫಲತೆಗೆಯಲು ಚೆನ್ನಾಗಿ ಕೃಷಿಕೆಲಸ ಮಾಡುತ್ತಾರೆ. ನಿರೀಕ್ಷಿಸಿದ ಉತ್ತಮ ಫಲ ಬರದಿದ್ದರೆ ಕೆಟ್ಟ ರುಚಿ ಹಣ್ಣು ಬಂದರೆ ಬೆಳೆಯ ಬಗ್ಗೆ ಅವರು ಸಹಜವಾಗಿ ಕಾಳಜಿವಹಿಸುವುದಿಲ್ಲ.

ಈ ಭಾಗದಲ್ಲಿ 1 – 6 ವಚನಗಳು ಸರಳವಾಗಿ ರೈತರ, ತೋಟಗಾರರ ಬಗ್ಗೆ ಮತ್ತು ಫಲವತ್ತಾದ ಭೂಮಿ ಮತ್ತು ದ್ರಾಕ್ಷಿತೋಟದ ಬಗ್ಗೆ ಇದೆ. ಏಳನೇ ವಚನ ದೇವರು ಮತ್ತು ಆತನ ಜನರ ಬಗ್ಗೆ ಇದೆ.

1… ನನ್ನ ಪ್ರಿಯನಿಗೆ ಸಾರವತ್ತಾದ ಗುಡ್ಡದ ಮೇಲೆ ದ್ರಾಕ್ಷಿಯ ತೋಟವಿತ್ತು. 2</sup… ಅವನು ಅದನ್ನು ಅಗೆದು ಕಲ್ಲು ಮುಳ್ಳುಗಳನ್ನು ತೆಗೆದುಹಾಕಿ ಒಳ್ಳೇತಳಿಯ ದ್ರಾಕ್ಷಿಯ ಸಸಿಗಳನ್ನು ನೆಟ್ಟನು.

ತೋಟದ ಮಧ್ಯದಲ್ಲಿ ಬುರುಜನ್ನು ದ್ರಾಕ್ಷಾರಸ ತೆಗೆಯುವ ಗಾಣಗಳನ್ನು, ತೊಟ್ಟಿಯನ್ನು ಕಟ್ಟಿಸಿದನು. ತೋಟದಲ್ಲಿ ದ್ರಾಕ್ಷಿ ಬಳ್ಳಿಯಲ್ಲಿ ಒಳ್ಳೆಯಹಣ್ಣನ್ನು ಕೊಡುವುದೆಂದು ನಿರೀಕ್ಷಿಸುತ್ತಿರಲು ಕೆಟ್ಟಹಣ್ಣು ನೀಡಿತು.

3ಯೆರೊಸೆಲೇಮಿನ ಜನರೇ, ಯೆಹೋದದ ಜನರೇ.

ನನಗೂ ನನ್ನ ದ್ರಾಕ್ಷೀ ತೋಟಕ್ಕೂ ನಡುವೆ ಬಂದು ನ್ಯಾಯ ತೀರಿಸಿರಿ.

4ನನ್ನ ತೋಟದಲ್ಲಿ ನಾನು ಇದುವರೆಗೂ ಮಾಡಿದ್ದಕ್ಕಿಂತ ಇನ್ನೂ ಹೆಚ್ಚಿನದು ನಾನೇನು ಮಾಡಲಿ ?

ನಾನು ಒಳ್ಳೆ ದ್ರಾಕ್ಷಿಹಣ್ಣು ನಿರೀಕ್ಷಿಸುತ್ತಿರುವಾಗ ಅದು ಏಕೆ ಹೊಲಸು ಹಣ್ಣು ನೀಡಿತು ?

5ನನ್ನ ತೋಟವನ್ನು ನಾನು ಏನು ಮಾಡುವೆನೆಂದು ನಿಮಗೆ ಈಗ ತಿಳಿಸುತ್ತೇನೆ ಕೇಳಿರಿ, ಅದರ ಬೇಲಿಯನ್ನು ಕಿತ್ತುಹಾಕುವೆನು.

ಅದನ್ನು ದನಗಳು ಮೇಯುವುದಕ್ಕೆ ಬಿಡುವೆನು, ಅದು ಏಕೆ ಕೆಟ್ಟಹಣ್ಣು ಕೊಟ್ಟಿತು ? ನಾನು ಬೇಲಿಯಗೋಡೆಗಳನ್ನು ಕೆಡವಿ ತುಳಿದಾಟಕ್ಕೆ ದಾರಿಮಾಡಿಕೊಟ್ಟು ಹಾಳುಮಾಡುವೆನು.

6ಯಾರೂ ಇದನ್ನು ಕತ್ತರಿಸಿ ಅಗೆತ ಮಾಡುವುದಿಲ್ಲ.

ಅದರಲ್ಲಿ ಮುಳ್ಳು, ಕಳೆ ಬೆಳೆಯುವವು ಯಾರು ಶುದ್ಧಮಾಡುವುದಿಲ್ಲ.

ಅದರ ಮೇಲೆ ಮಳೆ ಸುರಿಸಬಾರದೆಂದು ಮೇಘಗಳಿಗೆ ಅಪ್ಪಣೆ ಕೊಡುವೆನು.

7ಸೇನಾಧೀಶ್ವರನಾದ ಯೆಹೋವನ ದ್ರಾಕ್ಷಿಯ ತೋಟವು ಇಸ್ರಾಯೇಲರ ಮನೆತನ.

ಯೆಹೋವನನ ಜನರು ಆತನ ಪ್ರಿಯವಾದ ಗಿಡಗಳು. ಆತನು ನ್ಯಾಯವನ್ನು ನಿರೀಕ್ಷಿಸುತ್ತಿರುವಾಗ ಆಹಾ ಆತನಿಗೆ ಸಿಕ್ಕಿದ್ದು ನರಹತ್ಯೆ. ನೀತಿಗಾಗಿ, ಧರ್ಮಕ್ಕಾಗಿ ನಿರೀಕ್ಷಿಸುತ್ತಿರುವಾಗ ಅದರಬದಲು ದೊರಕಿದ್ದು ಅಧರ್ಮ, ಸಹಾಯಕ್ಕಾಗಿ ಬೇಡಿಕೆ. (ULB)

###ಭಾಷಾಂತರ ಕೌಶಲ್ಯಗಳು.

ನಿಮ್ಮ ಓದುಗರು ಇಂತಹ ವಿಸ್ತಿರಿಸಿದ ರೂಪಕಗಳನ್ನು ಮೂಲಭಾಷೆಯ ಓದುಗರು ಅರ್ಥಮಾಡಿಕೊಂಡಂತೆ ಅರ್ಥಮಾಡಿಕೊಂಡರೆ ಇದನ್ನು ಉಳಿಸಿಕೊಳ್ಳಿ. ಅದಾಗದಿದ್ದರೆ ಇಲ್ಲಿ ಕೊಟ್ಟಿರುವ ಕೆಲವು ತಂತ್ರಗಳನ್ನು ನೋಡಿ.

  1. ನೀವು ಭಾಷಾಂತರಿಸುತ್ತಿರುವ ಭಾಷೆಯ ಓದುಗರು ವಾಕ್ಯಭಾಗದಲ್ಲಿರುವ ಚಿತ್ರಣನ್ನು ವಾಚ್ಯವಾಗಿ ತಿಳಿದುಕೊಳ್ಳುವುದಾದರೆ ಉಪಮಾ ಅಲಂಕಾರದಲ್ಲಿ "ಅಂತೆ "/ “ಹಾಗೆ” ಎಂಬ ಉಪಮಾವಾಚಕ ಬಳಸಿ ತಿಳಿಸಿ. ಇಂತಹ ಪ್ರಯತ್ನ ಮೊದಲ 2 - 3 ವಾಕ್ಯಗಳಲ್ಲಿ ಮಾಡಿದರೆ ಸಾಕು, ಉಳಿದವುಗಳನ್ನು ಅರ್ಥಮಾಡಿಕೊಳ್ಳುತ್ತಾರೆ.
  2. ಭಾಷಾಂತರಿಸುತ್ತಿರುವ ಭಾಷೆಯ ಜನರು ಚಿತ್ರಣನ್ನು ಅರ್ಥಮಾಡಿಕೊಳ್ಳದಿದ್ದರೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ತಿಳಿಸಿ.
  3. ಇಷ್ಟಾದರೂ ಅವರು ಅರ್ಥಮಾಡಿಕೊಳ್ಳದಿದ್ದರೆ ಸರಳವಾಕ್ಯ ಬಳಸಿ ಹೇಳಿ.

ಭಾಷಾಂತರ ತಂತ್ರಗಳನ್ನು ಅಳವಡಿಸುವ ಉದಾಹರಣೆಗಳು.

  1. ನೀವು ಭಾಷಾಂತರಿಸುತ್ತಿರುವ ಭಾಷೆಯ ಓದುಗರು ವಾಕ್ಯಭಾಗದಲ್ಲಿರುವ ಚಿತ್ರಣನ್ನು ವಾಚ್ಯವಾಗಿ ತಿಳಿದುಕೊಳ್ಳುವುದಾದರೆ ಉಪಮಾ ಅಲಂಕಾರದಲ್ಲಿ "ಅಂತೆ "/ “ಹಾಗೆ” ಎಂಬ ಉಪಮಾವಾಚಕ ಬಳಸಿ ತಿಳಿಸಿ. ಇಂತಹ ಪ್ರಯತ್ನ ಮೊದಲ 2 - 3 ವಾಕ್ಯಗಳಲ್ಲಿ ಮಾಡಿದರೆ ಸಾಕು, ಉಳಿದವುಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ದಾ.ಕೀ. 23:1-2 ಉದಾಹರಣೆ ನೋಡಿ.

ಯೆಹೋವನು ನನ್ನ ಕುರುಬನು ; ನನಗೆ ಯಾವ ಕೊರತೆ ಇಲ್ಲ. ಆತನು ನನ್ನನ್ನು ಹಸಿರು ಗಾವಲುಗಳಲ್ಲಿ ತಂಗಿಸುತ್ತಾನೆ ; ಆತನು ನನ್ನನ್ನು ವಿಶ್ರಾಂತಿಕರವಾದ ನೀರುಗಳ ಬಳಿಗೆ ನಡೆಸುತ್ತಾನೆ . (ULB)

ಇವುಗಳನ್ನು ಹೀಗೆ ಭಾಷಾಂತರಿಸಬಹುದು.

"ಯೆಹೋವನು ನನಗೆ ಕುರುಬನಂತಿದ್ದಾನೆ,ನನಗೇನೂ ಕೊರತೆ ಬರುವುದಿಲ್ಲ.a ಒಳ್ಳೇ ಕುರುಬನಂತೆ ತನ್ನ ಕುರಿಗಳನ್ನು ಹಸಿರು ಹುಲ್ಲು ಗಾವಲುಗಳಲ್ಲಿ ಉಳಿದುಕೊಳ್ಳಲು ಮತ್ತು ಜೀವಕರವಾದ ನೀರಿನ ಬಳಿಯಲ್ಲಿ ನೆಮ್ಮದಿಯಿಂದ ಇರುವಂತೆ ಮಾಡುತ್ತಾನೆ. ಯೆಹೋವನು ನನ್ನನ್ನು ನೆಮ್ಮದಿಯಿಂದ ಇರಲು ಸಹಾಯಮಾಡುತ್ತಾನೆ.

  1. ಭಾಷಾಂತರವಾಗುತ್ತಿರುವ ಭಾಷೆಯ ಓದುಗರು ಇಂತಹ ಚಿತ್ರಣನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅವರಿಗೆ ಚಿತ್ರಣ ಎಂದರೆ ಏನು ಎಂದು ತಿಳಿಸಿ, ಅರ್ಥವಾಗುವಂತೆ ತಿಳಿಸಬೇಕು.

ನನ್ನ ಪ್ರಿಯನಿಗೆ ಫಲವತ್ತಾದ ಬೆಟ್ಟದಮೇಲೆ ದ್ರಾಕ್ಷಿತೋಟಇತ್ತು. ಅವನು ಅದನ್ನು ಚೆನ್ನಾಗಿ ಅಗೆದು ಎಲ್ಲಾ ಕಲ್ಲು ಮುಳ್ಳುಗಳನ್ನು ತೆಗೆದು ಉತ್ತಮ ತಳಿಯ < u>ದ್ರಾಕ್ಷಿ ಸಸಿಗಳನ್ನು ಆಯ್ಕೆಮಾಡಿತಂದು ನೆಟ್ಟನು. ಅವನು ತೋಟದ ಮಧ್ಯದಲ್ಲಿ ಒಂದು ಬುರುಜನ್ನು ಕಟ್ಟಿದನು ಅದನ್ನು ಮತ್ತು ಒಂದು ದ್ರಾಕ್ಷಾರಸ ತೆಗೆಯುವ ಗಾಣ ಮತ್ತು ತೊಟ್ಟಿಯನ್ನು ಕಟ್ಟಿಸಿದನು s. ಆ ದ್ರಾಕ್ಷಿ ತೋಟದಿಂದ ಉತ್ತಮ ರುಚಿಯಾದ ಹಣ್ಣುಗಳನ್ನು ಪಡೆಯಲು ನಿರೀಕ್ಷಿಸುತ್ತಿದ್ದನುಆದರೆ. ಅದು ಕೆಟ್ಟಹಣ್ಣುಗಳನ್ನು ನೀಡಿತು.(ಯೆಶಾಯ 5:1-2 ULB)

ಅವುಗಳನ್ನು ಹೀಗೂ ಭಾಷಾಂತರಿಸಬಹುದು.

ನನಗೆ ಪ್ರಿಯನಾದವನಿಗೆ ದ್ರಾಕ್ಷಿತೋಟವೊಂದು ಫಲವತ್ತಾದ ಗುಡ್ಡದ ಮೇಲೆ ಇತ್ತು ಅವನು ಆ ತೋಟವನು ಚೆನ್ನಾಗಿ ಅಗೆದುಎಲ್ಲಾ ಕಲ್ಲು ಮುಳ್ಳುಗಳನ್ನು ತೆಗೆದು ಹಸನು ಮಾಡಿ ಅತ್ಯುತ್ತಮವಾದ ದ್ರಾಕ್ಷಿ ಸಸಿಗಳನ್ನು ಅದರಲ್ಲಿ ನೆಟ್ಟನು. ಅವನು ಆ ತೋಟದ ಮಧ್ಯದಲ್ಲಿ ಒಂದು ಗಂಟೆಗೋಪುರ ಬುರುಜನ್ನು ಕಟ್ಟಿಸಿದನು ಅದರೊಂದಿಗೆ ಒಂದು ದ್ರಾಕ್ಷಾರಸ ತೆಗೆಯುವ ತೊಟ್ಟಿಯನ್ನು ಕಟ್ಟಿಸಿದನು. ದ್ರಾಕ್ಷಿ ಬಳ್ಳಿಗಳು ಒಳ್ಳೆ ಹಣ್ಣು ಕೊಡುತ್ತವೆ ಎಂದು ಕಾಯುತ್ತಿರಲು ಆ ಬಳ್ಳಿಗಳು ದ್ರಾಕ್ಷಾರಸ. ತೆಗೆಯುವುದಕ್ಕೆ ಯೋಗ್ಯವಲ್ಲದ ಹಣ್ಣುಗಳನ್ನು ಕೊಟ್ಟವು."

  1. ಭಾಷಾಂತರ ಮಾಡುತ್ತಿರುವ ಭಾಷೆಯ ಓದುಗರು ಇನ್ನೂ ಅರ್ಥ ಮಾಡಿಕೊಳ್ಳಲು ಅಸಮರ್ಥರಾದರೆ ಸರಳವಾಗಿ ಅರ್ಥವಾಗುವಂತೆ ಹೇಳಿ. ಯೆಹೋವನು ನನ್ನ ಕುರುಬನು ; ನಾನು ಕೊರತೆ ಪಡೆನು.** (ದಾ.ಕೀ. 23:1 ULB)
  • "ಕುರುಬನು ತನ್ನ ಕುರಿಗಳನ್ನು ಹೇಗೆ ಸಂರಕ್ಷಿಸುತ್ತಾನೋ ಹಾಗೆ ಯೆಹೋವನು ನನ್ನನ್ನು ಸಂರಕ್ಷಿಸುತ್ತಾನೆ.ನನಗೆ ಯಾವ ಕೊರತೆಯೂ ಉಂಟಾಗುವುದಿಲ್ಲ.

ಸೇನಾಧೀಶ್ವರನಾದಯೆಹೋವನ ದ್ರಾಕ್ಷಿ ತೋಟವುಇಸ್ರಾಯೇಲರ ಮನೆತನ. ಯೆಹೂದದ ಜನವೋ ಆತನಿಗೆ ಇಷ್ಟವಾದ ಗಿಡ. ಆತನು ಉತ್ತಮ ದ್ರಾಕ್ಷಾರಸವನ್ನು ನಿರೀಕ್ಷಿಸಿದ್ದನು, ಆದರೆ ಅವನಿಗೆ ಸಿಕ್ಕಿದ್ದು ನರಹತ್ಯೆ, ನೀತಿ, ಧರ್ಮವನ್ನು ನಿರೀಕ್ಷಿಸಿದಾಗ ದೊರೆತದ್ದು ಸಹಾಯಕ್ಕಾಗಿ ಅರಚಾಟ. (ಯೆಶಾಯ 5:7 ULB)

ಇದನ್ನು ಹೀಗೂ ಭಾಷಾಂತರಿಸಬಹುದು

ಸೇನಾಧೀಶ್ವರನಾದ ಯೆಹೋವನ ದ್ರಾಕ್ಷಿ ತೋಟವು ಇಸ್ರಾಯೇಲರ ಮನೆತನವನ್ನು ಪ್ರತಿನಿಧಿ ಸುತ್ತದೆ ಯೆಹೂದದ ಜನರು ಆತನಿಗೆ ಇಷ್ಟವಾದ ಗಿಡಗಳಂತೆ ಇದ್ದಾರೆ. ಆತ ತೋಟದಿಂದ ಉತ್ತಮ ದ್ರಾಕ್ಷಾರಸವನ್ನು ನಿರೀಕ್ಷಿಸುತ್ತಿದ್ದನು ಆದರೆ ಆತನಿಗೆ ದೊರೆತದ್ದು ನರಹತ್ಯೆ ಎಂಬ ಕೆಟ್ಟಹಣ್ಣು. ನೀತಿ, ಧರ್ಮ ನಿರೀಕ್ಷಿಸಿದವರಿಗೆ ನೋವಿನ ವ್ಯರ್ಥ ಅರಚಾಟ.

ಅಥವಾ

  • ಕೆಟ್ಟಹಣ್ಣನ್ನು ನೀಡಿದ ತೋಟದ ಬಗ್ಗೆ ತೋಟಗಾರನು ಹೇಗೆ ಯಾವ ಕಾಳಜಿಯೂ ವಹಿಸದೆ ಇರುತ್ತಾನೋ ಹಾಗೆ,
  • ಯೆಹೋವನು ಇಸ್ರಾಯೇಲ ಮತ್ತು ಯೆಹೂದದ ಜನರನ್ನು ಸಂರಕ್ಷಿಸುವುದನ್ನು ನಿಲ್ಲಿಸಿಬಿಡುವನು
  • ಏಕೆಂದರೆ ಅವರು ನ್ಯಾಯಯುತವಾಗಿ ಮಾಡಬೇಕಾದುದನ್ನು ಮಾಡಲಿಲ್ಲ. .
  • ಆತನು ಉತ್ತಮ ರುಚಿಯಾದ ದ್ರಾಕ್ಷಾರಸ ನಿರೀಕ್ಷಿಸುತ್ತಿದ್ದ ದರೆ ಆತನಿಗೆ ದೊರೆತದ್ದು ನರಹತ್ಯೆ.
  • ನೀತಿ, ಧರ್ಮದ ಬದಲು ದೊರೆತದ್ದು ಸಹಾಯಕ್ಕಾಗಿ ಕೂಗು.

ದ್ವಿಪದಾಲಂಕಾರ

Translation Manual :: Just-in-Time Learning Modules :: Figures of Speech :: Hendiadys

ವಿವರಣೆ

ಒಂದು ಕಲ್ಪನೆಯನ್ನು ವ್ಯಕ್ತಪಡಿಸುವ ಸಲುವಾಗಿ ಎರಡು ಪದಗಳನ್ನು “ಮತ್ತು” ಎಂಬ ಪದದೊಂದಿಗೆ ಕೂಡಿಸಿ ಉಪಯೋಗಿಸುವುದನ್ನೇ “ದ್ವಿಪದಾಲಂಕಾರ” ಎಂದು ಕರೆಯುತ್ತಾರೆ. ದ್ವಿಪದಾಲಂಕಾರದಲ್ಲಿ ಎರಡು ಪದಗಳು ಒಟ್ಟಿಗೆ ಸೇರಿ ಕಾರ್ಯಮಾಡುತ್ತವೆ. ಸಾಮಾನ್ಯವಾಗಿ ಒಂದು ಪದ ಪ್ರಾಥಮಿಕ ಕಲ್ಪನೆಯಾಗಿರುತ್ತದೆ ಮತ್ತು ಇನ್ನೊಂದು ಪದ ಮುಂದುವರಿದು ಪಾಥಮಿಕ ಪದವನ್ನು ವಿವರಿಸುತ್ತದೆ.

ಆತನ ಸ್ವಂತ ರಾಜ್ಯ ಮತ್ತು ಮಹಿಮೆ. (1 ಥೆಸಲೋನಿಕ 2:12 ULT)

“ರಾಜ್ಯ” ಮತ್ತು “ಮಹಿಮೆ” ಎಂಬವುಗಳು ನಾಮಪದಗಳು ಆಗಿದ್ದರೂ, “ಮಹಿಮೆ” ಎಂಬುದು ಯಾವ ರೀತಿಯ ರಾಜ್ಯ ಎಂಬುದನ್ನು ತಿಳಿಸುತ್ತದೆ, ಮಹಿಮೆಯ ರಾಜ್ಯ. ಅಥವಾ “ಮಹಿಮಾನ್ವಿತ ರಾಜ್ಯ”

ಒಬ್ಬ ವ್ಯಕ್ತಿ, ವಸ್ತು ಅಥವಾ ಘಟನೆಯನ್ನು ಸೂಚಿಸುವಾಗ “ಮತ್ತು” ಎಂಬ ಪದದಿಂದ ಸಂಯೋಜಿಸಿರುವ ಎರಡು ನುಡಿಗಟ್ಟುಗಳು ಸಹ ದ್ವಿಪದಾಲಂಕಾರ ಆಗಿರಬಹುದು.

ಭಾಗ್ಯಕರವಾದ ನಿರೀಕ್ಷೆಯನ್ನು ಮತ್ತು ನಮ್ಮ ಮಹೋನ್ನತನಾದ ದೇವರ ಮತ್ತು ರಕ್ಷಕನಾದ ಯೇಸು ಕ್ರಿಸ್ತನ ಮಹಿಮೆಯ ಪ್ರತ್ಯಕ್ಷತೆಯನ್ನು ಪಡೆದುಕೊಳ್ಳಲು ನಾವು ಎದುರುನೋಡುವವರಾಗಿರುವಲ್ಲಿ. (ತೀತ 2:13 ULT)

ತೀತ 2:13 ರಲ್ಲಿ ಎರಡು ದ್ವಿಪದಾಲಂಕಾರಗಳು ಇವೆ. “ಭಾಗ್ಯಕರವಾದ ನಿರೀಕ್ಷೆ” ಮತ್ತು “ಮಹಿಮೆಯ ಪ್ರತ್ಯಕ್ಷತೆ” ಎಂಬವುಗಳು ಒಂದೇ ವಿಷಯವನ್ನು ಸೂಚಿಸುತ್ತವೆ ಮತ್ತು ಯೇಸುಕ್ರಿಸ್ತನ ಪುನರಾಗಮನವು ಬಹಳ ನಿರೀಕ್ಷಿತವಾದದ್ದು ಮತ್ತು ಅದ್ಭುತಕರವಾದದ್ದು ಆಗಿದೆ ಎಂಬ ಕಲ್ಪನೆಯನ್ನು ದೃಢಪಡಿಸಲು ಸಹಾಯ ಮಾಡುತ್ತವೆ. ಇದಲ್ಲದೆ, “ನಮ್ಮ ಮಹೋನ್ನತನಾದ ದೇವರ" ಮತ್ತು "ರಕ್ಷಕನಾದ ಯೇಸು ಕ್ರಿಸ್ತ” ಎಂಬುದು ಇಬ್ಬರನ್ನಲ್ಲ ಆದರೆ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  • ದ್ವಿಪದಾಲಂಕಾರವು ಸಾಮಾನ್ಯವಾಗಿ ಭಾವಸೂಚಕ ನಾಮಪದವನ್ನು ಒಳಗೊಂಡಿರುತ್ತದೆ. ಕೆಲವು ಭಾಷೆಗಳಲ್ಲಿ ಒಂದೇ ರೀತಿಯ ಅರ್ಥವಿರುವ ನಾಮಪದಗಳು ಇರುವುದಿಲ್ಲ.
  • ಅನೇಕ ಭಾಷೆಯಲ್ಲಿ ದ್ವಿಪದಾಲಂಕಾರಗಳನ್ನು ಬಳಸುವುದಿಲ್ಲ, ಇದರಿಂದ ಎರಡನೆಯ ಪದವು ಮೊದಲನೆಯ ಪದವನ್ನು ವಿವರಿಸುತ್ತಿದೆ ಎಂದು ಜನರಿಗೆ ಅರ್ಥವಾಗುವುದಿಲ್ಲ.
  • ಅನೇಕ ಭಾಷೆಯಲ್ಲಿ ದ್ವಿಪದಾಲಂಕಾರಗಳನ್ನು ಬಳಸುವುದಿಲ್ಲ, ಇದರಿಂದ ಎರಡು ವ್ಯಕ್ತಿಗಳನ್ನಲ್ಲ ಅಥವಾ ವಸ್ತುಗಳನ್ನಲ್ಲ ಆದರೆ ಒಬ್ಬ ವ್ಯಕ್ತಿಯನ್ನು ಅಥವಾ ವಸ್ತುವನ್ನು ಸೂಚಿಸುತ್ತದೆ ಎಂಬುದು ಜನರಿಗೆ ಅರ್ಥವಾಗುವುದಿಲ್ಲ.

ಸತ್ಯವೇದದಲ್ಲಿನ ಉದಾಹರಣೆಗಳು

… ನಾನೇ ನಿಮಗೆ ಮಾತುಗಳನ್ನು ಮತ್ತು ಜ್ಞಾನವನ್ನು ಕೊಡುತ್ತೇನೆ… (ಲೂಕ 21:15 ULT)

“ಮಾತುಗಳು” ಮತ್ತು “ಜ್ಞಾನ” ಎಂಬ ಪದಗಳು ನಾಮಪದಗಳಾಗಿವೆ, ಆದರೆ ಈ ಅಲಂಕಾರಿಕ ಭಾಷೆಯಲ್ಲಿ “ಜ್ಞಾನ” “ಮಾತುಗಳನ್ನು” ವಿವರಿಸುತ್ತದೆ.

… ನೀವು ಒಪ್ಪಿ ವಿಧೇಯರಾದರೆ… (ಯೆಶಾಯ 1:19 ULT)

“ಒಪ್ಪುವಿಕೆ” ಮತ್ತು “ವಿಧೇಯತೆ” ಎರಡೂ ಗುಣವಾಚಕಗಳಾಗಿವೆ ಆದರೂ “ಒಪ್ಪುವಿಕೆ” “ವಿಧೇಯತೆಯನ್ನು” ವಿವರಿಸುತ್ತದೆ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ದ್ವಿಪದಾಲಂಕಾರ ಸರಿಯಾದ ಅರ್ಥವನ್ನು ಸಹಜವಾದ ರೀತಿಯಲ್ಲಿ ಬಳಸಲು ಸಾಧ್ಯವಾದರೆ ಬಳಸಬಹುದು. ಇಲ್ಲದಿದ್ದರೆ ಇಲ್ಲಿ ಕೆಲವು ಆಯ್ಕೆಗಳಿವೆ:

  1. ವಾಕ್ಯದಲ್ಲಿರುವ ನಾಮಪದಕ್ಕೆ ಬದಲಾಗಿ ಅದೇ ಅರ್ಥಕೊಡುವ ಗುಣವಾಚಕ ಪದವನ್ನು ಬಳಸಬಹುದು.
  2. ವಾಕ್ಯದಲ್ಲಿರುವ ನಾಮಪದಕ್ಕೆ ಬದಲಾಗಿ ಅದೇ ಅರ್ಥಕೊಡುವ ನುಡಿಗಟ್ಟನ್ನು ಬಳಸಬಹುದು.
  3. ವಾಕ್ಯದಲ್ಲಿರುವ ಗುಣವಾಚಕಕ್ಕೆ ಬದಲಾಗಿ ಅದೇ ಅರ್ಥಕೊಡುವ ಕ್ರಿಯಾವಿಶೇಷಣವನ್ನು ಬಳಸಬಹುದು.
  4. ಇತರ ಅಲಂಕಾರ ಪದಗಳಿಗೆ ಬದಲಾಗಿ ಅದೇ ಅರ್ಥಕೊಡುವ ಪದಗಳನ್ನು ಬಳಸಬಹುದು ಮತ್ತು ಒಂದು ಪದ ಅಥವಾ ನುಡಿಗಟ್ಟು ಇನ್ನೊಂದನ್ನು ವಿವರಿಸುತ್ತದೆ ಎಂಬುದನ್ನು ತೋರಿಸಿಕೊಡಿರಿ.
  5. ಕೇವಲ ಒಂದು ವಿಷಯವನ್ನು ಮಾತ್ರವೇ ಸೂಚಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೆ, ಅದನ್ನು ಸ್ಪಷ್ಟಪಡಿಸುವಂಥ ನುಡಿಗಟ್ಟು ಬದಲಾಯಿಸಿ ಬಳಸಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ವಾಕ್ಯದಲ್ಲಿರುವ ನಾಮಪದಕ್ಕೆ ಬದಲಾಗಿ ಅದೇ ಅರ್ಥಕೊಡುವ ಗುಣವಾಚಕ ಪದವನ್ನು ಬಳಸಬಹುದು.

ನಾನು ನಿಮಗೆ ಮಾತುಗಳನ್ನು ಮತ್ತು ಜ್ಞಾನವನ್ನು ಕೊಡುತ್ತೇನೆ (ಲೂಕ 21:15 ULT)

ನಾನು ನಿಮಗೆ ಜ್ಞಾನವುಳ್ಳ ಮಾತುಗಳನ್ನು ಕೊಡುತ್ತೇನೆ

ತನ್ನ ರಾಜ್ಯಕ್ಕೆ ಮತ್ತು ಮಹಿಮೆಗೆ ಕರೆಯುವ ದೇವರಿಗೆ ನೀವು ಯೋಗ್ಯರಾದ ರೀತಿಯಲ್ಲಿ ನಡೆಯಬೇಕು. (1 ಥೆಸಲೋನಿಕ 2:12 ULT)

ತನ್ನ ಮಹಿಮಾನ್ವಿತ ರಾಜ್ಯಕ್ಕೆ ಕರೆಯುವ ದೇವರಿಗೆ ನೀವು ಯೋಗ್ಯರಾದ ರೀತಿಯಲ್ಲಿ ನಡೆಯಬೇಕು.

(2) ವಾಕ್ಯದಲ್ಲಿರುವ ನಾಮಪದಕ್ಕೆ ಬದಲಾಗಿ ಅದೇ ಅರ್ಥಕೊಡುವ ನುಡಿಗಟ್ಟನ್ನು ಬಳಸಬಹುದು.

ನಾನು ನಿಮಗೆ ಮಾತುಗಳನ್ನು ಮತ್ತು ಜ್ಞಾನವನ್ನು ಕೊಡುತ್ತೇನೆ (ಲೂಕ 21:15 ULT)

ನಾನು ನಿಮಗೆ ಜ್ಞಾನದ ಮಾತುಗಳನ್ನು ಕೊಡುತ್ತೇನೆ.

ತನ್ನ ರಾಜ್ಯಕ್ಕೆ ಮತ್ತು ಮಹಿಮೆಗೆ ಕರೆಯುವ ದೇವರಿಗೆ ನೀವು ಯೋಗ್ಯರಾದ ರೀತಿಯಲ್ಲಿ ನಡೆಯಬೇಕು. (1 ಥೆಸಲೋನಿಕ 2:12 ULT)

ತನ್ನ ಮಹಿಮೆಯ ರಾಜ್ಯಕ್ಕೆ ಕರೆಯುವ ದೇವರಿಗೆ ನೀವು ಯೋಗ್ಯರಾದ ರೀತಿಯಲ್ಲಿ ನಡೆಯಬೇಕು.

(3) ವಾಕ್ಯದಲ್ಲಿರುವ ಗುಣವಾಚಕಕ್ಕೆ ಬದಲಾಗಿ ಅದೇ ಅರ್ಥಕೊಡುವ ಕ್ರಿಯಾವಿಶೇಷಣವನ್ನು ಬಳಸಬಹುದು.

ನೀವು ಒಪ್ಪಿ ಮತ್ತು ವಿಧೇಯರಾದರೆ… (ಯೆಶಾಯ 1:19 ULT)

ನೀವು ಮನಃಪೂರ್ವಕವಾಗಿ ಒಪ್ಪಿ ವಿಧೇಯರಾದರೆ.

  1. ಇತರ ಅಲಂಕಾರ ಪದಗಳಿಗೆ ಬದಲಾಗಿ ಅದೇ ಅರ್ಥಕೊಡುವ ಪದಗಳನ್ನು ಬಳಸಬಹುದು ಮತ್ತು ಒಂದು ಪದ ಅಥವಾ ನುಡಿಗಟ್ಟು ಇನ್ನೊಂದನ್ನು ವಿವರಿಸುತ್ತದೆ ಎಂಬುದನ್ನು ತೋರಿಸಿಕೊಡಿರಿ.

ನೀವು ಒಪ್ಪಿ ಮತ್ತು ವಿಧೇಯರಾದರೆ… (ಯೆಶಾಯ 1:19 ULT)

ವಿಧೇಯತೆ ಎಂಬ ಗುಣವಾಚಕಕ್ಕೆ ಬದಲಾಗಿ “ವಿಧೇಯರಾಗಿ” ಎಂಬ ಕ್ರಿಯಾಪದವನ್ನು ಬಳಸಬಹುದು

ನೀವು ಮನಃಪೂರ್ವಕವಾಗಿ ವಿಧೇಯರಾದರೆ

(4) ಮತ್ತು (5) ಕೇವಲ ಒಂದು ವಿಷಯವನ್ನು ಮಾತ್ರವೇ ಸೂಚಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೆ, ಅದನ್ನು ಸ್ಪಷ್ಟಪಡಿಸುವಂಥ ನುಡಿಗಟ್ಟು ಬದಲಾಯಿಸಿ ಬಳಸಿರಿ.

ಭಾಗ್ಯಕರವಾದ ನಿರೀಕ್ಷೆಯನ್ನು ಮತ್ತು ನಮ್ಮ ಮಹೋನ್ನತನಾದ ದೇವರ ಮತ್ತು ರಕ್ಷಕನಾದ ಯೇಸು ಕ್ರಿಸ್ತನ ಮಹಿಮೆಯ ಪ್ರತ್ಯಕ್ಷತೆಯನ್ನು ಪಡೆದುಕೊಳ್ಳಲು ನಾವು ಎದುರುನೋಡುವವರಾಗಿರುವಲ್ಲಿ. (ತೀತ 2:13 ULT)

ಯೇಸುವಿನ ಪ್ರತ್ಯಕ್ಷತೆಯನ್ನೇ ನಾವು ನಿರೀಕ್ಷಿಸುವವರಾಗಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿ “ಮಹಿಮೆ” ಎಂಬ ನಾಮಪದವನ್ನು “ಮಹಿಮಾನ್ವಿತ” ಎಂಬ ಗುಣವಾಚವಾಗಿ ಬದಲಾಯಿಸಬಹುದು. ಇದಲ್ಲದೆ, “ಯೇಸು ಕ್ರಿಸ್ತ” ಎಂಬ ಪದಗಳನ್ನು ಪದಗುಚ್ಛದ ಮುಂಭಾಗಕ್ಕೆ ಸರಿಸಬಹುದು ಮತ್ತು “ಮಹೋನ್ನತನಾದ ದೇವರು ಮತ್ತು ರಕ್ಷಕ” ಎಂಬ ಪದಗಳನ್ನು ಯೇಸು ಕ್ರಿಸ್ತನೆಂಬ ಒಬ್ಬ ವ್ಯಕ್ತಿಯನ್ನು ವಿವರಿಸುವ ಸಾಪೇಕ್ಷ ಉಪವಾಕ್ಯಕ್ಕೆ ಸೇರಿಸಬಹುದು.

ನಾವು ಹಾತೊರೆಯುತ್ತಿರುವ, ನಮ್ಮ ಮಹೋನ್ನತನಾದ ದೇವರು ಮತ್ತು ರಕ್ಷಕನು ಆದ ಯೇಸು ಕ್ರಿಸ್ತನ ಭಾಗ್ಯಕರವಾದ ಮತ್ತು ಮಹಿಮಾನ್ವಿತ ಪ್ರತ್ಯಕ್ಷತೆಯನ್ನು ಪಡೆದುಕೊಳ್ಳಲು ನಾವು ಎದುರುನೋಡುವವರಾಗಿರುವಲ್ಲಿ.


ಅತಿಶಯೋಕ್ತಿ

Translation Manual :: Just-in-Time Learning Modules :: Figures of Speech :: Hyperbole

ವಿವರಣೆ

ಮಾತನಾಡುವವನು ಅಥವಾ ಬರಹಗಾರನು ತಾನು ಸಂಪೂರ್ಣವಾಗಿ ನಿಜವಾದ, ಅಥವಾ ಸಾಮಾನ್ಯವಾಗಿ ನಿಜವಾದ ಅಥವಾ ಅತಿಶಯೋಕ್ತಿಯಾಗಿರುವ ಎಂದು ಉದ್ದೇಶಿಸುವಂಥದ್ದನ್ನು ಹೇಳಲು ನಿರ್ದಿಷ್ಟವಾಗಿ ಅದೇ ರೀತಿಯಿರುವ ಪದಗಳನ್ನು ಬಳಸಬಹುದು. ಇದರಿಂದಲೇ ಇದನ್ನು ಅರ್ಥಮಾಡಿಕೊಳ್ಳಲು ಬೇಕಾದ ಪದವನ್ನು ನಿರ್ಧರಿಸುವುದು ಕಷ್ಟವಾಗಬಹುದು. ಉದಾಹರಣೆಗೆ, ಕೆಳಗಿರುವ ವಾಕ್ಯವನ್ನು ಮೂರು ರೀತಿಯ ಅರ್ಥ ಕೊಡಬಹುದು.

  • ಇಲ್ಲಿ ಪ್ರತಿ ರಾತ್ರಿ ಮಳೆ ಬರುತ್ತದೆ.
  1. ಮಾತನಾಡುವವನು ಇಲ್ಲಿ ಪ್ರತಿ ರಾತ್ರಿ ಮಳೆ ಬರುತ್ತದೆ ಎಂಬುದನ್ನು ಉದ್ದೇಶಿಸುವಾಗ ಅದು ಅಕ್ಷರಶಃವಾಗಿ ನಿಜವಾಗಿದೆ ಎಂಬುದು ಅವನು ಹೇಳುತ್ತಿರುವುದರ ಅರ್ಥವಾಗಿದೆ.
  2. ಮಾತನಾಡುವವನು ಇಲ್ಲಿ ಪ್ರತಿ ರಾತ್ರಿ ಮಳೆ ಬರುತ್ತದೆ ಎಂಬುದನ್ನು ಉದ್ದೇಶಿಸುವಾಗ ಅದು ಸಾಮಾನ್ಯೀಕರಣ ಆಗಿದೆ ಎಂಬುದು ಅವನು ಹೇಳುತ್ತಿರುವುದರ ಅರ್ಥವಾಗಿದೆ.
  3. ಮಳೆಯ ಹೆಚ್ಚಿನ ಪ್ರಮಾಣದ ಕಡೆಗೆ ಸಾಮಾನ್ಯವಾಗಿ ಬಲವಾದ ಭಾವನೆಗಳಾದ ಕಿರಿಕಿರಿಯನ್ನು ಅಥವಾ ಅತಿಯಾದ ಸಂತೋಷವನ್ನು ವ್ಯಕ್ತಪಡಿಸುವುದಕ್ಕಾಗಿ ಸಹಜವಾಗಿ ಬರುವ ಮಳೆಗಿಂತ ಹೆಚ್ಚಾಗಿ ಮಳೆ ಬರುತ್ತಿದೆ ಎಂದು ಹೇಳಲು ಮಾತನಾಡುವವನು ಅತಿಶಯೋಕ್ತಿ ಆಗಿ ಅದನ್ನು ಹೇಳಿರಬಹುದು.

ಅತಿಶಯೋಕ್ತಿ: ಇದು ಉತ್ಪ್ರೇಕ್ಷೆ ಯನ್ನು ತಿಳಿಸಲು ಬಳಸುವ ಅಲಂಕಾರವಾಗಿದೆ. ಕೆಲವೊಮ್ಮೆ ಮಾತನಾಡುವವನು ವಿಷಯದ ಬಗ್ಗೆ ಇರುವ ತನ್ನ ಕಡುವಾದ ಭಾವನೆ ಅಥವಾ ಅಭಿಪ್ರಾಯಗಳನ್ನು ತೋರಿಸಲು ಉದ್ದೇಶಪೂರ್ವಕವಾಗಿ ಅತಿಶಯೋಕ್ತಿ ಅಥವಾ ನಿಜವಲ್ಲದ ವಿಷಯವನ್ನು ವಿವರಿಸುತ್ತಾನೆ. ಅವನು ಹೇಳುವ ಉತ್ಪ್ರೇಕ್ಷಿತ ವಿಷಯಗಳನ್ನು ಜನರು ಅರ್ಥಮಾಡಿಕೊಳ್ಳಬೇಕೆಂದು ನಿರೀಕ್ಷಿಸುತ್ತಾನೆ.

ಅವರು ಕಲ್ಲಿನ ಮೇಲೆ ಕಲ್ಲು ಇರುವುದಕ್ಕೆ ಬಿಡುವುದಿಲ್ಲ (ಲೂಕ 19:44 ULT)

  • ಇದೊಂದು ಉತ್ಪ್ರೇಕ್ಷೆ. ಇದರ ಅರ್ಥ ಶತ್ರುಗಳು ಯೆರೂಸಲೇಮನ್ನು ಸಂಪೂರ್ಣವಾಗಿ ನಾಶಮಾಡುವರು.

ಮೋಶೆಯು ಐಗುಪ್ತದವರ ಸರ್ವ ವಿದ್ಯೆಗಳಲ್ಲಿ ಶಿಕ್ಷಿತನಾದನು (ಅಪೊ.ಕೃತ್ಯ. 7:22 ULT)

  • ಈ ಅತಿಶಯೋಕ್ತಿ ಅರ್ಥವೇನಂದರೆ ಅವನು ಐಗುಪ್ತದವರಿಗೆ ತಿಳಿದಿರುವ ಮತ್ತು ಅವರು ಕಲಿಸುವ ಬಹುತೇಕ ಎಲ್ಲವನ್ನು ಕಲಿತುಕೊಂಡನು, ಆದ್ದರಿಂದ ಒಬ್ಬ ಐಗುಪ್ತದವನಂತೆಯೇ ಶಿಕ್ಷಿತನಾದನು.

ಸಾಮಾನ್ಯೀಕರಣ: ಈ ಹೇಳಿಕೆಯು ಅನ್ವಯವಾಗುವಂಥ ಬಹುತೇಕ ಸಮಯದಲ್ಲಿ ಅಥವಾ ಬಹುತೇಕ ಪರಿಸ್ಥಿತಿಗಳಲ್ಲಿ ನಿಜವಾಗಿರುತ್ತದೆ.

ಶಿಕ್ಷೆಯನ್ನು ನಿರ್ಲಕ್ಷಿಸುವವನಿಗೆ ಬಡತನ ಮತ್ತು ಅವಮಾನ ಆಗುತ್ತದೆ, ಆದರೆ ತಿದ್ದುವಿಕೆಯಿಂದ ಕಲಿತುಕೊಳ್ಳುವವನಿಗೆ ಮಾನವು ಬರುತ್ತದೆ. (ಜ್ಞಾನೋಕ್ತಿಗಳು 13:18)

  • ಶಿಕ್ಷೆಯನ್ನು ನಿರ್ಲಕ್ಷಿಸುವ ಜನರಿಗೆ ಸಾಮಾನ್ಯವಾಗಿ ಏನಾಗುತ್ತದೆ ಮತ್ತು ತಿದ್ದುವಿಕೆಯಿಂದ ಕಲಿತುಕೊಳ್ಳುವ ಜನರಿಗೆ ಏನಾಗುತ್ತದೆ ಎಂಬುದನ್ನು ಈ ಸಾಮಾನ್ಯೀಕರಣದ ಹೇಳಿಕೆಗಳು ಹೇಳುತ್ತವೆ. ಈ ಹೇಳಿಕೆಗಳಿಗೆ ಕೆಲವು ಆಕ್ಷೇಪಣೆಗಳು ಇರಬಹುದು, ಆದರೆ ಸಾಮಾನ್ಯವಾಗಿ ಅವು ನಿಜವಾಗಿವೆ.

ಆದರೆ ನೀವು ಪ್ರಾರ್ಥನೆಮಾಡುವಾಗ ಅನ್ಯಜನಗಳ ಹಾಗೆ ಹೇಳಿದ್ದನ್ನೇ ಸುಮ್ಮನೆ ಮತ್ತೆ ಮತ್ತೆ ಹೇಳಬೇಡಿ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ಭಾವಿಸುತ್ತಾರೆ. (ಮತ್ತಾಯ 6:7)

  • ಸಾಮಾನ್ಯೀಕರಣ ಹೇಳಿಕೆಯು ಅನ್ಯಜನರು ಯಾವುದಕ್ಕೆ ಹೆಸರುವಾಸಿಯಾಗಿದ್ದರು ಎಂಬುದನ್ನು ಹೇಳುತ್ತದೆ. ಅನೇಕ ಅನ್ಯಜನರು ಇದನ್ನು ಮಾಡುತ್ತಿದ್ದರು. ಸ್ಪಲ್ಪ ಜನರು ಅದನ್ನು ಮಾಡದೆ ಹೋದರೂ ಅದು ಪ್ರಾಮುಖ್ಯವೇನು ಅಲ್ಲ. ಶ್ರೋತೃಗಳು ಹೆಸರುವಾಸಿಯಾಗಿರುವ ಈ ಆಚರಣೆಯಲ್ಲಿ ಪಾಲುಗಾರರಾಗಬಾರದು ಎಂಬುದು ಇದರಲ್ಲಿನ ವಿಷಯವಾಗಿದೆ.

“ಎಲ್ಲ,” “ಯಾವಾಗಲೂ,” “ಯಾವುದೂ ಇಲ್ಲ,” ಅಥವಾ “ಎಂದಿಗೂ ಇಲ್ಲ” ಎಂಬ ಬಲಪ್ರಯೋಗ ಇರುವ ಪದಗಳು ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣ ಹೇಳಿಕೆಗಳಲ್ಲಿ ಇದ್ದರೂ, ಇದು ನಿರ್ದಿಷ್ಟವಾಗಿ “ಎಲ್ಲಾ,” “ಯಾವಾಗಲೂ,” “ಯಾವುದೂ ಇಲ್ಲ,” ಅಥವಾ “ಎಂದಿಗೂ ಇಲ್ಲ” ಎಂಬ ಅರ್ಥವನ್ನು ಕೊಡುತ್ತವೆ ಎಂದರ್ಥವಲ್ಲ. ಇದು ಸರಳವಾಗಿ “ಬಹುತೇಕ,” “ಬಹುತೇಕ ಸಮಯ,” “ಕನಿಷ್ಟ ಯಾವುದಾದರೂ” ಅಥವಾ “ವಿರಳವಾಗಿ” ಎಂಬ ಅರ್ಥ ನೀಡುತ್ತದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  1. ಓದುಗರು ಹೇಳಿಕೆಯು ಅಕ್ಷರಶಃವಾಗಿ ನಿಜವೋ, ಅಲ್ಲವೋ ಎಂದು ಅರ್ಥಮಾಡಿಕೊಳ್ಳಲು ಶಕ್ತರಾಗಿರಬೇಕು.
  2. ಓದುಗರು ಹೇಳಿಕೆಯು ಅಕ್ಷರಶಃವಾಗಿ ನಿಜವಲ್ಲ ಎಂದು ತಿಳಿದುಕೊಂಡರೆ ಈ ಹೇಳಿಕೆಯು ಅತಿಶಯೋಕ್ತಿಯೇ, ಸಾಮಾನ್ಯೀಕರಣ ವಾಕ್ಯವೇ ಅಥವಾ ಅಸತ್ಯವೇ ಎಂದು ಅರ್ಥಮಾಡಿಕೊಳ್ಳಲು ಶಕ್ತರಾಗಿರಬೇಕು. (ಸತ್ಯವೇದವು ಸಂಪೂರ್ಣವಾಗಿ ನಿಜವೇ ಆಗಿದ್ದರೂ, ಸತ್ಯವೇದವು ಯಾವಾಗಲೂ ಸತ್ಯವನ್ನು ಹೇಳದ ಜನರ ಬಗ್ಗೆ ಹೇಳುತ್ತದೆ.)

ಸತ್ಯವೇದದಲ್ಲಿನ ಉದಾಹರಣೆಗಳು

ಅತಿಶಯೋಕ್ತಿಯ ಉದಾಹರಣೆಗಳು

ಇದಲ್ಲದೆ ನಿನ್ನ ಕೈ ಪಾಪ ಮಾಡಲು ನಿನಗೆ ಕಾರಣವಾದರೆ, ಅದನ್ನು ಕತ್ತರಿಸಿಬಿಡು. ಅಂಗಹೀನನಾಗಿ ನಿತ್ಯಜೀವದಲ್ಲಿ ಸೇರುವುದು ನಿನಗೆ ಉತ್ತಮ… (ಮಾರ್ಕ 9:43 ULT)

ಯೇಸು ಕೈಯನ್ನು ಕತ್ತರಿಸಿಬಿಡು ಎಂದು ಹೇಳುವಾಗ ಆತನು ಉದ್ದೇಶಿಸಿದ್ದೇನಂದರೆ ನಾವು ಪಾಪ ಮಾಡದೇ ಇರುವುದಕ್ಕಾಗಿ ಏನೆಲ್ಲಾ ತೀವ್ರವಾದ ಕಾರ್ಯವನ್ನು ಮಾಡಬೇಕೋ ಅದನ್ನು ಮಾಡಿರಿ. ಪಾಪ ಮಾಡುವುದನ್ನು ನಿಲ್ಲಿಸಲು ಪ್ರಯತ್ನಿಸುವುದು ಎಷ್ಟು ಪ್ರಾಮುಖ್ಯ ಎಂಬುದನ್ನು ತಿಳಿಸುವುದಕ್ಕಾಗಿ ಆತನು ಅತಿಶಯೋಕ್ತಿಯನ್ನು ಬಳಸಿದನು.

ಆಗ ಫಿಲಿಷ್ಟಿಯರು ಇಸ್ರಾಯೇಲರಿಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೋಸ್ಕರ ಕೂಡಿಬಂದರು: ಮೂವತ್ತು ಸಾವಿರ ರಥಗಳನ್ನು, ರಥಗಳನ್ನು ಓಡಿಸಲು ಆರು ಸಾವಿರ ಜನರನ್ನು ಮತ್ತು ಸಮುದ್ರ ತೀರದ ಮರಳಿನಷ್ಟು ಅಸಂಖ್ಯಾತ ಕಾಲ್ಬಲವನ್ನೂ ತೆಗೆದುಕೊಂಡು ಬಂದರು. (1 ಸಮುವೇಲ 13:5 ULT)

ಗುರುತು ಮಾಡಿರುವ ನುಡಿಗಟ್ಟು, ಫಿಲಿಪ್ಪಿಯರ ಸೈನ್ಯವು ಸಂಖ್ಯೆಯಲ್ಲಿ ಅಸಂ‍ಖ್ಯಾತವಾಗಿದೆ ಎಂಬ ಭಾವನೆಯನ್ನು ವ್ಯಕ್ತಪಡಿಸುವ ಉದ್ದೇಶಕ್ಕಾಗಿ ಬಳಸಿರುವ ಉತ್ಪ್ರೇಕ್ಷೆಯಾಗಿದೆ. ಫಿಲಿಪ್ಪಿಯರ ಸೈನ್ಯದಲ್ಲಿ ಅನೇಕಾನೇಕ ಸೈನಿಕರು ಇದ್ದರು ಎಂಬುದು ಇದರರ್ಥವಾಗಿದೆ.

ಆದರೆ ಆತನ ಅಭಿಷೇಕವು ಎಲ್ಲ ವಿಷಯಗಳ ಬಗ್ಗೆ ನಿಮಗೆ ಬೋಧಿಸಿದಂತೆಯೇ ಅದು ನಿಜವಾಗಿದೆ, ಅದು ಸುಳ್ಳಲ್ಲ, ಮತ್ತು ಅದು ನಿಮಗೆ ಬೋಧಿಸಿದ ಪ್ರಕಾರವೇ ಆತನಲ್ಲಿ ನೆಲೆಗೊಳ್ಳಿರಿ. (1 ಯೋಹಾನ 2:27 ULT)

ಇದು ಅತಿಶಯೋಕ್ತಿಯಾಗಿದೆ. ನಾವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳ ಬಗ್ಗೆ ದೇವರ ಆತ್ಮನು ನಮಗೆ ಬೋಧಿಸುತ್ತಾನೆ ಎಂಬ ಭರವಸೆಯನ್ನು ಇದು ವ್ಯಕ್ತಪಡಿಸುತ್ತದೆ. ತಿಳಿದುಕೊಳ್ಳಲು ಸಾಧ್ಯವಿರುವ ಎಲ್ಲದರ ಬಗ್ಗೆ ದೇವರ ಆತ್ಮನು ನಮಗೆ ಬೋಧಿಸುವುದಿಲ್ಲ.

ಅವರು ಆತನನ್ನು ಕಂಡುಕೊಂಡು ಅತನಿಗೆ, “ಎಲ್ಲರೂ ನಿನ್ನನ್ನು ಹುಡುಕುತ್ತಿದ್ದಾರೆ” ಎಂದು ಹೇಳಿದರು. (ಮಾರ್ಕ 1:37 ULT)

ಪಟ್ಟಣದಲ್ಲಿರುವ ಪ್ರತಿಯೊಬ್ಬರೂ ಯೇಸುವನ್ನು ಹುಡುಕುತ್ತಿದ್ದಾರೆಂಬದು ಬಹುಶಃ ಶಿಷ್ಯರ ಮಾತಿನ ಅರ್ಥವಲ್ಲ, ಆದರೆ ಅನೇಕ ಜನರು ಆತನನ್ನು ಹುಡುಕುತ್ತಿದ್ದಾರೆ, ಅಥವಾ ಅಲ್ಲಿ ಯೇಸುವಿಗೆ ಅಪ್ತರಾಗಿದ್ದ ಸ್ನೇಹಿತರೆಲ್ಲರೂ ಆತನನ್ನು ಹುಡುಕುತ್ತಿದ್ದಾರೆಂಬ ಅರ್ಥವಾಗಿರಬಹುದು. ಇದು ಅವರು ಮತ್ತು ಇತರರು ಆತನ ಬಗ್ಗೆ ಚಿಂತಿತರಾಗಿದ್ದಾರೆ ಎಂಬ ಭಾವನೆಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಬಳಸಿರುವ ಉತ್ಪ್ರೇಕ್ಷೆಯಾಗಿದೆ.

ಸಾಮಾನ್ಯೀಕರಣದ ಉದಾಹರಣೆಗಳು

ನಜರೇತಿನಿಂದ ಒಳ್ಳೆಯದೇನಾದರೂ ಬರಲು ಸಾಧ್ಯವೋ? (ಯೋಹಾನ 1:46 ULT)

ಈ ಭಾವೋತ್ತೇಜಕ ಪ್ರಶ್ನೆಯು ನಜರೇತಿನಲ್ಲಿ ಒಳ್ಳೆಯದು ಯಾವುದೂ ಇಲ್ಲ ಎಂಬ ಸಾಮಾನ್ಯೀಕರಣವನ್ನು ವ್ಯಕ್ತಪಡಿಸುವ ಉದ್ದೇಶವುಳ್ಳದ್ದಾಗಿದೆ. ಅಲ್ಲಿನ ಜನರು ಅಶಿಕ್ಷಿತರು ಮತ್ತು ಕಟ್ಟುನಿಟ್ಟಾಗಿ ಧರ್ಮವನ್ನು ಪಾಲಿಸುವವರಲ್ಲ ಎಂಬ ಅಪಖ್ಯಾತಿ ಉಳ್ಳವರಾಗಿದ್ದರು. ಖಂಡಿತವಾಗಿ, ಇದಕ್ಕೆ ಆಕ್ಷೇಪಣೆಗಳು ಇದ್ದವು.

ಕ್ರೇತದವರು ಯಾವಾಗಲೂ ಸುಳ್ಳುಗಾರರೂ, ದುಷ್ಟ ಮೃಗಗಳೂ, ಸೋಮಾರಿಗಳಾದ ಹೊಟ್ಟೆಬಾಕರೂ” ಆಗಿದ್ದಾರೆಂದು ಅವರಲ್ಲಿ ಒಬ್ಬನಾದ ಅವರ ಸ್ವಂತ ಪ್ರವಾದಿಯೇ ಹೇಳಿದ್ದಾನೆ. (ತೀತ 1:12 ULT)

ಇದು ಸಾಮಾನ್ಯೀಕರಣವಾಗಿದೆ, ಇದರರ್ಥ ಕ್ರೇತದವರಿಗೆ ಈ ರೀತಿಯಾದ ಅಪಖ್ಯಾತಿ ಇತ್ತು, ಏಕೆಂದರೆ ಸಾಮಾನ್ಯವಾಗಿ ಕ್ರೇತದವರು ಈ ರೀತಿಯಾಗಿ ವರ್ತಿಸುತ್ತಿದ್ದರು. ಇದಕ್ಕೂ ಆಕ್ಷೇಪಣೆಗಳು ಇರುವ ಸಾ‍ಧ್ಯತೆಯಿದೆ.

ಸೋಮಾರಿತನದ ಕೈ ಬಡತನವನ್ನು ಉಂಟುಮಾಡುತ್ತದೆ, ಆದರೆ ಚುರುಕುಗೈ ಅವನನ್ನು ಶ್ರೀಮಂತನನ್ನಾಗಿ ಮಾಡುತ್ತದೆ. (ಜ್ಞಾನೋಕ್ತಿ 10:4 ULT)

ಇದು ಸಾಮಾನ್ಯವಾಗಿ ನಿಜವಾದ ಸಂಗತಿ, ಮತ್ತು ಬಹುತೇಕ ಜನರ ಅನುಭವವನ್ನು ತೋರಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಆಕ್ಷೇಪಣೆಗಳಿರುವ ಸಾಧ್ಯತೆಯಿದೆ.

ಎಚ್ಚರಿಕೆ

ಅಸಾಧ್ಯವೆಂದು ತೋರುವ ಕಾರಣ ಒಂದು ವಿಷಯವು ಉತ್ಪ್ರೇಕ್ಷೆಯಾಗಿದೆ ಎಂದು ಊಹಿಸಿಕೊಳ್ಳಬೇಕಾಗಿಲ್ಲ. ದೇವರು ಅದ್ಭುತಕಾರ್ಯಗಳನ್ನು ಮಾಡುತ್ತಾನೆ.

…ಯೇಸು ಸಮುದ್ರದ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುವುದನ್ನು ಅವರು ನೋಡಿದರು… (ಯೊಹಾನ 6:19 ULT)

ಇದು ಅತಿಶಯೋಕ್ತಿಯಲ್ಲ. ಯೇಸು ನಿಜವಾಗಲೂ ಸಮುದ್ರದ ನೀರಿನ ಮೇಲೆ ನಡೆದು ಬಂದನು. ಇದು ಅಕ್ಷರಶಃ ನಿಜವಾದ ಹೇಳಿಕೆ.

“ಎಲ್ಲಾ” ಎಂಬ ಪದ ಯಾವಾಗಲೂ ಸಾಮಾನ್ಯೀಕರಣದ ಪದವಾಗಿದ್ದು “ಬಹುತೇಕ” ಎಂಬ ಅರ್ಥಕೊಡುತ್ತದೆ ಎಂದು ಊಹಿಸಿಕೊಳ್ಳಬೇಡಿರಿ.

ಯೆಹೋವನ ತನ್ನ ಎಲ್ಲಾ ಮಾರ್ಗಗಳಲ್ಲಿ ನೀತಿಯುಳ್ಳವನು; ಆತನು ಮಾಡುವ ಎಲ್ಲಾ ಕಾರ್ಯಗಳಲ್ಲಿ ಕೃಪೆಯುಳ್ಳವನು. (ಕೀರ್ತನೆ. 145:17 ULT)

ಯೆಹೋವನು ಯಾವಾಗಲೂ ನೀತಿಯುಳ್ಳವನು. ಇದು ಸಂಪೂರ್ಣವಾಗಿ ನಿಜವಾದ ಹೇಳಿಕೆಯಾಗಿದೆ.

ಭಾಷಾಂತರದ ಕಾರ್ಯತಂತ್ರಗಳು

ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣದ ಹೇಳಿಕೆಗಳು ಸಹಜವಾಗಿದ್ದು, ಜನರಿಗೆ ಅರ್ಥವಾಗಲು ಸುಲಭವಾಗಿದ್ದರೆ ಮತ್ತು ಅದು ಸುಳ್ಳು ಎಂದು ಜನರು ಅಂದುಕೊಳ್ಳದಿದ್ದರೆ ಅದನ್ನೇ ಬಳಸಲು ಪರಿಗಣಿಸಿರಿ. ಇಲ್ಲದಿದ್ದರೆ, ಇಲ್ಲಿ ಕೆಲವು ಆಯ್ಕೆಗಳಿವೆ ಗಮನಿಸಿ.

  1. ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಅರ್ಥವನ್ನು ವ್ಯಕ್ತಪಡಿಸಿರಿ.
  2. ಸಾಮಾನ್ಯೀಕರಣದ ವಿಷಯದಲ್ಲಿ, “ಸಾಮಾನ್ಯವಾಗಿ” ಅಥವಾ “ಹೆಚ್ಚಿನ ಪ್ರಕರಣಗಳಲ್ಲಿ” ಎಂಬಂಥ ಪದಗಳನ್ನು ಬಳಸಿ ಸಾಮಾನ್ಯೀಕರಣವನ್ನು ತೋರಿಸಿಕೊಡಿರಿ.
  3. ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣ ಅಷ್ಟೊಂದು ಖಚಿತವಾಗಿ ಇರುವುದಿಲ್ಲ ಎಂಬುದನ್ನು ತೋರಿಸಲು “ಅನೇಕ” ಅಥವಾ “ಬಹುತೇಕ” ಎಂಬ ಪದಗಳನ್ನು ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣಕ್ಕೆ ಸೇರಿಸಿರಿ.
  4. ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣದಲ್ಲಿರುವ “ಎಲ್ಲಾ”, “ಯಾವಾಗಲೂ,” “ಯಾವುದೂ ಇಲ್ಲ,” ಅಥವಾ “ಎಂದಿಗೂ ಇಲ್ಲ,” ಎಂಬ ಪದಗಳು ತೆಗೆದುಹಾಕಲು ಪರಿಗಣಿಸಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಅರ್ಥವನ್ನು ವ್ಯಕ್ತಪಡಿಸಿರಿ.

ಆಗ ಫಿಲಿಷ್ಟಿಯರು ಇಸ್ರಾಯೇಲರಿಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೋಸ್ಕರ ಕೂಡಿಬಂದರು: ಮೂವತ್ತು ಸಾವಿರ ರಥಗಳನ್ನು, ರಥಗಳನ್ನು ಓಡಿಸಲು ಆರು ಸಾವಿರ ಜನರನ್ನು ಮತ್ತು ಸಮುದ್ರ ತೀರದ ಮರಳಿನಷ್ಟು ಅಸಂಖ್ಯಾತ ಕಾಲ್ಬಲವನ್ನೂ ತೆಗೆದುಕೊಂಡು ಬಂದರು. (1 ಸಮುವೇಲ 13:5 ULT)

ಆಗ ಫಿಲಿಷ್ಟಿಯರು ಇಸ್ರಾಯೇಲರಿಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೋಸ್ಕರ ಕೂಡಿಬಂದರು: ಮೂವತ್ತು ಸಾವಿರ ರಥಗಳನ್ನು, ರಥಗಳನ್ನು ಓಡಿಸಲು ಆರು ಸಾವಿರ ಜನರನ್ನು ಮತ್ತು ಬಹು ಸಂಖ್ಯೆಯಲ್ಲಿ ಕಾಲ್ಬಲವನ್ನೂ ತೆಗೆದುಕೊಂಡು ಬಂದರು.

(2) ಸಾಮಾನ್ಯೀಕರಣದ ವಿಷಯದಲ್ಲಿ, “ಸಾಮಾನ್ಯವಾಗಿ” ಅಥವಾ “ಹೆಚ್ಚಿನ ಪ್ರಕರಣಗಳಲ್ಲಿ” ಎಂಬಂಥ ಪದಗಳನ್ನು ಬಳಸಿ ಸಾಮಾನ್ಯೀಕರಣವನ್ನು ತೋರಿಸಿಕೊಡಿರಿ.

ಶಿಕ್ಷೆಯನ್ನು ನಿರ್ಲಕ್ಷಿಸುವವನಿಗೆ ಬಡತನ ಮತ್ತು ಅವಮಾನ ಆಗುತ್ತದೆ… (ಜ್ಞಾನೋಕ್ತಿಗಳು 13:18 ULT)

ಸಾಮಾನ್ಯವಾಗಿ, ಶಿಕ್ಷೆಯನ್ನು ನಿರ್ಲಕ್ಷಿಸುವವನಿಗೆ ಬಡತನ ಮತ್ತು ಅವಮಾನ ಆಗುತ್ತದೆ.

ಆದರೆ ನೀವು ಪ್ರಾರ್ಥನೆಮಾಡುವಾಗ ಅನ್ಯಜನಗಳ ಹಾಗೆ ಹೇಳಿದ್ದನ್ನೇ ಸುಮ್ಮನೆ ಮತ್ತೆ ಮತ್ತೆ ಹೇಳಬೇಡಿ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ಭಾವಿಸುತ್ತಾರೆ. (ಮತ್ತಾಯ 6:7)

ಆದರೆ ನೀವು ಪ್ರಾರ್ಥನೆಮಾಡುವಾಗ ಸಾಮಾನ್ಯವಾಗಿ ಅನ್ಯಜನಗಳು ಹೇಳುವ ಹಾಗೆ ಹೇಳಿದ್ದನ್ನೇ ಸುಮ್ಮನೆ ಮತ್ತೆ ಮತ್ತೆ ಹೇಳಬೇಡಿ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ಭಾವಿಸುತ್ತಾರೆ.

(3) ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣ ಅಷ್ಟೊಂದು ಖಚಿತವಾಗಿ ಇರುವುದಿಲ್ಲ ಎಂಬುದನ್ನು ತೋರಿಸಲು “ಅನೇಕ” ಅಥವಾ “ಬಹುತೇಕ” ಎಂಬ ಪದಗಳನ್ನು ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣಕ್ಕೆ ಸೇರಿಸಿರಿ.

ಆಗ ಇಡೀ ಯೂದಾಯ ಸೀಮೆಯು ಮತ್ತು ಯೆರೂಸಲೇಮಿನ ಎಲ್ಲಾ ಜನರು ಆತನ ಬಳಿಗೆ ಹೋದರು. (ಮಾರ್ಕ 1:5 ULT)

ಬಹುತೇಕ ಎಲ್ಲ ಯೂದಾಯ ಸೀಮೆಯು ಮತ್ತು ಯೆರೂಸಲೇಮಿನ ಬಹುತೇಕ ಎಲ್ಲಾ ಜನರು ಆತನ ಬಳಿಗೆ ಹೋದರು." ಅಥವಾ: ಯೂದಾಯ ಸೀಮೆಯ ಅನೇಕರು ಮತ್ತು ಯೆರೂಸಲೇಮಿನ ಅನೇಕ ಜನರು ಆತನ ಬಳಿಗೆ ಹೋದರು."

(4) ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣದಲ್ಲಿರುವ “ಎಲ್ಲಾ”, “ಯಾವಾಗಲೂ,” “ಯಾವುದೂ ಇಲ್ಲ,” ಅಥವಾ “ಎಂದಿಗೂ ಇಲ್ಲ,” ಎಂಬ ಪದಗಳು ತೆಗೆದುಹಾಕಲು ಪರಿಗಣಿಸಿರಿ.

ಆಗ ಇಡೀ ಯೂದಾಯ ಸೀಮೆಯು ಮತ್ತು ಯೆರೂಸಲೇಮಿನ ಎಲ್ಲಾ ಜನರು ಆತನ ಬಳಿಗೆ ಹೋದರು. (ಮಾರ್ಕ 1:5 ULT)

ಯೂದಾಯ ಸೀಮೆಯವರು ಮತ್ತು ಯೆರೂಸಲೇಮಿನ ಜನರು ಆತನ ಬಳಿಗೆ ಹೋದರು.


ನುಡಿಗಟ್ಟುಗಳು.

Translation Manual :: Just-in-Time Learning Modules :: Figures of Speech :: Idiom

“ನುಡಿಗಟ್ಟುಗಳು” ಇವು ಸಹಅಲಂಕಾರವಾಗಿದ್ದು ಪದಗಳು ಗುಂಪಾಗಿ ಕಂಡು ಬರುತ್ತವೆ. ಒಂದು ಪದಕ್ಕೆ ಅರ್ಥವಿರುವಂತೆ ಈ ಪದದ ಗುಂಪಿಗೆ ಕೆಲವೊಮ್ಮೆ ವಿಭಿನ್ನವಾದ ಅರ್ಥವನ್ನು ಕೊಟ್ಟು ಅರ್ಥಮಾಡಿಕೊಳ್ಳಬಹುದು.

ಬೇರೆ ಸಂಸ್ಕೃತಿಯಲ್ಲಿನ ಜನರಿಗೆ ಇಂತಹ ನುಡಿಗಟ್ಟು, (ಕೆಲವೊಮ್ಮೆ ನಾಣ್ನುಡಿ) ಅರ್ಥವಾಗದೇ ಇರಬಹುದು. ನುಡಿಗಟ್ಟು ಯಾವಭಾಷೆಯಲ್ಲಿದೆಯೋ ಆ ಭಾಷೆಯ/ಸಂಸ್ಕೃತಿಯ ಜನರಿಗೆ ಇದು ಸುಲಭವಾಗಿ ಸರಿಯಾಗಿ ಅರ್ಥವಾಗುತ್ತದೆ. ಎಲ್ಲಾ ಭಾಷೆಯಲ್ಲೂ ಇಂತಹ ನುಡಿಗಟ್ಟು/ ನಾಣ್ನುಡಿಗಳ ಬಳಕೆಯಿದೆ. ಇಂಗ್ಲೀಷ್ ಭಾಷೆಯಲ್ಲಿನ ಕೆಲವು ಉದಾಹರಣೆಗಳು.

  • “ನೀನು ನನ್ನ ಕಾಲು ಏಳೆಯುತ್ತಿದ್ದೀಯಾ”, ಇದರ ಅರ್ಥ(ನೀನು ನನಗೆ ಸುಳ್ಳು ಹೇಳುತ್ತಿರುವಿ)
  • ಈ ಲಕೋಟೆಯನ್ನು (envelope) ನೂಕಬೇಡ (ಇದರ ಅರ್ಥ ವಿಷಯವನ್ನು ಅತಿರೇಕಕ್ಕೆ ತೆಗೆದುಕೊಡು ಹೋಗಬೇಡ)
  • ಈ ಮನೆ ನೀರಿನಲ್ಲಿ ಮುಳುಗಿದೆ) (ಇದರ ಅರ್ಥ ಈ ಮನೆಗೆ ತೆಗೆದುಕೊಂಡಿರುವ ಸಾಲದ ಮೊತ್ತ ಮನೆಯ ನಿಜವಾದ ಮೌಲ್ಯಕ್ಕಿಂತ ಹೆಚ್ಚಾಗಿದೆ).
  • ನಾವು ನಗರವನ್ನು ಕೆಂಪುಬಣ್ಣದಿಂದ ಬಳೆಯುತ್ತೇವೆ, ಇದರ ಅರ್ಥ ಈ ರಾತ್ರಿ ನಾವು ನಗರದ ಸುತ್ತ ಸಂಭ್ರಮಾಚರಣೆಗಳಿಂದ ಸಂತೋಷಿಸುತ್ತೇವೆ, ಎಂದು.

ವಿವರಣೆಗಳು.

ಒಂದು ಭಾಷೆಯ/ ಸಂಸ್ಕೃತಿಯ ಜನರಿಗೆ ವಿಶೇಷ ಅರ್ಥವನ್ನು ನೀಡುವ ನುಡಿಗಟ್ಟು/ ನಾಣ್ನುಡಿ ಬಳಸಲು ಅವಕಾಶ ಮಾಡಿಕೊಡುವುದು. ಈ ಪದಗಳ ಅರ್ಥವನ್ನು ಒಬ್ಬ ವ್ಯಕ್ತಿ ಒಂದು ಪದವನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಭಿನ್ನವಾಗಿ ಅರ್ಥಮಾಡಿಕೊಳ್ಳಬಹುದು.

ಆತನು ಯೆರೂಸಲೇಮಿಗೆ ಹೋಗಲು ಮನಸ್ಸನ್ನು ದೃಢಮಾಡಿಕೊಂಡನು (ಮೂಲದಲ್ಲಿ ಮನಸ್ಸು ಬದಲು ಮುಖ ಎಂದಿದೆ) (ಲೂಕ 9:51 ULB)

ಇಲ್ಲಿ " ಮನಸ್ಸನ್ನು ದೃಢಮಾಡಿಕೊಂಡನು " ಎಂಬುದು ನಿರ್ಧರಿಸಿದನು ಎಂಬ ಅರ್ಥ ಕೊಡುತ್ತದೆ. ಕೆಲವೊಮ್ಮೆ ಜನರು ಬೇರೆ ಸಂಸ್ಕೃತಿಯ ಆಧಾರದ ಮೇಲೆ ನುಡಿಗಟ್ಟುಗಳನ್ನು ಅರ್ಥಮಾಡಿಕೊಳ್ಳುವುದುಂಟು. ಆದರೆ ಆಗ ಇದು ವಿಭಿನ್ನ ರೀತಿಯ ಅರ್ಥವನ್ನು ವ್ಯಕ್ತಮಾಡಬಹುದು.

ನೀನು ನನ್ನ ಛಾವಣಿಗೆ ಬರತಕ್ಕಷ್ಟು ಯೋಗ್ಯತೆ ನನಗಿಲ್ಲ . (ಲೂಕ 7:6 ULB)

" ನನ್ನ ಛಾವಣಿಗೆ ಬರಲು” ಎಂದರೆ “ನನ್ನ ಮನೆಗೆ ಬರಲು” ಎಂದು ಅರ್ಥ

ಮಾತುಗಳು ನಿಮ್ಮ ಕಿವಿಯಲ್ಲಿ ಮನಸ್ಸಿನಲ್ಲಿ ಆಳವಾಗಿ ಪ್ರವೇಶಿಸಲಿ . (ಲೂಕ 9:44 ULB)

ಈ ನುಡಿಗಟ್ಟಿನ ಅರ್ಥ ನನ್ನ ಮಾತುಗಳನ್ನು " ಎಚ್ಚರಿಕೆಯಿಂದ ಆಲಿಸಿ ಮತ್ತು ನೆನಪಿನಲ್ಲಿಡಿ ಎಂದು "

ಉದ್ದೇಶ:

ಈ ನುಡಿಗಟ್ಟುಗಳನ್ನು ಆಯಾ ಸಂಸ್ಕೃತಿಯಲ್ಲಿ ಬಹುಶಃ ಜನರು ತಾವು ಹೇಳುವ ವಿಷಯಗಳು ಇತರರಿಗೆ ಮನದಟ್ಟಾಗುವಂತೆ ವಿವರಿಸಲು ಇಂತಹ ಪದಗಳನ್ನು ಬಳಸಿರಬಹುದು. ಅಥವಾ ಕೆಲವೊಮ್ಮೆ ಆಕಸ್ಮಿಕವಾಗಿಯೂ ಬಳಸಿರಬಹುದು. ಆದರೆ ಯಾವಾಗ ಇಂತಹ ಪದಗಳು ಪರಿಣಾಮಕಾರಿಯಾದ ಅರ್ಥವನ್ನು ಜನರಿಗೆ ತಿಳಿಸಿದರೆ, ಅವರಿಗೆ ಸುಲಭವಾಗಿ ಅರ್ಥವಾದರೆ ಮಾತ್ರ ಜನರು ಅದನ್ನು ಬಳಸಲು ಪ್ರಾರಂಭಿಸುತ್ತಾರೆ. ಕ್ರಮೇಣ ಇಂತಹ ಪದಗಳನ್ನು ಎಲ್ಲಾ ಜನರು ಸಹಜವಾಗಿ ಉಪಯೋಗಿಸುತ್ತಾರೆ.

ಕಾರಣ ಇದೊಂದು ಭಾಷಾಂತರದ.

  • ಸತ್ಯವೇದದ ಮೂಲಭಾಷೆಯಲ್ಲಿನ ನುಡಿಗಟ್ಟುಗಳನ್ನು ಜನರು ಕೆಲವೊಮ್ಮೆ ಸುಲಭವಾಗಿ ಅಪಾರ್ಥಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.(ಅವರಿಗೆ ಅಂದಿನ ಸಂಸ್ಕೃತಿಯ ಪರಿಚಯವಿಲ್ಲದಿದ್ದರೆ) ಮತ್ತು ಆ ಸಂಸ್ಕೃತಿಯ ಸತ್ಯವೇದವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು.
  • ಮೂಲಭಾಷೆಯ ಸತ್ಯವೇದದಲ್ಲಿರುವ ನುಡಿಗಟ್ಟುಗಳನ್ನು ಸರಿಯಾಗಿ ಭಾಷಾಂತರ ಮಾಡದಿದ್ದರೆ ಮತ್ತು ಅಂದಿನ ಸಂಸ್ಕೃತಿಯ ಪರಿಚಯ ಇಲ್ಲದಿದ್ದರೆ ಓದುವ ಜನರು ಇದನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾಗುತ್ತಾರೆ.
  • ಭಾಷಾಂತರವಾಗುತ್ತಿರುವ ಭಾಷೆಯ ಜನರಿಗೆ ಈ ನುಡಿಗಟ್ಟುಗಳು (ಪ್ರತಿಯೊಂದು ಪದದ ಅರ್ಥ) ನುಡಿಗಟ್ಟುಗಳನ್ನು ಭಾಷಾಂತರಿಸುವುದು ವ್ಯರ್ಥ

ಸತ್ಯವೇದದಲ್ಲಿನ ಉದಾಹರಣೆಗಳು.

ಅನಂತರ ಇಸ್ರಾಯೇಲರೆಲ್ಲರೂ ಹೆಬ್ರೋನಿನಲ್ಲಿದ್ದ ದಾವೀದನ ಬಳಿ ಬಂದು ನೋಡು ನಾವು ನಿನ್ನ ದೇಹದ ರಕ್ತ ಮಾಂಸ ಮತ್ತು ಮೂಳೆಗಳಾಗಿದ್ದೇವೆ (ರಕ್ತಸಂಬಂಧಿಗಳು) ಆಗಿದ್ದೇವೆ ಎಂದರು . " (1 ಪೂರ್ವಕಾಲ ವೃತ್ತಾಂತ 11:1 ULB)

ಇದರ ಅರ್ಥ " ನಾವು ನಿನ್ನ ಕುಲವನ್ನು ಸೇರಿದವರು, ನಿನ್ನ ಕುಟುಂಬದ ಸದಸ್ಯರು ಆಗಿದ್ದೇವೆ ಎಂದು ಅರ್ಥ."

ಇಸ್ರಾಯೇಲಿನ ಮಕ್ಕಳೆಲ್ಲರೂ ಮೇಲುಗೈ ಆಗಿ ಅಟ್ಟಹಾಸದಿಂದ ಹೊರಗೆ ಹೊರಟರು . (ವಿಮೋಚನಾಕಾಂಡ14:8 ASV)

ಇಸ್ರಾಯೇಲರೆಲ್ಲರೂ " ಪ್ರತಿಭಟಿಸಿ ಅಟ್ಟಹಾಸದಿಂದ, ಹೊರಟರು ಎಂದು ಅರ್ಥ."

ನನ್ನ ತಲೆಯನ್ನು ಮೇಲಕ್ಕೆ ಎತ್ತುವಂತೆ ಮಾಡುವವನು ಆಗಿದ್ದೀ (ದಾ.ಕೀ.3:3 ULB)

ಇದರ ಅರ್ಥ ನನ್ನ ಗೌರವಕ್ಕೆ ಕಾರಣನೂ, " ನನಗೆ ಸಹಾಯ ಮಾಡುವವನು " ಎಂದು

ಭಾಷಾಂತರ ಕೌಶಲ್ಯಗಳು.

ನಿಮ್ಮ ಭಾಷೆಯಲ್ಲಿ ನುಡಿಗಟ್ಟುಗಳು ಸುಲಭವಾಗಿ ಅರ್ಥವಾಗುವುದಾದರೆ ಅದನ್ನೇ ಪರಿಗಣಿಸಿ. ಇಲ್ಲದಿದ್ದರೆ ಇಲ್ಲಿ ಇಂತಹ ಕೆಲವು ಅವಕಾಶವಿರುವ ಅಂಶಗಳನ್ನು ತಿಳಿಸಿದೆ.

  1. ನುಡಿಗಟ್ಟು ಬಳಸದೆ ಸರಳವಾದ ಅರ್ಥವನ್ನು ಕೊಡುವಂತೆ ಭಾಷಾಂತರಿಸಿ.
  2. ನಿಮ್ಮ ಭಾಷೆಯಲ್ಲಿ ಇದೇ ಅರ್ಥಕೊಡುವ ನುಡಿಗಟ್ಟುಗಳಿದ್ದರೆ ಅದನ್ನು ಬಳಿಸಿಕೊಳ್ಳಿ.

ಭಾಷಾಂತರ ಕೌಶಲ್ಯಗಳು ಅಳವಡಿಸಿರುವ ಉದಾಹರಣೆಗಳು.

  1. ನುಡಿಗಟ್ಟು ಬಳಸದೆ ಸರಳವಾದ ಅರ್ಥವನ್ನು ಕೊಡುವಂತೆ ಭಾಷಾಂತರಿಸಿ.
  • ಅನಂತರ ಇಸ್ರಾಯೇಲರೆಲ್ಲರೂ ಹೆಬ್ರೋನಿನಲ್ಲಿದ್ದ ದಾವಿದನ ಬಳಿ ಬಂದು ನೋಡು ನಾವು ನಿನ್ನ ದೇಹದ ರಕ್ತ ಮಾಂಸ ಮತ್ತು ಮೂಳೆಗಳಾಗಿದ್ದೇವೆ (ರಕ್ತಸಂಬಂಧಿಗಳು) ಆಗಿದ್ದೇವೆ ಎಂದರು ." " (1 ಪೂರ್ವಕಾಲದ ವೃತ್ತಾಂತ 11:1 ULB)

    • …ನೋಡು ನಾವೆಲ್ಲರೂ ಒಂದೇ ರಾಷ್ಟ್ರಕ್ಕೆ ಸೇರಿದವರು .
  • ಆತನು ಯೆರೋಸಲಮಿಗೆ ಹೋಗಲು ತನ್ನ ಮುಖವನ್ನು /ಮನಸ್ಸನ್ನು ತಿರುಗಿ ನಿರ್ಧರಿಸಿದನು . (ಲೂಕ 9:51 ULB)

    • ಆತನು ಯೆರೋಸಲಮಿನ ಕಡೆ ಪ್ರಯಾಣಿಸಲು ಯೋಚಿಸಿ ಅದನ್ನು ತಲುಪಲು ನಿರ್ಧರಿಸಿದನು .
  • ನೀನು ನನ್ನ ಛಾವಣಿಯನ್ನು ಪ್ರವೇಶಿಸಲು ಯೋಗ್ಯನಲ್ಲ. (ಲೂಕ 7:6 ULB)

    • ನೀನು ನನ್ನ ಮನೆಗೆ ಬರುವಷ್ಟು .ಯೋಗ್ಯತೆ ನನಗಿಲ್ಲ.
  1. ನಿಮ್ಮ ಭಾಷೆಯಲ್ಲಿರುವ ಸಮಾನ ಅರ್ಥಕೊಡುವ ಪದಗಳನ್ನು ಬಳಸಿ ನುಡಿಗಟ್ಟುಗಳನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ನಿಮ್ಮ ಜನರಿಗೆ ಕೊಡಿ.
  • ಈ ಮಾತುಗಳು ನಿಮ್ಮ ಕಿವಿಯೊಳಗೆ ಆಳವಾಗಿ ಹೋಗಲಿ (ಲೂಕ 9:44 ULB)

    • ನಿಮ್ಮ ಕಿವಿಗಳಿಗೂ ನಾನು ಹೇಳುವ ಮಾತುಗಳು ಕೇಳಿಸಲಿ.
  • ದುಃಖದಿಂದ ನನ್ನ ಕಣ್ಣುಗಳು ಮಬ್ಬಾಯಿತು (ದಾ.ಕೀ. 6:7 ULB)

    • ನಾನು ಅಳುತ್ತಿರುವುದರಿಂದ ನನ್ನ ಕಣ್ಣುಗಳು ಕಣ್ಣೀರಿನಿಂದ ತುಂಬಿವೆ.

ವ್ಯಂಗ್ಯ -

Translation Manual :: Just-in-Time Learning Modules :: Figures of Speech :: Irony

ವಿವರಣೆ

ವ್ಯಂಗ್ಯ ಎಂಬುದು ಒಂದು ಅಲಂಕಾರ, ಇದರಲ್ಲಿ ವಿಷಯವನ್ನು ತಿಳಿಸುವ ವ್ಯಕ್ತಿಯು ಪದಗಳ ಅಕ್ಷರಷಃ ಅರ್ಥವನ್ನು ಹೇಳುವ ಬದಲು ಅದರ ವಿರುದ್ಧ ಪದವನ್ನು ಬಳಸಿ ತಿಳಿಸುತ್ತಾನೆ. ಕೆಲವೊಮ್ಮೆ ಇಂತಹ ಪದಗಳನ್ನು ಬಳಸುವಾಗ ಇತರರು ಬಳಸಿದ ಪದಗಳನ್ನು ಬಳಸಿರುತ್ತಾರೆ. ಇನ್ನೊಂದು ಅರ್ಥದಲ್ಲಿ ಅವರಿಗೆ ತಾವು ತಿಳಿಸಿದ ಪದಗಳ ಬಗ್ಗೆ ಒಪ್ಪಿತ ಅಭಿಪ್ರಾಯವಿರುವುದಿಲ್ಲ. ಜನರು ಇಂತಹ ಪದಗಳನ್ನು ಇರಬೇಕಾದ ಪದಗಳಿಗಿಂತ ವಿಭಿನ್ನ ಅರ್ಥ ಕೊಡುವ ಪದಗಳ ಬಗ್ಗೆ ಒತ್ತು ನೀಡಲು ಬಳಸುತ್ತಾರೆ ಅಥವಾ ಇತರರ ಅಭಿಪ್ರಾಯ ತಪ್ಪು ಅಥವಾ ಮೂರ್ಖತನ ಎಂದು ಸೂಚಿಸಲು ಬಳಸುತ್ತಾರೆ. ಕೆಲವೊಮ್ಮೆ ಇಂತಹ ಪದಗಳು ಹಾಸ್ಯಮಯವಾಗಿರುತ್ತದೆ.

ಯೇಸು ಅವರಿಗೆ -,“ಕ್ಷೇಮದಿಂದ ಇರುವವರಿಗೆ ವೈದ್ಯರು ಬೇಕಾಗಿಲ್ಲ ಎಂದು ಹೇಳಿದನು ಕ್ಷೇಮವಿಲ್ಲ ಆದವರಿಗೆ ವೈದ್ಯರು ಬೇಕು ಎಂದು ಹೇಳಿದನು.” “ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯುವುದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವುದಕ್ಕೆ ಬಂದವನು ಎಂದು ಅವರಿಗೆ ಉತ್ತರ ಕೊಟ್ಟನು.” (ಲೂಕ5:31-32 ULB)

“ನೀತಿವಂತರ” ಬಗ್ಗೆ ಯೇಸು ಮಾತನಾಡುವಾಗ ಯೇಸು ನಿಜವಾದ ನೀತಿವಂತರನ್ನು ಉದ್ದೇಶಿಸಿ ಮಾತನಾಡುತ್ತಿಲ್ಲ, ಆದರೆ ನೀತಿವಂತರಂತೆ ನಟಿಸುವ ಜನರ ಬಗ್ಗೆ ಹೇಳುತ್ತಿದ್ದಾನೆ. ಹೀಗೆ ಯೇಸು ತಾವು ನೀತಿವಂತರೆಂದು ತಿಳಿದು, ತಮ್ಮನ್ನು ಇತರರಿಗಿಂತ ಉತ್ತಮರೆಂದು ಭಾವಿಸಿ ಪಶ್ಚಾತ್ತಾಪ ಪಡುವ ಅವಶ್ಯಕತೆ ಇಲ್ಲ ಎಂದು ಯೋಚಿಸುವ ಜನರ ಬಗ್ಗೆ ಹೇಳಲು ಈ ವ್ಯಂಗ್ಯಾರ್ಥ ಪದಗಳನ್ನು ಬಳಸಿದ್ದಾನೆ

ಕಾರಣ ಇದೊಂದು ಭಾಷಾಂತರ ವಿಷಯ.

  • ಕೆಲವರು ತಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ವ್ಯಂಗ್ಯೋಕ್ತಿ ಬಳಸಿ ಮಾತನಾಡುತ್ತಿದ್ದಾನೆ ಎಂದು ತಿಳಿದುಕೊಳ್ಳಲಾರದೆ ಮಾತನಾಡುವ ವ್ಯಕ್ತಿ ನಿಜವಾದುದನ್ನೇ ಮಾತನಾಡುತ್ತಿದ್ದಾನೆ ಎಂದು ತಿಳಿದುಕೊಳ್ಳಬಹುದು. ವಾಕ್ಯಭಾಗದ ನಿಜವಾದ ಅರ್ಥವನ್ನು ತಿಳಿಯದೆ ವಿರುದ್ಧವಾದ ಅರ್ಥವನ್ನು ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ.

ಸತ್ಯವೇದದಲ್ಲಿನ ಉದಾಹರಣೆಗಳು

ನೀವು ನಿಮ್ಮ ಸಂಪ್ರದಾಯವನ್ನು ಅನುಸರಿಸಿ ನಡೆಯುವುದಕ್ಕಾಗಿ ದೇವರ ಆಜ್ಞೆಯನ್ನು ತಿರಸ್ಕರಿಸಿ ನಡೆಯುತ್ತಿದ್ದೀರಿ. (ಮಾರ್ಕ 7:9 ULB)

ಇಲ್ಲಿ ಫರಿಸಾಯರು ಮಾಡಿದ ತಪ್ಪುಗಳನ್ನು ತೋರಿಸಲು ಅವರನ್ನು ಹೊಗಳಿಕೆಯ ಮಾತುಗಳಿಂದ ಎಚ್ಚರಿಸುತ್ತಿದ್ದಾನೆ. ವ್ಯಂಗ್ಯೋಕ್ತಿ ಮೂಲಕ ಹೊಗಳಿಕೆಯ ವಿರುದ್ಧ ಪದವನ್ನು ಯೇಸು ಇಲ್ಲಿ ತಿಳಿಸುತ್ತಿದ್ದಾನೆ. ಸಂಪ್ರದಾಯಗಳನ್ನು ಅನುಸರಿಸುವುದಕ್ಕಾಗಿ ದೇವರ ಆಜ್ಞೆಗಳನ್ನು ಗುರುತಿಸಲು ಅಸಮರ್ಥರಾಗಿದ್ದೀರಿ ಎಂದು ಪರಿಸಾಯರನ್ನು ಕುರಿತು ಯೇಸು ಹೇಳಿದನು. ಈ ವ್ಯಂಗ್ಯೋಕ್ತಿಗಳು ಪರಿಸಾಯರ ಪಾಪಗಳು ಎದ್ದು ಕಾಣುತ್ತವೆ ಮತ್ತು ಹೆದರಿಕೆಯನ್ನು ಹುಟ್ಟಿಸುವಂತಾದ್ದು ಎಂಬುದನ್ನು ಸೂಚಿಸುತ್ತದೆ.

" ಯಾಕೋಬ್ಯರ ಅರಸನಾದ ಯೆಹೋವನು ಹೀಗೆನ್ನುತ್ತಾನೆ " ನಿಮ್ಮ ವ್ಯಾಜ್ಯವು ಈಚೆಗೆ ಬರಲಿ, ನಿಮ್ಮ ಬಲವಾದ ನ್ಯಾಯಗಳನ್ನು ತೋರ್ಪಡಿಸಿರಿ. ನಿಮ್ಮ ನ್ಯಾಯಗಳನ್ನು ಮುಂದಕ್ಕೆ ತನ್ನಿರಿ ; " ನಮಗೆ ಅರಿವು ಉಂಟಾಗುವಂತೆ ಮುಂದಾಗತಕ್ಕವುಗಳನ್ನು ತಿಳಿಸಿರಿ. ಭವಿಷ್ಯತ್ತನ್ನು ನಮಗೆ ತಿಳಿಸಲಿ ನಡೆದ ಸಂಗತಿಗಳ ವಿಶೇಷವನ್ನು ಸೂಚಿಸಿರಿ. ನಾವು ಅವುಗಳನ್ನು ಮನಸ್ಸಿಗೆ ತಂದು ಅವುಗಳ ಪರಿಣಾಮವನ್ನು ಗ್ರಹಿಸುವೆವು.." (ಯೆಶಾಯ 41:21-22 ULB) ತಂದು ಅವುಗಳ

ಜನರು ಮೂರ್ತಿ ಪೂಜೆ ಮಾಡುತ್ತಿದ್ದರು, ಅವರ ವಿಗ್ರಹಗಳಿಗೆ ಜ್ಞಾನವೂ, ಶಕ್ತಿಯೂ ಇರುತ್ತದೆ ಎಂದು ನಂಬಿದ್ದಾರೆ ಆದರೆ ಯೆಹೋವನು ಅವರ ಬಗ್ಗೆ ಮತ್ತು ಅವರ ಕಾರ್ಯದ ಬಗ್ಗೆ ಉಗ್ರನಾಗಿದ್ದಾನೆ. ಆದುದರಿಂದ ಆತನು ಅವರನ್ನು ಕುರಿತು ಭವಿಷ್ಯದಲ್ಲಿ ಏನಾಗುತ್ತದೆ ಎಂದು ಅವರ ವಿಗ್ರಹಗಳು ಹೇಳಲಿ ಎಂದು ಪಂಥಾಹ್ವಾನ ನೀಡುತ್ತಾನೆ. ಆ ವಿಗ್ರಹಗಳು ಇದನ್ನು ಮಾಡಲಾರವೆಂದು ಆತನಿಗೆ ತಿಳಿದಿತ್ತು, ಆದರೆ ಅವುಗಳು ಮಾತನಾಡುತ್ತಿರುವಂತೆ ಹೇಳಿ ಅವುಗಳ ಬಗ್ಗೆ ಹಾಸ್ಯ ಮಾಡುತ್ತಿದ್ದಾನೆ. ಅವರ ಅಸಮರ್ಥತೆಯನ್ನು ಬೆಳಕಿಗೆ ಬರುವಂತೆ ಮಾಡಿದ್ದಾನೆ ಮತ್ತು ಜನರು ಮಾಡುತ್ತಿರುವ ಕಾರ್ಯದ ಬಗ್ಗೆ, ಅವುಗಳನ್ನು ಪೂಜಿಸುತ್ತಿರುವ ಬಗ್ಗೆ ಎಚ್ಚರಿಸಿ ಗದರಿಸುತ್ತಿದ್ದಾನೆ.

ಬೆಳಕಿನ ನಿವಾಸಕ್ಕೆ ಹೋಗುವ ದಾರಿ ಎಲ್ಲಿ ? ನೀನು ಆ ಒಂದೊಂದನ್ನು ಅದರದರ ಪ್ರಾಂತ್ಯಕ್ಕೆ ಕರಕೊಂಡುಹೋಗಿ ಅವುಗಳ ಮನೆಯ ಹಾದಿಗಳನ್ನು ಕಂಡುಕೊಳ್ಳಬಲ್ಲೆಯಾ ? ನಿನಗೆ ಇದು ಗೊತ್ತಿರಲೇ ಬೇಕು ಆಗಲೇ ಹುಟ್ಟಿದೆಯಲ್ಲವೇ ?; ನಿನ್ನ ದಿನಗಳ ಸಂಖ್ಯೆ ಬಹಳ ದೊಡ್ಡದು !;" (ಯೋಬ 38:20, 21 ULB)

ಯೋಬನು ತಾನು ಬುದ್ಧಿವಂತತನೆಂದು ತಿಳಿದಿದ್ದನು. ಯೆಹೋವನು ಯೋಬನು ಬುದ್ಧಿವಂತನಲ್ಲ ಎಂದು ಹೇಳಲು ವ್ಯಂಗ್ಯೋಕ್ತಿ ಬಳಸಿದ್ದಾನೆ. ಮೇಲೆ ಅಡ್ಡಗೆರೆ ಹಾಕಿ ಗುರುತಿಸಿರುವ ಎರಡು ವಾಕ್ಯಗಳು ವ್ಯಂಗ್ಯೋಕ್ತಿಗಳಾಗಿವೆ. ಅವು ಹೇಳಿರುವ ವಾಕ್ಯಗಳಿಗೆ ವಿರುದ್ಧವಾದ ಅರ್ಥವನ್ನು ಹೊಂದಿವೆ ಏಕೆಂದರೆ ಅವು ನಿಶ್ಚಯವಾಗಿ ತಪ್ಪು ಹೇಳಿಕೆಗಳು. ಬೆಳಕಿನ ಸೃಷ್ಟಿಯ ಬಗ್ಗೆ ದೇವರು ಕೇಳಿದ ಪ್ರಶ್ನೆಗಳಿಗೆ ಯೋಬನಿಂದ ಉತ್ತರಿಸಲು ಆಗಲಿಲ್ಲ ಎಂಬುದನ್ನು ಒತ್ತಿ ಹೇಳಿದರು. ಏಕೆಂದರೆ ಯೋಬನು ಸೃಷ್ಟಿ ಆದ ಅನೇಕ ವರ್ಷಗಳ ನಂತರ ಹುಟ್ಟಿದವನು.

ಈಗಾಗಲೇ ನಿಮಗೆ ಬೇಕಾದುದೆಲ್ಲ ದೊರೆತು ತೃಪ್ತರಾಗಿದ್ದೀರಿ! ಈಗಾಗಲೇ ಐಶ್ವರ್ಯವಂತರೂ ಆಗಿದ್ದೀರಿ. ನಮ್ಮ ಸಹಾಯವಿಲ್ಲದೆ ಅರಸರಾದಿರಿ! (1 ಕೊರಿಂಥ 4:8 ULB)

ಕೊರಿಂಥದವರು ತಮ್ಮನ್ನು ತಾವೇ ಬುದ್ಧಿವಂತರೆಂದೂ, ಸ್ವಪರಿಪೂರ್ಣರೆಂದೂ ಪರಿಗಣಿಸಿಕೊಂಡಿದ್ದರು. ಆದುದರಿಂದ ಅಪೋಸ್ತಲನಾದ ಪೌಲನ ಯಾವ ಸಲಹೆಗಳು, ಸೂಚನೆಗಳು ತಮಗೆ ಅವಶ್ಯವಿಲ್ಲವೆಂದು ತಿಳಿದಿದ್ದರು. ಆದುದರಿಂದಲೇ ಪೌಲನು ಈ ಮೇಲಿನ ವಾಕ್ಯಗಳನ್ನು ವ್ಯಂಗ್ಯೋಕ್ತಿಯನ್ನಾಗಿ ಬಳಸಿ ಅವರು ತಮ್ಮ ಬಗ್ಗೆ ಎಷ್ಟು ಗರ್ವದಿಂದ ಇದ್ದಾರೆ, ನೈಜತೆಯಿಂದ ಎಷ್ಟುದೂರ ಇದ್ದಾರೆ ಮತ್ತು ಅವರ ಬುದ್ಧಿವಂತಿಕೆ ಅವರನ್ನು ಯಾವ ಸ್ಥಿತಿಯಲ್ಲಿ ಇಳಿಸಿದೆ ಎಂದು ತಿಳಿಸುತ್ತಾನೆ.

ಭಾಷಾಂತರ ಕೌಶಲ್ಯಗಳು.

ವ್ಯಂಗ್ಯೋಕ್ತಿಯಗಳು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥವಾಗುವಂತಿದ್ದರೆ ಅದು ಹೇಗಿದೆಯೋ ಹಾಗೆ ಭಾಷಾಂತರಿಸಿ. ಇಲ್ಲದಿದ್ದರೆ ಇಲ್ಲಿ ಕೊಟ್ಟಿರುವ ತಂತ್ರಗಳನ್ನು ಬಳಸಿಕೊಳ್ಳಿ.

  1. ಮಾತನಾಡುವ ವ್ಯಕ್ತಿ ಏನು ಹೇಳುತ್ತಿದ್ದಾನೆ ಎಂಬುದನ್ನು ಸರಿಯಾಗಿ ತಿಳಿದು ನಂಬುವಂತೆ ಭಾಷಾಂತರ ಮಾಡಬೇಕು
  2. ವ್ಯಂಗ್ಯೋಕ್ತಿಯನ್ನುಇದ್ದಂತೆಯೇ, ಉದ್ದೇಶಿತ ಅರ್ಥದೊಂದಿಗೆ ಭಾಷಾಂತರಿಸಬೇಕು.

ವ್ಯಂಗ್ಯೋಕ್ತಿಯ ನಿಜವಾದ ಅರ್ಥವು ಮಾತನಾಡುತ್ತಿರುವವನ ಅಕ್ಷರಷಃ ಮಾತುಗಳಲ್ಲಿ ಕಂಡುಬರುವು ದಿಲ್ಲ . ಆದರೆ ನಿಜವಾದ ಅರ್ಥ ಅಕ್ಷರಷಃ ಅರ್ಥಕೊಡುವ ಪದಗಳ ವಿರುದ್ಧ ಅರ್ಥ ಪದಗಳಲ್ಲಿ ಇರುತ್ತದೆ.

###ಭಾಷಾಂತರ ಕೌಶಲ್ಯ ಅಳವಡಿಸಿಕೊಂಡಿರುವ ಬಗ್ಗೆ ಉದಾಹರಣೆಗಳು

  1. ಮಾತನಾಡುವ ವ್ಯಕ್ತಿ ಏನು ಹೇಳುತ್ತಿದ್ದಾನೆ ಎಂಬುದನ್ನು ಸರಿಯಾಗಿ ತಿಳಿದು ನಂಬುವಂತೆ ಭಾಷಾಂತರ ಮಾಡಬೇಕು
  • ನೀವು ನಿಮ್ಮ ಸಂಪ್ರದಾಯಗಳನ್ನು ಹಿಡಿದು ನಡೆಸುವುದಕ್ಕಾಗಿ ದೇವರ ಆಜ್ಞೆಗಳನ್ನು ತಿರಸ್ಕರಿಸುವುದು ಸರಿಯೇ ! (ಮಾರ್ಕ 7:9 ULB)

    • ನೀವು ದೇವರ ಆಜ್ಞೆಗಳನ್ನು ತಿರಸ್ಕರಿಸುವುದು ಒಳ್ಳೆಯದು ಎಂದು ತಿಳಿದಿದ್ದೀರಿ ಇದರಿಂದ ನೀವು ನಿಮ್ಮ ಸಂಪ್ರದಾಯಗಳ ಆಚರಣೆ ಮುಂದುವರೆಸುತ್ತಿದ್ದೀರಿ.
    • ನೀವು ದೇವರ ಆಜ್ಞೆಗಳನ್ನು ತಿರಸ್ಕರಿಸುವುದು ಒಳ್ಳೆಯದು ಎನ್ನುವ ರೀತಿಯಲ್ಲಿ ವರ್ತಿಸುತ್ತೀರಿ.ಇದರಿಂದ ನೀವು ನಿಮ್ಮ ಸಂಪ್ರದಾಯವನ್ನು ಮುಂದುವರೆಸಬಹುದೆಂದು ತಿಳಿದಿರಬಹುದು.
  • ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯಲು ಬರಲಿಲ್ಲ ಆದರೆ ಪಾಪಿಗಳನ್ನು ಪಶ್ಚಾತ್ತಾಪಕ್ಕೆ ಕರೆಯಲು ಬಂದವನು. (ಲೂಕ5:32 ULB)

    • ಜನರು ತಮ್ಮನ್ನು ನೀತಿವಂತರೆಂದು ತಿಳಿದುಕೊಂಡಿರುವವರನ್ನು ಕರೆಯಲು ನಾನು ಬಂದಿಲ್ಲ, ಆದರೆ ಪಾಪಿಗಳು ಪಶ್ಚಾತ್ತಾಪಕ್ಕೆ ತಿರುಗಿಕೊಳ್ಳಲು ಕರೆಯಲು ಬಂದವನು.
  1. ವ್ಯಂಗ್ಯೋಕ್ತಿಯನ್ನುಇದ್ದಂತೆಯೇ, ಉದ್ದೇಶಿತ ಅರ್ಥದೊಂದಿಗೆ ಭಾಷಾಂತರಿಸಬೇಕು.
  • ನೀವು ದೇವರ ಆಜ್ಞೆಗಳನ್ನು ತಿರಸ್ಕರಿಸಿ ನಿಮ್ಮ ಸಂಪ್ರದಾಯವನ್ನು ಅನುಸರಿಸಲು ಆಲೋಚಿಸುವಿರಿ ! (ಮಾರ್ಕ 7:9 ULB)

    • ನೀವು ದೇವರ ಆಜ್ಞೆಗಳನ್ನು ತಿರಸ್ಕರಿಸುವ ಮೂಲಕ ಕೆಟ್ಟ ಸಂಗತಿಯನ್ನು ಮಾಡಿದ್ದೀರಿ. ಇದರಿಂದ ನಿಮ್ಮ ಸಂಪ್ರದಾಯವನ್ನು ಮುಂದುವರೆಸಬಹುದು ಎಂದು ತಿಳಿದಿದ್ದೀರಿ.
  • " ಯಾಕೋಬ್ಯರ ಅರಸನಾದ ಯಹೋವನು ಹೀಗೆನ್ನುತ್ತಾನೆ,“ನಿಮ್ಮ ವ್ಯಾಜ್ಯವು ಹೊರಗೆಬರಲಿ, ನಿಮ್ಮ ಬಲವಾದ ನ್ಯಾಯಗಳನ್ನು ತೋರಿಸಿರಿ, ತಮ್ಮ ನ್ಯಾಯಾಲಯಗಳನ್ನು ಮುಂದಕ್ಕೆ ತರಲಿ , ಭವಿಷ್ಯತ್ತನ್ನು ನಮಗೆ ತಿಳಿಸಲಿ, ನಡೆದ ಸಂಗತಿಗಳ ವಿಶೇಷತೆಯನ್ನು ಸೂಚಿಸಿರಿ, ನಾವು ಅವುಗಳನ್ನು ಮನಸ್ಸಿಗೆ ತಂದು ಅವುಗಳ ಪರಿಣಾಮವನ್ನು ಗ್ರಹಿಸುವೆವು ಅಥವಾ ಭವಿಷ್ಯವನ್ನು ತಿಳಿಸಿರಿ .” (ಯೆಶಾಯ 41:21-22 ULB)

    • 'ನಿಮ್ಮ ವ್ಯಾಜ್ಯವನ್ನುನನ್ನ ಮುಂದೆ ಇಡಿರಿ, ನಿಮ್ಮ ಬಲವಾದ ಸ್ನಾಯುಗಳನ್ನು ತೋರ್ಪಡಿಸಿರಿ ನಿಮ್ಮ ಮೂರ್ತಿಗಳ ಪರವಾಗಿ ವ್ಯಾಜ್ಯಮಾಡಿ ಎಂದು ಯಾಕೋಬ್ಯರ ಅರಸನಾದ ಯಹೋವನು ಹೇಳಿದನು. ನಿಮ್ಮ ವಿಗ್ರಹ, ಮೂರ್ತಿಗಳು ಅವುಗಳ ನ್ಯಾಯವನ್ನು, ವ್ಯಾಜ್ಯವನ್ನು ತರಲು ಸಾಧ್ಯವಿಲ್ಲ ಮತ್ತು ಭವಿಷ್ಯದಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿಸಲು ಆಗುವುದಿಲ್ಲ ಈ ವಿಷಯಗಳು ನಿಮಗೆ ಚೆನ್ನಾಗಿ ತಿಳಿದ ವಿಷಯ. ಅವುಗಳು ಮಾತನಾಡುವುದನ್ನು ನಾವು ಕೇಳಲು ಸಾಧ್ಯವಿಲ್ಲ ಏಕೆಂದರೆಅವು ಮಾತನಾಡಲಾರವು ಅವು ತಮ್ಮ ಹಿಂದಿನ ವಿಚಾರಗಳನ್ನು, ಭವಿಷ್ಯವನ್ನು ಕುರಿತು ಏನೂ ಹೇಳಲಾರವು ಆದುದರಿಂದ ಅವುಗಳ ಬಗ್ಗೆ ಮಾತನಾಡುವುದಾಗಲೀ, ಅವುಗಳ ವಿಚಾರಗಳು ನೆರೆವೇರುತ್ತದೆ ಎಂಬುದಾಗಿ ನಡೆಯುವುದಿಲ್ಲ.
  • ಕತ್ತಲಿನ ಸ್ವಸ್ಥಳವನ್ನು ಮೀರಿ ಬೆಳಕಿನ ನಿವಾಸಕ್ಕೆ ಹೋಗುವ ದಾರಿ ಎಲ್ಲಿ ಎಂದು ಕಂಡುಕೊಂಡು ನೀನು ಮನ್ನಡೆಸುವೆಯೋ ?

ನೀನು ಒಂದಂದನ್ನು ಅದರದರ ಪ್ರಾಂತ್ಯಕ್ಕೆ ಕರೆದುಕೊಂಡುಹೋಗಿ ಅವುಗಳ ಮನೆಯ ಹಾದಿಗಳನ್ನು ಕಂಡುಕೊಳ್ಳಬಲ್ಲೆಯಾ ? ನೀನು ಆಗ ಹುಟ್ಟಿದೆ ಎಂಬುದು ಖಚಿತವಾದುದು ; ನಿನ್ನ ದಿನಗಳ ಸಂಖ್ಯೆ ಬಹಳ ದೊಡ್ಡದು !" (ಯೋಬ 38:20, 21 ULB)

  • ಅವರನ್ನು ಕೆಲಸಮಾಡುವ ಸ್ಥಳಗಳಲ್ಲಿ ಇರುವ ಕತ್ತಲು ಬೆಳಕುಗಳೆರಡನ್ನು ಮೀರಿನಡೆಸಬಲ್ಲೆಯಾ? ಅವುಗಳ ಮನೆಯ ಹಾದಿಯನ್ನು ಕಂಡುಕೊಳ್ಳಬಲ್ಲೆಯಾ ? ನಿನಗೆ ಬೆಳಕು ಮತ್ತು ಕತ್ತಲೆಗಳು ಹೇಗೆ ಸೃಷ್ಟಿಯಾಯಿತು ಎಂಬುದನ್ನು ತಿಳಿದಂತೆ ನಟಿಸುತ್ತಿರುವೆ. ನೀನು ಸೃಷ್ಟಿಗಿಂತ ಮೊದಲೇ ಹುಟ್ಟಿದಂತೆ ವರ್ತಿಸುತ್ತಿರುವೆ. ಆದರೆ ಅದು ಹಾಗಲ್ಲ !

ಲಿಟೋಟ್ಸ್.

Translation Manual :: Just-in-Time Learning Modules :: Figures of Speech :: Litotes

ವಿವರಣೆಗಳು

ಲಿಟೋಟ್ಸ್ ಇದೊಂದು ಅಲಂಕಾರ. ಇದರಲ್ಲಿ ಒಬ್ಬ ವ್ಯಕ್ತಿ ತಾನು ತಿಳಿಸಬೇಕಾದ ಒಂದು ಸಕಾರಾತ್ಮಕ ವಿಷಯದ ಅರ್ಥವನ್ನು ಎರಡು ನಕಾರಾತ್ಮಕ ಪದಗಳನ್ನು ಬಳಸಿ ಹೇಳುತ್ತಾನೆ ಅಂದರೆ ಅವನು ತಿಳಿಸಬೇಕಾದ ವಿಷಯದವನ್ನು ಎರಡು ವಿರುದ್ದಾರ್ಥ ನೀಡುವ ಪದಗಳನ್ನು ಬಳಸಿ ಹೇಳುವುದು. ನಕಾರಾತ್ಮಕ ಪದಗಳಿಗೆ ಕೆಲವು ಉದಾಹರಣೆಗಳು “ಇಲ್ಲ” “ಅದಲ್ಲ” “ಯಾರೂ/ಯಾವುದೂ ಅಲ್ಲ,” ಮತ್ತು “ಯಾವಾಗಲೂ ಇಲ್ಲ.”.

“ಒಳ್ಳೆಯ” ಎಂಬುದಕ್ಕೆ ವಿರುದ್ಧ ಪದ “ಕೆಟ್ಟದ್ದು”. ಕೆಲವರು ಯಾವುದರ ಬಗ್ಗೆ ಯಾದರೂ ಹೇಳುವಾಗ ಕೆಲವೊಮ್ಮೆ “ಅದು ಕೆಟ್ಟದೇನಲ್ಲಾ” ಎಂಬ ಪದ ಬಳಸುತ್ತಾರೆ. ಇದರ ಅರ್ಥ ಅದು “ಒಳ್ಳೆಯದೇ” ಧ್ವನಿಸುತ್ತದೆ.

####ಏಕೆಂದರೆ ಇದೊಂದು ಭಾಷಾಂತರ ಪ್ರಕರಣ.

ಕೆಲವು ಭಾಷೆಯಲ್ಲಿ ಈ ಲಿಟೋಟ್ಸ್ ಬಳಸುವುದಿಲ್ಲ. ಇಂತಹ ಭಾಷೆ ಮಾತನಾಡುವವರಿಗೆ ಲಿಟೋಟ್ಸ್ ಬಳಸಿ ಹೇಳುವ ಮಾತುಗಳು ಸಕಾರಾತ್ಮಕ ಅರ್ಥಸೂಚಿಸುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲಾರರು. ಇದರ ಬದಲು ಅವರು ಈ ವಾಕ್ಯದ ಅರ್ಥ ಸಾಮರ್ಥ್ಯ ಕಳೆದು ಹೋದಂತೆ ಇಲ್ಲವೇ ಸಕಾರಾತ್ಮಕ ಅರ್ಥವು ಅರ್ಥಹೀನವಾದಂತೆ ಭಾವಿಸಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು.

ಸಹೊದರರೇ ನಾವು ನಿಮ್ಮ ಬಳಿಗೆ ಸುಮ್ಮನೆ ವ್ಯರ್ಥವಾಗಿ ಬರಲಿಲ್ಲ . (1 ಥೆಸಲೋನಿಕ 2:1 ULB)

ಪೌಲನು ಇಲ್ಲಿ ಲಿಟೋಟ್ಸ್ ಬಳಸಿ ಅವನು ಅವರನ್ನು ಭೇಟಿಮಾಡಲು ಬಂದದ್ದು ತುಂಬಾ ಉಪಯುಕ್ತವಾದುದು ಎಂದು ಹೇಳಿದ್ದಾನೆ.

ಬೆಳಗಾದ ಮೇಲೆ ಪೇತ್ರನು ಏನಾದನೆಂದು ಸಿಪಾಯಿಗಳಲ್ಲಿಕಳವಳ ಉಂಟಾಯಿತು. (ಆ.ಕೃ. 12:18 ULB)

ಲೂಕನು ಇಲ್ಲಿ ಲಿಟೋಟ್ಸ್ ಬಳಸುವ ಮೂಲಕ ಅಲ್ಲಿ ಸಿಪಾಯಿಗಳು ಪೇತ್ರನು ಏನಾದನೆಂಬ ಬಗ್ಗೆ ಅತಿಯಾದ ಕಳವಳ ಉಂಟಾದ ಬಗ್ಗೆ ಹೇಳುತ್ತಾನೆ. ಪೇತ್ರನನ್ನು ಸೆರೆಯಲ್ಲಿ ಇಡಲಾಗಿತ್ತು, ಅಲ್ಲಿ ಸಿಪಾಯಿಗಳು ಅವನನ್ನು ಕಾವಲು ಕಾಯುತ್ತಿದ್ದರೂ ದೇವದೂತನು ಬಂದು ಪೇತ್ರನನ್ನು ಅಲ್ಲಿಂದ ಬಿಡುಗಡೆ ಮಾಡಿದನು. ಇದರಿಂದ ಅವರು ತುಂಬಾ ಹೆದರಿಕೆಯಿಂದ ಕಳವಳಗೊಂಡರು.

ಯೆಹೂದ ಸೀಮೆಯ ಬೆತ್ಲೆಹೇಮ್. ಯೆಹೂದದ ನಾಯಕರಲ್ಲಿ ನೀನು ಎಷ್ಟುಮಾತ್ರವೂ ಸಣ್ಣದಲ್ಲ. ಒಬ್ಬ ಅಧಿಪತಿಯು ನಿನ್ನಿಂದಲೇ ಹೊರಡುವನು. ಆತನು ನನ್ನ ಪ್ರಜೆಯಾದ ಇಸ್ರಾಯೇಲನನ್ನು ಆಳತಕ್ಕವನು. (ಮತ್ತಾಯ 2:6 ULB)

ಲಿಟೋಟ್ಸ್ ಅನ್ನು ಬಳಸಿ ಪ್ರವಾದಿಯು ಮುಂದೆ ಬೆತ್ಲೆಹೇಮ್ ಬಹು ಪ್ರಮುಖವಾದ ಪಟ್ಟಣವಾಗುತ್ತದೆ ಎಂದು ಹೇಳಿದ್ದಾನೆ .

ಭಾಷಾಂತರ ತಂತ್ರಗಳು.

ಲಿಟೋಟ್ಸ್ ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥವಾಗುವುದಾದರೆ ಅದನ್ನು ಬಳಸಿ.

  1. ನಕಾರಾತ್ಮಕ ಅರ್ಥವು ಸರಿಯಾಗಿ ಅರ್ಥವಾಗದಿದ್ದರೆ ಸಕಾರಾತ್ಮಕ ಪದವನ್ನೇ ಪರಿಣಾಮಕಾರಿಯಾಗಿ ಹೇಳಲು ಪ್ರಯತ್ನಿಸಿ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ನಕಾರಾತ್ಮಕ ಅರ್ಥವು ಸರಿಯಾಗಿ ಅರ್ಥವಾಗದಿದ್ದರೆ ಸಕಾರಾತ್ಮಕ ಪದವನ್ನೇ ಪರಿಣಾಮಕಾರಿಯಾಗಿ ಹೇಳಲು ಪ್ರಯತ್ನಿಸಿ.

ಸಹೊದರರೇ ನಾವು ನಿಮ್ಮ ಬಳಿಗೆ ಸುಮ್ಮನೆ ವ್ಯರ್ಥವಾಗಿ ಬರಲಿಲ್ಲ , (1 ಥೆಸಲೋನಿಕ 2:1 ULB)

  • " ಸಹೊದರರೇ,ನಾನು ನಿಮ್ಮನ್ನು ಭೇಟಿ ಮಾಡಲು ಬಂದದ್ದು ತುಂಬಾ ಒಳ್ಳೆಯದಾಯಿತು ಎಂದು ನಿಮಗೆ ಚೆನ್ನಾಗಿ ಗೊತ್ತಿದೆ ."

  • ಬೆಳಗಾದ ಮೇಲೆ ಪೇತ್ರನು ಏನಾದನೆಂದು ಸಿಪಾಯಿಗಳಲ್ಲಿಕಳವಳ ಉಂಟಾಯಿತು. (ಆ.ಕೃ.12:18 ULB)

    • " ಈಗ ಬೆಳಗಾದ ಮೇಲೆ ಸಿಪಾಯಿಗಳಿಗೆ ಪೇತ್ರನು ಏನಾದನೆಂಬ ಕಳವಳ ಉಂಟಾಯಿತು
    • " ಬೆಳಗದಾಗ ಪೇತ್ರನು ಅಲ್ಲಿ ಇಲ್ಲದಿರುವುದನ್ನು ನೋಡಿದ ಸಿಪಾಯಿಗಳಿಗೆ ಅವನು ಏನಾದನೆಂದು ಕಳವಳ ಉಂಟಾಯಿತು. "

ಮೆರಿಸಮ್.

Translation Manual :: Just-in-Time Learning Modules :: Figures of Speech :: Merism

ವಿವರಣೆಗಳು

ಮೆರಿಸಮ್ ಎಂದರೆ ಇದು ಇಂಗ್ಲೀಷ್ ನಲ್ಲಿ ಬರುವ ಒಂದು ಅಲಂಕಾರ. ಒಬ್ಬ ವ್ಯಕ್ತಿ ಎರಡು ವಿಭಿನ್ನ ಅಥವಾ ಎರಡೂ ವಿರುದ್ಧವಾದ ಪದಗಳನ್ನು ಬಳಸಿ ಹೇಳುವಂತಹ ವಿಷಯ. ಹೀಗೆ ಎರಡು ವಿಭಿನ್ನ ಪದಭಾಗಗಳನ್ನು ಒಂದುಮಾಡಿ ಹೇಳುವಾಗ ಎರಡೂ ವಾಕ್ಯಗಳನ್ನು ಸೇರಿಸಿ ಹೇಳುತ್ತಾನೆ.

" ನಾನೇ ಆಲ್ಫಾ ಮತ್ತು ಒಮೇಗ ಎಂದು ಹೇಳಿದನು ನಾನೇ ವರ್ತಮಾನದಲ್ಲಿರುವವನು, ಭೂತಕಾಲದಲ್ಲಿ ಇದ್ದವನು ಮತ್ತು ಭವಿಷ್ಯತ್ ಕಾಲದಲ್ಲಿ ಬರುವವನು, ಸರ್ವಶಕ್ತನೂ ಆಗಿದ್ದೇನೆಂದು ದೇವರು ಹೇಳಿದನು. " (ಪ್ರಕಟಣೆ1:8, ULB) ದೇವರು ನಾನೇ ಆಲ್ಫಾ ಮತ್ತು ಒಮೇಗ (ಆದಿಯೂ,ಅಂತ್ಯವೂ), ಮೊದಲನೆಯವನು ಮತ್ತು ಕೊನೆಯವನು , ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ. (ಪ್ರಕಟಣೆ 22:13, ULB)

ಆಲ್ಫಾ ಮತ್ತು ಒಮೇಗ ಎಂಬುದು, ಗ್ರೀಕ್ ಅಕ್ಷರ ಮಾಲೆಯ ಪ್ರಾರಂಭ ಮತ್ತು ಕೊನೆಯ ಅಕ್ಷರಗಳು. ಈ ರೀತಿ ಪ್ರಾರಂಭದಿಂದ ಕೊನೆಯವರೆಗೆ ಸೇರಿಸಿ ಒಟ್ಟಾಗಿ ಹೇಳುವ ಪದವನ್ನು ಮೆರಿಸಮ್ ಎಂದು ಕರೆಯುತ್ತಾರೆ. ಇದರ ಅರ್ಥ ಅನಂತವಾದುದು ಎಂದು.

“ ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇನಾನು ನಿನ್ನನ್ನು ಸ್ತುತಿಸುತ್ತೇನೆ…, (ಮತ್ತಾಯ 11:25 ULB)

ಭೂ ಪರಲೋಕಗಳು ಎಂದು ಹೇಳುವುದನ್ನು ಪರಲೋಕ ಮತ್ತು ಭೂಲೋಕ ಎರಡೂ…, ಅಸ್ಥಿತ್ವದಲ್ಲಿರುವುದನ್ನು ಹೇಳುವಂತದ್ದೇ ಮೆರಿಸಮ್.

####ಕಾರಣ ಇದೊಂದು ಭಾಷಾಂತರ ತೊಡಕುಗಳು ಪ್ರಕರಣ.

ಕೆಲವು ಭಾಷೆಗಳಲ್ಲಿ ಮೆರಿಸಮ್ ಅನ್ನು ಉಪಯೋಗಿಸುವುದಿಲ್ಲ. ಅಂತಹ ಭಾಷೆಯ ಓದುಗರು ಇಂತಹ ಪದಬಂಧಗಳು ಆಯಾಪದಗಳಿಗೆ ಮಾತ್ರ ಸೀಮಿತವಾದುದು ಎಂದು ತಿಳಿದುಕೊಳ್ಳುತ್ತಾರೆ. ಅವರಿಗೆ ಆ ಎರಡು ಪದಗಳು ಅರ್ಥದಲ್ಲಿ ಬೇರೆಯಾದರೂ ಅದರ ಮಧ್ಯದಲ್ಲಿರುವುದನ್ನು ಬೆಸೆಯುತ್ತದೆ, ತನ್ನೊಳಗೆ ಸೇರಿಸಿಕೊಂಡು ಒಂದು ಪದಬಂಧವಾಗಿದೆ ಎಂದು ಕೆಲವೊಮ್ಮೆ ತಿಳಿಯುವುದಿಲ್ಲ.

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು.

ಯೆಹೋವನ ನಾಮವು ಮೂಡಣದಿಂದ ಪಡುವಣದವರೆಗೆ,ಸ್ತುತಿಹೊಂದಲಿ. (ದಾ.ಕೀ. 113:3 ULB)

ಇದೊಂದು ಮೆರಿಸಮ್ ಏಕೆಂದರೆ ಮೂಡಣ (ಪೂರ್ವ) ದಿಕ್ಕಿನಿಂದ ಪಡುವಣ(ಪಶ್ಚಿಮ) ದಿಕ್ಕಿನವರೆಗೆ ಎಂದು ಹೇಳಿದರೆ ಅದರ ಮಧ್ಯದಲ್ಲಿ ಇರುವುದೆಲ್ಲವೂ ಸೇರಿದೆ ಎಂದು ಅರ್ಥ. ಇದರ ಅರ್ಥ " ಎಲ್ಲಾ ಕಡೆಯೂ " ಎಂದು.

ಯಾರು ಅವನನ್ನು ಮಹಿಮೆ ಪಡಿಸುತ್ತಾರೋ ಅವರನ್ನು“ಸಣ್ಣವರು ಮೊದಲುಗೊಂಡು ದೊಡ್ಡವರವರೆಗೂ. ಎಲ್ಲರನ್ನು ಆಶೀರ್ವದಿಸುವವನು” (ದಾ.ಕೀ. 115:12)

ಇಲ್ಲಿ ಇದೊಂದು ಮೆರಿಸಮ್ ಗೆ ಉದಾಹರಣೆ, ಏಕೆಂದರೆ ಸಣ್ಣವರನ್ನು ಮೊದಲುಗೊಂಡು ದೊಡ್ಡವರವರೆಗೆ ಎಂದರೆ ಮಧ್ಯದಲ್ಲಿ ಇರುವ ಇತರ ಎಲ್ಲರೂ ಎಂದರ್ಥ. ಇದರ ಅರ್ಥ ಎಲ್ಲರೂ ಎಲ್ಲವೂ ಎಂದು.

###ಭಾಷಾಂತರ ಕೌಶಲ್ಯಗಳು.

ನಿಮ್ಮ ಭಾಷೆಯಲ್ಲಿ ಈ ಮೆರಿಸಮ್ ಬಳಕೆ ಸಹಜವಾಗಿ ಇದ್ದರೆ ಅದನ್ನು ಬಳಸಿಕೊಳ್ಳಿ. ಅದಿಲ್ಲದಿದ್ದರೆ ಇಲ್ಲಿ ಕೆಲವು ಅವಕಾಶ ಇವೆ.

  1. “ಮೆರಿಸಮ್” ಸೂಚಿಸಿರುವ ವಾಕ್ಯಭಾಗಗಳಲ್ಲಿ ಅದರ ಉದ್ದೇಶ ಎಲ್ಲಿ ಬರುತ್ತದೆ ಎಂಬುದನ್ನು ಗುರುತಿಸಬೇಕು
  2. “ಮೆರಿಸಮ್” ಯಾವುದು ಎಂಬುದನ್ನು ಗುರುತಿಸಿ ಯಾವುದರ ಬಗ್ಗೆ ಹೇಳುತ್ತಿದೆ. ಯಾವುದನ್ನು ಒಳಗೊಂಡಿದೆ ಎಂಬುದನ್ನು ನೋಡಿ.

ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು

  1. “ಮೆರಿಸಮ್” ಸೂಚಿಸಿರುವ ವಾಕ್ಯಭಾಗಗಳಲ್ಲಿ ಅದರ ಉದ್ದೇಶ ಎಲ್ಲಿ ಬರುತ್ತದೆ ಎಂಬುದನ್ನು ಗುರುತಿಸಬೇಕು
  • ತಂದೆಯೇ ಪರಲೋಕ ಭೂಲೋಕಗಳ , ಒಡೆಯನೇ ನಿನ್ನನ್ನು ಸ್ತುತಿಸುತ್ತೇನೆ… (ಮತ್ತಾಯ 11:25 ULB)

    • ತಂದೆಯೇ, ಸರ್ವಕ್ಕೂ ಒಡೆಯನೇ , ನಿನ್ನನ್ನು ಸ್ತುತಿಸುತ್ತೇನೆ…**
  • ಯೆಹೋವನ ನಾಮವು ಮೂಡಣದಿಂದ ಪಡುವಣದವರೆಗೂ ಸ್ತುತಿಹೊಂದಲಿ. (ದಾ.ಕೀ. 113:3 ULB)

    • ಎಲ್ಲಾ ಸ್ಥಳಗಳಲ್ಲಿಯೂ , ಜನರು ಯೆಹೋವನ ನಾಮವನ್ನು ಸ್ತುತಿಸಿ ಮಹಿಮೆಪಡಿಸಲಿ.
  1. ಮೆರಿಸಮ್ ಯಾವುದು ಎಂಬುದನ್ನು ಗುರುತಿಸಿ ಯಾವುದರ ಬಗ್ಗೆ ಹೇಳುತ್ತಿವೆ. ಯಾವುದನ್ನು ಒಳಗೊಂಡಿದೆ ಎಂಬುದನ್ನು ನೋಡಿ.
  • ಪರಲೋಕ ಭೂಲೋಕಗಳ ಒಡೆಯನಾದ ತಂದೆಯೇ ನಾನು ನಿನ್ನನ್ನು ಸ್ತುತಿಸುತ್ತೇನೆ . (ಮತ್ತಾಯ 11:25 ULB)

    • ತಂದೆಯಾದ ದೇವರೇ, ಪರಲೋಕದಲ್ಲಿರುವ ಎಲ್ಲವನ್ನೂ, ಭೂಲೋಕದಲ್ಲಿರುವ ಎಲ್ಲವನ್ನೂ ಸೃಷ್ಠಿಸಿದ ಒಡೆಯನೇ ನಿನ್ನನ್ನು ಸ್ತುತಿಸುತ್ತೇನೆ.
  • ಸಣ್ಣವರು ಮೊದಲುಗೊಂಡು ದೊಡ್ಡವರವರೆಗೆ ಎಲ್ಲರನ್ನೂ ಆತನನ್ನೂ ಗೌರವಿಸಿ ಮಹಿಮೆ ಪಡಿಸುವವರನ್ನು ಆಶೀರ್ವದಿಸುವನು . (ದಾ.ಕೀ.115:13 ULB)

    • ಆತನು ತನ್ನನ್ನು ಗೌರವಿಸಿ ಮಹಿಮೆ ಪಡಿಸುವ ಎಲ್ಲರನ್ನೂ ಸಣ್ಣವರೂ ದೊಡ್ಡವರೂ ಎಂಬ ಯಾವ ಭೇದವನ್ನು ಮಾಡದೆ ಆಶೀರ್ವದಿಸುವನು. .

ರೂಪಕ ಅಲಂಕಾರ

Translation Manual :: Just-in-Time Learning Modules :: Figures of Speech :: Metaphor

ವಿವರಣೆ

ರೂಪಕ ಎಂಬುದು ಅಲಂಕಾರವಾಗಿದೆ, ಈ ಅಲಂಕಾರದಲ್ಲಿ ಒಬ್ಬನು ಒಂದು ವಸ್ತುವಿನ ಕುರಿತು ಮಾತನಾಡುವಾಗ ಅದನ್ನು ವಿಭಿನ್ನ ವಸ್ತುವೋ ಎಂಬಂತೆ ಮಾತನಾಡುತ್ತಾನೆ ಏಕೆಂದರೆ ಜನರು ಆ ಎರಡು ವಸ್ತುಗಳು ಹೇಗೆ ಸಮಾನವಾಗಿವೆ ಎಂಬುದರ ಬಗ್ಗೆ ಯೋಚಿಸಬೇಕೆಂದು ಅವನು ಬಯಸುತ್ತಾನೆ.

ಉದಾಹರಣೆಗೆ, ಒಬ್ಬನು ಹೀಗೆ ಹೇಳಬಹುದು:

  • ನಾನು ಪ್ರೀತಿಸುವ ಹುಡುಗಿ ಕೆಂಪಾದ ಗುಲಾಬಿ.

ಹುಡುಗಿ ಮತ್ತು ಗುಲಾಬಿ ಎಂಬ ವಸ್ತುಗಳು ತುಂಬಾ ವಿಭಿನ್ನವಾದ ವಸ್ತುಗಳಾಗಿವೆ, ಆದರೆ ಮಾತನಾಡುವವನು ಅವುಗಳು ಯಾವುದೋ ಒಂದು ರೀತಿಯಲ್ಲಿ ಸಮಾನವಾಗಿವೆ ಎಂದು ಪರಿಗಣಿಸುತ್ತಾನೆ. ಅವುಗಳು ಯಾವ ರೀತಿಯಲ್ಲಿ ಸಮಾನವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದದ್ದು ಕೇಳುಗರ ಕರ್ತವ್ಯವಾಗಿದೆ.

ರೂಪಕ ಅಲಂಕಾರದ ಭಾಗಗಳು

ಮೇಲಿನ ಉದಾಹರಣೆಯು ಒಂದು ರೂಪಕಾಲಂಕಾರದಲ್ಲಿ ಮೂರು ಭಾಗಗಳಿವೆ ಎಂಬುದನ್ನು ತೋರಿಸುತ್ತದೆ. ಈ ರೂಪಕ ಅಲಂಕಾರದಲ್ಲಿ, ಮಾತನಾಡುವವನು “ತಾನು ಪ್ರೀತಿಸುವ ಹುಡುಗಿಯ” ಬಗ್ಗೆ ಮಾತನಾಡುತ್ತಿದ್ದಾನೆ. ಇದು ಉಪಮೇಯ. ಮಾತನಾಡುವವನು ಅವಳಿಗೂ ಮತ್ತು “ಕೆಂಪಾದ ಗುಲಾಬಿಗೂ” ನಡುವೆಯಿರುವ ಸಾಮ್ಯತೆ ಏನು ಎಂಬುದರ ಬಗ್ಗೆ ಕೇಳುಗನು ಯೋಚಿಸಬೇಕೆಂದು ಬಯಸುತ್ತಾನೆ. ಕೆಂಪಾದ ಗುಲಾಬಿಯು ಅವನು ಹುಡುಗಿಯನ್ನು ಹೋಲಿಸುತ್ತಿರುವುದರ ಉಪಮಾನ ಆಗಿದೆ. ಬಹುಶಃ, ಕೇಳುಗನು ಅವೆರಡೂ ಸುಂದರವಾಗಿವೆ ಎಂದು ಯೋಚಿಸಬೇಕೆಂದು ಅವನು ಬಯಸುತ್ತಾನೆ. ಇದು ಹುಡುಗಿ ಮತ್ತು ಗುಲಾಬಿ ಇವೆರಡರಲ್ಲಿರುವ ಗುಣ ಆಗಿದೆ, ಆದ್ದರಿಂದ ನಾವು ಇದನ್ನು ಹೋಲಿಕೆಯ ಅಂಶ ಎಂದೂ ಕರೆಯಬಹುದು.

ರೂಪಕ ಅಲಂಕಾರದಲ್ಲಿ ಮೂರು ಭಾಗಗಳಿವೆ:

  • ಉಪಮೇಯ, ಎಂಬುದು ಬರಹಗಾರನು/ಮಾತನಾಡುವವನು ಕೂಡಲೇ ಚರ್ಚಿಸುವಂಥ ವಿಷಯವಾಗಿದೆ.

  • ಉಪಮಾನ - ಉಪಮೇಯನ್ನು ವಿವರಿಸಲು ಮಾತನಾಡುವವನು ಬಳಸುವ ಭೌತಿಕ ವಿಷಯವಾಗಿದೆ (ವಸ್ತು, ಘಟನೆ, ಕಾರ್ಯ, ಇತ್ಯಾದಿ).

  • ಉಪಮಾನ ಮತ್ತು ಉಪಮೇಯ ಹೇಗೆ ಸಾಮ್ಯತೆ ಉಳ್ಳವುಗಳಾಗಿವೆ ಎಂಬುದನ್ನು ಯೋಚಿಸುವಾಗ ಭೌತಿಕ ಉಪಮಾನವು ಕೇಳುಗರ ಮನಸ್ಸಿನಲ್ಲಿ ಉಂಟುಮಾಡುವ ಭಾವವಾಚಕ ಪರಿಕಲ್ಪನೆ ಅಥವಾ ಲಕ್ಷಣವೇ ಗುಣ ಆಗಿದೆ. ಅನೇಕಸಾರಿ, ರೂಪಕ ಅಲಂಕಾರದಲ್ಲಿರುವ ಗುಣವನ್ನು ಸತ್ಯವೇದದಲ್ಲಿ ಸ್ಪಷ್ಟವಾಗಿ ಬರೆಯಲಾಗಿಲ್ಲ, ಆದರೆ ಸಂದರ್ಭವೇ ಇದನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಕೇಳುಗರು ಅಥವಾ ಓದುಗರು ತಾವೇ ಗುಣದ ಕುರಿತು ಯೋಚಿಸಬೇಕಾಗುತ್ತದೆ.

ರೂಪಕ ಅಲಂಕಾರ ಎಂಬುದು ಭೌತಿಕ ಉಪಮಾನವನ್ನು ಬಳಸಿಕೊಂಡು ಮಾತನಾಡುವವನು ಹೇಳುತ್ತಿರುವ ಉಪಮೇಯಕ್ಕೆ ಭಾವವಾಚಕ ಗುಣವನ್ನು ಅನ್ವಯಿಸುವ ಅಲಂಕಾರವಾಗಿದೆ ಎಂದು ಈ ಪದಗಳನ್ನು ಬಳಸಿಕೊಂಡು ನಾವು ಹೇಳಬಹುದು.

ಸಾಮಾನ್ಯವಾಗಿ, ಉಪಮೇಯದ ಬಗ್ಗೆ ಏನನ್ನಾದರೂ ವ್ಯಕ್ತಪಡಿಸಲು ಬರಹಗಾರನು ಅಥವಾ ಮಾತನಾಡುವವನು ಉಪಮೇಯ ಮತ್ತು ಉಪಮಾನದ ನಡುವೆಯಿರುವ ಕನಿಷ್ಠ ಒಂದು ಹೋಲಿಕೆಯ ಅಂಶದ (ಗುಣ) ಒಟ್ಟಿಗೆ ರೂಪಕ ಅಲಂಕಾರವನ್ನು ಬಳಸುತ್ತಾನೆ. ಸಾಮಾನ್ಯವಾಗಿ ರೂಪಕ ಅಲಂಕಾರಗಳಲ್ಲಿ, ಉಪಮೇಯವನ್ನು ಮತ್ತು ಉಪಮಾನವನ್ನು ಸ್ಪಷ್ಟವಾಗಿ ತಿಳಿಸುತ್ತಾರೆ, ಆದರೆ ಗುಣವನ್ನು ಮಾತ್ರ ಸೂಚಿಸುತ್ತಾರೆ. ಉಪಮೇಯ ಮತ್ತು ಉಪಮಾನದ ನಡುವೆಯಿರುವ ಸಾಮ್ಯತೆಯ ಬಗ್ಗೆ ಯೋಚಿಸುವುದಕ್ಕೆ ಮತ್ತು ತಿಳಿಸಲ್ಪಟ್ಟಿರುವ ಗುಣವನ್ನು ತಾವೇ ಗ್ರಹಿಸಿಕೊಳ್ಳುವುದಕ್ಕೆ ಓದುಗರನ್ನು/ಕೇಳುಗರನ್ನು ಆಹ್ವಾನಿಸಲು ಬರಹಗಾರನು/ಮಾತನಾಡುವವನು ಹೆಚ್ಚಾಗಿ ರೂಪಕ ಅಲಂಕಾರವನ್ನು ಬಳಸುತ್ತಾನೆ.

ಮಾತನಾಡುವವರು ತಮ್ಮ ಸಂದೇಶವನ್ನು ಬಲಗೊಳಿಸಲು, ತಮ್ಮ ಭಾಷೆಯನ್ನು ಹೆಚ್ಚು ಸ್ಪಷ್ಟಗೊಳಿಸಲು, ತಮ್ಮ ಭಾವನೆಗಳನ್ನು ಉತ್ತಮವಾಗಿ ವ್ಯಕ್ತಪಡಿಸಲು, ಬೇರೆ ರೀತಿಯಲ್ಲಿ ಹೇಳಲು ಕಷ್ಟಕರವಾದದ್ದನ್ನು ಹೇಳಲು ಅಥವಾ ಜನರು ತಮ್ಮ ಸಂದೇಶವನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡಲು ರೂಪಕ ಅಲಂಕಾರಗಳನ್ನು ಹೆಚ್ಚಾಗಿ ಬಳಸುತ್ತಾರೆ.

ಕೆಲವೊಮ್ಮೆ ಮಾತನಾಡುವವರು ತಮ್ಮ ಭಾಷೆಯಲ್ಲಿ ಬಹಳ ಸಾಮಾನ್ಯವಾಗಿರುವ ರೂಪಕ ಅಲಂಕಾರಗಳನ್ನು ಬಳಸುತ್ತಾರೆ. ಆದಾಗ್ಯೂ, ಕೆಲವೊಮ್ಮೆ ಮಾತನಾಡುವವರು ಅಸಾಮಾನ್ಯವಾದ ರೂಪಕ ಅಲಂಕಾರಗಳನ್ನು, ವಿಶಿಷ್ಟವಾಗಿರುವ ಇನ್ನೂ ಕೆಲವು ರೂಪಕ ಅಲಂಕಾರಗಳನ್ನು ಸಹ ಬಳಸುತ್ತಾರೆ. ಒಂದು ರೂಪಕ ಅಲಂಕಾರವು ಒಂದು ಭಾಷೆಯಲ್ಲಿ ಬಹಳ ಸಾಮಾನ್ಯವಾಗಿ ಬಿಟ್ಟಾಗ, ಅದು “ನಿಷ್ಕ್ರಿಯ” ರೂಪಕ ಅಲಂಕಾರವಾಗುತ್ತದೆ, ಅಸಾಮಾನ್ಯವಾದ ರೂಪಕ ಅಲಂಕಾರಗಳಿಗೆ ವ್ಯತಿರಿಕ್ತವಾಗಿ, ಇದನ್ನು ನಾವು “ಸಕ್ರಿಯ” ರೂಪಕ ಅಲಂಕಾರ ಎಂದು ವಿವರಿಸುತ್ತೇವೆ. ಪ್ರತಿಯೊಂದು ನಿಷ್ಕ್ರಿಯ ರೂಪಕ ಅಲಂಕಾರಗಳು ಮತ್ತು ಸಕ್ರಿಯ ರೂಪಕ ಅಲಂಕಾರಗಳು ವಿಭಿನ್ನ ರೀತಿಯ ಭಾಷಾಂತರದ ಸಮಸ್ಯೆಯನ್ನು ತಂದೊಡ್ಡುತ್ತವೆ, ಅದನ್ನು ನಾವು ಮುಂದೆ ಚರ್ಚಿಸಲಿದ್ದೇವೆ.

ನಿಷ್ಕ್ರಿಯ ರೂಪಕ ಅಲಂಕಾರಗಳು

ಈ ನಿಷ್ಕ್ರಿಯ ರೂಪಕ ಅಲಂಕಾರವು ಒಂದು ಭಾಷೆಯಲ್ಲಿ ಹೆಚ್ಚಾಗಿ ಬಳಸಲ್ಪಡುವ ಅಲಂಕಾರವಾಗಿದೆ, ಆ ಭಾಷೆಯನ್ನು ಮಾತನಾಡುವವರು ಅದನ್ನು ಒಂದು ಪರಿಕಲ್ಪನೆಗೆ ಬದಲಾಗಿ ಇನ್ನೊಂದು ಪರಿಕಲ್ಪನೆಯನ್ನು ಸೂಚಿಸುತ್ತದೆ ಎಂದು ಪರಿಗಣಿಸುವುದಿಲ್ಲ. ಭಾಷಾಶಾಸ್ತ್ರಜ್ಞರು ಸಾಮಾನ್ಯವಾಗಿ ಇವುಗಳನ್ನು “ಮೃತ ರೂಪಕಗಳು” ಎಂದು ಕರೆಯುತ್ತಾರೆ. ನಿಷ್ಕ್ರಿಯ ರೂಪಕ ಅಲಂಕಾರಗಳು ಸರ್ವೇ ಸಾಧಾರಣವಾಗಿವೆ. ಇದಕ್ಕೆ ಇಂಗ್ಲೀಷ್ ಭಾಷೆಯಲ್ಲಿನ ಉದಾಹರಣೆಗಳೆಂದರೆ “ಮೇಜಿನ ಕಾಲು“ “ವಂಶ ವೃಕ್ಷ” “ಪುಸ್ತಕದ ಎಲೆ” (ಅಂದರೆ ಒಂದು ಪುಸ್ತಕದ ಹಾಳೆ), ಅಥವಾ “ಕ್ರೇನ್” (ಭಾರವಾದ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ಯಂತ್ರ). ಇಂಗ್ಲೀಷ್ ಮಾತನಾಡುವವರು ಇಂತಹ ಪದಗಳಿಗೆ ಒಂದು ಅರ್ಥಕ್ಕಿಂತ ಹೆಚ್ಚು ಅರ್ಥವಿದೆ ಎಂದು ಯೋಚಿಸುವರು. ಉದಾಹರಣೆಗೆ ಸತ್ಯವೇದದ ಹಿಬ್ರೂ ಭಾಷೆಯಲ್ಲಿ “ಕೈ” ಎನ್ನುವುದು “ಬಲವನ್ನು” ಸೂಚಿಸುತ್ತದೆ, “ಮುಖ” ಎನ್ನುವುದು “ಪ್ರಸನ್ನತೆಯನ್ನು” ಸೂಚಿಸುತ್ತದೆ ಮತ್ತು ಭಾವನೆಗಳನ್ನು ಅಥವಾ ನೈತಿಕ ಗುಣಲಕ್ಷಣಗಳನ್ನು ಬಗ್ಗೆ ತಿಳಿಸುವಾಗ “ವಸ್ತ್ರ ಧರಿಸುವುದು” ಎಂಬಂತೆ ಬಳಸುತ್ತಾರೆ.

ವಿನ್ಯಾಸಿತ ಜೋಡಿ ಪರಿಕಲ್ಪನೆಗಳು ರೂಪಕ ಅಲಂಕಾರದಂತೆ ಕಾರ್ಯನಿರ್ವಹಿಸುತ್ತವೆ

ರೂಪಕವಾಗಿ ಮಾತನಾಡುವ ರೀತಿಗಳು ಜೋಡಿ ಪರಿಕಲ್ಪನೆಗಳನ್ನು ಅವಲಂಬಿಸಿರುತ್ತದೆ, ಅದರಲ್ಲಿರುವ ಒಂದು ಪರಿಕಲ್ಪನೆಯು ಅದರಲ್ಲಿರುವ ಇನ್ನೊಂದು ಪರಿಕಲ್ಪನೆಯನ್ನು ಸೂಚಿಸುತ್ತದೆ. ಉದಾಹರಣೆಗೆ ಇಂಗ್ಲೀಷಿನಲ್ಲಿ ಮೇಲೆ/ಏರು (ಆಪ್) ಎಂಬ ದಿಕ್ಕು ಸೂಚಿ ಹೆಚ್ಚು ಅಥವಾ ಉತ್ತಮ (ಕಲ್ಪನೆ) ಎಂಬ ಪರಿಕಲ್ಪನೆಗಳನ್ನು ಸೂಚಿಸುತ್ತದೆ. ಏಕೆಂದರೆ ಈ ಅದರಲ್ಲಿರುವ ಜೋಡಿ ಪರಿಕಲ್ಪನೆಗಳ ಮೂಲಕ ನಾವು ಈ ಕೆಳಗಿನಂತಹ ವಾಕ್ಯಗಳ ರಚನೆಗಳನ್ನು ಮಾಡಬಹುದು: “ಇಂಧನದ ಬೆಲೆ ಏರಿಕೆ ಆಗುತ್ತಿದೆ,” “ಒಬ್ಬ ಅತಿ ಬುದ್ಧಿವಂತನಾದ ಮನುಷ್ಯ” ಮತ್ತು ಕೆಲವೊಮ್ಮೆ ವ್ಯತಿರಿಕ್ತವಾದ ವಿಚಾರಗಳನ್ನು ಮಾಡಬಹುದು: “ತಾಪಮಾನ ಕುಸಿಯುತ್ತಿದೆ” ಮತ್ತು “ನಾನು ತುಂಬಾ ಕುಗ್ಗಿದವನಂತೆ ಭಾವಿಸುತ್ತಿದ್ದೇನೆ.”

ಜಾಗತಿಕವಾಗಿ ಬಳಸುವ ಭಾಷೆಗಳಲ್ಲಿ ವಿನ್ಯಾಸಿತ ಜೋಡಿ ಪರಿಕಲ್ಪನೆಗಳನ್ನು ರೂಪಕವಾದ ಉದ್ದೇಶಗಳಿಗಾಗಿ ನಿರಂತರವಾಗಿ ಬಳಸುತ್ತಾರೆ, ಯಾಕೆಂದರೆ ಆಲೋಚನೆಯನ್ನು ಕ್ರಮವಾಗಿಡಲು ಇವು ಅನುಕೂಲವಾಗಿವೆ. ಸಾಮಾನ್ಯವಾಗಿ ಜನರು ಭಾವವಾಚಕ ಗುಣಗಳನ್ನು ಕುರಿತು ಮಾತನಾಡುವಾಗ (ಬಲ , ಅಸ್ಥಿತ್ವ , ಭಾವನೆಗಳು, ನೈತಿಕಗುಣಗಳು) ಇವುಗಳನ್ನು ದೇಹದ ಅಂಗಾಂಗಗಳೋ, ಅಥವಾ ಕಣ್ಣಿಗೆ ಕಾಣುತ್ತಿರುವ ಅಥವಾ ಮುಟ್ಟಬಹುದಾದಂಥ ವಸ್ತುಗಳೋ, ಅಥವಾ ನೋಡಬಹುದಾದಂಥ ನಡೆಯುತ್ತಿರುವ ಘಟನೆಗಳೋ ಎಂಬಂತೆ ಮಾತನಾಡುತ್ತಾರೆ.

ಈ ಅಲಂಕಾರಗಳನ್ನು ಸಾಮಾನ್ಯ ರೀತಿಯಲ್ಲಿ ಬಳಸುವಾಗ ಮಾತನಾಡುವ ವ್ಯಕ್ತಿ ಅಥವಾ ಶ್ರೋತೃಗಳು ಇವುಗಳನ್ನು ಅಲಂಕಾರಿಕ ಭಾಷೆಯೆಂದು ಎಣಿಸುವರು. ಇಂಗ್ಲೀಷ್ ಭಾಷೆಯಲ್ಲಿ ಕೆಲವು ರೂಪಕ ಅಲಂಕಾರಗಳು ಪರಿಗಣೆನೆಗೆ ಬಾರದೆ ಉಳಿದಿರುವ ಅಂತಹವು:

  • "ಶಾಖವನ್ನು ಏರಿಸು. ಏರಿಸು ಎಂಬ ಪದವನ್ನು ಹೆಚ್ಚಿಸು ಎಂಬಂತೆ ಮಾತನಾಡುತ್ತಾರೆ.
  • “ನಾವು ನಮ್ಮ ವಾದವನ್ನು ಮುಂದುವರೆಸೋಣ”. ಯೋಜಿಸಿದಂತೆ ಮಾಡುವುದನ್ನು ಮುನ್ನಡೆಯೋಣ ಅಥವಾ ಮುಂದುವರೆಸೋಣ ಎಂಬಂತೆ ಮಾತನಾಡುತ್ತಾರೆ.
  • “ನೀವು ನಿಮ್ಮ ವಾದವನ್ನು ಚೆನ್ನಾಗಿ ಸಮರ್ಥಿಸಿಕೊಂಡಿರಿ”. ಕೆಲವೊಮ್ಮೆ ವಾದವಿವಾದವನ್ನು ಯುದ್ಧವು ಎಂಬಂತೆ ಪರಿಗಣಿಸಿ ಮಾತನಾಡುವರು.
  • “ಪದಗಳ ಹರಿವು” ಎಂಬುದರಲ್ಲಿ ಪದಗಳನ್ನು ದ್ರವ್ಯವೋ ಎಂಬಂತೆ ಮಾತನಾಡುತ್ತಾರೆ.

ಇಂಗ್ಲೀಷ್ ಭಾಷೆ ಮಾತನಾಡುವವರು ಇವುಗಳನ್ನು ರೂಪಕವಾದ ಅಭಿವ್ಯಕ್ತಿಗಳಾಗಿ ಅಥವಾ ಅಲಂಕಾರಿಕ ಭಾಷೆಯಾಗಿ ಪರಿಗಣಿಸುವುದಿಲ್ಲ, ಹಾಗಾಗಿ ಇವುಗಳನ್ನು ಜನರು ಅಲಂಕಾರಿಕ ಭಾಷೆಯ ಎಂದು ವಿಶೇಷ ಗಮನ ನೀಡುವಂತೆ ಇತರ ಭಾಷೆಗಳಲ್ಲಿ ಭಾಷಾಂತರಿಸುವುದು ತಪ್ಪಾಗಿರುತ್ತದೆ. ಇಂತಹ ಪ್ರಮುಖ ವಿನ್ಯಾಸವುಳ್ಳ ರೂಪಕ ಅಲಂಕಾರಗಳು ಸತ್ಯವೇದದ ಭಾಷೆಯಲ್ಲಿ ವಿವರಿಸಲಾಗಿದೆ, ಅವುಗಳನ್ನು ಮತ್ತು ಇದು ನಿಮ್ಮನ್ನು ಕರೆದೊಯ್ಯುವ ಪುಟಗಳನ್ನು ದಯವಿಟ್ಟು ನೋಡಿರಿ ಸತ್ಯವೇದದಲ್ಲಿನ ಅಲಂಕಾರಗಳು – ಸಾಮಾನ್ಯ ವಿನ್ಯಾಸಗಳು.

ನಿಷ್ಕ್ರಿಯ ಅಲಂಕಾರಗಳನ್ನು ಇನ್ನೊಂದು ಭಾಷೆಗೆ ಭಾಷಾಂತರಿಸುವಾಗ ಅದನ್ನು ರೂಪಕ ಎಂದು ಪರಿಗಣಿಸಬಾರದು. ಅದರ ಬದಲು ಉದ್ದಿಷ್ಟ ಭಾಷೆಯಲ್ಲಿ ಆ ವಿಷಯಕ್ಕೆ ಅಥವಾ ಪರಿಕಲ್ಪನೆಗೆ ಯಾವ ಅತ್ಯುತ್ತಮ ಭಾವನೆಯನ್ನು ವ್ಯಕ್ತಪಡಿಸಲು ಸಾಧ್ಯವೋ ಅದನ್ನು ಬಳಸಿ.

ಸಕ್ರಿಯ ರೂಪಕ ಅಲಂಕಾರಗಳು

ಇಂತಹ ರೂಪಕ ಅಲಂಕಾರಗಳು ಒಂದು ಪರಿಕಲ್ಪನೆಗೆ ಬದಲಾಗಿ ಇನ್ನೊಂದು ಪರಿಕಲ್ಪನೆಯನ್ನು ಅಥವಾ ಒಂದು ವಸ್ತುವಿಗೆ ಬದಲಾಗಿ ಇನ್ನೊಂದು ವಸ್ತುವನ್ನು ಸೂಚಿಸುತ್ತದೆ ಎಂದು ಜನರು ತಿಳಿದುಕೊಳ್ಳುತ್ತಾರೆ. ಇವುಗಳು ಒಂದು ವಸ್ತು ಇನ್ನೊಂದರಂತೆ ಇರಲು ಹೇಗೆ ಸಾಧ್ಯ ಎಂದು ಜನರು ಯೋಚಿಸುವಂತೆ ಮಾಡುತ್ತದೆ, ಏಕೆಂದರೆ ಅನೇಕ ಸಲ ಈ ಎರಡೂ ವಸ್ತುಗಳು ಭಿನ್ನವಾಗಿರುತ್ತದೆ. ಈ ರೂಪಕ ಅಲಂಕಾರಗಳು ಸಂದೇಶಕ್ಕೆ ಹೆಚ್ಚು ಬಲ ನೀಡುತ್ತದೆ ಮತ್ತು ಸಂದೇಶದಲ್ಲಿ ಅಸಾಧಾರಣ ಗುಣಲಕ್ಷಣಗಳನ್ನು ನೀಡುತ್ತವೆ ಎಂದು ಜನರು ಸುಲಭವಾಗಿ ಗುರುತಿಸುತ್ತಾರೆ. ಈ ಕಾರಣದಿಂದಲೇ ಜನರು ಈ ರೂಪಕ ಅಲಂಕಾರಗಳ ಕಡೆ ಗಮನಹರಿಸುತ್ತಾರೆ. ಉದಾಹರಣೆಗೆ,

ನನ್ನ ನಾಮದಲ್ಲಿ ಭಯಭಕ್ತಿ ಇಟ್ಟಿರುವ ನಿಮಗೋ ಧರ್ಮವೆಂಬ ನೀತಿಸೂರ್ಯನು ತನ್ನ ಕಿರಣಗಳುಳ್ಳ ರೆಕ್ಕೆಯಿಂದ ಸ್ವಸ್ಥತೆಯನ್ನು ಉಂಟುಮಾಡುವನು. (ಮಲಾಕಿ 4:2 ULT)

ಇಲ್ಲಿ ದೇವರು ಆತನ ರಕ್ಷಣೆಯ ಬಗ್ಗೆ ಮಾತನಾಡುವಾಗ ಸೂರ್ಯನು ತನ್ನ ಕಿರಣಗಳನ್ನು ಆತನು ಪ್ರೀತಿಸುವ ಜನರ ಮೇಲೆ ಹೊಳೆಯುವಂತೆ ಮಾಡಲು ಉದಯಿಸುತ್ತಾನೋ ಎಂಬಂತೆ ಮಾತನಾಡುತ್ತಾನೆ. ಆತನು ಸೂರ್ಯನ ಕಿರಣಗಳನ್ನು ರೆಕ್ಕೆಗಳೋ ಎಂಬಂತೆ ಮಾತನಾಡುತ್ತಿದ್ದಾನೆ, ಈ ರೆಕ್ಕೆಗಳು ಆತನ ಜನರನ್ನು ಗುಣಪಡಿಸುವ ಔಷಧಿಯನ್ನು ತರುತ್ತಿವೆಯೋ ಎಂಬಂತೆ ಹೇಳುತ್ತಿದ್ದಾನೆ. ಇಲ್ಲಿ ಇನ್ನೊಂದು ಉದಾಹರಣೆ ಇದೆ:

“ಹೋಗಿ ಆ ನರಿಗೆ ಹೇಳಿರಿ” ಎಂದು ಯೇಸು ಹೇಳಿದನು. (ಲೂಕ 13:32 ULT)

ಇಲ್ಲಿ, “ಆ ನರಿ” ಎಂಬುದು ಹೇರೋದನನ್ನು ಸೂಚಿಸುತ್ತಿದೆ. ಯೇಸುವಿನ ಮಾತನ್ನು ಆಲಿಸುತ್ತಿದ್ದ ಜನರು ಖಂಡಿತವಾಗಿಯೂ ಹೇರೋದನಲ್ಲಿ ನರಿಯಂತಹ ಗುಣಲಕ್ಷಣಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕೆಂದು ಬಯಸಿದನು ಎಂದು ಅರ್ಥಮಾಡಿಕೊಂಡರು. ಇದನ್ನು ಕೇಳಿದ ಜನರು ಹೇರೋದನು ನಾಶಮಾಡುವವನು, ಕೊಲೆಗಡುಕನು ಅಥವಾ ಅವನಿಗೆ ಸೇರದ ವಸ್ತುಗಳನ್ನು, ಆಸ್ತಿಯನ್ನು ಮೋಸದಿಂದ ಕಬಳಿಸುವವನು ಅಥವಾ ಈ ಎಲ್ಲಾ ಗುಣಗಳನ್ನು ಹೊಂದಿರುವ ದುಷ್ಟನಾದ ವ್ಯಕ್ತಿ ಎಂದು ಹೇಳಲು ಯೇಸು ಉದ್ದೇಶಿಸಿದನು ಎಂದು ಅವರು ಅರ್ಥಮಾಡಿಕೊಂಡರು.

ಸಕ್ರಿಯ ರೂಪಕ ಅಲಂಕಾರಗಳನ್ನು ಬಹು ಎಚ್ಚರಿಕೆಯಿಂದ ಸರಿಯಾಗಿ ಭಾಷಾಂತರ ಮಾಡಬೇಕು. ಹಾಗೆ ಮಾಡುವುದಕ್ಕೆ ನಾವು ರೂಪಕ ಅಲಂಕಾರದ ಭಾಗಗಳನ್ನು, ಅವು ಹೇಗೆ ಒಟ್ಟಾಗಿ ಅರ್ಥಪೂರ್ಣವಾಗಿ ಕಾರ್ಯಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು.

“ನಾನೇ ಜೀವ ಕೊಡುವ ರೊಟ್ಟಿ, ನನ್ನ ಬಳಿ ಬರುವವರಿಗೆ ಎಂದಿಗೂ ಹಸಿವೆಯಾಗುವುದಿಲ್ಲ, ನನ್ನನ್ನು ನಂಬುವವನಿಗೆ ಎಂದಿಗೂ ನೀರಡಿಕೆಯಾಗುವುದಿಲ್ಲ” ಎಂದು ಯೇಸು ಅವರಿಗೆ ಹೇಳಿದನು. (ಯೋಹಾನ 6:35 ULT)

ಈ ರೂಪಕ ಅಲಂಕಾರದಲ್ಲಿ ಯೇಸು ತನ್ನನ್ನು ಜೀವ ಕೊಡುವ ರೊಟ್ಟಿ ಎಂದು ಹೇಳಿದ್ದಾನೆ. ಇಲ್ಲಿ “ನಾನು” ಎಂಬುದು ಉಪಮೇಯ ಮತ್ತು “ರೊಟ್ಟಿ” ಎಂಬುದು ಉಪಮಾನ. ರೊಟ್ಟಿ ಎಂಬುದು ಆಗಿನ ಕಾಲದ ಮತ್ತು ಆ ಸ್ಥಳದ ಜನರ ಪ್ರಮುಖ ಆಹಾರವಾಗಿತ್ತು. ಇಲ್ಲಿ ರೊಟ್ಟಿ ಮತ್ತು ಯೇಸುವಿನ ನಡುವೆ ಇರುವ ಸಾಮ್ಯತೆ ಏನೆಂದರೆ ಜನರಿಗೆ ಬದುಕಲು ಇವೆರಡು ಅವಶ್ಯವಾಗಿವೆ ಎಂಬುದೇ. ಶಾರೀರಿಕವಾದ ಜೀವನವನ್ನು ಹೊಂದಲು ಹೇಗೆ ರೊಟ್ಟಿಯನ್ನು ಜನರು ತಿನ್ನುವುದರ ಅ‍ವಶ್ಯಕತೆಯಿದೆಯೋ ಹಾಗೆಯೇ ನಿತ್ಯ ಜೀವವನ್ನು ಹೊಂದಲು ಯೇಸುವನ್ನು ನಂಬಬೇಕು. ಈ ರೂಪಕ ಆಲಂಕಾರದ ಗುಣವು “ಜೀವ” ಆಗಿದೆ. ಈ ಸಂಗತಿಯಲ್ಲಿ ಯೇಸು ರೂಪಕ ಆಲಂಕಾರದ ಮುಖ್ಯ ಗುಣವನ್ನು ತಿಳಿಸಿದನು, ಆದರೆ ಅನೇಕಸಾರಿ ಗುಣವನ್ನು ಸೂಚಿಸಲಾಗುತ್ತದೆ.

ರೂಪಕ ಅಲಂಕಾರಗಳ ಉದ್ದೇಶಗಳು

  • ಜನರಿಗೆ ತಿಳಿಯದ ವಿಷಯವನ್ನು (ಉಪಮೇಯ), ಈಗಾಗಲೇ ಅವರಿಗೆ ತಿಳಿದಿರುವ ವಿಷಯದ ಮೂಲಕ (ಉಪಮಾನ) ಬೋಧಿಸುವುದು ರೂಪಕ ಅಲಂಕಾರದ ಒಂದು ಉದ್ದೇಶವಾಗಿದೆ.
  • ಒಂದು ವಿಷಯದಲ್ಲಿ (ಉಪಮೇಯ) ವಿಶೇಷವಾದ ಗುಣಲಕ್ಷಣ (ಗುಣ) ಎತ್ತಿ ತೋರಿಸುವುದು ಅಥವಾ ಅದರಲ್ಲಿ ತೀವ್ರವಾದ ರೀತಿಯಲ್ಲಿ ಗುಣಲಕ್ಷಣಗಳಿವೆ ಎಂದು ತೋರಿಸುವುದು ಇನ್ನೊಂದು ಉದ್ದೇಶವಾಗಿದೆ.
  • ಜನರು ಉಪಮಾನದ ಬಗ್ಗೆ ಹೇಗೆ ಭಾವಿಸುತ್ತಾರೋ ಹಾಗೆಯೇ ಉಪಮೇಯ* ಬಗ್ಗೆಯೂ ಭಾವಿಸುವುದಕ್ಕಾಗಿ ಜನರನ್ನು ಮುನ್ನಡೆಸುವುದು ಇನ್ನೊಂದು ಉದ್ದೇಶವಾಗಿದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  • ಕೆಲವೊಮ್ಮೆ ಜನರು ರೂಪಕ ಅಲಂಕಾರವೆಂಬುದನ್ನು ಗುರುತಿಸಲು ಸಮರ್ಥರಾಗಿರುವುದಿಲ್ಲ. ಅವರು ರೂಪಕ ಅಲಂಕಾರದ ವಾಕ್ಯವನ್ನು ವಾಚ್ಯಾರ್ಥದ ವಾಕ್ಯದಂತೆ ತಿಳಿದುಕೊಳ್ಳುವುದರಿಂದ ನಿಜವಾದ ಅರ್ಥವನ್ನು ಅಪಾರ್ಥ ಮಾಡಿಕೊಳ್ಳುವರು.
  • ಜನರಿಗೆ ಉಪಮಾನವಾಗಿ ಬಳಸಿರುವ ವಸ್ತುವಿನ ಬಗ್ಗೆ ಗೊತ್ತಿಲ್ಲದಿರುವುದರಿಂದ ರೂಪಕ ಅಲಂಕಾರವನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ.
  • ಉಪಮೇಯವನ್ನು ತಿಳಿಸದಿದ್ದರೆ ಉಪಮೇಯ ಏನೆಂಬುದು ಜನರಿಗೆ ತಿಳಿಯುವುದಿಲ್ಲ.
  • ಮಾತನಾಡುವವನು ಜನರು ಅರ್ಥಮಾಡಿಕೊಳ್ಳಬೇಕೆಂದು ಬಯಸುವ ಹೋಲಿಕೆಯ ಅಂಶಗಳನ್ನು ಜನರು ಅರ್ಥಮಾಡಿಕೊಳ್ಳದಿರಬಹುದು. ಅವರು ಹೋಲಿಕೆಯ ಅಂಶಗಳ ಬಗ್ಗೆ ಯೋಚಿಸದಿದ್ದರೆ ಅವರು ರೂಪಕ ಅಲಂಕಾರವನ್ನು ಅರ್ಥಮಾಡಿಕೊಳ್ಳಲಾರರು.
  • ಜನರು ತಾವು ರೂಪಕ ಅಲಂಕಾರಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆವು ಎಂದು ಭಾವಿಸುತ್ತಾರೆ ಆದರೆ ಅದು ಅವರಿಗೆ ಅರ್ಥವಾಗಿರುವುದಿಲ್ಲ. ಇಂತಹ ಸನ್ನಿವೇಶ ಅವರು ಸತ್ಯವೇದದ ಸಾಂಸ್ಕೃತಿಕ ಹಿನ್ನಲೆಯಲ್ಲಿ ಹೋಲಿಕೆಗಳನ್ನು ಬಳಸದೆ ತಮ್ಮ ಸಾಂಸ್ಕೃತಿಕ ಹಿನ್ನಲೆಯಲ್ಲಿ ಬಳಸಿದಾಗ ಉಂಟಾಗಬಹುದು.

ಭಾಷಾಂತರದ ತತ್ವಗಳು

  • ಮೂಲ ಭಾಷೆಯ ಶ್ರೋತೃಗಳಿಗೆ ಹೇಗೆ ತಿಳಿಸಿದ್ದಾರೋ ಅದೇ ರೀತಿ ಉದ್ದಿಷ್ಟ ಭಾಷೆಯ ಶ್ರೋತೃಗಳಿಗೂ ಅರ್ಥವಾಗುವಂತೆ ರೂಪಕ ಅಲಂಕಾರಗಳ ಅರ್ಥ ಸ್ಪಷ್ಟವಾಗಿ ತಿಳಿಸಿರಿ.
  • ರೂಪಕ ಅಲಂಕಾರದ ಅರ್ಥವು ಮೂಲ ಭಾಷೆಯ ಶ್ರೋತೃಗಳಿಗೆ ತಿಳಿಸಿದಂತೆ ಉದ್ದಿಷ್ಟ ಭಾಷೆಯ ಜನರಿಗೆ ತಿಳಿಸಬೇಕೇ ಹೊರತು ತೀರಾ ಸ್ಪಷ್ಟವಾಗಿ ತಿಳಿಸಬಾರದು.

ಸತ್ಯವೇದದಲ್ಲಿನ ಉದಾಹರಣೆಗಳು

ಭಾಷಾನಿನ ಆಕಳುಗಳಾದ ನೀವು, ಈ ಮಾತಿಗೆ ಕಿವಿಗೊಡಿರಿ (ಅಮೋಸ 4:1 ULT)

ಈ ರೂಪಕ ಅಲಂಕಾರದ ಮೂಲಕ ಆಮೋಸನು ಸಮಾರ್ಯದ ಉನ್ನತ ವರ್ಗದ ಮಹಿಳೆಯರನ್ನು ಕುರಿತು ಮಾತನಾಡುವಾಗ (“ನೀವು” ಎಂಬುದು ಉಪಮೇಯ) ಅವರು ಆಕಳು ಎಂಬಂತೆ ಮಾತನಾಡುತ್ತಾನೆ (ಉಪಮಾನ). ಆಮೋಸನು ಇಲ್ಲಿ ಮಹಿಳೆಯರು ಮತ್ತು ಆಕಳುಗಳ ನಡುವೆ ಯಾವ ಸಾಮ್ಯತೆ ಇದೆ ಎಂಬುದನ್ನು ಹೇಳುತ್ತಿಲ್ಲ. ಶ್ರೋತೃಗಳು ತಾವೇ ಅದರ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ತಮ್ಮ ಸಾಂಸ್ಕೃತಿಕ ಹಿನ್ನೆಲೆಯ ಜ್ಞಾನದಿಂದ ಸುಲಭವಾಗಿ ತಿಳಿದು ಕೊಳ್ಳುವರು ಎಂದು ನಿರೀಕ್ಷಿಸುತ್ತಾನೆ. ಈ ವಿಷಯ ಸಂದರ್ಭದ ಮೂಲಕ ಆಮೋಸನು ಆಕಳು ಮತ್ತು ಮಹಿಳೆಯರು ಇಬ್ಬರೂ ಒಂದೇ ಗುಣವುಳ್ಳವರು, ಇಬ್ಬರೂ ದಪ್ಪ ಇದ್ದಾರೆ ಮತ್ತು ಹೆಚ್ಚು ಹೆಚ್ಚು ತಿನ್ನಲು ಆಸಕ್ತಿ ಉಳ್ಳವರು ಎಂದು ಹೇಳಿದ್ದಾನೆ. ಇದರಲ್ಲಿ ನಾವು ಸಾಂಸ್ಕೃತಿಕ ಹೋಲಿಕೆಯ ಅಂಶಗಳನ್ನು ನೋಡಿದರೆ ಹಸುಗಳನ್ನು ಪವಿತ್ರವಾದುವು ಎಂದು ಪೂಜಿಸುವರಿಗೆ ಇಂತಹ ಸಂದರ್ಭದಲ್ಲಿ ಆಮೋಸನ ಹೋಲಿಕೆ ತಪ್ಪಾಗಬಹುದು.

ಗಮನಿಸಿರಿ: ಆಮೋಸನು ನಿಜವಾಗಿಯೂ ಮಹಿಳೆಯರನ್ನು ಆಕಳುಗಳು ಎಂದು ಹೇಳಿಲ್ಲ. ಅವನು ಅವರನ್ನು ಮನುಷ್ಯರಂತೆ ಗುರುತಿಸಿ ಮಾತನಾಡುತ್ತಿದ್ದಾನೆ.

ಈಗಲಾದರೋ ಯೆಹೋವನೇ ನೀನು ನಮ್ಮ ತಂದೆಯಾಗಿದ್ದೀ ನಾವು ಜೇಡಿಮಣ್ಣು, ನೀನು ನಮ್ಮ ಕುಂಬಾರನು, ನಾವೆಲ್ಲರೂ ನಿನ್ನ ಕೈಕೆಲಸವೇ. (ಯೆಶಾಯ 64:8 ULT)

ಮೇಲಿನ ಉದಾಹರಣೆಯಲ್ಲಿ ಸಂಬಂಧಿತ ಎರಡು ರೂಪಕ ಅಲಂಕಾರಗಳಿವೆ. ಇಲ್ಲಿ “ನಾವು” ಮತ್ತು “ನೀನು” ಎಂಬುದು ಉಪಮೇಯಗಳು ಮತ್ತು “ಜೇಡಿಮಣ್ಣು” ಹಾಗೂ “ಕುಂಬಾರ” ಎಂಬುದು ಉಪಮಾನಗಳು ಆಗಿವೆ. ಇಲ್ಲಿ ಕುಂಬಾರನಿಗೂ ಮತ್ತು ದೇವರಿಗೂ ನಡುವೆಯಿರುವ ಸಾಮ್ಯತೆ ಎಂದರೆ ಇಬ್ಬರೂ ತಮ್ಮ ಸಾಮಾಗ್ರಿಗಳಿಂದ ತಾವು ಉದ್ದೇಶಿಸಿದ್ದನ್ನು ಉಂಟುಮಾಡುತ್ತಾರೆ. ಕುಂಬಾರನು ಜೇಡಿಮಣ್ಣಿನಿಂದ ತಾನು ಬಯಸಿದ ರೀತಿಯಲ್ಲಿ ಮಾಡುತ್ತಾನೆ, ದೇವರು ತನ್ನ ಜನರಿಂದ ತಾನು ಬಯಸಿದಂತೆ ಮಾಡುತ್ತಾನೆ. ಇಲ್ಲಿ ಕುಂಬಾರನ ಜೇಡಿಮಣ್ಣು ಮತ್ತು ನಾವು ಎಂಬುದರ ನಡುವಿನ ಹೋಲಿಕೆಯ ಅಂಶಗಳನ್ನು ಜೇಡಿಮಣ್ಣಾಗಲೀ ಅಥವಾ ನಾವು ಯಾವ ರೀತಿ ಸೃಷ್ಟಿಯಾದರೂ ಅದನ್ನು ಪ್ರಶ್ನಿಸುವ ಅಧಿಕಾರವಾಗಲೀ ಅಥವಾ ಹಕ್ಕಾಗಲೀ ನಮಗೆ ಇರುವುದಿಲ್ಲ ಎಂಬ ವಿಚಾರವನ್ನು ವ್ಯಕ್ತಪಡಿಸಲಾಗಿದೆ.

ಯೇಸು ಅವರಿಗೆ “ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ” ಎಂದು ಹೇಳಿದನು. ಅದಕ್ಕೆ ಶಿಷ್ಯರು, “ನಾವು ರೊಟ್ಟಿಬುತ್ತಿಗಳನ್ನು ಕಟ್ಟಿಕೊಳ್ಳದೇ ಬಂದೆವಲ್ಲಾ” ಅದಕ್ಕೆ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. (ಮತ್ತಾಯ 16:6-7 ULT)

ಯೇಸು ಇಲ್ಲಿ ರೂಪಕ ಅಲಂಕಾರವನ್ನು ಬಳಸಿದನು, ಆದರೆ ಆತನ ಶಿಷ್ಯರು ಅದನ್ನು ಅರ್ಥಮಾಡಿಕೊಳ್ಳಲಿಲ್ಲ. ಇಲ್ಲಿ ಯೇಸು “ಹುಳಿಹಿಟ್ಟು” ಎಂದು ಹೇಳಿದಾಗ ಆತನು ರೊಟ್ಟಿಯ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ಅವರು ಭಾವಿಸಿದರು, ಆದರೆ ಈ ರೂಪಕ ಆಲಂಕಾರದಲ್ಲಿ “ಹುಳಿಹಿಟ್ಟು” ಎಂಬುದು ಉಪಮಾನವಾಗಿತ್ತು, ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯು ಉಪಮೇಯವಾಗಿತ್ತು. ಇಲ್ಲಿ ಆತನ ಶಿಷ್ಯರು (ಮೂಲ ಶ್ರೋತೃಗಳು) ಯೇಸು ಯಾವ ಉದ್ದೇಶದಿಂದ ಇದನ್ನು ಹೇಳಿದ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಹೋದುದರಿಂದ ಇಲ್ಲಿ ಅದನ್ನು ತೀರಾ ಸ್ಪಷ್ಟವಾಗಿ ಹೇಳುವುದು ಸರಿಯಲ್ಲ.

ಭಾಷಾಂತರದ ಕಾರ್ಯತಂತ್ರಗಳು

ಮೂಲ ಓದುಗರು ರೂಪ ಅಲಂಕಾರವನ್ನು ಸರಿಯಾಗಿ ಅರ್ಥಮಾಡಿಕೊಂಡ ಪ್ರಕಾರವೇ ಜನರು ಅದನ್ನು ಅರ್ಥಮಾಡಿಕೊಳ್ಳುವುದಾದರೆ ಅದನ್ನು ಹಾಗೆಯೇ ಬಳಕೆ ಮಾಡಿರಿ. ನೀವು ಭಾಷಾಂತರ ಮಾಡಿದ ಮೇಲೆ ನಿಮ್ಮ ಜನರು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ.

ಹಾಗೆ ಓದುಗರು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಕೆಳಗೆ ಕೊಟ್ಟಿರುವ ಕಾರ್ಯತಂತ್ರಗಳನ್ನು ಬಳಸಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಬಹುದು.

  1. ಮೂಲ ಭಾಷೆಯಲ್ಲಿ ರೂಪಕ ಅಲಂಕಾರವು ಸಾಮಾನ್ಯರೀತಿಯಲ್ಲಿ ಅಭಿವ್ಯಕ್ತವಾದರೆ ಅಥವಾ ಸತ್ಯವೇದದ ಭಾಷೆಯಲ್ಲಿ ವಿನ್ಯಾಸಿತ ಜೋಡಿ ಪರಿಕಲ್ಪನೆಗಳನ್ನು ವ್ಯಕ್ತಪಡಿಸಿದರೆ (ನಿಷ್ಕ್ರಿಯ ರೂಪಕ ಅಲಂಕಾರ), ಆಗ ಗುಣವನ್ನು ನಿಮ್ಮ ಭಾಷೆಯಲ್ಲಿ ಸರಳವಾದ ರೀತಿಯಲ್ಲಿ ವ್ಯಕ್ತಪಡಿಸಬಹುದು.
  2. ರೂಪಕ ಅಲಂಕಾರವು ಸಕ್ರಿಯ ರೂಪಕವಾಗಿದ್ದರೆ, ಸತ್ಯವೇದದಲ್ಲಿರುವ ಅದೇ ಅರ್ಥವನ್ನು ಕೊಡುವ ರೀತಿಯಲ್ಲಿ ಉದ್ದಿಷ್ಟ ಭಾಷೆಯಲ್ಲೂ ರೂಪಕ ಅಲಂಕಾರವನ್ನು ಬಳಸಲಾಗಿದೆ ಎಂದು ನೀವು ಭಾವಿಸುವುದಾದರೆ ನೀವು ಅದನ್ನು ಯಥಾವತ್ತಾಗಿ ಭಾಷಾಂತರಿಸಬಹುದು. ನೀವು ಈ ರೀತಿ ಮಾಡಿದರೆ ನಿಮ್ಮ ಭಾಷಾ ಸಮುದಾಯದವರು ಇದನ್ನು ಸರಿಯಾಗಿ ಅರ್ಥಮಾಡಿ ಕೊಳ್ಳುತ್ತಾರೆಯೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ.
  3. ಉದ್ದಿಷ್ಟ ಭಾಷೆಯ ಶ್ರೋತೃವು ಅದು ರೂಪಕ ಅಲಂಕಾರವಾಗಿದೆ ಎಂದು ಅರ್ಥಮಾಡಿಕೊಳ್ಳದಿದ್ದರೆ ಆಗ ಅದನ್ನು ಉಪಮಾ ಅಲಂಕಾರವನ್ನಾಗಿ ಬದಲಾಯಿಸಿ. ಕೆಲವು ಭಾಷೆಯಲ್ಲಿ ಇಂತಹ ವಾಕ್ಯಗಳಿಗೆ “ಅಂತೆ” ಅಥವಾ “ಹಾಗೆ” ಎಂಬ ಪದಗಳನ್ನು ಬಳಸಿ ವಾಕ್ಯಮಾಡುತ್ತಾರೆ. ನೋಡಿರಿ ಉಪಮಾಲಂಕಾರ.
  4. ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ ಉಪಮಾನದ ಬಗ್ಗೆ ತಿಳಿಯದಿದ್ದರೆ ಆ ಗುಣವನ್ನು ಹೇಗೆ ಭಾಷಾಂತರಿಸಬೇಕು ಎಂಬ ವಿಷಯಗಳನ್ನು ತಿಳಿಯಲು. ಇದನ್ನು ನೋಡಿರಿ ಗೊತ್ತಿಲ್ಲದುದರ ಭಾಷಾಂತರ
  5. ಉದ್ದಿಷ್ಟ ಭಾಷೆಯ ಶ್ರೋತೃಗಳು ಆ ಅರ್ಥಕ್ಕಾಗಿ ಆ ಉಪಮಾನವನ್ನು ಬಳಸದಿರುವುದಾದರೆ ನಿಮ್ಮ ಸಂಸ್ಕೃತಿಯಲ್ಲಿ ಬಳಸುವ ಉಪಮಾನವನ್ನು ಬಳಸಿಕೊಳ್ಳಿರಿ. ಆದರೆ ಇಂತಹ ಉಪಮಾನವು ಸತ್ಯವೇದದ ಕಾಲದಲ್ಲಿ ಬಳಕೆಯಾದ ವಿಷಯಗಳಾಗಿದ್ದವು ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
  6. ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ ಉಪಮೇಯದ ಬಗೆ ತಿಳಿಯದೆ ಇದ್ದರೆ ನೀವು ಉಪಮೇಯವನ್ನು ಸ್ಪಷ್ಟವಾಗಿ ತಿಳಿಸಿರಿ. (ಆದರೆ ಮೂಲ ಭಾಷೆಯ ಶ್ರೋತೃಗಳಿಗೆ ಉಪಮೇಯ ಬಗ್ಗೆ ತಿಳಿಯದೆ ಇದ್ದರೆ ಹೀಗೆ ಮಾಡಬೇಡಿ)
  7. ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ ಉಪಮೇಯ ಮತ್ತು ಉಪಮಾನದ ನಡುವೆಯಿರುವ ಸಾಮ್ಯತೆಯು (ಗುಣ) ತಿಳಿಯದಿರುವುದಾದರೆ ಆಗ ಸ್ಪಷ್ಟವಾಗಿ ತಿಳಿಸುವುದು ಅಗತ್ಯವಾಗಿರುತ್ತದೆ.
  8. ಈ ಎಲ್ಲಾ ಕಾರ್ಯತಂತ್ರಗಳು ತೃಪ್ತಿಕರವಾಗದಿದ್ದರೆ ಗುಣವನ್ನು ರೂಪಕಗಳನ್ನು ಬಳಸದೆ ಸರಳವಾಗಿ ವಾಕ್ಯದಲ್ಲಿ ತಿಳಿಸಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಮೂಲ ಭಾಷೆಯಲ್ಲಿ ರೂಪಕ ಅಲಂಕಾರವು ಸಾಮಾನ್ಯರೀತಿಯಲ್ಲಿ ಅಭಿವ್ಯಕ್ತವಾದರೆ ಅಥವಾ ಸತ್ಯವೇದದ ಭಾಷೆಯಲ್ಲಿ ವಿನ್ಯಾಸಿತ ಜೋಡಿ ಪರಿಕಲ್ಪನೆಗಳನ್ನು ವ್ಯಕ್ತಪಡಿಸಿದರೆ (ನಿಷ್ಕ್ರಿಯ ರೂಪಕ ಅಲಂಕಾರ), ಆಗ ಗುಣವನ್ನು ನಿಮ್ಮ ಭಾಷೆಯಲ್ಲಿ ಸರಳವಾದ ರೀತಿಯಲ್ಲಿ ವ್ಯಕ್ತಪಡಿಸಬಹುದು.

ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬುವವನು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು. (ಮಾರ್ಕ 5:22 ULT)

ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬುವವನು ಬಂದು ಆತನನ್ನು ಕಂಡಾಗ, ಆತನ ಮುಂದೆ ತಲೆಬಾಗಿ ನಮಸ್ಕರಿಸಿದನು.

(2) ರೂಪಕ ಅಲಂಕಾರವು ಸಕ್ರಿಯ ರೂಪಕವಾಗಿದ್ದರೆ, ಸತ್ಯವೇದದಲ್ಲಿರುವ ಅದೇ ಅರ್ಥವನ್ನು ಕೊಡುವ ರೀತಿಯಲ್ಲಿ ಉದ್ದಿಷ್ಟ ಭಾಷೆಯಲ್ಲೂ ರೂಪಕ ಅಲಂಕಾರವನ್ನು ಬಳಸಲಾಗಿದೆ ಎಂದು ನೀವು ಭಾವಿಸುವುದಾದರೆ ನೀವು ಅದನ್ನು ಯಥಾವತ್ತಾಗಿ ಭಾಷಾಂತರಿಸಬಹುದು. ನೀವು ಈ ರೀತಿ ಮಾಡಿದರೆ ನಿಮ್ಮ ಭಾಷಾ ಸಮುದಾಯದವರು ಇದನ್ನು ಸರಿಯಾಗಿ ಅರ್ಥಮಾಡಿ ಕೊಳ್ಳುತ್ತಾರೆಯೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ.

ನಿಮ್ಮ ಕಠಿಣ ಹೃದಯಗಳ ನಿಮಿತ್ತ ಅವನು ನಿಮಗೆ ಇಂತಹ ಆಜ್ಞೆ ಬರೆದನು (ಮಾರ್ಕ 10:5 ULT)

ನಿಮ್ಮ ಕಠಿಣ ಹೃದಯಗಳ ನಿಮಿತ್ತ ಅವನು ನಿಮಗೆ ಇಂತಹ ಆಜ್ಞೆ ಬರೆದನು.

ಇದರಲ್ಲಿ ಯಾವ ಬದಲಾವಣೆಯನ್ನು ಮಾಡಿಲ್ಲ, ಆದರೆ ಉದ್ದಿಷ್ಟ ಭಾಷೆಯ ಶ್ರೋತೃಗಳು ಈ ರೂಪಕವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವರು ಎಂದು ಪರೀಕ್ಷಿಸಿ ತಿಳಿದುಕೊಳ್ಳಬೇಕು.

(3) ಉದ್ದಿಷ್ಟ ಭಾಷೆಯ ಶ್ರೋತೃವು ಅದು ರೂಪಕ ಅಲಂಕಾರವಾಗಿದೆ ಎಂದು ಅರ್ಥಮಾಡಿಕೊಳ್ಳದಿದ್ದರೆ ಆಗ ಅದನ್ನು ಉಪಮಾ ಅಲಂಕಾರವನ್ನಾಗಿ ಬದಲಾಯಿಸಿ. ಕೆಲವು ಭಾಷೆಯಲ್ಲಿ ಇಂತಹ ವಾಕ್ಯಗಳಿಗೆ “ಅಂತೆ” ಅಥವಾ “ಹಾಗೆ” ಎಂಬ ಪದಗಳನ್ನು ಬಳಸಿ ವಾಕ್ಯಮಾಡುತ್ತಾರೆ.

ಈಗಲಾದರೋ ಯೆಹೋವನೇ, ನೀನು ನಮ್ಮ ತಂದೆಯಾಗಿದ್ದಿ, ನಾವು ಜೇಡಿಮಣ್ಣು ನೀನು ನಮ್ಮ* ಕುಂಬಾರನು*; ಮತ್ತು ನಾವು ನಿನ್ನ ಕೈ ಕೆಲಸವೆ (ಯೆಶಾಯ 64:8 ULT)

ಯೆಹೋವನೇ, ನೀನು ನಮ್ಮ ತಂದೆ; ನಾವು ಜೇಡಿಮಣ್ಣಿನ ಹಾಗೆ ಇದ್ದೇವೆ. ನೀನು ಕುಂಬಾರ ಹಾಗೆ ಇದ್ದಿ; ನಾವೆಲ್ಲರೂ ನಿನ್ನ ಕೈ ಕೆಲಸವೆ.

(4) ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ ಉಪಮಾನದ ಬಗ್ಗೆ ತಿಳಿಯದಿದ್ದರೆ ಆ ಗುಣವನ್ನು ಹೇಗೆ ಭಾಷಾಂತರಿಸಬೇಕು ಎಂಬ ವಿಷಯಗಳನ್ನು ತಿಳಿಯಲು ಇದನ್ನು ನೋಡಿರಿ ಗೊತ್ತಿಲ್ಲದುದರ ಭಾಷಾಂತರ

ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸಿಸುತ್ತೀ? ಮುಳ್ಳುಗೋಲನ್ನು ಒದೆಯುವುದು ನಿನಗೆ ಕಷ್ಟವಾಗುತ್ತದೆ. (ಅ.ಕೃ. 26:14 ULT)

ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ? ಮೊನಚಾದ ಕೋಲನ್ನು ಒದೆಯುವುದು ನಿನಗೆ ತುಂಬಾ ಕಷ್ಟವಾಗುತ್ತದೆ.

(5) ಉದ್ದಿಷ್ಟ ಭಾಷೆಯ ಶ್ರೋತೃಗಳು ಆ ಅರ್ಥಕ್ಕಾಗಿ ಆ ಉಪಮಾನವನ್ನು ಬಳಸದಿರುವುದಾದರೆ ನಿಮ್ಮ ಸಂಸ್ಕೃತಿಯಲ್ಲಿ ಬಳಸುವ ಉಪಮಾನವನ್ನು ಬಳಸಿಕೊಳ್ಳಿರಿ. ಆದರೆ ಇಂತಹ ಉಪಮಾನವು ಸತ್ಯವೇದದ ಕಾಲದಲ್ಲಿ ಬಳಕೆಯಾದ ವಿಷಯಗಳಾಗಿದ್ದವು ಎಂಬುದನ್ನು ಖಚಿತಪಡಿಸಿಕೊಳ್ಳಿರಿ.

ಈಗಲಾದರೋ ಯೆಹೋವನೇ , ನೀನು ನಮ್ಮ ತಂದೆಯಾಗಿದ್ದಿ ನಾವು ಜೇಡಿಮಣ್ಣು ನೀನು ನಮ್ಮ ಕುಂಬಾರನು; ಮತ್ತು ನಾವು ನಿನ್ನ ಕೈ ಕೆಲಸವೆ** (ಯೆಶಾಯ 64:8 ULT)

“ಯೆಹೋವನೇ, ನೀನೇ ನಮ್ಮ ತಂದೆ, ನಾವು ಮರ. ನೀನೇ ನಮ್ಮ ಕೆತ್ತನೆಗಾರ ನಾವು ನಿನ್ನ ಕೈಕೆಲಸ.” "ಯೆಹೋವನೇ, ನೀನೇ ನಮ್ಮ ತಂದೆ, ನಾವು ದಾರದ ಎಳೆ. ನೀನೇ ನಮ್ಮ ನೇಕಾರ; ನಾವೆಲ್ಲರೂ ನಿನ್ನ ಕೈಕೆಲಸ.

(6) ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ ಉಪಮೇಯದ ಬಗೆ ತಿಳಿಯದೆ ಇದ್ದರೆ ನೀವು ಉಪಮೇಯವನ್ನು ಸ್ಪಷ್ಟವಾಗಿ ತಿಳಿಸಿರಿ. (ಆದರೆ ಮೂಲ ಭಾಷೆಯ ಶ್ರೋತೃಗಳಿಗೆ ಉಪಮೇಯ ಬಗ್ಗೆ ತಿಳಿಯದೆ ಇದ್ದರೆ ಹೀಗೆ ಮಾಡಬೇಡಿ)

ಯೆಹೋವನು ಜೀವಸ್ವರೂಪನು; ನನ್ನ ಬಂಡೆಯೇ ನಿನಗೆ ಸ್ತೋತ್ರವಾಗಲಿ. ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ. (ಕೀರ್ತನೆ. 18:46 ULT)

ಯೆಹೋವನು ಜೀವಸ್ವರೂಪನು; ಆತನು ನನ್ನ ಬಂಡೆಯು. ಆತನಿಗೆ ಸ್ತೋತ್ರವಾಗಲಿ. ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ.

(7) ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ ಉಪಮೇಯ ಮತ್ತು ಉಪಮಾನದ ನಡುವೆಯಿರುವ ಸಾಮ್ಯತೆಯು ತಿಳಿಯದಿರುವುದಾದರೆ ಆಗ ಸ್ಪಷ್ಟವಾಗಿ ತಿಳಿಸುವುದು ಅಗತ್ಯವಾಗಿರುತ್ತದೆ.

ಯೆಹೋವನು ಜೀವಸ್ವರೂಪನು; ನನ್ನ ಬಂಡೆಯೇ ನಿನಗೆ ಸ್ತೋತ್ರವಾಗಲಿ. ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ. (ಕೀರ್ತನೆ. 18:46 ULT)

ಯೆಹೋವನು ಜೀವಸ್ವರೂಪನು; ಆತನು ನಾನು ನನ್ನ ಶತ್ರುಗಳಿಂದ ಮರೆಯಾಗಿರುವಂತೆ ಅಡಗಿಕೊಳ್ಳುವ ಬಂಡೆಯಾಗಿರುವುದ್ದರಿಂದ ಆತನು ಸ್ತುತಿಸಲ್ಪಡಲಿ. ನನ್ನನ್ನು ರಕ್ಷಿಸುವ ದೇವರಿಗೆ, ಕೊಂಡಾಟವಾಗಲಿ.

ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸಿಸುತ್ತೀ? ಮುಳ್ಳುಗೋಲನ್ನು ಒದೆಯುವುದು ನಿನಗೆ ಕಷ್ಟವಾಗುತ್ತದೆ. (ಅ.ಕೃ. 26:14 ULT)

ಸೌಲನೇ , ಸೌಲನೇ , ನನ್ನನ್ನು ಏಕೆ ಹಿಂಸಿಸುತ್ತೀ? ನೀನು ಎತ್ತು ಹೇಗೆ ಮಾಲೀಕನ ಮೊನಚಾದ ಕೋಲಿಗೆ ಒದು ಗಾಯಮಾಡಿಕೊಳ್ಳುತ್ತದೋ ಹಾಗೆ ನೀನು ನನ್ನ ವಿರುದ್ಧ ಹೋರಾಡಿ ಗಾಯಗೊಳ್ಳುವಿ.

(8) ಈ ಎಲ್ಲಾ ಕಾರ್ಯತಂತ್ರಗಳು ತೃಪ್ತಿಕರವಾಗದಿದ್ದರೆ ಗುಣವನ್ನು ರೂಪಕಗಳನ್ನು ಬಳಸದೆ ಸರಳವಾಗಿ ವಾಕ್ಯದಲ್ಲಿ ತಿಳಿಸಿರಿ.

ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು (ಮಾರ್ಕ 1:17 ULT)

ನಾನು ನಿಮ್ಮನ್ನು ಜನರನ್ನು ಒಂದುಗೂಡಿಸುವ ಜನರನ್ನಾಗಿ ಮಾಡುತ್ತೇನೆ. ಈಗ ನೀವು ಮೀನುಗಳನ್ನು ಹಿಡಿದು ಒಟ್ಟುಗೂಡಿಸುತ್ತಿದ್ದಿರಿ. ನಾನು ನಿಮ್ಮನ್ನು ಜನರನ್ನು ಒಟ್ಟುಗೂಡಿಸುವವರನ್ನಾಗಿ ಮಾಡುವೆನು.

ನಿರ್ದಿಷ್ಟವಾದ ರೂಪಕ ಅಲಂಕಾರಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸತ್ಯವೇದದ ಅಲಂಕಾರದ – ಸಾಮಾನ್ಯ ರಚನೆಗಳು ಇದನ್ನು ನೋಡಿರಿ.


ಲಕ್ಷಣಾಲಂಕಾರ

Translation Manual :: Just-in-Time Learning Modules :: Figures of Speech :: Metonymy

ವಿವರಣೆ

ಲಕ್ಷಣಾಲಂಕಾರ ಎಂಬುದು ಅಲಂಕಾರವಾಗಿದೆ, ಇದರಲ್ಲಿ ಒಂದು ವಸ್ತು ಅಥವಾ ವಿಷಯವನ್ನು ಅದರ ಹೆಸರಿನಿಂದ ಗುರುತಿಸಿ ಹೇಳದೆ ಅದಕ್ಕೆ ಸಂಬಂಧಿಸಿದ, ಹತ್ತಿರವಾದ ಪದದಿಂದ ಗುರುತಿಸಿ ಹೇಳುವುದು. ಅದಕ್ಕೆ ಸಂಬಂಧಿಸಿದ ಯಾವುದಾದರು ಒಂದು ಪದದ ಬದಲಾಗಿ ಉಪಯೋಗಿಸುವ ಪದ ಅಥವಾ ನುಡಿಗುಚ್ಛವೆ ಲಕ್ಷಣಾಲಂಕಾರ.

ಮತ್ತು ಆತನ ಮಗನಾದ ಯೇಸು ಕ್ರಿಸ್ತನ ರಕ್ತವು ಸಕಲ ಪಾಪದಿಂದ ನಮ್ಮನ್ನು ಶುದ್ಧಿಮಾಡುತ್ತದೆ. (1 ಯೊಹಾನ 1:7 ULT)

ಇಲ್ಲಿ ರಕ್ತ ಎಂಬ ಪದವು ಯೇಸುವಿನ ಮರಣವನ್ನು ಪ್ರತಿನಿಧಿಸುತ್ತದೆ.

ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯಾಗಿದೆ ಎಂದು ಹೇಳಿದನು. (ಲೂಕ 22:20 ULT)

ಪಾತ್ರೆ ಅದರಲ್ಲಿರುವ ದ್ರಾಕ್ಷಾರಸವನ್ನು ಪ್ರತಿನಿಧಿಸುತ್ತದೆ.

ಲಕ್ಷಣಾಲಂಕಾರವನ್ನು ಕೆಳಗೆ ಕೊಟ್ಟಿರುವ ರೀತಿಯಲ್ಲಿ ಉಪಯೋಗಿಸಬಹುದು.

  • ಒಂದು ವಿಷಯವನ್ನು ಸಂಕ್ಷೇಪವಾದ ರೀತಿಯಲ್ಲಿ ಸೂಚಿಸಲು
  • ಭಾವವಾಚಕ ಕಲ್ಪನೆಯನ್ನು ಹೆಚ್ಚು ಅರ್ಥಪೂರ್ಣವಾಗಿ ಸೂಚಿಸಲು ಅದಕ್ಕೆ ಹತ್ತಿರವಿರುವ ಭೌತಿಕ ವಸ್ತುವಿನ ಹೆಸರನ್ನು ಬಳಸುವುದು.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಸತ್ಯವೇದದಲ್ಲಿ ಲಕ್ಷಣಾಲಂಕಾರವನ್ನು ಪದೇಪದೇ ಬಳಸಲಾಗಿದೆ. ಕೆಲವು ಭಾಷೆಯ ಜನರು ಲಕ್ಷಣಾಲಂಕಾರವನ್ನು ಬಳಸುವುದಿಲ್ಲ ಮತ್ತು ಅವರು ಸತ್ಯವೇದವನ್ನು ಓದುವಾಗ ಅದರಲ್ಲಿರುವ ಲಕ್ಷಣಾಲಂಕಾರವನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಅವರು ಲಕ್ಷಣಾಲಂಕಾರವನ್ನು ಅರ್ಥಮಾಡಿಕೊಳ್ಳದಿದ್ದರೆ ಸತ್ಯವೇದದ ವಾಕ್ಯಭಾಗವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅಸಮರ್ಥರಾಗಿ, ತಪ್ಪಾಗಿ ಅರ್ಥಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಲಕ್ಷಣಾಲಂಕಾರವನ್ನು ಉಪಯೋಗಿಸಿದಾಗಲ್ಲೆಲ್ಲಾ ಜನರು ಅದು ಏನನ್ನ ಪ್ರತಿನಿಧಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಮರ್ಥರಾಗಿರಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು

ಕರ್ತನಾದ ದೇವರು ಆತನ ಮೂಲ ಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. (ಲೂಕ 1:32 ULT)

ಸಿಂಹಾಸನ ಎಂಬುದು ರಾಜನ ಆಧಿಕಾರವನ್ನು ಪ್ರತಿನಿಧಿಸುತ್ತದೆ. “ಸಿಂಹಾಸನ” ಎಂಬುದು “ರಾಜನ ಆಧಿಕಾರ,” “ರಾಜತ್ವ” ಅಥವಾ “ಆಳ್ವಿಕೆ” ಎಂಬ ಪದಗಳಿಗಾಗಿ ಬಳಸಿದ ಲಕ್ಷಣಾಲಂಕಾರವಾಗಿದೆ. ಇದರ ಅರ್ಥ ದಾವೀದನು ರಾಜನಾಗಿದ್ದಂತೆ ಈತನನ್ನು ರಾಜನನ್ನಾಗಿ ಮಾಡುತ್ತಾನೆ ಎಂದಾಗಿದೆ.

ತಕ್ಷಣವೇ ಅವನ ಬಾಯಿ ತೆರೆಯಿತು (ಲೂಕ 1:64 ULT)

ಇಲ್ಲಿ “ಬಾಯಿ“ ಎಂಬುದು ಮಾತನಾಡುವ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇದರ ಅರ್ಥ ಮಾತನಾಡಲು ಪುನಃ ಅವನಿಗೆ ಸಾಧ್ಯವಾಯಿತು.

… ಮುಂದೆ ಕಾಣಬರುವ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಉಪದೇಶ ಮಾಡಿದವರು ಯಾರು? (ಲೂಕ 3:7 ULT)

ಇಲ್ಲಿ “ಕೋಪ” ಅಥವಾ “ಸಿಟ್ಟು” ಎಂಬ ಪದವು “ಶಿಕ್ಷೆ” ಎಂಬ ಪದಕ್ಕೆ ಲಕ್ಷಣಾಲಂಕಾರವಾಗಿದೆ. ದೇವರು ಜನರ ಬಗ್ಗೆ ತುಂಬಾ ಕೋಪಗೊಂಡಿದ್ದನು ಅದರ ಪರಿಣಾಮವಾಗಿ ಆತನು ಅವರನ್ನು ಶಿಕ್ಷಿಸುವನು.

ಭಾಷಾಂತರದ ಕಾರ್ಯತಂತ್ರಗಳು

ಜನರು ಲಕ್ಷಣಾಲಂಕಾರವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದಾದರೆ ಅದನ್ನೇ ಬಳಸಬಹುದು. ಇಲ್ಲದಿದ್ದರೆ, ಇಲ್ಲಿ ಕೆಲವು ಆಯ್ಕೆಗಳಿವೆ.

  1. ಲಕ್ಷಣಾಲಂಕಾರವನ್ನು ಬಳಸುವಾಗ ಅದು ಯಾವ ವಸ್ತುವನ್ನು ಪ್ರತಿನಿಧಿಸುತ್ತಿದೆಯೋ ಅದರ ಹೆಸರಿನೊಂದಿಗೆ ಬಳಸಬಹುದು.
  2. ಲಕ್ಷಣಾಲಂಕಾರವನ್ನು ಪ್ರತಿನಿಧಿಸುವ ವಸ್ತುವಿನ ಹೆಸರನ್ನು ಮಾತ್ರ ಬಳಸಬಹುದು.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

  1. ಲಕ್ಷಣಾಲಂಕಾರವನ್ನು ಬಳಸುವಾಗ ಅದು ಯಾವ ವಸ್ತುವನ್ನು ಪ್ರತಿನಿಧಿಸುತ್ತಿದೆಯೋ ಅದರ ಹೆಸರಿನೊಂದಿಗೆ ಬಳಸಬಹುದು.

ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯಾಗಿದೆ ಎಂದು ಹೇಳಿದನು. (ಲೂಕ 22:20 ULT)

“ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು ಈ ಪಾತ್ರೆಯಲ್ಲಿರುವ ದ್ರಾಕ್ಷಾರಸವು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯಾಗಿದೆ ಎಂದು ಹೇಳಿದನು.”

(2) ಲಕ್ಷಣಾಲಂಕಾರವನ್ನು ಪ್ರತಿನಿಧಿಸುವ ವಸ್ತುವಿನ ಹೆಸರನ್ನು ಮಾತ್ರ ಬಳಸಬಹುದು.

ಕರ್ತನಾದ ದೇವರು ಆತನ ಮೂಲ ಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. (ಲೂಕ 1:32 ULT)

“ಕರ್ತನಾದ ದೇವರು ಆತನಿಗೆ ಅವನ ತಂದೆಯಾದ ದಾವೀದನ ರಾಜತ್ವ ಆಧಿಕಾರವನ್ನು ಕೊಡುವನು.” ಅಥವಾ: "ಕರ್ತನಾದ ದೇವರು ಆತನ ಪೂರ್ವಿಕನಾದ ದಾವೀದನಂತೆ ಆತನನ್ನು ರಾಜನನ್ನಾಗಿ ಮಾಡುವನು.

ಮುಂದೆ ಕಾಣಬರುವ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಎಚ್ಚರಿಕೆ ಕೊಟ್ಟವರು ಯಾರು? (ಲೂಕ 3:7 ULT)

  • ಬರಲಿರುವ ದೇವರ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಎಚ್ಚರಿಕೆ ಕೊಟ್ಟವರು ಯಾರು?"

ಕೆಲವು ಸಾಮಾನ್ಯ ಲಕ್ಷಣಾಲಂಕಾರಗಳ ಬಗ್ಗೆ ಕಲಿಯಲು, ಇದನ್ನು ನೋಡಿರಿ Biblical Imagery-Common Metonymies.


ಸಾದೃಶ್ಯತೆ.

Translation Manual :: Just-in-Time Learning Modules :: Figures of Speech :: Parallelism

ವಿವರಣೆಗಳು

ಸಾದೃಶ್ಯತೆ ಎರಡು ಪದಗುಚ್ಛಗಳು ಅಥವಾ ವಾಕ್ಯಭಾಗಗಳು ರಚನೆಯಲ್ಲಿ ಒಂದೇ ಆಗಿರುತ್ತವೆ ಹಾಗೂ ಒಂದೇ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಇಲ್ಲಿ ವಿವಿಧ ರೀತಿಯ ಸಾದೃಶ್ಯಗಳಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ನೀಡಿದೆ.

  1. ಎರಡನೇ ವಾಕ್ಯಭಾಗವು ಅಥವಾ ಪದಗುಚ್ಛಗಳು ಮೊದಲ ವಾಕ್ಯಭಾಗ ಅಥವಾ ಪದಗುಚ್ಛಗಳು ಇದೇ ಆಗಿರುತ್ತದೆ. ಇದನ್ನು ಪರ್ಯಾಯ ಪದದ ಸಾದೃಶ್ಯತೆ ಅಥವಾ ಏಕಾರ್ಥ ಸಾದೃಶ್ಯತೆ ಎಂದು ಕರೆಯುತ್ತಾರೆ.
  2. ಎರಡನೇ ವಾಕ್ಯಭಾಗ ಮೊದಲ ವಾಕ್ಯಭಾಗದ ಅರ್ಥವನ್ನು ವಿವರಿಸುತ್ತದೆ ಮತ್ತು ಬಲಪಡಿಸುತ್ತದೆ.
  3. ಎರಡನೇ ವಾಕ್ಯಭಾಗ ಮೊದಲ ಭಾಗದಲ್ಲಿ ಹೇಳಿದ್ದನ್ನು ಸಂಪೂರ್ಣಗೊಳಿಸುತ್ತದೆ.
  4. ಎರಡನೇ ವಾಕ್ಯ ಮೊದಲ ಪದಕ್ಕೆ ವಿಭಿನ್ನವಾದುದುದನ್ನು ಕೆಲವೊಮ್ಮೆ ಹೇಳಿದರೂ ಒಂದೇ ಉದ್ದೇಶವನ್ನು ಸೇರಿಸಿ ಹೇಳುತ್ತದೆ.

ಇಂತಹ ಸಾದೃಶ್ಯ ವಾಕ್ಯಗಳು ಸಾಮಾನ್ಯವಾಗಿ ಹಳೆಯ ಒಡಂಬಡಿಕೆಯ ಪದ್ಯಭಾಗಗಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ ದಾವೀದನ ಕೀರ್ತನೆಗಳು ಮತ್ತು ಜ್ಞಾನೋಕ್ತಿಗಳಲ್ಲಿ. ಗ್ರೀಕ್ ಭಾಷೆಯ ಹೊಸ ಒಡಂಬಡಿಕೆಯ ಭಾಗದಲ್ಲೂ ಕಂಡುಬರುತ್ತದೆ. ಅಂದರೆ ನಾಲ್ಕು ಸುವಾರ್ತೆಗಳಲ್ಲಿ ಹಾಗೂ ಅಪೋಸ್ತಲರ ಪತ್ರಗಳಲ್ಲಿ ಕಂಡುಬರುತ್ತದೆ. ಪರ್ಯಾಯ ಪದದ ಸಾದೃಶ್ಯತೆ ಅಥವಾ ಏಕಾರ್ಥ ಪದದ ಸಾದೃಶ್ಯತೆ (ಎರಡು ಪದಗಳು ಒಂದೇ ಅರ್ಥಕೊಡುವಂತದ್ದು) ಪದಗಳು ಮೂಲಭಾಷೆಯ ಪದ್ಯಭಾಗದಲ್ಲಿ ಅನೇಕ ಪ್ರಭಾವವನ್ನು ಬೀರುತ್ತದೆ.

  • ಇದು ಕೆಲವು ವಿಷಯ ತುಂಬಾ ಮುಖ್ಯವಾದುದು ಎಂದು ತೋರಿಸಲು ಒಂದುಸಲಕ್ಕಿಂತ ಹೆಚ್ಚುಸಲ ಹೆಚ್ಚು ರೀತಿಯಲ್ಲಿ ಬಳಸಲಾಗುತ್ತದೆ.
  • ಇದರಿಂದ ಶ್ರೋತೃಗಳಿಗೆ, ಓದುಗರಿಗೆ ವಿವಿಧರೀತಿಯಲ್ಲಿ ಹೇಳುವ ವಿಚಾರಗಳು ಹೆಚ್ಚು ಪರಿಣಾಮಕಾರಿ ಎಂದು ಅರ್ಥವಾಗುತ್ತದೆ.
  • ಇಂತಹ ಬಳಕೆಯಿಂದ ಸಾಮಾನ್ಯವಾದ ಮಾತುಗಳಿಗಿಂತ ಪದಗಳಿಗಿಂತ ಭಾಷೆಯ ಸೌಂದರ್ಯವನ್ನು ಕಾವ್ಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಕಾರಣ ಇದೊಂದು ಭಾಷಾಂತರ ವಿಷಯ.

ಕೆಲವು ಭಾಷೆಯಲ್ಲಿ ಪರ್ಯಾಯ ಪದದ ಸಾದೃಶ್ಯತೆ /ಏಕಾರ್ಥ ಸಾದೃಶ್ಯತೆ ಯನ್ನು ಬಳಸುವುದಿಲ್ಲ. ಏಕೆಂದರೆ ಎರಡೆರಡುಸಲ ಬಳಸಿದ ಪದಗಳು ವಾಕ್ಯಗಳು ಅವರಿಗೆ ಅಸಹಜವಾಗಿ ಕಂಡುಬರಬಹುದು. ಇಲ್ಲವೇ ಎರಡು ಪದಗಳು ಅಥವಾ ವಾಕ್ಯಗಳು ಅರ್ಥದಲ್ಲಿ ವಿಭಿನ್ನವಾಗಿರಬಹದು.ಎಂದು ಭಾವಿಸಬಹುದು. ಅವರಿಗೆ ಭಾಷೆಯ ಸೌಂದರ್ಯವನ್ನು ತಿಳಿದುಕೊಳ್ಳುವ ಬದಲು ಗೊಂದಲ ಉಂಟಾಗಬಹುದು.

ಗಮನಿಸಿ : ನಾವು ಈ ಪರ್ಯಾಯಸಾದೃಶ್ಯ ಪದಗಳನ್ನು /ಏಕಾರ್ಥ ಸಾದೃಶ್ಯ ಪದಗಳನ್ನು ದೀರ್ಘವಾದ ಪದಗುಚ್ಛ ಅಥವಾ ವಾಕ್ಯಭಾಗಗಳಲ್ಲಿ ಒಂದೇ ಅರ್ಥವಿರುವಂತೆ ಉಪಯೋಗಿಸುತ್ತೇವೆ. ನಾವು ಕೆಲವೊಮ್ಮೆ ದ್ವಿರುಕ್ತಿಗಳನ್ನು ಪದಗಳಿಗಾಗಿ ಮತ್ತು ಚಿಕ್ಕಪದಗಳನ್ನು ಮೂಲಭೂತವಾಗಿ ಒಂದೇ ಅರ್ಥಕೊಡುವಂತೆ ಒಟ್ಟಾಗಿ ಬಳಸುತ್ತೇವೆ.

ಸತ್ಯವೇದದಿಂದ ಉದಾಹರಣೆಗಳು.

ಎರಡನೇ ವಾಕ್ಯಭಾಗ ಅಥವಾ ಪದಗುಚ್ಛಗಳು ಮೊದಲ ವಾಕ್ಯಭಾಗದಂತೆ ಒಂದೇ ಅರ್ಥವನ್ನು ಕೊಡುತ್ತದೆ.

ನಿನ್ನ ವಾಕ್ಯ ನನ್ನ ಕಾಲಿಗೆ ದೀಪವು. ನನ್ನ ಮಾರ್ಗಕ್ಕೆ ಬೆಳಕು (Psalm 119:105 ULB)

ಎರಡೂ ವಾಕ್ಯಗಳಲ್ಲಿರುವ ರೂಪಕ ಪದವು ದೇವರ ವಾಕ್ಯವು ಜನರಿಗೆ ಹೇಗೆ ಜೀವನ ನಡೆಸಬೇಕೆಂದು ಬೋಧಿಸುತ್ತವೆ.

ನೀನು ಸೃಷ್ಟಿಸಿದ ಎಲ್ಲಾ ವಸ್ತುಗಳ ಮೇಲೆ ಪ್ರಭುತ್ವವನ್ನು ಅವನಿಗೆ ಅನುಗ್ರಹಿಸಿರಿ. ಎಲ್ಲವನ್ನೂ ಅವನಿಗೆ ಅಧೀನ ಮಾಡಿ ಅವನ ಪಾದದಡಿಗೆ ಸೇರಿಸಿರಿ (ದಾ.ಕೀ. 8:6 ULB)

ಎರಡೂ ವಾಕ್ಯಗಳು ದೇವರು ಮನುಷ್ಯನಿಗೆ ಎಲ್ಲದರ ಮೇಲಿನ ಒಡೆತನವನ್ನು ನೀಡಿದ್ದಾನೆ ಎಂದು ತಿಳಿಸುತ್ತವೆ.

ಎರಡನೇ ವಾಕ್ಯ ಮೊದಲನೇ ವಾಕ್ಯದ ಅರ್ಥವನ್ನು ಹೆಚ್ಚು ಸ್ಪಷ್ಟವಾಗಿ ಬಲಪಡಿಸುತ್ತದೆ.

ಯೆಹೋವನ ದೃಷ್ಟಿಯು ಎಲ್ಲಾ ಕಡೆಯೂ ವ್ಯಾಪಿಸುವುದು. ಆತನು ಕೆಟ್ಟವರನ್ನು, ಒಳ್ಳೆಯವರನ್ನು ನೋಡುತ್ತಲೇ ಇರುವನು. (ಜ್ಞಾನೋಕ್ತಿಗಳು 15:3 ULB)

ಎರಡನೇ ವಾಕ್ಯ ಯೆಹೋವನು ವಿಶೇಷವಾಗಿ ಏನನ್ನು ನೋಡುತ್ತಾನೆ / ಗುರುತಿಸುತ್ತಾನೆ ಎಂಬುದನ್ನು ಸೂಚಿಸುತ್ತದೆ.

ಎರಡನೇ ವಾಕ್ಯ ಮೊದಲ ವಾಕ್ಯದಲ್ಲಿ ಹೇಳಿರುವುದನ್ನು ಸಂಪೂರ್ಣಗೊಳಿಸುತ್ತದೆ.

ನಾನು ಯೆಹೋವನಿಗೆ ಮೊರೆ ಇಡುವಾಗ. ಆತನು ತನ್ನ ಪರಿಶುದ್ಧ ಪರ್ವತದಿಂದ ಸದುತ್ತರವನ್ನು ಅನುಗ್ರಹಿಸುತ್ತಾನೆ. (ದಾ.ಕೀ. 3:4 ULB)

ಮೊದಲ ವಾಕ್ಯದಲ್ಲಿ ಮನುಷ್ಯನು ಮಾಡಿದ ಕ್ರಿಯೆಗೆ ತಕ್ಕಂತೆ ಯೆಹೋವನು ಹೇಗೆ ಪ್ರತಿಕ್ರಿಯೆ ನೀಡುತ್ತಾನೆ ಎಂಬುದನ್ನು ಎರಡನೇ ವಾಕ್ಯ ಸೂಚಿಸುತ್ತದೆ.

ಎರಡನೇ ವಾಕ್ಯ ಮೊದಲ ವಾಕ್ಯದೊಂದಿಗೆ ಭಿನ್ನವಾಗಿ ತೋರಿದರೂ ಒಂದೇ ಉದ್ದೇಶವಿರುವುದನ್ನು ತೋರಿಸುತ್ತದೆ.

ಯೆಹೋವನು ನೀತಿವಂತ ಮಾರ್ಗವನ್ನು ಲಕ್ಷಿಸುವನು. ದುಷ್ಟರ ಮಾರ್ಗವು ನಾಶವಾಗುವುದು. (ದಾ.ಕೀ 1:6 ULB)

ಎರಡು ಭಿನ್ನ ವಾಕ್ಯಗಳಿದ್ದರೂ ಒಂದೇ ಉದ್ದೇಶ ಹೊಂದಿದೆ.ಅಂದರೆ ನೀತಿವಂತರಿಗೆ ಆಗುವ ಮೇಲು, ದುಷ್ಟರಿಗೆ ಆಗುವ ದುಃಸ್ಥಿತಿ ಬಗ್ಗೆ ತಿಳಿಸುತ್ತದೆ.(ನೀತಿವಂತರಿಗೂ, ದುಷ್ಟರಿಗೂ ಆಗುವ ಪರಿಣಾಮದ ಬಗ್ಗೆ).

ಮೃದುವಾದ ಪ್ರತ್ಯುತ್ತರವು ಸಿಟ್ಟನ್ನು ತಣಿಸುತ್ತದೆ. ಬಿರುನುಡಿಗಳು ಸಿಟ್ಟನ್ನು ಕೆರಳಿಸುತ್ತದೆ. (ಜ್ಞಾನೋಕ್ತಿಗಳು 15:1 ULB)

ಈ ವಾಕ್ಯಗಳು ಮೃದುವಾಗಿ ಮಾತನಾಡುವುದರಿಂದ ಮತ್ತು ಬಿರುಸಾಗಿ ನುಡಿಯುವ ಮಾತುಗಳಿಂದ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸುತ್ತದೆ.

ಭಾಷಾಂತರ ತಂತ್ರಗಳು.

ಎಲ್ಲಾ ರೀತಿಯ ಏಕಾರ್ಥ ಸಾದೃಶ್ಯತೆ ಇರುವ ವಾಕ್ಯಗಳನ್ನು ಮತ್ತು ಪದಗಳನ್ನು ಭಾಷಾಂತರ ಮಾಡುವುದು ಒಳ್ಳೆಯದು. ಪರ್ಯಾಯ ಪದದ ಸಾದೃಶ್ಯತೆ/ ಏಕಾರ್ಥ ಸಾದೃಶ್ಯತೆ ವಾಕ್ಯಭಾಗದಲ್ಲಿ ಅಥವಾ ಪದಗುಚ್ಛಗಳಲ್ಲಿ ಇರುವ ಪದಗಳನ್ನು ನಿಮ್ಮ ಭಾಷೆಯಲ್ಲಿ ಭಾಷಾಂತರಿಸುವಾಗ ನಿಮ್ಮ ಜನರು ಸರಿಯಾಗಿ ಅರ್ಥಮಾಡಿಕೊಂಡು ಇಂತಹ ಪದಗಳನ್ನು ಎರಡೆರಡುಸಲ ಬಳಸಿದಾಗ ಅದರ ಅರ್ಥವನ್ನು ಒಂದೇ ಉದ್ದೇಶವನ್ನು ಮನದಟ್ಟು ಮಾಡಲು ಇಲ್ಲವೇ ಬಲಪಡಿಸಲು ಹೇಳಲಾಗಿದೆ ಎಂದು ತಿಳಿದುಕೊಳ್ಳಬೇಕು. ನಿಮ್ಮ ಭಾಷೆಯಲ್ಲಿ ಇಂತಹ ಏಕಾರ್ಥ ಸಾದೃಶ್ಯ ಪದಗಳ ಬಳಕೆ ಇಲ್ಲದಿದ್ದರೆ ಕೆಳಗೆ ನೀಡಿರುವ ಭಾಷಾಂತರ ತಂತ್ರಗಳಲ್ಲಿ ಯಾವುದಾದರೂ ಒಂದನ್ನು ಬಳಸಿಕೊಳ್ಳಬಹುದು.

  1. ಎರಡೂ ವಾಕ್ಯಭಾಗಗಳಲ್ಲಿ ಇರುವ ಉದ್ದೇಶವನ್ನು ಒಟ್ಟುಗೂಡಿಸಿ ಒಂದೇವಾಕ್ಯಮಾಡಿ.
  2. ಇಲ್ಲಿರುವ ವಾಕ್ಯಭಾಗಗಳು ಜೊತೆಯಾಗಿ ಉಪಯೋಗಿಸಿಕೊಂಡಾಗ ಅದು ನಿಜವಾದುದು ಎಂದು ಕಂಡುಬಂದರೆ ಅದನ್ನು ಪ್ರತಿಪಾದಿಸುವಂತೆ “ನಿಜವಾಗಿ,” “ಖಂಡಿತವಾಗಿ,” ಎಂಬ ಪದಗಳನ್ನು ಬಳಸಬಹುದು.
  3. ಅದೇರೀತಿ ವಾಕ್ಯಭಾಗಗಳಲ್ಲಿ ಜೊತೆಯಾಗಿ ಬಳಸಿದ ಉದ್ದೇಶಗಳನ್ನು ಬಲಪಡಿಸಲು, ದೃಢಪಡಿಸಲು, “ತುಂಬಾ,” “ಸಂಪೂರ್ಣವಾಗಿ,” ಅಥವಾ “ಎಲ್ಲಾ,” ಎಂಬ ಪದಗಳನ್ನು ಬಳಸಬಹುದು.

ಭಾಷಾಂತರ ತಂತ್ರಗಳನ್ನು ಬಳಸಿದ ಬಗ್ಗೆ ಉದಾಹರಣೆಗಳು

  1. ಎರಡೂ ವಾಕ್ಯಭಾಗಗಳಲ್ಲಿ ಇರುವ ಉದ್ದೇಶವನ್ನು ಒಂದುಗೂಡಿಸಬೇಕು
  • ಇದುವರೆಗೂ ನೀನು ನನ್ನನ್ನು ವಂಚಿಸಿದಿ ಮತ್ತು ನನಗೆ ಸುಳ್ಳು ಹೇಳಿದಿ. (ನ್ಯಾಯಸ್ಥಾಪಕರು 16:13, ULB) – ದೆಲಿಲಾಳು ಒಂದೇ ಉದ್ದೇಶವನ್ನು ಎರಡು ಸಲ ಹೇಳುವ ಉದ್ದೇಶವೆಂದರೆ ತಾನು ಇದರಿಂದ ತುಂಬಾ ಬೇಸರಗೊಂಡಿದ್ದೇನೆ ಎಂಬುದನ್ನು ತಿಳಿಸಲು.

    • " ಇದುವರೆಗೂ ನೀನು ಸುಳ್ಳು ಹೇಳುವ ಮೂಲಕ ನನ್ನನ್ನು ವಂಚಿಸಿರುವೆ. "
  • ಯೆಹೋವನು ಮನುಷ್ಯನು ಮಾಡುವ ಎಲ್ಲವನ್ನೂ ನೋಡುತ್ತಾನೆ ಮತ್ತು ಅವನು ನಡೆಯುವ ಎಲ್ಲಾ ಮಾರ್ಗಗಳನ್ನು ಗಮನಿಸುತ್ತಾನೆ. (ಜ್ಞಾನೋಕ್ತಿಗಳು 5:21 ULB) – ಇಲ್ಲಿ ಬಳಸಿರುವ ಪದ " ಅವನು ನಡೆಯುವ ಎಲ್ಲಾ ಮಾರ್ಗಗಳು " ಎಂಬುದು ಅವನು ಮಾಡುವ ಎಲ್ಲಾ ಕೆಲಸಗಳು ಎಂಬುದಕ್ಕೆ ರೂಪಕವಾಗಿ ಬರುತ್ತದೆ.

    • "ಮನುಷ್ಯನು ಮಾಡುವ ಕಾರ್ಯಗಳನ್ನು ಯೆಹೋವನು ಗಮನಿಸುತ್ತಾನೆ. "
  • ಯೆಹೋವನಿಗೆ ಆತನ ಪ್ರಜೆಗಳೊಂದಿಗೆ ವ್ಯಾಜ್ಯವಿದೆ ಮತ್ತು ಆತನು ಇಸ್ರಾಯೇಲಿನೊಂದಿಗೆ ವಾದಿಸುತ್ತಾನೆ. (ಮೀಕ 6:2 ULB) - ಈ ಸಾದೃಶ್ಯತೆ ಯೆಹೋವನಿಗೆ ಒಂದು ಗುಂಪಿನ ಜನರ ಬಗ್ಗೆ ಇರುವ ಅಸಮಧಾನವನ್ನು ಸೂಚಿಸುತ್ತದೆ. ಇದು ಅಸ್ಪಷ್ಟವಾದ ಪದಗುಚ್ಛಗಳನ್ನು ಸೇರಿಸಿ ಹೇಳಬಹುದು.

    • " ಯೆಹೋವನಿಗೆ ಆತನ ಜನರೊಂದಿಗೆ, ಇಸ್ರಾಯೇಲರೊಂದಿಗೆ ವ್ಯಾಜ್ಯವಿದೆ.
  1. ಇಲ್ಲಿರುವ ವಾಕ್ಯಭಾಗಗಳು ಜೊತೆಯಾಗಿ ಉಪಯೋಗಿಸಿಕೊಂಡಾಗ ಅದು ನಿಜವಾದುದು ಎಂದು ಕಂಡುಬಂದರೆ ಅದನ್ನು ಪ್ರತಿಪಾದಿಸುವಂತೆ “ನಿಜವಾಗಿ,” “ಖಂಡಿತವಾಗಿ,” ಎಂಬ ಪದಗಳನ್ನು ಬಳಸಬಹುದು.
  • ಯೆಹೋವನು ಮನುಷ್ಯನು ಮಾಡುವ ಎಲ್ಲವನ್ನೂ ನೋಡುತ್ತಾನೆ ಮತ್ತು ಅವನು ನಡೆಯುವ ಮಾರ್ಗವನ್ನು ಗಮನಿಸುತ್ತಾನೆ. (ಜ್ಞಾನೋಕ್ತಿಗಳು 5:21 ULB)

    • " ಯೆಹೋವನು ಮನುಷ್ಯನು ಮಾಡುವ ಎಲ್ಲವನ್ನೂ ಖಂಡಿತವಾಗಿ ನೋಡುತ್ತಾನೆ. "
  1. ಅದೇರೀತಿ ವಾಕ್ಯಭಾಗಗಳಲ್ಲಿ ಜೊತೆಯಾಗಿ ಬಳಸಿದ ಉದ್ದೇಶಗಳನ್ನು ಬಲಪಡಿಸಲು, ದೃಢಪಡಿಸಲು, " ತುಂಬಾ," " ಸಂಪೂರ್ಣವಾಗಿ," ಅಥವಾ “ಎಲ್ಲಾ,” ಎಂಬ ಪದಗಳನ್ನು ಬಳಸಬಹುದು.
  • ನೀನು ನನ್ನನ್ನು ವಂಚಿಸಿರುವೆ ಮತ್ತು ನನಗೆ ಸುಳ್ಳುಹೇಳಿರುವೆ. (ನ್ಯಾಯಸ್ಥಾಪಕರು 16:13 ULB)

    • " ನೀನು ಮಾಡಿದ್ದೇನೆಂದರೆ ನನಗೆ ಸುಳ್ಳುಹೇಳಿರುವುದು."
  • ಯೆಹೋವನು ಮನುಷ್ಯನು ಮಾಡುವ ಎಲ್ಲವನ್ನೂ ನೋಡುತ್ತಾನೆ ಮತ್ತು ಅವನು ನಡೆಯುವ ಮಾರ್ಗವನ್ನು ಗಮನಿಸುತ್ತಾನೆ. (ಜ್ಞಾನೋಕ್ತಿಗಳು 5:21 ULB)

    • " ಯೆಹೋವನು ಖಂಡಿತವಾಗಿ ಮನುಷ್ಯನು ಮಾಡುವ ಎಲ್ಲವನ್ನೂ ನೋಡುತ್ತಾನೆ. "

ವ್ಯಕ್ತೀಕರಣ

Translation Manual :: Just-in-Time Learning Modules :: Figures of Speech :: Personification

ವಿವರಣೆಗಳು

ವ್ಯಕ್ತೀಕರಣ ಎಂಬುದು ಒಂದು ಅಲಂಕಾರವಾಗಿದೆ, ಇದರಲ್ಲಿ ಒಬ್ಬನು ಯಾವುದಾದರೊಂದು ವಿಷಯದ ಬಗ್ಗೆ ಮಾತನಾಡುವಾಗ ಅದು ಪ್ರಾಣಿಗಳು ಅಥವಾ ಜನರು ಮಾಡುವಂಥ ಕಾರ್ಯಗಳನ್ನು ಮಾಡುತ್ತದೆಯೋ ಎಂಬಂತೆ ಮಾತನಾಡುತ್ತಾನೆ. ನಾವು ನೋಡಲಾಗದ ವಿಷಯಗಳ ಬಗ್ಗೆ ಮಾತನಾಡುವುದನ್ನು ಇದು ಸುಲಭಗೊಳಿಸುತ್ತದೆ ಆದ್ದರಿಂದ ಜನರು ಇದನ್ನು ಹೆಚ್ಚಾಗಿ ಬಳಸುತ್ತಾರೆ.

ಉದಾಹರಣೆಗೆ ಜ್ಞಾನ:

ಜ್ಞಾನವೆಂಬಾಕೆ ಕರೆಯುವುದಿಲ್ಲವೇ? (ಜ್ಞಾನೋಕ್ತಿಗಳು 8:1 ULT)

ಅಥವಾ ಪಾಪ:

ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವುದು (ಆದಿಕಾಂಡ 4:7 ULT)

ಸಂಪತ್ತಿನಂತಹ ಮಾನವ ಜಾತಿಗೆ ಸೇರದ ವಿಷಯಗಳೊಂದಿಗಿರುವ ಜನರ ಸಂಬಂಧಗಳ ಬಗ್ಗೆ ಮಾತನಾಡುವಾಗ ಅವುಗಳಿಗೂ ಜನರಿಗೂ ಸಂಬಂಧವುಂಟೋ ಎಂಬಂತೆ ಮಾತನಾಡುವುದನ್ನು ಇದು ಕೆಲವೊಮ್ಮೆ ಸುಲಭವಾಗಿಸುತ್ತದೆ ಆದ್ದರಿಂದ ಜನರು ಇದನ್ನು ಮಾಡುತ್ತಾರೆ

ನೀವು ದೇವರನ್ನು ಮತ್ತು ಐಶ್ವರ್ಯವನ್ನು ಒಟ್ಟಿಗೆ ಸೇವಿಸಲಾರಿರಿ. (ಮತ್ತಾಯ 6:24 ULT)

ಪ್ರತಿಯೊಂದು ಸಂಗತಿಯಲ್ಲೂ, ಮಾನವ ಜಾತಿಗೆ ಸೇರದ ವಸ್ತುವಿನ ಒಂದು ನಿರ್ದಿಷ್ಟ ಲಕ್ಷಣವನ್ನು ಎತ್ತಿ ತೋರಿಸುವುದು ವ್ಯಕ್ತೀಕರಣದ ಉದ್ದೇಶವಾಗಿದೆ. ರೂಪಕ ಅಲಂಕಾರದಲ್ಲಿರುವಂತೆಯೇ, ವಸ್ತುವು ಒಂದು ನಿರ್ದಿಷ್ಟ ರೀತಿಯಲ್ಲಿ ವ್ಯಕ್ತಿಯಂತೆ ಇದೆ ಎಂದು ಓದುಗನು ಯೋಚಿಸಬೇಕು.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  • ಕೆಲವು ಭಾಷೆಗಳಲ್ಲಿ ವ್ಯಕ್ತೀಕರಣ ಎಂಬ ಅಲಂಕಾರವನ್ನು ಬಳಸುವುದಿಲ್ಲ.
  • ಕೆಲವು ಭಾಷೆಗಳಲ್ಲಿ ವ್ಯಕ್ತೀಕರಣ ಎಂಬ ಅಲಂಕಾರವನ್ನು ಕೆಲವು ಸನ್ನಿವೇಶಗಳಲ್ಲಿ ಮಾತ್ರ ಬಳಸುತ್ತಾರೆ.

ಸತ್ಯವೇದದಲ್ಲಿನ ಉದಾಹರಣೆಗಳು

ನೀವು ದೇವರನ್ನು ಮತ್ತು ಐಶ್ವರ್ಯವನ್ನು ಒಟ್ಟಿಗೆ ಸೇವಿಸಲಾರಿರಿ. (ಮತ್ತಾಯ 6:24 ULT)

ಯೇಸು ಇಲ್ಲಿ ಐಶ್ವರ್ಯದ ಕುರಿತು ಜನರು ಸೇವಿಸಬೇಕಾದ ಯಜಮಾನನೋ ಎಂಬಂತೆ ಹೇಳಿದ್ದಾನೆ. ಹಣವನ್ನು ಪ್ರೀತಿಸುವವನು ಮತ್ತು ಅದಕ್ಕೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳುವವನು ಅದು ತನ್ನ ಯಜಮಾನನೋ ಎಂಬಂತೆ ಸೇವಿಸುವವನಿಗೆ ಸಮಾನ.

ಜ್ಞಾನವೆಂಬಾಕೆ ಕರೆಯುವುದಿಲ್ಲವೇ? ವಿವೇಕವೆಂಬಾಕೆ ಧ್ವನಿಗೈಯ್ಯುವುದಿಲ್ಲವೇ? (ಜ್ಞಾನೋಕ್ತಿಗಳು 8:1 ULT)

ಇಲ್ಲಿ ಲೇಖಕನು ಜ್ಞಾನದ ಮತ್ತು ವಿವೇಕದ ಬಗ್ಗೆಯೂ ಹೇಳುವಾಗ ಸ್ತ್ರೀಯು ಜನರಿಗೆ ಬೋಧಿಸಲು ಅವರನ್ನು ಕರೆಯುತ್ತಿದ್ದಾಳೆಯೋ ಎಂಬಂತೆ ಹೇಳುತ್ತಿದ್ದಾನೆ. ಇದರ ಅರ್ಥ ಇವೆರಡಕ್ಕೂ ಗೂಡಾರ್ಥಗಳಿಲ್ಲ ಆದರೆ ಜನರು ಇವುಗಳ ಬಗ್ಗೆ ಗಮನಕೊಡಲೇ ಬೇಕಾದ ಅಂಶಗಳು

ಭಾಷಾಂತರದ ಕಾರ್ಯತಂತ್ರಗಳು

ವ್ಯಕ್ತೀಕರಣ ಅಲಂಕಾರ ಬಳಕೆ ಸ್ಪಷ್ಟವಾಗಿ ಅರ್ಥವಾಗುವಂತದ್ದಾದರೆ ಅದನ್ನು ಬಳಸಲು ಪರಿಗಣಿಸಬಹುದು. ಅದು ಅರ್ಥವಾಗದಿದ್ದರೆ ಭಾಷಾಂತರ ಮಾಡುವಾಗ ಅನುಸರಿಸಬೇಕಾದ ಕೆಲವಾರು ಸೂಚನೆಗಳನ್ನು ಇಲ್ಲಿ ನೀಡಲಾಗಿದೆ.

  1. ಮನುಷ್ಯ (ಅಥವಾ ಪ್ರಾಣಿಗಳ) ಗುಣಲಕ್ಷಣವನ್ನು ಸ್ಪಷ್ಟಪಡಿಸುವಂಥ ಪದಗಳನ್ನು ಅಥವಾ ನುಡಿಗಟ್ಟುಗಳನ್ನು ಸೇರಿಸಿರಿ.
  2. (1) ರ ಕಾರ್ಯತಂತ್ರಕ್ಕೆ ಹೆಚ್ಚುವರಿಯಾಗಿ “ಅದರಂತೆ” ಅಥವಾ “ಹಾಗೆ” ಎಂಬ ಪದಗಳನ್ನು ಬಳಸಿ ವಾಕ್ಯಗಳನ್ನು ವ್ಯಾಚಾರ್ಥವಾಗಿ ಅರ್ಥಮಾಡಿಕೊಳ್ಳಬಾರದು ಎಂಬುದನ್ನು ತೋರಿಸಿರಿ.
  3. ವ್ಯಕ್ತೀಕರಣ ಅಲಂಕಾರ ಇಲ್ಲದೆ ಭಾಷಾಂತರಿಸುವ ಮಾರ್ಗವನ್ನು ಕಂಡುಕೊಳ್ಳಿರಿ.

ಭಾಷಾಂತರದ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು.

(1) ಮನುಷ್ಯ (ಅಥವಾ ಪ್ರಾಣಿಗಳ) ಗುಣಲಕ್ಷಣವನ್ನು ಸ್ಪಷ್ಟಪಡಿಸುವಂಥ ಪದಗಳನ್ನು ಅಥವಾ ನುಡಿಗಟ್ಟುಗಳನ್ನು ಸೇರಿಸಿರಿ.

ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವುದು (ಆದಿಕಾಂಡ 4:7 ULT) - ಕಾಡುಮೃಗವು ದಾಳಿಮಾಡಲು ಹೊಂಚುಹಾಕುವಂತೆ ಪಾಪವೂ ಸಹ ನಮ್ಮನ್ನು ಆಕ್ರಮಿಸಲು ಕಾಯುತ್ತಿದೆ ಎಂಬಂತೆ ದೇವರು ಹೇಳಿದ್ದಾನೆ. ಇದರಿಂದ ಪಾಪ ಎಷ್ಟು ಅಪಾಯಕಾರಿ ಎಂದು ತಿಳಿಯುತ್ತದೆ. ಈ ವಾಕ್ಯದಲ್ಲಿ ಇನ್ನೊಂದು ನುಡಿಗಟ್ಟನ್ನು ಸೇರಿಸುವ ಮೂಲಕ ಇನ್ನೂ ಸ್ಪಷ್ಟಪಡಿಸಬಹುದು.

ಪಾಪವು ನಿಮ್ಮ ಬಾಗಿಲಿನ ಬಳಿಯಿದೆ ನಿಮ್ಮ ಮೇಲೆ ದಾಳಿ ಮಾಡಲು ಕಾಯುತ್ತಿದೆ

  1. (1) ರ ಕಾರ್ಯತಂತ್ರಕ್ಕೆ ಹೆಚ್ಚುವರಿಯಾಗಿ “ಅದರಂತೆ” ಅಥವಾ “ಹಾಗೆ” ಎಂಬ ಪದಗಳನ್ನು ಬಳಸಿ ವಾಕ್ಯಗಳನ್ನು ವ್ಯಾಚಾರ್ಥವಾಗಿ ಅರ್ಥಮಾಡಿಕೊಳ್ಳಬಾರದು ಎಂಬುದನ್ನು ತೋರಿಸಿರಿ.

…ಪಾಪವು ಬಾಗಿಲಿನ ಬಳಿ ಹೊಂಚುಹಾಕುತ್ತಿದೆ (ಆದಿಕಾಂಡ 4:7 ULT) – ಇದನ್ನು “ಅಂತೆ” ಎಂಬ ಪದವನ್ನು ಸೇರಿಸಿ ಭಾಷಾಂತರಿಸಬಹುದು.

…ಪಾಪವು ಬಾಗಿಲಿನ ಬಳಿಯಲ್ಲಿ ಕಾಡುಮೃಗದಂತೆ ನಿಮ್ಮ ಮೇಲೆ ಆಕ್ರಮಣ ಮಾಡಲು ಕಾಯುತ್ತಿದೆ.

(3) ವ್ಯಕ್ತೀಕರಣ ಅಲಂಕಾರ ಇಲ್ಲದೆ ಭಾಷಾಂತರಿಸುವ ಮಾರ್ಗವನ್ನು ಕಂಡುಕೊಳ್ಳಿರಿ.

ಗಾಳಿಯು ಸಮುದ್ರವೂ ಸಹ ಆತನು ಹೇಳಿದಂತೆ ಕೇಳುತ್ತದೆ (ಮತ್ತಾಯ 8:27 ULT) – ಜನರ ಹಾಗೆಯೇ, “ಗಾಳಿ ಮತ್ತು ಸಮುದ್ರಗಳು” ಯೇಸುವಿನ ಮಾತು ಕೇಳಿ ಅದಕ್ಕೆ ವಿಧೇಯವಾಗುವ ಸಾಮರ್ಥ್ಯವುಳ್ಳಗಳಾಗಿವೆಯೋ ಎಂಬಂತೆ ಮಾತನಾಡಿದರು. ಇಲ್ಲಿ ವಿಧೇಯತೆ ಎಂಬ ಪದವನ್ನು ಬಿಟ್ಟು ಯೇಸು ಹೇಗೆ ಗಾಳಿ ಮತ್ತು ಸಮುದ್ರವನ್ನು ನಿಯಂತ್ರಿಸಿದನು ಎಂದು ಹೇಳಬಹುದು.

ಆತನು ಗಾಳಿ ಮತ್ತು ಸಮುದ್ರವನ್ನು ಸಹ ನಿಯಂತ್ರಿಸಬಲ್ಲನು.

ಗಮನಿಸಿ: ನಾವು ಇಲ್ಲಿ “ವ್ಯಕ್ತೀಕರಣ” ಅಲಂಕಾರದ ವ್ಯಾಖ್ಯೆಯನ್ನು ವಿಸ್ತರಿಸಿ ಅದಕ್ಕೆ “ಮೃಗಾಲಂಕಾರ ಚಿತ್ರಣವನ್ನು” (ಯಾವುದಾದರೂ ಒಂದು ವಿಷಯವನ್ನು ಪ್ರಾಣಿಯ ಲಕ್ಷಣಗಳನ್ನು ನೀಡಿ ಮಾತನಾಡುವುದು), “ಮನುಷ್ಯತ್ವಾರೋಪಣೆಯನ್ನು” (ನಿರ್ಜೀವ ವಸ್ತುಗಳಿಗೆ ಮಾನವ ಲಕ್ಷಣಗಳನ್ನು ನೀಡಿ ಮಾತನಾಡುವುದು) ಸೇರಿಸಿದ್ದೇವೆ ಏಕೆಂದರೆ ಅವುಗಳಿಗೂ ಸಹ ಇದೇ ರೀತಿಯಾದ ಭಾಷಾಂತರದ ಕಾರ್ಯತಂತ್ರಗಳಿವೆ.


ಪ್ರಿಡಿಕ್ಟಿವ್ ಪಾಸ್ಟ್

Translation Manual :: Just-in-Time Learning Modules :: Figures of Speech :: Predictive Past

###ವಿವರಣೆಗಳು

“ಪ್ರಿಡಿಕ್ಟೀವ್ ಪಾಸ್ಟ್” ಇದೊಂದು ಅಲಂಕಾರ.ಇದರಲ್ಲಿ (ಮೊದಲೇ) ಭವಿಷ್ಯದಲ್ಲಿ ನಡೆಯುವ ವಿಚಾರಗಳನ್ನು ಭೂತಕಾಲದಲ್ಲೇ ಹೇಳಲಾಗುವುದು. ಇದು ಬಹುಪಾಲು ಪ್ರವಾದನೆಗಳಾಗಿದ್ದು ಭವಿಷ್ಯದಲ್ಲಿ ಖಂಡಿತವಾಗಿ ನಡೆದೇ ನಡೆಯುತ್ತದೆ ಎಂದು ಹೇಳಲು ಬಳಸುತ್ತಾರೆ. ಇದನ್ನು ನಿಶ್ಚಿತ ಪ್ರವಾದನೆ ಎಂದೂ ಕರೆಯಬಹುದು.

ನನ್ನ ಜನರು ಜ್ಞಾನಹೀನರಾಗಿ ಸೆರೆಗೆ ಹೋಗುವುದು ಖಂಡಿತ. ನಾಯಕರು ಹಸಿದು ದಣಿಯುವರು, ಜನರು ಬಾಯಾರಿಕೆಯಿಂದ ಕಂಗೆಡುವರು. (ಯೆಶಾಯ 5:13 ULB)

ಇಲ್ಲಿ ಉದಾಹರಿಸಿರುವ ವಾಕ್ಯಭಾಗದಲ್ಲಿ ಇಸ್ರಾಯೇಲ್ ಜನರು ಇನ್ನು ಸೆರೆಗೆ ಸಿಕ್ಕಿಲ್ಲ, ದರೆ ದೇವರು ಅವರ ಅವಿಧೇಯತನವನ್ನು ಸಹಿಸದೆ ಮುಂದೆ ಅವರಿಗೆ ಯಾವ ಶಿಕ್ಷಯನ್ನು ಕೊಡುತ್ತೇನೆ ಎಂಬುದನ್ನು ಮೊದಲೇ ನಿರ್ಧರಿಸಿ ಹೇಳಿರುವುದನ್ನು ಕಾಣುತ್ತಿದ್ದೇವೆ. ಇದು ಮುಂದೆ ಖಂಡಿತವಾಗಿ ನಡೆಯಿತು/ ನೆರವೇರಿತು.

####ಕಾರಣ ಇದೊಂದು ಭಾಷಾಂತರ ಪ್ರಕರಣ

ಕೆಲವು ಓದುಗರಿಗೆ ಭವಿಷ್ಯದಲ್ಲಿ ನಡೆಯುವ ಪ್ರವಾದನೆಗಳನ್ನು ಹೇಳಲು ಭೂತಕಾಲಪದವನ್ನು ಬಳಸುತ್ತಾರೆ ಎಂಬುದು ಗೊತ್ತಿಲ್ಲದೆ ಗೊಂದಲವಾಗಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು.

ಈಗ ಯೆರಿಕೋ ನಗರದವರು ಇಸ್ರಾಯೇಲರಿಗೆ ಹೆದರಿ ತಮ್ಮ ಪಟ್ಟಣದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡರು. ಯಾರೂ ಹೊರಗೆ ಹೋಗಲಿಲ್ಲ ಯಾರೂ ಒಳಗೆ ಬರಲಿಲ್ಲ. ಯೆಹೋವನು ಯೆಹೋಶುವನಿಗೆ" ನೋಡು, ನಾನು ಯೆರಿಕೋವನ್ನೂ, ಅದರ ಅರಸನನ್ನೂ, ತರಬೇತಾದ ಯುದ್ಧ ವೀರರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ." (ಯೆಹೋಶುವ 6:1-2 ULB)

ನಮಗಾಗಿ ಒಂದು ಮಗು ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು. ಆಡಳಿತವು ಆತನ ಬಾಹುಗಳ ಮೇಲಿರುವುದು ; (ಯೆಶಾಯ 9:6 ULB)

ಈ ಉದಾಹರಣೆಗಳಲ್ಲಿ ಈ ಘಟನೆಗಳು ಭವಿಷ್ಯದಲ್ಲಿ ನಡೆಯಬೇಕಾದ ಘಟನೆಗಳಾದರೂ ಈಗ ನಡೆದ ಘಟನೆಯ ಹಾಗೆ ದೇವರು ಮಾತನಾಡುತ್ತಿದ್ದಾನೆ.

ಇಂತಹವರ ವಿಷಯದಲ್ಲೇ ಆದಮನಿಗೆ ಏಳನೇ ತಲೆಯವನಾದ ಹನೋಕನು,”ಇಗೋ ಕರ್ತನು ಲಕ್ಷಾಂತರ ಪರಿಶುದ್ಧ ದೂತರನ್ನು ಕೂಡಿಕೊಂಡು ಬಂದನು”, ಎಂದು ಮುಂಚಿತವಾಗಿ ಹೇಳಿದನು (ಯೂದ 1:14 ULB)

ಹನೋಕನು ಭವಿಷ್ಯತ್ ನಲ್ಲಿ ನಡೆಯುವ ಘಟನೆಯಬಗ್ಗೆ ಮಾತನಾಡುತ್ತಿದ್ದನು. ಆದರೆ ದೇವರ ಬಗ್ಗೆ ಹೇಳುವಾಗ "ಕರ್ತನಾದ ದೇವರು ಬಂದಿದ್ದನು.” ಎಂಬ ಭೂತಕಾಲ ಪದವನ್ನು ಬಳಸಿ ಹೇಳಿದ್ದಾನೆ.

ಭಾಷಾಂತರ ತಂತ್ರಗಳು.

ನಿಮ್ಮ ಭಾಷೆಯಲ್ಲಿ ಭೂತಕಾಲ ಪದವು ಸಹಜವಾಗಿ, ಅರ್ಥಪೂರ್ಣವಾಗಿ ಧ್ವನಿಸುವುದಾದರೆ ಅದನ್ನೇ ಬಳಸಿಕೊಳ್ಳಬಹುದು. ಇಲ್ಲದಿದ್ದರೆ ಕೆಲವು ಅವಕಾಶಗಳಿವೆ ನೋಡಿ.

  1. ಭವಿಷ್ಯದಲ್ಲಿ ನಡೆಯುವ ಘಟನೆಗಳಿಗೆ ಭವಿಷ್ಯತ್ ಕಾಲದ ಪದವನ್ನು ಬಳಸಿಕೊಳ್ಳಿ.
  2. ಕೆಲವೊಮ್ಮೆ ಕೆಲವು ಘಟನೆಗಳು ಕೆಲವೇ ಕ್ಷಣಗಳಲ್ಲಿ ನಡೆಯುವಂತದ್ದಾದರೆ ಅದನ್ನೇ ಬಳಸಿ.
  3. ಕೆಲವು ಭಾಷೆಯಲ್ಲಿ ವರ್ತಮಾನಕಾಲದಲ್ಲಿ ಮಾತನಾಡುವಾಗ ಕೆಲವು ಘಟನೆಗಳು ಅತಿ ಶೀಘ್ರವಾಗಿ ಘಟಿಸುತ್ತದೆ ಎಂದು ಹೇಳುತ್ತಾರೆ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.

  1. ಭವಿಷ್ಯದಲ್ಲಿ ನಡೆಯುವ ಘಟನೆಗಳಿಗೆ ಭವಿಷ್ಯತ್ ಕಾಲದ ಪದಗಳನ್ನು ಬಳಸಿ
  • ನಮಗಾಗಿ ಒಂದು ಮಗು ಹುಟ್ಟಿದೆಯಷ್ಟೆ , ವರದ ಮಗನುನಮಗೆ ಕೊಡಲ್ಪಟ್ಟಿದೆ ; (ಯೆಶಾಯ9:6a ULB)

    • "ನಮಗಾಗಿ ಒಂದು ಮಗು ಹುಟ್ಟುವುದು, ವರದ ಮಗನನ್ನು ನಮಗೆ ಕೊಡಲ್ಪಡುವುದು;
  1. ಇದು ಆದಷ್ಟು ಬೇಗ ಏನೋ ನಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ. ಇಲ್ಲಿ ಅದನ್ನು ತೋರಿಸುವಂತಹ ಪದಗಳನ್ನು ಬಳಸಿ.
  • ಯೆಹೋವನು ಯೆಹೋಶುವನನ್ನು ಕುರಿತು “ನೋಡು ನಾನು ಯೆರಿಕೋ ನಗರವನ್ನು ಅದರ ಅರಸನನ್ನುಅದರ ತರಬೇತಾದ ಯುದ್ಧವೀರರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ.” (ಯೆಹೋಶುವ 6:2 ULB)

    • ಯೆಹೋವನು ಯೆಹೋಶುವನಿಗೆ “ನೋಡು, ನಾನುಯೆರಿಕೋ ನಗರವನ್ನುಅದರ ಅರಸನನ್ನು, ತರಬೇತಾದ ಯುದ್ಧವೀರರನ್ನು ನಿನ್ನ ಕೈಗೆ ಒಪ್ಪಿಸುವವನಿದ್ದೇನೆ.” ಎಂದು ಹೇಳಿದನು.
  1. ಕೆಲವು ಭಾಷೆಯಲ್ಲಿ ವರ್ತಮಾನಕಾಲದಲ್ಲಿ ಮಾತನಾಡುವಾಗ ಕೆಲವು ಘಟನೆಗಳು ಅತಿ ಶೀಘ್ರವಾಗಿ ನಡೆಯುತ್ತದೆ ಎಂದು ಹೇಳುತ್ತಾರೆ.
  • ಯೆಹೋವನು ಯೆಹೋಶುವನನ್ನು ಕುರಿತು ನೋಡು ನಾನು ಯೆರಿಕೋ ನಗರವನ್ನು ಅದರ ಅರಸನನ್ನುಅದರ ತರಬೇತಾದ ಯುದ್ಧವೀರರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ." (ಯೆಹೋಶುವ 6:2 ULB)

    • ಯೆಹೋವನು ಯೆಹೋಶುವನಿಗೆ “ನೋಡು ನಾನು ಯೆರಿಕೋ ನಗರವನ್ನು ಅದರ ರಸನನ್ನುಅದರ ತರಬೇತಾದ ಯುದ್ಧವೀರರನ್ನು ನಿನ್ನ ಕೈಗೆ ಒಪ್ಪಿಸುತ್ತಿದ್ದೇನೆ.”

ಅಲಂಕಾರಿಕ ಪ್ರಶ್ನೆಗಳು.

Translation Manual :: Just-in-Time Learning Modules :: Figures of Speech :: Rhetorical Question

ಅಲಂಕಾರಿಕರ ಪ್ರಶ್ನೆಗಳನ್ನು ತೋರಿಸುವ. ವ್ಯಕ್ತಿ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಕ್ಕಿಂತ ಹೆಚ್ಚಿನ ಆಸಕ್ತಿಯನ್ನು ತನ್ನ ಮನೋದೋರಣೆಯನ್ನು ಅಭಿವ್ಯಕ್ತಿಸುವ ಕಡೆಗೆ ವಹಿಸುತ್ತಾನೆ. ಮಾತನಾಡುವ ವ್ಯಕ್ತಿ ತನ್ನ ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಅಲಂಕಾರಿಕ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಉಪಯೋಗಿಸುತ್ತಾನೆ ಅಥವಾ ಶ್ರೋತೃಗಳನ್ನು ಆಳವಾಗಿ ಆಲೋಚಿಸಲು ಉತ್ತೇಜಿಸುತ್ತಾನೆ. ಸತ್ಯವೇದದಲ್ಲಿ ಅನೇಕ ಅಲಂಕಾರಿಕ ಪ್ರಶ್ನೆಗಳು ಇವೆ. ಆಶ್ಚರ್ಯವನ್ನು, ತಿದ್ದುಪಡಿಗೆ, ಗದರಿಸಲು ಅಥವಾ ಶ್ರೋತೃಗಳನ್ನುಖಂಡಿಸಲು, ಬೋಧಿಸಲು ಇಂತಹ ಪದಗಳನ್ನು, ಪ್ರಶ್ನೆಗಳನ್ನು ಬಳಸುತ್ತಾರೆ. ಕೆಲವು ಭಾಷೆಯ ಮಾತುಗಾರರು ಇತರ ಉದ್ದೇಶಕ್ಕಾಗಿಯೂ ಇಂತಹ ಪ್ರಶ್ನೆಗಳನ್ನು ಬಳಸುತ್ತಾರೆ.

ವಿವರಣೆ.

ಇಂತಹ ಅಲಂಕಾರಿಕ ಪ್ರಶ್ನೆಗಳನ್ನು ಮಾತನಾಡುವವರು ಕೆಲವು ವಿಷಯಗಳ ಬಗ್ಗೆ ತಮ್ಮ ಮನೋದೋರಣೆ ಯನ್ನು ಆಳವಾಗಿ ವ್ಯಕ್ತಪಡಿಸಲು ಕೇಳುತ್ತಾರೆ. ಮಾತನಾಡುವ ವ್ಯಕ್ತಿ ಮಾಹಿತಿ ಬಗ್ಗೆ ಯೋಚಿಸುವುದಿಲ್ಲ, ಕೇಳಿದರೆ ಸಾಮಾನ್ಯವಾಗಿ ಅದು ಮಾಹಿತಿಯಾಗಿ ಉಳಿಯದೆ, ಪ್ರಶ್ನೆಕೇಳಲು ದಾರಿಯಾಗುತ್ತದೆ. ಮಾಹಿತಿಯನ್ನುಪಡೆಯುವುದಕ್ಕಿಂತ ಹೆಚ್ಚಾಗಿ ಇಲ್ಲಿ ಮಾತನಾಡುತ್ತಿರುವ ವ್ಯಕ್ತಿ ತನ್ನ ಮನೋದೋರಣೆಯನ್ನು ವ್ಯಕ್ತಪಡಿಸುವುದರಲ್ಲೇ ಹೆಚ್ಚಿನ ಆಸಕ್ತಿ ಇರುವುದು ಕಂಡುಬರುತ್ತದೆ

ಅವನ ಹತ್ತಿರ ನಿಂತಿದ್ದವರು ಪೌಲನನ್ನು ಕುರಿತು"ದೇವರು ನೇಮಿಸಿದ ಮಹಾಯಾಜಕನನ್ನು ನೀನು ನಿಂದಿಸುತ್ತೀಯಾ ?" ಎಂದು ಕೇಳಿದರು (ಆ.ಕೃ. 23:4 ULB)

ಪೌಲನನ್ನು ಕುರಿತು ಪ್ರಶ್ನಿಸಿದೆ ಜನರು ಅವನು ಮಹಾಯಾಜಕನನ್ನು ನಿಂದಿಸಿದ ರೀತಿಯ ಬಗ್ಗೆ ಪ್ರಶ್ನಿಸಲಿಲ್ಲ. ಪೌಲನು ಮಹಾಯಾಜಕನನ್ನು ನಿಂದಿಸಿದ್ದಕ್ಕಾಗಿ ಆ ಜನರು ಈ ಪ್ರಶ್ನೆಗಳನ್ನು ಕೇಳಿದರು. ಸತ್ಯವೇದದಲ್ಲಿ ಅನೇಕ ಅಲಂಕಾರಿಕ ಪ್ರಶ್ನೆಗಳು ಇವೆ. ಇಂತಹ ಅಲಂಕಾರಿಕ ಪ್ರಶ್ನೆಗಳನ್ನು ಭಾವನೆಗಳ ಮನೋದೋರಣೆಯನ್ನು ವ್ಯಕ್ತಪಡಿಸಲು, ಜನರಿಗೆ ತಿಳಿದ ವಿಚಾರಗಳನ್ನು ಅಳವಡಿಸಿಕೊಳ್ಳಲು ಮತ್ತು ಮಾತನಾಡಲು ಉದ್ದೇಶಿಸಿರುವ ವಿಚಾರಗಳನ್ನು ಪರಿಚಯಿಸಲು ಬಳಸುವ ಉದ್ದೇಶ ಇವುಗಳಿಗಿದೆ.

ಕಾರಣ ಇದೊಂದು ಭಾಷಾಂತರ ತೊಡಕು.

  • ಕೆಲವು ಭಾಷೆಯಲ್ಲಿ ಇಂತಹ ಅಲಂಕಾರಿಕ ಪ್ರಶ್ನೆಗಳನ್ನು ಬಳಸುವುದಿಲ್ಲ; ಆದರೆ ಇದರಲ್ಲಿ ಯಾವಾಗಲೂ ಮಾಹಿತಿ ಪಡೆಯಲು ಬೇಡಿಕೆ ಇರುತ್ತದೆ.
  • ಕೆಲವು ಭಾಷೆಯಲ್ಲಿ ಇಂತಹ ಅಲಂಕಾರಿಕ ಪ್ರಶ್ನೆಗಳನ್ನು ಬಳಸಲಾಗುತ್ತದೆ. ಆದರೆ ಇದರ ಉದ್ದೇಶ ಅತಿ ಕಡಿಮೆ, ಸತ್ಯವೇದದಲ್ಲಿ ವಿಭಿನ್ನವಾಗಿ ಇರುತ್ತದೆ.
  • ಭಾಷೆಗಳಲ್ಲಿ ಇಂತಹ ವಿಭಿನ್ನತೆಗಳು ಇರುವುದರಿಂದ ಕೆಲವು ಓದುಗರು ಸತ್ಯವೇದದಲ್ಲಿನ ಪ್ರಶ್ನೆಗಳನ್ನು ತಪ್ಪಾಗಿ ತಿಳಿದುಕೊಳ್ಳುವ ಸಂಭವವಿರುತ್ತದೆ.

ಸತ್ಯವೇದದಲ್ಲಿನ ಉದಾಹರಣೆಗಳು

ನೀನು ಇನ್ನು ಇಸ್ರಾಯೇಲರ ಅರಸನಲ್ಲವೇ? (1 ಅರಸು 21:7 ULB)

ರಾಜನಾದ ಆಹಬನ ಹೆಂಡತಿ ಈಜೆಬೆಲಳು ರಾಜನಿಗೆ ಈಗಾಗಲೇ ತಿಳಿದಿರುವ ವಿಷಯವನ್ನು ನೆನಪು ಮಾಡಲು ಈ ಮಾತನ್ನು ಹೇಳಿದಳು, ಏಕೆಂದರೆ ಅವನು ಇನ್ನು ಇಸ್ರಾಯೇಲರ ರಾಜನಾಗಿದ್ದನು. ಅವಳ ಅಲಂಕಾರಿಕ ಪ್ರಶ್ನೆ ಅವಳ ಉದ್ದೇಶವನ್ನು ವಿಶೇಷ ಒತ್ತು ನೀಡಿ ಅವಳು ಹೇಳಬೇಕಾದ ವಿಷಯವನ್ನು ರಾಜನಾದ ಆಹಬನು ಗಣನೀಯವಾಗಿ ಪರಿಗಣಿಸುವಂತೆ ಮಾಡಿತು. ಬಡವನಾದ ನಾಬೋತನ ದ್ರಾಕ್ಷೆತೋಟವನ್ನು ಪಡೆಯಲು ಮನಸ್ಸಿಲ್ಲದ್ದರಿಂದ ಅವನನ್ನು ಖಂಡಿಸಿ ಒಪ್ಪಿಸಲು ಈ ಮಾತುಗಳನ್ನು ಹೇಳಿದಳು. ಅವನು ಇಸ್ರಾಯೇಲಿನ ರಾಜನಾದುದರಿಂದ ಅವನಿಗೆ ಆ ಆಸ್ತಿಯನ್ನು ಪಡೆಯಲು ಎಲ್ಲಾ ರೀತಿಯ ಅಧಿಕಾರವಿದೆ.ಎಂದು ತಿಳಿಸಲು ಅವಳು ಪ್ರಯತ್ನಿಸುತ್ತಿದ್ದಳು.

ಯುವತಿಯುತನ್ನ ಆಭರಣಗಳನ್ನು, ವಧುವು ತನ್ನ ಮುಸುಕನ್ನು ಮರೆಯಲು ಸಾಧ್ಯವೇ ? ಆದರೆ ನನ್ನ ಜನರು ಲೆಕ್ಕವಿಲ್ಲದಷ್ಟು ದಿನ ನನ್ನನ್ನು ಮರೆತಿದ್ದಾರೆ! (ಯೆರೇಮಿಯ 2:32 ULB)

ದೇವರು ತನ್ನ ಜನರು ಈಗಾಗಲೇ ಅದರ ಬಗ್ಗೆ ತಿಳಿದಿದ್ದರೂ ಮರೆತಿರುವ ಬಗ್ಗೆ ಹೇಳಿ ನೆನಪಿಸಲು ಈ ಪ್ರಶ್ನೆ ಕೇಳುತ್ತಿದ್ದಾನೆ. ಯುವತಿಯುತನ್ನ ಆಭರಣಗಳನ್ನು, ವಧುವು ತನ್ನ ಮುಸುಕನ್ನು ಮರೆಯಲು ಸಾಧ್ಯವೇ ? ಎಂದು. ಇವೆಲ್ಲಕ್ಕಿಂತಲೂ ಹೆಚ್ಚಾದ ತನ್ನನ್ನು ಮರೆತ ತನ್ನ ಜನರನ್ನು ಖಂಡಿಸಲು ಈ ಮಾತುಗಳನ್ನು ಹೇಳಿದ್ದಾನೆ.

ನಾನು ಗರ್ಭದಿಂದ ಹುಟ್ಟಿಹೊರಬರುವಾಗಲೇ ಏಕೆ ಸಾಯಲಿಲ್ಲ? (ಯೋಬ 3:11 ULB)

ಯೋಬನು ತನ್ನ ಆಳವಾದ ದುಃಖವನ್ನು ವ್ಯಕ್ತಪಡಿಸಲು ಈ ಮಾತುಗಳನ್ನು ಹೇಳಿದ್ದಾನೆ. ತಾನು ಹುಟ್ಟುತ್ತಿದ್ದಂತೆ ಏಕೆ ಸಾಯಲಿಲ್ಲ ಎಂದು ಈ ಅಲಂಕಾರಿಕ ಪ್ರಶ್ನೆಯ ಮೂಲಕ ಅವನು ಎಷ್ಟು ದುಃಖಿತನಾಗಿದ್ದಾನೆ ಎಂಬುದನ್ನು ಸೂಚಿಸಿದ್ದಾನೆ. ತಾನು ಬದುಕಲೇ ಬಾರದಿತ್ತು ಎಂಬುದು ಅವನ ಬಯಕೆ.

ನನ್ನ ಸ್ವಾಮಿಯ ತಾಯಿಯು ನನ್ನ ಬಳಿಗೆ ಬರುವಷ್ಟು ಭಾಗ್ಯ ನನಗೆ ಎಲ್ಲಿಂದಾಯಿತು? (ಲೂಕ 1:43 ULB)

ಯೇಸುವಿನ ತಾಯಿ ಮರಿಯಳು ತನ್ನ ಬಳಿಗೆ ಬಂದಾಗ ಎಲಿಜಿಬೇತಳು ಆಶ್ಚರ್ಯದಿಂದಲೂ ಸಂತೋಷದಿಂದ ಪ್ರಶ್ನೆಯನ್ನು ಕೇಳುತ್ತಾಳೆ.

ನಿಮ್ಮಲ್ಲಿ ಯಾರಾದರೂ ರೊಟ್ಟಿ ಕೇಳುವ ಮಗನಿಗೆ ಕಲ್ಲನ್ನು ಕೊಡುವರೇ ? (ಮತ್ತಾಯ 7:9 ULB)

ಜನರು ಈಗಾಗಲೇ ತಿಳಿದಿರುವ ವಿಷಯವನ್ನೇ ಬಳಸಿ ಯೇಸು ಅವರನ್ನು ಪ್ರಶ್ನಿಸುತ್ತಾನೆ.ಒಬ್ಬ ಒಳ್ಳೆಯ ತಂದೆ ತನ್ನ ಮಗನಿಗೆ ಒಳ್ಳೆಯದನ್ನೇ ತಿನ್ನಲು ಕೊಡುವನೇ ಹೊರತು ಕೆಟ್ಟದ್ದನ್ನಲ್ಲ. ಈ ವಾಕ್ಯವನ್ನು ಪರಿಚಯಿಸುವ ಮೂಲಕ ಯೇಸು ತನ್ನ ಜನರಿಗೆ ದೇವರು ಏನೇನು ಮಾಡಬಲ್ಲ ಎಂಬುದನ್ನು ತಿಳಿಸಲು ಬಳಸಿದ್ದಾನೆ.ಹಾಗೆಯೇ ಮುಂದೆ ಅಲಂಕಾರಿಕ ಪ್ರಶ್ನೆಗಳ ಮೂಲಕವೂ ತಿಳಿಸುತ್ತಾನೆ.

ಹಾಗಾದರೆ ಕೆಟ್ಟವರಾದ ನೀವು ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾದ ವರಗಳನ್ನು ಕೊಡುವನಲ್ಲವೇ ? (ಮತ್ತಾಯ 7:11 ULB)

ಯೇಸು ಈ ಪ್ರಶ್ನೆಯನ್ನು ಉಪಯೋಗಿಸುವ ಕಾರಣವೆಂದರೆ ತನ್ನ ಜನರು ತನ್ನ ಬೋಧನೆಗಳನ್ನು ಒತ್ತಿ ಹೇಳಲು ಹಾಗೂ ತನ್ನ ಬಳಿ ಬೇಡಿಕೇಳುವ ಜನರಿಗೆ ಒಳ್ಳೆಯದನ್ನೇ ನೀಡುವನು ಎಂದು ತಿಳಿಸಲು ಬಳಸಿದ್ದಾನೆ.

ದೇವರ ರಾಜ್ಯವು ಯಾವುದಕ್ಕೆ ಹೋಲಿಕೆಯಾಗಿದೆ ? ಅದನ್ನು ನಾನು ಯಾವುದಕ್ಕೆ ಹೋಲಿಸಲಿ ? ಅದು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ, ಒಬ್ಬ ಮನುಷ್ಯನು ಅದನ್ನು ತನ್ನ ಹೊಲದಲ್ಲಿ ಹಾಕಿದನು… (ಲೂಕ 13:18-19 ULB)

ಯೇಸು ಈ ಪ್ರಶ್ನೆಯನ್ನು ತಾನು ಹೇಳಲು ಉದ್ದೇಶಿಸಿರುವ ವಿಷಯವನ್ನು ತಿಳಿಸಲು ಪ್ರಯತ್ನಿಸಿದ್ದಾನೆ. ಆತನು ದೇವರ ರಾಜ್ಯವನ್ನು ಹೋಲಿಸಲು ಇದನ್ನು ಬಳಸಿದ್ದಾನೆ.

ಭಾಷಾಂತರ ಕೌಶಲ್ಯಗಳು

ನೀವು ಈ ಅಲಂಕಾರಿಕ ಪ್ರಶ್ನೆಗಳನ್ನು ಭಾಷಾಂತರಿಸುವ ಮೊದಲು ಈ ಪ್ರಶ್ನೆ ನಿಜವಾಗಲೂ ಅಲಂಕಾರಿಕ ಪ್ರಶ್ನೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಏಕೆಂದರೆ ಕೆಲವೊಮ್ಮೆ ಇವು ಮಾಹಿತಿ ಕೇಳುವ ಪ್ರಶ್ನೆಗಳಾಗಿರುವ ಸಾಧ್ಯತೆ ಇರುತ್ತದೆ. ಪ್ರಶ್ನೆ ಕೇಳುವ ವ್ಯಕ್ತಿಗೆ ಈಗಾಗಲೇ ಉತ್ತರ ತಿಳಿದಿದೆಯೇ ಎಂಬುದರ ಬಗ್ಗೆ ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಬೇಕು.

ಹಾಗಾದರೆ ಇದು ಅಲಂಕಾರಿಕ ಪ್ರಶ್ನೆಯೇ ? ಇದಕ್ಕೆ ಯಾರೂ ಉತ್ತರಿಸದಿದ್ದರೆ ಯಾರು ಪ್ರಶ್ನೆ ಕೇಳಿದರೋ ಅವರಿಗೆ ಉತ್ತರ ತಿಳಿದಿದೆಯೇ ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಇದೊಂದು ಅಲಂಕಾರಿಕ ಪ್ರಶ್ನೆ. ನಿಮಗೆ ಪ್ರಶ್ನೆ ಅಲಂಕಾರಿಕ ಪ್ರಶ್ನೆ ಎಂದು ತಿಳಿದರೆ ಅದರ ಉದ್ದೇಶ ಏನು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಈ ಪ್ರಶ್ನೆಯನ್ನು ಉತ್ತೇಜಿಸಲು ಬಳಸಿದೆಯೇ ?ಅಥವಾ ಖಂಡಿಸಲು ಬಳಸಿದೆಯೇ ? ಅಥವಾ ಕೇಳಿಸಿಕೊಳ್ಳುವ ವ್ಯಕ್ತಿಯನ್ನು ಅಪಮಾನಗೊಳಿಸಲು ಬಳಸಿದೆಯೇ ? ತಿಳಿಯಬೇಕು. ಇದು ಹೊಸ ವಿಷಯವನ್ನು ತರಲು ಬಳಸಿರುವಂತದ್ದೇ ? ಅಥವಾ ಬೇರೆ ಏನಾದರೂ ಮಾಡಲು ಬಳಸಿರುವಂತದ್ದೇ ?

ಇಂತಹ ಅಲಂಕಾರಿಕ ಪ್ರಶ್ನೆಗಳ ಉದ್ದೇಶವನ್ನು ನೀವು ತಿಳಿದುಕೊಂಡಿದ್ದರೆ ಅದನ್ನು ಎಷ್ಟು ಸಾಧ್ಯವೋ ಅಷ್ಟು ಸಹಜವಾಗಿ ಭಾಷಾಂತರ ಮಾಡುವ ಭಾಷೆಯಲ್ಲಿ ವ್ಯಕ್ತಪಡಿಸಲು ಪ್ರಯತ್ನಿಸಿ. ಇದು ಒಂದು ಗಳಿಕೆಯಾಗಿರಬಹುದು, ಪ್ರಶ್ನೆಯಾಗಿರಬಹುದು ಅಥವಾ ಆಶ್ಚರ್ಯಸೂಚಕ ಭಾವನಾಮವಾಗಿರಬಹುದು. ನಿಮ್ಮ ಭಾಷೆಯಲ್ಲಿ ಇಂತಹ ಅಲಂಕಾರಿಕ ಪ್ರಶ್ನೆಗಳನ್ನು ಸಹಜವಾಗಿ ಮತ್ತು ಸರಿಯಾದ ಅರ್ಥನೀಡುವಂತೆ ಬಳಸಲು ಸಾಧ್ಯವಾದರೆ ಪರಿಗಣಿಸಬಹುದು. ಹಾಗಲ್ಲದಿದ್ದರೆ ಇಲ್ಲಿ ಕೆಲವು ಆಯ್ಕೆಗಳನ್ನು ನೀಡಿದೆ.

  1. ಪ್ರಶ್ನೆಯ ನಂತರ ಉತ್ತರವನ್ನು ಸೇರಿಸಿ.
  2. ಅಲಂಕಾರಿಕ ಪ್ರಶ್ನೆಯನ್ನು ಒಂದು ಸರಳವಾಕ್ಯವಾಗಿ ಇಲ್ಲವೇ ಭಾವಸೂಚಕ ವಾಕ್ಯವಾಗಿ ಬದಲಾಯಿಸಿ ಬಳಸಬಹುದು.
  3. ಅಲಂಕಾರಿಕ ಪ್ರಶ್ನೆಯನ್ನು ಒಂದು ಸರಳವಾಕ್ಯವಾಗಿ ಬದಲಾಯಿಸಿ ಅನಂತರ ಒಂದು ಚಿಕ್ಕ ಪ್ರಶ್ನೆಯನ್ನು ಉಪಯೋಗಿಸಬಹುದು.
  4. ಮೂಲಭಾಷೆಯಲ್ಲಿ ಹೇಗೆ ವ್ಯಕ್ತವಾಗಿದೆಯೋ ಹಾಗೆ ನಿಮ್ಮ ಭಾಷೆಯಲ್ಲಿ ತಿಳಿಸಲು ಸಾಧ್ಯವಾಗುವಂತೆ ಪ್ರಶ್ನೆಯ ರೂಪವನ್ನು ಬದಲಾಯಿಸಬಹುದು.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.

  1. ಪ್ರಶ್ನೆಯ ನಂತರ ಉತ್ತರವನ್ನು ಸೇರಿಸಿ.
  • ಕನ್ಯೆಯಾದ ಯುವತಿಯು ತನ್ನ ಆಭರಣಗಳನ್ನು ವಧುವು ತನ್ನ ಮುಸುಕನ್ನು ಮರೆಯುವುದುಂಟೇ?ಆದರೆ ನನ್ನ ಜನರು ಲೆಕ್ಕವಿಲ್ಲದಷ್ಟು ದಿನ ನನ್ನನ್ನು ಮರೆತಿದ್ದಾರೆ ! (ಯೆರೇಮಿಯ 2:32 ULB)

    • ಕನ್ಯೆಯಾದವಳು ತನ್ನ ಆಭರಣಗಳನ್ನು ವಧುವು ತನ್ನ ಮುಸುಕನ್ನು ಮರೆಯಲು ಸಾಧ್ಯವೇ ? ಖಂಡಿತ ಇಲ್ಲ !ಆದರೆ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳವರೆಗೆ ನನ್ನನ್ನು ಮರೆತಿದ್ದಾರೆ !
  • ಹಾಗಾದರೆ ನಿಮ್ಮಲ್ಲಿ ಯಾರಾದರೂ ರೊಟ್ಟಿ ಕೇಳುವ ಮಗನಿಗೆ ಕಲ್ಲನ್ನು ಕೊಡುವನೇ ? (ಮತ್ತಾಯ7:9 ULB)

    • ಅಥವಾ ನಿಮ್ಮಲ್ಲಿ ಯಾರಾದರೂ ರೊಟ್ಟಿ ಕೇಳುವ ಮಗನಿಗೆ ಕಲ್ಲು ಕೊಡುವನೇ ? ಯಾರೂ ಹಾಗೆ ಮಾಡಲಾರಿರಿ !
  1. ಅಲಂಕಾರಿಕ ಪ್ರಶ್ನೆಗಳನ್ನು ಸರಳವಾಕ್ಯವನ್ನಾಗಿ ಇಲ್ಲವೇ ಭಾವಸೂಚಕ ವಾಕ್ಯವನ್ನಾಗಿ ಪರಿವರ್ತಿಸಿ.
  • ದೇವರ ರಾಜ್ಯವು ಯಾವುದಕ್ಕೆ ಹೋಲಿಕೆಯಾಗಿದೆ ?ನಾನು ಅದನ್ನು ಯಾವುದಕ್ಕೆ ಹೋಲಿಸಲಿ ?ಅದು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ !.. (ಲೂಕ 13:18-19 ULB)
    • ಹೌದು ದೇವರ ರಾಜ್ಯವುಅದರಂತೆ ಇದೆ !ಅದು ಸಾಸಿವೆ ಕಾಳಿನಂತಿದೆ…"

ಅವನ ಹತ್ತಿರ ನಿಂತಿದ್ದವರು ಪೌಲನನ್ನು ಕುರಿತು"ದೇವರು ನೇಮಿಸಿದ ಮಹಾಯಾಜಕನನ್ನು ನೀನು ನಿಂದಿಸುತ್ತೀಯಾ ?" ಎಂದು ಕೇಳಿದರು (ಆ.ಕೃ. 23:4 ULB)

  • ನೀವು ದೇವರು ನೇಮಿಸಿದ ಮಹಾ ಯಾಜಕನನ್ನು ನಿಂದಿಸಬಾರದು !

  • >ನಾನು ಗರ್ಭದಿಂದ ಹುಟ್ಟಿಹೊರಬರುವಾಗಲೇ ಏಕೆ ಸಾಯಲಿಲ್ಲ? (ಯೋಬ3:11 ULB)

    • ನಾನು ನನ್ನ ತಾಯಿಯ ಗರ್ಭದಿಂದ ಹುಟ್ಟಿಬರುವಾಗಲೇ ಸತ್ತಿದ್ದರೆ ಚೆನ್ನಾಗಿತ್ತು ಎಂದು ಬಯಸುತ್ತೇನೆ !
  • >ನನ್ನ ಸ್ವಾಮಿಯ ತಾಯಿಯು ನನ್ನ ಬಳಿಗೆ ಬರುವಷ್ಟು ಭಾಗ್ಯ ನನಗೆ ಎಲ್ಲಿಂದಾಯಿತು? ? (ಲೂಕ 1:43 ULB)

    • ಇದೇನಾಶ್ಚರ್ಯ ನನ್ನ ಸ್ವಾಮಿಯ ತಾಯಿ ನನ್ನ ಬಳಿಗೆ ಬಂದಿದ್ದಾಳೆ !
  1. ಅಲಂಕಾರಿಕ ಪ್ರಶ್ನೆಯನ್ನು ಒಂದು ಸರಳ ವಾಕ್ಯವಾಗಿ ಬದಲಾಯಿಸಿ ಅನಂತರ ಒಂದು ಚಿಕ್ಕ ಪ್ರಶ್ನೆಯ ಮೂಲಕ ಅನುಸರಿಸಬಹುದು
  • ನೀನು ಇನ್ನು ಇಸ್ರಾಯೇಲ್ ರಾಜ್ಯವನ್ನು ಆಳುತ್ತಿಲ್ಲವೇ ? (1 ಅರಸರ 21:7 ULB)
    • ನೀನು ಇನ್ನು ಇಸ್ರಾಯೇಲ್ ರಾಜ್ಯವನ್ನು ಆಳುತ್ತಿರುವೆ, ಹೌದೋ ಅಲ್ಲವೋ ?
  1. ಮೂಲಭಾಷೆಯಲ್ಲಿ ಹೇಗೆ ವ್ಯಕ್ತವಾಗಿದೆಯೋ ಹಾಗೆ ನಿಮ್ಮ ಭಾಷೆಯಲ್ಲಿ ತಿಳಿಸಲು ಸಾಧ್ಯವಾಗುವಂತೆ ಪ್ರಶ್ನೆಯ ರೂಪವನ್ನು ಬದಲಾಯಿಸಬಹುದು.
  • ನಿಮ್ಮಲ್ಲಿ ಯಾರಾದರೂ ರೊಟ್ಟಿ ಕೇಳುವ , ಮಗನಿಗೆ ಕಲ್ಲನ್ನು ಕೊಡುವರೇ ? (ಮತ್ತಾಯ 7:9 ULB)

    • ನಿಮ್ಮ ಮಗನು ನಿಮ್ಮಿಂದ ರೊಟ್ಟಿ ಬಯಸಿದರೆ ನೀವು ಅವನಿಗೆ ಕಲ್ಲು ಕೊಡುವಿರೇ ?
  • ಕನ್ಯೆಯಾದವಳು ತನ್ನ ಆಭರಣಗಳನ್ನು, ವಧುವು ತನ್ನ ಮುಸುಕನ್ನು ಮರೆಯುವಳೇ? ಆದರೆ ನನ್ನ ಜನರು ನನ್ನನ್ನು ಅನೇಕ ದಿನಗಳವರೆಗೆ ಮರೆತುಬಿಟ್ಟಿದ್ದಾರೆ ! (ಯೆರೇಮಿಯ 2:32 ULB)

    • ಕನ್ಯೆಯಾದವಳು ತನ್ನ ಆಭರಣಗಳನ್ನುಮರೆಯುವುದಿಲ್ಲ ಹಾಗೆಯೇ ವಧುವು ತನ್ನ ಮುಸುಕನ್ನು ಮರೆಯುವುದಿಲ್ಲ ? ಆದರೆ ನನ್ನ ಜನರು ಲೆಕ್ಕವಿಲ್ಲದಷ್ಟು ದಿನ ನನ್ನನ್ನು ಮರೆತುಬಿಟ್ಟರು.

ಉಪಮಾಲಂಕಾರ.

Translation Manual :: Just-in-Time Learning Modules :: Figures of Speech :: Simile

ಉಪಮಾಲಂಕಾರ ಎಂದರೆ ಎರಡು ವಸ್ತುಗಳ, ನಡುವೆ ಇರುವ ಹೋಲಿಕೆಯನ್ನು ಕುರಿತು ಹೇಳುವುದು, ಆದರೆ ಸಾಮಾನ್ಯವಾಗಿ ಒಂದೇ ಆಗಿರುವುದಿಲ್ಲ

ಒಂದು ವಸ್ತು ಅಥವಾ ವ್ಯಕ್ತಿ ಇನ್ನೊಂದರಂತೆ ಇದೆ, ಇನ್ನೊಬ್ಬರಂತೆ ಇದ್ದಾರೆ ಎಂದು ಹೇಳಲು ಬಳಸುವಂತದ್ದು. ಎರಡು ವಸ್ತುಗಳ ನಡುವೆ, ಇಬ್ಬರು ವ್ಯಕ್ತಿಗಳ ನಡುವೆ ಹೋಲಿಕೆ ಇರುವ ಲಕ್ಷಣಗಳು/ ಅಂಶಗಳು ಇದ್ದರೆ ಅವುಗಳನ್ನು “ಅಂತೆ,” “ಹಾಗೆ” ಎಂಬ ಪದಗಳನ್ನು ಬಳಸಲಾಗುವುದು.

ವಿವರಣೆ

ಉಪಮಾಲಂಕಾರ ಎಂದರೆ ಎರಡು ವಸ್ತು, ಇಬ್ಬರು ವ್ಯಕ್ತಿಗಳ ನಡುವೆ ಇರುವ ಹೋಲಿಕೆಯನ್ನು ಕುರಿತು ಹೇಳುವುದು, ಆದರೆ ಸಾಮಾನ್ಯವಾಗಿ ಒಂದೇ ಆಗಿರುವುದಿಲ್ಲ

ಇದು ಎರಡು ವಸ್ತುಗಳು ಅಥವಾ ಇಬ್ಬರು ವ್ಯಕ್ತಿಗಳು ಸಮಾನ ಗುಣಲಕ್ಷಣಗಳನ್ನು ಹೊಂದಿದ್ದರೆ ಮತ್ತು “ಅಂತೆ,” "ಹಾಗೆ " ಎಂಬ ಪದಗಳನ್ನುಹೊಂದಿರುವಂತೆ ಗಮನವಹಿಸಲಾಗುತ್ತದೆ.

ಜನರ ಗುಂಪುಗಳನ್ನು ನೊಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲಾ .ಎಂದು ಅವರ ಮೇಲೆ ಕನಿಕರಪಟ್ಟನು. (ಮತ್ತಾಯ 9:36)

ಯೇಸುವು ಜನರ ಗುಂಪನ್ನು ಕುರುಬನಿಲ್ಲದ ಕುರಿಗಳಿಗೆ ಹೋಲಿಕೆ ಮಾಡಿದ್ದಾನೆ. ತಮ್ಮನ್ನು ಮುನ್ನಡೆಸುವ ಕುರುಬನಿಲ್ಲದಿದ್ದರೆ ಕುರಿಗಳು ಭಯದಿಂದ ಇರುತ್ತವೆ. ಜನರ ಗುಂಪು ಸಹ ಕುರಿಗಳಂತೆ ದಿಕ್ಕಿಲ್ಲದವರಾಗುತ್ತಾರೆ.ಏಕೆಂದರೆ ಅವರನ್ನು ಮುನ್ನಡೆಸಲು ಉತ್ತಮ ಧಾರ್ಮಿಕ ನಾಯಕರು ಇಲ್ಲದೆ ಕಂಗೆಡುತ್ತಾರೆ.

ನೋಡಿರಿ,ತೋಳಗಳ ನಡುವೆ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳಿಸಿಕೊಡುತ್ತೇನೆ.ಆದುದರಿಂದ ಸರ್ಪಗಳಂತೆ ಜಾಣರು . ಪಾರಿವಾಳಗಳಂತೆನಿಷ್ಕಪಟಿಗಳು ಆಗಿರಿ , (ಮತ್ತಾಯ10:16 ULB)

ಯೇಸು ಆತನ ಶಿಷ್ಯರನ್ನು ಕುರಿಗಳಿಗೆ, ಅವರ ಶತೃಗಳನ್ನು ತೋಳಗಳಿಗೆ ಹೋಲಿಸಿದ್ದಾನೆ. ತೋಳಗಳು ಕುರಿಗಳ ಮೇಲೆ ದಾಳಿ ಮಾಡುತ್ತವೆ. ಯೇಸುವಿನ ನಿಂದಕರು ಆತನ ಶಿಷ್ಯರನ್ನು ಎದುರಿಸುತ್ತಾರೆ.

ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು ಯಾವ ಇಬ್ಬಾಯಿ ಕತ್ತಿಗಿಂತಲೂ ಹದವಾದದ್ದು . (ಇಬ್ರಿಯ 4:12 ULB)

ದೇವರ ವಾಕ್ಯವನ್ನು ಇಬ್ಬಾಯಿ ಕತ್ತಿಗೆ ಹೋಲಿಸಿದೆ. ಇಬ್ಬಾಯಿ ಕತ್ತಿಯು ಮನುಷ್ಯನ ಮಾಂಸವನ್ನು ಭೇದಿಸಿ ತೂರಿಹೋಗುವಂತಹ ಆಯುಧ. ದೇವರ ವಾಕ್ಯವು ಅತ್ಯಂತ ಪರಿಣಾಮಕಾರಿಯಾದ ವಾಕ್ಯ, ಪ್ರತಿಯೊಬ್ಬ ವ್ಯಕ್ತಿಯ ಹೃದಯವನ್ನು ಮತ್ತು ಆಲೋಚನೆಗಳನ್ನು ಸ್ಪಷ್ಟವಾಗಿ ತಿಳಿಸುವಂತದ್ದು.

ಉಪಮಾಲಂಕಾರದ ಉದ್ದೇಶ.

  • ಉಪಮಾಲಂಕಾರದ ವಿಶೇಷತೆ ಎಂದರೆ ಅದು ಗೊತ್ತಿಲ್ಲದೆ ಇರುವ ವಿಚಾರಗಳನ್ನು ಗೊತ್ತಿರುವ ವಿಚಾರಗಳೊಂದಿಗೆ ಇರುವ ಸಮಾನ ಅಂಶಗಳನ್ನು ಗುರುತಿಸಿ ಹೇಳುವ ಮೂಲಕ ಉಪಮಾಲಂಕಾರ ತಿಳಿಸುತ್ತದೆ.
  • ಉಪಮಾಲಂಕಾರ ಒಂದು ನಿರ್ದಿಷ್ಟ ವಿಚಾರದ ಬಗ್ಗೆ ವಿಶೇಷ ಒತ್ತು ನೀಡಿ ಹೇಳುತ್ತದೆ. ಕೆಲವೊಮ್ಮೆ ಜನರ ಗಮನವನ್ನು ತನ್ನೆಡೆ ಸೆಳೆದುಕೊಳ್ಳುವ ಉದ್ದೇಶವಿದೆ.
  • ಉಪಮಾಲಂಕಾರ ಓದುಗರ ಮತ್ತು ಅವರ ಮನಸ್ಸಿನಲ್ಲಿ ಮೂಡುವ ಚಿತ್ರಗಳನ್ನು ಮತ್ತು ಅವರು ಓದುವಾಗ ಅನುಭವಕ್ಕೆ ಬರುವ ವಿಚಾರಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ.

ಏಕೆಂದರೆ ಇದೊಂದು ಭಾಷಾಂತರದ ತೊಡಕು.

  • ಓದುವವರಿಗೆ ಈ ಎರಡು ವಿಚಾರಗಳು ಸಮಾನವಾಗಿವೆ ಎಂಬುದು ತಿಳಿಯದೆ ಇರಬಹುದು.
  • ಕೆಲವೊಮ್ಮೆ ಓದುಗರಿಗೆ ಈ ಹೋಲಿಕೆಯ ವಿಚಾರಗಳು ಅಪರಿಚಿತವಾಗಿರಬಹುದು.

ಸತ್ಯವೇದದಿಂದ ಉದಾಹರಣೆಗಳು

ಕ್ರಿಸ್ತ ಯೇಸುವಿನ ಒಳ್ಳೆಸೈನಿಕನಂತೆ ನನ್ನೊಂದಿಗೆ ಶ್ರಮೆಯನ್ನು ಅನುಭವಿಸು . (2 ತಿಮೋಥಿ2:3 ULB)

ಈ ಉಪಮಾಲಂಕಾರದ ವಾಕ್ಯದಲ್ಲಿ ಪೌಲನು ಸೈನಿಕರು ಹೇಗೆ ಶ್ರಮೆಯನ್ನು ಸಹಿಸಿಕೊಳ್ಳುತ್ತಾರೋ ಹಾಗೆ ತಿಮೋಥಿಯೂ ಇರಬೇಕೆಂದು ಉದಾಹರಣೆ ಹೇಳಿ ತಿಳಿಸುತ್ತಾನೆ.

ಮನುಷ್ಯಕುಮಾರನು ಮಿಂಚು ಮಿಂಚುತ್ತಾ ಆಕಾಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಹೇಗೆ ಹೊಳೆಯುವುದೋ .ಹಾಗೆಯೇ ತನ್ನ ದಿನದಲ್ಲಿ ಕಾಣಿಸಿಕೊಳ್ಳುವನು. (ಲೂಕ17:24 ULB)

ಈ ವಾಕ್ಯದ ಮೂಲಕ ದೇವರ ಮಗನು ಮಿಂಚಿನಂತೆ ಎಂದು ನೇರವಾಗಿ ಹೇಳಿಲ್ಲ

ಆದರೆ ವಾಕ್ಯ ಹೇಳಿರುವ ಸಂದರ್ಭದಿಂದ ಮಿಂಚು ಹೇಗೆ ಇದ್ದಕ್ಕಿದ್ದಂತೆ ಆಕಾಸದಲ್ಲಿ ಮೂಡಿ ಬರುತ್ತದೋ ಹಾಗೇ ಮನುಷ್ಯಕುಮಾರನೂ ಸಹ ನಮ್ಮ ಮಧ್ಯೆ ಕಾಣಿಸಿಕೊಳ್ಳುವನು ಮತ್ತು ಆತನನ್ನು ಎಲ್ಲರೂ ನೋಡುವರು. ಯಾರಿಗೂ ಅದನ್ನು ವಿವರಿಸುವ ಅಗತ್ಯವಿಲ್ಲ.

###ಭಾಷಾಂತರ ಕೌಶಲ್ಯಗಳು

ಓದುಗರು ಉಪಮಾಲಂಕಾರದ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಾದರೆ ಅದನ್ನೇ ಪರಿಗಣಿಸಿ. ಅವರು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಕೆಳಗೆ ನಮೂದಿಸಿರುವ ತಂತ್ರಗಳನ್ನು ಬಳಸಬಹುದು :

  1. ಎರಡು ವಸ್ತು ಅಥವಾ ಇಬ್ಬರು ವ್ಯಕ್ತಿಗಳು ಸಮಾನವಾಗಿದ್ದಾರೆ ಎಂದು ಓದುಗರು ಅರ್ಥಮಾಡಿಕೊಳ್ಳದಿದ್ದರೆ ಅವು ಹೇಗೆ ಸಮಾನವಾಗಿದೆ ಎಂದು ವಿವರಿಸಬೇಕು. ಮೂಲ ಓದುಗರಿಗೆ ಇದರ ಅರ್ಥ ಸ್ಪಷ್ಟವಾಗದಿದ್ದರೆ ಇದನ್ನು ಉಪಯೋಗಿಸಬಾರದು.
  2. ಓದುಗರಿಗೆ ನೀವು ಹೋಲಿಕೆಗೆ ಬಳಸಿರುವ ವಾಕ್ಯ ಸ್ಪಷ್ಟವಾಗದಿದ್ದರೆ, ಅಪರಿಚಿತವಾಗಿದ್ದರೆ ನೀವು ಭಾಷಾಂತರ ಮಾಡುತ್ತಿರುವ ಭಾಷೆಯ ಸಂಸ್ಕೃತಿಗೆ ಅನುಗುಣವಾಗಿ ಉದಾಹರಣೆ ಬಳಸಿಕೊಳ್ಳಿ. ಆದರೆ ಸತ್ಯವೇದದ ಸಂಸ್ಕೃತಿಗೆ ತಕ್ಕಂತೆ ಬಳಸಿರುವ ಉದಾಹರಣೆಗಳನ್ನು ಮೀರಿ ಬೇರೆಯ ಉದಾಹರಣೆಗಳನ್ನು, ವಾಕ್ಯಗಳನ್ನು ಬಳಸಬಾರದು.
  3. ಇಲ್ಲಿ ಇನ್ನೊಂದರೊಂದಿಗೆ ಹೋಲಿಸದೆ ಸರಳವಾಗಿ ವಿವರಿಸಿದೆ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ಓದುಗರಿಗೆ ಎರಡು ವಸ್ತುಗಳು, ಇಬ್ಬರು ವ್ಯಕ್ತಿಗಳು ಹೇಗೆ ಸಮಾನವಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಆಗದಿದ್ದರೆ ನೀವು ಅವರಿಗೆ ಅರ್ಥವಾಗುವಂತೆ ತಿಳಿಸಿ. ಮೂಲ ಓದುಗರಿಗೆ ಇದರ ಅರ್ಥ ಸ್ಪಷ್ಟವಾಗದಿದ್ದರೆ ಅವರಿಗೆ ಸಮಾನ ಗುಣವನ್ನು ತಿಳಿಸುವ ಅಗತ್ಯವಿಲ್ಲ
  • ನೋಡಿರಿ, ನಾನು ನಿಮ್ಮನ್ನು ತೋಳಗಳ ನಡುವೆ ಕುರಿಗಳನ್ನು ಕಳುಹಿಸುವಂತೆ , ನಿಮ್ಮನ್ನು ಕಳುಹಿಸುವೆನು.! (ಮತ್ತಾಯ 10:16 ULB) – ಈ ವಾಕ್ಯದ ಮೂಲಕ ಕುರಿಗಳನ್ನು ತೋಳಗಳ ನಡುವೆ ಕಳುಹಿಸಿ ಅಪಾಯಕ್ಕೆ ಗುರಿಮಾಡಿದಂತೆ ತನ್ನ ಶಿಷ್ಯರನ್ನು ಶತ್ರುಗಳ ಮಧ್ಯದಲ್ಲಿ ಕಳುಹಿಸಿ ಅಪಾಯಕ್ಕೆ ಗುರಿಯಾಗುವ ಬಗ್ಗೆ ಹೋಲಿಸಿ ಹೇಳಿದ್ದಾನೆ.

    • ನೋಡಿ ನಾನು ನಿಮ್ಮನ್ನು ಕಪಟಿಗಳ, ದುಷ್ಟರ ನಡುವೆ ಕಳುಹಿಸುತ್ತೇನೆ ಇದರಿಂದ ನೀವು ಅಪಾಯಕ್ಕೆ ಗುರಿಯಾಗುವಿರಿ ಹೇಗೆಂದರೆ ತೋಳಗಳಿಂದ ಆವರಿಸಲ್ಪಟ್ಟ ಕುರಿಗಳಂತೆ ಆಗುವಿರಿ ಎಂದನು. .
  • ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು ಇಬ್ಬಾಯಿ ಕತ್ತಿಗಿಂತಲೂ ಹರಿತವಾಗಿಯೂ ಹದವಾದದ್ದು , ! (ಇಬ್ರಿಯ 4:12 ULB)

    • ದೇವರ ವಾಕ್ಯವು ಸಜೀವವಾಗಿಯೂ, ಕಾರ್ಯತತ್ಪರವಾಗಿಯೂ ಇರುವುದು ಮತ್ತು ಇಬ್ಬಾಯಿ ಕತ್ತಿಗಿಂತ ಹರಿತವಾಗಿಯೂ ಹದವಾಗಿಯೂ ಇರುವಂತದ್ದು .
  1. ಓದುಗರಿಗೆ ನೀವು ಹೋಲಿಕೆಗೆ ಬಳಸಿರುವ ವಾಕ್ಯ ಸ್ಪಷ್ಟವಾಗದಿದ್ದರೆ, ಅಪರಿಚಿತವಾಗಿದ್ದರೆ ನೀವು ಭಾಷಾಂತರ ಮಾಡುತ್ತಿರುವ ಭಾಷೆಯ ಸಂಸ್ಕೃತಿಗೆ ಅನುಗುಣವಾಗಿ ಉದಾಹರಣೆಯನ್ನು ಬಳಸಿಕೊಳ್ಳಿ. ಆದರೆ ಸತ್ಯವೇದದ ಸಂಸ್ಕೃತಿಗೆ ತಕ್ಕಂತೆ ಬಳಸಿರುವ ಉದಾಹರಣೆಗಳನ್ನು ಮೀರಿ ಬೇರೆಯ ಉದಾಹರಣೆಗಳನ್ನು, ವಾಕ್ಯಗಳನ್ನು ಬಳಸಬಾರದು.
  • ನಿಮ್ಮ ಓದುಗರಿಗೆ ತೋಳಗಳು ಕುರಿಗಳನ್ನು ಕೊಂದು ತಿನ್ನುತ್ತವೆ ಎಂದು ತಿಳಿದುಕೊಳ್ಳಲು ಅಸಮರ್ಥರಾದರೆ ಯಾವ ಪ್ರಾಣಿ ಇನ್ನೊಂದು ಪ್ರಾಣಿಯನ್ನು ಕೊಲ್ಲುತ್ತದೆಯೋ ಅದರ ಉದಾಹರಣೆ ಕೊಡಬಹುದು. ನೋಡಿರಿ, ನಾನು ನಿಮ್ಮನ್ನು ಬೇಟೆನಾಯಿಗಳ ಮಧ್ಯದಲ್ಲಿ ಕೋಳಿಮರಿಗಳನ್ನು ಕಳಿಸಿದಂತೆ ಕಳುಹಿಸುವೆನು. , ! (ಮತ್ತಾಯ 10:16 ULB)

  • ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವುದಕ್ಕೆ , ನನಗೆ ಎಷ್ಟೋಸಲ ಮನಸ್ಸಿತ್ತು, ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು!. (ಮತ್ತಾಯ 23:37 ULB)

    • ತಾಯಿ ತನ್ನ ಮಕ್ಕಳನ್ನು ಹೇಗೆ ರಕ್ಷಿಸುತ್ತಾಳೋ ಹಾಗೆ ನಾನು ನಿಮ್ಮನ್ನು ರಕ್ಷಿಸಬೇಕೆಂದು ಕಾಯುತ್ತಿದ್ದೆ ಆದರೆ ನೀವು ಅದನ್ನು ನಿರಾಕರಿಸಿದಿರಿ.
  • ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ ಸಾಸಿವೆ ಕಾಳಷ್ಟು ನಂಬಿಕೆ ನಿಮಗೆ ಇರುವುವದಾದರೆ , ! (ಮತ್ತಾಯ 17:20ULB)

    • ನಿಮಗೆ ಸಣ್ಣ ಕಾಳಿನಷ್ಟಾದರೂ ನಂಬಿಕೆ ಇದ್ದರೆ .
  1. ಯಾವುದೇ ಹೋಲಿಕೆಗಳಿಲ್ಲದೆ ಇದನ್ನು ಸರಳವಾಗಿ ವಿವರಿಸಿ.
  • ನೋಡಿರಿ ನಾನು ನಿಮ್ಮನ್ನು ತೋಳಗಳ ನಡುವೆಕುರಿಗಳನ್ನು ಕಳುಹಿಸುವಂತೆ ಕಳುಹಿಸುತ್ತೇನೆ , ! (ಮತ್ತಾಯ 10:16 ULB)

    • ನೋಡಿ ನಾನು ನಿಮ್ಮನ್ನು ನಿಮಗೆ ಕೆಟ್ಟದ್ದನ್ನು ಮಾಡುವ ಜನರ ಮಧ್ಯೆ ಕಳುಹಿಸುತ್ತೇನೆ .
  • ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವುದಕ್ಕೆ , ನನಗೆ ಎಷ್ಟೋ ಸಲ ಮನಸ್ಸಿತ್ತು, ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು!. (ಮತ್ತಾಯ 23:37 ULB)

    • ನಾನು ಎಷ್ಟು ಸಲ ನಿಮ್ಮನ್ನು ರಕ್ಷಿಸಲು , ಪ್ರಯತ್ನಿಸಿದರೂ ನೀವು ನಿರಾಕರಿಸಿದಿರಿ.

ಉಪಲಕ್ಷಣಾಲಂಕಾರ

Translation Manual :: Just-in-Time Learning Modules :: Figures of Speech :: Synecdoche

ವಿವರಣೆ

ಉಪಲಕ್ಷಣಾಲಂಕಾರ ಎಂಬುದು ಅಲಂಕಾರವಾಗಿದೆ, ಮಾತನಾಡುವವನು ಈ ಅಲಂಕಾರದಲ್ಲಿ ಪೂರ್ಣ ವಸ್ತುವಿಗೆ ಬದಲು ಭಾಗವನ್ನು ಅಥವಾ ಭಾಗಕ್ಕೆ ಬದಲು ಪೂರ್ಣ ವಸ್ತವನ್ನು ಸೂಚಿಸುತ್ತಾನೆ.

ನನ್ನ ಆತ್ಮವು ಕರ್ತನನ್ನು ಕೊಂಡಾಡುತ್ತದೆ. (ಲೂಕ 1:46 ULT)

ಮರಿಯಳು ಕರ್ತನು ಮಾಡುತ್ತಿರುವ ಕಾರ್ಯಕ್ಕಾಗಿ ತುಂಬಾ ಸಂತೋಷಭರಿತಳಾಗಿದ್ದಳು, ಆದ್ದರಿಂದ “ನನ್ನ ಆತ್ಮವು/ ಪ್ರಾಣವು” ಎಂದರೆ ಅವಳ ಭಾವನಾತ್ಮಕ ಅಂಗವಾದ ಅಂತರಂಗವು, ಪೂರ್ಣವಾಗಿ ಅವಳನ್ನೇ ಸೂಚಿಸುತ್ತದೆ.

ಫರಿಸಾಯರು ಆತನಿಗೆ, “ನೋಡು ಇವರು ಧರ್ಮಸಮ್ಮತವಲ್ಲದ ಕೆಲಸವನ್ನು ಏಕೆ ಮಾಡುತ್ತಾರೆ…?” ಎಂದು ಕೇಳಿದರು. (ಮಾರ್ಕ 2:24 ULT)

ಅಲ್ಲಿ ನಿಂತಿದ್ದ ಎಲ್ಲಾ ಫರಿಸಾಯರು ಒಂದೇ ಸಮಯದಲ್ಲಿ ಅದೇ ಮಾತುಗಳನ್ನು ಹೇಳಲಿಲ್ಲ. ಅದರ ಬದಲು, ಆ ಗುಂಪಿನಿಂದ ಒಬ್ಬ ಪ್ರತಿನಿಧಿಸಿ ಈ ಮಾತುಗಳನ್ನು ಆಡಿದನು.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  • ಕೆಲವು ಓದುಗರು ಉಪಲಕ್ಷಣಾಲಂಕಾರವನ್ನು ಗುರುತಿಸುವುದಿಲ್ಲ ಆದ್ದರಿಂದ ಇದನ್ನು ವಾಚ್ಯಾರ್ಥಯುಳ್ಳ ವಾಕ್ಯವೆಂದು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ.
  • ಕೆಲವು ಓದುಗರು ತಾವು ಪದಗಳನ್ನು ವಾಚ್ಯಾರ್ಥವಾಗಿ ಅರ್ಥಮಾಡಿಕೊಳ್ಳಬಾರದು ಎಂದು ತಿಳಿದುಕೊಳ್ಳುವರು, ಆದರೂ ಇದರ ಅರ್ಥವೇನೆಂದು ಅವರು ತಿಳಿದುಕೊಳ್ಳದಿರಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು

ನನ್ನ ಕೈಗಳು ಮಾಡಿ ಮುಗಿಸಿದಂಥ ಎಲ್ಲಾ ಕಾರ್ಯಗಳನ್ನು ನಾನು ನೋಡಿದೆನು (ಪ್ರಸಂಗಿ 2:11 ULT)

“ನನ್ನ ಕೈಗಳು” ಎಂಬುದು ಇಡೀ ವ್ಯಕ್ತಿಯನ್ನು ಪ್ರತಿನಿಧಿಸುವ ಉಪಲಕ್ಷಣಾಲಂಕಾರವಾಗಿದೆ. ಏಕೆಂದರೆ ಒಬ್ಬ ವ್ಯಕ್ತಿಯು ಮಾಡಿ ಮುಗಿಸುವ ಕಾರ್ಯಗಳಲ್ಲಿ ಅವನ ತೋಳುಗಳು ಮತ್ತು ದೇಹದ ಎಲ್ಲಾ ಅಂಗಾಂಗಗಳು, ಮನಸ್ಸು ಎಲ್ಲವೂ ಒಳಗೊಂಡಿರುತ್ತವೆ. ವ್ಯಕ್ತಿಯನ್ನು ಪ್ರತಿನಿಧಿಸಲು ಕೈಗಳನ್ನು ಆರಿಸಿಕೊಳ್ಳಲಾಗಿದೆ ಏಕೆಂದರೆ ಅವುಗಳು ಕೆಲಸದಲ್ಲಿ ನೇರವಾಗಿ ಭಾಗಿಯಾಗಿರುವ ದೇಹದ ಭಾಗಗಳಾಗಿವೆ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ಉಪಲಕ್ಷಣಾಲಂಕಾರ ಪ್ರಯೋಗವು ಸಹಜವಾಗಿರುವುದಾದರೆ ಮತ್ತು ಸರಿಯಾದ ಅರ್ಥ ಕೊಡುವುದಾದರೆ ಅದನ್ನು ಬಳಸಿಕೊಳ್ಳಿರಿ. ಇಲ್ಲದಿದ್ದರೆ ಇಲ್ಲಿ ಇನ್ನೊಂದು ಆಯ್ಕೆಯಿದೆ:

  1. ಉಪಲಕ್ಷಣಾಲಂಕಾರವು ಯಾವುದನ್ನು ಸೂಚಿಸುತ್ತದೋ ಅದನ್ನು ನಿರ್ದಿಷ್ಟವಾಗಿ ತಿಳಿಸಿರಿ.

ಭಾಷಾಂತರ ತಂತ್ರಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.

(1) ಉಪಲಕ್ಷಣಾಲಂಕಾರವು ಯಾವುದನ್ನು ಸೂಚಿಸುತ್ತದೋ ಅದನ್ನು ನಿರ್ದಿಷ್ಟವಾಗಿ ತಿಳಿಸಿರಿ.

ನನ್ನ ಆತ್ಮವು ಕರ್ತನನ್ನು ಕೊಂಡಾಡುತ್ತದೆ.” (ಲೂಕ 1:46 ULT)

"ನಾನು ಕರ್ತನನ್ನು ಕೊಂಡಾಡುತ್ತೇನೆ.

ಫರಿಸಾಯರು ಆತನಿಗೆ ಹೇಳಿದರು (ಮಾರ್ಕ 2:24 ULT)

ಫರಿಸಾಯರ ಒಬ್ಬ ಪ್ರತಿನಿಧಿಯು ಆತನಿಗೆ ಹೇಳಿದರು…

ನನ್ನ ಕೈಗಳು ಮಾಡಿ ಮುಗಿಸಿದಂಥ ಎಲ್ಲಾ ಕಾರ್ಯಗಳನ್ನು ನಾನು ನೋಡಿದೆನು (ಪ್ರಸಂಗಿ 2:11 ULT)

ನಾನು ಮಾಡಿ ಮುಗಿಸಿದಂಥ ಎಲ್ಲಾ ಕಾರ್ಯಗಳನ್ನು ನಾನು ನೋಡಿದೆನು

Grammar

Translation Manual :: Just-in-Time Learning Modules :: Grammar

ವ್ಯಾಕರಣದ ವಿಷಯಗಳು

Translation Manual :: Just-in-Time Learning Modules :: Grammar :: Grammar Topics

ವ್ಯಾಕರಣದಲ್ಲಿ ಎರಡು ಮುಖ್ಯ ವಿಭಾಗಗಳಿವೆ. 1. ಪದಗಳು 2. ರಚನೆ. ರಚನೆಯಲ್ಲಿ ಕೆಲವು ಪದಗಳನ್ನು ನಾವು ಒಟ್ಟಾಗಿ ಸೇರಿಸಿ ವಾಕ್ಯ ಮಾಡುತ್ತೇವೆ. ಇದರಲ್ಲಿ ನುಡಿಗಟ್ಟು, ಉಪವಾಕ್ಯ ಮತ್ತು ವಾಕ್ಯ ಇರುತ್ತದೆ.

ವಿಭಕ್ತಿ ಪ್ರತ್ಯಯಗಳು ಒಂದು ಭಾಷೆಯಲ್ಲಿ ಎಲ್ಲಾ ಪದಗಳು ವಿಭಕ್ತಿಪ್ರತ್ಯಯಯಗಳ ಗುಂಪಿಗೆ ಸೇರಿದವಾಗಿರುತ್ತದೆ. (ನೋಡಿ ವಿಭಕ್ತಿ ಪ್ರತ್ಯಯ)

ವಾಕ್ಯಗಳು ನಾವು ಮಾತನಾಡುವಾಗ ನಾವು ಯೋಚಿಸಿದ್ದನ್ನು ಪದಗಳ ಮೂಲಕ ವಾಕ್ಯವನ್ನು ರಚಿಸಿ,ಮಾತನಾಡುತ್ತೇವೆ. ಪ್ರತಿಯೊಂದು ವಾಕ್ಯವೂ ಸಾಮಾನ್ಯವಾಗಿ ಯಾವುದಾದರೂ ಸನ್ನಿವೇಶ, ಘಟನೆ ಅಥವಾ ಸ್ಥಿತಿಯ ಬಗ್ಗೆ ಇರುವ ವಿಚಾರಗಳನ್ನು ತಿಳಿಸುತ್ತದೆ. ನೋಡಿ /ವಾಕ್ಯರಚನೆ

  • ವಾಕ್ಯಗಳು ಸಾಮಾನ್ಯವಾಗಿ ಒಂದು ಹೇಳಿಕೆ, ಪ್ರಶ್ನೆ ಕೇಳುವಂತದ್ದು, ಆದೇಶ ನೀಡುವುದು, ಭಾವನೆಗಳನ್ನು ವ್ಯಕ್ತಪಡಿಸುತ್ತವೆ (see Exclamations)
  • ಕೆಲವೊಮ್ಮೆ ವಾಕ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಚಿಕ್ಕ ವಾಕ್ಯ ಪ್ರಭೇದಗಳಿರಬಹುದು. (ನೋಡಿ / ವಾಕ್ಯರಚನೆ)
  • ಕೆಲವು ಭಾಷೆಯಲ್ಲಿ ಕರ್ತರಿ ಮತ್ತು ಕರ್ಮಣಿ ಪ್ರಯೋಗದ ವಾಕ್ಯಗಳು ಇರುತ್ತವೆ. ನೋಡಿ /ಕರ್ತರಿ ಅಥವಾ ಕರ್ಮಣಿ)

ಸಂಬಂಧವಾಚಕ ನಾಮಪದ ಇದು ಎರಡು ನಾಮಪದಗಳ ನಡುವಿನ ಸಂಬಂಧವನ್ನು ಸೂಚಿಸುವಂತದ್ದು. ಇಂಗ್ಲೀಷ್ ಭಾಷೆಯಲ್ಲಿ “ಅ” ಪ್ರತ್ಯಯ “ದೇವರ ಪ್ರೀತಿ” ಅಥವಾ ಅಪೋಸ್ಟ್ರಫಿ “'ಎಸ್” “'s” ನಿಂದ ಉಪಯೋಗಿಸುವ ಪದ."ದೇವರ ಪ್ರೀತಿ –ಅಥವಾ ಸಂಬಂಧವಾಚಕ ಸರ್ವನಾಮ ಬಳಸಿ “ಆತನಪ್ರೀತಿ” (ನೋಡಿ/ಸ್ವಾಮ್ಯ)

ಉಲ್ಲೇಖನ ವಾಖ್ಯಗಳು- ಉಲ್ಲೇಖನ ವಾಕ್ಯಗಳು ಬೇರೊಬ್ಬರು ಹೇಳಿದ ಮಾತುಗಳನ್ನು ವರದಿ ಮಾಡುವುದು, ಹೇಳುವುದು.


ಭಾವವಾಚಕ ನಾಮಪದಗಳು

Translation Manual :: Just-in-Time Learning Modules :: Grammar :: Abstract Nouns

ವಿವರಣೆ

ಮನೋಭಾವಗಳು, ಗುಣಗಳು, ಸಂಗತಿಗಳು ಅಥವಾ ಪರಿಸ್ಥಿತಿಗಳನ್ನು ಸೂಚಿಸುವ ನಾಮಪದಗಳೇ ಭಾವವಾಚಕ ನಾಮಪದಗಳಾಗಿವೆ. ಈ ವಿಷಯಗಳು ಕಣ್ಣಿನಿಂದ ನೋಡುವುದಕ್ಕಾಗಲೀ, ಶಾರೀರಿಕ ಇಂದ್ರಿಯಗಳಿಂದ ಸ್ಪರ್ಶಿಸುವುದಕ್ಕಾಗಲೀ ಸಾಧ್ಯವಿಲ್ಲದಂಥ ಸಂತೋಷ, ತೂಕ, ಒಗ್ಗಟ್ಟು, ಸ್ನೇಹ, ಆರೋಗ್ಯ, ಮತ್ತು ಯುಕ್ತಿ ಎಂಬಂಥವುಗಳಾಗಿವೆ. ಇದೊಂದು ಅನುವಾದದ ಸಮಸ್ಯೆಯಾಗಿದೆ. ಏಕೆಂದರೆ ಕೆಲವು ಭಾಷೆಗಳಲ್ಲಿ ಭಾವವಾಚಕ ನಾಮಪದಗಳನ್ನು ವ್ಯಕ್ತಪಡಿಸಲು ನಿರ್ದಿಷ್ಠ ವಿಷಯಗಳನ್ನು ಬಳಸಬಹುದು, ಇನ್ನೂ ಕೆಲವು ಭಾಷೆಗಳಲ್ಲಿ ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುವ ಬಗ್ಗೆ ಯೋಚಿಸಬೇಕಾಗಬಹುದು.

ನಾಮಪದಗಳು ಒಬ್ಬ ವ್ಯಕ್ತಿಯನ್ನು, ಸ್ಥಳವನ್ನು, ವಸ್ತುವನ್ನು ಅಥವಾ ಕಲ್ಪನೆಗಳನ್ನು ಸೂಚಿಸುವಂಥವುಗಳಾಗಿವೆ. ಭಾವವಾಚಕ ನಾಮಪದಗಳು ಕಲ್ಪನೆಗಳನ್ನು ಸೂಚಿಸುತ್ತದೆ. ಇವು ಮನೋಭಾವಗಳು, ಗುಣಗಳು, ಸಂಗತಿಗಳು, ಸನ್ನಿವೇಶಗಳು ಅಥವಾ ಈ ವಿಚಾರಗಳ ನಡುವಿನ ಸಂಬಂಧಗಳು ಆಗಿರಬಹುದು. ಇವು ನೋಡಲು, ಅಥವಾ ಶಾರೀರಿಕ ಇಂದ್ರಿಯಗಳಿಂದ ಸ್ಪರ್ಶಿಸಲು ಸಾಧ್ಯವಿಲ್ಲದಂಥಗಳಾದ ಸಂತೋಷ, ಸಮಾಧಾನ, ಸೃಷ್ಟಿ, ಒಳ್ಳೆತನ, ತೃಪ್ತಿ, ನ್ಯಾಯ, ಸತ್ಯ, ಸ್ವಾತಂತ್ರ, ದ್ವೇಷ, ಮಂದಬುದ್ದಿ, ಎತ್ತರ, ಉದ್ದ, ತೂಕ ಇತ್ಯಾದಿ.

ಸತ್ಯವೇದಾತ್ಮಕ (ಬಿಬ್ಲಿಕಲ್) ಗ್ರೀಕ್‌ ಮತ್ತು ಅಂಗ್ಲ ಭಾಷೆಗಳಂತಹ ಕೆಲವೊಂದು ಭಾಷೆಗಳು ಬಹಳಷ್ಟು ಭಾವವಾಚಕ ನಾಮಪದಗಳನ್ನು ಬಳಸುತ್ತವೆ. ಈ ಭಾವವಾಚಕ ನಾಮಪದಗಳು ಕ್ರಿಯೆಗಳಿಗೆ ಅಥವಾ ಗುಣಗಳಿಗೆ ಹೆಸರನ್ನು ನೀಡುವ ರೀತಿಯಾಗಿರುವುದ್ದರಿಂದ‌ ಈ ಭಾಷೆಗಳನ್ನು ಮಾತನಾಡುವ ಜನರು ಅವುಗಳನ್ನು ವಸ್ತುಗಳೋ ಎಂಬಂತೆ ಹೇಳಬಹುದು. ಉದಾಹರಣೆಗೆ, ಭಾವವಾಚಕ ನಾಮಪದಗಳನ್ನು ಬಳಸುವ ಭಾಷೆಗಳಲ್ಲಿ “ನಾನು ಪಾಪ ಕ್ಷಮಾಪಣೆಯನ್ನು ನಂಬುತ್ತೇನೆ” ಎಂದು ಜನರು ಹೇಳಬಹುದು. ಆದರೆ ಕೆಲವೊಂದು ಭಾಷೆಗಳು ಭಾವವಾಚಕ ನಾಮಪದಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಈ ಭಾಷೆಗಳಲ್ಲಿ “ಕ್ಷಮಾಪಣೆ” ಮತ್ತು “ಪಾಪ,” ಎಂಬ ಎರಡು ಭಾವವಾಚಕ ನಾಮಪದಗಳು ಇಲ್ಲದಿರಬಹುದು, ಆದರೆ ಅವರು ಅದೇ ಅರ್ಥವನ್ನು ಬೇರೆ ರೀತಿಗಳಲ್ಲಿ ವ್ಯಕ್ತಪಡಿಸಬಹುದು. ಉದಾಹರಣೆಗೆ, ಅವರು ಆ ವಿಚಾರಗಳಿಗೆ ನಾಮಪದಗಳನ್ನು ಬಳಸುವ ಬದಲು ಕ್ರಿಯಾಪದಗಳನ್ನು ಬಳಸಿಕೊಂಡು, “ಜನರು ಪಾಪ ಮಾಡಿದ ಮೇಲೆ ದೇವರು ಅವರನ್ನು ಕ್ಷಮಿಸಲು ಇಚ್ಛೆಯುಳ್ಳವನಾಗಿರುತ್ತಾನೆ” ಎಂದು ಹೇಳಬಹುದು.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ನೀವು ಯಾವ ಬೈಬಲಿನಿಂದ ಭಾಷಾಂತರ ಮಾಡುತ್ತಿರುವಿರೋ ಅದು ಕೆಲವೊಂದು ವಿಚಾರಗಳನ್ನು ವ್ಯಕ್ತಪಡಿಸಲು ಭಾವವಾಚಕ ನಾಮಪದಗಳನ್ನು ಉಪಯೋಗಿಸಬಹುದು. ಆ ವಿಚಾರಗಳನ್ನು ವ್ಯಕ್ತಪಡಿಸಲು ನಿಮ್ಮ ಭಾಷೆಯಲ್ಲಿ ಭಾವವಾಚಕ ನಾಮಪದಗಳನ್ನು ಬಳಸದಿರಬಹುದು; ಅದಕ್ಕೆ ಬದಲಾಗಿ, ಆ ವಿಚಾರಗಳನ್ನು ವ್ಯಕ್ತಪಡಿಸಲು ಪದಗುಚ್ಛಗಳನ್ನು ಬಳಸಬಹುದು. ಇಂತಹ ಪದಗುಚ್ಛಗಳು ಬೇರೆ ರೀತಿಯ ಪದಗಳನ್ನು ಬಳಸಬಹುದು. ಅಂತಹ ಪದಗಳು ಯಾವುದೆಂದರೆ ಗುಣವಾಚಕ, ಕ್ರಿಯಾಪದಗಳು, ಕ್ರಿಯಾವಿಶೇಷಣ ಇವುಗಳನ್ನು ಭಾವವಾಚಕ ನಾಮಪದದ ಅರ್ಥವನ್ನು ವ್ಯಕ್ತಪಡಿಸಲು ಬಳಸಬಹುದು. ಉದಾಹರಣೆಗೆ, “ಅದರ ತೂಕ ಎಷ್ಟು?” “ಇದು ಎಷ್ಟು ತೂಕ ಇರಬಹುದೆಂದು ತೂಗಿ ನೋಡು?” ಅಥವಾ “ಅದು ಎಷ್ಟು ಭಾರ ಇರಬಹುದು?”

ಸತ್ಯವೇದದಲ್ಲಿನ ಉದಾಹರಣೆಗಳು

ಬಾಲ್ಯದಿಂದಲೂ ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ… (2 ತಿಮೊಥೆ 3:15 ULT)

“ಬಾಲ್ಯ” ಎಂಬ ಭಾವಸೂಚಕ ನಾಮಪದವು ಒಬ್ಬ ವ್ಯಕ್ತಿ ಮಗುವಾಗಿದ್ದ ಸಮಯವನ್ನು ಸೂಚಿಸುತ್ತದೆ.

ಆದರೆ ಸಂತುಷ್ಟಿ ಸಹಿತವಾದ ದೈವಭಕ್ತಿ ದೊಡ್ಡ ಲಾಭವೇ ಆಗಿದೆ. (1 ತಿಮೊಥೆ 6:6 ULT)

“ದೈವಭಕ್ತಿ” ಮತ್ತು “ಸಂತುಷ್ಟಿ” ಎಂಬ ಭಾವಸೂಚಕ ನಾಮಪದಗಳು ಭಕ್ತಿಯುಳ್ಳವರು ಮತ್ತು ತೃಪ್ತಿಯುಳ್ಳವರು ಆಗಿರುವುದನ್ನು ಸೂಚಿಸುತ್ತದೆ. “ಲಾಭ” ಎಂಬ ಭಾವಸೂಚಕ ನಾಮಪದವು ಕೆಲವರಿಗೆ ಉಂಟಾಗುವಂಥ ಪ್ರಯೋಜನಗಳನ್ನು ಅಥವಾ ಸಹಾಯವನ್ನು ಸೂಚಿಸುತ್ತದೆ.

ಇಂದು ಈ ಮನೆಗೆ ರಕ್ಷಣೆ ಉಂಟಾಯಿತು, ಏಕೆಂದರೆ ಇವನು ಸಹ ಅಬ್ರಹಾಮನ ವಂಶಿಕನಾಗಿದ್ದಾನೆ (ಲೂಕ 19:9 ULT)

ಇಲ್ಲಿ ರಕ್ಷಣೆ ಎಂಬ ಭಾವಸೂಚಕ ನಾಮಪದವು ರಕ್ಷಿಸಲ್ಪಡುತ್ತಿರುವನು ಎಂಬುದನ್ನು ಸೂಚಿಸುತ್ತದೆ.

ಕೆಲವರು ತಡ ವಾಗಿದೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ತಡಮಾಡುವುದಿಲ್ಲ (2 ಪೇತ್ರ 3:9 ULT)

ತಡ ಎಂಬ ಭಾವಸೂಚಕ ನಾಮಪದವು ಮುಗಿಸಬೇಕಾದ ಕೆಲಸವನ್ನು ನಿಧಾನವಾಗಿ ಮಾಡುವಂಥದ್ದನ್ನು ಸೂಚಿಸುತ್ತದೆ.

ಆತನು ಕತ್ತಲೆಯಲ್ಲಿ ಅಡಗಿರುವ ಗುಪ್ತ ವಿಚಾರಗಳನ್ನು ಬೆಳಕಿಗೆ ತರುವನು ಮತ್ತು ಹೃದಯದ ಉದ್ದೇಶಗಳನ್ನು ಬಹಿರಂಗಪಡಿಸುವನು. (1 ಕೊರಿಂಥ 4:5 ULT)

ಉದ್ದೇಶಗಳು ಎಂಬ ಭಾವಸೂಚಕ ನಾಮಪದವು ಜನರು ಮಾಡಬೇಕೆಂದಿರುವ ಮತ್ತು ಅವುಗಳನ್ನು ಏಕೆ ಮಾಡಬೇಕೆಂದಿರುವರು ಎಂಬ ಕಾರಣಗಳನ್ನು ಸೂಚಿಸುತ್ತದೆ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ಭಾವವಾಚಕ ನಾಮಪದದಂತಹ ಪದಗಳು ಇದ್ದು, ಅವು ಸರಿಯಾದ ಅರ್ಥ ನೀಡುವಂತಾಗಿದ್ದರೆ ಅಂತಹ ಪದಗಳನ್ನೇ ಉಪಯೋಗಿಸಬಹುದು. ಹಾಗೆ ಬಳಸಲು ಪದಗಳು ಇಲ್ಲದಿದ್ದರೆ ಬೇರೊಂದು ಆಯ್ಕೆಯಿದೆ:

  1. ಭಾವವಾಚಕ ನಾಮಪದದ ಅರ್ಥವನ್ನು ವ್ಯಕ್ತಪಡಿಸುವಂಥ ಪದಗುಚ್ಛದೊಂದಿಗೆ ಬೇರೆ ಪದಗಳಲ್ಲಿ ವಾಕ್ಯವನ್ನು ರಚಿಸಿರಿ. ಭಾವವಾಚಕ ನಾಮಪದದ ಉದ್ದೇಶವನ್ನು ವ್ಯಕ್ತಪಡಿಸಲು ಕೆಲವೊಮ್ಮೆ ನಾಮಪದಕ್ಕೆ ಬದಲಾಗಿ ಹೊಸ ಪದಗುಚ್ಛವು ಕ್ರಿಯಾಪದವನ್ನು, ಕ್ರಿಯಾವಿಶೇಷಣವನ್ನು ಮತ್ತು ಗುಣವಾಚಕವನ್ನು ಬಳಸಬಹುದು.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಭಾವವಾಚಕ ನಾಮಪದದ ಅರ್ಥವನ್ನು ವ್ಯಕ್ತಪಡಿಸುವಂಥ ಪದಗುಚ್ಛದೊಂದಿಗೆ ಬೇರೆ ಪದಗಳಲ್ಲಿ ವಾಕ್ಯವನ್ನು ರಚಿಸಿರಿ. ಭಾವವಾಚಕ ನಾಮಪದದ ಉದ್ದೇಶವನ್ನು ವ್ಯಕ್ತಪಡಿಸಲು ಕೆಲವೊಮ್ಮೆ ನಾಮಪದಕ್ಕೆ ಬದಲಾಗಿ ಹೊಸ ಪದಗುಚ್ಛವು ಕ್ರಿಯಾಪದವನ್ನು, ಕ್ರಿಯಾವಿಶೇಷಣವನ್ನು ಮತ್ತು ಗುಣವಾಚಕವನ್ನು ಬಳಸಬಹುದು.

ಬಾಲ್ಯದಿಂದಲೂ ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ… (2 ತಿಮೊಥೆ 3:15 ULT)

ನೀನು ಚಿಕ್ಕ ಮಗುವಾಗಿದ್ದಾಗಿನಿಂದಲೂ ಪರಿಶುದ್ಧ ಗ್ರಂಥಗಳು ನಿನಗೆ ತಿಳಿದುಕೊಂಡಿದೆ.

ಆದರೆ ಸಂತುಷ್ಟಿ ಸಹಿತವಾದ ದೈವಭಕ್ತಿ ದೊಡ್ಡ ಲಾಭವೇ ಆಗಿದೆ. (1 ತಿಮೊಥೆ 6:6 ULT)

ಆದರೆ ಭಕ್ತಿಯುಳ್ಳವರು ಮತ್ತು ಸಂತೃಪ್ತಿಯುಳ್ಳವರು ಆಗಿರುವುದು ತುಂಬಾ ಲಾಭಕರವಾದುದು ಆಗಿದೆ.
ಆದರೆ ನಾವು ಭಕ್ತಿಯುಳ್ಳವರು ಮತ್ತು ಸಂತೃಷ್ಟರು ಆಗಿರುವಾಗ ನಮಗೆ ಹೆಚ್ಚು ಪ್ರಯೋಜನವಾಗುತ್ತದೆ. ಆದರೆ ನಾವು ದೇವರನ್ನು ಗೌರವಿಸಿ ವಿಧೇಯರಾಗುವಾಗ ಮತ್ತು ನಾವು ನಮಗೆ ಇರುವುದರಲ್ಲಿ ಸಂತೋಷ ಪಡುವಾಗ ನಮಗೆ ಹೆಚ್ಚು ಲಾಭವಾಗುತ್ತದೆ.

ಇಂದು ಈ ಮನೆಗೆ ರಕ್ಷಣೆ ಉಂಟಾಯಿತು, ಏಕೆಂದರೆ ಇವನು ಸಹ ಅಬ್ರಹಾಮನ ವಂಶಿಕನಾಗಿದ್ದಾನೆ (ಲೂಕ 19:9 ULT)

ಇಂದು ಈ ಮನೆಯಲ್ಲಿರುವ ಜನರು ರಕ್ಷಣೆ ಹೊಂದಿದರು… ಇಂದು ದೇವರು ಈ ಮನೆಯಲ್ಲಿರುವ ಜನರನ್ನು ರಕ್ಷಿಸಿದನು

ಕೆಲವರು ತಡ ವಾಗಿದೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ತಡಮಾಡುವುದಿಲ್ಲ (2 ಪೇತ್ರ 3:9 ULT)

ಕೆಲವರು ನಿಧಾನ ಮಾಡುತ್ತಾನೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ನಿಧಾನ ಮಾಡುವುದಿಲ್ಲ

ಆತನು ಕತ್ತಲೆಯಲ್ಲಿ ಅಡಗಿರುವ ಗುಪ್ತ ವಿಚಾರಗಳನ್ನು ಬೆಳಕಿಗೆ ತರುವನು ಮತ್ತು ಹೃದಯದ ಉದ್ದೇಶಗಳನ್ನು ಬಹಿರಂಗಪಡಿಸುವನು. (1 ಕೊರಿಂಥ 4:5 ULT)

ಕತ್ತಲೆಯಲ್ಲಿರುವ ಗುಪ್ತ ವಿಚಾರಗಳನ್ನು ಬೆಳಕಿಗೆ ತರುವನು ಮತ್ತು ಜನರು ಮಾಡಬೇಕೆಂದಿರುವ ಕಾರ್ಯಗಳನ್ನು ಮತ್ತು ಅವರು ಮಾಡಬೇಕೆಂದಿರುವುದಕ್ಕೆ ಕಾರಣವನ್ನು ಬಹಿರಂಗ ಪಡಿಸುವನು.


ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು

Translation Manual :: Just-in-Time Learning Modules :: Grammar :: Active or Passive

ಕೆಲವು ಭಾಷೆಗಳಲ್ಲಿ ಕರ್ತರಿ ಮತ್ತು ಕರ್ಮಣಿ ವಾಕ್ಯಗಳು ಇವೆ. ಕರ್ತರಿ ಪ್ರಯೋಗದಲ್ಲಿ ಕರ್ತೃ ಕ್ರಿಯೆಯನ್ನು ಮಾಡುತ್ತಾನೆ. ಕರ್ಮಣಿ ಪ್ರಯೋಗದಲ್ಲಿ ಕರ್ತೃ ಕ್ರಿಯೆಯನ್ನು ಸ್ವೀಕರಿಸಿಕೊಳ್ಳುವನಾಗಿರುತ್ತಾನೆ. ಇಲ್ಲಿ ಕರ್ತೃಪದಕ್ಕೆ ಗುರುತಿಸಿರುವ ಕೆಲವು ಉದಾಹರಣೆಗಳಿವೆ.

  • ಕರ್ತರಿ ಪ್ರಯೋಗ: ನನ್ನ ತಂದೆ ಮನೆಯನ್ನು 2010 ರಲ್ಲಿ ಕಟ್ಟಿಸಿದರು.
  • ಕರ್ಮಣಿ ಪ್ರಯೋಗ: 2010 ರಲ್ಲಿ ನಮ್ಮ ತಂದೆಯಿಂದ ಮನೆ ಕಟ್ಟಲ್ಪಟ್ಟಿತು.

ಭಾಷಾಂತರ ಮಾಡುವವರ ಭಾಷೆಯಲ್ಲಿ ಕರ್ಮಣಿ ಪ್ರಯೋಗದ ವಾಕ್ಯಗಳು ಇಲ್ಲದಿದ್ದರೆ ಸತ್ಯವೇದದಲ್ಲಿ ಕಂಡುಬರುವ ಕರ್ಮಣಿ ಪ್ರಯೋಗ ವಾಕ್ಯಗಳನ್ನು ಹೇಗೆ ಭಾಷಾಂತರ ಮಾಡಬೇಕು ಎಂದು ತಿಳಿದುಕೊಳ್ಳಬೇಕು. ಇತರ ಭಾಷಾಂತರಗಾರರು ಕರ್ತರಿ ವಾಕ್ಯಗಳು ಮತ್ತು ಕರ್ಮಣಿ ವಾಕ್ಯಗಳನ್ನು ಎಲ್ಲಿ ಹೇಗೆ ಉಪಯೋಗಿಸಬೇಕು ಎಂದು ತಿಳಿದಿರಬೇಕು.

ವಿವರಣೆ

ಕೆಲವು ಭಾಷೆಯಲ್ಲಿ ಕರ್ತರಿ ಮತ್ತು ಕರ್ಮಣಿ ಪ್ರಯೋಗಗಳ ವಾಕ್ಯಗಳು ಇವೆ.

  • ಕರ್ತರಿ ಪ್ರಯೋಗದಲ್ಲಿ ಕರ್ತೃ ಕ್ರಿಯೆಯನ್ನು ಮಾಡುತ್ತಾನೆ ಮತ್ತು ಅದನ್ನು ಯಾವಾಗಲೂ ನಮೂದಿಸುವುದಿಲ್ಲ.
  • ಕರ್ಮಣಿ ಪ್ರಯೋಗದಲ್ಲಿ ಕರ್ತೃವಿಗೆ ಕ್ರಿಯೆಯನ್ನು ಮಾಡಲಾಗುತ್ತದೆ. ಇಲ್ಲಿ ಕ್ರಿಯೆ ಮಾಡುವ ವ್ಯಕ್ತಿಯ ಬಗ್ಗೆ ಯಾವಾಗಲೂ ನಮೂದಿಸುವುದಿಲ್ಲ.

ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕರ್ತರಿ ಮತ್ತು ಕರ್ಮಣಿ ವಾಕ್ಯಗಳಲ್ಲಿ ಕರ್ತೃವನ್ನು ಗುರುತಿಸಲಾಗಿದೆ.

  • ಕರ್ತರಿ: ನನ್ನ ತಂದೆ ಈ ಮನೆಯನ್ನು 2010 ರಲ್ಲಿ ಕಟ್ಟಿಸಿದರು.
  • ಕರ್ಮಣಿ: ಈ ಮನೆಯು 2010 ರಲ್ಲಿ ನನ್ನ ತಂದೆಯಿಂದ ಕಟ್ಟಿಸಲ್ಪಟ್ಟಿತು.
  • ಕರ್ಮಣಿ: ಈ ಮನೆ 2010 ರಲ್ಲಿ ಕಟ್ಟಲ್ಪಟ್ಟಿತು. (ಇದರಲ್ಲಿ ಕಟ್ಟುವ ಕ್ರಿಯೆ ಯಾರಿಂದ ಆಯಿತು ಎಂದು ತಿಳಿಸಿಲ್ಲ)

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಎಲ್ಲಾ ಭಾಷೆಗಳು ಕರ್ತರಿ ಪ್ರಯೋಗವನ್ನು ಉಪಯೋಗಿಸುತ್ತವೆ. ಆದರೆ ಕರ್ಮಣಿ ಪ್ರಯೋಗದ ವಾಕ್ಯಗಳು ಕೆಲವು ಭಾಷೆಗಳಲ್ಲಿ ಮಾತ್ರ ಇವೆ, ಇನ್ನು ಕೆಲವು ಭಾಷೆಗಳಲ್ಲಿ ಪ್ರಯೋಗದಲ್ಲಿ ಇರುವುದಿಲ್ಲ. ಕೆಲವು ಭಾಷೆಗಳಲ್ಲಿ ಕರ್ಮಣಿ ಪ್ರಯೋಗವನ್ನು ಕೆಲವೊಂದು ನಿರ್ದಿಷ್ಟ ಉದ್ದೇಶಗಳಿಗಾಗಿ ಉಪಯೋಗಿಸುತ್ತಾರೆ, ಮತ್ತು ಇತರ ಎಲ್ಲಾ ಭಾಷೆಗಳಲ್ಲಿ ಅದೇ ಉದ್ದೇಶಕ್ಕಾಗಿ ಕರ್ಮಣಿ ಪ್ರಯೋಗವನ್ನು ಉಪಯೋಗಿಸುವುದಿಲ್ಲ.

ಕರ್ಮಣಿ ಪ್ರಯೋಗದ ಉದ್ದೇಶಗಳು

  • ಮಾತನಾಡುವವನು ಯಾರಿಗಾಗಿ ಕ್ರಿಯೆಯನ್ನು ಮಾಡಲಾಯಿತ್ತೋ ಆ ವ್ಯಕ್ತಿಯ ಅಥವಾ ವಸ್ತುವಿನ ಬಗ್ಗೆ ಹೇಳುತ್ತಿರುವನೇ ಹೊರತು, ಕ್ರಿಯೆಯನ್ನು ಮಾಡಿದ ವ್ಯಕ್ತಿಯ ಬಗ್ಗೆ ಹೇಳುತ್ತಿಲ್ಲ.
  • ಮಾತನಾಡುವವವನು ಯಾರು ಕ್ರಿಯೆ ಮಾಡಿದನೆಂದು ಹೇಳುತ್ತಿಲ್ಲ.
  • ಕ್ರಿಯೆ ಮಾಡಿದ ವ್ಯಕ್ತಿ ಯಾರು ಎಂದು ಮಾತನಾಡುವವನಿಗೆ ತಿಳಿದಿರುವುದಿಲ್ಲ.

ಕರ್ಮಣಿ ಪ್ರಯೋಗದ ಕುರಿತಾದ ಭಾಷಾಂತರದ ತತ್ವಗಳು

  • ಭಾಷಾಂತರಗಾರರ ಭಾಷೆಯಲ್ಲಿ ಕರ್ಮಣಿ ಪ್ರಯೋಗಗಳು ಇಲ್ಲದಿದ್ದರೆ ಆ ವಿಷಯವನ್ನು ವ್ಯಕ್ತಪಡಿಸಲು ಬೇರೊಂದು ರೀತಿಯನ್ನು ಕಂಡುಕೊಳ್ಳಬೇಕು.
  • ಭಾಷಾಂತರಗಾರರು ಸತ್ಯವೇದದಲ್ಲಿ ಕರ್ಮಣಿ ಪ್ರಯೋಗಗಳನ್ನು ನಿರ್ದಿಷ್ಟ ವಾಕ್ಯಗಳಲ್ಲಿ ಏಕೆ ಉಪಯೋಗಿಸುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಬೇಕು ಮತ್ತು ಕೆಲವೊಮ್ಮೆ ಈ ಕರ್ಮಣಿ ಪ್ರಯೋಗಗಳನ್ನು ಇಂತಹ ವಾಕ್ಯಗಳಲ್ಲಿ ಈ ಉದ್ದೇಶಕ್ಕಾಗಿ ಬಳಸಬಹುದೇ ಬೇಡವೇ ಎಂಬುದರ ಬಗ್ಗೆ ಚಿಂತಿಸಬೇಕಿದೆ.

ಸತ್ಯವೇದದಲ್ಲಿನ ಉದಾಹರಣೆಗಳು

ಮತ್ತು ಅವರ ಬಿಲ್ಲುಗಾರರು ಗೋಡೆಯ ಮೇಲಿನಿಂದ ನಿನ್ನ ಸೈನಿಕರ ಮೇಲೆ ಬಾಣಗಳನ್ನು ಬಿಟ್ಟರು, ಅರಸನ ಸೇವಕರಲ್ಲಿ ಕೆಲವರು ಕೊಲ್ಲಲ್ಪಟ್ಟರು, ಮತ್ತು ಹಿತ್ತೀಯನಾದ ನಿನ್ನ ಸೇವಕ ಊರೀಯನು ಸಹ ಕೊಲ್ಲಲ್ಪಟ್ಟನು. (2 ನೇ ಸಮುವೇಲ 11:24 ULT)

ಇದರ ಅರ್ಥ ಶತ್ರುಗಳ ಕಡೆಯ ಬಿಲ್ಲುಗಾರರು ಬಾಣಬಿಟ್ಟು ಅರಸನ ಸೇವಕರನ್ನು ಮತ್ತು ಊರೀಯನನ್ನು ಕೊಂದರು. ಊರೀಯನಿಗೆ ಮತ್ತು ಅರಸನ ಸೇವಕರಿಗೆ ಏನಾಯಿತು ಎಂಬುದು ಗಮನಿಸಬೇಕಾದ ವಿಷಯವಾಗಿದೆಯೇ ಹೊರತು ಯಾರು ಅವರನ್ನು ಕೊಂದರು ಎಂಬುದು ವಿಷಯವಲ್ಲ. ಇಲ್ಲಿ ಕರ್ಮಣಿ ಪ್ರಯೋಗದ ಉದ್ದೇಶವೇನೆಂದರೆ ಅರಸನ ಸೇವಕರ ಮತ್ತು ಊರೀಯನ ಕಡೆಗೆ ಗಮನಹರಿಸುವುದಾಗಿದೆ.

ಊರಿನ ಜನರು ಬೆಳಿಗ್ಗೆ ಎದ್ದಾಗ ಬಾಳನ ಯಜ್ಞವೇದಿಯು ಕೆಡವಲ್ಪಟ್ಟಿತ್ತು… (ನ್ಯಾಯಸ್ಥಾಪಕರು 6:28 ULT)

ಆ ಊರಿನ ಜನರು ಬಾಳನ ಯಜ್ಞವೇದಿಗೆ ಏನಾಗಿತ್ತು ಎಂಬುದನ್ನು ಕಂಡರು. ಆದರೆ ಅದನ್ನು ಯಾರು ಕೆಡವಿದರು ಎಂದು ಅವರಿಗೆ ಗೊತ್ತಿರಲಿಲ್ಲ. ಇಲ್ಲಿ ಕರ್ಮಣಿ ಪ್ರಯೋಗದ ಉದ್ದೇಶವೇನೆಂದರೆ ಆ ಊರಿನ ಜನರ ಅಭಿಪ್ರಾಯದಂತೆ ಘಟನೆಯನ್ನು ತಿಳಿಸುವುದಾಗಿದೆ.

ಅವನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಸಿಕೊಂಡು ಸಮುದ್ರದಲ್ಲಿ ಹಾಕಿಸಿಕೊಳ್ಳುವುದು ಅವನಿಗೆ ಒಳ್ಳೆಯದು (ಲೂಕ 17:2 ULT)

ಇದು ಕುತ್ತಿಗೆಗೆ ಬೀಸುವ ಕಲ್ಲು ಕಟ್ಟಿಸಿಕೊಂಡು ಸಮುದ್ರದಲ್ಲಿ ಸಾಯುವ ವ್ಯಕ್ತಿಯ ಸನ್ನಿವೇಶದ ಕುರಿತು ವಿವರಿಸುತ್ತದೆ. ಇಲ್ಲಿ ಕರ್ಮಣಿ ಪ್ರಯೋಗದ ಉದ್ದೇಶವೇನೆಂದರೆ ಈ ವ್ಯಕ್ತಿಗೆ ಏನಾಯಿತು ಎಂಬುದರ ಕಡೆಗೆ ಗಮನಹರಿಸುವುದಾಗಿದೆ. ಆ ವ್ಯಕ್ತಿಗೆ ಇದನ್ನು ಮಾಡಿದವನು ಯಾರೆಂಬುದು ಮುಖ್ಯವಲ್ಲ.

ಭಾಷಾಂತರದ ಕಾರ್ಯತಂತ್ರಗಳು

ನೀವು ಭಾಷಾಂತರಿಸುವ ವಾಕ್ಯಭಾಗದಲ್ಲಿರುವ ಪ್ರಕಾರವೇ ನಿಮ್ಮ ಭಾಷೆಯಲ್ಲೂ ಕರ್ಮಣಿ ಪ್ರಯೋಗವನ್ನು ಬಳಸುವುದಾದರೆ, ಕರ್ಮಣಿ ಪ್ರಯೋಗವನ್ನು ಬಳಸಿರಿ. ಕರ್ಮಣಿ ಪ್ರಯೋಗವಿಲ್ಲದೆ ಭಾಷಾಂತರ ಮಾಡಲು ನೀವು ನಿರ್ಧರಿಸಿದೆರೆ ಇಲ್ಲಿ ಕೆಲವು ಭಾಷಾಂತರದ ಕಾರ್ಯತಂತ್ರಗಳು ನಿಮಗಾಗಿ ಕೊಡಲ್ಪಟ್ಟಿವೆ.

  1. ಕರ್ತರಿ ಪ್ರಯೋಗದ ವಾಕ್ಯದಲ್ಲಿ ಅದೇ ಕ್ರಿಯಾಪದವನ್ನು ಬಳಸಿರಿ ಮತ್ತು ಕ್ರಿಯೆಯನ್ನು ಮಾಡಿದವರು ಯಾರು ಅಥವಾ ಯಾವುದು ಎಂದು ಹೇಳಬೇಕು. ಈ ರೀತಿಯ ವಾಕ್ಯ ಮಾಡಿದಾಗ ಯಾವ ವ್ಯಕ್ತಿ ಈ ಕ್ರಿಯೆಯನ್ನು ಪಡೆಯುತ್ತಾನೋ ಅವನ ಕಡೆ ವಿಶೇಷ ಗಮನ ನೀಡಬೆಕು.
  2. ಕರ್ತರಿ ಪ್ರಯೋಗದ ವಾಕ್ಯದಲ್ಲಿ ಅದೇ ಕ್ರಿಯಾಪದವನ್ನು ಬಳಸಿರಿ ಮತ್ತು ಕ್ರಿಯೆಯನ್ನು ಮಾಡಿದವರು ಯಾರು ಅಥವಾ ಯಾವುದು ಎಂಬುದನ್ನು ಹೇಳಬಾರದು. ಅದರ ಬದಲು ಸಾಮಾನ್ಯ ಪದ ಬಳಕೆಯಾದ “ಅವರು” ಅಥವಾ  “ಜನರು” ಅಥವಾ “ಯಾರೊಬ್ಬರು” ಎಂದು ಬಳಸಿರಿ.
  3. ಬೇರೆ ಕ್ರಿಯಾಪದವನ್ನು ಬಳಸಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಕರ್ತರಿ ಪ್ರಯೋಗದ ವಾಕ್ಯಗಳಲ್ಲಿ ಅದೇ ಕ್ರಿಯಾಪದವನ್ನು ಉಪಯೋಗಿಸಿರಿ ಮತ್ತು ಯಾರು ಆ ಕ್ರಿಯೆಯನ್ನು ಮಾಡಿದರು ಎಂಬುದನ್ನು ಹೇಳಿರಿ. ನೀವು ಹೀಗೆ ಮಾಡುವುದಾದರೆ ಕ್ರಿಯೆಯನ್ನು ಸ್ವೀಕರಿಸಿಕೊಳ್ಳುವ ವ್ಯಕ್ತಿಯ ಮೇಲೆ ನಿಮ್ಮ ಗಮನವಿರಬೇಕು.

ಪ್ರತಿದಿನವು ಒಂದೊಂದು ರೊಟ್ಟಿಯನ್ನು ರೊಟ್ಟಿ ಬೇಯಿಸುವ ಪೇಟೆಯಿಂದ ತಂದು ಅವನಿಗೆ ಕೊಡಲಾಗುತ್ತಿತ್ತು. (ಯೆರೆಮೀಯ 37:21 ULT)

ಪ್ರತಿದಿನವು ಯೆರೆಮೀಯನಿಗೆ ಒಂದೊಂದು ರೊಟ್ಟಿಯನ್ನು ರೊಟ್ಟಿ ಬೇಯಿಸುವವರ ಪೇಟೆಯಿಂದ ಅರಸನ ಸೇವಕರು ತಂದು ಕೊಡುತ್ತಿದ್ದರು.

(2) ಕರ್ತರಿ ಪ್ರಯೋಗದ ವಾಕ್ಯಗಳಲ್ಲಿ ಅದೇ ಕ್ರಿಯಾಪದವನ್ನು ಉಪಯೋಗಿಸಿರಿ, ಮತ್ತು ಆ ಕ್ರಿಯೆಯನ್ನು ಯಾರು ಮಾಡಿದರು ಎಂದು ಹೇಳಬೇಡಿರಿ. ಇದರ ಬದಲು ಸಾಮಾನ್ಯ ಪದಗಳಾದ “ಅವರು” ಅಥವಾ “ಜನರು” ಅಥವಾ “ಯಾರೊಬ್ಬನು” ಎಂಬುದನ್ನು ಬಳಸಬಹುದು.

ಅವನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಸಿಕೊಂಡು ಸಮುದ್ರದಲ್ಲಿ ಹಾಕಿಸಿಕೊಳ್ಳುವುದು ಅವನಿಗೆ ಒಳ್ಳೆಯದು (ಲೂಕ 17:2 ULT)

ಅವನ ಕುತ್ತಿಗೆಗೆ ಬೀಸುವ ಕಲ್ಲನ್ನು ಅವರು ಕಟ್ಟಿ ಅವನನ್ನು ಸಮುದ್ರದಲ್ಲಿ ಬಿಸಾಡಿದರೆ ಒಳ್ಳೆಯದು.
ಅವನ ಕುತ್ತಿಗೆಗೆ ಬೀಸುವ ಕಲ್ಲನ್ನು ಯಾರೊಬ್ಬರು ಕಟ್ಟಿ ಸಮುದ್ರದಲ್ಲಿ ಬಿಸಾಡಿದರೆ ಒಳ್ಳೆಯದು.

(3) ಕರ್ತರಿ ಪ್ರಯೋಗದ ವಾಕ್ಯದಲ್ಲಿ ಬೇರೆ ಬೇರೆ ಕ್ರಿಯಾಪದಗಳನ್ನು ಬಳಸಿರಿ.

ಪ್ರತಿದಿನವು ಒಂದೊಂದು ರೊಟ್ಟಿಯನ್ನು ರೊಟ್ಟಿ ಬೇಯಿಸುವ ಪೇಟೆಯಿಂದ ತಂದು ಅವನಿಗೆ ಕೊಡಲಾಗುತ್ತಿತ್ತು. (ಯೆರೆಮೀಯ 37:21 ULT)

ಪ್ರತಿದಿನ ಅವನು ಒಂದು ರೊಟ್ಟಿಯನ್ನು ರೊಟ್ಟಿ ಬೇಯಿಸುವವರ ಬೀದಿಯಿಂದ ಪಡೆಯುತ್ತಿದ್ದನು.


NO TITLE FOUND!

Translation Manual :: Just-in-Time Learning Modules :: Grammar :: Connect - Contrary to Fact Conditions

ಷರತ್ತುಬದ್ಧ ಸಂಬಂಧಗಳು

ಷರತ್ತುಬದ್ಧ ಸಂಪರ್ಕ ಪದಗಳು ಎರಡು ಷರತ್ತುಗಳನ್ನು ಸಂಪರ್ಕಿಸುತ್ತದೆ ಮತ್ತು ಆ ಷರತ್ತುಗಳಲ್ಲಿ ಒಂದು ಸಂಭವಿಸಿದಾಗ ಇನ್ನೊಂದು ಸಂಭವಿಸುವುದೆಂದು ಸೂಚಿಸುತ್ತದೆ. ಇಂಗ್ಲಿಷಿನಲ್ಲಿ, ಷರತ್ತುಬದ್ಧ ಷರತ್ತುಗಳನ್ನು ಸಂಪರ್ಕಿಸಲು ಅತ್ಯಂತ ಸಾಮಾನ್ಯ ಮಾರ್ಗವೆಂದರೆ ಈ ಪದಗಳ ಬಳಕೆ “ಒಂದು ವೇಳೆ … ನಂತರ.” ಆದಾಗ್ಯೂ, “ನಂತರ” ಎಂಬ ಪದವನ್ನು ಆಗಾಗ್ಗೆ ಹೇಳಲಾಗುವುದಿಲ್ಲ.

ವಾಸ್ತವಕ್ಕೆ ವಿರುದ್ಧವಾದ ಷರತ್ತುಗಳು

ವಿವರಣೆ

ವಾಸ್ತವಕ್ಕೆ ವಿರುದ್ಧವಾದ ಸ್ಥಿತಿಯು ಕಾಲ್ಪನಿಕವೆಂದು ತೋರುವ ಷರತ್ತಾಗಿದೆ, ಆದರೆ ಅದು ನಿಜವಲ್ಲ ಎಂದು ಭಾಷಣಕಾರನಿಗೆ ಈಗಾಗಲೇ ಖಚಿತವಾಗಿರುತ್ತದೆ.

ಕಾರಣ ಇದು ಅನುವಾದ ಸಮಸ್ಯೆ

ಸಾಮಾನ್ಯವಾಗಿ ವ್ಯತಿರಿಕ್ತ-ವಾಸ್ತವ ಸ್ಥಿತಿಯನ್ನು ಸೂಚಿಸುವ ಯಾವುದೇ ವಿಶೇಷ ಪದಗಳಿಲ್ಲ. ಇದು ನಿಜವಾದ ಸ್ಥಿತಿಯಲ್ಲ ಎಂದು ಓದುಗರಿಗೆ ತಿಳಿದಿದೆ ಎಂದು ಬರಹಗಾರ ಊಹಿಸುತ್ತಾನೆ. ಈ ಕಾರಣಕ್ಕಾಗಿ ಅದು ನಿಜವಲ್ಲ ಎಂದು ತಿಳಿಯಲು ಸೂಚಿತ ಮಾಹಿತಿಯ ಜ್ಞಾನದ ಅಗತ್ಯವಿದೆ. ಈ ರೀತಿಯ ಸ್ಥಿತಿಯು ಅನುವಾದಕರಿಗೆ ಸಂವಹನ ನಡೆಸಲು ಕಷ್ಟಕರವಾಗಿದ್ದರೆ, ಅವರು ಈ ತಂತ್ರಗಳನ್ನು ಪರಿಗಣಿಸಬಹುದು Rhetorical Questions or Implied Information.

OBS ಮತ್ತು ಸತ್ಯವೇದದಿಂದ ಉದಾಹರಣೆಗಳು

ಆದರೆ ಬಾಳನು ದೇವರಾಗಿದ್ದರೆ, ಅವನನ್ನು ಆರಾಧಿಸಿ! (Story 19 Frame 6 OBS)

ಎಲೀಯನು ಎಲ್ಲಾ ಜನರ ಹತ್ತಿರ ಹೋಗಿ ಅವರಿಗೆ “ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಯೆಹೋವನು ದೇವರಾಗಿದ್ದರೆ, ಆತನನ್ನೇ ಹಿಂಬಾಲಿಸಿರಿ. ಬಾಳನು ದೇವರಾಗಿದ್ದರೆ, ಅವನನ್ನೇ ಹಿಂಬಾಲಿಸಿರಿ” ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿದ್ದರು. (1 ಅರಸು 18:21 ULT)

ಬಾಳನು ದೇವರಲ್ಲ. ಬಾಳನು ದೇವರಾಗಿರಬಹುದು ಎಂದು ಎಲೀಯನು ಸೂಚಿಸುತ್ತಿಲ್ಲ, ಮತ್ತು ಜನರು ಬಾಳನನ್ನು ಅನುಸರಿಸುವುದನ್ನು ಅವನು ಬಯಸುವುದಿಲ್ಲ. ಆದರೆ ಎಲೀಯನು ಅವರು ಮಾಡುತ್ತಿರುವುದು ತಪ್ಪು ಎಂದು ತೋರಿಸಲು ಷರತ್ತುಬದ್ಧ ಹೇಳಿಕೆಯನ್ನು ಬಳಸಿದನು. ಮೇಲಿನ ಉದಾಹರಣೆಯಲ್ಲಿ, ಒಂದೇ ನಿರ್ಮಾಣವನ್ನು ಹೊಂದಿರುವ ಎರಡು ಪರಿಸ್ಥಿತಿಗಳನ್ನು ನಾವು ನೋಡುತ್ತೇವೆ. ಮೊದಲನೆಯದು, “ಯೆಹೋವನು ದೇವರಾಗಿದ್ದರೆ”, ಇದು ವಾಸ್ತವಿಕ ಸ್ಥಿತಿಯಾಗಿದೆ ಏಕೆಂದರೆ ಅದು ನಿಜ ಎಂದು ಎಲೀಯನಿಗೆ ಖಚಿತವಾಗಿದೆ. ಎರಡನೆಯದು, “ಬಾಳನು ದೇವರಾಗಿದ್ದರೆ”, ಇದು ವಾಸ್ತವಕ್ಕೆ ವಿರುದ್ಧವಾದ ಸ್ಥಿತಿಯಾಗಿದೆ ಏಕೆಂದರೆ ಅದು ನಿಜವಲ್ಲ ಎಂದು ಎಲೀಯನಿಗೆ ಖಚಿತವಾಗಿದೆ. ಇವೆರಡನ್ನೂ ನಿಮ್ಮ ಭಾಷೆಯಲ್ಲಿ ಜನರು ಒಂದೇ ರೀತಿಯಲ್ಲಿ ಹೇಳುತ್ತಾರೆಯೇ ಅಥವಾ ಅವುಗಳನ್ನು ವಿಭಿನ್ನ ರೀತಿಯಲ್ಲಿ ಹೇಳುತ್ತಾರೆಯೇ ಎಂಬುದನ್ನು ನೀವು ಪರಿಗಣಿಸಬೇಕಾಗುತ್ತದೆ.

ಆಕೆಯು ಅವನಿಗೆ "ಯೆಹೋವನು ನಮ್ಮನ್ನು ಕೊಲ್ಲಬೇಕೆಂದಿದ್ದರೆ, ಆತನು ನಮ್ಮ ಕೈಯಿಂದ ಯಜ್ಞವನ್ನೂ ನೈವೇದ್ಯವನ್ನೂ ಸ್ವೀಕರಿಸುತ್ತಿದ್ದಿಲ್ಲ; ಈಗ ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿದ್ದಿಲ್ಲ, ಹೇಳುತ್ತಿದ್ದಿಲ್ಲ ಅಂದಳು.” (ನ್ಯಾಯಸ್ಥಾಪಕರು 13:23 ULT)

ಮಾನೋಹನ ಹೆಂಡತಿ ತನ್ನ ಷರತ್ತುಬದ್ಧ ಹೇಳಿಕೆಯ ಎರಡನೇ ಭಾಗವು ನಿಜವಲ್ಲ ಎಂದು ಭಾವಿಸುತ್ತಾಳೆ, ಆದ್ದರಿಂದ ಮೊದಲ ಭಾಗವೂ ನಿಜವಲ್ಲ. ದೇವರು ಅವರ ಯಜ್ಞವನ್ನೂ ನೈವೇದ್ಯವನ್ನೂ ಸ್ವೀಕರಿಸಿದನು; ಆದ್ದರಿಂದ, ಅವರನ್ನು ಕೊಲ್ಲಲು ಅವನು ಬಯಸುವುದಿಲ್ಲ.

“ನಾವು ಐಗುಪ್ತದೇಶದಲ್ಲಿದ್ದಾಗ ಯೆಹೋವನ ಕೈಯಿಂದ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು; ಆಗ ಮಾಂಸಪಾತ್ರೆಗಳ ಬಳಿಯಲ್ಲಿ ಕೂತು ಹೊಟ್ಟೇತುಂಬ ಊಟಮಾಡುತ್ತಿದ್ದೆವಲ್ಲಾ ಎಂದು ಹೇಳಿದರು.” (ವಿಮೋಚನಕಾಂಡ 16b:3 ULT)

ಇಲ್ಲಿ ಮಾತನಾಡುವ ಜನರು ಐಗುಪ್ತದೇಶದಲ್ಲಿ ಸಾಯಲಿಲ್ಲ, ಆದ್ದರಿಂದ ಇದು ಒಂದು ಆಶಯವನ್ನು ವ್ಯಕ್ತಪಡಿಸಲು ಬಳಸಲಾಗುವ ವಾಸ್ತವಕ್ಕೆ ವಿರುದ್ಧವಾದ ಸ್ಥಿತಿಯಾಗಿದೆ.

“ಅಯ್ಯೋ ಖೊರಾಜಿನೇ! ಅಯ್ಯೋ ಬೇತ್ಸಾಯಿದವೇ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣೀತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು."(ಮತ್ತಾಯ 11:21 ULT)

ಇಂಗ್ಲಿಷ್ ಭಾಷೆಯನ್ನು ಓದುಗನಿಗೆ ಈ ಕೊನೆಯ ಎರಡು ಉದಾಹರಣೆಗಳು ವ್ಯತಿರಿಕ್ತ-ವಾಸ್ತವಾಂಶದ ಪರಿಸ್ಥಿತಿಗಳು ಎಂದು ತಿಳಿಯುತ್ತದೆ ಏಕೆಂದರೆ ಮೊದಲ ಭಾಗದಲ್ಲಿ ಬಳಸಲಾದ ಭೂತಕಾಲದ ಕ್ರಿಯಾಪದಗಳು (ಅವು ಸಂಭವಿಸಬಹುದಾದ ವಿಷಯಗಳಲ್ಲ) ಎಂಬುದಾಗಿದೆ ಮತ್ತು ಕೊನೆಯ ಉದಾಹರಣೆಯು ಸಹ ಎರಡನೇ ಭಾಗವನ್ನು ಹೊಂದಿರುತ್ತದೆ “ತಿರುಗಿಕೊಳ್ಳುತ್ತಿದ್ದರು” ಎಂಬುದಾಗಿ. ಈ ಮಾತುಗಳು ಸಂಭವಿಸದ ಸಂಗತಿಯನ್ನು ಸಂಕೇತಿಸುವವು.

ಭಾಷಾಂತರದ ತಂತ್ರಗಳು

ನಿಮ್ಮ ಭಾಷೆಯಲ್ಲಿ ವ್ಯತಿರಿಕ್ತ-ವಾಸ್ತವ ಪರಿಸ್ಥಿತಿಗಳು ಸ್ಪಷ್ಟವಾಗಿದ್ದರೆ, ಅವುಗಳನ್ನು ಹಾಗೆಯೇ ಬಳಸಿ.

(1) ಈ ಷರತ್ತು ಏನಂದರೆ ಭಾಷಣಕಾರನು ಸುಳ್ಳಾದ ವಿಷಯ ನಂಬುತ್ತಾನೆ ಎಂದು ಓದುಗರು ಭಾವಿಸಲು ಕಾರಣವಾದರೆ, ಆ ಸ್ಥಿತಿಯನ್ನು ಇತರರು ನಂಬುವ ವಿಷಯವಾಗಿ ಮರುತಿಳಿಸಲಿ.

(2) ಈ ಷರತ್ತು ಏನಂದರೆ ಭಾಷಣಕಾರನು ಸೂಚಿಸುತ್ತಿರುವ ಮೊದಲ ಭಾಗವು ನಿಜವೆಂದು ಓದುಗರು ಭಾವಿಸಲು ಕಾರಣವಾದರೆ, ಅದು ನಿಜವಲ್ಲ ಎಂದು ಹೇಳಿಕೆಯಾಗಿ ಮರುತಿಳಿಸಲಿ.

(3) ಈ ಷರತ್ತು ಏನಂದರೆ ಸಂಭವಿಸದ ಏನನ್ನಾದರೂ ವ್ಯಕ್ತಪಡಿಸುತ್ತಿರುವುದನ್ನು ಭಾಷಣಕಾರನು ಸಂಭವಿಸಬೇಕೆಂದು ಬಯಸಿದರೆ, ಅದನ್ನು ಆಸೆಯಾಗಿ ಮರುತಿಳಿಸಲಿ.

(4) ಈ ಷರತ್ತು ಏನಂದರೆ ಸಂಭವಿಸದ ಏನನ್ನಾದರೂ ವ್ಯಕ್ತಪಡಿಸುತ್ತಿದ್ದರೆ, ಅದನ್ನು ನಕಾರಾತ್ಮಕ ಹೇಳಿಕೆ ಎಂದು ಮರುತಿಳಿಸಲಿ.

(5) ಆಗಾಗ್ಗೆ ವಾಸ್ತವಿಕ ಮತ್ತು ವ್ಯತಿರಿಕ್ತ-ವಾಸ್ತವ ಪರಿಸ್ಥಿತಿಗಳನ್ನು ನಡವಳಿಕೆಯಲ್ಲಿ ಬದಲಾವಣೆಗಾಗಿ ತರ್ಕೀಕೃತ ವಾದಗಳನ್ನು ಮಾಡಲು ಬಳಸಲಾಗುತ್ತದೆ. ಅನುವಾದಕರು ಅವುಗಳನ್ನು ಅನುವಾದಿಸಲು ಉತ್ತಮ ಮಾರ್ಗವನ್ನು ತಿಳಿಯಲು ಹೆಣಗಾಡುತ್ತಿದ್ದರೆ, ಇದನ್ನು ಅವರ ಭಾಷಾ ಸಮುದಾಯದಲ್ಲಿ ಹೇಗೆ ಮಾಡಲಾಗುತ್ತದೆ ಎಂಬುದನ್ನು ಚರ್ಚಿಸಲು ಸಹಾಯಕವಾಗಬಹುದು. ಯಾರಾದರೂ ತಮ್ಮ ನಡವಳಿಕೆಯನ್ನು ಬದಲಾಯಿಸಲು ಜನರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದರೆ, ಅವರು ಅದನ್ನು ಹೇಗೆ ಮಾಡುತ್ತಾರೆ? ಈ ಪರಿಸ್ಥಿತಿಗಳನ್ನು ಭಾಷಾಂತರಿಸುವಾಗ ಇದೇ ರೀತಿಯ ತಂತ್ರಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಬಹುದು.

ಅನ್ವಯಿಸಲಾದ ಅನುವಾದ ತಂತ್ರಗಳ ಉದಾಹರಣೆಗಳು

(1) ಈ ಷರತ್ತು ಏನಂದರೆ ಭಾಷಣಕಾರನು ಸುಳ್ಳಾದ ವಿಷಯ ನಂಬುತ್ತಾನೆ ಎಂದು ಓದುಗರು ಭಾವಿಸಲು ಕಾರಣವಾದರೆ, ಆ ಸ್ಥಿತಿಯನ್ನು ಇತರರು ನಂಬುವ ವಿಷಯವಾಗಿ ಮರುತಿಳಿಸಲಿ.

ಆದರೆ ಬಾಳನು ದೇವರಾಗಿದ್ದರೆ, ಅವನನ್ನು ಆರಾಧಿಸಿ! (Story 19 Frame 6 OBS)

ಬಾಳನು ದೇವರೆಂದು ನೀವು ನಂಬಿದರೆ, ಅವನನ್ನು ಆರಾಧಿಸಿ!

(2) ಈ ಷರತ್ತು ಏನಂದರೆ ಭಾಷಣಕಾರನು ಸೂಚಿಸುತ್ತಿರುವ ಮೊದಲ ಭಾಗವು ನಿಜವೆಂದು ಓದುಗರು ಭಾವಿಸಲು ಕಾರಣವಾದರೆ, ಅದು ನಿಜವಲ್ಲ ಎಂದು ಹೇಳಿಕೆಯಾಗಿ ಮರುತಿಳಿಸಲಿ.

ಬಾಳನು ದೇವರಲ್ಲವಾದರೆ, ನೀವು ಅವನನ್ನುಆರಾಧಿಸಬಾರದು!

ಆಕೆಯು ಅವನಿಗೆ "ಯೆಹೋವನು ನಮ್ಮನ್ನು ಕೊಲ್ಲಬೇಕೆಂದಿದ್ದರೆ, ಆತನು ನಮ್ಮ ಕೈಯಿಂದ ಯಜ್ಞವನ್ನೂ ನೈವೇದ್ಯವನ್ನೂ ಸ್ವೀಕರಿಸುತ್ತಿದ್ದಿಲ್ಲ; ಈಗ ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿದ್ದಿಲ್ಲ, ಹೇಳುತ್ತಿದ್ದಿಲ್ಲ ಅಂದಳು.” (ನ್ಯಾಯಸ್ಥಾಪಕರು 13:23 ULT)

ಯೆಹೋವನು ನಮ್ಮನ್ನು ಕೊಲ್ಲಲು ಬಯಸುವುದಿಲ್ಲ, ಅಥವಾ ನಾವು ಅವನಿಗೆ ನೀಡಿದ ಯಜ್ಞವನ್ನೂ ನೈವೇದ್ಯವನ್ನೂ ಅವನು ಸ್ವೀಕರಿಸುತ್ತಿರಲಿಲ್ಲ."

(3) ಈ ಷರತ್ತು ಏನಂದರೆ ಸಂಭವಿಸದ ಏನನ್ನಾದರೂ ವ್ಯಕ್ತಪಡಿಸುತ್ತಿರುವುದನ್ನು ಭಾಷಣಕಾರನು ಸಂಭವಿಸಬೇಕೆಂದು ಬಯಸಿದರೆ, ಅದನ್ನು ಆಸೆಯಾಗಿ ಮರುತಿಳಿಸಲಿ.

“ನಾವು ಐಗುಪ್ತದೇಶದಲ್ಲಿದ್ದಾಗ ಯೆಹೋವನ ಕೈಯಿಂದ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು; ಆಗ ಮಾಂಸಪಾತ್ರೆಗಳ ಬಳಿಯಲ್ಲಿ ಕೂತು ಹೊಟ್ಟೇತುಂಬ ಊಟಮಾಡುತ್ತಿದ್ದೆವಲ್ಲಾ ಎಂದು ಹೇಳಿದರು.” (ವಿಮೋಚನಕಾಂಡ 16b:3 ULT)

“ಯೆಹೋವನ ಕೈಯಿಂದ ನಾವು ಸತ್ತಿದ್ದರೆ ಎಷ್ಟೋ ಮೇಲಾಗಿತ್ತು ಐಗುಪ್ತದೇಶದಲ್ಲಿದ್ದಾಗ…"

(4) ಈ ಷರತ್ತು ಏನಂದರೆ ಸಂಭವಿಸದ ಏನನ್ನಾದರೂ ವ್ಯಕ್ತಪಡಿಸುತ್ತಿದ್ದರೆ, ಅದನ್ನು ನಕಾರಾತ್ಮಕ ಹೇಳಿಕೆ ಎಂದು ಮರುತಿಳಿಸಲಿ.

“ಅಯ್ಯೋ ಖೊರಾಜಿನೇ! ಅಯ್ಯೋ ಬೇತ್ಸಾಯಿದವೇ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣೀತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು."(ಮತ್ತಾಯ 11:21 ULT)

“ಅಯ್ಯೋ ಖೊರಾಜಿನೇ! ಅಯ್ಯೋ ಬೇತ್ಸಾಯಿದವೇ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆಯಲ್ಲಿಲ್ಲ. ಆದರೆ ಅಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣೀತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು."

(5) ಆಗಾಗ್ಗೆ ವಾಸ್ತವಿಕ ಮತ್ತು ವ್ಯತಿರಿಕ್ತ-ವಾಸ್ತವ ಪರಿಸ್ಥಿತಿಗಳನ್ನು ನಡವಳಿಕೆಯಲ್ಲಿ ಬದಲಾವಣೆಗಾಗಿ ತರ್ಕೀಕೃತ ವಾದಗಳನ್ನು ಮಾಡಲು ಬಳಸಲಾಗುತ್ತದೆ. ಅನುವಾದಕರು ಅವುಗಳನ್ನು ಅನುವಾದಿಸಲು ಉತ್ತಮ ಮಾರ್ಗವನ್ನು ತಿಳಿಯಲು ಹೆಣಗಾಡುತ್ತಿದ್ದರೆ, ಇದನ್ನು ಅವರ ಭಾಷಾ ಸಮುದಾಯದಲ್ಲಿ ಹೇಗೆ ಮಾಡಲಾಗುತ್ತದೆ ಎಂಬುದನ್ನು ಚರ್ಚಿಸಲು ಸಹಾಯಕವಾಗಬಹುದು. ಯಾರಾದರೂ ತಮ್ಮ ನಡವಳಿಕೆಯನ್ನು ಬದಲಾಯಿಸಲು ಜನರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದರೆ, ಅವರು ಅದನ್ನು ಹೇಗೆ ಮಾಡುತ್ತಾರೆ? ಈ ಪರಿಸ್ಥಿತಿಗಳನ್ನು ಭಾಷಾಂತರಿಸುವಾಗ ಇದೇ ರೀತಿಯ ತಂತ್ರಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಬಹುದು.

ಆದರೆ ಬಾಳನು ದೇವರಾಗಿದ್ದರೆ, ಅವನನ್ನು ಆರಾಧಿಸಿ! (Story 19 Frame 6 OBS)

ಬಾಳನು ನಿಜವಾಗಿಯೂ ದೇವರಾ? ನೀವು ಅವನನ್ನು ಆರಾಧಿಸಬೇಕೆ?

“ಅಯ್ಯೋ ಖೊರಾಜಿನೇ! ಅಯ್ಯೋ ಬೇತ್ಸಾಯಿದವೇ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣೀತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು."(ಮತ್ತಾಯ 11:21 ULT)

“ಅಯ್ಯೋ ಖೊರಾಜಿನೇ! ಅಯ್ಯೋ ಬೇತ್ಸಾಯಿದವೇ! ನೀವು ತೂರ್ ಮತ್ತು ಸೀದೋನ್ ಪಟ್ಟಣದವರಿಗಿಂತ ಉತ್ತಮರು ಎಂದು ಭಾವಿಸುತ್ತೀರಿ, ಆದರೆ ನೀವಲ್ಲ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ಅಲ್ಲಿ ನಡೆದಿದ್ದರೆ, ಬಹಳ ಹಿಂದೆಯೇ ಅವರು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು! ನೀವು ಅವರಂತೆ ಇರಬೇಕು!"


NO TITLE FOUND!

Translation Manual :: Just-in-Time Learning Modules :: Grammar :: Connect - Factual Conditions

ಷರತ್ತುಬದ್ಧ ಸಂಬಂಧಗಳು

ಷರತ್ತುಬದ್ಧ ಸಂಪರ್ಕ ಪದಗಳು ಎರಡು ಷರತ್ತುಗಳನ್ನು ಸಂಪರ್ಕಿಸುತ್ತದೆ ಮತ್ತು ಆ ಷರತ್ತುಗಳಲ್ಲಿ ಒಂದು ಸಂಭವಿಸಿದಾಗ ಇನ್ನೊಂದು ಸಂಭವಿಸುವುದೆಂದು ಸೂಚಿಸುತ್ತದೆ. ಇಂಗ್ಲಿಷಿನಲ್ಲಿ, ಷರತ್ತುಬದ್ಧ ಷರತ್ತುಗಳನ್ನು ಸಂಪರ್ಕಿಸಲು ಅತ್ಯಂತ ಸಾಮಾನ್ಯ ಮಾರ್ಗವೆಂದರೆ ಈ ಪದಗಳ ಬಳಕೆ “ಒಂದು ವೇಳೆ … ನಂತರ.” ಆದಾಗ್ಯೂ, “ನಂತರ” ಎಂಬ ಪದವನ್ನು ಆಗಾಗ್ಗೆ ಹೇಳಲಾಗುವುದಿಲ್ಲ.

ವಾಸ್ತವಿಕ ಪರಿಸ್ಥಿತಿಗಳು

ವಿವರಣೆ

ವಾಸ್ತವಿಕ ಸ್ಥಿತಿಯು ಕಾಲ್ಪನಿಕವೆಂದು ತೋರುತ್ತದೆ, ಆದರೆ ಭಾಷಣಕಾರನ ಮನಸ್ಸಿನಲ್ಲಿ ಈಗಾಗಲೇ ಇದು ಖಚಿತವಾಗಿರುತ್ತದೆ ಅಥವಾ ಸತ್ಯವಾಗಿರುತ್ತದೆ. ಇಂಗ್ಲಿಷಿನಲ್ಲಿ, ವಾಸ್ತವಿಕ ಸ್ಥಿತಿಯನ್ನು ಹೊಂದಿರುವ ವಾಕ್ಯವು “ಆದರೂ,” “ಅಂದಿನಿಂದ,” ಅಥವಾ “ಇದು ಹೀಗಿರುವುದರಿಂದ” ಎಂಬ ಪದಗಳನ್ನು ಬಳಸಬಹುದು, ಇದು ವಾಸ್ತವಿಕ ಸ್ಥಿತಿಯಾಗಿದೆ ಮತ್ತು ಕಾಲ್ಪನಿಕ ಸ್ಥಿತಿಯಲ್ಲ ಎಂದು ಸೂಚಿಸುತ್ತದೆ.

ಕಾರಣ ಇದು ಅನುವಾದ ಸಮಸ್ಯೆ

ಕೆಲವು ಭಾಷೆಗಳು ಏನನ್ನಾದರೂ ಖಚಿತವಾಗಿದ್ದರೆ ಅಥವಾ ನಿಜವಾಗಿದ್ದರೆ ಒಂದು ಷರತ್ತಿನಂತೆ ಹೇಳುವುದಿಲ್ಲ. ಈ ಭಾಷೆಗಳ ಅನುವಾದಕರು ಮೂಲ ಭಾಷೆಗಳನ್ನು ತಪ್ಪಾಗಿ ಅರ್ಥೈಸಬಹುದು ಮತ್ತು ಸ್ಥಿತಿ ಅನಿಶ್ಚಿತವಾಗಿದೆ ಎಂದು ಭಾವಿಸಬಹುದು. ಇದು ಅವರ ಅನುವಾದಗಳಲ್ಲಿ ತಪ್ಪುಗಳಿಗೆ ಕಾರಣವಾಗುತ್ತದೆ. ಅನುವಾದಕರು ಈ ಸ್ಥಿತಿ ನಿಶ್ಚಿತ ಅಥವಾ ಸತ್ಯ ಎಂದು ಅರ್ಥಮಾಡಿಕೊಂಡರೂ, ಓದುಗರು ಅದನ್ನು ತಪ್ಪಾಗಿ ಅರ್ಥೈಸಬಹುದು. ಈ ಸಂದರ್ಭದಲ್ಲಿ, ಅದನ್ನು ಷರತ್ತುಬದ್ಧ ಹೇಳಿಕೆಯಾಗಿ ಅನುವಾದಿಸುವ ಬದಲು ವಾಸ್ತವದ ಹೇಳಿಕೆ ಎಂದು ಅನುವಾದಿಸುವುದು ಉತ್ತಮ.

OBS ಮತ್ತು ಸತ್ಯವೇದದಿಂದ ಉದಾಹರಣೆಗಳು

“ಯೆಹೋವನು ದೇವರಾಗಿದ್ದರೆ, ಅವನನ್ನು ಆರಾಧಿಸಿ!” (Story 19 Frame 6 OBS)

ಎಲೀಯನು ಎಲ್ಲಾ ಜನರ ಹತ್ತಿರ ಹೋಗಿ ಅವರಿಗೆ “ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಯೆಹೋವನೇ ದೇವರಾಗಿದ್ದರೆ, ಆತನನ್ನೇ ಹಿಂಬಾಲಿಸಿರಿ. ಆದರೆ ಬಾಳನು ದೇವರಾಗಿದ್ದರೆ, ಅವನನ್ನೇ ಹಿಂಬಾಲಿಸಿರಿ” ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿದ್ದರು. (1 ಅರಸು 18:21 ULT)

ಈ ವಾಕ್ಯವು ಕಾಲ್ಪನಿಕ ಷರತ್ತಿನಂತೆಯೇ ನಿರ್ಮಾಣವನ್ನು ಹೊಂದಿದೆ. “ಯೆಹೋವನೇ ದೇವರಾಗಿದ್ದರೆ” ಎಂಬ ಸ್ಥಿತಿ ಇದೆ. ಅದು ನಿಜವಾಗಿದ್ದರೆ, ಇಸ್ರಾಯೇಲ್ಯರು ಯೆಹೋವನನ್ನು ಆರಾಧಿಸಬೇಕು. ಆದರೆ ಪ್ರವಾದಿ ಎಲೀಯನು, ಯೆಹೋವನೇ ದೇವರೋ ಅಲ್ಲವೋ ಎಂದು ಪ್ರಶ್ನಿಸುವುದಿಲ್ಲ. ವಾಸ್ತವವಾಗಿ, ಅವನು ಯೆಹೋವನೇ ದೇವರು ಎಂದು ಎಷ್ಟು ಖಚಿತವಾಗಿದ್ದಾನೆಂದರೆ ಈ ಅಧ್ಯಾಯದ ಕೊನೆಯಲ್ಲಿ ನೀರು ತಂದು ಯಜ್ಞಮಾಂಸದ ಮೇಲೆಯೂ ಕಟ್ಟಿಗೆಯ ಮೇಲೆಯೂ ಸುರಿಯಲು ಹೇಳುತ್ತಾನೆ. ದೇವರು ನಿಜ ಮತ್ತು ಸಂಪೂರ್ಣವಾಗಿ ಒದ್ದೆಯಾದ ಅರ್ಪಣೆಯನ್ನು ಸಹ ಸುಡುತ್ತಾನೆಂದು ಅವನು ವಿಶ್ವಾಸ ಹೊಂದಿದ್ದನು. ಮತ್ತೆ ಮತ್ತೆ ಪ್ರವಾದಿಗಳು ಯೆಹೋವನೇ ದೇವರು ಎಂದು ಕಲಿಸಿದರು, ಆದ್ದರಿಂದ ಜನರು ಅವನನ್ನು ಆರಾಧಿಸಬೇಕು. ಆದರೆ ಯೆಹೋವನು ದೇವರಾಗಿದ್ದರೂ ಸಹ ಜನರು ಯೆಹೋವನನ್ನು ಆರಾಧಿಸಲ್ಲಿಲ್ಲ. ಹೇಳಿಕೆ ಅಥವಾ ಸೂಚನೆಯನ್ನು ವಾಸ್ತವಿಕ ಸ್ಥಿತಿಯ ರೂಪದಲ್ಲಿ ಹಾಕುವ ಮೂಲಕ ಎಲೀಯನು ಇಸ್ರಾಯೇಲ್ಯರಿಗೆ ಅವರು ಏನು ಮಾಡಬೇಕೆಂದು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಸಲು ಪ್ರಯತ್ನಿಸುತ್ತಿದ್ದಾನೆ.

“ನನ್ನ ನಾಮವನ್ನು ಧಿಕ್ಕರಿಸುವ ಯಾಜಕರೇ, ಮಗನು ತಂದೆಗೆ ಮಾನಸಲ್ಲಿಸುತ್ತಾನಲ್ಲಾ, ಆಳು ಧಣಿಗೆ ಭಯಭಕ್ತಿ ತೋರಿಸುತ್ತಾನಷ್ಟೆ; ನಾನು ತಂದೆಯಾಗಿರಲು ನನಗೆ ಸಲ್ಲುವ ಮಾನವೆಲ್ಲಿ? ಧಣಿಯಾಗಿರಲು ನನಗೆ ತೋರಿಸುವ ಭಯಭಕ್ತಿಯೆಲ್ಲಿ?" ಎಂದು ಸೇನಾಧೀಶ್ವರ ಯೆಹೋವನು ನಿಮಗೇ ನುಡಿಯುತ್ತಾನೆ. ಆದರೆ ನೀವು - ಯಾವ ವಿಷಯದಲ್ಲಿ ನಿನ್ನ ನಾಮವನ್ನು ಧಿಕ್ಕರಿಸಿದ್ದೇವೆ ಅನ್ನುತ್ತೀರಿ. (ಮಲಾಕಿ 1:6 ULT)

ತಾನು ಇಸ್ರಾಯೇಲ್ಯರಿಗೆ ತಂದೆ ಮತ್ತು ಯಜಮಾನ ಎಂದು ಯೆಹೋವನು ಹೇಳಿದ್ದಾನೆ, ಆದ್ದರಿಂದ ಇದು ಕಾಲ್ಪನಿಕ ಸ್ಥಿತಿಯಂತೆ ತೋರುತ್ತದೆ ಏಕೆಂದರೆ ಅದು “ಇದ್ದರೆ” ಎಂದು ಪ್ರಾರಂಭವಾಗುತ್ತದೆ, ಇದು ಕಾಲ್ಪನಿಕವಲ್ಲ. ಮಗ ತನ್ನ ತಂದೆಯನ್ನು ಗೌರವಿಸುತ್ತಾನೆ ಎಂಬ ಗಾದೆಯೊಂದಿಗೆ ಈ ಪದ್ಯ ಪ್ರಾರಂಭವಾಗುತ್ತದೆ. ಅದು ಸರಿ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇಸ್ರಾಯೇಲ್ಯರು ಯೆಹೋವನನ್ನು ಗೌರವಿಸುವುದಿಲ್ಲ. ವಚನದಲ್ಲಿರುವ ಇನ್ನೊಂದು ಗಾದೆಯು ಒಬ್ಬ ಸೇವಕನು ತನ್ನ ಗುರುವನ್ನು ಗೌರವಿಸುತ್ತಾನೆ ಎಂದು ಹೇಳುತ್ತದೆ. ಅದು ಸರಿ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇಸ್ರಾಯೇಲ್ಯರು ಯೆಹೋವನನ್ನು ಗೌರವಿಸುವುದಿಲ್ಲ, ಆದ್ದರಿಂದ ಅವನು ಅವರ ಯಜಮಾನನಲ್ಲ ಎಂದು ತೋರುತ್ತದೆ. ಅದು ಸರಿ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇಸ್ರಾಯೇಲ್ಯರು ಯೆಹೋವನನ್ನು ಗೌರವಿಸುವುದಿಲ್ಲ, ಆದ್ದರಿಂದ ಅವನು ಅವರ ಯಜಮಾನನಲ್ಲ ಎಂದು ತೋರುತ್ತದೆ. ಆದರೆ ಯೆಹೋವನೇ ಯಜಮಾನ. ಇಸ್ರಾಯೇಲ್ಯರು ತಪ್ಪು ಎಂದು ಪ್ರದರ್ಶಿಸಲು ಒಂದು ಕಾಲ್ಪನಿಕ ಸ್ಥಿತಿಯ ರೂಪವನ್ನು ಬಳಸುತ್ತಾನೆ. ಷರತ್ತುಬದ್ಧ ಹೇಳಿಕೆ ನಿಜವಾಗಿದ್ದರೂ ಸ್ವಾಭಾವಿಕವಾಗಿ ಸಂಭವಿಸಬೇಕಾದ ಸ್ಥಿತಿಯ ಎರಡನೇ ಭಾಗವು ನಡೆಯುತ್ತಿಲ್ಲ.

ಅನುವಾದ ತಂತ್ರಗಳು

ಕಾಲ್ಪನಿಕ ಸ್ಥಿತಿಯ ರೂಪವನ್ನು ಬಳಸುವುದು ಗೊಂದಲಮಯವಾಗಿದ್ದರೆ ಅಥವಾ ವಾಕ್ಯದ ಮೊದಲ ಭಾಗದಲ್ಲಿ ಭಾಷಣಕಾರನು ಏನು ಹೇಳುತ್ತಾನೆ ಎಂದು ಅನುಮಾನಿಸುತ್ತಾನೆ ಎಂದು ಓದುಗರು ಯೋಚಿಸುವಂತೆ ಮಾಡಿದರೆ, ಅದರ ಬದಲಿಗೆ ಹೇಳಿಕೆಯನ್ನು ಬಳಸಿ. “ಅಂದಿನಿಂದ” ಅಥವಾ “ನಿಮಗೆ ಅದು ತಿಳಿದಿದೆ …” ನಂತಹ ಪದಗಳು. ಅಥವಾ “ಅದು ನಿಜ…” ಅರ್ಥವನ್ನು ಸ್ಪಷ್ಟಪಡಿಸಲು ಸಹಾಯಕವಾಗಬಹುದು.

ಅನ್ವಯಿಸಲಾದ ಅನುವಾದ ತಂತ್ರಗಳ ಉದಾಹರಣೆಗಳು

“ಯೆಹೋವನು ದೇವರಾಗಿದ್ದರೆ, ಅವನನ್ನು ಆರಾಧಿಸಿ!" (Story 19 Frame 6 OBS)

ಅದು ನಿಜ ಯೆಹೋವನು ದೇವರು, ಅವನನ್ನು ಆರಾಧಿಸಿ!"

“ಮಗನು ತಂದೆಗೆ ಮಾನಸಲ್ಲಿಸುತ್ತಾನಲ್ಲಾ, ಮತ್ತು ಆಳು ಧಣಿಗೆ ಭಯಭಕ್ತಿ ತೋರಿಸುತ್ತಾನಷ್ಟೆ; ನಾನು ತಂದೆಯಾಗಿರಲು ನನಗೆ ಸಲ್ಲುವ ಮಾನವೆಲ್ಲಿ? ಧಣಿಯಾಗಿರಲು ನನಗೆ ತೋರಿಸುವ ಭಯಭಕ್ತಿಯೆಲ್ಲಿ?" ಎಂದು ಸೇನಾಧೀಶ್ವರ ಯೆಹೋವನು ನಿಮಗೇ ನುಡಿಯುತ್ತಾನೆ. (ಮಲಾಕಿ 1:6 ULT)

“ಮಗನು ತಂದೆಗೆ ಮಾನಸಲ್ಲಿಸುತ್ತಾನಲ್ಲಾ, ಮತ್ತು ಆಳು ಧಣಿಗೆ ಭಯಭಕ್ತಿ ತೋರಿಸುತ್ತಾನಷ್ಟೆ. ನಾನು ತಂದೆಯಾಗಿರಲು ನನಗೆ ಸಲ್ಲುವ ಮಾನವೆಲ್ಲಿ? ಧಣಿಯಾಗಿರಲು ನನಗೆ ತೋರಿಸುವ ಭಯಭಕ್ತಿಯೆಲ್ಲಿ?"


NO TITLE FOUND!

Translation Manual :: Just-in-Time Learning Modules :: Grammar :: Connect - Hypothetical Conditions

ಷರತ್ತುಬದ್ಧ ಸಂಬಂಧಗಳು

ಷರತ್ತುಬದ್ಧ ಸಂಪರ್ಕ ಪದಗಳು ಎರಡು ಷರತ್ತುಗಳನ್ನು ಸಂಪರ್ಕಿಸುತ್ತದೆ ಮತ್ತು ಆ ಷರತ್ತುಗಳಲ್ಲಿ ಒಂದು ಸಂಭವಿಸಿದಾಗ ಮಾತ್ರ ಇನ್ನೊಂದು ಸಂಭವಿಸುವುದೆಂದು ಸೂಚಿಸುತ್ತದೆ. ಇಂಗ್ಲಿಷಿನಲ್ಲಿ, ಷರತ್ತುಬದ್ಧ ಷರತ್ತುಗಳನ್ನು ಸಂಪರ್ಕಿಸಲು ಅತ್ಯಂತ ಸಾಮಾನ್ಯ ಮಾರ್ಗವೆಂದರೆ ಈ ಪದಗಳ ಬಳಕೆ “if … then.” ಆದಾಗ್ಯೂ, “then” ಎಂಬ ಪದವನ್ನು ಆಗಾಗ್ಗೆ ಹೇಳಲಾಗುವುದಿಲ್ಲ.

ಕಾಲ್ಪನಿಕ ಸ್ಥಿತಿ

ವಿವರಣೆ

ಕಾಲ್ಪನಿಕ ಸ್ಥಿತಿಯು ಎರಡನೇ ಘಟನೆ (“then” ಷರತ್ತು) ನಡೆದರೆ ಅಥವಾ ಯಾವುದಾದರೂ ರೀತಿಯಲ್ಲಿ ಪೂರೈಸಿದರೆ ಮಾತ್ರ ಮೊದಲ ಘಟನೆ (“if” ಷರತ್ತು) ನಡೆಯುವ ಒಂದು ಷರತ್ತಾಗಿದೆ. ಕೆಲವೊಮ್ಮೆ ಏನು ನಡೆಯುತ್ತದೆ ಎಂಬುದು ಇತರ ಜನರ ಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ.

ಕಾರಣ ಇದು ಅನುವಾದ ಸಮಸ್ಯೆ

ಅನುವಾದಕರು ಏನನ್ನಾದರೂ ಕಾಲ್ಪನಿಕ ಸ್ಥಿತಿಯೇ ಅಥವಾ ಅಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ, ಇದರಿಂದ ಅವರು ಅದನ್ನು ಸರಿಯಾದ ರೀತಿಯಲ್ಲಿ ಅನುವಾದಿಸುತ್ತಾರೆ. ಉದಾಹರಣೆಗೆ, ಇಸ್ರಾಯೇಲಿಗೆ ದೇವರು ನೀಡಿದ ಕೆಲವು ವಾಗ್ದಾನಗಳು, ಇಸ್ರಾಯೇಲು ದೇವರಿಗೆ ವಿಧೇಯವಾಗಿದೆಯೇ ಅಥವಾ ಇಲ್ಲವೇ ಎಂಬುದರ ಆಧಾರದ ಮೇಲೆ ಷರತ್ತುಬದ್ಧವಾಗಿದ್ದವು. ಆದರೆ, ಇಸ್ರಾಯೇಲ್ಯನಿಗೆ ದೇವರು ನೀಡಿದ ಅನೇಕ ವಾಗ್ದಾನಗಳು ಷರತ್ತುಬದ್ಧವಾಗಿರಲಿಲ್ಲ; ಇಸ್ರಾಯೇಲ್ಯರು ಪಾಲಿಸಲಿ ಬಿಡಲಿ ದೇವರು ಈ ಭರವಸೆಗಳನ್ನು ಉಳಿಸಿಕೊಳ್ಳುತ್ತಾನೆ. ಈ ಎರಡು ರೀತಿಯ ಭರವಸೆಗಳ ನಡುವಿನ ವ್ಯತ್ಯಾಸವನ್ನು ನೀವು (ಅನುವಾದಕ) ತಿಳಿದುಕೊಳ್ಳುವುದು ಮತ್ತು ಪ್ರತಿಯೊಂದನ್ನೂ ನಿಮ್ಮ ಸ್ವಂತ ಭಾಷೆಯಲ್ಲಿ ನಿಖರವಾಗಿ ಸಂವಹನ ಮಾಡುವುದು ಮುಖ್ಯ. ಅಲ್ಲದೆ, ಕೆಲವೊಮ್ಮೆ ಷರತ್ತುಗಳನ್ನು ಅವು ಸಂಭವಿಸುವ ಕ್ರಮಕ್ಕಿಂತ ಭಿನ್ನವಾದ ಕ್ರಮದಲ್ಲಿ ಹೇಳಲಾಗುತ್ತದೆ. ಅನುವಾದಿಸುವ ಭಾಷೆ ಷರತ್ತುಗಳನ್ನು ಬೇರೆ ಕ್ರಮದಲ್ಲಿ ಹೇಳಿದರೆ, ಆಗ ನೀವು ಹೊಂದಾಣಿಕೆಯನ್ನು ಮಾಡಬೇಕಾಗುತ್ತದೆ.

OBS ಮತ್ತು ಸತ್ಯವೇದದಿಂದ ಉದಾಹರಣೆಗಳು

ದೇವರು ಜನರನ್ನು ಆಶೀರ್ವದಿಸುವುದಾಗಿ ಮತ್ತು ಅವರನ್ನು ರಕ್ಷಿಸುವುದಾಗಿ ಭರವಸೆ ನೀಡಿದರು, ಒಂದು ವೇಳೆ ಅವರು ನಿಯಮಗಳನ್ನು ಪಾಲಿಸಿದರೆ. ಆದರೆ, ಅವರು ಈ ನಿಯಮಗಳಿಗೆ ಒಂದು ವೇಳೆ ಅವಿಧೇಯರಾದರೆ ಅವರನ್ನು ಶಿಕ್ಷಿಸುವುದಾಗಿ ಹೇಳಿದರು (Story 13 Frame 7 OBS)

ಈ ಚೌಕಟ್ಟಿನಲ್ಲಿ ಎರಡು ಕಾಲ್ಪನಿಕ ಸ್ಥಿತಿಗಳಿವೆ. ಈ ಎರಡೂ ಷರತ್ತುಗಳಲ್ಲಿ, ಮೊದಲ ಘಟನೆ (“ಒಂದು ವೇಳೆ” ಷರತ್ತು) ಪೂರೈಸಿದ ನಂತರ “ಆಗ” ಷರತ್ತು ಅನ್ವಯವಾಗುವುದು. ಇದು ಅಸ್ವಾಭಾವಿಕ ಅಥವಾ ಗೊಂದಲಮಯವಾಗಿದ್ದರೆ, ಷರತ್ತುಗಳನ್ನು ಹೆಚ್ಚು ಸಾಧಾರಣ ಕ್ರಮದಲ್ಲಿ ಹೇಳಬಹುದು. ಮೊದಲನೆಯ ಕಾಲ್ಪನಿಕ ಸ್ಥಿತಿಯೆಂದರೆ: ಇಸ್ರಾಯೇಲ್ಯರು ದೇವರಿಗೆ ವಿಧೇಯರಾದರೆ, ಆಗ ದೇವರು ಅವರನ್ನು ಆಶೀರ್ವದಿಸುತ್ತಾನೆ ಮತ್ತು ರಕ್ಷಿಸುತ್ತಾನೆ. ಎರಡನೆಯ ಕಾಲ್ಪನಿಕ ಸ್ಥಿತಿ: ಇಸ್ರಾಯೇಲ್ಯರು ದೇವರಿಗೆ ಅವಿಧೇಯರಾದರೆ, ಆಗ ದೇವರು ಅವರನ್ನು ಶಿಕ್ಷಿಸುತ್ತಾನೆ.

ನೀವು ಸರಿಯಾದದ್ದನ್ನು ಮಾಡಿದರೆ, ನಿಮ್ಮನ್ನು ಸ್ವೀಕರಿಸಲಾಗುವುದಿಲ್ಲವೇ? (Genesis 4:7a ULT)

ಒಂದು ವೇಳೆ ಕಾಯಿನನು ಸರಿಯಾದದ್ದನ್ನು ಮಾಡಿದರೆ ಅವನು ಸ್ವೀಕರಿಸಲ್ಪಡುತ್ತಾನೆ. ಕಾಯಿನನನ್ನು ಒಪ್ಪಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಅವನು ಸರಿಯಾದದ್ದನ್ನು ಮಾಡುವುದು.

ಒಂದು ವೇಳೆ ಈ ಯೋಜನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ, ತಾನೇ ಕೆಡುವದು; ಆದರೆ ಅದು ಒಂದು ವೇಳೆ ದೇವರಿಂದಾಗಿದ್ದರೆ, ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ. (Acts 5:38b-39aULT)

ಇಲ್ಲಿ ಎರಡು ಕಾಲ್ಪನಿಕ ಪರಿಸ್ಥಿತಿಗಳಿವೆ: (1) ಈ ಕೆಲಸವು ಮನುಷ್ಯರಿಂದಾಗಿದ್ದು ನಿಜವಾಗಿದ್ದರೆ, ತಾನೇ ಕೆಡುವದು; (2) ಅದು ದೇವರಿಂದಾಗಿದ್ದು ನಿಜವಾಗಿದ್ದರೆ, ಅದನ್ನು ಕೆಡಿಸುವದಕ್ಕೆ ಆಗುವದಿಲ್ಲ.

ಅನುವಾದದ ತಂತ್ರಗಳು

(1) ಷರತ್ತುಗಳ ಕ್ರಮವು ಕಾಲ್ಪನಿಕ ಸ್ಥಿತಿಯನ್ನು ಗೊಂದಲಮಯವಾಗಿಸಿದರೆ, ಷರತ್ತುಗಳ ಕ್ರಮವನ್ನು ಬದಲಾಯಿಸಿ.

(2) ಎರಡನೆಯ ಘಟನೆ ಎಲ್ಲಿದೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೆ, ಆ ಭಾಗವನ್ನು “then/ಆಗ” ಎಂಬ ಪದದಿಂದ ಗುರುತಿಸಿ.

ಅನ್ವಯಿಸಲಾದ ಅನುವಾದ ತಂತ್ರಗಳ ಉದಾಹರಣೆಗಳು

(1) ಷರತ್ತುಗಳ ಕ್ರಮವು ಕಾಲ್ಪನಿಕ ಸ್ಥಿತಿಯನ್ನು ಗೊಂದಲಮಯವಾಗಿಸಿದರೆ, ಷರತ್ತುಗಳ ಕ್ರಮವನ್ನು ಬದಲಾಯಿಸಿ.

ದೇವರು ಜನರನ್ನು ಆಶೀರ್ವದಿಸುವುದಾಗಿ ಮತ್ತು ಅವರನ್ನು ರಕ್ಷಿಸುವುದಾಗಿ ಭರವಸೆ ನೀಡಿದನು ಒಂದು ವೇಳೆ ಅವರು ಈ ನಿಯಮಗಳನ್ನು ಪಾಲಿಸಿದರೆ. ಆದರೆ ಅವರು ಒಂದು ವೇಳೆ ಅವಿಧೇಯರಾಗದಿದ್ದರೆ ಅವರನ್ನು ಶಿಕ್ಷಿಸುವುದಾಗಿ ಹೇಳಿದನು. (Story 13 Frame 7 OBS)

ಒಂದು ವೇಳೆ ಜನರು ಈ ನಿಯಮಗಳನ್ನು ಪಾಲಿಸಿದರೆ, ದೇವರು ಅವರನ್ನು ಆಶೀರ್ವದಿಸುವುದಾಗಿ ಮತ್ತು ರಕ್ಷಿಸುವುದಾಗಿ ಭರವಸೆ ನೀಡಿದನು. ಆದರೆ ಅವರು ಒಂದು ವೇಳೆ ನಿಯಮಗಳಿಗೆ ಅವಿಧೇಯರಾಗದಿದ್ದರೆ, ಅವರನ್ನು ಶಿಕ್ಷಿಸುವುದಾಗಿ ಹೇಳಿದನು.

(2) ಎರಡನೆಯ ಘಟನೆ ಎಲ್ಲಿದೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೆ, ಆ ಭಾಗವನ್ನು “then/ಆಗ” ಎಂಬ ಪದದಿಂದ ಗುರುತಿಸಿ.

ದೇವರು ಜನರನ್ನು ಆಶೀರ್ವದಿಸುವುದಾಗಿ ಮತ್ತು ಅವರನ್ನು ರಕ್ಷಿಸುವುದಾಗಿ ಭರವಸೆ ನೀಡಿದನು ಒಂದು ವೇಳೆ ಅವರು ಈ ನಿಯಮಗಳನ್ನು ಪಾಲಿಸಿದರೆ. ಆದರೆ ಅವರು ಒಂದು ವೇಳೆ ಅವಿಧೇಯರಾಗದಿದ್ದರೆ, ಆಗ ಅವರನ್ನು ಶಿಕ್ಷಿಸುವುದಾಗಿ ಹೇಳಿದನು. (Story 13 Frame 7 OBS)

ಜನರು ಈ ನಿಯಮಗಳನ್ನು ಪಾಲಿಸಿದರೆ, ಆಗ ದೇವರು ಅವರನ್ನು ಆಶೀರ್ವದಿಸುವುದಾಗಿ ಮತ್ತು ಅವರನ್ನು ರಕ್ಷಿಸುವುದಾಗಿ ಭರವಸೆ ನೀಡಿದನು. ಆದರೆ ಒಂದು ವೇಳೆ ಅವರು ನಿಯಮಗಳಿಗೆ ಅವಿಧೇಯರಾಗದಿದ್ದರೆ, ಆಗ ಅವರನ್ನು ಶಿಕ್ಷಿಸುವುದಾಗಿ ಹೇಳಿದನು.

ಒಂದು ವೇಳೆ ಈ ಯೋಜನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ, ತಾನೇ ಕೆಡುವದು; ಆದರೆ ಅದು ದೇವರಿಂದಾಗಿದ್ದರೆ, ಆಗ ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ. (Acts 5:38b-39aULT)

ಒಂದು ವೇಳೆ ಈ ಯೋಜನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ, ಆಗ ತಾನೇ ಕೆಡುವದು; ಆದರೆ ಅದು ಒಂದು ವೇಳೆ ದೇವರಿಂದಾಗಿದ್ದರೆ, ಆಗ ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ;


ಜೋಡಣೆ  – ವಿನಾಯಿತಿ ಷರತ್ತುಗಳು

Translation Manual :: Just-in-Time Learning Modules :: Grammar :: Connect - Exception Clauses

ವಿನಾಯಿತಿ ಸಂಬಂಧ

ವಿವರಣೆ

ವಿನಾಯಿತಿ ಸಂಬಂಧ ಕಲ್ಪಿಸುವ ಗುಂಪಿನಿಂದ ವಸ್ತು (ಗಳು) ಅಥವಾ ವ್ಯಕ್ತಿ (ಗಳನ್ನು) ಹೊರಗಿಡುತ್ತಾರೆ.

ಕಾರಣ ಇದು ಅನುವಾದದ ತೊಂದರೆ

ಮೊದಲು ಒಂದು ಗುಂಪನ್ನು (ಭಾಗ 1) ವಿವರಿಸುವ ಮೂಲಕ ಮತ್ತು ಆ ಗುಂಪಿನಲ್ಲಿಲ್ಲದದ್ದನ್ನು “ಹೊರತುಪಡಿಸಿ,” “ಆದರೆ ಅಲ್ಲ”, “ಹೊರತುಪಡಿಸಿ,” “ಹೊರತುಪಡಿಸಿ,” “ಹೊರತು,” “ಆದಾಗ್ಯೂ” ಎಂದು ಹೇಳುವ ಮೂಲಕ ಇಂಗ್ಲಿಷ್ ಅಸಾಧಾರಣ ಸಂಬಂಧಗಳನ್ನು ಸೂಚಿಸುತ್ತದೆ. … ಅಲ್ಲ, ”ಮತ್ತು“ ಮಾತ್ರ ”(ಭಾಗ 2). ಒಂದು ಅಥವಾ ಹೆಚ್ಚಿನ ವಸ್ತುಗಳು ಅಥವಾ ಜನರನ್ನು ಗುಂಪಿನಿಂದ ಹೊರಗಿಡಲಾಗಿದೆ ಎಂದು ಕೆಲವು ಭಾಷೆಗಳು ಈ ರೀತಿ ಸೂಚಿಸುವುದಿಲ್ಲ. ಬದಲಾಗಿ, ಅವರು ಇದನ್ನು ಮಾಡಲು ಇತರ ಮಾರ್ಗಗಳನ್ನು ಹೊಂದಿದ್ದಾರೆ. ಕೆಲವು ಭಾಷೆಗಳಲ್ಲಿ ಈ ರೀತಿಯ ನಿರ್ಮಾಣವು ಅರ್ಥವಾಗುವುದಿಲ್ಲ ಏಕೆಂದರೆ ಭಾಗ 2 ರಲ್ಲಿನ ಅನುವಾದವು ಭಾಗ 1 ರಲ್ಲಿನ ಹೇಳಿಕೆಗೆ ವಿರುದ್ಧವಾಗಿದೆ ಎಂದು ತೋರುತ್ತದೆ. ಅನುವಾದಕರು ಗುಂಪಿನಲ್ಲಿ ಯಾರು (ಅಥವಾ ಏನು) ಮತ್ತು ಯಾರು (ಅಥವಾ ಏನು) ಹೊರಗಿಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಇದನ್ನು ಅವರ ಭಾಷೆಯಲ್ಲಿ ನಿಖರವಾಗಿ ಸಂವಹನ ಮಾಡಲು ಸಾಧ್ಯವಾಗುತ್ತದೆ.

ಒಬಿಎಸ್ ಮತ್ತು ಬೈಬಲ್‌ನಿಂದ ಉದಾಹರಣೆಗಳು

ಆದಾಮನಿಗೆ ದೇವರು ಹೇಳಿದರು ತೋಟದಲ್ಲಿರುವ ಯಾವುದೇ ಮರದಿಂದ ಒಳ್ಳೆಯದು ಮತ್ತು ಕೆಟ್ಟದ್ದರ ಜ್ಞಾನದ ಮರದಿಂದ ಹೊರತುಪಡಿಸಿ ತಿನ್ನಬಹುದೆಂದು. (ಒಬಿಎಸ್ ಕಥೆ 1 ರಚನೆ 11)

ಆದರೆ ನೀವು ಅದನ್ನು ಬಿಡುಗಡೆ ಮಾಡದಿದ್ದರೆ, ನನಗೆ ತಿಳಿಯುವಂತೆ ಹೇಳಿ, ಏಕೆಂದರೆ ಅದನ್ನು ಪುನಃ ಪಡೆದುಕೊಳ್ಳಲು ಯಾರೂ ಇಲ್ಲ ನಿಮ್ಮಲ್ಲದೆ ಮತ್ತು ನಾನು ನಿಮ್ಮ ನಂತರ ಇದ್ದೇನೆ. ” (ರೂತಳು 4: 4ಬಿ ಯು ಎಲ್ ಟಿ)

ದಾವೀದನು ಸಂಜೆಯಿಂದ ಮರುದಿನ ಸಂಜೆಯವರೆಗೆ ಅವರ ಮೇಲೆ ಆಕ್ರಮಣ ನಡೆಸಿದನು. ಅಲ್ಲ ಒಬ್ಬ ವ್ಯಕ್ತಿ ತಪ್ಪಿಸಿಕೊಂಡಿರಲಿಲ್ಲ 400 ಯುವಕರುಹೊರತುಪಡಿಸಿ , ಒಂಟೆಗಳ ಮೇಲೆ ಸವಾರಿ ಮಾಡಿ ಓಡಿಹೋದರು. (1 ಸಮುವೇಲ 30:17 ಯು ಎಲ್ ಟಿ)

ಆ ವ್ಯಕ್ತಿ, “ನಾನು ಹೋಗಲಿ, ಏಕೆಂದರೆ ಮುಂಜಾನೆ ಮುಗಿಯುತ್ತಿದೆ” ಎಂದು ಹೇಳಿದನು. ಯಾಕೊಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನುಹೋಗಲು ಬಿಡುವುದಿಲ್ಲ” ಎಂದು ಹೇಳಿದರು. (ಆದಿಕಾಂಡ 32:26 ಯು ಎಲ್ ಟಿ)

ಅನುವಾದದ ಕೌಶಲತೆ

ವಿನಾಯಿತಿ ಷರತ್ತುಗಳನ್ನು ಮೂಲ ಭಾಷೆಯಲ್ಲಿ ಗುರುತಿಸಿರುವ ವಿಧಾನವು ನಿಮ್ಮ ಭಾಷೆಯಲ್ಲಿಯೂ ಸ್ಪಷ್ಟವಾಗಿದ್ದರೆ, ವಿನಾಯಿತಿ ಷರತ್ತುಗಳನ್ನು ಅದೇ ರೀತಿಯಲ್ಲಿ ಭಾಷಾಂತರಿಸಿ.

(1) ಆಗಾಗ್ಗೆ, ಭಾಗ 2 ರಲ್ಲಿನ ವಿನಾಯಿತಿ ಭಾಗ 1 ರಲ್ಲಿ ನಿರಾಕರಿಸಲ್ಪಟ್ಟ ಯಾವುದನ್ನಾದರೂ ವಿರೋಧಿಸುತ್ತದೆ. ಈ ಸಂದರ್ಭದಲ್ಲಿ ಅನುವಾದಕನು ನಕಾರಾತ್ಮಕವನ್ನು ಅಳಿಸಿ ಮತ್ತು “ಮಾತ್ರ ನಂತಹ ಪದವನ್ನು ಬಳಸುವ ಮೂಲಕ ವಿರೋಧಾಭಾಸವಿಲ್ಲದೆ ಅದೇ ಕಲ್ಪನೆಯನ್ನು ಹೇಳಬಹುದು. ” (2) ಷರತ್ತುಗಳ ಕ್ರಮವನ್ನು ಹಿಮ್ಮುಖಗೊಳಿಸಿ ಇದರಿಂದ ವಿನಾಯಿತಿಯನ್ನು ಮೊದಲು ಹೇಳಲಾಗುತ್ತದೆ, ಮತ್ತು ನಂತರ ದೊಡ್ಡ ಗುಂಪನ್ನು ಎರಡನೆಯದಾಗಿ ಹೆಸರಿಸಲಾಗುತ್ತದೆ.

ಅನುವಾದದ ಕೌಶಲತೆ ಉದಾಹರಣೆಗಳನ್ನು ಅನ್ವಯಿಸಲಾಗುತ್ತದೆ

(1) ಆಗಾಗ್ಗೆ, ಭಾಗ 2 ರಲ್ಲಿನ ವಿನಾಯಿತಿ ಭಾಗ 1 ರಲ್ಲಿ ನಿರಾಕರಿಸಲ್ಪಟ್ಟ ಯಾವುದನ್ನಾದರೂ ವಿರೋಧಿಸುತ್ತದೆ. ಈ ಸಂದರ್ಭದಲ್ಲಿ, ಅನುವಾದಕನು negative ಣಾತ್ಮಕವನ್ನು ಅಳಿಸಿ ಮತ್ತು “** ಮಾತ್ರ ** ನಂತಹ ಪದವನ್ನು ಬಳಸುವ ಮೂಲಕ ವಿರೋಧಾಭಾಸವಿಲ್ಲದೆ ಅದೇ ಕಲ್ಪನೆಯನ್ನು ಹೇಳಬಹುದು. ”

ದಾವೀದನು ಸಂಜೆಯಿಂದ ಮರುದಿನ ಸಂಜೆಯವರೆಗೆ ಅವರ ಮೇಲೆ ಆಕ್ರಮಣ ನಡೆಸಿದನು. ** ಒಬ್ಬ ಮನುಷ್ಯ ತಪ್ಪಿಸಿಕೊಂಡಿಲ್ಲ, ಒಂಟೆಗಳ ಮೇಲೆ ಸವಾರಿ ಮಾಡಿ ಓಡಿಹೋದ 400 ಯುವಕರನ್ನು ಹೊರತುಪಡಿಸಿ * *. (1 ಸಮುವೇಲ 30:17 ಯು ಎಲ್ ಟಿ)

  • ಭಾಗ 1: (ಒಬ್ಬ ಮನುಷ್ಯನು ತಪ್ಪಿಸಿಕೊಂಡಿದ್ದು ಇಲ್ಲ)
  • ಭಾಗ 2: (400 ಯುವಕರನ್ನು ಹೊರತುಪಡಿಸಿ)

ಸಂಜೆಯಿಂದ ಮರುದಿನ ಸಂಜೆಯವರೆಗೆ ದಾವೀದನು ಅವರ ಮೇಲೆ ಹಲ್ಲೆ ನಡೆಸಿದನು. ಕೇವಲ 400 ಯುವಕರು ತಪ್ಪಿಸಿಕೊಂಡರು; ಅವರು ಒಂಟೆಗಳ ಮೇಲೆ ಸವಾರಿ ಮಾಡಿ ಓಡಿಹೋದರು.

ಆದರೆ ನೀವು ಅದನ್ನು ಬಿಡುಗಡೆ ಮಾಡದಿದ್ದರೆ, ನನಗೆ ತಿಳಿಯುವಂತೆ ಹೇಳಿ, ಏಕೆಂದರೆ ಅದನ್ನು ಪುನಃ ಪಡೆದುಕೊಳ್ಳಲು ಯಾರೂ ಇಲ್ಲ ನಿಮ್ಮಲ್ಲದೆ ಮತ್ತು ನಾನು ನಿಮ್ಮ ನಂತರ ಇದ್ದೇನೆ. ” (ರೂತ 4: 4 ಯು ಎಲ್ ಟಿ)

ಆದರೆ ನೀವು ಅದನ್ನು ಪುನಃ ಪಡೆದುಕೊಳ್ಳದಿದ್ದರೆ, ನನಗೆ ತಿಳಿಯುವಂತೆ ಹೇಳಿ, ಏಕೆಂದರೆ ನೀವು ಅದನ್ನು ಪುನಃ ಪಡೆದುಕೊಳ್ಳಲು ಮೊದಲು ಸಾಲಿನಲ್ಲಿರುವಿರಿ [ನೀವು ಮಾತ್ರ ಅದನ್ನು ಪುನಃ ಪಡೆದುಕೊಳ್ಳಬಹುದು ], ಮತ್ತು ನಾನು ನಿಮ್ಮ ನಂತರ ಇದ್ದೇನೆ. ”

ಆ ವ್ಯಕ್ತಿ, “ನಾನು ಹೋಗಲಿ, ಏಕೆಂದರೆ ಮುಂಜಾನೆ ಕಳೆಯುತ್ತಿದೆ” ಎಂದು ಹೇಳಿದನು. ಯಾಕೂಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು ನಾನುನಾನು ಹೋಗಲು ಬಿಡುವುದಿಲ್ಲ” ಎಂದು ಹೇಳಿದರು. (ಆದಿಕಾಂಡ 32:26 ಯು ಎಲ್ ಟಿ)

ಆ ಮನುಷ್ಯನು, “ನಾನು ಹೋಗಲಿ, ಏಕೆಂದರೆ ಮುಂಜಾನೆ ಕಳೆಯುತ್ತಿದೆ” ಎಂದು ಹೇಳಿದನು. ಯಾಕೊಬನು, “ನೀನು ನನ್ನನ್ನು ಆಶೀರ್ವದಿಸಿದರೆ ಮಾತ್ರ ನಾನು ನಿಮ್ಮನ್ನು ಹೋಗಲು ಬಿಡುತ್ತೇನೆ” ಎಂದು ಹೇಳಿದರು.

(2) ಷರತ್ತುಗಳ ಕ್ರಮವನ್ನು ಹಿಮ್ಮುಖಗೊಳಿಸಿ, ಇದರಿಂದಾಗಿ ವಿನಾಯಿತಿಯನ್ನು ಮೊದಲು ಹೇಳಲಾಗುತ್ತದೆ, ಮತ್ತು ನಂತರ ದೊಡ್ಡ ಗುಂಪನ್ನು ಎರಡನೆಯದಾಗಿ ಹೆಸರಿಸಲಾಗುತ್ತದೆ.

ಒಳ್ಳೆಯದು ಮತ್ತು ಕೆಟ್ಟದ್ದರ ಜ್ಞಾನದ ಮರದಿಂದ ಹೊರತುಪಡಿಸಿ ತೋಟದಲ್ಲಿರುವ ಯಾವುದೇ ಮರದಿಂದ ತಿನ್ನಬಹುದೆಂದು ದೇವರು ಆದಾಮನಿಗೆ ಹೇಳಿದನು. (ಒಬಿಎಸ್ ಕಥೆ 1 ರಚನೆ 11) ಒಳ್ಳೆಯದು ಮತ್ತು ಕೆಟ್ಟದ್ದರ ಜ್ಞಾನದ ಮರದಿಂದ **ತಿನ್ನಲು ಸಾಧ್ಯವಿಲ್ಲ ಎಂದು ದೇವರು ಆದಾಮನಿಗೆ ಹೇಳಿದನು, ಆದರೆ ಅವನು ತೋಟದಲ್ಲಿರುವ ಬೇರೆ ಯಾವುದೇ ಮರದಿಂದ ತಿನ್ನಬಹುದು.


ಸಂಬಂಧಾರ್ಥಕಾವ್ಯಯ - ಭಿನ್ನತೆಯ ಸಂಬಂಧಾರ್ಥಕ

Translation Manual :: Just-in-Time Learning Modules :: Grammar :: Connect - Contrast Relationship

ತಾರ್ಕಿಕ ಸಂಬಂಧಾರ್ಥಕಗಳು

ಕೆಲವು ಸಂಯೋಜಕಾವ್ಯಯ ಪದಗಳು ಎರಡು ನುಡಿಗಟ್ಟುಗಳ, ಉಪವಾಕ್ಯಗಳ, ವಾಕ್ಯಗಳ ಅಥವಾ ಪಠ್ಯದ ಭಾಗಗಳ ನಡುವೆ ತಾರ್ಕಿಕ ಸಂಬಂಧವನ್ನು ಏರ್ಪಡಿಸುತ್ತವೆ.

ಭಿನ್ನತೆಯ ಸಂಬಂಧಾರ್ಥಕ

ವ್ಯಾಖ್ಯೆ

ಭಿನ್ನತೆಯ ಸಂಬಂಧಾರ್ಥಕವು ಒಂದು ತಾರ್ಕಿಕ ಸಂಬಂಧವಾಗಿದ್ದು, ಇದರಲ್ಲಿ ಒಂದು ಘಟನೆಯು ಅಥವಾ ವಸ್ತುವು ಇನ್ನೊಂದಕ್ಕೆ ಭಿನ್ನವಾಗಿ ಅಥವಾ ವಿರೋಧಾಭಾಸವಾಗಿ ಇರುತ್ತದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಸತ್ಯವೇದದ ವಚನಗಳಲ್ಲಿ, ಭಾಗಿಯಾಗಿರುವ ಜನರು ಉದ್ದೇಶಿಸಿದಂತೆ ಅಥವಾ ಸಂಭವಿಸಬೇಕೆಂದು ನಿರೀಕ್ಷಿಸಿದಂತೆ ಅನೇಕ ಘಟನೆಗಳು ನಡೆಯುವುದಿಲ್ಲ. ಕೆಲವೊಮ್ಮೆ ಜನರು ನಿರೀಕ್ಷಿಸದ ರೀತಿಯಲ್ಲಿ ವರ್ತಿಸುತ್ತಾರೆ, ಅದು ಒಳ್ಳೆಯದಾಗಿರಬಹುದು ಅಥವಾ ಕೆಟ್ಟದಾಗಿರಬಹುದು. ಸಾಮಾನ್ಯವಾಗಿ ದೇವರು ಘಟನೆಗಳನ್ನು ಬದಲಾಯಿಸುವ ಕಾರ್ಯವನ್ನು ಮಾಡುವವನಾಗಿದ್ದಾನೆ. ಅನೇಕವೇಳೆ ಈ ಘಟನೆಗಳು ಪ್ರಮುಖವಾಗಿವೆ ಮತ್ತು ಅನುವಾದಕರು ಈ ಭಿನ್ನತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಂವಹನ ಮಾಡುವುದು ಮುಖ್ಯವಾಗಿರುತ್ತದೆ. “ಆದರೆ,” “ಆದರೂ,” “ಹಾಗಿದ್ದರೂ,” “ಹಾಗಾದರೂ,” “ಇನ್ನೂ,” ಅಥವಾ “ಆದಾಗ್ಯೂ” ಎಂಬ ಪದಗಳಿಂದ ಇಂಗ್ಲಿಷ್ ಭಾಷೆಯಲ್ಲಿ ಪ್ರಭೇದಗಳ ಸಂಬಂಧಾರ್ಥಕಗಳನ್ನು ಸಾಮಾನ್ಯವಾಗಿ ಸೂಚಿಸಲಾಗುತ್ತದೆ.

ಒಬಿಎಸ್ ಮತ್ತು ಸತ್ಯವೇದದಲ್ಲಿನ ಉದಾಹರಣೆಗಳು

ನೀವು ನನ್ನನ್ನು ದಾಸನನ್ನಾಗಿ ಮಾರಿದಾಗ ನೀವು ಕೇಡನ್ನು ಮಾಡಲು ಪ್ರಯತ್ನಿಸಿದ್ದೀರಿ, ಆದರೆ ದೇವರು ಕೇಡನ್ನು ಒಳ್ಳೆಯದಕ್ಕಾಗಿ ಉಪಯೋಗಿಸಿದನು! (ಕಥೆ 8 ಚೌಕ್ಕಟ್ಟು 12 ಒಬಿಎಸ್)

ಯೋಸೇಫನನ್ನು ಮಾರಬೇಕೆಂಬ ಅವನ ಸಹೋದರರ ಕೆಟ್ಟ ಯೋಜನೆಯು ಅನೇಕ ಜನರನ್ನು ಕಾಪಾಡುವ ದೇವರ ಉತ್ತಮ ಯೋಜನೆಗೆ ವ್ಯತಿರಿಕ್ತವಾಗಿದೆ. “ಆದರೆ” ಎಂಬ ಪದವು ಭಿನ್ನತೆಯನ್ನು ತೋರಿಸುತ್ತದೆ.

ಯಾವನು ಹೆಚ್ಚಿನವನು? ಊಟಕ್ಕೆ ಕೂತವನೋ ಸೇವೆಮಾಡುವವನೋ? ಊಟಕ್ಕೆ ಕೂತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ. (ಲೂಕ 22:27 ULT)

ಮನುಷ್ಯ ನಾಯಕರು ವರ್ತಿಸುವ ಹೆಮ್ಮೆಯ ರೀತಿಗೆ ಮತ್ತು ತಾನು ವರ್ತಿಸುವ ದೀನತೆಯ ರೀತಿಗೆ ಇರುವ ವ್ಯತ್ಯಾಸವನ್ನು “ಆದರೆ” ಎಂಬ ಪದದ ಮೂಲಕ ಯೇಸು ಸೂಚಿಸುತ್ತಾನೆ.

… ಇದಲ್ಲದೆ ಅವನನ್ನು ಕಾವಲಲ್ಲಿಟ್ಟು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿಸಿದ್ದರು ಆದರೂ ಅವನು ಅವುಗಳನ್ನು ಮುರಿದುಹಾಕುತ್ತಿದ್ದನು; ಮತ್ತು ಆ ದೆವ್ವವು ಅವನನ್ನು ನಿರ್ಜನ ಪ್ರದೇಶಗಳಿಗೆ ಓಡಿಸುತ್ತಿತ್ತು. (ಲೂಕ 8:29 ULT)

ಸರಪಣಿಗಳಿಂದ ಬಂಧಿಸಲ್ಪಟ್ಟ ಯಾರಾದರೂ ಅವುಗಳನ್ನು ಮುರಿದುಹಾಕಲು ಆಗುವಂಥದ್ದು ಅನಿರೀಕ್ಷಿತವಾದ ಘಟನೆಯಾಗಿದೆ. “ಆದರೂ” ಎಂಬ ಪದವು ಅನಿರೀಕ್ಷಿತ ಘಟನೆಯ ಭಿನ್ನತೆಯನ್ನು ಸೂಚಿಸುತ್ತದೆ.

[ದಾವೀದನು] ದೇವರ ಸನ್ನಿಧಾನದಲ್ಲಿ ಕೃಪೆ ಹೊಂದಿ ಯಾಕೋಬನ ದೇವರಿಗಾಗಿ ಆಲಯವನ್ನು ಕಟ್ಟಿಸುವುದಕ್ಕೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡನು. ಆದರೂ ದೇವರಿಗೋಸ್ಕರ ಆಲಯವನ್ನು ಕಟ್ಟಿಸಿದವನು ಸೊಲೊಮೋನನು. ಆದರೂ ಪರಾತ್ಪರನಾದ ದೇವರು ಮನುಷ್ಯರ ಕೈಯಿಂದ ಕಟ್ಟಿದ ಆಲಯಗಳಲ್ಲಿ ವಾಸಮಾಡುವವನಲ್ಲ. (ಅಪೊಸ್ತಲರ ಕೃತ್ಯಗಳು 7:46-48 ULT)

ಇಲ್ಲಿ ಎರಡು ಭಿನ್ನತೆಗಳಿವೆ, ಎರಡನ್ನೂ “ಆದರೂ” ಎಂದು ಪದದಿಂದ ಸೂಚಿಸಲಾಗಿದೆ. ದೇವರಿಗಾಗಿ ಆಲಯವನ್ನು ಕಟ್ಟಿಸುವುದಕ್ಕೆ ಅಪ್ಪಣೆಯಾಗಬೇಕೆಂದು ದಾವೀದನು ಕೇಳಿಕೊಂಡರೂ, ಅದನ್ನು ಕಟ್ಟಿಸಿದವನು ಸೊಲೊಮೋನನು ಇದು ಎಂದು ತೋರಿಸುತ್ತದೆ. ಅದಾದ ನಂತರ ಮತ್ತೊಂದು ಭಿನ್ನತೆಯಿದೆ. ಸೊಲೊಮೋನನು ದೇವರಿಗಾಗಿ ಆಲಯವನ್ನು ಕಟ್ಟಿಸಿದರೂ, ಜನರು ಕೈಯಿಂದ ಕಟ್ಟುವ ಆಲಯಗಳಲ್ಲಿ ದೇವರು ವಾಸಿಸುವುದಿಲ್ಲ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ಭಿನ್ನತೆಗಳನ್ನು ತೋರಿಸುವ ಸಂಬಂಧಾರ್ಥಕಗಳನ್ನು ಮೇಲಿನ ಪಠ್ಯದಲ್ಲಿರುವ ಅದೇ ರೀತಿಯಲ್ಲಿ ಬಳಸುವುದಾದರೆ, ಅವುಗಳನ್ನು ಹಾಗೆಯೇ ಬಳಸಿರಿ.

  1. ಉಪವಾಕ್ಯಗಳ ನಡುವಿನ ಭಿನ್ನತೆಯನ್ನು ತೋರಿಸುವ ಸಂಬಂಧಾರ್ಥಕಗಳು ಅಷ್ಟ ಸ್ಪಷ್ಟವಾಗಿಲ್ಲದಿದ್ದರೆ, ಹೆಚ್ಚು ನಿರ್ದಿಷ್ಟವಾದ ಅಥವಾ ಹೆಚ್ಚು ಸ್ಪಷ್ಟವಾದ ಸಂಪರ್ಕ ಕಲ್ಪಿಸುವ ಪದವನ್ನು ಅಥವಾ ಪದಗುಚ್ಛವನ್ನು ಬಳಸಿರಿ.
  2. ಭಿನ್ನತೆಯನ್ನು ತೋರಿಸುವ ಸಂಬಂಧಾರ್ಥಕದ ಇತರ ಉಪವಾಕ್ಯವನ್ನು ಗುರುತಿಸುವುದು ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿದ್ದರೆ, ಇತರ ಉಪವಾಕ್ಯಕ್ಕೆ ಸಂಪರ್ಕ ಕಲ್ಪಿಸುವ ಪದವನ್ನು ಬಳಸಿರಿ.
  3. ನಿಮ್ಮ ಭಾಷೆಯಲ್ಲಿ ಭಿನ್ನತೆಯನ್ನು ತೋರಿಸುವ ಸಂಬಂಧಾರ್ಥಕವನ್ನು ಬೇರೆ ರೀತಿಯಲ್ಲಿ ಸೂಚಿಸುವುದಾದರೆ, ಆ ರೀತಿಯನ್ನು ಬಳಸಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

  1. ಉಪವಾಕ್ಯಗಳ ನಡುವಿನ ಭಿನ್ನತೆಯನ್ನು ತೋರಿಸುವ ಸಂಬಂಧಾರ್ಥಕಗಳು ಅಷ್ಟ ಸ್ಪಷ್ಟವಾಗಿಲ್ಲದಿದ್ದರೆ, ಹೆಚ್ಚು ನಿರ್ದಿಷ್ಟವಾದ ಅಥವಾ ಹೆಚ್ಚು ಸ್ಪಷ್ಟವಾದ ಸಂಪರ್ಕ ಕಲ್ಪಿಸುವ ಪದವನ್ನು ಅಥವಾ ಪದಗುಚ್ಛವನ್ನು ಬಳಸಿರಿ.

ಯಾವನು ಹೆಚ್ಚಿನವನು? ಊಟಕ್ಕೆ ಕೂತವನೋ ಸೇವೆಮಾಡುವವನೋ? ಊಟಕ್ಕೆ ಕೂತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ. (ಲೂಕ 22:27 ULT)

ಯಾವನು ಹೆಚ್ಚಿನವನು? ಊಟಕ್ಕೆ ಕೂತವನೋ ಸೇವೆಮಾಡುವವನೋ? ಊಟಕ್ಕೆ ಕೂತವನಲ್ಲವೇ. ಆ ವ್ಯಕ್ತಿಗಿಂತ ಭಿನ್ನವಾಗಿ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ.

  1. ಭಿನ್ನತೆಯನ್ನು ತೋರಿಸುವ ಸಂಬಂಧಾರ್ಥಕದ ಇತರ ಉಪವಾಕ್ಯವನ್ನು ಗುರುತಿಸುವುದು ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿದ್ದರೆ, ಇತರ ಉಪವಾಕ್ಯಕ್ಕೆ ಸಂಪರ್ಕ ಕಲ್ಪಿಸುವ ಪದವನ್ನು ಬಳಸಿರಿ.

… ಇದಲ್ಲದೆ ಅವನನ್ನು ಕಾವಲಲ್ಲಿಟ್ಟು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿಸಿದ್ದರು ಆದರೂ ಅವನು ಅವುಗಳನ್ನು ಮುರಿದುಹಾಕುತ್ತಿದ್ದನು; ಮತ್ತು ಆ ದೆವ್ವವು ಅವನನ್ನು ನಿರ್ಜನ ಪ್ರದೇಶಗಳಿಗೆ ಓಡಿಸುತ್ತಿತ್ತು. (ಲೂಕ 8:29 ULT)

… ಇದಲ್ಲದೆ ಅವನನ್ನು ಕಾವಲಲ್ಲಿಟ್ಟು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿಸಿದ್ದರು ಹಾಗಿದ್ದರೂ ಸಹ ಅವನು ಅವುಗಳನ್ನು ಮುರಿದುಹಾಕುತ್ತಿದ್ದನು; ಮತ್ತು ಆ ದೆವ್ವವು ಅವನನ್ನು ನಿರ್ಜನ ಪ್ರದೇಶಗಳಿಗೆ ಓಡಿಸುತ್ತಿತ್ತು.

  1. ನಿಮ್ಮ ಭಾಷೆಯಲ್ಲಿ ಭಿನ್ನತೆಯನ್ನು ತೋರಿಸುವ ಸಂಬಂಧಾರ್ಥಕವನ್ನು ಬೇರೆ ರೀತಿಯಲ್ಲಿ ಸೂಚಿಸುವುದಾದರೆ, ಆ ರೀತಿಯನ್ನು ಬಳಸಿರಿ.

[ದಾವೀದನು] ದೇವರ ಸನ್ನಿಧಾನದಲ್ಲಿ ಕೃಪೆ ಹೊಂದಿ ಯಾಕೋಬನ ದೇವರಿಗಾಗಿ ಆಲಯವನ್ನು ಕಟ್ಟಿಸುವುದಕ್ಕೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡನು. ಆದರೂ ದೇವರಿಗೋಸ್ಕರ ಆಲಯವನ್ನು ಕಟ್ಟಿಸಿದವನು ಸೊಲೊಮೋನನು. ಆದರೂ ಪರಾತ್ಪರನಾದ ದೇವರು ಮನುಷ್ಯರ ಕೈಯಿಂದ ಕಟ್ಟಿದ ಆಲಯಗಳಲ್ಲಿ ವಾಸಮಾಡುವವನಲ್ಲ. (ಅಪೊಸ್ತಲರ ಕೃತ್ಯಗಳು 7:46-48 ULT)

[ದಾವೀದನು] ದೇವರ ಸನ್ನಿಧಾನದಲ್ಲಿ ಕೃಪೆ ಹೊಂದಿ ಯಾಕೋಬನ ದೇವರಿಗಾಗಿ ಆಲಯವನ್ನು ಕಟ್ಟಿಸುವುದಕ್ಕೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡನು. ಆದರೆ ದೇವರಿಗೋಸ್ಕರ ಆಲಯವನ್ನು ಕಟ್ಟಿಸಿದವನು ಸೊಲೊಮೋನನು ದಾವೀದನಲ್ಲ. ಸೊಲೊಮೋನನು ಆತನಿಗಾಗಿ ಆಲಯವನ್ನು ಕಟ್ಟಿದರೂ ಪರಾತ್ಪರನಾದ ದೇವರು ಮನುಷ್ಯರ ಕೈಯಿಂದ ಕಟ್ಟಿದ ಆಲಯಗಳಲ್ಲಿ ವಾಸಮಾಡುವವನಲ್ಲ.


ಸಂಬಂಧಾರ್ಥಕಾವ್ಯಯ - ಗುರಿಯ (ಉದ್ದೇಶ) ಸಂಬಂಧಾರ್ಥಕ

Translation Manual :: Just-in-Time Learning Modules :: Grammar :: Connect - Goal (Purpose) Relationship

ತಾರ್ಕಿಕ ಸಂಬಂಧಗಳು

ಕೆಲವು ಸಂಯೋಜಕಾವ್ಯಯ ಪದಗಳು ಎರಡು ನುಡಿಗಟ್ಟುಗಳ, ಉಪವಾಕ್ಯಗಳ, ವಾಕ್ಯಗಳ ಅಥವಾ ಪಠ್ಯದ ಭಾಗಗಳ ನಡುವೆ ತಾರ್ಕಿಕ ಸಂಬಂಧವನ್ನು ಏರ್ಪಡಿಸುತ್ತವೆ.

ಗುರಿ (ಅಥವಾ ಉದ್ದೇಶ) ಸಂಬಂಧಾರ್ಥಕ

ವಿವರಣೆ

ಗುರಿಯ ಸಂಬಂಧಾರ್ಥಕವು ತಾರ್ಕಿಕವಾದ ಸಂಬಂಧವಾಗಿದ್ದು, ಇದರಲ್ಲಿ ಎರಡನೇ ಸಂಗತಿಯು ಮೊದಲ ಸಂಗತಿಯ ಉದ್ದೇಶವು ಅಥವಾ ಗುರಿಯು ಆಗಿರುತ್ತದೆ. ಯಾವುದೇ ಒಂದು ಕಾರ್ಯವು ಗುರಿಯ ಸಂಬಂಧಾರ್ಥಕವಾಗಬೇಕಾದರೆ, ಯಾರಾದರೊಬ್ಬರು ಎರಡನೇ ಸಂಗತಿಯು ನಡೆಯಬೇಕೆಂಬ ಉದ್ದೇಶದಿಂದ ಮೊದಲ ಸಂಗತಿಯನ್ನು ಮಾಡಬೇಕು.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಸತ್ಯವೇದದ ವಚನದಲ್ಲಿ, ಗುರಿಯನ್ನು ಅಥವಾ ಉದ್ದೇಶವನ್ನು ಮೊದಲನೆಯದಾಗಿ ಅಥವಾ ಎರಡನೆಯದಾಗಿಯೂ ಸಹ ಹೇಳಬಹುದು. ಆದರೆ ಕೆಲವು ಭಾಷೆಗಳಲ್ಲಿ, ಆ ತಾರ್ಕಿಕ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಗುರಿಯು ಅಥವಾ ಉದ್ದೇಶವು ಯಾವಾಗಲೂ ಒಂದೇ ಸ್ಥಾನದಲ್ಲಿರಬೇಕು (ಮೊದಲನೆಯ ಅಥವಾ ಎರಡನೆಯ). ನೀವು (ಅನುವಾದಕ) ಎರಡು ಭಾಗಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನಿಮ್ಮ ಭಾಷೆಯಲ್ಲಿ ನಿಖರವಾಗಿ ಸಂವಹನ ಮಾಡಬೇಕು. ಹಾಗೆ ಮಾಡುವುದಕ್ಕೆ ಎರಡು ಸಂಗತಿಗಳ ಕ್ರಮವನ್ನು ಬದಲಾಯಿಸಬೇಕಾಗಬಹುದು. ಒಂದು ಇನ್ನೊಂದರ ಗುರಿ ಅಥವಾ ಉದ್ದೇಶ ಅಗಿದೆ ಎಂಬುದನ್ನು ಸೂಚಿಸಲು ನಿರ್ದಿಷ್ಟವಾದ ಪದಗಳನ್ನು ಬಳಸಬೇಕಾಗಬಹುದು. ಇಂಗ್ಲಿಷ್ ಭಾಷೆಯಲ್ಲಿ ಗುರಿಯ ಸಂಬಂಧಾರ್ಥಕವನ್ನು ಸೂಚಿಸಲು “ಸಲುವಾಗಿ,” “ಅದರ ಸಲುವಾಗಿ” ಅಥವಾ “ಆದ್ದರಿಂದ” ಎಂಬ ಪದಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ. ಅನುವಾದಕನು ಗುರಿಯ ಸಂಬಂಧಾರ್ಥಕವನ್ನು ಸೂಚಿಸುವ ಪದಗಳನ್ನು ತಿಳಿದುಕೊಳ್ಳುವುದು ಮತ್ತು ಆ ಸಂಬಂಧಾರ್ಥಕವನ್ನು ಸಹಜವಾದ ರೀತಿಯಲ್ಲಿ ಭಾಷಾಂತರಿಸುವುದು ಅಗತ್ಯವಾಗಿದೆ.

ಒಬಿಎಸ್ ಮತ್ತು ಸತ್ಯವೇದದಲ್ಲಿನ ಉದಾಹರಣೆಗಳು

ಅವಳು ಕೋಪಗೊಂಡು ಯೋಸೇಫನ ಮೇಲೆ ಸುಳ್ಳಾದ ಆರೋಪ ಮಾಡಿದಳು ಆದ್ದರಿಂದ ಅವನನ್ನು ಬಂಧಿಸಿ ಸೆರೆಮನೆಗೆ ಕಳುಹಿಸಲಾಯಿತು. (ಕಥೆ 8 ಚೌಕ್ಕಟ್ಟು 5 ಒಬಿಎಸ್)

ಸ್ತ್ರೀಯು ಮಾಡಿದ ಸುಳ್ಳು ಆರೋಪದ ಗುರಿಯು ಅಥವಾ ಉದ್ದೇಶವು ಯೋಸೇಫನನ್ನು ಬಂಧಿಸಿ ಸೆರೆಮನೆಗೆ ಕಳುಹಿಸುವುದಾಗಿತ್ತು.

ಯೋವಾಷನ ಮಗನಾದ ಗಿದ್ಯೋನನು ಮಿದ್ಯಾನ್ಯರಿಗೆ ಮರೆಮಾಡುವುದಕ್ಕೆ ದ್ರಾಕ್ಷೆಯ ಆಲೆಯಲ್ಲಿ ಗೋದಿಯನ್ನು ಬಡಿಯುತ್ತಿದ್ದನು (ನ್ಯಾಯಸ್ಥಾಪಕರು 6:11ಬಿ ULT)

ಇಲ್ಲಿ ಉಪಸರ್ಗೀಯ ಪದಗುಚ್ಛವು “ಕ್ಕೆ” ಎಂಬ ಪದದಿಂದ ಅಂತ್ಯವಾಗುತ್ತದೆ ಆದರೆ “ಸಲುವಾಗಿ” ಎಂಬ ಅರ್ಥವನ್ನು ಕೊಡುತ್ತದೆ.

ಈಗ ನನಗೆ ನಿನ್ನ ದೃಷ್ಟಿಯಲ್ಲಿ ದಯೆ ದೊರಕಿರುವುದಾದರೆ, ನಿನ್ನ ಮಾರ್ಗಗಳನ್ನು ನನಗೆ ತೋರಿಸು ಇದರಿಂದ ನಾನು ನಿನ್ನನ್ನು ತಿಳಿದುಕೊಳ್ಳಬಹುದು ಮತ್ತು ನಿನ್ನ ದೃಷ್ಟಿಯಲ್ಲಿ ದಯೆಯನ್ನು ಹೊಂದಿಕೊಳ್ಳಬಹುದು. ಈ ಜನಾಂಗವು ನಿನ್ನ ಪ್ರಜೆ ಎಂಬುದನ್ನು ನೆನಪುಮಾಡಿಕೋ." (ವಿಮೋಚನಕಾಂಡ 33:13 ULT)

ಮೋಶೆಯು ದೇವರನ್ನು ತಿಳಿದುಕೊಳ್ಳಬೇಕು ಮತ್ತು ದೇವರ ದಯೆಯನ್ನು ಹೊಂದಿಕೊಳ್ಳಬೇಕು ಎಂಬ ಗುರಿಗಾಗಿ ಅಥವಾ ಉದ್ದೇಶಕ್ಕಾಗಿ ದೇವರ ಮಾರ್ಗಗಳನ್ನು ದೇವರು ತನಗೆ ತೋರಿಸಬೇಕೆಂದು ಮೋಶೆ ಬಯಸಿದನು.

“ಅವಳಿಗಾಗಿ ಸಿವುಡುಗಳಿಂದ ಸ್ವಲ್ಪ ತೆನೆಯನ್ನು ಕಿತ್ತುಹಾಕಿರಿ, ಮತ್ತು ಅವುಗಳನ್ನು ಅವಳು ಕೊಡಿಸಿಕೊಳ್ಳುವುದಕ್ಕಾಗಿ ಬಿಟ್ಟುಬಿಡಿರಿ, ಮತ್ತು ಅವಳನ್ನು ಗದರಿಸಬೇಡಿರಿ.” (ರೂತಳು 2:16 ULT)

ಅವರ ಸಿವುಡಗಳಿಂದ ತೆನೆಯನ್ನು ಕಿತ್ತುಹಾಕಲು ಮತ್ತು ಅದನ್ನು ಹಾಗೆಯೇ ಬಿಡಲು ಪುರುಷರಿಗೆ ಆಜ್ಞಾಪಿಸಿದ್ದರ ಬೋವಜನ ಗುರಿಯು ಅಥವಾ ಉದ್ದೇಶವು ರೂತಳು ಅದನ್ನು ಶೇಖರಿಸಿಕೊಳ್ಳುವುದಾಗಿತ್ತು (ಹಕ್ಕಲಾಯುವುದು).

… ಆ ಕುರುಬರು, “ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ಕರ್ತನು ನಮಗೆ ತಿಳಿಯಪಡಿಸಿದ ಮತ್ತು ನಡೆದ ಈ ಸಂಗತಿಯನ್ನು ನೋಡಲು ಹೋಗೋಣ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. (ಲೂಕ 2:15 ULT)

ಬೇತ್ಲೆಹೇಮಿಗೆ ಹೋಗುವ ಉದ್ದೇಶವು ನಡೆದ ಸಂಗತಿಯನ್ನು ನೋಡುವುದು ಆಗಿತ್ತು. ಇಲ್ಲಿ ಉದ್ದೇಶವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲಾಗಿಲ್ಲ ಮತ್ತು ಅದನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವ ಸಾಧ್ಯತೆಯಿದೆ.

“… ನೀನು ಆ ಜೀವಕ್ಕೆ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ವಿಧೇಯನಾಗಿ ನಡೆದುಕೊ” ಎಂದು ಹೇಳಿದನು. (ಮತ್ತಾಯ 19:17 ULT)

ಆಜ್ಞೆಗಳನ್ನು ಕೈಗೊಳ್ಳುವ ಗುರಿಯು ಜೀವಕ್ಕೆ ಸೇರವುದು ಆಗಿತ್ತು.

ಅದನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಬೇಡ, ಅದರಿಂದ ನೀನು ಸಫಲನಾಗುವಿ. (ಯೆಹೋಶುವ 1:7 ULT)

ಮೋಶೆಯು ಇಸ್ರಾಯೇಲ್ಯರಿಗೆ ಕೊಟ್ಟ ಅಜ್ಞೆಗಳಿಂದ ತಿರುಗಿಕೊಳ್ಳಬಾರದು ಎಂಬುದರ ಉದ್ದೇಶವು ಅವರು ಸಫಲರಾಗುವುದು ಆಗಿತ್ತು.

ಆದರೆ ಆ ದ್ರಾಕ್ಷೇ ತೋಟಗಾರರು ಅವನ ಮಗನನ್ನು ಕಂಡು, ʼಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಮತ್ತು ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣʼ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದ್ದರಿಂದ ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು. (ಮತ್ತಾಯ 21:38-39 ULT)

ಉತ್ತರಾಧಿಕಾರಿಯನ್ನು ಕೊಲ್ಲುವುದು ದ್ರಾಕ್ಷೇ ತೋಟಗಾರರ ಉದ್ದೇಶವಾಗಿತ್ತು ಆದ್ದರಿಂದ ಅವರು ಅವನ ಸ್ವತ್ತನ್ನು ತೆಗೆದುಕೊಳ್ಳಬಹುದಾಗಿತ್ತು. ಅವರು ಎರಡೂ ಸಂಗತಿಗಳನ್ನು ಒಂದೇ ಯೋಜನೆಯ ರೀತಿಯಲ್ಲಿ ಹೇಳುತ್ತಾರೆ, ಅವುಗಳನ್ನು “ಮತ್ತು” ಎಂಬುದರೊಂದಿಗೆ ಸೇರಿಸಿದ್ದಾರೆ. “ಆದ್ದರಿಂದ” ಎಂಬ ಪದವು ಮೊದಲ ಸಂಗತಿಯನ್ನು ತಿಳಿಸುತ್ತದೆ, ಆದರೆ ಎರಡನೇ ಸಂಗತಿಯನ್ನು (ಗುರಿ ಅಥವಾ ಉದ್ದೇಶ) ತಿಳಿಸುವುದಿಲ್ಲ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ಗುರಿ ಅಥವಾ ಉದ್ದೇಶದ ಸಂಬಂಧಾರ್ಥಕಗಳನ್ನು ಮೇಲಿನ ಪಠ್ಯದಲ್ಲಿ ಬಳಸಿದಂತೆಯೇ ಬಳಸುವುದಾದರೆ, ಅವುಗಳನ್ನು ಹಾಗೆಯೇ ಬಳಸಿರಿ.

  1. ಗುರಿಯ ಹೇಳಿಕೆಯ ರಚನೆಯು ಅಸ್ಪಷ್ಟವಾಗಿದ್ದರೆ, ಅದನ್ನು ಹೆಚ್ಚು ಸ್ಪಷ್ಟವಾಗಿರುವ ಹಾಗೆ ಬದಲಾಯಿಸಿರಿ.
  2. ಹೇಳಿಕೆಗಳ ಕ್ರಮವು ಗುರಿಯ ಹೇಳಿಕೆಯನ್ನು ಅಸ್ಪಷ್ಟ ಪಡಿಸುವಂಥದ್ದಾಗಿದ್ದರೆ ಅಥವಾ ಓದುಗರಿಗೆ ಗೊಂದಲವನ್ನುಂಟುಮಾಡಿದರೆ, ಅದರ ಕ್ರಮವನ್ನು ಬದಲಾಯಿಸಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಗುರಿಯ ಹೇಳಿಕೆಯ ರಚನೆಯು ಅಸ್ಪಷ್ಟವಾಗಿದ್ದರೆ, ಅದನ್ನು ಹೆಚ್ಚು ಸ್ಪಷ್ಟವಾಗಿರುವ ಹಾಗೆ ಬದಲಾಯಿಸಿರಿ.

“ಅವಳಿಗಾಗಿ ಸಿವುಡುಗಳಿಂದ ಸ್ವಲ್ಪ ತೆನೆಯನ್ನು ಕಿತ್ತುಹಾಕಿರಿ, ಮತ್ತು ಅವುಗಳನ್ನು ಅವಳು ಕೊಡಿಸಿಕೊಳ್ಳುವುದಕ್ಕಾಗಿ ಬಿಟ್ಟುಬಿಡಿರಿ, ಮತ್ತು ಅವಳನ್ನು ಗದರಿಸಬೇಡಿರಿ.” (ರೂತಳು 2:16 ULT)

“ಸಿವುಡಗಳಿಂದ ಅವಳಿಗಾಗಿ ಸ್ವಲ್ಪ ತೆನೆಯನ್ನು ಕಿತ್ತುಹಾಕಿರಿ ಮತ್ತು ಅದನ್ನು ಬಿಟ್ಟುಬಿಡಿರಿ ಇದರಿಂದ ಅವಳು ಅದನ್ನು ಹಕ್ಕಲಾಯ್ದುಕೊಳ್ಳಬಹುದು, ಮತ್ತು ಅವಳನ್ನು ಗದರಿಸಬೇಡಿರಿ.”

… >… ಆ ಕುರುಬರು, “ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ಕರ್ತನು ನಮಗೆ ತಿಳಿಯಪಡಿಸಿದ ಮತ್ತು ನಡೆದ ಈ ಸಂಗತಿಯನ್ನು ನೋಡಲು ಹೋಗೋಣ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. (ಲೂಕ 2:15 ULT)

… ಆ ಕುರುಬರು, “ನಾವು ಈಗಲೇ ಬೇತ್ಲೆಹೇಮಿಗೆ ಹೋಗೋಣ, ಇದರಿಂದಾಗಿ ನಡೆದಿರುವ ಈ ಸಂಗತಿಯನ್ನು ನೋಡಬಹುದು ಅದನ್ನು ಕರ್ತನು ನಮಗೆ ತಿಳಿಯಪಡಿಸಿದ್ದಾನೆ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

(2) ಹೇಳಿಕೆಗಳ ಕ್ರಮವು ಗುರಿಯ ಹೇಳಿಕೆಯನ್ನು ಅಸ್ಪಷ್ಟ ಪಡಿಸುವಂಥದ್ದಾಗಿದ್ದರೆ ಅಥವಾ ಓದುಗರಿಗೆ ಗೊಂದಲವನ್ನುಂಟುಮಾಡಿದರೆ, ಅದರ ಕ್ರಮವನ್ನು ಬದಲಾಯಿಸಿರಿ.

“… ನೀನು ಆ ಜೀವಕ್ಕೆ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ವಿಧೇಯನಾಗಿ ನಡೆದುಕೊ” ಎಂದು ಹೇಳಿದನು. (ಮತ್ತಾಯ 19:17 ULT)

“… ಜೀವಕ್ಕೆ ಸೇರಲು ನೀನು ಬಯಸಿದರೆ ಆಜ್ಞೆಗಳನ್ನು ಕೈಕೊಂಡು ನಡೆದುಕೋ.” ಅಥವಾ: “… ಆಜ್ಞೆಗಳನ್ನು ಕೈಕೊಂಡು ನಡೆದುಕೋ ಇದರಿಂದ ನೀನು ಜೀವಕ್ಕೆ ಸೇರಬಹುದು.”

ಆದರೆ ಆ ದ್ರಾಕ್ಷೇ ತೋಟಗಾರರು ಅವನ ಮಗನನ್ನು ಕಂಡು, ʼಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಮತ್ತು ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣʼ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದ್ದರಿಂದ ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು. (ಮತ್ತಾಯ 21:38-39 ULT)

(1) ಮತ್ತು (2)

ಆದರೆ ಆ ದ್ರಾಕ್ಷೇ ತೋಟಗಾರರು ಅವನ ಮಗನನ್ನು ಕಂಡು, ʼಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಮತ್ತು ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣʼ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದ್ದರಿಂದ ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು. (ಮತ್ತಾಯ 21:38-39 ULT)

ಆದರೆ ಆ ದ್ರಾಕ್ಷೇ ತೋಟಗಾರರು ಅವನ ಮಗನನ್ನು ಕಂಡು, ʼಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಅದರಿಂದ ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳಬಹುದುʼ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದ್ದರಿಂದ ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು ಅದರಿಂದ ಅವರು ಇವನ ಸ್ವತ್ತನ್ನು ತೆಗೆದುಕೊಳ್ಳಬಹುದು.


ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ

Translation Manual :: Just-in-Time Learning Modules :: Grammar :: Connect - Reason-Result Relationship

ತಾರ್ಕಿಕ ಸಂಬಂಧಗಳು

ಕೆಲವು ಸಂಯೋಜಕಾವ್ಯಯ ಪದಗಳು ಎರಡು ನುಡಿಗಟ್ಟುಗಳ, ಉಪವಾಕ್ಯಗಳ, ವಾಕ್ಯಗಳ ಅಥವಾ ಪಠ್ಯದ ಭಾಗಗಳ ನಡುವೆ ತಾರ್ಕಿಕ ಸಂಬಂಧವನ್ನು ಏರ್ಪಡಿಸುತ್ತವೆ.

ಕಾರಣ–ಮತ್ತು-ಪರಿಣಾಮ ಸಂಬಂಧಾರ್ಥಕಗಳು

ವಿವರಣೆ

ಕಾರಣ ಮತ್ತು ಪರಿಣಾಮದ ಸಂಬಂಧಾರ್ಥಕವು ಒಂದು ತಾರ್ಕಿಕ ಸಂಬಂಧವಾಗಿದೆ, ಇದರಲ್ಲಿ ಒಂದು ಸಂಗತಿಯು ಕಾರಣ ಆಗಿದೆ ಅಥವಾ ಇನ್ನೊಂದು ಸಂಗತಿಗೆ ಹೇತುವಾಗಿದೆ. ಎರಡನೆಯ ಸಂಗತಿಯು, ಮೊದಲನೆಯ ಸಂಗತಿಯ ಪರಿಣಾಮ ಆಗಿದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಕಾರಣ ಮತ್ತು ಪರಿಣಾಮದ ಸಂಬಂಧಾರ್ಥಕವು ಮುಂದೆ ನೋಡುವಂಥದ್ದಾಗಿದೆ - “ನಾನು ಅದು (ಎಕ್ಸ್) ಆಗಬೇಕೆಂದು ಬಯಸಿದ್ದರಿಂದ ನಾನು ಇದನ್ನು (ವೈ) ಮಾಡಿದ್ದೇನೆ.” ಆದರೆ ಸಾಧಾರಣವಾಗಿ ಅದು ಹಿಂದೆ ನೋಡುವದಂಥದ್ದಾಗಿದೆ- “ಅದು (ಎಕ್ಸ್) ನಡೆದಿದೆ, ಮತ್ತು ನಾನು ಇದನ್ನು (ವೈ) ಮಾಡಿದ್ದೇನೆ.” ಅದಲ್ಲದೆ, ಪರಿಣಾಮಕ್ಕಿಂತ ಮೊದಲು ಅಥವಾ ನಂತರ ಕಾರಣವನ್ನು ಹೇಳುವ ಸಾಧ್ಯತೆಯಿದೆ. ಅನೇಕ ಭಾಷೆಗಳು ಕಾರಣಕ್ಕಾಗಿ ಮತ್ತು ಪರಿಣಾಮಕ್ಕಾಗಿ ಕ್ರಮವನ್ನು ಉಪಯೋಗಿಸಲು ಬಯಸುತ್ತವೆ, ಮತ್ತು ಅವುಗಳನ್ನು ತದ್ವಿರುದ್ಧ ಕ್ರಮದಲ್ಲಿದ್ದರೆ ಅದು ಓದುಗರಿಗೆ ಗೊಂದಲವನ್ನುಂಟು ಮಾಡುತ್ತದೆ. ಇಂಗ್ಲಿಷ್‌ ಭಾಷೆಯಲ್ಲಿ ಕಾರಣ-ಮತ್ತು-ಪರಿಣಾಮದ ಸಂಬಂಧಾರ್ಥಕವನ್ನು ಸೂಚಿಸಲು “ಏಕೆಂದರೆ,” “ಅದರಿಂದಾಗಿ,” “ಆದ್ದರಿಂದ,” ಮತ್ತು “ಆದಕಾರಣ” ಎಂಬ ಪದಗಳು ಸಾಮಾನ್ಯವಾಗಿ ಬಳಸುತ್ತಾರೆ. ಈ ಕೆಲವು ಪದಗಳನ್ನು ಗುರಿಯ ಸಂಬಂಧಾರ್ಥಕವನ್ನು ಸೂಚಿಸಲು ಸಹ ಬಳಸುತ್ತಾರೆ, ಆದ್ದರಿಂದ ಅನುವಾದಕರು ಗುರಿಯ ಸಂಬಂಧಾರ್ಥಕದ ಮತ್ತು ಕಾರಣ-ಮತ್ತು-ಪರಿಣಾಮದ ಸಂಬಂಧಾರ್ಥಕದ ನಡುವಿನ ವ್ಯತ್ಯಾಸದ ಬಗ್ಗೆ ಅರಿವುಳ್ಳರಾಗಿರಬೇಕು. ಅನುವಾದಕರು ಎರಡು ಸಂಗತಿಗಳು ಹೇಗೆ ಸಂಪರ್ಕ ಹೊಂದಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ತಮ್ಮ ಭಾಷೆಯಲ್ಲಿ ಸ್ಪಷ್ಟವಾಗಿ ಸಂವಹನ ಮಾಡುವುದು ಅವಶ್ಯಕವಾಗಿದೆ.

ಕಾರಣ ಮತ್ತು ಪರಿಣಾಮಗಳನ್ನು ಬೇರೆ ಬೇರೆ ವಚನಗಳಲ್ಲಿ ಹೇಳಿದ್ದರೆ, ಅವುಗಳನ್ನು ಬೇರೆ ಕ್ರಮದಲ್ಲಿ ಜೋಡಿಸುವ ಸಾಧ್ಯತೆಯಿದೆ. ನೀವು ವಚನಗಳ ಕ್ರಮವನ್ನು ಬದಲಾಯಿಸಿದರೆ, ಪುನಃಸ್ಸಂಯೋಜಿಸಿದ ವಚನಗಳ ಗುಚ್ಛದ ಆರಂಭದಲ್ಲಿ ಕೆಳಗಿನಂತೆ ವಚನಗಳ ಸಂಖ್ಯೆಗಳನ್ನು ಒಟ್ಟಿಗೆ ಹಾಕಿರಿ: 1-2. ಇದನ್ನು ವಚನದ ಸೇತುವೆ ಎಂದು ಕರೆಯಲಾಗುತ್ತದೆ.

ಒಬಿಎಸ್ ಮತ್ತು ಸತ್ಯವೇದದಲ್ಲಿನ ಉದಾಹರಣೆಗಳು

ಯೆಹೂದ್ಯರು ಆಶ್ಚರ್ಯಚಕಿತರಾದರು, ಏಕೆಂದರೆ ಸೌಲನು ವಿಶ್ವಾಸಿಗಳನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದನು, ಮತ್ತು ಈಗ ಅವನೇ ಯೇಸುವನ್ನು ನಂಬಿದ್ದಾನೆ! (ಕಥೆ 46 ಚೌಕ್ಕಟ್ಟು 6 ಒಬಿಎಸ್)

ಕಾರಣವು ಸೌಲನಲ್ಲಿ ಆಗಿರುವ ಬದಲಾವಣೆಯಾಗಿದೆ - ಅವನು ಯೇಸುವನ್ನು ನಂಬಿದ ಜನರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದನು, ಮತ್ತು ಈಗ ಅವನೇ ಯೇಸುವನ್ನು ನಂಬಿದ್ದಾನೆ. ಪರಿಣಾಮ ಏನೆಂದರೆ ಯೆಹೂದ್ಯರು ಆಶ್ಚರ್ಯಚಕಿತರಾದರು. “ಏಕೆಂದರೆ” ಎಂಬುದು ಎರಡು ವಿಚಾರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ ಮತ್ತು ಕಾರಣವು ಅದನ್ನು ಹಿಂಬಾಲಿಸುತ್ತದೆ ಎಂದು ಇದು ಸೂಚಿಸುತ್ತದೆ.

ಇಗೋ, ಸಮುದ್ರದಲ್ಲಿ ದೊಡ್ಡ ಬಿರುಗಾಳಿಯು ಎದ್ದಿತ್ತು ಅದರಿಂದಾಗಿ ದೋಣಿಯು ಅಲೆಗಳಿಂದ ಮುಚ್ಚಿಹೋಯಿತು. (ಮತ್ತಾಯ 8:24 ULT)

ದೊಡ್ಡ ಬಿರುಗಾಳಿಯು ಕಾರಣ ವಾಗಿದೆ, ಮತ್ತು ಪರಿಣಾಮ ಏನೆಂದರೆ ದೋಣಿಯು ಅಲೆಗಳಿಂದ ಮಚ್ಚಿಹೋಯಿತ್ತು. ಎರಡು ಸಂಗತಿಗಳನ್ನು “ಅದರಿಂದಾಗಿ” ಎಂಬ ಪದದಿಂದ ಸಂಪರ್ಕವನ್ನು ಕಲ್ಪಿಸುತ್ತದೆ. “ಅದರಿಂದಾಗಿ” ಎಂಬ ಪದವು ಸಾಮಾನ್ಯವಾಗಿ ಗುರಿಯ ಸಂಬಂಧಾರ್ಥಕವನ್ನು ಸೂಚಿಸುತ್ತದೆ ಎಂಬುದನ್ನು ಗಮನಿಸಿರಿ, ಆದರೆ ಇಲ್ಲಿ ಸಂಬಂಧಾರ್ಥಕವು ಕಾರಣ-ಮತ್ತು-ಪರಿಣಾಮಕ್ಕೆ ಸಂಬಂಧಪಟ್ಟಿದೆ. ಏಕೆಂದರೆ ಸಮುದ್ರವು ಯೋಚಿಸುವುದಕ್ಕೆ ಆಗುವುದಿಲ್ಲ ಆದ್ದರಿಂದ ಅದಕ್ಕೆ ಗುರಿಯಿಲ್ಲ.

ದೇವರು ತನ್ನ ಸೃಷ್ಟಿ ಕಾರ್ಯವನ್ನು ಮುಗಿಸಿದ ನಂತರ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು ಆದ್ದರಿಂದ ಆ ದಿನವನ್ನು ಆಶೀರ್ವದಿಸಿದನು ಮತ್ತು ಪರಿಶುದ್ಧಗೊಳಿಸಿದನು. (ಆದಿಕಾಂಡ 2:3 ULT)

ಪರಿಣಾಮ ದೇವರು ಏಳನೇ ದಿನವನ್ನು ಆಶೀರ್ವದಿಸಿದನು ಮತ್ತು ಪರಿಶುದ್ಧಗೊಳಿಸಿದನು. ಕಾರಣವು ಏಕೆಂದರೆ ಆತನು ತನ್ನ ಕೆಲಸದಿಂದ ಏಳನೇ ದಿನದಲ್ಲಿ ವಿಶ್ರಮಿಸಿಕೊಂಡನು.

“ಬಡವರಾದ ನೀವು ಧನ್ಯರು, ಏಕೆಂದರೆ ದೇವರ ರಾಜ್ಯವು ನಿಮ್ಮದು. (ಲೂಕ 6:20 ULT)

ಪರಿಣಾಮ ಏನೆಂದರೆ ಬಡವರು ಧನ್ಯರಾಗಿದ್ದಾರೆ. ಕಾರಣ ಏನೆಂದರೆ ದೇವರ ರಾಜ್ಯವು ಅವರದಾಗಿದೆ.

ಅವರಿಗೆ ಪ್ರತಿಯಾಗಿ ಯೆಹೋವನು ಬೆಳೆಯಿಸಿದ ಅವರ ಮಕ್ಕಳಿಗೆ ಯೆಹೋಶುವನು ಸುನ್ನತಿ ಮಾಡಿದನು, ಏಕೆಂದರೆ ದಾರಿಯಲ್ಲಿ ಅವರಿಗೆ ಸುನ್ನತಿಮಾಡಿರಲಿಲ್ಲ. (ಯೆಹೋಶುವ 5:7 ULT)

ಪರಿಣಾಮ ಏನೆಂದರೆ, ಯೆಹೋಶುವನು ಅರಣ್ಯದಲ್ಲಿ ಹುಟ್ಟಿದ ಹುಡುಗರಿಗೆ ಮತ್ತು ಪುರುಷರಿಗೆ ಸುನ್ನತಿ ಮಾಡಿದನು. ಕಾರಣ ಏನೆಂದರೆ ಅವರು ಪ್ರಯಾಣ ಮಾಡುವಾಗ ಅವರಿಗೆ ಸುನ್ನತಿ ಮಾಡಿರಲಿಲ್ಲ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ಕಾರಣ ಮತ್ತು ಪರಿಣಾಮದ ಸಂಬಂಧಾರ್ಥಕಗಳನ್ನು ಮೇಲಿನ ಪಠ್ಯದಲ್ಲಿ ಬಳಸಿರುವಂತೆಯೇ ಬಳಸುವುದಾದರೆ, ಅವುಗಳನ್ನು ಹಾಗೆಯೇ ಬಳಸಿರಿ.

  1. ಉಪವಾಕ್ಯಗಳ ಕ್ರಮವು ಓದುಗರಿಗೆ ಗೊಂದಲವನ್ನುಂಟುಮಾಡುತ್ತಿದ್ದರೆ, ಅದರ ಕ್ರಮವನ್ನು ಬದಲಾಯಿಸಿರಿ.
  2. ಉಪವಾಕ್ಯಗಳ ನಡುವಿನ ಸಂಬಂಧಾರ್ಥಕವು ಅಷ್ಟು ಸ್ಪಷ್ಟವಾಗಿಲ್ಲದಿದ್ದರೆ, ಹೆಚ್ಚು ಸ್ಪಷ್ಟವಾಗಿ ಸಂಪರ್ಕವನ್ನು ಕಲ್ಪಿಸುವ ಪದವನ್ನು ಬಳಸಿರಿ.
  3. ಉಪವಾಕ್ಯಗಳಲ್ಲಿ ಸಂಪರ್ಕವನ್ನು ಕಲ್ಪಿಸುವ ಪದವು ಇಲ್ಲದಿದ್ದರೆ ಮತ್ತು ಸಂಪರ್ಕವನ್ನು ಕಲ್ಪಿಸುವ ಪದವನ್ನು ಸೇರಿಸುವುದು ಹೆಚ್ಚು ಸ್ಪಷ್ಟವಾಗಿದ್ದರೆ, ಹಾಗೆ ಮಾಡಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

ದೇವರು ತನ್ನ ಸೃಷ್ಟಿ ಕಾರ್ಯವನ್ನು ಮುಗಿಸಿದ ನಂತರ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು ಆದ್ದರಿಂದ ಆ ದಿನವನ್ನು ಆಶೀರ್ವದಿಸಿದನು ಮತ್ತು ಪರಿಶುದ್ಧಗೊಳಿಸಿದನು. (ಆದಿಕಾಂಡ 2:3 ULT)

(1) ದೇವರು ತನ್ನ ಸೃಷ್ಟಿಕಾರ್ಯದಲ್ಲಿ ಮಾಡಿದ ಎಲ್ಲಾ ಕೆಲಸಗಳಿಂದ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಅದಕ್ಕಾಗಿಯೇ ಆತನು ಏಳನೆಯ ದಿನವನ್ನು ಆಶೀರ್ವದಿಸಿದನು ಮತ್ತು ಅದನ್ನು ಪರಿಶುದ್ಧಗೊಳಿಸಿದನು.

“ಬಡವರಾದ ನೀವು ಧನ್ಯರು, ಏಕೆಂದರೆ ದೇವರ ರಾಜ್ಯವು ನಿಮ್ಮದು. (ಲೂಕ 6:20 ULT)

(1) ದೇವರ ರಾಜ್ಯವು ಬಡವರಾದ ನಿಮಗೆ ಸೇರಿದ್ದಾಗಿದೆ. ಆದ್ದರಿಂದ, ಬಡವರು ಧನ್ಯರು.

(2) ಬಡವರು ಧನ್ಯರು, ಏಕೆಂದರೆ ದೇವರ ರಾಜ್ಯ ನಿಮ್ಮದ್ದಾಗಿದೆ.

(3) ಈ ಕಾರಣದಿಂದ ಬಡವರು ಧನ್ಯರಾಗಿದ್ದಾರೆ ಏಕೆಂದರೆ ದೇವರ ರಾಜ್ಯ ನಿಮ್ಮದು.

ಇಗೋ, ಸಮುದ್ರದಲ್ಲಿ ದೊಡ್ಡ ಬಿರುಗಾಳಿಯು ಎದ್ದಿತ್ತು ಅದರಿಂದಾಗಿ ದೋಣಿಯು ಅಲೆಗಳಿಂದ ಮುಚ್ಚಿಹೋಯಿತು. (ಮತ್ತಾಯ 8:24 ULT)

(1) ಇಗೋ, ದೋಣಿಯು ಅಲೆಗಳಿಂದ ಮುಚ್ಚಿಹೋಯಿತು ಏಕೆಂದರೆ ಸಮುದ್ರದ ಮೇಲೆ ದೊಡ್ಡ ಬಿರುಗಾಳಿ ಎದ್ದಿತ್ತು.

(2) ಇಗೋ, ಸಮುದ್ರದ ಮೇಲೆ ದೊಡ್ಡ ಬಿರುಗಾಳಿ ಎದ್ದಿತ್ತು, ಇದರ ಪರಿಣಾಮವಾಗಿ ದೋಣಿಯು ಅಲೆಗಳಿಂದ ಮುಚ್ಚಿಹೋಯಿತು.

(3) ಇಗೋ, ಸಮುದ್ರದ ಮೇಲೆ ದೊಡ್ಡ ಬಿರುಗಾಳಿ ಎದ್ದಿತ್ತು, ಆದ್ದರಿಂದ ದೋಣಿಯು ಅಲೆಗಳಿಂದ ಮುಚ್ಚಿಹೋಯಿತು.

ಎಲ್ಲ ಗದ್ದಲದ ನಿಮಿತ್ತವಾಗಿ ಸಹಸ್ರಾಧಿಪತಿಗೆ ಏನನ್ನೂ ಹೇಳಲಾಗದ ಕಾರಣ, ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು. (ಕಾಯಿದೆಗಳು 21:34 ULT)

(1) ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಸಹಸ್ರಾಧಿಪತಿಯು ಅಪ್ಪಣೆಕೊಟ್ಟನು, ಏಕೆಂದರೆ ಎಲ್ಲ ಗದ್ದಲದ ನಿಮಿತ್ತವಾಗಿ ಅವನಿಗೆ ಏನನ್ನೂ ಹೇಳಲಾಗಲಿಲ್ಲ.

(2) ಸಹಸ್ರಾಧಿಪತಿಗೆ ಎಲ್ಲ ಗದ್ದಲದ ನಿಮಿತ್ತವಾಗಿ ಏನನ್ನೂ ಹೇಳಲಾಗದ ಕಾರಣ, ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು.

(3) ಸಹಸ್ರಾಧಿಪತಿಗೆ ಎಲ್ಲ ಗದ್ದಲದ ನಿಮಿತ್ತವಾಗಿ ಏನನ್ನೂ ಹೇಳಲಾಗಲಿಲ್ಲ, ಆದ್ದರಿಂದ ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು.


ಸಂಪರ್ಕಿಸು – ಹಿನ್ನೆಲೆ ಮಾಹಿತಿ

Translation Manual :: Just-in-Time Learning Modules :: Grammar :: Connect - Background Information

ಸಮಯದ ಸಂಬಂಧ

ಕೆಲವು ಜೋಡಣೆಗಳು ಎರಡು ಪದಗುಚ್ಛಗಳನ್ನು ಮದ್ಯದಲ್ಲಿ ಸಮಯ ಸಂಬಂಧಗಳನ್ನು ಸ್ಥಾಪಿಸುತ್ತವೆ, ಷರತ್ತುಗಳು, ವಾಕ್ಯಗಳು ಅಥವಾ ಪಠ್ಯದ ಭಾಗಗಳು.

ಷರತ್ತುಗಳ ಹಿನ್ನಲೆ

ವಿವರಣೆ

ನಡೆಯುತ್ತಿರುವ ಯಾವುದನ್ನಾದರೂ ಕುರಿತು ವಿವರಿಸುವದೆ ಹಿನ್ನೆಲೆ ಷರತ್ತು. ನಂತರ, ಅದೇ ವಾಕ್ಯದಲ್ಲಿ, ಮತ್ತೊಂದು ಷರತ್ತು ಆ ಸಮಯದಲ್ಲಿ ಸಂಭವಿಸಲು ಪ್ರಾರಂಭವಾಗುವ ಘಟನೆಯನ್ನು ಸೂಚಿಸುತ್ತದೆ. ಈ ಘಟನೆಗಳು ಏಕಕಾಲಿಕ ಘಟನೆಗಳಾಗಿವೆ, ಆದರೆ ಅವುಗಳು ಹಿನ್ನೆಲೆ ಘಟನೆ ಮತ್ತು ಮುಖ್ಯ ಘಟನೆಯ ಹೆಚ್ಚಿನ ಸಂಬಂಧವನ್ನು ಹೊಂದಿವೆ ಏಕೆಂದರೆ ಈಗಾಗಲೇ ನಡೆಯುತ್ತಿರುವ ಘಟನೆಗಳು ಇತರ ಘಟನೆಯ ಹಿನ್ನೆಲೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಕೇಂದ್ರೀಕೃತವಾಗಿದೆ. ಹಿನ್ನೆಲೆ ಘಟನೆಗಳು ಮುಖ್ಯ ಘಟನೆ ಅಥವಾ ಘಟನೆಗಳಿಗೆ ಸಮಯದ ಚೌಕಟ್ಟು ಅಥವಾ ಇತರ ಸಂದರ್ಭವನ್ನು ಒದಗಿಸುತ್ತದೆ.

ಕಾರಣ ಇದೊಂದು ಅನುವಾದ ಸಮಸ್ಯೆ

ಭಾಷೆಗಳು ಸಮಯದ ಬದಲಾವಣೆಯನ್ನು ವಿಭಿನ್ನ ರೀತಿಯಲ್ಲಿ ಸೂಚಿಸುತ್ತವೆ. ನಿಮ್ಮ ಸ್ವಂತ ಭಾಷೆಯಲ್ಲಿ ಸ್ಪಷ್ಟವಾಗಿ ಸಂವಹನ ನಡೆಸಲು ಈ ಬದಲಾವಣೆಗಳನ್ನು ಮೂಲ ಭಾಷೆಗಳಲ್ಲಿ ಹೇಗೆ ಸೂಚಿಸಲಾಗುತ್ತದೆ ಎಂಬುದನ್ನು ನೀವು (ಅನುವಾದಕ) ಅರ್ಥಮಾಡಿಕೊಳ್ಳಬೇಕು. ಹಿನ್ನೆಲೆ ಷರತ್ತುಗಳು ಹೆಚ್ಚಾಗಿ ಕೇಂದ್ರೀಕೃತವಾಗಿರುವ ಘಟನೆಗೆ ಬಹಳ ಹಿಂದೆಯೇ ಪ್ರಾರಂಭವಾದ ಸಮಯವನ್ನು ಸೂಚಿಸುತ್ತವೆ. ಮೂಲ ಭಾಷೆ ಮತ್ತು ಉದ್ದೇಶಿತ ಭಾಷೆ ಎರಡೂ ಹಿನ್ನೆಲೆ ಘಟನೆಗಳನ್ನು ಹೇಗೆ ಸಂವಹನ ಮಾಡುತ್ತವೆ ಎಂಬುದನ್ನು ಅನುವಾದಕರು ಅರ್ಥಮಾಡಿಕೊಳ್ಳಬೇಕು. ಹಿನ್ನೆಲೆ ಘಟನೆಗಳನ್ನು ಸೂಚಿಸುವ ಕೆಲವು ಇಂಗ್ಲಿಷ್ ಪದಗಳು “ಈಗ,” “ಯಾವಾಗ,” “ಇರುವಾಗ,” ಮತ್ತು “ಸಮಯದಲ್ಲಿ”. ಆ ಪದಗಳು ಏಕಕಾಲಿಕ ಘಟನೆಗಳನ್ನು ಸಹ ಸೂಚಿಸಬಹುದು. ವ್ಯತ್ಯಾಸವನ್ನು ಹೇಳಲು, ಎಲ್ಲಾ ಘಟನೆಗಳು ಪ್ರಾಮುಖ್ಯತೆಗೆ ಸಮಾನವೆಂದು ತೋರುತ್ತದೆಯೇ ಮತ್ತು ಅದೇ ಸಮಯದಲ್ಲಿ ಪ್ರಾರಂಭವಾಗಿದೆಯೇ ಎಂದು ನಿಮ್ಮನ್ನು ಕೇಳಿಕೊಳ್ಳಿ. ಹಾಗಿದ್ದಲ್ಲಿ, ಅವು ಬಹುಶಃ ಏಕಕಾಲಿಕ ಘಟನೆಗಳು. ಆದರೆ ಘಟನೆ (ಗಳು) ನಡೆಯುತ್ತಿದ್ದರೆ ಮತ್ತು ಮತ್ತೊಂದು ಘಟನೆ (ಗಳು) ಇದೀಗ ಪ್ರಾರಂಭವಾಗಿದ್ದರೆ, ನಡೆಯುತ್ತಿರುವ ಘಟನೆ (ಗಳು) ಬಹುಶಃ ಇತರ ಘಟನೆ (ಗಳ)ಗೆ ಹಿನ್ನೆಲೆಯಾಗಿರಬಹುದು. ಹಿನ್ನೆಲೆ ಘಟನೆಗಳನ್ನು ಸೂಚಿಸುವ ಕೆಲವು ಸಾಮಾನ್ಯ ನುಡಿಗಟ್ಟುಗಳು “ಆ ದಿನಗಳಲ್ಲಿ” ಮತ್ತು “ಆ ಸಮಯದಲ್ಲಿ”.

ಒಬಿಎಸ್ ಮತ್ತು ಸತ್ಯವೇದದಿಂದ ಉದಾಹರಣೆಗಳು

ಯಾವಾಗಸೊಲೊಮೋನನು ವೃದ್ಧನಾದನು, ಅವನು ಸಹ ಅವರ ದೇವರುಗಳನ್ನೂ ಆರಾಧಿಸಿದನು. (ಒಬಿಎಸ್ ಕಥೆ18 ಚೌಕಟ್ಟು 3)

ಸೊಲೊಮೋನನು ವೃದ್ಧನಾದ ಸಮಯದಲ್ಲಿ ಅನ್ಯ ದೇವರುಗಳನ್ನು ಪೂಜಿಸಲು ಪ್ರಾರಂಭಿಸಿದನು. ವಯಸ್ಸಾಗಿರುವುದು ಹಿನ್ನೆಲೆ ಘಟನೆ. ಅನ್ಯ ದೇವರುಗಳನ್ನು ಪೂಜಿಸುವುದು ಮುಖ್ಯ ಘಟನೆ.

ಮತ್ತು ಅವನ ಹೆತ್ತವರು ಪ್ರತಿವರ್ಷ ಯೆರೂಸಲೇಮಿಗೆ ಪಸ್ಕ ಹಬ್ಬಕ್ಕೆ ಹೋಗುತ್ತಿದ್ದರು. ಮತ್ತು ಅವನಿಗೆ 12 ವರ್ಷ ವಯಸ್ಸಾಗಿದ್ದಾಗ, ಅವರು ಹಬ್ಬದ ಪದ್ಧತಿಯ ಪ್ರಕಾರ ಮೇಲಕ್ಕೆ ಹೋದರು. (ಲೂಕ 2:41-42 ಯು ಎಲ್ ಟಿ)

ಮೊದಲಣೆಯ ಘಟನೆ___ಯೆರೂಸಲೇಮಿಗೆ ಹೋಗುವುದು___ನಡೆಯುತ್ತಿರುವ ಮತ್ತು ಬಹಳ ಹಿಂದೆಯೇ ಪ್ರಾರಂಭವಾಗಿರುವ. “ಪ್ರತಿವರ್ಷ” ಎಂಬ ಪದಗಳಿಂದಾಗಿ ನಮಗೆ ಇದು ತಿಳಿದಿದೆ. ಯೆರೂಸಲೇಮಿಗೆ ಹೋಗುವುದು ಹಿನ್ನೆಲೆ ಘಟನೆ. ನಂತರ “ಅವನು ಹನ್ನೆರಡು ವರ್ಷದವನಾಗಿದ್ದಾಗ” ಪ್ರಾರಂಭವಾದ ಒಂದು ಘಟನೆ ಪ್ರಾರಂಭವಾಗುತ್ತದೆ. ಆದ್ದರಿಂದ ಮುಖ್ಯ ಘಟನೆಯೆಂದರೆ ಯೇಸು ಮತ್ತು ಅವನ ಕುಟುಂಬವು ಪಸ್ಕ ಹಬ್ಬಕ್ಕಾಗಿ ಯೆರೂಸಲೇಮಿಗೆಪ್ರಯಾಣಿಸಿದ ನಿರ್ದಿಷ್ಟ ಸಮಯ ಅವನಿಗೆ ಹನ್ನೆರಡು ವರ್ಷದವನಿದ್ದಾಗ.

ಮತ್ತು ಅದು ಬಂದಿತು, ಹಾಗೆಯೇ ಅವರು ಅಲ್ಲಿದ್ದಾಗ, ಆಕೆಗೆ ಜನ್ಮ ನೀಡುವ ದಿನಗಳು ತುಂಬಿದವು. (ಲೂಕ 2:6 ಯು ಎಲ್ ಟಿ)

ಬೇತ್ಲೆಹೇಮಿನಲ್ಲಿರುವುದು ಹಿನ್ನೆಲೆ ಘಟನೆ. ಮಗುವಿನ ಜನನವು ಮುಖ್ಯ ಘಟನೆಯಾಗಿದೆ.

ಮತ್ತು ತಿಬೇರಿಯಸ್ ಸೀಸರನ ಆಳ್ವಿಕೆಯ ಹದಿನೈದನೇ ವರ್ಷದಲ್ಲಿ —ಹಾಗೆಯೇ ಪೊಂತ್ಯ ಪಿಲಾತನು ಯೆಹೂದದ ಅಧಿಪತಿಯು ಆಗಿದ್ದನು, ಮತ್ತು ಹೆರೋದನು ಗಲಿಲಾಯದ ಉಪರಾಜನೂ ಆಗಿದ್ದನು, ಮತ್ತು ಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಪ್ರದೇಶದ ಉಪರಾಜನಾಗಿದ್ದನು, ಮತ್ತು ಲುಸನ್ಯನು ಅಬಿಲೇನೆಗೆ ಉಪರಾಜರೂ ಆಗಿರುವಲ್ಲಿ ಅನ್ನನೂ ಕಾಯಫನು ಮಹಾಯಾಜಕರು—ಆಗಿರುವ ಸಮಯದಲ್ಲಿ ದೇವರ ವಾಕ್ಯವು ಜಕರ್ಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ಬಂದಿತು. (ಲೂಕ 3:1-2 ಯು ಎಲ್ ಟಿ)

ಈ ಉದಾಹರಣೆಯು ಐದು ಹಿನ್ನೆಲೆ ಷರತ್ತುಗಳೊಂದಿಗೆ ಪ್ರಾರಂಭವಾಗುತ್ತದೆ (ಅಲ್ಪವಿರಾಮದಿಂದ ಗುರುತಿಸಲಾಗಿದೆ), ಇದನ್ನು “ಹಾಗೆಯೇ” ಮತ್ತು “ಸಮಯದಲ್ಲಿ” ಪದಗಳಿಂದ ಹಿನ್ನೆಲೆ ಎಂದು ಸಂಕೇತಿಸುತ್ತದೆ. ನಂತರ ಮುಖ್ಯ ಘಟನೆ ನಡೆಯುತ್ತದೆ: “ದೇವರ ವಾಕ್ಯವು ಯೋಹಾನನಿಗೆ ಬಂದಿತು.”

ಅನುವಾದ ತಂತ್ರಗಳು

ಹಿನ್ನೆಲೆ ಷರತ್ತುಗಳನ್ನು ಗುರುತಿಸಿದ ವಿಧಾನವು ನಿಮ್ಮ ಭಾಷೆಯಲ್ಲಿಯೂ ಸ್ಪಷ್ಟವಾಗಿದ್ದರೆ, ಹಿನ್ನೆಲೆ ಷರತ್ತುಗಳನ್ನು ಅವು ಇದ್ದಂತೆ ಭಾಷಾಂತರಿಸಿ.

(1) ಸಂಪರ್ಕಿಸುವ ಪದವು ಹಿನ್ನೆಲೆ ಷರತ್ತು ಎಂದು ಸ್ಪಷ್ಟಪಡಿಸದಿದ್ದರೆ, ಇದನ್ನು ಹೆಚ್ಚು ಸ್ಪಷ್ಟವಾಗಿ ಜೋಡಣೆ ಮಾಡುವ ಸಂಪರ್ಕಿಸುವ ಪದವನ್ನು ಬಳಸಿ.

(2) ಸಂಪರ್ಕಿಸುವ ಪದಗಳನ್ನು ಬಳಸುವುದಕ್ಕಿಂತ (ವಿಭಿನ್ನ ಕ್ರಿಯಾಪದ ರೂಪಗಳನ್ನು ಬಳಸುವುದರ ಮೂಲಕ) ನಿಮ್ಮ ಭಾಷೆ ಹಿನ್ನೆಲೆ ಷರತ್ತುಗಳನ್ನು ಬೇರೆ ರೀತಿಯಲ್ಲಿ ಗುರುತಿಸಿದರೆ, ಆ ರೀತಿಯಲ್ಲಿ ಬಳಸಿ.

ಅನುವಾದ ತಂತ್ರಗಳ ಉದಾಹರಣೆಗಳನ್ನು ಅನ್ವಯಿಸಲಾಗಿದೆ

ಮತ್ತು ತಿಬೇರಿಯಸ್ ಸೀಸರನ ಆಳ್ವಿಕೆಯ ಹದಿನೈದನೇ ವರ್ಷದಲ್ಲಿ —ಹಾಗೆಯೇ ಪೊಂತ್ಯ ಪಿಲಾತನು ಯೆಹೂದದ ಅಧಿಪತಿಯು ಆಗಿದ್ದನು, ಮತ್ತು ಹೆರೋದನು ಗಲಿಲಾಯದ ಉಪರಾಜನೂ ಆಗಿದ್ದನು, ಮತ್ತು ಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಪ್ರದೇಶದ ಉಪರಾಜನಾಗಿದ್ದನು, ಮತ್ತು ಲುಸನ್ಯನು ಅಬಿಲೇನೆಗೆ ಉಪರಾಜರೂ ಆಗಿರುವಲ್ಲಿ ಅನ್ನನೂ ಕಾಯಫನು ಮಹಾಯಾಜಕರು—ಆಗಿರುವ ಸಮಯದಲ್ಲಿ ದೇವರ ವಾಕ್ಯವು ಜಕರ್ಯನ ಮಗನಾದ ಯೋಹಾನನಿಗೆ, ಅಡವಿಯಲ್ಲಿ ಬಂದಿತು. (ಲೂಕ 3:1-2 ಯು ಎಲ್ ಟಿ)

(1) ಸಂಪರ್ಕಿಸುವ ಪದವು ಹಿನ್ನೆಲೆ ಷರತ್ತು ಎಂದು ಸ್ಪಷ್ಟಪಡಿಸದಿದ್ದರೆ, ಇದನ್ನು ಹೆಚ್ಚು ಸ್ಪಷ್ಟವಾಗಿ ಸಂವಹನ ಮಾಡುವ ಸಂಪರ್ಕಿಸುವ ಪದವನ್ನು ಬಳಸಿ.

ಈ ಕಾರ್ಯವು ಸಂಭವಿಸಿದ ಕಾಲ ಯಾವುದೆಂದರೆ ಪೊಂತ್ಯ ಪಿಲಾತನು ಯೆಹೂದದ ಅಧಿಪತಿಯು ಆಗಿದ್ದನು, ಮತ್ತು ಆ ಕಾಲದಲ್ಲಿ ಹೆರೋದನು ಗಲಿಲಾಯದ ಉಪರಾಜನೂ ಆಗಿದ್ದನು, ಮತ್ತು ಆ ಕಾಲದಲ್ಲಿಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಪ್ರದೇಶದ ಉಪರಾಜನಾಗಿದ್ದನು, ಮತ್ತು ಆ ಕಾಲದಲ್ಲಿ ಲುಸನ್ಯನು ಅಬಿಲೇನೆಗೆ ಉಪರಾಜರೂ ಆಗಿರುವಲ್ಲಿ, ಮತ್ತು ಆ ಕಾಲದಲ್ಲಿ ಅನ್ನನೂ ಕಾಯಫನು ಮಹಾಯಾಜಕರು ಆಗಿರುವಾಗ ಆ ಸಮಯದಲ್ಲಿ ದೇವರ ವಾಕ್ಯವು ಜಕರ್ಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ಬಂದಿತು.

(2) ವಿಭಿನ್ನ ಕ್ರಿಯಾಪದ ರೂಪಗಳೊಂದಿಗೆ ಸಂಪರ್ಕಿಸುವ ಪದಗಳನ್ನು ಬಳಸುವುದಕ್ಕಿಂತ ನಿಮ್ಮ ಭಾಷೆ ಹಿನ್ನೆಲೆ ಷರತ್ತುಗಳನ್ನು ಬೇರೆ ರೀತಿಯಲ್ಲಿ ಗುರುತಿಸಿದರೆ, ಆ ರೀತಿಯಲ್ಲಿ ಬಳಸಿ.

ಪೊಂತ್ಯ ಪಿಲಾತನು ಯೆಹೂದದ ಅಧಿಪತಿಯು ಆಗಿದ್ದನು ಮತ್ತು ಹೆರೋದನು ಗಲಿಲಾಯದ ಉಪರಾಜನೂ ಆಗಿದ್ದನು* ಮತ್ತು ಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಪ್ರದೇಶದ ಉಪರಾಜನಾಗಿದ್ದನು ಲುಸನ್ಯನು ಅಬಿಲೇನೆಗೆ ಉಪರಾಜರೂ ಆಗಿರುವಲ್ಲಿ **ಮತ್ತು ಅನ್ನನೂ ಕಾಯಫನು ಮಹಾಯಾಜಕರು ಆಗಿರುವಾಗ ದೇವರ ವಾಕ್ಯವು ಜಕರ್ಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ಬಂದಿತು.

ಪದಗಳನ್ನು ಸಂಪರ್ಕಿಸುವ ಸಮಯ ಸಂಬಂಧದಲ್ಲಿನ ವ್ಯತ್ಯಾಸಗಳ ಉದಾಹರಣೆ:

                      |                                              |

| ------------------------ | -------------------------------------------- | ಹಿನ್ನೆಲೆ ಕ್ರಮಪಡಿದು | ಆ ದಿನಗಳಲ್ಲಿ ಯೆಹೋವನ ಮಾತು ವಿರಳವಾಗಿತ್ತು; | | ಹಿನ್ನೆಲೆ ಪುನರಾವರ್ತನೆ | ಅಲ್ಲಿ ಪುನಃಸ೦ಭವಿಸುವ ಪ್ರವಾದನ ದರ್ಶನ ಇರಲಿಲ್ಲ. | | ಮುಖ್ಯ ಘಟನೆಯ ಪರಿಚಯ | ಆ ಸಮಯದಲ್ಲಿ, ಯಾವಾಗ ಏಲಿ | | ಹಿನ್ನೆಲೆ | ಯಾವಾತನ ದೃಷ್ಟಿ ಮಂದವಾಗಲು ಪ್ರಾರಂಭಿಸಿತ್ತು, ಇದರಿಂದ ಅವನು ಚೆನ್ನಾಗಿ ಕಾಣಿಸಲಿಲ್ಲ,| | ಏಕಕಾಲಿಕ ಹಿನ್ನೆಲೆ | ತನ್ನ ಸ್ವಂತ ಹಾಸಿಗೆಯಲ್ಲಿ ಮಲಗಿದ್ದನು. | ಏಕಕಾಲಿಕ ಹಿನ್ನೆಲೆ | ದೇವರ ದೀಪ ಇನ್ನೂ ಹೋಗಲಿಲ್ಲ ಹೊರಗೆ, | | ಏಕಕಾಲಿಕ ಹಿನ್ನೆಲೆ | ಮತ್ತು ಸಮುವೇಲನು ಯೆಹೋವನ ದೇವಾಲಯದಲ್ಲಿ ನಿದ್ರಿಸಲು ಮಲಗಿದ್ದನು, | | ಏಕಕಾಲಿಕ ಹಿನ್ನೆಲೆ | ಇಲ್ಲಿ ದೇವರ ಮಂಜೂಷದ ಇತ್ತೋ ಅಲ್ಲಿಯೇ, | | ಮುಖ್ಯ ಘಟನೆ | ** ಯೆಹೋವನು ಸಮುವೇಲನನ್ನು ಕರೆದನು **, | | ಅನುಕ್ರಮ ಘಟನೆ | “ನಾನು ಇಲ್ಲಿದ್ದೇನೆ” ಎಂದು ಯಾರು ಹೇಳಿದರು. (1 ಸಮು 3: 1-4 ಯು ಎಲ್ ಟಿ) |

ಮೇಲಿನ ಉದಾಹರಣೆಯಲ್ಲಿ, ಮೊದಲ ಎರಡು ಸಾಲುಗಳು ದೀರ್ಘಕಾಲದವರೆಗೆ ನಡೆಯುತ್ತಿರುವ ಸ್ಥಿತಿಯ ಬಗ್ಗೆ ಮಾತನಾಡುತ್ತವೆ. ಇದು ಸಾಮಾನ್ಯ, ದೀರ್ಘಕಾಲೀಕ ಹಿನ್ನೆಲೆ. “ಆ ದಿನಗಳಲ್ಲಿ” ಎಂಬ ಪದಗುಚ್ಛದಿಂದ ನಾವು ಇದನ್ನು ತಿಳಿದಿದ್ದೇವೆ. ಮುಖ್ಯ ಘಟನೆಯ ಪರಿಚಯದ ನಂತರ (“ಆ ಸಮಯದಲ್ಲಿ,”), ಏಕಕಾಲಿಕ ಹಿನ್ನೆಲೆಯ ಹಲವಾರು ಸಾಲುಗಳಿವೆ. ಮೊದಲನೆಯದನ್ನು “ಯಾವಾಗ,” ಪರಿಚಯಿಸಲಾಗುತ್ತದೆ ಮತ್ತು ನಂತರ ಇನ್ನೂ ಮೂರು ಅನುಸರಿಸುತ್ತದೆ, ಕೊನೆಯದಾಗಿ “ಮತ್ತು” ಮೂಲಕ ಸಂಪರ್ಕಿಸಲಾಗಿದೆ. “ಎಲ್ಲಿ” ಪರಿಚಯಿಸಿದ ಹಿನ್ನೆಲೆ ಷರತ್ತು ಅದರ ಹಿಂದಿನ ಹಿನ್ನೆಲೆ ಷರತ್ತಿನ ಬಗ್ಗೆ ಸ್ವಲ್ಪ ಹೆಚ್ಚು ವಿವರಿಸುತ್ತದೆ. ನಂತರ ಮುಖ್ಯ ಘಟನೆ ನಡೆಯುತ್ತದೆ, ನಂತರ ಹೆಚ್ಚಿನ ಘಟನೆಗಳು ನಡೆಯುತ್ತವೆ. ಭಾಷಾಂತರಕಾರರು ತಮ್ಮ ಭಾಷೆಯಲ್ಲಿ ಈ ಸಂಬಂಧಗಳನ್ನು ತೋರಿಸಲು ಉತ್ತಮ ಮಾರ್ಗದ ಬಗ್ಗೆ ಯೋಚಿಸುವ ಅಗತ್ಯವಿದೆ.


NO TITLE FOUND!

Translation Manual :: Just-in-Time Learning Modules :: Grammar :: Connect - Simultaneous Time Relationship

ಸಮಯ ಸಂಬಂಧಗಳು

ಕೆಲವು ಸಂಪರ್ಕಿಸುವ ಪದಗಳು ಎರಡು ನುಡಿಗಟ್ಟುಗಳು, ಖಂಡಗಳು, ವಾಕ್ಯಗಳು ಅಥವಾ ಪಠ್ಯದ ತುಂಡುಗಳ ನಡುವೆ ಸಮಯ ಸಂಬಂಧಗಳನ್ನು ಸ್ಥಾಪಿಸುತ್ತವೆ.

ಅನುಕ್ರಮ ಖಂಡ

ವಿವರಣೆ

ಒಂದು ಘಟನೆ ಸಂಭವಿಸಿದ ನಂತರ ಮತ್ತೊಂದು ಘಟನೆ ಸಂಭವಿಸುತ್ತದೆ; ಅನುಕ್ರಮ ಖಂಡ ಈ ಎರಡೂ ಘಟನೆಗಳನ್ನು ಸಂಪರ್ಕಿಸುವ ಸಮಯ ಸಂಬಂಧವಾಗಿದೆ.

ಕಾರಣ ಇದು ಭಾಷಾಂತರ ಸಂಚಿಕೆ

ಭಾಷೆಗಳು ಘಟನೆಗಳ ಅನುಕ್ರಮಗಳನ್ನು ವಿಭಿನ್ನ ರೀತಿಯಲ್ಲಿ ಸೂಚಿಸುತ್ತವೆ; ಕೆಲವು ಆದೇಶ ಬಳಸುತ್ತವೆ, ಕೆಲವು ಸಂಪರ್ಕಿಸುವ ಪದಗಳನ್ನು ಬಳಸುತ್ತವೆ, ಕೆಲವು ಸಾಪೇಕ್ಷ ಕಾಲವನ್ನು ಸಹ ಬಳಸುತ್ತವೆ (ಸಾಪೇಕ್ಷ ಕಾಲ ಸನ್ನಿವೇಶದಲ್ಲಿ ಪರಿಗಣಿಸಲಾಗುತ್ತಿರುವ ಕ್ಷಣಕ್ಕೆ ಸಂಬಂಧಿಸಿದ ಸಮಯವನ್ನು ಉಲ್ಲೇಖಿಸುತ್ತದೆ.) ಅನುಕ್ರಮವನ್ನು ಸೂಚಿಸಬಹುದಾದ ಸಂಪರ್ಕಿಸುವ ಪದಗಳು ಯಾವುದೆಂದರೆ “ಅನಂತರ,” “ನಂತರ,” “ತದನಂತರ,” “ಮೊದಲು,” ಮತ್ತು “ಯಾವಾಗ.” ಘಟನೆಗಳ ಕ್ರಮವನ್ನು ತಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ರೀತಿಯಲ್ಲಿ ಸಂವಹನ ಮಾಡುತ್ತಿದ್ದಾರೆ ಎಂದು ಅನುವಾದಕರು ಖಚಿತಪಡಿಸಿಕೊಳ್ಳಬೇಕು. ಇದಕ್ಕೆ ಮೂಲ ಭಾಷೆಗಳಿಗಿಂತ ಭಿನ್ನವಾಗಿ ಆದೇಶಿಸುವ ಖಂಡಗಳ ಅಗತ್ಯ ಬೀಳಬಹುದು.

OBS ಮತ್ತು ಸತ್ಯವೇದದಿಂದ ಉದಾಹರಣೆಗಳು

ಯಾವಾಗ ಯೋಸೇಫನು ತನ್ನ ಸಹೋದರರ ಬಳಿಗೆ ಬಂದನೋ, ಅವರು ಅವನನ್ನು ಅಪಹರಿಸಿ ಕೆಲವು ಗುಲಾಮ ವ್ಯಾಪಾರಿಗಳಿಗೆ ಮಾರಾಟ ಮಾಡಿದರು. (OBS Story 8 Frame 2)

ಮೊದಲು ಯೋಸೇಫನು ತನ್ನ ಸಹೋದರರ ಬಳಿಗೆ ಬಂದನು, ಮತ್ತು ನಂತರ ಅವರು ಅವನನ್ನು ಅಪಹರಿಸಿ ಮಾರಾಟ ಮಾಡಿದರು. “ಯಾವಾಗ” ಎಂಬ ಸಂಪರ್ಕ ಪದದಿಂದಾಗಿ ಇದು ನಮಗೆ ತಿಳಿದಿದೆ. ಈ ಅನುಕ್ರಮವನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ಸಂವಹನ ಮಾಡಲು ಅನುವಾದಕನು ಉತ್ತಮ ಮಾರ್ಗವನ್ನು ನಿರ್ಧರಿಸಬೇಕಾಗಿದೆ.

ಅದು ನನ್ನ ಬಾಯಿಯಲ್ಲಿ ಜೇನುತುಪ್ಪದಷ್ಟು ಸಿಹಿಯಾಗಿತ್ತು, ಆದರೆ ನಂತರ ನಾನು ಅದನ್ನು ತಿಂದೆ, ನನ್ನ ಹೊಟ್ಟೆ ಕಹಿಯಾಯಿತು. (ಪ್ರಕಟನೆ 10:10b ULT)

ಮೊದಲನೆಯ ಕಲಮಿನ ಘಟನೆಯು ಮೊದಲು ಸಂಭವಿಸುತ್ತದೆ, ಮತ್ತು ಕೊನೆಯ ಕಲಮಿನ ಘಟನೆಯು ನಂತರ ಸಂಭವಿಸುತ್ತದೆ."*ನಂತರ ಎಂಬ ಸಂಪರ್ಕ ಪದದಿಂದಾಗಿ ನಮಗೆ ಇದು ತಿಳಿದಿದೆ. ಈ ಅನುಕ್ರಮವನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ಸಂವಹನ ಮಾಡಲು ಅನುವಾದಕನು ಉತ್ತಮ ಮಾರ್ಗವನ್ನು ನಿರ್ಧರಿಸಬೇಕಾಗಿದೆ.

ಆ ಮಗುವು ಕೆಟ್ಟದ್ದು ಬೇಡ, ಒಳ್ಳೇದು ಬೇಕು ಅನ್ನುವಷ್ಟು ಬಲ್ಲವನಾಗುವ ಮೊದಲು, ಯಾವ ಇಬ್ಬರು ರಾಜರಿಗೆ ನೀನು ಹೆದರಿ ನಡುಗುತ್ತೀಯೋ ಅವರ ದೇಶವು ನಿರ್ಜನವಾಗುವುದು (ಯೆಶಾಯ 7:16 ULT)

ಮೊದಲನೆಯ ಕಲಮಿನ ಘಟನೆಯು ಎರಡನೆಯ ಕಲಮಿನ ಘಟನೆಯ ನಂತರ ಸಂಭವಿಸುತ್ತದೆ. ಮೊದಲು ಅವರು ಭಯಪಡುವ ಭೂಮಿ ನಿರ್ಜನವಾಗಿರುತ್ತದೆ, ಮತ್ತು ನಂತರ ಮಗುವಿಗೆ ಕೆಟ್ಟದ್ದನ್ನು ನಿರಾಕರಿಸಲು ಮತ್ತು ಒಳ್ಳೆಯದನ್ನು ಆಯ್ಕೆ ಮಾಡಲು ತಿಳಿಯುತ್ತದೆ. "ಮೊದಲು ಎಂಬ ಸಂಪರ್ಕ ಪದದಿಂದಾಗಿ ನಮಗೆ ಇದು ತಿಳಿದಿದೆ. ಆದಾಗ್ಯೂ, ನಿಮ್ಮ ಭಾಷೆಯಲ್ಲಿ ಈ ಕ್ರಮದಲ್ಲಿನ ಕಲಮುಗಳನ್ನು ಹೇಳುವುದು ಘಟನೆಗಳ ತಪ್ಪು ಕ್ರಮವನ್ನು ಸಂವಹನ ಮಾಡಬಹುದು. ಭಾಷಾಂತರಕಾರನು ಕ್ರಮವನ್ನು ಬದಲಾಯಿಸಬೇಕಾಗಬಹುದು, ಇದರಿಂದ ಕಲಮುಗಳು ಸಂಭವಿಸುವ ಕ್ರಮದಲ್ಲಿ ಬರುತ್ತವೆ, ಅಥವಾ ಓದುಗರಿಗೆ ಸ್ಪಷ್ಟವಾಗುವಂತೆ ಮೂಲ ಭಾಷಾ ಪಠ್ಯ ಮತ್ತು ಅನುಕ್ರಮದ ಕ್ರಮಾಂಕವನ್ನು ಗುರುತಿಸಿ ಹಾಗೆಯೇ ಇರಿಸಬಹುದು. ಈ ಅನುಕ್ರಮವನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ಸಂವಹನ ಮಾಡಲು ನೀವು (ಅನುವಾದಕರು) ಉತ್ತಮ ಮಾರ್ಗವನ್ನು ನಿರ್ಧರಿಸಬೇಕು.

ಆ ಕಾಲದಲ್ಲಿ ಮರಿಯಳು ಎದ್ದು ಮಲೆನಾಡಿಗೆ ಹೊರಟು ಯೆಹೂದದಲ್ಲಿರುವ ಒಂದು ಊರಿಗೆ ಹೋದಳು, ಮತ್ತು ಅವಳು ಜಕರೀಯನ ಮನೆ ಪ್ರವೇಶಿಸಿದಳು ಮತ್ತು ಎಲಿಸಬೇತಳನ್ನು ವಂದಿಸಿದಳು. (ಲೂಕ 1:39-40 ULT)

ಇಲ್ಲಿ ಸಾಮಾನ್ಯ ಸಂಪರ್ಕಿಸುವ ಪದ “ಮತ್ತು” ನಾಲ್ಕು ಘಟನೆಗಳನ್ನು ಸಂಪರ್ಕಿಸುತ್ತದೆ. ಇವು ಅನುಕ್ರಮ ಘಟನೆಗಳು— ಪ್ರತಿಯೊಂದೂ ಅದರ ಹಿಂದಿನ ಘಟನೆಗಳ ನಂತರ ಸಂಭವಿಸುತ್ತದೆ. ಇದು ನಮಗೆ ಹೇಗೆ ತಿಳಿಯುತ್ತದೆಂದರೆ ಅದುವೇ ಈ ಘಟನೆಗಳು ಸಂಭವಿಸುವ ಏಕೈಕ ಮಾರ್ಗ. ಆದ್ದರಿಂದ ಇಂಗ್ಲಿಷ್ ನಲ್ಲಿ ಈ ರೀತಿಯ ಘಟನೆಗಳ ಅನುಕ್ರಮವನ್ನು ಸ್ಪಷ್ಟಪಡಿಸಲು ಸಾಮಾನ್ಯ ಸಂಪರ್ಕಿಸುವ ಪದ “ಮತ್ತು” ಸಾಕಾಗುತ್ತದೆ. ಈ ಅನುಕ್ರಮವನ್ನು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿ ಮತ್ತು ಸರಿಯಾಗಿ ಇದು ಸಂವಹನ ಮಾಡುತ್ತದೆಯೇ ಎಂದು ನೀವು ನಿರ್ಧರಿಸಬೇಕಾಗುತ್ತದೆ.

ಅನುವಾದ ತಂತ್ರಗಳು

ಘಟನೆಗಳ ಅನುಕ್ರಮವು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿದ್ದರೆ, ಅನುಕ್ರಮವನ್ನು ಹಾಗೆಯೇ ಅನುವಾದಿಸಿ.

  1. ಸಂಪರ್ಕ ಪದವು ಸ್ಪಷ್ಟವಾಗಿಲ್ಲದಿದ್ದರೆ, ಅನುಕ್ರಮವನ್ನು ಹೆಚ್ಚು ಸ್ಪಷ್ಟವಾಗಿ ಸಂವಹನ ಮಾಡುವ ಸಂಪರ್ಕ ಪದವನ್ನು ಬಳಸಿ.

(2) ಅನುಕ್ರಮವನ್ನು ಅಸ್ಪಷ್ಟಗೊಳಿಸುವ ಕ್ರಮದಲ್ಲಿ ಕಲಮುಗಳು ಇದ್ದರೆ, ಕಲಮುಗಳನ್ನು ಹೆಚ್ಚು ಸ್ಪಷ್ಟವಾದ ಕ್ರಮದಲ್ಲಿ ಇರಿಸಿ.

ಅನ್ವಯಿಸಲಾದ ಅನುವಾದ ತಂತ್ರಗಳ ಉದಾಹರಣೆಗಳು

(1) ಸಂಪರ್ಕ ಪದವು ಸ್ಪಷ್ಟವಾಗಿಲ್ಲದಿದ್ದರೆ, ಅನುಕ್ರಮವನ್ನು ಹೆಚ್ಚು ಸ್ಪಷ್ಟವಾಗಿ ಸಂವಹನ ಮಾಡುವ ಸಂಪರ್ಕ ಪದವನ್ನು ಬಳಸಿ.

ಆ ಕಾಲದಲ್ಲಿ ಮರಿಯಳು ಎದ್ದು ಮಲೆನಾಡಿಗೆ ಹೊರಟು ಯೆಹೂದದಲ್ಲಿರುವ ಒಂದು ಊರಿಗೆ ಹೋದಳು, ಮತ್ತು ಅವಳು ಜಕರೀಯನ ಮನೆ ಪ್ರವೇಶಿಸಿದಳು ಮತ್ತು ಎಲಿಸಬೇತಳನ್ನು ವಂದಿಸಿದಳು. (ಲೂಕ 1:39-40 ULT)

ಆ ಕಾಲದಲ್ಲಿ ಮರಿಯಳು ಎದ್ದು ಮಲೆನಾಡಿಗೆ ಹೊರಟು ಯೆಹೂದದಲ್ಲಿರುವ ಒಂದು ಊರಿಗೆ ಹೋದಳು, ನಂತರ ಅವಳು ಜಕರೀಯನ ಮನೆ ಪ್ರವೇಶಿಸಿದಳು ನಂತರ ಎಲಿಸಬೇತಳನ್ನು ವಂದಿಸಿದಳು. (ಲೂಕ 1:39-40 ULT)

ಆ ಮಗುವು ಕೆಟ್ಟದ್ದು ಬೇಡ, ಒಳ್ಳೇದು ಬೇಕು ಅನ್ನುವಷ್ಟು ಬಲ್ಲವನಾಗುವ ಮೊದಲು, ಯಾವ ಇಬ್ಬರು ರಾಜರಿಗೆ ನೀನು ಹೆದರಿ ನಡುಗುತ್ತೀಯೋ ಅವರ ದೇಶವು ನಿರ್ಜನವಾಗುವುದು (ಯೆಶಾಯ 7:16 ULT)

ಮಗುವಿಗೆ ಕೆಟ್ಟದ್ದು ಬೇಡ, ಒಳ್ಳೇದು ಬೇಕು ಅನ್ನುವಷ್ಟು ಬಲ್ಲವನಾಗುವ ಸಮಯ ಬರುತ್ತದೆ, ಆದರೆ ಆ ಸಮಯಕ್ಕೂ ಮೊದಲೇ ನೀವು ಹೆದರುವ ಇಬ್ಬರು ರಾಜರ ದೇಶವು ನಿರ್ಜನವಾಗಿರುತ್ತದೆ.

(2) ಅನುಕ್ರಮವನ್ನು ಅಸ್ಪಷ್ಟಗೊಳಿಸುವ ಕ್ರಮದಲ್ಲಿ ಕಲಮುಗಳು ಇದ್ದರೆ, ಕಲಮುಗಳನ್ನು ಹೆಚ್ಚು ಸ್ಪಷ್ಟವಾದ ಕ್ರಮದಲ್ಲಿ ಇರಿಸಿ.

ಆ ಮಗುವು ಕೆಟ್ಟದ್ದು ಬೇಡ, ಒಳ್ಳೇದು ಬೇಕು ಅನ್ನುವಷ್ಟು ಬಲ್ಲವನಾಗುವ ಮೊದಲುನೀವು ಹೆದರುವ ಇಬ್ಬರು ರಾಜರ ದೇಶವು ನಿರ್ಜನವಾಗುತ್ತದೆ.

ಘಟನೆಗಳ ಅನುಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೋಡಿ ಘಟನೆಗಳ ಅನುಕ್ರಮ.


ಸಂಪರ್ಕಿಸು - ಏಕಕಾಲಿಕ ಸಮಯ ಸಂಬಂಧ

Translation Manual :: Just-in-Time Learning Modules :: Grammar :: Connect - Words and Phrases

ಸಮಯ ಸಂಬಂಧಗಳು

ವಾಕ್ಯಗಳು ಅಥವಾ ಪಠ್ಯದ ಭಾಗಗಳು, ಕೆಲವು ಜೋಡಣೆಗಳು ಎರಡು ಪದಗುಚ್ಛ ಷರತ್ತುಗಳು ಸಮಯ ಸಂಬಂಧಗಳನ್ನು ಸ್ಥಾಪಿಸುತ್ತವೆ,

ಏಕಕಾಲಿಕ ಷರತ್ತು

ವಿವರಣೆ

ಏಕಕಾಲಿಕ ಷರತ್ತು ಎಂದರೆ ಒಂದೇ ಸಮಯದಲ್ಲಿ ಸಂಭವಿಸುವ ಎರಡು ಅಥವಾ ಹೆಚ್ಚಿನ ಘಟನೆಗಳನ್ನು ಸಂಪರ್ಕಿಸುವ ಸಮಯ ಸಂಬಂಧ.

ಕಾರಣ ಇದು ಒಂದು ಅನುವಾದ ತೊಂದರೆ

ಘಟನೆಗಳು ಏಕಕಾಲದಲ್ಲಿ ಸಂಭವಿಸುತ್ತವೆ ಎಂದು ಭಾಷೆಗಳು ಹಲವು ವಿಧಗಳಲ್ಲಿ ಸೂಚಿಸುತ್ತವೆ. ಏನಾದರೂ ಘಟನೆಗಳು ಏಕಕಾಲದಲ್ಲಿ ಸಂಭವಿಸುತ್ತದೆಯೋ ಇಲ್ಲವೋ ಎಂಬುದರ ಆಧಾರದ ಮೇಲೆ ಈ ಮಾರ್ಗಗಳು ಬದಲಾಗಬಹುದು. ಏಕಕಾಲಿಕ ಘಟನೆಗಳನ್ನು ಸೂಚಿಸುವ ಪದಗಳನ್ನು ಸಂಪರ್ಕಿಸುವುದು “ಹಾಗೆಯೇ,” “ಹಾಗೆ,” ಮತ್ತು “ಸಮಯದಲ್ಲಿ” ಎಂಬ ಪದಗಳು. ಆಗಾಗ್ಗೆ ಸತ್ಯವೇದದ ಘಟನೆಗಳ ನಡುವಿನ ಸಂಬಂಧವನ್ನು ಹೇಳುವುದಿಲ್ಲ ಆದರೆ ಅವು ಒಂದೇ ಸಮಯದಲ್ಲಿ ಸಂಭವಿಸಿದವು ಎಂದು ಹೇಳುತ್ತದೆ. ಸಮಯದ ಸಂಬಂಧವನ್ನು ಸೂಚಿಸಿದಾಗ ಮತ್ತು ಅದನ್ನು ಸೂಚಿಸದಿದ್ದಾಗ ನೀವು ಅದನ್ನು ಸ್ಪಷ್ಟವಾಗಿ ಸಂವಹನ ಮಾಡಲು ನೀವು (ಅನುವಾದಕನು) ತಿಳಿದುಕೊಳ್ಳುವುದು ಬಹಳ ಮುಖ್ಯ. ಘಟನೆಗಳು ಒಂದೇ ಸಮಯದಲ್ಲಿ ಸಂಭವಿಸಿದವು ಎಂದು ಏಕಕಾಲಿಕ ಷರತ್ತು ತಿಳಿಸುತ್ತದೆ ಆದರೆ ಒಂದು ಘಟನೆಯು ಇನ್ನೊಂದಕ್ಕೆ ಕಾರಣವಾಗಿದೆ ಎಂದು ಅದು ಸೂಚಿಸುವುದಿಲ್ಲ. ಅದು ಕಾರಣ ಮತ್ತು ಫಲಿತಾಂಶದ ಸಂಬಂಧವಾಗಿರುತ್ತದೆ.

ಒಬಿಎಸ್ ಮತ್ತು ಸತ್ಯವೇದದಲ್ಲಿನ ಉದಾಹರಣೆಗಳು

ಯೋಸೇಫನು ತನ್ನ ಯಜಮಾನನಿಗೆ ಚೆನ್ನಾಗಿ ಸೇವೆ ಸಲ್ಲಿಸಿದನು, ಮತ್ತು ದೇವರು ಯೋಸೇಫನನ್ನು ಆಶೀರ್ವದಿಸಿದನು. (ಒಬಿಎಸ್ ಕಥೆ 8 ಚೌಕಟ್ಟು 4)

ಯೋಸೇಫನು ಶ್ರೀಮಂತ ಸರ್ಕಾರಿ ಅಧಿಕಾರಿಗೆ ಗುಲಾಮನಾಗಿದ್ದಾಗ ಎರಡು ಘಟನೆಗಳು ಸಂಭವಿಸಿದವು: ಯೋಸೇಫನು ಉತ್ತಮವಾಗಿ ಸೇವೆ ಸಲ್ಲಿಸಿದನು, ಮತ್ತು ದೇವರು ಯೋಸೇಫನನ್ನು ಆಶೀರ್ವದಿಸಿದನು. ಇವೆರಡರ ನಡುವಿನ ಕಾರಣ-ಮತ್ತು-ಫಲಿತಾಂಶ (ಕಾರಣ ಮತ್ತು ಪರಿಣಾಮ) ಸಂಬಂಧದ ಯಾವುದೇ ಸೂಚನೆಯಿಲ್ಲ, ಅಥವಾ ಮೊದಲ ಘಟನೆ ಸಂಭವಿಸಿದೆ, ಮತ್ತು ನಂತರ ಎರಡನೇ ಘಟನೆ ಸಂಭವಿಸಿದೆ.

ಆದರೆ ಸತ್ಯದಲ್ಲಿ ನಾನು ನಿಮಗೆ ಹೇಳುತ್ತೇನೆ ಎಲಿಯನ ಕಾಲದ ಆ ದಿನಗಳಲ್ಲಿ ಇಸ್ರೇಲ್‌ನಲ್ಲಿ ಅನೇಕ ವಿಧವೆಯರು ಇದ್ದರು. (ಲೂಕ 4: 25ಬಿ ಯು ಎಲ್ ಟಿ)

ಆ ಕಾಲದಲ್ಲಿ” ಇಲ್ಲಿ ಸಂಪರ್ಕಿಸುವ ಪದವು ಒಂದೇ ಸಮಯದಲ್ಲಿ ಎರಡು ಸಂಗತಿಗಳು ಸಂಭವಿಸಿವೆ ಎಂದು ಸ್ಪಷ್ಟವಾಗಿ ಹೇಳುತ್ತದೆ, ಆದರೆ ಒಂದು ಘಟನೆಯು ಇನ್ನೊಂದಕ್ಕೆ ಕಾರಣವಾಗಲಿಲ್ಲ.

ಮತ್ತು ಜನರು ಜಕರ್ಯನಿಗಾಗಿ ಕಾಯುತ್ತಿದ್ದರು, ಮತ್ತು ಅವನು ದೇವಾಲಯದಲ್ಲಿ ತಡವಾಗುವದನ್ನು ಕಂಡು ಆಶ್ಚರ್ಯಪಟ್ಟರು. (ಲೂಕ 1:21 ಯು ಎಲ್ ಟಿ)

ಜನರು ಒಂದೇ ಸಮಯದಲ್ಲಿ ಕಾಯುತ್ತಿದ್ದರು ಜೊತೆಯಲ್ಲಿ ಅದೆ ಸಮಯದಲ್ಲಿ ಆಶ್ಚರ್ಯಪಟ್ಟರು. ಸಾಮಾನ್ಯ ಜೋಡಣೆ “ಮತ್ತು” ಇದನ್ನು ಸೂಚಿಸುತ್ತದೆ.

ಹಾಗೆಯೇ ಅವರು ಪರಲೋಕಕ್ಕೆ ಆಸಕ್ತಿಯಿಂದ ನೋಡುತ್ತಿರುವಾಗ ಹಾಗೆ ಅತನು ಮೇಲಕ್ಕೆ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ, ಇಬ್ಬರು ಬಿಳಿ ಬಟ್ಟೆಯಲ್ಲಿ ಅವರ ಪಕ್ಕದಲ್ಲಿ ನಿಂತರು. (ಅ, ಕೃ 1:10 ಯು ಎಲ್ ಟಿ)

ಒಂದೇ ಸಮಯದಲ್ಲಿ ಮೂರು ಘಟನೆಗಳು ಸಂಭವಿಸಿದವು – ಶಿಷ್ಯರು ನೋಡುತ್ತಿದ್ದಾರೆ, ಯೇಸು ಮೇಲಕ್ಕೆ ಹೋಗುತ್ತಿದ್ದಾನೆ, ಮತ್ತು ಇಬ್ಬರು ವ್ಯಕ್ತಿಗಳು ನಿಂತಿದ್ದಾರೆ. ಜೋಡಣೆಯ ಪದಗಳು “**ಹಾಗೆಯೇ **” ಮತ್ತು “ಹಾಗೆ” ಇದನ್ನು ನಮಗೆ ತಿಳಿಸುತ್ತದೆ.

ಅನುವಾದ ತಂತ್ರಗಳು

ಏಕಕಾಲಿಕ ಷರತ್ತುಗಳನ್ನು ಗುರುತಿಸುವ ವಿಧಾನವು ನಿಮ್ಮ ಭಾಷೆಯಲ್ಲಿಯೂ ಸ್ಪಷ್ಟವಾಗಿದ್ದರೆ, ಏಕಕಾಲಿಕ ಷರತ್ತುಗಳನ್ನು ಅವು ಇದ್ದಂತೆ ಭಾಷಾಂತರಿಸಿ.

(1) ಸಂಪರ್ಕಿಸುವ ಪದವು ಏಕಕಾಲದಲ್ಲಿ ಷರತ್ತುಗಳು ಒಂದೇ ಸಮಯದಲ್ಲಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸದಿದ್ದರೆ, ಇದನ್ನು ಹೆಚ್ಚು ಸ್ಪಷ್ಟವಾಗಿ ಸಂವಹನ ಮಾಡುವ ಸಂಪರ್ಕಿಸುವ ಪದವನ್ನು ಬಳಸಿ.

(2) ಏಕಕಾಲಿಕ ಷರತ್ತು ಯಾವ ಷರತ್ತುಗೆ ಸಂಪರ್ಕಗೊಂಡಿದೆ ಮತ್ತು ಅವು ಒಂದೇ ಸಮಯದಲ್ಲಿ ನಡೆಯುತ್ತಿವೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೆ, ಎಲ್ಲಾ ಷರತ್ತುಗಳನ್ನು ಸಂಪರ್ಕಿಸುವ ಪದದಿಂದ ಗುರುತಿಸಿ.

(3) ನಿಮ್ಮ ಭಾಷೆ ಘಟನೆಗಳನ್ನು ಸಂಪರ್ಕಿಸುವ ಪದಗಳನ್ನು ಬಳಸುವುದಕ್ಕಿಂತ ವಿಭಿನ್ನ ರೀತಿಯಲ್ಲಿ ಏಕಕಾಲದಲ್ಲಿ ಗುರುತಿಸಿದರೆ, ಆ ರೀತಿಯಲ್ಲಿ ಬಳಸಿ.

ಅನುವಾದ ತಂತ್ರಗಳ ಉದಾಹರಣೆಗಳನ್ನು ಅನ್ವಯಿಸಲಾಗಿದೆ

ಮೇಲಿನ ಪಟ್ಟಿಯಲ್ಲಿನ ಅನುವಾದ ತಂತ್ರಗಳ ಪ್ರಕಾರ, ಕೆಳಗೆ, ಸತ್ಯವೇದದ ಪ್ರತಿ ವಾಕ್ಯಗಳು ಮೂರು ವಿಭಿನ್ನ ರೀತಿಯಲ್ಲಿ ಪುನರಾವರ್ತಿಸಲಾಗುತ್ತದೆ. ಪ್ರತಿ ಪುನರಾವರ್ತನೆಯು ಅದು ಬಳಸುತ್ತಿರುವ ಅನುವಾದ ತಂತ್ರದಂತೆಯೇ ಒಂದೇ ಸಂಖ್ಯೆಯನ್ನು ಹೊಂದಿರುತ್ತದೆ.

ಹಾಗೆಯೇ ಜನರು ಜಕರ್ಯನಿಗಾಗಿ ಕಾಯುತ್ತಿರುವಾಗ, ಅವನು ದೇವಾಲಯದಲ್ಲಿ ತಡವಾಗುವದನ್ನು ಕಂಡು ಅವರು ಆಶ್ಚರ್ಯಪಟ್ಟರು. (ಲೂಕ 1:21 ಯು ಎಲ್ ಟಿ)

(1) ಈಗ ಹಾಗೆಯೇ ಜನರು ಜಕರ್ಯನಿಗಾಗಿ ಕಾಯುತ್ತಿರುವಾಗ, ಅವನು ದೇವಾಲಯದಲ್ಲಿ ತಡವಾಗುವದನ್ನು ಕಂಡು ಆಶ್ಚರ್ಯಪಟ್ಟರು.

(2) ಈಗ ಹಾಗೆಯೇ ಮತ್ತು ಜನರು ಜಕರ್ಯನಿಗಾಗಿ ಕಾಯುತ್ತಿದ್ದರು, ಅವನು ದೇವಾಲಯದಲ್ಲಿ ತಡವಾಗುವದನ್ನು ಸಹ ಕಂಡು ಆಶ್ಚರ್ಯಪಟ್ಟರು.

(3) ಈಗ ಜನರು ಜಕರ್ಯನಿಗಾಗಿ ಕಾಯುತ್ತಿದ್ದರು, ಅವನು ದೇವಾಲಯದಲ್ಲಿ ತಡವಾಗುವದನ್ನು ಕಂಡು ಆಶ್ಚರ್ಯಪಟ್ಟರು.

ಹಾಗೆಯೇ ಅವರು ಪರಲೋಕಕ್ಕೆ ಆಸಕ್ತಿಯಿಂದ ನೋಡುತ್ತಿರುವಾಗ ಹಾಗೆ ಅತನು ಮೇಲಕ್ಕೆ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ, ಇಬ್ಬರು ಬಿಳಿ ಬಟ್ಟೆಯಲ್ಲಿ ಅವರ ಪಕ್ಕದಲ್ಲಿ ನಿಂತರು. (ಅ, ಕೃ 1:10 ಯು ಎಲ್ ಟಿ)

(1) ಮತ್ತು ಅದೇ ಸಮಯದಲ್ಲಿ ಅವರು ಪರಲೋಕಕ್ಕೆ ಆಸಕ್ತಿಯಿಂದ ನೋಡುತ್ತಿರುವಾಗ ಹಾಗೆ ಅತನು ಮೇಲಕ್ಕೆ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ, ಇಬ್ಬರು ಬಿಳಿ ಬಟ್ಟೆಯಲ್ಲಿ ಅವರ ಪಕ್ಕದಲ್ಲಿ ನಿಂತರು.

(2) ಮತ್ತು ಹಾಗೆಯೇ ಅವರು ಪರಲೋಕಕ್ಕೆ ಆಸಕ್ತಿಯಿಂದ ನೋಡುತ್ತಿರುವಾಗ ಹಾಗೆ ಅತನು ಮೇಲಕ್ಕೆ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ, ಅದೇ ಸಮಯದಲ್ಲಿ ಇಬ್ಬರು ಬಿಳಿ ಬಟ್ಟೆಯಲ್ಲಿ ಅವರ ಪಕ್ಕದಲ್ಲಿ ನಿಂತರು.

(3) ಅವರು ಪರಲೋಕಕ್ಕೆ ಆಸಕ್ತಿಯಿಂದ ನೋಡುತ್ತಿರುವಾಗ; ಅತನು ಮೇಲಕ್ಕೆ ಹೋಗುತ್ತಿದ್ದಾಗ ಯಾವಾಗ ಇಬ್ಬರು ಬಿಳಿ ಬಟ್ಟೆಯಲ್ಲಿ ಅವರ ಪಕ್ಕದಲ್ಲಿ ನಿಂತಿರುವದನ್ನು ಅವರು ಕಂಡರು.


ಪದಗಳು ಮತ್ತು ನುಡಿಗಟ್ಟುಗಳನ್ನು ಸಂಪರ್ಕಿಸಲಾಗುತ್ತಿದೆ

Translation Manual :: Just-in-Time Learning Modules :: Grammar :: Connect - Sequential Time Relationship

ವಿವರಣೆ

ಮಾನವರಾದ ನಾವು ನಮ್ಮ ಆಲೋಚನೆಗಳನ್ನು ಪದಗುಚ್ಛಗಳಾಗಿ ಮತ್ತು ವಾಕ್ಯಗಳಲ್ಲಿ ಬರೆಯುತ್ತೇವೆ. ನಾವು ಸಾಮಾನ್ಯವಾಗಿ ವಿಭಿನ್ನ ರೀತಿಯಲ್ಲಿ ಪರಸ್ಪರ ಸಂಪರ್ಕ ಹೊಂದಿದ ಆಲೋಚನೆಗಳ ಸರಣಿಯನ್ನು ಸಂವಹನ ಮಾಡಲು ಬಯಸುತ್ತೇವೆ. ಸಂಪರ್ಕಕಲ್ಪಿಸುವ ಪದಗಳು ಮತ್ತು ನುಡಿಗಟ್ಟುಗಳು ಈ ಆಲೋಚನೆಗಳು ಹೇಗೆ ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ತೋರಿಸುತ್ತದೆ. ಉದಾಹರಣೆಗೆ, ಸಂಪರ್ಕಕಲ್ಪಿಸುವ ಪದಗಳನ್ನು ದಪ್ಪ ಅಕ್ಷರಗಳಲ್ಲಿ ಬಳಸುವ ಮೂಲಕ ಈ ಕೆಳಗಿನ ಆಲೋಚನೆಗಳು ಹೇಗೆ ಸಂಬಂಧಿಸಿವೆ ಎಂಬುದನ್ನು ನಾವು ತೋರಿಸಬಹುದು:

  • ಮಳೆ ಬರುತ್ತಿತ್ತು, ಆದ್ದರಿಂದ ನಾನು ನನ್ನ ಛತ್ರಿಯನ್ನು ಬಿಡಿಸಿದ್ದೇನೆ.
  • ಮಳೆ ಬರುತ್ತಿತ್ತು, ಆದರೆ ನನ್ನ ಬಳಿಯಲ್ಲಿ ಛತ್ರಿ ಇರಲಿಲ್ಲ. ಆದ್ದರಿಂದ ನಾನು ತುಂಬಾ ಒದ್ದೆಯಾಗಿದ್ದೆ.

ಪದಗಳು ಅಥವಾ ನುಡಿಗಟ್ಟುಗಳನ್ನು ಸಂಪರ್ಕಿಸುವುದರಿಂದ ಒಂದು ವಾಕ್ಯದೊಳಗೆ ನುಡಿಗಟ್ಟುಗಳು ಅಥವಾ ಷರತ್ತುಗಳನ್ನು ಸಂಪರ್ಕಿಸಬಹುದು. ಅವರು ವಾಕ್ಯಗಳನ್ನು ಪರಸ್ಪರ ಸಂಪರ್ಕಿಸಬಹುದು. ಸಂಪರ್ಕಿಸುವ ಪದದ ನಂತರ ಸಂಪೂರ್ಣ ಭಾಗವನ್ನು ಮೊದಲು ಹೇಗೆ ಸಂಬಂಧಿಸಿದೆ ಎಂಬುದನ್ನು ತೋರಿಸಲು ಅವರು ಸಂಪೂರ್ಣ ಭಾಗಗಳನ್ನು ಒಂದಕ್ಕೊಂದು ಸಂಪರ್ಕ ಕಲ್ಪಿಸಬಹುದು. ಆಗಾಗ್ಗೆ, ಸಂಪೂರ್ಣ ಭಾಗಗಳನ್ನು ಒಂದಕ್ಕೊಂದು ಸಂಪರ್ಕಿಸುವ ಪದಗಳು ಸಂಯೋಗಗಳು ಅಥವಾ ಕ್ರಿಯಾವಿಶೇಷಣಗಳಾಗಿವೆ.

ಮಳೆ ಬರುತ್ತಿತ್ತು, ಆದರೆ ನನ್ನ ಬಳಿ ಛತ್ರಿ ಇರಲಿಲ್ಲ, ಹಾಗಾಗಿ ನನಗೆ ತುಂಬಾ ಒದ್ದೆಯಾಯಿತು.

ಈಗ ನಾನು ನನ್ನ ಬಟ್ಟೆಗಳನ್ನು ಬದಲಾಯಿಸಬೇಕು. ನಂತರ ನಾನು ಒಂದು ಲೋಟ ಬಿಸಿ ಚಹಾವನ್ನು ಕುಡಿಯುತ್ತೇನೆ ಮತ್ತು ಬೆಂಕಿಯಿಂದ ನನ್ನನ್ನು ಬೆಚ್ಚಗಾಗಿಸುತ್ತೇನೆ.

ಮೇಲಿನ ಉದಾಹರಣೆಯಲ್ಲಿ, ಈಗ ಎಂಬ ಪದವು ಪಠ್ಯದ ಎರಡು ಸಣ್ಣ ಭಾಗಗಳನ್ನು ಸಂಪರ್ಕ ಕಲ್ಪಿಸುತ್ತದೆ, ಅವುಗಳ ನಡುವಿನ ಸಂಬಂಧವನ್ನು ತೋರಿಸುತ್ತದೆ. ಮಾತನಾಡುವವನು ತನ್ನ ಬಟ್ಟೆಗಳನ್ನು ಬದಲಾಯಿಸಬೇಕು, ಬಿಸಿ ಚಹಾ ಕುಡಿಯಬೇಕು ಮತ್ತು ಮೊದಲೇ ಏನೋ ಸಂಭವಿಸಿದ ಕಾರಣ ಸ್ವತಃ ಬೆಚ್ಚಗಾಗಬೇಕು (ಅಂದರೆ, ಅವನು ಮಳೆಯಲ್ಲಿ ಒದ್ದೆಯಾಗುತ್ತಾನೆ).

ಕೆಲವೊಮ್ಮೆ ಜನರು ಸಂಪರ್ಕ ಕಲ್ಪಿಸುವ ಪದವನ್ನು ಬಳಸದಿರಬಹುದು ಏಕೆಂದರೆ ಆಲೋಚನೆಗಳು ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಓದುಗರಿಗೆ ಸಂದರ್ಭವು ಸಹಾಯ ಮಾಡುತ್ತದೆ ಎಂದು ಅವರು ನಿರೀಕ್ಷಿಸುತ್ತಾರೆ. ಕೆಲವು ಭಾಷೆಗಳು ಇತರ ಭಾಷೆಗಳಂತೆ ಸಂಪರ್ಕಿಸುವ ಪದಗಳನ್ನು ಬಳಸುವುದಿಲ್ಲ. ಅವರು ಹೀಗೆ ಹೇಳಬಹುದು:

  • ಮಳೆ ಬರುತ್ತಿತ್ತು. ನನ್ನ ಬಳಿ ಛತ್ರಿ ಇರಲಿಲ್ಲ. ನಾನು ತುಂಬಾ ಒದ್ದೆಯಾದೇನು.

ನೀವು (ಅನುವಾದಕರು) ಉದ್ದೇಶಿತ ಭಾಷೆಯಲ್ಲಿ ಹೆಚ್ಚು ನೈಸರ್ಗಿಕ ಮತ್ತು ಸ್ಪಷ್ಟವಾದ ವಿಧಾನವನ್ನು ಬಳಸಬೇಕಾಗುತ್ತದೆ. ಆದರೆ ಸಾಮಾನ್ಯವಾಗಿ, ಸಾಧ್ಯವಾದಾಗಲೆಲ್ಲಾ ಸಂಪರ್ಕ ಕಲ್ಪಿಸುವ ಪದಗಳನ್ನು ಬಳಸುವುದರಿಂದ ಓದುಗರಿಗೆ ಸತ್ಯವೇದದಲ್ಲಿರುವ ವಿಚಾರಗಳನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದು ಅನುವಾದ ತೊಂದರೆಗೆ ಕಾರಣಗಳು

  • ವಾಕ್ಯವೃಂದಗಳ ನಡುವಿನ ಸಂಬಂಧ, ವಾಕ್ಯಗಳ ನಡುವೆ ಮತ್ತು ಸತ್ಯವೇದ ವಾಕ್ಯಗಳ ಭಾಗಗಳ ನಡುವಿನ ಸಂಬಂಧವನ್ನು ನೀವು ಅರ್ಥಮಾಡಿಕೊಳ್ಳಬೇಕು ಮತ್ತು ಪದಗಳು ಮತ್ತು ನುಡಿಗಟ್ಟುಗಳನ್ನು ಹೇಗೆ ಸಂಪರ್ಕಿಸುವುದು ಅವರು ಸಂಪರ್ಕಿಸುತ್ತಿರುವ ಆಲೋಚನೆಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ.
  • ಪ್ರತಿಯೊಂದು ಭಾಷೆಯು ಆಲೋಚನೆಗಳು ಹೇಗೆ ಸಂಬಂಧಿಸಿದೆ ಎಂಬುದನ್ನು ತೋರಿಸುವ ತನ್ನದೇ ಆದ ಮಾರ್ಗಗಳನ್ನು ಹೊಂದಿದೆ.
  • ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ರೀತಿಯಲ್ಲಿ ಆಲೋಚನೆಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಓದುಗರಿಗೆ ಹೇಗೆ ಸಹಾಯ ಮಾಡಬೇಕೆಂದು ನೀವು ತಿಳಿದುಕೊಳ್ಳಬೇಕು.

ಅನುವಾದ ತತ್ವಗಳು

  • ಮೂಲ ಓದುಗರು ಅರ್ಥಮಾಡಿಕೊಳ್ಳುವ ಆಲೋಚನೆಗಳ ನಡುವಿನ ಸಂಬಂಧವನ್ನು ಓದುಗರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ನೀವು ಅನುವಾದಿಸಬೇಕಾಗಿದೆ.
  • ಸಂಪರ್ಕಿಸುವ ಪದವನ್ನು ಬಳಸಲಾಗುತ್ತದೆಯೋ ಇಲ್ಲವೋ ಎಂಬುದು ಓದುಗರಿಗೆ ಆಲೋಚನೆಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವಷ್ಟು ಮುಖ್ಯವಲ್ಲ.

ಸಂಪರ್ಕ ಕಲ್ಪಿಸುವ ವಿಭಿನ್ನ ರೀತಿಗಳು

ಕಲ್ಪನೆಗಳು ಅಥವಾ ಘಟನೆಗಳ ನಡುವಿನ ವಿಭಿನ್ನ ರೀತಿಯ ಸಂಪರ್ಕಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ವಿಭಿನ್ನ ರೀತಿಯ ಸಂಪರ್ಕ ಕಲ್ಪಿಸುವ ಪದಗಳನ್ನು ಬಳಸುವ ಮೂಲಕ ಈ ವಿಭಿನ್ನ ರೀತಿಯ ಸಂಪರ್ಕಗಳನ್ನು ಸೂಚಿಸಬಹುದು. ನಾವು ಏನನ್ನಾದರೂ ಬರೆಯುವಾಗ ಅಥವಾ ಭಾಷಾಂತರಿಸುವಾಗ, ಸರಿಯಾದ ಸಂಪರ್ಕ ಕಲ್ಪಿಸುವ ಪದವನ್ನು ಬಳಸುವುದು ಬಹಳ ಮುಖ್ಯ, ಇದರಿಂದಾಗಿ ಈ ಸಂಪರ್ಕಗಳು ಓದುಗರಿಗೆ ಸ್ಪಷ್ಟವಾಗುತ್ತವೆ. ನೀವು ಹೆಚ್ಚುವರಿ ಮಾಹಿತಿಯನ್ನು ಬಯಸಿದರೆ, ಪ್ರತಿಯೊಂದು ರೀತಿಯ ಸಂಪರ್ಕಕ್ಕೆ ವ್ಯಾಖ್ಯಾನಗಳು ಮತ್ತು ಉದಾಹರಣೆಗಳನ್ನು ಹೊಂದಿರುವ ಪುಟಕ್ಕೆ ನಿರ್ದೇಶಿಸಲು ಬಣ್ಣದ, ಸಂಪರ್ಕ ಕಲ್ಪಿಸುವ ಪದವನ್ನು ಕ್ಲಿಕ್ ಮಾಡಿ.

  • [ಅನುಕ್ರಮ ಷರತ್ತು](…/ ವ್ಯಾಕರಣ-ಸಂಪರ್ಕ-ಸಮಯ-ಅನುಕ್ರಮ/01.md) - ಎರಡು ಘಟನೆಗಳ ನಡುವಿನ ಸಮಯ ಸಂಬಂಧವು ಸಂಭವಿಸುತ್ತದೆ ಮತ್ತು ಇತರ ಕಾರ್ಯಗಳು ಸಂಭವಿಸುತ್ತದೆ.
  • [ಏಕಕಾಲಿಕ ಷರತ್ತು](…/ ವ್ಯಾಕರಣ-ಸಂಪರ್ಕ-ಸಮಯ-ಏಕಕಾಲಿಕ /01.md) - ಒಂದೇ ಸಮಯದಲ್ಲಿ ಸಂಭವಿಸುವ ಎರಡು ಅಥವಾ ಹೆಚ್ಚಿನ ಘಟನೆಗಳ ನಡುವಿನ ಸಮಯ ಸಂಬಂಧ.
  • [ಹಿನ್ನೆಲೆ ಷರತ್ತು](…/ ವ್ಯಾಕರಣ-ಸಂಪರ್ಕ-ಸಮಯ-ಹಿನ್ನೆಲೆ / 01.md) - ಸಮಯದ ಸಂಬಂಧ, ಇದರಲ್ಲಿ ಮೊದಲ ಷರತ್ತು ಎರಡನೇ ಘಟನೆಯ ಪ್ರಾರಂಭವು ಸಂಭವಿಸುವ ಸಮಯದಲ್ಲಿ ನಡೆಯುತ್ತಿರುವ ದೀರ್ಘ ಘಟನೆಯನ್ನು ವಿವರಿಸುತ್ತದೆ, ಅದು ಎರಡನೆಯ ಷರತ್ತಿನಲ್ಲಿ ವಿವರಿಸಲಾಗಿದೆ.
  • [ಅಸಾಧಾರಣ ಸಂಬಂಧ](…/ ವ್ಯಾಕರಣ-ಸಂಪರ್ಕ-ವಿನಾಯಿತಿಗಳು/01.md) - ಒಂದು ಷರತ್ತು ಜನರು ಅಥವಾ ವಸ್ತುಗಳ ಗುಂಪನ್ನು ವಿವರಿಸುತ್ತದೆ, ಮತ್ತು ಇನ್ನೊಂದು ಷರತ್ತು ಒಂದು ಅಥವಾ ಹೆಚ್ಚಿನ ವಸ್ತುಗಳನ್ನು ಅಥವಾ ಜನರನ್ನು ಗುಂಪಿನಿಂದ ಹೊರತುಪಡಿಸುತ್ತದೆ.
  • [ಕಾಲ್ಪನಿಕ ಸ್ಥಿತಿ](…/ವ್ಯಾಕರಣ-ಸಂಪರ್ಕ-ಕಾಲ್ಪನಿಕ ಸ್ಥಿತಿ/01.md) - ಎರಡನೆಯ ಘಟನೆಯು ಮೊದಲನೆ ನಡೆದರೆ ಮಾತ್ರ ನಡೆಯುತ್ತದೆ. ಕೆಲವೊಮ್ಮೆ ಏನಾಗುತ್ತದೆ ಎಂಬುದು ಇತರ ಜನರ ಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ.
  • [ವಾಸ್ತವಿಕ ಸ್ಥಿತಿ] (…/ವ್ಯಾಕರಣ-ಸಂಪರ್ಕ-ಸ್ಥಿತಿ-ಸತ್ಯ/01.md) - ಒಂದು ಸಂಪರ್ಕವು ಕಾಲ್ಪನಿಕವೆಂದು ತೋರುತ್ತದೆ ಆದರೆ ಈಗಾಗಲೇ ನಿಶ್ಚಿತ ಅಥವಾ ನಿಜವಾಗಿದೆ, ಇದರಿಂದಾಗಿ ಪರಿಸ್ಥಿತಿಯು ಸಂಭವಿಸುತ್ತದೆ ಎಂದು ಖಾತರಿಪಡಿಸಲಾಗಿದೆ.
  • ವ್ಯತಿರಿಕ್ತ-ವಾಸ್ತವ-ಸ್ಥಿತಿ - ಒಂದು ಸಂಪರ್ಕವು ಕಾಲ್ಪನಿಕವೆಂದು ತೋರುತ್ತದೆ ಆದರೆ ಅದು ನಿಜವಲ್ಲ ಎಂದು ಈಗಾಗಲೇ ಖಚಿತವಾಗಿದೆ. ಇದನ್ನೂ ನೋಡಿ: [ಕಾಲ್ಪನಿಕ ಹೇಳಿಕೆಗಳು](…/ಸಂದರ್ಭನುಸಾರ ಹೇಳಿಕೆ/01.md).
  • ಗುರಿ ಸಂಬಂಧ - ಒಂದು ತಾರ್ಕಿಕ ಸಂಬಂಧ, ಇದರಲ್ಲಿ ಎರಡನೇ ಘಟನೆಯು ಮೊದಲನೆಯ ಉದ್ದೇಶ ಅಥವಾ ಗುರಿಯಾಗಿದೆ.
  • ಕಾರಣ ಮತ್ತು ಫಲಿತಾಂಶ ಸಂಬಂಧ - ಒಂದು ತಾರ್ಕಿಕ ಸಂಬಂಧ, ಇದರಲ್ಲಿ ಒಂದು ಘಟನೆಯು ಇತರ ಘಟನೆಗೆ ಕಾರಣವಾಗಿದೆ, ಫಲಿತಾಂಶ.
  • [ವಿರುದ್ಧವಾದ ಸಂಬಂಧ (…/ವ್ಯಾಕರಣ-ಸಂಪರ್ಕ-ತರ್ಕ-ವಿರುದ್ಧ /01.md) - ಒಂದು ವಸ್ತುವನ್ನು ವಿಭಿನ್ನ ಅಥವಾ ಇನ್ನೊಂದಕ್ಕೆ ವಿರುದ್ಧವಾಗಿ ವಿವರಿಸಲಾಗುತ್ತಿದೆ.

ಸತ್ಯವೇದದಿಂದ ಉದಾಹರಣೆಗಳು

ನಾನು ತಕ್ಷಣ ಶರೀರ ಮತ್ತು ರಕ್ತದೊಂದಿಗೆ ಸಮಾಲೋಚಿಸಲಿಲ್ಲ. ಯೆರೂಸಲೇಮಿನಲ್ಲಿ ನನಗಿಂತ ಮೊದಲು ಅಪೊಸ್ತಲರಾದವರ ಬಳಿಗೆ ನಾನು ಹೋಗಲಿಲ್ಲ. ಬದಲಿಗೆ, ನಾನು ಅರೇಬಿಯಾಕ್ಕೆ ಹೋಗಿ ನಂತರ ದಮಾಸ್ಕಕ್ಕೆ ಮರಳಿದೆ. ನಂತರ ಮೂರು ವರ್ಷಗಳ ನಂತರ, ನಾನು ಕೇಫನನ್ನು ಭೇಟಿ ಮಾಡಲು ಯೆರೂಸಲೇಮಿಗೆ ಹೋದೆ, ಮತ್ತು ನಾನು ಅವನೊಂದಿಗೆ 15 ದಿನಗಳ ಕಾಲ ಇದ್ದೆ. (ಗಲಾತ್ಯ 1: 16ಬಿ -18 ಯು ಎಲ್ ಟಿ)

“ಬದಲಾಗಿ” ಎಂಬ ಪದವು ಮೊದಲು ಹೇಳಿದ್ದಕ್ಕೆ ವ್ಯತಿರಿಕ್ತವಾದದ್ದನ್ನು ಪರಿಚಯಿಸುತ್ತದೆ. ಇಲ್ಲಿ ವ್ಯತಿರಿಕ್ತತೆಯು ಪೌಲನು ಏನು ಮಾಡಲಿಲ್ಲ ಮತ್ತು ಏನು ಮಾಡಿದನು ಎಂಬುದರ ನಡುವೆ ಇರುತ್ತದೆ. “ನಂತರ” ಎಂಬ ಪದವು ಘಟನೆಗಳ ಅನುಕ್ರಮವನ್ನು ಪರಿಚಯಿಸುತ್ತದೆ. ಪೌಲನು ದಮಾಸ್ಕಕ್ಕೆ ಹಿಂದಿರುಗಿದ ನಂತರ ಮಾಡಿದ ಏನನ್ನಾದರೂ ಇದು ಪರಿಚಯಿಸುತ್ತದೆ.

ಆದ್ದರಿಂದ, ಈ ಆಜ್ಞೆಗಳಲ್ಲಿ ಕನಿಷ್ಠ ಒಂದನ್ನು ಮುರಿಯುವವನು ಯಾವನಾದರೂ ಮತ್ತು ಹಾಗೆ ಮಾಡಲು ಇತರರಿಗೆ ಕಲಿಸಿದರೆ ಅವರನ್ನು ಪರಲೋಕ ರಾಜ್ಯದಲ್ಲಿ ಕನಿಷ್ಠ ಎಂದು ಕರೆಯಲಾಗುತ್ತದೆ. ಆದರ ಯಾರು ಅದನ್ನು ಕಾಪಾಡಿಕೊಂಡು ಕಲಿಸುತ್ತಾರೋ ಅವರನ್ನು ಪರಲೋಕ ರಾಜ್ಯದಲ್ಲಿ ಶ್ರೇಷ್ಠರೆಂದು ಕರೆಯಲಾಗುತ್ತದೆ. (ಮತ್ತಾಯ 5:19 ಯು ಎಲ್ ಟಿ)

“ಆದ್ದರಿಂದ” ಎಂಬ ಪದವು ಈ ವಿಭಾಗವನ್ನು ಅದರ ಹಿಂದಿನ ವಿಭಾಗದೊಂದಿಗೆ ಸಂಪರ್ಕಿಸುತ್ತದೆ, ಮೊದಲು ಬಂದ ವಿಭಾಗವು ಈ ವಿಭಾಗಕ್ಕೆ ಕಾರಣವನ್ನು ನೀಡುತ್ತದೆ ಎಂದು ಸಂಕೇತಿಸುತ್ತದೆ. “ಆದ್ದರಿಂದ” ಸಾಮಾನ್ಯವಾಗಿ ಒಂದು ವಾಕ್ಯಕ್ಕಿಂತ ದೊಡ್ಡ ವಿಭಾಗಗಳನ್ನು ಜೋಡಿಸುವಂತೆ ಮಾಡುತ್ತದೆ. “ಮತ್ತು” ಎಂಬ ಪದವು ಒಂದೇ ವಾಕ್ಯದಲ್ಲಿ ಕೇವಲ ಎರಡು ಕ್ರಿಯೆಗಳನ್ನು ಸಂಪರ್ಕಿಸುತ್ತದೆ, ಅಂದರೆ ಆಜ್ಞೆಗಳನ್ನು ಮುರಿಯುವುದು ಮತ್ತು ಇತರರಿಗೆ ಕಲಿಸುವುದು. ಈ ವಾಕ್ಯದಲ್ಲಿ “ಆದರೆ” ಎಂಬ ಪದವು ದೇವರ ರಾಜ್ಯದಲ್ಲಿ ಒಂದು ಗುಂಪಿನ ಜನರನ್ನು ಕರೆಯುವುದಕ್ಕೆ ವ್ಯತಿರಿಕ್ತವಾಗಿದೆ.

ನಾವು ಯಾರ ಮುಂದೆ ಏನನ್ನೂ ತಡೆಯಾಗಿ ಇದುವದಿಲ್ಲ, ಆದ್ದರಿಂದ ನಮ್ಮ ಸೇವೆಯು ಅಪಖ್ಯಾತಿಗೆ ಒಳಗಾಗುವುದಿಲ್ಲ. ಬದಲಾಗಿ, ನಾವು ದೇವರ ಸೇವಕರಾಗಿ ಎಲ್ಲದರಲ್ಲೂ ನಮ್ಮನ್ನು ಪ್ರಶಂಸಿಸುತ್ತೇವೆ. (2 ಕೊರಿಂಥ 6: 3-4 ಯು ಎಲ್ ಟಿ)

ಇಲ್ಲಿ “ಆದ್ದರಿಂದ” ಎಂಬ ಪದಗಳು ಮೊದಲು ಬಂದದ್ದಕ್ಕೆ ಕಾರಣವಾಗಿರುವುದನ್ನು ಸಂಪರ್ಕಿಸುತ್ತದೆ; ಪೌಲನು ಎಡವಿ ಬೀಳದಿರುವ ಕಾರಣವೆಂದರೆ, ತನ್ನ ಸೇವೆಯನ್ನು ಅಪಖ್ಯಾತಿಗೆ ತರುವುದನ್ನು ಅವನು ಬಯಸುವುದಿಲ್ಲ. “ಬದಲಾಗಿ” ಪೌಲನು ಏನು ಮಾಡುತ್ತಾನೆ (ಅವನು ದೇವರ ಸೇವಕನೆಂದು ಅವನ ಕಾರ್ಯಗಳಿಂದ ಸಾಬೀತುಪಡಿಸಿದನು) ತಾನು ಮಾಡುವುದಿಲ್ಲ ಎಂದು ಹೇಳಿದ್ದಕ್ಕೆ ವಿರುದ್ಧವಾಗಿ (ಎಡವಿ ಬೀಳುವಂತದ್ದನ್ನು ಇರಿಸು).

ಸಾಮಾನ್ಯ ಅನುವಾದ ತಂತ್ರಗಳು

ನಿರ್ದಿಷ್ಟ ತಂತ್ರಗಳಿಗಾಗಿ ಮೇಲಿನ ಪ್ರತಿಯೊಂದು ರೀತಿಯ ಸಂಪರ್ಕ ಪದವನ್ನು ನೋಡಿ

ಆಲೋಚನೆಗಳ ನಡುವಿನ ಸಂಬಂಧವನ್ನು ಯುಎಲ್‌ಟಿಯಲ್ಲಿ ತೋರಿಸಿದ ರೀತಿ ಸಹಜವಾಗಿದ್ದರೆ ಮತ್ತು ನಿಮ್ಮ ಭಾಷೆಯಲ್ಲಿ ಸರಿಯಾದ ಅರ್ಥವನ್ನು ನೀಡಿದರೆ, ಅದನ್ನು ಬಳಸುವುದನ್ನು ಪರಿಗಣಿಸಿ. ಇಲ್ಲದಿದ್ದರೆ, ಇಲ್ಲಿ ಕೆಲವು ಇತರ ಆಯ್ಕೆಗಳಿವೆ.

(1) ಸಂಪರ್ಕ ಕಲ್ಪಿಸುವ ಪದವನ್ನು ಬಳಸಿ (ಒಂದು ವೇಳೆ ಯು ಎಲ್ ಟಿ ಒಂದನ್ನು ಬಳಸದಿದ್ದರೂ ಸಹ).

(2) ಒಂದನ್ನು ಬಳಸುವುದು ವಿಚಿತ್ರವಾದರೆ ಮತ್ತು ಜನರ ಆಲೋಚನೆಗಳ ನಡುವಿನ ಸರಿಯಾದ ಸಂಬಂಧವನ್ನು ಅರ್ಥಮಾಡಿಕೊಳ್ಳದಿರುವುದಾದರೆ ಸಂಪರ್ಕಿಸುವ ಪದವನ್ನು ಬಳಸಬೇಡಿ.

(3) ಸಂಪರ್ಕ ಕಲ್ಪಿಸುವ ವಿವಿದ ಪದವನ್ನು ಬಳಸಿ.

ಅನುವಾದ ತಂತ್ರಗಳ ಉದಾಹರಣೆಗಳನ್ನು ಅನ್ವಯಿಸಲಾಗಿದೆ

(1) ಸಂಪರ್ಕ ಕಲ್ಪಿಸುವ ಪದವನ್ನು ಬಳಸಿ ( ಒಂದು ವೇಳೆ ಯು ಎಲ್ ಟಿ ಒಂದನ್ನು ಬಳಸದಿದ್ದರೂ ಸಹ).

ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸು, ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಮೀನುಗಾರರನ್ನಾಗಿ ಮಾಡುವೆನು” ಎಂದು ಹೇಳಿದನು. ಕೂಡಲೇ ಅವರು ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು. (ಮಾರ್ಕ 1:17-18 ಯು ಎಲ್ ಟಿ)

ಯೇಸು ಹಾಗೆ ಹೇಳಿದ್ದರಿಂದ ಅವರು ಆತನನ್ನು ಹಿಂಬಾಲಿಸಿದರು. ಕೆಲವು ಅನುವಾದಕರು ಈ ಷರತ್ತನ್ನು “ಆದ್ದರಿಂದ” ಎಂಬ ಸಂಪರ್ಕ ಕಲ್ಪಿಸುವ ಪದದೊಂದಿಗೆ ಗುರುತಿಸಲು ಬಯಸಬಹುದು.

ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸು, ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಮೀನುಗಾರರನ್ನಾಗಿ ಮಾಡುವೆನು” ಎಂದು ಹೇಳಿದನು. ಆದ್ದರಿಂದ, ತಕ್ಷಣ ಅವರು ಬಲೆಗಳನ್ನು ಬಿಟ್ಟು ಅತನನ್ನು ಹಿಂಬಾಲಿಸಿದರು.

(2) ಸಂಪರ್ಕ ಕಲ್ಪಿಸುವ ಪದವನ್ನು ಬಳಸುವುದು ವಿಚಿತ್ರವಾಗಿದ್ದರೆ ಮತ್ತು ಜನರು ಆಲೋಚನೆಗಳ ನಡುವಿನ ಸರಿಯಾದ ಸಂಬಂಧವನ್ನು ಅರ್ಥಮಾಡಿಕೊಳ್ಳದಿದ್ದರೆ ಅದನ್ನು ಬಳಸಬೇಡಿ.

ಆದ್ದರಿಂದ, ಈ ಆಜ್ಞೆಗಳಲ್ಲಿ ಕನಿಷ್ಠ ಒಂದನ್ನು ಮುರಿಯುವವನು ಮತ್ತು ಹಾಗೆ ಮಾಡಲು ಇತರರಿಗೆ ಕಲಿಸಿದರೆ ಅವರನ್ನು ಪರಲೋಕ ರಾಜ್ಯದಲ್ಲಿ ಕನಿಷ್ಠ ಎಂದು ಕರೆಯಲಾಗುತ್ತದೆ. ಆದರೆ ಯಾರು ಅದನ್ನು ಕಾಪಾಡಿಕೊಂಡು ಕಲಿಸುತ್ತಾರೋ ಅವರನ್ನು ಪರಲೋಕ ರಾಜ್ಯದಲ್ಲಿ ಶ್ರೇಷ್ಠರೆಂದು ಕರೆಯಲಾಗುತ್ತದೆ. (ಮತ್ತಾಯ 5:19 ಯು ಎಲ್ ಟಿ)

ಕೆಲವು ಭಾಷೆಗಳು ಸಂಪರ್ಕಿಸುವ ಪದಗಳನ್ನು ಬಳಸದಿರಲು ಇಲ್ಲಿ ಬಯಸುತ್ತವೆ ಏಕೆಂದರೆ ಅವುಗಳಿಲ್ಲದೆ ಅರ್ಥವು ಸ್ಪಷ್ಟವಾಗಿರುತ್ತದೆ ಮತ್ತು ಅವುಗಳನ್ನು ಬಳಸುವುದು ಅಸ್ವಾಭಾವಿಕವಾಗಿದೆ. ಅವರು ಈ ರೀತಿ ಅನುವಾದಿಸಬಹುದು:

ಆದ್ದರಿಂದ, ಯಾವನಾದರೂ ಈ ಆಜ್ಞೆಗಳಲ್ಲಿ ಕನಿಷ್ಠ ಒಂದನ್ನು ಮುರಿಯುವವನು, ಇತರರಿಗೂ ಹಾಗೆ ಮಾಡಲು ಕಲಿಸುವವನನ್ನು ಪರಲೋಕ ರಾಜ್ಯದಲ್ಲಿ ಕನಿಷ್ಠ ಎಂದು ಕರೆಯಲಾಗುತ್ತದೆ. ಯಾರು ಆದನ್ನು ಇಟ್ಟುಕೊಂಡು ಬೋಧಿಸುತ್ತಾರೋ ಅವರು ಪರಲೋಕ ರಾಜ್ಯದಲ್ಲಿ ಶ್ರೇಷ್ಠರೆಂದು ಕರೆಯಲ್ಪಡುತ್ತಾರೆ.

ನಾನು ತಕ್ಷಣ ಶರೀರ ಮತ್ತು ರಕ್ತದೊಂದಿಗೆ ಆಲೋಚಿಸಲಿಲ್ಲ. ನನಗೆ ಮೊದಲು ಯೆರೂಸಲೇಮಿನಲ್ಲಿಅಪೊಸ್ತಲರಾದವರ ಬಳಿಗೂ ನಾನು ಹೋಗಲಿಲ್ಲ. ಬದಲಿಗೆ, ನಾನು ಅರೇಬಿಯಾಕ್ಕೆ ಹೋಗಿ ನಂತರ ದಮಾಸ್ಕಕ್ಕೆ ಮರಳಿದೆ. ನಂತರ ಮೂರು ವರ್ಷಗಳ ನಂತರ, ನಾನು ಕೇಫನನ್ನು ಭೇಟಿ ಮಾಡಲು ಯೆರೂಸಲೇಮಿಗೆ ಹೋದೆ, ಮತ್ತು ನಾನು ಅವನೊಂದಿಗೆ 15 ದಿನಗಳ ಕಾಲ ಇದ್ದೆ. (ಗಲಾತ್ಯದವರಿಗೆ 1: 16ಬಿ -18 ಯು ಎಲ್ ಟಿ) (ಗಲಾತ್ಯ1:16-18 ಯು ಎಲ್ ಟಿ)

ಇಲ್ಲಿ ಕೆಲವು ಭಾಷೆಗಳಿಗೆ “ಬದಲಿಗೆ” ಅಥವಾ “ನಂತರ” ಪದಗಳು ಅಗತ್ಯವಿಲ್ಲದಿರಬಹುದು. ಅವರು ಈ ರೀತಿ ಅನುವಾದಿಸಬಹುದು:

ನಾನು ತಕ್ಷಣ ಶರೀರ ಮತ್ತು ರಕ್ತದೊಂದಿಗೆ ಆಲೋಚಿಸಲಿಲ್ಲ, ಮತ್ತು ನನಗೆ ಮೊದಲು ಯೆರೂಸಲೇಮಿನಲ್ಲಿ ಅಪೊಸ್ತಲರಾದವರ ಬಳಿಗೆ ನಾನು ಹೋಗಲಿಲ್ಲ. ನಾನು ಅರೇಬಿಯಾಕ್ಕೆ ಹೋಗಿ ನಂತರ ದಮಸ್ಕಕ್ಕೆ ಮರಳಿದೆ. ಮೂರು ವರ್ಷಗಳ ನಂತರ ನಾನು ಕೇಫನನ್ನು ಭೇಟಿ ಮಾಡಲು ಯೆರೂಸಲೇಮಿಗೆ ಹೋದೆ, ಮತ್ತು ನಾನು ಅವನೊಂದಿಗೆ 15 ದಿನಗಳ ಕಾಲ ಇದ್ದೆ.

(3) ಬೇರೆ ಸಂಪರ್ಕ ಕಲ್ಪಿಸುವ ಪದವನ್ನು ಬಳಸಿ.

ಆದ್ದರಿಂದ, ಈ ಆಜ್ಞೆಗಳಲ್ಲಿ ಕನಿಷ್ಠ ಒಂದನ್ನು ಮುರಿಯುವವನು ಮತ್ತು ಹಾಗೆ ಮಾಡಲು ಇತರರಿಗೆ ಕಲಿಸಿದರೆ ಅವರನ್ನು ಪರಲೋಕ ರಾಜ್ಯದಲ್ಲಿ ಕನಿಷ್ಠ ಎಂದು ಕರೆಯಲಾಗುತ್ತದೆ. ಆದರೆ ಯಾರು ಅವರನ್ನು ಕಾಪಾಡಿಕೊಂಡು ಕಲಿಸುತ್ತಾರೋ ಅವರನ್ನು ಪರಲೋಕ ರಾಜ್ಯದಲ್ಲಿ ಶ್ರೇಷ್ಠರೆಂದು ಕರೆಯಲಾಗುತ್ತದೆ. (ಮತ್ತಾಯ 5:19 ಯು ಎಲ್ ಟಿ)

“ಆದ್ದರಿಂದ” ಎಂಬ ಪದದ ಬದಲು, ಒಂದು ಭಾಷೆಗೆ ಅದರ ಮೊದಲು ಒಂದು ವಿಭಾಗವಿದೆ ಎಂದು ಸೂಚಿಸಲು ಒಂದು ನುಡಿಗಟ್ಟು ಬೇಕಾಗಬಹುದು, ಅದು ಮುಂದಿನ ವಿಭಾಗಕ್ಕೆ ಕಾರಣವನ್ನು ನೀಡುತ್ತದೆ. ಅಲ್ಲದೆ, ಜನರ ಎರಡು ಗುಂಪುಗಳ ನಡುವಿನ ವ್ಯತಿರಿಕ್ತತೆಯ ಕಾರಣ “ಆದರೆ” ಎಂಬ ಪದವನ್ನು ಇಲ್ಲಿ ಬಳಸಲಾಗುತ್ತದೆ. ಆದರೆ ಕೆಲವು ಭಾಷೆಗಳಲ್ಲಿ, “ಆದರೆ” ಎಂಬ ಪದವು ಅದರ ನಂತರ ಬರುವದರಿಂದ ಆಶ್ಚರ್ಯಕರವಾಗಿದೆ ಎಂದು ತೋರಿಸುತ್ತದೆ. ಆದ್ದರಿಂದ “ಮತ್ತು” ಆ ಭಾಷೆಗಳಿಗೆ ಸ್ಪಷ್ಟವಾಗಿರಬಹುದು. ಅವರು ಈ ರೀತಿ ಅನುವಾದಿಸಬಹುದು:

** ಆ ಕಾರಣದಿಂದಾಗಿ**, ಈ ಆಜ್ಞೆಗಳಲ್ಲಿ ಕನಿಷ್ಠ ಒಂದನ್ನು ಮುರಿದು ಇತರರಿಗೆ ಹಾಗೆ ಕಲಿಸುವವನು ಪರಲೋಕ ರಾಜ್ಯದಲ್ಲಿ ಕನಿಷ್ಠ ಎಂದು ಕರೆಯಲ್ಪಡುತ್ತಾನೆ. ಮತ್ತು ಯಾರು ಅದನ್ನು ಕಾಪಾಡಿಕೊಂಡು ಕಲಿಸುತ್ತಾರೋ ಅವರನ್ನು ಸ್ಪರಲೋಕ ರಾಜ್ಯದಲ್ಲಿ ಶ್ರೇಷ್ಠರೆಂದು ಕರೆಯಲಾಗುತ್ತದೆ.


ತಿಳಿವಳಿಕೆ ನೀಡುವ ಅಥವಾ ನೆನಪು ಮಾಡುವ ಮತ್ತು ವ್ಯತ್ಯಾಸಮಾಡುವುದು ಇವುಗಳ ನಡುವಿನ ವ್ಯತ್ಯಾಸ

Translation Manual :: Just-in-Time Learning Modules :: Grammar :: Distinguishing versus Informing or Reminding

ವಿವರಣೆ

ಕೆಲವು ಭಾಷೆಯಲ್ಲಿ ಕೆಲವು ನುಡಿಗಟ್ಟುಗಳು ನಾಮಪದವನ್ನು ಬದಲಾಯಿಸಿ ಎರಡು ಭಿನ್ನವಾದ ನಾಮಪದಗಳನ್ನು ಬಳಸಲು ಸಹಕಾರಿಯಾಗಿದೆ. ಅವು ಒಂದೇ ರೀತಿಯ ವಿಷಯಗಳ ನಾಮಪದವನ್ನು ವಿಭಜಿಸಿ ಹೇಳಬಹುದು ಅಥವಾ ನಾಮಪದಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಹುದು.

ಈ ಮಾಹಿತಿ ಓದುಗನಿಗೆ ಹೊಸದಾಗಿರಬಹುದು ಅಥವಾ ಈಗಾಗಲೇ ಓದುಗನಿಗೆ ಗೊತ್ತಿರುವ ವಿಚಾರವನ್ನು ನೆನಪಿಸುವಂತದ್ದಾಗಿರಬಹುದು. ನಾಮಪದವನ್ನು ಅದೇ ರೀತಿಯಾದ ಇತರ ಸಂಗತಿಗಳಿಂದ ವ್ಯತ್ಯಾಸ ತೋರಿಸುವ ಸಲುವಾಗಿ ಕೆಲವು ಭಾಷೆಗಳಲ್ಲಿ ಬದಲಾವಣೆ ತರುವ ನುಡಿಗಟ್ಟುಗಳನ್ನ ಉಪಯೋಗಿಸುತ್ತಾರೆ.

ಈ ಭಾಷೆಯನ್ನು ಮಾತನಾಡುವ ಜನರು ನಾಮಪದಗಳೊಂದಿಗೆ ಬರುವ ಬದಲಾಯಿಸುವ ನುಡಿಗಟ್ಟು ಪದಗಳನ್ನು ಕೇಳಿಸಿಕೊಳ್ಳುವಾಗ ಒಂದು ವಿಷಯವನ್ನು ಅದೇರೀತಿಯ ವಿಷಯವನ್ನು ವಿಂಗಡಿಸಿ ಉಪಯೋಗಿಸುವುದೇ ಅದರ ಕರ್ತವ್ಯ ಎಂದು ಅವರು ತಿಳಿದುಕೊಳ್ಳುತ್ತಾರೆ. ಕೆಲವು ಭಾಷೆಯಲ್ಲಿ ಒಂದು ವಿಷಯವು ಇನ್ನೊಂದರೊಡನೆ ಸೃಷ್ಟಿಸುವ ವ್ಯತ್ಯಾಸವನ್ನುಮತ್ತು ಅದೇ ವಿಷಯ ಕೊಡುವ ಹೆಚ್ಚಿನ ಮಾಹಿತಿಯನ್ನು ಹೇಳುವಾಗ, ಕೆಲವೊಮ್ಮೆ ವಾಕ್ಯಗಳನಡುವೆ ಅರ್ಧವಿರಾಮ (comma)ಚಿಹ್ನೆ ಬಳಸುತ್ತಾರೆ ಕೆಲವೊಮ್ಮೆ ಅರ್ಧವಿರಾಮ (,) ಚಿಹ್ನೆ ಇಲ್ಲದೆ ವ್ಯತ್ಯಸವನ್ನು ತಿಳಿಸಬಹುದು ಎಂಬುದನ್ನು ಈ ಕೆಳಗಿನ ಉದಾಹರಣೆಗಳು ತಿಳಿಸುತ್ತವೆ.

  • ಮೇರಿ ತನ್ನ ಸಹೋದರಿಗೆ ಸ್ವಲ್ಪ ಆಹಾರ ಪದಾರ್ಥ ನೀಡಿದ್ದಕ್ಕಾಗಿ ಎಂದಿನಂತೆ ಅವಳು ತನ್ನ ಸಹೋದರಿಗೆ ಧನ್ಯವಾದ ತಿಳಿಸಿದಳು .
  • ಅವಳ ಸಹೋದರಿ ಸಹಜವಾಗಿ ಧನ್ಯವಾದ ಹೇಳುವವಳಾದರೂ “ಎಂದಿನಂತೆ ಧನ್ಯವಾದ” ಎಂಬ ನುಡಿಗಟ್ಟು ಸಹಜವಾಗಿ ಧನ್ಯವಾದ ಹೇಳದ ಇನ್ನೊಬ್ಬ ಸಹೋದರಿಯಿಂದ ಭಿನ್ನವಾಗಿದ್ದಾಳೆ ಎಂಬ ವ್ಯತ್ಯಾಸವನ್ನು ತಿಳಿಸುತ್ತದೆ. ಇಲ್ಲಿ ಬಳಸಿರುವ ಅರ್ಧವಿರಾಮ (,) ಚಿಹ್ನೆ ವಾಕ್ಯದಲ್ಲಿ ಹೆಚ್ಚು ಮಾಹಿತಿ ನಿಡುತ್ತದೆ.
  • ಯಾವಾಗಲೂ ತನ್ನ ಧನ್ಯವಾದಗಳನ್ನು ಹೇಳುವ ಸಹೋದರಿಗೆ ಮೇರಿ ಸ್ವಲ್ಪ ಆಹಾರ ನೀಡಿದಳು .
  • ಈ ನುಡಿಗಟ್ಟು ನಮಗೆ ಮೇರಿಯ ಸಹೋದರಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಮೇರಿ ತನ್ನ ಸಹೋದರಿಗೆ ಆಹಾರಕೊಟ್ಟಾಗ “ಅವಳ ಸಹೊದರಿ ಹೇಗೆ ಪ್ರತಿಕ್ರಿಯಿಸಿದಳು” ಎಂಬುದನ್ನು ತಿಳಿಸುತ್ತದೆ. ಇಲ್ಲಿ ಒಬ್ಬ ಸಹೋದರಿಯಿಂದ ಇನ್ನೊಬ್ಬ ಸಹೋದರಿಯನ್ನುವಿಂಗಡಿಸಿ ಹೇಳಿಲ್ಲ.

ಇದಕ್ಕೆ ಕಾರಣ ಇದೊಂದು ಭಾಷಾಂತರ ಪ್ರಕರಣ

  • ಸತ್ಯವೇದದ ಭಾಷಾಂತರದಲ್ಲಿ ಬಳಸುವ ಅನೇಕ ಮೂಲಭಾಷೆಗಳು ನಾಮಪದದ ಬದಲಾಗಿ ಬಳಸುವ ನುಡಿಗಟ್ಟಗಳನ್ನು ನಾಮಪದದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಮತ್ತು ಅದೇ ವಿಷಯದ ಬಗ್ಗೆ ಬಳಸಿರುವ ನಾಮಪದವನ್ನು ವಿಭಜಿಸಿ ಹೇಳಲು ಬಳಸುತ್ತಾರೆ. ಭಾಷಾಂತರಕಾರ ಮೂಲ ಲೇಖಕರ ಉದ್ದೇಶವನ್ನು ಸರಿಯಾಗಿ ಅರ್ಥಮಾಡಿಕೊಂಡು ಭಾಷಾಂತರ ಮಾಡುವಾಗ ಎಚ್ಚರಿಕೆ ವಹಿಸಬೇಕು.
  • ನಾಮಪದವನ್ನು ಅದೇ ರೀತಿಯಾದ ಪದಗಳಿಂದ ಪ್ರತ್ಯೇಕಿಸಲು ಕೆಲವು ಭಾಷೆಗಳಲ್ಲಿ ನುಡಿಗಟ್ಟನ್ನು ಬದಲಾಯಿಸುವ ನಾಮಪದವನ್ನು ** ಮಾತ್ರ** ಬಳಸುತ್ತಾರೆ.
  • ಹೆಚ್ಚಿನ ಮಾಹಿತಿ ನೀಡಲು ಬಳಸಿದ ನುಡಿಗಟ್ಟನ್ನು ಭಾಷಾಂತರ ಮಾಡುವಾಗ ಈ ಭಾಷೆಗಳನ್ನು ಮಾತನಾಡುವ ಜನರಿಗಾಗಿ ನಾಮಪದಗಳಿಂದ ನುಡಿಗಟ್ಟುಗಳನ್ನು ವಿಭಜಿಸುವುದು ಅಗತ್ಯ. ಇಲ್ಲದಿದ್ದರೆ ಜನರು ಇದನ್ನು ಓದುವಾಗ ಅಥವಾ ಕೇಳುವಾಗ ಬಳಸಿರುವ ನುಡಿಗಟ್ಟು ನಾಮಪದವನ್ನು ಅದೇ ರೀತಿ ಇತರ ಪದಗಳಿಂದ ವಿಂಗಡಿಸಿ ಹೇಳಲು ಬಯಸುತ್ತಿರುವರು ಎಂದು ತಿಳಿಯುವರು.

ಸತ್ಯವೇದದಿಂದ ಉದಾಹರಣೆಗಳು.

ಒಂದು ವಿಷಯದಿಂದ ಇನ್ನೊಂದು ವಿಷಯವನ್ನು ವಿಂಗಡಿಸಿ ಹೇಳಲು ಬಳಸಿರುವ ಪದಗಳು ಮತ್ತು ನುಡಿಗಟ್ಟುಗಳ ಉದಾಹರಣೆ. ಇವುಗಳಿಂದ ಭಾಷಾಂತರ ಮಾಡುವಾಗ ಯಾವ ಸಮಸ್ಯೆಯೂ ಬರುವುದಿಲ್ಲ.

…ಆ ತೆರೆಯು ಪವಿತ್ರ ಸ್ನಾನವೆಂಬುದನ್ನು ಮಹಾಪವಿತ್ರ ಸ್ನಾನವೆಂಬುದನ್ನು ಬೇರೆ ಬೇರೆ ಮಾಡುವುದು . (ವಿಮೋಚನಾ ಕಾಂಡ 26:33 ULB)

ಇಲ್ಲಿ"ಪವಿತ್ರ" ಮತ್ತು "ಮಹಾ ಪವಿತ್ರ " ಎರಡು ವಿಭಿನ್ನ ಸ್ಥಳಗಳ ಬಗ್ಗೆ ಒಂದು ಇನ್ನೊಂದರಿಂದ ಎಂಬುದನ್ನು ತಿಳಿಸುತ್ತದೆ.

ಜ್ಞಾನಹೀನನಾದ ಮಗನು ತಂದೆಗೆ ಕಿರಿಕಿರಿ ಹೆತ್ತ ತಾಯಿಗೆ ಕರಕರೆ . (ಜ್ಞಾನೋಕ್ತಿಗಳು 17:25 ULB)

“ಹೆತ್ತ ತಾಯಿ” ಎಂಬ ನುಡಿಗಟ್ಟು ತಾಯಿಗೆ ನೋವನ್ನು ಉಂಟುಮಾಡುವ ಮಗನನ್ನು ತೋರಿಸುತ್ತದೆ. ಅಂದರೆ ಅಂತಹ ಮಗನು ಎಲ್ಲಾ ಸ್ತ್ರೀಯರಿಗೆ ನೋವಲ್ಲ ಅವನನ್ನು ಹಡೆದ ತಾಯಿಗೆ ಮಾತ್ರ.

ಇಂತಹ ಪದಗಳು ಮತ್ತು ನುಡಿಗಟ್ಟುಗಳು ಪರಿಣಾಮಕಾರಿಯಾದ ಹೆಚ್ಚಿನ ಮಾಹಿತಿ ನೀಡಲು ಅಥವಾ ನೆನಪಿಸುವ ಪದವಾಗಿ ಇಲ್ಲಿ ಬಳಸಲಾಗಿದೆ. ಕೆಲವೊಮ್ಮೆ ಇಂತಹ ಭಾಷಾಂತರ ವಿಷಯಗಳನ್ನು ಭಾಷೆಯಲ್ಲಿ ಬಳಸದೆಯೂ ಇರಬಹುದು.

… ಗಾಗಿ ನಿನ್ನ ನೀತಿಯುಕ್ತವಾದ ನ್ಯಾಯತೀರ್ಮಾನವಾವು, ವಿಧಿಗಳು ಹಿತಕರವಾಗಿದೆ. (ದಾ.ಕೀ. 119:39 ULB)

“ನೀತಿಯುಕ್ತ ವಿಧಿ” ಎಂಬ ಪದವು ದೇವರ ತೀರ್ಪುಗಳೆಲ್ಲವೂ ನೀತಿ ಪರವಾಗಿರುತ್ತದೆ. ಎಂಬುದನ್ನು ತಿಳಿಸುತ್ತದೆ. ಇಲ್ಲಿ ಆತನ "ನೀತಿಯುಕ್ತ " ಮತ್ತು ಅನೀತಿಯುಕ್ತ ತೀರ್ಪುಗಳು ಎಂದು ವಿಭಜಿಸುವ ಅವಶ್ಯವಿಲ್ಲ, ಏಕೆಂದರೆ ದೇವರ ತೀರ್ಪುಗಳೆಲ್ಲಾ ನ್ಯಾಯಪರವಾದುದೇ.

90 ವರ್ಷದವಳಾದ , ಸಾರಳು ಹೆತ್ತಾಳೇ, (ಆದಿಕಾಂಡ 17:17-18 ULB)

"90 ವರ್ಷದವಳಾದ ಎಂಬ ನುಡಿಗಟ್ಟು ಸಾರಳು ಮಗುವನ್ನು ಹೆರಲು ಸಾಧ್ಯವೇ ಎಂದು ಅಬ್ರಹಾಮನು ಯೋಚಿಸಿದನು. ಇಲ್ಲಿ 90 ವರ್ಷವಾದ ಸಾರಳು ಮತ್ತು ಇನ್ನೊಬ್ಬ ಹೆಂಗಸು ಸಾರಾ ಎಂದು ಹೆಸರಿನವಳು ವಯಸ್ಸಿನಲ್ಲಿ ವ್ಯತ್ಯಾಸವಿರುವ ಬಗ್ಗೆ ಹೇಳುತ್ತಿಲ್ಲ. ತನ್ನ ಹೆಂಡತಿಯ ಬಗ್ಗೆ ಹೇಳುತ್ತಾನೆ ಅವನು ವಯಸ್ಸಾದ ಹೆಂಗಸರು ಮಗುವನ್ನು ಹೆರಲು ಸಾಧ್ಯವಿಲ್ಲ ಎಂದು ಯೋಚಿಸಲಿಲ್ಲ.

ನಾನು ಸೃಷ್ಟಿಸಿದ ಮನುಷ್ಯಜಾತಿಯನ್ನುಭೂಮಿಯ ಮೇಲಿಂದ ಅಳಿಸಿ ಬಿಡುವೆನು (ಆದಿಕಾಂಡ 6:7 ULB)

ನಾನು ಸೃಷ್ಟಿಸಿದ ಎಂಬ ನುಡಿಗಟ್ಟು ಪದವು ದೇವರ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಸೂಚಿಸುತ್ತದೆ. ದೇವರಿಗೆ ಮನುಷ್ಯ ಜಾತಿಯನ್ನು ಅಳಿಸಿಬಿಡುವ ಹಕ್ಕಿದೆ ಎಂದು ಅರ್ಥ. ಇಲ್ಲಿ ಮನುಷ್ಯ ಜಾತಿ ಎಂದರೆ ಒಂದೇ, ಬೇರೊಂದು ಮನುಷ್ಯ ಜಾತಿಯನ್ನು ಸೃಷ್ಟಿಸಲಿಲ್ಲ.

ಭಾಷಾಂತರ ತಂತ್ರಗಳು.

ಜನರು ನೀವು ಬಳಸುವ ನಾಮಪದದೊಂದಿಗಿನ ನುಡಿಗಟ್ಟನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ ಆ ಪದವನ್ನು ಹಾಗೇ ಉಳಿಸಿಕೊಳ್ಳಿ. ಭಾಷೆಯಲ್ಲಿ ನಾಮಪದಕ್ಕಾಗಿ ಬಳಸುವ ಪದಗಳು ಅಥವಾ ನುಡಿಗಟ್ಟುಗಳು ಒಂದು ಪದದಿಂದ ಇನ್ನೊಂದು ಪದವನ್ನು ವಿಭಜಿಸಿ ತೋರಿಸಲು. ಇಲ್ಲಿ ಕೆಲವು ನುಡಿಗಟ್ಟುಗಳನ್ನು, ಭಾಷಾಂತರ ಮಾಡುವ ತಂತ್ರಗಳನ್ನು ಮಾಹಿತಿ ನೀಡುವುದಕ್ಕಾಗಿ ಅಥವಾ ನೆನಪಿಸುವುದಕ್ಕಾಗಿ ನೀಡಲಾಗಿದೆ.

  1. ಈ ಮಾಹಿತಿಗಳನ್ನು ವಾಕ್ಯದ ಒಂದು ಬದಿಯಲ್ಲಿ ಬರೆದು, ಇತರ ಪದಗಳ ಅರ್ಥ ತೋರಿಸುತ್ತಿರುವ ಉದ್ದೇಶವನ್ನು ಬರೆಯಿರಿ.

  2. ಇದೊಂದು ಹೆಚ್ಚಿನ ಮಾಹಿತಿಗಾಗಿ ತೋರಿಸಿರುವ ವಿಷಯ ಎಂಬುದನ್ನು ನಿಮ್ಮ ಭಾಷೆಯ ಮೂಲಕ ತಿಳಿಸಿ. ಇದನ್ನು ಒಂದು ಪದವನ್ನು ಬದಲಾಯಿಸುವ ಮೂಲಕ ಅಥವಾ ಕರ್ತರಿ ಕರ್ಮಣಿ ಪ್ರಯೋಗಗಳ ಮೂಲಕ ಬದಲಾಯಿಸಿ ತೋರಿಸಿ. ಕೆಲವೊಮ್ಮೆ ಈ ಕರ್ತರಿ ಕರ್ಮಣಿ ಪ್ರಯೋಗಗಳನ್ನು ಮಾಡಿದಾಗ ಲೇಖನ ಚಿಹ್ನೆಗಳು ಅಥವಾ ಅಡ್ಡಗೆರೆ, ಅರ್ಧವಿರಾಮ ಚಿಹ್ನೆಗಳನ್ನು ಬಳಸಬೇಕಾಗುತ್ತದೆ.

ಭಾಷಾಂತರ ತಂತ್ರಗಳನ್ನು ಅಳವಡಿಸುವ ಉದಾಹರಣೆಗಳು.

  1. ಹೇಳಬೇಕಾದ ಮಾಹಿತಿಯನ್ನು ವಾಕ್ಯದ ಒಂದು ಭಾಗದಲ್ಲಿ ಬರೆದು, ಅದರ ಉದ್ದೇಶಗಳನ್ನು ಪದಗಳ ಮೂಲಕ ಸೇರಿಸಿ.
  • ದಾವೀದನು ಎಲ್ಲಾ ವಿಗ್ರಹಗಳನ್ನು ಪೂಜಿಸುವುದರ ಬಗ್ಗೆ ತನ್ನ ಅಭಿಪ್ರಾಯತಿಳಿಸಿ, ತಾನು ಏಕೆ ಅವುಗಳನ್ನು ಪೂಜಿಸುವುದಿಲ್ಲ ಮತ್ತು ಆರಾಧಿಸುವುದಿಲ್ಲ ಎಂಬುದಕ್ಕೆ ಕಾರಣವನ್ನು ವಾಕ್ಯಗಳ ಮೂಲಕ ನೀಡಿದ್ದಾನೆ. ಸುಳ್ಳು ವಿಗ್ರಹಗಳನ್ನುಅವಲಂಭಿಸಿ ಆರಾಧಿಸುವವರನ್ನು ನಾನು ದ್ವೇಷಿಸುತ್ತೇನೆ. (ದಾ.ಕೀ.31:6 ULB) - ಇಲ್ಲಿ ಅವನ ಉದ್ದೇಶ ವಿಗ್ರಹಗಳಲ್ಲಿ ಒಳ್ಳೆ ವಿಗ್ರಹ ಮತ್ತು ಕೆಟ್ಟ ವಿಗ್ರಹಗಳ ನಡುವಿನ ವ್ಯತ್ಯಾಸವಲ್ಲ, ಎಲ್ಲಾ ವಿಗ್ರಹಗಳನ್ನು ಕುರಿತು ಹೇಳಿದ್ದಾನೆ.

    • ಏಕೆಂದರೆವಿಗ್ರಹಗಳು ಮೌಲ್ಯವಿಲ್ಲದ್ದು, ನಾನು ಅವುಗಳನ್ನು ಆರಾಧಿಸುವವರನ್ನು ದ್ವೇಷಿಸುತ್ತೇನೆ.
  • ಏಕೆಂದರೆ ನಿನ್ನ ನೀತಿಪರವಾದ ನ್ಯಾಯತೀರ್ಪು ಒಳ್ಳೆಯದಾಗಿದೆ. (ದಾ.ಕೀ. 119:39 ULB)

    • … ನಿನ್ನ ನ್ಯಾಯತೀರ್ಪು ಒಳ್ಳೆಯದಾಗಿದೆ ಏಕೆಂದರೆಅವು ನ್ಯಾಯಪರವಾಗಿದೆ.
  • ತೊಂಬತ್ತು ವರ್ಷದವಳಾದಸಾರಳು ಒಬ್ಬ ಮಗನನ್ನು ಹಡೆಯಬಲ್ಲಳೇ? ? (ಆದಿಕಾಂಡ 17:17-18 ULB) –ಇಲ್ಲಿ ಬಳಸಿರುವ “ತೊಂಬತ್ತು ವರ್ಷದವಳಾದ” ಎಂಬ ನುಡಿಗಟ್ಟು ಸಾರಳಿಗೆ ತೊಂಬತ್ತು ವರ್ಷವಾಗಿದೆ ಎಂದು ಅವಳ ವಯಸ್ಸನ್ನು ಕುರಿತು ಹೇಳಿರುವುದು. ಇದು ಅಬ್ರಹಾಮನು ಈ ಪ್ರಶ್ನೆಯನ್ನು ಏಕೆ ಕೇಳಿದ ಎಂಬುದನ್ನು ತಿಳಿಸುತ್ತದೆ. ಅಷ್ಟು ವಯಸ್ಸಾದ ಹೆಂಗಸೊಬ್ಬಳು ಮಗುವನ್ನು ಹಡೆಯಲು ಸಾಧ್ಯವೇ ಎಂಬುದನ್ನು ನಿರೀಕ್ಷಿಸಿರಲಿಲ್ಲ

    • ಸಾರಳು ಒಬ್ಬ ಮಗನನ್ನು ಹಡೆಯಬಹುದೇ ಅವಳುತೊಂಬತ್ತು ವರ್ಷದವಳಾದರೂ ಹಡೆಯಲು ಸಾಧ್ಯವೇ?
  • ನಾನು ಯೆಹೋವನಿಗೆ, ಮೊರೆಯಿಡುತ್ತೇನೆ ಏಕೆಂದರೆಆತನು ಸ್ತುತಿಸ್ತೋತ್ರಕ್ಕೆ ಅರ್ಹನು ಏಕೆಂದರೆ ಆತನೊಬ್ಬನೇ ಯೆಹೋವನು > (2 ನೇ ಸಮುವೇಲl 22:4 ULB) - ಆತನೇ ಸ್ತುತಿಸ್ತೋತ್ರಕ್ಕೆ ಅರ್ಹನು ಎಂಬುವುದು ಯೆಹೋವನಲ್ಲಿ ಮೊರೆಯಿಡುವುದಕ್ಕೆ ಕಾರಣವೇನು ಎಂಬುದನ್ನು ತಿಳಿಸುತ್ತದೆ.

    • ನಾನು ನನ್ನ ಯೆಹೋವನಿಗೆ ಮೊರೆಯಿಡುತ್ತೇನೆ ಏಕೆಂದರೆ ಅವನೊಬ್ಬನೇ ಸ್ತುತಿಸ್ತೋತ್ರಕ್ಕೆ ಅರ್ಹನು.
  1. ನಿಮ್ಮ ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸಲು ಬಳಸುವ ಸೇರಿಸಲ್ಪಟ್ಟಿರುವ ಮಾಹಿತಿಗಳನ್ನು ಬಳಸಿ.
  • ನೀನು ಪ್ರಿಯನಾಗಿರುವ ನನ್ನ ಮಗನುನಿನ್ನನ್ನು ನಾನು. ಪ್ರೀತಿಸುತ್ತೇನೆ, ಮತ್ತು ನಾನು ನಿನ್ನನ್ನು ಮೆಚ್ಚಿದ್ದೇನೆ. ನಾನು ನಿನ್ನನ್ನು ಮೆಚ್ಚಿದ್ದೇನೆ (ಲೂಕ 3:22 ULB)

    • ನೀನು ನನ್ನ ಮಗನು ನಾನು ನಿನ್ನನ್ನು ಪ್ರೀತಿಸುತ್ತೇನೆ, . ನಾನು ನಿನ್ನನ್ನು ಮೆಚ್ಚಿದ್ದೇನೆ.
    • ನನ್ನ ಪ್ರೀತಿಯನ್ನು ಸ್ವೀಕರಿಸು ,ನೀನು ನನ್ನ ಮಗ. ನಾನು ನಿನ್ನನ್ನು ಮೆಚ್ಚಿದ್ದೇನೆ

ದ್ವಿಗುಣ ನಕಾರಾತ್ಮಕಗಳು

Translation Manual :: Just-in-Time Learning Modules :: Grammar :: Double Negatives

ಒಂದು ಉಪವಾಕ್ಯದಲ್ಲಿ ಎರಡು ಪದಗಳಿದ್ದು ಆ ಎರಡೂ ಪದಗಳು “ಇಲ್ಲ/ನಕಾರ” ಎಂಬ ಅರ್ಥವನ್ನು ವ್ಯಕ್ತಪಡಿಸುವಾಗ ದ್ವಿಗುಣ ನಕಾರಾತ್ಮಕವು ಬರುತ್ತದೆ. ದ್ವಿಗುಣ ನಕಾರಾತ್ಮಕ ಪದಗಳ ಅರ್ಥಗಳು ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಬರುತ್ತವೆ. ಒಂದು ವಾಕ್ಯದಲ್ಲಿ ದ್ವಿಗುಣ ನಕಾರಾತ್ಮಕ ಸೂಚಿಸುವ ಪದಗಳಿದ್ದರೆ ಅವುಗಳನ್ನು ಸರಿಯಾಗಿ, ನಿರ್ದಿಷ್ಟವಾಗಿ ಭಾಷಾಂತರಿಸಲು ಸತ್ಯವೇದದಲ್ಲಿನ ದ್ವಿಗುಣ ನಕಾರಾತ್ಮಕ ಪದಗಳ ಅರ್ಥವೇನು ಮತ್ತು ಈ ವಿಚಾರವನ್ನು ನಿಮ್ಮ ಭಾಷೆಯಲ್ಲಿ ಹೇಗೆ ವ್ಯಕ್ತಪಡಿಸಬೇಕು ಎಂಬುದು ನೀವು ತಿಳಿದುಕೊಳ್ಳಬೇಕು.

ವಿವರಣೆ

ನಕಾರಾತ್ಮಕ ಪದಗಳು “ಇಲ್ಲ” ಎಂಬ ಅರ್ಥವನ್ನು ಸೂಚಿಸುತ್ತವೆ. ಆಂಗ್ಲ ಮತ್ತು ಕನ್ನಡದಲ್ಲಿನ ಉದಾಹರಣೆಗಳು “ಇಲ್ಲ (no),” “ಇಲ್ಲ/ಬಾರದು (not),” “ಯಾವುದು ಇಲ್ಲ (none),” “ಯಾರೂ ಇಲ್ಲ (no one),” “ಏನೂ ಇಲ್ಲ (nothing),” “ಎಲ್ಲೂ ಇಲ್ಲ (nowhere),” “ಎಂದಿಗೂ ಇಲ್ಲ (never),” “ಇದೂ ಅಲ್ಲ (nor),” “ಅದೂ ಅಲ್ಲ (neither),” ಮತ್ತು “ರಹಿತವಾಗಿ (without).” ಕೆಲವು ಪದಗಳಿಗೆ ಪೂರ್ವ ಪ್ರತ್ಯಯಗಳು ಅಥವಾ ಉತ್ತರ ಪ್ರತ್ಯಯಗಳು ಇರುತ್ತವೆ, ಅವು “ಇಲ್ಲ/ನಕಾರ” ಎಂಬರ್ಥವನ್ನು ಕೊಡುತ್ತವೆ, ಆ ಪದಗಳನ್ನು ಈ ಕೆಳಗೆ ಗುರುತಿಸಲಾಗಿದೆ: "ಸಂತೋಷವಿಲ್ಲದ ಮತ್ತು “ಸಾಧ್ಯವಿಲ್ಲದ,” ಮತ್ತು “ಉಪಯೋಗವಿಲ್ಲದ.” ಬೇರೆ ಕೆಲವು ಪದಗಳೂ ಸಹ ನಕಾರಾತ್ಮಕ ಅರ್ಥವುಳ್ಳವುಗಳಾಗಿವೆ, ಅವುಗಳು ಯಾವುವೆಂದರೆ, “ಕೊರತೆ” ಅಥವಾ “ತಿರಸ್ಕರಿಸು,” ಅಥವಾ “ಕಾದಾಡು” ಅಥವಾ “ದುಷ್ಟ.”

ಒಂದು ಉಪವಾಕ್ಯದಲ್ಲಿ ಎರಡು ಪದಗಳಿದ್ದು ಅವೆರಡೂ ನಕಾರಾತ್ಮಕ ಅರ್ಥವನ್ನು ವ್ಯಕ್ತಪಡಿಸುವಾಗ ದ್ವಿಗುಣ ನಕಾರಾತ್ಮಕವು ಬರುತ್ತದೆ.

ನಮಗೆ ಹಕ್ಕು ಇಲ್ಲ ಎಂದು ಅಲ್ಲ… (2 ಥೆಸಲೋನಿಕ 3:9 ULT)

ಇಂತಹ ಉತ್ತಮ ಭರವಸೆಯು ಪ್ರತಿಜ್ಞೆ ರಹಿತವಾದ್ದದು ಅಲ್ಲ… (ಇಬ್ರಿಯರಿಗೆ 7:20 ULT)

ದುಷ್ಟ ಜನರು ಶಿಕ್ಷೆ ಹೊಂದದೇ ಇರುವುದಿಲ್ಲ ಖಂಡಿತ (ಜ್ಞಾನೋಕ್ತಿಗಳು 11:21 ULT)

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ದ್ವಿಗುಣ ನಕಾರಾತ್ಮಕಗಳು ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ಅರ್ಥವುಳ್ಳಗಳಾಗಿರುತ್ತವೆ.

  • ಸ್ಪಾನಿಷ್ ಭಾಷೆಯಂತಹ ಕೆಲವು ಭಾಷೆಗಳಲ್ಲಿ, ದ್ವಿಗುಣ ನಕಾರಾತ್ಮಕಗಳು ನಕಾರಾತ್ಮಕತೆಗೆ ಒತ್ತುಕೊಡುತ್ತವೆ. ಇಲ್ಲಿರುವ ಸ್ಪಾನಿಷ್ ಭಾಷೆಯ ವಾಕ್ಯವು No ví a nadie ಇದರ ಅರ್ಥ “ನಾನು ಯಾರನ್ನೂ ನೋಡಲಿಲ್ಲ (I did not see no one)”. ಈ ವಾಕ್ಯದಲ್ಲಿ ‘no’ ಇಲ್ಲ ಕ್ರಿಯಾಪದದ ಅರ್ಥ ‘ಯಾರೂ ಇಲ್ಲ’ ಎಂಬ ನಕಾರ ಪದಗಳು. ಎರಡು “ನಕಾರ” ಪದ ಇಲ್ಲಿ “ನಾನು ಯಾರನ್ನೂ ನೋಡಲಿಲ್ಲ” ಎಂಬುದನ್ನು ಸೂಚಿಸುತ್ತದೆ.
  • ಕೆಲವು ಭಾಷೆಯಲ್ಲಿ, ಎರಡನೇ “ನಕಾರ” ಪದವು ಮೊದಲನೇ “ನಕಾರ” ಪದವನ್ನು ಹೊಡೆದು ಹಾಕಿ ಸಕಾರಾತ್ಮಕ ವಾಕ್ಯವನ್ನು ರಚಿಸುತ್ತದೆ. “ಅವನು ಬುದ್ಧಿಹೀನನು ಅಲ್ಲ” ಎಂದರೆ “ಅವನು ಬುದ್ಧಿವಂತ” ಎಂದರ್ಥ.
  • ಕೆಲವು ಭಾಷೆಯಲ್ಲಿ ದ್ವಿಗುಣ ನಕಾರಾತ್ಮಕಗಳು ಸಕಾರಾತ್ಮಕ ವಾಕ್ಯಗಳನ್ನು ರಚಿಸುತ್ತವೆ, ಆದರೆ ಇದು ಅಷ್ಟೊಂದು ದೃಢವಾದ ವಾಕ್ಯವಾಗಿ ಇರುವುದಿಲ್ಲ. “ಅವನು ಬುದ್ಧಿಹೀನನು ಅಲ್ಲ” ಎಂದರೆ “ಅವನು ಸ್ವಲ್ಪಮಟ್ಟಿಗೆ ಬುದ್ಧಿವಂತ” ಎಂಬರ್ಥವನ್ನು ಕೊಡುತ್ತದೆ.
  • ಕೆಲವು ಭಾಷೆಗಳಲ್ಲಿ ಉದಾಹರಣೆಗೆ ಸತ್ಯವೇದದಲ್ಲಿನ ಭಾಷೆಗಳಲ್ಲಿ, ದ್ವಿಗುಣ ನಕಾರತ್ಮಕಗಳು ಸಕಾರಾತ್ಮಕ ವಾಕ್ಯಗಳನ್ನು ರಚಿಸುತ್ತವೆ ಮತ್ತು ಅನೇಕವೇಳೆ ವಾಕ್ಯಗಳನ್ನು ದೃಢಪಡಿಸುತ್ತವೆ. “ಅವನು ಬುದ್ಧಿಹೀನನು ಅಲ್ಲ” ಎಂಬುದು “ಅವನು ಬುದ್ಧಿವಂತ” ಅಥವಾ “ಅವನು ತುಂಬಾ ಬುದ್ಧಿವಂತ” ಎಂಬ ಅರ್ಥವನ್ನು ಕೊಡುತ್ತದೆ.

ದ್ವಿಗುಣ ನಕಾರಾತ್ಮಕಗಳುಳ್ಳ ವಾಕ್ಯಗಳನ್ನು ನಿರ್ದಿಷ್ಟವಾಗಿ ಮತ್ತು ಸರಿಯಾಗಿ ನಿಮ್ಮ ಭಾಷೆಯಲ್ಲಿ ಭಾಷಾಂತರ ಮಾಡಲು ಸತ್ಯವೇದದಲ್ಲಿನ ದ್ವಿಗುಣ ನಕಾರಾತ್ಮಕ ಪದಗಳ ಅರ್ಥವನ್ನು ಮತ್ತು ನಿಮ್ಮ ಭಾಷೆಯಲ್ಲಿ ಇದನ್ನು ಹೇಗೆ ವ್ಯಕ್ತಪಡಿಸಬಹುದು ಎಂಬುದನ್ನು ನೀವು ತಿಳಿದುಕೊಳ್ಳಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು

ನಿಷ್ಪ್ರಯೋಜಕರು ಆಗದೇ ಇರುವ ಸಲುವಾಗಿ, (ತೀತ 3:14 ULT)

ಇದರ ಅರ್ಥ “ಪ್ರಯೋಜನವುಳ್ಳವರು ಆಗುವ ಸಲುವಾಗಿ.”

ಆತನ ಮೂಲಕವಾಗಿ ಸಮಸ್ತವೂ ಉಂಟಾಯಿತು ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ. (ಯೋಹಾನ 1:3 ULT)

ಎರಡು ನಕಾರ ಅರ್ಥ ಬರುವ ಪದಗಳನ್ನು ಉಪಯೋಗಿಸಿ ದೇವರ ಮಗನು ಸಮಸ್ತವನ್ನೂ ಸೃಷ್ಟಿಸಿದ ಎಂದು ಯೋಹಾನನು ಒತ್ತಿ ಹೇಳಿದ್ದಾನೆ. ದ್ವಿಗುಣ ನಕಾರಾತ್ಮಕ ಪದಗಳು ಕೇವಲ ಸಕಾರಾತ್ಮಕವಾದ ವಾಕ್ಯವನ್ನು ರಚಿಸುವುದಕ್ಕಿಂತಲೂ ಹೆಚ್ಚಾಗಿ ದೃಢವಾದ ವಾಕ್ಯವನ್ನು ರಚಿಸುತ್ತವೆ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ಎರಡು ನಕಾರ ಪದಗಳು ಸಹಜವಾಗಿ ಬಳಕೆಯಾಗಿ ಸಕಾರಾತ್ಮಕ ವಾಕ್ಯಗಳನ್ನು ರಚಿಸುವುದಾದರೆ ಅದನ್ನೇ ಬಳಸಬಹುದು. ಇಲ್ಲದಿದ್ದರೆ ಈ ಕೆಳಗೆ ಕೊಟ್ಟಿರುವ ಕಾರ್ಯತಂತ್ರಗಳನ್ನು ಬಳಸಬಹುದು:

  1. ಎರಡು ನಕಾರಾತ್ಮಕ ಪದಗಳು ಸತ್ಯವೇದದಲ್ಲಿ ಸಹಜವಾಗಿ ಬಂದು ಬಲವಾದ ಸಕಾರಾತ್ಮಕ ವಿಷಯವನ್ನು ತಿಳಿಸುವುದಾದರೆ ಮತ್ತು ನಿಮ್ಮ ಭಾಷೆಯಲ್ಲಿ ಅದನ್ನು ಉಪಯೋಗಿಸಲು ಸಾಧ್ಯವಾಗದಿದ್ದರೆ ಎರಡೂ ನಕಾರಾತ್ಮಕ ಪದಗಳನ್ನು ಬಿಟ್ಟು ಸಕಾರಾತ್ಮಕ ವಾಕ್ಯ ಮಾಡಬೇಕು.
  2. ಸತ್ಯವೇದದಲ್ಲಿನ ವಾಕ್ಯವನ್ನು ಸತ್ವವುಳ್ಳ ಸಕಾರಾತ್ಮಕ ವಾಕ್ಯವನ್ನು ಮಾಡಲು ಎರಡು ನಕಾರಾತ್ಮಕ ಪದಗಳನ್ನು ಬಳಸಿದರೆ ಮತ್ತು ಇಂತಹ ಪ್ರಯೋಗಗಳು ನಿಮ್ಮ ಭಾಷೆಯಲ್ಲಿ ಆಗದಿದ್ದರೆ ಎರಡೂ ನಕಾರಾತ್ಮಕ ಪದಗಳನ್ನು ತೆಗೆದು ಅದಕ್ಕಿಂತ ಸಮರ್ಥವಾದ ಪದ ಅಥವಾ ನುಡಿಗಟ್ಟನ್ನು ಬಳಸಬಹುದು. ಉದಾಹರಣೆಗೆ: “ತುಂಬಾ” ಅಥವಾ “ಖಂಡಿತವಾಗಿ” ಅಥವಾ “ನಿಶ್ಚಯವಾಗಿ.”

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಸತ್ಯವೇದದಲ್ಲಿ ಬರುವ ಎರಡು ನಕಾರಾತ್ಮಕ ಪದಗಳ ಉದ್ದೇಶ ಸರಳವಾದ ಸಕಾರಾತ್ಮಕ ವಾಕ್ಯ ರಚಿಸುವುದಕ್ಕಾಗಿರುವುದಾದರೆ, ಮತ್ತು ಇಂತಹ ಬಳಕೆ ನಿಮ್ಮ ಭಾಷೆಯಲ್ಲಿ ಇಲ್ಲದಿದ್ದರೆ ಎರಡೂ ನಕಾರಾತ್ಮಕ ಪದಗಳನ್ನು ತೆಗೆದರೆ ಅದು ಸಕಾರಾತ್ಮಕ ವಾಕ್ಯವಾಗುತ್ತದೆ.

ನಮ್ಮ ನಿರ್ಬಲಾವಸ್ಥೆಯಲ್ಲಿ ಅನುತಾಪ ಪಡದ ಮಹಾ ಯಾಜಕನು ನಮಗೆ ಇಲ್ಲ (ಇಬ್ರಿಯರಿಗೆ 4:15 ULT)

“ನಮ್ಮ ನಿರ್ಬಲಾವಸ್ಥೆಯಲ್ಲಿ ಅನುತಾಪ ಪಡಬಲ್ಲ ಮಹಾ ಯಾಜಕನು ನಮಗಿದ್ದಾನೆ.”

ನಿಷ್ಪ್ರಯೋಜಕರು ಆಗದೇ ಇರುವ ಸಲುವಾಗಿ, (ತೀತ 3:14 ULT)

“ಪ್ರಯೋಜನವುಳ್ಳವರು ಆಗುವ ಸಲುವಾಗಿ.”

(2) ಸತ್ಯವೇದದಲ್ಲಿನ ವಾಕ್ಯವನ್ನು ಸತ್ವವುಳ್ಳ ಸಕಾರಾತ್ಮಕ ವಾಕ್ಯವನ್ನು ಮಾಡಲು ಎರಡು ನಕಾರಾತ್ಮಕ ಪದಗಳನ್ನು ಬಳಸಿದರೆ ಮತ್ತು ಇಂತಹ ಪ್ರಯೋಗಗಳು ನಿಮ್ಮ ಭಾಷೆಯಲ್ಲಿ ಆಗದಿದ್ದರೆ ಎರಡೂ ನಕಾರಾತ್ಮಕ ಪದಗಳನ್ನು ತೆಗೆದು ಅದಕ್ಕಿಂತ ಸಮರ್ಥವಾದ ಪದ ಅಥವಾ ನುಡಿಗಟ್ಟನ್ನು ಬಳಸಬಹುದು. ಉದಾಹರಣೆಗೆ: “ತುಂಬಾ” ಅಥವಾ “ಖಂಡಿತವಾಗಿ” ಅಥವಾ “ನಿಶ್ಚಯವಾಗಿ.”

ದುಷ್ಟ ಜನರು ಶಿಕ್ಷೆ ಹೊಂದದೇ ಇರುವುದಿಲ್ಲ ಖಂಡಿತ (ಜ್ಞಾನೋಕ್ತಿಗಳು 11:21 ULT)

“ದುಷ್ಟ ಜನರಿಗೆ ಖಂಡಿತವಾಗಿ ಶಿಕ್ಷೆಯಾಗುವುದು ಎಂದು ತಿಳಿಯಿರಿ”

ಆತನ ಮೂಲಕವಾಗಿ ಸಮಸ್ತವೂ ಉಂಟಾಯಿತು ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ. (ಯೋಹಾನ 1:3 ULT)

“ಸಮಸ್ತವೂ ಆತನಿಂದ ಉಂಟಾಯಿತು. ಉಂಟಾಗಿರುವ ವಸ್ತುಗಳನ್ನೆಲ್ಲಾ ನಿಶ್ಚಯವಾಗಿ ಆತನೇ ಉಂಟುಮಾಡಿದನು”


ಪದಲೋಪ

Translation Manual :: Just-in-Time Learning Modules :: Grammar :: Ellipsis

ವಿವರಣೆ

ಮಾತನಾಡುವವನು ಅಥವಾ ಬರಹಗಾರನು ವಾಕ್ಯದಲ್ಲಿ ಒಂದು ಅಥವಾ ಹೆಚ್ಚು ಪದಗಳನ್ನು ಬಿಟ್ಟು ಹೋಗುತ್ತಾನೆ, ಅದು ಸಾಮಾನ್ಯವಾಗಿ ಪೂರ್ಣ ವಾಕ್ಯವಾಗಿರುತ್ತದೆ ಹಾಗೆ ಘಟಿಸುವುದೇ ಪದಲೋಪವಾಗಿದೆ. ಕೇಳುಗರು ಅಥವಾ ಓದುಗರು ಅದರಲ್ಲಿರುವ ಪದಗಳನ್ನು ಕೇಳುವಾಗ ಅಥವಾ ಓದುವಾಗ ಬಿಟ್ಟು ಹೋದ ಪದವನ್ನು ತಮ್ಮ ಮನಸ್ಸಿನಲ್ಲಿ ತುಂಬಿಸಿ ಅದನ್ನು ಅರ್ಥ ಮಾಡಿಕೊಳ್ಳುವರು ಎಂದು ಮಾತನಾಡುವವನು ಅಥವಾ ಬರಹಗಾರನು ತಿಳಿದುಕೊಂಡು ಅವನು ಹಾಗೆ ಮಾಡುತ್ತಾನೆ. ಉದಾಹರಣೆ:

ದುಷ್ಟರು ನ್ಯಾಯವಿಚಾರಣೆಯಲ್ಲೂ, ಪಾಪತ್ಮರು ನೀತಿವಂತರ ಸಭೆಯಲ್ಲೂ ನಿಲ್ಲುವುದಿಲ್ಲ." (ಕೀರ್ತನೆ 1:5)

ಈ ವಾಕ್ಯದಲ್ಲಿ ಪದಲೋಪವಾಗಿದೆ ಏಕೆಂದರೆ “ದುಷ್ಟರು ನ್ಯಾಯವಿಚಾರಣೆಯಲ್ಲೂ” ಎಂಬ ವಾಕ್ಯಭಾಗವು ಅಪೂರ್ಣವಾಗಿದೆ. ದುಷ್ಟರು ನ್ಯಾಯವಿಚಾರಣೆಯಲ್ಲಿ ಏನನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ನಂತರದ ಉಪವಾಕ್ಯದ ಸನ್ನಿವೇಶದಿಂದ ಕ್ರಿಯೆಯನ್ನು ತೆಗೆದುಕೊಂಡು ಅದನ್ನು ಅದರಲ್ಲಿ ತುಂಬಿಸಿ ಶ್ರೋತೃ ಅದನ್ನು ಅರ್ಥಮಾಡಿಕೊಳ್ಳಬಲ್ಲ ಎಂದು ಮಾತನಾಡುವವನು ಭಾವಿಸುತ್ತಾನೆ. ಕ್ರಿಯೆಯನ್ನು ತುಂಬಿಸಿರುವ ಸಂಪೂರ್ಣ ವಾಕ್ಯವು ಹೀಗಿರುತ್ತದೆ:

…ದುಷ್ಟರು ನ್ಯಾಯವಿಚಾರಣೆಯಲ್ಲಿ ನಿಲ್ಲುವುದಿಲ್ಲ.

ಎರಡು ರೀತಿಯ ಪದಲೋಪಗಳಿವೆ.

  1. ಸನ್ನಿವೇಶದಿಂದ ಬಿಟ್ಟುಬಿಟ್ಟ ಪದ ಅಥವಾ ಪದಗಳನ್ನು ಓದುಗನು ಪೂರೈಸಬೇಕಾದಾಗ ಸಾಪೇಕ್ಷ ಪದಲೋಪ ಸಂಭವಿಸುತ್ತದೆ. ಸಾಮಾನ್ಯವಾಗಿ ಮೇಲಿನ ಉದಾಹರಣೆಯಲ್ಲಿರುವಂತೆ ಈ ಪದವು ಹಿಂದಿನ ವಾಕ್ಯದಲ್ಲಿರುತ್ತದೆ.
  2. ಬಿಟ್ಟುಬಿಟ್ಟ ಪದ ಅಥವಾ ಪದಗಳು ಸನ್ನಿವೇಶದಲ್ಲಿ ಇಲ್ಲದಿದ್ದಾಗ ಸಂಪೂರ್ಣ ಪದಲೋಪ ಸಂಭವಿಸುತ್ತದೆ, ಆದರೆ ಈ ಸಾಮಾನ್ಯ ಬಳಕೆಯಿಂದ ಅಥವಾ ಪರಿಸ್ಥಿತಿಯ ಸ್ವರೂಪದಿಂದ ಓದುಗರು ಕಾಣೆಯಾದದ್ದನ್ನು ಪೂರೈಸುವ ನಿರೀಕ್ಷೆಯಿರುವ ಭಾಷೆಯಲ್ಲಿ ನುಡಿಗಟ್ಟುಗಳು ಸಾಕಷ್ಟು ಸಾಮಾನ್ಯವಾಗಿದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಓದುಗರು ಅಪೂರ್ಣವಾಕ್ಯಗಳನ್ನು ಅಥವಾ ನುಡಿಗಟ್ಟುಗಳನ್ನು ನೋಡುವಾಗ ಬರಹಗಾರನು ಅವರು ಭರ್ತಿ ಮಾಡಬೇಕೆಂದು ಬಯಸುವ ಬಿಟ್ಟುಹೋದ ಮಾಹಿತಿಯನ್ನು ತಿಳಿದುಕೊಳ್ಳದಿರಬಹುದು. ಅಥವಾ ಓದುಗರು ಮಾಹಿತಿಯು ಕಾಣೆಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು, ಆದರೆ ಮೂಲ ಓದುಗರು ತಿಳಿದುಕೊಂಡ ಹಾಗೆ ಸತ್ಯವೇದದ ಮೂಲ ಭಾಷೆ, ಸಂಸ್ಕೃತಿ ಅಥವಾ ಪರಿಸ್ಥಿತಿ ತಿಳಿದಿಲ್ಲದ ಕಾರಣ ಯಾವ ಮಾಹಿತಿ ಕಾಣೆಯಾಗಿದೆ ಎಂದು ಅವರಿಗೆ ತಿಳಿಯದಿರಬಹುದು. ಈ ಸಂದರ್ಭದಲ್ಲಿ, ಅವರು ತಪ್ಪು ಮಾಹಿತಿಯನ್ನು ಭರ್ತಿ ಮಾಡಬಹುದು. ಅಥವಾ ಓದುಗರು ತಮ್ಮ ಭಾಷೆಯಲ್ಲಿ ಪದಲೋಪವನ್ನು ಒಂದೇ ರೀತಿಯಲ್ಲಿ ಬಳಸದಿದ್ದರೆ ಪದಲೋಪವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು

ಸಾಪೇಕ್ಷ ಪದಲೋಪ

ಲೆಬನೋನ್ ಅನ್ನು ಕರುವಿನಂತೆ ಕುಪ್ಪಳಿಸುವಂತೆಯೂ ಮತ್ತು ಸಿರ್ಯೋನ್‌ ಅನ್ನು ಎತ್ತಿನ ಮರಿಯಂತೆಯೂ ಮಾಡುತ್ತಾನೆ (ಕೀರ್ತನೆ 29:6 ULT)

ಬರಹಗಾರನು ಕಡಿಮೆ ಪದಗಳನ್ನು ಬಳಸಿ ಒಳ್ಳೆ ಪದ್ಯ ಬರೆಯಲು ಇಚ್ಛಿಸುತ್ತಾನೆ. ಮಾಹಿತಿಯನ್ನು ಭರ್ತಿಮಾಡಿರುವ ಪೂರ್ಣವಾದ ವಾಕ್ಯವು ಹೀಗಿರುತ್ತದೆ.

ಆತನು ಲೆಬನೋನ್ ಅನ್ನು ಕರುವಿನಂತೆ ಕುಪ್ಪಳಿಸುವಂತೆ ಮಾಡುತ್ತಾನೆ ಮತ್ತು ಆತನು ಸಿರ್ಯೋನ್‌ ಅನ್ನು ಎತ್ತಿನ ಮರಿಯಂತೆ ಕುಪ್ಪಳಿಸುವಂತೆ ಮಾಡುತ್ತಾನೆ.

ಆದರೆ ನಾವು ತೊಂದರೆಗೀಡಾಗಿದ್ದರೆ ಅದು, ನಿಮ್ಮ ಆದರಣೆ ಮತ್ತು ರಕ್ಷಣೆಗಾಗಿ; ನಾವು ಆದರಣೆ ಹೊಂದಿದ್ದರೆ ಅದು, ನಿಮ್ಮ ಆದರಣೆಗಾಗಿ,… (2 ಕೊರಿಂಥ 1:6)

ಈ ವಾಕ್ಯಗಳ ಎರಡನೇ ಭಾಗಗಳಲ್ಲಿ ಓದುಗರು ಅರ್ಥಮಾಡಿಕೊಳ್ಳಬೇಕಾದ ಮಾಹಿತಿಯನ್ನು ಮೊದಲ ಭಾಗಗಳಿಂದ ಭರ್ತಿ ಮಾಡಬಹುದು:

ಆದರೆ ನಾವು ತೊಂದರೆಗೀಡಾಗಿದ್ದರೆ, ನಿಮ್ಮ ಆದರಣೆ ಮತ್ತು ರಕ್ಷಣೆಗಾಗಿ ನಾವು ತೊಂದರೆಗೀಡಾಗಿದ್ದೇವೆ; ನಾವು ಆದರಣೆ ಹೊಂದಿದ್ದರೆ, ನಿಮ್ಮ ಆದರಣೆಗಾಗಿ ನಾವು ಆದರಣೆ ಹೊಂದಿದ್ದೇವೆ,…

ಸಂಪೂರ್ಣ ಪದಲೋಪ

…ಕುರುಡನಾದವನು ಹತ್ತಿರ ಬಂದಾಗ ಯೇಸು ಅವನನ್ನು, “ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತಿ?” ಎಂದು ಕೇಳಿದನು. ಅದಕ್ಕೆ ಅವನು “ಕರ್ತನೇ, ನನಗೆ ಕಣ್ಣಿನ ದೃಷ್ಟಿ ಬರಬೇಕು” ಎಂದು ಹೇಳಿದನು. (ಲೂಕ 18:40-41 ULT)

ಆ ಕುರುಡನು ಅಪೂರ್ಣವಾಕ್ಯಗಳ ಮೂಲಕ ಉತ್ತರಿಸುತ್ತಾನೆ ಏಕೆಂದರೆ ಅವನು ಯೇಸುವಿನ ಮುಂದೆ ವಿನಯದಿಂದ ಇದ್ದು ಸ್ವಸ್ಥತೆಯನ್ನು ನೇರವಾಗಿ ಕೋರಲು ಬಯಸಲಿಲ್ಲ. ಯೇಸು ಅವನನ್ನು ಗುಣಪಡಿಸಿದರೆ ಮಾತ್ರವೇ ಅವನಿಗೆ ಕಣ್ಣಿನ ದೃಷ್ಟಿ ಸಿಗುವುದು ಎಂಬುದನ್ನು ಯೇಸು ಅರ್ಥಮಾಡಿಕೊಳ್ಳುವನು ಎಂಬುದು ಅವನಿಗೆ ತಿಳಿದಿತ್ತು. ಪೂರ್ಣವಾದ ವಾಕ್ಯವು ಹೀಗಿರುತ್ತದೆ:

“ಕರ್ತನೇ, ನನ್ನ ದೃಷ್ಟಿಯನ್ನು ಪಡೆದುಕೊಳ್ಳುವಂತೆ ನೀನು ನನ್ನನ್ನು ಗುಣಪಡಿಸಬೇಕೆಂದು ನಾನು ಬಯಸುತ್ತೇನೆ.”

ತೀತನಿ‌ಗೆ… ತಂದೆಯಾದ ದೇವರ ಮತ್ತು ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ ಕಡೆಯಿಂದ ಕೃಪೆ ಮತ್ತು ಶಾಂತಿ. (ತೀತ 1:4 ULT)

ಆಶೀರ್ವಾದ ಅಥವಾ ಹಾರೈಕೆಯ ಬಯಸುವ ಈ ಸಾಮಾನ್ಯ ರೀತಿಯನ್ನು ಓದುಗನು ಅರಿತುಕೊಳ್ಳುತ್ತಾನೆ ಎಂದು ಬರಹಗಾರನು ಊಹಿಸಿಕೊಳ್ಳುತ್ತಾನೆ, ಆದ್ದರಿಂದ ಅವನು ಪೂರ್ಣ ವಾಕ್ಯವನ್ನು ಸೇರಿಸುವ ಅಗತ್ಯವಿಲ್ಲ, ಪೂರ್ಣವಾದ ವಾಕ್ಯ ಹೀಗಿರುತ್ತದೆ:

ತೀತನಿ‌ಗೆ… ತಂದೆಯಾದ ದೇವರ ಮತ್ತು ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ ಕಡೆಯಿಂದ ಕೃಪೆ ಮತ್ತು ಶಾಂತಿ ದೊರಕಲಿ.

ಭಾಷಾಂತರದ ಕಾರ್ಯತಂತ್ರಗಳು

ಈ ಪದಲೋಪಗಳು ಸಹಜವಾಗಿ ಸರಿಯಾದ ಅರ್ಥಕೊಡುವ ಪದಗಳಾಗಿ ನಿಮ್ಮ ಭಾಷೆಯಲ್ಲಿ ಬಳಕೆಯಾಗುವಂತಿದ್ದರೆ ಅದನ್ನು ಬಳಸಿಕೊಳ್ಳಿ ಇಲ್ಲದಿದ್ದರೆ, ಇಲ್ಲೊಂದು ಆಯ್ಕೆಯಿದೆ:

  1. ಅಪೂರ್ಣವಾದ ನುಡಿಗಟ್ಟು ಅಥವಾ ವಾಕ್ಯಗಳಲ್ಲಿ ಬಿಟ್ಟುಹೋಗಿರುವ ಪದಗಳನ್ನು ಸೇರಿಸುವುದು.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಅಪೂರ್ಣವಾದ ನುಡಿಗಟ್ಟು ಅಥವಾ ವಾಕ್ಯಗಳಲ್ಲಿ ಬಿಟ್ಟುಹೋಗಿರುವ ಪದಗಳನ್ನು ಸೇರಿಸುವುದು.

ದುಷ್ಟರು ನ್ಯಾಯವಿಚಾರಣೆಯಲ್ಲೂ, ಪಾಪತ್ಮರು ನೀತಿವಂತರ ಸಭೆಯಲ್ಲೂ ನಿಲ್ಲುವುದಿಲ್ಲ. (ಕೀರ್ತನೆ1:5)

ದುಷ್ಟರು ನ್ಯಾಯವಿಚಾರಣೆಯಲ್ಲಿ ನಿಲ್ಲುವುದಿಲ್ಲ ಮತ್ತು ಪಾಪಾತ್ಮರು ನೀತಿವಂತರ ಸಭೆಯಲ್ಲಿ ನಿಲ್ಲಲು ಸಾಧ್ಯವಿಲ್ಲ.

…ಕುರುಡನಾದವನು ಹತ್ತಿರ ಬಂದಾಗ ಯೇಸು ಅವನನ್ನು, “ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತಿ?” ಎಂದು ಕೇಳಿದನು. ಅದಕ್ಕೆ ಅವನು “ಕರ್ತನೇ, ನನಗೆ ಕಣ್ಣಿನ ದೃಷ್ಟಿ ಬರಬೇಕು” ಎಂದು ಹೇಳಿದನು. (ಲೂಕ 18:40-41)

… ಕುರುಡನು ಯೇಸುವಿನ ಹತ್ತಿರ ಬಂದಾಗ ಯೇಸು ಅವನನ್ನು. "ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತಿ? ಎಂದು ಕೇಳಿದನು. ಅದಕ್ಕೆ ಅವನು,"ಕರ್ತನೇ, ನೀನು ನನ್ನನ್ನು ಸ್ವಸ್ಥಮಾಡು ಇದರಿಂದ ನನಗೆ ಕಣ್ಣಿನ ದೃಷ್ಟಿ ಬರಬಹುದು ಎಂದು ಹೇಳಿದನು.

ಲೆಬನೋನ್ ಅನ್ನು ಕರುವಿನಂತೆ ಕುಪ್ಪಳಿಸುವಂತೆಯೂ ಮತ್ತು ಸಿರ್ಯೋನ್‌ ಅನ್ನು ಎತ್ತಿನ ಮರಿಯಂತೆಯೂ ಮಾಡುತ್ತಾನೆ (ಕೀರ್ತನೆ 29:6)

ಆತನು ಲೆಬನೋನ್ ಅನ್ನು ಕರುವಿನಂತೆ ಕುಪ್ಪಳಿಸುವಂತೆ ಮಾಡುತ್ತಾನೆ ಮತ್ತು ಆತನು ಸಿರ್ಯೋನ್‌ ಅನ್ನು ಎತ್ತಿನ ಮರಿಯಂತೆ ಕುಪ್ಪಳಿಸುವಂತೆ ಮಾಡುತ್ತಾನೆ.


"You" - " ನೀನು " – ವಿವಿಧ ರೂಪಗಳು.

Translation Manual :: Just-in-Time Learning Modules :: Grammar :: Forms of You

ಏಕವಚನ, ದ್ವಿವಿಧ, (ಉಭಯ, ಬಹುವಚನ)

ಕೆಲವು ಭಾಷೆಯಲ್ಲಿ “you”/ “ನೀನು” ಎಂಬ ಪದಕ್ಕೆ ಒಂದಕ್ಕಿಂತ ಹೆಚ್ಚು ಪದಗಳನ್ನು ಬಳಸುತ್ತಾರೆ, ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಎಂದು ಹೇಳುವಾಗಲೂ ಈ ಪದಗಳನ್ನು ಬಳಸುತ್ತಾರೆ.

ಏಕವಚನ ಪದವು ಒಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಹೇಳಿದರೆ, “ಬಹುವಚನ” ಪದವು ಒಬ್ಬರಿಗಿಂತ ಹೆಚ್ಚು ಜನರನ್ನು ಸೂಚಿಸುತ್ತಾರೆ.

ಕೆಲವು ಭಾಷೆಯಲ್ಲಿ ದ್ವಿವಿಧ ಪದಗಳು ಇವೆ, ಇವು ಇಬ್ಬರು ವ್ಯಕ್ತಿಗಳ ಮತ್ತು ಕೆಲವೊಮ್ಮೆ ಮೂರು ಅಥವಾ ನಾಲ್ಕು ಜನರನ್ನು ಉದ್ದೇಶಿಸಿ ಹೇಳುವಾಗ ಬಳಕೆಯಾಗುತ್ತವೆ. ನೀವು ಇಲ್ಲಿರುವ ಲಿಂಕ್ ಬಳಸಿ ವಿಡಿಯೋ ನೋಡಿದರೆ ಇದು ಸ್ಪಷ್ಟವಾಗುತ್ತದೆ http://ufw.io/figs_younum.

ಕೆಲವೊಮ್ಮೆ ಸತ್ಯವೇದದಲ್ಲಿ ಮಾತನಾಡುವ ವ್ಯಕ್ತಿ "ಏಕವಚನದ ಪದವನ್ನು” ಅಂದರೆ “you” “ನೀನು” ಉಪಯೋಗಿಸುತ್ತಿದ್ದರೂ ಅವನುಒಂದು ಗುಂಪನ್ನು ಉದ್ದೇಶಿಸಿ ಮಾತನಾಡುತ್ತಿರುತ್ತಾನೆ.

ಔಪಚಾರಿಕ ಮತ್ತು ಅನೌಪಚಾರಿಕ.

ಕೆಲವು ಭಾಷೆಯಲ್ಲಿ “ನೀವು” ಎಂಬ ಪದ ವಿವಿಧ ರೂಪಗಳನ್ನು ಹೊಂದಿದ್ದು ಮಾತನಾಡುವ ವ್ಯಕ್ತಿಗೂ ಮತ್ತು ಅವನು ಯಾರೊಂದಿಗೆ ಮಾತನಾಡುತ್ತಿದ್ದಾನೋ ಅವರಿಬ್ಬರ ಸಂಬಂಧವನ್ನು ಆಧರಿಸಿ ಇರುತ್ತದೆ. ಜನರು ತಮಗಿಂತ ವಯಸ್ಸಾದವರೊಂದಿಗೆ ಮಾತನಾಡುವಾಗ ಔಪಚಾರಿಕವಾಗಿ “you” “ನೀವು” ಎಂಬ ಪದವನ್ನು ಬಳಸುತ್ತಾರೆ. ಹಾಗೆಯೇ ಅವರಿಗಿಂತ ಅಧಿಕಾರದಲ್ಲಿ ಹೆಚ್ಚಿನವರಾದರೂ, ಅವರಿಗೆ ಪರಿಚಯವಿಲ್ಲದವರಾಗಿದ್ದರೂ “ನೀವು” ಪದವನ್ನೇ ಬಳಸುತ್ತಾರೆ. ಜನರು ಕೆಲವೊಮ್ಮೆ ಅನೌಪಚಾರಿಕ ರೂಪವನ್ನು ತಮಗಿಂತ ವಯಸ್ಸಿನಲ್ಲಿ ದೊಡ್ಡವರಲ್ಲದಿದ್ದರೂ, ಅಧಿಕಾರದಲ್ಲಿ ಹಿರಿತನವಿಲ್ಲದಿದ್ದರೂ ತಮ್ಮ ಹತ್ತಿರದ ಸ್ನೇಹಿತರನ್ನು ಮತ್ತು ಕುಟುಂಬದ ಸದಸ್ಯರನ್ನು ಕುರಿತು ಮಾತನಾಡುವಾಗ ಬಳಸುತ್ತಾರೆ.

ನೀವು ಈ ವೀಡಿಯೋವನ್ನು ನೋಡಿ http://ufw.io/figs_youform.

ನೀವು ಈ ಭಾಗವನ್ನು ಭಾಷಾಂತರಿಸುವಾಗ ಇದಕ್ಕೆ ಸಂಬಂಧಿಸಿದ ಪಠ್ಯ ಓದಿ ತಿಳಿಯಿರಿ


'You' – ರೂಪಗಳು – ದ್ವಿವಿಧ, ಬಹುವಚನ.

Translation Manual :: Just-in-Time Learning Modules :: Grammar :: Forms of 'You' - Dual/Plural

###ವಿವರಣೆಗಳು.

ಕೆಲವು ಭಾಷೆಯಲ್ಲಿ ಏಕವಚನ ನೀನು, ಪದ ಇದೆ. ಇದು ಯಾವಾಗ ವ್ಯಕ್ತಿಯನ್ನು ಕುರಿತು ಹೇಳುತ್ತದೆ ಮತ್ತು ಯಾವಾಗ ಬಹುವಚನ ರೂಪದ “ನೀವು” ಪದವನ್ನು ಕುರಿತು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಬಹುವಚನ ರೂಪದ “ನೀವು” ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳ ಬಗ್ಗೆಯೂ ಹೇಳಲಾಗುತ್ತದೆ.

ಕೆಲವು ಭಾಷೆಯಲ್ಲಿ “you” ನೀನು / ನೀವು ಎಂಬ ಪದಕ್ಕೆ ಒಂದೇ ಪದ ಇದ್ದು ದ್ವಿವಿಧ ದಲ್ಲಿ ಬಳಸಿಕೊಂಡು ಇಬ್ಬರು ವ್ಯಕ್ತಿಗಳಿಗೆ ಈ ಪದವನ್ನು ಬಳಸುತ್ತಾರೆ. ಭಾಷಾಂತರಗಾರರು ಇಂತಹ ಭಾಷೆಗಳಲ್ಲಿ ಯಾವುದಾದರೂ ಒಂದು ಭಾಷೆಯನ್ನು ಮಾತನಾಡುತ್ತಿದ್ದರೆ ಅವರು ತಮ್ಮ ಭಾಷೆಯಲ್ಲಿ ಸೂಕ್ತ ಸಮಯ, ಸನ್ನಿವೇಶದಲ್ಲಿ ಯಾವತರದ “you” ನೀನು / ನೀವು ಪದಬಳಸಬೇಕು ಎಂಬುದನ್ನು ತಿಳಿದಿರಬೇಕು.

ಬೇರೆ ಭಾಷೆಗಳು ಉದಾಹರಣೆಗೆ ಇಂಗ್ಲೀಷ್ ಭಾಷೆಯಲ್ಲಿ ಒಂದೇ ರೀತಿಯ “you” ರೂಪದ ಪದವನ್ನು ಬಳಸುತ್ತಾರೆ. ಅದು ಎಷ್ಟೇ ಜನರನ್ನು ಉದ್ದೇಶಿಸಿ ಹೇಳುವುದಿದ್ದರೂ ಒಂದೇ ಪದಬಳಕೆ ಮಾಡುತ್ತಾರೆ. ಸತ್ಯವೇದವನ್ನು ಮೊದಲು ಹಿಬ್ರೂ, ಅರಾಮಿಕ್,ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲ್ಪಟ್ಟಿತು. ಈ ಭಾಷೆಗಳಲ್ಲಿ ಏಕವಚನ ರೂಪದ ಪದ “ನೀನು” ಮತ್ತು “ಬಹುವಚನ” ರೂಪದ ಪದ ನೀವು “ಬಳಕೆಯಲ್ಲಿದೆ.”

ನಾವು ಈ ಭಾಷೆಗಳಲ್ಲಿ ಸತ್ಯವೇದವನ್ನು ಓದುವಾಗ ಇದರಲ್ಲಿ ಬರುವ ಸರ್ವನಾಮಗಳು ಮತ್ತು ಕ್ರಿಯಾಪದಗಳು ನಮಗೆ ಇವು ಒಬ್ಬವ್ಯಕ್ತಿಯನ್ನು ಕುರಿತು ಹೇಳುತ್ತದೋ ಇಲ್ಲವೇ ಇಬ್ಬರು ವ್ಯಕ್ತಿಗಳನ್ನು ಕುರಿತು ಹೇಳುತ್ತದೋ ಎಂಬುದನ್ನು ತಿಳಿಸುತ್ತದೆ. ಆದರೂ ಇಲ್ಲಿ ಅದು ಇಬ್ಬರು ವ್ಯಕ್ತಿಗಳ ಬಗ್ಗೆ ಹೇಳುತ್ತಿದೆಯೋ ಅಥವಾ ಇಬ್ಬರಿಗಿಂತ ಹೆಚ್ಚು ಜನರನ್ನು ಕುರಿತು ಹೇಳುತ್ತಿದೆಯೋ ಎಂಬುದು ತಿಳಿಯುವುದಿಲ್ಲ. ಸರ್ವನಾಮಗಳನ್ನು ಬಳಸಿರುವ “you” ಎಂಬ ಪದ ಎಷ್ಟುಜನರನ್ನು ಕುರಿತು ಹೇಳುತ್ತಿದೆ ಎಂದು ತೋರಿಸದಿದ್ದರೆ ನಾವು ವಾಕ್ಯಭಾಗವನ್ನು ಓದಿ ಅಲ್ಲಿ ಎಷ್ಟು ಜನರೊಂದಿಗೆ ಮಾತನಾಡುತ್ತಿದ್ದಾನೆ (ಮಾತನಾಡುತ್ತಿರುವವನು) ಎಂದು ತಿಳಿದುಕೊಳ್ಳಬೇಕು.

ಕಾರಣ ಇದೊಂದು ಭಾಷಾಂತರ ಪ್ರಕರಣ.

  • ಏಕವಚನ, ಬಹುವಚನ ಮತ್ತು ದ್ವಿವಿಧ ರೂಪದ “you” ಗಳು ಇದ್ದರೆ ಆ ಭಾಷೆಯನ್ನು ಮಾತನಾಡುತ್ತಿರುವ ಭಾಷಾಂತರಗಾರರು, ಮಾತನಾಡುತ್ತಿರುವ ವ್ಯಕ್ತಿ ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೆ ಎಂಬುದನ್ನು ತಿಳಿದುಕೊಂಡರೆ ಸೂಕ್ತವಾದ “you” ಪದವನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಬಳಸಬಹುದು.
  • ಅನೇಕ ಭಾಷೆಯಲ್ಲಿ ವಿವಿಧ ರೀತಿಯ ಕ್ರಿಯಾಪದಗಳು ವ್ಯಕ್ತಿ ಏಕವಚನ ರೂಪದಲ್ಲಿ ಇದ್ದನೋ ಬಹುವಚನ ರೂಪದಲ್ಲಿ ಇದ್ದನೋ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. “you” ಪದಕ್ಕೆ ಸರ್ವನಾಮ ಅರ್ಥ ಇಲ್ಲದಿದ್ದರೂ ಈ ಭಾಷೆಯ ಭಾಷಾಂತರಗಾರರು ಇಲ್ಲಿ ಒಬ್ಬ ವ್ಯಕ್ತಿಬಗ್ಗೆ ಅಥವಾ ಒಬ್ಬರಿಗಿಂತ ಇಬ್ಬರು ವ್ಯಕ್ತಿಗಳ ಬಗ್ಗೆ ಮಾತನಾಡುತ್ತಿದ್ದಾರೆಯೇ ಎಂದು ನೋಡಿ ಭಾಷಾಂತರಿಸಬೇಕು ಇಲ್ಲಿ ಉಪಯೋಗಿಸಲಾಗಿರುವ “ನೀನು”. ಎಂಬ ಪದ ಒಬ್ಬ ವ್ಯಕ್ತಿಗೋ ಅಥವಾ ಒಬ್ಬರಿಗಿಂತ ಹೆಚ್ಚು ಜನರಿಗೆ ಅನ್ವಹಿಸುವುದೋ ಎಂದು ಅದರ ಸಂದರ್ಭ ಮೇಲೆ ಆಧಾರವಾಗಿರುತ್ತದೆ.

ಅದೇ ವಾಕ್ಯದಲ್ಲಿ ಇನ್ನೊಂದು ಸರ್ವನಾಮವಿದ್ದರೆ ಮಾತನಾಡುತ್ತಿರುವನು ಎಷ್ಟುಜನರೊಂದಿಗೆ ಮಾತನಾಡುತ್ತಿದ್ದಾನೆ ಎಂಬುದನ್ನು ದೃಢಪಡಿಸುತ್ತದೆ.

ಸತ್ಯವೇದದಲ್ಲಿನ ಉದಾಹರಣೆಗಳು.

ಯಾಕೋಬ ಮತ್ತು ಯೋಹಾನರು , ಆತನ ಬಳಿಗೆ ಬಂದು ಆತನಿಗೆ, "ಗುರುವೇ ನಾವು ಒಂದು ಮಾತು ಕೇಳುತ್ತೇವೆ, ನಮಗೋಸ್ಕರ ನಡೆಸಿಕೊಡಬೇಕು” ಎಂದು ಕೇಳಿದರು. ಆತನ [ಯೇಸು] ಅವರನ್ನು ನಿಮಗೇನು ನಡೆಸಿಕೊಡಬೇಕು?ಎಂದು ಕೇಳಿದನು " (ಮಾರ್ಕ್ 10:35-36 ULB)

ಯೇಸು ಆ ಇಬ್ಬರನ್ನು,ಯಾಕೋಬ ಮತ್ತು ಯೋಹಾನರನ್ನು ಕುರಿತು ಅವರಿಗೆ ಏನು ಮಾಡ ಬೇಕೆಂದು ಕೇಳಿದನು. ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ದ್ವಿವಿಧ “you,”/ ನೀನು /ನೀವು ಇದ್ದರೆ ಬಳಸಿಕೊಳ್ಳಿ. ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ದ್ವಿವಿಧ ಇಲ್ಲದಿದ್ದರೆ ಬಹುವಚನರೂಪವನ್ನು ಉಪಯೋಗಿಸುವುದು ಸೂಕ್ತ.

…ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು “ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ” ಎಂದನು. ಹಳ್ಳಿಯನ್ನು ನೀವುಪ್ರವೇಶಿಸುತ್ತಿರುವಾಗಲೇ ನೀವು ಅಲ್ಲಿ ಕಟ್ಟಿರುವ ಒಂದು ಕತ್ತೆ ಮರಿಯನ್ನು ಕಾಣುವಿರಿ, ಇದುವರೆಗೆ ಅದರ ಮೇಲೆ ಯಾರೂ ಹತ್ತಿಲ್ಲ " ಅದನ್ನು ಬಿಚ್ಚಿಹಿಡಿದುಕೊಂಡು ನನ್ನ ಬಳಿಗೆ ಬನ್ನಿರಿ (ಮಾರ್ಕ್ 11:1-2 ULB)

ಈ ವಾಕ್ಯಭಾಗವು ಇಬ್ಬರೊಂದಿಗೆ ಮಾತನಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಿದೆ. ನೀವು ಭಾಷಾಂತರ ಮಾಡುತ್ತಿರುವ ಭಾಷೆ ದ್ವಿವಿಧ ರೂಪದ “you” ಆಗಿದ್ದರೆ ಅದನ್ನು ಉಪಯೋಗಿಸಕೊಳ್ಳಿ. ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ** ದ್ವಿವಿಧ** “you,”/ ನೀನು /ನೀವು ಇಲ್ಲದಿದ್ದರೆ ಅಲ್ಲಿ ಬಹುವಚನವನ್ನು ಉಪಯೋಗಿಸುವುದು ಸಮಂಜಸ.

ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ಸೇವೆ ಮಾಡುವ ದಾಸನಾದ ಯಾಕೋಬನು ಅನ್ಯದೇಶದಲ್ಲಿ ಚದುರಿರುವ ಹನ್ನೆರಡು ಕುಲದವರಿಗೆ ಶುಭವಾಗಲಿ ನನ್ನ ಸಹೋದರರೇ ನಿಮ್ಮನಂಬಿಕೆಗೆ ಆಗುವ ಪರಿಶೋಧನೆಯುತಾಳ್ಮೆಯನ್ನು ಉಂಟುಮಾಡುತ್ತದೆಂದು ತಿಳಿದು ನಾನಾ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಆನಂದಕರವಾದುದೆಂದು ಎಣಿಸಿರಿ. (ಯಾಕೋಬ 1:1-3 ULB)

ಯಾಕೋಬನು ಈ ಪತ್ರವನ್ನುಅನೇಕ ಜನರನ್ನು ಉದ್ದೇಶಿಸಿ ಬರೆದನು ಆದುದರಿಂದ “you,” ನೀನು /ನೀವು ಪದ ಅನೇಕ ಜನರಿಗೆ ಸಂಬಂಧಿಸಿದೆ. ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಬಹುವಚನ ರೂಪದ "you,"ಇದ್ದರೆ ಅದನ್ನು ಬಳಸುವುದು ಅತ್ಯುತ್ತಮವಾಗಿರುತ್ತದೆ.

"you,"ಎಂಬ ಪದ ಎಷ್ಟು ಜನರಿಗೆ ಅನ್ವಯಿಸುತ್ತದೆ ಎಂಬುದನ್ನು ಕಂಡುಕೊಳ್ಳಲು ಬೇಕಾದ ಕೌಶಲ್ಯಗಳು.

  1. ಟಿಪ್ಪಣಿಯನ್ನು ನೊಡಿ “you,” ಎಂಬ ಪದ ಒಬ್ಬ ವ್ಯಕ್ತಿ ಅಥವಾ ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳಿಗೆ ಅನ್ವಯಿಸುತ್ತದೆಯೇ ಎಂದು ತಿಳಿಯಿರಿ.
  2. UDBಯನ್ನು ಪರಿಶೀಲಿಸಿ ಅದರಲ್ಲಿ “you,” ಪದ ಒಬ್ಬ ವ್ಯಕ್ತಿ ಅಥವಾ ಒಬ್ಬರಿಗಿಂತ ಹೆಚ್ಚು ವ್ಯಕ್ತಿಯ ಬಗ್ಗೆ ಹೇಳುತ್ತಿದೆಯೇ ತಿಳಿಯಿರಿ.
  3. ನಿಮ್ಮಲ್ಲಿರುವ ಸತ್ಯವೇದದ ಭಾಷೆಯಲ್ಲಿ ಏಕವಚನ “you,” ಮತ್ತು ಬಹುವಚನ “you,” ಗಳ ನಡುವೆ ವ್ಯತ್ಯಾಸ ತಿಳಿಸುತ್ತಿದೆಯೇ ? ಮತ್ತು ಆ ಸತ್ಯವೇದದಲ್ಲಿ ಯಾವ ರೀತಿ “you,” ರೂಪದ ಪದ ಬಳಕೆಯ ವಾಕ್ಯಗಳಿವೆ ನೋಡಿ
  4. ವಾಕ್ಯಭಾಗವನ್ನು ಪರಿಶೀಲಿಸಿ ಮಾತನಾಡುತ್ತಿರುವವರು ಯಾರು ? ಮತ್ತು ಯಾರೊಂದಿಗೆ ಮಾತನಾಡುತ್ತಿದ್ದಾರೆ? ಯಾವ ಪ್ರತಿಕ್ರಿಯೆ ಬಂದಿತು ಎಂದು ನೋಡಿ.

ನೀವು ಇಲ್ಲಿರುವ ಲಿಂಕ್ ಬಳಸಿ ವಿಡಿಯೋ ನೋಡಿ at http://ufw.io/figs_youdual.


ಏಕವಚನ 'you' ರೂಪಗಳು.

Translation Manual :: Just-in-Time Learning Modules :: Grammar :: Forms of 'You' - Singular

###ವಿವರಣೆಗಳು.

ಕೆಲವು ಭಾಷೆಯಲ್ಲಿ ಏಕವಚನ “you” ನೀನು, ಪದ ಇದೆ.ಮತ್ತು ಬಹುವಚನ

ಕೆಲವು ಭಾಷೆಯಲ್ಲಿ “you” ನೀನು / ನೀವು ಎಂಬ ಪದಕ್ಕೆ ಒಂದೇ ಪದ ಇದ್ದು ದ್ವಿವಿಧ ದಲ್ಲಿ ಬಳಸಿಕೊಂಡು ಇಬ್ಬರು ವ್ಯಕ್ತಿಗಳಿಗೆ ಈ ಪದವನ್ನು ಬಳಸುತ್ತಾರೆ. ಭಾಷೆಗಳಲ್ಲಿ

ಬೇರೆ ಭಾಷೆಗಳು ಉದಾಹರಣೆಗೆ ಇಂಗ್ಲೀಷ್ ಭಾಷೆಯಲ್ಲಿ ಒಂದೇ ರೀತಿಯ “you” ರೂಪದ ಪದವನ್ನು ಬಳಸುತ್ತಾರೆ. ಅದು ಎಷ್ಟೇ ಜನರನ್ನು ಉದ್ದೇಶಿಸಿ ಹೇಳುವುದಿದ್ದರೂ ಒಂದೇ ಪದಬಳಕೆ. ಸತ್ಯವೇದವನ್ನು ಮೊದಲು ಹಿಬ್ರೂ, ಅರಾಮಿಕ್,ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲ್ಪಟ್ಟಿತು. ಈ ಭಾಷೆಗಳಲ್ಲಿ ಏಕವಚನ ರೂಪದ ಪದ “ನೀನು” ಮತ್ತು “ಬಹುವಚನ” ರೂಪದ ಪದ ನೀವು “ಬಳಕೆಯಲ್ಲಿದೆ.”

ನಾವು ಸತ್ಯವೇದವನ್ನು ಒಂದು ಭಾಷೆಯಲ್ಲಿ ಓದುವಾಗ ಅದರಲ್ಲಿ ವಿವಿಧ ರೀತಿ “you”/ನೀನು ಪದಗಳು ಇರುವುದಿಲ್ಲ. ಆದರೂ ಇಲ್ಲಿ ಅದು ಇಬ್ಬರು ವ್ಯಕ್ತಿಗಳ ಬಗ್ಗೆ ಹೇಳುತ್ತಿದೆಯೋ ಅಥವಾ ಇಬ್ಬರಿಗಿಂತ ಹೆಚ್ಚು ಜನರನ್ನು ಕುರಿತು ಹೇಳುತ್ತಿದೆಯೋ ಎಂಬುದು ತಿಳಿಯುವುದಿಲ್ಲ. ಸರ್ವನಾಮಗಳು ಬಳಸಿರುವ “you” ಎಂಬ ಪದ ಎಷ್ಟುಜನರನ್ನು ಕುರಿತು ಹೇಳುತ್ತಿದೆ ಎಂದು ತೋರಿಸದಿದ್ದರೆ ನಾವು ವಾಕ್ಯಭಾಗವನ್ನು ಓದಿ ಅಲ್ಲಿ ಎಷ್ಟುಜನರೊಂದಿಗೆ ಮಾತನಾಡುತ್ತಿದ್ದಾನೆ

(ಮಾತನಾಡುತ್ತಿರುವವನು) ಎಂದು ತಿಳಿದು ಕೊಳ್ಳಬೇಕು.

ಕಾರಣ ಇದೊಂದು ಭಾಷಾಂತರ ಪ್ರಕರಣ.

  • ಏಕವಚನ, ಬಹುವಚನ ಮತ್ತು ದ್ವಿವಿಧ ರೂಪದ “you” ಗಳು ಇದ್ದರೆ ಆ ಭಾಷೆಯನ್ನು ಮಾತನಾಡುತ್ತಿರುವ ಭಾಷಾಂತರಗಾರರು, ಮಾತನಾಡುತ್ತಿರುವ ವ್ಯಕ್ತಿ ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೆ ಎಂಬುದನ್ನು ತಿಳಿದುಕೊಂಡರೆ ಸೂಕ್ತವಾದ “you” ಪದವನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಬಳಸಬಹುದು.
  • ಅನೇಕ ಭಾಷೆಯಲ್ಲಿ ವಿವಿಧ ರೀತಿಯ ಕ್ರಿಯಾಪದಗಳು ವ್ಯಕ್ತಿ ಏಕವಚನ ರೂಪದಲ್ಲಿ ಇದ್ದನೋ ಬಹುವಚನ ರೂಪದಲ್ಲಿ ಇದ್ದನೋ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

“you” ಪದಕ್ಕೆ ಸರ್ವನಾಮ ಅರ್ಥ ಇಲ್ಲದಿದ್ದರೂ ಈ ಭಾಷೆಯ ಭಾಷಾಂತರಗಾರರು ಇಲ್ಲಿ ಒಬ್ಬ ವ್ಯಕ್ತಿಬಗ್ಗೆ ಅಥವಾ ಒಬ್ಬರಿಗಿಂತ ಇಬ್ಬರು ವ್ಯಕ್ತಿಗಳ ಬಗ್ಗೆ ಮಾತನಾಡುತ್ತಿದ್ದಾರೆಯೇ ಎಂದು ನೋಡಿ ಭಾಷಾಂತರಿಸಬೇಕು. ಕೆಲವೊಮ್ಮೆ ಗ್ರೀಕ್ ಮತ್ತು ಹಿಬ್ರೂ ಭಾಷೆಯನ್ನು ಮಾತನಾಡುವವರು ಏಕವಚನ “you” ರೂಪದ ಪದವನ್ನು ಬಳಸಿ ಒಂದು ಗುಂಪು ಅಥವಾ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ. ನೋಡಿ “you” – ವಿವಿಧ ರೂಪಗಳು – ಏಕವಚನ – ಗುಂಪು

ಸತ್ಯವೇದದಲ್ಲಿನ ಉದಾಹರಣೆಗಳು

" ನಾನು ಚಿಕ್ಕಂದಿನಿಂದಲೂ ಇವೆಲ್ಲಕ್ಕೂ ವಿದೇಯನಾಗಿ/ ನಡಕೊಂಡು ಬಂದಿದ್ದೇನೆ " ಎಂದು ಹೇಳಿದ ಅಧಿಕಾರಿ. ಯೇಸು ಅದನ್ನು ಕೇಳಿ ಅವನಿಗೆ, " ಇನ್ನೂ ಒಂದು“you”/ ನಿನಗೆ ಕಡಿಮೆಯಾಗಿದೆ “you " ನೀನು ,.” ನಿನ್ನಲ್ಲಿರುವುದೆಲ್ಲವನ್ನು ಮಾರಿ ಬಡವರಿಗೆ ಹಂಚಿಕೊಡು.“you”/ ನಿನಗೆ ಪರಲೋಕದಲ್ಲಿ ಸಂಪತ್ತಿರುವುದು, ನಂತರ ಬಂದು ನನ್ನನ್ನು ಹಿಂಬಾಲಿಸು. " (ಲೂಕ 18:21, 22 ULB)

ಆ ಆಧಿಕಾರಿ ತನ್ನ ಬಗ್ಗೆ ಮಾತನಾಡುತ್ತಾ ಹೇಳಿದ್ದು "ನಾನು ". ಇದು ಯೇಸು ಮಾತನಾಡುವಾಗ ಬಳಸಿದ “you” ಆ ಆಧಿಕಾರಿಯನ್ನು ಉದ್ದೇಶಿಸಿ ಹೇಳಿದ ಮಾತು. ಯಾವ ಭಾಷೆಯಲ್ಲಿ ಏಕವಚನ ಮತ್ತು ಬಹುವಚನ ರೂಪದ “you” ಇರುವುದೋ ಅಲ್ಲಿ ಏಕವಚನರೂಪ ಇರುತ್ತದೆ.

ಆ ದೇವದೂತನು ಪ್ರೇತನಿಗೆ ನಡುಕಟ್ಟಿಕೊಂಡುನಿನ್ನಕೆರಗಳನ್ನು ಮೆಟ್ಟಿಕೊಂಡು ಎಂದು ಹೇಳಿದನು. ಪ್ರೇತನು ಅದರಂತೆ ಮಾಡಿದನು. ಆ ದೇವದೂತನು " ನಿನ್ನ ಮೇಲಂಗಿಯನ್ನು ಧರಿಸಿ ನನ್ನ ಹಿಂದೆ ಬಾ " ಅಂದನು. ಅದರಂತೆ ಪ್ರೇತನು ದೇವದೂತನ್ನು ಹಿಂಬಾಲಿಸಿ ಹೊರಗೆ ಹೋದನು. (ಆ.ಕೃ.12:8, ULB)

ಈ ವಾಕ್ಯಭಾಗವು ದೇವದೂತನು ಒಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೆ ಮತ್ತು ಆ ಒಬ್ಬ ವ್ಯಕ್ತಿ ದೇವದೂತನು ಆಜ್ಞಾಪಿಸಿದಂತೆ ಮಾಡಿದನು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದುದರಿಂದ ಯಾವ ಭಾಷೆಯಲ್ಲಿ ಏಕವಚನ ಮತ್ತು ಬಹುವಚನ ರೂಪದ “you” ಏಕವಚನ “you” ಅನ್ನು ಮಾತ್ರ ಬಳಸಿ. "yourself " ಮತ್ತು “your”. ಎಂಬುದಕ್ಕೂ ಏಕವಚನರೂಪವನ್ನೇ ಬಳಸುತ್ತಾರೆ. ಇದರೊಂದಿಗೆ ಕ್ರಿಯಾಪದಗಳು ವಿವಿಧ ರೀತಿಯ ಏಕವಚನ ಮತ್ತು ಬಹುವಚನ ವಿಷಯಗಳು ಇದ್ದರೆ ಕ್ರಿಯಾಪದಗಳು ಯಾವುದೆಂದರೆ "ಧರಿಸು " ಮತ್ತು "ಹಾಕಿಕೋ " ಎಂಬಪದಗಳು “you” ಏಕವಚನ ರೂಪ ಬೇಕಾಗುತ್ತದೆ.

ನಮ್ಮೆಲ್ಲರಿಗೆ ಹುದುವಾಗಿರುವ ನಂಬಿಕೆಯ ಸಂಬಂಧದಲ್ಲಿ ನನ್ನ ನಿಜ ಕುಮಾರನಾದ ತೀತನಿಗೆ…ನೀನು ಕ್ರೇತ್ರ ದೀಪದಲ್ಲಿಇನ್ನು ಕ್ರಮಕ್ಕೆ ಬಾರದಿರುವ ಕಾರ್ಯಗಳನ್ನು ಕ್ರಮಪಡಿಸಿ ಪಟ್ಟಣ ಪಟ್ಟಣಗಳಲ್ಲೂ ಸಭೆಯ ಹಿರಿಯರನ್ನು ನೇಮಿಸಬೇಕೆಂದು ನಾನು ನಿನಗೆ , ಅಪ್ಪಣೆ ಕೊಟ್ಟುನಿನ್ನನ್ನು , ಅಲ್ಲೆ ಬಿಟ್ಟು ಬಂದೆ (ತೀತಾ 1:4,5; 2:1 ULB)

ಪೌಲನು ಈ ಪತ್ರವನ್ನು ತೀತನಿಗೆ ಬರೆದನು. ಈ ಪತ್ರದಲ್ಲಿನ “you” ಎಂಬ ಪದ ಎಲ್ಲಾ ಸಮಯದಲ್ಲೂ ತೀತನನ್ನೇ ಉದ್ದೇಶಿಸಿ ಹೇಳಿದ ಪದ.

ಎಷ್ಟು ಜನರನ್ನು"you" ಪದದಿಂದ ಉದ್ದೇಶಿಸಿ ಮಾತನಾಡಲಾಗಿದೆ ಎಂಬುದನ್ನು ಕಂಡುಹಿಡಿಯಲು ತಂತ್ರಗಳು.

  1. ಟಿಪ್ಪಣಿಗಳನ್ನು ಗಮನಿಸಿದರೆ “you” ಎಂಬುದು ಒಬ್ಬ ವ್ಯಕ್ತಿ ಅಥವಾ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳನ್ನು ಕುರಿತು ಹೇಳುತ್ತದೆ.
  2. UDBಯಲ್ಲಿ ನೋಡಿ ಅದರಲ್ಲಿ “you” ಒಬ್ಬ ವ್ಯಕ್ತಿಯನ್ನು ಅಥವಾ ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳನ್ನು ಅನ್ವಯಿಸಿ ಹೇಳಿದೆಯಾ ಎಂದುತಿಳಿದುಕೊಳ್ಳಬೇಕು.
  3. ನಿಮ್ಮಲ್ಲಿರುವ ಸತ್ಯವೇದದ ಭಾಷೆಯಲ್ಲಿ ಏಕವಚನ “you” ಬಹುವಚನ “you” ಗಳ ನಡುವೆ ವ್ಯತ್ಯಾಸ ತಿಳಿಸುತ್ತಿದೆಯೇ ? ಆ ಸತ್ಯವೇದದಲ್ಲಿ ಯಾವರೀತಿ “you” ರೂಪದ ಪದ ಬಳಕೆಯ ವಾಕ್ಯಗಳಿವೆ ನೋಡಿ.
  4. ವಾಕ್ಯಭಾಗವನ್ನು ಪರಿಶೀಲಿಸಿ ಮಾತನಾಡುತ್ತಿರುವವರು ಯಾರು ? ಮತ್ತು ಯಾರೊಂದಿಗೆ ಮಾತನಾಡುತ್ತಿದ್ದಾರೆ ? ಯಾವ ಪ್ರತಿಕ್ರಿಯೆ ಬಂದಿತು ಎಂದು ನೋಡಿ

ನೀವು ಈ ಲಿಂಕ್ ಬಳಸಿ ವೀಡಿಯೋ ನೋಡಿ at http://ufw.io/figs_younum.


ಸಾರ್ವತ್ರಿಕ ನಾಮಪದ ಪದಗುಚ್ಛಗಳು.

Translation Manual :: Just-in-Time Learning Modules :: Grammar :: Generic Noun Phrases

ವಿವರಣೆ

ಸಾರ್ವತ್ರಿಕ ನಾಮಪದ ಗುಚ್ಛಗಳು ಜನರನ್ನು ಅಥವಾ ವಸ್ತುಗಳನ್ನು ಕುರಿತು ಸಾಮಾನ್ಯ ಅರ್ಥದಲ್ಲಿ ಹೇಳುತ್ತದೆಯೇ ಹೊರತು ನಿರ್ದಿಷ್ಟ ವೃತ್ತಿ ಅಥವಾ ವಸ್ತುವಿನ ಬಗ್ಗೆ ಹೇಳುವುದಿಲ್ಲ. ಇಂತಹ ಪದಗಳ ಬಳಕೆ ಸತ್ಯವೇದದ “ಜ್ಞಾನೋಕ್ತಿಗಳ“ ಪುಸ್ತಕದಲ್ಲಿ ಬರುತ್ತದೆ. ಇದರಲ್ಲಿ ಬರುವ ವಿಷಯಗಳು ಜನರ ಬಗ್ಗೆ ಇರುವ ನಿಜವಾದ ವಿಷಯಗಳನ್ನು ಸಾಮಾನ್ಯೀಕರಿಸಿ ಹೇಳುವುದು.

ದಗದಗಿಸುವ ಕೆಂಡದ ಮೇಲೆ ಒಬ್ಬ ಮನುಷ್ಯನು ನಡೆದರೆ ಕಾಲುಗಳು ಸುಟ್ಟುಹೋಗುವುದಿಲ್ಲವೇ? ಅದರಂತೆಯೇ ನೆರೆಮನೆಯವನ ಹೆಂಡತಿ ಬಳಿ ಹೋಗುವವನಿಗೆ ಆಗುತ್ತದೆ; ಅವಳನ್ನು ಮುಟ್ಟಿದವನು ದಂಡನೆ ಹೊಂದದೆ ಇರಲಾರ. (ಜ್ಞಾನೋಕ್ತಿಗಳು 6:28 ULT)

ಮೇಲೆ ದಪ್ಪ ಅಕ್ಷರದಲ್ಲಿರುವ ನುಡಿಗಟ್ಟು ನಿರ್ದಿಷ್ಟವಾದ ವ್ಯಕ್ತಿಯನ್ನು ಸೂಚಿಸುವುದಿಲ್ಲ. ಅಂತಹ ತಪ್ಪಾದ ಕಾರ್ಯಗಳನ್ನು ಮಾಡುವಂಥವರನ್ನು ಸೂಚಿಸುತ್ತದೆ.

ಏಕೆಂದರೆ ಇದೊಂದು ಭಾಷಾಂತರ ಸಮಸ್ಯೆ.

ವಿವಿಧ ಭಾಷೆಗಳಲ್ಲಿ ಈ ರೀತಿ ಸಾಮಾನ್ಯೀಕರಿಸಿ ಹೇಳುವ ನಾಮಪದಗಳು ವಿವಿಧ ರೀತಿಯಲ್ಲಿ ಇವೆ. ಭಾಷಾಂತರ ಮಾಡುವವರು ಇವುಗಳನ್ನು ತಿಳಿದುಕೊಂಡು ಅವರವರ ಭಾಷೆಯಲ್ಲಿ ಸಹಜವಾಗಿ ಮೂಡಿಬರುವಂತೆ ಪದಗಳನ್ನು ಬಳಸಬೇಕು.

ಸತ್ಯವೇದಲ್ಲಿನ ಉದಾಹರಣೆಗಳು.

ಶಿಷ್ಟನು ಸಂಕಷ್ಟಗಳಿಂದ ಪಾರಾಗುವನು ದುಷ್ಟನು ಶಿಷ್ಟನಿಗೆ ಬದಲಾಗಿ ಅದರಲ್ಲಿ ಸಿಕ್ಕಿಕೊಳ್ಳುವನು. (ಜ್ಞಾನೋಕ್ತಿಗಳು 11:8 ULT)

ಇಲ್ಲೂ ಸಹ ದಪ್ಪ ಅಕ್ಷರಗಳಲ್ಲಿರುವ ನುಡಿಗಟ್ಟು ನಿರ್ದಿಷ್ಟ ವ್ಯಕ್ತಿಗಳನ್ನು ಸೂಚಿಸುವುದಿಲ್ಲ, ಆದರೆ ಒಳ್ಳೆದನ್ನು ಮಾಡುವಂಥವರನ್ನು ಸೂಚಿಸುತ್ತದೆ.

ಧಾನ್ಯವನ್ನು ಜನರಿಗೆ ಮಾರದೆ ಕೂಡಿಟ್ಟುಕೊಳ್ಳುವ ಆ ಮನುಷ್ಯನಿಗೆ ಜನರು ಶಾಪಹಾಕುತ್ತಾರೆ. (ಜ್ಞಾನೋಕ್ತಿಗಳು 11:26 ULT)

ಇದು ಕೇವಲ ಒಬ್ಬನ ಬಗ್ಗೆ ಹೇಳಿರುವ ಮಾತಲ್ಲ, ಯಾರ್ಯಾರು ಧಾನ್ಯವನ್ನು ಮಾರದೆ ಕೂಡಿಡುತ್ತಾರೋ ಅವರೆಲ್ಲರಿಗೂ ಅನ್ವಯಿಸುತ್ತದೆ.

ಯೆಹೋವನು ಒಳ್ಳೆಯ ಮನುಷ್ಯನಿಗೆ ದಯೆಯನ್ನು ದಯಪಾಲಿಸುತ್ತಾನೆ, ಆದರೆ ಕುಯುಕ್ತಿಗಳನ್ನು ಕಲ್ಪಿಸುವವನನ್ನು ಆತನು ಖಂಡಿಸುತ್ತಾನೆ. (ಜ್ಞಾನೋಕ್ತಿಗಳು12:2 ULT)

ಇಲ್ಲಿ ಬಳಸಿರುವ “ಒಳ್ಳೆಯ ಮನುಷ್ಯನು” ಒಬ್ಬನಿಗೆ ಮಾತ್ರ ಸೀಮಿತವಾಗಿಲ್ಲ ಎಲ್ಲಾ ಒಳ್ಳೆಯವರಿಗೆ ಅನ್ವಯಿಸುತ್ತದೆ. “ಕುಯುಕ್ತಿ ಮಾಡುವವನು” ಎಂಬ ಪದಗಳು ಒಬ್ಬನಿಗೆ ಮಾತ್ರ ಸೀಮಿತವಾಗಿಲ್ಲ ಕುಯುಕ್ತಿ ಮಾಡುವ ಎಲ್ಲರಿಗೆ ಅನ್ವಯಿಸುತ್ತದೆ.

ಭಾಷಾಂತರದ ತಂತ್ರಗಳು

ನಿರ್ದಿಷ್ಠ ವ್ಯಕ್ತಿಯನ್ನು ಅಥವಾ ವಸ್ತುಗಳನ್ನು ಸೂಚಿಸುವುದಕ್ಕೆ ಬದಲಾಗಿ ಜನರನ್ನು ಅಥವಾ ವಸ್ತುಗಳನ್ನು ಸಾಮಾನ್ಯವಾಗಿ ಸೂಚಿಸುವಂಥ ಪದಗಳು, ULTಯ ಪ್ರತಿಯಲ್ಲಿ ಇರುವ ರೀತಿಯ ಪದಗಳು ನಿಮ್ಮ ಭಾಷೆಯಲ್ಲಿ ಇದ್ದರೆ, ಆ ಪದಗಳನ್ನೇ ಬಳಸಿರಿ. ಇಲ್ಲದಿದ್ದರೆ, ಇಲ್ಲಿ ಕೆಲವು ತಂತ್ರಗಳನ್ನು ತಿಳಿಸಲಾಗಿದೆ.

(1) “the” “ಆ ಅಥವಾ ಅಂಥ” ಎಂಬ ಪದವನ್ನು ನಾಮಪದದ ಹಿಂದೆ ಬಳಸಿರಿ.

(2) “a” “ಆ ಅಥವಾ ಒಬ್ಬ” ಎಂಬ ಪದವನ್ನು ನಾಮಪದದ ಹಿಂದೆ ಬಳಸಿರಿ

(3) “ಯಾವ”, ಎಂಬ ಪದವನ್ನು “ಯಾರಾದರೂ”, “ಯಾವ ವ್ಯಕ್ತಿಯಾದರು” ಎಂದು ಬಳಸಿರಿ.

(4) “ಜನರು” ಎಂಬ ಬಹುವಚನ ರೂಪವನ್ನು ಬಳಸಿರಿ.

(5) ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಬೇರೆ ರೀತಿಯನ್ನು ಬಳಸಿರಿ.

ಭಾಷಾಂತರ ತಂತ್ರಗಳನ್ನು ಅಳವಡಿಸಿದ ಉದಾಹರಣೆಗಳು.

(1) “the” “ಆ ಅಥವಾ ಅಂಥ” ಎಂಬ ಪದವನ್ನು ನಾಮಪದದ ಹಿಂದೆ ಬಳಸಿರಿ.

ಯೆಹೋವನು ಒಳ್ಳೆಯ ಮನುಷ್ಯನಿಗೆ ದಯೆಯನ್ನು ದಯಪಾಲಿಸುತ್ತಾನೆ, ಆದರೆ ಕುಯುಕ್ತಿಗಳನ್ನು ಕಲ್ಪಿಸುವವನನ್ನು ಆತನು ಖಂಡಿಸುತ್ತಾನೆ. (ಜ್ಞಾನೋಕ್ತಿಗಳು12:2 ULT)

(2) “a” “ಆ ಅಥವಾ ಒಬ್ಬ” ಎಂಬ ಪದವನ್ನು ನಾಮಪದದ ಹಿಂದೆ ಬಳಸಿರಿ

ಧಾನ್ಯವನ್ನು ಜನರಿಗೆ ಮಾರದೆ ಕೂಡಿಟ್ಟುಕೊಳ್ಳುವ ಆ ಮನುಷ್ಯನಿಗೆ ಜನರು ಶಾಪಹಾಕುತ್ತಾರೆ. (ಜ್ಞಾನೋಕ್ತಿಗಳು 11:26 ULT)

“ಧಾನ್ಯವನ್ನು ಮಾರಲು ನಿರಾಕರಿಸುವ ಒಬ್ಬ ಮನುಷ್ಯನನ್ನು ಜನರು ಶಪಿಸುತ್ತಾರೆ.”

(3) “ಯಾವ”, ಎಂಬ ಪದವನ್ನು “ಯಾರಾದರೂ”, “ಯಾವ ವ್ಯಕ್ತಿಯಾದರು” ಎಂದು ಬಳಸಿರಿ.

ಧಾನ್ಯವನ್ನು ಜನರಿಗೆ ಮಾರದೆ ಕೂಡಿಟ್ಟುಕೊಳ್ಳುವ ಆ ಮನುಷ್ಯನಿಗೆ ಜನರು ಶಾಪಹಾಕುತ್ತಾರೆ. (ಜ್ಞಾನೋಕ್ತಿಗಳು 11:26 ULT)

“ಧಾನ್ಯವನ್ನು ಮಾರಲು ನಿರಾಕರಿಸುವ ಯಾವ ಮನುಷ್ಯನನ್ನು ಜನರು ಶಪಿಸುತ್ತಾರೆ.”

(4) “ಜನರು” ಎಂಬ ಬಹುವಚನ ರೂಪವನ್ನು ಬಳಸಿರಿ. (ಅಥವಾ ಈ ವಾಕ್ಯದಲ್ಲಿ ಮನುಷ್ಯರು/ ಪುರುಷರು)

ಧಾನ್ಯವನ್ನು ಜನರಿಗೆ ಮಾರದೆ ಕೂಡಿಟ್ಟುಕೊಳ್ಳುವ ಆ ಮನುಷ್ಯನಿಗೆ ಜನರು ಶಾಪಹಾಕುತ್ತಾರೆ. (ಜ್ಞಾನೋಕ್ತಿಗಳು 11:26 ULT)

“ಧಾನ್ಯವನ್ನು ಮಾರಲು ನಿರಾಕರಿಸುವ ಮನುಷ್ಯರನ್ನು ಜನರು ಶಪಿಸುತ್ತಾರೆ.”

(5) ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಬೇರೆ ರೀತಿಯನ್ನು ಬಳಸಿರಿ.

ಧಾನ್ಯವನ್ನು ಜನರಿಗೆ ಮಾರದೆ ಕೂಡಿಟ್ಟುಕೊಳ್ಳುವ ಆ ಮನುಷ್ಯನಿಗೆ ಜನರು ಶಾಪಹಾಕುತ್ತಾರೆ. (ಜ್ಞಾನೋಕ್ತಿಗಳು 11:26 ULT)

“ಧಾನ್ಯವನ್ನು ಮಾರಲು ನಿರಾಕರಿಸುವ ಯಾರನ್ನಾದರೂ ಜನರು ಶಪಿಸುತ್ತಾರೆ.”


"ಹೋಗು" ಅಥವಾ "ಬಾ / ಬನ್ನಿ"

Translation Manual :: Just-in-Time Learning Modules :: Grammar :: Go and Come

ವಿವರಣೆಗಳು.

ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ “ಬಾ/ ಬನ್ನಿ” ಅಥವಾ “ಹೋಗು” ಎಂಬ ಪದಗಳನ್ನು ಮತ್ತು "ತೆಗೆದುಕೋ " ಅಥವಾ " ತೆಗೆದು ಕೊಂಡು ಬಾ " ಎಂಬ ಪದಗಳನ್ನು ಚಲನೆಯ ಬಗ್ಗೆ ಮಾತನಾಡುವಾಗ ಬಳಸುತ್ತಾರೆ. ಉದಾಹರಣೆಗೆ ಒಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡುವಾಗ ಹೀಗೆ ಬಳಸುತ್ತಾರೆ. ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವವರು "ನಾನು ಬರುತ್ತಿದ್ದೇನೆ " (I’m coming) ಸ್ಪಾನಿಷ್ ಭಾಷೆಯಲ್ಲಿ "ನಾನು ಹೋಗುತ್ತಿದ್ದೇನೆ " (I’m going.) ಎಂದು ಹೇಳಬಹುದು.

ನೀವು ನಿಮ್ಮ ಭಾಷೆಯಲ್ಲಿ ಭಾಷಾಂತರ ಮಾಡುವಾಗ “ಹೋಗು” ಮತ್ತು “ಬಾ” ಮತ್ತು (ತೆಗೆದುಕೋ ಮತ್ತು ತೆಗೆದುಕೊಂಡು ಬಾ) ಎಂಬ ಪದಗಳ ಕ್ರಿಯೆಗಳು ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬುದನ್ನು ನಿಮ್ಮ ಓದುಗರು ಅರ್ಥಮಾಡಿಕೊಳ್ಳುವಂತೆ ಮಾಡಿ.

ಕಾರಣ ಇದೊಂದು ಭಾಷಾಂತರ ವಿಷಯ.

ಚಲನೆಯ ಬಗ್ಗೆ ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಇದೆ. ಸತ್ಯವೇದದಲ್ಲಿ ಅಥವಾ ನಿಮ್ಮ ಮೂಲ ಭಾಷೆಯಲ್ಲಿ(“go”) ಹೋಗು ಮತ್ತು “ಬಾ” (“come”) “.ತೆಗೆದುಕೋ” (“take”) ಮತ್ತು " ತೆಗೆದು ಕೊಂಡು ಬಾ " (“bring”) ಎಂಬ ಪದಗಳು ನಿಮ್ಮ ಭಾಷೆಯಲ್ಲಿ ಬಳಸುವುದಕ್ಕಿಂತ ಭಿನ್ನವಾಗಿ ಇರಬಹುದು.

ಈ ಪದಗಳು ಸರಿಯಾದ ರೀತಿಯಲ್ಲಿ ಸಹಜ ಅರ್ಥದಲ್ಲಿ ನಿಮ್ಮ ಭಾಷೆಯಲ್ಲಿ ಭಾಷಾಂತರವಾಗದಿದ್ದರೆ ನಿಮ್ಮ ಓದುಗರಿಗೆ ಚಲನೆಯ ಬಗ್ಗೆ, ಯಾವ ದಿಕ್ಕಿನಲ್ಲಿ ಜನರು ಚಲಿಸುತ್ತಿದ್ದಾರೆ ಎಂದು ತಿಳಿದು ಕೊಳ್ಳುವಲ್ಲಿ ಗೊಂದಲಕ್ಕೆ ಒಳಗಾಗುತ್ತಾರೆ.

###ಸತ್ಯವೇದದ ಉದಾಹರಣೆಗಳು.

ಯೆಹೋವನು ನೋಹನಿಗೆ " ನೀನು ನಿನ್ನ ಮನೆಯವರು ಈ ನಾವೆಯಲ್ಲಿ ಬಂದು ಸೇರಿರಿ ", (ಆದಿಕಾಂಡ 7:1 ULB)

ಈ ವಾಕ್ಯವನ್ನು ಓದಿದಾಗ ಕೆಲವು ಭಾಷೆಯ ಜನರು ಯೆಹೋವನು ಈ ನಾವೆಯೊಳಗೆ ಇದ್ದು ನೋಹನನ್ನು ಕರೆದನು ಎಂದು ತಿಳಿದುಕೊಳ್ಳಬಹುದು.

ಆಮೇಲೆ ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗುವಿ ನೀನು ನನ್ನ ಜನರ ಬಳಿಗೆ ಹೋದಾಗ ನಿನಗೆ ಅವರು ಹೆಣ್ಣನ್ನು ಕೊಡದಿದ್ದಾಗ. ನಾನು ಮಾಡಿಸಿದ ಪ್ರಮಾಣದಿಂದ ಬಿಡುಗಡೆಯಾಗುವಿ. (ಆದಿಕಾಂಡ 24:41 ULB)

ಇಲ್ಲಿ ಅಬ್ರಹಾಮನು ತನ್ನ ಸೇವಕನೊಂದಿಗೆ ಮಾತನಾಡುತ್ತಿದ್ದಾನೆ. ಅಬ್ರಹಾಮ ಮತ್ತು ಅವನ ಸೇವಕ ಮಾತನಾಡುತ್ತಿರುವ ಸ್ಥಳದಿಂದ ಅವನಿಗೆ ಸಂಬಂಧಿಸಿದ ಜನರು ಇರುವ ಸ್ಥಳವು ತುಂಬಾ ದೂರ ಇದ್ದಿತು.ಆದುದರಿಂದ ಅವನ ಸೇವಕನನ್ನು ಅವರ ಬಳಿಗೆ ಹೋಗು .ಎಂದು ಹೇಳುತ್ತಿದ್ದಾನೆಯೇ ಹೊರತು ಅವನ ಕಡೆಗೆ " ಬಾ " ಎಂದು ಹೇಳಲಿಲ್ಲ. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದು ಸೇರಿಸ್ವಾಧೀನ ಮಾಡಿಕೊಂಡು ವಾಸವಾಗಿರುವಾಗ. (ಧರ್ಮೋಪದೇಶ ಕಾಂಡ 17:14 ULB)

ಮೋಶೆಯು ತನ್ನ ಜನರು ಮರುಭೂಮಿಯಲ್ಲಿ ಇರುವಾಗ ಅವರಿಗೆ ಈ ರೀತಿ ಹೇಳಿದನು. ಅವರು ಇನ್ನೂ ದೇವರು ಅವರಿಗೆ ವಾಗ್ದಾನ ಮಾಡಿದ ದೇಶವನ್ನು ಸೇರಿರಲಿಲ್ಲ,. ಕೆಲವು ಭಾಷೆಯಲ್ಲಿ ಇದು ನೀವು ಆ ದೇಶಕ್ಕೆ "ಹೋದಾಗಎಂದು ಅರ್ಥಕೊಡಬಹುದು… "

ಯೋಸೇಫ ಮತ್ತು ಮರಿಯಳು ಆ ಮಗುವನ್ನು ಯೆರೂಸಲೇಮಿನ ದೇವಾಲಯಕ್ಕೆ ದೇವರಿಗೆ ಸಮರ್ಪಿಸಲು ತೆಗೆದುಕೊಂಡು ಹೋದರು . (ಲೂಕ 2:22 ULB)

ಇನ್ನೂ ಬೇರೆ ಭಾಷೆಗಳಲ್ಲಿ ಇನ್ನೂ ಸ್ಪಷ್ಟವಾಗಿ ಹೇಳಲು ಯೋಸೇಫ ಮತ್ತು ಮರಿಯಳು ಯೇಸು ಮಗುವನ್ನು ತೆಗೆದುಕೊಂಡುಅಥವಾ ಎತ್ತಿಕೊಂಡುದೇವಾಲಯಕ್ಕೆ ಹೋದರು ಎಂದು ಹೇಳಬಹುದು.

ಆಗ ಸಭಾ ಮಂದಿರದ ಅಧಿಕಾರಿಯಾದ ಯಾಯಿರನೆಂಬುವವನು ಬಂದು ಯೇಸುವಿನ ಪಾದಗಳಿಗೆ ಬಿದ್ದನು. ಯಾಯಿರನು ಯೇಸುವಿನ ಪಾದಗಳಿಗೆ ಬಿದ್ದು ತನ್ನ ಮನೆಗೆ ಬರಬೇಕೆಂದುಬೇಡಿಕೊಂಡನು. (ಲೂಕ8:41 ULB)

ಆ ಯಾಯಿರನು ಯೇಸುವಿನೊಂದಿಗೆ ಮಾತನಾಡುವಾಗ ತನ್ನ ಮನೆಯಲ್ಲಿ ಇರಲಿಲ್ಲ. ಯೇಸು ತನ್ನೊಂದಿಗೆ ಆತನ ಮನೆಗೆ ಬರಬೇಕೆಂದುಬಯಸಿದನು.

ಕೆಲವು ಸಮಯವಾದ ಮೇಲೆ,ಅವನ ಹೆಂಡತಿ ಎಲಿಜಬೇತಳು ಗರ್ಬಿಣಿಯಾದಳು, ಅವಳು ಐದು ತಿಂಗಳವರೆಗೆ ಮನೆ ಬಿಟ್ಟು ಹೊರಗೆ ಎಲ್ಲೂ ಹೋಗಲಿಲ್ಲಮನೆಯಲ್ಲೇ ಇದ್ದಳು. (ಲೂಕ 1:24 UDB)

ಕೆಲವು ಭಾಷೆಯಲ್ಲಿ ಎಲಿಜಬೇತಳು ಐದು ತಿಂಗಳವರೆಗೆ ಹೊರಗೆ ಎಲ್ಲೂ ಬರಲಿಲ್ಲ ಎಂದು ಇರಬಹುದು

ಭಾಷಾಂತರದ ತಂತ್ರಗಳು

ULB ಭಾಷಾಂತರದಲ್ಲಿ ಸೂಕ್ತವಾದ ಮತ್ತು ಸರಿಯಾದ ಪದ ಬಳಸಿದ್ದರೆ ಅದನ್ನೇ ಬಳಸಿಕೊಳ್ಳಿ. ಇಲ್ಲದಿದ್ದರೆ ಇಲ್ಲಿರುವ ಕೆಲವು ಅಂಶಗಳನ್ನು ಪರಿಗಣಿಸಬಹುದು.

  1. “ಬಾ / ಬರುವುದು,” “ಹೋಗು / ಹೋಗುವುದು,” “ತೆಗೆದು ಕೊಳ್ಳುವುದು / ತೆಗೆದುಕೊಂಡು ಬಾ,” ಇಂತಹ ಪದಗಳು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾಗಿ ಕಂಡುಬರಬಹುದು
  2. ಸರಿಯಾದ ಅರ್ಥ ಕೊಡುವಂತಹ ಪದ ಬಳಸಿ

ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು.

  1. “ಬಾ / ಬರುವುದು,” “ಹೋಗು / ಹೋಗುವುದು,” “ತೆಗೆದು ಕೊಳ್ಳುವುದು / ತೆಗೆದುಕೊಂಡು ಬಾ,” ಇಂತಹ ಪದಗಳು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾಗಿ ಕಂಡುಬರಬಹುದು.
  • ಆಮೇಲೆ ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆ ಆಗುವಿ, ನೀನು ನನ್ನ ಜನರ ಬಳಿಗೆ ಬಂದಾಗನಿನಗೆ ಅವರು ಹೆಣ್ಣನ್ನು ಕೊಡದಿದ್ದಾಗ. (ಆದಿಕಾಂಡ 24:41 ULB)

    • ಆಮೇಲೆ ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗುವಿ ನೀನು ನನ್ನ ಜನರ ಬಳಿಗೆ ಹೋದಾಗ ನಿನಗೆ ಅವರು ಹೆಣ್ಣನ್ನು ಕೊಡದಿದ್ದಾಗ.

  • >ಕೆಲವು ಸಮಯವಾದ ಮೇಲೆ,ಅವನ ಹೆಂಡತಿ ಎಲಿಜಬೇತಳು ಗರ್ಬಿಣಿಯಾದಳು, ಅವಳು ಐದು ತಿಂಗಳವರೆಗೆ ಮನೆ ಬಿಟ್ಟು ಹೊರಗೆ ಎಲ್ಲೂ ಹೋಗಲಿಲ್ಲಮನೆಯಲ್ಲೇ ಇದ್ದಳು. (ಲೂಕ 1:24 UDB)

    • ಕೆಲವು ಸಮಯವಾದ ಮೇಲೆ, ಎಲಿಜಬೇತಳು ಗರ್ಭಿಣಿಯಾದಳು ಆದರೆ ಅವಳು ಐದು ತಿಂಗಳವರೆಗೆ ಎಲ್ಲೂ ಬರಲಿಲ್ಲ.
  1. ಸರಿಯಾದ ಅರ್ಥ ಕೊಡುವಂತಹ ಪದ ಬಳಸಿ
  • ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದುಸ್ವಾದೀನ ಮಾಡಿಕೊಂಡು ವಾಸವಿರುವಾಗ… (ಧರ್ಮೋಪದೇಶ ಕಾಂಡ 17:14 ULB)

    • " ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟ ದೇಶದಲ್ಲಿ ಬಂದುಸೇರಿ ಸ್ವಾಧೀನಪಡಿಸಿಕೊಂಡು ವಾಸಿಸಲು ತೊಡಗಿದಾಗ… "
  • ಯೆಹೋವನು ನೋಹನಿಗೆ " ನೀನು ನಿನ್ನ ಮನೆಯವರು ಈ ನಾವೆಯಲ್ಲಿ ಬಂದು ಸೇರಿರಿ ," (ಆದಿಕಾಂಡ 7:1 ULB)

    • " ಯೆಹೋವನು ನೋಹನನ್ನು ಕುರಿತು " ನೀನು ನಿನ್ನ " ಮನೆಯವರೆಲ್ಲರೂ ಈ ನೌಕೆಯೊಳಗೆ ಪ್ರವೇಶಿಸಿ, ಎಂದು ಹೇಳಿದನು… "
  • ಕೆಲವು ಸಮಯದ ನಂತರ ಅವನ ಹೆಂಡತಿ ಎಲಿಜಬೇತಳು ಗರ್ಬಿಣಿಯಾದಳು ಆದರೆ ಅವಳು ಹೊರಗೆ ಎಲ್ಲೂ ಐದು ತಿಂಗಳವರೆಗೆ ಹೋಗಲಿಲ್ಲ . (ಲೂಕ 1:24 UDB)

    • ಕೆಲವು ಸಮಯದ ನಂತರ ಅವನ ಹೆಂಡತಿ ಗರ್ಭಿಣಿಯಾದಳು ಆದರೆ ಅವಳು ಐದು ತಿಂಗಳವರೆಗೆ ಹೊರಗೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ

ನಾಮವಾಚಕ ಗುಣವಾಚಕಗಳು.

Translation Manual :: Just-in-Time Learning Modules :: Grammar :: Nominal Adjectives

ವಿವರಣೆ

ಕೆಲವು ಭಾಷೆಯಲ್ಲಿ ಗುಣವಾಚಕಗಳನ್ನು ವಿವರಿಸಲು ಕೆಲವು ವರ್ಗದ ವಿಷಯಗಳನ್ನು ತಿಳಿಸವ ಗುಣವಾಚಕಗಳನ್ನು ಬಳಸಲಾಗುತ್ತದೆ. ಆ ರೀತಿಯಾದಾಗ ಅದು ನಾಮಪದದಂತೆ ಬಳಸಲಾಗುತ್ತದೆ. ಉದಾಹರಣೆಗೆ ಐಶ್ವರ್ಯವಂತ ಒಂದು ಗುಣವಾಚಕ ಪದ. ಇಲ್ಲಿ ಕೊಟ್ಟಿರುವ ಎರಡು ಉದಾರಹಣೆಗಳು " ಶ್ರೀಮಂತ " ಎಂಬ ಪದ ಗುಣವಾಚಕ ಎಂಬುದನ್ನು ತಿಳಿಸುತ್ತದೆ.

ಒಬ್ಬ ಐಶ್ವರ್ಯವಂತನಿಗೆ ತುಂಬಾ ಕುರಿಗಳು ಮತ್ತು ದನಗಳು ಇದ್ದವು. (2ನೇ ಸಮುವೇಲ 12:2 ULB)

ಗುಣವಾಚಕ ಪದ ಮನುಷ್ಯ/ವ್ಯಕ್ತಿ ಪದದ ಮೊದಲು ಬರುವುದರಿಂದ ಅದು ಆವ್ಯಕ್ತಿಯ ವಿಶೇಷತೆಯನ್ನು ವರ್ಣಿಸುತ್ತದೆ/ ತಿಳಿಸುತ್ತದೆ.

ಇಂತವನು ಐಶ್ವರ್ಯವಂತನಾಗುವುದಿಲ್ಲ, ಅವನ ಸಿರಿಯು ನಿಲ್ಲುವುದಿಲ್ಲ ; (ಯೋಬ 15:29 ULB)

ಇಲ್ಲಿ “ಐಶ್ವರ್ಯವಂತ” ಎಂಬ ಗುಣವಾಚಕದ ನಂತರ ಬರುವ ಪದ ಅವನ ಬಗ್ಗೆ ವಿವರಿಸುತ್ತದೆ. ಇಲ್ಲೊಂದು ವಾಕ್ಯ ಹೇಗೆ " ಐಶ್ವರ್ಯವಂತ " ಎಂಬ ಪದ ನಾಮಪದವಾಗಿ ಬಳಕೆಯಾಗಿದೆ ಎಂಬುದನ್ನು ತೋರಿಸುತ್ತದೆ.

ಐಶ್ವರ್ಯವಂತರು ಅರ್ಧ ಶೆಕಲ್ ಗಿಂತ ಹೆಚ್ಚು ಕೊಡಬಾರದು.ಮತ್ತು ಬಡವರು ಅರ್ಧ ಶೆಕಲ್ ಗಿಂತ ಕಡಿಮೆ ಕೊಡಬಾರದು. (ವಿಮೋಚನಾಕಾಂಡ 30:15 ULB)

ವಿಮೋಚನಾಕಾಂಡ 30:15ರಲ್ಲಿ ಬರುವ " ಐಶ್ವರ್ಯವಂತ " ಎಂಬ ಪದ ನಾಮಪದವಾಗಿದೆ. " ಐಶ್ವರ್ಯವಂತ "ಎಂಬ ಪದ " ಐಶ್ವರ್ಯವಂತ " ಜನರನ್ನು ಪ್ರತಿನಿಧಿಸುತ್ತದೆ. “ಬಡವರು” ಎಂಬ ಪದ ಸಹ ಇಲ್ಲಿ ನಾಮಪದವಾಗಿ ಬಡಜನರನ್ನು ಪ್ರತಿನಿಧಿಸುತ್ತದೆ.

ಕಾರಣ ಇದೊಂದು ಭಾಷಾಂತರ ತೊಡಕು.

  • ಸತ್ಯವೇದದಲ್ಲಿ ಅನೇಕ ಸಲ ಗುಣವಾಚಕಗಳನ್ನು ನಾಮಪದಗಳನ್ನಾಗಿ ಬಳಸಿ ಒಂದು ಗುಂಪಿನ ಜನರ ಬಗ್ಗೆ ವಿವರಿಸಲಾಗಿದೆ.
  • ಕೆಲವು ಭಾಷೆಯಲ್ಲಿ ಗುಣವಾಚಕಗಳನ್ನು ಹೀಗೆ ಬಳಸುವುದಿಲ್ಲ.
  • ಈ ಭಾಷೆಗಳ ಓದುಗರು ವಾಕ್ಯಭಾಗಗಳು ಒಬ್ಬ ವ್ಯಕ್ತಿಯ ಬಗ್ಗೆ ವಿವರಿಸುತ್ತಿದ್ದರೂ ಅದು ಒಂದು ಗುಂಪಿನ / ಸಮೂಹದ ಜನರನ್ನು ಕುರಿತು ಹೇಳುತ್ತಿದೆ ಮತ್ತು ಗುಣವಾಚಕವನ್ನು ವಿವರಿಸುತ್ತಿದೆ ಎಂದು ತಿಳಿದುಕೊಳ್ಳುವರು.

ಸತ್ಯವೇದದಿಂದ ಉದಾಹರಣೆಗಳು.

ದುಷ್ಟರ ದಂಡಾಧಿಕಾರವು ನೀತಿವಂತರ ನಾಡಿನಲ್ಲಿ .ಉಳಿಯಬಾರದು. (ದಾ.ಕೀ. 125:3 ULB)

"ನೀತಿವಂತರು " ಎಂಬುದು ಇಲ್ಲಿ ಜನರು ಯಾರು ನೀತಿಪರರಾಗಿದ್ದಾರೋ ಅವರು ಯಾರೋ ಒಬ್ಬ ನೀತಿವಂತನಲ್ಲ.

ಶಾಂತರು ಧನ್ಯರು (ಮತ್ತಾಯ 5:5 ULB)

“ ಶಾಂತರು “ ಎಂಬುದು ಯಾರು ಶಾಂತಿಯನ್ನು ಬಯಸುತ್ತಾರೋ ಅವರು. ಶಾಂತಿ ಬಯಸುವ ಕೇವಲ ಒಬ್ಬ ವ್ಯಕ್ತಿ ಅಲ್ಲ

ಭಾಷಾಂತರ ಕೌಶಲ್ಯಗಳು.

ನಿಮ್ಮ ಭಾಷೆಯಲ್ಲಿ ಒಂದು ವರ್ಗದ ಜನರನ್ನು ಕುರಿತು ಹೇಳುವಾಗ ಗುಣವಾಚಕಗಳನ್ನು ನಾಮಪದವನ್ನಾಗಿ ಬಳಸುವ ಪದ್ಧತಿ ಇದ್ದರೆ ಅದನ್ನು ಪರಿಗಣಿಸಬಹುದು. ಇದು ಸರಿಹೊಂದದಿದ್ದರೆ, ಅರ್ಥ ಸ್ಪಷ್ಟವಾಗಿದ್ದರೆ ಅಥವಾ ತಪ್ಪಾದರೆ ಅದರ ಬದಲು ಇಲ್ಲಿ ಕೆಲವು ಮಾರ್ಗಗಳನ್ನು ಸೂಚಿಸಲಾಗಿದೆ.

  1. ಗುಣವಾಚಕಗಳನ್ನು ಬಹುವಚನ ರೂಪದಲ್ಲಿ ಬಳಸಿದರೆ ನಾಮಪದ ಅದನ್ನು ವಿವರಿಸುತ್ತದೆ.

ಭಾಷಾಂತರ ತಂತ್ರಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.

  1. ಗುಣವಾಚಕಗಳನ್ನು ಬಹುವಚನ ರೂಪದಲ್ಲಿ ಬಳಸಿದರೆ ನಾಮಪದ ಅದನ್ನು ವಿವರಿಸುತ್ತದೆ.
  • ದುಷ್ಟರ ದಂಡಾಧಿಕಾರವು ನೀತಿವಂತರ ನಾಡಿನಲ್ಲಿ ಉಳಿಯಬಾರದು . (ದಾ.ಕೀ. 125:3 ULB)

    • ದುಷ್ಟರ ದಂಡಾಧಿಕಾರವು ನೀತಿವಂತರ ನಾಡಿನಲ್ಲಿ ಆಳ್ವಿಕೆ ನಡೆಸಬಾರದು.
  • ಶಾಂತರು ಧನ್ಯರು (ಮತ್ತಾಯ 5:5 ULB)

    • ಶಾಂತಿಪ್ರಿಯರಾದ ಜನರು ಆಶೀರ್ವದಿಸಲ್ಪಡುವವರು / ಧನ್ಯರು

ಘಟನಾವಳಿಗಳ ಅನುಕ್ರಮ.

Translation Manual :: Just-in-Time Learning Modules :: Grammar :: Order of Events

ವಿವರಣೆ.

ಸತ್ಯವೇದದಲ್ಲಿ ಕೆಲವೊಮ್ಮೆ ನಡೆದ ಘಟನೆಗಳನ್ನು ಅನುಕ್ರಮವಾಗಿ ಹೇಳುವುದಿಲ್ಲ. ಸತ್ಯವೇದವನ್ನು ಬರೆದ ಲೇಖಕರು ತಾವು ತಿಳಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲವೇ ಘಟನೆಗಳ ಬಗ್ಗೆ ಬರೆಯುವಾಗ ಹಿಂದಿನ ಕೆಲವು ಸನ್ನಿವೇಶಗಳನ್ನು ಘಟನೆಗಳನ್ನು ಸಂದರ್ಭೋಚಿತವಾಗಿ ಬಳಸಿಕೊಂಡು ಚರ್ಚಿಸಬಹುದು ಅಥವಾ ಉಲ್ಲೇಖಿಸ ಬಹುದು. ಕೆಲವೊಮ್ಮೆ ಇಂತಹ ವಿಷಯಗಳು ಓದುಗರಿಗೆ ಗೊಂದಲ ಉಂಟುಮಾಡಬಹುದು

ಇದಕ್ಕೆ ಕಾರಣವೇನೆಂದರೆ ಇದೊಂದು ಭಾಷಾಂತರ ಪ್ರಕರಣ ಭಾಷಾಂತರ ಆಗದಿದ್ದರೆ ಓದುಗರು ಸನ್ನಿವೇಶಗಳನ್ನು ಯಾವ ಅನುಕ್ರಮದಲ್ಲಿ ಹೇಳಿದೆಯೋ ಅದೇ ಸರಿಯೆಂದು ತಿಳಿಯುವ ಸಾಧ್ಯತೆ ಇರುತ್ತದೆ. ಆದುದರಿಂದ ಸರಿಯಾದ ಅನುಕ್ರಮದಲ್ಲಿ ಘಟನೆಗಳನ್ನು ಸನ್ನಿವೇಶಗಳನ್ನು ಓದುಗರು ಅರ್ಥಮಾಡಿಕೊಳ್ಳುವಂತೆ ಬರೆಯುವುದು ಅವಶ್ಯಕ.

ಸತ್ಯವೇದದಲ್ಲಿನ ಉದಾಹರಣೆಗಳು.

ಆದರೆ ಹೆರೋದನು… ಯೋಹಾನನ್ನು ಸೆರೆಯಲ್ಲಿ ಹಾಕಿಸಿದನು. ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಸಹ ದೀಕ್ಷಾಸ್ನಾನ ಮಾಡಿಸಿಕೊಂಡನು. (ಲೂಕ 3:20-21 ULB)

ಈ ಎರಡೂ ವಾಕ್ಯಗಳನ್ನು ಓದಿದಾಗ ಯೋಹಾನನು ಸೆರೆಗೆ ಹಾಕಲ್ಪಟ್ಟ ಮೇಲೆ ಯೇಸುವಿಗೆ ದೀಕ್ಷಾಸ್ನಾನ ಕೊಟ್ಟಂತೆ ಇದೆ. ಆದರೆ ಯೋಹಾನನು ಸೆರೆಗೆ ಹಾಕಿಸಿಕೊಳ್ಳುವುದಕ್ಕಿಂತ ಮೊದಲೇ ಯೇಸುವಿಗೆ ದೀಕ್ಷಾಸ್ನಾನ ನೀಡಿದ್ದನು.

ಯೆಹೋಶುವನು ಆಜ್ಞಾಪಿಸಿದಂತೆ ಏಳುಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಊದುತ್ತಾ ಯೆಹೋವನ ಮುಂದೆ ನಡೆದರು. ಯುದ್ಧಸನ್ನದರಾದವರು ಕೊಂಬುಗಳನ್ನು ಊದುತ್ತಿದ್ದರು. ಯೆಹೋಶುವನು ಜನರಿಗೆ “ನೀವು ಈಗ ಆರ್ಭಟಿಸಬಾರದು” ಅಂದನು ನಿಮ್ಮ ಧ್ವನಿಯು ಕೇಳಿಸದಿರಲಿ ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ, ಆರ್ಭಟಿಸಿರೆಂದು ನಾನು ಹೇಳುವ ದಿನದಂದು. ಮಾತ್ರ ಆರ್ಭಟಿಸಿರಿ ಎಂದು ಆಜ್ಞಾಪಿಸಿದನು." (ಯೆಹೋಶುವ 6:8-10 ULB)

ಈ ವಾಕ್ಯಗಳನ್ನು ಓದಿದಾಗ ಯೆಹೋಶುವನು ಜನರಿಗೆ ಸೈನ್ಯದವರು ಸನ್ನದ್ಧರಾಗಿ ನಡೆಯತೊಡಗಿದ ಮೇಲೆ ಆರ್ಭಟಿಸಬೇಡಿ ಎಂದು ಆಜ್ಞಾಪಿಸಿದಂತಿದೆ. ಆದರೆ ಯೆಹೋಶುವನು ಸೈನ್ಯದವರು, ಸನ್ನದ್ಧರಾಗಿ ನಡೆಯುವ ಮೊದಲೇ ಅದನ್ನು ಆಜ್ಞಾಪಿಸಿದ್ದನು.

ಬಲಿಷ್ಠನಾದ ದೇವದೂತನೊಬ್ಬನು " ಈ ಸುರುಳಿಯನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು ? ಎಂದು ಮಾಹಶಬ್ದದಿಂದ ಸಾರವುದನ್ನು ಕಂಡೆನು. (ಪ್ರಕಟಣೆ 5:2 ULB)

ಈ ವಾಕ್ಯಗಳನ್ನು ಓದಿದಾಗ ಮೊದಲು ಸುರುಳಿ ಬಿಚ್ಚಿದ ನಂತರ ಮುದ್ರೆ ಒಡೆಯಬೇಕು ಎಂಬಂತಿದೆ. ಆದರೆ ಮೊದಲು ಮುದ್ರೆ ಒಡೆದ ನಂತರವೇ ಸುರುಳಿ ಬಿಚ್ಚಲು ಸಾಧ್ಯ ಎಂದು ಎಲ್ಲರಿಗೂ ತಿಳಿದ ವಿಷಯ

ಭಾಷಾಂತರ ತಂತ್ರಗಳು.

  1. ನಿಮ್ಮ ಭಾಷೆಯಲ್ಲಿ ಈಗಾಗಲೇ ನಡೆದಿರುವ ಘಟನೆಗಳನ್ನು ಸಂದರ್ಭೋಚಿತವಾಗಿ ಪ್ರಸ್ತುತ ತಿಳಿಸುವ ವಿಷಯದೊಂದಿಗೆ ಸೇರಿಸಿ ಹೇಳುವ ಪದಗಳು, ನುಡಿಗಟ್ಟುಗಳು ಇದ್ದರೆ ಅವುಗಳನ್ನು ಬಳಸಿಕೊಳ್ಳಿ.
  2. ನಿಮ್ಮ ಭಾಷೆಯಲ್ಲಿ ಈಗಾಗಲೇ ನಡೆದಿರುವ ಘಟನೆಗಳನ್ನು ಪ್ರಸ್ತುತಪಡಿಸಿ ಹೇಳುವಾಗ ಕ್ರಿಯಾಪದಗಳು ಕಾಲವನ್ನು ಸೂಚಿಸುವ (ಕಾಲಸೂಚಕ) ಪದಗಳು ಇದ್ದರೆ ಬಳಸಿಕೊಳ್ಳಬಹುದು. ([ಕ್ರಿಯಾಪದಗಳ ಬಗ್ಗೆ ಇರುವ ವಿವರವನ್ನು ನೋಡಿ)
  3. ನಿಮ್ಮ ಭಾಷೆಯಲ್ಲಿ ಅನುಕ್ರಮವಾಗಿ ತಿಳಿಸಬಹುದಾದರೆ ಎಲ್ಲಾ ಘಟನೆಗಳನ್ನು ಒಂದರನಂತರ ಒಂದರಂತೆ ಕ್ರಮವಾಗಿ ಬಳಸಬಹುದು. ಇದಕ್ಕೆ ಎರಡು ಅಥವಾ ಮೂರು ವಾಕ್ಯಗಳನ್ನು ಒಟ್ಟಿಗೆ ಸೇರಿಸಬೇಕಾಗಬಹುದು. (5-6ರಂತೆ). (ವಾಕ್ಯ ಬಂಧ Verse Bridges ನೋಡಿ)

ಭಾಷಾಂತರದ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು

  1. ನಿಮ್ಮ ಭಾಷೆಯಲ್ಲಿ ಬಳಸುವ ನುಡಿಗಟ್ಟುಗಳು, ಕಾಲಸೂಚಕ ಪದಗಳು ಒಂದು ಘಟನೆ ಈಗಾಗಲೇ ನಡೆದಬಗ್ಗೆ ತಿಳಿಸುವ ಪ್ರಸ್ತುತ ಅದನ್ನು ಬಳಸಿಕೊಳ್ಳಲು ಬಳಸಬಹುದಾದ ಸೂಕ್ತ ಪದಗಳು ಇದ್ದರೆ ಅವುಗಳಲ್ಲಿ ಒಂದನ್ನು ಬಳಸಿಕೊಳ್ಳಬಹುದು.
  • 20ಆಗ ಹೆರೋದನು ಯೋಹಾನನ್ನು ಸೆರೆಯಲ್ಲಿರಿಸಿದನು 21ಎಲ್ಲಾ ಜನರು ಯೋಹಾನನಿಂದ ದೀಕ್ಷಸ್ನಾನ ಪಡೆಯುವಾಗ, ಯೇಸು ಸಹ ದೀಕ್ಷಾ ಸ್ನಾನ ಪಡೆದನು. (ಲೂಕ 3:20-21 ULB)

  • 20ಹೆರೋದನು ಯೋಹಾನನ್ನು ಸೆರೆಯಲ್ಲಿಹಾಕಿಸಿದನು, 21ಯೋಹಾನನನ್ನು ಸೆರೆಯಲ್ಲಿ ಹಾಕುವ ಮೊದಲೇ,ಎಲ್ಲಾ ಜನರು ಯೋಹಾನನಿಂದ ದೀಕ್ಷಸ್ನಾನ ಮಾಡಿಸಿಕೊಂಡಾಗ ಯೇಸು ಸಹ ದೀಕ್ಷಾಸ್ನಾನ ಹೊಂದಿದನು.

  • ಇದರ ಸುರುಳಿಗಳನ್ನು ಬಿಚ್ಚುವುದಕ್ಕೂ, ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು ? (ಪ್ರಕಟಣೆ 5:2 ULB)

    • ಇದರ ಮುದ್ರೆಗಳನ್ನು ಒಡೆದ ನಂತರ ಇದರ ಸುರುಳಿಗಳನ್ನುಬಿಚ್ಚಲು ಯಾವನುಯೋಗ್ಯನು?
  1. ನಿಮ್ಮ ಭಾಷೆಯಲ್ಲಿ ಈಗಾಗಲೇ ನಡೆದಿರುವ ಘಟನೆಗಳನ್ನು ಪ್ರಸ್ತುತಪಡಿಸಿ ಹೇಳುವಾಗ ಕ್ರಿಯಾಪದಗಳು ಕಾಲವನ್ನು ಸೂಚಿಸುವ (ಕಾಲಸೂಚಕ) ಪದಗಳು ಇದ್ದರೆ ಬಳಸಿಕೊಳ್ಳಬಹುದು.
  • 8ಯೆಹೋಶುವನು ಜನರಿಗೆ ಆಜ್ಞಾಪಿಸಿದಂತೆ ಏಳುಜನ ಯಾಜಕರು ಏಳು ಕೊಂಬುಗಳನ್ನು ಹಿಡಿದು ಊದುತ್ತಾ ಯೆಹೋವನ ಮುಂದೆ ನಡೆದರು. ಮುಂದೆ ಹೋದಂತೆ ಅವರು ಆರ್ಭಟಿಸುತ್ತಾ ಕೊಂಬು ಊದುತ್ತಾ ನಡೆದರು…10ಆದರೆ ಯೆಹೋಶುವನು ಜನರಿಗೆ " ನೀವು ಈಗ ಆರ್ಭಟಿಸದಿರಿ ಎಂದು ಆಜ್ಞಾಪಿಸಿದನು. ನಿಮ್ಮ ಧ್ವನಿಯು ಕೇಳಿಸದಿರಲಿ ನಾನು ಆರ್ಭಟಿಸಿರೆಂದು ಹೇಳುವ ದಿನಮಾತ್ರ ಆರ್ಭಟಿಸಿರಿ,.ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ ನಾನು ಹೇಳಿದ ದಿನಮಾತ್ರ ಆರ್ಭಟಿಸಿರಿ " (ಯೆಹೋಶುವ 6:8-10 ULB)

  • 8ಯೆಹೋಶುವನು ಜನರಿಗೆ ಆಜ್ಞಾಪಿಸಿದಂತೆ ಏಳುಜನ ಯಾಜಕರು ಏಳು ಕೊಂಬುಗಳನ್ನು ಹಿಡಿದು ಊದುತ್ತಾ ಯೆಹೋವನ ಮುಂದೆ ನಡೆದರು. ಮುಂದೆ ಹೋದಂತೆ ಅವರು ಆರ್ಭಟಿಸುತ್ತಾ ಕೊಂಬು ಊದುತ್ತಾ ನಡೆದರು…10ಆದರೆ ಯೆಹೋಶುವನು ಜನರಿಗೆ " ನೀವು ಈಗ ಆರ್ಭಟಿಸದಿರಿ ಎಂದು ಆಜ್ಞಾಪಿಸಿದನು. ನಿಮ್ಮ ಧ್ವನಿಯು ಕೇಳಿಸದಿರಲಿ ನಾನು ಆರ್ಭಟಿಸಿರೆಂದು ಹೇಳುವ ದಿನಮಾತ್ರ ಆರ್ಭಟಿಸಿರಿ,.ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ ನಾನು ಹೇಳಿದ ದಿನಮಾತ್ರ ಆರ್ಭಟಿಸಿರಿ

  1. ನಿಮ್ಮ ಭಾಷೆಯಲ್ಲಿ ಅನುಕ್ರಮವಾಗಿ ತಿಳಿಸಬಹುದಾದರೆ ಎಲ್ಲಾ ಘಟನೆಗಳನ್ನು ಒಂದರನಂತರ ಒಂದರಂತೆ ಕ್ರಮವಾಗಿ ಬಳಸಬಹುದು. ಇದಕ್ಕೆ ಎರಡು ಅಥವಾ ಮೂರು ವಾಕ್ಯಗಳನ್ನು ಒಟ್ಟಿಗೆ ಸೇರಿಸಬೇಕಾಗಬಹುದು. (5-6ರಂತೆ).
  • 8ಯೆಹೋಶುವನು ಜನರಿಗೆ ಆಜ್ಞಾಪಿಸಿದಂತೆ ಏಳುಜನ ಯಾಜಕರು ಏಳು ಕೊಂಬುಗಳನ್ನು ಹಿಡಿದು ಊದುತ್ತಾ ಯೆಹೋವನ ಮುಂದೆ ನಡೆದರು. ಮುಂದೆ ಹೋದಂತೆ ಅವರು ಆರ್ಭಟಿಸುತ್ತಾ ಕೊಂಬು ಊದುತ್ತಾ ನಡೆದರು…10ಆದರೆ ಯೆಹೋಶುವನು ಜನರಿಗೆ " ನೀವು ಈಗ ಆರ್ಭಟಿಸದಿರಿ ಎಂದು ಆಜ್ಞಾಪಿಸಿದನು. ನಿಮ್ಮ ಧ್ವನಿಯು ಕೇಳಿಸದಿರಲಿ ನಾನು ಆರ್ಭಟಿಸಿರೆಂದು ಹೇಳುವ ದಿನಮಾತ್ರ ಆರ್ಭಟಿಸಿರಿ,.ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ ನಾನು ಹೇಳಿದ ದಿನಮಾತ್ರ ಆರ್ಭಟಿಸಿರಿ." (ಯೆಹೋಶುವ 6:8-10 ULB)

    • 8-10ಯೆಹೋಶುವ ಜನರಿಗೆ, “ಆರ್ಭಟಿಸ ಬೇಡಿ " ಎಂದು ಆಜ್ಞಾಪಿಸಿದನು. " ನಾನು ನಿಮಗೆ ಹೇಳುವವರೆಗೂ ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ” " ಆಗ ಮಾತ್ರ ನೀವು ಆರ್ಭಟಿಸಬೇಕು ". ಯೆಹೋಶುವನು ತನ್ನ ಜನರಿಗೆ ಆಜ್ಞಾಪಿಸಿದಂತೆ ಯೆಹೋವನ ಮುಂದೆ ಏಳುಜನ ಯಾಜಕರು ಏಳುಕೊಂಬುಗಳನ್ನು ಕೊಂಡೊಯ್ದರು.ಅವರು ಮುಂದುವರೆದಂತೆ ಕೊಂಬೂದುತ್ತಾ ನಡೆದರು.
  • ಈ ಸುರುಳಿಗಳನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು ? (ಪ್ರಕಟಣೆ 5:2 ULB)

    • ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಇದರ ಸುರುಳಿಗಳನ್ನು ಬಿಚ್ಚುವುದಕ್ಕೂ ಯಾವನು ಯೋಗ್ಯನು? ನೀವು ಈ ವೀಡಿಯೊ ವೀಕ್ಷಿಸಿ ಈ ಬಗ್ಗೆ ತಿಳಿದುಕೊಳ್ಳಿ at http://ufw.io/figs_events.

ಪಾರ್ಟ್ಸ್ ಆಫ್ ಸ್ಪೀಚ್.

Translation Manual :: Just-in-Time Learning Modules :: Grammar :: Parts of Speech

ವಿವರಣೆಗಳು

ಪಾರ್ಟ್ಸ್ ಆಫ್ ಸ್ಪೀಚ್ ಎಂದರೆ ನಾಮಪದ, ಕ್ರಿಯಾಪದಗಳ ವಿವಿಧ ರೂಪಗಳು. ಈ ಪದಗಳು ವಿವಿಧ ರೀತಿಯ ವಾಕ್ಯಗಳಲ್ಲಿ ವಿವಿಧ ರೀತಿಯ ಕಾರ್ಯವನ್ನು ನಿರ್ವಹಿಸುತ್ತವೆ. ಎಲ್ಲಾ ಭಾಷೆಗಳಲ್ಲೂ ಪಾರ್ಟ್ಸ್ ಆಫ್ ಸ್ಪೀಚ್ ಇದೆ, ಒಂದು ಭಾಷೆಯಲ್ಲಿ ಬರುವ ಎಲ್ಲಾ ಪದಗಳು ಪಾರ್ಟ್ಸ್ ಆಫ್ ಸ್ಪೀಚ್ ಗೆ ಸೇರಿದವು. ಭಾಷೆಯಲ್ಲಿಬರುವ ಎಲ್ಲಾ ಪದಗಳು ವಿವಿಧ ರೂಪದಲ್ಲಿದ್ದು ಒಂದಲ್ಲ ಒಂದು ಪಾರ್ಟ್ಸ್ ಆಫ್ ಸ್ಪೀಚ್ ನಲ್ಲಿ ಸೇರಿಯೇ ಇರುತ್ತದೆ. ಬಹುಪಾಲು ಭಾಷೆಗಳಲ್ಲಿ ಮೂಲಭೂತವಾದ ಪಾರ್ಟ್ಸ್ ಆಫ್ ಸ್ಪೀಚ್ ಗಳು ಸ್ವಲ್ಪ ವ್ಯತ್ಯಾಸದೊಂದಿಗೆ ಇರುತ್ತವೆ. ಕೆಲವು ಭಾಷೆಗಳಲ್ಲಿ ಇದಕ್ಕಿಂತ ಹೆಚ್ಚಿನದು ಇರಬಹುದು. ಇಲ್ಲಿ ಕೊಡುವಂತಹ ಪಾರ್ಟ್ಸ್ ಆಫ್ ಸ್ಪೀಚ್ ನ ಪಟ್ಟಿ ಇಲ್ಲಿಗೆ ಮುಗಿಯುವುದಿಲ್ಲ, ಆದರೆ ಇದು ಮೂಲಭೂತ ವಾಗಿ ಬೇಕಾಗಿರುವ ಎಲ್ಲಾ ವಿಧಗಳನ್ನು ಹೊಂದಿದೆ.

ಕ್ರಿಯಾಪದಗಳು ನಡೆಯುತ್ತಿರುವ ಕ್ರಿಯೆಯನ್ನು ಸೂಚಿಸುವ ಪದಗಳು (ಬಾ, ಹೋಗು,ತಿನ್ನು) ಅಥವಾ ಇರುವ ಸ್ಥಿತಿಯನ್ನು (is, are, was). ತಿಳಿಸುವಂತದ್ದು. ಹೆಚ್ಚಿನ ವಿವರವಾದ ಮಾಹಿತಿ ಕ್ರಿಯಾಪದ ವಿಭಾಗದಲ್ಲಿ ಕಾಣಬಹುದು.

ನಾಮಪದ ವ್ಯಕ್ತಿ, ಸ್ಥಳ, ವಸ್ತು, ವಿಷಯ,ಊರು ಮುಂತಾದವುಗಳನ್ನು ಪ್ರತಿನಿಧಿಸಿ ಹೇಳುವ ಹೆಸರು ಅಥವಾ ಪದವನ್ನು ನಾಮಪದ ಎಂದು ಕರೆಯುತ್ತಾರೆ. Common nouns – ರೂಢನಾಮ ಪದ ರೂಢಿಯಿಂದ ಬಂದ ಸಾಮಾನ್ಯವಾಚಕಗಳು.ಯಾವುದೇ ನಿರ್ದಿಷ್ಟ ವಸ್ತುವನ್ನು, ಮನುಷ್ಯನನ್ನು, ಸ್ಥಳವನ್ನು, ದೇಶವನ್ನು, ಕುರಿತು ಅಲ್ಲ. proper nouns – (ಅಂಕಿತ ನಾಮಪದ)ಇದು ಒಬ್ಬ ನಿರ್ದಿಷ್ಟ ವ್ಯಕ್ತಿ, ಸ್ಥಳ, ವಸ್ತುವಿನ ಬಗ್ಗೆ ಹೇಳುವ ನಾಮಪದ ಉದಾ : - ಪೀಟರ್, ಯೆರುಸಲೇಮ್, ಈಜಿಪ್ಟ್, ಹೆಚ್ಚಿನ ಮಾಹಿತಿಗಾಗಿ ಹೆಸರುಗಳನ್ನು ಹೇಗೆ ಭಾಷಾಂತರಿಸ ಬಹುದು ಎಂಬುದನ್ನು ನೋಡಿ

PRONOUNS - ಸರ್ವನಾಮಗಳು – ನಾಮಪದಕ್ಕೆ ಬದಲಾಗಿ ಬಳಸುವ ಪದಗಳನ್ನು ಸರ್ವನಾಮ ಎಂದು ಹೆಸರು. ಅವು ಯಾವುವೆಂದರೆ ಅವನು, ಅವಳು, ಅದು, ಇದು, ನೀನು, ಅವರು, ನಾವು ಇತ್ಯಾದಿ. ಹೆಚ್ಚಿನ ಮಾಹಿತಿಗಾಗಿ pronouns ಅಧ್ಯಾಯವನ್ನು ನೋಡಿ.

CONJUNCTIONS - ಸಂಬಂಧ ಅವ್ಯಯ – ಎರಡು ಪದಗುಚ್ಛ ಅಥವಾ ಎರಡು ವಾಕ್ಯಗಳನ್ನು ಬೆಸೆಯುವ ಪದಗಳನ್ನು conjunctions ಎಂದು ಕರೆಯುತ್ತೇವೆ. ಉದಾಹರಣೆಗಳು - ಮತ್ತು, ಅಥವಾ, ಆದರೆ, ಆದರೂ, ಇಲ್ಲವೆ, ಇಂಗ್ಲೀಷಿನಲ್ಲಿ ಕೆಲವು conjunctions ಗಳು ಜೋಡಿ ಪದಗಳಾಗಿ ಬರುತ್ತವೆ. both/and; either/or; neither/nor; not only/but also. ಹೆಚ್ಚಿನ ಮಾಹಿತಿಗಾಗಿ Connecting Words ನೋಡಿ.

PREPOSITIONS - (ವಿಭಕ್ತಿ ಪ್ರತ್ಯಯಗಳು) ಇವು ಪದಗಳು ಪ್ರಾರಂಭವಾಗಿ ನಾಮಪದ ಅಥವಾ ಕ್ರಿಯಾಪದಗಳನ್ನು ಬೆಸೆಯುವುದರೊಂದಿಗೆ ನಾಮಪದ ಮತ್ತು ಕ್ರಿಯಾಪದ ಸಂಬಂಧವಾಚಕ, ಕಾರ್ಯದ ಬಗ್ಗೆ ಹೇಳುತ್ತದೆ. ಉದಾಹರಣೆಗೆ – ಆ ಹುಡುಗಿಯು ತನ್ನ ತಂದೆಯ ಬಳಿಗೆ ಓಡಿದಳು ." ಇಲ್ಲಿ ವಾಕ್ಯದಲ್ಲಿ ಬರುವ ಪ್ರತ್ಯಯ " ಗೆ ", (ಬಳಿಗೆ) ಹುಡುಗಿ ಓಡಿಹೋದ ದಿಕ್ಕನ್ನು ಸೂಚಿಸುತ್ತದೆ (ಕ್ರಿಯೆ) ತನ್ನ ತಂದೆಯ ಬಳಿಗೆ ಇನ್ನೊಂದು ಉದಾಹರಣೆ – ಯೇಸುವಿನ ಸುತ್ತ ಇದ್ದ ಜನರ ಗುಂಪು ಹೆಚ್ಚುತ್ತಾ ಬಂದಿತು. ಇಲ್ಲಿನ ವಾಕ್ಯದೊಂದಿಗೆ ಇರುವ ಪ್ರತ್ಯಯಸುತ್ತ ಇದ್ದ ನಮಗೆ ಯೇಸುವಿನ ಬಳಿ ಇದ್ದ ಗುಂಪು ಮತ್ತುಸ್ಥಳವನ್ನು ತಿಳಿಸುತ್ತದೆ. ಮತ್ತು ಸ್ಥಾನವನ್ನು ತಿಳಿಸುತ್ತದೆ. ಪ್ರಿಪೋಜಿಷನ್ ಗೆ – (ಪ್ರತ್ಯಯಗಳ) ಕೆಲವು ಉದಾಹರಣೆಗಳು : “ಗೆ”, ಇಂದ, ಒಳಗೆ, ಹೊರಗೆ, ದೂರ, ಜೊತೆಗೆ, ಜೊತೆಯಿಲ್ಲದೆ, ಮೇಲೆ, ಕೆಳಗೆ, ಮುಂದೆ, ಹಿಂದೆ, ಆಮೇಲೆ, ಎಲ್ಲರೊಂದಿಗೆ, ಮೂಲಕ, ಎಲ್ಲೆ ಮೀರಿದ.

ARTICLES ಇದೂ ಒಂದು ಪದವಾಗಿ ಒಂದು ನಾಮಪದವನ್ನು ನಿರ್ದಿಷ್ಟ, ಅನಿರ್ದಿಷ್ಟ ಎಂದು ಗುರುತಿಸಲು ಇಂಗ್ಲೀಷಿನಲ್ಲಿ ಬಳಸುವಂತಾದ್ದು ಇಂಗ್ಲೀಷಿನಲ್ಲಿ ಈ ಪದಗಳು ಯಾವುವೆಂದರೆ : “a”, an, the. aಮತ್ತು anಎರಡೂ ಕಡೆ ಒಂದೇ ಅರ್ಥ ಕೊಡುತ್ತದೆ. ಈ "a dog,(ಒಂದು ನಾಯಿ)ಎಂದು ಹೇಳಿದರೆ,ಕೇಳಿಸಿಕೊಳ್ಳುವವರಿಗೆ ಯಾವ ನಾಯಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿಳಿಯುವುದಿಲ್ಲ ಏಕೆಂದರೆ ಅವನು ಮೊದಲ ಸಲ ನಾಯಿಯ ಬಗ್ಗೆ ಹೇಳುತ್ತಿರಬಹುದು. thedog, ಇದೇ ನಾಯಿ ಎಂದು ಹೇಳಿದರೆ ಒಂದು ನಿರ್ದಿಷ್ಟ ನಾಯಿಯ ಬಗ್ಗೆ ಹೇಳುತ್ತಿದ್ದಾನೆ ಎಂದು ಕೇಳಿಸಿಕೊಳ್ಳುತ್ತಿರುವವನು ಎಂದು ತಿಳಿದುಕೊಳ್ಳುತ್ತಾನೆ. ಕೆಲವೊಮ್ಮೆ ಇಂಗ್ಲೀಷ್ ಮಾತನಾಡುವವರು theಪದವನ್ನು ಸಾಮಾನ್ಯ ನಾಮಪದಗಳಿಗೂ ಬಳಸುತ್ತಾರೆ. ಉದಾಹರಣೆಗೆ “Theelephant is a large animal” (ಆನೆಯು ಬಹು ದೊಡ್ಡ ಪ್ರಾಣಿ) ಎನ್ನುವಲ್ಲಿ " The " ಎಲ್ಲಾ ಆನೆಗಳಿಗೂ ಅನ್ವಯಿಸುತ್ತದೆಯೇ ಹೊರತು ನಿರ್ದಿಷ್ಟ ಆನೆ ಬಗ್ಗೆ ಅಲ್ಲ. ಇದಕ್ಕೆ ಬೇಕಾದ ಹೆಚ್ಚಿನ ಮಾಹಿತಿ Generic Noun Phrases ಯಲ್ಲಿ ನೋಡಬಹುದು.

ADJECTIVES - ಗುಣವಾಚಕಗಳು - ನಾಮಪದದ ಗುಣವನ್ನು, ರೀತಿ, ಸ್ವಭಾವ, ತಿಳಿಸುತ್ತದೆ, ಗುಣವಾಚಕ ಪದಗಳಿಗೆ ಉದಾಹರಣೆ, ಅಳತೆ, ಆಕಾರ, ಬಣ್ಣ, ವಯಸ್ಸು, ಇತ್ಯಾದಿ. ಕೆಲವು ಉದಾಹರಣೆಗಳು - ತುಂಬಾ, ದೊಡ್ಡ, ನೀಲಿ, ವಯಸ್ಸಾದ, ಸುಂದರ. ಕೆಲವೊಮ್ಮೆ ಗುಣವಾಚಕಗಳನ್ನು ಒಂದು ವಿಷಯಕ್ಕೂ ಇನ್ನೊಂದು ವಿಷಯಕ್ಕೂ ನಡುವೆ ವ್ಯತ್ಯಾಸ ತಿಳಿಸಲು ಬಳಸಬಹುದು. ಉದಾಹರಣೆ ನನ್ನ ಹಿರಿಯ ವಯಸ್ಸಿನ ತಂದೆ ಗುಣವಾಚಕ ಹಿರಿ ವಯಸ್ಸು ಸರಳವಾಗಿ ನನ್ನ ತಂದೆಯ ವಯಸ್ಸನ್ನು ಸೂಚಿಸುತ್ತದೆ. ಆದರೆ ನನ್ನ ದೊಡ್ಡ ಅಕ್ಕ ಈ ಪದ ದೊಡ್ಡ ಇತರ ಎಲ್ಲಾ ಸಹೋದರಿಯರಿಗಿಂತ ದೊಡ್ಡವಳು ಎಂದೂ ನನಗೆ ಇನ್ನು ಅನೇಕ ಸಹೋದರಿಯರು ಇದ್ದಾರೆ ಎಂದು ಸೂಚಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ವ್ಯತ್ಯಾಸ ತಿಳಿದು ವಿಂಗಡಿಸುವುದು / ಮಾಹಿತಿ ನೀಡುವುದು / ನೆನಪಿಸುವುದು.

ADVERBS (ಕ್ರಿಯಾ ವಾಚಕ) ಕ್ರಿಯಾ ವಾಚಕಪದಗಳು ಕ್ರಿಯೆ ಹೇಗೆ ನಡೆಯಿತು ಎಂದು ಹೇಳುವುದರೊಂದಿಗೆ, ನಾಮವಾಚಕ ಪದಗಳಾದ ಹೇಗೆ, ಯಾವಾಗ, ಎಲ್ಲಿ, ಏಕೆ ಮತ್ತು ಎಲ್ಲಿಯವರೆಗೆ ಇತ್ಯಾದಿಗಳ ಬಗ್ಗೆಯೂ ಹೇಳುತ್ತದೆ. ಅನೇಕ ಕ್ರಿಯಾ ವಾಚಕಗಳು (adverbs) ಇಂಗ್ಲೀಷಿನಲ್ಲಿ ly.ಇಂದ ಕೊನೆಗೊಳ್ಳುತ್ತದೆ. ಕ್ರಿಯಾ ವಾಚಕಗಳಿಗೆ ಉದಾ : ನಿಧಾನವಾಗಿ, ಉದ್ದೇಶಪೂರ್ವಕವಾಗಿ, ತುಂಬಾ, ಆಮೇಲೆ ಇತ್ಯಾದಿ.


ಸ್ವಾದೀನ

Translation Manual :: Just-in-Time Learning Modules :: Grammar :: Possession

ವಿವರಣೆ

ಸಾಮಾನ್ಯವಾಗಿ ಇಂಗ್ಲೀಷ್ ಭಾಷೆಯಲ್ಲಿ ಸ್ವಾಧೀನವನ್ನು ಅಥವಾ ಸ್ವಾಮ್ಯ ಸಂಬಂಧವನ್ನು ಸೂಚಿಸುವುದಕ್ಕೆ ಬಳಸುವ ವಾಕ್ಯರಣದ ರೂಪವನ್ನು ಜನರಿಗೂ ವಸ್ತುಗಳಿಗೂ ನಡುವೆಯಿರುವ ಸಂಬಂಧವನ್ನು ಅಥವಾ ಜನರಿಗೂ ಬೇರೆ ಜನರಿಗೂ ನಡುವೆಯಿರುವ ಸಂಬಂಧವನ್ನು ಸಹ ಸೂಚಿಸುವುದಕ್ಕಾಗಿ ಬಳಸುತ್ತಾರೆ. ಇಂಗ್ಲೀಷ್ ಭಾಷೆಯಲ್ಲಿ ಆ ವ್ಯಾಕರಣ ಸಂಬಂಧವನ್ನು ಸೂಚಿಸುವುದಕ್ಕಾಗಿ of, apostrophe (ಷಷ್ಠಿವಿಭಕ್ತಿಯ ಚಿಹ್ನೆ) ಮತ್ತು “s” ಅಕ್ಷರವನ್ನು, ಅಥವಾ ಸ್ವಾಮ್ಯವಾಚಕ ಸರ್ವನಾಮಗಳನ್ನು ಬಳಸುತ್ತಾರೆ. ನನ್ನ ಅಜ್ಜನ ಒಡೆತನದಲ್ಲಿರುವ ಮನೆ ಎಂಬುದನ್ನು ಸೂಚಿಸುವುದಕ್ಕಾಗಿ ಬಳಸುವ ಬೇರೆ ಬೇರೆ ರೀತಿಗಳ ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.

  • ನನ್ನ ಅಜ್ಜನ ಮನೆ
  • ನನ್ನ ಅಜ್ಜನಿಗೆ ಸೇರಿದ ಮನೆ
  • ಅವನ ಮನೆ.

ಸ್ವಾಮ್ಯಸೂಚಕ ಸಂಬಂಧವನ್ನು ಇಬ್ರಿಯಾ, ಗ್ರೀಕ್ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ವಿವಿಧ ಸನ್ನಿವೇಶಗಳಲ್ಲಿ ಬಳಸುತ್ತಾರೆ. ಇಲ್ಲಿ ಕೆಲವು ಸಾಮಾನ್ಯ ಸನ್ನಿವೇಶಗಳನ್ನು ಬಳಸಿರುವ ಉದಾಹರಣೆಗಳಿವೆ.

  • ಒಡೆತನ – ಕೆಲವೊಂದನ್ನು ಕೆಲವುಗಳ ಮೇಲೆ ಒಡೆತನವಿರುತ್ತದೆ.
    • ನನ್ನ ಬಟ್ಟೆಗಳು – ನನ್ನ ಬಳಿಯಿರುವ ನನ್ನದೇ ಆದ ಬಟ್ಟೆಗಳು.
  • ಸಾಮಾಜಿಕ ಸಂಬಂಧಗಳು – ಕೆಲವರು ಸಮಾಜದಲ್ಲಿನ ಕೆಲವರೊಂದಿಗೆ ಸಾಮಾಜಿಕ ಸಂಬಂಧಗಳನ್ನು ಹೊಂದಿರುತ್ತಾರೆ.
    • ನನ್ನ ತಾಯಿ – ನನಗೆ ಜನ್ಮ ಕೊಟ್ಟ ಹೆಣ್ಣು ಅಥವಾ ನನ್ನ ಬಗ್ಗೆ ಕಾಳಜಿ ವಹಿಸಿದ ಹೆಣ್ಣು/ಹೆಂಗಸು.
    • ನನ್ನ ಶಿಕ್ಷಕ/ಕಿ – ನನಗೆ ಕಲಿಸಿದವರು.
  • ವಸ್ತುಗಳು – ಕೆಲವು ವಸ್ತುಗಳನ್ನು ಹೊಂದಿರುವುದು.
  • ಒಂದು ಚೀಲ ಆಲೂಗಡ್ಡೆ – ಚೀಲದಲ್ಲಿರುವ ಆಲೂಗಡ್ಡೆ, ಒಂದು ಚೀಲ ಆಲೂಗಡ್ಡೆಯಿಂದ ತುಂಬಿದೆ.
  • ಭಾಗ ಮತ್ತು ಪೂರ್ಣ ಒಂದು ಇನ್ನೊಂದರ ಭಾಗ.
  • ನನ್ನ ತಲೆ - ನನ್ನ ತಲೆ ನನ್ನ ದೇಹದ ಒಂದುಭಾಗ.
  • ಮನೆಯಛಾವಣಿ – ಛಾವಣಿ ಮನೆಯ ಒಂದು ಭಾಗ.

ಕಾರಣ ಇದೊಂದು ಭಾಷಾಂತರ ವಿಷಯ

  • ಭಾಷಾಂತರಗಾರರು ಎರಡು ನಾಮಪದಗಳ ನಡುವೆ ಎರಡು ಉದ್ದೇಶಗಳಿದ್ದು ಎರಡನ್ನು ಅರ್ಥಮಾಡಿಕೊಂಡು ಒಂದು ಇನ್ನೊಂದನ್ನು ಸ್ವಾಧೀನದಲ್ಲಿಟ್ಟುಕೊಳ್ಳುವುದು
  • ಕೆಲವು ಭಾಷೆಗಳು ಇಂತಹ ಸ್ವಾಧೀನ ಪಡಿಸುವ ಪದಗಳನ್ನು ಬಳಸುವ ಸನ್ನಿವೇಶಗಳನ್ನು ಬಳಸದೇ ಇರಬಹುದು.ಆದರೆ ನಿಮ್ಮ ಮೂಲ ಭಾಷೆಯ ಸತ್ಯವೇದದಲ್ಲಿ ಇದನ್ನು ಉಪಯೋಗಿಸಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು

ಒಡೆತನ - ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಮಗನು ಹಣದ ಒಡೆತನ ಹೊಂದಿದ್ದಾನೆ.

… ಕಿರಿಮಗನು ನನ್ನ ಭಾಗಕ್ಕೆ ಬಂದ ಹಣವನ್ನು ದುಂದುವೆಚ್ಚಮಾಡಿ ಎಲ್ಲಾ ಹಣವನ್ನು ಕಳೆದುಬಿಟ್ಟನು. (ಲೂಕ 15:13)

ಸಾಮಾಜಿಕ ಸಂಬಂಧ -ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಶಿಷ್ಯಂದಿರುಯೋಹಾನನಿಂದ ಕಲಿತುಕೊಂಡರು.

ಆಮೇಲೆ ಯೊಹಾನನ ಶಿಷ್ಯರು ಆತನ ಬಳಿಗೆ ಬಂದರು … (ಮತ್ತಾಯ 9:14 ULB)

ವಾಸ್ತವಿಕತೆ - ಕೆಳಗಿನ ಉದಾಹರಣೆಯಲ್ಲಿ, ಕಿರೀಟವನ್ನು ಮಾಡಲು ಬಳಸಿದ ವಸ್ತು /ಸಾಧನ ಲೋಹ ಬಂಗಾರ.

ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆ ಏನೋ ಇದ್ದವು (ಪ್ರಕಟಣೆ 9:7)

ವಸ್ತುಗಳು - ಕೆಳಗಿನ ಉದಾಹರಣೆಯಲ್ಲಿ ಬಟ್ಟಲಲ್ಲಿ ನೀರಿದೆ,.

ನೀವು ಕ್ರಿಸ್ತನವರೆಂದು ನಿಮಗೆ ಯಾವನಾದರೂಒಂದು ತಂಬಿಗೆ ನೀರು ಕೊಟ್ಟರೆ ಬರತಕ್ಕ ಪ್ರತಿಫಲ ತಪ್ಪುವುದೇ ಇಲ್ಲ. (ಮಾರ್ಕ 9:41 ULB)

ಪೂರ್ಣಭಾಗದ ಒಂದುಭಾಗ - ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಬಾಗಿಲು ಎಂಬುದು ಅರಮನೆಯ ಒಂದು ಭಾಗ.

ಆದರೆ ಉರೀಯನು ತನ್ನ ಮನೆಗೆ ಹೋಗದೆ ಅರಸನ ಸೇವಕರೊಡನೆ ಅರಮನೆಯ ಬಾಗಿಲಲ್ಲೇ ಮಲಗಿಕೊಂಡನು (2 ಸಮುವೇಲ 11:9 ULB)

ಒಂದು ಗುಂಪಿನ ಒಂದು ಭಾಗ - ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ “us” “ನಾವು” ಎಂಬುದು ಒಂದು ಗುಂಪು ಮತ್ತು ಪ್ರತಿಯೊಂದು ಎಂಬುದು ವೈಯಕ್ತಿಕ ಸದಸ್ಯರನ್ನು ಉದ್ದೇಶಿಸಿ ಹೇಳಿದೆ.

ಕ್ರಿಸ್ತನು ನಮ್ಮಲ್ಲಿ ಒಬ್ಬೊಬ್ಬನಿಗೆ ಅನುಗ್ರಹಿಸಿದ ಕೃಪಾವರ (ಎಫೇಸ 4:7 ULB)

ಸ್ವಾಧೀನತೆ ಮತ್ತು ಘಟನೆಗಳು.

ಕೆಲವೊಮ್ಮೆ ಒಂದು ಅಥವಾ ಎರಡು ನಾಮಪದಗಳು ಭಾವನಾಮಗಳನ್ನು ಒಂದು ಘಟನೆ ಅಥವಾ ಕ್ರಿಯೆಯನ್ನು ಉದ್ದೇಶಿಸಿದೆ. ಕೆಳಗಿನ ಉದಾಹರಣೆಗಳಲ್ಲಿ ಭಾವನಾಮಗಳು ದೊಡ್ಡ ಅಕ್ಷರ ಗಳಲ್ಲಿ ಮುದ್ರಿಸಿವೆ. ಇಲ್ಲಿ ಕೆಲವು ಸಂಬಂಧಗಳನ್ನು ಸೂಚಿಸುವ ಪದಗಳು ಎರಡು ನಾಮಪದಗಳ ನಡುವೆ ಬಂದು ಅದರಲ್ಲಿ ಒಂದುಪದ ಒಂದು ಘಟನೆಯನ್ನು ಕುರಿತು ಹೇಳುತ್ತದೆ.

ವಿಷಯ - ಕರ್ತೃಪದ ಕೆಲವೊಮ್ಮೆ “of” “ಯಿಂದ” ಎಂಬ ಪದ ಯಾರು ಕ್ರಿಯೆಯನ್ನು ಮಾಡುವವರು ಮತ್ತು ಮೊದಲ ನಾಮಪದದಿಂದ ಗುರುತಿಸಲ್ಪಡುತ್ತದೆ. ಕೆಳಗಿನ ಉದಾಹರಣೆಯಲ್ಲಿ ಯೋಹಾನನು ಜನರಿಗೆ ದೀಕ್ಷಾಸ್ನಾನ ನೀಡಿದ .

ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ .ಪರಲೋಕದಿಂದ ಬಂತೋ? ಮನುಷ್ಯರಿಂದ ಬಂತೋ? ಉತ್ತರ ಕೊಡಿರಿ ಎಂದನು." (ಮಾರ್ಕ 11:30)

ಕೆಳಗಿನ ಉದಾಹರಣೆಯಲ್ಲಿ ಯೇಸು ನಮ್ಮನ್ನು ಪ್ರೀತಿಸುತ್ತಾನೆ .

ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು .? (ರೋಮಾಪುರದವರಿಗೆ ಬರೆದ ಪತ್ರಿಕೆ 3:35)

ವಸ್ತು - (ಕರ್ಮಪದ) ಕೆಲವೊಮ್ಮೆ “of” ಎಂಬ ಪದದ ನಂತರ ಪದ ಯಾರು ಅಥವಾ ಏನು ನಡೆಯುತ್ತದೆ ಎಂಬುದನ್ನು ತಿಳಿಸುತ್ತದೆ. ಕೆಳಗಿನ ಉದಾಹರಣೆಗಳಲ್ಲಿ ಜನರು ಹಣವನ್ನು ಪ್ರೀತಿಸುತ್ತಾರೆ .

ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. (1 ತಿಮೋಥಿ 6:10 ULB)

ಸಾಧನ - ಕೆಲವೊಮ್ಮೆ “ಇಂದ” ಎಂಬ ಪದದ ನಂತರ ಬರುವಂತದ್ದು ಏನಾದರೂ ನಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ ಕೆಳಗಿನ ಉದಾಹರಣೆಯಲ್ಲಿ ದೇವರು ಜನರನ್ನು ಶತೃಗಳ ಖಡ್ಗಗಳ ಆಕ್ರಮಣಕ್ಕೆ ಗುರಿಮಾಡಿ ಶಿಕ್ಷಿಸುವರು .

ಕತ್ತಿಗೆ ಭಯಪಡಿರಿ, ಕತ್ತಿಯ ದಂಡನೆಗಳು ತೀಕ್ಷ್ಣವಾಗಿದೆ, ಇದರಿಂದ ನ್ಯಾಯ ನಿರ್ಣಯ ಉಂಟೆಂದು ತಿಳಿದುಕೊಳ್ಳುವಿರಿ (ಯೋಬ 19:29 ULB)

ಪ್ರತಿನಿಧಿತ್ವ - ಕೆಳಗಿನ ಉದಾಹರಣೆಯಲ್ಲಿ ತಮ್ಮ ಪಾಪಕ್ಕೆ ಪಶ್ಚಾತ್ತಾಪದಿಂದ ಬಂದ ಜನರಿಗೆ ಯೋಹಾನನು ದೀಕ್ಷಾಸ್ನಾನ ನೀಡಿದ. ತಮ್ಮ ಪಾಪಕ್ಕೆ ಪಶ್ಚಾತ್ತಾಪ ಪಟ್ಟದ್ದನ್ನು ಸಾಬೀತು ಪಡಿಸಲು ದೀಕ್ಷಾಸ್ನಾನ ಹೊಂದಿದರು. ಅವರ ದೀಕ್ಷಾಸ್ನಾನ ಅವರ ಪಶ್ಚಾತ್ತಾಪವನ್ನು ಪ್ರತಿನಿಧಿಸುತ್ತದೆ .

ಯೋಹಾನನು ಬಂದು, ಜನರಿಗೆ ನೀವು ಪಾಪಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಕೊಳ್ಳಬೇಕೆಂದು ಸಾರಿ ಹೇಳುತ್ತಾ ಅಡವಿಯಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾ ಇದ್ದನು (ಮಾರ್ಕ 1:4 ULB)

###ಎರಡು ನಾಮಪದಗಳ ನಡುವೆ ಇರುವ ಸಂಬಂಧವನ್ನು ಕಲಿತುಕೊಳ್ಳಲು ಸಹಾಯ ಮಾಡುವ ತಂತ್ರಗಳು.

  1. ಇಲ್ಲಿ ಕೊಟ್ಟಿರುವ ಸಂಬಂಧಪಟ್ಟ ವಾಕ್ಯಗಳು ಎರಡು ನಾಮಪದಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತವೆ.
  2. UDB.ಯಿಂದ ವಾಕ್ಯಗಳನ್ನು ಓದಿ. ಕೆಲವೊಮ್ಮೆ ಇದು ಸಂಬಂಧಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ.
  3. ಇಲ್ಲಿ ಇದರ ಬಗ್ಗೆ ಟಿಪ್ಪಣಿಗಳು ಏನು ಹೇಳುತ್ತವೆ ಎಂಬುದನ್ನು ನೋಡಿ.

ಭಾಷಾಂತರದ ಕೌಶಲ್ಯಗಳು.

ಎರಡು ನಾಮಪದಗಳ ನಡುವಿನ ನಿರ್ದಿಷ್ಟ ಸಂಬಂಧವನ್ನು ಸಹಜರೀತಿಯಲ್ಲಿ ಅದರ ಸ್ವಾಧೀನತೆಯನ್ನು ತೋರಿಸಿದರೆ ಅದನ್ನೇ ಬಳಸಿ. ಅದೇನಾದರೂ ವಿಚಿತ್ರವಾಗಿ ಅಥವಾ ಅರ್ಥಮಾಡಿಕೊಳ್ಳಲು ಕಷ್ಟವಾದರೆ ಅದನ್ನೇ ಪರಿಗಣಿಸಿ.

  1. ಒಂದು ಇನ್ನೊಂದನ್ನು ವಿವರಿಸುವ ಗುಣವಾಚಕಗಳನ್ನು ಬಳಸಿ.
  2. ಎರಡೂ ಪದಗಳು ಹೇಗೆ ಸಂಬಂಧಪಟ್ಟಿವೆ ಎಂಬುದನ್ನು ಒಂದು ಕ್ರಿಯಾಪದವನ್ನು ಬಳಸಿ ತೋರಿಸಿ.
  3. ಎರಡು ನಾಮಪದದಲ್ಲಿ ಒಂದು ಘಟನೆಯನ್ನು ಕ್ರಿಯಾಪದವನ್ನಾಗಿ ಭಾಷಾಂತರಿಸಿ.

ಭಾಷಾಂತರ ಕೌಶಲ್ಯಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.

  1. ಒಂದು ಇನ್ನೊಂದನ್ನು ವಿವರಿಸುವಂತೆ ಒಂದು ಗುಣವಾಚಕವನ್ನು ಬಳಸಿ. ಕೆಳಗೆ ಕೊಟ್ಟಿರುವ ಗುಣವಾಚಕ ಪದವನ್ನು ** ದೊಡ್ಡ ಅಕ್ಷರ** ಗಳಲ್ಲಿ ಮುದ್ರಿಸಿದೆ.
  • ಅವರ ತಲೆಯ ಮೇಲೆ ಚಿನ್ನದ ಕಿರೀಟಗಳಂತೆ ಏನೋ ಕಾಣಿಸುತ್ತಿತ್ತು (ಪ್ರಕಟಣೆ 9:7)
    • " ಅವರ ತಲೆಯ ಮೇಲೆ ಚಿನ್ನದ ಕಿರೀಟಗಳು "
  1. ಒಂದು ಕ್ರಿಯಾಪದವನ್ನು ಬಳಸಿ ಎರಡೂ ಒಂದರಡನೊಂದು ಸಂಬಂಧಪಟ್ಟಿದೆ ಎಂಬುದನ್ನು ತಿಳಿಸಿ. ಕೆಳಗಿನ ಉದಾಹರಣೆಯಲ್ಲಿ ಸೇರಿಕೊಂಡ ಕ್ರಿಯಾಪದ ದೊಡ್ಡ ಅಕ್ಷರದಲ್ಲಿದೆ.
  • … ನೀವು ಕ್ರಿಸ್ತನವರೆಂದು ನಿಮಗೆಯಾವನಾದರೂ ಒಂದು ತಂಬಿಗೆ ನೀರನ್ನು ಕುಡಿಯುವುದಕ್ಕೆ ಕೊಟ್ಟರೆ ಪ್ರತಿಫಲ ತಪ್ಪುವುದಿಲ್ಲ. (ಮಾರ್ಕ 9:41 ULB)

    • … ಯಾರಾದರೂ ಒಂದು ತಂಬಿಗೆಯಲ್ಲಿ ನೀರನ್ನು ಕುಡಿಯಲು ಕೊಟ್ಟರೆ ಅವನಿಗೆ ತಕ್ಕ ಪ್ರತಿಫಲ ದೊರೆಯುವುದು.
  • ಧನವು ಕೋಪದ ದಿನದಲ್ಲಿ ವ್ಯರ್ಥ ಧರ್ಮವು ಮರಣ ವಿಮೋಚಕ (ಜ್ಞಾನೋಕ್ತಿಗಳು 11:4 ULB)

    • ದೇವರುತನ್ನ ಕೋಪವನ್ನು ತೋರಿಸುವ ದಿನದಂದು ಐಶ್ವರ್ಯವು ವ್ಯರ್ಥ.
    • ದೇವರುತನ್ನ ಕೋಪದಿಂದ ತನ್ನ ಜನರನ್ನು ಶಿಕ್ಷಿಸುವ ದಿನ ಐಶ್ವರ್ಯವು ವ್ಯರ್ಥ.
  1. ಒಂದು ನಾಮಪದ ಒಂದು ಘಟನೆಯನ್ನು ಕುರಿತು ಹೇಳಿದರೆ ಅದನ್ನು ಕ್ರಿಯಾಪದವನ್ನಾಗಿ ಭಾಷಾಂತರಿಸಿ. ಕೆಳಗಿನ ಉದಾಹರಣೆಗಳಲ್ಲಿ ಕ್ರಿಯಾಪದ ದೊಡ್ಡಅಕ್ಷರಗಳ್ಲಿ ಇದೆ.
  • ನಿಮ್ಮ ದೇವರಾದ ಯೆಹೋವನ ಶಿಕ್ಷಣಕ್ರಮವನ್ನು, ಮಹಿಮೆಯನ್ನು, ಭುಜಬಲವನ್ನು ಶಿಕ್ಷಾಹಸ್ತವನ್ನು ಕುರಿತು ಏನೂ ತಿಳಿಯದ ನಿಮ್ಮ ಮಕ್ಕಳೊಂದಿಗೆ ನಾನು ಮಾತನಾಡುತ್ತಿಲ್ಲ , ಎಂಬುದನ್ನು ಗಮನಿಸಿ (ಧರ್ಮೋಪದೇಶಕಾಂಡ 11:2 ULB)

    • ಯೆಹೋವನಾದ ದೇವರು ಐಗುಪ್ತದೇಶದ ಜನರನ್ನು ಶಿಕ್ಷಿಸುವುದನ್ನು.ತಿಳಿಯದ, ನೋಡದ ನಿಮ್ಮ ಮಕ್ಕಳೊಂದಿಗೆ ಮಾತನಾಡುತ್ತಿದ್ದೇನೆ.ಎಂಬುದನ್ನು ಗಮನಿಸಿ
  • ದುಷ್ಟರಿಗೆ ಪ್ರತಿದಂಡನೆಯುಂಟೆಂಬುದನ್ನು ನೀನು ಕಣ್ಣಾರೆ ಕಂಡು ಅದಕ್ಕೆ ಸಾಕ್ಷಿಯಾಗಿರುವಿ ಯಷ್ಟೇ . (ದಾ.ಕೀ. 91:8 ULB)

    • ಯೊಹೋವನು ದುಷ್ಟರನ್ನು ಹೇಗೆ ಶಿಕ್ಷಿಸುವನು .ಎಂಬುದನ್ನು ನೀವು ಗಮನಿಸಿ ನೋಡಿ.
  • … ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ . (ಆ.ಕೃ. 2:38 ULB)

    • … ನೀವು ಪವಿತ್ರಾತ್ಮದಾನವನ್ನು ಪಡೆಯುವಿರಿ ದೇವರು ಇಂತಹವರಿಗೆ ಕೊಡುವ ನಿಮಗೆ ವರದಾನ .

ಕ್ರಿಯಾಪದಗಳು

Translation Manual :: Just-in-Time Learning Modules :: Grammar :: Verbs

ವಿವರಣೆ

ಕ್ರಿಯಾಪದಗಳೆಂದರೆ ಕ್ರಿಯೆಯನ್ನು ಸೂಚಿಸುವ ಪದ, ಕೆಲವೊಮ್ಮೆ ಘಟನೆ ಅಥವಾ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ವಿವರಿಸುವ ಅಥವಾ ಗುರುತಿಸುವ ಪದವಾಗಿ ಬಳಕೆಯಾಗುತ್ತದೆ.

ಉದಾಹರಣೆಗಳು ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕ್ರಿಯಾಪದಗಳನ್ನು ಗುರುತಿಸಲಾಗಿದೆ.

  • ಜಾನ್ ಓಡಿದನು. (" ಓಡು" ಎಂಬುದು ಕ್ರಿಯೆ)
  • ಜಾನ್ ಬಾಳೆಹಣ್ಣನ್ನು ತಿಂದನು. (" ತಿನ್ನು " ಎಂಬುದು ಕ್ರಿಯೆ)
  • ಜಾನ್ ಮಾರ್ಕನನ್ನು ನೋಡಿದನು. ("ನೋಡಿದನು " ಎಂಬುದು – ಒಂದು ಘಟನೆ)
  • ಜಾನ್ ಮರಣಹೊಂದಿದನು. (" ಮರಣಹೊಂದಿದ " ಎಂಬುದು – ಒಂದು ಘಟನೆ)
  • ಜಾನ್ ಎತ್ತರವಾಗಿದ್ದಾನೆ.

ಇಲ್ಲಿ " ಎತ್ತರವಾಗಿದ್ದಾನೆ " ಎಂಬುದು ಜಾನ್ ನನ್ನು ವರ್ಣಿಸುತ್ತದೆ ಇಲ್ಲಿ “is” ಎಂಬುದು ಕ್ರಿಯಾಪದವಾಗಿ ಜಾನ್ ಮತ್ತು ಎತ್ತರ ಎರಡೂ ಪದಗಳ ನಡುವೆ ಸಂಬಂಧ ಕಲ್ಪಿಸುತ್ತದೆ

  • ಜಾನ್ ನೋಡಲು.ಸುಂದರವಾಗಿದ್ದಾನೆ.

“is handsome” - ಸುಂದರವಾಗಿದ್ದಾನೆ ಎಂಬುದು ಜಾನ್ ನನ್ನು ವರ್ಣಿಸುತ್ತದೆ. ಇಲ್ಲಿ “ನೋಡಲು” looks" ಎಂಬ ಕ್ರಿಯಾಪದ ಜಾನ್ ಮತ್ತು ಸುಂದರ ಎಂಬ ಪದಗಳನಡುವೆ ಸಂಬಂಧ ಕಲ್ಪಿಸುತ್ತದೆ.

  • ಜಾನ್ ನನ್ನ.ಸಹೋದರ (ಇಲ್ಲಿ ಬರುವ “is my brother” ಜಾನ್ ನನ್ನು ಗುರುತಿಸುತ್ತದೆ.)

ಜನರು ಅಥವಾ ವಸ್ತುಗಳು ಕ್ರಿಯಾಪದದೊಂದಿಗೆ ಸಂಬಂಧಪಟ್ಟಿರುವುದಕ್ಕೆ ಉದಾಹರಣೆ.

ಕ್ರಿಯಾಪದವು ಸಾಮಾನ್ಯವಾಗಿ ಯಾರ ಬಗ್ಗೆಯಾಗಲೀ ಯಾವುದರ ಬಗ್ಗೆಯಾಗಲಿ ಉದಾಹರಣೆಗಳನ್ನು ಹೇಳುವಂತಾದ್ದು. ಮೇಲೆ ಕೊಟ್ಟಿರುವ ಉದಾಹರಣೆಗಳು ಜಾನ್ ಬಗ್ಗೆ ಹೇಳಿದಂತಹವು.

“ಜಾನ್” ಇಲ್ಲಿ ಎಲ್ಲಾ ವಾಕ್ಯಗಳಲ್ಲೂ ಕರ್ತೃಪದ subject. ಇಂಗ್ಲೀಷ್ ಭಾಷೆಯಲ್ಲಿ ಕರ್ತೃಪದ /ಕ್ರಿಯಾಪದಕ್ಕೆ ಮೊದಲೇ ಬರುತ್ತದೆ. ಕೆಲವೊಮ್ಮೆ ಇನ್ನೊಬ್ಬ ವ್ಯಕ್ತಿ ಅಥವಾ ವಸ್ತು ಕ್ರಿಯಾಪದದೊಂದಿಗೆ ಸೇರಿಕೊಳ್ಳುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕ್ರಿಯಾಪದವನ್ನು ಗುರುತಿಸಲಾಗಿದೆ. ಹಾಗೆಯೇ “ಕರ್ಮಪದವನ್ನು” object ಹಾಗೆಯೇ ದೊಡ್ಡ ಅಕ್ಷರಗಳಲ್ಲಿ ನಮೂದಿಸಿದೆ. ಇಂಗ್ಲೀಷ್ ಭಾಷೆಯಲ್ಲಿ ಕರ್ಮಪದ ಕ್ರಿಯಾಪದದ ನಂತರ ಬರುತ್ತದೆ.

  • ಅವನು ಊಟ ಮಾಡಿದನು .

  • He sang a song. ಅವನು ಒಂದು ಹಾಡನ್ನು ಹಾಡಿದನು ** ಅವನು ಒಂದು ಪುಸ್ತಕವನ್ನು ಓದಿದನು**

  • ಅವನು ಪುಸ್ತಕವನ್ನು ನೋಡಿದನು ಕೆಲವು ಕ್ರಿಯಾಪದಗಳಿಗೆ ಕರ್ಮಪದ (object.) ಇರುವುದಿಲ್ಲ.

  • ಸೂರ್ಯನು ಆರುಗಂಟೆಗೆ ಹುಟ್ಟಿದನು

  • ಜಾನ್ ಚೆನ್ನಾಗಿ ನಿದ್ದೆಮಾಡಿದನು

  • ಜಾನ್ ನಿನ್ನೆ ಬಿದ್ದು ಬಿಟ್ಟನು

ಇಂಗ್ಲೀಷ್ ಭಾಷೆಯಲ್ಲಿ ಕರ್ಮಪದವನ್ನು ಬಿಟ್ಟು (ಅದು ಮುಖ್ಯವಲ್ಲದಿದ್ದರೆ) ವಾಕ್ಯಮಾಡಬಹುದು.

  • ಅವನು ರಾತ್ರಿಹೊತ್ತು ಊಟ ಮಾಡುವುದಿಲ್ಲ
  • ಅವನು ಯಾವಾಗಲೂಹಾಡುತ್ತಿರುತ್ತಾನೆ
  • ಅವನು ಚೆನ್ನಾಗಿ ಓದುತ್ತಾನೆ ಅವನಿಂದ ನೋಡಲುಆಗುವುದಿಲ್ಲ.

ಕೆಲವು ಭಾಷೆಯಲ್ಲಿ ಕ್ರಿಯಾಪದಕ್ಕೆ ಕರ್ಮಪದ ಮುಖ್ಯವಲ್ಲದಿದ್ದರೂ ಬಳಸುವ ಅವಶ್ಯಕತೆ ಇರುತ್ತದೆ. ಇಂತಹ ಭಾಷೆ ಮಾತನಾಡುವವರು ಮೇಲಿನ ವಾಕ್ಯಗಳಂತೆ ಬಳಸಬಹುದು.

ಅವನು ರಾತ್ರಿಹೊತ್ತು ಊಟ ಯಾವಾಗಲು ಮಾಡುವುದಿಲ್ಲ ಅವನು ಯಾವಾಗಲೂ ಹಾಡುಗಳನ್ನು ಹಾಡುತ್ತಾನೆ ಅವನು ಪದಗಳನ್ನು ಚೆನ್ನಾಗಿ ಓದುತ್ತಾನೆ

  • ಅವನು ಯಾವುದನ್ನೂ ನೋಡಲು ಆಗುವುದಿಲ್ಲ.

ಕರ್ತೃಪದ ಮತ್ತು ಕರ್ಮಪದ ಕ್ರಿಯಾಪದದೊಂದಿಗೆ ಗುರುತಿಸಲ್ಪಡುತ್ತದೆ.

ಕೆಲವು ಭಾಷೆಯಲ್ಲಿ ವ್ಯಕ್ತಿಗಳಿಗೆ ಅಥವಾ ವಸ್ತುಗಳಿಗೆ ಸಂಬಂಧಿಸಿದಂತೆ ಸ್ವಲ್ಪಮಟ್ಟಿಗೆ ಕ್ರಿಯಾಪದಗಳು ಭಿನ್ನವಾಗಬಹುದು. ಇಂಗ್ಲೀಷ್ ಭಾಷೆಯಲ್ಲಿ ಕೆಲವೊಮ್ಮೆ ಕ್ರಿಯಾಪದದ ಕೊನೆಯಲ್ಲಿ “s” ಅಕ್ಷರ ಸೇರಿಸಿ ಬಳಸುತ್ತಾರೆ.ಏಕೆಂದರೆ ಕರ್ತೃಪದ ಒಬ್ಬ ವ್ಯಕ್ತಿಯಾಗಿದ್ದರೆ (ಕ್ರಿಯಾಪದವನ್ನು ಏಕವಚನ ರೂಪದಲ್ಲಿ ಬಳಸಲು “s” ಸೇರಿಸಿ ಬಳಸಬೇಕು)

ಇನ್ನೂ ಬೇರೆ ಭಾಷೆಯಲ್ಲಿ ಕರ್ತೃಪದ “ನಾನು”, “ನೀನು,” ಅಥವಾ " ಅವನು," " ಅವಳು," ಏಕವಚನ, ಬಹುವಚನ, ಪುರುಷ, ಮಹಿಳೆ, ಮಾನವ,ಪ್ರಾಣಿ, ವಸ್ತು ಇವುಗಳನ್ನು ಅವಲಂಬಿಸಿ ಬಳಸುತ್ತಾರೆ.

  • ಅವರು – ಪ್ರತಿದಿನ ಬಾಳೆಹಣ್ಣುಗಳನ್ನು - ತಿನ್ನುತ್ತಾರೆ ಇಲ್ಲಿ ಕರ್ತೃಪದ ಒಬ್ಬ ವ್ಯಕ್ತಿಗಿಂತ ಹೆಚ್ಚು " ಅವರು," ಜಾನ್ ಪ್ರತಿದಿನ ಬಾಳೆಹಣ್ಣುಗಳನ್ನು ತಿನ್ನುತ್ತಾನೆ
  • ಇಲ್ಲಿ ಕರ್ತೃಪದ ಜಾನ್ ಒಬ್ಬನೇ ವ್ಯಕ್ತಿ (ಏಕವಚನ)

ಕಾಲ ಮತ್ತು ಕಾಲಸೂಚಕ ಪ್ರತ್ಯಯಗಳು.

ಯಾವುದಾದರೂ ಒಂದು ಘಟನೆಯ ಬಗ್ಗೆ ಹೇಳುವಾಗ ಅದು ಯಾವಾಗ ನಡೆಯಿತು, ಈ ಘಟನೆ ನಡೆಯುತ್ತಿದೆಯೇ ಅಥವಾ ಮುಂದೆ ನಡೆಯುತ್ತದೆಯೇಎಂದು ಹೇಳುವಂತದ್ದು ಕಾಲಸೂಚಕ ಪ್ರತ್ಯಯಗಳು. ಕೆಲವೊಮ್ಮೆ ನಾವು ಇದನ್ನು ನೆನ್ನೆ, ಈಗ, ನಾಳೆ ಎಂಬ ಪದಗಳೊಂದಿಗೆ ಘಟನೆಯನ್ನು ಜೋಡಿಸಿ ಹೇಳುತ್ತೇವೆ. ಕೆಲವು ಭಾಷೆಯಲ್ಲಿ ಕ್ರಿಯಾಪದಗಳು ಸಮಯವನ್ನು ಆಧರಿಸಿ ಸ್ವಲ್ಪಮಟ್ಟಿಗೆ ವ್ಯತ್ಯಾಸಗಳೊಡನೆ ನಡೆಯಬಹುದು. ಈ ರೀತಿಯ ಸಮಯಕ್ಕೆ ಅನುಗುಣವಾಗಿ ನಡೆದ ಘಟನೆ ಬಗ್ಗೆ ಹೇಳುವುದೇ ಕಾಲಸೂಚಕ ಪ್ರತ್ಯಯ / ಕಾಲಗಳು ಎಂದು ಕರೆಯತ್ತೇವೆ. ಇಂಗ್ಲೀಷ್ ಭಾಷೆಯಲ್ಲಿ ಕ್ರಿಯಾಪದದ ಕೊನೆಯಲ್ಲಿ “ed” ಎಂಬುದನ್ನು ಸೇರಿಸಿ ಭೂತಕಾಲದಲ್ಲಿ ನಡೆದ ಘಟನೆ ಬಗ್ಗೆ ಹೇಳುತ್ತಾರೆ.

  • ಕೆಲವೊಮ್ಮೆ ಮೇರಿ ಮಾಂಸದ ಅಡುಗೆಯನ್ನು ಮಾಡುತ್ತಾಳೆ
  • ಮೇರಿ ನೆನ್ನೆ ಮಾಂಸದ ಅಡುಗೆಯನ್ನುಮಾಡಿದಳು (ಇಲ್ಲಿ ಮೇರಿ ಭೂತಕಾಲದಲ್ಲಿ ಮಾಡಿದ ಕೆಲಸವಿದು)

ಕೆಲವೊಮ್ಮೆ ಕೆಲವರು ಕ್ರಿಯೆ ನಡೆದ ಸಮಯವನ್ನು ನಮೂದಿಸಬಹುದಾದ ಕಾಲದಲ್ಲಿ ನಡೆಯುವ ಕೆಲಸ ಬಗ್ಗೆ ಹೇಳುತ್ತಾರೆ. ಇಂಗ್ಲೀಷ್ ಭಾಷೆಯಲ್ಲಿ “will” ಎಂಬ ಪದ ಬಳಸಿ ಭವಿಷ್ಯತ್ ಕಾಲದಲ್ಲಿ ನಡೆಯುವ ಕೆಲಸ/ಕಾರ್ಯದಬಗ್ಗೆ ಹೇಳುತ್ತಾರೆ.

  • ಮೇರಿ ನಾಳೆ ಮಾಂಸದ ಅಡುಗೆಯನ್ನು ಮಾಡುತ್ತಾಳೆ

ಅಂಶ

ಒಂದು ಘಟನೆಯ ಬಗ್ಗೆ ಹೇಳುವಾಗ ಕೆಲವೊಮ್ಮೆ ನಾವು ಆ ಘಟನೆ ಹೇಗೆ ನಡೆಯಿತು, ಎಷ್ಟು ಸಮಯ ತೆಗೆದುಕೊಂಡಿತು ಮತ್ತು ಇನ್ನೊಂದು ಘಟನೆಯೊಂದಿಗೆ ಸಂಬಂಧಹೊಂದಿದೆ. ಇದನ್ನೇ ಘಟನೆಯ ಸ್ವರೂಪ /ದೃಷ್ಟಿ ಎಂದು ಕರೆಯುತ್ತೇವೆ. ಇಂಗ್ಲೀಷ್ ಭಾಷೆಯಲ್ಲಿ ಕೆಲವೊಮ್ಮೆ ಕ್ರಿಯಾಪದದೊಂದಿಗೆ “is” or “has” ಮತ್ತು “s,” “ing,” or "edಕೊನೆಯಲ್ಲಿ ಸೇರಿವುದರೊಮದಿಗೆ ಒಂದು ಘಟನೆಗೂ ಮತ್ತು ಇನ್ನೊಂದು ಘಟನೆಗೂ ನಡುವೆ ಇರುವ ಸಂಬಂಧವನ್ನು ಸಮಯವನ್ನು ಸೂಚಿಸುತ್ತದೆ.

  • ಮೇರಿ ಪ್ರತಿದಿನ ಮಾಂಸದ ಅಡುಗೆಯನ್ನು ಬೇಯಿಸುತ್ತಾಳೆ ಇದು ಮೇರಿ ಆಗಿಂದಾಗ್ಗೆ ಮಾಡುವ ಕೆಲಸದ ಬಗ್ಗೆ ತಿಳಿಸುತ್ತದೆ.
  • ಮೇರಿ ಮಾಂಸದ ಅಡುಗೆಯನ್ನು ಬೇಯಿಸುತ್ತಿದ್ದಾಳೆ ಇದು ಮೇರಿ ಈ ಕ್ಷಣ ಏನು ಮಾಡುತ್ತಿದ್ದಾಳೆ ಎಂಬುದನ್ನು ಸೂಚಿಸುತ್ತದೆ. ಮೇರಿ ಮಾಂಸದ ಅಡುಗೆಯನ್ನು ಮಾಡಿದಳುಮತ್ತು ಜಾನ್ ಮನೆಗೆ ಬಂದನು ಇಲ್ಲಿ ಮೇರಿ ಮತ್ತು ಜಾನ್ ಮಾಡಿದ ಕೆಲಸದ ಬಗ್ಗೆ ಸರಳವಾಗಿ ಹೇಳಿದೆ.
  • ಮೇರಿ ಮಾಂಸದ ಅಡುಗೆ ಮಾಡುತ್ತಿರುವಾಗ ಜಾನ್ ಮನೆಗೆ ಬಂದನು. (ಇದು ಮೇರಿ ಕೆಲಸ ಮಾಡುತ್ತಿರುವಾಗ ಜಾನ್ ಮನೆಗೆ ಬಂದನು ಎಂಬುದನ್ನು ಸೂಚಿಸುತ್ತದೆ.)
  • ಮೇರಿ ಮಾಂಸದ ಅಡುಗೆ ಮಾಡಿದ್ದಾಳೆ ನಾವು ಅದನ್ನು ಊಟಮಾಡಬೇಕೆಂದು ಬಯಸುತ್ತಿದ್ದಾಳೆ. (ಇದು ಮೇರಿ ಮಾಡಿರುವ ಕೆಲಸದ ಸಮಯಕ್ಕೆ ಸಂಬಂಧಿಸಿದ್ದು.)
  • ಮೇರಿ ಮಾಂಸದ ಅಡಿಗೆ ಮಾಡುವ ಸಮಯದೊಳಗೆ ಮಾರ್ಕನು ಮನೆಗೆ ಬಂದನು. (ಇಲ್ಲಿ ಮೇರಿ ಭೂತಕಾಲದಲ್ಲಿ ಕೆಲಸಮಾಡಿ ಮುಗಿಸಿದ ಮೇಲೆ ಇನ್ನೊಂದು ಘಟನೆ ನಡೆದ ಬಗ್ಗೆ ತಿಳಿಸುತ್ತದೆ.)

ಪುಲ್ಲಿಂಗ ಪದಗಳು ಮಹಿಳೆಯರನ್ನು ಒಳಗೊಂಡಿದ್ದೇಕೆ ಯಾವ ಪದ ಹೇಗೆ ಬಳಸಬಹುದು.

Translation Manual :: Just-in-Time Learning Modules :: Grammar :: When Masculine Words Include Women

ಸತ್ಯವೇದದ ಕೆಲವು ಭಾಗಗಳಲ್ಲಿ, “ಪುರುಷರು”, “ಸಹೋದರರು”, "ಪುತ್ರರು "ಎಂಬ ಪದಗಳು ಪುರುಷರಿಗೆ ಸಂಬಂಧಿಸಿದ ಪದಗಳಾಗಿ ಬಳಕೆಯಾಗಿವೆ. ಇನ್ನೂ ಕೆಲವು ಭಾಗಗಳಲ್ಲಿ ಇಂತಹ ಪದಗಳು ಪುರುಷರು ಮತ್ತು ಮಹಿಳೆಯರನ್ನು ಉದ್ದೇಶಿಸಿ ಹೇಳುವರು. ಮೂಲ ಲೇಖಕರು ಪುರುಷರು ಮತ್ತು ಮಹಿಳೆಯರನ್ನು ಕುರಿತು ಒಂದೇ ಪದವನ್ನು ಬಳಸಿ ಇಬ್ಬರಿಗೂ ಸಮಾನಪದ ಬಳಸಿದಾಗ ಭಾಷಾಂತರಗಾರರು ಅದರಂತೆ ಬರೆಯಬೇಕೆ ಹೊರತು “ಪುರುಷ” ಎಂಬ ಪದ ಮಾತ್ರ ಬಳಸಬಾರದು.

ವಿವರಣೆಗಳು.

ಕೆಲವು ಭಾಷೆಯಲ್ಲಿ ಪುರುಷ ಮತ್ತು ಮಹಿಳೆಯರನ್ನು ಕುರಿತು ಹೇಳುವಾಗ ಸಾಮಾನ್ಯವಾಗಿ ಪುರುಷ ಎಂಬ ಒಂದೇ ಪದವನ್ನು ಬಳಸುತ್ತಾರೆ. ಉದಾಹರಣೆಗೆ ಸತ್ಯವೇದದಲ್ಲಿ ಕೆಲವೊಮ್ಮೆ ‘ಸಹೋದರರು ’ ಎಂದು ಸಹೋದರರು ಮತ್ತು ಸಹೋದರಿಯರಿಗೆ ಸೇರಿಸಿ ಹೇಳುವುದಿದೆ. ಇನ್ನೂ ಕೆಲವು ಭಾಷೆಯಲ್ಲಿ “ಪುರುಷ” ಸರ್ವನಾಮಗಳಾದ “ಅವನು” “ಅವನ” ಎಂಬ ಪದಗಳನ್ನು ಸಮಾನವಾಗಿ ಪುರುಷ ಮತ್ತು ಮಹಿಳೆಯರನ್ನು ಉದ್ದೇಶಿಸಿ ಹೇಳುವಾಗ ಬಳಸುತ್ತಾರೆ ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ “ಅವನ” ಎಂಬ ಪದ ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ.

ಜ್ಞಾನವಂತ ಮಗು ಅವನ ತಂದೆಗೆ ಸಂತೋಷ ತರುತ್ತಾನೆ. ಅಜ್ಞಾನಿಯಾದ ಮಗು ಅವನ ತಾಯಿಗೆ ದುಃಖತರುತ್ತಾನೆ. (ಜ್ಞಾನೋಕ್ತಿಗಳು 10:1 ULB)

ಇದಕ್ಕೆ ಕಾರಣ ಭಾಷಾಂತರ ತೊಡಕು

  • ಕೆಲವು ಸಂಸ್ಕೃತಿಯಲ್ಲಿ “ಪುರುಷ”, “ಸಹೋದರ” ಮತ್ತು, "ಮಗ " ಇಂತಹ ಪದಗಳು ಪುರುಷರನ್ನು ಉದ್ದೇಶಿಸಿ ಬಳಸಲಾಗುತ್ತದೆ. ಕೆಲವೊಮ್ಮೆ ಇಂತಹ ಸಮಾನ ಸಾಮಾನ್ಯ ಪದಗಳನ್ನು ಬಳಸಿದಾಗ ಜನರು ಇದನ್ನು ಪುರುಷರಿಗೆ ಮಾತ್ರ ಅನ್ವಯಿಸಿಕೊಂಡು ಮಹಿಳೆಯರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಯುವ ಸಾಧ್ಯತೆ ಇರುತ್ತದೆ.
  • ಕೆಲವು ಸಂಸ್ಕೃತಿಯಲ್ಲಿ “ಪುಲ್ಲಿಂಗ” ಪುರುಷ ಸರ್ವನಾಮಗಳಾದ “ಅವನು” “ಅವನ” ಎಂಬ ಪದಗಳು ಪುರುಷರಿಗೆ ಮಾತ್ರ ಅನ್ವಯಿಸುತ್ತದೆ. ಪುರುಷ ಸರ್ವನಾಮಗಳು ಪುರುಷರಿಗೆ ಮಾತ್ರ ಮೀಸಲು ಸಮಾನ ಸಾಮಾನ್ಯಪದವಾಗಿ ಸ್ತ್ರೀಯರಿಗೆ ಅನ್ವಯಿಸುವುದಿಲ್ಲ.

ಭಾಷಾಂತರ ತತ್ವಗಳು

ಯಾವುದೇ ಹೇಳಿಕೆ ಪುರುಷ ಮತ್ತು ಮಹಿಳೆಯರ ಬಗ್ಗೆ ಅನ್ವಯಿಸಿದ್ದರೆ ಅದನ್ನು ಇಬ್ಬರಿಗೂ ಅನ್ವಯಿಸುವಂತದ್ದು.

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು.

ಸಹೋದರರೇ, ಮೆಕದೋನ್ಯದ ಸಭೆಗಳಲ್ಲಿ ದೇವರ ಕೃಪೆಯು ತೋರಿದ ಬಗೆಯನ್ನು ನಿಮಗೆ ತಿಳಿಸಲು ನಾನು ಬಯಸುತ್ತೇನೆ. (2 ಕೋರಿಂಥ 8:1 ULB)

ಈ ವಾಕ್ಯವು ಕೋರಿಂಥಸಭೆಯ ವಿಶ್ವಾಸಿಗಳನ್ನು ಕುರಿತು ಹೇಳುವಂತದ್ದು, ಇವರಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಇದ್ದಾರೆ.

ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನೆಂದರೆ, " ಯಾರಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ, ಅವನುತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು, ಹೊತ್ತುಕೊಂಡುನನ್ನ ಹಿಂದೆ ಬರಲಿ ". (ಮತ್ತಾಯ 16:24-26 ULB)

ಯೇಸು ಈ ವಾಕ್ಯವನ್ನು ಹೇಳುವಾಗ ಪುರುಷನನ್ನುಮಾತ್ರ ಉದ್ದೇಶಿಸಿ ಹೇಳಲಿಲ್ಲ. ಇಲ್ಲಿ ಪುರುಷ ಮತ್ತು ಮಹಿಳೆ.ಇಬ್ಬರನ್ನು ಉದ್ದೇಶಿಸಿ ಹೇಳಿರುವ ಮಾತು.

ಎಚ್ಚರಿಕೆ: ಕೆಲವೊಮ್ಮೆ ಕೆಲವು ಪುರುಷರ ಕುರಿತಾದ ಪದಗಳು ಪುರುಷರನ್ನು ಮಾತ್ರ ಉದ್ದೇಶಿಸಿ ಹೇಳುವಂತದ್ದಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಜನರನ್ನು ಇಂತಹ ಪದಗಳು ಮಹಿಳೆಯರಿಗೂ ಅನ್ವಯಿಸುತ್ತದೆ ಎಂದು ತಿಳಿದುಕೊಳ್ಳುವಂತೆ ಮಾಡಬಾರದು. ಕೆಳಗಿನ ಪದಗಳು ವಿಶೇಷವಾಗಿ ಪುರುಷರನ್ನೇ ಉದ್ದೇಶಿಸಿ ಹೇಳುವ ಪದಗಳು.

ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನುಅಣ್ಣನ ಹೆಂಡತಿಯನ್ನುಮದುವೆ ಮಾಡಿಕೊಂಡುಅಣ್ಣನಿಗೆ ಸಂತಾನವನ್ನು .'ಪಡೆಯಬೇಕೆಂದುಮೋಶೆ ಹೇಳಿದ್ದಾನೆ. (ಮತ್ತಾಯ 22:24 ULB)

ಭಾಷಾಂತರ ಕೌಶಲ್ಯಗಳು

ಪುರುಷರನ್ನು ಗುರುತಿಸುವ ಪದಗಳಾದ “ಪುರುಷ”, “ಸಹೋದರ”, "ಅವನು " ಎಂಬ ಪದಗಳು ವಿಶೇಷ ಸಂದರ್ಭದಲ್ಲಿ ಮಹಿಳೆಯರಿಗೂ ಅನ್ವಯಿಸುತ್ತದೆ ಎಂದು ಜನರು ಅರ್ಥಮಾಡಿಕೊಂಡರೆ ಆಗ ಇಂತಹ ಪದಗಳನ್ನು ಬಳಸಬಹುದು. ಅದರ ಬದಲು ಇಲ್ಲಿ ಕೆಳಗೆ ಕೆಲವು ಪದಗಳು ಮಹಿಳೆಯನ್ನು ಉದ್ದೇಶಿಸಿ ಹೇಳುವಂತದ್ದನ್ನು ಭಾಷಾಂತರ ಮಾಡುವಾಗ ಬಳಸಬಹುದು.

  1. ಪುರುಷ ಮತ್ತು ಮಹಿಳೆ ಇಬ್ಬರನ್ನು ಒಳಗೊಂಡಂತೆ ಬಳಸಬಹುದಾದ ಒಂದೇ ನಾಮಪದವನ್ನು ಬಳಸಬಹುದು.
  2. ಪುರುಷನನ್ನು ಕುರಿತು ಹೇಳುವ ಪದ ಮತ್ತು ಮಹಿಳೆಯನ್ನು ಕುರಿತು ಹೇಳುವ ಪದಗಳಿದ್ದರೆ ಬಳಸಬಹುದು.
  3. ಪುರುಷ ಮತ್ತು ಮಹಿಳೆಯರ ಬಗ್ಗೆ ಉಪಯೋಗಿಸುವಾಗ ಸರ್ವನಾಮಗಳನ್ನು ಬಳಸಬಹುದು.

###ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು.

  1. ಪುರುಷ ಮತ್ತು ಮಹಿಳೆ ಇಬ್ಬರನ್ನು ಒಳಗೊಂಡಂತೆ ಬಳಸಬಹುದಾದ ನಾಮಪದವನ್ನು ಬಳಸಬಹುದು.
  • ಮೂಢನಂತೆ ಜ್ಞಾನಿಯೂಸಾಯುವನು. (ಪ್ರಸಂಗಿ 2:16 ULB)

    • ಮೂಢವ್ಯಕ್ತಿ ಸಾಯುವಂತೆ ಜ್ಞಾನಿಯೂ ಸಾಯುವನು".
    • "ಜ್ಞಾನಿಗಳಾದ ಜನರು ಮೂಢಜನರಂತೆ ಸಾಯುವರು ".
  1. ಪುರುಷನನ್ನು ಕುರಿತು ಹೇಳುವ ಪದ ಮತ್ತು ಮಹಿಳೆಯನ್ನು ಕುರಿತು ಹೇಳುವ ಪದಗಳಿದ್ದರೆ ಬಳಸಬಹುದು
  • ಸಹೋದರರೇ, ಅಸ್ಯಸೀಮೆಯಲ್ಲಿ ನಮಗೆ , ಸಂಭವಿಸಿದ ಸಂಕಟವನ್ನು ನೀವು ತಿಳಿದುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. (2 ಕೊರಿಂಥ 1:8) –ಪೌಲನು ಕೊರಿಂಥದ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಬರೆದ ಪತ್ರವಿದು.

  • ಸಹೋದರ ಮತ್ತು ಸಹೋದರಿಯರೇ ,ನಮಗೆ, ಅಸ್ಯಸೀಮೆಯಲ್ಲಿ ಸಂಭವಿಸಿದ ಸಂಕಟವನ್ನುನೀವು ತಿಳಿದುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. (2 ಕೊರಿಂಥ 1:8)

  1. ಪುರುಷ ಮತ್ತು ಮಹಿಳೆಯರ ಬಗ್ಗೆ ಉಪಯೋಗಿಸುವಾಗ ಸರ್ವನಾಮಗಳನ್ನು ಬಳಸಬಹುದು.
  • " ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕಂಡು ನನ್ನ ಹಿಂದೆ ಬರಲಿ." (ಮತ್ತಾಯ 16:24 ULB) ಇಂಗ್ಲೀಷ್ ಭಾಷೆಯವರು, ಇಲ್ಲಿ ಪುಲ್ಲಿಂಗ ಸರ್ವನಾಮಗಳನ್ನು ಏಕವಚನದಲ್ಲಿ ಬಳಸಬಹುದು. ಉದಾಹರಣೆಗೆ “ಅವನು,” “ಅವನ,” “ಅವನೊಂದಿಗೆ,” ಇದರ ಬಹುವಚನರೂಪದಲ್ಲಿ ಬರುವ ಸರ್ವನಾಮಗಳು “ಅವರು,” “ಅವರ,” "ಅವರೊಂದಿಗೆ,"ಇವುಗಳಲ್ಲಿ ಲಿಂಗಭೇದ ಇರುವುದಿಲ್ಲ ಇಲ್ಲಿ ಕೇವಲ ಪುರುಷರು ಮಾತ್ರವಲ್ಲ ಎಲ್ಲಾ ಜನರಿಗೂ ಅನ್ವಯಿಸುತ್ತದೆ.

    • " ನಿಮಗೆ ನನ್ನನನ್ನ ಹಿಂದೆ ಬರಲು * " ಮನಸ್ಸಿದ್ದರೆ ನಿಮ್ಮನ್ನುನಿರಾಕರಿಸಿ ನಿಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬನ್ನಿ

"ಪದಕ್ರಮ"

Translation Manual :: Just-in-Time Learning Modules :: Grammar :: Word Order

ವಿವರಣೆಗಳು

ಬಹುಪಾಲು ಭಾಷೆಗಳಲ್ಲಿ ಸಾಮಾನ್ಯವಾಗಿ ಪದಗಳನ್ನು ಕ್ರಮವಾಗಿ ಬಳಸಿ ವಾಕ್ಯಗಳನ್ನು ಮಾಡುತ್ತಾರೆ. ಇದು ಎಲ್ಲಾ ಭಾಷೆಗಳಲ್ಲಿ ಒಂದೇ ರೀತಿ ಇರುವುದಿಲ್ಲ. ಭಾಷಾಂತರಗಾರರು ತಮ್ಮ ಭಾಷೆಯಲ್ಲಿ ಪದಕ್ರಮ ಯಾವರೀತಿಯಲ್ಲಿ ಇದೆ ಎಂಬುದನ್ನು ತಿಳಿದಿರಬೇಕು.

ವಾಕ್ಯದ ಮುಖ್ಯ ಭಾಗಗಳು.

ಬಹುಪಾಲು ವಾಕ್ಯಗಳಲ್ಲಿ ಮೂರು ಮುಖ್ಯ ಭಾಗಗಳಿವೆ. ಕರ್ತೃಪದ. (Subject), ಕರ್ಮಪದ (object) ಮತ್ತು ಕ್ರಿಯಾಪದ (Predicate verb.) ಕರ್ತೃಪದ ಮತ್ತು ಕರ್ಮಪದ ಸಾಮಾನ್ಯವಾಗಿ ನಾಮಪದಗಳಾಗಿ ಇರುತ್ತವೆ. (ಉದಾ : - ವ್ಯಕ್ತಿ, ಸ್ಥಳ, ವಸ್ತು ಅಥವಾ ವಿಷಯ) ಅಥವಾ ಸರ್ವನಾಮಗಳಾಗಿ ಇರುತ್ತದೆ. ಕ್ರಿಯಾಪದ ಕ್ರಿಯೆಯನ್ನು ಸೂಚಿಸುತ್ತದೆ ಅಥವಾ ಏನು ನಡೆಯುತ್ತಿದೆ ಎಂದು ತಿಳಿಸುತ್ತದೆ.

(Subject) ಕರ್ತಪದ.

ಸಾಮಾನ್ಯವಾಗಿ ಕತೃಪದವಾಕ್ಯದಲ್ಲಿ ಯಾರ ಬಗ್ಗೆ ಯಾವುದರ ಬಗ್ಗೆ ಹೇಳುತ್ತಿದೆ ಎಂಬುದು. ಈ ಕರ್ತೃಪದ ಸಾಮಾನ್ಯವಾಗಿ ಯಾವುದಾದರೂ ಕ್ರಿಯೆಯನ್ನು ಮಾಡಬಹುದು ಅಥವಾ ಅದರ ಬಗ್ಗೆ ವಿವರಿಸಬಹುದು. ಕರ್ತೃಪದ ಯಾವಾಗಲೂ ಕ್ರಿಯೆಯಲ್ಲಿ ತೊಡಗಿರುತ್ತದೆ. ಹಾಡುವುದು, ಕೆಲಸಮಾಡುವುದು, ಓದಿಸುವುದು, ಓಡುವುದು ಇತ್ಯಾದಿ.

  • ಪೀಟರ್ ತುಂಬಾ ಚೆನ್ನಾಗಿ ಹಾಡುತ್ತಾನೆ. ಕರ್ತೃಪದ ಏನಾದರೂ ಮಾಡುತ್ತದೆ.
  • , ಪೀಟರ್ ಗೆಒಳ್ಳೆಯ ಆಹಾರ ನೀಡಲಾಯಿತು ಕರ್ತೃಪದವನ್ನು ಯಾವುದಾದರೂ ಭಾವನೆಗಳೊಂದಿಗೆ ಮತ್ತು ವ್ಯಕ್ತಿಯ ಲಕ್ಷಣದ ಬಗ್ಗೆ ವಿವರಿಸಬಹುದು.ಉದಾಹರಣೆ – ಸಂತೋಷದಿಂದ, ದುಃಖದಿಂದ ಕೋಪಗೊಂಡಿದ್ದಾನೆ ಇತ್ಯಾದಿ.
  • ಅವನು ಎತ್ತರವಾಗಿದ್ದಾನೆ.
  • ಆ ಹುಡುಗ ಸಂತೋಷವಾಗಿದ್ದಾನೆ.

(Object) ಕರ್ಮಪದ

ಕರ್ಮಪದ(Object) ಕರ್ತೃಪದವನ್ನು ಮಾಡುತ್ತದೆ ಎಂಬುದನ್ನು ಸೂಚಿಸಲು ಪೂರಕವಾಗುತ್ತದೆ.

  • ಪೀಟರನು ಚೆಂಡನ್ನು ಹೊಡೆದನು .
  • ಪೀಟರ್ ಒಂದು ಪುಸ್ತಕವನ್ನು ಓದಿದನು .
  • ಪೀಟರ್ ತುಂಬಾ ಚೆನ್ನಾಗಿ ಹಾಡುಹಾಡಿದನು .
  • ಪೀಟರ್ ತುಂಬಾ ಒಳ್ಳೆಯ ಊಟಮಾಡಿದ.

ಕ್ರಿಯಾಪದ(Verb, Predicate)

ಕ್ರಿಯಾಪದ ಕ್ರಿಯೆಯನ್ನು ಹೇಳುತ್ತದೆ ಮತ್ತು ವ್ಯಕ್ತಿಯ ಮನಸ್ಸಿನ ಸ್ಥಿತಿಯನ್ನು ಹೇಳುತ್ತದೆ.

  • ಪೀಟರ್ ತುಂಬಾ ಚೆನ್ನಾಗಿ . ಹಾಡುತ್ತಾನೆ.
  • ಪೀಟರ್ ಹಾಡುತ್ತಿದ್ದಾನೆ .
  • ಪೀಟರ್ ಎತ್ತರವಾಗಿದ್ದಾನೆ. .

ನಿರೀಕ್ಷಿತ ಪದಕ್ರಮ.

ಎಲ್ಲಾ ಭಾಷೆಗಳಲ್ಲೂ ನಿರೀಕ್ಷಿತ ಪದಕ್ರಮ ಇದೆ. ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ವಾಕ್ಯದಲ್ಲಿ ಬರುವ ಕರ್ತೃಪದ, ಕರ್ಮಪದ, ಕ್ರಿಯಾಪದ ಕ್ರಮವಾಗಿ ಕ್ರಿಯಾಪದವನ್ನು ಪಾಲಿಸಿದೆ. " ಪೀಟರನು ಚೆಂಡನ್ನು ಒದೆದನು ". ಕೆಲವು ಭಾಷೆಗಳಲ್ಲಿ ಉದಾಹರಣೆಗೆ ಇಂಗ್ಲೀಷ್ ಭಾಷೆಯಲ್ಲಿ ಕರ್ತೃಪದ - ಕರ್ಮಪದ – ಕ್ರಿಯಾಪದ ಕ್ರಮದಲ್ಲಿ ಬರುತ್ತದೆ.

  • ಪೀಟರ್ ಒದೆದನು ಚೆಂಡನ್ನು - Peter hit the ball. ಇನ್ನೂ ಕೆಲವು ಭಾಷೆಗಳಲ್ಲಿ ಕರ್ತೃಪದ - ಕರ್ಮಪದ – ಕ್ರಿಯಾಪದ.
  • Peter the ball hit.- " ಪೀಟರ್ ಚೆಂಡನ್ನು ಒದೆದನು ".(ಕನ್ನಡ) ಇನ್ನೂ ಕೆಲವು ಭಾಷೆಗಳಲ್ಲಿ – ಕ್ರಿಯಾಪದ - ಕತೃಪದ - ಕರ್ಮಪದ.
  • Hit Peter the ball. ಒದೆದನು ಪೀಟರ್ ಚೆಂಡನ್ನು.

ಪದಕ್ರಮದಲ್ಲಿನ ಬದಲಾವಣೆಗಳು.

ಕೆಲವೊಮ್ಮೆ ಪದಕ್ರಮದಲ್ಲಿ ಬದಲಾವಣೆಗಳು. ವಾಕ್ಯದಲ್ಲಿ ಆಗುತ್ತದೆ, ಅಂತಹ ವಾಕ್ಯಗಳು ಈ ಕೆಳಗಿನ ಸಂದರ್ಭಗಳಲ್ಲಿ ಆಗುತ್ತದೆ.

  • ಅದು ಪ್ರಶ್ನೆ ಅಥವಾ ಆದೇಶವಾಗಿದ್ದರೆ.
  • ವ್ಯಕ್ತಿಯ ಲಕ್ಷಣ, ಮನಸ್ಸಿನ ಸ್ಥಿತಿ ಆಗಿದ್ದರೆ (ಅವನು ಸಂತೋಷವಾಗಿದ್ದಾನೆ) ಅವನು ಎತ್ತರವಾಗಿದ್ದಾನೆ.)
  • ಇನ್ನು ಕೆಲವೊಮ್ಮೆ ವಸ್ತುಸ್ಥಿತಿಯ ಪದಗಳಿಂದ.
  • ಒಂದು ಸ್ಥಳ ಅಥವಾ
  • ಸಮಯದ ಬಗ್ಗೆ.
  • ಪದ್ಯದಲ್ಲಿ ಪದಕ್ರಮ ಇವುಗಳಲ್ಲೂ ಒದಗಿಸಲು ಸಾಧ್ಯವಿದೆ.
  • ವಾಕ್ಯಭಾಗದ ಮೇಲೆ ಯಾವುದಾದರೂ ಪ್ರಾಮುಖ್ಯತೆ ಇದ್ದರೆ.
  • ಕರ್ತೃಪದವನ್ನು ಹೊರತುಪಡಿಸಿ ವಾಕ್ಯದಲ್ಲಿ ನಿಜವಾಗಲೂ ಏನಾದರೂ ವಿಷಯವಿದ್ದರೆ ಆಗುತ್ತದೆ.

ಭಾಷಾಂತರ ತತ್ವಗಳು.

  • ನಿಮ್ಮ ಭಾಷೆಗೆ ಸೂಕ್ತವಾದ ಯಾವ ಪದಕ್ರಮ ಹೊಂದಿಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳಿ.
  • ನಿಮ್ಮ ಭಾಷೆಯಲ್ಲಿ ನಿರೀಕ್ಷಿತ ಪದಕ್ರಮವನ್ನು ನಿಮ್ಮ ಭಾಷೆಯಲ್ಲಿ ಬೇಕಾದ ಬದಲಾವಣೆಗಳು ಅವಶ್ಯವಿದ್ದರೆ ಮಾತ್ರ ಮಾಡಬಹುದು.
  • ಆದುದರಿಂದ ವಾಕ್ಯದ ಅರ್ಥ ನಿರ್ದಿಷ್ಟವಾಗಿ, ಸ್ಪಷ್ಟವಾಗಿ ಮೂಡಿಬರುವಂತೆ ಭಾಷಾಂತರ ಮಾಡುವುದರಿಂದ ಅದು ಸಹಜವಾಗಿ ಇರುತ್ತದೆ.

ನೀವು ಈ ಲಿಂಕ್ ನಲ್ಲಿ ವಿಡಿಯೋವನ್ನು ನೋಡಿ at http://ufw.io/figs_order.

Pronouns

Translation Manual :: Just-in-Time Learning Modules :: Pronouns

ಸರ್ವನಾಮಗಳು.

Translation Manual :: Just-in-Time Learning Modules :: Pronouns

###ವಿವರಣೆಗಳು

ಸರ್ವನಾಮಗಳೆಂದರೆ ನಾಮಪದದ ಬದಲು ಉಪಯೋಗಿಸುವಂತದ್ದು ಒಬ್ಬವ್ಯಕ್ತಿಯನ್ನು ಅಥವಾಒಂದು ವಸ್ತುವನ್ನು ಉದ್ದೇಶಿಸಿ ಹೇಳುವಂತದ್ದು. ಕೆಲವು ಉದಾಹರಣೆಗಳು ನಾನು, ನೀನು,ಅವನು,ಅದು, ಇದು,ಅವನ, ಯಾರೊಬ್ಬರು. ಸಾಮಾನ್ಯವಾಗಿ ಹೆಚ್ಚಿನ ಮಟ್ಟಿನ ಸರ್ವನಾಮಗಳು ವೈಯಕ್ತಿಕವಾಗಿರುತ್ತವೆ.

ವ್ಯಕ್ತಿಗತ ಸರ್ವನಾಮ.

Personal Pronouns ವ್ಯಕ್ತಿಗತ ಸರ್ವನಾಮ., ಒಬ್ಬ ವ್ಯಕ್ತಿ ತಾನು ಮಾತನಾಡುತ್ತಿರುವ ವ್ಯಕ್ತಿಯ ಬಗ್ಗೆ, ವಸ್ತುವಿನ ಬಗ್ಗೆ ಹೇಳುವ ಪದಗಳು. ಕೆಳಗಿನ ಉದಾಹರಣೆಗಳಲ್ಲಿ ವ್ಯಕ್ತಿಗತ ಸರ್ವನಾಮಗಳ ಬಗ್ಗೆ ಮಾಹಿತಿ ನೀಡುತ್ತದೆ. ಇತರ ಸರ್ವನಾಮಗಳು ಇಲ್ಲಿ ಕೆಳಗಿರುವ ಮಾಹಿತಿಗಳನ್ನು ಚೆನ್ನಾಗಿ ತಿಳಿಸುತ್ತದೆ.

####ವ್ಯಕ್ತಿ (ಪುರುಷ)

  • First Person – (ಉತ್ತಮ ಪುರುಷ) – ಮಾತನಾಡುವವ ಮತ್ತು ಇತರರು… (ನಾನು, ನಾವು)
  • ಮಧ್ಯಮ ಪುರುಷ – ಯಾವ ವ್ಯಕ್ತಿ ಅಥವಾ ಜನರೊಂದಿಗೆ ಮಾತನಾಡುತ್ತಿದ್ದಾನೋ ಹೆಚ್ಚಿನಮಟ್ಟಿಗೆ ಇತರರು (ನೀನು).
  • ಪ್ರಥಮ ಪುರುಷ - ಮಾತನಾಡುತ್ತಿರುವವ ಮತ್ತು ಹೆಚ್ಚಾಗಿ ಇತರರ ಬಗ್ಗೆ (Third Person) ಅವನು, ಅವಳು,ಅವು, ಅವರು.

ವಚನಗಳು (ಸಂಖ್ಯಾವಾಚಕ)

  • Singular – ಏಕವಚನ - ಒಂದು, ಒಬ್ಬರು ನಾನು, ನೀನು,ಅವನು,ಅದು, ಅವಳು.
  • Plural – ಬಹುವಚನ – ಹೆಚ್ಚು, ಒಂದಕ್ಕಿಂತ ಹೆಚ್ಚು - “We” ನಾವು, ನೀವು,ಅವರು.
  • (Dual) ದ್ವಿತ್ವ – ಕೆಲವು ಭಾಷೆಯಲ್ಲಿ ಎರಡು ಸರ್ವನಾಮಗಳು ನಿರ್ದಿಷ್ಟವಾಗಿ ಇಬ್ಬರು ವ್ಯಕ್ತಿಗಳನ್ನು ಅಥವಾ ಎರಡುವಸ್ತುಗಳನ್ನು ಕುರಿತು ಹೇಳುತ್ತದೆ.

####ಲಿಂಗಗಳು

  • ಪುಲ್ಲಿಂಗ - ಅವನು
  • ಸ್ತ್ರೀ ಲಿಂಗ - ಅವಳು
  • ನಪುಂಸಕ ಲಿಂಗ – ಅದು.

####ವಾಕ್ಯದಲ್ಲಿರುವ ಪದಗಳೊಂದಿಗಿನ ಸಂಬಂಧ.

  • ಕ್ರಿಯಾಪದದ ವಿಷಯ: ನಾನು, ನೀನು, ಅವನು, ಅವಳು,ಅದು, ನಾವು, ಅವರು.
  • ಕ್ರಿಯಾಪದದ ಅಥವಾ ()ಪ್ರಿಪೋಸಿಷನ್ (ಪುರವ ಪ್ರತ್ಯಯ) ಪದಗಳು ನನಗೆ, ನೀನು,ಅವನ ಅವಳ, ಅದರ, ನಮ್ಮ ನಮಗೆ, ಅವರ.
  • ನಾಮಪದದೊಂದಿಗೆ ಇರುವ ಪದಗಳು ನನ್ನ, ನಿನ್ನ ಅವನ, ಅವಳ, ಅದರ,ನಮ್ಮ, ಅವರ.
  • ನಾಮಪದ ಇಲ್ಲದೇ ಇರುವ ಪದಗಳು ನನ್ನ, ನಿಮ್ಮ, ಅವನ, ಅವಳ, ಅದರ, ಅವರ.

###ಸರ್ವನಾಮದ ಇತರ ವಿಧಗಳು

ಅನುವರ್ತಕ ಸರ್ವನಾಮ - ಅನುವರ್ತಕ ಸರ್ವನಾಮ - ಅದೇ ವಾಕ್ಯದಲ್ಲಿ ಇನ್ನೊಂದು ನಾಮಪದ ಅಥವಾ ಸರ್ವನಾಮವನ್ನು ಉದ್ದೇಶೀಸಿ ಹೇಳುವುದು ನಾನು,ನನ್ನ, ನಿಮ್ಮ, ಅವನ, ಅವಳ, ಅದರ, ಅವರ.ನಾವೆಲ್ಲರೂ, ನೀವೆಲ್ಲರೂ ಅವರೆಲ್ಲರೂ.

  • ಜಾನ್ ಅವನನ್ನು ಕನ್ನಡಿಯಲ್ಲಿ ನೋಡಿದನು ಇಲ್ಲಿ "ಅವನನ್ನು " ಎಂಬುದು ಜಾನ್ ನನ್ನು ಉದ್ದೇಶಿಸಿ ಹೇಳಿದೆ.

ಪ್ರಶ್ನಾರ್ಹ ಸರ್ವನಾಮ ಒಂದು ಪ್ರಶ್ನೆಗೆ ಕೇವಲ ಹೌದು ಅಥವಾ ಇಲ್ಲ ಎಂಬ ಉತ್ತರಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಿ ಕೇಳುವ ಪ್ರಶ್ನೆಯ ಪದವನ್ನು ಪ್ರಶ್ನಾರ್ಥಕ ಸರ್ವನಾಮ ಎಂದು ಕರೆಯುತ್ತಾರೆ.ಉದಾ: ಯಾರು, ಯಾರಿಂದ, ಯಾವ, - ಏಕೆ, ಎಲ್ಲಿ, ಯಾವಾಗ, ಏಕೆ, ಹೇಗೆ.

  • ಈ ಮನೆಯನ್ನು ಯಾರು ಕಟ್ಟಿಸಿದರು ?

ಸಂಬಂಧಾತ್ಮಕ ಸರ್ವನಾಮ - ಸಂಬಂಧಾತ್ಮಕ ಸರ್ವನಾಮ – ವಾಕ್ಯದಲ್ಲಿ ನಾಮಪದಕ್ಕೆ ಸಂಬಂಧಿಸಿದ ವಸ್ತು, ಕಾರ್ಯ ಇರುತ್ತದೆ. ವಾಕ್ಯದ ಮುಖ್ಯಭಾಗದಲ್ಲಿ ನಾಮಪದದ ಬಗ್ಗೆ ಹೆಚ್ಚು ತಿಳಿಸುತ್ತಾರೆ :

  • ಜಾನ್ ಕಟ್ಟಿಸಿದ ಆ ಮನೆಯನ್ನು ನಾನು ನೋಡಿದೆ " ಜಾನ್ ಕಟ್ಟಿಸಿದ " ಎಂಬ ಪದ ನಾನು ಯಾವ ಮನೆ ನೋಡಿದೆ ಎಂಬುದನ್ನು ತಿಳಿಸುತ್ತದೆ.
  • ಆ ಮನೆಯನ್ನು ಕಟ್ಟಿಸಿದ ಮನುಷ್ಯನನ್ನುನಾನು ನೋಡಿದ್ದೇನೆ .ಯಾರು “ಮನೆಯನ್ನು ಕಟ್ಟಿದರು” ಎಂಬ ವಾಕ್ಯ ನಾನು ಯಾವ ಮನುಷ್ಯನನ್ನು ನೋಡಿದೆ ಎಂಬುದನ್ನು ಸೂಚಿಸುತ್ತದೆ.

Demonstrative Pronouns ಪ್ರದರ್ಶಾತ್ಮಕ ಸರ್ವನಾಮ ತನ್ನೊಂದಿಗೆ ಮಾತನಾಡುತ್ತಿರುವವರ ಗಮನವನ್ನು ಸೆಳೆದು ಎಷ್ಟು ದೂರದಲ್ಲಿದೆ ಎಂದು ಬಳಸುವ ಪದಗಳು.ಉದಾಹರಣೆ : ಇದು, ಇವುಗಳು, ಅದು,ಅವುಗಳು.

  • ನೀನು ಇದನ್ನು ಇಲ್ಲಿನೋಡಿದೆಯಾ?
  • ಅಲ್ಲಿರುವವರು ಯಾರು ? ?

ಅನಿಶ್ಚಿತ ಸರ್ವನಾಮಗಳು ಅನಿಶ್ಚಿತ ಸರ್ವನಾಮಗಳು ಒಂದು ನಿರ್ದಷ್ಟ ನಾಮಪದವನ್ನು ಉದ್ದೇಶಿಸಿ ಹೇಳದೆ ಇರುವುದು, - ಯಾರು, ಯಾರೋ, ಯಾರದೋ, ಕೆಲವರು, ಯಾವುದಾದರೂ, ಕೆಲವು. ಕೆಲವೊಮ್ಮೆ. ಕೆಲವೊಮ್ಮೆ ವ್ಯಕ್ತಿಗತ ಸರ್ವನಾಮಗಳು ಸಾಮಾನ್ಯ ಮಾರ್ಗದಲ್ಲಿ ಬಳಸಲಾಗುವುದು : ನೀನು, ಅವರು, ಅವನು, ಅಥವಾ, ಅದು.

  • ಅವನಿಗೆ ಯಾರೊಂದಿಗೂ ಮಾತನಾಡುವುದು ಬೇಕಿಲ್ಲ .
  • ಯಾರೋಅದನ್ನು ಅಲ್ಲಿ ಅಳವಡಿಸಿದ್ದಾರೆ. ಆದರೆ ನನಗೆ ಅವರು ಯಾರೂ ಎಂದು ಗೊತ್ತಿಲ್ಲ
  • ಅವರುಹೇಳುವುದೇನೆಂದರೆ ನೀವುಮಲಗಿರುವ ನಾಯಿಯನ್ನು ಎಚ್ಚರಿಸಬಾರದು.

ಕೊನೆಯ ಉದಾಹರಣೆಯಲ್ಲಿ “ಅವರು” ಮತ್ತು “ನೀನು” ಸಹಜವಾಗಿ ಜನರನ್ನು ಉದ್ದೇಶಿಸಿ ಹೇಳಿರುವಂತದ್ದು.


ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.

Translation Manual :: Just-in-Time Learning Modules :: Pronouns :: First, Second or Third Person

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ಬಗ್ಗೆ ಹೇಳುವಾಗ "ನಾನು " “ನನ್ನ " ಎಂಬ ಪದಗಳನ್ನು ಬಳಸುತ್ತಾನೆ. ಅವನು ಯಾರೊಂದಿಗೆ ಮಾತನಾಡುತ್ತಾನೋ ಅವರನ್ನು"ನೀನು.” "ನಿನ್ನ."ಎಂಬ ಪದಗಳನ್ನು ಬಳಸಿ ಮಾತನಾಡುತ್ತಾನೆ.

ಸತ್ಯವೇದದಲ್ಲಿ ಕೆಲವೊಮ್ಮೆ ಆ ವ್ಯಕ್ತಿಯು ತನ್ನ ಬಗ್ಗೆ ಮಾತಾಡುವಾಗ ಅಥವಾ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವಾಗ. “ನಾನು” ಅಥವಾ “ನೀನು.” ಎಂಬ ಪದಗಳನ್ನು ಬಿಟ್ಟು ಬೇರೆ ಪದಗುಚ್ಛಗಳನ್ನು ಬಳಸಿದ್ದಾನೆ.

ವಿವರಣೆ.

  • ಉತ್ತಮ ಪುರುಷ - ವ್ಯಕ್ತಿಯೊಬ್ಬ ತನ್ನ ಬಗ್ಗೆ ಮಾತನಾಡುವಾಗ ಬಳಸುವ ಪದಗಳು. ಇಂಗ್ಲೀಷ್ ಭಾಷೆಯಲ್ಲಿ ಸರ್ವನಾಮಗಳನ್ನು ಬಳಸುತ್ತಾರೆ. "ನಾನು " ಮತ್ತು “ನಾವು.” (ಇದರೊಂದಿಗೆ : ನನಗೆ, ನನ್ನ, ನನ್ನದು; ನಾವು, ನಮ್ಮ,ನಮ್ಮದು) ಎಂಬ ಪದಗಳು ಬಳಕೆಯಲ್ಲಿವೆ.
  • ಮಧ್ಯಮ ಪುರುಷ - ಇದರಲ್ಲಿ ವ್ಯಕ್ತಿಯೊಬ್ಬ ತಾನು ಯಾರೊಂದಿಗೆ ಮಾತನಾಡುತ್ತಿದ್ದೇನೆ ಎಂಬುದನ್ನು ಸೂಚಿಸುವ / ಸಂಬೋಧಿಸುವ ಪದವನ್ನು ** ಮಧ್ಯಮ ಪುರುಷ** ಎಂದು ಗುರುತಿಸಲಾಗಿದೆ. ಇಂಗ್ಲೀಷಿನಲ್ಲಿ "ಸರ್ವನಾಮ"ವನ್ನು ಉಪಯೋಗಿಸಿ “ನೀನು.” (ನಿನ್ನ,ನಿಮ್ಮ, ಎಂದು) ಬಳಸುತ್ತಾರೆ "
  • ಪ್ರಥಮ ಪುರುಷ -ಬೇರೆಯವರನ್ನು ಕುರಿತು ಹೇಳುವಾಗ ಇದನ್ನು ಬಳಸುತ್ತಾರೆ. ಇಂಗ್ಲೀಷಿನಲ್ಲಿ ಈ ಸರ್ವನಾಮಗಳನ್ನು ಬಳಸಲಾಗುತ್ತದೆ., “ಅವನು,” “ಅವಳು” “ಅದು” ಮತ್ತು “ಅವರು,” “ಅವಳು” “ಅದು” ಮತ್ತು “ಅವರು,” (ಇದರೊಂದಿಗೆ ಅವನ, ಅವಳ,ಅದರ, ಅವರ ಅವನದು,ಅವಳದು, ಅವರದು,ಅದರದು, ಅವರಿಗೆ, ಇವರ, ಇದರ, ಇವರದು) ಎಂಬ ನಾಮ ಪದಗಳನ್ನು ಬಳಸಿ ಕೆಲವು ಜೋಡುನುಡಿ ಆ ಮನುಷ್ಯ, ಆ ಹೆಂಗಸು ಪ್ರಥಮ ಪುರುಷನೆಂದು ಬಳಸಲಾಗುತ್ತದೆ.

ಇದಕ್ಕೆ ಕಾರಣ ಇದೊಂದು ಭಾಷಾಂತರದ ಪ್ರಕರಣ.

ಸತ್ಯವೇದದಲ್ಲಿ ಕೆಲವೊಮ್ಮೆ ಮಾತನಾಡುವ ವ್ಯಕ್ತಿ "ಪ್ರಥಮ ಪುರುಷ " ಬಳಸಿ ಅವನ ಬಗ್ಗೆ ಅಥವಾ ಅವನು ಮಾತನಾಡುತ್ತಿರುವ, ಜನರ ಬಗ್ಗೆ ತಿಳಿಸಲಾಗಿದೆ. ಓದುಗರು ಇಂತಹ ಸಮಯದಲ್ಲಿ ಮಾತನಾಡುತ್ತಿರುವ ವ್ಯಕ್ತಿ ಯಾರನ್ನೆಲ್ಲಾ ಕುರಿತು ಮಾತನಾಡುತ್ತಿದ್ದಾನೆ ಎಂದು ತಿಳಿದುಕೊಳ್ಳುವರು. ಅವನು ತನ್ನ ಬಗ್ಗೆ ಅಥವಾ ನಿಮ್ಮ ಬಗ್ಗೆ ಎಂದು ಹೇಳುವಾಗ ಅವರು ಅರ್ಥಮಾಡಿಕೊಳ್ಳಲಾರರು.

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು.

ಕೆಲವೊಮ್ಮೆ ಕೆಲವರು ಉತ್ತಮ ಪುರುಷ ಪದಗಳಾದ “ನಾನು” ಅಥವಾ "ನನಗೆ"ಎಂದು ಬಳಸುವ ಬದಲು ಪ್ರಥಮ ಪುರುಷ ಪದಗಳನ್ನು ತಮ್ಮ ಬಗ್ಗೆ ಹೇಳುವಾಗ ಬಳಸುತ್ತಾರೆ.

ಆದರೆ ದಾವೀದನು ಸೌಲನನ್ನು ಕುರಿತು ಮಾತನಾಡುವಾಗ “< u >ನಿನ್ನ ಸೇವಕ ನಾದ ನಾನು ನನ್ನ ತಂದೆಯ ಕುರಿಗಳನ್ನು ಕಾಯುವಾಗ.” (1 ಸಮುವೇಲ 17:34 ULB)

ದಾವೀದನು ಪ್ರಥಮ ಪುರುಷನಂತೆ ಗುರುತಿಸಿ “ನಿನ್ನ ಸೇವಕ” ಮತ್ತು “ಅವನ.” ಎಂಬ ಪದಗಳನ್ನು ಬಳಸಿದ್ದಾನೆ. ಅವನು ತನ್ನನ್ನು ಸೌಲನ ಸೇವಕನೆಂದು ಹೇಳಿ ಪೌಲನ ಮುಂದೆ ತನ್ನನ್ನು ತಗ್ಗಿಸಿ ವಿನಯವನ್ನು ತೋರಿಸುತ್ತಾನೆ.

ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರ ನೀಡಿದನು "… ನಿನ್ನ ಕೈಯಿ ದೇವರ ಕೈಯಂತೆ ಇದೆಯೋ ನಿನ್ನ ಕೈಯ್ಯೂ ದೇವರ ಕೈಯ್ಯೂ ಸಮವೋ ? ದೇವರ ಧ್ವನಿಯಂತೆ ಗುಡುಗಬಲ್ಲೆಯಾ? ಅತನ ಧ್ವನಿಯೋ ನಿನ್ನ ಧ್ವನಿಯೋ ಸಮವೇ ? (ಯೋಬ 40:6, 9 ULB)

ದೇವರು ತನ್ನನ್ನು ಪ್ರಥಮ ಪುರುಷನಂತೆ ಗುರುತಿಸಿ " ದೇವರ " ಮತ್ತು “ಆತನ.” ಎಂಬ ಪದಗಳ ಮೂಲಕ ಮಾತನಾಡಿದ್ದಾನೆ. ಇದನ್ನು ಆತನೇ ದೇವರು, ಅತನೇ ಸರ್ವಶಕ್ತನು ಎಂದು ಹೇಳಲು ತಿಳಿಸಿದ್ದಾನೆ. ಕೆಲವೊಮ್ಮೆ ಕೆಲವರು ಪ್ರಥಮ ಪುರುಷ ಪದಗಳನ್ನು ಬಳಸುವ ಬದಲು “ನೀನು” ಅಥವಾ “ನಿನ್ನ” ಎಂಬ ಪದಗಳನ್ನು ಒಬ್ಬ ವ್ಯಕ್ತಿಯನ್ನು ಅಥವಾ ಜನರನ್ನು ಉದ್ದೇಶಿಸಿ ಮಾತನಾಡುವಾಗ ಬಳಸುತ್ತಾರೆ.

ಅಬ್ರಹಾಮನು ದೇವರಿಗೆ ಈ ರೀತಿ ಉತ್ತರಿಸಿ ಮತ್ತು ಹೇಳಿದ್ದೇನೆಂದರೆ, ಇಗೋ, ಮಣ್ಣು, ಬೂದಿಯೂ ಆಗಿರುವ ನಾನು < u>ಸ್ವಾಮಿಯ,ಸಂಗಡ ವಾದಿಸುವುದಕ್ಕೆ ಧೈರ್ಯಗೊಂಡಿದ್ದೇನೆ. (ಆದಿಕಾಂಡ 18:27 ULB)

ಅಬ್ರಹಾಮನು ದೇವರೊಂದಿಗೆ ಮಾತನಾಡುತ್ತಿದ್ದಾನೆ,ದೇವರನ್ನು ಕುರಿತು ನನ್ನ ಸ್ವಾಮಿ ನನ್ನ ಒಡೆಯನೇ ಎಂದು ಕರೆಯುತ್ತಾನೆಯೇ ಹೊರತು “ನೀನು.” ಎಂದು ಸಂಬೋಧಿಸುವುದಿಲ್ಲ. ಅವನು ತನ್ನ ನಮ್ರತೆಯನ್ನು ದೇವರ ಮುಂದೆ ತೋರಿಸಲು ಹೀಗೆ ಹೇಳಿದನು.

ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸಹೋದರನಿಗೆ ಮನಃ ಪೂರ್ವಕವಾಗಿ ಕ್ಷಮಿಸದೇ ಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ .ನಿಮಗೆ ಹಾಗೆಯೇ ಮಾಡುವನು ಎಂದು ಅಂದನು. (ಮತ್ತಾಯ 18:35 ULB)

“ಪ್ರತಿಯೊಬ್ಬನೂ,” ಎಂದು ಹೇಳಿದ ಮೇಲೆ ಯೇಸು ಪ್ರಥಮ ಪುರುಷ "ಅವನ” ಬದಲು “ನಿಮ್ಮ.” ಎಂಬ ಪದ ಬಳಿಸಿದ್ದಾನೆ.

ಅನುವಾದ /ಭಾಷಾಂತರದ ತಂತ್ರಗಳು

ನೀವು “ಪ್ರಥಮಪುರುಷ” ನಂತೆ "ನಾನು " ಅಥವಾ “ನೀನು” ಎಂಬ ಪದಗಳನ್ನು ಬಳಸುವಾಗ ಸಹಜವಾಗಿ, ಸರಿಯಾದ ಅರ್ಥವನ್ನು ನಿಮ್ಮ ಭಾಷೆಯಲ್ಲಿ ಸಮರ್ಪಕವಾಗಿ ಬಳಸಬೇಕು. ಹಾಗೆ ಆಗದಿದ್ದರೆ ಇಲ್ಲಿ ಅನೇಕ ಅವಕಾಶಗಳಿವೆ.

  1. “ನಾನು” ಅಥವಾ "ನೀನು."ಎಂಬ ಸರ್ವನಾಮದೊಂದಿಗೆ “ಪ್ರಥಮ ಪುರುಷ” ನುಡಿಗುಚ್ಛ ಬಳಸಬೇಕು.
  2. ಉತ್ತಮ ಪುರುಷ ಪದ “ನಾನು” ಅಥವಾ ಮಧ್ಯಮ ಪುರುಷ “ನೀನು.” ಎಂಬ ಪದಗಳನ್ನು ಪ್ರಥಮ ಪುರುಷನಂತೆ ಬಳಸಬಹುದು.

###ಅನುವಾದ / ಭಾಷಾಂತರ ತಂತ್ರಗಳನ್ನು ಅಳವಡಿಸುವ ಉದಾಹರಣೆಗಳು

  1. “ನಾನು” ಅಥವಾ “ನೀನು.” ಎಂಬ ಸರ್ವನಾಮಗಳೊಂದಿಗೆ “ಪ್ರಥಮ ಪುರುಷ” ಪದವನ್ನು ಬಳಸಬಹುದು.
  • ದಾವೀದನು ಸೌಲನನ್ನು ಕುರಿತು "ನಿನ್ನ ಸೇವಕಅವನ ತಂದೆಯ ಕುರಿಗಳನ್ನು ಕಾಯುತ್ತೇನೆ.ಎಂದು ಹೇಳಿದ " (1 ಸಾಮುವೆಲ 17:34)

    • ಆದರೆ ದಾವೀದನು ಸೌಲನಿಗೆ "ನಿನ್ನ ಸೇವಕನಾದ ನಾನು ನನ್ನ ತಂದೆಯ,ಕುರಿಗಳನ್ನು ಕಾಯುತ್ತೇನೆ
  1. ಸರಳವಾಗಿ ಉತ್ತಮ ಪುರುಷ (“ನಾನು”) ಮಧ್ಯಮ ಪುರುಷ ಅಥವಾ “ನೀನು.” ಎಂಬ ಪದಗಳನ್ನು ಪ್ರಥಮ ಪುರುಷ ಪದಗಳ ಬದಲು ಬಳಸಬಹುದು.
  • ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ "… ನಿನ್ನ ಕೈ ಮತ್ತು ದೇವರ ಕೈ ಸಮವೋ? "ಎಂದು ಕೇಳುತ್ತಾನೆ. ಆತನ ಧ್ವನಿಯಂತೆ ನೀನು ಗುಡುಗ ಬಲ್ಲೆಯಾ ? (ಯೋಬ 40:6, 9 ULB)

    • ಯೆಹೋವನು ಯೋಬನನ್ನು ಕುರಿತು ರುದ್ರವಾದ ಬಿರುಗಾಳಿಯೊಳಗಿಂದ “… ನನ್ನ ಕೈಯ್ಯಂತೆ ನಿನ್ನ ಕೈಯ್ಯೋ ಇದೆಯೋ ? ಎಂದು ಕೇಳಿದ. ನನ್ನ ಧ್ವನಿಯಂತೆ ನೀನು ಗುಡುಗ ಬಲ್ಲೆಯಾ?” ಎಂದು ಕೇಳಿದನು.
  • ಅದರಂತೆ ಪರಲೋಕದ ನನ್ನ ತಂದೆಯು ನಿಮಗೆ ಮಾಡಲಿ ನೀವು ಪ್ರತಿಯೊಬ್ಬರೂ ಅವರ ಸಹೋದರರನ್ನು ಮನಃಪೂರ್ವಕವಾಗಿ ಕ್ಷಮಿಸದಿದ್ದರೆ . (ಮತ್ತಾಯ 18:35 ULB)

    • ಅದರಂತೆ ಪರಲೋಕದ ನನ್ನ ತಂದೆಯು ನಿಮಗೆ ಮಾಡಲಿಪ್ರತಿಯೊಬ್ಬರೂ ನಿಮ್ಮ ಸಹೊದರನನ್ನು ಮನಃಪೂರ್ವಕವಾಗಿ ಕ್ಷಮಿಸದಿದ್ದರೆ.

ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".

Translation Manual :: Just-in-Time Learning Modules :: Pronouns :: Exclusive and Inclusive 'We'

ವಿವರಣೆ

ಕೆಲವು ಭಾಷೆಯಲ್ಲಿ ಒಂದಕ್ಕಿಂತ ಹೆಚ್ಚು “ನಾವು:” ಎಂಬ ಸರ್ವನಾಮಗಳು ಇರುತ್ತವೆ. ಅಂದರೆ "ನಾನು ಮತ್ತು ನೀನು " ಅಥವಾ "ನಾವು "ಮತ್ತು "ನೀವು “:ಎರಡೂ ಸೇರಿ “ನಾವು:” ಆಗುತ್ತದೆ. ಇದನ್ನು ** ಸೇರಿಸಲ್ಪಟ್ಟ** ಸರ್ವನಾಮಗಳು ಎಂದು ಹೇಳಬಹುದು. ** ಪ್ರತ್ಯೇಕಿಸಲ್ಪಟ್ಟ** ಸರ್ವನಾಮಗಳಲ್ಲಿ ಲ್ಲಿ “ನಾನು” ಮತ್ತು “ಇತರರು " ಸೇರಿ ನಾವು ಆಗುತ್ತದೆ ಇಲ್ಲಿ ನೀನು” ಅಥವಾ “ನೀವು” ಸೇರುವುದಿಲ್ಲ.”

" ಪ್ರತ್ಯೇಕಿಸಲ್ಪಟ್ಟ" ರೀತಿಯಲ್ಲಿ ಯಾರೊಂದಿಗೆ ಮಾತನಾಡುತ್ತೇವೋ ಅವರನ್ನು ಬಿಟ್ಟು ಹೇಳಲಾಗುವುದು. " ಸೇರಿಸಲ್ಪಟ್ಟ" ರೀತಿಯಲ್ಲಿ ಯಾರೊಂದಿಗೆ ಮಾತನಾಡುತ್ತೇವೋ ಆ ವ್ಯಕ್ತಿಯನ್ನು ಸೇರಿಸಿಕೊಂಡು ಹೇಳುವಂತಾದ್ದು.

ಇದು "ನಾವು ", “ನಮ್ಮ”, "ನಮ್ಮದು” ಮತ್ತು “ನಾವೆಲ್ಲರೂ,” ಎಂಬುದಾಗಿರುತ್ತದೆ. ಕೆಲವು ಭಾಷೆಯಲ್ಲಿ ಈ ಎರಡೂ ಪ್ರತ್ಯೇಕಿಸಿದ ಮತ್ತು ಸೇರಿಸಿದ ರೀತಿಗಳನ್ನು ಬಳಕೆ ಮಾಡುವುದು ಸಹಜವಾಗಿರುತ್ತದೆ. ಭಾಷಾಂತರ ಮಾಡುವವರು ಈ ಎರಡೂ ನಮೂನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸಂದರ್ಭೋಚಿತವಾಗಿ ಎಲ್ಲೆಲ್ಲಿ ಯಾವ ರೀತಿಯ “ನಾವು” ಸರ್ವನಾಮಗಳನ್ನು ಬಳಸಬೇಕೆಂದು ತಿಳಿದಿರಬೇಕು.

ಇಲ್ಲಿ ಕೊಟ್ಟಿರುವ ಚಿತ್ರಗಳನ್ನು ನೋಡಿ ಬಲಗಡೆಯಲ್ಲಿರುವ ಜನರೊಂದಿಗೆ ಭಾಷಣಮಾಡುತ್ತಿರುವವನು ಮಾತನಾಡುತ್ತಿದ್ದಾನೆ. ಹಳದಿ ಬಣ್ಣದ ಪ್ರಮುಖ ಬೆಳಕು ಯಾರು ಸೇರಿಸಲ್ಪಟ್ಟ “ನಾವು,” ಮತ್ತು ಯಾರು ಪ್ರತ್ಯೇಕಿಸಲ್ಪಟ್ಟ “ನಾವು,” ಎಂಬುದನ್ನು ತೋರಿಸುತ್ತದೆ.

ಏಕೆಂದರೆ ಇದು ಭಾಷಾಂತರ ಪ್ರಕರಣ.

ಸತ್ಯವೇದವನ್ನು ಮೊದಲು ಹಿಬ್ರೂ, ಅರೆಮಿಕ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಯಿತು.

ಇಂಗ್ಲೀಷ್ ಭಾಷೆಯಲ್ಲಿ ಇರುವಂತೆ ಈ ಭಾಷೆಗಳಲ್ಲಿ ಪ್ರತ್ಯೇಕಿಸಿದ ಮತ್ತು ಸೇರಿಸಲ್ಪಟ್ಟ "ನಾವು " ಎಂಬ ಸರ್ವನಾಮಗಳು ಇಲ್ಲ. ಭಾಷಾಂತರ ಮಾಡುವವರು ಈ ಎರಡೂ ನಮೂನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸಂದರ್ಭೋಚಿತವಾಗಿ ಎಲ್ಲೆಲ್ಲಿ ಯಾವ ರೀತಿಯ "ನಾವು " ಸರ್ವನಾಮಗಳನ್ನು ಬಳಸಬೇಕೆಂದು ತಿಳಿದಿರಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು.

ನಮ್ಮಲ್ಲಿ ಐದು ರೊಟ್ಟಿ,ಎರಡು ಮೀನು ಹೊರತು ಹೆಚ್ಚೇನು ಇಲ್ಲ ನಾವುಹೋಗಿ ಇವರಿಗೆ ಆಹಾರ ಕೊಂಡು ತರಬೇಕೋ.” (ಲೂಕ 9:13 ULB).

ಅವರು ಹೇಳಿದರು. ಇಲ್ಲಿ ಈ ವಾಕ್ಯದ ಮೊದಲ ಭಾಗದಲ್ಲಿ ಶಿಷ್ಯರು ತಮ್ಮ ಬಳಿ ಎಷ್ಟು ಆಹಾರ ಇದೆ ಎಂದು ಯೇಸುವಿಗೆ ತಿಳಿಸುತ್ತಾರೆ.ಇಲ್ಲಿರುವ "ನಾವು " ಪ್ರತ್ಯೇಕಿಸಿದ ಅಥವಾ ಸೇರಿಸಲ್ಪಟ್ಟ ಎಂಬ ಎರಡೂ ಅರ್ಥ ಕೊಡುತ್ತದೆ. ಎರಡನೇ ಭಾಗದಲ್ಲಿ ಶಿಷ್ಯರು ಹೋಗಿ ಆ ಜನರಿಗಾಗಿ ಆಹಾರ ಕೊಂಡುಕೊಂಡು ಬರುವ ಬಗ್ಗೆ ಮಾತನಾಡುತ್ತಾರೆ. ಇವು "ನಾವು " ಎಂಬ ಪದ ಪ್ರತ್ಯೇಕಿಸಿದೆ, ಏಕೆಂದರೆ ಅವರೊಂದಿಗೆ ಯೇಸು ಹೋಗುತ್ತಿಲ್ಲ.ಅವರಲ್ಲಿ ಕೆಲವರು ಮಾತ್ರ ಹೋಗುವ ಬಗ್ಗೆ ಮಾತನಾಡುತ್ತಿದ್ದಾರೆ.

ತಂದೆಯ ಬಳಿಯಲ್ಲಿದ್ದುನಮಗೆ ಪ್ರತ್ಯಕ್ಷವಾದಂತಹ ನಿತ್ಯ ಜೀವವನ್ನು ನಾವು ಕಂಡು ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ಪ್ರಸಿದ್ಧಿಪಡಿಸುತ್ತೇವೆ(1 ಯೊಹಾನ 1:2 ULB)

ಯೋಹಾನನು ತಾನು ಮತ್ತು ಇತರ ಅಪೋಸ್ತಲರು ಏನು ನೋಡಿದರೆಂದು ಯೇಸುವನ್ನು ನೋಡದೆ ಇರುವ ಜನರಿಗೆ ಈ ಮಾತುಗಳನ್ನು ಹೇಳುತ್ತಿದ್ದಾನೆ. ಯಾವಭಾಷೆಯಲ್ಲಿ ಪ್ರತ್ಯೇಕಿಸಿದ "ನಾವು " ಮತ್ತು "ನಮ್ಮ " ಪದಗಳ ಬಳಕೆಯನ್ನು ಮಾಡಬೇಕು.

… ಆ ಕುರುಬರು ನಾವು ಈಗಲೇ ಬೆತ್ಲೆಹೇಮಿಗೆ ಹೋಗಿ ಕರ್ತನು ನಮಗೆ " ತಿಳಿಸಿದ ಈ ಸಂಗತಿಯನ್ನು ನೋಡೋಣ ನಡೆಯಿರಿ ಎಂದು ತಮ್ಮತಮ್ಮೊಳಗೆ /u>.ಮಾತಾಡಿಕೊಂಡು ಹೊರಟರು " (ಲೂಕ 2:15 ULB)

ಆ ಕುರುಬರು ತಮ್ಮೊಳಗೆ ಒಬ್ಬರಿಗೊಬ್ಬರು ಮಾತಾಡಿಕೊಂಡರು. ಅವರು ಹೀಗೆ ಮಾತನಾಡುವಾಗ ತಮ್ಮಲ್ಲೇಇದ್ದ ಒಬ್ಬರೊಂದಿಗೆ ಒಬ್ಬರು ಮಾತನಾಡುತ್ತಾ “ನಾವು,” ಈಗಲೇ ಹೋಗೋಣ ಎನ್ನುವಾಗ ಎಲ್ಲರೂ ಒಂದೇ ಎಂದಾಯಿತು. >ಒಂದಾನೊಂದು ದಿನದಲ್ಲಿ ಆತನು ತನ್ನ ಶಿಷ್ಯರ ಸಂಗಡ ಒಂದು ದೋಣಿಯನ್ನು ಹತ್ತಿ ನಾವು ಸರೋವರದ ಆಚೆ ದಡಕ್ಕೆ “ಹೋಗೋಣ” ಎಂದು ಹೇಳಿದನು. ಅವರು ದೋಣಿ ಹತ್ತಿ ಹೊರಟರು (ಲೂಕ 8:22 ULB)

ಯೇಸು “ನಾವು,” ಎಂದಾಗ ಆತನು ತಾನು ಮತ್ತು ತನ್ನ ಶಿಷ್ಯರು “ನಾವು” ಒಟ್ಟಾಗಿ ಹೋಗೋಣ ಎಂದು ಹೇಳುವಾಗ ಇದು "ಸೇರಿಸಲ್ಪಟ್ಟ ನಾವು,”


ಔಪಚಾರಿಕ ಮತ್ತು ಅನೌಪಚಾರಿಕವಾದ “ನೀನು” ಎಂಬ ರೂಪಗಳು.

Translation Manual :: Just-in-Time Learning Modules :: Pronouns :: Forms of 'You' - Formal or Informal

(ನೀವು ವೀಡಿಯೋವನ್ನು ಈ ಲಿಂಕ್ ನಲ್ಲಿ ನೋಡಬಹುದು at http://ufw.io/figs_youform.)

ವಿವರಣೆಗಳು.

ಕೆಲವು ಭಾಷೆಗಳಲ್ಲಿ ಔಪಚಾರಿಕ "ನೀನು” ಮತ್ತು ಅನೌಪಚಾರಿಕ "ನೀನು” ನಡುವೆ ವ್ಯತ್ಯಾಸವನ್ನು ತೋರಿಸುತ್ತಾರೆ. ಈ ಪುಟದಲ್ಲಿ ಇರುವ ವಿಷಯ ಯಾವ ಭಾಷೆಯಲ್ಲಿ ಇಂತಹ ವ್ಯತ್ಯಾಸವನ್ನು ಬಳಸುತ್ತಾರೋ ಅವರಿಗೆ ಉಪಯೋಗವಾಗುತ್ತದೆ

ಕೆಲವು ಸಂಸ್ಕೃತಿಯಲ್ಲಿ ಜನರು ಔಪಚಾರಿಕ "ನೀನು/ ನೀವು” ಪದವನ್ನು ಹಿರಿಯರನ್ನು ಮತ್ತು ಅಧಿಕಾರದಲ್ಲಿ ಹಿರಿಯರಾದ ಜನರನ್ನು ಉದ್ದೇಶಿಸಿ ಮಾತನಾಡುವಾಗ ಬಳಸುತ್ತಾರೆ. ಹಾಗೆಯೇ ಅನೌಪಚಾರಿಕ "ನೀನು” ಎಂಬ ಪದವನ್ನು ಅವರು ಸಮಾನ ವಯಸ್ಕರನ್ನು ಅಥವಾ ಅವರಿಗಿಂತ ಚಿಕ್ಕವರನ್ನು, ತನ್ನ ಕೈ ಕೆಳಗೆ ಕಾರ್ಯನಿರ್ವಹಿಸುವವರೊಂದಿಗೆ ಮಾತನಾಡಲು ಬಳಸುತ್ತಾರೆ

ಇನ್ನೂ ಕೆಲವು ಸಂಸ್ಕೃತಿಯಲ್ಲಿ ಜನರು ಔಪಚಾರಿಕ " ನೀವು” ಪದವನ್ನು ಅಪರಿಚಿತರ ಬಳಿ ಮಾತನಾಡುವಾಗ ಮತ್ತು ಹೆಚ್ಚು ಬಳಕೆ ಇಲ್ಲದ ಇತರರೊಂದಿಗೆ ಮಾತನಾಡುವಾಗಲೂ ಬಳಸುತ್ತಾರೆ. ಹಾಗೆಯೇ ಅನೌಪಚಾರಿಕ "ನೀನು” ಪದವನ್ನು ತಮ್ಮ ಕುಟುಂಬದ ಸದಸ್ಯರೊಂದಿಗೆ, ಸ್ನೇಹಿತರೊಂದಿಗೆ ಮಾತನಾಡಲು ಉಪಯೋಗಿಸುತ್ತಾರೆ.

ಕಾರಣ ಇದೊಂದು ಭಾಷಾಂತರ ಪ್ರಕರಣ.

  • ಸತ್ಯವೇದವನ್ನು ಹಿಬ್ರೂ,ಅರಾಮಿಕ್ ಮತ್ತು ಗ್ರೀಕ್ ಭಾಷೆಯಲ್ಲಿ ಬರೆಯಲಾಗಿದೆ. ಈ ಭಾಷೆಗಳಲ್ಲಿ ಔಪಚಾರಿಕ / ಅನೌಪಚಾರಿಕ "ನೀನು” ಬಳಕೆಯಲ್ಲಿ ಇಲ್ಲ.
  • ಇಂಗ್ಲೀಷ್ ಮತ್ತು ಇನ್ನೂ ಅನೇಕ ಮೂಲಭಾಷೆಗಳಲ್ಲಿ ಇಂತಹ ಔಪಚಾರಿಕ ಅನೌಪಚಾರಿಕ "ನೀನು” ಬಳಕೆಯಲ್ಲಿ ಇಲ್ಲ.
  • ಭಾಷಾಂತರಗಾರರು ಮೂಲಭಾಷೆಯಲ್ಲಿ ಭಾಷಾಂತರ ಮಾಡುವಾಗ ಔಪಚಾರಿಕ ಮತ್ತು ಅನೌಪಚಾರಿಕ "ನೀನು” ಬಳಕೆ ಇಲ್ಲದಿದ್ದರೆ ಅವರ ಭಾಷೆಯಲ್ಲಿ ಅದನ್ನು ಹೇಗೆ ಉಪಯೋಗಿಸಬೇಕೆಂದು ತಿಳಿದಿರಬೇಕು.

ಮೂಲ ಭಾಷೆಯಲ್ಲಿರುವ ಎಲ್ಲಾ ನಿಯಮಗಳಂತೆ ಭಾಷಾಂತರ ಮಾಡುವ ಭಾಷೆಯಲ್ಲಿ ಇಲ್ಲದೆ ಇರಬಹುದು. ಅವರವರ ಭಾಷೆಯಲ್ಲಿ ಇಬ್ಬರು ಮಾತನಾಡುತ್ತಿರುವಾಗ ಅವರ ನಡುವಿನ ಸಂಬಂಧವನ್ನು ಗುರುತಿಸಿ ಯಾವರೀತಿಯ "ನೀನು” / "ನೀವು” ಪದಗಳನ್ನು ಬಳಸಬೇಕೆಂಬುದನ್ನು ಭಾಷಾಂತರಗಾರರು ತಿಳಿದಿರಬೇಕು

ಭಾಷಾಂತರ ತತ್ವಗಳು.

  • ಒಬ್ಬ ವ್ಯಕ್ತಿ ಯಾರೊಂದಿಗೆ ಮಾತನಾಡುತ್ತಿದ್ದಾನೆ, ಮಾತನಾಡುತ್ತಿರುವ ವ್ಯಕ್ತಿಯೊಂದಿಗೆ ಯಾವ ಸಂಬಂಧಹೊಂದಿದ್ದಾನೆ ?, ಸ್ಥಾನಮಾನವೇನು ಎಂದು ತಿಳಿದುಕೊಳ್ಳಬೇಕು.
  • ಮಾತನಾಡುವ ವ್ಯಕ್ತಿ ಯಾರೊಂದಿಗೆ ಮಾತನಾಡುತ್ತಿದ್ದಾನೆ ಮತ್ತು ಅವನ ಬಗ್ಗೆ ಮಾತನಾಡುವವನ ಮನೋದೋರಣೆ ಏನು ಎಂದು ತಿಳಿದುಕೊಳ್ಳಬೇಕು.
  • ನಿಮ್ಮ ಭಾಷೆಯಲ್ಲಿ ಇದಕ್ಕೆ ಸೂಕ್ತವಾದ ಪದವನ್ನು ಆ ವ್ಯಕ್ತಿಯ ಸಂಬಂಧ ಮತ್ತು ಮನೋದೋರಣೆಗಳನ್ನು ಅನುಸರಿಸಿ ಆಯ್ಕೆ ಮಾಡಿಕೊಳ್ಳಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು.

ಯೆಹೋವ ದೇವರು ಮನುಷ್ಯನನ್ನು ಕುರಿತು "ನೀನು ಎಲ್ಲಿದ್ದೀ " ಎಂದು ಕೂಗಿ ಕೇಳಿದನು ? (ಆದಿಕಾಂಡ 3:9 ULB)

ದೇವರು ಸರ್ವಶಕ್ತನೂ, ಪರಮಾಧಿಕಾರವನ್ನು ಹೊಂದಿರುವವನು ಔಪಚಾರಿಕ ಮತ್ತು ಅನೌಪಚಾರಿಕ ರೀತಿಯ "ನೀನು” ಬಳಕೆ ಇರುವ ಭಾಷೆಗಳ್ಲಿ ಇಂತಹ ಸನ್ನಿವೇಶದಲ್ಲಿ ಅನೌಪಚಾರಿಕ "ನೀನು” ಬಳಕೆ ಮಾಡಬೇಕಾಗುತ್ತದೆ.

ಥಿಯೋಫಿಲನೇ ನಾನು ಎಲ್ಲವನ್ನೂ ಪ್ರಾರಂಭದಿಂದಲೂ ವಿಚಾರಿಸಿ ದೃಢಪಡಿಸಿಕೊಂಡಿರುವುದರಿಂದ ಅವುಗಳನ್ನು ನಿನಗೆ ಕ್ರಮವಾಗಿ ಬರೆದು ತೋರಿಸುವುದು ಒಳ್ಳೆಯದೆಂದು ನನಗೆ ತೋರುತ್ತಿದೆ. ನಿನಗೆಉಪದೇಶಿಸುವ ವಿಷಯಗಳು ನಿಖರವಾದವು ಯತಾರ್ಥವಾದವು ನೀನು ತಿದ್ದಿಕೊಂಡು ಗೊತ್ತುಮಾಡಿಕೊಳ್ಳಬೇಕು.ಎಂಬುದು ತನ್ನ ಇಚ್ಛೆ. (ಲೂಕ 1:3-4 ULB)

ಲೂಕನು ಥಿಯೋಫಿಲನನ್ನು “ಸನ್ಮಾನ್ಯನೆಂದು.” ಸಂಬೋಧಿಸಿದ್ದಾನೆ. ಬಹುಶಃ ಥಿಯೋಫಿಲನು ಉನ್ನತ ಸ್ಥಾನದಲ್ಲಿದ್ದ ಅಧಿಕಾರಿಯಾಗಿದ್ದಿರಬಹುದು.ಆದುದರಿಂದ ಈ ಪದವನ್ನು ಅತ್ಯಂತ ಗೌರವದಿಂದ ಲೂಕನು ಬಳಸಿದ್ದಾನೆ. ಔಪಚಾರಿಕವಾಗಿ ಉಪಯೋಗಿಸುವ "ನೀನು” "ನೀವು” ಬಳಕೆಯನ್ನು ಈ ಭಾಷೆ ಮಾತನಾಡುವವರು ಮಾಡಬಹುದು.

ಪರಲೋಕದಲ್ಲಿರುವ ನಮ್ಮ ತಂದೆಯೇನಿನ್ನ ನಾಮವು < /u>ಪರಿಶುದ್ಧವೆಣಿಸಲ್ಪಡಲಿ. (ಮತ್ತಾಯ 6:9 ULB)

ಯೇಸು ತನ್ನ ಶಿಷ್ಯರಿಗೆ ಹೇಗೆ ಪ್ರಾರ್ಥನೆ ಮಾಡಬೇಕೆಂದು ಹೇಳಿಕೊಟ್ಟ ವಾಕ್ಯಭಾಗ. ಕೆಲವು ಸಂಸ್ಕೃತಿಯಲ್ಲಿ ಔಪಚಾರಿಕವಾಗಿ "ನೀವು” ಎಂಬ ಪದವನ್ನು ಇಲ್ಲಿ ಬಳಸಬಹುದು ಏಕೆಂದರೆ ದೇವರು ಸರ್ವಶಕ್ತನೂ ಮಹಾಮಹಿಮನು ಎಂದು. ಇನ್ನು ಕೆಲವು ಸಂಸ್ಕೃತಿಯಲ್ಲಿ ಅನೌಪಚಾರಿಕ "ನೀನು” ಎಂದು ಬಳಸುತ್ತಾರೆ. ಏಕೆಂದರೆ ದೇವರು ನಮ್ಮ ತಂದೆಯೆಂದು ಭಾವಿಸುತ್ತಾರೆ.

ಭಾಷಾಂತರ ತಂತ್ರಗಳು.

ಭಾಷಾಂತರಗಾರರ ಭಾಷೆಯಲ್ಲಿ ಔಪಚಾರಿಕ "ನೀವು” ಮತ್ತು ಅನೌಪಚಾರಿಕ "ನೀನು” ಪದಗಳು ಬಳಕೆಯಲ್ಲಿದ್ದರೆ ಇಬ್ಬರ ನಡುವೆ ನಡೆಯುವ ಸಂಭಾಷಣೆ, ಅವರ ನಡುವೆ ಇರುವ ಸಂಬಂಧವನ್ನು ಗುರುತಿಸಿ ಸೂಕ್ತವಾದ ಔಪಚಾರಿಕ “ನೀವು” ಅನೌಪಚಾರಿಕ “ನೀನು” ಪದಗಳನ್ನು ಉಪಯೋಗಿಸಬೇಕೇ ಬೇಡವೇ ಎಂದು ನಿರ್ಧರಿಸಬೇಕು.

ಔಪಚಾರಿಕ "ನೀವು”, ಅನೌಪಚಾರಿಕ "ನೀನು” ಪದಗಳನ್ನು ಉಪಯೋಗಿಸದ ಬೇಕೇ ಬೇಡವೇ ಎಂದು ನಿರ್ಧರಿಸುವುದು.

  1. ಮಾತನಾಡುತ್ತಿರುವ ಇಬ್ಬರ ನಡುವೆ ಇರುವ ಸಂಬಂಧದ ಕಡೆ ಗಮನ ನೀಡಬೇಕು.
  • ಮಾತನಾಡುವವ ಇನ್ನೊಬ್ಬನ ಮೇಲೆ ಅಧಿಕಾರ ಹೊಂದಿರುವನೇ ?
  • ಮಾತನಾಡುತ್ತಿರುವ ಇನ್ನೊಬ್ಬನಿಗಿಂತ ವಯಸ್ಸಿನಲ್ಲಿ ಹಿರಿಯವನೇ
  • ಮಾತನಾಡುತ್ತಿರುವವರು ಕುಟುಂಬದ ಸದಸ್ಯರೇ, ಸಂಬಂಧಿಕರೇ, ಸ್ನೇಹಿತರೇ, ಅಪರಿಚಿತರೇ, ಶತ್ರುಗಳೇ ?
  1. ನಿಮ್ಮ ಬಳಿ ಔಪಚಾರಿಕ “ನೀವು” ಅನೌಪಚಾರಿಕ “ನೀನು” ಪದಗಳನ್ನು ಬಳಸಿರುವ ಭಾಷೆಯ ಸತ್ಯವೇದವಿದ್ದರೆ ಯಾವರೀತಿಯ"ನೀವು" “ನೀನು” ಎಂಬ ಪದಗಳನ್ನು ಬಳಸಿದ್ದಾರೆ ಎಂದು ಓದಿನೋಡಿ. ನಿಮ್ಮ ಭಾಷೆಯ ನಿಯಮಗಳಿಗಿಂತ ಇತರ ಭಾಷೆಯ ನಿಯಮಗಳು ಭಿನ್ನವಾಗಿದೆ ಎಂಬುದನ್ನು ಮರೆಯಬೇಡಿ.

ಭಾಷಾಂತರ ತತ್ವಗಳನ್ನು ಅಳವಡಿಸಿರುವ ಬಗ್ಗೆ.

ಇಂಗ್ಲೀಷ್ ಭಾಷೆಯಲ್ಲಿ ಔಪಚಾರಿಕ “ನೀವು” ಅನೌಪಚಾರಿಕ “ನೀನು” ಬಳಕೆ ಇಲ್ಲ. ಆದುದರಿಂದ ಇಂಗ್ಲೀಷ್ ನಲ್ಲಿ “ನೀವು” ಅನೌಪಚಾರಿಕ “ನೀನು” ಉಪಯೋಗಿಸಲು ಬರುವುದಿಲ್ಲ. ದಯವಿಟ್ಟು ಮೇಲಿನ ಉದಾಹರಣೆಗಳನ್ನು ಮತ್ತು ಚರ್ಚೆಯನ್ನು ಗಮನಿಸಿ.


ಗುಂಪುಗಳನ್ನು ಉದ್ದೇಶಿಸಿ ಹೇಳುವ ಏಕವಚನ ಸರ್ವನಾಮ.

Translation Manual :: Just-in-Time Learning Modules :: Pronouns :: Forms of 'You' - Singular to a Crowd

ವಿವರಣೆ

ಸತ್ಯವೇದವನ್ನು ಹಿಬ್ರು ಅರಾಮಿಕ್ ಮತ್ತು ಗ್ರೀಕ್ ಭಾಷೆಯಲ್ಲಿ ಬರೆಯಲಾಗಿದೆ. ಈ ಭಾಷೆಗಳಲ್ಲಿ ** ಏಕವಚನ** ರೂಪದ “you” “ನೀನು” ಎಂಬಪದವು ಒಬ್ಬ ವ್ಯಕ್ತಿಯನ್ನು ಕುರಿತದ್ದು, ಒಂದು ಗುಂಪಿನ ಜನರನ್ನು ಕುರಿತು “ನೀವು” ಎಂಬ ಬಹುವಚನ ರೂಪದ ಪದವನ್ನು ಬಳಸಿರುತ್ತಾರೆ.

ಕೆಲವೊಮ್ಮೆ ಸತ್ಯವೇದದಲ್ಲಿ ಮಾತನಾಡುವ ವ್ಯಕ್ತಿಗಳು ನೀನು ಪದದ ಏಕವಚನ ರೂಪವನ್ನು ಒಂದು ಗುಂಪಿನ ಜನರನ್ನು ಕುರಿತು ಬಳಸುತ್ತಾರೆ. ಇಂತಹ ಬಳಕೆ ಇಂಗ್ಲೀಷ್ ಭಾಷೆಯ ಸತ್ಯವೇದದಲ್ಲಿ ಬಳಸಿದಾಗ ಅದುಅಷ್ಟು ಭಿನ್ನವಾಗಿ ಕಾಣುವುದಿಲ್ಲ ಏಕೆಂದರೆ “you” ಎಂಬ ಸರ್ವನಾಮಪದ ಏಕವಚನ ಮತ್ತು ಬಹುವಚನದಲ್ಲಿ ಒಂದೇ ಆಗಿರುತ್ತದೆ. ಆದರೆ “ನೀನು” ಮತ್ತು “ನೀವು” ಎಂಬ ಪದಗಳ ವ್ಯತ್ಯಾಸ ಇತರ ಭಾಷೆಯ ಸತ್ಯವೇದವನ್ನು ಓದಿದಾಗ ತಿಳಿದು ಬರುತ್ತದೆ. ಎಷ್ಟೋ ಸಲ ಹಳೇ ಒಡಂಬಡಿಕೆಯಲ್ಲಿ ಬರಹಗಾರರ ಒಂದು ಗುಂಪು ಜನಾಂಗವನ್ನು ಉದ್ದೇಶಿಸಿ ಹೇಳುವಾಗ ಏಕವಚನ ರೂಪದ " ಆತ/ ಅವನು," ಎಂಬ ಸರ್ವನಾಮವನ್ನು ಬಳಸುತ್ತಾರೆಯೇ ಹೊರತು ಬಹುವಚನ ರೂಪದ " ಅವರು." ಎಂದು ಉಪಯೋಗಿಸಲ್ಲಿಲ್ಲ.

ಕಾರಣ ಇದೊಂದು ಭಾಷಾಂತರದ ವಿಷಯ.

  • ಅನೇಕ ಭಾಷೆಯಲ್ಲಿ ಭಾಷಾಂತರಗಾರನು ಸತ್ಯವೇದವನ್ನು ಓದುವಾಗ “you” ಎಂಬ ಪದವು ಸಾಮಾನ್ಯ ರೂಪದಲ್ಲಿ ಅರ್ಥಮಾಡಿಕೊಂಡು ಲೇಖಕ ಅಥವಾ ಮಾತನಾಡುತ್ತಿರುವ ವ್ಯಕ್ತಿ ಒಬ್ಬ ವ್ಯಕ್ತಿ ಕುರಿತು ಹೇಳುತ್ತಿದ್ದಾನೋ ಇಲ್ಲವೆ ಒಬ್ಬರಿಗಿಂತ ಹೆಚ್ಚು ಜನರನ್ನು ಉದ್ದೇಶಿಸಿ ಹೇಳುತ್ತಿದ್ದಾನೋ ಎಂಬುದನ್ನು ತಿಳಿದುಕೊಳ್ಳಬೇಕು.
  • ಇನ್ನೂ ಕೆಲವು ಭಾಷೆಯಲ್ಲಿ ಏಕವಚನ ರೂಪದ ಸರ್ವನಾಮ ಬಳಸಿದರೂ ಅದು ಒಬ್ಬ ವ್ಯಕ್ತಿಯನ್ನು ಕುರಿತು ಹೇಳಿರುವುದೋ ಇಲ್ಲವೇ ಒಬ್ಬನಿಗಿಂತ ಹೆಚ್ಚು ಜನರನ್ನು ಕುರಿತು ಹೇಳಿರುವುದೋ ಎಂದು ಗೊಂದಲವಾಗುವುದಿದೆ.

ಸತ್ಯವೇದದಲ್ಲಿನ ಉದಾಹರಣೆಗಳು.

1ಜನರು ನೊಡಲಿ ಎಂದು ಧರ್ಮಕಾರ್ಯಗಳನ್ನು ಅವರ ಮುಂದೆ ನೀವು ಮಾಡಬಾರದು, ಹಾಗೆ ಮಾಡಿದರೆ ಪರಲೋಕದಲ್ಲಿರುವ ನಿಮ್ಮತಂದೆಯ ಹತ್ತಿರ ನಿಮಗೆಫಲ ದೊರೆಯದು. ಆದುದರಿಂದ ನೀನು 2ನೀವು ದಾನಕೊಡುವಾಗ ನಿನ್ನ ಮುಂದೆ ಕೊಂಬೂದಿಸಬೇಡ, ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ, ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆಸತ್ಯವಾಗಿ ಹೇಳುತ್ತೇನೆ. (ಮತ್ತಾಯ 6:1,2 ULB)

ಯೇಸು ಈ ಮಾತುಗಳನ್ನು ಜನರ ಗುಂಪನ್ನು ಉದ್ದೇಶಿಸಿ ಹೇಳಿದನು. ಆತನು “ನೀನು” ಎಂಬ ಬಹುವಚನವನ್ನು 1,ನೇ ವಾಕ್ಯದಲ್ಲಿ ಏಕವಚನ “ನೀನು” ಪದವನ್ನು 2. ನೇ ವಾಕ್ಯದ ಮೊದಲ ಭಾಗದಲ್ಲಿ ಹೇಳಿದ್ದಾನೆ. ಆಮೇಲೆ ಆತನು ಕೊನೆಯ ವಾಕ್ಯಗಳಲ್ಲಿ “ನೀನು” ಸರ್ವನಾಮಪದವನ್ನು ಬಹುವಚನ ರೂಪದಲ್ಲಿ ಬಳಸಿದ್ದಾನೆ.

ಈ ಎಲ್ಲಾ ಮಾತುಗಳು ದೇವರು ಮಾತನಾಡಿದ ಮಾತುಗಳು. “ನೀನುದಾಸತ್ವದಲ್ಲಿದ್ದ ಐಗುಪ್ತದೇಶದಿಂದ ನಿನ್ನನ್ನುಬಿಡುಗಡೆ ಮಾಡಿದ ಯೆಹೋವನೆಂಬ ನಿನ್ನದೇವರು ನಾನೇ, ನಾನಲ್ಲದೆ ನಿನಗೆ ಬೇರೆ ಯಾವ ದೇವರುಗಳು ಇರಬಾರದು.” (ವಿಮೋಚನಾ ಕಾಂಡ 20:1-3 ULB)

ದೇವರು ಇಸ್ರಾಯೇಲಿನ ಜನರೆಲ್ಲರನ್ನೂ ಕುರಿತು ಹೇಳಿದ ಮಾತುಗಳಿವು. ಇಲ್ಲಿ ಯೆಹೋವನು ಇಸ್ರಾಯೇಲರನ್ನು ಐಗುಪ್ತರ ದಾಸತ್ವದಿಂದ ಬಿಡಿಸಿದ್ದಾನೆ. ಅವರು ತನಗೆ ವಿಧೇಯರಾಗಿರಬೇಕೆಂದು ನಿರೀಕ್ಷಿಸಿದನು. ಇಲ್ಲಿ ಆತನು ಅವರೊಂದಿಗೆ ಮಾತನಾಡುವಾಗ ಏಕವಚನ ರೂಪದ "you"ಬಳಸಿದ್ದಾನೆ.

ಯೆಹೋವನು ಹೀಗೆ ಹೇಳುತ್ತಾನೆ "ಎದೋಮ ಮೂರು ಪಾಪಗಳನ್ನು ಮಾಡಿದ, ಹೌದು ನಾಲ್ಕು ಪಾಪಗಳನ್ನು ಮಾಡಿದ್ದರೋ, ಅದಕ್ಕೆ ನೀಡುವ ದಂಡನೆಯನ್ನು ನೀಡದೆ ಬಿಡುವುದಿಲ್ಲ. ಏಕೆಂದರೆ ಅವನುಕತ್ತಿಹಿಡಿದು ಅವನಸಹೊದರನನ್ನು ಹಿಂದಟ್ಟಿದ್ದಾನೆ. ಮತ್ತು ಕರುಣೆಯನ್ನು ತೊರೆದು. ಅವನುಸಿಟ್ಟಿನಿಂದ ಸದಾ ಸಿಗಿದುಬಿಡುತ್ತಾ, ಅವನಕೋಪವನ್ನು ಶಾಶ್ವತವಾಗಿರುವಂತೆ ಮಾಡಿಕೊಂಡಿದ್ದಾನೆ. ಯೆಹೋವನು ಈ ಮಾತುಗಳನ್ನು ಎದೋಮ್ ದೇಶದ ಜನರನ್ನು ಕುರಿತು ಹೇಳಿದ ಮಾತುಗಳು.ಒಬ್ಬ ವ್ಯಕ್ತಿಯನ್ನು ಕುರಿತು ಹೇಳಿದ ಮಾತುಗಳಲ್ಲ.

ಭಾಷಾಂತರ ಕೌಶಲ್ಯಗಳು.

ಒಂದು ಗುಂಪನ್ನು ಕುರಿತು ಮಾತನಾಡುವಾಗ ಏಕವಚನ ರೂಪದ “you” ಸರ್ವನಾಮಪದ ಸಹಜವಾಗಿ ಹೊಂದಿಕೊಳ್ಳುವುದಾದರೆ ಅದನ್ನು ಪರಿಗಣಿಸಬಹುದು.

  • ಇಲ್ಲಿ ಮಾತನಾಡುತ್ತಿರುವ ವ್ಯಕ್ತಿ ಯಾರನ್ನು ಕುರಿತು ಮಾತನಾಡುತ್ತಿದ್ದಾನೆ ಯಾವ ವಿಷಯ ಕುರಿತು ಮಾತನಾಡುತ್ತಿದ್ದಾನೆ ಎಂಬುದನ್ನು ಅವಲಂಬಿಸಿರುತ್ತದೆ.
  • ಇದು ಬಹುಶಃ ಮಾತನಾಡುವ ವ್ಯಕ್ತಿ ಯಾವ ವಿಷಯ ಹೇಳುತ್ತಿದ್ದಾನೆ ಎಂಬುದನ್ನು ಆಧಾರಿಸಿದೆ.
  1. ಒಂದು ಗುಂಪಿನ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಏಕವಚನ ರೂಪದ “you” ಅಸಹಜವಾಗಿ ಕಂಡರೆ ಮತ್ತು ಓದಗರು ಗೊಂದಲಕ್ಕೆ ಒಳಗಾಗಬಹುದು, ಅಂತಹ ಸಂದರ್ಭದಲ್ಲಿ ಬಹುವಚನ ರೂಪದ “you” ಬಳಸಬೇಕು.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸುವ ಬಗ್ಗೆ

  1. ಒಂದು ಗುಂಪಿನ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಏಕವಚನ ರೂಪದ “you” ಅಸಹಜವಾಗಿ ಕಂಡರೆ ಮತ್ತು ಓದಗರು ಗೊಂದಲಕ್ಕೆ ಒಳಗಾಗಬಹುದು, ಅಂತಹ ಸಂದರ್ಭದಲ್ಲಿ ಬಹುವಚನ ರೂಪದ “you” ಬಳಸಬೇಕು

ಯೆಹೋವನು ಹೀಗೆ ಹೇಳುತ್ತಾನೆ "ಎದೋಮ ಮೂರು ಪಾಪಗಳನ್ನು ಮಾಡಿದ, ಹೌದು ನಾಲ್ಕು ಪಾಪಗಳನ್ನು ಮಾಡಿದ್ದರು, ಅದಕ್ಕೆ ನೀಡುವ ದಂಡನೆಯನ್ನು ನೀಡದೆ ಬಿಡುವುದಿಲ್ಲ. ಏಕೆಂದರೆ ಅವನುಕತ್ತಿಹಿಡಿದು ಅವನಸಹೊದರನನ್ನು ಹಿಂದಟ್ಟಿದ್ದಾನೆ. ಮತ್ತು ಕರುಣೆಯನ್ನು ತೊರೆದು. ಅವನುಸಿಟ್ಟಿನಿಂದ ಸದಾ ಸಿಗಿದುಬಿಡುತ್ತಾ, ಅವನಕೋಪವನ್ನು ಶಾಶ್ವತವಾಗಿರುವಂತೆ ಮಾಡಿಕೊಂಡಿದ್ದಾನೆ. ಯೆಹೋವನು ಹೀಗೆ ಹೇಳುತ್ತಾನೆ "ಎದೋಮ ಮೂರು ಪಾಪಗಳನ್ನು ಮಾಡಿದ, ಹೌದು ನಾಲ್ಕು ಪಾಪಗಳನ್ನು ಮಾಡಿದ್ದರಿಂದ, ಅದಕ್ಕೆ ನೀಡುವ ದಂಡನೆಯನ್ನು ನೀಡದೆ ಬಿಡುವುದಿಲ್ಲ.

ಏಕೆಂದರೆ ಅವರು, ಅವರ ಸಹೊದರರನ್ನು ಹಿಂದಟ್ಟಿದ್ದಾರೆ. ಮತ್ತು ಕರುಣೆಯನ್ನು ತೊರೆದು ಅವರುಸಿಟ್ಟಿನಿಂದ ಸದಾ ಸಿಗಿದು ಬಿಡುತ್ತಾ, ಮತ್ತು ಅವರಕೋಪವನ್ನು ಶಾಶ್ವತವಾಗಿರುವಂತೆ ಮಾಡಿಕೊಂಡಿದ್ದಾರೆ."


ಕರ್ತೃವಾಚ್ಯ ಸರ್ವನಾಮಗಳು.

Translation Manual :: Just-in-Time Learning Modules :: Pronouns :: Reflexive Pronouns

ವಿವರಣೆ

ಎಲ್ಲಾ ಭಾಷೆಗಳಲ್ಲಿ ಒಬ್ಬ ವ್ಯಕ್ತಿ ಒಂದೇ ವಾಕ್ಯದಲ್ಲಿ ಎರಡು ವಿಭಿನ್ನ ಪಾತ್ರಗಳನ್ನು ವಹಿಸುವುದನ್ನು ತೋರಿಸುತ್ತದೆ. ಇಂಗೀಷ್ ಭಾಷೆಯಲ್ಲಿ ಇದನ್ನು ಕರ್ತೃವಾಚ್ಯ ಸರ್ವನಾಮ ಎಂದು ಕರೆಯುತ್ತಾರೆ. ವ್ಯಕ್ತಿ ಅಥವಾ ವಸ್ತುವಿನ ಸ್ವಂತಕ್ಕೆ ಅನ್ವಯಿಸಬಹುದಾದ ಪ್ರಥಮ ಪುರುಷ ಸರ್ವನಾಮವೇ ಕರ್ತೃವಾಚ್ಯ ಸರ್ವನಾಮ.

ಇಂಗೀಷ್ ಭಾಷೆಯಲ್ಲಿ ಈ ಕರ್ತೃವಾಚ್ಯ ಸರ್ವನಾಮಗಳು : (ನನ್ನ, ನಿನ್ನ, ಅವನ, ಅವಳ, ಅದರ, ನಮ್ಮನಮ್ಮೊಳಗೆ, ನಿಮ್ಮಗಳ ಮತ್ತು ಅವರುಗಳ) ಎಂಬ ಪದಗಳಾಗಿವೆ. ಇತರ ಭಾಷೆಗಳಲ್ಲೂ ಇತರ ರೀತಿಯ ಪದಗಳಿರಬಹುದು.

ಕಾರಣ ಇದೊಂದು ಭಾಷಾಂತರ ವಿಷಯ.

  • ಇತರ ಭಾಷೆಗಳಲ್ಲಿ ಒಬ್ಬ ವ್ಯಕ್ತಿ, ಒಂದು ವಾಕ್ಯದಲ್ಲಿ ಎರಡು ಪಾತ್ರಗಳನ್ನು ನಿರ್ವಹಿಸುವುದನ್ನು ನೋಡಬಹುದು ಅಂತಹ ಭಾಷೆಗಳಲ್ಲಿ ಭಾಷಾಂತರಗಾರರು ಇಂಗೀಷ್ ನ reflexive pronouns. ಗಳನ್ನು ಹೇಗೆ ಭಾಷಾಂತರಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
  • ಇಂಗೀಷ್ ಭಾಷೆಯ ಕರ್ತೃವಾಚ್ಯ ಸರ್ವನಾಮಗಳಿಗೆ ಇತರ ಕಾರ್ಯಗಳು ಇರುತ್ತವೆ.

/ ಕರ್ತೃವಾಚ್ಯ ಸರ್ವನಾಮಗಳ ಉಪಯೋಗಗಳು.

  • ಒಂದೇ ವಾಕ್ಯದಲ್ಲಿ ಎರಡು ವಿಭಿನ್ನ ಪಾತ್ರಗಳನ್ನು ಒಬ್ಬನೇ ವ್ಯಕ್ತಿ ಅಥವಾ ಒಂದು ವಸ್ತು ನಿರ್ವಹಿಸುತ್ತದೆ ಎಂಬುದನ್ನು ತೋರಿಸಲು ಬಳಸುವುದು.
  • ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವಿಗೆ ವಾಕ್ಯದಲ್ಲಿ ಪ್ರಾಧಾನ್ಯತೆ ನೀಡುವುದು.
  • ಒಬ್ಬರು ಒಂದು ಕೆಲಸವನ್ನು ಮಾತ್ರ ಮಾಡಿದರು ಎಂದು ತೋರಿಸಲು.
  • ಒಂದು ವಸ್ತು ಅಥವಾ ಒಬ್ಬ ವ್ಯಕ್ತಿ ಮಾತ್ರ ಎಂದು ತಿಳಿಸಲು.

ಸತ್ಯವೇದದಿಂದ ಉದಾಹರಣೆಗಳು.

ಕರ್ತೃವಾಚ್ಯ ಸರ್ವನಾಮಗಳು ಒಬ್ಬ ವ್ಯಕ್ತಿ ಅಥವಾ ಒಂದು ವಸ್ತು ಎರಡು ವಿಭಿನ್ನ ಪಾತ್ರಗಳನ್ನು ಒಂದು ವಾಕ್ಯದಲ್ಲಿ ನಿರ್ವಹಿಸುತ್ತವೆ.

ನಾನು , ನನ್ನ ವಿಷಯವಾಗಿ ನಾನೇ ಸಾಕ್ಷಿಹೇಳಿಕೊಂಡರೆ ನನ್ನ ಸಾಕ್ಷಿ ನಿಜವಾಗದು (ಯೋಹಾನ 5:31 ULB)

ಆಗ ಯೋಹಾನ ಪಸ್ಕಹಬ್ಬ ಹತ್ತಿರವಾಗಿರಲಾಗಿ ಬಹು ಜನರು ತಮ್ಮನ್ನು ಶುದ್ಧಿಮಾಡಿ ಕೊಳ್ಳುವುದಕ್ಕಾಗಿ .ಹಬ್ಬಕ್ಕಿಂತ ಮೊದಲು ಹಳ್ಳಿಗಳಿಂದ ಯೆರೋಸೆಲೇಮಿಗೆ ಬಂದರು (ಯೋಹಾನ 11:55 ULB)

ಕರ್ತೃವಾಚ್ಯ ಸರ್ವನಾಮಗಳನ್ನು ವಾಕ್ಯದಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವಿನ ಬಗ್ಗೆ ಪ್ರಾಧಾನ್ಯತೆ ನೀಡಲು ಬಳಸಲಾಗುತ್ತದೆ.

ಆದರೂ ದೀಕ್ಷಾಸ್ನಾನ ಮಾಡಿಸುತ್ತಿದ್ದವನು ಯೇಸುವಲ್ಲ ಆದರೆ ಆತನ ಶಿಷ್ಯರು ದೀಕ್ಷಾಸ್ನಾನ ಮಾಡಿಸುತ್ತಿದ್ದರು.(ಯೊಹಾನ 4:2 ULB)

ಅವರು ಆ ಜನರ ಗುಂಪನ್ನು ಬಿಟ್ಟು ಆತನನ್ನು ಅದೇ ದೋಣಿಯಲ್ಲಿ ಹಾಗೆಯೇ ಕರೆದುಕೊಂಡು ಹೋದರು. ಬೇರೆ ದೋಣಿಗಳು ಆತನ ಸಂಗಡ ಇದ್ದವು. ತರುವಾಯ ದೊಡ್ಡ ಬಿರುಗಾಳಿ ಎದ್ದು ತೆರೆಗಳು ಆ ದೋಣಿಗೆ ಬಡಿದು ಒಳಗೆ ನೀರು ನುಗ್ಗಿದ್ದರಿಂದ ಆ ದೋಣಿ ಆಗಲೇ ತುಂಬುವುದಕ್ಕೆ ತೊಡಗಿತು. ಆದರೆ ಯೇಸು ತಾನು ದೋಣಿ ಹಿಂಬಾಗದಲ್ಲಿ ತಲೆದಿಂಬನ್ನು ಒರಗಿ ನಿದ್ದೆ ಮಾಡುತ್ತಿದ್ದನು. (ಮಾರ್ಕ 4:36-38 ULB)

ಕರ್ತೃವಾಚ್ಯ ಸರ್ವನಾಮಗಳನ್ನು ಒಬ್ಬರು ಒಂದು ಸಂಗತಿಯನ್ನು ಮಾತ್ರ ಮಾಡಿದರು ಎಂದು ಹೇಳಲು ಬಳಸುತ್ತಾರೆ.

ಆಗ ಯೇಸು - ಅವರು ಬಂದು ತನ್ನನ್ನು ಹಿಡಿದುಕೊಂಡು ಹೋಗಿ ಅರಸನನ್ನಾಗಿ ಮಾಡಬೇಕೆಂಬ ಯೋಚನೆಯಲ್ಲಿದ್ದಾರೆಂದು ತಿಳಿದುಕೊಂಡು ತಿರುಗಿ ತಾನೊಬ್ಬನೆ .ಒಂಟಿಯಾಗಿ ಬೆಟ್ಟಕ್ಕೆ ಹೋಗಿಬಿಟ್ಟನು (ಯೋಹಾನ 6:15 ULB)

ಕರ್ತೃವಾಚ್ಯ ಸರ್ವನಾಮಗಳನ್ನು ಒಬ್ಬವ್ಯಕ್ತಿ ಅಥವಾ ಒಂದು ವಸ್ತು ಒಂಟಿಯಾಗಿದ್ದಾನೆ / ದೆ ಎಂದು ತಿಳಿಸಲು ಬಳಸಿದೆ.

ಸೀಮೋನ ಪೇತ್ರನು ತಲೆಯ ಮೇಲಿದ್ದ ಕೈ ಪಾವುಡವು ಆ ನಾರು ಬಟ್ಟೆಗಳ ಜೊತೆಯಲ್ಲಿ ಇರದೆ .ಸುತ್ತಿ ಒಂದು ಕಡೆ .ಇಟ್ಟಿರುವುದನ್ನು ನೋಡಿದನು (ಯೋಹಾನ 20:6-7 ULB)

ಭಾಷಾಂತರ ಕೌಶಲ್ಯಗಳು

ನಿಮ್ಮ ಭಾಷೆಯಲ್ಲಿ ಕರ್ತೃವಾಚ್ಯ ಸರ್ವನಾಮಗಳು ಇದೇ ಕಾರ್ಯ ಮಾಡುವುದಾದರೆ ಅದನ್ನೇ ಪರಿಗಣಿಸಿ. ಇಲ್ಲದಿದ್ದರೆ, ಕೆಳಗೆ ನೀಡಿರುವ ತಂತ್ರಗಳನ್ನು ಪರಿಗಣಿಸಿ.

  1. ವಿಷಯ ಮತ್ತು ಕ್ರೀಯಾಪದದಲ್ಲಿ ಕಾಣುವ ವಸ್ತು ಇವುಗಳ ನಡುವೆ ಯಾವ ವ್ಯತ್ಯಾಸವಿಲ್ಲ ಎಂದು ತೋರಿಸಲು ಕೆಲವು ಭಾಷೆಯಲ್ಲಿ ಜನರು ಕ್ರಿಯಾಪದದೊಂದಿಗೆ ಬೇರೊಂದು ಪದವನ್ನು ಬಳಸುತ್ತಾರೆ.
  2. ಕೆಲವು ಭಾಷೆಯಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವಿನೊಂದಿಗೆ ವಾಕ್ಯದಲ್ಲಿ ವಿಶಿಷ್ಟಸ್ಥಾನ ಒದಗಿಸಿ ಬಳಸುವುದು ಇದೆ.
  3. ಕೆಲವು ಭಾಷೆಯಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವಿನೊಂದಿಗೆ ಯಾವ ಪದವನ್ನಾದರೂ ಸೇರಿಸಿ ಬಳಸುವುದೂ ಇದೆ.
  4. ಕೆಲವು ಭಾಷೆಯಲ್ಲಿ " ಒಬ್ಬನೇ" ಎಂಬ ಪದವನ್ನು ಬಳಸಿ ಕೇವಲ ಒಬ್ಬರು "ಮಾತ್ರ " ಇದನ್ನು ಮಾಡಿದರು ಎಂದು ತೋರಿಸುತ್ತಾರೆ.
  5. ಇನ್ನೂ ಕೆಲವು ಭಾಷೆಯಲ್ಲಿ ಜನರು " ಯಾವುದೋ ಒಂದು ಮಾತ್ರ " ಎಂಬ ಪದಗುಚ್ಛವನ್ನು ಬಳಸಿ ಅದು ಎಲ್ಲಿದೆ ಎಂಬುದನ್ನುತಿಳಿಸುತ್ತಾರೆ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು

  1. ಕೆಲವು ಭಾಷೆಯಲ್ಲಿ ಜನರು ಕ್ರಿಯಾಪದದೊಂದಿಗೆ ಕರ್ಮಪದವನ್ನು ಕರ್ತೃಪದದೊಂದಿಗೆ ಕ್ರಿಯಾಪದವನ್ನು ಕೆಲವೊಮ್ಮೆ ಒಂದೇ ರೀತಿಯಲ್ಲಿ ಬಳಸುತ್ತಾರೆ.
  • ನನ್ನ ವಿಷಯವಾಗಿ ನಾನೇ ಸಾಕ್ಷಿ ಹೇಳಿಕೊಂಡರೆ ನನ್ನ ಸಾಕ್ಷಿ ನಿಜವಾಗದು. (ಯೋಹಾನ 5:31)

    • " ನನ್ನ ವಿಷಯವಾಗಿ ನಾನು ಸ್ವತಃ ಸಾಕ್ಷಿ ಹೇಳಿದರೆ ಮಾತ್ರ ನನ್ನ ಸಾಕ್ಷಿ ನಿಜವೆಂದು ತಿಳಿಯುತ್ತದೆ."
  • ಆಗ ಯೆಹೂದ್ಯರ ಪಸ್ಕಹಬ್ಬ ಹತ್ತಿರವಿರಲಾಗಿ ಬಹುಜನರು ತಮ್ಮನ್ನು ಶುದ್ಧೀಕರಿಸಿ ಕೊಳ್ಳಲು .ಹಬ್ಬಕ್ಕಿಂತ ಮೊದಲು ತಮ್ಮ ಊರುಗಳಿಂದ ಯೆರೂಸಲೇಮಿಗೆ ಬಂದರು (ಯೋಹಾನ 11:55)

    • " ಆಗ ಯೆಹೋದ್ಯರ ಪಸ್ಕಹಬ್ಬ ಹತ್ತಿರವಾಗುತ್ತಿದ್ದಂತೆ ಜನರೆಲ್ಲರೂ ತಮ್ಮ ಊರುಗಳಿಂದ ಹಬ್ಬದ ಮೊದಲೇ ಹೊರಟು ಯೆರೂಸಲೇಮಿಗೆ ತಮ್ಮನ್ನು ಶುದ್ಧೀಕರಿಸಿಕೊಳ್ಳಲು ."ಬಂದರು
  1. ಕೆಲವು ಭಾಷೆಯಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವಿನೊಂದಿಗೆ ವಾಕ್ಯದಲ್ಲಿ ವಿಶಿಷ್ಟಸ್ಥಾನ ಒದಗಿಸಿ ಬಳಸುವುದು ಇದೆ.
  • ಆತನು ತಾನೇ ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು. (ಮತ್ತಾಯ 8:17 ULB)

    • " ನಮ್ಮ ಬೇನೆಗಳನ್ನು ಮತ್ತು ನಮ್ಮ ರೋಗಗಳನ್ನು ಆತನೇ ಹೊತ್ತುಕೊಂಡನು ."
  • ಯೇಸು ತಾನೇ ದೀಕ್ಷಾಸ್ನಾನ ಕೊಡುತ್ತಿರಲಿಲ್ಲ ಆದರೆ ಆತನ ಶಿಷ್ಯರು ಕೊಡುತ್ತಿದ್ದರು . (ಯೊಹಾನ 4:2)

    • ಅಲ್ಲಿ ಯೇಸು ದೀಕ್ಷಾಸ್ನಾನ ಕೊಡುತ್ತಿರಲಿಲ್ಲ ಆದರೆ ಆತನ ಶಿಷ್ಯರು ಕೊಡುತ್ತಿದ್ದರು.”
  1. ಕೆಲವು ಭಾಷೆಯಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವಿನೊಂದಿಗೆ ಯಾವ ಪದವನ್ನಾದರೂ ಸೇರಿಸಿ ಬಳಸುವುದೂ ಇದೆ. ಇಂಗ್ಲೀಷ್ ಭಾಷೆಯಲ್ಲಿ reflexive pronoun ಕರ್ತೃವಾಚ್ಯ ಸರ್ವನಾಮಗಳನ್ನು ಸೇರಿಸಿ ಬಳಸುತ್ತದೆ.
  • ತಾನು ಮಾಡಬೇಕಾದುದು ತನಗೆ ತಿಳಿದಿದ್ದರೂ ಫಿಲಿಪ್ಪನನ್ನು ಪರೀಕ್ಷಿಸುವುದಕ್ಕೆ ಈ ಮಾತನ್ನು ಹೇಳಿದನು. (ಯೋಹಾನ 6:6)
  1. ಕೆಲವು ಭಾಷೆಯಲ್ಲಿ ಜನರು ಒಬ್ಬರೇ " ಒಬ್ಬನೇ." ಎಂಬ ಪದವನ್ನು ಬಳಸಿ ಒಬ್ಬರು "ಇದನ್ನು ಮಾತ್ರ " ಮಾಡಿದರು ಎಂದು ಬಳಸಬಹುದು.
  • ಆಗ ಯೇಸು – ಅವರು ಬಂದು ತನ್ನನ್ನು ಹಿಡುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂಬ ಆಲೋಚನೆಯಲ್ಲಿದ್ದಾರೆಂದು ತಿಳಿದುಕೊಂಡು ತಿರುಗಿ ತಾನೊಬ್ಬನೇ ಒಂಟಿಯಾಗಿ .ಬೆಟ್ಟಕ್ಕೆ ಹೋಗಿಬಿಟ್ಟನು (ಯೋಹಾನ 6:15)
    • “ಅವರೆಲ್ಲರೂ ಬಂದು ಆತನನ್ನು ಹಿಡಿದು ಬಲವಂತವಾಗಿ ಅರಸನನ್ನಾಗಿ ಮಾಡಲು ಆಲೋಚಿಸುತ್ತಿ ದ್ದಾರೆಂದು ತಿಳಿದು ಅವರಿಂದ ದೂರ ಒಬ್ಬೊಂಟಿಗನಾಗಿಬೆಟ್ಟಕ್ಕೆ ಹೋದನು.”
  1. ಇನ್ನೂ ಕೆಲವು ಭಾಷೆಯಲ್ಲಿ ಜನರು ಯಾವುದೋ ಒಂದು ಸಂಗತಿ ಏಕಾಂತವಾಗಿದೇ ಎಂದು ತೋರಿಸಲು ಒಂದು ಪದಗುಚ್ಛವನ್ನು ಬಳಸಿ ಅದು ಎಲ್ಲಿದೆ ಎಂಬುದನ್ನುತಿಳಿಸುತ್ತಾರೆ.
  • ಅಲ್ಲಿ ಅವನು ಆತನು ಧರಿಸಿದ್ದ ನಾರುಬಟ್ಟೆಯನ್ನು ತಲೆಗೆ ಸುತ್ತಿದ್ದ ಕೈಪಾವುಡಗಳು ನೆಲದ ಮೇಲೆ ಇದ್ದುದನ್ನು ನೋಡಿದನು. ಅದು ನಾರುಬಟ್ಟೆಯೊಂದಿಗೆ ನೆಲದ ಮೇಲೆ ಬಿದ್ದಿರಲಿಲ್ಲ, ಬದಲಾಗಿ ಅದನ್ನು ಸುತ್ತಿ ಒಂದೆಡೆ .ಇಡಲಾಗಿತ್ತು (ಯೋಹಾನ 20:6-7 ULB)
    • " ಅವನು ನಾರುಬಟ್ಟೆಗಳು ಅಲ್ಲಿ ನೆಲದ ಮೇಲೆ ಬಿದ್ದಿರುವುದನ್ನು ಮತ್ತು ತಲೆಗೆ ಸುತ್ತಿದ್ದ ಕೈಪಾವುಡವನ್ನು ನೋಡಿದನು. ಅದು ನಾರುಬಟ್ಟೆಗಳೊಂದಿಗೆ ಅಲ್ಲಿ ಬಿದ್ದಿರಲಿಲ್ಲ ಬದಲಾಗಿ ಆ ಕೈಪಾವುಡವನ್ನು ಸುತ್ತಿ ಒಂದೆಡೆ ಅದರ ಜಾಗದಲ್ಲಿಇಡಲಾಗಿತ್ತು ."

ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.

Translation Manual :: Just-in-Time Learning Modules :: Pronouns :: Pronouns - When to Use Them

ವಿವರಣೆ

ನಾವು ಮಾತನಾಡುವಾಗ ಅಥವಾ ಬರೆಯುವಾಗ ಜನರನ್ನು ಅಥವಾ ವಸ್ತುಗಳ ಬಗ್ಗೆ ಅವರ / ಅವುಗಳ ಹೆಸರನ್ನು ಪದೇಪದೇ ಉಚ್ಛರಿಸುವ ಬದಲು ಸರ್ವನಾಮಗಳನ್ನು ಬಳಸುತ್ತೇವೆ. ಸಾಮಾನ್ಯವಾಗಿ ನಾವು ಮೊದಲ ಬಾರಿ ಯಾರ ಬಗ್ಗೆ / ಯಾವುದರ ಬಗ್ಗೆ ಹೇಳುತ್ತೇವೋ ಆಗ ಅದನ್ನು ವಿವರಿಸಲು ನುಡಿಗುಚ್ಛವನ್ನು ಅಥವಾ ಹೆಸರನ್ನು ಬಳಸುತ್ತೇವೆ. ಮುಂದಿನಸಲ ನಾವು ಆ ವ್ಯಕ್ತಿಯ ಬಗ್ಗೆ ಹೇಳುವಾಗ ಅವನ ಹೆಸರು ಅಥವಾ ಸರಳ ನಾಮಪದ ಬಳಸುತ್ತೇವೆ. ಆ ನಂತರ ನಾವು ಅವನ ಬಗ್ಗೆ ಉದ್ದೇಶಿಸಿ ಮಾತನಾಡುವಾಗ ಸರ್ವನಾಮಗಳನ್ನು ಬಳಸುತ್ತೇವೆ. ನಮ್ಮ ಓದುಗರು ನಾವು ಯಾರನ್ನು ಉದ್ದೇಶಿಸಿ ಹೇಳುತ್ತಿದ್ದೇವೆ ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಅರ್ಥಮಾಡಿಕೊಳ್ಳಲು ಸಮರ್ಥರಾಗಿರುವವರೆಗೆ. ಇವುಗಳನ್ನು ಬಳಸುತ್ತೇವೆ.

ಪರಿಸಾಯರಲ್ಲಿ ಯೆಹೂದ್ಯರ ಹಿರಿಯವನಾದ ನಿಕೋದೇಮನೆಂಬ ಒಬ್ಬ ಮನುಷ್ಯನಿದ್ದನು ಅವನುರಾತ್ರಿಯಲ್ಲಿ ಯೇಸುವಿನ ಬಳಿ ಬಂದನು. ಯೇಸು ಅವನಿಗೆ ಉತ್ತರಿಸಿದನು (ಯೋಹಾನ 3:1-3 ULB)

ಯೋಹಾನ 3,ರಲ್ಲಿ ನಿಕೋದೇಮನನ್ನು ಮೊದಲು ನಾಮಪದ ಹಾಗೂ ಅವನ ಹೆಸರಿನಿಂದ ಗುರುತಿಸಲಾಗಿದೆ. ಆಮೇಲೆ ಅವನನ್ನು ನಾಮಪದ ಗುಚ್ಛ “ಈ ಮನುಷ್ಯ.” ಎಂದು ಗುರುತಿಸಿ ಹೇಳಿದೆ. ಆಮೇಲೆ ಅವನನ್ನು “ಅವನಿಗೆ.” ಎಂಬ ಸರ್ವನಾಮದಿಂದ ಗುರುತಿಸಿ ಹೇಳಿದೆ. ಪ್ರತಿಯೊಂದು ಭಾಷೆಯಲ್ಲೂ ಈ ರೀತಿಯ ನಿಯಮಗಳು, ಬಳಕೆಗಳು ವ್ಯಕ್ತಿಗಳ ಬಗ್ಗೆ ಮತ್ತು ವಸ್ತುಗಳ ಬಗ್ಗೆ ಹೇಳಲು ಬಳಸಲಾಗುತ್ತದೆ.

  • ಕೆಲವು ಭಾಷೆಯಲ್ಲಿ ಮೊದಲಸಲ ಒಂದು ವಾಕ್ಯಭಾಗ ಅಥವಾ ಅಧ್ಯಾಯವನ್ನು ಕುರಿತು ಹೇಳುವಾಗ ನಾಮಪದವನ್ನು ಬಳಸುತ್ತಾರೆಯೇ ಹೊರತು ಸರ್ವನಾಮಗಳನ್ನು ಬಳಸುವುದಿಲ್ಲ.
  • ಅದರಲ್ಲಿನ ಪ್ರಮುಖ ಪಾತ್ರ ಒಬ್ಬ ವ್ಯಕ್ತಿ ಅವನ ಬಗ್ಗೆ ಈ ಕತೆ ಬೆಳೆಯುತ್ತದೆ. ಇನ್ನು ಕೆಲವು ಭಾಷೆಯಲ್ಲಿ ಕತೆ ಪ್ರಾರಂಭವಾದ ಮೇಲೆ ಮುಖ್ಯ ಪಾತ್ರದ ಪರಿಚಯವಾಗುತ್ತದೆ ನಂತರ ಆತನ ಬಗ್ಗೆ ಹೇಳುವಾಗಲೆಲ್ಲಾ ಸರ್ವನಾಮವನ್ನು ಬಳಸುತ್ತಾರೆ. ಕೆಲವು ಭಾಷೆಯಲ್ಲಿ ವಿಶೇಷವಾದ ಸರ್ವನಾಮವಿದ್ದು ಅದನ್ನು ಕತೆಯ ಮುಖ್ಯಪಾತ್ರಕ್ಕೆ ಮಾತ್ರ ಬಳಸಲಾಗುತ್ತದೆ.
  • ಕೆಲವು ಭಾಷೆಯಲ್ಲಿ ಕ್ರಿಯಾಪದವನ್ನು ಗುರುತಿಸಿದರೆ ಓದುಗರು ವಿಷಯದಲ್ಲಿ ಯಾರಬಗ್ಗೆ ಮಾತನಾಡುತ್ತಿದ್ದಾರೆ/ ಹೇಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಲ್ಲರು (- ಕ್ರಿಯಾಪದ) ಇದನ್ನು ಓದಿ ತಿಳಿಯಿರಿ. ಇನ್ನೂ ಕೆಲವು ಭಾಷೆಗಳಲ್ಲಿ ಓದುಗರು ಇಂತಹ ಗುರುತುಗಳ ಮೂಲಕ " ಯಾರ ಬಗ್ಗೆ ಹೇಳಿದೆ " ಎಂಬುದನ್ನು ತಿಳಿದುಕೊಳ್ಳುವವರಿದ್ದಾರೆ. ಇಲ್ಲಿ ಲೇಖಕರು ಸರ್ವನಾಮ, ನಾಮಪದ ಅಥವಾ ಹೆಸರುಗಳನ್ನು ಬಳಸುವುದು ಕರ್ತೃ ಯಾರೆಂದು ಸೂಚಿಸಲು.

ಕಾರಣ ಇದು ಭಾಷಾಂತರದ ಸಮಸ್ಯೆ.

  • ಭಾಷಾಂತರಗಾರರು ಸರ್ವನಾಮವನ್ನು ಅನಗತ್ಯ ಸನ್ನಿವೇಶ ಅಥವಾ ಸಮಯದಲ್ಲಿ ಬಳಸಿದರೆ ಓದುಗರಿಗೆ ಲೇಖಕ ಯಾರಬಗ್ಗೆ ಹೇಳುತ್ತಿದ್ದಾನೆ ಅಥವಾ ಮಾತನಾಡುತ್ತಿದ್ದಾನೆ ಎಂದು ಗೊಂದಲಕ್ಕೀಡಾಗುವರು.
  • ಭಾಷಾಂತರಗಾರರು ತಮ್ಮ ಭಾಷಾಂತರದಲ್ಲಿ ಪದೇಪದೇ ಮುಖ್ಯ ಪಾತ್ರವನ್ನು ಹೆಸರಿನಿಂದ ಬಳಸಿದರೆ ಓದುಗರ ಮುಖ್ಯ ಪಾತ್ರವನ್ನು ಗುರುತಿಸಲು ಸಾಧ್ಯವಾಗದೆ ಇರಬಹುದು. ಅಥವಾ ಇದೇ ಹೆಸರಿನ ಇನ್ನೊಂದು ಪಾತ್ರವು ಇದೆ ಎಂದು ತಿಳಿದುಕೊಳ್ಳುವ ಸಾಧ್ಯತೆಯೂ ಇರುತ್ತದೆ.
  • ಭಾಷಾಂತರಗಾರರು ಸರ್ವನಾಮಗಳನ್ನು ನಾಮಪದಗಳನ್ನು ಅಥವಾ ಹೆಸರುಗಳನ್ನು ಅನಗತ್ಯ ಸನ್ನಿವೇಶ, ಸಮಯದಲ್ಲಿ ಬಳಸಿದರೆ ಓದುಗರು ಆ ವ್ಯಕ್ತಿ ಅಥವಾ ವಸ್ತುವಿನ ಮೇಲೆ ವಿಶೇಷ ಒತ್ತು ನೀಡಿದೆ ಎಂದು ತಿಳಿದುಕೊಳ್ಳಬಹುದು.

####ಸತ್ಯವೇದದಿಂದ ಕೆಲವು ಉದಾಹರಣೆಗಳು

ಕೆಳಗೆ ಕೊಟ್ಟಿರುವ ಉದಾಹರಣೆಗಳು ಅಧ್ಯಾಯದ ಪ್ರಾರಂಭದಲ್ಲಿ ಇರುವಂತಹವು. ಕೆಲವು ಭಾಷೆಯಲ್ಲಿ ಸರ್ವನಾಮಗಳು ಯಾರನ್ನು ಉದ್ದೇಶಿಸಿ ಹೇಳಿವೆ ಎಂಬುದು ಸ್ಪಷ್ಟವಾಗದೆ ಇರಬಹುದು.

ಯೇಸು ಸಭಾಮಂದಿರಕ್ಕೆ ಹೋದಾಗ ಅಲ್ಲಿ ಕೈಬತ್ತಿಹೋದವನೊಬ್ಬನಿದ್ದನು ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಆತನನ್ನು ಹೊಂಚಿನೋಡುತ್ತಾ ಸಬ್ಬತ್ ದಿನದಲ್ಲಿ ಅವನನ್ನು ಸ್ವಸ್ಥಮಾಡುವನೋ ಏನೋ ಎಂದು ನೋಡುತ್ತಿದ್ದರು. (ಮಾರ್ಕ 3:1-2 ULB)

ಕೆಳಗಿನ ಉದಾಹರಣೆಯಲ್ಲಿ ಮೊದಲ ವಾಕ್ಯದಲ್ಲೇ ಇಬ್ಬರ ಹೆಸರುಗಳನ್ನು ತಿಳಿಸಿದೆ. ಎರಡನೇ ವಾಕ್ಯದಲ್ಲಿ " ಅವನು" ಎಂದು ಬಳಸಿರುವುದು ಯಾರನ್ನು ಕುರಿತು ಎಂಬುದು ಸ್ಪಷ್ಟವಾಗಿಲ್ಲ.

ಕೆಲವು ದಿನಗಳ ನಂತರ ಅಗ್ರಿಪ್ಪ ರಾಜನುಬೆರ್ನಿಕೆ ರಾಣಿಯು ಫೆಸ್ತನ ದರ್ಶನ .ಮಾಡುವುದಕ್ಕೆ ಕೈಸರಿಯಕ್ಕೆ ಬಂದರು. ಅವರು ಅನೇಕ ದಿನಗಳು ಅಲ್ಲಿ ಇದ್ದರು.ಫೆಸ್ತನು ಪೌಲನ ಸಂಗತಿಯನ್ನು ರಾಜನಿಗೆ ತಿಳಿಸಿದನು…(ಆ.ಕೃ. 25:13-14 ULB)

ಯೇಸು ಮತ್ತಾಯನ ಸುವರ್ತಾ ಪುಸ್ತಕದ ಮುಖ್ಯಪಾತ್ರದಾರಿ, ಆದರೆ ಕೆಳಗೆ ಉದಾಹರಿಸಿದ ವಾಕ್ಯಗಳಲ್ಲಿ ಯೇಸುವಿನ ಹೆಸರು ನಾಲ್ಕುಸಲ ಹೇಳಲಾಗಿದೆ. ಇದರಿಂದ ಕೆಲವು ಭಾಷೆಯಲ್ಲಿನ ಓದುಗರು ಯೇಸು ಮುಖ್ಯಪಾತ್ರ ಎಂದು ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಅಥವಾ ಯೇಸು ಎಂಬ ಹೆಸರಿನ ಅನೇಕ ವ್ಯಕ್ತಿಗಳು ಈ ಕತೆಯಲ್ಲಿ ಇದ್ದಾರೆ ಎಂದು ತಿಳಿಯಬಹುದು. ಅಥವಾ ಯೇಸುವಿನ ಪಾತ್ರದ ಮೇಲೆ ವಿಶೇಷ ಒತ್ತು ನೀಡಲಾಗಿದೆ ಎಂದು ತಿಳಿಯಬಹುದು.ಇಲ್ಲಿ ಈ ಪಾತ್ರದ ಮೇಲೆ ಹೆಚ್ಚು ಪ್ರಾಮುಖ್ಯತೆ ಇಲ್ಲದಿದ್ದರೂ ಈ ರೀತಿ ಯೋಚಿಸಬಹುದು.

ಆ ಸಮಯದಲ್ಲಿ ಯೇಸುಸಬ್ಬತ್ ದಿನದಂದು ಪೈರಿನ ಹೊಲದ ಮೂಲಕ ಹಾದುಹೋಗುತ್ತಿರುವಾಗ ಆತನಶಿಷ್ಯರು ಹಸಿದಿದ್ದರಿಂದ ಹಸಿರು ತೆನೆಗಳನ್ನು ಮುರಿದು ತಿನ್ನತೊಡಗಿದರು ಪರಿಸಾಯರು ಇದನ್ನು ಕಂಡು ಯೇಸುವನ್ನು ಕುರಿತು ಯೇಸು , “ನೋಡು ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ಧರ್ಮಕ್ಕೆ ವಿರುದ್ಧವಾದ ಮಾಡಬಾರದ ಕೆಲಸವನ್ನು ಮಾಡುತ್ತಿದ್ದಾರೆ”. ಆದರೆ ಯೇಸುಅವರನ್ನು ಕುರಿತು " ದಾವೀದನೂ ತಾನು ತನ್ನ ಸಂಗಡ ಇದ್ದವರು ಹಸಿದಾಗ ಏನು ಮಾಡಬೇಕೆಂಬುದನ್ನು ಓದಲಿಲ್ಲವೋ ? "… ಎಂದು ಕೇಳಿದನು. ಆಗ J ಯೇಸು ಅಲ್ಲಿಂದ ಹೊರಟು ಸಭಾ ಮಂದಿರದೊಳಗೆ ಹೋದನು (ಮತ್ತಾಯ 12:1-9 ULB)

ಭಾಷಾಂತರ ಕೌಶಲ್ಯಗಳು.

  1. ನಿಮ್ಮ ಓದುಗರಿಗೆ ಇನ್ನು ಸರ್ವನಾಮವನ್ನು ಉದ್ದೇಶಿಸಿ ಹೇಳುವ ನಾಮಪದ ಅಥವಾ ಹೆಸರು ಇವುಗಳ ಬಗ್ಗೆ ಸ್ಪಷ್ಟವಾಗಿಲ್ಲದಿದ್ದರೆ ಎಂಬುದನ್ನು ಯೋಚಿಸಬೇಕಿದೆ.
  2. ಪುನರಾವರ್ತಿತವಾಗುವ ನಾಮಪದ ಅಥವಾ ಹೆಸರು ಜನರನ್ನು ಮುಖ್ಯಪಾತ್ರವನ್ನು ಮುಖ್ಯಪಾತ್ರವಲ್ಲ ಎಂದು ಯೋಚಿಸುವಂತೆ ಮಾಡುತ್ತದೆ.ಅಥವಾ ಲೇಖಕ ಒಬ್ಬನಿಗಿಂತ ಹೆಚ್ಚು ಜನರ ಹೆಸರಿನ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ತಿಳಿಯಬಹುದು. ಅಥವಾ ಕೆಲವರ ಮೇಲೆ ಒತ್ತು ನೀಡುವ ಅವಶ್ಯಕತೆ ಇಲ್ಲದಿದ್ದರೂ ಒತ್ತು ನೀಡಬಹುದು. ಅದರ ಬದಲು ಸರ್ವನಾಮವನ್ನು ಬಳಸಬಹುದು.

ಭಾಷಾಂತರದ ಕೌಶಲ್ಯಗಳ ಅಳವಡಿಕೆ.

  1. ನಿಮ್ಮ ಓದುಗರಿಗೆ ಸರ್ವನಾಮವು ಯಾರ ಬಗ್ಗೆ ಯಾವದರ ಬಗ್ಗೆ ಉದ್ದೇಶಿಸಿ ಹೇಳಿದೆ. ಎಂಬುದು ಇನ್ನೂ ಸ್ಪಷ್ಟವಾಗದಿದ್ದರೆ ನಾಮಪದ ಅಥವಾ ಹೆಸರು ಉಪಯೋಗಿಸಿ.
  • ಆತನು ಪುನಃ ಸಭಾಮಂದಿರದೊಳಗೆ ಹೋದಾಗ ಅಲ್ಲಿ ಕೈಬತ್ತಿದವನೊಬ್ಬನಿದ್ದನು ಅವರುಆತನ ಮೇಲೆ ತಪ್ಪು ಹೊರಿಸಬೇಕೆಂದು ಆಲೋಚಿಸಿ ಸಬ್ಬತ್ ದಿನದಲ್ಲಿ ಸ್ವಸ್ಥ ಮಾಡುವನೋ ಏನೋ ಎಂದು ಆತನನ್ನು ಹೊಂಚಿನೋಡುತ್ತಾ ಇದ್ದರು. (ಮಾರ್ಕ 3:1-2 ULB)
    • ಪುನಃ ಯೇಸು ಸಭಾಮಂದಿರದೊಳಗೆ ಹೋದನು, ಅಲ್ಲಿ ಕೈಬತ್ತಿದವನೊಬ್ಬನಿದ್ದನು ಕೆಲವು ಪರಿಸಾಯರು Jಯೇಸು ಆ ಮನುಷ್ಯನನ್ನು ಸಬ್ಬತ್ ದಿನದಂದು ಸ್ವಸ್ಥ ಮಾಡುವನೋ ಎಂದು ಹೊಂಚಿನೋಡುತ್ತಾ ಇದ್ದರು (Mark 3:1-2 UDB)
  1. ಪುನರಾವರ್ತಿತವಾಗುವ ನಾಮಪದ ಅಥವಾ ಹೆಸರು ಜನರನ್ನು ಮುಖ್ಯಪಾತ್ರವನ್ನು ಮುಖ್ಯಪಾತ್ರವಲ್ಲ ಎಂದು ಯೋಚಿಸುವಂತೆ ಮಾಡುತ್ತದೆ.ಅಥವಾ ಲೇಖಕ ಒಬ್ಬನಿಗಿಂತ ಹೆಚ್ಚು ಜನರ ಹೆಸರಿನ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ತಿಳಿಯಬಹುದು. ಅಥವಾ ಕೆಲವರ ಮೇಲೆ ಒತ್ತು ನೀಡುವ ಅವಶ್ಯಕತೆ ಇಲ್ಲದಿದ್ದರೂ ಒತ್ತು ನೀಡಬಹುದು. ಅದರ ಬದಲು ಸರ್ವನಾಮವನ್ನು ಬಳಸಬಹುದು.

ಆ ಸಮಯದಲ್ಲಿ ಯೇಸುಸಬ್ಬತ್ ದಿನದಂದು ಪೈರಿನ ಹೊಲದ ಮೂಲಕ ಹಾದುಹೋಗುತ್ತಿರುವಾಗ ಆತನಶಿಷ್ಯರು ಹಸಿದಿದ್ದರಿಂದ ಹಸಿರು ತೆನೆಗಳನ್ನು ಮುರಿದು ತಿನ್ನತೊಡಗಿದರು ಪರಿಸಾಯರು ಇದನ್ನು ಕಂಡು ಯೇಸುವನ್ನು ಕುರಿತು ಯೇಸು , “ನೋಡು ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ಧರ್ಮಕ್ಕೆ ವಿರುದ್ಧವಾದ ಮಾಡಬಾರದ ಕೆಲಸವನ್ನು ಮಾಡುತ್ತಿದ್ದಾರೆ”. ಆದರೆ ಯೇಸುಅವರನ್ನು ಕುರಿತು " ದಾವೀದನೂ ತಾನು ತನ್ನ ಸಂಗಡ ಇದ್ದವರು ಹಸಿದಾಗ ಏನು ಮಾಡಬೇಕೆಂಬುದನ್ನು ಓದಲಿಲ್ಲವೋ ? "… ಎಂದು ಕೇಳಿದನು. ಆಗ J ಯೇಸು ಅಲ್ಲಿಂದ ಹೊರಟು ಸಭಾ ಮಂದಿರದೊಳಗೆ ಹೋದನು ** (ಮತ್ತಾಯ 12:1-9 ULB)

ಇವುಗಳನ್ನು ಈ ರೀತಿಯೂ ಭಾಷಾಂತರ ಮಾಡಬಹುದು.

ಆ ಸಮಯದಲ್ಲಿ ಯೇಸುಸಬ್ಬತ್ ದಿನದಂದು ಪೈರಿನ ಹೊಲದ ಮೂಲಕ ಹಾದುಹೋಗುತ್ತಿರುವಾಗ ಆತನಶಿಷ್ಯರು ಹಸಿದಿದ್ದರಿಂದ ಹಸಿರು ತೆನೆಗಳನ್ನು ಮುರಿದು ತಿನ್ನತೊಡಗಿದರು ಆಗ ಪರಿಸಾಯರು ಇದನ್ನು ನೋಡಿ ಆತನಿಗೆ , " ನೋಡು ನಿನ್ನ ಶಿಷ್ಯರು ಸಬ್ಬತ್ ದಿನದಂದು ಧರ್ಮನಿಯಮಕ್ಕೆ ವಿರುದ್ಧವಾದ ಕೆಲಸವನ್ನು ಮಾಡುತ್ತಿದ್ದಾರೆ” ಎಂದು ಹೇಳಿದರು. ಆದರೆ ಆತನುಅವರಿಗೆ ಹೀಗೆ ಹೇಳಿದನು" ದಾವೀದನೂ ತಾನು ತನ್ನ ಶಿಷ್ಯರು ಹಸಿದಿದ್ದಾಗ ಎನು ಮಾಡಿದರು ಎಂಬುದನ್ನು ನೀವು ಓದಲಿಲ್ಲವೆ? " — ಆಗ ಅವನುಅಲ್ಲಿಂದ ಹೊರಟು ಸಭಾ ಮಂದಿರದಲ್ಲಿ ಹೋದನು.

Sentences

Translation Manual :: Just-in-Time Learning Modules :: Sentences

ವಾಕ್ಯದ ರಚನೆ.

Translation Manual :: Just-in-Time Learning Modules :: Sentences :: Sentence Structure

ವಿವರಣೆಗಳು

ಇಂಗ್ಲೀಷ್ ಭಾಷೆಯ ಸರಳ ವಾಕ್ಯದಲ್ಲಿ ಕರ್ತೃಪದ - ಕರ್ತೃಪದ ಮತ್ತು an action ಕ್ರಿಯಾಪದ ಇರುತ್ತದೆ.

  • ಹುಡುಗನು ಓಡಿಹೋದ.

ಕರ್ತೃಪದ

The ಕರ್ತೃಪದ ಎಂಬುದು ಯಾರು ಅಥವಾ ವಾಕ್ಯವು ಯಾವುದರ / ಯಾರ ಬಗ್ಗೆ ಇದೆ ಎಂಬುದನ್ನು ತಿಳಿಸುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕರ್ತೃಪದವನ್ನು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ.

  • ಹುಡುಗನು ಓಡುತ್ತಿದ್ದಾನೆ.
  • ಅವನು ಓಡುತ್ತಿದ್ದಾನೆ.

ಕರ್ತೃಪದ ಸಮಾನ್ಯವಾಗಿ ನಾಮಪದ ಅಥವಾ ಸರ್ವನಾಮಗಳಾಗಿರುತ್ತದವೆ (Parts of Speach) ನೋಡಿ. ಮೇಲಿನ ಉದಾಹರಣೆಗಳಲ್ಲಿ " “ಹುಡುಗ” ಎಂಬುದು ನಾಮಪದ “ಅವನು” ಎಂಬುದು ಸರ್ವನಾಮ.

ವಾಕ್ಯವು ಆಜ್ಞೆಯನ್ನು,ಆದೇಶವನ್ನು ಹೊಂದಿದ್ದರೆ ಅನೇಕ ಭಾಷೆಯಲ್ಲಿ ಕರ್ತೃಪದ ಸರ್ವನಾಮವಾಗಿರುವುದಿಲ್ಲ ಜನರು ಕರ್ತೃಪದ “you.” ನೀನು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ.

  • ಬಾಗಿಲನ್ನು ಮುಚ್ಚು

(ವಿಶೇಷಣ) ಕ್ರಿಯೆಯ ಆಖ್ಯಾತ ವಿಶೇಷಣ.

ಸಾಮಾನ್ಯವಾಗಿ ವಿಶೇಷಣ. ವಾಕ್ಯದ ಭಾಗವಾಗಿದ್ದು ಕರ್ತೃಪದದ () ಬಗ್ಗೆ ಹೇಳುತ್ತದೆ. ಸಾಮಾನ್ಯವಾಗಿ predicate/ ವಿಶೇಷಣವಾಗಿರುತ್ತದೆ. ನೋಡಿ: ಕ್ರೀಯ ನೋಡಿ ಕೆಳಗಿನ ವಾಕ್ಯಗಳಲ್ಲಿ ಕರ್ತೃಪದಗಳು / " " ಮನುಷ್ಯ " ಮತ್ತು “.” ಅವನು. ವಿಶೇಷಣಗಳನ್ನು ಕೆಳಗೆ ಗೆರೆಗಳಿಂದ ಗುರುತಿಸಿ ವಿಶೇಷಣವನ್ನು ದೊಡ್ಡ ಅಕ್ಷರಗಳಲ್ಲಿ ಗುರುತಿಸಿದೆ.

  • ಆ ಮನುಷ್ಯನು is ಬಲಶಾಲಿಯಾಗಿದ್ದಾನೆ .
  • ಅವನು ಕಷ್ಟಪಟ್ಟು ಕೆಲಸ ಮಾಡಿದನು.
  • ಅವನು ಒಂದು ತೋಟವನ್ನು ಮಾಡಿದನು

ಸಂಯೋಜಿತ ವಾಕ್ಯಗಳು.

ಸ್ವತಂತ್ರವಾಗಿ ಇರಬಲ್ಲ ವಾಕ್ಯಗಳು ಎರಡು, ಮೂರು ವಾಕ್ಯಗಳು ಒಂದು ವಾಕ್ಯವಾಗಿ ಸಂಯೋಜಿತ ವಾಗುವುದೇ ಸಂಯೋಜಿತ ವಾಕ್ಯ. ಕೆಳಗಿನ ಎರಡು ಸಾಲಿನ ವಾಕ್ಯಗಳಲ್ಲಿ ಒಂದು subject/ಕರ್ತೃಪದ ಮತ್ತು ಒಂದು ವಿಶೇಷಣ ಮತ್ತು ಪೂರ್ತಿ ವಾಕ್ಯಗಳಾಗಿವೆ.

  • ಅವನು ಸುವರ್ಣಗೆಡ್ಡೆಗಳನ್ನು ನೆಟ್ಟನು.
  • ಅವನ ಹೆಂಡತಿ ಮೆಕ್ಕೆಜೋಳವನ್ನು ನೆಟ್ಟಳು

ಕೆಳಗಿನ ಸಂಯೋಜಿತ ವಾಕ್ಯಗಳು ಮೇಲಿನ ಎರಡುವಾಕ್ಯಗಳು ಸೇರಿ ಆಗಿದೆ. ಇಂಗ್ಲೀಷ್ ಭಾಷೆಯಲ್ಲಿ ಸಂಯೋಜಿತ ವಾಕ್ಯಗಳು ಒಂದು ಸಂಯೋಜಿತ ಅವ್ಯಯ/ ಪದವನ್ನು ಹೊಂದಿರುತ್ತದೆ. ಅವುಗಳೆಂದರೆ ಮತ್ತು,"/ಆದರೆ, “or.”/ಅಥವಾ ಎಂಬ ಪದಗಳು ಮತ್ತು ಮುಂತಾದವು.

  • ಅವನು ಸುವರ್ಣಗಡ್ಡೆಗಳನ್ನು ನೆಟ್ಟನು ಮತ್ತು ಅವನ ಹೆಂಡತಿ ಮೆಕ್ಕೆಜೋಳವನ್ನು ನೆಟ್ಟಳು.

ವಾಕ್ಯದ ಭಾಗಗಳು

ವಾಕ್ಯಗಳಲ್ಲಿ ವಾಕ್ಯದ ಭಾಗಗಳು ಮತ್ತು ಇತರ ಪದಗುಚ್ಛಗಳು ಇವೆ. ವಾಕ್ಯದ ಭಾಗಗಳು ವಾಕ್ಯದಂತೆಯೇ ಇರುತ್ತವೆ ಏಕೆಂದರೆಅವುಗಳಲ್ಲಿ ಕರ್ತೃಪದ ಮತ್ತು Predicate(ಕ್ರಿಯಾವಿಶೇಷಣ) – ವಿಶೇಷಣ, ಆದರೆ ಅವು ಸಹಜವಾಗಿ ಈ ರೀತಿ ಆಗುವುದಿಲ್ಲ. ಇಲ್ಲಿ ವಾಕ್ಯದ ಭಾಗಗಳಿಗೆ ಕೆಲವು ಉದಾಹರಣೆಗಳಿವೆ ಕರ್ತೃಪದಗಳು ದೊಡ್ಡ ಅಕ್ಷರಗಳಲ್ಲಿ ಮತ್ತು ವಿಶೇಷಣದ ಕೆಳಗೆ ಗೆರೆ ಎಳೆಯುವ ಮೂಲಕ ಗುರುತಿಸಿದೆ.

  • ಮೆಕ್ಕೆಜೋಳವ ಕಟಾವಿಗೆ ಸಿದ್ಧವಾದಾಗ
  • ಅವಳು ಅವುಗಳನ್ನು ಕೊಯ್ದುಕೊಂಡಳು
  • ಏಕೆಂದರೆ ಅದು/ಅದು ತುಂಬಾ ರುಚಿಯಾಗಿತ್ತು

ವಾಕ್ಯಗಳಲ್ಲಿ ಅನೇಕ ವಾಕ್ಯದ ಭಾಗಗಳು ಇರುತ್ತವೆ ಮತ್ತು ಇದರಿಂದ ಅವುಗಳು ಉದ್ದ ಮತ್ತು ಮಿಶ್ರವಾಕ್ಯಗಳಾಗಿರುತ್ತವೆ. ಆದರೆ ಪ್ರತಿ ವಾಕ್ಯದಲ್ಲಿ ಕಡೇಪಕ್ಷ ಒಂದು ಸ್ವತಂತ್ರ ವಾಕ್ಯಭಾಗ ಇರುತ್ತದೆ. ಇದರಿಂದ ಅದು ಪ್ರತ್ಯೇಕವಾಕ್ಯಗಳು ಆಗುತ್ತದೆ. ಇನ್ನು ಬೇರೆ ವಾಕ್ಯಭಾಗಗಳು ತಮ್ಮಷ್ಟಕ್ಕೆ ವಾಕ್ಯಗಳಾಗಲು ಸಾಧ್ಯವಿಲ್ಲ ಇಂತಹ ವಾಕ್ಯಗಳನ್ನು ಅವಲಂಬಿತ ವಾಕ್ಯಭಾಗ ಎಂದು ಕರೆಯಲಾಗುತ್ತದೆ. ಅವಲಂಬಿತ ವಾಕ್ಯಭಾಗಗಳು ಸ್ವತಂತ್ರ ವಾಕ್ಯಭಾಗಗಳನ್ನು ಅವಲಂಬಿಸಿ ವಾಕ್ಯವಾಗಿ ಸಂಪೂರ್ಣ ಅರ್ಥವನ್ನು ಹೊಂದುತ್ತದೆ. ಕೆಳಗಿನ ವಾಕ್ಯಗಳಲ್ಲಿ ಅವಲಂಬಿತ ವಾಕ್ಯಭಾಗಗಳನ್ನು ಕೆಳಗೆ ಅಡ್ಡ ಗೆರೆ ಹಾಕಿ ಗುರುತಿಸಿದೆ.

  • ಮೆಕ್ಕೆಜೋಳವು ಕಟಾವಿಗೆ ಸಿದ್ಧವಾದಾಗ , ಅವಳು ಆಯ್ದುಕೊಂಡಳು.
  • ಅವುಗಳನ್ನು ಆಯ್ದುಕೊಂಡಮೇಲೆ , ಅವಳು ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಬೇಯಿಸಿದಳು.
  • ಆಮೇಲೆ ಅವಳು ಮತ್ತು ಅವಳ ಗಂಡ ಅದನ್ನು ತಿಂದರು ಅವು ತುಂಬಾ ರುಚಿಯಾಗಿದ್ದವು ,

ಕೆಳಗಿರುವ ಪದಗುಚ್ಛಗಳು ಸ್ವತಂತ್ರ ವಾಕ್ಯಗಳಾಗಿವೆ. ಅವು ಮೇಲಿನ ವಾಕ್ಯಗಳ ಸ್ವತಂತ್ರ ವಾಕ್ಯಭಾಗಗಳಾಗಿವೆ.

  • ಅವಳು ಅವುಗಳನ್ನು ಆಯ್ದುಕೊಂಡಳು.
  • ಅವಳು ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಬೇಯಿಸಿದಳು.
  • ಆಮೇಲೆ ಅವಳು ಮತ್ತು ಅವಳ ಪತಿ ಅದನ್ನು ತಿಂದರು.

ಸಂಬಂಧಿತ ವಾಕ್ಯಭಾಗಗಳು.

ಕೆಲವು ಭಾಷೆಗಳಲ್ಲಿ ಈ ವಾಕ್ಯಭಾಗಗಳನ್ನು ನಾಮಪದದೊಂದಿಗೆ ವಾಕ್ಯದಭಾಗವಾಗಿ ಉಪಯೋಗಿಸಲಾಗು -ತ್ತದೆ.

ಇಂತಹವುಗಳನ್ನು ಸಂಬಂಧಿಸಿದ ವಾಕ್ಯಭಾಗ ಎನ್ನುತ್ತಾರೆ. ಕೆಳಗೆಕೊಟ್ಟಿರುವ ವಾಕ್ಯದಲ್ಲಿ “ಮೆಕ್ಕೆಜೋಳವು ಸಿದ್ಧವಾಗಿದೆ” ಎಂಬುದು ಇಡೀ ವಾಕ್ಯದ ವಿಶೇಷಣ ವಿಶೇಷಣದ ಭಾಗವಾಗಿದೆ. ಸಂಬಂಧಿತ ವಾಕ್ಯಭಾಗ “ಅದು ಸಿದ್ಧವಾಗಿದೆ” ಎಂಬುದನ್ನು ನಾಮಪದ “ಮೆಕ್ಕೆಜೋಳ” ಎಂಬುದು ಅವಳು ಯಾವ ಜೋಳ ಎಂಬುದನ್ನು ತಿಳಿಸುತ್ತದೆ.

  • ಅವನ ಹೆಂಡತಿ ಸಿದ್ಧವಾಗಿದ್ದ. ಮೆಕ್ಕೆಜೋಳ ವನ್ನು ಆಯ್ದು ಸಂಗ್ರಹಿಸಿದಳು.

ಕೆಳಗೆಕೊಟ್ಟಿರುವ ವಾಕ್ಯಗಳಲ್ಲಿ “ತನಗೆ ತೊಂದರೆ ಕೊಡುತ್ತಿದ್ದ ಅವಳ ತಾಯಿಗೆ” ಎಂಬುದು ಕ್ರಿಯಾ ವಿಶೇಷಣವಾಗಿ ಇಡೀ ವಾಕ್ಯದ ಭಾಗವಾಗಿದೆ. ಸಂಬಂಧಿಸಿದ ವಾಕ್ಯಭಾಗವಾದ “ಅವಳಿಗೆ ತೊಂದರೆ ಕೊಡುತ್ತಿದ್ದ” ಎಂಬ ಪದಗಳು “ತಾಯಿ” ಎಂಬ ನಾಮಪದವು ಮಗಳು ಅವಳಿಗೆ ಮೆಕ್ಕೆಜೋಳ ಕೊಡದಿದ್ದುದಕ್ಕೆ ಅವಳಿಗೆ ಏನನಿಸಿತು ಎಂಬುದು ಸೂಚಿಸುತ್ತದೆ.

  • “ಅವಳು” ಅವಳ ತಾಯಿಗೆ ಮೆಕ್ಕೆಜೋಳ ಕೊಡಲಿಲ್ಲ, ಏಕೆಂದರೆ ಅವಳು ತುಂಬಾ ಕಾಟ ಕೊಡುತ್ತಿದ್ದಳು .

####ಇದೊಂದು ಭಾಷಾಂತರ ವಿಷಯ.

  • ಭಾಷೆಗಳಲ್ಲಿ ವಾಕ್ಯಗಳ ಭಾಗದಲ್ಲಿ ವಿಭಿನ್ನ ಕ್ರಮಗಳು ಇರುತ್ತವೆ. (ನೋಡಿ: //add Information Structure page//)
  • ಕೆಲವು ಭಾಷೆಗಳಲ್ಲಿ ಸಂಬಂಧಿಸಿದ ವಾಕ್ಯಭಾಗಗಳು ಇಲ್ಲ ಅಥವಾ ಅವರು ಅವುಗಳನ್ನು ಮಿತಿಯಲ್ಲಿ ಬಳಸಬಹುದು. (ನೋಡಿ Distinguishing versus Informing or Reminding)

ಮಾಹಿತಿ ರಚನೆ.

Translation Manual :: Just-in-Time Learning Modules :: Sentences :: Information Structure

ವಿವರಣೆ

ವಿವಿಧ ಭಾಷೆಯಲ್ಲಿ ವಿವಿಧ ರೀತಿಯಲ್ಲಿ ವಾಕ್ಯದ ಭಾಗಗಳನ್ನು ಜೋಡಣೆ ಮಾಡುತ್ತಾರೆ. ಇಂಗ್ಲೀಷ್ ಭಾಷೆಯಲ್ಲಿ ವಾಕ್ಯದಲ್ಲಿ ಮೊದಲಿಗೆ ಕತೃಪದ, ಕ್ರಿಯಾಪದ ತದನಂತರ ಕರ್ಮಪದವು, ಇತರ ವಿಶೇಷಣಗಳು ಬರುತ್ತವೆ, ಉದಾಹರಣೆಗೆ: ಪೀಟರ್ ಬ‍ಣ್ಣ ಬಳಿದನು ಅವನ ಮನೆಯನ್ನು ನಿನ್ನೆ.

ಇತರ ಬೇರೆ ಬೇರೆ ಭಾಷೆಗಳಲ್ಲಿ ಈ ವಾಕ್ಯದ ಭಾಗಗಳನ್ನು ಬೇರೆ ಬೇರೆ ರೀತಿಯಲ್ಲಿ ಬರೆಯುತ್ತಾರೆ. ಉದಾ: ಪೀಟರ್ ನಿನ್ನೆ ತನ್ನ ಮನೆಗೆ ಬಣ್ಣ ಬಳಿದನು.

ಎಲ್ಲಾ ಭಾಷೆಗಳಲ್ಲೂ ಒಂದೇ ತರದ ವಾಕ್ಯದ ಭಾಗಗಳು ಇದ್ದರೂ, ಅದನ್ನು ಕ್ರಮವಾಗಿ ಜೋಡಿಸಿ ಬರೆಯುವ ರೀತಿಯು, ಮಾತನಾಡುತ್ತಿರುವ ವ್ಯಕ್ತಿ ಮತ್ತು ಬರಹಗಾರನು ಯಾವ ವಿಷಯವನ್ನು ಅಥವಾ ಮಾಹಿತಿಯನ್ನು ತುಂಬಾ ಮುಖ್ಯವಾದುದು ಎಂದು ಪರಿಗಣಿಸುತ್ತಾನೋ ಅದರ ಮೇಲೆ ಅವಲಂಬಿತವಾಗಿರುತ್ತದೆ.

“ಪೀಟರ್ ನಿನ್ನೆ ಯಾವುದಕ್ಕೆ ಬಣ್ಣ ಬಳಿದನು?” ಎಂಬ ಪ್ರಶ್ನೆಗೆ ಯಾರೋ ಒಬ್ಬರು ಉತ್ತರ ಕೊಡುತ್ತಿದ್ದಾರೆ ಎಂದು ಇಟ್ಟುಕೊಳ್ಳೋಣ. ಇಲ್ಲಿ ಪ್ರಶ್ನೆ ಕೇಳುತ್ತಿರುವ ವ್ಯಕ್ತಿಗೆ ಮೇಲಿನ ವಾಕ್ಯದಲ್ಲಿರುವ ಅವನ ಮನೆಯೆಂಬ ಕರ್ಮಪದವನ್ನು ಹೊರತುಪಡಿಸಿ ಬೇರೆಲ್ಲ ಮಾಹಿತಿಯು ಅವನಿಗೆ ತಿಳಿದಿದೆ. ಆದ್ದರಿಂದ ಅವನಿಗೆ ಈ ಮಾಹಿತಿಯು ಆ ವಾಕ್ಯದ ಪ್ರಮುಖ ವಿಷಯವಾಗಿ ಮಾರ್ಪಡುತ್ತದೆ, ಮತ್ತು ಅಂಗ್ಲ ಭಾಷೆಯಲ್ಲಿ ಉತ್ತರಿಸುವ ವ್ಯಕ್ತಿಯು ಹೀಗೆ ಉತ್ತರಿಸಬಹುದು: “ಅವನ ಮನೆಗೆ ಪೀಟರ್ (ನಿನ್ನೆ) ಬಣ್ಣ ಬಳಿದನು.”

ಇದು ತುಂಬಾ ಮುಖ್ಯವಾದ ವಿಷಯವನ್ನು ಮೊದಲಿಗೆ ಹೇಳುತ್ತಾರೆ, ಈ ರೀತಿ ಹೇಳುವುದು ಇಂಗ್ಲೀಷ್ ಭಾಷೆಯಲ್ಲಿ ಸಹಜವಾದ ಕಾರ್ಯವಾಗಿರುತ್ತದೆ. ಆದರೆ ಇತರ ಕೆಲವೊಂದು ಭಾಷೆಗಳಲ್ಲಿ ಮುಖ್ಯವಾದ ವಿಷಯವನ್ನು ವಾಕ್ಯದ ಕೊನೆಯಲ್ಲಿ ಹೇಳುತ್ತಾರೆ. ವಾಕ್ಯವನ್ನು ಬರೆಯುವಾಗ, ಲೇಖಕನು ಸಾಮಾನ್ಯವಾಗಿ ಮುಖ್ಯವಾದ ಮಾಹಿತಿಯನ್ನು ಹೊಸ ಮಾಹಿತಿಯಂತೆ ಓದುಗರ ಮುಂದಿಡುತ್ತಾನೆ. ಕೆಲವು ಭಾಷೆಗಳಲ್ಲಿ ಹೊಸ ಮಾಹಿತಿಯು ಮೊದಲು ಬರುತ್ತದೆ. ಬೇರೆ ಕೆಲವು ಭಾಷೆಗಳಲ್ಲಿ ಕೊನೆಯಲ್ಲಿ ಬರುತ್ತದೆ

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  • ಬೇರೆ ಬೇರೆ ಭಾಷೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ವಾಕ್ಯದ ಭಾಗಗಳನ್ನು ಜೋಡಿಸಿ ಬರೆಯುತ್ತಾರೆ. ಅನುವಾದಕರಾದ ನೀವು ಮೂಲ ಭಾಷೆಯಂತೆಯೇ ವಾಕ್ಯಗಳನ್ನು ನಕಲುಮಾಡಿ ಭಾಷಾಂತರಿಸಿದರೆ ಅದು ನಿಮ್ಮ ಭಾಷೆಯಲ್ಲಿ ಸರಿಯಾದ ಅರ್ಥಕೊಡುವ ಭಾಷಾಂತರ ಆಗಿರುವುದಿಲ್ಲ.
  • ಬೇರೆ ಬೇರೆ ಭಾಷೆಗಳವರು ಮುಖ್ಯ ಅಥವಾ ಹೊಸ ಮಾಹಿತಿಯನ್ನು ವಾಕ್ಯದ ವಿವಿಧ ಭಾಗಗಳಲ್ಲಿ ಸೇರಿಸಿ ಬರೆಯುತ್ತಾರೆ. ನೀವು ಮುಖ್ಯ ಅಥವಾ ಹೊಸ ಮಾಹಿತಿಯನ್ನು ಮೂಲ ಭಾಷೆಯಲ್ಲಿರುವ ರೀತಿಯ ಕ್ರಮದಲ್ಲಿಯೇ ವಾಕ್ಯದಲ್ಲಿಟ್ಟು ಬರೆದರೆ, ನಿಮ್ಮ ಭಾಷೆಯಲ್ಲಿ ಅದು ಗೊಂದಲಮಯವಾಗಿರುತ್ತದೆ ಮತ್ತು ತಪ್ಪು ಮಾಹಿತಿಯನ್ನು ನೀಡುವ ಸಾಧ್ಯತೆ ಇರುತ್ತದೆ.

ಸತ್ಯವೇದದ ಉದಾಹರಣೆಗಳು

ಅವರೆಲ್ಲರೂ ತೃಪ್ತರಾಗುವವರೆಗೂ ಊಟ ಮಾಡಿದರು. (ಮಾರ್ಕ 6:42 ULT)

ಈ ವಾಕ್ಯದ ಭಾಗಗಳ ಅನುಕ್ರಮಗಳು ಮೂಲ ಭಾಷೆಯಾದ ಗ್ರೀಕ್ ಭಾಷೆಯಲ್ಲಿ ಭಿನ್ನವಾಗಿದ್ದವು. ಅವು ಹೀಗಿವೆ: ಅವರು ಎಲ್ಲವನ್ನು ಊಟ ಮಾಡಿದರು ಮತ್ತು ಅವರು ತೃಪ್ತರಾದರು.

ಇಂಗ್ಲೀಷ್ ಭಾಷೆಯಲ್ಲಿ ಜನರು ಎಲ್ಲಾ ಆಹಾರವನ್ನು ತಿಂದು ಮುಗಿಸಿದರು ಎಂಬ ಅರ್ಥವನ್ನು ಕೊಡುತ್ತದೆ. ಆದರೆ ಮುಂದಿನ ವಾಕ್ಯದಲ್ಲಿ ಉಳಿದ ಎಲ್ಲಾ ರೊಟ್ಟಿ ಮತ್ತು ಮೀನುಗಳನ್ನು ಒಟ್ಟು ಸೇರಿಸಿದಾಗ 12 ಪುಟ್ಟಿಗಳು ತುಂಬಿದವು ಎಂದಿದೆ. ಇದು ಗೊಂದಲವನ್ನು ಉಂಟುಮಾಡದೇ ಇರುವುದಕ್ಕಾಗಿ, ULT ಭಾಷಾಂತರಗಾರರು ಇಂಗ್ಲೀಷ್ ಭಾಷೆಯಲ್ಲಿ ವಾಕ್ಯದ ಭಾಗಗಳನ್ನು ಸರಿಯಾದ ಅನುಕ್ರಮದಲ್ಲಿ ಜೋಡಿಸಿ ಬರೆದಿದ್ದಾರೆ.

ಹೊತ್ತು ಇಳಿಯುತ್ತಾ ಬಂತು, ಆ ಹನ್ನೆರಡು ಮಂದಿ ಶಿಷ್ಯರು ಆತನ ಬಳಿಗೆ ಬಂದು, “ಈ ಗುಂಪಿಗೆ ಅಪ್ಪಣೆಕೊಡು. ಇವರು ಸುತ್ತಲಿರುವ ಹಳ್ಳಿಗಳಿಗೆ ಹೋಗಿ ಇಳುಕೊಂಡು ಊಟಕ್ಕೆ ಬೇಕಾದ ಪದಾರ್ಥಗಳನ್ನು ದೊರಕಿಸಿಕೊಳ್ಳಲಿ, ನಾವು ಇಂತಹ ಅಡವಿಯ ಸ್ಥಳದಲ್ಲಿ ಇದ್ದೇವಲ್ಲಾ” ಎಂದು ಆತನಿಗೆ ಹೇಳಿದರು. (ಲೂಕ 9:12 ULT)

ಈ ವಾಕ್ಯದಲ್ಲಿ ಯೇಸು ಆ ಜನರ ಗುಂಪನ್ನು ಕಳುಹಿಸಬೇಕೆಂದು ಶಿಷ್ಯರು ಹೇಳಿದ ಮಾತು ಮೊದಲು ಮುಖ್ಯವಾದ ಮಾಹಿತಿಯಾಗಿದೆ. ಮುಖ್ಯ ವಿಷಯವನ್ನು ವಾಕ್ಯಭಾಗದ ಕೊನೆಯಲ್ಲಿ ಹೇಳುವ ಪದ್ಧತಿ ಇಟ್ಟುಕೊಂಡಿರುವ ಭಾಷೆಗಳಲ್ಲಿ, ಜನರು ಅವರು ಕೊಟ್ಟಂಥ ಕಾರಣವನ್ನು ಅರ್ಥಮಾಡಿಕೊಳ್ಳುತ್ತಾರೆ, ಇದರಲ್ಲಿ ಶಿಷ್ಯರು ಕೊಟ್ಟ ಕಾರಣವೇನಂದರೆ, ಇದು ಅಡವಿಯ ಪ್ರದೇಶವಾಗಿದೆ – ಇದುವೇ ಅವರು ಯೇಸುವಿಗೆ ತಿಳಿಸಿದ ಮುಖ್ಯ ಸಂದೇಶವಾಗಿತ್ತು. ಕೆಲವರು ಬಹುಶಃ ಶಿಷ್ಯಂದಿರು ಆ ನಿರ್ಜನ ಅಡವಿ ಪ್ರದೇಶದಲ್ಲಿರುವ ದುರಾತ್ಮಗಳ ಬಗ್ಗೆ ಹೆದರಿ ಈ ಮಾತು ಹೇಳಿರಬಹುದು ಮತ್ತು ಜನರನ್ನು ದುರಾತ್ಮಗಳಿಂದ ರಕ್ಷಿಸುವುದಕ್ಕಾಗಿ ಅವರನ್ನು ಅಲ್ಲಿಂದ ಕಳುಹಿಸಿರಬಹುದು ಎಂದು ಭಾವಿಸುತ್ತಾರೆ. ಆದರೆ ಇದು ತಪ್ಪಾದ ಮಾಹಿತಿ ಅಥವಾ ಸಂದೇಶವಾಗಿರುತ್ತದೆ.

ಜನರೆಲ್ಲ ನಿಮ್ಮನ್ನು ಹೊಗಳಿದರೆ ನಿಮ್ಮ ಗತಿಯನ್ನು ಏನು ಹೇಳಲಿ! ಅವರ ಪೂರ್ವಿಕರು ಸುಳ್ಳು ಪ್ರವಾದಿಗಳನ್ನು ಹಾಗೆಯೆ ಹೊಗಳಿದರು. (ಲೂಕ 6:26 ULT)

ಈ ವಾಕ್ಯದಲ್ಲಿ ಮೊದಲ ಮುಖ್ಯ ವಿಚಾರವೆಂದರೆ ಜನರೆಲ್ಲಾ ನಿಮ್ಮನ್ನು ಹೊಗಳಿದರೆ ಅವರ “ಗತಿ” ಏನಾಗುತ್ತದೆ ಎಂಬುದು. ಈ ಕಾರಣದಿಂದ ಅವರನ್ನು ಎಚ್ಚರಿಸುವ ಕಾರಣವು ವಾಕ್ಯದ ಕೊನೆಯಲ್ಲಿ ಬರುತ್ತದೆ. ಮುಖ್ಯವಾದ ವಿಷಯ ಕೊನೆಯಲ್ಲಿ ಬರುತ್ತದೆ ಎಂದು ನಿರೀಕ್ಷಿಸುವ ಜನರಿಗೆ ಇದು ಗೊಂದಲವನ್ನು ಉಂಟುಮಾಡುತ್ತದೆ.

ಭಾಷಾಂತರದ ಕಾರ್ಯವಿಧಾನಗಳು

(1) ನಿಮ್ಮ ಭಾಷೆಯಲ್ಲಿ ವಾಕ್ಯದ ಭಾಗಗಳನ್ನು ಯಾವ ಯಾವ ಅನುಕ್ರಮದಲ್ಲಿ ಇರಬೇಕು ಎಂಬುದನ್ನು ತಿಳಿದುಕೊಂಡು, ಆ ಅನುಕ್ರಮವನ್ನು ಬಳಸಿರಿ.

(2) ನಿಮ್ಮ ಭಾಷೆಯಲ್ಲಿ ಹೊಸ ಮತ್ತು ಮುಖ್ಯ ವಿಷಯವನ್ನು ಯಾವ ಕ್ರಮದಲ್ಲಿ ಬಳಸುತ್ತಾರೆ ಎಂಬುದನ್ನು ಕಲಿತುಕೊಳ್ಳಿರಿ, ನಿಮ್ಮ ಭಾಷೆಯಲ್ಲಿ ಬಳಸುವ ಕ್ರಮಕ್ಕೆ ಅನುಸಾರವಾಗಿ ಆ ಮಾಹಿತಿಯನ್ನು ಕ್ರಮವಾಗಿ ಜೋಡಿಸಿ ಬರೆಯಿರಿ.

ಭಾಷಾಂತರದ ಕಾರ್ಯವಿಧಾನಗಳನ್ನು ಅಳವಡಿಸಿರುವ ಉದಾಹರಣೆಗಳು

(1) ನಿಮ್ಮ ಭಾಷೆಯಲ್ಲಿ ವಾಕ್ಯದ ಭಾಗಗಳನ್ನು ಯಾವ ಯಾವ ಅನುಕ್ರಮದಲ್ಲಿ ಇರಬೇಕು ಎಂಬುದನ್ನು ತಿಳಿದುಕೊಂಡು, ಆ ಅನುಕ್ರಮವನ್ನು ಬಳಸಿರಿ.

ಈ ವಾಕ್ಯದ ಮೂಲ ಗ್ರೀಕ್ ಭಾಷೆಯ ಕ್ರಮ ಹೀಗಿದೆ:

ಆತನು ಅಲ್ಲಿಂದ ಹೊರಟು ಮತ್ತು ಊರಿಗೆ ತನ್ನ ಬಂದನು, ಮತ್ತು ಅವರು ಆತನನ್ನು ಹಿಂಬಾಲಿಸಿದರು ಆತನ ಶಿಷ್ಯರು. (ಮಾರ್ಕ 6:1)

ULT ಇದನ್ನು ಸಹಜವಾದ ಕ್ರಮದಲ್ಲಿ ಜೋಡಿಸಿ ಬರೆದಿದೆ:

ಆತನು ಅಲ್ಲಿಂದ ಹೊರಟು ತನ್ನ ಊರಿಗೆ ಬಂದನು; ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು. (ಮಾರ್ಕ 6:1 ULT)

(2) ನಿಮ್ಮ ಭಾಷೆಯಲ್ಲಿ ಹೊಸ ಮತ್ತು ಮುಖ್ಯ ವಿಷಯವನ್ನು ಯಾವ ಕ್ರಮದಲ್ಲಿ ಬಳಸುತ್ತಾರೆ ಎಂಬುದನ್ನು ಕಲಿತುಕೊಳ್ಳಿರಿ, ನಿಮ್ಮ ಭಾಷೆಯಲ್ಲಿ ಬಳಸುವ ಕ್ರಮಕ್ಕೆ ಅನುಸಾರವಾಗಿ ಆ ಮಾಹಿತಿಯನ್ನು ಕ್ರಮವಾಗಿ ಜೋಡಿಸಿ ಬರೆಯಿರಿ.

ಹೊತ್ತು ಇಳಿಯುತ್ತಾ ಬಂತು, ಆ ಹನ್ನೆರಡು ಮಂದಿ ಶಿಷ್ಯರು ಆತನ ಬಳಿಗೆ ಬಂದು, “ಈ ಗುಂಪಿಗೆ ಅಪ್ಪಣೆಕೊಡು. ಇವರು ಸುತ್ತಲಿರುವ ಹಳ್ಳಿ, ಹಳ್ಳಿಗಳಿಗೆ ಹೋಗಿ ಇಳುಕೊಂಡು ಊಟಕ್ಕೆ ಬೇಕಾದ ಪದಾರ್ಥಗಳನ್ನು ದೊರಕಿಸಿಕೊಳ್ಳಲಿ ನಾವು ಇಂತಹ ಅಡವಿಯ ಸ್ಥಳದಲ್ಲಿ ಇದ್ದೇವಲ್ಲಾ” ಎಂದು ಆತನಿಗೆ ಹೇಳಿದರು. (ಲೂಕ 9:12 ULT)

ನಿಮ್ಮ ಭಾಷೆಯಲ್ಲಿ ಮುಖ್ಯ ವಿಷಯವನ್ನು ವಾಕ್ಯದ ಕೊನೆಯಲ್ಲಿ ಬರೆಯುವುದಾದರೆ, ನೀವು ವಾಕ್ಯದ ಕ್ರಮವನ್ನು ಬದಲಾಯಿಸಿ ಬರೆಯಬಹುದು.

ಹೊತ್ತು ಇಳಿಯುತ್ತಾ ಬಂತು, ಹನ್ನೆರಡು ಮಂದಿ ಶಿಷ್ಯರು ಆತನ ಬಳಿಗೆ ಬಂದು ಹೀಗೆ ಹೇಳಿದರು “ನಾವು ನಿರ್ಜನವಾದ ಅಡವಿಯಲ್ಲಿ ಇದ್ದೇವೆ ಆದ್ದರಿಂದ, ಈ ಜನರ ಗುಂಪು ಸುತ್ತಮುತ್ತ ಇರುವ ಹಳ್ಳಿಗಳಿಗೆ ಹೊಗಿ ಇಳಿದುಕೊಂಡು, ಊಟಕ್ಕೆ ಬೇಕಾದ ಪದಾರ್ಥಗಳನ್ನು ದೊರಕಿಸಿ ಕೊಳ್ಳಲಿ.”

“ಜನರೆಲ್ಲ ನಿಮ್ಮನ್ನು ಹೊಗಳಿದರೆ ನಿಮ್ಮ ಗತಿಯನ್ನು ಏನು ಹೇಳಲಿ! ಏಕೆಂದರೆ ಅವರ ಪೂರ್ವಿಕರು ಸುಳ್ಳು ಪ್ರವಾದಿಗಳನ್ನು ಹಾಗೆಯೆ ಹೊಗಳಿದರು.” (ಲೂಕ 6:26 ULT)

ನಿಮ್ಮ ಭಾಷೆಯಲ್ಲಿ ಮುಖ್ಯ ವಿಷಯವನ್ನು ವಾಕ್ಯದ ಕೊನೆಯಲ್ಲಿ ಬರೆಯುವುದಾದರೆ ನೀವು ವಾಕ್ಯದ ಕ್ರಮವನ್ನು ಬದಲಾಯಿಸಬಹುದು.

ಜನರೆಲ್ಲರು ನಿಮ್ಮನ್ನು ಹೊಗಳುವಾಗ, ಅದು ಜನರ ಪೂರ್ವಿಕರು ಸುಳ್ಳು ಪ್ರವಾದಿಗಳನ್ನು ಹೊಗಳಿದಂತೆಯೇ ಇರುತ್ತದೆ, ಹಾಗಾದರೆ ನಿಮ್ಮ ಗತಿ ಏನು!


ವಾಕ್ಯಗಳಲ್ಲಿನ ವಿಧಗಳು.

Translation Manual :: Just-in-Time Learning Modules :: Sentences :: Sentence Types

ವಿವರಣೆಗಳು

ಒಂದು ವಾಕ್ಯ ಎಂದರೆ ಸಂಪೂರ್ಣವಾದ ಅರ್ಥವನ್ನು ಕೊಡುವ ಪದಗಳ ಗುಂಪು. ಮೂಲಭೂತ ವಾಕ್ಯಗಳ ಪಟ್ಟಿಯನ್ನು ಈ ಕೆಳಗೆ ನೀಡಿದೆ ಹಾಗೂ ಅವುಗಳ ಬಳಕೆ ಯಾವ ಸಂದರ್ಭದಲ್ಲಿ ಹೇಗೆ ಮಾಡಬೇಕೆಂಬುದನ್ನು ತಿಳಿಸುತ್ತದೆ.

  • ಹೇಳಿಕೆವಾಕ್ಯಗಳು ಈ ವಾಕ್ಯದ ವನ್ನು ಮುಖ್ಯಮಾಹಿತಿಯನ್ನು ಕೊಡಲು ಉಪಯೋಗಿಸುತ್ತೇವೆ. ಇದೊಂದು ವಾಸ್ತವ ಸಂಗತಿ.

  • ಪ್ರಶ್ನೆಗಳು - ಇಂತಹ ವಾಕ್ಯಗಳನ್ನು ಮಾಹಿತಿಯ ಬಗ್ಗೆ ಕೇಳಲು ಬಳಸುತ್ತೇವೆ. ‘ನಿನಗೆ ಅವನು ಯಾರೆಂದು ಗೊತ್ತೆ ?

  • ಕೋರಿಕೆ / ಆದೇಶ ಅಥವಾ ಆಜ್ಞಾಪನಾ ವಾಕ್ಯಗಳು ಈ ವಾಕ್ಯವನ್ನು ಮುಖ್ಯವಾಗಿ ಒಂದು ಬಯಕೆಯನ್ನು ವ್ಯಕ್ತಪಡಿಸಲು ಅಥವಾ ಬೇಡಿಕೆಯನ್ನು ಇಡಲು ಇಲ್ಲವೇ, ಒಬ್ಬರನ್ನು ಉದ್ದೇಶಿಸಿ ನಿರ್ದಿಷ್ಟ ಕಾರ್ಯ ಮಾಡಲು ಸೂಚಿಸಲು ಬಳಸಲಾಗುತ್ತದೆ. ಉದಾ 'ಕೆಳಗೆ ಬಿದ್ದಿರುವುದನ್ನು ತೆಗೆ ’

  • ಭಾವ ಸೂಚಕವಾಕ್ಯಗಳು ಈ ವಾಕ್ಯವನ್ನು ಮುಖ್ಯವಾಗಿ ತೀವ್ರವಾದ ಭಾವನೆಗಳನ್ನು ವ್ಯಕ್ತಪಡಿಸಲು ಉಪಯೋಗಿಸುವಂತದ್ದು ಉದಾ : 'ಅಯ್ಯೋ, ಓಹ್ ’

ಕಾರಣ ಇದೊಂದು ಭಾಷಾಂತರ ತೊಡಕು.

  • ಭಾಷೆಯಲ್ಲಿ ಅನೇಕ ರೀತಿಯ ವಾಕ್ಯಗಳ ಮೂಲಕ ವಿವಿಧ ಭಾವನೆಗಳನ್ನು ನಿರ್ದಿಷ್ಟಕಾರ್ಯವನ್ನು ತಿಳಿಸಲು ಸಾಧ್ಯ.
  • ಅನೇಕ ಭಾಷೆಯಲ್ಲಿ ಈ ರೀತಿಯ ವಾಕ್ಯಗಳನ್ನು ಒಂದಕ್ಕಿಂತ ಹೆಚ್ಚು ಕಾರ್ಯ ಮಾಡಲು ಬಳಸಲಾಗುತ್ತದೆ.
  • ಸತ್ಯವೇದದಲ್ಲಿನ ಪ್ರತಿಯೊಂದು ವಾಕ್ಯವು ಯಾವುದಾದರೂ ಒಂದು ನಿರ್ದಿಷ್ಟ ರೀತಿಯ ವಾಕ್ಯ ಲಕ್ಷಣವನ್ನು ಹೊಂದಿರುತ್ತದೆ. ಹಾಗೆಯೇ ನಿರ್ದಿಷ್ಟ ಕಾರ್ಯ ಹೊಂದಿರುತ್ತದೆ. ಆದರೆ ಕೆಲವು ಭಾಷೆಯಲ್ಲಿ ಇದು ಭಿನ್ನವಾಗಿರಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು.

ಈ ಕೆಳಗಿನ ಉದಾಹರಣೆಗಳು. ಮೇಲೆ ತಿಳಿಸಿರುವ ವಾಕ್ಯಗಳ ವಿಧವನ್ನು ಹೊಂದಿರುತ್ತದೆ ಮತ್ತು ಒಂದೇ ರೀತಿಯ ಕಾರ್ಯವನ್ನು ನಿರ್ವಹಿಸುತ್ತದೆ.

####ಹೇಳಿಕೆಗಳು

ಆದಿಯಲ್ಲಿ ದೇವರು ಆಕಾಶವನ್ನು, ಭೂಮಿಯನ್ನು ಉಂಟುಮಾಡಿದನು. (ಆದಿಕಾಂಡ 1:1 ULB)

ಈ ಹೇಳಿಕೆ ವಾಕ್ಯಗಳು ಇನ್ನೂ ಅನೇಕ ಕಾರ್ಯವನ್ನು ಮಾಡುತ್ತವೆ.() ನೋಡಿ ಹೇಳಿಕೆಗಳು – ಇತರ ಬಳಕೆಗಳು

ಪ್ರಶ್ನೆಗಳು

ಈ ಕೆಳಗಿನ ಪ್ರಶ್ನಾರ್ಥಕ ವಾಕ್ಯಗಳು ಮಾಹಿತಿಯನ್ನು ಕೇಳುವಂತದ್ದಾಗಿದೆ. ಅವರೊಂದಿಗೆ ಮಾತನಾಡುತ್ತಿ ರುವ ವ್ಯಕ್ತಿಗಳು ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.

ಯೇಸು ಅವರನ್ನು ಕುರಿತು "ನಾನು ಇದನ್ನು ಮಾಡಬಲ್ಲೆನೆಂಬುದನ್ನು ನಂಬುತ್ತಿರೋ ?" ಎಂದು ಕೇಳಿದ್ದಕ್ಕೆ ಅವರು, " ಹೌದು ಸ್ವಾಮಿ ನಂಬುತ್ತೇವೆ " ಎಂದರು (ಮತ್ತಾಯ 9:28 ULB)
ಸೆರೆಮನೆಯ ಅಧಿಕಾರಿಯು " ಸ್ವಾಮಿಗಳೇ ನಾನು ರಕ್ಷಣೆ ಹೊಂದುವುದಕ್ಕೆ ಏನು ಮಾಡಬೇಕು ?" ಅವರು ಕರ್ತನಾದ ಯೇಸುವಿನ ಮೇಲೆ ನಂಬಿಕೆ ಇಡು. ಆಗ ನೀನು ರಕ್ಷಣೆ ಹೊಂದುವಿ ಹಾಗೂ ನಿನ್ನ ಮನೆಯವರೂ ರಕ್ಷಣೆಹೊಂದುವರು." (ಅಪೋಸ್ತಲ ಕೃತ್ಯಗಳು 16:29-31 ULB)

ಪ್ರಶ್ನೆಗಳು ಇನ್ನೂ ಬೇರೆ ಕಾರ್ಯಗಳನ್ನು ಮಾಡಬಲ್ಲವು.(ಅಲಂಕಾರಿಕ ಪ್ರಶ್ನೆಗಳು)

ಆಜ್ಞಾಪನಾ ವಾಕ್ಯಗಳು.

ಈ ವಾಕ್ಯಗಳಲ್ಲಿ ಅನೇಕ ವಿಧಗಳಿವೆ : ಆಜ್ಞೆಗಳು, ಸೂಚನೆಗಳು, ಸಲಹೆಗಳು, ಆಹ್ವಾನಗಳು, ಕೋರಿಕೆಗಳು ಮತ್ತು ಹಾರೈಕೆಗಳು ಇರುತ್ತವೆ.

ಆಜ್ಞೆಯಲ್ಲಿ, ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಅಧಿಕಾರದಿಂದ ಒಂದು ಕಾರ್ಯವನ್ನು ಮಾಡುವಂತೆ ಹೇಳುವುದು / ಆಜ್ಞಾಪಿಸುವುದು

ಎದ್ದೇಳು</u ಬಾಲಾಕನೆ, ಕಿವಿಗೊಟ್ಟು. ಕೇಳುಚಿಪ್ಪೋರನ ಮಗನೇ ನನ್ನ ಮಾತನ್ನು ಲಾಲಿಸು. (ಅರಣ್ಯಕಾಂಡ 23:18 ULB)

ಸೂಚನೆ ನೀಡುವುದರ ಮೂಲಕಮಾತನಾಡುವ ವ್ಯಕ್ತಿ ಇನ್ನೊಬ್ಬನನ್ನು ಕುರಿತು ತಾನು ಹೇಳುವ ಕೆಲಸವನ್ನು ಹೇಗೆ ಮಾಡಬೇಕೆಂದು ಸೂಚಿಸುವುದು.

…ಒಳ್ಳೆಯ ಜೀವದಲ್ಲಿ ಸೇರಬೇಕೆಂದಿದ್ದರೆ, ದೇವರಾಜ್ಞೆಗಳಿಗೆ ಸರಿಯಾಗಿ ನಡೆದುಕೊಳ್ಳಿರಿ … ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗು , ನಿನ್ನದೆಲ್ಲವನ್ನು ಮಾರಿ ಬಡವರಿಗೆ ಕೊಡು ಪರಲೋಕದಲ್ಲಿ ನಿನಗೆ ಸಂಪತ್ತಿರುವುದು. (ಮತ್ತಾಯ 19:17, 21 ULB)

ಸ ಲಹಾ ವಾಕ್ಯ ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ಕುರಿತು ಏನನ್ನಾದರೂ ಮಾಡಲು ಹೇಳಬಹುದು, ಇಲ್ಲವೇ ಮಾಡಬೇಡವೆಂದು ಹೇಳಬಹುದು ಏಕೆಂದರೆ ಆ ವ್ಯಕ್ತಿಯ ಬಗ್ಗೆ ಅವನಿಗೆ ಕಾಳಜಿ ಇರುವುದರಿಂದ ಸಹಾಯ ಮಾಡಲು ಹೀಗೆ ಹೇಳಬಹುದು. ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಒಬ್ಬ ಕುರುಡನು ಇನ್ನೊಬ್ಬ ಕುರುಡನಿಗೆ ದಾರಿ ತೋರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಕುರುಡನುಕುರುಡನಿಗೆ ದಾರಿ ತೋರಿಸಬಾರದು . ಹಾಗೆ ಮಾಡಿದರೆ, ಅವರಿಬ್ಬರೂ ಕುಣಿಯಲ್ಲಿ ಬಿದ್ದು ಹೋಗುವರು ! (ಲೂಕ 6:39 UDB)

ಕೆಲವೊಮ್ಮೆ ಮಾತನಾಡುವ ವ್ಯಕ್ತಿ ಸೂಚಿಸಿದ್ದನ್ನು ಮಾಡುವ ಗುಂಪಿಗೆ ಸೇರಿದವರಾಗಿರುತ್ತಾರೆ. ಆದಿಕಾಂಡ 11ನೇ ಅಧ್ಯಾಯದಲ್ಲಿ " ಅವರು ತಮ್ಮತಮ್ಮೊಳಗೆ ಎಲ್ಲರೂ ಸೇರಿ ಒಳ್ಳೆಯ ಇಟ್ಟಿಗೆಗಳನ್ನು ಮಾಡೋಣ ಎಂದು ಮಾತನಾಡಿಕೊಳ್ಳುತ್ತಾರೆ.

ಅವರು ಪರಸ್ಪರ ಒಬ್ಬರಿಗೊಬ್ಬರು ತಮ್ಮೊಳಗೆ ಮಾತನಾಡಿಕೊಂಡು, ಬನ್ನಿ, ಒಳ್ಳೊಳ್ಳೆ ಸುಟ್ಟ ಇಟ್ಟಿಗೆಗಳನ್ನು ನಾವುಮಾಡೋಣ ಎಂದರು." (ಆದಿಕಾಂಡ 11:3 ULB)

ಆಹ್ವಾನ ನೀಡುವ ಮೂಲಕ ಮಾತನಾಡುವ ವ್ಯಕ್ತಿ, ವಿನಯವನ್ನು, ಸ್ನೇಹಪೂರ್ವಕ ಸಲಹೆಯನ್ನು ಇನ್ನೊಬ್ಬ ವ್ಯಕ್ತಿಗೆ ನೀಡಬಹುದು ಮತ್ತು ತಮ್ಮ ಇಚ್ಛೆಯಂತೆ ಕಾರ್ಯಮಾಡುವ ಬಗ್ಗೆ ಹೇಳಬಹುದು. ಈ ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ತಾನು ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೋ ಆ ವ್ಯಕ್ತಿ ತನ್ನ ಮಾತನ್ನು ಕೇಳಲು ಇಚ್ಛಿಸುತ್ತಾನೆ.ಎಂದು ತಿಳಿದು ಕೊಳ್ಳುತ್ತಾನೆ.

ನಮ್ಮ ಜೊತೆಯಲ್ಲಿ ಬಾನಮ್ಮಿಂದ ನಿಮಗೂ ಮೇಲುಂಟಾಗುವುದೆಂದು ಹೇಳಿದನು. (ಅರಣ್ಯಕಾಂಡ 10:29)

ಕೋರಿಕೆ, ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ವಿನಯವನ್ನು ವ್ಯಕ್ತಪಡಿಸುತ್ತಾನೆ. ಇನ್ನೊಬ್ಬ ವ್ಯಕ್ತಿಯನ್ನು ಯಾವುದಾದರೂ ಕೆಲಸವನ್ನು ಮಾಡುವಂತೆ ವಿನಯದಿಂದ ವಿನಂತಿಸುತ್ತಾನೆ. ಈ ವಾಕ್ಯದಲ್ಲಿ ‘ದಯವಿಟ್ಟು’ ಎಂಬ ಪದ ಉಪಯೋಗಿಸಿ ಕೆಲಸಮಾಡುವಂತೆ ಕೇಳುತ್ತಾರೆಯೇ ಹೊರತು ಅಧಿಕಾರದಿಂದ ಕೇಳುವುದಿಲ್ಲ. ಇಂತಹ ವಾಕ್ಯದಿಂದ ಮಾತನಾಡುವ ವ್ಯಕ್ತಿಗೆ ಲಾಭವಾಗುತ್ತದೆ.

ನಮ್ಮ ಅನುದಿನದ ಆಹಾರವನ್ನು ನಮಗೆ ಈಹೊತ್ತು ದಯಪಾಲಿಸು . (ಮತ್ತಾಯ 6:11 ULB)
ದಯವಿಟ್ಟು ನನ್ನನ್ನು ಕ್ಷಮಿಸು. (ಲೂಕ 14:18 ULB)

ಹಾರೈಕೆ /ಬಯಕೆ ವಾಕ್ಯದಲ್ಲಿ ಒಬ್ಬ ವ್ಯಕ್ತಿ ತನಗೆ ಏನು ಬೇಕೆಂದು, ಏನು ನಡೆಯಬೇಕೆಂದು ಬಯಸುವುದಾಗಿರುತ್ತದೆ. ಇಂಗ್ಲೀಷ್ ಭಾಷೆಯಲ್ಲಿ “may/ ಸಾಧ್ಯತೆ” or “let./ ಆಸ್ಪದ ನೀಡು” ಎಂಬ ಪದಗಳನ್ನು ಬಳಸುತ್ತಾರೆ. ಆದಿಕಾಂಡ 28,ರಲ್ಲಿ ಇಸಾಕನು ಯಾಕೋಬನನ್ನು ಕುರಿತು ದೇವರು ಅವರಿಗಾಗಿ ಏನು ಮಾಡಬೇಕೆಂಬುದನ್ನು ವ್ಯಕ್ತಪಡಿಸುತ್ತಾನೆ.

ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ ನಿನಗೆ ಬಹು ಸಂತತಿಯನ್ನು ಕೊಟ್ಟು. ನಿನ್ನಿಂದ ಅನೇಕ ಜನಾಂಗಗಳು ಹುಟ್ಟುವಂತೆ ಅನುಗ್ರಹಿಸಲಿ (ಆದಿಕಾಂಡ 28:3 ULB)

ಆದಿಕಾಂಡ9,ರಲ್ಲಿ ನೋಹನು ಕಾನಾನ್ ದೇಶಕ್ಕೆ ಏನು ನಡೆಯಬೇಕೆಂದು ಹೇಳಿದನು

ಕಾನಾನ್ ನು ಶಾಪಗ್ರಸ್ತನಾಗಲಿ ಅವನು ತನ್ನ ಅಣ್ಣತಮ್ಮಂದಿರಿಗೆ ದಾಸಾನುದಾಸನಾಗಲಿ (ಆದಿಕಾಂಡ 9:25 ULB)

ಆದಿಕಾಂಡ21ರಲ್ಲಿ ಹಾಗಾರಳು ತನ್ನ ಮಗನು ತನ್ನ ಕಣ್ಣಮುಂದೆ ಸಾಯುವುದನ್ನು ಇಚ್ಛಿಸದೆ, ಅವನಿಂದ ದೂರಹೋಗಿ ಕುಳಿತುಕೊಂಡಳು.

ಅವಳು ಮಗುವನ್ನು ಒಂದುಗಿಡದ ನೆರಳಿನಲ್ಲಿ ಹಾಕಿಮಗುವು ಸಾಯುವುದನ್ನು ನೋಡಲಾರೆನು ಎಂದುಕೊಂಡಳು. (ಆದಿಕಾಂಡ 9:25 ULB)

ಆಜ್ಞಾಪನಾ ವಾಕ್ಯಗಳು ಈ ವಾಕ್ಯಗಳಿಗೆ ಅದರದೇ ಆದ ಕಾರ್ಯಗಳಿರುತ್ತವೆ. (ಆಜ್ಞಾಪನಾ ವಾಕ್ಯಗಳು – ಇತರ ಉಪಯೋಗಗಳನ್ನು ನೋಡಿ)

ಭಾವಸೂಚಕಗಳು

ಭಾವಸೂಚಕಗಳು ಮನಸ್ಸಿನಲ್ಲಿನ ಆಳವಾದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ULB ಮತ್ತು UDB, ಸತ್ಯವೇದದಲ್ಲಿ ಭಾವಸೂಚಕ ವಾಕ್ಯಗಳ ಕೊನೆಯಲ್ಲಿ (!) ಈ ಚಿಹ್ನೆ ಇರುತ್ತದೆ.

“ ಸ್ವಾಮಿ, ಕಾಪಾಡು, ಸಾಯುತ್ತೇವೆ ಎಂದರು ! “ (ಮತ್ತಾಯ 8:25 ULB) (ನೋಡಿ ಆಶ್ಚರ್ಯಸೂಚಕ ಇದರಲ್ಲಿ ಭಾವಸೂಚಕಗಳನ್ನು ಹೇಗೆ ಉಪಯೋಗಿಸಿದೆ ಮತ್ತು ಹೇಗೆ ಭಾಷಾಂತರಿಸಬೇಕು ಎಂದು ತಿಳಿಸುತ್ತಾರೆ.

ಭಾಷಾಂತರ ತಂತ್ರಗಳು

  1. ನಿಮ್ಮ ಭಾಷೆಯಲ್ಲಿ ಒಂದು ವಾಕ್ಯಕ್ಕೆ ನಿರ್ದಿಷ್ಟ ಕಾರ್ಯವಿರುತ್ತದೆ ಎಂಬುದನ್ನು ತೋರಿಸಿದರೆ ಅದನ್ನು ಬಳಸಿ.
  2. ಸತ್ಯವೇದವನ್ನು ಭಾಷಾಂತರಿಸುತ್ತಿರುವಾಗ ನಿಮ್ಮ ಭಾಷೆಯಲ್ಲಿ ವಾಕ್ಯಗಳ ವಿವಿಧ ರೂಪವನ್ನು ಮತ್ತು ವಾಕ್ಯಗಳ ಕಾರ್ಯವನ್ನು ಬಳಸುವಾಗ ಅದಕ್ಕೆ ಅವಕಾಶ ಇಲ್ಲದಿದ್ದರೆ ಕೆಳಗೆ ಕೊಟ್ಟಿರುವ ಪುಟಗಳಲ್ಲಿ ಇರುವ ಭಾಷಾಂತರ ತಂತ್ರಗಳನ್ನು ಬಳಸಿಕೊಳ್ಳಿ.

ವಾಕ್ಯಗಳಲ್ಲಿನ ವಿಧಗಳು.

Translation Manual :: Just-in-Time Learning Modules :: Sentences :: Sentence Types
ಹೇಳಿಕೆ,– ಇತರ ಉಪಯೋಗಗಳು
Translation Manual :: Just-in-Time Learning Modules :: Sentences :: Sentence Types :: Statements - Other Uses

ವಿವರಣೆ

ಸಾಮಾನ್ಯವಾಗಿ ಯಾವುದಾದರೂ ಮಾಹಿತಿಯನ್ನು ನೀಡುವಾಗ ನಿರೂಪಣಾ ವಾಕ್ಯಗಳ ಮೂಲಕ ನೀಡಲಾಗುತ್ತದೆ. ಆದರೆ ಬೈಬಲ್ ನಲ್ಲಿ / ಸತ್ಯವೇದದಲ್ಲಿ ಇದನ್ನು ಬೇರೆ ಉದ್ದೇಶಗಳಿಗೂ ಬಳಸಲಾಗುವುದು.

ಇದಕ್ಕೆ ಭಾಷಾಂತರದ ಪ್ರಕರಣಗಳೇ ಕಾರಣ.

ಕೆಲವು ಭಾಷೆಯಲ್ಲಿ ಇಂತಹ ಹೇಳಿಕೆ / ಸತ್ಯವೇದದಲ್ಲಿ ಕೆಲವು ವಿಚಾರಗಳಿಗೆ ಬಳಸದೇ ಇರಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು.

ಹೇಳಿಕೆ ಸಾಮಾನ್ಯವಾಗಿ ಮಾಹಿತಿ. ನೀಡುವುದಕ್ಕಾಗಿ ಬಳಸಲಾಗುತ್ತದೆ. ಯೋಹಾನ 1:6-8 ರಲ್ಲಿರುವಂತೆ ಈ ಕೆಳಗೆ ನೀಡಿರುವ ವಾಕ್ಯಗಳೆಲ್ಲವೂ ಮಾಹಿತಿಯನ್ನು ನೀಡುವ ವಾಕ್ಯಗಳಾಗಿವೆ.

ದೇವರು ಕಳುಹಿಸಿದ ಒಬ್ಬ ಮನುಷ್ಯನು ಬಂದನು, ಅವನ ಹೆಸರು ಯೋಹಾನ. ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವುದಕ್ಕೆ ಬಂದನು. ಅವನ ಮೂಲಕ ಎಲ್ಲರೂ ನಂಬುವವರಾದರು. ಯೋಹಾನನೇ ಆ ಬೆಳಕಲ್ಲ, ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವುದಕ್ಕಾಗಿ ಬಂದವನು. (ಯೋಹಾನ 1:6-8 ULB)

ಕೆಲವೊಮ್ಮೆ ಇಂತಹ ವಾಕ್ಯಗಳು ಆಜ್ಞಾವಾಕ್ಯ ಗಳಾಗಿ ಕೆಲವರಿಗೆ ಏನು ಮಾಡಬೇಕು ಎಂಬುದುನ್ನು ಸೂಚಿಸುವಂತದ್ದು. ಈ ಕೆಳಗಿನ ಉದಾಹರಣೆಗಳಲ್ಲಿ ದೇವಾಲಯದ ಯಾಜಕನು ಕೆಲವು ನಿರೂಪಣಾವಾಕ್ಯಗಳನ್ನು “ಕ್ರಿಯಾಪದ” ಗಳನ್ನು ಬಳಸಿ ಜನರು ಏನು ಮಾಡಬೇಕು ಎಂಬುದನ್ನು ಸೂಚಿಸುತ್ತಿದ್ದ.

ಅವನು ಆಜ್ಞಾಪೂರ್ವಕವಾಗಿ " ನೀವು ಇಂತಹದ್ದನ್ನೇ", ಹೀಗೆ ಮಾಡಲೇಬೇಕು ಎಂಬುದನ್ನು ತಿಳಿಸುವನು. ಅವರಿಗೆ ಸಬ್ಬತ್ ದಿನದಲ್ಲಿ ಮನೆಗೆ ಹೋಗುವ ಸೈನ್ಯದ ಮೂರರಲ್ಲೊಂದು ಭಾಗವು ಅರಮನೆಯನ್ನು ಕಾಯಬೇಕು, ಇನ್ನೊಂದು ಭಾಗವು ಸೂರ್ ಬಾಗಿಲಿನಲ್ಲಿಯೂ, ಮತ್ತೊಂದು ಭಾಗವು ಕಾವಲುದಂಡಿನ ಹಿಂದಿನ ಬಾಗಿಲಿನಲ್ಲಿಯೂ ಇರಬೇಕು (2 ನೇ ಅರಸುಗಳು 11:5 ULB)

ಕೆಲವೊಮ್ಮೆ ಈ ಹೇಳಿಕೆಗಳು ಆಜ್ಞೆ /ಆದೇಶ. ನೀಡುವ ವಾಕ್ಯಗಳಾಗಿರಬಹುದು. ಕೆಳಗೆ ನೀಡಿರುವ ವಾಕ್ಯಗಳಲ್ಲಿ ಯೋಸೆಫನೊಂದಿಗೆ ಮಾತನಾಡುವವ ಯೋಸೆಫನಿಗೆ ಮುಂಬರುವ ದಿನಗಳಲ್ಲಿ ಅವನು ಏನು ಮಾಡಬೇಕೆಂದು ಹೇಳುವುದರೊಂದಿಗೆ ಯೋಸೆಫನು ಏನು ಮಾಡಲೇಬೇಕು ಎಂದು ಹೇಳುತ್ತಾನೆ.

ಆಕೆಯು ಒಬ್ಬ ಮಗನನ್ನು ಹಡೆಯುವಳು, ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು, ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು. (ಮತ್ತಾಯ 1:21 ULB)

ಕೆಲವೊಮ್ಮೆ ಹೇಳಿಕೆಗಳು ವಿನಂತಿಸುವ, ಬೇಡಿಕೊಳ್ಳವ, ಕೋರಿಕೆ. ಸಲ್ಲಿಸುವ ವಾಕ್ಯಗಳಾಗಿ ಇರಬಹುದು.

ಕುಷ್ಠರೋಗ ಇದ್ದ ಮನುಷ್ಯನು ಅವನನ್ನು ಶುದ್ಧ ಮಾಡಬಲ್ಲ ಎಂದು ಮಾತ್ರ ಹೇಳಲಿಲ್ಲ. ಅವನು ಯೇಸುವನ್ನು ತನ್ನನ್ನು ಶುದ್ಧಮಾಡಲು ಬೇಡಿಕೊಂಡ. ಅವನು ಯೇಸುವನ್ನು ಕುರಿತು “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ, ನನ್ನನ್ನು ಶುದ್ಧಮಾಡು ಎಂದು ಪ್ರಾರ್ಥಿಸಿದ.” (ಮತ್ತಾಯ 8:2 ULB)

ಈ ವಾಕ್ಯಗಳು ಕೆಲವೊಮ್ಮೆ ನಿರ್ವಹಿಸು ಎಂಬ ಅರ್ಥದ ವಾಕ್ಯಗಳಾಗಿರಬಹುದು.

" ನಿನ್ನ ನಿಮಿತ್ತ ಭೂಮಿಗೆ ಶಾಪಬಂತು" ಎಂದು ಆದಾಮನಿಗೆ ದೇವರು ದಂಡನಾ ವಾಕ್ಯ ನೀಡಿದನು

… ನಿನ್ನ ನಿಮಿತ್ತ ಭೂಮಿಗೆ ಶಾಪಬಂತು, (ಆದಿಕಾಂಡ 3:17 ULB)

"ನಿನ್ನ ಪಾಪವು ಕ್ಷಮಿಸಲ್ಪಟ್ಟಿದೆ.ಎಂದು ಯೇಸು ಆ ಮನುಷ್ಯನ ಪಾಪಗಳನ್ನು ಕ್ಷಮಿಸಿದನು.

ಅವರ ನಂಬಿಕೆಯನ್ನು ನೋಡಿದ ಯೇಸು ಆ ಪಾರ್ಶ್ವವಾಯು ರೋಗಿಯನ್ನು ನೋಡಿ “ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ.” (ಲೂಕ 2:5 ULB)ಅಂದನು

ಅನುವಾದ / ಭಾಷಾಂತರದ ತಂತ್ರಗಳು.

  1. ಈ ನಿರುಪಣಾ ವಾಕ್ಯಗಳ ಕ್ರಿಯೆಯನ್ನು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಕೆಲವು ಬೇರೆ ವಾಕ್ಯಗಳನ್ನು – ಅದೇ ರೀತಿಯ ಕ್ರಿಯೆಯನ್ನು ಬಳಸಿ ಅಭಿವ್ಯಕ್ತಿಸ ಬೇಕು.
  2. ಈ ನಿರುಪಣಾ ವಾಕ್ಯಗಳ ಕ್ರಿಯೆಯನ್ನು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಕೆಲವು ಬೇರೆ ವಾಕ್ಯಗಳನ್ನು – ಅದೇ ರೀತಿಯ ಕ್ರಿಯೆಯನ್ನು ಬಳಸಿ ಅಭಿವ್ಯಕ್ತಿಸ ಬೇಕು.
  3. ನಿರೂಪಣಾವಾಕ್ಯಗಳ ಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನಿಮ್ಮ ಭಾಷೆಯಲ್ಲಿ ಸಾಧ್ಯವಾಗದಿದ್ದರೆ ಕ್ರಿಯಾಪದದ ರೂಪವನ್ನು ಬಳಸಿ ಇದರ ಪ್ರಕ್ರಿಯೆಯನ್ನು ಅಭಿವ್ಯಕ್ತಪಡಿಸಬೇಕು.

###ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು.

  1. ಈ ನಿರುಪಣಾ ವಾಕ್ಯಗಳ ಕ್ರಿಯೆಯನ್ನು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಕೆಲವು ಬೇರೆ ವಾಕ್ಯಗಳನ್ನು – ಅದೇ ರೀತಿಯ ಕ್ರಿಯೆಯನ್ನು ಬಳಸಿ ಅಭಿವ್ಯಕ್ತಿಸ ಬೇಕು.
  • ಆಕೆಯು ಒಬ್ಬ ಮಗನನ್ನು ಹಡೆಯುವಳು ಮತ್ತು , ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು , ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು. (ಮತ್ತಾಯ 1:21 ULB)" ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು" ಎಂಬ ವಾಕ್ಯ ನಿರ್ದೇಶನ ನೀಡಿದ ವಾಕ್ಯ ಎಂಬುದನ್ನು ಸಾಮಾನ್ಯ ಆದೇಶ ನೀಡುವ ವಾಕ್ಯವಾಗಿ ಭಾಷಾಂತರ ಮಾಡಬಹುದು.

    • ಆಕೆಯು ಒಬ್ಬ ಗಂಡುಮಗುವಿಗೆ ಜನ್ಮ ನೀಡುವಳು , ನೀನು ಆತನಿಗೆ ಯೇಸು ಎಂದು ಹೆಸರಿಡು , ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ರಕ್ಷಿಸುವನು.
  1. ನಿರೂಪಣಾ ವಾಕ್ಯದ ಕ್ರಿಯೆಯು ನಿಮ್ಮ ಭಾಷೆಯಲ್ಲಿ ಸರಿಯಾದ ರೀತಿಯಲ್ಲಿ ಅರ್ಥವಾಗದಿದ್ದರೆ ಕ್ರಿಯೆಯನ್ನು ತಿಳಿಸುವ ವಾಕ್ಯರೂಪಕದ ನಿರೂಪಣಾವಾಕ್ಯವನ್ನು ಸೇರಿಸಬಹುದು.
  • ಸ್ವಾಮಿ ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ . (ಮತ್ತಾಯ 8:2 ULB) " ನೀನು ನನ್ನನ್ನು ಶುದ್ಧಮಾಡಬಲ್ಲೆ " ಎಂಬ ಕ್ರಿಯೆಯು ಬೇಡಿಕೆ, ಕೋರಿಕೆಯಲ್ಲಿದೆ. ಇಲ್ಲಿ ಈ ನಿರೂಪಣಾ ವಾಕ್ಯದಲ್ಲಿ “ಬೇಡಿಕೆ” ಕೋರಿಕೆಯನ್ನು ಸೇರಿಸಬಹುದು.

    • ಸ್ವಾಮಿ, ನೀನು ಮನಸ್ಸು ಮಾಡಿದರೆ “ನನ್ನನ್ನು ಪರಿಶುದ್ಧಮಾಡಬಲ್ಲೆ” ದಯವಿಟ್ಟು ಹಾಗೇ ಮಾಡು..
    • ಸ್ವಾಮಿ, ನೀನು ಮನಸ್ಸು ಮಾಡಿದರೆ “ನನ್ನನ್ನು ಪರಿಶುದ್ಧಮಾಡಬಲ್ಲೆ” ನನಗೆ ಗೊತ್ತು ನೀನು ಹಾಗೆ ಮಾಡಬಲ್ಲೆ.
  1. ಹೇಳಿಕೆಯ ಕಾರ್ಯವನ್ನು ಅರ್ಥಮಾಡಿಕೊಳ್ಳಲು ನಿಮ್ಮ ಭಾಷೆಯಲ್ಲಿ ಸಾಧ್ಯವಾಗದಿದ್ದರೆ ಕ್ರಿಯಾಪದವನ್ನು ಬಳಸಿ ಇದರ ಪ್ರಕ್ರಿಯೆಯನ್ನು ಅಭಿವ್ಯಕ್ತಪಡಿಸಬೇಕು.
  • ಆಕೆಯು ಒಬ್ಬ ಗಂಡುಮಗುವಿಗೆ ಜನ್ಮ ನೀಡುವಳು , ನೀನು ಆವನಿಗೆ ಯೇಸು ಎಂದು ಹೆಸರಿಡಬೇಕು , ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು. (ಮತ್ತಾಯ 1:21 ULB)

    • ಆಕೆಯು ಒಬ್ಬ ಗಂಡುಮಗುವಿಗೆ ಜನ್ಮ ನೀಡುವಳು , ನೀನು ಆತನನ್ನು ಯೇಸು ಎಂದು ಕರೆಯಬೇಕು , ಏಕೆಂದರೆ ಆತನೇ ಆತನ ಜನರನ್ನು ಕಾಯುವನು.
  • ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ. ಲೂಕ 2:5 ULB)

    • ಮಗನೇ ನಾನು ನಿನ್ನಪಾಪಗಳನ್ನು ಕ್ಷಮಿಸುವೆ.
    • ಮಗನೇ, ದೇವರು ನಿನ್ನ ನಿನ್ನ ಪಾಪಗಳನ್ನು ಕ್ಷಮಿಸಿದ್ದಾನೆ.

ಆಜ್ಞೆ– ಇತರ ಉಪಯೋಗಗಳು .
Translation Manual :: Just-in-Time Learning Modules :: Sentences :: Sentence Types :: Imperatives - Other Uses

ವಿವರಣೆಗಳು

ಆಜ್ಞಾಪನಾ ವಾಕ್ಯಗಳೆಂದರೆ ಮುಖ್ಯವಾಗಿ ಬಯಕೆಗಳನ್ನು ಅಥವಾ ಕೋರಿಕೆಗಳನ್ನು ವ್ಯಕ್ತಪಡಿಸಲು , ಯಾರಾದರೊಬ್ಬರು ನಿರ್ದಿಷ್ಟವಾದುದನ್ನು ಮಾಡಬೇಕೆಂದು ಹೇಳುವ ಮಾತುಗಳು . ಸತ್ಯವೇದದಲ್ಲಿ ಬರುವ ಆಜ್ಞಾಪನಾ ವಾಕ್ಯಗಳಿಗೆ ಇತರ ಉಪಯೋಗವೂ ಇದೆ.

ಕಾರಣ ಇದೊಂದು ಭಾಷಾಂತರ ತೊಡಕು

ಸತ್ಯವೇದದಲ್ಲಿ ಬಳಕೆಯಾಗಿರುವ ಇಂತಹ ಆಜ್ಞಾಪನಾ ವಾಕ್ಯಗಳನ್ನು ಮತ್ತು ಅದರ ಕಾರ್ಯಗಳನ್ನು ಕೆಲವು ಭಾಷೆಯಲ್ಲಿ ಉಪಯೋಗ ಮಾಡದೆ ಇರಬಹುದು .

ಸತ್ಯವೇದದಲ್ಲಿನ ಉದಾಹರಣೆಗಳು .

ಮಾತನಾಡುವ ವ್ಯಕ್ತಿಗಳು ತಮ್ಮ ಶ್ರೋತೃಗಳನ್ನು ಕುರಿತು ಈ ಆಜ್ಞಾಪನಾ ವಾಕ್ಯಗಳನ್ನು ಆಗಿಂದಾಗ್ಗೆ ಬಳಸಿ ಅವರಿಗೆ ಹೇಳುವುದು ಇಲ್ಲವೇ ಪ್ರಶ್ನೆ ಕೇಳುವುದು ಮಾಡುವರು ಆದಿಕಾಂಡ 2,ನೇ ಅಧ್ಯಾಯದಲ್ಲಿ ಯೆಹೋವನು ಇಸಾಕನನ್ನು ಕುರಿತು ಮಾತನಾಡಿದನು ಮತ್ತು ಐಗುಪ್ತದೇಶಕ್ಕೆ ಹೋಗದೆ ತಾನು ಹೇಳುವ ದೇಶದಲ್ಲಿ ವಾಸಿಸುವಂತೆ ಹೇಳಿದನು .

ಯೆಹೋವನು ಇಸಾಕನ ಮುಂದೆ ಪ್ರತ್ಯಕ್ಷನಾಗಿ ನೀನು ಐಗುಪ್ತದೇಶಕ್ಕೆ"ಇಳಿದು ಹೋಗಬೇಡ , ನಾನು ಹೇಳಿದ ದೇಶದಲ್ಲಿ ವಾಸಮಾಡಬೇಕು . (ಆದಿಕಾಂಡ 26:2 ULB)

ಕೆಲವೊಮ್ಮೆ ಸತ್ಯವೇದದಲ್ಲಿ ಈ ಆಜ್ಞಾಪನಾ ವಾಕ್ಯಗಳಿಗೆ ಇತರ ಉಪಯೋಗಗಳು ಇರುತ್ತವೆ.

####ಆಜ್ಞಾಪನಾ ವಾಕ್ಯಗಳು ಘಟನೆಗಳು ನಡೆಯುವ ಬಗ್ಗೆ ತಿಳಿಸಿವೆ.

ದೇವರು ತಾನು ಆಜ್ಞಾಪಿಸುವ ವಾಕ್ಯಗಳ ಮೂಲಕ ಎಲ್ಲವೂ ನಡೆಯುವಂತೆ ಮಾಡಬಹುದು. ಯೇಸು ಒಬ್ಬ ಮನುಷ್ಯನನ್ನು ಕುರಿತು " ಶುದ್ಧನಾಗು " ಎಂದೊಡನೆ ಆ ಮನುಷ್ಯನು ಸ್ವಸ್ಥನಾದನು. ಆ ಮನುಷ್ಯನು ಯೇಸುವಿನ ಆಜ್ಞೆಯಂತೆ ನಡೆಯುವ ಅವಶ್ಯಕತೆ ಇಲ್ಲಿರಲಿಲ್ಲ ಅದರ ಬದಲು ಯೇಸು ತನ್ನ ಆಜ್ಞೆಯ ಮೂಲಕ ಆ ಮನುಷ್ಯನನ್ನು ಸ್ವಸ್ಥಪಡಿಸಿದನು. (ಶುದ್ಧವಾಗು ಎಂದರೆ ಸ್ವಸ್ಥವಾಗು ಎಂದರ್ಥ)

“ನನಗೆ ಮನಸ್ಸುಂಟು” ಶುದ್ಧನಾಗು ." ಅಂದನು . ಕೂಡಲೆ ಅವನು ಕುಷ್ಠದಿಂದ ಶುದ್ಧನಾದ. (ಮತ್ತಾಯ 8:3 ULB)

ಆದಿಕಾಂಡ ಮೊದಲನೇ ಅಧ್ಯಾಯದಲ್ಲಿ ದೇವರು " ಬೆಳಕಾಗಲಿ ಎಂದು ಹೇಳಲು ಬೆಳಕಾಯಿತು ." ಆತನು ಆಜ್ಞಾರೂಪದಲ್ಲಿ ಹೇಳಿದ್ದರಿಂದ ಹೀಗಾಯಿತು. ಕೆಲವು ಭಾಷೆಯಲ್ಲಿ ಉದಾಹರಣೆಗೆ ಹಿಬ್ರೂ ಭಾಷೆಯ ಸತ್ಯವೇದದಲ್ಲಿ ಆಜ್ಞೆಗಳು ಪ್ರಥಮ ಪುರುಷ ಕುರಿತಾಗಿದೆ ಇಂಗ್ಲೀಷ್ ಭಾಷೆಯಲ್ಲಿ ಈ ರೀತಿಯ ಪ್ರಯೋಗವಿಲ್ಲ ಇದರಿಂದ ಪ್ರಥಮ ಪುರುಷ ಆಜ್ಞಾವಾಕ್ಯವನ್ನು ಸಾಮಾನ್ಯ ಮಧ್ಯಮ ಪುರುಷ ಆಜ್ಞಾವಾಕ್ಯವಾಗಿ ULB:ಯಲ್ಲಿರುವಂತೆ ಪರಿವರ್ತಿಸಲಾಗುತ್ತದೆ.

ಆಗ ದೇವರು “ಬೆಳಕಾಗಲಿ ಎಂದು ಹೇಳಲು ,” ಅಲ್ಲಿ ಬೆಳಕಾಯಿತು (ಆದಿಕಾಂಡ 1:3 ULB)

ಯಾವ ಭಾಷೆಯಲ್ಲಿ ಪ್ರಥಮ ಪುರುಷ ಆಜ್ಞಾವಾಕ್ಯ ಇರುತ್ತದೋ ಅವರು ಮೂಲ ಹಿಬ್ರೂ ಭಾಷೆಯನ್ನು ಬಳಸಿಕೊಂಡು ಇಂಗ್ಲೀಷಿಗೆ ಭಾಷಾಂತರಿಸುವಾಗ ಈ ರೀತಿ ಆಗಬಹುದು . . " ಬೆಳಕಾಗಲಿ ." ಎಂದು ಬಳಸಬಹುದು .

ಆಶೀರ್ವದವಾಗಿ ಕಾರ್ಯನಿರ್ವಹಿಸುವ ಆಜ್ಞಾಪೂರ್ವಕ ವಾಕ್ಯಗಳು

ಸತ್ಯವೇದದಲ್ಲಿ ದೇವರು ಆಶೀರ್ವಾದಗಳನ್ನು ಆಜ್ಞಾರೂಪದಲ್ಲೇ ಹೇಳುವುದನ್ನು ನೊಡುತ್ತೇವೆ. ಇವು ದೇವರ ಇಚ್ಛೆಯನ್ನು ವ್ಯಕ್ತಪಡಿಸುತ್ತದೆ.

ದೇವರು ಅವರನ್ನು ಆಶೀರ್ವದಿಸಿ " ನೀವು ಬಹು ಸಂತಾನವುಳ್ಳವರಾಗಿ , ಹೆಚ್ಚಿರಿ , ಭೂಮಿಯಲ್ಲಿ ತುಂಬಿಕೊಂಡು . ಅದನ್ನು ವಶಮಾಡಿಕೊಳ್ಳಿರಿ ಸಮುದ್ರದ ಮೀನುಗಳ ಮೇಲೂ ಆಕಾಶದ ಪಕ್ಷಿಗಳ ಮೇಲೂ , ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೂ ದೊರೆತನ ಮಾಡುವಿರಿ

ಆಜ್ಞಾರೂಪದ ವಾಕ್ಯಗಳು ಕೆಲವೊಮ್ಮೆ ಷರತ್ತುಗಳಂತೆ ಕೆಲಸ ನಿರ್ವಹಿಸುತ್ತವೆ.

ಆಜ್ಞಾರೂಪದ ವಾಕ್ಯಗಳು ಷರತ್ತು ಗಳನ್ನು ಕುರಿತು ಹೇಳಲು ಮತ್ತು ಯಾವ ಹಂತದಲ್ಲಿ ನಡೆಯುತ್ತದೆ ಎಂದು ತಿಳಿಸುತ್ತದೆ. ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ಜ್ಞಾನೋಕ್ತಿಗಳಲ್ಲಿ ವಿಶೇಷವಾಗಿ ತಿಳಿಸಲಾಗಿದೆ. ಕೆಳಗೆ ಕೊಟ್ಟಿರುವ ಜ್ಞಾನೋಕ್ತಿ ವಾಕ್ಯ 4:6 ಮೂಲಭೂತವಾಗಿ ಆಜ್ಞೆ ನೀಡುವಂತದ್ದಲ್ಲ ಆದರೆ ಜನರು ಏನು ನಡೆಯಬೇಕೆಂದು ನಿರೀಕ್ಷಿಸುತ್ತಾರೋ ಅದರ ಬಗ್ಗೆ ಬೋಧಿಸುವುದು . ಉದಾಹರಣೆಗೆ ಒಂದು ವೇಳೆ/ ಆದರೆ ಅವರು ಜ್ಞಾನವನ್ನು ಬಯಸುವುದಾದರೆ ಬೋಧಿಸುವುದು .

ಜ್ಞಾನವನ್ನು ಬಿಡದಿದ್ದರೆ ಅದು ನಿನ್ನನ್ನು ಕಾಪಾಡುವುದು . ನೀನು ಅದನ್ನು ಪ್ರೀತಿಸಿದರೆ ಅದು ನಿನ್ನನ್ನು ಸುರಕ್ಷಿತವಾಗಿ ಇರುವಂತೆ ಕಾಯುವುದು. (ಜ್ಞಾನೋಕ್ತಿಗಳು 4:6 ULB)

ಕೆಳಗೆ ಕೊಟ್ಟಿರುವ ಜ್ಞಾನೋಕ್ತಿ 22:6ರಲ್ಲಿ ಜನರು ಏನು ನಡೆಯಬೇಕೆಂದು ನಿರೀಕ್ಷಿಸುತ್ತಾರೋ ಅದು ಅವರು ತಮ್ಮ ಮಕ್ಕಳಿಗೂ ಕಲಿಸಿ ಹೇಗೆ ನಡೆದುಕೊಳ್ಳ ಬೇಕು ಎಂಬುದನ್ನುತಿಳಿಸುತ್ತಾರೆ.

ಮಕ್ಕಳು ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಬೋಧಿಸು . ಮಗುವಾಗಿದ್ದಾಗ ಕಲಿಸಿದ ವಿಷಯವು ಅವನ ಮುಪ್ಪಿನಲ್ಲೂ ಓರೆಯಾಗದೆ ಇರುವಂತೆ ಮಾಡುತ್ತದೆ (ಜ್ಞಾನೋಕ್ತಿಗಳು 22:6 ULB)

ಭಾಷಾಂತರ ಕೌಶಲ್ಯಗಳು

  1. ಸತ್ಯವೇದದಲ್ಲಿನ ಒಂದು ಕಾರ್ಯದ ಕುರಿತು ವಿವರಿಸುವಾಗ ಆಜ್ಞಾರೂಪ ವಾಕ್ಯ ಬಳಸದಿದ್ದರೆ ಅದರ ಬದಲಾಗಿ ಸರಳ / ಹೇಳಿಕೆ ವಾಕ್ಯವನ್ನು ಬಳಸಬಹುದು .
  2. ಜನರು ಏನಾದರೂ ನಡೆಯಬೇಕೆಂದು ನಿರೀಕ್ಷಿಸಿ ಉಪಯೋಗಿಸುವ ವಾಕ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸಂಪರ್ಕ ಕಲ್ಪಿಸುವ ಪದವನ್ನು ಬಳಸಬಹುದು. ಉದಾಹರಣೆಗೆ “ಇದರಿಂದ” “ಅದರಿಂದ” ಎಂಬ ಪದಗಳು ಇವುಗಳನ್ನು ಬಳಸುವುದರಿಂದ ಏನು ಹೇಳಿದರೋ ಅದರಂತೆ ನಡೆಯುತ್ತದೆ.
  3. ಜನರು ಆಜ್ಞಾರೂಪ ವಾಕ್ಯಗಳನ್ನು ಷರತ್ತಿನಂತೆ ಉಪಯೊಗಿಸದಿದ್ದರೆ ಅವುಗಳನ್ನು ಸರಳ ವಾಕ್ಯಗಳನ್ನಾಗಿ “ಆಗ” ಮತ್ತು “ಆದರೆ.” .ಎಂಬ ಪದಗಳನ್ನು ಬಳಸಿ ಮಾಡಬಹುದು .

ಭಾಷಾಂತರ ಕೌಶಲ್ಯವನ್ನು ಅಳವಡಿಸುವ ಬಗ್ಗೆ ಉದಾಹರಣೆಗಳು

  1. ಸತ್ಯವೇದದಲ್ಲಿನ ಇದು ಒಂದು ಕ್ರಿಯೆಯ ಬಗ್ಗೆ ಆಜ್ಞಾರೂಪ ವಾಕ್ಯ ಬಳಸದಿದ್ದರೆ ಅದರ ಬದಲಾಗಿ ಸರಳ /ಹೇಳಿಕೆ ವಾಕ್ಯವನ್ನು ಬಳಸಬಹುದು
  • ಶುದ್ಧನಾಗು . (ಮತ್ತಾಯ 8:3 ULB)

    • " ನೀನು ಈಗ ಶುದ್ಧನಾದೆ "
    • " ನಾನು ಈಗ ನಿನ್ನನ್ನು ಶುದ್ಧಮಾಡಬಲ್ಲೆ * "
  • ದೇವರು " ಬೆಳಕಾಗಲಿ "ಎಂದು ಹೇಳಿದಾಗ ಬೆಳಕಾಯಿತು . (ಆದಿಕಾಂಡ 1:3 ULB)

    • ದೇವರು " ಅಲ್ಲಿ ಬೆಳಕಾಗಲಿ ಎಂದು ಹೇಳಿದನು ಅಲ್ಲಿ ಬೆಳಕಾಯಿತು
  • ದೇವರು ಅವರನ್ನು ಆಶೀರ್ವದಿಸಿ “ನೀವು ಬಹುಸಂತಾನವುಳ್ಳವರಾಗಿ , ದ್ವಿಗುಣ ಗೊಂಡು ಹೆಚ್ಚಿರಿ. ಭೂಮಿಯಲ್ಲಿ ತುಂಬಿಕೊಂಡು ,ಅದನ್ನು ವಶಮಾಡಿಕೊಳ್ಳಿರಿ ಎಲ್ಲವನ್ನು ನಿಮ್ಮ ಆಧಿಪತ್ಯಕ್ಕೆ ತನ್ನಿ ಸಮುದ್ರದ ಮೀನುಗಳ ಮೇಲೆಯೂ , ಆಕಾಶದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ ಎಂದನು .” (ಆದಿಕಾಂಡ 1:3 ULB)

  • ದೇವರು ಅವರನ್ನು ಆಶೀರ್ವದಿಸಿ “ ನನ್ನ ಚಿತ್ತದಂತೆ ನೀವು ಬಹುಸಂತಾನ ಉಳ್ಳವರಾಗಿ , ಮತ್ತು ದ್ವಿಗುಣಗೊಂಡು ಹೆಚ್ಚಿರಿ. ಭೂಮಿಯಲ್ಲಿ ತುಂಬಿಕೊಂಡು , ಅದನ್ನು ವಶಮಾಡಿಕೊಳ್ಳಿ. ನೀವು ಎಲ್ಲವನ್ನು ನಿಮ್ಮ ಅಧಿಪತ್ಯಕ್ಕೆ ತರಬೇಕು " ಸಮುದ್ರದ ಮೀನುಗಳ ಮೇಲೆಯೂ , ಆಕಾಶದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ ಎಂದನು .”

  1. ಜನರು ಏನಾದರೂ ನಡೆಯಬೇಕೆಂದು ನಿರೀಕ್ಷಿಸಿ ಉಪಯೋಗಿಸುವ ವಾಕ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸಂಪರ್ಕ ಕಲ್ಪಿಸುವ ಪದವನ್ನು ಬಳಸಬಹುದು. ಉದಾಹರಣೆಗೆ “ಇದರಿಂದ” “ಅದರಿಂದ” ಎಂಬ ಪದಗಳು ಇವುಗಳನ್ನು ಬಳಸಬಹುದು.ಆಡಿದ ಮಾತಯಾನ ನಿಮಿತ್ತವೆ ಆ ಕಾರ್ಯ ನಡೆದಿದೆ ಎಂದು ಈ ಮೂಲಕ ತಿಳಿಸಬಹುದು.
  • ದೇವರು " ಬೆಳಕಾಗಲಿ " ಎಂದಾಗ ಅಲ್ಲಿ ಬೆಳಕಾಯಿತು " . (ಆದಿಕಾಂಡ 1:3 ULB)
    • ದೇವರು ಬೆಳಕಾಗಲಿ ಎಂದ ಆದುದರಿಂದ ಅಲ್ಲಿ ಬೆಳಕಾಯಿತು
    • ದೇವರು;" ಬೆಳಕಾಗಲಿ " ಎಂದು ಹೇಳಿದ ಪರಿಣಾಮವಾಗಿ , ಬೆಳಕಾಯಿತು
  1. ಜನರು ಆಜ್ಞಾರೂಪ ವಾಕ್ಯಗಳನ್ನು ಷರತ್ತಿನಂತೆ ಉಪಯೋಗಿಸದಿದ್ದರೆ ಅವುಗಳನ್ನು ಸರಳ ವಾಕ್ಯಗಳನ್ನಾಗಿ “ಆಗ” ಮತ್ತು “ಆದರೆ.” .ಎಂಬ ಪದಗಳನ್ನು ಬಳಸಿ ಮಾಡಬಹುದು .
  • ಮಕ್ಕಳು ನಡೆಯತಕ್ಕ ದಾರಿಯನ್ನು ಅವರಿಗೆ ಬೋಧಿಸು ಅವರು ತಮ್ಮ ಮುಪ್ಪಿನಲ್ಲೂ ಅದನ್ನು ಮರೆಯದೆ ಅದರಂತೆ ನಡೆಯವರು (ಜ್ಞಾನೋಕ್ತಿ 22:6 ULB)

ಇದನ್ನು ಹೀಗೆ ಭಾಷಾಂತರಿಸ ಬಹುದು :

" ನೀವು ನಿಮ್ಮ ಮಗುವಿಗೆ ಅದು ನಡಯತಕ್ಕ ದಾರಿಯನ್ನು ಬೋಧಿಸಿದರೆ , ಆಗ ಮಗುವು ತನ್ನ ಮುಪ್ಪಿನಲ್ಲೂ ಆ ಬೋಧನೆಯನ್ನು ಮರೆಯದೆ ಸರಿದಾರಿಯಲ್ಲಿ ನಡೆಯುವುದು. ."


ಭಾವಸೂಚಕಗಳು.
Translation Manual :: Just-in-Time Learning Modules :: Sentences :: Sentence Types :: Exclamations

ವಿವರಣೆಗಳು.

ಭಾವಸೂಚಕ ಪದಗಳನ್ನು ಅಥವಾ ವಾಕ್ಯಗಳನ್ನು, ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುತ್ತೇವೆ. ಉದಾ : ಸಂತೋಷ, ಆಶ್ಚರ್ಯ, ಹೆದರಿಕೆ, ಸಿಟ್ಟು ಮುಂತಾದವು. ULB ಮತ್ತು UDB, ಯಲ್ಲಿ ಸಾಮಾನ್ಯವಾಗಿ ಆಶ್ಚರ್ಯ ಸೂಚಕ ಚಿಹ್ನೆ (!) ಯನ್ನು ಬಳಸಲಾಗಿದೆ.

ಈ ಚಿಹ್ನೆ ಆಶ್ಚರ್ಯ ಸೂಚಕ ಚಿಹ್ನೆ (!) ಯನ್ನು ಸೂಚಿಸುತ್ತದೆ. ಸುಲಭವಾಗಿ ಸನ್ನಿವೇಶ, ಸಂದರ್ಭಗಳನ್ನು, ಅರ್ಥಮಾಡಿಕೊಳ್ಳಲು, ವ್ಯಕ್ತಪಡಿಸಿರುವ ಭಾವನೆಗಳನ್ನು ಅರ್ಥಮಾಡಿಕೊಳ್ಳಲು, ಇಂತಹ ಭಾವಸೂಚಕ ಪದಗಳು ಚಿಹ್ನೆಗಳು ಸಹಕಾರಿಯಾಗಿವೆ.

ಕೆಳಗೆ ಕೊಟ್ಟಿರುವ ಉದಾಹರಣೆ (ಮತ್ತಾಯ 8ನೇ ಅಧ್ಯಾಯ) ಎಲ್ಲಿ ಜನರು,ಅತ್ಯಂತ ಭಯಭ್ರಾಂತರಾಗಿರುವುದನ್ನು ಸೂಚಿಸುತ್ತದೆ. ಮತ್ತಾಯ 9ನೇ ಅಧ್ಯಾಯದಲ್ಲಿ ಜನರು ಆಶ್ಚರ್ಯದಿಂದ ದಿಗ್ಭ್ರಮೆಗೊಂಡರು ಏಕೆಂದರೆ ಇದುವರೆಗೂ ಅವರು ಹೀಗೆ ನಡೆದದ್ದನ್ನು ನೋಡಿರಲಿಲ್ಲ.,

ಸ್ವಾಮಿ, ನಮ್ಮನ್ನು ಕಾಪಾಡು, ನಾವು ಸಾಯುತ್ತೇವೆ. (ಮತ್ತಾಯ 8:25 ULB) ಆತನು ದೆವ್ವವನ್ನು ಬಿಡಿಸಿ ಓಡಿಸಿದಮೇಲೆ, ಆ ಮೂಕನು ಮಾತನಾಡತೊಡಗಿದನು. " ಇಸ್ರಾಯೆಲ್ ಜನರಲ್ಲಿ ಇಂತಹಕಾರ್ಯ ಯಾವಾಗಲೂ ನೆರವೇರಿರಲಿಲ್ಲ ಎಂದು ಆ ಜನರು ಬೆರಗಾದರು !" (ಮತ್ತಾಯ 9:33 ULB)

###ಇದೊಂದು ಭಾಷಾಂತರ ತೊಡಕು.

ಎಲ್ಲಾ ಭಾಷೆಯಲ್ಲೂ ಮನಸ್ಸಿನ ತೀವ್ರವಾದ ಭಾವನೆಗಳನ್ನು ವ್ಯಕ್ತಪಡಿಸಲು ಅನೇಕ ರೀತಿಯ ಪದಗಳು ವಾಕ್ಯಗಳು ಇವೆ.

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು.

ಕೆಲವೊಮ್ಮೆ ಕೆಲವು ಪದಗಳೇ ಭಾವಸೂಚಕಗಳಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಈ ಕೆಳಗಿನ ವಾಕ್ಯಗಳಲ್ಲಿ “ಓಹ್” ಮತ್ತು “ಆಹ್.” ಎಂಬ ಪದಗಳಿವೆ. " ಓಹ್ " ಇಂತಹ ಪದಗಳು ವ್ಯಕ್ತಿಯ ದಿಗ್ಭ್ರಮೆ, ಆಶ್ಚರ್ಯವನ್ನು ವ್ಯಕ್ತಪಡಿಸುತ್ತದೆ.

ಓಹ್ ,ದೇವರ ಐಶ್ವರ್ಯವು, ಜ್ಞಾನವು, ವಿವೇಕವು ಎಷ್ಟೋ ಅಗಾಧವಾದುದು! (ರೋಮಪುರದವರಿಗೆ 11:33 ULB)

ಕೆಳಗಿನ ಉದಾಹರಣೆಯಲ್ಲಿ " ಆಹ್ "! ಗಿದ್ಯೋನನು ತುಂಬಾ ಭಯಭೀತನಾಗಿರುವುದನ್ನು ಸೂಚಿಸುತ್ತದೆ. ತನ್ನೊಂದಿಗೆ ಮಾತನಾಡುತ್ತಿರುವವನು ಯೆಹೋವನು ದೂತನು ಎಂದು ಗಿದ್ಯೋನನು ಅರ್ಥಮಾಡಿಕೊಂಡನು. ಗಿಡಿಯೋನನು "ಆಹ್ , ಅಯ್ಯೋ ಕರ್ತನೇ, ಯೆಹೊವನೇ ಎಂದು ಕೂಗಿದನು. ಯೆಹೊವನೇ ಕರ್ತನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ! ಎಂದು ಕೂಗಿದನು. (ನ್ಯಾಯಸ್ಥಾಪಕರು 6:22 ULB)

ಕೆಲವು ಭಾವಸೂಚಕ ವಾಕ್ಯಗಳು ಪ್ರಶ್ನಿಸುವ ವಾಕ್ಯವಲ್ಲದಿದ್ದರೂ ಪ್ರಶ್ನಾರ್ಥಕ ಪದಗಳ ಮೂಲಕ ಪ್ರಾರಂಭವಾಗುತ್ತವೆ. ಉದಾಹರಣೆಗೆ "ಹೇಗೆ " ಅಥವಾ “ಏಕೆ,” ಎಂಬ ಪದಗಳು. ಈ ಕೆಳಗಿನ ವಾಕ್ಯಗಳು, ದೇವರ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ.ಎನ್ನುವ ವಿಷಯದಲ್ಲಿ ಕರ್ತೃ ವ್ಯಕ್ತಪಡಿಸುವ ಆಶ್ಚರ್ಯವನ್ನು ಸೂಚಿಸುತ್ತದೆ!

ಹೇಗೆಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ತನ ಮಾರ್ಗಗಳು ಕಂಡುಹಿಡಿಯಲು ಅಸಾಧ್ಯ. (ರೋಮಪುರದವರಿ11:33 ULB)

ಕೆಲವೊಮ್ಮೆ ಸತ್ಯವೇದದಲ್ಲಿ ಬರುವ ಭಾವಸೂಚಕ ವಾಕ್ಯಗಳಲ್ಲಿ ಮುಖ್ಯವಾದ ಕ್ರಿಯಾಪದ ಇರುವುದಿಲ್ಲ. ಈ ಕೆಳಗಿನ ವಾಕ್ಯಗಳು ಇಲ್ಲಿ ಮಾತನಾಡುತ್ತಿರುವ ವ್ಯಕ್ತಿಯ ಬಗ್ಗೆ ಅಸಮಾಧಾನಗೊಂಡಂತೆ ಕಾಣುತ್ತದೆ.

ಛೀ! ನೀಚ (ಮತ್ತಾಯ 5:22 ULB)

ಭಾಷಾಂತರದ ತಂತ್ರಗಳು

  1. ನಿಮ್ಮ ಭಾಷೆಯಲ್ಲಿ ಕಂಡುಬರುವ ಭಾವಸೂಚಕ ಪದಕ್ಕೆ ಕ್ರಿಯಾಪದದ ಅವಶ್ಯಕತೆ ಇದ್ದರೆ ಅದನ್ನು ಸೇರಿಸಬಹುದು. ಒಂದು ಒಳ್ಳೆ ಕ್ರಿಯಾಪದವೆಂದರೆ “is” or “are.”.
  2. ನಿಮ್ಮ ಭಾಷೆಯಲ್ಲಿ ಪರಿಣಾಮಕಾರಿ ಭಾವಸೂಚಕ ಪದವಿದ್ದರೆ ಬಳಸಬಹುದು.
  3. ಭಾವಸೂಚಕ ಪದವನ್ನು ಬಳಸಿ ವಾಕ್ಯದ ಮೂಲಕ ಭಾವನೆಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು.
  4. ವಾಕ್ಯದಲ್ಲಿ ಯಾವಭಾಗ ಪರಿಣಾಮಕಾರಿಯಾದ ಭಾವನೆಯನ್ನು ವ್ಯಕ್ತಪಡಿಸುತ್ತದೋ ಅದನ್ನು ಸೂಕ್ತಪದದಿಂದ ವಿಶೇಷ ಒತ್ತು ನೀಡಿ
  5. ಭಾಷಾಂತರ ಮಾಡುವ ಭಾಷೆಯಲ್ಲಿ ಪರಿಣಾಮಕಾರಿಯಾಗಿ ತಿಳಿಸಲು ಸಾಧ್ಯವಾಗದಿದ್ದರೆ ಎಂತಹ ಭಾವನೆಗಳು ವ್ಯಕ್ತವಾಗಿದೆ ಎಂಬುದನ್ನು ಸರಳವಾಗಿ ತಿಳಿಸಿ.

ಭಾಷಾಂತರದ ತಂತ್ರಗಳ ಅಳವಡಿಕೆಯಾದ ಬಗ್ಗೆ ಉದಾಹರಣೆಗಳು

  1. ನಿಮ್ಮ ಭಾಷೆಯಲ್ಲಿ ಕಂಡುಬರುವ ಭಾವಸೂಚಕ ಪದಕ್ಕೆ ಕ್ರಿಯಾಪದದ ಅವಶ್ಯಕತೆ ಇದ್ದರೆ ಸೇರಿಸಬಹುದು. ಇಂಗ್ಲೀಷಿನಲ್ಲಿ ಒಳ್ಳೆ ಕ್ರಿಯಾಪದವೆಂದರೆ “is” or “are.”.

ಛೀ ! ನೀಚ (ಮತ್ತಾಯ 5:22 ULB)

  • ನೀನು ಒಬ್ಬಅಯೋಗ್ಯ ಮನುಷ್ಯ ! "

  • ಓಹ್ ! ದೇವರ ಐಶ್ವರ್ಯವು, ಜ್ಞಾನವು, ವಿವೇಕವೂ ಎಷ್ಟೋ ಅಗಾಧವಾದುದು ! (ರೋಮಾಪುರದವರಿಗೆ 11:33 ULB)

    • " ಓಹ್ ! ದೇವರ ಜ್ಞಾನವು ವಿವೇಕವೂ ಐಶ್ವರ್ಯದಂತೆ ಅಗಾಧವಾದುದು !
  1. ನಿಮ್ಮ ಭಾಷೆಯಲ್ಲಿರುವ ಪರಿಣಾಮಕಾರಿಯಾದ ಭಾವಸೂಚಕ ಪದವನ್ನು ಬಳಸಿ. “wow”! ಎಂಬ ಪದ ಕೆಳಗಿನ ಉದಾಹರಣೆಗಳಲ್ಲಿ ಅವರು ಆಶ್ಚರ್ಯಚಕಿತರಾದ ಬಗ್ಗೆ ತಿಳಿಸುತ್ತದೆ. "ಓಹ್ ! " " ಇಲ್ಲ "ಎಂಬ ಪದಗಳು ಯಾವುದೋ ಭಯಂಕರವಾದ, ಸಹಿಸಲು ಅಸಾಧ್ಯವಾದ ಘಟನೆ ನಡೆದ ಬಗ್ಗೆ ಸೂಚಿಸುವ ಪದಗಳಾಗಿವೆ.
  • ಅವರು ಅತ್ಯಂತ ಆಶ್ವರ್ಯಪಟ್ಟು " ಇವನು ಎಲ್ಲವನ್ನು ಸರಿಮಾಡುತ್ತಾನೆ! " ಅಂದರು. ಈತನ ಕಿವುಡರನ್ನು ಕೇಳುವಂತೆ, ಮೂಕರನ್ನು ಮಾತನಾಡಿಸುವಂತೆ ಮಾಡುತ್ತಾನೆ." ಅಂದುಕೊಂಡರು (ಮಾರ್ಕ 7:36 ULB)

    • " ಅವರು ಅತ್ಯಂತ ಆಶ್ಚರ್ಯಗೊಂಡು "ವಾವ್! ಎಂದರು. ಈತನು ಎಲ್ಲವನ್ನು ಚೆನ್ನಾಗಿ ಮಾಡುತ್ತಾನೆ. ಈತನ ಕಿವುಡರಿಗೆ ಕೇಳುವಂತೆ, ಮೂಕರನ್ನು ಮಾತನಾಡುವಂತೆ ಸಹಾ ಮಾಡುವನು.
  • ಅಯ್ಯೋ ! ಕರ್ತನಾದ ಯೆಹೋವನೇ ! ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ! (ನ್ಯಾಯಪಾಲಕರು 6:22 ULB)

    • "ಅಯ್ಯೋ ! ಇಲ್ಲ !, ಕರ್ತನೇ, ಯೆಹೋವನೇ ! ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆ !
  1. ನಿಮ್ಮ ಭಾಷೆಯಲ್ಲಿ ಪರಿಣಾಮಕಾರಿ ಭಾವಸೂಚಕ ಪದವಿದ್ದರೆ ಬಳಸಬಹುದು.
  • ಅಯ್ಯೋ !, ಕರ್ತನೇ, ಯೆಹೋವನೇ ! ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ! (ನ್ಯಾಯಪಾಲಕರು 6:22 ULB)

    • ಕರ್ತನೇ, ಯೆಹೋವನೇ ! ನನಗೆ ಏನಾಗುತ್ತದೆ ? ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ !
    • ಸಹಾಯಮಾಡು, ಕರ್ತನೇ, ಯೆಹೋವನೇ! ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ !
  1. ವಾಕ್ಯದಲ್ಲಿ ಯಾವಭಾಗ ಪರಿಣಾಮಕಾರಿಯಾದ ಭಾವನೆಯನ್ನು ವ್ಯಕ್ತಪಡಿಸುತ್ತದೋ ಅದನ್ನು ಸೂಕ್ತಪದದಿಂದ ವಿಶೇಷ ಒತ್ತು ನೀಡಿ
  • >ಹೇಗೆಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ಆತನ ಮಾರ್ಗಗಳು ಕಂಡುಹಿಡಿಯಲು ಅಸಾಧ್ಯ.

    • ಆತನ ನ್ಯಾಯ ತೀರ್ಮಾನಗಳು ಪರಿಶೀಲನೆಗೆ ಅಗಮ್ಯವಾದುದು, ಆತನ ಮಾರ್ಗಗಳು ಕಂಡುಹಿಡಿಯಲು ಅಸಾಧ್ಯ !
  1. ಭಾಷಾಂತರ ಮಾಡುವ ಭಾಷೆಯಲ್ಲಿ ಪರಿಣಾಮಕಾರಿಯಾಗಿ ತಿಳಿಸಲು ಸಾಧ್ಯವಾಗದಿದ್ದರೆ ಎಂತಹ ಭಾವನೆಗಳು ವ್ಯಕ್ತವಾಗಿದೆ ಎಂಬುದನ್ನು ಸರಳವಾಗಿ ತಿಳಿಸಿ.
  • ಯೆಹೋವನು ದೂತನು (ದೇವದೂತನು) ತನ್ನೊಂದಿಗೆ ಮಾತನಾಡುತ್ತಿರುವನು ಎಂದು ಗಿದ್ಯೋನನು ಅರ್ಥಮಾಡಿಕೊಂಡನು ಗಿದ್ಯೋನನು "ಆಹ್ , ಅಯ್ಯೋ ಕರ್ತನೇ, ಯೆಹೋವನೇ ಎಂದು ಕೂಗಿದನು. ಯೆಹೊವನೇ ಕರ್ತನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ! ಎಂದು ಕೂಗಿದನು. (ನ್ಯಾಯಸ್ಥಾಪಕರು 6:22 ULB)

    • " ಇದು ಯೆಹೋವನ ದೂತನು ಎಂದು ಗಿಡಿಯೋನನಿಗೆ ಅರ್ಥವಾಯಿತು ಅವನು ಭಯಭೀತನಾದನು, ದಿಗ್ಬ್ರಮೆಯಿಂದ ಅಯ್ಯೋ !, ಕರ್ತನೇ, ಯೆಹೋವನೇ !ಎಂದು ಕೂಗಿದನು. ಯೆಹೋವನೇ ಕರ್ತನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ! ಎಂದು ಕೂಗಿದನು. (ನ್ಯಾಯಸ್ಥಾಪಕರು 6:22 ULB)

Connecting Words

Translation Manual :: Just-in-Time Learning Modules :: Sentences :: Connecting Words

Quotes

Translation Manual :: Just-in-Time Learning Modules :: Quotes

ಉದ್ಧರಣ ಮತ್ತು Quote Margins/ ಉಲ್ಲೇಖ ವಾಕ್ಯಗಳ ಅಂಚು.

Translation Manual :: Just-in-Time Learning Modules :: Quotes :: Quotations and Quote Margins

ವಿವರಣೆ

ನಾವು ಬೇರೊಬ್ಬರು ಹೇಳಿದ ಮಾತುಗಳನ್ನು ಹೇಳುವಾಗ, ಯಾರು ಈ ಮಾತುಗಳನ್ನು ಹೇಳಿದರು,ಯಾರಬಳಿ ಈ ಮಾತನ್ನು ಹೇಳಿದರು ಮತ್ತು ಅವರು ಏನು ಹೇಳಿದರು? ಎಂದು ತಿಳಿಸುತ್ತವೆ. ಯಾರು ಮಾತಾಡಿದರು, ಯಾರನ್ನು ಉದ್ದೇಶಿಸಿ ಮಾತನಾಡಿದರು ಎಂಬುದನ್ನು ತಿಳಿಸುವ ಮಾತುಗಳು quote margin. ಉದ್ಧರಣ ವಾಕ್ಯಗಳು ಒಬ್ಬ ವ್ಯಕ್ತಿ ಹೇಳಿದ ಮಾತುಗಳನ್ನು ಉಲ್ಲೇಖನ. (ಉಲ್ಲೇಖಿತ) ಎಂದು ಹೇಳುತ್ತಾರೆ (ಇದನ್ನು quote. ಉದ್ಧರಣ ವಾಕ್ಯ ಎಂದು ಕರೆಯುತ್ತೇವೆ)

ಕೆಲವು ಭಾಷೆಯಲ್ಲಿ ಈ ಉದ್ಧರಣ ವಾಕ್ಯಅಥವಾ ಪದ ಮೊದಲು, ಕೊನೆಯಲ್ಲಿ ಅಥವಾ ಮಧ್ಯದಲ್ಲಿ ಎರಡು ವಾಕ್ಯಗಳ ಮಧ್ಯದಲ್ಲಿ ಬರಬಹುದು. ಈ ತರದ ಉದ್ಧರಣ ವಾಕ್ಯಗಳ ಅಂಚು ಕೆಳಗೆ ಕೊಟ್ಟಿರುವಂತೆ ಇದೆ.

  • ಅವಳು ಹೇಳಿದಳು , " ಊಟ ಸಿದ್ಧವಾಗಿದೆ. ಬಂದು ಊಟ ಮಾಡಿ."
  • " ಊಟ ಸಿದ್ಧವಿದೆ." ಬಂದು ಊಟ ಮಾಡಿ" ಎಂದು ಅವಳು ಹೇಳಿದಳು .
  • “ಊಟ ಸಿದ್ಧವಾಗಿದೆ." ಎಂದು ಅವಳು ಹೇಳಿದಳು . " ಬಂದು ಊಟ ಮಾಡಿ" ಇನ್ನು ಕೆಲವು ಭಾಷೆಯಲ್ಲಿ ಕೋಟ್ ಮಾರ್ಜಿನ್ ಗಳು “ಹೇಳಿದರು /ಹೇಳಿದ” ಎಂಬ ಅರ್ಥ ನೀಡುವ ಒಂದಕ್ಕಿಂತ ಹೆಚ್ಚು ಕ್ರಿಯಾಪದಗಳನ್ನು ಹೊಂದಿರುತ್ತದೆ ಎಂದು. >ಆದರೆ ಆ ಮಗುವಿನ ತಾಯಿ ಅದು -ಬೇಡ ಯೋಹಾನನೆಂದು ಹೆಸರಿಡಬೇಕು ಎಂದು ಹೇಳಿದಳು." (ಲೂಕ 1:60 ULB)

ಇಂತಹ ಬರಹಗಳನ್ನು ಬರೆಯುವಾಗ ಹೇಳಿದ ಮಾತುಗಳನ್ನು ಉದ್ಧರಣ ಚಿಹ್ನೆಗಳಿಂದ (" "). ಗುರುತಿಸಲಾಗುವುದು. ಕೆಲವು ಭಾಷೆಯಲ್ಲಿ (« »), ಇಂತಹ ಗುರುತುಗಳನ್ನು ಬಳಸುತ್ತಾರೆ.

ಕಾರಣ ಇದೊಂದು ಭಾಷಾಂತರ ವಿಷಯ.

  • ಭಾಷಾಂತರಗಾರರು ಉದ್ಧರಣ ಚಿಹ್ನೆಗಳನ್ನು ಸಹಜವಾಗಿ, ಸ್ಪಷ್ಟವಾಗಿ ಅವರವರ ಭಾಷೆಯಲ್ಲಿ ಬಳಸಬೇಕು.
  • ಭಾಷಾಂತರಗಾರರು ಎಲ್ಲಿ ಉದ್ಧರಣ ಚಿಹ್ನೆಗಳನ್ನು ಬಳಸಬೇಕು ಒಂದು ಅಥವಾ ಎರಡು ಕ್ರಿಯಾಪದಗಳ ಅರ್ಥವನ್ನು ಹೇಗೆ, ಎಲ್ಲಿ ಬಳಸಬೇಕು ಎಂಬುದನ್ನು ತಿಳಿದಿರಬೇಕು.
  • ಭಾಷಾಂತರಗಾರರು ಇಂತಹ ಚಿಹ್ನೆಗಳನ್ನು ಯಾವ ಉದ್ಧರಣ ವಾಕ್ಯಗಳೊಂದಿಗೆ ಬಳಸಬೇಕು ಎಂದು ನಿರ್ಧರಿಸಬೇಕು.

###ಸತ್ಯವೇದದಲ್ಲಿನ ಉದಾಹರಣೆಗಳು.

Quote margin before the quote/ ಉದ್ಧರಣ ವಾಕ್ಯದ ಮೊದಲು ಉದ್ಧರಣ ಚಿಹ್ನೆಗಳನ್ನು ಬಳಸಬೇಕು.

ಜಕರೀಯನು ಆ ದೂತನಿಗೆ , " ಇದು ನಡೆಯುತ್ತದೆ ಎಂಬುದನ್ನುನಾನು ಹೇಗೆ ತಿಳಿದುಕೊಳ್ಳಲಿ? ನಾನು ಮುದುಕನು : ನನ್ನ ಹೆಂಡತಿಯೂ ದಿನ ಹೋದವಳು." ಎಂದು ಹೇಳಿದನು." (ಲೂಕ 1:18 ULB)

ಗ ಕೆಲವು ಸುಂಕದವರು ಸಹ ದೀಕ್ಷಾ ಸ್ನಾನ ಮಾಡಿಸಿಕೊಳ್ಳಲು ಬಂದು "ಗುರುವೇ, ನಾವೇನು ಮಾಡಬೇಕು ಎಂದು ಕೇಳೀದಾಗ , (ಲೂಕ 3:12 ULB)

ಅವನು ಅವರಿಗೆ,“ನೇಮಿಸಿದ ಹಾಸಲಿಗಿಂತ ಹೆಚ್ಚಾಗಿ ಏನೂ ಎಳಕೊಳ್ಳಬೇಡಿರಿ, ಹೆಚ್ಚು ದುಡ್ಡು ಕಸಕೊಳ್ಳಬೇಡಿರಿ.” ಎಂದು ಹೇಳಿದನು (ಲೂಕ 3:13 ULB)

Quote margin after the quote ಉದ್ಧರಣ ಚಿಹ್ನೆಗಳ ನಂತರ ಬಂದ ಉದ್ಧರಣ ವಾಕ್ಯಗಳು.

ಯೆಹೋವನು ಮನಮರುಗಿ ಈ ದರ್ಶನವು. “ನೆರವೇರದು,” ಎಂದು ಹೇಳಿದನು. (ಆಮೋಸ 7:3 ULB)

####” ಉದ್ಧರಣ ವಾಕ್ಯದ ಎರಡು ಭಾಗದ ಮಧ್ಯಭಾಗದಲ್ಲಿ ಬರುವ ಕೋಟ್ ಮಾರ್ಜಿನ್

ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು " ನಾನು ಅವರಿಗೆ ವಿಮುಖನಾಗಿ, " ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು, ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ,ಎಂದು ಹೇಳಿದನು (ಧರ್ಮೋಪದೇಶ ಕಾಂಡ 32:20 ULB)

"ಆದುದರಿಂದ ನಿಮ್ಮಲ್ಲಿ ಪ್ರಮುಖರು ನನ್ನೊಂದಿಗೆ ಬರಲಿ,"ಎಂದು ಹೇಳಿದನು. ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)

"—ಇಗೋ ನಾನು ನನ್ನ ಜನರಾದ ಇಸ್ರಾಯೇಲರನ್ನು ಯೆಹೂದ್ಯರನ್ನು ಅವರ ದುರವಸ್ಥೆಯಿಂದ “ತಪ್ಪಿಸುವ ದಿನಗಳು ಬರುವವು " —” ನಾನು ಅವರನ್ನು ಅವರ ಪಿತೃಗಳಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು " (ಯೆರೇಮಿಯ 30:3 ULB)

ಭಾಷಾಂತರ ಕೌಶಲ್ಯಗಳು.

  1. ಎಲ್ಲಿ ಉದ್ಧರಣ ಚಿಹ್ನೆಗಳನ್ನು ಹಾಕಬೇಕು ಎಂಬುದನ್ನು ನಿರ್ಧರಿಸಿ.
  2. “ಹೇಳಿದ.” “ಹೇಳಿದರು.” ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸುವ ಬಗ್ಗೆ ನಿರ್ಧರಿಸಬೇಕು.

####ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು

  1. ಎಲ್ಲಿ ಉದ್ಧರಣ ಚಿಹ್ನೆಗಳನ್ನುಹಾಕಬೇಕು ಎಂಬುದನ್ನು ನಿರ್ಧರಿಸಿ.
  • " ಆದುದರಿಂದ," ನಿಮ್ಮ ಪ್ರಮುಖರು ನನ್ನೊಂದಿಗೆ ಬರಲಿ," ಎಂದು ಹೇಳಿದನು.
    ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)
  • ಆದುದರಿಂದ ನಮ್ಮೊಂದಿಗೆ ಬರಲು ತಕ್ಕವರು ಬರಲಿ,ಎಂದು ಹೇಳಿದನು.
    ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)
  • ಆದುದರಿಂದ ಅಲ್ಲಿಗೆ ಯಾರು ಹೋಗಬೇಕಾಗಿದೆಯೋ ಅವರು ನಮ್ಮೊಂದಿಗೆ ಬರಲಿ. ಆ ಮನುಷ್ಯನಲ್ಲಿ ಅನುಚಿತವೇನಾದರು ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ," ಎಂದು ಹೇಳಿದನು .
  • " ಆದುದರಿಂದ ನಮ್ಮೊಂದಿಗೆ ಯಾರು ಬರಲು ಸಿದ್ಧರಿದ್ದಾರೋ ಅವರು ಬರಲಿ," ಎಂದು ಹೇಳಿದನು. ಆ ಮನುಷ್ಯನಲ್ಲಿ ದೋಷವೇನಾದರು ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ,"
  1. “ಹೇಳಿದ.” “ಹೇಳಿದರು.” ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸುವ ಬಗ್ಗೆ ನಿರ್ಧರಿಸಬೇಕು.
  • ಆದರೆ ಅವನ ತಾಯಿ ಅದು ಬೇಡ , ಅದರ ಬದಲು ಯೋಹಾನ ಎಂದು ಹೆಸರಿಡಬೇಕು ಎಂದು ಹೇಳಿದಳು." (ಲೂಕ1:60 ULB)
    • ಆದರೆ ಅವನ ತಾಯಿಅದು ಬೇಡ ಅದರ ಬದಲು ಯೋಹಾನ ಎಂದು ಕರೆಯಬೇಕು ಎಂದು ಉತ್ತರಿಸಿದಳು , ಅವನ ತಾಯಿ ಅವನನ್ನು ಯೋಹಾನನೆಂದು ಕರೆಯಬೇಕೆಂದಳು , ಅವನ ತಾಯಿ ಈ ರೀತಿ ಉತ್ತರಿಸಿದಳು , ಬೇಡ, ಅದರ ಬದಲು ಯೋಹಾನನೆಂದು ಕರೆಯಬೇಕೆಂದಳು ,.

ನೇರವಾದ ಮತ್ತು ಪರೋಕ್ಷವಾದ ಉಲ್ಲೇಖನಗಳು

Translation Manual :: Just-in-Time Learning Modules :: Quotes :: Direct and Indirect Quotations

ವಿವರಣೆ

ಉಲ್ಲೇಖನೆಗಳ ಎರಡು ವಿಧಗಳು: ನೇರವಾದ ಮತ್ತು ಪರೋಕ್ಷವಾದ ಉಲ್ಲೇಖನಗಳು

ಹೇಳಿಕೆ ನೀಡಿದವನ ದೃಷ್ಟಿಕೋನದಿಂದ ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ನೀಡುವ ನೇರವಾದ ವರದಿಯನ್ನು ** ನೇರವಾದ ಉಲ್ಲೇಖನಗಳು** ಎಂದು ಕರೆಯುತ್ತಾರೆ. ಈ ರೀತಿಯಾದ ಉಲ್ಲೇಖನಗಳು ಹೇಳಿಕೆ ನೀಡಿದ ಮೂಲ ವ್ಯಕ್ತಿಯದಾಗಿರುವುದು ಎಂದು ಜನರು ತಿಳಿದಿರುತ್ತಾರೆ. ಯೋಹಾನನು ತನ್ನನ್ನು ಕುರಿತು “ನಾನು” ಎಂದು ಹೇಳಿರುತ್ತಾನೆ. ಅವನ ಮಾತುಗಳನ್ನು ಮತ್ತೊಬ್ಬ ವ್ಯಕ್ತಿ ಇತರರೊಂದಿಗೆ ಹೇಳುವಾಗ “ನಾನು” ಎಂದು ನುಡಿಯುವಾಗ ಅದು ಯೋಹಾನನ್ನನ್ನು ಪ್ರತಿನಿಧಿಸುತ್ತದೆ ಎಂದು ನೆನಪಿಡಬೇಕು. ಕೆಲವು ಭಾಷೆಗಳಲ್ಲಿ ಇದನ್ನು ಯೋಹಾನನ ಮಾತುಗಳು ಎಂದು ತೋರಿಸಲು ಅದನ್ನು “ “ ಚಿಹ್ನೆಗಳನ್ನು ಬಳಸುತ್ತಾರೆ.

  • ಯೋಹಾನನು ಹೇಳಿದನು,” "ನಾನು, ನಾನುಯಾವ ಸಮಯದಲ್ಲಿ ಬರುವೆನೋ ತಿಳಿಯದು” ಎಂದು

ಹೇಳಿಕೆ ನೀಡಿದವನ ದೃಷ್ಟಿಕೋನದಿಂದಲ್ಲದೆ ತನ್ನ ದೃಷ್ಟಿಕೋನದಿಂದ ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ನೀಡುವ ವರದಿಯನ್ನು ** ಪರೋಕ್ಷವಾದ ಉಲ್ಲೇಖನಗಳು** ಎಂದು ಕರೆಯುತ್ತಾರೆ. ಇಲ್ಲಿ ಕೆಲವು ಸಂದರ್ಭಗಳಲ್ಲಿ ಸರ್ವ ನಾಮಗಳಲ್ಲಿ ಬದಲಾವಣೆಗಳನ್ನು ಹೊಂದಿರುತ್ತವೆ. ಇಲ್ಲಿ ಸಮಯ ಪದಗಳ ಆಯ್ಕೆಗಳಲ್ಲಿ ಬದಲಾವಣೆಯನ್ನು ಗಮನಿಸಬಹುದು. ಕೆಳಗೆ ಕಾಣುವ ಉದಾಹರಣೆಗಳಲ್ಲಿ ನಿರೂಪಕನು ಯೋಹಾನನನ್ನು “ಅವನು” ಎಂದು ಉಲ್ಲೇಕಿಸುತ್ತಾನೆ ಮತ್ತು “ಆಗುತ್ತದೆ” ಎಂಬ ಪದದ ಬದಲಿಗೆ “ಆಗಬಹುದು” ಎಂಬ ಪದವನ್ನು ಉಪಯೋಗಿಸುತ್ತಾನೆ.

  • ಯೋಹಾನನು ಹೇಳಿದನು,” "ನಾನು, ನಾನುಯಾವ ಸಮಯದಲ್ಲಿ ಬರುವೆನೋ ತಿಳಿಯದು” ಎಂದು

ಭಾಷಾಂತರದಲ್ಲಿ ಏಕೆ ಈ ವ್ಯತ್ಯಾಸಗಳಿವೆ?

ಕೆಲವು ಭಾಷೆಗಳಲ್ಲಿ ವರದಿಯಾದ ಮಾತುಗಳನ್ನು ನೇರವಾದ ಮತ್ತು ಪರೋಕ್ಷವಾದ ಉಲ್ಲೇಖನಗಳ ಮೂಲಕ ತಿಳಿಸಬಹುದು. ಇನ್ನು ಕೆಲವು ಭಾಷೆಗಳಲ್ಲಿ ಒಂದರ ಬದಲು ಇನ್ನೊಂದನ್ನು ಉಪಯೋಗಿಸಬಹುದು. ಒಂದಕ್ಕಿಂತ ಹೆಚ್ಚಾಗಿ ಇನ್ನೊಂದನ್ನು ಉಪಯೋಗಿಸುವಾಗ ಅದರಲ್ಲಿ ನಿರ್ಧಿಷ್ಟವಾದ ಅರ್ಥವಿರುವುದು. ಆದ್ದರಿಂದ ಅನುವಾದಕರು ನೇರವಾದ ಅಥವಾ ಪರೋಕ್ಷವಾದ ಉಲ್ಲೇಖನಗಳ ಮೂಲಕ ತಿಳಿಸಿದರೆ ಸರಿಹೊಂದಬಹುದು ಎಂಡ್ ಯೋಚಿಸಬೇಕು

ಸತ್ಯವೇದದ ಉದಾಹರಣೆಗಳು

ಈ ವಾಕ್ಯಗಗಳಲ್ಲಿ ನೇರವಾದ ಅಥವಾ ಪರೋಕ್ಷವಾದ ಉಲ್ಲೇಖನಗಳನ್ನು ಕಾಣಬಹುದು. ಈ ವಿವರಣೆಗಳಲ್ಲಿ ನಾವು

ನೀನು ಯಾರಿಗೂ ಹೇಳಬಾರದು ಎಂದು ಅವನಿಗೆ ತಿಳಿಸಿ, ಅವನಿಗೆ, “ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಕ ಮಾಡಿರುವುದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು. ಅದು ಜನರಿಗೆ ಸಾಕ್ಷಿಯಾಗಿರಲಿ” ಎಂದನು. (ಲೂಕ 5:14 ULT)

  • ಪರೋಕ್ಷವಾದ ಉಲ್ಲೇಖ. ನೀನು ಯಾರಿಗೆ ಹೇಳಬೇಡ, ಎಂದು ಹೇಳಿದನು, ನೇರವಾದ ಉಲ್ಲೇಖ, “ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ

ದೇವರ ರಾಜ್ಯ ಯಾವಾಗ ಬರುವುದು ಎಂದು ಪರಿಸಾಯರು ಯೇಸುವನ್ನು ಪ್ರಶ್ನಿಸಿದರು. ಅದಕ್ಕೆ ಯೇಸು ಅವರಿಗೆ, “ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವಂತದ್ದಲ್ಲ, ‘ಇಗೋ ಇಲ್ಲಿದೆ’ ಅಥವಾ ‘ಅಗೋ ಅಲ್ಲಿದೆ’ ಎಂದು ಹೇಳುವುದಕ್ಕಾಗದು. ದೇವರ ರಾಜ್ಯ ನಿಮ್ಮಲ್ಲಿಯೇ ಅದೇ ಎಂದು ತಿಳಿದುಕೊಳ್ಳಿರಿ." (ಲೂಕನು 17:20-21 ULT)

  • ಪರೋಕ್ಷವಾದ ಉಲ್ಲೇಖಗಳು, ಪರಿಸಾಯರಿಂದ ಪ್ರಶ್ನಿಸಲ್ಪಟ್ಟಾಗ, ದೇವರ ರಾಜ್ಯ ಯಾವಾಗ ಬರುವುದು,
  • ನೇರವಾದ ಉಲ್ಲೇಖಗಳು ”ಯೇಸು ಅವರಿಗೆ ಹೇಳಿದ್ದೇನೆಂದರೆ, “ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವಂತದ್ದಲ್ಲ, ‘ಇಗೋ ಇಲ್ಲಿದೆ’ ಅಥವಾ ‘ಅಗೋ ಅಲ್ಲಿದೆ’ ಎಂದು ಹೇಳುವುದಕ್ಕಾಗದು. ದೇವರ ರಾಜ್ಯ ನಿಮ್ಮಲ್ಲಿಯೇ ಅದೇ ಎಂದು ತಿಳಿದುಕೊಳ್ಳಿರಿ."
  • ನೇರವಾದ ಉಲ್ಲೇಖಗಳು, ‘‘ಇಗೋ ಇಲ್ಲಿದೆ’ ’ ಅಥವಾ ‘ಅಗೋ ಅಲ್ಲಿದೆ '’ ಎಂದು ಹೇಳುವುದಕ್ಕಾಗದು.

ಭಾಷಾಂತರದ ಕೌಶಲ್ಯಗಳು

ಮೂಲ ಪ್ರತಿಯಲ್ಲಿರುವ ಉಲ್ಲೇಖಗಳು ನಿಮ್ಮ ಭಾಷೆಯಲ್ಲಿ ಸರಿಯಾಗಿ ಉಪಯೋಗಿಸಲು ಸಾಧ್ಯವಿದ್ದರೆ ಅದನ್ನೇ ಉಪಯೋಗಿಸಿರಿ. ಹಾಗಿಲ್ಲದಿದ್ದರೆ ಈ ಮುಂದಿನ ವಿಧಾನಗಳನ್ನು ಉಪಯೋಗಿಸಿರಿ.

  1. ನೇರವಾದ ಉಲ್ಲೇಖವನ್ನು ನಿಮ್ಮ ಭಾಷೆಯಲ್ಲಿ ಸರಿಯಾದ ರೀತಿಯಲ್ಲಿ ಉಪಯೋಗಿಸಲು ಸಾಧ್ಯವಾಗದಿದ್ದರೆ, ಅದನ್ನು ಪರೋಕ್ಷವಾದ ಉಲ್ಲೇಖವಾಗಿ ಉಪಯೋಗಿಸಿರಿ.
  2. ಪರೋಕ್ಷವಾದ ಉಲ್ಲೇಖವನ್ನು ನಿಮ್ಮ ಭಾಷೆಯಲ್ಲಿ ಸರಿಯಾದ ರೀತಿಯಲ್ಲಿ ಉಪಯೋಗಿಸಲು ಸಾಧ್ಯವಾಗದಿದ್ದರೆ, ಅದನ್ನು ನೇರವಾದ ಉಲ್ಲೇಖವಾಗಿ ಉಪಯೋಗಿಸಿರಿ.

ಭಾಷಾಂತರದ ಕೌಶಲ್ಯಗಳು ಉಪಯೋಗಿಸಲಾದ ಉದಾಹರಣೆಗಳು.

  1. ನೇರವಾದ ಉಲ್ಲೇಖವನ್ನು ನಿಮ್ಮ ಭಾಷೆಯಲ್ಲಿ ಸರಿಯಾದ ರೀತಿಯಲ್ಲಿ ಉಪಯೋಗಿಸಲು ಸಾಧ್ಯವಾಗದಿದ್ದರೆ, ಅದನ್ನು ಪರೋಕ್ಷವಾದ ಉಲ್ಲೇಖವಾಗಿ ಉಪಯೋಗಿಸಿರಿ.
  • ಯಾರಿಗೂ ಹೇಳಬಾರದು ಎಂದು ಸೂಚಿಸಿದನು, ಆದರೆ ಅವನಿಗೆ, "ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಕ ಮಾಡಿರುವುದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು. ಅದು ಜನರಿಗೆ ಸಾಕ್ಷಿಯಾಗಿರಲಿ” ಎಂದು ಹೇಳಿದನು. (ಲೂಕ 5:14 ULT) ಯಾರಿಗೂ ಹೇಳಬಾರದು ಎಂದು ಸೂಚಿಸಿದನು, ಆದರೆ ಆತನು ಅವನಿಗೆ, "ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಕ ಮಾಡಿರುವುದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು. ಅದು ಜನರಿಗೆ ಸಾಕ್ಷಿಯಾಗಿರಲಿ .” ಎಂದು ಹೇಳಿದನು.
  1. ಪರೋಕ್ಷವಾದ ಉಲ್ಲೇಖವನ್ನು ನಿಮ್ಮ ಭಾಷೆಯಲ್ಲಿ ಸರಿಯಾದ ರೀತಿಯಲ್ಲಿ ಉಪಯೋಗಿಸಲು ಸಾಧ್ಯವಾಗದಿದ್ದರೆ, ಅದನ್ನು ನೇರವಾದ ಉಲ್ಲೇಖವಾಗಿ ಉಪಯೋಗಿಸಿರಿ
  • ಯಾರಿಗೂ ಹೇಳಬಾರದು ಎಂದು ಸೂಚಿಸಿದನು, ಆದರೆ ಆತನು ಅವನಿಗೆ, "ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಕ ಮಾಡಿರುವುದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು. ಅದು ಜನರಿಗೆ ಸಾಕ್ಷಿಯಾಗಿರಲಿ ಎಂದು ಹೇಳಿದನು” (ಲೂಕ 5:14 ULT) "ಯಾರಿಗೂ ಹೇಳಬಾರದುಎಂದು * ಅವನು ಸೂಚಿಸಿದನು. ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಕ ಮಾಡಿರುವುದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು. ಅದು ಜನರಿಗೆ ಸಾಕ್ಷಿಯಾಗಿರಲಿ”

ನೀವು ಉಲ್ಲೇಖಗಳ ವಿಡಿಯೋವನ್ನು http://ufw.io/figs_quotations. ರಲ್ಲಿ ನೋಡಬಹುದು


ಉಲ್ಲೇಖ ಚಿಹ್ನೆಗಳು.

Translation Manual :: Just-in-Time Learning Modules :: Quotes :: Quote Markings

ವಿವರಣೆ

ಕೆಲವು ಭಾಷೆಯಲ್ಲಿ ಉಲ್ಲೇಖ ವಾಕ್ಯಗಳನ್ನು (ಇನ್ನೊಬ್ಬರು ಹೇಳಿದ ಮಾತುಗಳನ್ನು ಯಾವುದೇ ಬದಲಾವಣೆ ಇಲ್ಲದೆ ಹೇಳುವುದು), ಬಳಸುವಾಗ ವಾಕ್ಯಭಾಗದಲ್ಲಿ ನೇರವಾದ ಮಾತುಗಳನ್ನು ಬಳಸುವುದು. ಇಂಗ್ಲೀಷ್ ಭಾಷೆಯಲ್ಲಿ ಉಲ್ಲೇಖ ಚಿಹ್ನೆಯನ್ನು " " ವಾಕ್ಯದ ಮೊದಲು ಮತ್ತು ನಂತರ ಬಳಸಲಾಗುವುದು ( ಮೊದಲು ಕೆಳಮುಖವಾದ ಅಲ್ಪವಿರಾಮ ಚಿಹ್ನೆಗಳು, ಆನಂತರ ಮೇಲ್ಮುಖವಾದ ಎರಡು ಅಲ್ಪವಿರಾಮ ಚಿಹ್ನೆಗಳು.

  • ಜಾನ್ ಹೇಳಿದನು, “ನಾನು ಯಾವಾಗ ಬರುತ್ತೇನೆ ಎಂಬುದು ನನಗೆ ಗೊತ್ತಿಲ್ಲ.” ಇನ್ನೊಬ್ಬರು ಹೇಳಿದ ಮಾತುಗಳನ್ನು ನಮ್ಮ ಮಾತುಗಳಲ್ಲಿ ಹೇಳುವಾಗ ಉಲ್ಲೇಖ ಚಿಹ್ನೆಗಳನ್ನು ಬಳಸುವುದಿಲ್ಲ.
  • ನಾನು ಯಾವಾಗ ಬರುತ್ತೇನೆ ಎಂದು ನನಗೆ ಗೊತ್ತಿಲ್ಲ ಎಂದು ಜಾನ್ ಹೇಳಿದನು. ಒಂದುವಾಕ್ಯದಲ್ಲಿ ಅನೇಕ ಉಲ್ಲೇಖ ವಾಕ್ಯಗಳು ಇದ್ದರೆ ಓದುಗರಿಗೆ ಯಾರು ಯಾವ ವಾಕ್ಯ ಹೇಳಿದರು ಎಂಬುದು ಗೊತ್ತಾಗುವುದಿಲ್ಲ. ಪರ್ಯಾಯ ರೀತಿಯ ಉಲ್ಲೇಖ ಚಿಹ್ನೆಗಳು ಬಹು ಎಚ್ಚರಿಕೆಯಿಂದ ಓದುವವರಿಗೆ ಒಂದು ಸಂಬಂಧವನ್ನು ತೊಡಗಿಸುತ್ತದೆ. ಇಂಗ್ಲೀಷ್ ಭಾಷೆಯಲ್ಲಿ ವಾಕ್ಯದ ಹೊರಗೆ ಜೋಡಿ ಉಲ್ಲೇಖ ಚಿಹ್ನೆಗಳು ಮತ್ತು ಅದರಲ್ಲಿರುವ ಮುಂದಿನ ಉಲ್ಲೇಖ ವಾಕ್ಯದ ಒಳಗೆ ಬಂದರೆ ಏಕ ಉಲ್ಲೇಖ ಚಿಹ್ನೆಗಳು ಒಳಗೊಂಡು ಬರುತ್ತವೆ. ಮುಂದಿನ ಉಲ್ಲೇಖ ಚಿಹ್ನೆಗಳು ಒಳಗೆ ಬಂದರೆ ಜೋಡಿ ಉಲ್ಲೇಖ ಚಿಹ್ನೆಗಳೊಂದಿಗೆ ಬರುತ್ತದೆ.
  • “ಜಾನ್ ‘ನಾನು ಯಾವಾಗ ಬರುತ್ತೇನೆ ಎಂದು ನನಗೆ ಗೊತ್ತಿಲ್ಲ.’” ಎಂದು ಹೇಳಿದ ಎಂದು ಮೇರಿ ಹೇಳಿದಳು. “ನಾನು ಯಾವಾಗ ಬರುತ್ತೇನೆ ಎಂದು ನನಗೆ ಗೊತ್ತಿಲ್ಲ.” ಎಂದು ಜಾನ್ ಹೇಳಿದ ಎಂದು ಮೇರಿ ತಿಳಿಸಿದಳು‘ ಎಂದು ಬಾಬ್ ಹೇಳಿದನು. ಕೆಲವು ಭಾಷೆಯಲ್ಲಿ ಇತರ ರೀತಿಯ ಉಲ್ಲೇಖ ಚಿಹ್ನೆಗಳನ್ನು ಬಳಸುತ್ತಾರೆ. ಇಲ್ಲಿ ಕೆಲವು ಉದಾಹರಣೆಗಳಿವೆ. : ‚ ’ „ " ‹ › « » ⁊ —.

ಸತ್ಯವೇದದಿಂದ ಉದಾಹರಣೆಗಳು.

ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ULB. ಸತ್ಯವೇದದಲ್ಲಿ ಬರುವ ಉಲ್ಲೇಖ ಚಿಹ್ನೆಗಳನ್ನು ತಿಳಿಸಿದೆ.

ಒಂದು ಉಲ್ಲೇಖವಾಕ್ಯದಲ್ಲಿ ಒಂದೇ ಒಂದು ಸಾಲು / ಪದರ ಇರುತ್ತದೆ.

ಉಲ್ಲೇಖ ವಾಕ್ಯದ ಮೊದಲಿನಲ್ಲಿ ಜೋಡಿ ಉಲ್ಲೇಖ ಚಿಹ್ನೆಗಳು ಕಂಡುಬರುತ್ತವೆ.

ಅದಕ್ಕೆ ಅರಸನು “ಆ ಮನುಷ್ಯನು ತಿಷ್ಬೀಯನಾದ ಎಲಿಯನೇ ಆಗಿರಬೇಕು” ಎಂದು ಹೇಳಿದನು. (2 ನೇ ಅರಸು 1:8 ULB)

####ಎರಡು ಸಾಲುಗಳುಳ್ಳ ಉಲ್ಲೇಖ ವಾಕ್ಯಗಳು.

ಎರಡು ಸಾಲುಗಳುಳ್ಳ ಉಲ್ಲೇಖ ವಾಕ್ಯಗಳಲ್ಲಿ ಏಕ ಉಲ್ಲೇಖ ಚಿಹ್ನೆಗಳು ಇರುತ್ತವೆ. ಇಲ್ಲಿ ಅಂತಹ ಪದಗಳನ್ನು ಗುರುತಿಸಿರುವುದರಿಂದ (ಮತ್ತು ಚಿಹ್ನೆಗಳು) ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ.

“ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ ’ ಎಂದು ಹೇಳಿದವನು ಯಾರು ?” ಎಂದು ಅವರು ಕೇಳಿದರು (ಯೋಹಾನ 5:12 ULB) … ಆತನು ತನ್ನ ಇಬ್ಬರು ಶಿಷ್ಯರನ್ನು ಕರೆದು " ನಿಮ್ಮೆದುರಿಗೆ ಇರುವ ಹಳ್ಳಿಗೆ ಹೋಗಿರಿ " ಎಂದು ಹೇಳಿ ಕಳುಹಿಸಿದನು. ಅಲ್ಲಿ ನೀವು ಹೋಗುತ್ತಿರುವಾಗಲೇ " ಅಲ್ಲಿ ಕಟ್ಟಿರುವ ಕತ್ತೆ ಮರಿಯನ್ನು ಕಾಣುವಿರಿ., ಇದುವರೆಗೂ ಅದರ ಮೇಲೆ ಯಾರೂ ಸವಾರಿ ಮಾಡಿಲ್ಲ ". " ಅದನ್ನು ಬಿಚ್ಚಿ ನನ್ನ ಬಳಿಗೆ ತನ್ನಿ ".ಎಂದು ಹೇಳಿದನು. " ನಿಮ್ಮನ್ನು ಕುರಿತು ಯಾರಾದರೂಯಾಕೆ ಬಿಚ್ಚುತ್ತೀರಿ ?'ಎಂದು ಕೇಳಿದರೆ ಅದು ನಮ್ಮ ಸ್ವಾಮಿಯವರಿಗೆ ಬೇಕಾಗಿದೆ ಎಂದು ಹೇಳಿರಿ. '"ಎಂದು ಹೇಳಿದನು. (ಲೂಕ 19:29-31 ULB)

ಮೂರು ಸಾಲುಗಳುಳ್ಳ ಉಲ್ಲೇಖ ವಾಕ್ಯ.

ಉಲ್ಲೇಖ ವಾಕ್ಯದಲ್ಲಿರುವ ಮೂರು ಸಾಲುಗಳು ಜೋಡಿ ಉಲ್ಲೇಖ ಚಿಹ್ನೆಗಳನ್ನು ಹೊಂದಿರುತ್ತವೆ. ಇಲ್ಲಿ ವಿಶೇಷವಾಗಿ ಗುರುತಿಸಿ ಹೇಳಿರುವುದು ನಿಮಗೆ ಸ್ಪಷ್ಟವಾಗಿ ತಿಳಿದುಕೊಳ್ಳಲು ತಿಳಿಸಿದೆ.

ಅಬ್ರಹಾಮನು - " ಈ ಸ್ಥಳದವರು ದೇವರ ಭಯವಿಲ್ಲದವರಾಗಿ,ನನ್ನ ಹೆಂಡತಿಯ ನಿಮಿತ್ತ ನನ್ನನ್ನು ಕೊಂದಾರೆಂದು ಭಾವಿಸಿದನು, ಎಂದು ಹೇಳಿದನು,’ “ಅದಲ್ಲದೆ ಆಕೆ ನಿಜವಾಗಿ ನನ್ನ ತಂಗಿ, ನನ್ನ ತಂದೆಯ ಮಗಳೇ.” ಆದರೆ ನನ್ನ ತಾಯಿಯ ಮಗಳಲ್ಲವಾದುದರಿಂದ ನನಗೆ ಹೆಂಡತಿಯಾದಳು." “ನಾನು ದೈವ ಸಂಕಲ್ಪದಿಂದ ತಂದೆಯ ಮನೆಯನ್ನು ಬಿಟ್ಟು ದೇಶಾಂತರ ಹೋಗುವುದಕ್ಕೆ ಹೊರಟಾಗ ನಾನು ಆಕೆಗೆ " ನಾವು ಹೋಗುವ ಎಲ್ಲಾ ಸ್ಥಳಗಳಲ್ಲಿಯೂ ನನಗೆ ನಿನ್ನಿಂದ ಒಂದು ಉಪಕಾರವಾಗಬೇಕು” ಎಂದನು. “ಅದೇನೆಂದರೆ ನೀನು ನನ್ನನ್ನು ಅಣ್ಣನೆಂಬುದಾಗಿ.”’ "ಹೇಳಬೇಕೆಂದು ಹೇಳಿದನು (ಆದಿಕಾಂಡ 20:10-13 ULB)

ನಾಲ್ಕು ಸಾಲುಗಳುಳ್ಳ ಉಲ್ಲೇಖ ವಾಕ್ಯಗಳು.

ನಾಲ್ಕು ಸಾಲುಗಳುಳ್ಳ ಉಲ್ಲೇಖ ವಾಕ್ಯದಲ್ಲಿ ಏಕ ಉಲ್ಲೇಖ ಚಿಹ್ನೆಗಳಿರುವ ಸಾಲುಗಳಿರುತ್ತವೆ. ಇಲ್ಲಿ ಅವುಗಳನ್ನುವಿಶೇಷವಾಗಿ ಗುರುತಿಸಿ ನಿಮಗೆ ಸ್ಪಷ್ಟಪಡಿಸಿದೆ.

ದೂತರು ಅರಸನ ಬಳಿಗೆ ಬಂದಾಗ ‘ನೀವು ಹಿಂತಿರುಗಿದ್ದು ಏಕೆ?’ ಎಂದು ಕೇಳಿದನು ಅದಕ್ಕೆ ಅವರು " ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ, ‘ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ ? ’ "ಯೆಹೋವನ ಹೆಸರಿನಲ್ಲಿ ಅವನಿಗೆ - ನೀನು ಉಕ್ರೇನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆಏಕೆ ಕಳುಹಿಸಿದೆ ? " ಇಸ್ರಾಯೇಲರಲ್ಲಿ ದೇವರಿಲ್ಲವೋ "? ಎಂದನು. " ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದಿಳಿಯದೆ ಸಾಯಲೇಬೇಕು "’" ಎಂದು ಹೇಳಿ ಆಜ್ಞಾಪಿಸಿದನು’" (2 ನೇ ಅರಸು 1:5-6 ULB)

ಉಲ್ಲೇಖ ಚಿಹ್ನೆಗಳ ತಂತ್ರಗಳು.

ಇಲ್ಲಿ ಕೆಲವು ಉದಾಹರಣೆಗಳು ಓದಗರು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಎಲ್ಲಿ ಉಲ್ಲೇಖ ವಾಕ್ಯಗಳು ಪ್ರಾರಂಭವಾಗುತ್ತದೆ ಮತ್ತು ಎಲ್ಲಿ ಮುಗಿಯುತ್ತವೆ, ಯಾರು ಯಾವಾಗ ಹೇಳಿದರು ಎಂಬುದನ್ನು ತಿಳಿಸುತ್ತದೆ.

  1. ನೇರವಾದ ಉಲ್ಲೇಖ ವಾಕ್ಯಗಳಲ್ಲಿ ತೋರಿಸಲು ಎರಡು ರೀತಿಯನ್ನು ಉಲ್ಲೇಖಗಳ ಗುರುತುಗಳು. ಇಂಗ್ಲೀಷಿನ ಪರ್ಯಾಯ ಜೋಡಿ ಉಲ್ಲೇಖಚಿಹ್ನೆಗಳು ಮತ್ತು ಏಕ ಉಲ್ಲೇಖಚಿಹ್ನೆಗಳು
  2. ಕೆಲವು ಉಲ್ಲೇಖ ವಾಕ್ಯಗಳನ್ನು / ಇನ್ನೊಬ್ಬರು ಮಾತನಾಡಿದ ಮಾತನ್ನು ನೀವು ನಿಮ್ಮ ಮಾತುಗಳಲ್ಲಿ ಹೇಳುವಾಗ ಕೆಲವು ಚಿಹ್ನೆಗಳನ್ನು ಮಾತ್ರ ಬಳಸಿ, ಉಲ್ಲೇಖಚಿಹ್ನೆಗಳನ್ನು ನೇರ ಮಾತುಗಳಿಗೆ ಮಾತ್ರ, ಮತ್ತು ಕೆಳಗೆ ಕೊಟ್ಟಿರುವ ವಾಕ್ಯಗಳಿಗೆ ಮಾತ್ರ ಬಳಸಿ.
  3. ಉಲ್ಲೇಖ ವಾಕ್ಯಗಳು ತುಂಬಾ ದೊಡ್ಡದಾಗಿದ್ದು, ಸಂಕೀರ್ಣ ವಾಕ್ಯಗಳ ಅನೇಕ ಚಿಕ್ಕ ಸಾಲುಗಳಿದ್ದರೆ ಆಗ ಮುಖ್ಯ ಅಂಶಗಳನ್ನುಮಾತ್ರ ಆಯ್ಕೆ ಮಾಡಿಕೊಂಡು ವಾಕ್ಯದೊಳಗಿರುವ ಉಲ್ಲೇಖ ವಾಕ್ಯಗಳಿಗೆ ಉಲ್ಲೇಖ ಚಿಹ್ನೆಗಳನ್ನು ಉಪಯೋಗಿಸಿ.

ಉಲ್ಲೇಖ ಚಿಹ್ನೆಗಳ ತಂತ್ರಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ULB ಸತ್ಯವೇದದಲ್ಲಿ ಪರ್ಯಾಯವಾಗಿ ಎರಡು ರೀತಿಯ ಉಲ್ಲೇಖ ಚಿಹ್ನೆಗಳನ್ನು ಉಲ್ಲೇಖ ವಾಕ್ಯಗಲ್ಲಿ ಹೇಗೆ ಬಳಸಬಹುದು ಎಂಬುದನ್ನು ಈ ಕೆಳಗೆ ತಿಳಿಸಿದೆ.

ಅವರು ಅವನನ್ನು ಕುರಿತು "ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ ಹೇಳಿದ್ದೇನೆಂದರೆ :ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ, ಯೆಹೋವನ ಹೆಸರಿನಲ್ಲಿ ಅವನಿಗೆ ಹೇಳಿದ್ದೇನೆಂದರೆ: ‘ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿ ವಿಚಾರಿಸುವುದಕ್ಕೆ ಕಳುಹಿಸುವುದು ಏಕೆ ? ಇಸ್ರಾಯೇಲರಲ್ಲಿ ದೇವರಿಲ್ಲವೋ ? “‘“ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದ ಇಳಿಯದೆ ಸಾಯಲೇ ಬೇಕು, ಎಂದು ಹೇಳಿರಿ ಎಂದು ಆಜ್ಞಾಪಿಸಿದನು”’” (2 ನೇ ಅರಸು 1:6 ULB)

  1. ಕೆಲವು ಉಲ್ಲೇಖ ವಾಕ್ಯಗಳನ್ನು ( ಇನ್ನೊಬ್ಬರು ಮಾತನಾಡಿದ ಮಾತನ್ನು ನೀವು ನಿಮ್ಮ ಮಾತುಗಳಲ್ಲಿ ಹೇಳುವಾಗ) ಕೆಲವು ಚಿಹ್ನೆಗಳನ್ನು ಮಾತ್ರ ಬಳಸಿ, ಉಲ್ಲೇಖಚಿಹ್ನೆಗಳನ್ನು ನೇರ ಮಾತುಗಳಿಗೆ ಮಾತ್ರ, ಕೆಳಗೆ ಕೊಟ್ಟಿರುವ ವಾಕ್ಯಗಳಿಗೆ ಮಾತ್ರ ಬಳಸಿ.

ಇಂಗ್ಲೀಷ್ ಭಾಷೆಯಲ್ಲಿ “that” ಎಂಬ ಪದ ಅಪರೋಕ್ಷ ಉಲ್ಲೇಖ ವಾಕ್ಯವನ್ನು (indirect speech) ಪರಿಚಯಿಸುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಅಪರೋಕ್ಷ (indirect quote) ವಾಕ್ಯಗಳಲ್ಲಿ “that” ಎಂಬ ಪದ ಹೇಗೆ ಬಳಕೆಯಾಗಿದೆ ಮತ್ತು ದೇವದೂತರು ಅರಸನಿಗೆ ಏನು ಹೇಳಿದರು ಎಂಬುದು ತಿಳಿದುಬರುತ್ತದೆ. indirect quote ಗಳಲ್ಲಿ direct quotes ಉಲ್ಲೇಖ ವಾಕ್ಯಗಳನ್ನು" and " ಎಂಬ ಪದದ ಮೂಲಕ ಹೇಗೆ ಬಳಸಲಾಗಿದೆ ಎಂದು ತಿಳಿಸಿದೆ.

ಅವರು ಅವನನ್ನು ಕುರಿತು " ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ ಹೇಳಿದ್ದೇನೆಂದರೆ :ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ, ಯೆಹೋವನ ಹೆಸರಿನಲ್ಲಿ ಅವನಿಗೆ ಹೇಳಿದ್ದೇನೆಂದರೆ: ‘ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿ ವಿಚಾರಿಸುವುದಕ್ಕೆ ಕಳುಹಿಸುವುದು ಏಕೆ ? ಇಸ್ರಾಯೇಲರಲ್ಲಿ ದೇವರಿಲ್ಲವೋ ? " ’ "ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದ ಇಳಿಯದೆ ಸಾಯಲೇ ಬೇಕು, ಎಂದು ಹೇಳಿರಿ ಎಂದು ಆಜ್ಞಾಪಿಸಿದನು " ’ " (2 ನೇ ಅರಸು 1:6 ULB)

  • ಅವರು ಅವನನ್ನು ಕುರಿತು ಅಂದರೆಒಬ್ಬ ಮನುಷ್ಯನು ಅವರನ್ನು ಎದುರುಗೊಂಡು ನಮಗೆ ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ ಯೆಹೋವನ ಹೆಸರಿನಲ್ಲಿ ಅವರಿಗೆ ಹೀಗೆ ಹೇಳಿದನು ಎಂದು ಹೇಳಿದರು : " ಏಕೆಂದರೆ ಅವರು ಇಸ್ರಾಯೇಲರಲ್ಲಿ ದೇವರಿಲ್ಲವೇನೋ ಬಳಿ ಎಂಬಂತೆ ಎಕ್ರೋನಿನ ದೇವರಾದ ಬಾಳ್ಜೆಬೂಬನ ವಿಚಾರಿಸುವುದಕ್ಕೆ ಹೋದರು. ಆದುದರಿಂದ ನೀನು ಹತ್ತಿದ ಮಂಚ ಇಳಿಯದೆ ಸಾಯುವಿ ಎಂದು ಹೇಳಲು ಆಜ್ಞಾಪಿಸಿದನು.
  1. ಉಲ್ಲೇಖ ವಾಕ್ಯಗಳು ತುಂಬಾ ದೊಡ್ಡದಾಗಿದ್ದು, ಸಂಕೀರ್ಣ ವಾಕ್ಯಗಳ ಅನೇಕ ಚಿಕ್ಕ ಸಾಲುಗಳಿದ್ದರೆ ಆಗ ಮುಖ್ಯ ಅಂಶಗಳನ್ನುಮಾತ್ರ ಆಯ್ಕೆ ಮಾಡಿಕೊಂಡು ವಾಕ್ಯದೊಳಗಿರುವ ಉಲ್ಲೇಖ ವಾಕ್ಯಗಳಿಗೆ ಉಲ್ಲೇಖ ಚಿಹ್ನೆಗಳನ್ನು ಉಪಯೋಗಿಸಿ

ಅವರು ಅವನನ್ನು ಕುರಿತು " ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ ಹೇಳಿದ್ದೇನೆಂದರೆ ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ, ಯೆಹೋವನ ಹೆಸರಿನಲ್ಲಿ ಅವನಿಗೆ ಹೀಗೆ ಹೇಳಿರಿ. ‘ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನ ಹತ್ತಿರ ವಿಚಾರಿಸುವುದಕ್ಕೆ ಕಳುಹಿಸುವುದು ಏಕೆ ? ಇಸ್ರಾಯೇಲರಲ್ಲಿ ದೇವರಿಲ್ಲವೋ ? " ’ "ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದ ಇಳಿಯದೆ ಸಾಯಲೇ ಬೇಕು, ಎಂದು ಹೇಳಿರಿ ಎಂದು ಆಜ್ಞಾಪಿಸಿದನು " ’ " (2 ನೇ ಅರಸು 1:6 ULB)

  • ಅವರು ಅವನಿಗೆ ಹೀಗೆ ಹೇಳಿದರು,

ಅವರು ಅವನನ್ನು ಕುರಿತು " ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ ಹೇಳಿದ್ದೇನೆಂದರೆ :ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ, ಯೆಹೋವನ ಹೆಸರಿನಲ್ಲಿ ಅವನಿಗೆ ಹೇಳಿದ್ದೇನೆಂದರೆ: ‘ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿ ವಿಚಾರಿಸುವುದಕ್ಕೆ ಕಳುಹಿಸುವುದು ಏಕೆ ? ಇಸ್ರಾಯೇಲರಲ್ಲಿ ದೇವರಿಲ್ಲವೋ ? " ಆದುದರಿಂದ ನೀನು ಹತ್ತಿದ ಮಂಚ ಇಳಿಯದೆ ಸಾಯುವಿ ಎಂದು ಹೇಳಲು ಆಜ್ಞಾಪಿಸಿದನು.


ಉದ್ಧರಣ ವಾಕ್ಯಗಳೊಳಗೆ ಉದ್ಧರಣ ವಾಕ್ಯಗಳು.

Translation Manual :: Just-in-Time Learning Modules :: Quotes :: Quotes within Quotes

###ವಿವರಣೆ

ಒಂದು ಉದ್ಧರಣಾವಾಕ್ಯದಲ್ಲಿ ಇನ್ನೊಂದು ಉದ್ಧರಣಾವಾಕ್ಯ ಇರಬಹುದು, ಉದ್ಧರಣಾವಾಕ್ಯ ಉದ್ಧರಣಾ ಸಾಲುಗಳ ಮೂಲಕ ನಾವು ಇವುಗಳನ್ನು ವಿವರಿಸಬಹುದು. ಉದ್ಧರಣಾವಾಕ್ಯದಲ್ಲಿ ಉದ್ದ ಸಾಲುಗಳು ಇದ್ದರೆ ಅವುಗಳನ್ನು ಅಂದರೆ ಪ್ರತಿಸಾಲುಗಳನ್ನು ವಿವರಿಸಿ ಹೇಳಬಹುದು. ಉದ್ಧರಣಾವಾಕ್ಯದಲ್ಲಿ ಅನೇಕ ಉದ್ಧರಣಾಸಾಲುಗಳಿದ್ದರೆ ಓದುಗರಿಗೆ ಯಾರು ಯಾರಿಗೆ ಯಾವ ವಾಕ್ಯವನ್ನು ಹೇಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕಷ್ಟವಾಗಬಹುದು. ಕೆಲವು ಭಾಷೆಯಲ್ಲಿ ನೇರ ಉದ್ಧರಣ ವಾಕ್ಯಗಳು ಮತ್ತು ಅಪರೋಕ್ಷ ಉದ್ಧರಣ ವಾಕ್ಯಗಳನ್ನು ಒಟ್ಟಿಗೆ ಬಳಸಿ ಹೇಳುವುದು ಸುಲಭವಾಗಿರುತ್ತದೆ.

ಇದಕ್ಕೆ ಕಾರಣ ಇದೊಂದು ಭಾಷಾಂತರ ತೊಡಕು

  1. ಉದ್ಧರಣವಾಕ್ಯದಲ್ಲಿ ಉದ್ಧರಣವಾಕ್ಯವಿದ್ದರೆ ಯಾರನ್ನು ಕುರಿತು ಮಾತನಾಡುತ್ತಿದ್ದಾರೆ ಎಂಬುದನ್ನು ಓದುಗರು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಉದಾಹರಣೆಗೆ ಒಂದು ಉದ್ಧರಣವಾಕ್ಯದಲ್ಲಿ “ನಾನು,” ಎಂಬ ಪದವಿದ್ದರೆ ಓದುಗರಿಗೆ “ನಾನು” ಎಂಬ ಪದ ಉದ್ಧರಣವಾಕ್ಯದಲ್ಲಿ ಒಳಗೆ ಮಾತನಾಡುತ್ತಿರುವ ವ್ಯಕ್ತಿಯ ಬಗ್ಗೆಯೋ, ಇಲ್ಲವೇ ಹೊರಗಿನ ಉದ್ಧರಣ ವಾಕ್ಯಕ್ಕೆ ಸಂಬಂಧಿಸಿದ್ದೋ ಎಂದು ಗುರುತಿಸಬೇಕು.
  2. ಇತರ ಕೆಲವು ಭಾಷೆಯಲ್ಲಿ ಉದ್ಧರಣ ವಾಕ್ಯದಲ್ಲಿ ಇಂತಹ ಉದ್ಧರಣವಾಕ್ಯಗಳು ಬಂದರೆ ವಿವಿಧ ರೀತಿಯ ವಾಕ್ಯಗಳನ್ನು ಬಳಸಿ ಸ್ಪಷ್ಟಪಡಿಸುತ್ತಾರೆ. ಅವರು ಕೆಲವು ವಾಕ್ಯಗಳನ್ನು ನೇರ ಉದ್ಧರಣವಾಕ್ಯಗಳನ್ನು ಮತ್ತು ಅಪರೋಕ್ಷ ಉದ್ಧರಣವಾಕ್ಯಗಳನ್ನು ಬಳಸುತ್ತಾರೆ.
  3. ಕೆಲವು ಭಾಷೆಯಲ್ಲಿ ಅಪರೋಕ್ಷ ಉದ್ಧರಣವಾಕ್ಯಗಳನ್ನು ಬಳಸುವುದಿಲ್ಲ

ಸತ್ಯವೇದದಿಂದ ಉದಾಹರಣೆಗಳು.

ಒಂದೇ ಸಾಲುಳ್ಳ ಉದ್ಧರಣವಾಕ್ಯ.

ಅದಕ್ಕೆ ಪೌಲನು,." ನಾನಾದರೋ ರೋಮಾಪುರದ ಪ್ರಜೆಯಾಗಿ ಹುಟ್ಟಿದವನು." ಅಂದನು (ಆ.ಕೃ 22:28 ULB)

ಎರಡು ಸಾಲುಳ್ಳ ಉದ್ಧರಣವಾಕ್ಯಗಳು.

ಯೇಸು ಉತ್ತರವಾಗಿ ಅವನಿಗೆ ಹೇಳಿದ್ದೇನೆಂದರೆ, “ಎಚ್ಚರಿಕೆಯಿಂದ ಇರಿ, ಯಾರಾದರೂ ನಿಮ್ಮನ್ನು ಮೋಸಗೊಳಿಸಾರು, ಏಕೆಂದರೆ ಅನೇಕರು ಬಂದು ನನ್ನ ಹೆಸರನ್ನು ಹೇಳಿ ವಂಚಿಸಬಹುದು. '‘ನಾನು ಕ್ರಿಸ್ತನು,ನಾನು ಕ್ರಿಸ್ತನು,’ ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು. ಮತ್ತಾಯ 24:4-5 ULB

ವಾಕ್ಯದಲ್ಲಿ ಉದ್ಧರಣ ಚಿಹ್ನೆಗಳ ಹೊರಗಿನ ಸಾಲುಗಳು ಯೇಸು ತನ್ನ ಶಿಷ್ಯರನ್ನು ಉದ್ದೇಶಿಸಿ ಹೇಳಿದ ಎಂಬುದನ್ನು ತಿಳಿಸುತ್ತದೆ. ಎರಡನೇ ಸಾಲುಗಳು ಇತರ ಜನರು ಹೇಳುವ ಮಾತುಗಳು.

ಯೇಸು ಅವನಿಗೆ, " ನನ್ನನ್ನು ಅರಸನೆಂದು ನೀನೇ ಹೇಳಿದ್ದಿ." (ಯೊಹಾನ18:37 ULB)

ಉದ್ಧರಣ ಚಿಹ್ನೆಗಳೊಂದಿಗೆ ಇರುವ ಮಾತು ಯೇಸು ಪಿಲಾತನಿಗೆ ಹೇಳಿದ ಮಾತು. ಎರಡನೇ ಸಾಲು ಪಿಲಾತನು ಯೇಸುವಿಗೆ ಹೇಳಿದನು.

####ಒಂದು ಉದ್ಧರಣ ವಾಕ್ಯದಲ್ಲಿ ಮೂರು ಸಾಲುಗಳಿವೆ.

ಅಬ್ರಹಾಮನು ಹೇಳಿದನು "… ನಾನು ಅವಳಿಗೆ ಹೇಳಿದ್ದೇನೆಂದರೆ, “ನಾವು ಹೋಗುವ ಎಲ್ಲಾ ಸ್ಥಳಗಳಲ್ಲಿಯೂ ನನಗೆ ನಿನ್ನಿಂದ ಒಂದು ಉಪಕಾರವಾಗಬೇಕಾಗಿರುವುದರಿಂದ ನನ್ನ ಮಾತಿಗೆ ನಿಷ್ಠೆಯುಳ್ಳ ಹೆಂಡತಿಯಾಗಿರಬೇಕೆಂದು.” ನಾವು ಹೋಗುವ ಎಲ್ಲಾ ಸ್ಥಳಗಳಲ್ಲೂ, ನನ್ನ ಬಗ್ಗೆ ನೀನು ಹೇಳಬೇಕಾದುದು "ನನ್ನನ್ನು ನಿನ್ನ ಅಣ್ಣನೆಂದು ಹೇಳಬೇಕು "'ಎಂದು ಹೇಳಿದ್ದೆ " (ಆದಿಕಾಂಡ 20:10-13 ULB)

ಹೊರಭಾಗವು ಅಬ್ರಹಾಮನು ಅಭಿಯಲೇಕನ ಬಳಿ ಹೇಳಿದ ಮಾತುಗಳು. ಎರಡನೇ ಸಾಲು ಅಬ್ರಹಾಮನು ತನ್ನ ಹೆಂಡತಿಗೆ ಹೇಳಿದ ಮಾತು. ಮೂರನೇ ಸಾಲು ಅಬ್ರಹಾಮನು ತನ್ನ ಹೆಂಡತಿ ಏನು ಹೇಳಬೇಕೆಂದು ಹೇಳಿದ ಮಾತು. ಮೂರನೇ ವಾಕ್ಯವನ್ನು ವಿಶೇಷ ಚಿಹ್ನೆಯಿಂದ ಗುರುತಿಸಿದ್ದೇವೆ.

ನಾಲ್ಕು ಸಾಲುಳ್ಳ ಉದ್ಧರಣವಾಕ್ಯಗಳು

ಅದಕ್ಕೆ ಅವರು “ಒಬ್ಬ ಮನುಷ್ಯನು ನಮ್ಮ ಬಳಿಬಂದು ನಮಗೆ ಹೇಳಿದ್ದೇನೆಂದರೆ – ‘ನೀವು ಅರಸನ ಬಳಿಗೆ ಹೋಗಿ ಯೆಹೋವನು ಹೀಗೆನುತ್ತಾನೆ - " ನೀನು ಎಕ್ರೋವನಿನ ದೇವರಾದ ಬಾಳ್ಜೆಬೂಬನನನ್ನು ವಿಚಾರಿಸುವುದಕ್ಕೆ ಕಳುಹಿಸಲು ಕಾರಣವೇನು ? ಇಸ್ರಾಯೇಲರ ದೇವರಿಲ್ಲವೇ ? " ಎಂದು ಕೇಳಿ ಎಂದನು ’ ನೀನು ಹೀಗೆ ಮಾಡಿದ್ದರಿಂದ " ಹತ್ತಿದ ಮಂಚದಿಂದ ಇಳಿಯದೆ ಅಲ್ಲೇ ಸಾಯಬೇಕು ಎಂಬುದಾಗಿ ಹೇಳಿರಿ '” ’ " (2 ನೇ ಅರಸು 1:6 ULB)

ಉದ್ಧರಣ ಚಿಹ್ನೆಯ ಹೊರಗಿನ ಮಾತುಗಳು ದೇವದೂತರು ರಾಜನಿಗೆ ಹೇಳಿದ ಮಾತುಗಳು. ಎರಡನೇ ಸಾಲು ದೇವದೂತರನ್ನು ಎದುರುಗೊಂಡ ಮನುಷ್ಯನು ಹೇಳಿದ ಮಾತುಗಳು. ಮೂರನೇ ಸಾಲು ದೇವದೂತರು ರಾಜನಿಗೆ ಏನು ಹೇಳಬೇಕೆಂದು ನಿರೀಕ್ಷಿಸಿದ ವ್ಯಕ್ತಿಯ ಮಾತುಗಳು. ನಾಲ್ಕನೇ ಸಾಲು ದೇವರಾದ ಯೆಹೋವನು ಹೇಳಿದ ಮಾತುಗಳು. (ಇಲ್ಲಿ ನಾಲ್ಕನೇ ವಾಕ್ಯವನ್ನು ಚಿಹ್ನೆಯಿಂದ ಗುರುತಿಸಲಾಗಿದೆ.)

ಭಾಷಾಂತರ ತಂತ್ರಗಳು.

ಕೆಲವು ಭಾಷೆಯಲ್ಲಿ ನೇರವಾದ ಉದ್ಧರಣ ವಾಕ್ಯಗಳನ್ನು ಬಳಸುತ್ತಾರೆ. ಇತರೆ ಭಾಷೆಗಳಲ್ಲಿ ನೇರವಾದ ಉದ್ಧರಣ ವಾಕ್ಯ ಮತ್ತು ಪರೋಕ್ಷವಾದ ಉದ್ಧರಣ ವಾಕ್ಯಗಳನ್ನು ಒಟ್ಟಾಗಿ ಬಳಸುತ್ತಾರೆ. ಆ ಭಾಷೆಗಳಲ್ಲಿ ಇದು ವಿಭಿನ್ನವಾಗಿ ಧ್ವನಿಸಬಹುದು ಮತ್ತು ಪರೋಕ್ಷ ಉದ್ಧರಣದೊಡನೆ ಅನೇಕ ಸಾಲುಗಳು ಬರುವುದರಿಂದ ಗೊಂದಲ ಉಂಟಾಗುವ ಸಾಧ್ಯತೆ ಇರುತ್ತದೆ.

  1. ಎಲ್ಲಾ ವಾಕ್ಯಗಳನ್ನು ನೇರ ಉದ್ಧರಣವಾಕ್ಯಗಳನ್ನಾಗಿ ಭಾಷಾಂತರಿಸ ಬೇಕು.
  2. ಒಂದು ಅಥವಾ ಕೆಲವು ಉದ್ಧರಣವಾಕ್ಯಗಳನ್ನು ಅಪರೋಕ್ಷ ಉದ್ಧರಣವಾಕ್ಯಗಳನ್ನಾಗಿ ಭಾಷಾಂತರಿಸಿ. (ನೋಡಿ see Direct and Indirect Quotations)

ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು

  1. ಎಲ್ಲಾ ವಾಕ್ಯಗಳನ್ನು ನೇರ ಉದ್ಧರಣವಾಕ್ಯಗಳನ್ನಾಗಿ ಭಾಷಾಂತರಿಸ ಬೇಕು. ಕೆಳಗೆ ಕೊಟ್ಟಿರುವ ಉದಾಹರಣೆ ವಾಕ್ಯಗಳಲ್ಲಿ ಅಪರೋಕ್ಷ ಉದ್ಧರಣ ವಾಕ್ಯಗಳನ್ನು ULB ಸತ್ಯವೇದದಲ್ಲಿ ವಿಶೇಷ ಚಿಹ್ನೆಯಿಂದ ಗುರುತಿಸಲಾಗಿದೆ.ಇಂತಹ ಉದ್ಧರಣ ವಾಕ್ಯಗಳನ್ನು ನಾವು ನೇರ ಉದ್ಧರಣ ವಾಕ್ಯಗಳನ್ನಾಗಿ ಕೆಳಗೆ ನೀಡಿರುವ ವಾಕ್ಯಗಳಲ್ಲಿ ನೀಡಿದೆ.
  • ಅವರು ಅನೇಕ ದಿನಗಳು ಅಲ್ಲಿ ಉಳಿದುಕೊಂಡಿದ್ದರು ಫೇಸ್ತನು ಪೌಲನ ಸಂಗತಿಯನ್ನು ರಾಜನಿಗೆ ಆಗ ತಿಳಿಸಿ ಹೇಳಿದ್ದೇನೆಂದರೆ — ಫಿಲಿಕ್ಸನು ಬಿಟ್ಟುಹೋದ ಒಬ್ಬ ಸೆರೆಯವನು ಇದ್ದಾನೆ. ನಾನು ಯೆರೂಸಲೇಮಿನಲ್ಲಿದ್ದಾಗ ಯೆಹೂದ್ಯರ ಮಹಾ ಯಾಜಕನು ಸಭೆಯ ಹಿರಿಯರು ಅವನ ವಿಷಯವಾಗಿ ನನಗೆ ಫಿರ್ಯಾದು ಹೇಳಿ ಅವನ ವಿರುದ್ಧವಾಗಿ ತೀರ್ಪು ಆಗಬೇಕೆಂದು ಬೇಡಿಕೊಂಡರು ಪೌಲನನ್ನು ಹೇಗೆ ವಿಚಾರ ಮಾಡಬೇಕೆಂದು ತಿಳಿಯದೆ ಅವನಿಗೆ “ ನೀನು ಯೆರೂಸಲೇಮಿಗೆ ಹೋಗಿ ಇವುಗಳ ವಿಷಯದಲ್ಲಿ ವಿಚಾರಣೆ ಹೊಂದುವುದಕ್ಕೆ ಮನಸ್ಸುಂಟೋ ಎಂದು ಕೇಳಿದೆನು . ಆದರೆ ಪುನಃ ಪೌಲನನ್ನು ಕರೆದು ಚಕ್ರವರ್ತಿಯಾದ ಸೀಸರನ ಮುಂದೆ ವಿಚಾರಣೆ ಆಗುವವರೆಗೆ ಅವನನ್ನು ಕಾವಲಿನಲ್ಲಿ ಇಡಲು ಹೇಳಿದ ." (ಆ.ಕೃ. 25:14-21 ULB)
    • ಆಗ ಫೇಸ್ತನು ಪೌಲನ ಸಂಗತಿಯನ್ನು ರಾಜನಿಗೆ ವಿವರಿಸಿ ಹೇಳಿದ್ದೇನೆಂದರೆ " ಫೆಲೆಕ್ಸನು ಬಿಟ್ಟುಹೋದ ಒಬ್ಬ ಸೆರೆಯ ಕೈದಿ ಇದ್ದಾನೆ ------ ಅವನು ಪೌಲನು, ಅವನನ್ನು ಹೇಗೆ ವಿಚಾರಣೆ ಮಾಡಬೇಕೆಂದು ತಿಳಿಯದೆ ಅವನನ್ನು ಕುರಿತು, " ನೀನು ಯೆರೂಸಲೇಮಿಗೆ ಹೋಗಿ ಅಲ್ಲಿ ಇವುಗಳ ವಿಷಯದಲ್ಲಿ ವಿಚಾರಣೆ ಹೊಂದುವುದಕ್ಕೆ ಮನಸ್ಸುಂಟೋ ? " ಎಂದು ಕೇಳಿದನು 'ಅದಕ್ಕೆ ಪೌಲನು ತಾನು ಚಕ್ರವರ್ತಿಯ ಮುಂದೆ ವಿಚಾರಣೆ ಆಗುವವರೆಗೆ ತನ್ನನ್ನು ಕಾವಲಿನಲ್ಲಿ ಇಡಬೇಕೆಂದು ಕೇಳಿಕೊಂಡನು '" ಅದಕ್ಕೆ ನಾನು ಚಕ್ರವರ್ತಿಯಾದ ಸೀಸರನ ಮುಂದೆ ವಿಚಾರಣೆಗೆ ಹೋಗುವವರೆಗೆ ಕಾವಲಿನಲ್ಲಿ ಇಡಲು ಅಪ್ಪಣೆ ಕೊಟ್ಟೆನು '".
  1. ಒಂದು ಅಥವಾ ಕೆಲವು ಉದ್ಧರಣವಾಕ್ಯಗಳನ್ನು ಪರೋಕ್ಷ ಉದ್ಧರಣವಾಕ್ಯಗಳನ್ನಾಗಿ ಭಾಷಾಂತರಿಸಿ ಇಂಗ್ಲೀಷಿನಲ್ಲಿ ಪರೋಕ್ಷ ಉದ್ಧರಣವಾಕ್ಯದ ಮೊದಲು “that” ಎಂಬ ಪದ ಬರುತ್ತದೆ. ಕೆಳಗಿನ ಉದಾಹರಣೆಯಲ್ಲಿ ವಿಶೇಷವಾಗಿ ಗುರುತಿಸಿದೆ. ಸರ್ವನಾಮಗಳನ್ನು ಇಲ್ಲಿ ಬದಲಾಯಿಸಲಾಗಿದೆ ಏಕೆಂದರೆ ಅಪರೋಕ್ಷ ಉದ್ಧರಣ ವಾಕ್ಯಗಳನ್ನು ಗುರುತಿಸಿದೆ.
  • ಯಹೋವನು ಮೋಶೆಯೊಡನೆ ಮಾತನಾಡಿದ್ದೇನೆಂದರೆ, " ಇಸ್ರಾಯೇಲರು ಗುಣಗುಟ್ಟುವಿಕೆ ನನಗೆ ಕೇಳಿಸಿತು. ". ನೀನು ಅವನಿಗೆ ಸಾಯಂಕಾಲದಲ್ಲಿ ಮಾಂಸವನ್ನು ಒತ್ತಾರೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನು ತಿನ್ನುವಿರಿ. ಇದರಿಂದ ನಾನು ನಿಮ್ಮ ದೇವರಾದ ಯೆಹೋವನು ಎಂದು ನಿಮಗೆ ಗೊತ್ತಾಗುವುದೆಂದು ಹೇಳಬೇಕು. "(ವಿಮೋಚನಾ ಕಾಂಡ 16:11-12 ULB)

    • ಯೆಹೋವನು ಮೋಶೆಯೊಡನೆ ಮಾತನಾಡಿ ಹೇಳಿದ್ದೇನೆಂದರೆ, " ಇಸ್ರಾಯೇಲರ ಗುಣಗುಟ್ಟಿದ್ದು ನನಗೆ ಕೇಳಿಸಿತು. “. ನೀನು ಅವರಿಗೆ ಅಂದರೆಸಾಯಂಕಾಲದಲ್ಲಿ ಅವರುಮಾಂಸವನ್ನು ಮತ್ತು ಒತ್ತಾರೆಯಲ್ಲಿ ಅವರು ರೊಟ್ಟಿಯನ್ನು ತಿನ್ನುವರು. ಆಗ ಅವರು ನಾನು ಅವರದೇವರಾದ ಯೆಹೋವನೆಂಬುದು ತಿಳಿಯುವರು.”
  • ಅವರು ಅರಸನನ್ನು ಕುರಿತು, " ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನನಗೆ – ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ ಯೆಹೋವನ ಹೆಸರಿನಲ್ಲಿ ಅವನಿಗೆ ಹೇಳಿದ್ದೇನೆಂದರೆ ":… " ಇಸ್ರಾಯೇಲರಲ್ಲಿ ದೇವರಿಲ್ಲ ಎಂಬಂತೆ ಎಕ್ರೋನಿನದೇವರಾದ ಬಾಳ್ಜೆಬೂಬನನ ಬಳಿ ವಿಚಾರಿಸುವುದಕ್ಕೆ ಏಕೆ ಕಳುಹಿಸಿದೆ.? ಆದುದರಿಂದ ನೀನು ಹತ್ತಿದ ಮಂಚದಿಂದ ಕೆಳಗೆ ಇಳಿಯದೆ ಅಲ್ಲೇ ಸತ್ತು ಹೋಗುವಿ.’ " ’ " (2 ನೇ ಅರಸು 1:6 ULB)

    • ಅವರು ಅವನಿಗೆ ಏನೆಂದರೆಒಬ್ಬ ಮನುಷ್ಯನು ಅವರನ್ನು ಎದುರುಗೊಳ್ಳಲು ಬಂದು ಅವರನ್ನು ಕುರಿತು ನಿಮ್ಮನ್ನು, ಕಳುಹಿಸಿದ " ಅರಸನ ಬಳಿಗೆ ಹೋಗಿ ಯೆಹೋವನ ಹೆಸರಿನಲ್ಲಿ ಹೀಗೆಹೇಳಿರಿ, ’ ಇಸ್ರಾಯೇಲರ ದೇವರನ್ನು ಗೌರವಿಸದೆ ಇಕ್ರೋನಿನ " ದೇವರಾದ ಬಾಳ್ಜೆಬೂಬನ ಬಳಿ ಏಕೆ ಕಳುಹಿಸಿದೆ ? ಇದರಿಂದ ನೀನು ಹತ್ತಿದ ಮಂಚದಿಂದ ಇಳಿಯದೆ ಅಲ್ಲೆ ಮರಣ ಹೊಂದುವುದು ಖಚಿತ.

Writing Styles (Discourse)

Translation Manual :: Just-in-Time Learning Modules :: Writing Styles (Discourse)

ಬರವಣಿಗೆಯ ವಿಧಗಳು.

Translation Manual :: Just-in-Time Learning Modules :: Writing Styles (Discourse) :: Writing Styles

###ವಿವರಣೆಗಳು

ಬರವಣಿಗೆಗಳಲ್ಲಿ ಅನೇಕ ವಿಧಗಳಿವೆ ಮತ್ತು ಪ್ರತಿಯೊಂದು ವಿಧದಲ್ಲೂ ಅದರದೇ ಆದ ಉದ್ದೇಶವಿರುತ್ತದೆ. ಬರವಣಿಗೆಗೆ ವಿವಿಧ ಉದ್ದೇಶವಿರುವುದರಿಂದ, ವಿವಿಧ ರೀತಿಯ ಬರವಣಿಗೆಗಳನ್ನು ವಿವಿಧರೀತಿಯಲ್ಲಿ ಸಂಯೋಜಿಸಲಾಗುತ್ತದೆ. ಅವುಗಳಲ್ಲಿ ವಿವಿಧ ಕ್ರಿಯಾಪದಗಳು – ವಿವಿಧ ರೀತಿಯ ವಾಕ್ಯಗಳು, ವಿವಿಧ ಜನರು ಮತ್ತು ವಸ್ತುಗಳ ಬಗ್ಗೆ ವಿವಿಧ ರೀತಿಯಲ್ಲಿ ಬರವಣಿಗೆಗಳು ಆಗಿವೆ. ಇಂತಹ ವ್ಯತ್ಯಾಸಗಳು ವಿಭಿನ್ನತೆಗಳು ಓದುಗರಿಗೆ ವಾಕ್ಯಭಾಗಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿರುತ್ತದೆ ಮತ್ತು ಲೇಖಕರ ಮೂಲಉದ್ದೇಶವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಕವಾಗಿವೆ.

ಬರವಣಿಗೆಯ ವಿಧಗಳು.

ಎಲ್ಲಾ ಭಾಷೆಗಳಲ್ಲಿ ಕಂಡುಬರುವ ನಾಲ್ಕು ಪ್ರಮುಖ ಮೂಲಭೂತ ಬರವಣಿಗೆಯ ವಿಧಗಳು. ಪ್ರತಿಯೊಂದು ಬರವಣಿಗೆಯಲ್ಲಿ ಅದರದೇ ಆದ ವಿಭಿನ್ನ ಉದ್ದೇಶಗಳಿವೆ.

  • ಕಥನ ರೂಪ- ಅಥವಾ (ನಿರೂಪಣೆ) ಸಾಮ್ಯಗಳ ಕಥೆ ರೂಪ ನಡೆದ ಘಟನೆ ಅಥವಾ ವಿಷಯವನ್ನು ಇರುವ ವಿಷಯವನ್ನು ಕಥೆಯ ರೂಪದಲ್ಲಿ ಹೇಳುವುದು
  • ವಿವರಣೆಯ ರೂಪ ಇರುವ ವಿಷಯವನ್ನು ವಿವರಿಸಿ ಹೇಳುವುದು ಇಲ್ಲವೇ ತತ್ವಗಳನ್ನು ಬೋಧಿಸುವುದು.
  • Procedural - ಕ್ರಮಾನುಸಾರವಾಗಿ ವಿವರಿಸುವುದು – ಯಾವ ವಿಷಯವನ್ನು ಹೇಗೆ ಕ್ರಮವಾಗಿ ಮಾಡಬೇಕು ಎಂದು ವಿವರಿಸುವುದು.
  • ವಿವಾದಾತ್ಮಕ ಮಾದರಿ ಯಾವುದಾದರೂ ಒಂದು ವಿಷಯದ ಬಗ್ಗೆ ಚರ್ಚೆಮಾಡಿ ಅದರಂತೆ ಮಾಡುವಂತೆ ಹೇಳುವುದು.

** ಏಕೆಂದರೆ ಇದೊಂದು ಭಾಷಾಂತರ ವಿಷಯವಾದುದರಿಂದ.

ಪ್ರತಿಯೊಂದು ಭಾಷೆಯಲ್ಲೂ ಅದರದೇ ಆದ ವ್ಯವಸ್ಥೆ ವಿವಿಧ ರೀತಿಯ ಬರವಣಿಗೆಗಳಲ್ಲಿ ಇರುತ್ತದೆ. ಭಾಷಾಂತರಗಾರನಿಗೆ ತಾನು ಯಾವ ರೀತಿ ಬರವಣಿಗೆಯನ್ನು ಭಾಷಾಂತರಿಸುತ್ತಿದ್ದೇನೆ ಎಂಬುದು ತಿಳಿದಿರಬೇಕು. ಮೂಲ ಭಾಷೆಯಲ್ಲಿ ಇವುಗಳನ್ನು ಯಾವ ಕ್ರಮದಲ್ಲಿ ಇಡಲಾಗಿದೆ ಮತ್ತು ತನ್ನ ಭಾಷೆಯಲ್ಲಿ ತಾನು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಯಾವ ಕ್ರಮದಲ್ಲಿ ಬಳಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಭಾಷಾಂತರಗಾರನು ತನ್ನ ಜನರು ತಾನು ಮಾಡಿದ ಭಾಷಾಂತರವನ್ನು ಮೂಲವಾಕ್ಯಭಾಗಕ್ಕೆಒಂದು ಒಳ್ಳೆಯ ರೂಪವನ್ನು ಕೊಟ್ಟು ಓದುಗರು ಅದನ್ನು ಅರ್ಥಮಾಡಿಕೊಳ್ಳುವಂತೆ ಎಚ್ಚರವಹಿಸಿ ಮಾಡಬೇಕು. ಪ್ರತಿಯೊಂದು ಭಾಷಾಂತರದಲ್ಲೂ ಬಳಸುವ ಪದಗಳು, ವಾಕ್ಯಗಳು, ವಾಕ್ಯಬಂಧಗಳು,ಪ್ಯಾರಾಗಳು ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಸಂಯೋಜಿಸಿ ಇಡಬೇಕು.

ಬರವಣಿಗೆಯ ಶೈಲಿ.

ಈ ಕೆಳಗೆ ಕೊಟ್ಟಿರುವ ಬರವಣಿಗೆಯ ಶೈಲಿಯು ಮೇಲೆ ಕೊಟ್ಟಿರುವ ನಾಲ್ಕು ಬರವಣಿಗೆಯ ವಿಧಗಳೊಂದಿಗೆ ಸೇರಿಸಿ ಹೇಳಿದೆ. ಈ ಬರವಣಿಗೆಯ ಶೈಲಿಯು ಆಗಾಗ್ಗೆ ಭಾಷಾಂತರದಲ್ಲಿ ಸವಾಲಾಗಿ ಬರುತ್ತವೆ.

  • ಪದ್ಯ - - ಈ ಶೈಲಿಯಲ್ಲಿ ವಿಷಯವನ್ನು ಸುಂದರವಾಗಿ ಮತ್ತು ಸೊಗಸಾಗಿ ಅರ್ಥಪೂರ್ಣವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತದೆ.
  • ಜ್ಞಾನೋಕ್ತಿಗಳು - ಜ್ಞಾನವನ್ನು ಅಥವಾ ಸತ್ಯದರ್ಶನದ ಬೋಧನೆಯನ್ನು ಸಂಕ್ಷಿಪ್ತರೀತಿಯಲ್ಲಿ ಹೇಳುತ್ತದೆ.
  • ಸಾಂಕೇತಿಕ ಭಾಷೆ - ಸಾಂಕೇತಿಕ ಭಾಷೆ ಎಂಬುದು ಕೆಲವು ಘಟನೆಗಳು ಮತ್ತು ವಸ್ತುಗಳನ್ನು ಪ್ರತಿನಿಧಿಸುತ್ತದೆ.
  • ಸಾಂಕೇತಿಕ ಪ್ರವಾದನೆ - ಸಾಂಕೇತಿಕ ಪ್ರವಾದನೆ ಎಂಬುದು ಭವಿಷ್ಯದಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿಸುತ್ತದೆ.
  • ಕಲ್ಪಿತ ಸನ್ನಿವೇಶಗಳು - ನಿಜವಾದ ವಿಷಯದ ಬಗ್ಗೆ ಹೇಳುವಾಗ ನಡೆದದ್ದೇನು ಎಂದು ಮೊದಲೇ ಕಲ್ಪಿಸಿ ಹೇಳುವುದು ಇಲ್ಲವೇ ನಿಜವಾಗಿ ನಡೆಯದೆ ಇದ್ದರೂ ನಡೆದಂತೆ ಊಹಿಸಿ ಭಾವನೆಗಳನ್ನು ವ್ಯಕ್ತಪಡಿಸುವುದು.

ಸಂಭಾಷಣಾ ಲಕ್ಷಣಗಳು / ವ್ಯಾಖ್ಯಾನ ಲಕ್ಷಣಗಳು.

ಭಾಷೆಯೊಂದರಲ್ಲಿ ವಿವಿಧ ರೀತಿಯ ಬರವಣಿಗೆಗಳ ನಡುವಿನ ವ್ಯತ್ಯಾಸಗಳನ್ನು ಸಂಭಾಷಣಾ ಮಾದರಿಯ ಲಕ್ಷಣಗಳನ್ನು ಹೊಂದಿವೆ ಎಂದು ಹೇಳಬಹುದು. ನಿರ್ದಿಷ್ಟ ರೀತಿಯ ವಾಕ್ಯಭಾಗಗಳು ಯಾವ ವಿಧದ ಸಂಭಾಷಣಾ / ಲಕ್ಷಣಗಳನ್ನು ಉಪಯೋಗಿಸಿದೆ ಅದರ ಉದ್ದೇಶವೇನು ? ಎಂದು ತಿಳಿಯಬೇಕು. ಉದಾಹರಣೆಗೆ ಕಥನಾ/ ನಿರೂಪಣಾ ರೂಪದಲ್ಲಿ ಸಂಭಾಷಣಾ ಲಕ್ಷಣಗಳು ಒಳಗೊಂಡಿರುತ್ತವೆ.

  • ಕೆಲವು ಘಟನೆಗಳ ಬಗ್ಗೆ – ಅವು ನಡೆಯುವ ಮೊದಲು ಅಥವಾ ನಂತರ ನಡೆಯುವ ಘಟನೆಗಳ ಬಗ್ಗೆ ಹೇಳುವುದು.
  • ಜನರನ್ನು ಕತೆಗಳಲ್ಲಿ ಪರಿಚಯಿಸುವುದು.
  • ಹೊಸ ಘಟನೆಗಳನ್ನು ಕತೆಗಳ ಮಧ್ಯದಲ್ಲಿ ಪರಿಚಯಿಸುವುದು.
  • ಸಂಭಾಷಣೆಗಳನ್ನು ಮತ್ತು ಉದ್ಧರಣಾ ವಾಕ್ಯಗಳನ್ನು ಸೇರಿಸುವುದು.
  • ಜನರನ್ನು ಮತ್ತು ವಸ್ತುಗಳನ್ನು ನಾಮಪದ ಮತ್ತು ಸರ್ವನಾಮಗಳನ್ನು ಬಳಸಿ ಪ್ರಯೋಗಿಸುವುದು.

ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಇಂತಹ ಸಂಭಾಷಣಾ ಲಕ್ಷಣಗಳನ್ನು ಬಳಸಲಾಗುತ್ತದೆ. ಪ್ರತಿಯೊಬ್ಬ ಭಾಷಾಂತರಗಾರರು ಈ ಎಲ್ಲಾ ಅವಶ್ಯಕ ಲಕ್ಷಣಗಳನ್ನು ಅಧ್ಯಯನ ಮಾಡಿ ಪ್ರತಿಯೊಂದು ಅಂಶದ ಪರಿಣಾಮಗಳು ಯಾವುವು ? ಮತ್ತು ಅವರು ಮಾಡಿದ ಭಾಷಾಂತರ ತಮ್ಮ ಓದುಗರಿಗೆ ಸೂಕ್ತ, ಸಹಜ ಮತ್ತು ಸ್ಪಷ್ಟವಾಗಿ ಅರ್ಥವಾಗುತ್ತದೆಯೇ ? ಎಂದು ಯೋಚಿಸಿ ಭಾಷಾಂತರ ಮಾಡಬೇಕು. ಇತರ ರೀತಿಯ ಬರವಣಿಗೆಗಳಲ್ಲಿನ ಸಂಭಾಷಣಾ / ವ್ಯಾಖ್ಯಾನ ಲಕ್ಷಣಗಳು

ನಿರ್ದಿಷ್ಟ ಸಂಭಾಷಣಾ / ವ್ಯಾಖ್ಯಾನ ಲಕ್ಷಣಗಳು

  1. ಹೊಸ ಘಟನೆಗಳ ಪರಿಚಯ – ಪದಗುಚ್ಛಗಳು ಉದಾಹರಣೆಗೆ "ಒಂದು ದಿನ " ಅಥವಾ " ಇದು ಹೀಗೆ ನಡೆದುಬಂದ ಮೇಲೆ " ಅಥವಾ " ಕೆಲವೊಮ್ಮೆ ಇದಾದ ಮೇಲೆ " ಈ ಎಲ್ಲವೂ ಒಂದು ಘಟನೆಯ ಬಗ್ಗೆ ಹೇಳಲಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
  2. ಹೊಸ ಮತ್ತು ಹಳೆಯ ಪಾತ್ರಧಾರಿಗಳ ಪರಿಚಯ - ಅನೇಕ ಭಾಷೆಗಳಲ್ಲಿ ಅನೇಕ ಪಾತ್ರಗಳನ್ನು, ಹೊಸ ಮತ್ತು ಹಳೆಯ ಜನರನ್ನು ಪರಿಚಯಿಸುತ್ತದೆ.
  3. ಮಾಹಿತಿ ಹಿನ್ನಲೆ - ಒಬ್ಬ ಲೇಖಕ ಮಾಹಿತಿಯ ಹಿನ್ನಲೆಯನ್ನು ಅನೇಕ ಕಾರಣಗಳಿಗೆ ಉಪಯೋಗಿಸಿಕೊಳ್ಳುತ್ತಾನೆ. 1) ಕತೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಲು., 2) ಕತೆಯನ್ನು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಸಹಾಯಮಾಡುವ ಮುಖ್ಯಮಾಹಿತಿಗಳನ್ನು ಒದಗಿಸಲು 3) ಕತೆ ಮುಖ್ಯವಾದುದು ಎಂದು ವಿವರಿಸಲು ಬಳಸುತ್ತಾರೆ.
  4. -ಸರ್ವನಾಮಗಳನ್ನು – ಯಾವಾಗ ಉಪಯೋಗಿಸಬೇಕು ಭಾಷೆಗಳಲ್ಲಿ ವಿವಿಧ ವಿನ್ಯಾಸಗಳು ಆಗಿಂದಾಗ್ಗೆ ಸರ್ವನಾಮಗಳನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ತಿಳಿಸುತ್ತದೆ. ತಿಳಿಸಿದ ವಿನ್ಯಾಸವನ್ನು ಬಳಸದಿದ್ದರೆ ತಪ್ಪು ಅರ್ಥದ ಮೂಲಕ ವಾಕ್ಯವು ವಿಭಿನ್ನ ರೀತಿಯಲ್ಲಿ ಅರ್ಥ ನೀಡಬಹುದು.
  5. -. ಕತೆಯ ಮುಕ್ತಾಯ - ಕತೆಗಳು ವಿವಿಧ ರೀತಿಯ ಮಾಹಿತಿಗಳೊಂದಿಗೆ ಮುಕ್ತಾಯವಾಗಬಹುದು. ವಿವಿಧ ಭಾಷೆಯಲ್ಲಿ ವಿವಿಧ ರೀತಿಯ ಮಾಹಿತಿಗಳು ಕತೆಗಳೊಂದಿಗೆ ಸಂಬಂಧಿಸಿರುತ್ತದೆ
  6. ಸಂಯೋಜಿತ ಪದಗಳು ಎಲ್ಲಾ ಭಾಷೆಯಲ್ಲೂ ಸಂಯೋಜಿತ ಪದಗಳಿರುತ್ತವೆ. ಉದಾ :(“and,ಮತ್ತು” "but,ಆದರೆ " or "then"ಆಮೇಲೆ / ನಂತರ).

ಹಿನ್ನೆಲೆ ಮಾಹಿತಿ.

Translation Manual :: Just-in-Time Learning Modules :: Writing Styles (Discourse) :: Background Information

ವಿವರಣೆಗಳು.

ಜನರು ಕತೆ ಹೇಳುವಾಗ ನಡೆದ ಘಟನೆಗಳು ಅಥವಾ ಘಟನೆಗಳು ಅಥವಾ ಘಟನೆಗಳ ಬಗ್ಗೆ ಕ್ರಮವಾಗಿ ಹೊಂದಿಸಿ ಹೇಳುತ್ತಾರೆ. ಈ ರೀತಿಯ ಘಟನೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಹೆಣೆದು ಕಥಾಹಂದರದಲ್ಲಿ ಹೇಳುವಂತದ್ದು. ಈ ಕಥಾಹಂದರವು ಕಥೆಯ ಬೆಳವಣಿಗೆಯನ್ನು ಸಂಪೂರ್ಣವಾಗಿ ಕ್ರಿಯಾತ್ಮಕವಾದ ಕ್ರಿಯಾಪದಗಳೊಂದಿಗೆ ಕೊಂಡೊಯ್ಯುತ್ತದೆ. ಆದರೆ ಕೆಲವೊಮ್ಮೆ ಒಬ್ಬ ಲೇಖಕ ಕಥೆಯ ಬೆಳವಣಿಗೆಯಿಂದ ಒಂದು ಚಿಕ್ಕ ವಿರಾಮ ತೆಗೆದುಕೊಂಡು ತನ್ನ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಹಿತಿ ನೀಡಿ ಸಹಾಯಮಾಡುತ್ತಾನೆ.

ಇಂತಹ ಮಾಹಿತಿಯನ್ನು ಹಿನ್ನೆಲೆ ಮಾಹಿತಿ ಎಂದು ಕರೆಯುತ್ತಾರೆ. ಈ ಹಿನ್ನೆಲೆ ಮಾಹಿತಿಗಳು ಕತೆಯಲ್ಲಿ ಬರುವ ಘಟನೆಗಳಿಗಿಂತೆ ಮೊದಲು ನಡೆದಿರಬಹುದು ಇಲ್ಲವೆ ಈ ಬಗ್ಗೆ ಈಗಾಗಲೇ ಹೇಳಿರಬಹುದು ಅಥವಾ ಕತೆಯಲ್ಲಿ ಈಬಗ್ಗೆ ಹೇಳಿರುವಂತದ್ದಾಗಿರಬಹುದು.

ಉದಾಹರಣೆಗೆ - ಕೆಳಗೆ ಅಡ್ಡಗೆರೆಯಿಂದ ಗುರುತಿಸಿರುವ ವಾಕ್ಯಗಳು ಕಥೆ ಬಗ್ಗೆ ಹಿನ್ನೆಲೆ ಮಾಹಿತಿ ಗಳಾಗಿವೆ. ಪೀಟರ್ ಮತ್ತು ಜಾನ್ ಬೇಟೆಗಾಗಿ ಹೊರಟರು ಏಕೆಂದರೆ ಅವರ ಹಳ್ಳಿಯಲ್ಲಿ ಮಾರನೆ ದಿನ ಹಬ್ಬದ ಆಚರಣೆ ಇದೆ . ಆ ಹಳ್ಳಿಯಲ್ಲಿ ಪೀಟರ್ ಅತ್ಯುತ್ತಮ ಬೇಟೆಗಾರ.ಅವನು ಒಂದೇ ದಿನದಲ್ಲಿ ಮೂರು ಕಾಡುಹಂದಿಗಳನ್ನು ಬೇಟೆಯಾಡಿದ್ದ !ಅವರೆಲ್ಲರೂ ಕಾಡುಹಂದಿಗಳ ಸ್ವರವನ್ನು ಗುರುತಿಸುವವರೆಗೂ ಗಂಟೆಗಟ್ಟಲೆ ಪೊದೆಗಳನ್ನು ಹಾದುಹೋಗಬೇಕಾಯಿತು. ಕಾಡುಹಂದಿಗಳು ಅವರನ್ನು ಹಾದುಹೋಗುವಾಗ ಅವುಗಳನ್ನು ಗುಂಡಿಟ್ಟು ಕೊಲ್ಲಲು ಸಮರ್ಥವಾಗಿ ಕಾರ್ಯನಿರ್ವಹಿಸಿದರು ಅವರು ಆ ಹಂದಿಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಒಂದು ಗಳವನ್ನು ಹಂದಿಗಳ ಕಾಲುಗಳ ಮಧ್ಯೆ ತೂರಿಸಿ ಅವುಗಳನ್ನು ಹೆಗಲಮೇಲೆ ಹೊತ್ತುಕೊಂಡು ಬಂದರು . ಅವರು ಹಂದಿಗಳನ್ನು ಊರಿನೊಳಗೆ ತರುತ್ತಿದ್ದಾಗ ಪೀಟರ್ ನ ಚಿಕ್ಕಮ್ಮನ ಮಗ ನೋಡಿ ಪೀಟರ್ ಗೊತ್ತಿಲ್ಲದೆ ತನ್ನ ಹಂದಿಯನ್ನು . ಕೊಂದಿದ್ದಾನೆ ಎಂದು ತಿಳಿದುಕೊಂಡನು ತನ್ನ ಚಿಕ್ಕಮ್ಮನ ಮಗನ ಹಂದಿಗಳನ್ನು ತಪ್ಪಾಗಿ ಕೊಂದುಬಿಟ್ಟನು.ಎಂದು ಕೊಂಡನು.

ಹಿನ್ನೆಲೆ ಮಾಹಿತಿ ಯಾವಾಗಲೂ ಈಗಾಗಲೇ ನಡೆದ ಘಟನೆಗಳ ಬಗ್ಗೆ ಅಥವಾ ನಂತರ ನಡೆಯುವ ಘಟನೆಗಳ ಬಗ್ಗೆ ಹೇಳುತ್ತದೆ. ಉದಾಹರಣೆಗಾಗಿ ಬಂದ ವಾಕ್ಯಗಳಲ್ಲಿ " ಅವರ ಹಳ್ಳಿಯಲ್ಲಿ ಮಾರನೆಯ ದಿನ ಹಬ್ಬವಿದ್ದುದ್ದರಿಂದ " ಅವನು ಒಂದೇ ಸಲ ಮೂರು ಕಾಡುಹಂದಿಗಳನ್ನು ಬೇಟೆಯಾಡಿ ಕೊಂದನು, " ಅವುಗಳನ್ನು ಅವರು ಊರೊಳಗೆ ತಂದರು " ಮತ್ತು " ಪೀಟರನಿಗೆ ಅವು ತಮ್ಮ ಚಿಕ್ಕಮ್ಮನ ಮಗನ ಹಂದಿಗಳೆಂದು ತಿಳಿಯದೆ ತಪ್ಪಾಗಿ ಅವುಗಳನ್ನು ಕೊಂದನು.

Often background information uses “be” verbs like “was” and “were”, rather than action verbs.- ಇಂಗ್ಲೀಷ್ ಭಾಷೆಯಲ್ಲಿ ಸಾಮಾನ್ಯವಾಗಿ ಇಂತಹ ಪದಗಳನ್ನು ಬಳಸುತ್ತಾರೆ. ಇದಕ್ಕೆ ಉದಾಹರಣೆ “Peter wasthe best hunter in the village” and “it washis own pig.” " ಪೀಟರ್ ಆ ಹಳ್ಳಿಯಲ್ಲಿ ಉತ್ತಮ ಬೇಟೆಗಾರ ಆಗಿದ್ದನು ಆ ಹಂದಿಗಳು ಅವನ ಸ್ವಂತ ಹಂದಿಗಳಾಗಿದ್ದವು ಹಿನ್ನೆಲೆ ಮಾಹಿತಿಯನ್ನು ಓದುಗರಿಗೆ ತಿಳಿಸುವಾಗ ಈ ಮಾಹಿತಿ ಕಥೆಯ ಘಟನೆಯನ್ನು ಆಧರಿಸಿ ಇಲ್ಲ ಎಂದಾಗಲೂ ತಿಳಿಸಬಹುದು. ಈ ಕಥೆಯಲ್ಲಿ ಕೆಲವು ಪದಗಳು ಮುಖ್ಯವಾಗಿವೆ “ಏಕೆಂದರೆ,” “ಒಮ್ಮೆ " ಮತ್ತು " ಹೊಂದಿದ್ದ.”

ಒಬ್ಬ ಲೇಖಕ ತಾನು ಕಥೆಬರೆಯುವಾಗ ‘“ ಹಿನ್ನೆಲೆ ಮಾಹಿತಿ “ ಯನ್ನು ಈ ಕಾರಣದಿಂದ ಉಪಯೋಗಿಸ ಬಹುದು.

  • ಓದುಗರಿಗೆ ಕಥೆಯಲ್ಲಿ ಆಸಕ್ತಿ ಹುಟ್ಟಿಸಲು ಸಹಕಾರಿಯಾಗಿ ಬಳಸಬಹುದು.
  • ಕಥೆಯಲ್ಲಿರುವ ಮೂಲ ಅರ್ಥವನ್ನು ಓದುಗರು ತಿಳಿದುಕೊಳ್ಳಲು.
  • ಕಥೆಯಲ್ಲಿ ಕೆಲವು ಅಂಶಗಳು ಏಕೆ ಮುಖ್ಯವಾಗುತ್ತವೆ ಎಂಬುದನ್ನು ಓದುಗರು ಅರ್ಥಮಾಡಿಕೊಳ್ಳಲು.
  • ಕಥೆಯ ಹಿನ್ನೆಲೆ / ಹಂದರವನ್ನು ಹೇಳಲು.
  • ಕಥೆಯ ಹಿನ್ನೆಲೆ / ಹಂದರದಲ್ಲಿ ಇರುವ ಅಂಶಗಳು:
  • ಕಥೆ ಎಲ್ಲಿ / ಯಾವಸ್ಥಳದಲ್ಲಿ ನಡೆಯಿತು ?
  • ಕಥೆ ಯಾವಾಗ ನಡೆಯಿತು ?
  • ಕಥೆ ಪ್ರಾರಂಭವಾದಾಗ ಯಾರು ಇದ್ದರು ?
  • ಕಥೆ ಪ್ರಾರಂಭವಾದಾಗ ಏನು ನಡೆಯಿತು ?

###ಕಾರಣ ಇದೊಂದು ಭಾಷಾಂತರ ವಿಷಯ

  • ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯ ಹಿನ್ನೆಲೆಮಾಹಿತಿಯನ್ನು ಮತ್ತು ಕಥೆಯ ಘಟನಾವಳಿಗಳನ್ನು ಹೊಂದಿರುತ್ತದೆ.
  • ಸತ್ಯವೇದದ ಭಾಷಾಂತರಗಾರರು ಸತ್ಯವೇದದಲ್ಲಿ ಬರುವ ಘಟನಾವಳಿಗಳ ಕ್ರಮ, ಯಾವ ಮಾಹಿತಿ, ಸನ್ನಿವೇಶ, ಹಿನ್ನೆಲೆ ಮಾಹಿತಿ ಕ್ರಮವಾಗಿ ಬರುತ್ತವೆ. ಮತ್ತು ಕಥೆಯ ಘಟನಾವಳಿಗಳ ಮಾಹಿತಿಗಳ ಕ್ರಮ ಇವುಗಳನ್ನು ತಿಳಿದುಕೊಳ್ಳಬೇಕು.
  • ಭಾಷಾಂತರಗಾರರು ಸತ್ಯವೇದದಲ್ಲಿ ಬರುವ ಕಥೆಯನ್ನು ಭಾಷಾಂತರರಿಸುವ ಹಿನ್ನೆಲೆ ಮಾಹಿತಿಯನ್ನು ಓದುಗರು ಘಟನಾವಳಿಗಳ ಕ್ರಮವನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ಯಾವುದು ಹಿನ್ನೆಲೆ ಮಾಹಿತಿ, ಯಾವುದು ಕಥೆಯ ಘಟನಾವಳಿಗಳ ಮಾಹಿತಿ ಎಂಬುದನ್ನು ಅರ್ಥಮಾಡಿಕೊಳ್ಳುವಂತಿರಬೇಕು.

ಸತ್ಯವೇದದಿಂದ ಉದಾಹರಣೆಗಳು.

ಹಾಗರಳು ಅಬ್ರಹಾಮನ ಮಗನಿಗೆ ಜನ್ಮನೀಡಿದಳು, ಅಬ್ರಹಾಮನು ಹಾಗರಳಿಂದ ಪಡೆದ ತನ್ನ ಮಗನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು. ಹಾಗರಳು ಇಷ್ಮಾಯೇಲನನ್ನು ಹೆತ್ತಾಗ ಅಬ್ರಹಾಮನಿಗೆಎಂಬತ್ತಾರು ವರುಷ ಆಗಿತ್ತು (ಆದಿಕಾಂಡ 16:16 ULB)

ಆ ಮೊದಲ ವಾಕ್ಯ ಎರಡು ಘಟನೆಗಳ ಬಗ್ಗೆ ಹೇಳುತ್ತದೆ. ಹಾಗರಳು ಮಗನಿಗೆ ಜನ್ಮಕೊಟ್ಟಳು ಮತ್ತು ಅಬ್ರಹಾಮನು ಅವನಿಗೆ ಹೆಸರಿಟ್ಟನು. ಎರಡನೆ ವಾಕ್ಯ ಹಿನ್ನೆಲೆ ಮಾಹಿತಿಯಂತೆ ಬಂದು, ಈ ಘಟನೆಗಳು ನಡೆಯುವಾಗ ಅಬ್ರಹಾನು ಎಷ್ಟು ವರ್ಷದವನಾಗಿದ್ದನು ಎಂಬುದನ್ನು ಸೂಚಿಸುತ್ತದೆ.

ಯೇಸು ಉಪದೇಶಮಾಡುವುದಕ್ಕೆ ಪ್ರಾರಂಭಿಸಿದಾಗ, ಹೆಚ್ಚು ಕಡಿಮೆ ಮುವತ್ತು ವರ್ಷದವನಾಗಿ ದ್ದನು . ಆತನು ಯೋಸೇಫನ ಮಗ . ಯೋಸೇಫನು ಏಲಿಯ ಮಗ ಎಂದು ಜನರು ತಿಳಿದಿದ್ದರು (ಲೂಕ 3:23 ULB)

ಈ ವಾಕ್ಯಕ್ಕಿಂತ ಮೊದಲು ಬಂದ ವಾಕ್ಯಗಳಲ್ಲಿ ಯೇಸುವಿಗೆ ಯಾವಾಗ ದೀಕ್ಷಾಸ್ನಾನವಾಯಿತು ಎಂದು ತಿಳಿದಿದೆ. ಈ ವಾಕ್ಯಗಳು ಯೇಸುವಿನ ವಯಸ್ಸು ಮತ್ತು ಪೂರ್ಜರ ಬಗ್ಗೆ ಹಿನ್ನೆಲೆ ಮಾಹಿತಿಯನ್ನು ಒದಗಿಸುತ್ತದೆ. ನಾಲ್ಕನೇ ಅಧ್ಯಾಯದಲ್ಲಿ ಈ ಕಥೆಯ ಘಟನೆ ಪುನಃ ಪ್ರಾರಂಭವಾಗಿ ಯೇಸು ಅಡವಿಯನ್ನು ಪ್ರವೇಶಿಸುವ ಬಗ್ಗೆ ತಿಳಿಸುತ್ತದೆ.

ಈಗ ಇದು ನಡೆದದ್ದು ಸಬ್ಬತ್ ದಿನದಂದು , ಯೇಸು ಹಸಿರು ಪೈರು ಬೆಳೆದ ಹೊಲಗಳನ್ನು ಹಾದುಹೋಗುವಾಗ ಆತನ ಶಿಷ್ಯರು ತೆನೆಗಳನ್ನು ಮುರಿದು ಕೈಗಳಲ್ಲಿ ಹೊಸಕಿ ತಿನ್ನುತ್ತಿದ್ದರು. ಆಗ ಪರಿಸಾಯರಲ್ಲಿ ಕೆಲವರು ಹೀಗೆ ಹೇಳಿದರು. (ಲೂಕ 6:1-2a ULB)

ಈ ವಾಕ್ಯಗಳು ಇಲ್ಲಿನ ಕಥೆಯ ಹಿನ್ನೆಲೆಯಾಗಿ ಬರುತ್ತದೆ. ಇಲ್ಲಿನ ಘಟನೆ ಭಾನುವಾರ / ಸಬ್ಬತ್ ದಿನದಂದುಹಸಿರು ಪೈರಿನ ಹೊಲದಲ್ಲಿ ನಡೆಯಿತು. ಯೇಸು,ಆತನ ಶಿಷ್ಯರು, ಮತ್ತು ಕೆಲವು ಪರಿಸಾಯರು ಅಲ್ಲಿದ್ದರು, ಯೇಸುವಿನ ಶಿಷ್ಯರು ಹೊಲದಲ್ಲಿನ ತೆನೆಗಳನ್ನು ಮುರಿದು ತಿನ್ನುತ್ತಿದ್ದರು. ಆದರೆ ಇಲ್ಲಿ ಕಥೆಯ ಪ್ರಾರಂಭದಲ್ಲೇ ಪರಿಸಾಯರು ಏನು ಹೇಳಿದರು ಎಂಬುದರೊಂದಿಗೆ ಪ್ರಾರಂಭವಾಗು ತ್ತದೆ.

ಭಾಷಾಂತರ ತಂತ್ರಗಳು.

ನಿಮ್ಮ ಭಾಷಾಂತರ ಸ್ಪಷ್ಟವಾಗಿಯೂ, ಸಹಜವಾಗಿಯೂ ಇರುವಂತೆ ಮಾಡಲು ನಿಮ್ಮ ಭಾಷೆಯ ಜನರು ಕಥೆಯನ್ನು ಹೇಗೆ ಹೇಳುತ್ತಾರೆ ಎಂಬುದನ್ನು ಕೇಳಿ ತಿಳಿದುಕೊಳ್ಳಬೇಕು ನಿಮ್ಮ ಭಾಷೆಯಲ್ಲಿ ಹಿನ್ನೆಲೆ ಮಾಹಿತಿಯನ್ನು ಹೇಗೆ ಬಳಸಿಕೊಳ್ಳಲಾಗಿದೆ ಎಂಬುದನ್ನು ಗಮನಿಸಿ. ಇವುಗಳನ್ನು ಅಳವಡಿಸಿಕೊಳ್ಳಲು ನೀವು ಕೆಲವು ಕಥೆಗಳನ್ನು ಬರೆದು ಅಭ್ಯಾಸಮಾಡಿಕೊಳ್ಳಬೇಕು. ನಿಮ್ಮ ಭಾಷೆಯಲ್ಲಿ ಹಿನ್ನೆಲೆ ಮಾಹಿತಿಯನ್ನುಬಳಸಿಕೊಳ್ಳುವಾಗ ಯಾವ ಕ್ರಿಯಾಪದಗಳನ್ನು, ಯಾವ ಪದಗಳನ್ನು ಮತ್ತು ಯಾವ ರೀತಿಯ ಗುರುತುಗಳನ್ನು ಬಳಸುತ್ತಾರೆ ಎಂಬುದನ್ನು ಗಮನಿಸಿ. ಈ ಅಂಶಗಳನ್ನು ನೀವು ಭಾಷಾಂತರಿಸುವಾಗ ಬಳಸಿದರೆ ನಿಮ್ಮ ಭಾಷಾಂತರ ಸ್ಪಷ್ಟ ಹಾಗೂ ಸಹಜವಾಗಿದ್ದು ಜನರು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

  1. ಕೆಲವು ಮಾಹಿತಿಗಳು ಹಿನ್ನೆಲೆ ಮಾಹಿತಿಗಳು ಎಂಬುದನ್ನು ನಿಮ್ಮ ಭಾಷೆಯಲ್ಲಿ ತೋರಿಸಿಕೊಡಿ.
  2. ಎಲ್ಲಾ ಘಟನೆಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ಬರೆಯಿರಿ ಇದರಿಂದ ಘಟನೆಗಳು ಕ್ರಮವಾಗಿ ಒಂದರನಂತರ ಒಂದು ಬರುತ್ತದೆ. (ಹಿನ್ನೆಲೆ ಮಾಹಿತಿ ತುಂಬಾ ದೀರ್ಘವಾಗಿದ್ದರೆ ಇದು ಸಾಧ್ಯವಾಗುವುದಿಲ್ಲ)

ಭಾಷಾಂತರದ ವಿಧಾನಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ಕೆಲವು ಮಾಹಿತಿಗಳು ಹಿನ್ನೆಲೆ ಮಾಹಿತಿಗಳು ಎಂಬುದನ್ನು ನಿಮ್ಮ ಭಾಷೆಯಲ್ಲಿ ತೋರಿಸಿಕೊಡಿ. ಕೆಳಗೆ ಕೊಟ್ಟಿರುವ ಉದಾಹರಣೆಗಳು ULBಯ ಇಂಗ್ಲೀಷ್ ಭಾಷೆಯ ಭಾಷಾಂತರದಲ್ಲಿ ಹೇಗೆ ಭಾಷಾಂತರವಾಗಿದೆ ಎಂಬುದನ್ನು ವಿವರಿಸುತ್ತದೆ.
  • ಈಗಯೇಸು ಉಪದೇಶಿಸಲು ಪ್ರಾರಂಭಿಸಿದಾಗ ಸುಮಾರು ಮುವತ್ತು ವರ್ಷದವನಾಗಿದ್ದ ಆತನು ಯೋಸೇಫನ ಮಗ ಯೋಸೇಫನು ಏಲಿಯ ಮಗ. (ಲೂಕ 3:23 ULB) ಇಂಗ್ಲೀಷ್ ಭಾಷೆಯಲ್ಲಿ “now” ಎಂಬ ಪದವನ್ನು ಬಳಸಿ ಕಥೆಯಲ್ಲಿ ಏನೋ ಬದಲಾವಣೆ ಇದೆ ಎಂದು ತೋರಿಸಲಾಗುತ್ತದೆ. “was” ಎಂಬ ಕ್ರಿಯಾ ಪದ ಇದು ಹಿನ್ನೆಲೆ ಮಾಹಿತಿ ಎಂಬುದನ್ನು ಸೂಚಿಸುತ್ತದೆ.

  • ಇನ್ನೂ ಅನೇಕ ಮಾತುಗಳಿಂದ ಇಸ್ರಾಯೇಲ್ ಜನರಿಗೆ ಬುದ್ಧಿ ಹೇಳಿ ಸುವಾರ್ತೆಯನ್ನು ಸಾರುತ್ತಿದ್ದನು. ಆದರೆ ಉಪರಾಜನಾದ ಹೆರೋದನು ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳನ್ನು ಮದುವೆಯಾಗಿ , ಮತ್ತು ತಾನು ಮಾಡಿದ ಎಲ್ಲಾ ದುಷ್ಕೃತ್ಯ ಗಳ ನಿಮಿತ್ತವಾಗಿ ಯೋಹಾನನು ಅವನನ್ನು ಗದರಿಸಿ ಎಚ್ಚರಿಸಿದನು . ಆದರೆ ಹೆರೋದನು ಇದೆಲ್ಲಕ್ಕಿಂತ ಕ್ರೂರವಾದ ದುಷ್ಕೃತ್ಯ ಮಾಡಿದನು. ಯೋಹಾನನ್ನು ಸೆರೆಮನೆಗೆ ಹಾಕಿಸಿದನು (ಲೂಕ3:18-20 ULB)ಈ ಎಲ್ಲಾ ಗುರುತಿಸಲ್ಪಟ್ಟ ವಾಕ್ಯಗಳು ಯೋಹಾನನು ಎಚ್ಚರಿಸುವ ಮೊದಲೇ ನಡೆದದ್ದು. ಇಂಗ್ಲೀಷ್ ಭಾಷೆಯಲ್ಲಿ ಸಹಾಯಕ ಕ್ರಿಯಾಪದವಾದ “had”, “had done” ಹೆರೋದನು ಯೋಹಾನನ್ನು ಗದರಿಸಿ ಎಚ್ಚರಿಸುವ ಮೊದಲೇ ನಡೆದದ್ದು ಎಂಬುದನ್ನು ಸೂಚಿಸುತ್ತದೆ.

  1. ಎಲ್ಲಾ ಘಟನೆಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ಬರೆಯಿರಿ ಇದರಿಂದ ಘಟನೆಗಳು ಕ್ರಮವಾಗಿ ಒಂದರನಂತರ ಒಂದು ಬರುತ್ತದೆ.
  • ಹಾಗರಳು ಅಬ್ರಹಾಮನ ಮಗನಿಗೆ ಜನ್ಮಕೊಟ್ಟಳು ಮತ್ತು ಅಬ್ರಹಾಮನು ಅವನ ಮಗನನ್ನು ಇಷ್ಮಾಯೇಲ್ ಎಂದು ಹೆಸರಿಟ್ಟು ಕರೆದನು. ಹಾಗರಳು ಇಷ್ಮಾಯೇಲ್ ನಿಗೆ ಜನ್ಮನೀಡಿದಾಗ ಅಬ್ರಹಾಮನು ಎಂಬತ್ತಾರು ವರ್ಷದವನಾಗಿದ್ದನು . (ಆದಿಕಾಂಡ 16:16 ULB)

    • "ಅಬ್ರಹಾಮನು ಎಂಬತ್ತಾರು ವರ್ಷದವನಾಗಿದ್ದಾಗ , ಹಾಗರಳು ಅವನ ಮಗನಿಗೆ ಜನ್ಮನೀಡಿದಳು ಮತ್ತು ಅಬ್ರಹಾಮನು ಅವನ ಮಗನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು.
  • ಉಪರಾಜನಾದ ಹೆರೋದನು , ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳನ್ನುಮದುವೆಮಾಡಿಕೊಂಡ , ಮತ್ತು ಅವನು ಮಾಡಿದ ಎಲ್ಲಾ ದುಷ್ಕೃತ್ಯಗಳ ನಿಮಿತ್ತವಾಗಿ ಯೋಹಾನನು ಅವನನ್ನು ಗದರಿಸಿ ಎಚ್ಚರಿಸಿದನು , ಆಮೇಲೆ ಹೆರೋದನು ಇದೆಲ್ಲಕ್ಕಿಂತ ಕ್ರೂರವಾದ ದುಷ್ಕೃತ್ಯ ಮಾಡಿದನು. ಅವನು ಯೋಹಾನನನ್ನು ಸೆರೆಮನೆಗೆ ಹಾಕಿಸಿದನು. (ಲೂಕ 3:18-20) - ಕೆಳಗೆ ಕೊಟ್ಟಿರುವ ಭಾಷಾಂತರವು ಯೋಹಾನನು ಗದರಿಸಿ ಎಚ್ಚರಿಸಿದ ಬಗ್ಗೆ ಮತ್ತು ಹೆರೋದನು ಮಾಡಿದ ಕಾರ್ಯಗಳನ್ನು ಕ್ರಮಗೊಳಿಸಬೇಕು. ಉಪರಾಜನಾದ ಹೆರೋದನು ಅವನ ಅಣ್ಣನ ಹೆಂಡತಿಯಾದ ಹೆರೋದ್ಯಳನ್ನು ಮದುವೆಯಾದನು ಇದರೊಂದಿಗೆ ಅನೇಕ ದುಷ್ಕೃತ್ಯ ಗಳನ್ನು ಮಾಡಿದ್ದರಿಂದ ಯೋಹಾನನು ಗದರಿಸಿ ಎಚ್ಚರಿಸಿದನು. ಇದರಿಂದ ಹೆರೋದನು ಇನ್ನೂ ಹೆಚ್ಚಾದ ದುಷ್ಕೃತ್ಯಗಳನ್ನು ಮಾಡಿದನು. ಯೋಹಾನನನ್ನು ಸೆರೆಮನೆಗೆ ಹಾಕಿಸಿದನು"


ಸಂಪರ್ಕ ಕಲ್ಪಿಸುವ ಪದಗಳು.

Translation Manual :: Just-in-Time Learning Modules :: Writing Styles (Discourse) :: Connecting Words

ವಿವರಣೆಗಳು.

ಸಂಪರ್ಕ ಕಲ್ಪಿಸುವ ಪದಗಳು ಅವುಗಳನ್ನು conjunctions. ಸಂಯೋಗ ಕಲ್ಪಿಸುವ ಅವ್ಯಯ.

ಈ ಪುಟದಲ್ಲಿ ಸಂಯೋಗ ಕಲ್ಪಿಸುವ / ಸಂಪರ್ಕ ಕಲ್ಪಿಸುವ ಪದಗಳು ಎರಡು ವಾಕ್ಯಗಳನ್ನು ಮತ್ತು ಅನೇಕ ವಾಕ್ಯಗಳನ್ನು ಸೇರಿಸಿ ವಾಕ್ಯಮಾಡುವಂತಾದ್ದು ಇಂತಹ ಸಂಪರ್ಕ ಕಲ್ಪಿಸುವ ಕೆಲವು ಪದಗಳನ್ನು ಇಲ್ಲಿ ಕೊಟ್ಟಿದೆ : ಮತ್ತು, ಆದರೆ, ಇದಕ್ಕಾಗಿ / ಅದಕ್ಕಾಗಿ, ಆದುದರಿಂದ, ಈಗ, ರೇ, ಚೆನ್ನಾಗಿದ್ದರೆ, ಅಲ್ಲಿಂದ, ಆಗ, ಯಾವಾಗ, ಇದು ನಡೆಯುತ್ತಿರುವಾಗ, ಏಕೆಂದರೆ, ಎಲ್ಲಿದ್ದರೂ, ಇದುವರೆಗೂ, ಇಲ್ಲದಿದ್ದರೆ.

  • ಮಳೆ ಬರುತ್ತಿತ್ತು,* ಆದುದರಿಂದನಾನು ಛತ್ರಿಯನ್ನು ತೆರೆದೆನು.
  • ಮಳೆ ಬರುತ್ತಿತ್ತು,* ಆದರೆ ನನ್ನ ಬಳಿ ಛತ್ರಿ ಇರಲಿಲ್ಲ ಇದರಿಂದನಾನು ನೆನೆದು ಒದ್ದೆಯಾದೆ ಪಠ್ಯದ ಆಧಾರದ ಮೇಲೆ ಓದುಗರು ವಾಕ್ಯಗಳ ನಡುವೆ ಇರುವ ಸಂಪರ್ಕವನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂಬ ನಿರೀಕ್ಷೆಯಿಂದ ಕೆಲವೊಮ್ಮೆ ಇಂತಹ ಸಂಪರ್ಕ ಕಲ್ಪಿಸುವ ಪದಗಳನ್ನು ಬಳಸುವುದಿಲ್ಲ
  • ಮಳೆ ಬರುತ್ತಿತ್ತು ನನ್ನ ಬಳಿ ಛತ್ರಿ ಇರಲಿಲ್ಲ. ನಾನು ನೆನೆದು ಒದ್ದಯಾದೆ

ಕಾರಣ ಇದೊಂದು ಭಾಷಾಂತರ ವಿಷಯ.

  • ಭಾಷಾಂತರಗಾರರು ಸತ್ಯವೇದದಲ್ಲಿರುವ ವಾಕ್ಯಗಳನ್ನು ಸಂಪರ್ಕ ಕಲ್ಪಿಸುವ ಪದಗಳು ಮತ್ತು ವಾಕ್ಯಗಳು ಮತ್ತು ವಿಷಯಗಳ ನಡುವೆ ಇರುವ ಸಂಬಂಧಗಳನ್ನು ಮೊದಲು ಅರ್ಥಮಾಡಿಕೊಳ್ಳಬೇಕು,.
  • ಪ್ರತಿಯೊಂದು ಭಾಷೆಯಲ್ಲಿ ಅದರದೇ ಆದ ಆಲೋಚನೆಗಳು / ವಿಷಯಗಳ ನಡುವೆ ಹೇಗೆ ಸಂಬಂಧ ಕಲ್ಪಿಸಬಹುದು ಎಂಬ ಶೈಲಿ ಇರುತ್ತದೆ.
  • ಭಾಷಾಂತರಗಾರರು ಭಾಷಾಂತರ ಭಾಷೆಯಲ್ಲಿ ತಾವು ಭಾಷಾಂತರ ಮಾಡುತ್ತಿರುವ ಭಾಷೆಯ ಓದುಗರು ತಮ್ಮ ಭಾಷೆಯಲ್ಲಿನ ವಿಷಯವನ್ನು / ಆಲೋಚನೆಯನ್ನು ಅರ್ಥಮಾಡಿಕೊಳ್ಳಲು ಅವುಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವಂತೆ, ಸಹಜವಾಗಿ ಇರುವಂತೆ ಸಹಾಯಮಾಡಲು ತಿಳಿದಿರಬೇಕು.

ಭಾಷಾಂತರ ತತ್ವಗಳು.

  • ಮೂಲ ವಾಕ್ಯಭಾಗಗಳನ್ನು ಅರ್ಥಮಾಡಿಕೊಂಡ ಓದುಗರಂತೆ ಭಾಷಾಂತರವಾದ ಭಾಷೆಯ ಓದುಗರು ವಿಷಯಗಳನ್ನು, ವಿಷಯಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವಂತೆ ಭಾಷಾಂತರಗಾರರು ಭಾಷಾಂತರ ಮಾಡಬೇಕು.
  • ಸಂಪರ್ಕ ಕಲ್ಪಿಸುವ ಪದಗಳನ್ನು ಬಳಸುವುದು ಇಲ್ಲವೇ ಬಳಸದಿರುವುದು ಮುಖ್ಯವಲ್ಲ, ಆದರೆ ಓದುಗರು ವಿಷಯಗಳ ನಡುವಿನ ಸಂಬಂಧದ ಬಗ್ಗೆ ಅರ್ಥಮಾಡಿಕೊಳ್ಳುವುದು ಮುಖ್ಯ.

ಸತ್ಯವೇದದಿಂದ ಉದಾಹರಣೆಗಳು.

ನಾನು ಅನ್ಯ ಜನರಲ್ಲಿ ಪ್ರಸಿದ್ಧಿಪಡಿಸುವವನಾಗಬೇಕೆಂದು ಆತನನ್ನು ನನ್ನೊಳಗೆ ಪ್ರಕಟಿಸುವುದಕ್ಕೆ ಇಚ್ಛಿಸಿದಾಗಲೇ ನಾನು ಮನುಷ್ಯರ ಆಲೋಚನೆಯನ್ನು ವಿಚಾರಿಸದೆ ಯೇರೋಸಲಮಿಗೆ ನನಗಿಂತ ಮುಂಚೆ ಅಪೋಸ್ತಲರಾಗಿದ್ದವರ ಬಳಿಗೂ ಹೋಗದೆ ಅರಬಸ್ಥಾನಕ್ಕೆಹೋದನು ಆದರೆ ಪುನಃ ದಮಾಸ್ಕಕ್ಕೆ ಬಂದನು. ಮೂರು ವರ್ಷಗಳಾದ ಮೇಲೆ ಕೇಫನ ಪರಿಚಯ ಮಾಡಿಕೊಳ್ಳಬೇಕೆಂದು ಯೆರುಸಲೇಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿನ ಇದ್ದನು. (ಗಲಾತ್ಯರು 1:16-18 ULB)

ಕೆಲವೊಮ್ಮೆ "ಆದರೆ " ಎಂಬ ಪದ ಮೊದಲು ಹೇಳಿದವಿಷಯದ ಬಗ್ಗೆ ಭಿನ್ನ ಹೇಳಿಕೆಯನ್ನು ಪರಿಚಯಿಸಲು ಬಳಸಲಾಗುವುದು. ಇಲ್ಲಿರುವ ಭಿನ್ನತೆ ಯಾವುದೆಂದರೆ ಪೌಲನು ಮಾಡದೆ ಇರುವ ಕೆಲಸ ಮತ್ತು ಪೌಲನು ಮಾಡಿದ ಕೆಲಸದ ನಡುವೆ ಇರುವಂತದ್ದು. ಇಲ್ಲಿ ಬಳಕೆಯಾಗಿರುವ ಪದ “then” “ಆಗ” ಎಂಬ ಪದ ಪೌಲನು ದಮಾಸ್ಕಕ್ಕೆ ಹಿಂತಿರುಗಿ ಬಂದಮೇಲೆ ಏನು ಮಾಡಿದ ಎಂಬುದನ್ನು ತಿಳಿಸುತ್ತದೆ.

ಆದುದರಿಂದಈ ಸಣ್ಣ ಸಣ್ಣ ಆಜ್ಞೆಗಳಲ್ಲಿ ಮತ್ತುಜನರನ್ನು ಹಾಗೆ ಮಾಡುವಂತೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಬಹು ಚಿಕ್ಕವನೆನಿಸಿಕೊಳ್ಳುವನು ಆದರೆತಾನೇ ಆ ಆಜ್ಞೆಗಳಂತೆ ನಡೆದುಕೊಂಡು ಜನರಿಗೆ ಅದರಂತೆ ನಡೆಯಬೇಕೆಂದು ಬೋಧಿಸುವವರು ಪರಲೋಕರಾಜ್ಯದಲ್ಲಿ ದೊಡ್ಡವನೆನಿಸಿಕೊಳ್ಳುವನು. (Matthew 5:19 ULB) ಮತ್ತಾಯ

“ಆದುದರಿಂದ” ಎಂಬ ಪದ ಈಗಾಗಲೇ ಹೇಳಿರುವ ಹಿಂದಿನ ವಾಕ್ಯಕ್ಕೆ ಸಂಬಂಧಿಸಿದೆ. “ಆದುದರಿಂದ” ಎಂಬ ಪದ ಸಾಮಾನ್ಯವಾಗಿ ಒಂದು ವಾಕ್ಯಕ್ಕಿಂತ ಅನೇಕ ವಾಕ್ಯಭಾಗವನ್ನು ಸೇರಿಸುತ್ತದೆ, “ಮತ್ತು” ಎಂಬ ಪದ ಎರಡು ಕ್ರಿಯೆಗಳನ್ನು ಒಂದೇವಾಕ್ಯದಲ್ಲಿ ಸೇರಿಸಿ ಹೇಳುತ್ತದೆ.ಇವು ಆಜ್ಞೆಗಳನ್ನು ಮೀರಿ ಮತ್ತು ಇತರರಿಗೆ ಬೋಧಿಸುವುದನ್ನು ಸೂಚಿಸುತ್ತದೆ. ಈ ವಾಕ್ಯದಲ್ಲಿ “ಆದರೆ” ಎಂಬ ಪದ ಪರಲೋಕರಾಜ್ಯದಲ್ಲಿ ಒಂದು ಗುಂಪಿನ ಜನರನ್ನು ಏನೆಂದು ಕರೆಯುತ್ತಾರೆ ಮತ್ತು ಇನ್ನೊಂದು ರೀತಿಯ ಗುಂಪನ್ನು ಏನೆಂದು ಕರೆಯುತ್ತಾರೆ ಎಂಬ ಭಿನ್ನ ವಾಕ್ಯಗಳನ್ನು ತಿಳಿಸುತ್ತದೆ.

ನಾವು ಸಂಕಟಗಳಲ್ಲಿಯೂ,ಕೊರತೆಗಳಲ್ಲಿಯೂ, ಇಕ್ಕಟ್ಟುಗಳಲ್ಲಿಯೂ, ಪೆಟ್ಟುಗಳಲ್ಲಿಯೂ, ನೆರೆಮನೆ ಗಳಲ್ಲಿಯೂ, ನಿಂದೆಗೆ ಅವಕಾಶಕೊಡದೆ, ಅದರ ಬದಲುಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗುವಂತೆ ಮಾಡಿಕೊಳ್ಳುತ್ತೇವೆ . (2 ಕೋರಿಂಥ 6:3-4 ULB)

ಇಂಗ್ಲೀಷ್ ವಾಕ್ಯದಲ್ಲಿರುವ “for” “ಇದಕ್ಕಾಗಿ” ವಾಕ್ಯಕ್ಕೆ ಕಾರಣಕೊಡುವ ರೀತಿಯಲ್ಲಿ ಇದೇ ವಾಕ್ಯ ಪೌಲನು ಯಾವತಡೆಯನ್ನೂ ಒಡ್ಡದೆ ತನ್ನ ಸುವಾರ್ತಾ ಸೇವೆ ಮುಂದುವರೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ. “ಅದರ ಬದಲು” ಎಂಬ ಪದ ಪೌಲನು ಏನು ಮಾಡುತ್ತಾನೆ ಮತ್ತು ಅವನು ಏನು ಮಾಡುವುದಿಲ್ಲ ಎಂಬ ಎರಡು ಭಿನ್ನವಾಕ್ಯ ತಿಳಿಸಿದ್ದಾನೆ, (ಅವನು ತಾನು ದೇವರಸೇವಕ ಎಂಬುದನ್ನು ತನ್ನ ಕಾರ್ಯಗಳ ಮೂಲಕ ತಿಳಿಸುತ್ತಾನೆ.

ಭಾಷಾಂತರ ತಂತ್ರಗಳು

ಎರಡು ವಿಚಾರಗಳ ನಡುವೆ ಇರುವ ಸಂಬಂಧವನ್ನು ULB ಯಲ್ಲಿ ಸಹಜವಾಗಿ ಮತ್ತು ನಿಮ್ಮ ಭಾಷೆಯಲ್ಲಿ ಸರಿಯಾದ ಅರ್ಥನೀಡುವುದಾದರೆ ಅದನ್ನೇ ಬಳಸಿಕೊಳ್ಳಿ. ಹಾಗೆ ಇಲ್ಲದಿದ್ದರೆ ಇಲ್ಲಿ ಕೊಟ್ಟಿರುವ ಆಯ್ಕೆಗಳನ್ನು ಗಮನಿಸಿ

  1. ಸಂಪರ್ಕ ಕಲ್ಪಿಸುವ ಪದವನ್ನು ಬಳಸಿ (ULB ಯಲ್ಲಿ ಇದನ್ನು ಉಪಯೋಗಿಸದಿದ್ದರೂ ಸರಿ)
  2. ಸಂಪರ್ಕ ಕಲ್ಪಿಸುವ ಪದ ಅಸಹಜವಾಗಿ ಕಂಡುಬಂದರೆ ಅದನ್ನು ಬಳಸಬೇಡಿ. ವಿಷಯಗಳ ನಡುವಿನ ಸಂಬಂಧವನ್ನು ಸುಲಭವಾಗಿ ಬಳಸದೇ ಇರುವುದೇ ಒಳ್ಳೆಯದು.
  3. ವಿಭಿನ್ನವಾದ ಸಂಪರ್ಕ ಕಲ್ಪಿಸುವ ಪದಗಳನ್ನು ಬಳಸಬಹುದು.

ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ಸಂಪರ್ಕ ಕಲ್ಪಿಸುವ ಪದವನ್ನು ಬಳಸಿ (ULB ಯಲ್ಲಿ ಇದನ್ನು ಉಪಯೋಗಿಸದಿದ್ದರೂ ಸರಿ)
  • ಯೇಸು ಅವರಿಗೆ " ನನ್ನ ಹಿಂದೆ ಬನ್ನಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು " ತಕ್ಷಣವೇ, ಅವರು ತಮ್ಮ ಬಲೆಗಳನ್ನುಬಿಟ್ಟು ಆತನ ಹಿಂದೆ ಹೋದರು. (ಮಾರ್ಕ 1:17-18 ULB) -ಅವರು ಯೇಸುವನ್ನು ಹಿಂಬಾಲಿಸಿದರು ಏಕೆಂದರೆಆತನು ಅವರಿಗೆ ಹೀಗೆ ಹೇಳಿದನು ಕೆಲವು ಭಾಷಾಂತರಗಾರರು ಈ ಪದವನ್ನು “ಆದುದರಿಂದ.” ಎಂಬ ಪದವನ್ನು ಬಳಸಿದ್ದಾರೆ.
    • ಯೇಸು ಅವರಿಗೆ ನನ್ನ ಹಿಂದೆ ಬನ್ನಿರಿ, ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು " ಎಂದು ಹೇಳಿದ ಆದುದರಿಂದ ತಕ್ಷಣವೇ, ಅವರು ತಮ್ಮ ಬಲೆಗಳನ್ನುಬಿಟ್ಟು ಆತನನ್ನು ಹಿಂಬಾಲಿಸಿದರು.
  1. ಸಂಪರ್ಕ ಕಲ್ಪಿಸುವ ಪದ ಅಸಹಜವಾಗಿ ಕಂಡುಬಂದರೆ ಅದನ್ನು ಬಳಸಬೇಡಿ. ವಿಷಯಗಳ ನಡುವಿನ ಸಂಬಂಧವನ್ನು ಸುಲಭವಾಗಿ ಬಳಸದೇ ಇರುವುದೇ ಒಳ್ಳೆಯದು.
  • ಆದುದರಿಂದ ಈ ಸಣ್ಣ ಸಣ್ಣ ಆಜ್ಞೆಗಳಲ್ಲಿಯಾವುದಾದರೂ ಒಂದನ್ನು ಮೀರಿ ಮತ್ತುಜನರಿಗೆ ಹಾಗೆ ಮೀರುವಂತೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಬಹು ಚಿಕ್ಕವನೆನಿಸಿಕೊಳ್ಳುವನು ಆದರೆತಾನೇ ಆ ಆಜ್ಞೆಗಳಂತೆ ನಡೆದುಕೊಂಡು ಜನರಿಗೂ ಹಾಗೆ ನಡೆಯಬೇಕೆಂದು ಬೋಧಿಸುವವರು ಪರಲೋಕರಾಜ್ಯದಲ್ಲಿ ದೊಡ್ಡವನೆನಿಸಿಕೊಳ್ಳುವನು. (ಮತ್ತಾಯ5:19 ULB) - ಕೆಲವು ಭಾಷೆಯಲ್ಲಿ ಇಂತಹ ಸಂಪರ್ಕಕಲ್ಪಿಸುವ ಪದಗಳನ್ನು ಬಳಸಲು ಬಯಸಲಾರರು, ಏಕೆಂದರೆ ಇಲ್ಲಿ ಇಂತಹ ಪದಗಳನ್ನು ಬಳಸದೆಯೇ ಅರ್ಥಪೂರ್ಣವಾಕ್ಯಗಳನ್ನು ಮಾಡಬಹುದು ಮತ್ತು ಅದನ್ನು ಮೀರಿ ಉಪಯೋಗಿಸಿದರೆ ಅಸಹಜವಾಗಿ ಕಂಡುಬರಬಹುದು. ಆಗ ಅವರು ಈ ರೀತಿ ಭಾಷಾಂತರಿಸಬಹುದು.

    • ಆದುದರಿಂದ ಯಾರು ದೇವರ ಆಜ್ಞೆಗಳನ್ನು ಮೀರಿ, ಹಾಗೆ ಮಾಡುವಂತೆ ಬೋಧಿಸುತ್ತಾರೋ ಅವರನ್ನು ಪರಲೋಕ ರಾಜ್ಯದಲ್ಲಿ ಬಹಳ ಚಿಕ್ಕವರೆಂದು ಪರಿಗಣಿಸಲಾಗುವುದು. ಯಾರು ದೇವರ ಆಜ್ಞೆಗಳಂತೆ ನಡೆದು, ಅದರಂತೆ ನಡೆಯುವಂತೆ ಜನರಿಗೂ ಬೋಧಿಸುತ್ತಾರೋ ಅವರನ್ನು ಪರಲೋಕರಾಜ್ಯದಲ್ಲಿ ದೊಡ್ಡವರೆಂದು ಪರಿಗಣಿಸಲಾಗುವುದು.
  • ನಾನು ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಪ್ರತ್ಯೇಕಿಸಿ ತನ್ನ ಕೃಪೆಯಿಂದ ಕರೆದ ದೇವರು ತನ್ನ ಮಗನನ್ನು ಅನ್ಯ ಜನರಲ್ಲಿ ಪ್ರಸಿದ್ಧಿಪಡಿಸುವುದಕ್ಕಾಗಿ ಆತನನ್ನು ನನ್ನೊಳಗೆ ಪ್ರಕಟಿಸುವುದಕ್ಕೆ ಇಚ್ಛಿಸದೆ ನಾನು ಮನುಷ್ಯರ ಆಲೋಚನೆಯನ್ನು ವಿಚಾರಿಸದೆ ಯೆರುಸಲೇಮಿಗೆ ನನಗಿಂತ ಮುಂಚೆ ಅಪೋಸ್ತಲರಾಗಿದ್ದವರ ಬಳಿಗೂ ಹೋಗದೆ ಅರಬಸ್ಥಾನಕ್ಕೆಆದರೆ ಹೋಗಿ ಪುನಃ ದಮಾಸ್ಕಕ್ಕೆ ಬಂದನು ಆಗ . ಮೂರು ವರ್ಷಗಳಾದ ಮೇಲೆ ಕೇಫನ ಪರಿಚಯ ಮಾಡಿಕೊಳ್ಳಬೇಕೆಂದು ಯೇರೋಸಲಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿನ ಇದ್ದೆನು. (ಗಲಾತ್ಯ 1:16-18 ULB) - ಕೆಲವು ಭಾಷೆಗಳಲ್ಲಿ ಇಂತಹ ಸಂದರ್ಭದಲ್ಲಿ “ಆದರೆ” ಅಥವಾ “ಆಗ” ಎಂಬ ಪದಗಳ ಅವಶ್ಯಕತೆ ಇರುವುದಿಲ್ಲ

    • ನಾನು ತಕ್ಷಣವೇ ಮನುಷ್ಯರ ಆಲೋಚನೆಯನ್ನು ವಿಚಾರಿಸದೆ ಯೆರುಸಲೇಮಿಗೆ ನನಗಿಂತ ಮುಂಚೆ ಅಪೋಸ್ತಲರಾಗಿದ್ದವರ ಬಳಿಗೆ ಹೋಗಲಿಲ್ಲ. ಅದರ ಬದಲು ನಾನು ಅರಬಸ್ಥಾನಕ್ಕೆ ಹೋಗಿ ಪುನಃ ದಮಾಸ್ಕಕ್ಕೆ ಬಂದೆನು. ಮೂರು ವರ್ಷಗಳನಂತರ ಕೇಫನನನ್ನು ಭೇಟಿಮಾಡಲು ನಾನು ಯೆರುಸಲೇಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿನ ಇದ್ದೆನು.
  1. ಇಲ್ಲಿ ವಿಭಿನ್ನವಾದ ಸಂಪರ್ಕ ಕಲ್ಪಿಸುವ ಪದ ಬಳಸಿ.
  • ಆದುದರಿಂದ ದೇವರ ಆಜ್ಞೆಗಳನ್ನು ಮೀರಿ ಜನರಿಗೂ ಹಾಗೆ ಮಾಡುವಂತೆ ಬೋಧಿಸುವವನು ಪರಲೋಕರಾಜ್ಯದಲ್ಲಿ ಅತಿಚಿಕ್ಕವನೆಂದು ಪರಿಗಣಿಸಲ್ಪಡುವನು. ಆದರೆ/u>ಯಾರು ದೇವರ ಆಜ್ಞೆಗಳಂತೆ ನಡೆದು ಅದರಂತೆ ನಡೆಯುವಂತೆ ಬೋಧಿಸುವನೋ ಅವನು ಪರಲೋಕರಾಜ್ಯದಲ್ಲಿ ದೊಡ್ಡವನೆಂದು ಪರಿಗಣಿಸಲ್ಪಡುವನು. (ಮತ್ತಾಯ 5:19 ULB) " ಆದುದರಿಂದ "ಎಂಬ ಪದವನ್ನು ಭಾಷೆಯಲ್ಲಿ ಬಳಸುವಾಗ ಮೊದಲ ವಾಕ್ಯವನ್ನು ಹೇಳುವಾಗ ಹಿಂದಿನ ವಾಕ್ಯಗಳನ್ನು ಅನುಸರಿಸಿ ಬರುತ್ತವೆ. " ಆದರೆ " ಎಂಬ ಪದವನ್ನು ಬಳಸಿದೆ ಏಕೆಂದರೆ ಎರಡು ಗುಂಪುಗಳ ನಡುವೆ ವಿಭಿನ್ನ ರೀತಿಯಲ್ಲಿ ಬಳಸಲಾಗಿದೆ. ಇದರೊಂದಿಗೆ " ಆದರೆ " ಎಂಬ ಪದ ಕೆಲವು ಭಾಷೆಗಳಲ್ಲಿ ಒಂದು ಪದದನಂತರ ಬರುವ ಪದ ಆಶ್ಚರ್ಯಕರವಾಗಿರುತ್ತದೆ, ಏಕೆಂದರೆ ಮೊದಲು ಬಂದ ಪದದ ನಂತರ ಬರುವಂತದ್ದು ಆದುದರಿಂದ " ಮತ್ತು " ಎಂಬ ಪದ ಆ ಭಾಷೆಗಳಲ್ಲಿ ಸ್ಪಷ್ಟವಾಗಿರುತ್ತದೆ.

    • ಏಕೆಂದರೆ , ದೇವರ ಆಜ್ಞೆಗಳನ್ನು ಯಾರು ಮೀರಿನಡೆದು ಅದರಂತೆ ನಡೆಯವಂತೆ ಇತರರಿಗೆ ಬೋಧಿಸುತ್ತಾರೋ ಅವರನ್ನು ಪರಲೋಕರಾಜ್ಯದಲ್ಲಿ ಅತಿಚಿಕ್ಕವರಂತೆ ಕರೆಯಲ್ಪಡುತ್ತಾರೆ. ಮತ್ತು ಯಾರು ದೇವರ ಆಜ್ಞೆಗಳನ್ನು ಅನುಸರಿಸಿ ನಡೆದು ಅದರಂತೆ ನಡೆಯುವಂತೆ ಇತರರಿಗೆ ಬೋಧಿಸಿದರೆ ಅವನು ಪರಲೋಕರಾಜ್ಯದಲ್ಲಿ ದೊಡ್ಡವನಾಗಿ ಪರಿಗಣಿಸಲ್ಪಡುವನು.
  • ಅಂದಿನಿಂದಆ ಸಹಸ್ರಾಧಿಪತಿಯು ಯಾರು ? ಏನು ಮಾಡಿದ್ದಾನೆ ? ಎಂದು ಕೇಳಲು ಗದ್ದಲದಿಂದ ನಿಜ ಸ್ಥಿತಿಯನ್ನು ತಿಳಿಯಲು ಆಗದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡುಹೋಗಿರೆಂದು ಹೇಳಿದನು. (ಆ.ಕೃ.21:34 ULB) – ಅದರ ಬದಲು ವಾಕ್ಯದ ಮೊದಲ ಭಾಗವನ್ನು ಅಂದಿನಿಂದ ಎಂಬ ಪದದಿಂದ ಪ್ರಾರಂಭಿಸಿದರೋ ಎರಡನೇ ಭಾಗವನ್ನು " ಆದುದರಿಂದ " ಎಂಬ ಪದ ಬಳಸಿ ಅದೆ ಸಂಬಂಧವನ್ನು ತೋರಿಸುತ್ತದೆ.

    • " ಸಹಸ್ರಾಧಿಪತಿಗೆ ಜನರ ಗದ್ದಲದಿಂದ ಏನೂ ಕೇಳಿಸಲಿಲ್ಲ ಆದುದರಿಂದ , ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಲು ತಿಳಿಸಿದ."

ಕಥೆಯ ಮುಕ್ತಾಯ

Translation Manual :: Just-in-Time Learning Modules :: Writing Styles (Discourse) :: End of Story

ವಿವರಣೆ

ಕಥೆಯು ಮುಕ್ತಾಯವಾಗುವಾಗ ವಿವಿಧ ರೀತಿಯ ಮಾಹಿತಿಗಳನ್ನು ಕೊಡಬಹುದು. ಕೆಲವೊಮ್ಮೆ ಈ ಮಾಹಿತಿಗಳು ಕಥೆಯ ಹಿನ್ನೆಲೆಯಾಗಿಯೂ ಬರಬಹುದು. ಕೆಲವೊಮ್ಮೆ ಈ ಹಿನ್ನೆಲೆಯಾಗಿ ಬರುವ ಮಾಹಿತಿಗಳು ಮುಖ್ಯಕಥೆಯಲ್ಲಿ ಇರುವ ಪ್ರಕ್ರಿಯೆಯಾಗಿ ಬರುವ ವಿಷಯದಿಂದ ಭಿನ್ನವಾಗಿರುತ್ತದೆ. ಸತ್ಯವೇದದಲ್ಲಿ ಅನೇಕ ಪುಸ್ತಕಗಳಿವೆ ಒಂದೊಂದು ಪುಸ್ತಕವು ಅನೇಕ ಚಿಕ್ಕ ಕಥೆಗಳಿಂದ ಕೂಡಿರುತ್ತದೆ. ಉದಾಹರಣೆಗೆ ಲೂಕನು ಬರೆದ ಸುವಾರ್ತೆ ಒಂದು ಪುಸ್ತಕ. ಇದರಲ್ಲಿ ಯೇಸುಕ್ರಿಸ್ತನ ಜನನದ ಮಾಹಿತಿ ಒಂದು ಚಿಕ್ಕ ಕಥೆ. ಹೀಗೆ ಬರುವ ಎಲ್ಲಾ ಕಥೆಗಳು ಚಿಕ್ಕದಾಗಿದ್ದರೂ ದೊಡ್ಡದಾಗಿದ್ದರೂಅದಕ್ಕೆ ಅವುಗಳದೇ ಆದ ಹಿನ್ನೆಲೆ ಮಾಹಿತಿ ಇರುತ್ತದೆ.

ಕಥೆಯ ಮುಕ್ತಾಯಕ್ಕೆ ಬೇಕಾದ ಮಾಹಿತಿಯ ವಿವಿಧ ಉದ್ದೇಶಗಳು

  • ಕಥೆಯನ್ನು ಸಂಕ್ಷಿಪ್ತಗೊಳಿಸಲು.
  • ಕಥೆಯಲ್ಲಿ ನಡೆದ ಘಟನೆಗಳ ಬಗ್ಗೆ ಸ್ಪಷ್ಟೀಕರಣ ನೀಡುವುದು.
  • ದೊಡ್ಡ ಕಥೆಯೊಂದಿಗೆ (ಮುಖ್ಯ ಕಥೆಯೊಂದಿಗೆ) ಚಿಕ್ಕ ಕಥೆಯನ್ನು ಸೇರಿಸುವುದು.
  • ಮುಖ್ಯ ಕಥೆಕೊನೆಗೊಳ್ಳುವಾಗ ನಿರ್ದಿಷ್ಟ ಪಾತ್ರ ಏನಾಗುತ್ತದೆ ಎಂಬುದನ್ನು ಅರ್ಥವಾಗುವಂತೆ ಹೇಳುವುದು.
  • ಮುಖ್ಯಕಥೆ ಕೊನೆಗೊಳ್ಳುವಾಗ ಪ್ರಾರಂಭವಾದ ಪ್ರಕ್ರಿಯೆ ಮುಂದುವರೆಯಬೇಕು.
  • ಕಥೆಯಲ್ಲಿ ನಡೆದ ಮುಖ್ಯಘಟನೆಗಳು ಫಲಿತಾಂಶದಿಂದ ಏನು ನಡೆಯುತ್ತದೆ ಎಂಬುದನ್ನು ಹೇಳುವುದು.

####ಕಾರಣ ಇದೊಂದು ಭಾಷಾಂತರ ಸಮಸ್ಯೆ

  • ಇಂತಹ ಮಾಹಿತಿಗಳನ್ನು ವಿವಿಧ ರೀತಿಯಲ್ಲಿ ವಿವಿಧ ಭಾಷೆಯಲ್ಲಿ ತಿಳಿಸುತ್ತಾರೆ. ಭಾಷಾಂತರಕಾರರು ಈ ರೀತಿ ಮಾಡದಿದ್ದರೆ ಅವರ ಭಾಷೆಯ ಓದುಗರು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಕೆಳಗಿನ ಕಾರಣಗಳಿಂದ ಸಾಧ್ಯವಾಗುವುದಿಲ್ಲ:.
  • ಈ ಮಾಹಿತಿಯು ಕಥೆಯನ್ನು ಮುಕ್ತಾಯಗೊಳಿಸುತ್ತದೆ ಎಂದು.
  • ಈ ಮಾಹಿತಿಯ ಉದ್ದೇಶ ಏನೆಂದು ತಿಳಿಯುವುದಿಲ್ಲ.
  • ಈ ಮಾಹಿತಿಗಳು ಕಥೆಯ ಮುಕ್ತಾಯಕ್ಕೆ ಹೇಗೆ ಸಹಾಯವಾಗುತ್ತದೆ? ಎಂದು.

ಭಾಷಾಂತರದ ತತ್ವಗಳು.

  • ಕಥೆಯ ಮುಕ್ತಾಯದಲ್ಲಿ ನಿರ್ದಿಷ್ಟ ಮಾಹಿತಿಯನ್ನು ಸರಿಯಾಗಿ ಭಾಷಾಂತರಿಸುವಾಗ ಆ ಭಾಷೆಯಲ್ಲಿ ತಿಳಿಸಬೇಕಾದ ಮಾಹಿತಿಯನ್ನು ಪರಿಣಾಮಕಾರಿಯಾಗಿ ಬಳಸಬೇಕು.
  • ಜನರು ಇದನ್ನು ಕಥೆಯ ಮುಕ್ತಾಯದಲ್ಲಿರುವ ಮಾಹಿತಿ ಹೇಗೆ ಕಥೆಯೊಂದಿಗೆ ಪರಿಣಾಮಕಾರಿಯಾಗಿ ಬಂದಿದೆ ಎಂದು ತಿಳಿದುಕೊಳ್ಳಲು ಸಹಾಯವಾಗುವಂತೆ ಭಾಷಾಂತರಿಸಬೇಕು.
  • ಭಾಷಾಂತರ ಮಾಡುವಾಗ ಕಥೆ ಎಲ್ಲಿ ಮುಕ್ತಾಯವಾಗುತ್ತದೆ ಮತ್ತು ಮುಂದಿನ ಕಥೆ ಎಲ್ಲಿ ಪ್ರಾರಂಭವಾಗುತ್ತದೆ ಎಂಬುದನ್ನು ಗಮನವಿಟ್ಟು ಭಾಷಾಂತರಿಸಲು ಆದಷ್ಟು ಪ್ರಯತ್ನಿಸಬೇಕು

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು

  1. ಕಥೆಯನ್ನು ಸಂಕ್ಷಿಪ್ತಗೊಳಿಸುವುದು.

ಈಜಬಲ್ಲವನು ಹಡಗಿನಿಂದ ದುಮುಕಿ ತೀರಕ್ಕೆ ಹೋಗಬೇಕೆಂದು, ಕೆಲವರು ಹಲಗೆಗಳ ಮೇಲೆ,ಕೆಲವರು ಹಡಗಿನ ತುಂಡಿನ ಮೇಲೆ ಹೋಗಬೇಕೆಂದು ಅಪ್ಪಣೆಕೊಟ್ಟನು. ಈ ರೀತಿ ಎಲ್ಲರು ಸುರಕ್ಷಿತವಾಗಿ ತೀರಕ್ಕೆ ಬಂದು ಸೇರಿದರು./u>(ಆ.ಕೃ 27:44 ULB)

  1. ಈ ಕಥೆಯಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಬಹುದು.

ಇದಲ್ಲದೆ ಮಾಟಮಂತ್ರಗಳನ್ನು ನಡೆಸಿದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ಕೂಡಿಸಿ ತಂದು ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವುಗಳ ಕ್ರಯವನ್ನು ಲೆಕ್ಕ ಮಾಡಿ ಇಪ್ಪತ್ತು ಸಾವಿರ ಬೆಳ್ಳಿನಾಣ್ಯ ಆಯಿತೆಂದು ತಿಳಿದುಕೊಂಡರು ಈ ರೀತಿಯಾಗಿ ಕರ್ತನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.(ಆ.ಕೃ 19:19-20 ULB)

  1. ಮುಖ್ಯ ಕಥೆಕೊನೆಗೊಳ್ಳುವಾಗ ನಿರ್ದಿಷ್ಟ ಪಾತ್ರ ಏನಾಗುತ್ತದೆ ಎಂಬುದನ್ನು ಅರ್ಥವಾಗುವಂತೆ ಹೇಳುವುದು.

ಮರಿಯಳು ಹೇಳಿದ್ದೇನೆಂದರೆ " ನನ್ನ ಪ್ರಾಣವು ಕರ್ತನನ್ನು ಕೊಂಡಾಡುತ್ತದೆ ನನ್ನ ಆತ್ಮವು ನನ್ನ ರಕ್ಷಕನಾದ ದೇವರ ವಿಷಯದಲ್ಲಿ ಉಲ್ಲಾಸಗೊಂಡಿದೆ ಮರಿಯಳು ಎಲಜಿಬೇತಳ ಮನೆಯಲ್ಲಿ ಮೂರು ತಿಂಗಳು ತಂಗಿದ್ದು ನಂತರ ಮನೆಗೆ ಹಿಂತಿರುಗಿದಳು.(ಲೂಕ 1:46-47, 56 ULB).

  1. ಕಥೆ ಮುಕ್ತಾಯವಾದರೂ ನಡೆಯುತ್ತಿದ್ದ ಪ್ರಕ್ರಿಯೆಯು ಮುಂದುವರೆಯುತ್ತಿರುವ ಬಗ್ಗೆ ಹೇಳಬೇಕಿದೆ.

ಅದನ್ನು ಹೇಳಿದವರೆಲ್ಲರೂ ತಮಗೆ ಕುರುಬರು ಹೇಳಿದ ಮಾತುಗಳಿಗೆ ಆಶ್ವರ್ಯಪಟ್ಟರು.ಆದರೆ ಮರಿಯಳು ಆ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಯೋಚಿಸುತ್ತಿದ್ದಳು.(ಲೂಕ 2:18-19 ULB)

  1. ಕಥೆಯಲ್ಲಿ ನಡೆದ ಮುಖ್ಯಘಟನೆಗಳು ಫಲಿತಾಂಶದಿಂದ ಏನು ನಡೆಯುತ್ತದೆ ಎಂಬುದನ್ನು ಹೇಳುವುದು.

ಅಯ್ಯೋ ಧರ್ಮೋಪದೇಶಕರೇ, ಜ್ಞಾನಕ್ಕೆ ಸಾಧನವಾದ ಬೀಗದ ಕೈಯನ್ನು ತೆಗೆದು ಬಿಟ್ಟಿರಿ. ನೀವು ಒಳಗೆ ಹೋಗಲಿಲ್ಲ, ಒಳಗೆ ಹೋಗುವವರಿಗೂ ಅಡ್ಡಿಮಾಡಿದಿರಿ ಬಳಿಕ ಆತನು ಅಲ್ಲಿಂದ ಹೊರಗೆ ಬಂದಾಗ ಶಾಸ್ತ್ರಿಗಳು, ಪರಿಸಾಯರು ಆತನನ್ನು ಕಠಿಣವಾಗಿ ವಿರೋಧಿಸಿ ಅನೇಕ ವಿಷಯಗಳನ್ನು ಕುರಿತು ಅಡ್ಡಾದಿಡ್ಡಿ ಪ್ರಶ್ನೆಗಳನ್ನು ಕೇಳುತ್ತಾ ಆತನು ಆಡುವ ಬಾಯಿಮಾತಿನಲ್ಲಿ ತಪ್ಪು ಕಂಡುಹಿಡಿಯಬೇಕೆಂದು ಹೊಂಚುಹಾಕುತ್ತಿದ್ದರು.(Luke 11:52-54 ULB)


ಕಾಲ್ಪನಿಕ ಸನ್ನಿವೇಶಗಳು

Translation Manual :: Just-in-Time Learning Modules :: Writing Styles (Discourse) :: Hypothetical Situations

“ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿದರೆ…”, “ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿಬಿಟ್ಟರೆ ಏನಾಗುತ್ತದೆ? “ಒಂದು ವೇಳೆ ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿದರೇನು…”, ಮತ್ತು ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸದಿದ್ದರೆ…” ಎಂಬ ಈ ನುಡಿಗಟ್ಟುಗಳನ್ನು ಗಮನಿಸಿರಿ. ಕಲ್ಪಿತ ಸನ್ನಿವೇಶಗಳನ್ನು ತಿಳಿಸಲು ನಾವು ಹೀಗೆ ಅಭಿವ್ಯಕ್ತಿ ಪಡಿಸುತ್ತೇವೆ, ಏನಾದರೂ ನಡೆಯಬಹುದು ಎಂದು ಕಲ್ಪಿಸಿಕೊಳ್ಳುವುದು, ಇಲ್ಲವೆ ಮುಂದೆ ಭವಿಷ್ಯದಲ್ಲಿ ಏನು ನಡೆಯಬಹುದು ಅಥವಾ ನಡೆಯದೆಯೂ ಇರಬಹುದು ಎಂದು ಕಲ್ಪನೆಮಾಡುವುದು. ನಾವು ಇವುಗಳನ್ನು ವಿಷಾದ ವ್ಯಕ್ತಪಡಿಸಲು ಅಥವಾ ಶುಭಹಾರೈಸಲು ಬಳಸುತ್ತೇವೆ. ಇಂತಹ ಸನ್ನಿವೇಶಗಳು ಸತ್ಯವೇದದಲ್ಲಿ ಪದೇಪದೇ ಬರುತ್ತವೆ. ನೀವು (ಭಾಷಾಂತರಗಾರರು) ಇಂತಹ ಸನ್ನಿವೇಶಗಳನ್ನು ಭಾಷಾಂತರಿಸುವಾಗ ಜನರಿಗೆ ಈ ಘಟನೆಗಳು ನಿಜವಾಗಲೂ ನಡೆದಿಲ್ಲ ಎಂಬುದನ್ನು ತಿಳಿಸುವ ಹಾಗೆ ಗಮನವಹಿಸಬೇಕು ಮತ್ತು ಇಂತಹ ಸನ್ನಿವೇಶಗಳನ್ನು ಏಕೆ ಕಲ್ಪಿಸಿಕೊಳ್ಳಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವಂತಿರಬೇಕು.

ವಿವರಣೆಗಳು

ಕಲ್ಪಿತ ಸನ್ನಿವೇಶಗಳು ನಿಜವಲ್ಲದ ಸನ್ನಿವೇಶಗಳಾಗಿವೆ. ಇವುಗಳು ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲದಲ್ಲಿರಬಹುದು. ಕಲ್ಪಿತ ಸನ್ನಿವೇಶಗಳು ಭೂತಕಾಲ ಅಥವಾ ವರ್ತಮಾನಕಾಲದಲ್ಲಿ ನಡೆಯಲಿಲ್ಲ, ಮತ್ತು ಭವಿಷ್ಯತ್ ಕಾಲದಲ್ಲೂ ನಡೆಯುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ.

ಕೆಲವೊಮ್ಮೆ ಜನರು ಯಾವುದಾದರೂ ಒಂದು ಸನ್ನಿವೇಶವನ್ನು ಕುರಿತು ಹೇಳುವಾಗ ಇಂತಹ ಪರಿಸ್ಥಿತಿ ಎದುರಾದಾಗ ಏನಾಗುತ್ತಿತ್ತು? ಎಂದು ಹೇಳುತ್ತಾರೆ, ಆದರೆ ಬಹುಶಃ ಇದು ನಡೆದಿಲ್ಲ ಅಥವಾ ನಡೆಯುವುದಿಲ್ಲ ಎಂಬುದು ಅವರಿಗೆ ತಿಳಿದಿದೆ. (ನುಡಿಗಟ್ಟುಗಳು “ಒಂದು ವೇಳೆ” ಅಥವಾ “ರೆ” ಇದ್ದರೆ ಎಂಬ ಪದಗಳಿಂದ ಪ್ರಾರಂಭವಾಗಬಹುದು ಅಥವಾ ಕೂಡಿರಬಹುದು)

  • ಅವನು ನೂರು ವರ್ಷ ವಯಸ್ಸಿನವನಾಗಿ ಜೀವಿಸುವವನಾಗಿದ್ದರೆ, ಅವನು ತನ್ನ ಮೊಮ್ಮಗನ ಮೊಮ್ಮಗನನ್ನು ನೋಡುತ್ತಿದ್ದನು. (ಆದರೆ ಅವನು ನೋಡಲಿಲ್ಲ.)
  • ಅವನು ನೂರು ವರ್ಷ ವಯಸ್ಸಿನವನಾಗಿದ್ದರೆ, ಅವನು ಇಂದಿಗೂ ಜೀವಂತವಾಗಿರುತ್ತಿದ್ದನು. (ಆದರೆ ಅವನು ಜೀವಂತವಾಗಿಲ್ಲ.)
  • ಅವನು ನೂರು ವರ್ಷ ವಯಸ್ಸಿನವನಾಗಿ ಜೀವಿಸುವವನಾಗಿದ್ದರೆ, ಅವನು ತನ್ನ ಮೊಮ್ಮಗನ ಮೊಮ್ಮಗನನ್ನು ನೋಡುತ್ತಿದ್ದನು. (ಆದರೆ ಬಹುಶಃ ಅವನು ನೋಡುವುದಿಲ್ಲ.)

ಕೆಲವೊಮ್ಮೆ ಜನರು ನಡೆಯದೆ ಇರುವ ಘಟನೆಯ ಅಥವಾ ಮುಂದೆ ನಡೆಯಬಹುದು ಎಂದು ನಿರೀಕ್ಷಿಸಲಾಗದ ಘಟನೆಯ ಬಗ್ಗೆ ತಮ್ಮ ಬಯಕೆಯನ್ನು ವ್ಯಕ್ತಪಡಿಸುತ್ತಾರೆ.

  • ಅವನು ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾನು ಬಯಸುತ್ತೇನೆ.
  • ಅವನು ಇಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾನು ಬಯಸುತ್ತೇನೆ.
  • ಅವನು ಬರಲಿ ಎಂದು ನಾನು ಬಯಸುತ್ತೇನೆ.

ಕೆಲವೊಮ್ಮೆ ಜನರು ನಡೆಯದೆ ಇರುವ ಘಟನೆಯ ಅಥವಾ ಮುಂದೆ ನಡೆಯಬಹುದು ಎಂದು ನಿರೀಕ್ಷಿಸಲಾಗದ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ.

  • ಅವನು ಇಲ್ಲಿ ಬಂದಿದ್ದರೆ.
  • ಅವನು ಇಲ್ಲಿ ಇದ್ದಿದ್ದರೆ.
  • ಅವನು ಇಲ್ಲಿಗೆ ಬರಬಹುದಾಗಿದ್ದರೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  • ಭಾಷಾಂತರಗಾರರು ಸತ್ಯವೇದದಲ್ಲಿ ಬರುವ ವಿಭಿನ್ನ ರೀತಿಯ ಕಲ್ಪಿತ ಸನ್ನಿವೇಶಗಳನ್ನು ಗುರುತಿಸುವುದನ್ನು ಕಲಿತುಕೊಳ್ಳಬೇಕು ಮತ್ತು ಅವುಗಳು ನಿಜವಲ್ಲ ಎಂದು ಅರಿತುಕೊಳ್ಳಬೇಕು.
  • ಭಾಷಾಂತರಗಾರರು ವಿವಿಧ ರೀತಿಯ ಕಲ್ಪಿತ ಸನ್ನಿವೇಶಗಳ ಬಗ್ಗೆ ತಮ್ಮ ಭಾಷೆಯಲ್ಲಿ ಹೇಳುವುದಕ್ಕಿರುವ ವಿಧಾನಗಳನ್ನು ತಿಳಿದುಕೊಳ್ಳಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು

ಭೂತಕಾಲದ ಕಲ್ಪಿತ ಸನ್ನಿವೇಶಗಳು

“ಅಯ್ಯೋ ಖೋರಾಜಿನೇ! ಅಯ್ಯೋ ಬೆತ್ಸಾಯಿದವೇ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣಿತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ಪಶ್ಚಾತ್ತಾಪ ಪಡುತ್ತಿದ್ದರು.” (ಮತ್ತಾಯ 11:21 ULT)

ಇಲ್ಲಿ ಮತ್ತಾಯ 11:21 ರಲ್ಲಿ ಯೇಸು ಹೇಳಿದ್ದೇನೆಂದರೆ ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ಯೇಸು ಮಾಡಿದ ಮಹತ್ಕಾರ್ಯಗಳನ್ನು ಏನಾದರೂ ನೋಡಿದ್ದರೆ ಅವರು ಆಗಲೇ ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು. ಆದರೆ ಇಲ್ಲಿ ತೂರ್ ಮತ್ತು ಸೀದೋನ್ ಪಟ್ಟಣದ ಜನರು ಆತನ ಮಹತ್ಕಾರ್ಯಗಳನ್ನು ನೋಡಿರಲಿಲ್ಲ ಮತ್ತು ಪಶ್ಚಾತ್ತಾಪಪಡಲಿಲ್ಲ. ಇಲ್ಲಿ ಯೇಸು ತನ್ನ ಮಹತ್ಕಾರ್ಯಗಳನ್ನು ನೋಡಿದರೂ ಪಶ್ಚಾತ್ತಾಪ ಪಡದೆ ಇದ್ದ ಖೋರಾಜಿನ್ ಮತ್ತು ಬೆತ್ಸಾಯಿದ ಪಟ್ಟಣಗಳ ಜನರು ಬಗ್ಗೆ ಹೇಳುತ್ತಾ ಅವರನ್ನು ಗದರಿಸುತ್ತಿದ್ದಾನೆ.

ಆಗ ಮಾರ್ಥಳು ಯೇಸುವಿಗೆ, “ಕರ್ತನೇ ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ” ಎಂದು ಹೇಳಿದಳು. (ಯೊಹಾನ 11:21 ULT)

ಮಾರ್ಥಳು ಯೇಸು ಬೇಗ ಬಂದಿದ್ದರೆ ನನ್ನ ತಮ್ಮನ ಸಾವು ಆಗುತ್ತಿರಲಿಲ್ಲ ಎಂಬ ಬಯಕೆಯನ್ನು ವ್ಯಕ್ತ ಪಡಿಸಲು ಇದನ್ನು ಹೇಳಿದಳು. ಯೇಸು ಬೇಗ ಬರಲಿಲ್ಲ ಮತ್ತು ಅವಳ ತಮ್ಮನು ಸತ್ತುಹೋದನು.

ವರ್ತಮಾನಕಾಲದ ಕಲ್ಪಿತ ಸನ್ನಿವೇಶಗಳು

ಹಳೇ ಬುದ್ದಲಿಗಳಲ್ಲಿ ಯಾರೂ ಹೊಸ ದ್ರಾಕ್ಷಾರಸವನ್ನು ಹಾಕಿಡುವುದಿಲ್ಲ. ಹಾಗೆ ಹಾಕಿದರೆ ಆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಚೆಲ್ಲಿಹೋಗುವುದಲ್ಲದೆ ಬುದ್ದಲಿಗಳೂ ಕೆಟ್ಟುಹೋಗುತ್ತವೆ. (ಲೂಕ 5:37 ULT)

ಯೇಸು ಇಲ್ಲಿ ಹಳೇ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸ ಹಾಕಿಟ್ಟರೆ ಏನಾಗುತ್ತದೆ ಎಂದು ಹೇಳಿದ್ದಾನೆ. ಆದರೆ ಈ ರೀತಿ ಯಾರೂ ಮಾಡುವುದಿಲ್ಲ. ಆತನು ಈ ಕಲ್ಪಿತ ಸನ್ನಿವೇಶವನ್ನು ಹೊಸ ವಸ್ತುಗಳನ್ನು ಹಳೇ ವಸ್ತುವಿನೊಂದಿಗೆ ಸೇರಿಸುವುದು ಸೂಕ್ತವಲ್ಲ ಎಂದು ಹೇಳಲು ಉದಾಹರಣೆಯಾಗಿ ಬಳಸಿದನು. ಸಂಪ್ರದಾಯ ಬದ್ಧವಾಗಿ ಆತನ ಶಿಷ್ಯರು ಏಕೆ ಉಪವಾಸಮಾಡುತ್ತಿಲ್ಲ ಎಂಬುದನ್ನು ಅರ್ಥಮಾಡಿಸಲು ಆತನು ಇದನ್ನು ಮಾಡಿದನು.

ಯೇಸು ಅವರಿಗೆ, ನಿಮ್ಮಲ್ಲಿ ಯಾರಿಗಾದರೂ ಒಂದೇ ಒಂದು ಕುರಿ ಇದ್ದು ಅದು ಸಬ್ಬತ್ ದಿನದಲ್ಲಿ ಗುಂಡಿಯೊಳಗೆ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ಎತ್ತದೇ ಇರುವನೇ? ಎಂದು ಹೇಳಿದನು. (ಮತ್ತಾಯ 12:11 ULT)

ಯೇಸು ಆ ಧಾರ್ಮಿಕ ನಾಯಕನನ್ನು ಕುರಿತು ಅವರ ಬಳಿ ಇರುವ ಒಂದೇ ಕುರಿ ಕುಣಿಯಲ್ಲಿ ಬಿದ್ದರೆ ಅದನ್ನು ಸಬ್ಬತ್ ದಿನವೆಂದು ಎತ್ತದೆ ಬಿಡುವರೇ ಎಂದು ಕೇಳಿದನು. ಆತನು ಇಲ್ಲಿ ಅವರ ಕುರಿ ಕುಣಿಯಲ್ಲಿ ಬೀಳುವುದು ಎಂದು ಹೇಳುತ್ತಿಲ್ಲ. ಸಬ್ಬತ್ ದಿನದಂದು ಒಬ್ಬ ರೋಗಿಯನ್ನು ಸ್ವಸ್ಥಮಾಡಿದ್ದಕ್ಕೆ ಅವರು ಅತನನ್ನು ಅಪಾದಿಸಿದ್ದು ತಪ್ಪು ಎಂದು ಅವರಿಗೆ ತೋರಿಸಲು ಈ ಕಲ್ಪಿತ ಸನ್ನಿವೇಶವನ್ನು ಆತನು ಬಳಸಿದನು.

ಭವಿಷ್ಯದಲ್ಲಿನ ಕಲ್ಪಿತ ಸನ್ನಿವೇಶಗಳು

ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯು ಉಳಿಯುವುದಿಲ್ಲ; ಆದರೆ ತಾನು ಆಯ್ಕೆಮಾಡಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡುವೆನು. (ಮತ್ತಾಯ 24:22 ULT)

ಭವಿಷ್ಯತ್‌ ಕಾಲದಲ್ಲಿ ತುಂಬಾ ಕೆಟ್ಟ ಕಾರ್ಯಗಳು ನಡೆಯುತ್ತವೆ ಎಂದು ಯೇಸು ಹೇಳುತ್ತಿದ್ದನು. ಯೇಸು ಅಂತಹ ಕಷ್ಟದ ದಿನಗಳು ದೀರ್ಘಕಾಲದವರೆಗೆ ಇರುವುದಾದರೆ ಏನಾಗುತ್ತಿತ್ತು ಎಂದು ಆತನು ಹೇಳಿದನು. ಆ ದಿನಗಳು ಎಷ್ಟು ಕೆಟ್ಟದ್ದಾಗಿರುವವು, ಅವು ದೀರ್ಘಕಾಲದವರೆಗೆ ಮುಂದುವರೆದರೆ ಯಾರೂ ರಕ್ಷಿಸಲ್ಪಡುವುದಿಲ್ಲ ಎಂದು ಹೇಳಲು ಆತನು ಇದನ್ನು ಮಾಡಿದನು. ಆದರೆ ಆಯ್ದುಕೊಂಡವರು (ಆತನು ಆರಿಸಿಕೊಂಡವರು) ರಕ್ಷಿಸಲ್ಪಡುವುದಕ್ಕಾಗಿ ದೇವರು ಆ ಕಷ್ಟದ ದಿನಗಳನ್ನು ಕಡಿಮೆ ಮಾಡುತ್ತಾನೆ ಎಂದು ಆತನು ಸ್ಪಷ್ಟಪಡಿಸಿದನು.

ಕಲ್ಪಿತ ಸನ್ನಿವೇಶದ ಬಗ್ಗೆ ಭಾವನೆಯನ್ನು ವ್ಯಕ್ತಪಡಿಸುವುದು

ಜನರು ಕೆಲವೊಮ್ಮೆ ವಿಷಾದ ಮತ್ತು ಹಾರೈಕೆಗಳನ್ನು ವ್ಯಕ್ತಪಡಿಸುವ ಸಲುವಾಗಿ ಕಲ್ಪಿತ ಸನ್ನಿವೇಶಗಳ ಬಗ್ಗೆ ಮಾತನಾಡುತ್ತಾರೆ. ಭೂತಕಾಲದ ಕುರಿತಾದ ವಿಷಾದಗಳನ್ನು ಮತ್ತು ವರ್ತಮಾನ ಹಾಗೂ ಭವಿಷ್ಯದ ಕುರಿತಾದ ಹಾರೈಕೆಗಳನ್ನು ವ್ಯಕ್ತಪಡಿಸುತ್ತಾರೆ.

ನಾವು ಐಗುಪ್ತ ದೇಶದಲ್ಲಿದ್ದಾಗ ಯೆಹೋವನ ಕೈಯಿಂದ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು. ಆಗ ಮಾಂಸಪಾತ್ರೆಗಳ ಬಳಿಯಲ್ಲಿ ಕೂತು ಹೊಟ್ಟೆತುಂಬಾ ಊಟಮಾಡುತ್ತಿದ್ದೆವಲ್ಲಾ. ಈ ಸಮೂಹವನ್ನೆಲ್ಲಾ ಹಸಿವೆಯಿಂದ ಸಾಯಿಸಬೇಕೆಂದು ನೀವು ಈ ಅರಣ್ಯದೊಳಗೆ ನಮ್ಮನ್ನು ಕರಕೊಂಡು ಬಂದಿರಷ್ಟೆ” ಎಂದು ಇಸ್ರಾಯೇಲ್ಯರು ಅವರಿಗೆ ಹೇಳಿದರು. (ವಿಮೋಚನಾ ಕಾಂಡ 16:3 ULT)

ಇಲ್ಲಿ ಇಸ್ರಾಯೇಲರು ತಾವು ಹಸಿವೆಯಿಂದ ಈ ಅರಣ್ಯದಲ್ಲಿ ಸತ್ತು ಹೋಗಬಹುದು ಭಯಪಟ್ಟರು ಮತ್ತು ಐಗುಪ್ತ ದೇಶದಲ್ಲೇ ಇದ್ದಿದ್ದರೆ ಹೊಟ್ಟೆತುಂಬಾ ತಿಂದಾದರೂ ಸಾಯಬಹುದಿತ್ತು ಎಂದು ಹಾರೈಸಿದರು. ಅವರು ದೂರು ಹೇಳುತ್ತಾ, ಇದು ನಡೆಯಲಿಲ್ಲವಲ್ಲಾ ಎಂಬ ವಿಷಾದವನ್ನು ವ್ಯಕ್ತಪಡಿಸುತ್ತಿರುವರು.

ನೀನು ಮಾಡಿರುವಂಥದ್ದನ್ನು ನಾನು ಬಲ್ಲೆನು, ನೀನು ತಣ್ಣಗೂ ಅಲ್ಲ, ಬೆಚ್ಚಗೂ ಅಲ್ಲ, ನೀನು ತಣ್ಣಗಾಗಲೀ ಬೆಚ್ಚಗಾಗಲೀ ಇದ್ದಿದ್ದರೆ ಒಳ್ಳೆಯದಿತ್ತು ಎಂದು ನಾನು ಬಯಸುತ್ತೇನೆ! (ಪ್ರಕಟಣೆ3:15 ULT)

ಜನರು ತಣ್ಣಗಾಗಲೀ, ಬೆಚ್ಚಗಾಗಲೀ ಇರಲಿ ಎಂದು ಯೇಸು ಬಯಸಿದನು, ಆದರೆ ಅವರು ಎರಡೂ ಆಗಿರಲಿಲ್ಲ. ಆತನು ಅವರನ್ನು ಗದರಿಸುತ್ತಾ, ಇದರ ಬಗ್ಗೆ ಕೋಪವನ್ನು ವ್ಯಕ್ತಪಡಿಸುತ್ತಿರುವನು.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯನ್ನು ಮಾತನಾಡುವ ಜನರು ಈ ಕೆಳಗಿನವುಗಳನ್ನು ಹೇಗೆ ವ್ಯಕ್ತಪಡಿಸುವರು ಎಂಬುದನ್ನು ಕಂಡುಕೊಳ್ಳಿರಿ:

  • ಏನಾದರೂ ಒಂದು ನಡೆಯಬೇಕಿತ್ತು, ಆದರೆ ನಡೆಯಲಿಲ್ಲ.
  • ಕೆಲವೊಂದು ಈಗ ಸತ್ಯವಾದುದು ಎಂದು ತಿಳಿದುಬಂದರೂ ಅದು ನಿಜವಾದುದಲ್ಲ.
  • ಭವಿಷ್ಯದಲ್ಲಿ ಏನಾದರೂ ನಡೆಯಬಹುದು ಎಂದರೂ ಏನಾದರೂ ಬದಲಾವಣೆ ಆಗುವವರೆಗೂ ಆಗುವುದಿಲ್ಲ.
  • ಅವರು ಏನನ್ನೋ ಬಯಸಿದರೂ ಆದರೆ ಅದು ನಡೆಯಲಿಲ್ಲ.
  • ಏನೂ ನಡೆಯಲಿಲ್ಲವೆಂದು ಅವರು ವಿಷಾದಿಸುತ್ತಾರೆ.

ಇಂತಹ ಕಾರ್ಯಗಳನ್ನು ತೋರಿಸುವ ನಿಮ್ಮ ಭಾಷೆಯ ವಿಧಾನಗಳನ್ನು ಬಳಸಿಕೊಳ್ಳಿರಿ.

ನೀವು ಈ ವಿಡಿಯೋವನ್ನು ಸಹ ವೀಕ್ಷಿಸಿ ಬಯಸಬಹುದು http://ufw.io/figs\_hypo.


ಹೊಸ ಘಟನೆಯ ಪರಿಚಯ.

Translation Manual :: Just-in-Time Learning Modules :: Writing Styles (Discourse) :: Introduction of a New Event

ವಿವರಣೆಗಳು

ಜನರು ಕಥೆಯನ್ನು ಹೇಳಿದಾಗ ಅವರು ಅದರಲ್ಲಿ ಒಂದು ಘಟನೆಯ ಬಗ್ಗೆ ಹೇಳಬಹುದು ಇಲ್ಲವೆ ಅನೇಕ ಘಟನೆಗಳ ಬಗ್ಗೆ ಹೇಳಬಹುದು. ಹಲವು ಸಲ ಜನರು ಕೆಲವು ಮಾಹಿತಿಯನ್ನು ಕಥೆಯ ಪ್ರಾರಂಭದಲ್ಲಿ ಹೇಳಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ ಕಥೆ ಯಾರ ಬಗ್ಗೆ, ಯಾವಾಗ ನಡೆಯಿತು ಮತ್ತು ಎಲ್ಲಿ ನಡೆಯಿತು ಎಂಬುದರ ಬಗ್ಗೆ ಹೇಳುತ್ತಾರೆ. ಹೀಗೆ ಕಥೆಯಲ್ಲಿನ ಘಟನೆಗಳ ಮೊದಲೇ ಲೇಖಕನು ಮಾಹಿತಿಯನ್ನು ನೀಡಿದರೆ, ಕಥೆಯ ಸನ್ನಿವೇಶ, ಕಥೆಯ ಹಂದರ ಸಿದ್ಧವಾಗುತ್ತಿದೆ ಎಂದು ಅರ್ಥ. ಕೆಲವು ಹೊಸ ಘಟನೆಗಳು ಕಥೆಯಲ್ಲಿ ಸನ್ನಿವೇಶಗಳನ್ನು ಹೊಂದಿರುತ್ತವೆ. ಏಕೆಂದರೆ ಅವುಗಳಲ್ಲಿ ಹೊಸಜನರು, ಹೊಸ ಸಮಯ, ಹೊಸ ಸ್ಥಳಗಳು, ಹೊಸ ಸನ್ನಿವೇಶಗಳನ್ನು ಹೊಂದಿರುತ್ತವೆ.

ಇನ್ನು ಕೆಲವು ಭಾಷೆಗಳಲ್ಲಿ ಜನರು ತಾವು ನೋಡಿದ ಘಟನೆಗಳ ಬಗ್ಗೆ ಇನ್ನೊಬ್ಬರಿಂದ ಕೇಳಿದ ಘಟನೆಗಳ ಬಗ್ಗೆ ಹೇಳುತ್ತಾರೆ. ನಿಮ್ಮ ಜನರು ಘಟನೆಗಳ ಬಗ್ಗೆ ಹೇಳಿದಾಗ, ಪ್ರಾರಂಭದಲ್ಲಿ ಯಾವ ಮಾಹಿತಿಯನ್ನು ನೀಡುತ್ತಾರೆ ? ಅವುಗಳಿಗೆ ಯಾವುದಾದರು ನಿರ್ಧಿಷ್ಟ ಕ್ರಮವಿದೆಯೇ, ಅದನ್ನು ಅವರು ಹೇಗೆ ತಮ್ಮ ಕಥೆಯಲ್ಲಿ ಬಳಸುತ್ತಾರೆ? ನಿಮ್ಮ ಭಾಷೆಯಲ್ಲಿ ಭಾಷಾಂತರ ಮಾಡುವಾಗ ನಿಮ್ಮ ಭಾಷೆಯಲ್ಲಿ ಮಾಹಿತಿಯನ್ನು ಕಥೆಯ ಪ್ರಾರಂಭದಲ್ಲಿ ಪರಿಚಯಿಸಿದರೆ ಅಥವಾ ಮೂಲ ಭಾಷೆಯಲ್ಲಿ ಹೊಸ ಘಟನೆಗಳನ್ನು ಹೇಗೆ ಉಪಯೋಗಿಸಿದ್ದಾರೆ ಎಂಬುದನ್ನು ಗಮನಿಸಿ ಅನುಸರಿಸುವುದು ಅಗತ್ಯ. ಈ ರೀತಿ ಮಾಡುವುದರಿಂದ ನಿಮ್ಮ ಭಾಷಾಂತರ ಹೆಚ್ಚು ಸಹಜವಾಗಿ ಧ್ವನಿಸುತ್ತದೆ ಮತ್ತು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿ ವಿಷಯವನ್ನು ತಿಳಿಸುತ್ತದೆ.

ಸತ್ಯವೇದದಲ್ಲಿನ ಉದಾಹರಣೆಗಳು

ಯೂದಾಯದ ಅರಸನಾಗಿದ್ದ ಹೆರೋದನ ಕಾಲದಲ್ಲಿ , ಅಭೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು , ಅವನ ಹೆಂಡತಿಯು ಆರೋನನ ವಂಶದವಳು ಅವಳ ಹೆಸರು ಎಲಿಜೆಬೆತ್. (ಲೂಕ 1:5 ULB)

ಮೇಲಿನ ವಾಕ್ಯಗಳು ಜಕರೀಯನನನ್ನು ಕುರಿತು ಕಥೆಯ ಮೂಲಕ ಪರಿಚಯಿಸುತ್ತದೆ. ಮೊದಲ ಅಡ್ಡಗೆರೆ (underlined) ಎಳೆದ ವಾಕ್ಯ / ಪದಗುಚ್ಛ ಘಟನೆಯಾವಾಗ ನಡೆಯಿತು ಎಂಬುದನ್ನು ಹೇಳುತ್ತದೆ ಮುಂದಿನ ಅಡ್ಡಗೆರೆ ಎಳೆದ ಪದಗುಚ್ಛಗಳು ಕಥೆಯಲ್ಲಿನ ಮುಖ್ಯ ವ್ಯಕ್ತಿಗಳನ್ನು ಪರಿಚಯಿಸುತ್ತದೆ. ಮುಂದಿನ ಎರಡು ವಾಕ್ಯಗಳು ಜಕರೀಯ ಮತ್ತು ಎಲಿಜೆಬೆತ್ ವೃದ್ಧವಯಸ್ಸಿನವರಾಗಿದ್ದು ಅವರಿಗೆ ಮಕ್ಕಳಿರಲಿಲ್ಲ ಎಂಬುದನ್ನು ತಿಳಿಸುತ್ತದೆ. ಇವೆಲ್ಲವೂ ಸನ್ನಿವೇಶಗಳು. ಈಗ ಪದಗುಚ್ಛ " ಒಂದು ದಿನ " ಎಂಬುದನ್ನು ಲೂಕ 1:8 ವಾಕ್ಯವು ಮೊದಲ ಘಟನೆಯನ್ನು ಈ ಕಥೆಯಲ್ಲಿ ಪರಿಚಯಿಸಲು ಸಹಾಯ ಮಾಡುತ್ತದೆ.

ಒಂದು ದಿನ ಜಕರೀಯನ ವರ್ಗದ ಸರತಿ ಬಂದಾಗ, ಅವನು ದೇವರ ಸನ್ನಿಧಿಯಲ್ಲಿ ಯಾಜಕಧರ್ಮವನ್ನು ನಡೆಸುತ್ತಿರಲು, ದೇವಾಲಯದೊಳಗೆ ಹೋಗಿ ಧೂಪವನ್ನು ಅರ್ಪಿಸುವ ಯಾಜಕರ ಮರ್ಯದೆಯ ಸರತಿ ಅವನ ಪಾಲಿಗೆ ಬಂತು. (ಲೂಕ 1:8-9 ULB)

ಯೇಸುಕ್ರಿಸ್ತನ ಜನನವು ಈ ಕೆಳಗೆ ತಿಳಿಸಿರುವಂತೆ ಆಯಿತು.ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಲಾಗಿತ್ತು, ಆದರೆ ಅವರು ಮದುವೆಯ ಮೂಲಕ ಒಂದುಗೂಡುವ ಮೊದಲೇ ಆಕೆಯ ಪವಿತ್ರಾತ್ಮನಿಂದ ಬಸುರಾದುದು ತಿಳಿದುಬಂತು. (ಮತ್ತಾಯ 1:18 ULB)

ಮೇಲಿನ ವಾಕ್ಯ ಯೇಸುಕ್ರಿಸ್ತನ ಕಥೆಯನ್ನು ಸ್ಪಷ್ಟವಾಗಿ ಮುಕ್ತರೀತಿಯಲ್ಲಿ ಪರಿಚಯಿಸುತ್ತಿರುವುದು ಕಂಡುಬರುತ್ತದೆ. ಈ ಕಥೆಯ ಮೂಲಕ ಯೇಸುವಿನ ಜನನ ಹೇಗಾಯಿತು ಎಂಬುದನ್ನು ತಿಳಿಸುತ್ತದೆ.

ಅರಸನಾದ ಹೆರೋದನ ದಿನಗಳಲ್ಲಿ ಯುದಾಯ ಸೀಮೆಯ ಬೇತ್ಲೆಹೆಮ್ ಎಂಬ ಊರಲ್ಲಿ ಯೇಸು ಹುಟ್ಟಿದಾಗ ಮೂಡಣ ದೇಶದ ಜೋಯಿಸರು , ಯೆರೂಸಲೇಮಿಗೆ ಬಂದರು. (ಮತ್ತಾಯ 2:1 ULB)

ಮೇಲೆ ತಿಳಿಸಿರುವ ಪದಗುಚ್ಛಗಳು ಜೋಯಿಸರ ಬಗ್ಗೆ ನಡೆದ ಘಟನೆ ಯೇಸುವಿನ ಜನನ ನಂತರ ನಡೆಯಿತು.

ಆ ದಿನಗಳಲ್ಲಿ ಸ್ನಾನಿಕನಾದ ಯೋಹಾನನು ಪರಲೋಕ ರಾಜ್ಯವು ಸಮೀಪಿಸಿತು, ದೇವರ ಕಡೆಗೆ ತಿಳಿಸಿಕೊಳ್ಳಿರಿ ಎಂದು ಯುದಾಯದಲ್ಲಿ ಅಡವಿಯಲ್ಲಿ ಸಾರಿ ಹೇಳುತ್ತಾ ಬಂದನು.… (ಮತ್ತಾಯ 3:1-22 ULB)

ಮೇಲಿನ ವಾಕ್ಯಗಳಲ್ಲಿ ಇರುವ ಪದಗುಚ್ಛಗಳು ಸ್ನಾನಿಕನಾದ ಯೋಹಾನನು ಉಪದೇಶ ಮಾಡುತ್ತಾ ಹಿಂದಿನ ಘಟನೆಗಳನ್ನು ನೆನಪಿಸುತ್ತಾಬಂದನು ಎಂಬುದನ್ನು ತಿಳಿಸುತ್ತದೆ. ಬಹುಷಃ ಇದು ತುಂಬಾ ಸಾಮಾನ್ಯವಾದುದು ಮತ್ತು ಯೇಸು ನಜರೇತಿನಲ್ಲಿ ಆ ಕಾಲದಲ್ಲಿ / ಆಗ ವಾಸಿಸುತ್ತಿದ್ದ ಕಾಲವನ್ನು ಕುರಿತು ಹೇಳುತ್ತದೆ.

ಆ ಕಾಲದಲ್ಲಿ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೋರ್ದಾನ್ ನದಿಯ ಬಳಿಗೆ ಬಂದನು. (ಮತ್ತಾಯ 3:13 ULB)

ಇಲ್ಲಿ "ಆಗ " " ಆ ಕಾಲದಲ್ಲಿ " ಪದ ಹಿಂದಿನ ವಾಕ್ಯಗಳಲ್ಲಿ ತಿಳಿಸಿರುವ ಘಟನೆಗಳ ನಂತರ ಯೇಸು ಯೋರ್ದಾನ್ ನದಿಯ ಬಳಿ ಬಂದನು ಎಂಬುದನ್ನು ತಿಳಿಸುತ್ತದೆ.

ಪರಿಸಾಯರಲ್ಲಿ ಯೆಹೂದ್ಯರ ಹಿರಿಸಭೆಯವನಾದ ನಿಕೋದೇಮನೆಂಬ ಒಬ್ಬ ಮನುಷ್ಯನಿದ್ದನು . ಅವನು ರಾತ್ರಿಯಲ್ಲಿ ಯೇಸುವಿನ ಬಳಿ ಬಂದನು (ಯೊಹಾನ 3:1-2 ULB)

ಇಲ್ಲಿ ಲೇಖಕನು ಮೊದಲು ಹೊಸ ವ್ಯಕ್ತಿಯನ್ನು ಪರಿಚಯಿಸಿದ್ದಾನೆ ನಂತರ ಅವನು ಏನು ಮಾಡಿದನು ಮತ್ತು ಯಾವಾಗ ಮಾಡಿದನು ಎಂಬುದರ ಬಗ್ಗೆ ಹೇಳಿದ್ದಾನೆ. ಕೆಲವು ಭಾಷೆಯಲ್ಲಿ ವಾಕ್ಯದ ಮೊದಲು ಸಮಯ, ಕಾಲದ ಬಗ್ಗೆ ಹೇಳುವುದು ಹೆಚ್ಚು ಸಹಜವಾಗಿ ಮೂಡಿಬರಬಹುದು.

6ಭೂಮಿಯ ಮೇಲೆ ಜಲಪ್ರಳಯ ಉಂಟಾದಾಗ ನೋಹನು ಆರುನೂರು ವರ್ಷದವ ನಾಗಿದ್ದನು 7ಆಗ ನೋಹನು ಪ್ರಳಯದಿಮದ ತಪ್ಪಿಸಿಕೊಳ್ಳಲು ಹೆಂಡತಿ, ಮಕ್ಕಳು, ಸೊಸೆಯರು ಸಹಿತವಾಗಿ ನಾವೆಯೊಳಗೆ ಸೇರಿದನು. (ಆದಿಕಾಂಡ 7:6-7 ULB)

6ನೇ ವಾಕ್ಯ ಘಟನೆಗಳ ಭಾವಾನುವಾದ ಇದು ಮುಂದಿನ ಘಟನೆಗಳು 7.ನೇ ಅಧ್ಯಾಯದಲ್ಲಿ ತಿಳಿಸಲಾಗಿದೆ. 6ನೇ ಅಧ್ಯಾಯದಲ್ಲಿ ನೋಹನಿಗೆ ದೇವರು ಏನು ಹೇಳಿದನು ಎಂದರೆ ಮುಂದೆ ಜಲಪ್ರಳಯವಾಗುತ್ತದೆ.ಮತ್ತು ನೋಹನು ಅದಕ್ಕಾಗಿ ಯಾವ ಸಿದ್ಧತೆ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ. 7.ನೇ ಅಧ್ಯಾಯದ 6ನೇ ವಾಕ್ಯದಲ್ಲಿ ನೋಹನು ತನ್ನ ಕುಟುಂಬ ಮತ್ತು ಪ್ರಾಣಿಗಳು ನಾವೆಯೊಳಗೆ ಹೋಗುವುದನ್ನು, ಮಳೆಪ್ರಾರಂಭವಾದ ಬಗ್ಗೆ, ಮಳೆಯಿಂದ ಜಲಪ್ರವಾಹ ವಾದುದನ್ನು ಕಥೆಯಂತೆ ನಿರೂಪಣೆ ಆಗಿದೆ. ಕೆಲವು ಭಾಷೆಯಲ್ಲಿ ಈ ವಾಕ್ಯವು ನಡೆದ ಘಟನೆಯನ್ನು ಸರಳವಾಗಿ ಪರಿಚಯಿಸುತ್ತದೆ. ಮತ್ತು ಮುಂದೆ 7ನೇ ವಾಕ್ಯದ ವರೆಗೆ ಮುಂದುವರೆಯುತ್ತದೆ. 6ನೇ ವಾಕ್ಯ ಇಲ್ಲಿರುವ ಕಥೆಯು ಒಂದು ಘಟನೆಯ ಬಗ್ಗೆ ಹೇಳುತ್ತಿಲ್ಲ. ಜಲಪ್ರಳಯವಾಗುವ ಮೊದಲೇ ಎಲ್ಲಾ ಜನರು ನಾವೆಯೊಳಗೆ ಹೋದರು

ಭಾಷಾಂತರ ಕೌಶಲ್ಯಗಳು

ಕೊಡಬೇಕಾದ ಮಾಹಿತಿಯನ್ನು ವಾಕ್ಯದ ಪ್ರಾರಂಭದಲ್ಲೇ ಹೊಸ ಘಟನೆಗಳನ್ನು ಸ್ಪಷ್ಟವಾಗಿಸಿದರೆ ಮತ್ತು ಓದುಗರಿಗೆ ಅರ್ಥಮಾಡಿಕೊಳ್ಳಲು ಸಹಜವಾಗಿದ್ದರೆ ಆಗ ULB ಅಥವಾ UDB ಯಲ್ಲಿರುವಂತೆ ಭಾಷಾಂತರವಾಗಿ ಪರಿಗಣಿಸಬೇಕು. ಅಲ್ಲದಿದ್ದರೆ ಯಾವುದಾದರೂ ತಂತ್ರವನ್ನು ಪರಿಗಣಿಸಿ.

  1. ನಿಮ್ಮ ಭಾಷೆಯ ಜನರು ಮಾಡುವಂತೆ ಘಟನೆಗಳನ್ನು ಪರಿಚಯಿಸುವ ಮಾಹಿತಿಯನ್ನು ಅವರ ಕ್ರಮದಲ್ಲಿ ಭಾಷಾಂತರಿಸಲು ಪ್ರಯತ್ನಿಸಿ.
  2. ಸತ್ಯವೇದದಲ್ಲಿ ಇಲ್ಲದ ನಿರ್ದಿಷ್ಟಮಾಹಿತಿಯನ್ನು ಓದುಗರು ನಿರೀಕ್ಷಿಸಿದರೆ, ನಿರೀಕ್ಷಿಸಿದ ಮಾಹಿತಿ ನೀಡಲು ಬೇಕಾದ ಪದ ಅಥವಾ ಪದಗುಚ್ಛ ಬಳಸಲು ಪರಿಗಣಿಸಿ, ಉದಾಹರಣೆಗೆ " ಮತ್ತೊಂದು ಸಮಯ " " ಕೆಲವರು " " ಯಾರೋ ಒಬ್ಬರು ".
  3. ಪೀಠಿಕೆಯ ಮೂಲಕ ಪರಿಚಯಿಸುವ ಘಟನೆಯು ಸಂಕ್ಷಿಪ್ತ ಸಾರಾಂಶವಾಗಿದ್ದರೆ ನಿಮ್ಮ ಭಾಷೆಯಲ್ಲಿ ಇದೊಂದು ಸಾರಾಂಶ ಎಂದು ತೋರಿಸುವ ಪದಗಳನ್ನು ಬಳಸಿ
  4. ನೀವು ಭಾಷಾಂತರಿಸುತ್ತಿರುವ ಭಾಷೆಯಲ್ಲಿ ಇದು ಅಸಹಜವಾಗಿ ಮೂಡಿಬಂದರೆ ಘಟನೆಯ ಸಾರಾಂಶವನ್ನು ಪ್ರಾರಂಭದಲ್ಲೇ ನೀಡಲಾಗುವುದು, ಆದುದರಿಂದ ಈ ಘಟನೆ ಕಥೆಯಲ್ಲಿ ಆಮೇಲೆ ನಡೆಯುತ್ತದೆ ಎಂದು ತಿಳಿಸಬೇಕು.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ನಿಮ್ಮ ಭಾಷೆಯ ಜನರು ಮಾಡುವಂತೆ ಘಟನೆಗಳನ್ನು ಪರಿಚಯಿಸುವ ಮಾಹಿತಿಯನ್ನು ಅವರ ಕ್ರಮದಲ್ಲಿ ಭಾಷಾಂತರಿಸಲು ಪ್ರಯತ್ನಿಸಿ.
  • ಪರಿಸಾಯರಲ್ಲಿ ಯೆಹೂದ್ಯರ ಹಿರಿ ಸಭೆಯವನಾದ ನಿಕೋದೇಮನೆಂಬ ಒಬ್ಬ ಮನುಷ್ಯನಿದ್ದನು . ಆ ಮನುಷ್ಯನು ರಾತ್ರಿ ಸಮಯದಲ್ಲಿ ಯೇಸುವಿನ ಬಳಿಗೆ ಬಂದನು… (ಯೊಹಾನ 3:1,2

    • ಅಲ್ಲಿ ಒಬ್ಬ ಮನುಷ್ಯನಿದ್ದನು ಅವನ ಹೆಸರು ನಿಕೋದೇಮನು ಅವನು ಪರಿಸಾಯರಲ್ಲಿ ಒಬ್ಬ ಯೆಹೂದ್ಯರ ಹಿರಿ ಸಭೆಯ ಸದಸ್ಯನಾಗಿದ್ದನು . ಒಂದು ರಾತ್ರಿ ಅವನು ಯೇಸುವಿನ ಬಳಿ ಬಂದು ಹೀಗೆ ಹೇಳಿದ…
    • ಒಂದು ರಾತ್ರಿ ಪರಿಸಾಯರಲ್ಲಿ ಯೆಹೂದ್ಯರ ಹಿರಿ ಸಭೆಯವನಾದ , ಅವನ ಹೆಸರು ನಿಕೋದೇಮನು ಯೇಸುವಿನ ಬಳಿ ಬಂದು ಹೀಗೆ ಹೇಳಿದ -----
  • ಆತನು ಅಲ್ಲಿಂದ ಹಾದುಹೋಗುತತ್ತಿರುವಾಗ ಸುಂಕವಸೂಲಿ ಮಾಡುವವ ಕುಳಿತಿದ್ದ ಅಲ್ಪಾಯಾನ ಮಗನಾದ ಲೇವಿಯನ್ನು ನೋಡಿ ನನ್ನನ್ನು ಹಿಂಬಾಲಿಸು ಎಂದನು (ಮಾರ್ಕ 2:14 ULB)

    • ಆತನು ಅಲ್ಲಿಂದ ಹಾದು ಹೋಗುವಾಗ ಅಲ್ಪಾಯಾನ ಮಗನಾದ ಲೇವಿಯು ಸುಂಕವಸೂಲಿ ಮಾಡುವ ಸ್ಥಳದಲ್ಲಿ ಕುಳಿತಿದ್ದನು . ಯೇಸು ಅವನನ್ನು ನೋಡಿ ಹೀಗೆ ಹೇಳಿದನು - - - -
    • ಆತನು ಅಲ್ಲಿಂದ ಹಾದು ಹೋಗುವಾಗ ಅಲ್ಲೊಬ್ಬ ಮನುಷ್ಯನು ಸುಂಕವಸೂಲಿ ಮಾಡುವ ಸ್ಥಳದಲ್ಲಿ ಕುಳಿತಿದ್ದನು ಅವನ ಹೆಸರು ಲೇವಿ, ಮತ್ತು ಅವನು ಅಲ್ಪಾಯಾನನ ಮಗ. ಯೇಸು ಅವನನ್ನು ನೋಡಿ ಹೀಗೆ ಹೇಳಿದನು - - - -
    • ಆತನು ಅಲ್ಲಿಂದ ಹಾದು ಹೋಗುವಾಗ ಅಲ್ಲೊಬ್ಬ ಸುಂಕವಸೂಲಿ ಮಾಡುವವನು ಸುಂಕವಸೂಲಿ ಮಾಡುವ ಸ್ಥಳದಲ್ಲಿ ಕುಳಿತಿದ್ದನು. ಅವನ ಹೆಸರು ಲೇವಿ, ಮತ್ತು ಅವನು ಅಲ್ಪಾಯಾನನ ಮಗ. ಯೇಸು ಅವನನ್ನು ನೋಡಿ ಹೀಗೆ ಹೇಳಿದನು - - - -
  1. ಸತ್ಯವೇದದಲ್ಲಿ ಇಲ್ಲದ ನಿರ್ದಿಷ್ಟಮಾಹಿತಿಯನ್ನು ಓದುಗರು ನಿರೀಕ್ಷಿಸಿದರೆ, ನಿರೀಕ್ಷಿಸಿದ ಮಾಹಿತಿ ನೀಡಲು ಬೇಕಾದ ಪದ ಅಥವಾ ಪದಗುಚ್ಛ ಬಳಸಲು ಪರಿಗಣಿಸಿ, ಉದಾಹರಣೆಗೆ " ಮತ್ತೊಂದು ಸಮಯ " " ಕೆಲವರು " " ಯಾರೋ ಒಬ್ಬರು ".
  • ಭೂಮಿಯ ಮೇಲೆ ಜಲಪ್ರಳಯವಾದಾಗ ನೋಹನು ಆರುನೂರು ವರ್ಷದವನಾಗಿದ್ದನು. (ಆದಿಕಾಂಡ 7:6 ULB) – ಜನರು ತಮಗೆ ಯಾವುದಾದರೂ ಒಂದರ ಬಗ್ಗೆ ಹೊಸ ಘಟನೆ ನಡೆದಂತೆ ಹೇಳುವುದನ್ನು ನಿರೀಕ್ಷಿಸಿದರೆ ಪದಗುಚ್ಛ " ಅದಾದಮೇಲೆ " ಎಂಬುದನ್ನು ಬಳಸಿದರೆ ಅವರಿಗೆ ಈ ಘಟನೆಗಳು ಈಗಾಗಲೇ ಹೇಳಿದಂತೆ ನಡೆದಿದೆ ಎಂದು ತಿಳಿದುಕೊಳ್ಳಬಹುದು

    • ಅದಾದಮೇಲೆ ,ನೋಹನು ಆರುನೂರು ವರ್ಷದವನಾದ ಮೇಲೆ ಭೂಮಿಯ ಮೇಲೆ ಜಲಪ್ರಳಯವಾಯಿತು
  • ಆತನು ಸಮುದ್ರ ದಡದಲ್ಲಿ ನಿಂತು ಪುನಃ ಉಪದೇಶಮಾಡುತ್ತಿವುದಕ್ಕೆ ಪ್ರಾರಂಭಿಸಿದನು. (ಮಾರ್ಕ4:1 ULB) – 3ನೇ ಅಧ್ಯಾಯದಲ್ಲಿ ಯೇಸು ಒಬ್ಬರ ಮನೆಯಲ್ಲಿ ಉಪದೇಶ ಮಾಡುತ್ತಿದ್ದನು. ಓದುಗರಿಗೆ ಈ ಘಟನೆಯ ಬಗ್ಗೆ ಹೇಳುವಾಗ ಒಂದು ಹೊಸ ಘಟನೆ ಇನ್ನೊಂದು ಸಮಯದಲ್ಲಿ ನಡೆಯಿತು ಅಥವಾ ಯೇಸು ನಿಜವಾಗಲೂ ಸಮುದ್ರದಡಕ್ಕೆ ಹೋದನು ಎಂದು ಹೇಳಬೇಕು.

    • ಇನ್ನೊಂದು ಸಮಯದಲ್ಲಿ ಯೇಸು ಪುನಃ ನದಿಯ ದಡದಲ್ಲಿ ಜನರಿಗೆ ಉಪದೇಶ ಮಾಡುತ್ತಿದ್ದನು.
    • ಯೇಸು ನದಿಯ ಬಳಿಗೆ ಹೋಗಿ ಜನರಿಗೆ ಉಪದೇಶ ಮಾಡಲು ತೊಡಗಿದನು
  1. ಪೀಠಿಕೆಯ ಮೂಲಕ ಪರಿಚಯಿಸುವ ಘಟನೆಯು ಸಂಕ್ಷಿಪ್ತ ಸಾರಾಂಶವಾಗಿದ್ದರೆ ನಿಮ್ಮ ಭಾಷೆಯಲ್ಲಿ ಇದೊಂದು ಸಾರಾಂಶ ಎಂದು ತೋರಿಸುವ ಪದಗಳನ್ನು ಬಳಸಿ
  • ಭೂಮಿಯ ಮೇಲೆ ಜಲಪ್ರಳಯವಾದಾಗ ನೋಹನಿಗೆ ಆರುನೂರು ವರ್ಷವಾಗಿತ್ತು . (ಆದಿಕಾಂಡ 7:6 ULB)
    • ಈಗ ಇದೇ ನಡೆದದ್ದು ನೋಹನು ಆರುನೂರು ವರ್ಷದವನಾಗಿದ್ದಾಗ ಭೂಮಿಯ ಮೇಲೆ ಜಲಪ್ರಳಯವಾಯಿತು.
    • ಈ ಭಾಗದ ವಾಕ್ಯವು ಭೂಮಿಯ ಮೇಲೆ ಜಲಪ್ರಳಯವಾದಾಗ ಏನಾಯಿತು ಎಂಬುದನ್ನು ತಿಳಿಸುತ್ತದೆ. ಇದು ನೋಹನು ಆರುನೂರು ವರ್ಷದ ವೃದ್ಧನಾದಾಗ ನಡೆಯಿತು.
  1. ನೀವು ಭಾಷಾಂತರಿಸುತ್ತಿರುವ ಭಾಷೆಯಲ್ಲಿ ಇದು ಅಸಹಜವಾಗಿ ಮೂಡಿಬಂದರೆ ಘಟನೆಯ ಸಾರಾಂಶವನ್ನು ಪ್ರಾರಂಭದಲ್ಲೇ ನೀಡಲಾಗುವುದು, ಆದುದರಿಂದ ಈ ಘಟನೆ ಕಥೆಯಲ್ಲಿ ಆಮೇಲೆ ನಡೆಯುತ್ತದೆ ಎಂದು ತಿಳಿಸಬೇಕು.
  • ನೋಹನು ಆರುನೂರು ವರ್ಷದವನಾದಾಗ ಭೂಮಿಯ ಮೇಲೆ ಜಲಪ್ರಳಯವಾಯಿತು… ನೋಹ, ಅವನ ಮಗಂದಿರು, ಅವನ ಹೆಂಡತಿ, ಅವನ ಸೊಸೆಯಂದಿರೂ ಎಲ್ಲರೂ ನಾವೆಯೊಳಗೆ ಒಟ್ಟಾಗಿ ಹೋದರು, ಏಕೆಂದರೆ ಅಲ್ಲಿ ಜಲಪ್ರಳಯವಾಗಿತ್ತು (ಆದಿಕಾಂಡ 7:6-7 ULB).
    • ನೋಹನು ಆರುನೂರು ವರ್ಷದವನಾದಾಗಈ ಘಟನೆ ನಡೆಯಿತು .
    • ನೋಹ, ಅವನ ಗಂಡು ಮಕ್ಕಳು, ಅವನ ಹೆಂಡತಿ, ಅವನ ಸೊಸೆಯಂದಿರೂ ಎಲ್ಲರೂ ನಾವೆಯೊಳಗೆ ಒಟ್ಟಾಗಿ ಹೋದರು ಏಕೆಂದರೆ ದೇವರ ಅವರಿಗೆ ಜಲಪ್ರಳಯವಾಗಿ ಭೂಮಿ ಎಲ್ಲಾ ನೀರಿನಿಂದ ತುಂಬಿಹೋಗುತ್ತದೆ.ಎಂದು ಹೇಳಿದನು.

ಹಳೆಯ ಮತ್ತು ಹೊಸ ಪಾತ್ರಧಾರಿಗಳ ಪರಿಚಯ.

Translation Manual :: Just-in-Time Learning Modules :: Writing Styles (Discourse) :: Introduction of New and Old Participants

ವಿವರಣೆಗಳು

ಒಂದು ಕತೆಯಲ್ಲಿ ಯಾರ ಬಗ್ಗೆಯಾದರೂ ಅಥವಾ ಯಾವ ವಸ್ತುವಿನ ಬಗ್ಗೆಯಾದರೂ ಹೇಳುವಾಗ ಅವರು ಹೊಸ ಪಾತ್ರಧಾರಿಯಾಗಿರುತ್ತಾರೆ.. ಆನಂತರ ಬಳಕೆಯಾದಾಗ, ಅವರ / ಅವುಗಳ ಬಗ್ಗೆ ಹೇಳಿದಾಗ ಅವರು / ಅವು ಹಳೆಯ ಪಾತ್ರಧಾರಿಯಾಗುತ್ತಾರೆ..

ಫರಿಸಾಯರಲ್ಲಿ ಯಹೂದ್ಯರ ಹಿರೀ ಸಭೆಯವನಾದ ನಿಕೋದೇಮನೆಂಬ ಒಬ್ಬ ಮನುಷ್ಯನಿದ್ದನು ಈ ಮನುಷ್ಯನು ರಾತ್ರಿಸಮಯದಲ್ಲಿ ಯೇಸುವಿನ ಬಳಿಗೆ ಬಂದನು. ಯೇಸು ಅವನಿಗೆ ಹೀಗೆ ಹೇಳಿದನು (ಯೋಹಾನ 3:1)

ಮೊದಲ ವಾಕ್ಯದಲ್ಲಿ ನಿಕೋದೇಮನೆಂಬ ಮನುಷ್ಯನನ್ನು ಹೊಸ ವ್ಯಕ್ತಿಯಾಗಿ ಪರಿಚಯಿಸಲಾಗಿದೆ. ಎರಡನೇ ವಾಕ್ಯದಲ್ಲಿ " ಈ ಮನುಷ್ಯ " ಮತ್ತು " ಅವನು " ಎಂಬ ಪದಗಳು ಹಳೆಯ ವ್ಯಕ್ತಿಗಳಾಗಿದ್ದಾರೆ.

ಕಾರಣ ಇದೊಂದು ಭಾಷಾಂತರ ವಿಷಯ.

ಭಾಷಾಂತರವನ್ನು ಸ್ಪಷ್ಟವಾಗಿ ಮತ್ತು ಸಹಜವಾಗಿ ಇರಬೇಕೆಂದರೆ ಓದುಗರು ವಾಕ್ಯಭಾಗದಲ್ಲಿ ಬರುವ ವ್ಯಕ್ತಿಗಳು ಹೊಸ ವ್ಯಕ್ತಿಗಳಾದರೂ / ಪಾತ್ರಧಾರಿಗಳಾದರೂ ಅವರು ಈಗಾಗಲೇ ಓದಿದ್ದರೂ ಅರ್ಥಮಾಡಿಕೊಳ್ಳುವಂತೆ ತಿಳಿಸಬೇಕು. ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಈ ಕಾರ್ಯವನ್ನು ಮಾಡಲಾಗುತ್ತದೆ. ಇಂತಹ ಭಾಷಾಂತರ ಮಾಡುವಾಗ ನೀವು ನಿಮ್ಮ ಭಾಷೆಯಲ್ಲಿ ಬಳಸುವ ರೀತಿಯಲ್ಲೇ ಮಾಡಬೇಕೇ ಹೊರತು ಮೂಲಗ್ರಂಥದಲ್ಲಿ ಇರುವಂತೆ ಮಾಡಬೇಕು.

ಸತ್ಯವೇದದಿಂದ ಉದಾಹರಣೆಗಳು.

ಹೊಸ ಪಾತ್ರಧಾರಿಗಳು

ಸಾಮಾನ್ಯವಾಗಿ ಹೊಸ ವ್ಯಕ್ತಿಗಳು ಮತ್ತು ಹೊಸ ಪಾತ್ರಧಾರಿಗಳನ್ನು ಪರಿಚಯಿಸುವಾಗ " ಒಬ್ಬ ಮನುಷ್ಯನಿದ್ದನು " ಎಂಬ ಪದವನ್ನು ಬಳಸುತ್ತಾರೆ. ಇದನ್ನು ತಿಳಿಸುವ ಉದಾಹರಣೆಗಳು ಕೆಳಗಿನಂತಿವೆ. “ಅಲ್ಲೊಬ್ಬ” ಮನುಷ್ಯನಿದ್ದನು ಎಂಬ ಪದವನ್ನು ಬಳಸಿದಾಗ ಆ ಮನುಷ್ಯ ಆ ಕಾಲದಲ್ಲಿ ಬದುಕಿದ್ದನು. “ಒಂದು” “ಒಬ್ಬ ಮನುಷ್ಯ” ಎಂಬ ಪದಗಳು ಲೇಖಕನು ಆ ವ್ಯಕ್ತಿಯಬಗ್ಗೆ ಮೊದಲಸಲ ಮಾತನಾಡುತ್ತಿದ್ದಾನೆ ಎಂದು ತಿಳಿಯುತ್ತದೆ.

ವಾಕ್ಯದ ಇತರ ಪದಗಳು ಈ ಮನುಷ್ಯ ಯಾರು ? ಎಲ್ಲಿಂದ ಬಂದ ? ಇವನ ಹೆಸರು ಏನು ? ಎಂಬುದು ತಿಳಿದುಬರುತ್ತದೆ.

ಚೋರ್ಗಾ ಎಂಬ ಊರಲ್ಲಿ ದಾನ್ ಕುಲದವನಾದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು (ನ್ಯಾಯಸ್ಥಾಪಕರು 13:2 ULB)

ಒಬ್ಬ ಪಾತ್ರಧಾರಿಯ ಪಾತ್ರ ಮುಖ್ಯವಾದುದು ಎಂದು ಪರಿಚಯಿಸುವಾಗ ಇನ್ನೊಬ್ಬ ಹೊಸ ಪಾತ್ರಧಾರಿ / ವ್ಯಕ್ತಿ ಪದೇಪದೇ ಬಂದರೂ ಅಷ್ಟೇನೂ ಮುಖ್ಯವಲ್ಲ. ಈ ಉದಾಹರಣೆಯ ಎರಡನೇ ವಾಕ್ಯದಲ್ಲಿ ಬರುವ ಮಾನೋಹನ ಹೆಂಡತಿಯನ್ನು "ಅವನ ಹೆಂಡತಿ " ಎಂದು ಪರಿಚಯಿಸಲಾಗಿದೆ. ಈ ಪದ ಮಾನೋಹನಿಗೆ ಇವಳು ಸಂಬಂಧಪಟ್ಟವಳು ಎಂದು ಅರ್ಥ.

ಚೋರ್ಗಾ ಎಂಬ ಊರಲ್ಲಿ ದಾನ್ ಕುಲದವನಾದ ಮಾನೋಹ ಎಂಬೊಬ್ಬ ಮನುಷ್ಯನಿದ್ದನು ಅವನ ಹೆಂಡತಿ ಬಂಜೆಯಾಗಿದ್ದುದರಿಂದ ಅವನಿಗೆ ಮಕ್ಕಳಿರಲಿಲ್ಲ. (ನ್ಯಾಯಸ್ಥಾಪಕರು 13:2 ULB)

ಕೆಲವೊಮ್ಮೆ ಲೇಖಕನು ಹೊಸ ಪಾತ್ರಧಾರಿಯನ್ನು ಸರಳವಾಗಿ ಪರಿಚಯಿಸುತ್ತಾನೆ ಏಕೆಂದರೆ ಲೇಖಕನು ತನ್ನ ಓದುಗರಿಗೆ ಆ ವ್ಯಕ್ತಿಯನ್ನು ಈಗಾಗಲೇ ಪರಿಚಯಿಸಿದ್ದಾನೆಂದು ತಿಳಿದಿರುತ್ತಾನೆ. ಒಂದನೇ ಅರಸುಗಳ, ಮೊದಲ ವಾಕ್ಯದಲ್ಲಿ ಓದುಗರಿಗೆ ಅರಸನಾದ ದಾವೀದನು ಯಾರು ಎಂದು ತಿಳಿದಿದೆ ಎಂದು ಭಾವಿಸುತ್ತಾನೆ. ಆದುದರಿಂದ ಅವನು ಯಾರು ಎಂದು ಪರಿಚಯಿಸುವ ಅಗತ್ಯವಿಲ್ಲ.

ಅರಸನಾದ ದಾವೀದನು ದಿನ ತುಂಬಿದ ಮುದುಕನಾಗಿದ್ದನು, ಸೇವಕರು ಎಷ್ಟು ಕಂಬಳಿಗಳನ್ನು ಹೊದೆಸಿದರೂ ಅವನಿಗೆ ಬೆಚ್ಚನೆಯ ಅನುಭವವಾಗಲಿಲ್ಲ. (1 ಅರಸುಗಳು 1:1 ULB)

ಹಳೆಯ ಪಾತ್ರಧಾರಿಗಳು.

ಕತೆಯಲ್ಲಿ ಒಬ್ಬ ವ್ಯಕ್ತಿಯನ್ನು ಪರಿಚಯಿಸಿದ ಮೇಲೆ ನಂತರ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಸರ್ವನಾಮವನ್ನು ಬಳಸಿ ಹೇಳುತ್ತಾನೆ. ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಮನೋಹನನ್ನು ಕುರಿತು ಹೇಳುವಾಗ “ಅವನು,” ಅವನ ಹೆಂಡತಿಯ ಬಗ್ಗೆ ಹೇಳುವಾಗ “ಅವಳು,” ಎಂದು ಬಳಸಿದ್ದಾರೆ.

ಅವನಹೆಂಡತಿ ಬಂಜೆಯಾಗಿದ್ದುದರಿಂದ ಅವಳುಮಗುವಿಗೆ ಜನ್ಮ ನೀಡಲು ಆಗಲಿಲ್ಲ. (ನ್ಯಾಯಸ್ಥಾಪಕರು 13:2 ULB)

ಹಳೆಯ ಪಾತ್ರಧಾರಿ ಯನ್ನು ಕುರಿತು ಹೇಳುವಾಗ ಕತೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಯ ಕತೆಯಲ್ಲಿ ಬರುವ ಮನೋಹನ ಹೆಂಡತಿ ಮಗುವನ್ನು ಪಡೆಯುವ ಬಗ್ಗೆ ಹೇಳುವಾಗ " ಹೆಂಗಸು." ಎಂಬ ನಾಮಪದವನ್ನು ಬಳಸಲಾಗಿದೆ.

ಒಂದಾನೊಂದು ದಿನ ಯೆಹೋವನ ದೂತನು ಪ್ರತ್ಯಕ್ಷವಾಗಿ ಆಕೆಗೆ ಇಗೋ ಸ್ತ್ರೀಯೇ ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು ಗರ್ಭವತಿಯಾಗಿ ಮಗನನನ್ನು ಹೆರುವಿ ಎಂದನು (.ನ್ಯಾಯಸ್ಥಾಪಕರು 13:3 ULB)

ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಮನೋಹನನ್ನು ಅವನ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಲೇಖಕನು 3ನೇ ವಾಕ್ಯದಿಂದ ಅವನ ಹೆಸರಿನಿಂದ ಗುರುತಿಸಿಲ್ಲ

ಆಗ ಮನೋಹನುಯೆಹೋವನನ್ನು ಕುರಿತು ಪ್ರಾರ್ಥಿಸಿದನು. (ನ್ಯಾಯಸ್ಥಾಪಕರು 13:8 ULB)

ಕೆಲವು ಭಾಷೆಯಲ್ಲಿ ಕ್ರಿಯಾಪದವನ್ನು ಕುರಿತು ಹೇಳಿದರೆ ಅವು ಕರ್ತೃಪದದ ಬಗ್ಗೆ ತಿಳಿಸುತ್ತದೆ. ಇನ್ನು ಕೆಲವು ಭಾಷೆಗಳಲ್ಲಿ ಜನರು ನಾಮಪದಗಳನ್ನು ಎಲ್ಲಾ ಸಮಯದಲ್ಲೂ ಉಪಯೋಗಿಸುವುದಿಲ್ಲ ಅಥವಾ ಹಳೇ ಪಾತ್ರಧಾರಿಗಳಿಗೆ ಸರ್ವನಾಮವನ್ನು ಉಪಯೋಗಿಸುವುದಿಲ್ಲ. ಕ್ರಿಯಾಪದಗಳು ಕರ್ತೃಪದ ನಿರ್ವಹಿಸುವ ಕೆಲಸವನ್ನು ಅರ್ಥಮಾಡಿಕೊಳ್ಳುವಂತೆ ಸಾಕಷ್ಟು ಮಾಹಿತಿಯನ್ನು ಶ್ರೋತೃಗಳಿಗೆ ತಿಳಿಸುತ್ತದೆ. (ಕ್ರಿಯಾಪದಗಳು) ನೋಡಿ.

ಭಾಷಾಂತರ ಕುಶಲತೆಗಳು

  1. ಪಾತ್ರಧಾರಿಗಳು.ಹೊಸಬರಾಗಿದ್ದರೆ,ಭಾಷೆಯಲ್ಲಿ ಪರಿಚಯಿಸುವ ಹೊಸ ಪಾತ್ರಧಾರಿಗಳು / ವ್ಯಕ್ತಿ ಗಳ ಬಗ್ಗೆ ನಿಮ್ಮ ಭಾಷೆಯಲ್ಲಿರುವಂತೆ ಬಳಸಿ.
  2. ಸರ್ವನಾಮ ಯಾರ ಬಗ್ಗೆ ಉಪಯೊಗಿಸಲಾಗಿದೆ ಎಂದು ಗೊಂದಲವಾದರೆ ನಾಮಪದ ಅಥವಾ ಹೆಸರನ್ನು ಬಳಸಬಹುದು.
  3. ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗೆ ವ್ಯಕ್ತಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ವಾಕ್ಯಭಾಗದ ಸಂದರ್ಭಕ್ಕಾಗಿ ಸರ್ವನಾಮಗಳನ್ನು ಬಳಸದೆ ವಾಕ್ಯ ಮಾಡಿದಾಗ ಜನರಿಗೆ ಸುಲಭವಾಗಿ ಅರ್ಥವಾದರೆ ಸರ್ವನಾಮಗಳನ್ನು ಬಳಸದೆ ಬಿಡಬಹುದು.

ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು.

  1. ಪಾತ್ರಧಾರಿಗಳು.ಹೊಸಬರಾಗಿದ್ದರೆ,ಭಾಷೆಯಲ್ಲಿ ಪರಿಚಯಿಸುವ ಹೊಸ ಪಾತ್ರಧಾರಿಗಳು ಬಗ್ಗೆ ನಿಮ್ಮ ಭಾಷೆಯಲ್ಲಿರುವಂತೆ ಬಳಸಿ.
  • ಅಪೋಸ್ತಲರು “ ಬಾರ್ನಬ ” ಅಂದರೆ " ಧೈರ್ಯದಾಯಕ," ಎಂದು ಹೆಸರಿಟ್ಟಿದ್ದರು). (ಆ. ಕೃ. 4:36-37 ULB) –ಯೋಸೇಫನ ಹೆಸರನ್ನು ಪ್ರಾರಂಬದಲ್ಲೇ ಪರಿಚಯಿಸುವಾಗ ಮತ್ತು ಇನ್ನೊಂದು ಹೆಸರನ್ನು ಬಳಸಿರುವುದರಿಂದ ಗೊಂದಲವಾಗದೇ ಇರುವಂತೆ ನೋಡಿಕೊಳ್ಳಬೇಕು.
    • ಕುಪ್ರ ದ್ವೀಪದಿಂದ ಬಂದವನು ಲೇವಿಯನಾಗಿದ್ದ. ಅವನ ಹೆಸರು ಯೋಸೇಫ, ಅಪೋಸ್ತಲರು ಅವನಿಗೆ ಬಾರ್ನಬನೆಂದು ಹೆಸರಿಟ್ಟು ಕರೆದರು. (ಇದರ ಅರ್ಥ ಪ್ರೇರಣೆಯ / ಪ್ರೋತ್ಸಾಹದ ಮಗ)
    • ಅಲ್ಲೊಬ್ಬ ಲೇವಿಯನು ಕುಪ್ರ ದ್ವೀಪದಿಂದ ಬಂದಿದ್ದ, ಅವನ ಹೆಸರು ಯೋಸೇಫ, ಅಪೋಸ್ತಲರು ಅವನಿಗೆ ಬಾರ್ನಬನೆಂದು ಹೆಸರಿಟ್ಟು ಕರೆದರು. ಇದರ ಅರ್ಥ ಪ್ರೋತ್ಸಾಹದ ಮಗ ಎಂದು
  1. ಯಾರನ್ನು ಕುರಿತು ಸರ್ವನಾಮವನ್ನು ಹೇಳಿದೆ ಎಂದು ಗೊತ್ತಾಗದಿದ್ದರೆ ನಾಮಪದ ಅಥವಾ ಹೆಸರನ್ನು ಬಳಸಿ.
  • ಆತನುಒಂದು ಸ್ಥಳದಲ್ಲಿ ಪ್ರಾರ್ಥನೆ ಮಾಡಿಮುಗಿಸಿದಾಗ ತನ್ನ ಶಿಷ್ಯರಲ್ಲಿ ಒಬ್ಬನು ಆತನಿಗೆ – ಸ್ವಾಮಿ ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆ ನಮಗೂ ಪ್ರಾರ್ಥನೆ ಮಾಡುವುದನ್ನು ಕಲಿಸು ಎಂದು ಹೇಳಿದನು." (ಲೂಕ 11:1 ULB) – ಇಲ್ಲಿ ಅಧ್ಯಾಯದ ಪ್ರಾರಂಭ ವಾಕ್ಯದಲ್ಲಿ ಮೊದಲ ಪದ " ಆತನು " ಎಂದು ಪ್ರಾರಂಭವಾದಾಗ ಓದುಗರಿಗೆ " ಆತನು " ಎಂಬುದು ಯಾರು ಎಂದು ಆಶ್ವರ್ಯವಾಗಬಹುದು.
    • ಇದು ಯೇಸುಒಂದು ನಿರ್ದಿಷ್ಟ ಸ್ಥಳದಲ್ಲಿ ಯೇಸು ಪ್ರಾರ್ಥನೆ ಮಾಡಿಮುಗಿಸಿದಾಗ ನಡೆದ ವಿಷಯ. ಆತನ ಶಿಷ್ಯರಲ್ಲಿ ಒಬ್ಬನು ಸ್ವಾಮಿ,ಯೋಹಾನನು ತನ್ನ ಶಿಷ್ಯರಿಗೆ ಪ್ರಾರ್ಥಿಸುವುದನ್ನು ಕಲಿಸಿದಂತೆ ನಮಗೂ ಪ್ರಾರ್ಥಿಸುವುದನ್ನು ಕಲಿಸು ಎಂದು ಹೇಳಿದನು.
  1. ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗೆ ವ್ಯಕ್ತಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ವಾಕ್ಯಭಾಗದ ಸಂದರ್ಭಕ್ಕಾಗಿ ಸರ್ವನಾಮಗಳನ್ನು ಬಳಸದೆ ವಾಕ್ಯ ಮಾಡಿದಾಗಜನರಿಗೆ ಸುಲಭವಾಗಿ ಅರ್ಥವಾದರೆ ಸರ್ವನಾಮಗಳನ್ನು ಬಳಸದೆ ಬಿಡಬಹುದು.
  • ಯೋಸೇಫನ ಧಣಿಯು ಯೋಸೇಫನನ್ನುಹಿಡಿಸಿ ತರಿಸಿ ಅರಸನು ಸೆರೆಯವರನ್ನು ಕಟ್ಟಿಹಾಕುತ್ತಿದ್ದ.ಸೆರೆಮನೆಯಲ್ಲಿ ಹಾಕಿದನು ಯೋಸೇಫನುಅಲ್ಲಿ ಸೆರೆಮನೆಯಲ್ಲಿ ಇರಬೇಕಾಯಿತು ಯೋಸೇಫ. (ಆದಿಕಾಂಡ 39:20 ULB) –ಈ ಕತೆಯಲ್ಲಿ ಯೋಸೇಫನು ಮುಖ್ಯಪಾತ್ರವಹಿಸಿದ್ದರಿಂದ ಕೆಲವು ಭಾಷೆಯಲ್ಲಿ ಪದೇಪದೇ ಯೋಸೇಫನ ಹೆಸರು ಬಳಸಿರುವುದನ್ನು ಅಸಹಜವಾದ ಬಳಕೆ ಅಥವಾ ಗೊಂದಲ ಉಂಟುಮಾಡುತ್ತದೆ ಎಂದು ಭಾವಿಸಬಹುದು. ಬಹುಷಃ ಅವರು ಇಲ್ಲಿ ಸರ್ವನಾಮದ ಬಳಕೆಯನ್ನು ನಿರೀಕ್ಷಿಸಬಹುದು.
    • ಯೋಸೇಫನ ಧಣಿಯು ಆತನನ್ನುಅರಸನು ಸೆರೆಯವರನ್ನು ಬಂಧಿಸಿಡುವ ಸೆರೆಮನೆಯಲ್ಲಿ ಹಾಕಿದನು. ಮತ್ತು ಅವನು ಸೆರೆಮನೆಯಲ್ಲೇ ಇರಬೇಕಾಯಿತು. ಅವನು

ಸಾಮ್ಯಗಳು.

Translation Manual :: Just-in-Time Learning Modules :: Writing Styles (Discourse) :: Parables

ಸಾಮ್ಯಗಳು ಎಂದರೆ ಅದೊಂದು ಸಣ್ಣಕಥೆ, ಸತ್ಯಸಂಗತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಮರೆಯಲು ಸಾಧ್ಯವಿಲ್ಲದ್ದು.

ವಿವರಣೆಗಳು

ಸಾಮ್ಯಗಳು ಎಂದರೆ ಸಣ್ಣಕಥೆ, ಸತ್ಯವನ್ನು ಬೋಧಿಸಲು ಹೇಳುವಂತಹ ಕಥೆಗಳು. ಈ ಸಾಮ್ಯಗಳಲ್ಲಿರುವ ಘಟನೆಗಳು ನಡೆಯುವಂತಹದ್ದಾದರೂ ಕೆಲವು ಅವುಗಳಲ್ಲಿ ನಿಜವಾಗಿ ನಡೆದಿಲ್ಲ. ಇವುಗಳನ್ನು ಜೀವನದಲ್ಲಿನ ಸತ್ಯಸಂಗತಿಗಳನ್ನು ತಿಳಿಸಲು ಹೇಳಿದ ಕಥೆಗಳು. ಈ ಸಾಮ್ಯಗಳಲ್ಲಿ ಕಂಡುಬರುವ ನಿರ್ದಿಷ್ಟವ್ಯಕ್ತಿಗಳಿಗೆ ಕೆಲವರಿಗೆ ಮಾತ್ರ ಹೆಸರು ಇರುತ್ತದೆ. (ಇಷ್ಟು ವಿವರಗಳ ಮೂಲಕ ನಿಮಗೆ ಸಾಮ್ಯಗಳು ಎಂದರೇನು ? ನಿಜವಾದ ಘಟನೆ ಎಂದರೆ ಏನು ? ಎಂಬುದು ತಿಳಿದಿರಬಹುದು.) ಸಾಮಾನ್ಯವಾಗಿ ಈ ಸಾಮ್ಯಗಳಲ್ಲಿ ಉಪಮಾ ಅಲಂಕಾರ ಮತ್ತು ರೂಪಕ ಅಲಂಕಾರಗಳನ್ನು ಬಳಸಿರುತ್ತಾರೆ ಆಗ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು.

“ಒಬ್ಬ ಕುರುಡನು ಇನ್ನೊಬ್ಬ ಕುರುಡನಿಗೆ ದಾರಿ ತೋರಿಸಲು ಆದಿತೇ?” ಹಾಗೇನಾದರೂ ಮಾಡಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವುದಿಲ್ಲವೇ?" (ಲೂಕ 6:39 ULB)

ಈ ಸಾಮ್ಯದಿಂದ ಒಬ್ಬ ವ್ಯಕ್ತಿಗೆ ಆತ್ಮಿಕವಾದ ಜ್ಞಾನವಿಲ್ಲದಿದ್ದರೆ ಇನ್ನೊಬ್ಬರನ್ನು ಆತ್ಮಿಕವಾಗಿ ಬೆಳೆಸಲು ಅವರಿಗೆ ಬೇಕಾದ ವಿಷಯ ತಿಳಿಸಲು ಸಾಧ್ಯವಿಲ್ಲ.ಇಬ್ಬರೂಅಜ್ಞಾನದಲ್ಲಿ ಬಿದ್ದು ನರಳುವರು ಎಂದು ತಿಳಿಸುತ್ತದೆ.

ಸತ್ಯವೇದದ ಉದಾಹರಣೆಗಳು.

ದೀಪವನ್ನು ಹೊತ್ತಿಸಿ ಕೊಳಗದೊಳಗೆ ಯಾರೂ ಇಡುವುದಿಲ್ಲ ದೀಪಸ್ಥಂಭದ ಮೇಲೆ ಇಡುತ್ತಾರಷ್ಟೆ, ಆಗ ಮನೆಯಲ್ಲಿ ಇರುವವರೆಲ್ಲರಿಗೆ ಬೆಳಕು ಕೊಡುತ್ತದೆ. ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ, ಹೀಗಾದರೆ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು. (ಮತ್ತಾಯ 5:15-16 ULB)

ಈ ಸಾಮ್ಯದ ಮೂಲಕ ನಾವು ದೇವರಿಗಾಗಿ ಜೀವಿಸುವ ಜೀವನಜನರ ಮುಂದೆ ಬಚ್ಚಿಡದೆ ಪ್ರಕಟವಾಗಿಡಬೇಕು (ತೆರೆದ ಪುಸ್ತಕದಂತೆ) ಎಂದು ತಿಳಿಯುತ್ತೇವೆ.

ನಂತರ ಯೇಸು ಇನ್ನೊಂದು ಸಾಮ್ಯವನ್ನು ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಸಾಸಿವೆಕಾಳಿಗೆ ಹೋಲಿಕೆ ಯಾಗಿದೆ” ಒಬ್ಬ ಮನುಷ್ಯಸಾಸಿವೆ ಕಾಳನ್ನು ತನ್ನ ಹೊಲದಲ್ಲಿ ಬಿತ್ತಿದನು". ಈ ಕಾಳು ಎಲ್ಲಾ ಕಾಳಿಗಿಂತ ಚಿಕ್ಕದಾಗಿದೆ. ಆದರೆ ಅದು ಬೆಳೆದ ಮೇಲೆ ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಬೆಳೆಯುತ್ತದೆ.ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ." (ಮತ್ತಾಯ 13:31-32 ULB)

ಈ ಸಾಮ್ಯವು ದೇವರ ಪರಲೋಕ ರಾಜ್ಯವು ಮೊದಲು ನೋಡಲು ಚಿಕ್ಕದಾದರೂ ಆಮೇಲೆ ಬೃಹದಾಕಾರವಾಗಿ ಇಡೀ ವಿಶ್ವವನ್ನು ವ್ಯಾಪಿಸಿ ಕೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ.

ಭಾಷಾಂತರ ತಂತ್ರಗಳು.

  1. ಕೆಲವೊಮ್ಮೆ ಕೆಲವರಿಗೆ ಈ ಸಾಮ್ಯಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು ಏಕೆಂದರೆ ಇದರಲ್ಲಿ ಕೆಲವೊಮ್ಮೆ ಓದುಗರಿಗೆ ಪರಿಚಯವಿಲ್ಲದ ಪದಗಳಿರಬಹುದು ಅಂತಹ ಸಂದರ್ಭದಲ್ಲಿ ಅವರಿಗೆ ಪರಿಚಯವಿರುವ ಪದಗಳನ್ನು ಬಳಸಿ ತಿಳಿಸಬಹುದು. ಆದರೆ ಇಲ್ಲಿರುವ ಬೋಧನೆಯ ಅಂಶಗಳನ್ನು ಬದಲಾಯಿಸಬಾರದು. ಅಪರಿಚಿತ ಭಾಗಗಳನ್ನು ಭಾಷಚಾಂತರಿಸುವುದು ನೋಡಿ.
  2. ಈ ಸಾಮ್ಯದಲ್ಲಿರುವ ಬೋಧನೆಗಳು ಅಸ್ಪಷ್ಟವಾಗಿದ್ದರೆ ಪೀಠಿಕೆಯಲ್ಲಿಈ ಸಾಮ್ಯದಲ್ಲಿ ಬರುವ ವಿಚಾರಗಳನ್ನು ವಿವರಿಸಿ ಜನರು ಉದಾರವಾಗಿರಬೇಕು ಎಂಬುದರ ಬಗ್ಗೆ ಹೇಳಿರುವ ಮಾತುಗಳನ್ನು ತಿಳಿಸಬೇಕು

ಭಾಷಾಂತರ ತಂತ್ರಗಳನ್ನು ಅಳವಡಿಸಿರುವುದಕ್ಕೆ ಉದಾಹರಣೆಗಳು.

  1. ಕೆಲವೊಮ್ಮೆ ಕೆಲವರಿಗೆ ಈ ಸಾಮ್ಯಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು ಏಕೆಂದರೆ ಇದರಲ್ಲಿ ಕೆಲವೊಮ್ಮೆ ಓದುಗರಿಗೆ ಪರಿಚಯವಿಲ್ಲದ ಪದಗಳಿರಬಹುದು ಅಂತಹ ಸಂದರ್ಭದಲ್ಲಿ ಅವರಿಗೆ ಪರಿಚಯವಿರುವ ಪದಗಳನ್ನು ಬಳಸಿ ತಿಳಿಸಬಹುದು. ಆದರೆ ಇಲ್ಲಿರುವ ಬೋಧನೆಯ ಅಂಶಗಳನ್ನು ಬದಲಾಯಿಸಬಾರದು.
  • ಯೇಸು ಅವರನ್ನು ಕುರಿತು " ದೀಪವನ್ನು ತಂದು ಕೊಳಗದೊಳಗಾಗಲೀ, ಮಂಚದ ಕೆಳಗಾಗಲೀ ಇಡುತ್ತಾರೆಯೇ ? " ದೀಪದ ಸ್ಥಂಭದಮೇಲೆ ಇಡುತ್ತೀರಲ್ಲವೇ ? ". (ಮಾರ್ಕ 4:21 ULB) –ನಿಮ್ಮ ಜನರಿಗೆ ದೀಪದ ಸ್ಥಂಭ ಎಂಬುದು ತಿಳಿಯದೇ ಇದ್ದಲ್ಲಿ ಅವರು ತಮ್ಮ ಮನೆಯಲ್ಲಿ ದೀಪದ ಬೆಳಕು ಸಂಪೂರ್ಣವಾಗಿ ಬೆಳಗಲು ದೀಪವನ್ನು ಎಲ್ಲಿ ಇಡುತ್ತಾರೆ ಎಂದು ತಿಳಿದು ಆ ಪದವನ್ನು ಬಳಸಿ.

    • ಯೇಸು ಅವರನ್ನು ಕುರಿತು “ದೀಪವನ್ನು ತಂದು ಕೊಳಗದೊಳಗಾಗಲೀ, ಮಂಚದ ಕೆಳಗಾಗಲೀ ಇಡುತ್ತಾರೆಯೇ ?” ನೀವು ದೀಪವನ್ನು ತಂದು ಎತ್ತರವಾದ ಅಟ್ಟಣಿಗೆಯ ಮೇಲೆ ಇಡುತ್ತೀರೀ .
  • ನಂತರ ಯೇಸು ಅವರಿಗೆ ಇನ್ನೊಂದು ಸಾಮ್ಯ ಹೇಳಿದನು. " ಆತನು ಅವರಿಗೆ " ದೇವರ ಪರಲೋಕ ರಾಜ್ಯವು ಸಾಸಿವೆ ಕಾಳಿನಂತೆ, ಅದನ್ನು ಒಬ್ಬ ಮನುಷ್ಯ ತೆಗೆದುಕೊಂಡು ತನ್ನ ಹೊಲದಲ್ಲಿಬಿತ್ತಿದನು. ಈ ಕಾಳು ಎಲ್ಲಾ ಕಾಳಿಗಿಂತ ಚಿಕ್ಕದಾಗಿದೆ. ಆದರೆ ಅದು ಬೆಳೆದ ಮೇಲೆ ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಬೆಳೆಯುತ್ತದೆ.ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ. " (ಮತ್ತಾಯ 13:31-32 ULB) ಕಾಳುಗಳನ್ನು ಬಿತ್ತುವುದು ಎಂದರೆ ಅವು ನೆಲದ ಮೇಲೆ ವ್ಯರ್ಥವಾಗಿ ಚೆಲ್ಲಿಹೋಗದಂತೆ ಬಿತ್ತುವುದು." ಜನರಿಗೆ " ಬಿತ್ತುವುದು " ಎಂಬ ಪದ ಅರ್ಥವಾಗದಿದ್ದರೆ " ನೆಡುವುದು " ಎಂದು ಬಳಸಬಹುದು.

    • ನಂತರ ಯೇಸು ಇನ್ನೊಂದು ಸಾಮ್ಯ ಹೇಳಿದನು. ಅದೇನೆಂದರೆ, " ಪರಲೋಕ ರಾಜ್ಯವು ಸಾಸಿವೆಕಾಳಿಗೆ ಹೋಲಿಕೆ ಯಾಗಿದೆ " ಒಬ್ಬ ಮನುಷ್ಯಸಾಸಿವೆ ಕಾಳನ್ನು ತನ್ನ ಹೊಲದಲ್ಲಿ ಬಿತ್ತಿದನು ". ಈ ಕಾಳು ಎಲ್ಲಾ ಕಾಳಿಗಿಂತ ಚಿಕ್ಕದಾಗಿದೆ. ಆದರೆ ಅದು ಬೆಳೆದ ಮೇಲೆ ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಬೆಳೆಯುತ್ತದೆ.ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ.
  1. ಈ ಸಾಮ್ಯದಲ್ಲಿರುವ ಬೋಧನೆಗಳು ಅಸ್ಪಷ್ಟವಾಗಿದ್ದರೆ ಪೀಠಿಕೆಯಲ್ಲಿಈ ಸಾಮ್ಯದಲ್ಲಿ ಬರುವ ವಿಚಾರಗಳನ್ನು ವಿವರಿಸಿ ಜನರು ಉದಾರವಾಗಿರಬೇಕು ಎಂಬುದರ ಬಗ್ಗೆ ಹೇಳಿರುವ ಮಾತುಗಳನ್ನು ತಿಳಿಸಬೇಕು
  • ಯೇಸು ಅವರನ್ನು ಕುರಿತು ,ನೀವು ದೀಪವನ್ನು ಮನೆಯೊಳಗೆ ತಂದು ಕೊಳಗದಲ್ಲಿ ಇಡುತ್ತೀರೋ, ಅಥವಾ ಮಂಚದ ಕೆಳಗೆ ಇಡುತ್ತೀರೋ ಎಂದು ಕೇಳಿದನು. ನೀವು ಅದನ್ನು ತಂದು ದೀಪಸ್ಥಂಭದ ಮೇಲೆ ಇಡುತ್ತೀರಲ್ಲವೇ ? (ಮಾರ್ಕ 4:21 ULB)

    • ಯೇಸು ಅವರಿಗೆ ಈ ಸಾಮ್ಯ ಏಕೆ ಹೇಳಿದನೆಂದರೆ ತಂದೆ ದೇವರಿಗೆ ಸಾಕ್ಷಿಯನ್ನು ಪ್ರಕಟವಾಗಿ ತಿಳಿಸಬೇಕು ಹೆದರಬಾರದು, ಹಿಂಜರಿಯಬಾರದು ಎಂದು ತಿಳಿಸಲು ಹೇಳಿದ್ದು ಆದುದರಿಂದಲೇ " ನೀವು ದೀಪವನ್ನು ಮನೆಯೊಳಗೆ ತಂದು ಕೊಳಗದೊಳಗೆ ಇಲ್ಲವೇ ಮಂಚದ ಕೆಳಗೆ ಇಡುತ್ತೀರಾ ಎಂದು ಪ್ರಶ್ನಿಸಿದ್ದಾನೆ. ನೀವು ಅದನ್ನು ತಂದು ಎತ್ತರವಾದ ದೀಪಸ್ಥಂಭದ ಮೇಲೆ ಇಡುವಿರಿ(ಮಾರ್ಕ 4:21 ULB)
  • ಆಗ ಯೇಸು ಅವರಿಗೆ ಇನ್ನೊಂದು ಸಾಮ್ಯ ಹೇಳಿದ.ಆತ ಅವರನ್ನು ಕುರಿತು ದೇವರ ಪರಲೋಕ ರಾಜ್ಯವು ಸಾಸಿವೆಕಾಳಿನಂತೆ, ಒಬ್ಬ ಮನುಷ್ಯನು ಅವುಗಳನ್ನು ತೆಗೆದುಕೊಂಡು ತನ್ನ ಹೊಲದಲ್ಲಿ ಬಿತ್ತಿದನು. ಈ ಕಾಳು ಎಲ್ಲಾ ಕಾಳಿಗಿಂತ ಚಿಕ್ಕದಾಗಿದೆ. ಆದರೆ ಅದು ಬೆಳೆದ ಮೇಲೆ ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಬೆಳೆಯುತ್ತದೆ.ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ. “.” (ಮತ್ತಾಯ 13:31-32 ULB)

    • ಆಗ ಯೇಸು ಅವರಿಗೆ ಇನ್ನೊಂದು ಸಾಮ್ಯ ಹೇಳಿದ ಅದೇನೆಂದರೆ ದೇವರ ರಾಜ್ಯ ಹೇಗೆ ಬೆಳೆಯುತ್ತದೆ ಎಂಬುದನ್ನು ತಿಳಿಸಿದನು, . ಆತ ಹೇಳಿದ್ದು,. " ದೇವರ ಪರಲೋಕ ರಾಜ್ಯ ಒಬ್ಬ ಮನುಷ್ಯನು ಸಾಸಿವೆಕಾಳನ್ನು ತನ್ನ ಹೊಲದಲ್ಲಿ ಬಿತ್ತಿ ಬೆಳೆಸಿದಂತೆ. ಈ ಕಾಳು ಎಲ್ಲಾ ಕಾಳಿಗಿಂತ ಚಿಕ್ಕದಾಗಿದೆ. ಆದರೆ ಅದು ಬೆಳೆದ ಮೇಲೆ ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಬೆಳೆಯುತ್ತದೆ.ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ. "

ಪದ್ಯ

Translation Manual :: Just-in-Time Learning Modules :: Writing Styles (Discourse) :: Poetry

###ವಿವರಣೆ

ಜನರು ತಮ್ಮ ಮನಸ್ಸಿನ ಭಾವನೆಗಳನ್ನು ಸುಂದರವಾಗಿ, ಕಾವ್ಯಭಾಷೆಯಲ್ಲಿ ವ್ಯಕ್ತಪಡಿಸುವ ಮಾಧ್ಯಮವೇ ಪದ್ಯ, ತಮ್ಮ ಭಾಷೆಯಲ್ಲಿನ ಪದಗಳನ್ನು, ಉಚ್ಛಾರಣೆಗಳನ್ನು, ಮಾತುಗಳನ್ನು, ಬರಹಗಳನ್ನು ಕಾವ್ಯಮಯವಾಗಿ ಹೇಳಲು ಪ್ರಯತ್ನಿಸುವ ಮಾರ್ಗ. ಗದ್ಯದ ರೂಪದಲ್ಲಿ ಹೇಳುವ ಮಾತುಗಳು ಸರಳವಾಗಿದ್ದರೂ ಜನರು ತಮ್ಮ ಆಳವಾದ, ಹೃದಯದ ಮಾತುಗಳನ್ನು ಪದ್ಯದ ಮೂಲಕ ಮಾತ್ರ ಪರಿಣಾಮಕಾರಿಯಾಗಿ ಬಳಸಬಹುದು. ಸರಳ ಸಾಮಾನ್ಯ ವಾಕ್ಯಗಳಲ್ಲಿ ಹೇಳುವ ವಿಷಯಕ್ಕಿಂತ ಪದ್ಯದ ಶೈಲಿಯಲ್ಲಿ ಲಯಬದ್ಧವಾಗಿ ಹೇಳುವ ವಿಷಯಗಳಿಗೆ ಹೆಚ್ಚು ಪರಿಣಾಮವಿರುತ್ತದೆ ಮತ್ತು ಸೊಗಸಾಗಿ, ಚಿತ್ತವನ್ನು/ಮನಸ್ಸನ್ನು ಆಕರ್ಷಿಸುವಂತಹದ್ದಾಗಿದ್ದು, ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗಿರುತ್ತದೆ.

ಪದ್ಯದಲ್ಲಿಕಂಡುಬರುವ ಕೆಲವು ಸಾಮಾನ್ಯವಿಷಯಗಳು.

  • ಅನೇಕ ಅಲಂಕಾರಗಳು ಉದಾಹರಣೆಗೆ ಅಪೋಸ್ಟ್ರಫಿ
  • ಸಮಾನಸಾಲುಗಳು (ನೋಡಿ ಸಮಾನಾಂತರ/ಸಮದೂರ ಹೋಲಿಕೆ ಮತ್ತು ಸಮಾನಾಂತರ ಅರ್ಥಕೊಡುವ ಸಾಲುಗಳು.
  • ಕೆಲವು ಅಥವಾ ಎಲ್ಲಾ ಸಾಲುಗಳ ಪುನರಾವರ್ತನೆಯಾಗುವುದು.
    • ಆತನನ್ನು ಸ್ತುತಿಸಿರಿ, ಆತನ ದೇವದೂತರೆಲ್ಲಾ ಸ್ತುತಿಸಿರಿ, ಆತನ ದೂತಸೈನ್ಯವೆಲ್ಲಾ ಸ್ತುತಿಸಲಿ. ಸೂರ್ಯ ಚಂದ್ರರೇ ಆತನನ್ನು ಸ್ತುತಿಸಿರಿ ಹೊಳೆಯುವ ಎಲ್ಲಾ ನಕ್ಷತ್ರಗಳೇ ಆತನನ್ನು ಸ್ತುತಿಸಿರಿ (ದಾ.ಕೀ.148:2-3 ULB)
  • ಸಾಲುಗಳು ಸಮಾನ ಅಳತೆಯಲ್ಲಿರುತ್ತವೆ.
    • ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆತೋರಿಸುವಂತಾದ್ದು,ಪ್ರೀತಿ ಹೊಟ್ಟೆಕಿಚ್ಚು ಪಡುವುದಿಲ್ಲ ಹೊಗಳಿಕೊಳ್ಳುವುದಿಲ್ಲ, ಗರ್ವದಿಂದ ಉಬ್ಬುವುದಿಲ್ಲ,ಅವಮರ್ಯಾದೆಯಿಂದ ನಡೆಯುವುದಿಲ್ಲ. (1 ಕೊರಿಂಥ 13:4 ULB)
  • ಇಲ್ಲಿ ಆದಿ ಅಥವಾ ಅಂತ್ಯಪ್ರಾಸವಿರುತ್ತದೆ. ಪ್ರಾರಂಭದಲ್ಲಿ ಅಥವಾ ಅಂತ್ಯದಲ್ಲಿ ಒಂದೇ ರೀತಿಯ ಧ್ವನಿ ಉಚ್ಛಾರಣೆ ಇದ್ದು ಎರಡು ಅಥವಾ ಹೆಚ್ಚಿನ ಸಾಲುಗಳಲ್ಲಿ ಬರುತ್ತದೆ.
    • “Twinkle, twinkle little star. How I wonder what you are.” (from an English rhyme)
  • ಇದೇ ಧ್ವನಿ ಉಚ್ಛಾರಣೆ ಅನೇಕ ಸಲ ಪುನರಾವರ್ತನೆಯಾಗಿದೆ.
    • “Peter, Peter, pumpkin eater” (from an English rhyme)
  • ಹಳೆಯ ಪದಗಳು ಮತ್ತು ಭಾವನೆಗಳು.
  • ನಾಟಕೀಯ ಕಲ್ಪನೆಗಳು / ಉಪಮೆಗಳು.
  • ವಿವಿಧ ವ್ಯಾಕರಣ ಬಳಕೆ ಈ ಕೆಳಗಿನವುಗಳಂತೆ.
    • ಅಪೂರ್ಣವಾಕ್ಯಗಳು.
    • ಸಂಪರ್ಕಸಾಧಿಸುವ ಪದಗಳ ಕೊರತೆ

ನಿಮ್ಮ ಭಾಷೆಯಲ್ಲಿ ಕೆಲವು ಕಡೆ ಪದ್ಯಭಾಗಗಳು.

  1. ಹಾಡುಗಳು, ವಿಶೇಷವಾಗಿ ಹಳೆಯ ಹಾಡುಗಳು ಅಥವಾ ಮಕ್ಕಳ ಆಟದಲ್ಲಿ ಬಳಸುವ ಹಾಡುಗಳು.
  2. ಧಾರ್ಮಿಕ ಆಚರಣೆಗಳು ಅಥವಾ ಪೂಜಾರಿಗಳ ಮಂತ್ರಗಳು ಅಥವಾ ಮಾಂತ್ರಿಕ ವೈದ್ಯರು.
  3. ಪ್ರಾರ್ಥನೆಗಳು, ಆಶೀರ್ವಾದಗಳು ಮತ್ತು ಶಾಪಗಳು.
  4. ಹಳೆಯ ಐತಿಹ್ಯ/ ಪುರಾಣಕತೆಗಳು ಮತ್ತು ದಂತಕತೆಗಳು.

####ಚಿತ್ತಾಕರ್ಷಕ ಅಥವಾ ಸೊಗಸಾದ ಭಾಷಣ.

ಚಿತ್ತಾಕರ್ಷಕ ಅಥವಾ ಕಲ್ಪನಾತ್ಮಕ ಭಾಷಣ ಪದ್ಯದಂತೆಯೇ ಸಮಾನವಾದ ಕಾವ್ಯಭಾಷೆಯನ್ನು ಹೊಂದಿರುತ್ತದೆ.ಆದರೆ ಪದದ ಶೈಲಿ ಅಥವಾ ಭಾಷೆಯನ್ನು ಸಂಪೂರ್ಣವಾಗಿ ಹೊಂದಿರದಿದ್ದರೂ, ಪದ್ಯದಭಾಷೆಯನ್ನು ಉಪಯೋಗಿಸುವುದಿಲ್ಲ. ಜನಪ್ರಿಯ ಭಾಷಣಗಾರರು ತಮ್ಮ ಭಾಷೆಯಲ್ಲಿ ಭಾಷಣ ಮಾಡುವಾಗ ಚಿತ್ತಾಕರ್ಷಕ ಹಾಗೂ ಅತ್ಯುತ್ತಮ ಕಾವ್ಯಮಯ ಭಾಷೆಯನ್ನು ಬಳಸುತ್ತಾರೆ. ಇದು ಬಹುಶಃ ಮೂಲವಾಕ್ಯಭಾಗದ ಭಾಷೆಯನ್ನು ಅಧ್ಯಯನ ಮಾಡಿ ತಮ್ಮ ಭಾಷೆಯಲ್ಲಿ ಭಾಷಣ ಮಾಡುವಾಗ ಆಕರ್ಷಕವಾಗಿ ಸೊಗಸಾದ ಮಾತುಗಳನ್ನು ಬಳಸುತ್ತಾರೆ.

ಕಾರಣ ಇದೊಂದು ಭಾಷಾಂತರದ ಕೊರತೆ.

  • ವಿವಿಧ ಭಾಷೆಯಲ್ಲಿ ವಿವಿಧ ರೀತಿಯಲ್ಲಿ ಪದ್ಯಗಳನ್ನು ಬಳಸುತ್ತಾರೆ. ನಿಮ್ಮ ಭಾಷೆಯಲ್ಲಿ ಪದ್ಯದ ಮಾದರಿ ಮೂಲಭಾಷೆಯ ಅರ್ಥವನ್ನು ಬಳಸಲಾಗದಿದ್ದರೆ ಪದ್ಯದಮಾದರಿಯನ್ನು ಬಿಟ್ಟು ಬರೆಯಬೇಕು.
  • ಕೆಲವು ಭಾಷೆಯಲ್ಲಿ ಸತ್ಯವೇದದ ಕೆಲವು ನಿರ್ದಿಷ್ಟಭಾಗದಲ್ಲಿ ಪದ್ಯದ ಮಾದರಿಯನ್ನು ಬಳಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಇರುತ್ತದೆ.

ಸತ್ಯವೇದದ ಕೆಲವು ಉದಾಹರಣೆಗಳು

ಸತ್ಯವೇದದಲ್ಲಿ ಹಾಡುಗಳು, ಬೋಧನೆಗಳು ಮತ್ತು ಪ್ರವಾದನೆಗಳು ಇವುಗಳನ್ನು ಬರೆಯುವಾಗ ಪದ್ಯದ ಮಾದರಿಯನ್ನುಬಳಸಿದೆ. ಹಳೇ ಒಡಂಬಡಿಕೆಯಲ್ಲಿ ಬಹುಪಾಲು ಪುಸ್ತಕಗಳು ಪದ್ಯದರೂಪದಲ್ಲಿವೆ. ಇನ್ನೂ ಕೆಲವು ಸಂಪೂರ್ಣವಾಗಿ ಪದ್ಯದ ರೂಪದಲ್ಲಿದೆ.

ನಾನು ಕುಗ್ಗಿಹೋಗಿರುವುದನ್ನು ನೋಡಿರುವೆ. ನನ್ನ ನೋವು, ದುಃಖವನ್ನು ನಿನ್ನ ಲಕ್ಷ್ಯಕ್ಕೆ ತೆಗೆದುಕೊಂಡೆಯಲ್ಲಾ. (ದಾ.ಕೀ. 31:7 ULB)

ಸಮಾನಾಂತರ ಸಮಾನ ಅರ್ಥದೊಂದಿಗೆ ಎರಡು ಸಮಾನ ಅರ್ಥವನ್ನು ಒಳಗೊಂಡಿರುವುದಕ್ಕೆ ಉದಾಹರಣೆ.

ಯೆಹೋವನೇ, ರಾಷ್ಟ್ರಗಳಿಗೆ ನ್ಯಾಯತೀರ್ಪು ಕೊಡು, ನನ್ನನ್ನು ನಿರ್ದೋಷಿಯೆಂದು ನಿರೂಪಿಸು, ಏಕೆಂದರೆ ಮಹೋನ್ನತನೇ ನಾನು ನ್ಯಾಯಪರನೂ ನೀತಿವಂತನೂ ನಿರ್ದೋಷಿಯೂ ಆಗಿದ್ದೇನೆ.

ಈ ಉದಾಹರಣೆಯಲ್ಲಿ ದಾವೀದನು ತನ್ನ ಮತ್ತು ಅನೀತಿಯಿಂದ ತುಂಬಿರುವ, ರಾಷ್ಟ್ರಗಳ ನಡುವಿನ ದೋಷವನ್ನು ಗುರುತಿಸಿ ನ್ಯಾಯತೀರ್ಪು ಕೊಡಲು ಹೇಳುತ್ತಿರುವುದು ಈ ಇಬ್ಬರ ನಡುವಿನ ಸಮಾನಾಂತರ ವಿಷಯಗಳನ್ನು ಗಮನಸಿ ನಿರ್ಣಯಿಸಲು ತಿಳಿಸುವುದನ್ನು ಕಾಣುತ್ತೇವೆ. (see Parallelism)

ಅದಲ್ಲದೆ ಗೊತ್ತಿದ್ದೇ ಬೇಕೆಂದು ಪಾಪಮಾಡದಂತೆ ನಿನ್ನ ದಾಸನನ್ನು ಕಾಪಾಡು. ಅಂತಹ ಪಾಪಗಳು ನನ್ನನ್ನು ಆಳದಿರಲಿ. (ದಾ.ಕೀ 19:13 ULB)

ವ್ಯಕ್ತೀಕರಣ ಉದಾಹರಣೆಯಾಗಿ ಪಾಪದ ಬಗ್ಗೆ ಹೇಳುತ್ತಿದೆ ನಿರ್ಜೀವ ಪದವಾದ ಪಾಪ ಮನುಷ್ಯನನ್ನು ಆಳುತ್ತದೆ ಎಂದು ಬಳಸಿರುವುದು Personification) ನೋಡಿ.

ಯೆಹೋವನಿಗೆ ಕೃತಜ್ಞಾ ಸ್ತುತಿ ಮಾಡಿರಿ, ಆತನು ಒಳ್ಳೆಯವನು ಆತನ ಒಡಂಬಡಿಕೆಯ ಕೃಪೆಯು ಶಾಶ್ವತವಾದದ್ದು. ದೇವಾದಿ ದೇವನಿಗೆ ಕೃತಜ್ಞತಾ ಸ್ತುತಿ ಮಾಡಿರಿ ಆತನ ಒಡಂಬಡಿಕೆಯ ಕೃಪೆಯು ಶಾಶ್ವತವಾದದ್ದು. ಕರ್ತರ ಕರ್ತನಿಗೆ ಕೃತಜ್ಞತಾ ಸ್ತುತಿ ಮಾಡಿರಿ ಆತನ ಒಡಂಬಡಿಕೆಯ ಕೃಪೆಯು ಶಾಶ್ವತವಾದದ್ದು. (ದಾ.ಕೀ. 136:1-3 ULB)

ಈ ಮೂರು ಉದಾಹರಣಾ ವಾಕ್ಯಗಳಲ್ಲಿ ಪುನರಾವರ್ತಿತವಾಗಿ ಬರುವ ನುಡಿಗುಚ್ಛಗಳು " ಕೃತಜ್ಞತಾ ಸ್ತುತಿ ಮಾಡಿರಿ" ಮತ್ತು ಆತನ ಒಡಂಬಡಿಕೆಯ ಕೃಪೆಯು ಶಾಶ್ವತವಾದದ್ದು. ಎಂಬುದು.

ಭಾಷಾಂತರದ ಕೌಶಲ್ಯಗಳು

ಮೂಲಭಾಷೆಯ ವಾಕ್ಯಭಾಗಗಳಲ್ಲಿ ಬರುವ ಪದ್ಯಭಾಗದ ಶೈಲಿಯು ಸರಳವಾಗಿದ್ದು ಸರಿಯಾದ ಅರ್ಥವನ್ನು ನೀಡುತ್ತಿದ್ದರೆ ಅದನ್ನೇ ಬಳಸಲು ನಿರ್ಧರಿಸಿ. ಹಾಗೆ ಆಗದಿದ್ದರೆ ಇಲ್ಲಿರುವ ಕೆಲವು ವಿಧಾನಗಳನ್ನು ಭಾಷಾಂತರ ಮಾಡುವಾಗ ಬಳಸಬಹುದು.

  1. ನಿಮ್ಮ ಭಾಷೆಯಲ್ಲಿನ ಶೈಲಿಯನ್ನು ಉಪಯೋಗಿಸಿ ನೀವು ಪದ್ಯವನ್ನು ಭಾಷಾಂತರಿಸಬಹುದುವಾಗ.
  2. ನಿಮ್ಮ ಭಾಷೆಯಲ್ಲಿನ ಚಿತ್ತಾಕರ್ಷಕವಾದ ಕಾವ್ಯಮಯ ಭಾಷೆಯನ್ನು ಭಾಷಾಂತರ ಮಾಡುವಾಗ ಬಳಸಬಹುದು.
  3. ಪದ್ಯವನ್ನು ನಿಮ್ಮ ಭಾಷೆಯಲ್ಲಿ ಭಾಷಾಂತರಿಸುವಾಗ ಕೆಲವೊಮ್ಮೆ ಸರಳ ಮಾತುಗಳಲ್ಲೂ ಭಾಷಾಂತರಿಸಬೇಕು.

ನೀವು ಪದ್ಯದ ಶೈಲಿಯನ್ನು ಉಪಯೋಗಿಸಿದರೆ ನಿಮ್ಮ ಭಾಷಾಂತರ ಹೆಚ್ಚು ಸೊಗಸಾಗಿ ಮೂಡಿಬರುತ್ತದೆ.

ಸರಳ ಮಾತುಗಳನ್ನು ಬಳಸಿ ಭಾಷಾಂತರಿಸಿದರೆ ಹೆಚ್ಚು ಸಮರ್ಪಕವಾಗಿರುತ್ತದೆ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವುದಕ್ಕೆ ಉದಾಹರಣೆಗಳು.

ಯಾರು ದುಷ್ಟರ ಆಲೋಚನೆಯಂತೆ ನಡೆಯದೆ, ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ, ಧರ್ಮನಿಂದಕರೊಡನೆ ಕುಳಿತುಕೊಳ್ಳದೆ, ಯೆಹೋವನ ಧರ್ಮಶಾಶ್ತ್ರದಲ್ಲಿ ಆನಂದ ಪಡುವವನಾಗಿ, ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು (ದಾ.ಕೀ. 1:1,2 ULB)

ಕೆಳಗೆ ನಮೂದಿಸಿರುವ ಉದಾಹರಣೆಗಳು ಜನರು ದಾ.ಕೀ. 1:1,2. ಈ ವಾಕ್ಯಗಳನ್ನು ಹೀಗೆ ಭಾಷಾಂತರಿಸಬಹುದು.

  1. ಪದ್ಯವನ್ನು ನಿಮ್ಮ ಭಾಷೆಯ ಪದ್ಯದ ಶೈಲಿಯಲ್ಲಿ ಭಾಷಾಂತರಿಸಿ. (ಈ ಉದಾಹರಣೆಯಲ್ಲಿ ಬರುವ ಪದಗಳು ಸಮಾನ ಉಚ್ಛಾರಣೆಗಳು ಸಾಲುಗಳ ಕೊನೆಯ ಒಂದೇ ಧ್ವನಿಯ ಉಚ್ಛಾರಣೆ ನೀಡುತ್ತದೆ.)

" ಧರ್ಮಶಾಸ್ತ್ರದಲ್ಲಿ ಆನಂದ ಪಡುವವನು ಪಾಪ ಮಾಡುವುದರಲ್ಲಿ ಪ್ರೇರೇಪಿತನಾಗುವುದಿಲ್ಲ. ದೇವರನ್ನು ನಿಂದಿಸುವುದರೊಂದಿಗೆ ಧರ್ಮನಿಂದನೆಗೆ ತೊಡಗುವುದಿಲ್ಲ ದುಷ್ಟರ ಆಲೋಚನೆಯಂತೆ ದೇವದೂಷಣೆ ಮಾಡುವವನು ದೇವರಿಗೆ ಪ್ರಿಯನಲ್ಲ. ದೇವರು ಆತನ ನಿರಂತರ ಆನಂದವನ್ನು ನೀಡುವವನು . ಅವನು ದೇವರ ಆದೇಶವನ್ನು ಪಾಲಿಸುವವನು ಅವನು ಹಗಲಿರುಳು ಅದನ್ನೇ ಧ್ಯಾನಿಸುವವನು

  1. ನೀವು ಪದ್ಯವನ್ನು ಭಾಷಾಂತರಿಸುವಾಗ ನಿಮ್ಮದೇ ಆದ ಶೈಲಿಯಲ್ಲಿ ಅರ್ಥವಾಗುವಂತಹ ಮಾತುಗಳಲ್ಲಿ ಭಾಷಾಂತರಿಸಿ.
  • ಯಾರು ದುಷ್ಟರ ಆಲೋಚನೆಗಳನ್ನು ಕೇಳಿ ನಡೆಯದೆ ಅಥವಾ ಪಾಪಿಗಳೊಂದಿಗೆ ಮಾತನಾಡದೆ ಅಥವಾ ದೇವರನ್ನು ದೂಷಿಸುವವರೊಂದಿಗೆ ಸೇರದೇ ದೂರ ಇರುತ್ತಾನೋ ಅವನಿಗೆ ದೇವರ ಆಶೀರ್ವಾದ ದೊರೆಯುವುದು. ಅಂತಹವನು ಇದೆಲ್ಲವನ್ನು ಬಿಟ್ಟು ದೇವರ ನೀತಿನಿಯಮಗಳಂತೆ ಹಗಲಿರುಳು ಧ್ಯಾನಿಸುವನು.
  1. ನಿಮ್ಮ ಸರಳವಾದ ಮಾತುಗಳಿಂದ ಪದ್ಯವನ್ನು ಭಾಷಾಂತರಿಸಿ.
  • ಯಾರು ದುಷ್ಟಜನರ ಮಾತುಗಳನ್ನು ಆಲೋಚನೆಗಳನ್ನು ಕೇಳುವುದಿಲ್ಲವೋ ಅವರು ಸಂತೋಷದಿಂದ ಇರುತ್ತಾರೆ. ಅಂತಹವರು ನಿರಂತರವಾಗಿ ದುಷ್ಟಕಾರ್ಯಗಳನ್ನು ಮಾಡುವವರೊಂದಿಗೆ ಸಮಯ ಕಳೆಯುವುದಿಲ್ಲ ಅಥವಾ ದೇವರನ್ನು ಅಗೌರವ ತೋರಿಸುವರೊಂದಿಗೆ ಅವರು ಸೇರುವುದಿಲ್ಲ. ಅವರು ನಿತ್ಯ ನಿರಂತರ ಯೆಹೋವನ ಆಜ್ಞೆಗಳನ್ನು ನೀತಿನಿಯಮಗಳಿಗೆ ವಿಧೇಯರಾಗಿ ನಡೆಯಲು ಬಯಸುತ್ತಾರೆ.ಮತ್ತು ಅದರಲ್ಲೇ ತಮ್ಮ ಜೀವನವನ್ನು ಕಳೆಯಲು ಇಚ್ಛಿಸುತ್ತಾರೆ.

ಜ್ಞಾನೋಕ್ತಿಗಳು.

Translation Manual :: Just-in-Time Learning Modules :: Writing Styles (Discourse) :: Proverbs

###ವಿವರಣೆ

ಜ್ಞಾನೋಕ್ತಿಗಳು ಚಿಕ್ಕ,ಚೊಕ್ಕ ರೀತಿಯಲ್ಲಿ ಹೇಳುವಂತಹ ನಾಣ್ನುಡಿಗಳಂತೆ. ಇವು ಜ್ಞಾನವನ್ನು ಕೊಡುವುದು ಮತ್ತು ಸತ್ಯಸಂಗತಿಗಳನ್ನು ಬೋಧಿಸುತ್ತದೆ. ಜ್ಞಾನೋಕ್ತಿಗಳನ್ನು ಜನರು ಬಹು ಮೆಚ್ಚಿಗೆಯಿಂದ ಸ್ವೀಕರಿಸುತ್ತಾರೆ ಏಕೆಂದರೆ ಇವು ಸಂಕ್ಷಿಪ್ತವಾಗಿ, ಕೆಲವೇ ಪದಗಳಿಂದ ಅಗಾಧವಾದ ಅರ್ಥವನ್ನು ಒಳಗೊಂಡಿರುತ್ತವೆ. ಸತ್ಯವೇದದಲ್ಲಿ ಬರುವ ಜ್ಞಾನೋಕ್ತಿಗಳು ಹೆಚ್ಚಾಗಿ ರೂಪಕ ಅಲಂಕಾರವನ್ನು ಮತ್ತು ಸಮಾನಾಂತರ ಅರ್ಥವನ್ನು ನೀಡುವ ಪದಗಳನ್ನು ಬಳಸುತ್ತವೆ.

ದ್ವೇಷವು ಜಗಳವನ್ನು ಉಂಟುಮಾಡುತ್ತದೆ. ಆದರೆ ಪ್ರೀತಿ ಎಲ್ಲಾ ಪಾಪಗಳನ್ನು ಮುಚ್ಚಿಹಾಕುತ್ತದೆ. (ಜ್ಞಾನೋಕ್ತಿಗಳು 10:12 ULB)

ಜ್ಞಾನೋಕ್ತಿಗಳಿಂದ ಇನ್ನೊಂದು ಉದಾಹರಣೆ.

ಸೋಮಾರಿಯೇ, ಇರುವೆ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ಪಡೆದುಕೋ. ಅದಕ್ಕೆ ನಾಯಕ, ಅಧಿಕಾರಿ, ಪ್ರಭುಗಳು ಇಲ್ಲದಿದ್ದರೂ. ಬೇಸಿಗೆಯಲ್ಲಿ ತನ್ನ ತೀನಿಯನ್ನು ಕೂಡಿಡುವುದು. ಸುಗ್ಗಿಯ, ಕೊಯ್ಲಿನ ಕಾಲದಲ್ಲಿ ತನಗೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು. (ಜ್ಞಾನೋಕ್ತಿಗಳು 6:6-8 ULB)

ಕಾರಣ ಇದೊಂದು ಭಾಷಾಂತರ ವಿಷಯ

ಪ್ರತಿಯೊಂದು ಭಾಷೆಯಲ್ಲಿ ಇಂತಹ ಜ್ಞಾನೋಕ್ತಿಗಳನ್ನು ಅದರದೇ ಆದಶೈಲಿಯಲ್ಲಿ ಹೇಳುವ ಪದ್ಧತಿ ಇದೆ. ಸತ್ಯವೇದದಲ್ಲಿ ಅನೇಕ ಜ್ಞಾನೋಕ್ತಿಗಳಿವೆ. ನಿಮ್ಮ ಭಾಷೆಯ ಜನರು ಅವುಗಳನ್ನು ಹೇಗೆ ಹೇಳುತ್ತಾರೋ ಹಾಗೆ ಜ್ಞಾನೋಕ್ತಿಗಳನ್ನು ಭಾಷಾಂತರಿಸಬೇಕು.ಇದರಿಂದ ಅವು ಜ್ಞಾನೋಕ್ತಿಗಳು/ನಾಣ್ನುಡಿಗಳು ಮತ್ತು ಅವು ಏನನ್ನು ಬೋಧಿಸಲು/ಹೇಳಲು ಪ್ರಯತ್ನಿಸುತ್ತಿವೆ.ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ.

###ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು

ಬಹು ಐಶ್ವರ್ಯಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ, ಬೆಳ್ಳಿ ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯವಾದುದು. (ಜ್ಞಾನೋಕ್ತಿಗಳು 22:1 ULB)

ಇದರ ಅರ್ಥ ಐಶ್ವರ್ಯ, ಬೆಳ್ಳಿ ಬಂಗಾರವನ್ನು ಹೊಂದುವುದಕ್ಕಿಂತ ಒಳ್ಳೆ ವ್ಯಕ್ತಿಯಾಗಿ ಒಳ್ಳೆಯಹೆಸರನ್ನು ಪಡೆಯಲು ಪ್ರಯತ್ನಿಸುವುದೇ ಉತ್ತಮವಾದುದು.

ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯು ಹೇಗೋ ಹಾಗೆ ಯಜಮಾನನಿಗೆ ಸೋಮಾರಿಯು. (ಜ್ಞಾನೋಕ್ತಿಗಳು 10:26 ULB)

ಇದರ ಅರ್ಥ ಸೋಮಾರಿಯಾದ ಆಳು ಯಜಮಾನನಿಗೆ ನಿಷ್ಪ್ರಯೋಜಕ.

ಯೆಹೋವನು ಸನ್ಮಾರ್ಗಿಗೆ ಆಶ್ರಯ. ಕೆಡುಕನಿಗೆ ನಾಶ ನೀಡುತ್ತಾನೆ. (ಜ್ಞಾನೋಕ್ತಿಗಳು 10:29 ULB)

ಇದರ ಅರ್ಥ ಯಾರು ಉತ್ತಮ ನಡತೆಯಿಂದ ನಡೆಯುತ್ತಾರೋ ಅವರನ್ನು ದೇವರು ಆಶೀರ್ವದಿಸಿ ರಕ್ಷಿಸುತ್ತಾನೆ ಆದರೆ ದುಷ್ಟ ಮಾರ್ಗದಲ್ಲಿ ನಡೆಯುವವರಿಗೆ ನಷ್ಟವನ್ನು ನಾಶವನ್ನು ತರುತ್ತಾನೆ.

ಭಾಷಾಂತರ ತಂತ್ರಗಳು

ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಅಕ್ಷರಷಃ ಭಾಷಾಂತರಿಸಿದರೆ ಸರಿಯಾದ ಅರ್ಥವನ್ನು ಸಹಜವಾಗಿ ನೀಡುವುದಾದರೆ ಅದನ್ನೇ ಉಪಯೋಗಿಸಿ ಇದಾಗದಿದ್ದರೆ ಇಲ್ಲಿ ಕೆಲವು ಅಂಶಗಳನ್ನು ನೀಡಿದೆ.

  1. ಜನರು ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು/ ಹೇಗೆ ಬಳಸುತ್ತಾರೆ ಎಂಬುದನ್ನು ಗಮನಿಸಿ ಅದನ್ನೇ ಉಪಯೋಗಿಸಿ.
  2. ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳು/ನಾಣ್ನುಡಿಗಳು ಅನೇಕ ಜನರಿಗೆ ಪರಿಚಯವಿದ್ದರೆ ಜನರಿಗೆ ಗೊತ್ತಿರುವ ಭಾಷೆಯ ಪದಗಳನ್ನು ಬಳಸಿ ಮೂಲಭಾಷೆಯಲ್ಲಿನ ಪದಗಳ ಅರ್ಥಕೆಡದಂತೆ ಬಳಸಬೇಕು.
  3. ಸತ್ಯವೇದದ ಜ್ಞಾನೋಕ್ತಿ ಅರ್ಥಕ್ಕೆ ಸಮಾನವಾದ ಅರ್ಥಕೊಡುವ, ಬೋಧನೆ ನೀಡುವ ಪದವನ್ನು ನೀವು ಭಾಷಾಂತರಿಸುವ ಭಾಷೆಯಲ್ಲಿ ಸೂಕ್ತ ಪದವನ್ನು ಹುಡುಕಿ ಸರಿಹೊಂದಿಸಬೇಕು.
  4. ಮೂಲಭಾಷೆಯ ಬೋಧನೆಯ ಅರ್ಥವನ್ನು ನೀಡಬೇಕೆ ಹೊರತು ಜ್ಞಾನೋಕ್ತಿಯ ಮಾದರಿಯಲ್ಲಿ ಅಲ್ಲ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ಜನರು ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಹೇಗೆ ಉಪಯೋಗಿಸುತ್ತಾರೆ ಎಂಬುದನ್ನು ತಿಳಿದು ಅದರಲ್ಲಿ ಒಂದು ವಿಧಾನವನ್ನು ಬಳಸಬಹುದು.
  • ಬಹು ಐಶ್ವರ್ಯಗಳಿಸುವುದಕ್ಕಿಂತ ಒಳ್ಳೆಯ ಹೆಸರು ಪಡೆಯುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಬೆಳ್ಳಿಬಂಗಾರಕ್ಕಿಂತ ಸತ್ಕೀರ್ತಿ ಪಡೆಯುವುದು ಅಮೂಲ್ಯವಾದುದು. (ಜ್ಞಾನೋಕ್ತಿಗಳು22:1 ULB) ಇಲ್ಲಿ ಜನರು ತಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಯಾವ ರೀತಿ ಹೇಳಬಹುದು ಎಂಬುದನ್ನು ನೋಡೋಣ.
    • ಹೆಚ್ಚು ಐಶ್ವರ್ಯವನ್ನು ಪಡೆಯಲು ಬಯಸುವುದಕ್ಕಿಂತ ಒಳ್ಳೆಯ ಹೆಸರನ್ನು ಜನರ ಬೆಂಬಲ,ಆದರಣೆಯನ್ನು ಪಡೆಯುವುದು ಬೆಳ್ಳಿ ಬಂಗಾರಕ್ಕಿಂತ ಶ್ರೇಷ್ಠವಾದುದು.
    • ಬುದ್ಧಿವಂತ ಜನರು ಐಶ್ವರ್ಯಕ್ಕಿಂತ, ಬೆಳ್ಳಿ ಬಂಗಾರಕ್ಕಿಂತ ಜನರಿಂದ ಗೌರವ, ಮನ್ನಣೆ ಪಡೆಯಲು ಇಚ್ಛಿಸುತ್ತಾರೆ.
    • ಬಹು ಐಶ್ವರ್ಯ, ಸಂಪತ್ತಿಗಿಂತ ಒಳ್ಳೆಯ ಹೆಸರು ಪಡೆಯಲು ಬಯಸುತ್ತಾರೆ. ಐಶ್ವರ್ಯ ನಿಮಗೆ ನಿಜವಾಗಲೂ ಸಹಾಯ ಮಾಡುತ್ತದೆಯೇ? ನಾನು ಒಳ್ಳೆ ಹೆಸರನ್ನು ಪಡೆಯಲು ಬಯಸುತ್ತೇನೆ.
  1. ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳು ಅನೇಕ ಜನರಿಗೆ ಪರಿಚಯವಿದ್ದರೆ ಜನರಿಗೆ ಗೊತ್ತಿರುವ ಭಾಷೆಯ ಪದಗಳನ್ನು ಬಳಸಿ ಮೂಲಭಾಷೆಯಲ್ಲಿನ ಪದಗಳ ಅರ್ಥಕೆಡದಂತೆ ಬಳಸಬೇಕು.
  • ಬೇಸಿಗೆಯಲ್ಲಿ ಹಿಮ ಸುಗ್ಗಿಯಲ್ಲಿ ಮಳೆ .ಹಾಗೇ ಮೂರ್ಖರಿಗೆ ಮನ್ನಣೆ ನೀಡುವುದು ತರವಲ್ಲ. (ಜ್ಞಾನೋಕ್ತಿಗಳು 26:1 ULB)
    • ಬೇಸಿಗೆಯ ಕಾಲದಲ್ಲಿ ಹಿಮ ಸುರಿಯುವುದು, ತಂಪಾದಗಾಳಿ ಬೀಸುವುದು ಸುಗ್ಗಿಯ ಕಾಲದಲ್ಲಿ ಮಳೆ ಬರುವುದು ಹೇಗೆ ಅಸಹಜವಾಗಿರುತ್ತದೋ ಹಾಗೆ ಮೂರ್ಖನನ್ನು ಗೌರವಿಸಿ ಮನ್ನಣೆ ನೀಡುವುದೂ ಅಸಹಜವಾಗಿರುತ್ತದೆ.
  1. ಸತ್ಯವೇದದ ಜ್ಞಾನೋಕ್ತಿ ಅರ್ಥಕ್ಕೆ ಸಮಾನವಾದ ಅರ್ಥಕೊಡುವ, ಬೋಧನೆ ನೀಡುವ ಪದವನ್ನು ನೀವು ಭಾಷಾಂತರಿಸುವ ಭಾಷೆಯಲ್ಲಿ ಸೂಕ್ತ ಪದವನ್ನು ಹುಡುಕಿ ಸರಿಹೊಂದಿಸಬೇಕು.
  • ನಾಳೆ ಎಂದು ಜಂಬ ಕೊಚ್ಚಿಕೊಳ್ಳಬೇಡ (ಜ್ಞಾನೋಕ್ತಿಗಳು 27:1 ULB)
    • ಕೋಳಿಮೊಟ್ಟೆಗೆ ಕಾವುಕೊಟ್ಟು ಮರಿಗಳು ಹೊರಬರುವ ಮೊದಲೇ ಕೋಳಿಮರಿಗಳನ್ನು ಲೆಕ್ಕಹಾಕಬೇಡ.
  1. ಮೂಲಭಾಷೆಯ ಬೋಧನೆಯ ಅರ್ಥವನ್ನು ನೀಡಬೇಕೆ ಹೊರತು ಜ್ಞಾನೋಕ್ತಿಯ ಮಾದರಿಯಲ್ಲಿ ಅಲ್ಲ.
  • ತಾಯಿಗೆ ಶುಭವನ್ನು ಕೋರದೆ ತಂದೆಯನ್ನು ಶಪಿಸುವ ಜನಾಂಗ ಉಂಟು
  • ತಮ್ಮ ಕೊಳೆಯನ್ನು ತೊಳಕೊಳ್ಳದೆ ತಾವೇ ಶುದ್ಧರೆಂದು,
  • ಹೇಳಿಕೊಳ್ಳುವ ಜನಾಂಗವೊಂದು ಉಂಟು(ಜ್ಞಾನೋಕ್ತಿಗಳು 30:11-12 ULB)
    • ಕೆಲವರು ತಮ್ಮತಂದೆತಾಯಿಗಳಿಗೆ ಗೌರವ ಕೊಡದೆ ತಾವೇ ನೀತಿವಂತರೆಂದು ಹೇಳುತ್ತಾ ತಮ್ಮ ಪಾಪಗಳಿಂದ ತಿದ್ದಿಕೊಂಡು ಬದಲಾಗುವುದಕ್ಕೆ ಒಪ್ಪುವುದಿಲ್ಲ.

ಸಾಂಕೇತಿಕ ಭಾಷೆ

Translation Manual :: Just-in-Time Learning Modules :: Writing Styles (Discourse) :: Symbolic Language

ವಿವರಣೆ

ಸಾಂಕೇತಿಕ ಭಾಷೆಯ ಭಾಷಣದಲ್ಲಿ ಮತ್ತು ಬರವಣಿಗೆಯಲ್ಲಿ ಇಲ್ಲವೆ ಭಾಷೆಯನ್ನು ಬಳಸುವಾಗ ಕೆಲವು ಗುರುತುಗಳನ್ನು ಬಳಸಿ ಬೇರೆ ವಸ್ತುಗಳು ಮತ್ತು ಘಟನೆಗಳನ್ನು ಪ್ರತಿನಿಧಿಸುತ್ತವೆ. ಸತ್ಯವೇದದಲ್ಲಿ ಇದು ಪ್ರವಾದನೆಗಳಲ್ಲಿ, ಪದ್ಯಗಳಲ್ಲಿ ಕಾಣಬಹುದು. ದರ್ಶನಗಳಲ್ಲಿ ಮತ್ತು ಕನಸಿನ ಬಗ್ಗೆ ಹೇಳುವಾಗ ಮತ್ತು ನಡೆಯಬೇಕಾದ ಘಟನೆಗಳ ಬಗ್ಗೆ ಹೇಳುವಾಗ ಇದನ್ನು ವಿಶೇಷವಾಗಿ ಬಳಸಲಾಗುತ್ತದೆ. ಓದುಗರು, ಜನರು ಇದನ್ನು ತಕ್ಷಣವೇ ಈ ಸಂಕೇತಗಳ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೂ ಭಾಷಾಂತರದಲ್ಲಿ ಈ ಸಾಂಕೇತಗಳನ್ನು ಉಳಿಸಿಕೊಳ್ಳಲೇ ಬೇಕು.

" ನರಪುತ್ರನೇ, ನಿನಗೆ ಸಿಕ್ಕಿದ ಸುರುಳಿಯನ್ನು ತಿನ್ನು, ಇದರಲ್ಲಿರುವ ಸಂಗತಿಗಳನ್ನು ಇಸ್ರಾಯೇಲ್ ವಂಶದವರಿಗೆ ಸಾರು " (ಯೆಹೆಜ್ಕೇಲ 3:1 ULB)

ಇದು ನಡೆದದ್ದು ದರ್ಶನದಲ್ಲಿ. ಯೆಹೆಜ್ಕೇಲನು ಸುರುಳಿಯನ್ನು ತಿನ್ನು ಎನ್ನುವುದು ಸುರುಳಿಯ ಮೇಲೆ ಬರೆದಿರುವುದನ್ನು ಚೆನ್ನಾಗಿ ಓದಿ ಅರ್ಥಮಾಡಿಕೊಳ್ಳುವುದು ಮತ್ತು ಇದರಲ್ಲಿ ಬರೆದಿರುವುದು ದೇವರಿಂದ ಬಂದ ಮಾತುಗಳು ತನ್ನೊಳಗೆ ಅಳವಡಿಸಿಕೊಳ್ಳುವುದು ಎಂದು ಅರ್ಥ.

ಸಾಂಕೇತಿಕವಾಗಿ ಹೇಳುವ ಉದ್ದೇಶಗಳು

  • ಈ ಸಾಂಕೇತಿಕತೆಯ ಉದ್ದೇಶವೆಂದರೆ ಜನರು ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ಅಥವಾ ಒಂದು ಘಟನೆಯ ಮಹತ್ವವನ್ನು ಅರ್ಥವಾಗುವಂತೆ ತಿಳಿಸಲು ಬೇಕಾದ ಪದಗಳನ್ನು ಬಳಸಬೇಕು.
  • ಕೆಲವೊಮ್ಮೆ ಈ ಸಾಂಕೇತಿಕವಾದ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಮತ್ತು ನಿಜವಾದ ಅರ್ಥವನ್ನು ಗೌಣವಾಗಿಡಲು ಮತ್ತು ಅರ್ಥವಾಗದೇ ಇರುವವರಿಗೆ ತಿಳಿಸಲು ಪ್ರಯತ್ನಿಸುವುದು

ಕಾರಣ ಇದೊಂದು ಭಾಷಾಂತರ ವಿಷಯ

ಇಂದು ಸತ್ಯವೇದವನ್ನು ಓದುತ್ತಿರುವಾಗ ಸಾಂಕೇತಿಕವಾದ ಭಾಷೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು ಮತ್ತು ಈ ಸಂಕೇತಗಳು ಯಾವ ಅರ್ಥವನ್ನುತಿಳಿಸುತ್ತದೆ ಎಂದು ತಿಳಿದುಕೊಳ್ಳಲು ಕಷ್ಟವಾಗಬಹುದು.

ಭಾಷಾಂತರದ ತತ್ವಗಳು

  • ಸಾಂಕೇತಿಕ ಭಾಷೆಯನ್ನು ಉಪಯೋಗಿಸಿದಾಗ ಸಂಕೇತಗಳನ್ನು ಭಾಷಾಂತರದ ಉಳಿಸಿಕೊಳ್ಳುವುದು ಮುಖ್ಯ.
  • ಮೂಲ ಭಾಷೆಯ ಲೇಖಕ ಅಥವಾ ಮಾತುಗಾರ ಹೇಳಿರುವುದಕ್ಕಿಂತ ಹೆಚ್ಚಾಗಿ ಸಂಕೇತಗಳನ್ನು ವಿವರಿಸಬಾರದು. ಅವರ ಉದ್ದೇಶ, ಅರ್ಥವನ್ನು ಪ್ರತಿಯೊಬ್ಬರೂ ಸುಲಭವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.

ಸತ್ಯವೇದದ ಉದಾಹರಣೆಗಳು

ಇದಾದ ನಂತರ ನಾನು ರಾತ್ರಿ ಕಂಡ ಕನಸಿನಲ್ಲಿ ನಾಲ್ಕನೆಯ ಮೃಗವು ಕಾಣಿಸಿತು, ಅದು ಭಯಂಕರವಾದದ್ದು, ಎದುರಿಸುವಂತದ್ದು, ಮತ್ತು ಅಧಿಕ ಬಲವುಳ್ಳದ್ದು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು; ಅದು ನುಂಗುತ್ತಾ, ಚೂರುಚೂರು ಮಾಡುತ್ತಾ, ಮಿಕ್ಕದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಎಲ್ಲಾ ಮೃಗಗಳಿಗಿಂತ ಭಿನ್ನವಾಗಿ ವಿಲಕ್ಷಣವಾಗಿತ್ತು, ಮತ್ತು ಅದಕ್ಕೆ ಹತ್ತು ಕೊಂಬುಗಳಿದ್ದವು. (ದಾನಿಯೇಲ 7:7 ULB)

ಕೆಳಗೆ ನೀಡಿರುವ ಸಂಕೇತಗಳ ಅರ್ಥವನ್ನು ದಾನಿಯೇಲ 7:23-24ರಲ್ಲಿ ವಿವರಿಸಲಾಗಿದೆ. ಮೃಗಗಳು ರಾಜ್ಯವನ್ನು ಪ್ರತಿನಿಧಿಸುತ್ತದೆ, ಕಬ್ಬಿಣದ ಹಲ್ಲುಗಳು ಶಕ್ತಿಶಾಲಿಯಾದ ಸೈನ್ಯವನ್ನು ಕೊಂಬುಗಳು ಬಲಶಾಲಿಯಾದ ನಾಯಕರನ್ನು ಪ್ರತಿನಿಧಿಸುತ್ತವೆ.

ಆಗ ದಾನಿಯೇಲನಿಗೆ ಅವನು ಆ ನಾಲ್ಕನೆಯ ಮೃಗವು ಲೋಕದಲ್ಲಿ ಮುಂಬರುವ ನಾಲ್ಕನೆಯ ರಾಜ್ಯ ಅದು ಮಿಕ್ಕ ರಾಜ್ಯಗಳಿಗಿಂತ ವಿಲಕ್ಷಣವಾಗಿ ಇರುತ್ತದೆ. ಅದು ಲೋಕವನ್ನೆಲ್ಲಾ ನುಂಗಿ ತುಳಿದು ಚೂರು ಚೂರು ಮಾಡುವುದು. ಆ ಹತ್ತು ಕೊಂಬುಗಳು ಎಂದರೆ ಆ ರಾಜ್ಯದಲ್ಲಿ ಹತ್ತು ಮಂದಿ ಅರಸರು ಉದ್ಭವಿಸುವರು ಮತ್ತು ಅವರ ತರುವಾಯ ಮತ್ತೊಬ್ಬನು ಬರುವನು. ಅವನು ಮೊದಲ ಅರಸರಿಗಿಂತ ವಿಭಿನ್ನವಾಗಿ ಇತರ ಮೂವರು ಅರಸರನ್ನು ಅಡಗಿಸಿ ಬಿಡುವನು (ದಾನಿಯೇಲ 7:23-24 ULB)

ನನ್ನ ಸಂಗಡ ಮಾತನಾಡುತ್ತಿದ್ದ ಶಬ್ದವು ಯಾರದು ಎಂದು ನೋಡುವುದಕ್ಕೆ ಹಿಂದಕ್ಕೆ ತಿರುಗಿದೆನು, ತಿರುಗಿದಾಗ ಏಳು ಚಿನ್ನದ ದೀಪಸ್ಥಂಭಗಳನ್ನು ನೋಡಿದೆ. ಆ ದೀಪಸ್ಥಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತೆ ಇರುವವನನ್ನು ನಾನು ಕಂಡೆನು … ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು…. ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ಥಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳ ದೂತರು, ಮತ್ತು ಆ ಏಳು ದೀಪಸ್ಥಂಭಗಳು ಅಂದರೆ ಏಳು ಸಭೆಗಳು. (ಪ್ರಕಟಣೆ 1:12,13a 16a, 20 ULB)

ಈ ವಾಕ್ಯಭಾಗವು ಏಳುದೀಪಸ್ಥಂಭಗಳು ಮತ್ತು ಏಳು ನಕ್ಷತ್ರಗಳ ಬಗ್ಗೆ ಅರ್ಥವನ್ನು ತಿಳಿಸುವಂತದ್ದು. ಇಬ್ಬಾಯಿ ಕತ್ತಿಯು ದೇವರವಾಕ್ಯವನ್ನು ಮತ್ತು ನ್ಯಾಯತೀರ್ಪನ್ನು ಪ್ರತಿನಿಧಿಸುತ್ತದೆ

ಭಾಷಾಂತರದ ಕೌಶಲ್ಯಗಳು

(1) ವಾಕ್ಯಭಾಗವನ್ನು ಸಂಕೇತಗಳೊಂದಿಗೆ ಭಾಷಾಂತರಿಸಿ, ಆಗಿಂದಾಗ್ಗೆ ಲೇಖಕನು ಇಲ್ಲಿ ವಾಕ್ಯಭಾಗದ ಅರ್ಥವನ್ನು ನಂತರ ವಿವರಿಸುತ್ತಾನೆ

(2) ವಾಕ್ಯಭಾಗವನ್ನು ಸಂಕೇತಗಳೊಂದಿಗೆ ಭಾಷಾಂತರಿಸಿ, ಸಂಕೇತಗಳ ಅರ್ಥವಿವರಣೆಯನ್ನು ಅಡಿಟಿಪ್ಪಣಿಯಲ್ಲಿ ನೀಡಬಹುದು.

ಭಾಷಾಂತರ ತತ್ವಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

(1) ವಾಕ್ಯಭಾಗವನ್ನು ಸಂಕೇತಗಳೊಂದಿಗೆ ಭಾಷಾಂತರಿಸಿ, ಆಗಿಂದಾಗ್ಗೆ ಲೇಖಕನು ಇಲ್ಲಿ ವಾಕ್ಯಭಾಗದ ಅರ್ಥವನ್ನು ನಂತರ ವಿವರಿಸುತ್ತಾನೆ.

ಆ ವ್ಯಕ್ತಿಯು ಹೇಳಿದ್ದು ಇದನ್ನೇ, ‘ನಾಲ್ಕನೆಯ ಮೃಗವು ಭೂಮಿಯ ಮೇಲಿನ ಆ ನಾಲ್ಕನೇ ರಾಜ್ಯ ಆಗಿರುತ್ತದೆ ಮತ್ತು ಅದು ಎಲ್ಲಾ ರಾಜ್ಯಗಳಿಗಿಂತ ಭಿನ್ನವಾಗಿರುತ್ತದೆ. ಅದು ಇಡೀ ಭೂಮಿಯನ್ನು ನುಂಗಿಬಿಡುತ್ತದೆ, ಮತ್ತು ಅದು ಅದನ್ನು ತುಳಿದು ತುಂಡುಗಳಾಗಿ ಒಡೆಯುತ್ತದೆ. ಹತ್ತು ಕೊಂಬುಗಳಿಗೆ ಸಂಬಂಧಿಸಿದಂತೆ, ಈ ರಾಜ್ಯದಿಂದ ಹತ್ತು ರಾಜರು ಉದಯಿಸುವರು ಮತ್ತು ಅವರ ನಂತರ ಇನ್ನೊಬ್ಬರು ಉದ್ಭವಿಸುವರು. ಅವನು ಹಿಂದಿನವರಿಗಿಂತ ಭಿನ್ನನಾಗಿ ಮೂರು ರಾಜರನ್ನು ವಶಪಡಿಸಿಕೊಳ್ಳುವನು.’ (ದಾನಿಯೇಲ 7:23-24ULT) (2) ವಾಕ್ಯಭಾಗವನ್ನು ಸಂಕೇತಗಳೊಂದಿಗೆ ಭಾಷಾಂತರಿಸಿ, ಸಂಕೇತಗಳ ಅರ್ಥವಿವರಣೆಯನ್ನು ಅಡಿಟಿಪ್ಪಣಿಯಲ್ಲಿ ನೀಡಬಹುದು.

ಇದರ ನಂತರ ನಾನು ರಾತ್ರಿಯ ನನ್ನ ದರ್ಶನಗಳಲ್ಲಿ ನಾಲ್ಕನೇ ಪ್ರಾಣಿ, ಭಯಾನಕವಾದದ್ದು, ಭಯಾನಕವಾದದ್ದು ಮತ್ತು ತುಂಬಾ ಬಲಶಾಲಿ. ಇದು ದೊಡ್ಡ ಕಬ್ಬಿಣದ ಹಲ್ಲುಗಳನ್ನು ಹೊಂದಿತ್ತು; ಅದು ಕಬಳಿಸಿತು, ತುಂಡು ತುಂಡಾಯಿತು ಮತ್ತು ಉಳಿದಿದ್ದನ್ನು ಪಾದಗಳ ಕೆಳಗೆ ತುಳಿದಿತು. ಇದು ಇತರ ಪ್ರಾಣಿಗಳಿಗಿಂತ ಭಿನ್ನವಾಗಿತ್ತು ಮತ್ತು ಅದು ಹತ್ತು ಕೊಂಬುಗಳನ್ನು ಹೊಂದಿತ್ತು. (ದಾನಿಯೇಲl 7:7 ULB)

ಇದರ ನಂತರ ನಾನು ರಾತ್ರಿಯಲ್ಲಿ ನನ್ನ ಕನಸಿನಲ್ಲಿ ನಾಲ್ಕನೇ ಪ್ರಾಣಿಯನ್ನು ನೋಡಿದೆ, 1 ಭಯಾನಕವಾದದ್ದು, ಎದುರಿಸುವಂತದ್ದು ಮತ್ತು ತುಂಬಾ ಬಲಶಾಲಿ. ಇದು ದೊಡ್ಡ ಕಬ್ಬಿಣದ ಹಲ್ಲುಗಳನ್ನು ಹೊಂದಿತ್ತು; 2 ಅದು ನುಂಗಿ, ತುಂಡುಗಳಾಗಿ ಮುರಿದು, ಉಳಿದಿದ್ದನ್ನು ಪಾದದಡಿಯಲ್ಲಿ ತುಳಿದಿದೆ. ಇದು ಇತರ ಪ್ರಾಣಿಗಳಿಗಿಂತ ಭಿನ್ನವಾಗಿತ್ತು, ಮತ್ತು ಹತ್ತು ಕೊಂಬುಗಳನ್ನು ಹೊಂದಿತ್ತು.< sup>3

ಅಡಿ ಟಿಪ್ಪಣಿಯಲ್ಲಿ ಈ ರೀತಿ ಇರುತ್ತವೆ:

[1] ಆ ಮೃಗವು ರಾಜ್ಯದ ಸಂಕೇತವಾಗಿದೆ. [2] ಕಬ್ಬಿಣದ ಹಲ್ಲುಗಳು ಅತಿ ಬಲವುಳ್ಳ ರಾಜ್ಯದ ಸೈನ್ಯವನ್ನು ಪ್ರತಿನಿಧಿಸುತ್ತದೆ. [3] ಹತ್ತು ಕೊಂಬುಗಳು ಬಲಾಢ್ಯರಾದ ರಾಜರ ಸಂಕೇತವಾಗಿದೆ.


ಸಾಂಕೇತಿಕ ಪ್ರವಾದನೆಗಳು.

Translation Manual :: Just-in-Time Learning Modules :: Writing Styles (Discourse) :: Symbolic Prophecy

ವಿವರಣೆಗಳು

ಸಾಂಕೇತಿಕವಾದ ಪ್ರವಾದನೆಗಳು.ದೇವರು ಪ್ರವಾದಿಗಳಿಗೆ ನೀಡಿದ್ದ ಸಂದೇಶವಾಗಿದ್ದು. ಪ್ರವಾದಿಗಳು ಅದನ್ನು ಜನರಿಗೆ ತಿಳಿಸುತ್ತಿದ್ದರು. ಈ ಸಂದೇಶದಲ್ಲಿ ಕಾವ್ಯಪ್ರತಿಮೆಗಳು ಹಾಗೂ ಸಂಕೇತಗಳನ್ನು ಬಳಸಿ ಭವಿಷ್ಯದಲ್ಲಿ ದೇವರು ಏನು ಮಾಡುತ್ತಾನೆ ಎಂಬುದನ್ನು ತಿಳಿಸುವಂತದ್ದು.

ಇಂತಹ ಪ್ರವಾದನೆಗಳನ್ನು ಹೊಂದಿರುವ ಪ್ರಮುಖ ಪುಸ್ತಕಗಳು: ಯೆಶಾಯ, ಯೆಹೆಜ್ಕೇಲ, ದಾನಿಯೇಲ, ಜೆಕರ್ಯ ಮತ್ತು ಪ್ರಕಟಣೆಗಳು ಸಂಕ್ಷಿಪ್ತವಾದ ಸಾಂಕೇತಿಕ ಪ್ರವಾದನೆಗಳು ಇನ್ನೂ ಇತರ ಪುಸ್ತಕಗಳಲ್ಲೂ ಕಂಡುಬರುತ್ತದೆ. ದಾಹರಣೆಗೆ ಮತ್ತಾಯ 24ನೇ ಅಧ್ಯಾಯ, ಮಾರ್ಕ 13, ಮತ್ತು ಲೂಕ 21.ನೇ ಅಧ್ಯಾಯಗಳಲ್ಲಿ ಕಂಡುಬರುತ್ತದೆ.

ಸತ್ಯವೇದದಲ್ಲಿ ದೇವರು ನೀಡಿದ ಪ್ರತಿಯೊಂದು ಸಂದೇಶ ಹಾಗೂ ಆ ಸಂದೇಶ ಯಾವುದು ಎಂದು ಎರಡನ್ನು ಕುರಿತು ಹೇಳಿದೆ. ದೇವರು ಇಂತಹ ಸಂದೇಶಗಳನ್ನು ನೀಡಿದಾಗ ಇಂತಹ ವಿಚಾರಗಳನ್ನು ಪವಾಡ ಪೂರ್ವಕವಾಗಿ ಕನಸ್ಸಿನಲ್ಲಿ, ವಿಶೇಷ ದೃಷ್ಟಿಯನ್ನು / ಕಾಣ್ಕೆ ನೀಡುವುದರ ಮೂಲಕ ತೋರಿಸಿಕೊಟ್ಟಿದ್ದಾನೆ. (See dream and vision for help translating “dream” and “vision.”) When prophets saw these dreams and visions, they often saw images and symbols about God and heaven. ಪ್ರವಾದಿಗಳು ಇಂತಹ ದರ್ಶನಗಳನ್ನು, ಕನಸ್ಸುಗಳನ್ನು ನೋಡಿದಾಗ ದೇವರು ಮತ್ತು ಪರಲೋಕದ ಬಗ್ಗೆ ಕಾವ್ಯಪ್ರತಿಮೆ ಹಾಗೂ ಸಾಂಕೇತಿಕವಾದ ದೃಶ್ಯಗಳನ್ನು ಕಂಡಿದ್ದಾರೆ.

ಇಂತಹ ಕೆಲವು ಕಾವ್ಯಪ್ರತಿಮೆಗಳು ಯಾವುವೆಂದರೆ ಸಿಂಹಾಸನ, ಬಂಗಾರದ ದೀಪಸ್ತಂಭಗಳು, ಬಿಳಿವಸ್ತ್ರಧಾರಿ ಮತ್ತು ಬಿಳಿಕೂದಲುಳ್ಳ ಮನುಷ್ಯನ ಕಣ್ಣುಗಳು ಬೆಂಕಿಯುಂಡೆಯಂತೆ ಉರಿಯುತ್ತಾ ಕಾಲುಗಳು ತಾಮ್ರದಿಂದ ಮಾಡಿದಂತೆ ಇರುವುದು. ಇಂತಹ ಕೆಲವು ಕಾವ್ಯಪ್ರತಿಮೆಗಳನ್ನು ಒಬ್ಬ ಪ್ರವಾದಿಗಿಂತ ಹೆಚ್ಚಿನ ಪ್ರವಾದಿಗಳು ಕಂಡಿದ್ದಾರೆ. ಈ ಲೋಕದ ಬಗ್ಗೆ ಹೇಳಿರುವ ಪ್ರವಾದನೆಗಳು ಕಾವ್ಯಪ್ರತಿಮೆಗಳನ್ನು, ಸಂಕೇತಗಳನ್ನು ಒಳಗೊಂಡಿದೆ. ಉದಾಹರಣೆಗೆ ಕೆಲವು ಬಲಶಾಲಿಯಾದ ಪ್ರಾಣಿಗಳು ಸಾಮ್ರಾಜ್ಯಗಳನ್ನು ಪ್ರತಿನಿಧಿಸುತ್ತವೆ. ಕೊಂಬುಗಳು ರಾಜ್ಯಗಳನ್ನು, ರಾಜರನ್ನು ಪ್ರತಿನಿಧಿಸುತ್ತವೆ. ಡ್ರಾಗನ್ ಅಥವಾ ಹಾವು ಸೈತಾನನ್ನು ಪ್ರತಿನಿಧಿಸುತ್ತದೆ. ಸಮುದ್ರವು ದೊಡ್ಡ ಸಾಮ್ರಾಜ್ಯವನ್ನು ಮತ್ತು ವಾರಗಳು ದೀರ್ಘಕಾಲವನ್ನು,ಸಮಯವನ್ನು ಪ್ರತಿನಿಧಿಸುತ್ತದೆ.

ಇಂತಹ ಕೆಲವು ಕಾವ್ಯಪ್ರತಿಮೆಗಳನ್ನು, ಕನಸ್ಸುಗಳನ್ನು ಅನೇಕ ಪ್ರವಾದಿಗಳು ಕಂಡಿದ್ದಾರೆ. ಪ್ರವಾದಿಗಳು ಈ ಲೋಕದಲ್ಲಿರುವ ಕೆಟ್ಟ ವಿಚಾರಗಳನ್ನು, ದೇವರು ಇಂತಹವುಗಳಿಗೆ ಹೇಗೆ ತೀರ್ಪು ಕೊಡುತ್ತಾನೆ, ಯಾವ ಶಿಕ್ಷೆ ಕೊಡುತ್ತಾನೆ, ಹಾಗೆಯೇ ಈ ನೂತನ ಲೋಕದಲ್ಲಿ ದೇವರು ನೀತಿಯುಕ್ತ ರಾಜ್ಯವನ್ನು ಹೇಗೆ ಸ್ಥಾಪಿಸುತ್ತಾನೆ ಎಂಬುದನ್ನು ತಿಳಿಸುತ್ತದೆ. ನರಕ ಮತ್ತು ಸ್ವರ್ಗ (ಪರಲೋಕ) ಕ್ಕೆ ಸಂಬಂಧಿಸಿದಂತಹ ವಿಚಾರಗಳನ್ನು ದೇವರು ತಿಳಿಸುತ್ತಾನೆ. ಬಹು ಮಟ್ಟಿನ ಪ್ರವಾದನೆಗಳೆಲ್ಲವು ಸತ್ಯವೇದದಲ್ಲಿ ಪದ್ಯದ ರೂಪದಲ್ಲಿವೆ. ಕೆಲವು ಸಂಸ್ಕೃತಿಯಲ್ಲಿ ಜನರು ಪದ್ಯದ ರೂಪದಲ್ಲಿ ಏನಾದರೂ ಹೇಳಿದರೆ, ಅದು ನಿಜವಲ್ಲ ಅಥವಾ ತುಂಬಾ ಮುಖ್ಯವಾದುದು ಎಂದು ತಿಳಿಯುತ್ತಾರೆ. ಆದರೆ ಸತ್ಯವೇದದಲ್ಲಿನ ಕೆಲವು ಪ್ರವಾದನೆಗಳು ನಿಜವಾದುದು ಮತ್ತು ತುಂಬಾ ಪ್ರಮುಖವಾದುದು. ಅವು ಪದ್ಯದ ರೂಪದಲ್ಲಾದರೂ ಇರಲಿ ಗದ್ಯ ರೂಪದಲ್ಲಾದರೂ ಇರಲಿ ಅವು ಮುಖ್ಯವಾದುದು.

ಕೆಲವೊಮ್ಮೆ ಈ ಪುಸ್ತಕಗಳಲ್ಲಿ ಘಟನೆಗಳನ್ನು ಕುರಿತು ಹೇಳುವಾಗ ಭೂತಕಾಲ ಬಳಸಿದೆ, ಏಕೆಂದರೆ ಈ ಘಟನೆಗಳು ಭೂತಕಾಲದಲ್ಲಿ ಘಟಿಸಿದಂತವುಗಳು. ಕೆಲವೊಮ್ಮೆ ಈ ಭೂತಕಾಲ ಕ್ರಿಯಾಪದವನ್ನು ಭವಿಷ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆಯೂ ಹೇಳಲು ಬಳಸಿದೆ. ಇದಕ್ಕೆ ಎರಡು ಕಾರಣಗಳಿವೆ. ಪ್ರವಾದಿಗಳು ತಾವು ತಮ್ಮ ಕನಸಿನ ಮೂಲಕ ಅಥವಾ ವಿಶೇಷ ದರ್ಶನ ಅಥವಾ ಕನಸ್ಸುಗಳ ಮೂಲಕ ಕಂಡ ವಿಚಾರಗಳ ಬಗ್ಗೆ ಹೇಳುವಾಗ ಭೂತಕಾಲವನ್ನು ಬಳಸುತ್ತಾರೆ ಏಕೆಂದರೆ ಅವರ ಕನಸ್ಸುಗಳು ಭೂತಕಾಲದಲ್ಲೇ ಕಂಡದ್ದು. ಈ ಭೂತಕಾಲದ ಪ್ರಯೋಗ ಭವಿಷ್ಯತ್ ಕಾಲದ ಬಗ್ಗೆ ಹೇಳುವಾಗ ಕೆಲವೊಮ್ಮೆ ಬಳಸುತ್ತಾರೆ. ಭವಿಷ್ಯದಲ್ಲಿ ಖಂಡಿತ ನಡೆದೇ ನಡೆಯುತ್ತದೆ ಎಂದು ಘಟನೆಗಳ ಬಗ್ಗೆ ಹೇಳುವಾಗ ಭೂತಕಾಲವನ್ನು ಬಳಸುತ್ತಾರೆ.

ಅಂದರೆ ಈ ಘಟನೆಗಳು ಖಡಾಖಂಡಿತವಾಗಿ ನಡೆದೇ ನಡೆಯುತ್ತದೆ ಮತ್ತು ಈ ಘಟನೆ ಈಗಾಗಲೇ ನಡೆದು ಹೋಗಿದೆ ಎಂದು ಅರ್ಥಬರುವಂತೆ ಬಳಸುತ್ತಾರೆ. ನಾವು ಇಂತಹ ಭೂತಕಾಲದ ಎರಡನೇ ಬಳಕೆ ಬಗ್ಗೆ “the predictive past.” “ಪ್ರತಿಪಾದಕ ಭೂತಕಾಲ / ಭವಿಷ್ಯತ್ ಕಾಲ” ಎಂದು ಕರೆಯಲಾಗಿದೆ. See Predictive Past. ಕೆಲವೊಂದು ಪ್ರವಾದನೆಗಳು ಪ್ರವಾದಿಗಳು ಹೇಳಿದ ಮೇಲೆ ನಡೆದಿವೆ. ಕೆಲವೊಂದು ಈ ಪ್ರಪಂಚದ ಅಂತ್ಯಕಾಲಕ್ಕೆ ನಡೆಯುವಂತವು.

ಕಾರಣ ಇದೊಂದು ಭಾಷಾಂತರದ ವಿಷಯ.

  • ಇವುಗಳಲ್ಲಿ ಬರುವ ಕೆಲವು ಕಾವ್ಯಪ್ರತಿಮೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಏಕೆಂದರೆ ಇಂತಹ ವಸ್ತುಗಳನ್ನು, ಪ್ರಾಣಿಗಳನ್ನು, ಸನ್ನಿವೇಶಗಳನ್ನು ನಾವು ಹಿಂದೆಂದೂ ನೋಡಿರುವುದಿಲ್ಲ.
  • ಇಂತಹ ವಸ್ತುಗಳ ಬಗ್ಗೆ ನೀಡುವ ವಿವರಣೆಗಳನ್ನೂ ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆಂದರೆ ನಾವು ಇವುಗಳನ್ನು ನೋಡಿರುವುದಿಲ್ಲ ಮತ್ತು ವಾಸ್ತವವಾಗಿ ಇವು ಈ ಲೋಕದಲ್ಲಿ ಇಲ್ಲದೇ ಇರುವಂತದ್ದು. ಆದುದರಿಂದ ಇವುಗಳನ್ನು ಭಾಷಾಂತರಿಸಲೂ ಸಹ ಕಷ್ಟವಾಗುತ್ತದೆ.
  • ದೇವರು ಅಥವಾ ಪ್ರವಾದಿ ಭೂತಕಾಲವನ್ನು ಬಳಸಿದರೆ ಓದುಗರಿಗೆ ಇವರು ಹೇಳುತ್ತಿರುವ ಸಂಗತಿಗಳು ಈಗಾಗಲೇ ನಡೆದವುಗಳೋ ಇಲ್ಲವೇ ಮುಂದೆ ನಡೆಯಬೇಕಾದವುಗಳೋ ಎಂಬ ಗೊಂದಲಕ್ಕೆ ಒಳಗಾಗುತ್ತಾರೆ.

ಭಾಷಾಂತರ ತತ್ವಗಳು.

  • ವಾಕ್ಯಭಾಗದಲ್ಲಿ ಬರುವ ಕಾವ್ಯಪ್ರತಿಮೆಗಳನ್ನು ಭಾಷಾಂತರಿಸಿ. ಅವುಗಳನ್ನು ವ್ಯಾಖ್ಯಾನಿಸಿ, ಅವುಗಳ ಅರ್ಥವನ್ನು ಭಾಷಾಂತರ ಮಾಡಬಾರದು. ಸತ್ಯವೇದದಲ್ಲಿ ಕೆಲವು ಕಾವ್ಯಪ್ರತಿಮೆಗಳು ಅನೇಕ ಪುಸ್ತಕಗಳಲ್ಲಿ ಸನ್ನಿವೇಶಗಳಲ್ಲಿ ಬರುತ್ತವೆ ಮತ್ತು ಇವುಗಳ ಅರ್ಥ ಒಂದೇ ರೀತಿಯಾಗಿರುತ್ತದೆ. ಅಂತಹ ವಿಷಯವನ್ನು ಸತ್ಯವೇದ ಎಲ್ಲ ಕಡೆಯಲ್ಲೂ ಒಂದೇ ರೀತಿಯಲ್ಲಿ ಬಳಸಿ ಭಾಷಾಂತರಿಸಬೇಕು.
  • ಪ್ರವಾದನೆಗಳು ಪದ್ಯರೂಪದಲ್ಲಿ ಇಲ್ಲವೇ ಗದ್ಯರೂಪದಲ್ಲಿ ಇದ್ದು ಅವು ನಿಜವಾದಲ್ಲಿ ಅಥವಾ ಪ್ರಮುಖವಲ್ಲದ ವಿಚಾರಗಳು ಎಂದು ನಿಮ್ಮ ಓದುಗರು ಅರ್ಥಮಾಡಿಕೊಳ್ಳುವ ಸನ್ನಿವೇಶಬಂದರೆ ಅದನ್ನು ನಿವಾರಿಸಲು ಅಂತಹ ಪ್ರಯೋಗಗಳನ್ನು ಕೈಬಿಡುವುದು ಒಳ್ಳೆಯದು.
  • ಪ್ರವಾದನೆಗಳಂತೆ ನಡೆಯುವ ಘಟನೆಗಳನ್ನು ಯಾವ ಕ್ರಮದಲ್ಲಿ ವಿವರಿಸಲಾಗಿದೆ ಎಂಬುದನ್ನು ನೋಡಬೇಕು, ಕೆಲವೊಮ್ಮೆ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದು. ಆದುದರಿಂದ ಯಾವ ಯಾವ ಪುಸ್ತಕದ ಭಾಗದಲ್ಲಿ ಬರುತ್ತದೋ ಅಲ್ಲಲ್ಲೇ ಪ್ರತಿ ಪ್ರವಾದನೆಯನ್ನು ಭಾಷಾಂತರಿಸಬೇಕು.
  • ಕಾಲವನ್ನು ಸೂಚಿಸುವ ಪದಗಳನ್ನು ಬಳಸುವಾಗ ಲೇಖಕರ ಉದ್ದೇಶ ಮತ್ತು ಯಾವ ಅರ್ಥದಲ್ಲಿ ಈ ಪದಗಳನ್ನು ಬಳಸಿದ್ದಾರೆ ಎಂಬುದನ್ನು ತಿಳಿದು ಭಾಷಾಂತರಿಸಿದರೆ ಓದುಗರಿಗೆ ಸುಲಭದಲ್ಲಿ ಅರ್ಥವಾಗುತ್ತದೆ. ಓದುಗರಿಗೆ ’predictive past’ / ಪ್ರತಿಪಾದಕ ಭೂತಕಾಲ / ಭವಿಷ್ಯದ ಭೂತಕಾಲದ ಪದಗಳನ್ನು ಬಳಸುವುದು ಉತ್ತಮ.
  • ಕೆಲವೊಮ್ಮೆ ಈ ಪ್ರವಾದನೆಗಳು ಪ್ರವಾದಿಗಳು ಈ ಬಗ್ಗೆ ಬರೆದು ಮುಗಿಸಿದ ಮೇಲೆ ನೆರವೇರಿದೆ. ಕೆಲವೊಂದು ಪ್ರವಾದನೆಗಳು ಇನ್ನು ನೆರವೇರಿಲ್ಲ. ಈ ಪ್ರವಾದನೆಗಳು ನೆರವೇರಿದ ಬಗ್ಗೆ ಅಥವಾ ಅವು ಹೇಗೆ ನೆರವೇರಬಹುದು ಎಂಬುದರ ಬಗ್ಗೆ ವಿವರಿಸುವ ಅಗತ್ಯವಿಲ್ಲ.

ಸತ್ಯವೇದದಲ್ಲಿನ ಉದಾಹರಣೆಗಳು.

ಕೆಳಗೆ ನಮೂದಿಸಿರುವ ವಾಕ್ಯಭಾಗದಲ್ಲಿ ಬರುವ ಬಲಶಾಲಿಯಾದ ಮೃಗಗಳನ್ನು ಯೆಹಜ್ಕೇಲ, ದಾನಿಯೇಲ ಮತ್ತು ಯೋಹಾನರು ನೋಡಿದ ಬಗ್ಗೆ ತಿಳಿಸುತ್ತದೆ. ಈ ದರ್ಶನದಲ್ಲಿ ಕಂಡುಬಂದ ಪ್ರಾಣಿಗಳಿಗೆ ಕೂದಲು ಉಣ್ಣೆಯಂತೆ ಬೆಳ್ಳಗೂ, ಜಲಪಾತದಂತಹ ಧ್ವನಿಯೂ, ಬಂಗಾರದ ಸೊಂಟಪಟ್ಟಿ ಮತ್ತು ಕಾಲುಗಳು ಅಥವಾ ಪಾದಗಳು ನಯವಾಗಿ ಪಾಲೀಶ್ ಮಾಡಿದ ತಾಮ್ರದಿಂದ ಮಾಡಿತ್ತು. ಪ್ರವಾದಿಗಳು ಅನೇಕ ವಿವರಗಳನ್ನು ನೋಡಿದ್ದರೂ, ಇವುಗಳನ್ನು ಇವುಗಳ ವಿವರವನ್ನೂ ಇದ್ದಂತೆಯೇ ಭಾಷಾಂತರಿಸುವುದು ಉತ್ತಮ. ಕೆಳಗೆ ಕೊಟ್ಟಿರುವ ಪ್ರಕಟಣೆಯಿಂದ ಆಯ್ಕೆಮಾಡಿದ ವಾಕ್ಯಭಾಗದಲ್ಲಿ ಅಡ್ಡಗೆರೆ ಹಾಕಿ ಗುರುತಿಸಿರುವ ಪದಗುಚ್ಛಗಳು ದಾನಿಯೇಲ ಮತ್ತು ಯೆಹೆಜ್ಕೇಲ ವಾಕ್ಯಭಾಗದಲ್ಲಿಯೂ ಬರುತ್ತದೆ.

ಏಳು ಚಿನ್ನದ ದೀಫಸ್ತಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತೆ ಇರುವವನನ್ನು ಕಂಡೆನು, ಆತನು ನಿಲುವಂಗಿಯನ್ನು ತೊಟ್ಟು, ಚಿನ್ನದ ಪಟ್ಟಿಯನ್ನು ಎದೆಗೆಕಟ್ಟಿಕೊಂಡಿದ್ದನು ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ — ಹಿಮದಂತೆ ಬೆಳ್ಳಗಿತ್ತು.ಆತನ ಕಣ್ಣುಗಳು ಬೆಂಕಿಯ ಉರಿಯಂತೆಯೂ ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ , ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು . ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. ಆತನ ಮುಖವು ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು. (ಪ್ರಕಟಣೆ. 1:13-16 ULB)

ನಾನು ನೋಡುತ್ತಿದ್ದ ಹಾಗೆ. ನ್ಯಾಯಾಸನಗಳು ಹಾಕಲ್ಪಟ್ಟವು. ಅದರಲ್ಲಿ ಮಹಾ ವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಹಿಮದಂತೆ ಶುಭ್ರವಾಗಿತ್ತು. ಮತ್ತು ಆತನ ತಲೆಯ ಕೂದಲು ನಿರ್ಮಲವಾದ ಬಿಳಿಯ ಉಣ್ಣೆಯಂತಿತ್ತು. (ದಾನಿಯೇಲ7:9 ULB)

ನಾನು ಕಣ್ಣೆತ್ತಿನೋಡಲು ಇಗೋ ನಾರಿನ ಬಟ್ಟೆಯನ್ನು ಹೊದ್ದು ಉಪಜಿನ ಅಪರಂಜಿಯ ಪಟ್ಟಿಯನ್ನು ಸೊಂಟಕ್ಕೆ ಬಿಗಿದುಕೊಂಡ ಒಬ್ಬ ಪುರುಷನು ನನಗೆ ಕಾಣಿಸಿದನು. ಆತನ ಶರೀರವು ಪೀತರತ್ನದಹಾಗೆ ಕಂಗೊಳಿಸಿತು. ಅವನ ಮುಖವು ಮಿಂಚಿನಂತೆ ಹೊಳೆಯಿತು. ಆತನ ಕಣ್ಣುಗಳು ಉರಿಯುವ ಪಂಜುಗಳೋಪಾದಿಯಲ್ಲಿ ನಿಗಿನಿಗಿಸಿದವು. ಆತನ ಕೈಕಾಲುಗಳು ಬೆಳಗಿದ ತಾಮ್ರದಂತೆ ಥಳಥಳಿಸಿದವು , ಆತನ ಮಾತಿನ ಶಬ್ದವು ಜನಸಂದಣಿಯ ಕೋಲಾಹಲದಂತೆ ಕೇಳಿಸಿತು (ದಾನಿಯೇಲ 10:5-6 ULB)

ಇಗೋ! ಇಸ್ರಾಯೇಲರ ದೇವರ ತೇಜಸ್ಸು ಮೂಢನ ಮಾರ್ಗವಾಗಿ ಬಂತು ಆತನ ಧ್ವನಿಯು ಜಲಪ್ರವಾಹದ ಘೋಷದಂತಿತ್ತು , ಆತನ ತೇಜಸ್ಸು ಭೂಮಿಯನ್ನು ಬೆಳಗಿತು (ಯೆಹಜ್ಕೆಲ 43:2 ULB)

ಕೆಳಗೆ ಕೊಟ್ಟಿರುವ ವಾಕ್ಯಭಾಗವು ಅಂದಿನ ದಿನಗಳಲ್ಲಿ ನಡೆದ ಘಟನೆಗಳನ್ನು ಭೂತಕಾಲದ ಪದಗಳಿಂದ ಬರೆಯಲಾಗಿದೆ. ಅಡ್ಡಗೆರೆ ಹಾಕಿ ಗುರುತಿಸಿರುವ ಪದಗಳು ಹಿಂದೆ ನಡೆದ ಘಟನೆಗಳ ಬಗ್ಗೆ ಹೇಳುತ್ತವೆ.

ಯೆಹೂದ ದೇಶದ ಅರಸರಾದ ಉಜ್ಜೀಯ, ಯೆಥೋಮ, ಅಹಾಜ, ಹಿಜ್ಕಿಯಾ ಇವರ ಕಾಲದಲ್ಲಿ ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ. ಆಕಾಶ ಮಂಡಲವೇ ಆಲಿಸು ! ಭೂಮಂಡಲವೇ, ಕೇಳು ! ಯೆಹೋವನು ಮಾತನಾಡುತ್ತಿದ್ದಾನೆ : " ನಾನು ಸಾಕಿ ಸಲಹಿದ ಮಕ್ಕಳೇ ನನಗೆ ದ್ರೋಹ ಮಾಡಿದ್ದಾರೆ (ಯೆಶಾಯ1:1-2 ULB)

ಈ ಕೆಳಗಿನ ವಾಕ್ಯಭಾಗಗಳು ಭವಿಷ್ಯತ್ ಕಾಲವನ್ನು ಮತ್ತು ಭೂತಕಾಲದ ವಿವಿಧ ರೀತಿಯ ಬಳಕೆಯನ್ನು ತೋರಿಸುತ್ತದೆ. ಅಡ್ಡಗೆರೆ ಎಳೆದು ಗುರುತಿಸಿರುವ ಕ್ರಿಯಾಪದಗಳು predictive past,ಗೆ ಉದಾಹರಣೆಗಳು. ಇಲ್ಲಿ ಭೂತಕಾಲದಲ್ಲಿ ಹೇಳಿದ ಘಟನೆಗಳು ಭವಿಷ್ಯದಲ್ಲಿ ಖಂಡಿತವಾಗಿ ನಡೆದೇ ನಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ.

ಆದರೆ ಸಂಕಟಪಟ್ಟ ದೇಶಕ್ಕೆ ಅಂಧಕಾರವಿನ್ನಿಲ್ಲ. ಪೂರ್ವಕಾಲದಲ್ಲಿ ಜೆಬುಲೋನ್ ಮತ್ತು ನಫ್ತಾಲಿ, ಸೀಮೆಗಳನ್ನು ಆತನು ಅವಮಾನಕ್ಕೆ ಗುರಿಮಾಡಿದನು ಅನಂತರದಲ್ಲಿ ಯೋರ್ದಾನಿನ ಆಚೆಯ ಸೀಮೆ. ಸಮುದ್ರದ ಕಡೆಗಿರುವ ಸೀಮೆ ಅನ್ಯ ಜನಗಳಿರುವ ಗಲಿಲಾಯ ಸೀಮೆ ಈ ಪ್ರಾಂತ್ಯಗಳನ್ನೆಲ್ಲಾ ಘನಪಡಿಸಿದ್ದಾನೆ ಕತ್ತಲಲ್ಲಿ ಸಂಚರಿಸುವ ಜನರಿಗೆ ದೊಡ್ಡ ಬೆಳಕು ಕಾಣಿಸಿತು ಕಾರ್ಗತ್ತಲಾದ ದೇಶದಲ್ಲಿ ಇದ್ದವರಿಗೆ ಪ್ರಕಾಶವು ಹೊಳೆಯಿತು (ಯೆಶಾಯ 9:1-2 ULB)

Translation Issues

Translation Manual :: Just-in-Time Learning Modules :: Translation Issues

ವಾಕ್ಯಗಳಲ್ಲಿ ಕಂಡುಬರುವ ವಿಪರ್ಯಾಸಗಳು.

Translation Manual :: Just-in-Time Learning Modules :: Translation Issues :: Textual Variants

ವಿವರಣೆ

ಸಾವಿರಾರು ವರ್ಷಗಳ ಹಿಂದೆ ಜನರು ಸತ್ಯವೇದದ ಅನೇಕ ಪುಸ್ತಕಗಳನ್ನು ಬರೆದರು. ಇತರರು ಅದರ ಪ್ರತಿಗಳನ್ನು ಕೈಯಿಂದಲೇ ಬರೆದರು (ಹಸ್ತಪ್ರತಿಗಳು) ಮತ್ತು ಭಾಷಾಂತರಿಸಿದರು. ಈ ಕೆಲಸವನ್ನು ಅವರು ತುಂಬಾ ಎಚ್ಚರಿಕೆಯಿಂದ ಮಾಡಿದರು. ಕಾಲಕ್ರಮೇಣ ಜನರು ಸಾವಿರಾರು ಪ್ರತಿಗಳನ್ನು ಬರೆದಿಟ್ಟರು. ನಂತರ ಈ ಪ್ರತಿಗಳನ್ನು ಅವರು ಗಮನಿಸಿದಾಗ ಚಿಕ್ಕಪುಟ್ಟ ವ್ಯತ್ಯಾಸಗಳು ಅವುಗಳಲ್ಲಿ ಕಂಡುಬಂದವು. ಕೆಲವು ಪ್ರತಿಗಳಲ್ಲಿ ಆಕಸ್ಮಿಕವಾಗಿ ಕೆಲವು ಪದಗಳು ಬಿಟ್ಟುಹೋಗಿದ್ದವು, ಒಂದೇ ರೀತಿಯಿರುವ ಕೆಲವು ಪದಗಳನ್ನು ತಪ್ಪಾಗಿ ಭಾವಿಸಿ ಆ ಪದಕ್ಕೆ ಬದಲಾಗಿ ಇನ್ನೊಂದು ಪದವನ್ನು ಬಳಸಿರುವುದೂ ಉಂಟು. ಇನ್ನು ಕೆಲವೊಮ್ಮೆ ಅವರು ಕೆಲವೊಂದನ್ನು ವಿವರಿಸುವ ಸಲುವಾಗಿ ಹೆಚ್ಚಿನ ಪದಗಳನ್ನು ಅಥವಾ ವಾಕ್ಯಗಳನ್ನು ಆಕಸ್ಮಿಕವಾಗಿಯೋ ಸೇರಿಸಿರಬಹುದು. ಆಧುನಿಕ ಸತ್ಯವೇದಗಳು ಹಳೇ ಹಸ್ತಪ್ರತಿಗಳ ಭಾಷಾಂತರಗಳಾಗಿವೆ. ಇಂತಹ ಕೆಲವು ಆಧುನಿಕ ಸತ್ಯವೇದಗಳು ಇಂತಹ ಕೆಲವು ಹೆಚ್ಚುವರಿಯಾಗಿ ಸೇರಿಸಿದ ವಾಕ್ಯಗಳನ್ನು ಹೊಂದಿವೆ. ಸಾಮಾನ್ಯವಾಗಿ ಇಂತಹ ವಾಕ್ಯಗಳನ್ನು ULT, ಸತ್ಯವೇದದಲ್ಲಿ ಅವುಗಳನ್ನು ಅಡಿಟಿಪ್ಪಣಿಯಲ್ಲಿ ಬರೆಯಲಾಗಿರುತ್ತದೆ.

ಸತ್ಯವೇದದ ವಿದ್ವಾಂಸರು ಈ ಹಳೆಯ ಪ್ರತಿಗಳನ್ನು ಓದಿ ಅಧ್ಯಯನ ಮಾಡಿ ಒಂದರೊಡನೊಂದು ಹೋಲಿಸಿ ನೋಡಿದ್ದಾರೆ. ಆದುದರಿಂದಲೇ ಸತ್ಯವೇದದಲ್ಲಿ ಎಲ್ಲೆಲ್ಲಿ ವ್ಯತ್ಯಾಸಗಳು ಕಂಡುಬರುತ್ತದೋ ಅಲ್ಲಿ ಯಾವ ಪದಗಳು ಹೆಚ್ಚು ಸೂಕ್ತವಾಗಿ ಹೊಂದಬಹುದು ಎಂದು ಗುರುತಿಸಿದ್ದಾರೆ. ULT, ಸತ್ಯವೇದವನ್ನು ಭಾಷಾಂತರಿಸುವಾಗ ULT ಯಲ್ಲಿ ವಿದ್ವಾಂಸರು ಹೆಚ್ಚು ಸೂಕ್ತವಾಗಿದೆ ಎಂದು ಹೇಳುವ ಪದಗಳನ್ನು ಬಳಸಿದ್ದಾರೆ. ಏಕೆಂದರೆ ULT, ಸತ್ಯವೇದವನ್ನು ಬಳಸುವ ಜನರ ಬಳಿಯಲ್ಲಿ ಇತರ ಹಸ್ತಪ್ರತಿಗಳನ್ನು ಆಧರಿಸಿ ಭಾಷಾಂತರ ಮಾಡಿರುವ ಸತ್ಯವೇದಗಳು ಇರಬಹುದು. ULT ಭಾಷಾಂತರಗಾರರು ಅಡಿ ಟಿಪ್ಪಣಿಗಳಲ್ಲಿ ಅಥವಾ ಆನ್‌ಫೋಲ್ಡಿಂಗ್ ಭಾಷಾಂತರದ ಟಿಪ್ಪಣಿಗಳಲ್ಲಿ ಇವುಗಳ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿಸಿದ್ದಾರೆ.

ULT ಯಲ್ಲಿರುವ ವಾಕ್ಯಭಾಗಗಳನ್ನು ಭಾಷಾಂತರಗಾರು ಅದೇ ರೀತಿ ಭಾಷಾಂತರ ಮಾಡಬೇಕೆಂದು ಮತ್ತು ಅದರೊಂದಿಗೆ ಹೆಚ್ಚಿನ ವಾಕ್ಯ ಮಾಹಿತಿಗಳನ್ನು ULT ಯಲ್ಲಿ ಇರುವಂತೆ ಅಡಿಟಿಪ್ಪಣಿಯಲ್ಲಿ ಬರೆಯಬೇಕೆಂದು ತಿಳಿಸಿದ್ದಾರೆ. ಆದರೆ ಸ್ಥಳೀಯ ಸಭೆಗಳು (ಚರ್ಚ್ ಗಳು) ಇಂತಹ ವಾಕ್ಯಗಳನ್ನು ಮುಖ್ಯ ವಾಕ್ಯಭಾಗಗಳಲ್ಲಿ ಸೇರಿಸಬೇಕೆಂದು ಬಯಸಿದರೆ ಭಾಷಾಂತರಗಾರರು ಅವುಗಳನ್ನು ಮುಖ್ಯ ವಾಕ್ಯಭಾಗದಲ್ಲಿ ಸೇರಿಸಿ ಅಡಿ ಟಿಪ್ಪಣಿಯಲ್ಲಿ ಅದರ ಬಗ್ಗೆ ವಿವರಣೆ ನೀಡಬಹುದು.

ಸತ್ಯವೇದದ ಕೆಲವು ಉದಾಹರಣೆಗಳು

ULTಯ ಮತ್ತಾಯ 18:10-11 ವಾಕ್ಯಭಾಗದಲ್ಲಿ 11ನೇ ವಾಕ್ಯದ ಬಗ್ಗೆ ಅಡಿ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

10 ಇಂತಹ ಚಿಕ್ಕವರ ವಿಷಯದಲ್ಲಿ ನಿರ್ಲಕ್ಷಿಸದಂತೆ ನೋಡಿಕೊಳ್ಳಿರಿ. ಪರಲೋಕದಲ್ಲಿರುವ ಅವರ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಲಿದ್ದಾರೆ ಎಂದು ನಿಮಗೆ ಹೇಳುತ್ತೇನೆ. 11 [1]

[1] ಅನೇಕ ಹಳೆಯ ಪ್ರತಿಗಳಲ್ಲಿ 11 ನೇ ವಾಕ್ಯದಲ್ಲಿ ಹೀಗೆಂದು ಸೇರಿಸಿದ್ದಾರೆ: ಮನುಷ್ಯಕುಮಾರನು ಕೆಟ್ಟುಹೋದುದನ್ನು ಹುಡುಕಿ ರಕ್ಷಿಸಲು ಬಂದನು.

ಯೋಹಾನ 7:53-8:11 ಅತ್ಯುತ್ತಮವಾದ ಹಳೆಯ ಹಸ್ತಪ್ರತಿಗಳಲ್ಲಿ ಇಲ್ಲ. ಅದನ್ನು ULTಯಲ್ಲಿ ಸೇರಿಸಲಾಗಿದೆ, ಆದರೆ ಅದನ್ನು ಚೌಕಟ್ಟು ಆವರಣ ಚಿಹ್ನೆಯನ್ನು ([ ]) ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಹಾಕಲಾಗಿದೆ, ಮತ್ತು 11 ನೇ ವಾಕ್ಯದ ನಂತರ ಅಡಿ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

53 [ಅನಂತರ ಪ್ರತಿಯೊಬ್ಬನೂ ತನ್ನ ಮನೆಗೆ ಹೋದನು — 11 “ಯಾರೂ ಇಲ್ಲ ಸ್ವಾಮಿ” ಎಂದು ಅವಳು ಹೇಳಿದಳು. ಯೇಸು, “ನಾನೂ ನಿನಗೆ ಶಿಕ್ಷೆವಿಧಿಸುವುದಿಲ್ಲ. ಹೋಗು ಇನ್ನು ಮೇಲೆ ಪಾಪ ಮಾಡಬೇಡ” ಎಂದು ಹೇಳಿದನು.] [2]

[2] ಪ್ರಾಚೀನ ಹಸ್ತಪ್ರತಿಗಳು ಯೋಹಾನ 7:53-8:11 ವಾಕ್ಯಗಳನ್ನು ಒಳಗೊಂಡಿವೆ.

ಭಾಷಾಂತರದ ಕಾರ್ಯತಂತ್ರಗಳು

ವಾಕ್ಯಭಾಗಗಳಲ್ಲಿ ವ್ಯತ್ಯಾಸಗಳು ಕಂಡುಬರುವಾಗ, ನೀವು ULT ಯಾಗನ್ನಾಗಲಿ ಅಥವಾ ನಿಮಗೆ ಲಭ್ಯವಿರುವ ಬೇರೊಂದು ಅನುವಾದವನ್ನಾಗಲಿ ಬಳಸಬಹುದು.

(1) ULT ಯಲ್ಲಿರುವ ಹಾಗೆಯೇ ವಾಕ್ಯವನ್ನು ಭಾಷಾಂತರಿಸಿರಿ ಮತ್ತು ULT ನೀಡುವ ವಿವರವನ್ನು ಅಡಿ ಟಿಪ್ಪಣಿಯಲ್ಲಿ ಬಳಸಿರಿ.

(2) ಬೇರೊಂದು ಅನುವಾದದಲ್ಲಿರುವ ಹಾಗೆ ವಾಕ್ಯಭಾಗಗಳನ್ನು ಭಾಷಾಂತರಿಸಬಹುದು. ಇಂತಹ ಸಂದರ್ಭದಲ್ಲಿ ಅಡಿಟಿಪ್ಪಣಿಯಲ್ಲಿ ಬದಲಾಯಿಸಿ ಅದಕ್ಕೆ ಹೊಂದಿಕೊಳ್ಳುವಂತೆ ಬರೆಯಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಿರುವ ಉದಾಹರಣೆಗಳು

ಭಾಷಾಂತರದ ಕಾರ್ಯತಂತ್ರಗಳನ್ನು ಮಾರ್ಕ 7:14-16 ಗೆ ULT ಅನ್ವಯಿಸಲಾಗಿದೆ, 16ನೇ ವಾಕ್ಯ ಇದರ ಬಗ್ಗೆ ಅಡಿಟಿಪ್ಪಣಿಯಲ್ಲಿ ನೀಡಲಾಗಿದೆ.

14 ಆತನು ಪುನಃ ಜನರ ಗುಂಪನ್ನು ಹತ್ತಿರಕ್ಕೆ ಕರೆದು ಹೇಳಿದ್ದೇನಂದರೆ, “ನೀವೆಲ್ಲರೂ ನನ್ನ ಮಾತನ್ನು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15 ಹೊರಗಿನಿಂದ ಮನುಷ್ಯನೊಳಕ್ಕೆ ಹೋಗಿ ಅವನನ್ನು ಹೊಲೆಮಾಡುವಂತದ್ದು ಒಂದೂ ಇಲ್ಲ. ಆದರೆ ಮನುಷ್ಯನೊಳಗಿಂದ ಹೊರಡುವವುಗಳೇ ಮನುಷ್ಯನನ್ನು ಹೊಲೆಮಾಡುವಂತದ್ದಾಗಿದೆ.” 16 [1]

[1] ಕೆಲವು ಪ್ರಾಚೀನ ಹಸ್ತಪ್ರತಿಗಳಲ್ಲಿ 16ನೇ ವಾಕ್ಯವು ಇದೆ. ಕೇಳುವುದಕ್ಕೆ ಕಿವಿಯುಳ್ಳ ಮನುಷ್ಯನು, ಕೇಳಿಸಿಕೊಳ್ಳಲಿ.

(1) ULT ಯಲ್ಲಿರುವ ಹಾಗೆಯೇ ವಾಕ್ಯವನ್ನು ಭಾಷಾಂತರಿಸಿರಿ ಮತ್ತು ULT ನೀಡುವ ವಿವರವನ್ನು ಅಡಿ ಟಿಪ್ಪಣಿಯಲ್ಲಿ ಬಳಸಿರಿ.

14 ಆತನು ಪುನಃ ಜನರ ಗುಂಪನ್ನು ಹತ್ತಿರಕ್ಕೆ ಕರೆದು ಹೇಳಿದ್ದೇನಂದರೆ, “ನೀವೆಲ್ಲರೂ ನನ್ನ ಮಾತನ್ನು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15 ಹೊರಗಿನಿಂದ ಮನುಷ್ಯನೊಳಕ್ಕೆ ಹೋಗಿ ಅವನನ್ನು ಹೊಲೆಮಾಡುವಂತದ್ದು ಒಂದೂ ಇಲ್ಲ. ಆದರೆ ಮನುಷ್ಯನೊಳಗಿಂದ ಹೊರಡುವವುಗಳೇ ಮನುಷ್ಯನನ್ನು ಹೊಲೆಮಾಡುವಂತದ್ದಾಗಿದೆ.” 16 [1]

[1] ಕೆಲವು ಪ್ರಾಚೀನ ಪ್ರತಿಗಳಲ್ಲಿ 16ನೇ ವಾಕ್ಯವು ಇದೆ. ಕೇಳುವುದಕ್ಕೆ ಕಿವಿಯುಳ್ಳ ಮನುಷ್ಯನು, ಕೇಳಿಸಿಕೊಳ್ಳಲಿ.

(2) ಬೇರೊಂದು ಅನುವಾದದಲ್ಲಿರುವ ಹಾಗೆ ವಾಕ್ಯಭಾಗಗಳನ್ನು ಭಾಷಾಂತರಿಸಬಹುದು. ಇಂತಹ ಸಂದರ್ಭದಲ್ಲಿ ಅಡಿಟಿಪ್ಪಣಿಯಲ್ಲಿ ಬದಲಾಯಿಸಿ ಅದಕ್ಕೆ ಹೊಂದಿಕೊಳ್ಳುವಂತೆ ಬರೆಯಿರಿ.

14 ಆತನು ಪುನಃ ಜನರ ಗುಂಪನ್ನು ಹತ್ತಿರಕ್ಕೆ ಕರೆದು ಹೇಳಿದ್ದೇನಂದರೆ, “ನೀವೆಲ್ಲರೂ ನನ್ನ ಮಾತನ್ನು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15 ಹೊರಗಿನಿಂದ ಮನುಷ್ಯನೊಳಕ್ಕೆ ಹೋಗಿ ಅವನನ್ನು ಹೊಲೆಮಾಡುವಂತದ್ದು ಒಂದೂ ಇಲ್ಲ. ಮನುಷ್ಯನೊಳಗಿಂದ ಹೊರಡುವವುಗಳೇ ಮನುಷ್ಯನ್ನು ಹೊಲೆಮಾಡುವಂತಾದ್ದು.16 ಕೇಳುವುದಕ್ಕೆ ಕಿವಿಯುಳ್ಳ ಮನುಷ್ಯನು, ಕೇಳಿಸಿಕೊಳ್ಳಲಿ.” [1]

[1] ಕೆಲವು ಪ್ರಾಚೀನ ಪ್ರತಿಗಳಲ್ಲಿ 16ನೇ ವಾಕ್ಯವಿಲ್ಲ.


ವಾಕ್ಯಗಳ ನಡುವಿನ ಸೇತುವೆ.

Translation Manual :: Just-in-Time Learning Modules :: Translation Issues :: Verse Bridges

ವಿವರಣೆಗಳು.

ಕೆಲವು ವಿರಳವಾದ ಸನ್ನಿವೇಶಗಳಲ್ಲಿ Unlocked Literal Bible (ULB) ಅಥವಾ Unlocked Dynamic Bible (UDB) ಸತ್ಯವೇದಗಳಲ್ಲಿ ಎರಡು ಅಥವಾ ಮೂರು ಒಟ್ಟಾಗಿ ಸೇರಿಸಿ ಬರೆಯಲಾಗಿದೆ. ಉದಾಹರಣೆಗೆ 17-18.

ಇದನ್ನು ವಾಕ್ಯಬಂಧ / ವಾಕ್ಯ ಸೇತುವೆ ಎಂದು ಕರೆಯುತ್ತಾರೆ. ಇದರ ಅರ್ಥ ವಾಕ್ಯಭಾಗಗಳಲ್ಲಿರುವ ಮಾಹಿತಿಗಳನ್ನು ಪುನರ್ ರಚಿಸಿ ಕತೆ ಅಥವಾ ಸಂದೇಶಗಳನ್ನು ಹೆಚ್ಚು ಅರ್ಥಪೂರ್ಣವಾಗಿಸಲು ಪ್ರಯತ್ನಿಸುವುದು.

29ಕೆಳಗೆ ನಮೂದಿಸಿರುವ ಕುಲಗಳು ಹೋರಿಯರ ಕುಲಗಳು. ಲೋಟಾನ್,ಶೊಬಾಲ, ಸಿಬೆಯೋನ್, ಅನಾಹ, ದಿಶೋನ್,ಏಚರ್, ದಿಶಾನ್, ಇವರು ಹೋರಿಯರಿಂದ ಹುಟ್ಟಿದವರಾಗಿ ಸೇಯಿಯರ್ ಸೀಮೆಯಲ್ಲಿ ಅಧಿಪತ್ಯ ನಡೆಸಿದವರು.30 (ಆದಿಕಾಂಡ 26:29-30 ULB)

<>29-30ಹೋರಿಯರ ಕುಲದವರು, ಜನಾಂಗದವರು ಸೇಯಿರ್ ಸೀಮೆಯಲ್ಲಿ ವಾಸಿಸುತ್ತಿದ್ದರು. ಕುಲದವರ / ಜನಾಂಗದವರ ಹೆಸರು ಲೋಟಾನ್, ಶೊಬಾಲ, ಸಿಬೆಯೋನ್, ಅನಾಹ, ದಿಶೋನ್,ಏಚರ್, ದಿಶಾನ್ ಎಂಬುದು. (ಆದಿಕಾಂಡ 26:29-30 UDB)</>

ULB ಬೈಬಲ್ ನ ವಾಕ್ಯಭಾಗದ 29 ಮತ್ತು 30ನೇ ವಾಕ್ಯಗಳು ಪ್ರತ್ಯೇಕವಾಗಿವೆ.ಮತ್ತು ಸೇಯಿರ್ ಸೀಮೆಯಲ್ಲಿ ವಾಸಿಸುತ್ತಿರುವ ಜನರ ಬಗೆಗಿನ ಮಾಹಿತಿ 30ನೇ ವಾಕ್ಯದ ಕೊನೆಯಲ್ಲಿ ಬರುತ್ತದೆ. UDB ಬೈಬಲ್ ನ ವಾಕ್ಯಭಾಗದಲ್ಲಿ ವಾಕ್ಯಗಳು ಸೇರಿಸಲ್ಪಟ್ಟಿವೆ. ಮತ್ತು ಸೇಯಿರ್ ಸೀಮೆಯಲ್ಲಿ ವಾಸಿಸುವ ಜನರ ಬಗೆಗಿನ ಸತ್ಯವೇದದಲ್ಲಿನ ಉದಾಹರಣೆಗಳು ಮಾಹಿತಿ ಪ್ರಾರಂಭದಲ್ಲೇ ನೀಡಲಾಗಿದೆ. ಅನೇಕ ಭಾಷೆಯಲ್ಲಿ ಈ ಕ್ರಮವೇ ತರ್ಕಬದ್ಧವಾದ ಕ್ರಮದ ಮಾಹಿತಿ.

ಸತ್ಯವೇದದಿಂದ ಉದಾಹರಣೆಗಳು

ಕೆಲವೊಮ್ಮೆ ULB ಯಲ್ಲಿ ವಾಕ್ಯಗಳು ಪ್ರತ್ಯೇಕವಾಗಿ ಬರುತ್ತವೆ. ಆದರೆ UDB ಯಲ್ಲಿ ವಾಕ್ಯಗಳು ಒಟ್ಟಾಗಿ ಸೇರಿ ಬರುತ್ತವೆ

4ಆದರೆ ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಾನೀಗ ನಿಮಗೆ ಬೋಧಿಸುವ ಈ5ಧರ್ಮೋಪದೇಶವನ್ನೆಲ್ಲಾ ಅನುಸರಿಸಿದರೆ ಯೆಹೋವನು ತಾನು ನಿಮಗೆ ಸ್ವದೇಶವಾಗಿ ಕೊಡುವ ದೇಶದಲ್ಲಿ ನಿಮ್ಮನ್ನು ಅಭಿವೃದ್ಧಿಪಡಿಸುವುದರಿಂದ ನಿಮ್ಮಲ್ಲಿ ಬಡವರೇ ಇರುವುದಿಲ್ಲ. (ಧರ್ಮೋಪದೇಶಕಾಂಡ 15:4-5 ULB)

<>4-5ಯೆಹೋವನು ತಾನು ನಿಮಗೆ ಸ್ವದೇಶವಾಗಿ ಕೊಡುವ ದೇಶದಲ್ಲಿ ನಿಮ್ಮ ಅಭಿವೃದ್ಧಿ ಪಡಿಸುವನು. ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಾನೀಗ ನಿಮಗೆ ಬೋಧಿಸುವ ಧರ್ಮೋಪದೇಶವನ್ನು ಅನುಸರಿಸಿದರೆ ನಿಮ್ಮಲ್ಲಿ ಬಡವರೇ ಇರುವುದಿಲ್ಲ. (ಧರ್ಮೋಪದೇಶಕಾಂಡ 15:4-5 UDB))</>

ULBಯಲ್ಲಿ ಕೆಲವು ವಾಕ್ಯಬಂಧ / ಸೇತುವೆ ಇದೆ.

17-18ಎಜ್ರನ ಮಕ್ಕಳು ಯೆತೆರ್, ಮೆರೆದ್, ಏಫೆರ್ ಮತ್ತು ಯಾಲೋನ್. ಎಂಬುವವರು. ಮೆರೆದನು ಫರೋಹನ ಮಗಳಾದ ಬಿತ್ಯಳನ್ನು ಮದುವೆ ಮಾಡಿಕೋಡನು.ಇವರಿಂದ ಮಿರ್ಯಾಮ್, ಶಮ್ಮೈ, ಇಷಬಾದವರ ಮೂಲಪುರುಷನಾದ ಇಷ್ಟಹ ವರನ್ನು ಪಡೆದರು. ಯೆಹೂದ್ಯಳಾದ ಅವನ ಇನ್ನೊಬ್ಬ ಹೆಂಡತಿ ಗೆದೆರ್ಯೋರ ಮೂಲಪುರುಷನಾದ ಯೆರೆದ್, ಸೋಕೋವಿನವರ ಮೂಲಪುರುಷನಾದ ಹೆಬೆರ್,ಜಾನೋಹದವರ ಮೂಲಪುರುಷನಾದ ಯೆಕೊತೀಯೆಲ್ ಇವರನ್ನು ಹೆತ್ತಳು. (1 ನೇ ಪೂರ್ವಕಾಲ ವೃತ್ತಾಂತ 4:17-18 ULB)

ULB ಬೈಬಲ್ ನಲ್ಲಿ ಅಡ್ಡಗೆರೆಯಿಂದ ಗುರುತಿಸಿದ ವಾಕ್ಯಗಳು 18 ನೇ ವಾಕ್ಯದಿಂದ 17ನೇ ವಾಕ್ಯದವರೆಗೆ ಸ್ಪಷ್ಟವಾಗಿ ತೋರಿಸುತ್ತದೆ ಮತ್ತು ಅವರೆಲ್ಲ ಬಿತ್ಯಳ ಮಗಂದಿರು ಎಂದು ಸೂಚಿಸುತ್ತದೆ. ಇಲ್ಲಿರುವ ಮೂಲಕ್ರಮ ಮೂಲಕ್ರಮ ಓದುಗರಿಗೆ ಗೊಂದಲ ಉಂಟುಮಾಡುತ್ತದೆ.

17ನೇ ವಾಕ್ಯದಲ್ಲಿ ಎಜ್ರನ ಮಕ್ಕಳ ಬಗ್ಗೆ ಇದೆ. ಯೆತೆರ್, ಮೆರೆದ್, ಏಫೆರ್ ಮತ್ತು ಯಾಲೋನ್. ಅವಳು ಗರ್ಭಿಣಿಯಾಗಿ ಮಿರ್ಯಾಮ್, ಶಮ್ಮೈ, ಇಷಬಾದವರ ಮೂಲಪುರುಷನಾದ ಇಷ್ಟಹನನ್ನು ಪಡೆದಳು 18ನೇ ವಾಕ್ಯದಲ್ಲಿ ಅವನ ಯೆಹೂದ್ಯಳಾದ ಇನ್ನೊಬ್ಬ ಹೆಂಡತಿಯು ಗೆದೆರ್ಯೋರ ಮೂಲಪುರುಷನಾದ ಯೆರೆದ್, ಸೋಕೋವಿನವ ಮೂಲಪುರುಷನಾದ ಹೆಬೆರ್,ಜಾನೋಹದವರ ಮೂಲಪುರುಷನಾದ ಯೆಕೊತೀಯೆಲ್ ಇವರನ್ನು ಹಡೆದಳು. ಇವರೆಲ್ಲರೂ ಫರೋಹನ ಮಗಳಾದ ಬಿತ್ಯಳಿಂದ ಮೆರೆದನನ್ನು ಮದುವೆಯಾದುದರಿಂದ ಪಡೆದಳು. (1 ನೇ ಪೂರ್ವಕಾಲ ವೃತ್ತಾಂತ 4:17-18 TNK)

ಭಾಷಾಂತರ

ಮಾಹಿತಿಗಳನ್ನು ಕ್ರಮವಾಗಿ ಇಟ್ಟರೆ ಅವು ಓದುಗರಿಗೆ ಅರ್ಥವಾಗುವುದು ಸುಲಭವಾಗುತ್ತದೆ.

  1. ನೀವು ಮಾಹಿತಿಯನ್ನು ಒಂದು ವಾಕ್ಯದ ಮೊದಲು ಬರೆದು ಮೊದಲ ವಾಕ್ಯಕ್ಕೂ ಎರಡನೇ ವಾಕ್ಯಕ್ಕೂ ನಡುವೆ ಒಂದು ಸಣ್ಣ ಅಡ್ಡಗೆರೆ ಹಾಕಿ ಎರಡು ವಾಕ್ಯಗಳ ಸಂಖ್ಯೆಯನ್ನು ಕ್ರಮವಾಗಿ ಬರೆಯಬೇಕು.
  2. ULBಯಲ್ಲಿ ಈ ರೀತಿಯ ವಾಕ್ಯಬಂಧ / ಸೇತುವೆ ಇದ್ದು, ನೀವು ಬಳಸುತ್ತಿರುವ ಸತ್ಯವೇದದಲ್ಲಿ ಇಲ್ಲದಿದ್ದರೆ ನೀವು ನಿಮ್ಮ ಭಾಷೆಯಲ್ಲಿ ಯಾವುದು ಉತ್ತಮವೋ ಆ ಕ್ರಮವನ್ನು ಆಯ್ಕೆ ಮಾಡಬಹುದು. translationStudio APP.ನೋಡಿ

ಭಾಷಾಂತರ ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ಒಂದು ವಾಕ್ಯದ ಮೊದಲು ಮಾಹಿತಿ ಬಂದರೆ ಅದು ವಾಕ್ಯದ ಮೊದಲು ವಾಕ್ಯದ ಸಂಖ್ಯೆಯನ್ನು ಬರೆದು ಅದರ ಮೊದಲು ಮತ್ತು ವಾಕ್ಯಪ್ರಾರಂಭವಾಗುವ ಮಧ್ಯೆ ಒಂದು ಚಿಕ್ಕ ಅಡ್ಡ ಗೆರೆ hyphen ಹಾಕಬೇಕು
  • 2ಆ ದೇಶದ ಮಧ್ಯದಲ್ಲಿ ನೀವು ಮೂರು ಆಶ್ರಯ ನಗರಗಳನ್ನು ಗೊತ್ತು ಮಾಡಬೇಕು 3ನರಹತ್ಯೆ ಮಾಡಿದವರು ಆ ಪಟ್ಟಣಗಳಿಗೆ ಓಡಿಹೋಗುವುದಕ್ಕೆ ಅನುಕೂಲವಾಗುವಂತೆ ನೀವು ಅವುಗಳ ದಾರಿಗಳನ್ನು ಸರಿಪಡಿಸಬೇಕು ಮತ್ತು ನೀವು ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವಧೇಶವಾಗುವುದಕ್ಕೆ ಕೊಡುವ ಆ ದೇಶವನ್ನು ಮೂರುಭಾಗ ಮಾಡಬೇಕು. (ಧರ್ಮೋಪದೇಶಕಾಂಡ 19:2-3)
    • 2-3ನಿಮಗೆ ಸ್ವಧೇಶವಾಗುವುದಕ್ಕೆ ಕೊಡುವ ಆ ದೇಶವನ್ನು ಮೂರುಭಾಗ ಮಾಡಬೇಕು ಅನಂತರ ಪ್ರತಿಭಾಗಗಳಿಗೆ ಸೂಕ್ತವಾದ ನಗರವನ್ನು ಆಯ್ಕೆ ಮಾಡಬೇಕು. ಈ ನಗರಗಳಿಗೆ ಸೂಕ್ತವಾದ ಒಳ್ಳೆಯ ರಸ್ತೆಗಳನ್ನು ನಿರ್ಮಿಸಬೇಕು ಇದರಿಂದ ಜನರು ಈ ನಗರಗಳಿಗೆ ಸುಲಭವಾಗಿ ಬಂದುಹೋಗಲು ಅನುಕೂಲವಾಗಿರುತ್ತದೆ. ಯಾವ ವ್ಯಕ್ತಿಯಾದರೂ ಯಾರನ್ನಾದರೂ ಕೊಂದರೆ ಈ ನಗರಗಳಿಗೆ ಓಡಿಹೋಗಲು ಅನುಕೂಲವಾಗಿರುತ್ತದೆ. (ಧರ್ಮೋಪದೇಶಕಾಂಡ 19:2-3 UDB)
  1. ULB ಸತ್ಯವೇದದಲ್ಲಿ ವಾಕ್ಯಬಂಧವಿದ್ದರೆ ನೀವು ಬಳಸುವ ಸತ್ಯವೇದದಲ್ಲಿ ಈ ವಾಕ್ಯಬಂಧ ಇಲ್ಲದಿದ್ದರೆ ನಿಮ್ಮ ಭಾಷೆಯ ಭಾಷಾಂತರಕ್ಕೆ ಸೂಕ್ತವಾದ ಉತ್ತಮವಾದ ಕ್ರಮವನ್ನು ಆಯ್ಕೆ ಮಾಡಬಹುದು.

Unknowns

Translation Manual :: Just-in-Time Learning Modules :: Unknowns

ಪರಿಚಯವಿಲ್ಲದ ವಿಷಯಗಳನ್ನು ಅನುವಾದಿಸುವುದು / ಭಾಷಾಂತರಿಸುವುದು.

Translation Manual :: Just-in-Time Learning Modules :: Unknowns :: Translate Unknowns

ಸಿಂಹ, ಅಂಜೂರದ ಮರ, ಬೆಟ್ಟ, ಯಾಜಕ/ ಪಾದ್ರಿ, ದೇವಾಲಯ ಎಂಬ ಪದಗಳನ್ನು ನನ್ನ ಸಂಸ್ಕೃತಿಯ ಜನರಿಗೆ ಪರಿಚಯವಿಲ್ಲದಿದ್ದರೆ, ನಮ್ಮ ಭಾಷೆಯಲ್ಲಿ ಅದಕ್ಕೆ ಸಮನಾದ ಪದಗಳು ಇಲ್ಲದಿದ್ದರೆ ನಾನು ಅವುಗಳನ್ನು ಹೇಗೆ ಅನುವಾದ/ ಭಾಷಾಂತರ ಮಾಡಬಹುದು?

ವಿವರಣೆ.

ಮೂಲ ಪ್ರತಿಯಲ್ಲಿ ಇರುವ ಕೆಲವು ಪದಗಳಿದ್ದು ಅವು ನಿಮ್ಮ ಸಂಸ್ಕೃತಿಯ ಜನರಿಗೆ ತಿಳಿಯದಿದ್ದರೆ ಅದನ್ನು ಅಪರಿಚಿತ ಪದಗಳು ಎಂದು ಕರೆಯುತ್ತಾರೆ. ಈ ಪದಗಳನ್ನು ಅರ್ಥಮಾಡಿಕೊಳ್ಳಲು ‘ಅನುವಾದದ ಪದಗಳ ಪುಟಗಳು’ ಮತ್ತು ‘ಅನುವಾದದ ಟಿಪ್ಪಣಿಗಳು’ ಸಹಾಯ ಮಾಡುತ್ತದೆ. ಅದನ್ನು ನೀವು ಅರ್ಥಮಾಡಿಕೊಂಡ ನಂತರ ನಿಮ್ಮ ಅನುವಾದವನ್ನು ಓದುವ ಜನರಿಗೆ ಅದನ್ನು ಹೇಗೆ ಅರ್ಥೈಸಬೇಕು ಎಂಬುದನ್ನು ನೀವು ತಿಳಿಯಬೇಕು.

ಇಲ್ಲಿ ನಮ್ಮ ಬಳಿ ಕೇವಲ ಐದು ರೊಟ್ಟಿಮತ್ತು ಎರಡು ಮೀನುಗಳಿವೆ (ಮತ್ತಾಯ 14:17 ULT)

ಧಾನ್ಯಗಳನ್ನು ಸಣ್ಣಗೆ ಪುಡಿಮಾಡಿ ಅದನ್ನು ಎಣ್ಣೆಯಲ್ಲಿ ಮಿಶ್ರಮಾಡಿ ಸಿದ್ಧಪಡಿಸುವ ಆಹಾರವೇ ರೊಟ್ಟಿ. (ಇಲ್ಲಿ ಧಾನ್ಯ ಎಂದರೆ ಹುಲ್ಲಿನ ಬೀಜಗಳು). ಕೆಲವಾರು ಸಂಸ್ಕೃತಿಯಲ್ಲಿ ಈ ರೀತಿಯಾದ ರೊಟ್ಟಿಯನ್ನು ಜನರು ತಿಳಿಯದೆ ಇರಬಹುದು.

  • ಕಾರಣ ಇದೊಂದು ಭಾಷಾಂತರ ಸಮಸ್ಯೆ
    • ಸತ್ಯವೇದದಲ್ಲಿ ಇರುವ ಕೆಲವಾರು ವಸ್ತುಗಳು ಜನರಿಗೆ ತಿಳಿಯದೆ ಇರಬಹುದು ಇದಕ್ಕೆ ಕಾರಣ ಜನರು ಆ ಹಿಂದಿನ ಸಂಸ್ಕೃತಿಗೆ ಸಂಬಂಧಪಟ್ಟವರಲ್ಲ.
    • ಪಠೄದಲ್ಲಿರುವ ಕೆಲವಾರು ಜನರಿಗೆ ತಿಳಿಯದಿದ್ದರೆ ಅವರು ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಭಾಷಾಂತರ ತತ್ವಗಳು

  • ನಿಮ್ಮ ಭಾಷೆಯಲ್ಲಿರುವ ಪದಗಳನ್ನೇ ಉಪಯೋಗಿಸಲು ಆದಷ್ಟು ಪ್ರಯತ್ನಪಡಿರಿ.
  • ಸಾಧ್ಯವಾದರೆ ಅಭಿವ್ಯಕ್ತಿಗಳು ಸಣ್ಣದಾಗಿರಲಿ.
  • ದೇವರ ಆಜ್ಞೆಗಳನ್ನು ಮತ್ತು ಐತಿಹಾಸಿಕ ಸಂಗತಿಗಳನ್ನು ಸ್ಪಷ್ಟವಾಗಿ ಪ್ರಕಟಿಸಿರಿ.

ಸತ್ಯವೇದಿಂದ ಉದಾಹರಣೆಗಳು

ನಾನು ಯೆರೂಸಲೇಮನ್ನು ಹಾಳುದಿಬ್ಬಗಳನ್ನಾಗಿಯೂ ನರಿಗಳ ಹಕ್ಕೆಯನ್ನಾಗಿಯೂ ಮಾಡುವೆನು (ಯೆರೆಮೀಯ 9:11 ULT)

ನರಿಗಳು ವಿಶ್ವದ ಕೆಲವು ಭಾಗಗಳಲ್ಲಿ ಕಂಡು ಬರುವ ನಾಯಿಯಂತಹ ಕಾಡು ಪ್ರಾಣಿ. ಕೆಲವು ಪ್ರದೇಶದಲ್ಲಿ ಅವುಗಳ ಪರಿಚಯವಿಲ್ಲದೆ ಇರಬಹುದು.

ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ, ಅವರು ಕುರಿ ವೇಷ ಹಾಕಿಕೊಂಡು ನಿಮ್ಮ ಬಳಿ ಬರುತ್ತಾರೆ ಆದರೆ ಒಳಗೆ ನೋಡಿದರೆ ಅವರು ಹಿಡಿದುಕೊಂಡು ಹೋಗುವ ತೋಳಗಳೇ. (ಮತ್ತಾಯ 7:15 ULT)

ನಿಮ್ಮ ಅನುವಾದವನ್ನು ಓದುವ ಸ್ಥಳದಲ್ಲಿ ತೋಳ ಇಲ್ಲದಿದ್ದರೆ ಅಲ್ಲಿಯ ಜನರು ಇದು ನಾಯಿಯ ಹಾಗೆ ಇರುವ ಒಂದು ಉಗ್ರ ಕಾಡು ಪ್ರಾಣಿ, ಅವು ಕುರಿಗಳನ್ನು ಹಿಡಿಯುತ್ತವೆ ಎಂದು ಅವರಿಗೆ ತಿಳಿಯುವುದಿಲ್ಲ.

ಅಲ್ಲಿ ಆತನಿಗೆ ರಕ್ತಬೋಳಬೆರೆಸಿದ ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಟ್ಟರು. ಆದರೆ ಆತನು ಅದನ್ನು ಕುಡಿಯಲ್ಲಿಲ್ಲ. (ಮಾರ್ಕ 15:23 ULT)

ರಕ್ತಬೋಳ ಎಂದರೇನು ಅದನ್ನು ಔಷಧಕ್ಕೆ ಬಳಸಲಾಗುವುದು ಎಂದು ಜನರಿಗೆ ತಿಳಿಯದೆ ಇರಬಹುದು

ಆತನು ಮಹಾಜ್ಯೋತಿರ್ಮಂಡಲಗಳನ್ನುಸೃಷ್ಟಿಸಿದ್ದಾನೆ (ಕೀರ್ತನೆ 136:7 ULT)

ಬೆಳಕು ಕೊಡುವ ಸಂಗತಿಗಳಿಗೆ ಕೆಲವು ಭಾಷೆಗಳಲ್ಲಿ ಬೆಳಕು, ಸೂರ್ಯ ಮತ್ತು ಬೆಂಕಿ ಪದಗಳಿದ್ದು ಅದಕ್ಕೆ ಆದ ಸಾಮಾನ್ಯವಾದ ಒಂದು ಪದವಿಲ್ಲ.

ನಿಮ್ಮ ಪಾಪಗಳು… ಹಿಮದ ಹಾಗೆ ಬಿಳುಪಾಗುವುದು (ಯೆಶಾಯ. 1:18 ULT)

ಪ್ರಪಂಚದ ಅನೇಕ ಬಾಗಗಳಲ್ಲಿ ಜನರಿಗೆ ಹಿಮವನ್ನು ಕಂಡಿರುವುದಿಲ್ಲ. ಅದನ್ನು ಕೇವಲ ಚಿತ್ರಗಳಲ್ಲಿ ನೋಡಿರುತ್ತಾರೆ

ಭಾಷಾಂತರ ಕೌಶಲ್ಯಗಳು.

ನಿಮ್ಮ ಭಾಷೆಗೆ ಅಪರಿಚಿತವಾದ ಪದಗಳನ್ನು ಈ ರೀತಿಯಲ್ಲಿ ನೀವು ಅನುವಾದ ಮಾಡಬಹುದು.

  1. ಅಪರಿಚಿತ ವಸ್ತುವನ್ನು ಪರಿಚಯಿಸಲು ಒಂದು ನುಡಿಗುಚ್ಚವನ್ನು ಉಪಯೋಗಿಸಿರಿ ಅಥವಾ ಆ ವಾಕ್ಯವನ್ನು ಅನುವಾದ ಮಾಡುವಲ್ಲಿ ಆ ಅಪರಿಚಿತ ವಸ್ತುವಿನ ಎಷ್ಟು ಪ್ರಾಮುಖ್ಯತೆ ಎಂದು ತಿಳಿಸಿರಿ.

  2. ನಿಮ್ಮ ಭಾಷೆಯಲ್ಲಿ ಅದೇ ಅರ್ಥವನ್ನು ನೀಡುವ ಮತ್ತೊಂದು ಪದವನ್ನು ಉಪಯೋಗಿಸಿರಿ, ಹಾಗೆ ಮಾಡಿದರೆ ಅದು ಐತಿಹಾಸಿಕ ವಾಸ್ತವವನ್ನು ತಪ್ಪಾಗಿ ತಿಳಿಸುವುದಿಲ್ಲ.

  3. ಬೇರೆ ಭಾಷೆಯಿಂದ ಒಂದು ಪದವನ್ನು ತೆಗೆದುಕೊಳ್ಳಿರಿ. ಜನರಿಗೆ ಅರ್ಥವಾಗುವಂತೆ ಅದಕ್ಕೆ ಒಂದು ಸಾಮಾನ್ಯ ಪದವನ್ನು ಅಥವಾ ವಿವರಣಾತ್ಮಕ ನುಡಿಗಟ್ಟನ್ನು ಉಪಯೋಗಿಸಿ ವಿವರಿಸಿರಿ.

  4. ಸರಳ ಅರ್ಥವನ್ನು ನೀಡುವ ಪದವನ್ನು ಉಪಯೋಗಿಸಿರಿ.

  5. ನಿರ್ಧಿಷ್ಟವಾದ ಅರ್ಥವನ್ನು ನೀಡುವ ನುಡಿಗಟ್ಟನ್ನು ಉಪಯೋಗಿಸಿರಿ

ಅನುವಾದದ ಕೌಶಲ್ಯಗಳನ್ನು ಅಳವಡಿಸಿಕೊಂಡಿರುವ ಉದಾಹರಣೆಗಳು

  1. ಅಪರಿಚಿತ ವಸ್ತುವನ್ನು ಪರಿಚಯಿಸಲು ಒಂದು ನುಡಿಗುಚ್ಚವನ್ನು ಉಪಯೋಗಿಸಿರಿ ಅಥವಾ ಆ ವಾಕ್ಯವನ್ನು ಅನುವಾದ ಮಾಡುವಲ್ಲಿ ಆ ಅಪರಿಚಿತ ವಸ್ತುವಿನ ಎಷ್ಟು ಪ್ರಾಮುಖ್ಯತೆ ಎಂದು ತಿಳಿಸಿರಿ.
  • ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ, ಅವರು ಕುರಿ ವೇಷ ಹಾಕಿಕೊಂಡು ನಿಮ್ಮ ಬಳಿ ಬರುತ್ತಾರೆ ಆದರೆ ಒಳಗೆ ನೋಡಿದರೆ ಅವರು ಹಿಡಿದುಕೊಂಡು ಹೋಗುವ ತೋಳಗಳೇ. (ಮತ್ತಾಯ 7:15 ULT)

ಕುರಿ ವೇಷವನ್ನು ಹಾಕಿಕೊಂಡರೂ ಹಸಿದಿರುವ ಅಪಾಯಕಾರಿ ಪ್ರಾಣಿಗಳಹಾಗೆ ಬರುವ ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ ಇಲ್ಲಿ ನಾವು ಕಾಣುವ “ಕ್ರೂರವಾದ ತೋಳಗಳು” ರೂಪಕದ ಒಂದು ಭಾಗವಾಗಿದೆ. ಈ ತೋಳಗಳು ಕುರಿಗಳಿಗೆ ಬಹಳ ಅಪಾಯಕಾರಿಯಾದ ಪ್ರಾಣಿಗಳು ಎಂದು ಶೋತೃಗಳು ತಿಳಿದಿದ್ದರೆ ಆಗ ಮಾತ್ರ ಈ ರೂಪಕವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. (ಕುರಿಯು ಷ ಜನರಿಗೆ ಅಪರಿಚಿತವಾಗಿದ್ದ ಪಕ್ಷದಲ್ಲಿ ಅದನ್ನು ಅರ್ಥೈಸಲು ಭಾಷಾಂತರ ಕೌಶಲ್ಯವನ್ನು ಉಪಯೋಗಿಸಿ ಕುರಿ ಎಂಬ ಪದದ ಪದವನ್ನು ಅನುವಾದ ಮಾಡಿರಿ ಅಥವಾ ಭಾಷಾಂತರ ಕೌಶಲ್ಯವನ್ನು ಉಪಯೋಗಿಸಿರೂಪಕವನ್ನು ಬದಲಾಯಿಸಿರಿ. ವಿವರಗಳಿಗಾಗಿ ನೋಡಿರಿ Translating Metaphors.)

  • ಇಲ್ಲಿ ನಮ್ಮ ಬಳಿ ಕೇವಲ ಐದು ರೊಟ್ಟಿಯ ತುಂಡುಗಳುಮತ್ತು ಎರಡು ಮೀನುಗಳಿವೆ (ಮತ್ತಾಯ 14:17 ULT)
    • ಇಲ್ಲಿ ನಮ್ಮ ಬಳಿ ಕೇವಲ ಐದು ಧಾನ್ಯಗಳಿಂದ ಮಾಡಿರುವರೊಟ್ಟಿಯ ತುಂಡುಗಳುಮತ್ತು ಎರಡು ಮೀನುಗಳಿವೆ.
  1. ನಿಮ್ಮ ಭಾಷೆಯಲ್ಲಿ ಅದೇ ಅರ್ಥವನ್ನು ನೀಡುವ ಮತ್ತೊಂದು ಪದವನ್ನು ಉಪಯೋಗಿಸಿರಿ, ಹಾಗೆ ಮಾಡಿದರೆ ಅದು ಐತಿಹಾಸಿಕ ವಾಸ್ತವವನ್ನು ತಪ್ಪಾಗಿ ತಿಳಿಸುವುದಿಲ್ಲ.
  • ನಿಮ್ಮ ಪಾಪಗಳು… ಹಿಮದಹಾಗೆ ಬಿಳುಪಾಗುವುದು (ಯೆಶಾಯ. 1:18 ULT). ಈ ವಾಕ್ಯ ಹಿಮದ ಕುರಿತಾಗಿಲ್ಲ. ಆದರೆ ಜನರು ಅದು ಎಷ್ಟರ ಮಟ್ಟಿಗೆ ಬೆಳ್ಳಗಿದೆ ಎಂದು ತೋರಿಸಲು ಅಲಂಕಾರದ ಮೂಲಕ ಹಿಮದ ಚಿತ್ರವನ್ನು ನೀಡಲಾಗಿದೆ.
    • ನಿಮ್ಮ ಪಾಪಗಳು… ಹಾಲಿನಹಾಗೆ ಬಿಳುಪಾಗಿರುವುದು
    • ನಿಮ್ಮ ಪಾಪಗಳು… ಚಂದ್ರನಹಾಗೆ ಬಿಳುಪಾಗಿರುವುದು
  1. ಬೇರೆ ಭಾಷೆಯಿಂದ ಒಂದು ಪದವನ್ನು ತೆಗೆದುಕೊಳ್ಳಿರಿ. ಜನರಿಗೆ ಅರ್ಥವಾಗುವಂತೆ ಅದಕ್ಕೆ ಒಂದು ಸಾಮಾನ್ಯ ಪದವನ್ನು ಅಥವಾ ವಿವರಣಾತ್ಮಕ ನುಡಿಗಟ್ಟನ್ನು ಉಪಯೋಗಿಸಿ ವಿವರಿಸಿರಿ.
  • ಅಲ್ಲಿ ಆತನಿಗೆ ರಕ್ತಬೋಳಬೆರೆಸಿದ ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಟ್ಟರು. ಆದರೆ ಆತನು ಅದನ್ನು ಕುಡಿಯಲ್ಲಿಲ್ಲ (ಮಾರ್ಕ 15:23 ULT). ರಕ್ತಬೋಳವನ್ನು ಅರ್ಥಮಾಡಿಸಲು ಅದನ್ನು ಔಷಧಿ ಎಂಬ ಸಾಮಾನ್ಯ ಪದವನ್ನು ಉಪಯೋಗಿಸಿರಿ.

    • ಅಲ್ಲಿ ಆತನಿಗೆ ರಕ್ತಬೋಳ ಎಂಬ ಔಷಧಿಯನ್ನುಬೆರೆಸಿದ ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಟ್ಟರು. ಆದರೆ ಆತನು ಅದನ್ನು ಕುಡಿಯಲ್ಲಿಲ್ಲ
  • ಇಲ್ಲಿ ನಮ್ಮ ಬಳಿ ಕೇವಲ ಐದು ರೊಟ್ಟಿಯ ತುಂಡುಗಳುಮತ್ತು ಎರಡು ಮೀನುಗಳಿವೆ (ಮತ್ತಾಯ 14:17 ULT). ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಇದನ್ನು ಧಾನ್ಯದಿಂದ ಮಾಡಿದ ರೊಟ್ಟಿ ಎಂದು ತಿಳಿಸಬೇಕು.

    • ಇಲ್ಲಿ ನಮ್ಮ ಬಳಿ ಕೇವಲ ಐದು ರೊಟ್ಟಿಯ ತುಂಡುಗಳುಮತ್ತು ಎರಡು ಮೀನುಗಳಿವೆ*
  1. ಸರಳ ಅರ್ಥವನ್ನು ನೀಡುವ ಪದವನ್ನು ಉಪಯೋಗಿಸಿರಿ.
  • ನಾನು ಯೆರೂಸಲೇಮನ್ನು ಹಾಳುದಿಬ್ಬಗಳನ್ನಾಗಿಯೂ ನರಿಗಳ ಹಕ್ಕೆಯನ್ನಾಗಿಯೂ ಮಾಡುವೆನು (ಯೆರೆಮೀಯ 9:11 ULT)

  • ನಾನು ಯೆರೂಸಲೇಮನ್ನು ಹಾಳುದಿಬ್ಬಗಳನ್ನಾಗಿಯೂ ನರಿಗಳ ಹಕ್ಕೆಯನ್ನಾಗಿಯೂ ಮಾಡುವೆನು

  • ಇಲ್ಲಿ ನಮ್ಮ ಬಳಿ ಕೇವಲ ಐದು ರೊಟ್ಟಿಯ ತುಂಡುಗಳುಮತ್ತು ಎರಡು ಮೀನುಗಳಿವೆ (ಮತ್ತಾಯ 14:17 ULT)

    • ಇಲ್ಲಿ ನಮ್ಮ ಬಳಿ ಕೇವಲ ಐದು ರೊಟ್ಟಿಯ ತುಂಡುಗಳುಮತ್ತು ಎರಡು ಮೀನುಗಳಿವೆ.
  1. ನಿರ್ದಿಷ್ಟ ಅರ್ಥವನ್ನು ನೀಡುವ ನುಡಿಗಟ್ಟು ಮತ್ತು ಪದವನ್ನು ಉಪಯೋಗಿಸಿರಿ
  • ಆತನು ಮಹಾಜ್ಯೋತಿರ್ಮಂಡಲಗಳನ್ನುಸೃಷ್ಟಿಸಿದ್ದಾನೆ (ಕೀರ್ತನೆ 136:7 ULT)
    • ಆತನು ಸೂರ್ಯ ಮತ್ತು ಚಂದ್ರನನ್ನುಸೃಷ್ಟಿಸಿದ್ದಾನೆ

ನಕಲು ಮಾಡು ಅಥವಾ ಪದಗಳನ್ನು ಪಡೆದುಕೋ.

Translation Manual :: Just-in-Time Learning Modules :: Unknowns :: Copy or Borrow Words

ವಿವರಣೆ

ಕೆಲವೊಮ್ಮೆ ಸತ್ಯವೇದದಲ್ಲಿ ಬರುವ ಪದಗಳು ನಿಮ್ಮ ಸಂಸ್ಕೃತಿಯಲ್ಲಿ ಬರುವ ಪದಗಳಾಗಿರುವುದಿಲ್ಲ ಮತ್ತು ನಿಮ್ಮ ಭಾಷೆಯಲ್ಲಿ ಅದಕ್ಕೆ ಸೂಕ್ತ ಪದಗಳು ಇರುವುದಿಲ್ಲ. ಸತ್ಯವೇದದಲ್ಲಿ ಕೆಲವೊಮ್ಮೆ ಜನರ ಹೆಸರು ಮತ್ತು ಸ್ಥಳದ ಹೆಸರು ನಿಮ್ಮ ಸಂಸ್ಕೃತಿಯಲ್ಲಿ ನಿಮ್ಮ ಭಾಷೆಯಲ್ಲಿ ಇಲ್ಲದಿರಬಹುದು.

ಅಂತಹ ಸಂದರ್ಭದಲ್ಲಿ ನೀವು ನೇರವಾಗಿ ಸತ್ಯವೇದದಿಂದ ಪದಗಳನ್ನು ನಿಮ್ಮ ಭಾಷೆಗೆ ತೆಗೆದುಕೊಳ್ಳಬಹುದು. ಅದರ ಪದಗಳನ್ನು ನೇರವಾಗಿ ನಕಲು ಮಾಡಬಹುದು ಇಲ್ಲವೇ ಯಥಾಸ್ಥಿತಿಯಲ್ಲಿ ಪಡೆದುಕೊಳ್ಳುವುದು. ಈ ಪುಟದಲ್ಲಿ ಪದಗಳನ್ನು ಹೇಗೆ " ಪಡೆಯಬಹುದು / ತೆಗೆದುಕೊಳ್ಳಬಹುದು " ಎಂಬುದನ್ನು ತಿಳಿಸುತ್ತದೆ. ನಿಮ್ಮ ಭಾಷೆಯಲ್ಲಿ ಇಲ್ಲದಿರುವ ಪದಗಳನ್ನು ಹೇಗೆ ಇನ್ನೊಂದು ವಿಧದಲ್ಲಿ ಭಾಷಾಂತರಿಸಬಹುದು. ಎಂದೂ ತಿಳಿಯುತ್ತದೆ. ಅಪರಿಚಿತ ಪದಗಳ ಭಾಷಾಂತರ ನೋಡಿ.

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು

ಆತನು ರಸ್ತೆಬದಿಯಲ್ಲಿ ಒಂದು ಅಂಜೂರದ ಮರವನ್ನು ನೋಡಿದನು, ಆತನು ಅದರ ಬಳಿಗೆ ಹೋದನು (ಮತ್ತಾಯ 21:19 ULT)

ನಿಮ್ಮ ಸಂಸ್ಕೃತಿಯಲ್ಲಿಯ ಭಾಷೆಯಲ್ಲಿ ಅಂಜೂರ ಮರದ ಪರಿಚಯ ಇಲ್ಲದಿದ್ದರೆ, ಭಾಷಾಂತರಿಸುವಾಗ ಈ ರೀತಿಯ ಮರದ ಕುರುತು ಸೂಕ್ತ ಪದ ದೊರೆಯದೆ ಇರಬಹುದು.

ಆತನ ಸುತ್ತ ಸೆರಾಫಿಯರು ಇದ್ದರು; ಪ್ರತಿಯೊಬ್ಬರು ಆರಾರು ರೆಕ್ಕೆ ಉಳ್ಳವರಾಗಿದ್ದರು; ಎರಡರಿಂದ ಮುಖವನ್ನು ಮುಚ್ಚಿಕೊಂಡು, ಮತ್ತು ಎರಡರಿಂದ ಕಾಲುಗಳನ್ನು ಮುಚ್ಚಿಕೊಂಡು, ಉಳಿದ ಎರಡು ರೆಕ್ಕೆ ಬಡಿಯುತ್ತಾ. (ಯೆಶಾಯ 6:2 ULT)

ಈ ರೀತಿಯ ಜೀವಿಗಳಿಗೆ ಸಮಾನವಾದ ಪದ ನಿಮ್ಮ ಭಾಷೆಯಲ್ಲಿ ಇಲ್ಲದಿರಬಹುದು.

ಯೆಹೋವನು ಇಸ್ರಾಯೇಲರನ್ನು ಕುರಿತು ಮಲಾಕಿಯ ಮೂಲಕ ನುಡಿದ ದೈವೋಕ್ತಿ. (ಮಲಾಕಿ 1:1 ULT)

ಮಲಾಕಿ ಎಂಬ ಹೆಸರು ಬಹುಶಃ ನಿಮ್ಮ ಜನರು ಮಾತನಾಡುವ ಭಾಷೆಯಲ್ಲಿ ಬಳಕೆಯಲ್ಲಿ ಇಲ್ಲದಿರಬಹುದು

ಭಾಷಾಂತರದ ಕೌಶಲ್ಯಗಳು

ಬೇರೆ ಭಾಷೆಯಿಂದ ಪದಗಳನ್ನು ಪಡೆಯುವಾಗ ಎಚ್ಚರಿಕೆಯಿಂದ ಇರಲು ಇನ್ನೂ ಅನೇಕ ವಿಚಾರಗಳು ಇವೆ.

  • ವಿವಿಧ ಭಾಷೆಗಳು ವಿವಿಧ ಲಿಪಿಗಳನ್ನು ಬಳಸಬಹುದು, ಉದಾಹರಣೆಗೆ ಇಬ್ರೀಯ, ಗ್ರೀಕ್, ಲ್ಯಾಟಿನ್, ಸೆರಿಲಿಕ್, ದೇವನಾಗರಿ, ಮತ್ತು ಕೊರಿಯನ್ ಲಿಪಿಗಳು. ಈ ಲಿಪಿಗಳು ವಿಭಿನ್ನ ಆಕಾರಗಳಲ್ಲಿ ಇದ್ದು ಅದರದೇ ಆದ ವರ್ಣಮಾಲೆಯನ್ನು ಪ್ರತಿನಿಧಿಸುತ್ತವೆ.

  • ಕೆಲವು ಭಾಷೆಗಳು ಒಂದೇ ರೀತಿಯ ಲಿಪಿಗಳನ್ನು ಬಳಸಿದರೂ ವಿಭಿನ್ನವಾಗಿ ಉಚ್ಛರಿಸಬಹುದು. ಉದಾಹರಣೆಗೆ, ಜರ್ಮನ್ ಭಾಷೆ ಮಾತನಾಡುವ ಜನರು “j” ಅಕ್ಷರವನ್ನು ಮತ್ತು ಅದೇ ಸಂದರ್ಭದಲ್ಲಿ ಆ ಜನರು ಇಂಗ್ಲೀಷ್ ಮಾತನಾಡುವಾಗ “y” ಎಂಬಂತೆ ಉಚ್ಛರಿಸಬಹುದು.

  • ಭಾಷೆಗಳಲ್ಲಿ ಎಲ್ಲಾ ಪದಗಳು, ಅಕ್ಷರಗಳು ಒಂದೇ ರೀತಿ ಉಚ್ಛರಿಸಲು ಸಾಧ್ಯವಿಲ್ಲ ಅಥವಾ ಸಂಯೋಜಿತ ಉಚ್ಛಾರಣೆಯು ಇರುವುದಿಲ್ಲ, ಉದಾಹರಣೆಗೆ, ಅನೇಕ ಭಾಷೆಯಲ್ಲಿ “th” ಎಂಬ ಪದವನ್ನು ಸೌಮ್ಯವಾಗಿ ಉಚ್ಛರಿಸದೆ ಇಂಗ್ಲೀಷ್ ಭಾಷೆಯ “think,” ಎಂಬ ಪದವನ್ನು ಉಚ್ಛರಿಸಲು ಸಾಧ್ಯವಿಲ್ಲ ಇನ್ನೂ ಕೆಲವು ಭಾಷೆಯಲ್ಲಿ “st” ಯಿಂದ ಪ್ರಾರಂಭವಾಗುವ ಪದ “stop.” ಎಂದು ಉಚ್ಛರಿಸುವಾಗ ಒಟ್ಟಿಗೆ ಸೇರಿ ಉಚ್ಛರಿಸಬೇಕಾಗುತ್ತದೆ.

ಒಂದು ಪದವನ್ನು ಬೇರೇ ಭಾಷೆಯಿಂದ ಪಡೆಯಲು ಅನೇಕ ಮಾರ್ಗಗಳಿವೆ.

(1) ನೀವು ಯಾವ ಭಾಷೆಯಿಂದ ಭಾಷಾಂತರಿಸುತ್ತಿದ್ದೀರೋ ಆ ಭಾಷೆಯಲ್ಲಿ ಅನೇಕ ವಾಕ್ಯಭಾಗಗಳಿದ್ದರೆ ನಿಮ್ಮ ಭಾಷೆಯ ವಾಕ್ಯಭಾಗದಲ್ಲಿ ಸಂಬಂದಿಸಿದ ಅಕ್ಷರಗಳಿಗೆ ಸಮಾನವಾದ ಅಕ್ಷರಗಳನ್ನು ಸಮಾನವಾಗಿ ಪೂರೈಸಬಹುದು. (2) ಬೇರೇ ಭಾಷೆಯಲ್ಲಿ ಬಳಸುವ ಪದಗಳ ಅಕ್ಷರಗಳನ್ನು ಸರಿಯಾಗಿದ್ದು ಬೇರೆ ಭಾಷೆಯಲ್ಲಿ ಸಹಜವಾಗಿ ಹೇಗೆ ಉಚ್ಛರಿಸುತ್ತಿರೋ ಹಾಗೇ ಉಚ್ಛರಿಸಬಹುದು. (3) ಬೇರೇ ಭಾಷೆಯಲ್ಲಿ ಹೇಗೆ ಉಚ್ಛರಿಸುತ್ತಾರೋ ಹಾಗೇ ನಿಮ್ಮ ಭಾಷೆಯಲ್ಲಿ ಉಚ್ಛರಿಸಬಹುದು. ಮತ್ತು ನಿಮ್ಮ ಭಾಷೆಯ ನಿಯಮಗಳಿಗೆ ಸರಿಹೊಂದುವಂತೆ ತಕ್ಕ ಉಚ್ಛಾರಣೆಗೆ ಅಕ್ಷರ ಜೋಡಣೆ ಮಾಡಬಹುದು.

ಭಾಷಾಂತರದ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ.

(1) ನೀವು ಯಾವ ಭಾಷೆಯಿಂದ ಭಾಷಾಂತರಿಸುತ್ತಿದ್ದೀರೋ ಆ ಭಾಷೆಯಲ್ಲಿ ಅನೇಕ ವಾಕ್ಯಭಾಗಗಳಿದ್ದರೆ ನಿಮ್ಮ ಭಾಷೆಯ ವಾಕ್ಯಭಾಗದಲ್ಲಿ ಸಂಬಂದಿಸಿದ ಅಕ್ಷರಗಳಿಗೆ ಸಮಾನವಾದ ಅಕ್ಷರಗಳನ್ನು ಸಮಾನವಾಗಿ ಪೂರೈಸಬಹುದು.

ಇಬ್ರೀಯ ಅಕ್ಷರಗಳಲ್ಲಿ ಒಬ್ಬ ಮನುಷ್ಯನ ಹೆಸರು — צְפַנְיָ֤ה

“ಚೆಫನ್ಯ”— ಅದೇ ಹೆಸರು ರೋಮನ್ ಅಕ್ಷರಗಳಲ್ಲಿ

(1) ಬೇರೇ ಭಾಷೆಯಲ್ಲಿ ಬಳಸುವ ಪದಗಳ ಅಕ್ಷರಗಳನ್ನು ಸರಿಯಾಗಿದ್ದು ಬೇರೆ ಭಾಷೆಯಲ್ಲಿ ಸಹಜವಾಗಿ ಹೇಗೆ ಉಚ್ಛರಿಸುತ್ತಿರೋ ಹಾಗೇ ಉಚ್ಛರಿಸಬಹುದು

ಚೆಫನ್ಯ — ಇದು ಒಬ್ಬ ವ್ಯಕ್ತಿಯ ಹೆಸರು.

“ಚೆಫನ್ಯ” — ಈ ಹೆಸರು ಇಂಗ್ಲೀಷ್ನಲ್ಲಿರುವ ಅಕ್ಷರಗಳು, ಆದರೆ ನಿಮ್ಮ ಭಾಷೆಯಲ್ಲಿ ಇರುವ ನಿಯಮದಂತೆ ಉಚ್ಛರಿಸಬಹುದು.

(3) ಬೇರೇ ಭಾಷೆಯಲ್ಲಿ ಹೇಗೆ ಉಚ್ಛರಿಸುತ್ತಾರೋ ಹಾಗೇ ನಿಮ್ಮ ಭಾಷೆಯಲ್ಲಿ ಉಚ್ಛರಿಸಬಹುದು. ಮತ್ತು ನಿಮ್ಮ ಭಾಷೆಯ ನಿಯಮಗಳಿಗೆ ಸರಿಹೊಂದುವಂತೆ ತಕ್ಕ ಉಚ್ಛಾರಣೆಗೆ ಅಕ್ಷರ ಜೋಡಣೆ ಮಾಡಬಹುದು.

ಚೆಫನ್ಯ — ನಿಮ್ಮ ಭಾಷೆಯಲ್ಲಿ “z”, ನಿಂದ ಪ್ರಾರಂಭಿಸುವ ಪದ ಇಲ್ಲದಿದ್ದರೆ “s”. ಅಕ್ಷರ ಬಳಸಿ ಪದ ಬಳಸಬಹುದು ನಿಮ್ಮ ಲಿಪಿಯಲ್ಲಿ “ph” ನಿಂದ ಉಚ್ಛರಿಸಲ್ಪಡುವ ಪದ ಇಲ್ಲದಿದ್ದರೆ “f” ಎಂಬ ಅಕ್ಷರದಿಂದ ಉಚ್ಛರಿಸುವಂತೆ ಬಳಸಬಹುದು. “i” ಅಕ್ಷರದಿಂದ ಉಚ್ಛರಿಸುವ ಪದವನ್ನು “i” ಅಥವಾ “ai” ಅಥವಾ "ay"ಅಕ್ಷರಗಳನ್ನು ಬಳಸಬಹುದು.

“Sefania” * “ಸೆಫೆನಿಯಾ”

“Sefanaia”* “ಸೆಫೆನಯಾ”

“Sefanaya”* “ಸೆಫೆನಯ”


ಹೆಸರುಗಳನ್ನು ಹೇಗೆ ಭಾಷಾಂತರಿಸುವುದು

Translation Manual :: Just-in-Time Learning Modules :: Unknowns :: How to Translate Names

ವಿವರಣೆ

ಸತ್ಯವೇದದಲ್ಲಿ ಅನೇಕ ಜನರ ಹೆಸರುಗಳಿವೆ, ಅನೇಕ ಜನಾಂಗಗಳ ಮತ್ತು ಸ್ಥಳಗಳ ಹೆಸರುಗಳಿವೆ. ಇವುಗಳಲ್ಲಿ ಕೆಲವು ಹೆಸರುಗಳು ವಿಚಿತ್ರವೆನ್ನಿಸಬಹುದು ಮತ್ತು ಹೇಳಲು ಕಷ್ಟವಾಗಬಹುದು. ಕೆಲವೊಮ್ಮೆ ಓದುಗರಿಗೆ ಹೆಸರುಗಳು ಏನನ್ನು ಸೂಚಿಸುತ್ತವೆ ಎಂದು ತಿಳಿಯದಿರಬಹುದು ಮತ್ತು ಕೆಲವೊಮ್ಮೆ ಹೆಸರುಗಳ ಅರ್ಥವೇನೆಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತೆ. ಈ ಪುಟವು ಅಂತಹ ಕೆಲವು ಹೆಸರುಗಳನ್ನು ಹೇಗೆ ಭಾಷಾಂತರಿಸಬಹುದು ಮತ್ತು ಜನರು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಹೇಗೆ ಭಾಷಾಂತರಿಸಬಹುದು ಎಂಬುದನ್ನು ತಿಳಿಯಲು ಸಹಾಯಕವಾಗಿರುತ್ತದೆ.

ಹೆಸರುಗಳ ಅರ್ಥ

ಸತ್ಯವೇದದಲ್ಲಿರುವ ಬಹುತೇಕ ಎಲ್ಲಾ ಹೆಸರುಗಳಿಗೆ ಅರ್ಥವಿದೆ. ಹೆಚ್ಚಿನ ಸಮಯದಲ್ಲಿ, ಸತ್ಯವೇದದಲ್ಲಿರುವ ಹೆಸರುಗಳು ಜನರನ್ನು ಮತ್ತು ಸ್ಥಳಗಳನ್ನು ಗುರುತಿಸುವುದಕ್ಕಾಗಿ ಬಳಸಿರುವಂಥವುಗಳಾಗಿವೆ. ಆದರೆ ಕೆಲವೊಮ್ಮೆ ಹೆಸರುಗಳ ಅರ್ಥಗಳು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ.

ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತನಾದ ದೇವರ ಯಾಜಕನೂ ಆಗಿದ್ದನು. ಈತನು ರಾಜರನ್ನು ಸಂಹಾರ ಮಾಡಿ ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು. (ಇಬ್ರಿಯ 7:1 ULT)

ಇಲ್ಲಿನ ಲೇಖಕನು “ಮೆಲ್ಕಿಜೇದೇಕ” ಎಂಬ ಹೆಸರನ್ನು ಬಳಸಿದ್ದಾನೆ. ಮೊದಲನೆಯದಾಗಿ ಇದು ಈ ಹೆಸರನ್ನು ಹೊಂದಿದ ಒಬ್ಬ ಮನುಷ್ಯ ಎಂಬುದನ್ನು ತೋರಿಸುತ್ತದೆ. “ಸಾಲೇಮಿನ ಅರಸ” ಎಂಬ ಪದ ಅವನು ಸಾಲೇಮ್ ಎಂಬ ಪಟ್ಟಣವನ್ನು ಆಳುತ್ತಿದ್ದನು ಎಂಬುದನ್ನು ಸೂಚಿಸುತ್ತದೆ.

ಆತನ ಹೆಸರು “ಮೆಲ್ಕಿಜೆದೇಕ” ಇದರ ಅರ್ಥವೇನಂದರೆ “ನೀತಿಯ ರಾಜ” ಎಂದೂ ಮತ್ತು “ಸಾಲೇಮಿನ ರಾಜ” ಎಂದರೆ “ಸಮಾಧಾನದ ರಾಜ.” (ಇಬ್ರಿಯ 7:2 ULT)

ಇಲ್ಲಿ ಲೇಖಕನು ಮೆಲ್ಕಿಜೇದೇಕನ ಬಿರುದು ಮತ್ತು ಹೆಸರಿನ ಅರ್ಥವನ್ನು ವಿವರಿಸುತ್ತಿದ್ದಾನೆ, ಏಕೆಂದರೆ ಆ ವಿಷಯಗಳು ಆ ವ್ಯಕ್ತಿಯ ಬಗ್ಗೆ ನಮಗೆ ಹೆಚ್ಚಿನ ವಿಷಯಗಳನ್ನು ತಿಳಿಸುತ್ತವೆ. ಕೆಲವೊಮ್ಮೆ ಲೇಖಕನು ಹೆಸರಿನ ಅರ್ಥವನ್ನು ವಿವರಿಸದೆ ಹೋಗಬಹುದು ಏಕೆಂದರೆ ಓದುಗರು ಈಗಾಗಲೇ ಅದರ ಅರ್ಥವನ್ನು ತಿಳಿದುಕೊಂಡಿರುತ್ತಾರೆ ಎಂದು ಭಾವಿಸಿರುತ್ತಾನೆ. ವಾಕ್ಯಭಾಗವನ್ನು ಅರ್ಥ ಮಾಡಿಕೊಳ್ಳಲು ಹೆಸರಿನ ಅರ್ಥ ಹೇಳುವುದು ಮುಖ್ಯವಾದರೆ ಅದನ್ನು ವಾಕ್ಯಭಾಗದಲ್ಲಿ ಸೇರಿಸಬಹುದು ಇಲ್ಲವೇ ಅಡಿಟಿಪ್ಪಣಿಯಲ್ಲಿ ಬರೆಯಬಹುದು.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  • ಓದುಗರಿಗೆ ಸತ್ಯವೇದದಲ್ಲಿರುವ ಕೆಲವು ಹೆಸರುಗಳು ಗೊತ್ತಿರುವುದಿಲ್ಲ. ಕೆಲವೊಮ್ಮೆ ಈ ಹೆಸರುಗಳು ವ್ಯಕ್ತಿಯನ್ನು ಇಲ್ಲವೆ ಸ್ಥಳವನ್ನು ಅಥವಾ ಬೇರೆ ಏನನ್ನಾದರೂ ಸೂಚಿಸುತ್ತವೇಯೋ ಎಂದು ಅವರಿಗೆ ತಿಳಿದಿರುವುದಿಲ್ಲ
  • ಓದುಗರು ವಾಕ್ಯಭಾಗವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಇದರಲ್ಲಿ ಬರುವ ಹೆಸರುಗಳ ಅರ್ಥ ತಿಳಿದುಕೊಳ್ಳುವ ಅವಶ್ಯಕತೆ ಇದೆ.
  • ಕೆಲವು ಹೆಸರುಗಳ ಧ್ವನಿ ಉಚ್ಛಾರಣೆಯಲ್ಲಿ ಅಥವಾ ಧ್ವನಿ ಉಚ್ಛಾರಣೆಯ ಸಂಯೋಜನೆಯಲ್ಲಿ ವಿಭಿನ್ನತೆ ಇರಬಹುದು. ಇವುಗಳನ್ನು ಕೆಲವೊಮ್ಮೆ ನಿಮ್ಮ ಭಾಷೆಯಲ್ಲಿ ಅಸಹಜವಾಗಿ, ಅಪ್ರಿಯವಾಗಿ ಕಂಡುಬರಬಹುದು. ಈ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದಕ್ಕೆ ಅಳವಡಿಸಿಕೊಳ್ಳಬಹುದಾದ ಕಾರ್ಯತಂತ್ರಗಳಿಗಾಗಿ ನೋಡಿರಿ ಪದಗಳನ್ನು ತೆಗೆದುಕೊಳ್ಳಿರಿ.
  • ಕೆಲವು ವ್ಯಕ್ತಿಗಳಿಗೆ ಮತ್ತು ಸ್ಥಳಗಳಿಗೆ ಎರಡೆರಡು ಹೆಸರುಗಳು ಸತ್ಯವೇದದಲ್ಲಿದೆ. ಕೆಲವೊಮ್ಮೆ ಓದುಗರು ಎರಡು ಹೆಸರುಗಳು ಒಬ್ಬನೇ ವ್ಯಕ್ತಿ ಅಥವಾ ಒಂದೇ ಸ್ಥಳವನ್ನು ಕುರಿತು ಹೇಳಿದೆ ಎಂದು ತಿಳಿದುಕೊಳ್ಳಲಾರರು.

ಸತ್ಯವೇದದಲ್ಲಿನ ಉದಾಹರಣೆಗಳು

ನೀವು ಯೋರ್ದಾನನನ್ನು ದಾಟಿ ಯೆರಿಕೋವಿಗೆ ಹೋಗಿದ್ದೀರಿ. ಆಗ ಯೆರಿಕೋವಿನ ನಾಯಕರು ಅಮೋರಿಯರ ಜೊತೆ ಸೇರಿ ನಿಮ್ಮ ವಿರುದ್ಧ ಯುದ್ಧ ಮಾಡಿದರು. (ಯೆಹೋಶುವ 24:11 ULT)

ಓದುಗರಿಗೆ "ಯೋರ್ದಾನ್ " ಎಂಬುದು ಒಂದು ನದಿಯ ಹೆಸರು, “ಯೆರಿಕೋ” ಎಂಬುದು ಒಂದು ಪಟ್ಟಣದ ಹೆಸರು, “ಅಮೋರಿಯರು” ಎಂಬುದು ಒಂದು ಜನಾಂಗದ ಹೆಸರು ಎಂದು ತಿಳಿದಿರುವುದಿಲ್ಲ.

…“ಆತನು ನನ್ನನ್ನು ನೋಡಿದ ನಂತರವೂ ನಾನು ನಿಜವಾಗಿಯೂ ನಿರಂತರವಾಗಿ ನೋಡುತ್ತಿದ್ದೇನಲ್ಲಾ?” ಎಂದು ಅವಳು ಹೇಳಿದಳು. ಆದುದರಿಂದ ಆ ಬಾವಿಯನ್ನು ಬೀರ್‌ಲಹೈರೋಯಿ ಎಂದು ಕರೆಯುತ್ತಾರೆ; (ಆದಿಕಾಂಡ 16:13-14 ULT)

ಓದುಗರು “ಬೀರ್‌ಲಹೈರೋಯಿ” ಎಂದರೆ “ನನ್ನನ್ನು ನೋಡುವ ಜೀವಸ್ವರೂಪನಾದ ಬಾವಿ” ಎಂದು ಅರ್ಥವೆಂದು ತಿಳಿದುಕೊಳ್ಳದಿದ್ದರೆ ಎರಡನೇ ವಾಕ್ಯದ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ.

“ನಾನು ಅವನನ್ನು ನೀರಿನಿಂದ ಸೆಳೆದುಕೊಂಡಿದ್ದರಿಂದ” ಅವನಿಗೆ ಮೋಶೆ ಎಂದು ಹೆಸರಿಟ್ಟೆನು ಎಂದಳು. (ವಿಮೋಚನಾಕಾಂಡ 2:11 ULT)

ಓದುಗರಿಗೆ ಹಿಬ್ರು ಭಾಷೆಯಲ್ಲಿ ಮೋಶೆ ಎಂಬ ಹೆಸರಿಗೆ “ಹೊರಗೆ ಎಳೆ” ಎಂದು ಅರ್ಥವುಂಟು ಎಂದು ತಿಳಿಯದಿದ್ದರೆ ಅವಳು ಏಕೆ ಇದನ್ನು ಹೇಳಿದಳು ಎಂದು ಅವರಿಗೆ ಅರ್ಥವಾಗುವುದಿಲ್ಲ.

ಸೌಲನು ಅವನ ಮರಣಕ್ಕೆ ಸಮ್ಮತಿ ನೀಡುವವನಾಗಿದ್ದನು (ಅಪೋಸ್ತಲರ ಕೃತ್ಯಗಳು 8:1 ULT)

ಇಕೋನ್ಯದಲ್ಲಿ ಪೌಲನು ಮತ್ತು ಬಾರ್ನಬನು ಯೆಹೂದ್ಯರ ಸಭಾಮಂದಿರದೊಳಗೆ ಪ್ರವೇಶಿಸಿದರು (ಅಪೋಸ್ತಲರ ಕೃತ್ಯಗಳು 14:1 ULT)

ಓದುಗರಿಗೆ ಸೌಲ ಮತ್ತು ಪೌಲ ಎರಡೂ ಒಬ್ಬನೇ ವ್ಯಕ್ತಿಯ ಹೆಸರು ಎಂದು ತಿಳಿಯದೇ ಇರಬಹುದು.

ಭಾಷಾಂತರದ ಕಾರ್ಯತಂತ್ರಗಳು

  1. ಓದುಗರಿಗೆ ಸಂದರ್ಭದಿಂದ ಹೆಸರು ಏನನ್ನು ಸೂಚಿಸುತ್ತಿದ್ದೆ ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅದನ್ನು ಸ್ಪಷ್ಟಗೊಳಿಸಲು ನೀವು ಅದಕ್ಕೆ ಪದವನ್ನು ಸೇರಿಸಬಹುದು.
  2. ಹೆಸರಿನ ಬಗ್ಗೆ ಏನನ್ನು ಹೇಳಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಓದುಗರು ಅದರ ಅರ್ಥವನ್ನು ಅರ್ಥಮಾಡಿಕೊಳ್ಳಬೇಕಾದರೆ, ಹೆಸರನ್ನು ನಕಲಿಮಾಡಿ ಮತ್ತು ಅದರ ಅರ್ಥವನ್ನು ವಾಕ್ಯಭಾಗದಲ್ಲಿ ತಿಳಿಸಬಹುದು ಇಲ್ಲವೇ ಅಡಿ ಟಿಪ್ಪಣಿಯಲ್ಲಿ ಅದನ್ನು ವಿವರಿಸಬಹುದು.
  3. ಅಥವಾ ಹೆಸರಿನ ಬಗ್ಗೆ ಏನನ್ನು ಹೇಳಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಓದುಗರು ಅದರ ಅರ್ಥವನ್ನು ಅರ್ಥಮಾಡಿಕೊಳ್ಳಬೇಕಾದರೆ ಮತ್ತು ಆ ಹೆಸರು ಒಂದೇ ಒಂದು ಸಾರಿ ಉಪಯೋಗಿಸಲಾಗಿದ್ದರೆ, ಹೆಸರನ್ನು ಪ್ರತಿ ಮಾಡುವ ಬದಲು ಹೆಸರಿನ ಅರ್ಥವನ್ನು ಭಾಷಾಂತರ ಮಾಡಬೇಕು.
  4. ಒಬ್ಬ ವ್ಯಕ್ತಿಗೆ ಅಥವಾ ಒಂದು ಸ್ಥಳಕ್ಕೆ ಎರಡು ವಿಭಿನ್ನ ಹೆಸರು ಇದ್ದರೆ ಒಂದು ಹೆಸರನ್ನು ಎಲ್ಲಾ ಸಮಯದಲ್ಲಿ ಬಳಸಿರಿ, ಮತ್ತು ಒಂದಕ್ಕಿಂತ ಹೆಚ್ಚು ಹೆಸರಿರುವ ವ್ಯಕ್ತಿ ಅಥವಾ ಸ್ಥಳದ ಬಗ್ಗೆ ವಾಕ್ಯಭಾಗವು ತಿಳಿಸುವಾಗ ಅಥವಾ ಒಬ್ಬ ವ್ಯಕ್ತಿಗೆ ಅಥವಾ ಸ್ಥಳಕ್ಕೆ ಈ ಹೆಸರನ್ನು ಏಕೆ ನೀಡಲಾಯಿತು ಎಂದು ತಿಳಿಸುವಾಗ ಮಾತ್ರ ಇನ್ನೊಂದು ಹೆಸರನ್ನು ಬಳಸಿರಿ. ಮೂಲ ವಾಕ್ಯಭಾಗದಲ್ಲಿ ಈ ಹೆಸರುಗಳನ್ನು ಅಷ್ಟೇನು ಹೆಚ್ಚು ಸಲ ಬಳಸದಿದ್ದರೆ ಅಡಿ ಟಿಪ್ಪಣಿಯಲ್ಲಿ ಈ ಬಗ್ಗೆ ನಮೂದಿಸಿರಿ.
  5. ಅಥವಾ ಒಬ್ಬ ವ್ಯಕ್ತಿ ಅಥವಾ ಒಂದು ಸ್ಥಳಕ್ಕೆ ಎರಡು ವಿಭಿನ್ನ ಹೆಸರುಗಳಿದ್ದರೆ ಮೂಲ ವಾಕ್ಯಭಾಗದಲ್ಲಿರುವ ಹೆಸರನ್ನು ಬಳಸಿಕೊಳ್ಳಿರಿ ಮತ್ತು ಇನ್ನೊಂದು ಹೆಸರಿನ ಬಗ್ಗೆ ಅಡಿ ಟಿಪ್ಪಣಿಯಲ್ಲಿ ವಿವರಿಸಿ ಬರೆದಿಡಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಓದುಗರಿಗೆ ಸಂದರ್ಭದಿಂದ ಹೆಸರು ಏನನ್ನು ಸೂಚಿಸುತ್ತಿದ್ದೆ ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅದನ್ನು ಸ್ಪಷ್ಟಗೊಳಿಸಲು ನೀವು ಅದಕ್ಕೆ ಪದವನ್ನು ಸೇರಿಸಬಹುದು.

ನೀವು ಯೋರ್ದಾನನನ್ನು ದಾಟಿ ಯೆರಿಕೋವಿಗೆ ಹೋಗಿದ್ದೀರಿ. ಆಗ ಯೆರಿಕೋವಿನ ನಾಯಕರು ಅಮೋರಿಯರ ಜೊತೆ ಸೇರಿ ನಿಮ್ಮ ವಿರುದ್ಧ ಯುದ್ಧ ಮಾಡಿದರು. (ಯೆಹೋಶುವ 24:11 ULT)

ನೀವು ಯೋರ್ದಾನ್‌ ನದಿಯನ್ನು ದಾಟಿ ಯೆರಿಕೋ ಪಟ್ಟಣಕ್ಕೆ ಹೋಗಿದ್ದೀರಿ. ಆಗ ಯೆರಿಕೋವಿನ ನಾಯಕರು ಅಮೋರಿಯರೆಂಬ ಎಂಬ ಕುಲದವರ ಜೊತೆ ಸೇರಿ ನಿಮ್ಮ ವಿರುದ್ಧ ಯುದ್ಧ ಮಾಡಿದರು.

ಸ್ವಲ್ಪ ಹೊತ್ತಿನ ನಂತರ ಕೆಲವು ಮಂದಿ ಫರಿಸಾಯರು ಯೇಸುವಿನ ಬಳಿ ಬಂದು ಆತನಿಗೆ, “ನೀನು ಇಲ್ಲಿಂದ ಹೊರಟು ಹೋಗು ಏಕೆಂದರೆ ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ” ಎಂದು ಹೇಳಿದರು. (ಲೂಕ 13:31 ULT)

ಸ್ವಲ್ಪ ಹೊತ್ತಿನ ನಂತರ ಕೆಲವು ಮಂದಿ ಫರಿಸಾಯರು ಯೆಸುವಿನ ಬಳಿ ಬಂದು ಆತನಿಗೆ, “ನೀನು ಇಲ್ಲಿಂದ ಹೊರಟು ಹೋಗು ಏಕೆಂದರೆ ರಾಜನಾದ ಹೆರೋದನು ನಿನ್ನನ್ನು ಕೊಲ್ಲ ಬೇಕೆಂದಿದ್ದಾನೆ” ಎಂದು ಹೇಳಿದರು.

(2) ಹೆಸರಿನ ಬಗ್ಗೆ ಏನನ್ನು ಹೇಳಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಓದುಗರು ಅದರ ಅರ್ಥವನ್ನು ಅರ್ಥಮಾಡಿಕೊಳ್ಳಬೇಕಾದರೆ, ಹೆಸರನ್ನು ನಕಲಿಮಾಡಿ ಮತ್ತು ಅದರ ಅರ್ಥವನ್ನು ವಾಕ್ಯಭಾಗದಲ್ಲಿ ತಿಳಿಸಬಹುದು ಇಲ್ಲವೇ ಅಡಿ ಟಿಪ್ಪಣಿಯಲ್ಲಿ ಅದನ್ನು ವಿವರಿಸಬಹುದು.

“ನಾನು ಅವನನ್ನು ನೀರಿನಿಂದ ಸೆಳೆದುಕೊಂಡಿದ್ದರಿಂದ” ಅವನಿಗೆ ಮೋಶೆ ಎಂದು ಹೆಸರಿಟ್ಟೆನು ಎಂದಳು. (ವಿಮೋಚನಾಕಾಂಡ 2:11 ULT)

ನಾನು ಅವನನ್ನು ನೀರಿನಿಂದ ಸೆಳೆದುಕೊಂಡಿದ್ದರಿಂದ" ಅವನಿಗೆ ಮೋಶೆ (ಇದರ ಅರ್ಥ ʼಹೊರ ಎಳೆದʼ) ಎಂದು ಹೆಸರಿಟ್ಟೆನು ಎಂದಳು.

(3) ಅಥವಾ ಹೆಸರಿನ ಬಗ್ಗೆ ಏನನ್ನು ಹೇಳಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಓದುಗರು ಅದರ ಅರ್ಥವನ್ನು ಅರ್ಥಮಾಡಿಕೊಳ್ಳಬೇಕಾದರೆ ಮತ್ತು ಆ ಹೆಸರು ಒಂದೇ ಒಂದು ಸಾರಿ ಉಪಯೋಗಿಸಲಾಗಿದ್ದರೆ, ಹೆಸರನ್ನು ಪ್ರತಿ ಮಾಡುವ ಬದಲು ಹೆಸರಿನ ಅರ್ಥವನ್ನು ಭಾಷಾಂತರ ಮಾಡಬೇಕು.

…“ಆತನು ನನ್ನನ್ನು ನೋಡಿದ ನಂತರವೂ ನಾನು ನಿಜವಾಗಿಯೂ ನಿರಂತರವಾಗಿ ನೋಡುತ್ತಿದ್ದೇನಲ್ಲಾ?” ಎಂದು ಅವಳು ಹೇಳಿದಳು. ಆದುದರಿಂದ ಆ ಬಾವಿಯನ್ನು ಬೀರ್‌ಲಹೈರೋಯಿ ಎಂದು ಕರೆಯುತ್ತಾರೆ; (ಆದಿಕಾಂಡ 16:13-14 ULT)

…“ಆತನು ನನ್ನನ್ನು ನೋಡಿದ ನಂತರವೂ ನಾನು ನಿಜವಾಗಿಯೂ ನಿರಂತರವಾಗಿ ನೋಡುತ್ತಿದ್ದೇನಲ್ಲಾ?” ಎಂದು ಅವಳು ಹೇಳಿದಳು. ಆದುದರಿಂದ ಆ ಬಾವಿಯನ್ನು ನನ್ನನ್ನು ನೋಡುವ ಜೀವಸ್ವರೂಪನ ಬಾವಿ ಎಂದು ಕರೆಯುತ್ತಾರೆ.

(4) ಒಬ್ಬ ವ್ಯಕ್ತಿಗೆ ಅಥವಾ ಒಂದು ಸ್ಥಳಕ್ಕೆ ಎರಡು ವಿಭಿನ್ನ ಹೆಸರು ಇದ್ದರೆ ಒಂದು ಹೆಸರನ್ನು ಎಲ್ಲಾ ಸಮಯದಲ್ಲಿ ಬಳಸಿರಿ, ಮತ್ತು ಒಂದಕ್ಕಿಂತ ಹೆಚ್ಚು ಹೆಸರಿರುವ ವ್ಯಕ್ತಿ ಅಥವಾ ಸ್ಥಳದ ಬಗ್ಗೆ ವಾಕ್ಯಭಾಗವು ತಿಳಿಸುವಾಗ ಅಥವಾ ಒಬ್ಬ ವ್ಯಕ್ತಿಗೆ ಅಥವಾ ಸ್ಥಳಕ್ಕೆ ಈ ಹೆಸರನ್ನು ಏಕೆ ನೀಡಲಾಯಿತು ಎಂದು ತಿಳಿಸುವಾಗ ಮಾತ್ರ ಇನ್ನೊಂದು ಹೆಸರನ್ನು ಬಳಸಿರಿ. ಮೂಲ ವಾಕ್ಯಭಾಗದಲ್ಲಿ ಈ ಹೆಸರುಗಳನ್ನು ಅಷ್ಟೇನು ಹೆಚ್ಚು ಸಲ ಬಳಸದಿದ್ದರೆ ಅಡಿ ಟಿಪ್ಪಣಿಯಲ್ಲಿ ಈ ಬಗ್ಗೆ ನಮೂದಿಸಿರಿ. ಉದಾಹರಣೆಗೆ ಪೌಲನನ್ನು “ಸೌಲ” ಎಂದು ಆ.ಕೃ. 13ನೇ ಅಧ್ಯಾಯದವರೆಗೆ ಕರೆದು 13ನೇ ಅಧ್ಯಾಯದ ನಂತರ ಪೌಲ ಎಂದು ಕರೆಯಲಾಗಿದೆ. ನೀವು ಭಾಷಾಂತರಿಸುವಾಗ ಅವನ ಹೆಸರನ್ನು ಪೌಲನೆಂದೇ ಎಲ್ಲಾ ಸಮಯದಲ್ಲೂ ಬಳಸಬಹುದು ಆದರೆ ಆ.ಕೃ 13:9 ರಲ್ಲಿ ಅವನಿಗೆ ಎರಡು ಹೆಸರುಗಳಿವೆ ಎಂದು ಹೇಳುವಾಗ ಮಾತ್ರ ಎರಡು ಹೆಸರುಗಳನ್ನು ಬಳಸಿರಿ.

ಸೌಲ ಎಂಬ ಹೆಸರುಳ್ಳ ಒಬ್ಬ ಯೌವನಸ್ಥನು (ಅಪೊಸ್ತಲರ ಕೃತ್ಯಗಳು 7:58 ULT)

ಪೌಲ ಎಂಬ ಹೆಸರುಳ್ಳ ಒಬ್ಬ ಯೌವನಸ್ಥನು

ಅಡಿಟಿಪ್ಪಣಿಯಲ್ಲಿ ಈ ರೀತಿ ಕಂಡುಬರಬಹುದು:

[1] ಇಲ್ಲಿ ಅನೇಕ ಪ್ರತಿಗಳಲ್ಲಿ ಸೌಲ ಎಂದು ಇದೆ. ಆದರೆ ಅನೇಕ ಸಮಯದಲ್ಲಿ ಸತ್ಯವೇದದಲ್ಲಿ ಅವನನ್ನು ಪೌಲನೆಂದು ಕರೆಯಲಾಗಿದೆ.

ಆದರೆ ಪೌಲ ಎಂದು ಕರೆಯಲ್ಪಡುವ ಸೌಲನು ಪವಿತ್ರಾತ್ಮಭರಿತನಾದನು, (ಅಪೊಸ್ತಲರ ಕೃತ್ಯಗಳು 13:9)

ಆದರೆ ಪೌಲ ಎಂದು ಕರೆಯಲ್ಪಡುವ ಸೌಲನು ಪವಿತ್ರಾತ್ಮಭರಿತನಾದನು,

(5) ಅಥವಾ ಒಬ್ಬ ವ್ಯಕ್ತಿ ಅಥವಾ ಒಂದು ಸ್ಥಳಕ್ಕೆ ಎರಡು ವಿಭಿನ್ನ ಹೆಸರುಗಳಿದ್ದರೆ ಮೂಲ ವಾಕ್ಯಭಾಗದಲ್ಲಿರುವ ಹೆಸರನ್ನು ಬಳಸಿಕೊಳ್ಳಿರಿ ಮತ್ತು ಇನ್ನೊಂದು ಹೆಸರಿನ ಬಗ್ಗೆ ಅಡಿ ಟಿಪ್ಪಣಿಯಲ್ಲಿ ವಿವರಿಸಿ ಬರೆದಿಡಿ.

ಸೌಲ ಎಂಬ ಹೆಸರುಳ್ಳ ಒಬ್ಬ ಯೌವನಸ್ಥನು (ಅಪೊಸ್ತಲರ ಕೃತ್ಯಗಳು 7:58 ULT)

ಪೌಲ ಎಂಬ ಹೆಸರುಳ್ಳ ಒಬ್ಬ ಯೌವನಸ್ಥನು

ಅಡಿಟಿಪ್ಪಣಿಯಲ್ಲಿ ಈ ರೀತಿ ಕಂಡುಬರಬಹುದು:

[1] ಇದೇ ಮನುಷ್ಯನನ್ನು ಅಪೋಸ್ತಲರ ಕೃತ್ಯಗಳ 13 ನೇ ಅಧ್ಯಾಯ ಪ್ರಾರಂಭದಿಂದ ಪೌಲನೆಂದು ಕರೆಯಲಾಗಿದೆ.

ಅನಂತರದ ಕಥೆಯಲ್ಲಿ ನೀವು ರೀತಿ ಭಾಷಾಂತರಿಸಬಹುದು:

ಆದರೆ ಪೌಲ ಎಂದು ಕರೆಯಲ್ಪಡುವ ಸೌಲನು ಪವಿತ್ರಾತ್ಮಭರಿತನಾದನು, (ಅಪೊಸ್ತಲರ ಕೃತ್ಯಗಳು 13:9)

ಆದರೆ ಪೌಲ ಎಂದು ಕರೆಯಲ್ಪಡುವ ಸೌಲನು ಪವಿತ್ರಾತ್ಮಭರಿತನಾದನು,

ಕಥೆಯಲ್ಲಿ ಹೆಸರು ಬದಲಾವಣೆ ಮಾಡಿರುವಂಥದ್ದನ್ನು ವಿವರಿಸಿದ ನಂತರ, ನೀವು ಈ ರೀತಿ ಭಾಷಾಂತರಿಸಬಹುದು.

ಇಕೋನ್ಯದಲ್ಲಿ ಪೌಲನು ಮತ್ತು ಬಾರ್ನಬನು ಯೆಹೂದ್ಯರ ಸಭಾಮಂದಿರದೊಳಗೆ ಪ್ರವೇಶಿಸಿದರು (ಅಪೋಸ್ತಲರ ಕೃತ್ಯಗಳು 14:1 ULT)

ಇಕೋನ್ಯದಲ್ಲಿ ಪೌಲನು 1 ಮತ್ತು ಬಾರ್ನಬನು ಯೆಹೂದ್ಯರ ಸಭಾಮಂದಿರದೊಳಗೆ ಪ್ರವೇಶಿಸಿದರು

ಅಡಿಟಿಪ್ಪಣಿಯು ಈ ರೀತಿ ಕಂಡುಬರುತ್ತದೆ:

[1] ಈ ಮನುಷ್ಯನನ್ನೇ ಅಪೊಸ್ತಲರ ಕೃತ್ಯಗಳ 13 ನೇ ಅಧ್ಯಾಯಕ್ಕಿಂತ ಮೊದಲು ಸೌಲನೆಂದು ಕರೆಯಲಾಗಿತ್ತು.


ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ

Translation Manual :: Just-in-Time Learning Modules :: Unknowns :: Assumed Knowledge and Implicit Information
  • ಮಾತನಾಡುವವನು ತಾನು ಮಾತನಾಡುವ ಮತ್ತು ಅವರಿಗೆ ಕೆಲವೊಂದು ಮಾಹಿತಿಯನ್ನು ನೀಡುವ ಮೊದಲೇ ತನ್ನ ಶ್ರೋತೃಗಳಿಗೆ ಅದು ತಿಳಿದಿದೆ ಎಂದು ಊಹಿಸಿಕೊಳ್ಳುವಂಥ ಎಲ್ಲವು ಕಲ್ಪಿತ ಜ್ಞಾನ ಆಗಿದೆ. ಮಾತನಾಡುವವನು ಈ ಮಾಹಿತಿಯನ್ನು ಶ್ರೋತೃಗಳಿಗೆ ಕೊಡುವುದಿಲ್ಲ ಏಕೆಂದರೆ ಅದು ಈಗಾಗಲೇ ಅವರಿಗೆ ತಿಳಿದಿದೆ ಎಂದು ಅವನು ಭಾವಿಸುತ್ತಾನೆ.

  • ಮಾತನಾಡುವವನು ಶ್ರೋತೃಗಳಿಗೆ ಮಾಹಿತಿಯನ್ನು ಕೊಡುವಾಗ ಅವನು ಎರಡು ರೀತಿಯಲ್ಲಿ ಮಾಹಿತಿಯನ್ನು ನೀಡುತ್ತಾನೆ:

  • ಸ್ಪಷ್ಟವಾದ ಮಾಹಿತಿ ಎಂದರೆ ಮಾತನಾಡುವವನು ನೇರವಾಗಿ ವಿಷಯವನ್ನು ತಿಳಿಸುತ್ತಾನೆ.

  • ಸೂಚ್ಯ ಮಾಹಿತಿ ಎಂದರೆ ಮಾತನಾಡುವವನು ವಿಷಯವನ್ನು ನೇರವಾಗಿ ಹೇಳದೆ ತಾನು ಹೇಳುತ್ತಿರುವ ವಿಷಯವನ್ನು ತನ್ನ ಶ್ರೋತೃಗಳು ಕಲಿತುಕೊಳ್ಳಬೇಕೆಂದು ನಿರೀಕ್ಷಿಸುತ್ತಾನೆ.

ವಿವರಣೆ

ಒಬ್ಬನು ಬರೆಯುವಾಗ ಅಥವಾ ಮಾತನಾಡುವಾಗ ಯಾವುದಾದರೂ ನಿರ್ದಿಷ್ಟ ವಿಷಯವನ್ನು ಜನರು ತಿಳಿದುಕೊಳ್ಳಬೇಕು, ಮಾಡಬೇಕು ಅಥವಾ ಅದರ ಬಗ್ಗೆ ಯೋಚಿಸಬೇಕು ಎಂದು ಬಯಸುತ್ತಾನೆ. ಸಾಮಾನ್ಯವಾಗಿ ಅವನು ಇದನ್ನು ನೇರವಾಗಿ ಹೇಳುತ್ತಾನೆ. ಇದು ಸ್ಪಷ್ಟವಾದ ಮಾಹಿತಿ ಆಗಿದೆ.

ಇಲ್ಲಿ ಮಾತನಾಡುವ ವ್ಯಕ್ತಿ ತನ್ನ ಶ್ರೋತೃಗಳು ತಾನು ಹೇಳಬೇಕಾಗಿರುವ ವಿಷಯದ ಬಗ್ಗೆ ಈಗಾಗಲೇ ತಿಳಿದಿರುತ್ತಾರೆ ಮತ್ತು ತಾನು ಹೇಳುವ ಮಾಹಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು ಎಂದು ತಿಳಿದಿರುತ್ತಾನೆ. ಸಾಮಾನ್ಯವಾಗಿ ಅವನು ನೇರವಾಗಿ ಈ ವಿಚಾರವನ್ನು ತನ್ನ ಶ್ರೋತೃಗಳಿಗೆ ಹೇಳುವುದಿಲ್ಲ ಏಕೆಂದರೆ ಈಗಾಗಲೇ ಅವರಿಗೆ ಈ ವಿಷಯ ತಿಳಿದಿರುತ್ತದೆ. ಇದನ್ನು ಕಲ್ಪಿತ ಜ್ಞಾನ ಎಂದು ಕರೆಯುತ್ತಾರೆ.

ಮಾತನಾಡುವವನು ಎಲ್ಲವನ್ನು ಯಾವಾಗಲೂ ನೇರವಾಗಿ ಹೇಳುವುದಿಲ್ಲ ಅವನು ಹೇಳುವ ವಿಷಯದ ಒಳಾರ್ಥವನ್ನು ಅವರು ತಿಳಿಯಬೇಕು ಎಂದು ಭಾವಿಸುತ್ತಾನೆ. ಅವನು ನೇರವಾಗಿ ವಿಷಯವನ್ನು ಹೇಳದಿದ್ದರೂ ತಾನು ಹೇಳಿರುವ ವಿಚಾರಗಳಿಂದ ತಿಳಿದುಕೊಳ್ಳಬೇಕಾದ ಮಾಹಿತಿಗಳನ್ನು ಅವರು ತಿಳಿದುಕೊಳ್ಳಬೇಕೆಂದು ನಿರೀಕ್ಷಿಸುತ್ತಾನೆ, ಇದೇ ಸೂಚ್ಯ ಮಾಹಿತಿ ಆಗಿದೆ.

ಸಾಮಾನ್ಯವಾಗಿ ಶ್ರೋತೃಗಳು ಈ ಸೂಚ್ಯ ಮಾಹಿತಿಯನ್ನು ಅವರು ಈಗಾಗಲೇ ತಿಳಿದುಕೊಂಡಿರುವ ಮತ್ತು ಮಾತನಾಡುವವನು ನೇರವಾಗಿ ಹೇಳಿರುವಂಥ (ಕಲ್ಪಿತ ಜ್ಞಾನ) ಸ್ಪಷ್ಟವಾದ ಮಾಹಿತಿ ಜೊತೆಗೆ ಸೇರಿಸಿ ಅರ್ಥಮಾಡಿಕೊಳ್ಳುತ್ತಾರೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಈ ಎಲ್ಲಾ ಮೂರು ಮಾಹಿತಿಗಳು ಮಾತನಾಡುವವನ ಸಂದೇಶಗಳ ಭಾಗವಾಗಿದೆ. ಈ ಮೂರರಲ್ಲಿ ಒಂದು ತಪ್ಪಿದರೂ ಶ್ರೋತೃಗಳು ಮಾತನಾಡುವವನ ಸಂದೇಶದ ಉದ್ದೇಶವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಸತ್ಯವೇದವನ್ನು ಭಾಷಾಂತರಿಸುತ್ತಿರುವ ಭಾಷೆಯು ಸತ್ಯವೇದದ ಉದ್ದೀಷ್ಟ ಭಾಷೆಗಿಂತ ಭಿನ್ನವಾಗಿರುತ್ತದೆ ಮತ್ತು ಸದರಿ ಶ್ರೋತೃಗಳು ಸತ್ಯವೇದದ ಕಾಲಕ್ಕಿಂತ ವಿಭಿನ್ನವಾದ ಸಮಯ ಮತ್ತು ಬೇರೆ ಸ್ಥಳದಲ್ಲಿ ವಾಸಿಸುತ್ತಿರುವುದರಿಂದ ಇದು ಸಾಧ್ಯವಾಗುವುದಿಲ್ಲ ಅನೇಕಸಲ ಕಲ್ಪಿತ ಜ್ಞಾನ ಅಥವಾ ಸೂಚ್ಯ ಮಾಹಿತಿ ಸಂದೇಶದಿಂದ ಮರೆಯಾಗುವ ಸಾಧ್ಯತೆ ಇರುತ್ತದೆ. ಸತ್ಯವೇದ ಕಾಲದ ಮೂಲ ಲೇಖಕರು, ಶ್ರೋತೃಗಳು ತಿಳಿದಿರುವಂತೆ ಆಧುನಿಕ ಕಾಲದ ಓದುಗರಿಗೆ, ಶ್ರೋತೃಗಳಿಗೆ ಎಲ್ಲವೂ ತಿಳಿದಿರುವುದಿಲ್ಲ. ಸಂದೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಸಂಗತಿಗಳನ್ನು ನೀವು ವಾಕ್ಯಗಳ ಭಾಗದಲ್ಲಿ ಅಥವಾ ಅಡಿಟಿಪ್ಪಣಿಯಲ್ಲಿ ಸೇರಿಸಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು

ಆಗ ಒಬ್ಬ ಶಾಸ್ತ್ರಿಯು ಆತನ ಬಳಿಗೆ ಬಂದು, “ಗುರುವೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನ ಹಿಂಬಾಲಿಸುತ್ತೇನೆ” ಎಂದು ಹೇಳಿದನು. ಯೇಸು ಅವನಿಗೆ “ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿವೆ ಗೂಡುಗಳಿವೆ, ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಎಂದು ಹೇಳಿದನು. (ಮತ್ತಾಯ 8:20 ULT)

ಯೇಸು ನರಿಗಳು ಮತ್ತು ಪಕ್ಷಿಗಳು ಗುದ್ದುಗಳನ್ನು, ಗೂಡುಗಳನ್ನು ಏಕೆ ಉಪಯೋಗಿಸುತ್ತವೆ ಎಂಬುದನ್ನು ಹೇಳಲಿಲ್ಲ, ಏಕೆಂದರೆ ನರಿಗಳು ಗವಿ ಗುದ್ದುಗಳಲ್ಲಿ ಪಕ್ಷಿಗಳು ಗೂಡುಗಳಲ್ಲಿ ವಾಸಿಸುತ್ತವೆ ಎಂದು ಆ ಶಾಸ್ತ್ರಿಗೆ ತಿಳಿದಿದೆ ಎಂದು ಆತನು ಕಲ್ಪಿಸಿಕೊಂಡನು. ಇದು ಕಲ್ಪಿತ ಜ್ಞಾನ ಅಗಿದೆ.

ಯೇಸು ಇಲ್ಲಿ “ನಾನೇ ಮನುಷ್ಯಕುಮಾರನು” ಎಂದು ನೇರವಾಗಿ ಹೇಳಲಿಲ್ಲ, ಆದರೆ ಆ ಶಾಸ್ತ್ರಿಗೆ ಇದು ತಿಳಿಯದೇ ಇದ್ದರೆ, ಆಗ ಈ ವಿಷಯವು ಯೇಸು ತನ್ನ ಕುರಿತಾಗಿ ಈ ರೀತಿಯಾಗಿ ಸೂಚಿಸಿದನು ಎಂದು ಅವನು ಕಲಿತುಕೊಳ್ಳಬಹುದಾದ ಸೂಚ್ಯ ಮಾಹಿತಿ ಆಗುವುದು. ಇದಲ್ಲದೆ ಯೇಸು ಇಲ್ಲಿ ಪ್ರಯಾಣ ಮಾಡಿದ ಕಡೆಗಳಲ್ಲೆಲ್ಲಾ ರಾತ್ರಿಯಲ್ಲಿ ಮಲಗಲು ತನಗಾಗಿ ಮನೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಲಿಲ್ಲ. ಇದು ತಲೆ ಇಡುವಷ್ಟು ಸ್ಥಳವೂ ಇಲ್ಲ ಎಂದು ಯೇಸು ಹೇಳಿದಾಗ ಆ ಶಾಸ್ತ್ರೀಯು ಕಲಿತುಕೊಳ್ಳಬಹುದಾದಂಥ ಸೂಚ್ಯ ಮಾಹಿತಿ ಆಗಿದೆ.

ಅಯ್ಯೋ ಖೊರಾಜಿನೇ! ಅಯ್ಯೋ ಬೇತ್ಸಾಯಿದವೇ! ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೆ ಗೋಣಿತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕುಳಿತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು. ಆದರೆ ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತೂರ್, ಸಿದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು ಎಂದು ನಿಮಗೆ ಹೇಳುತ್ತೇನೆ. (ಮತ್ತಾಯ 11:21, 22 ULT)

ತಾನು ಮಾತನಾಡುತ್ತಿರುವ ಜನರಿಗೆ ತೂರ್ ಮತ್ತು ಸಿದೋನ್ ಪಟ್ಟಣಗಳು ತುಂಬಾ ದುಷ್ಟ ಪಟ್ಟಣಗಳಾಗಿದ್ದವು ಮತ್ತು ನ್ಯಾಯವಿಚಾರಣೆಯ ದಿನ ಎಂದರೆ ಎಲ್ಲಾ ಜನರಿಗೆ ನ್ಯಾಯತೀರ್ಪು ಮಾಡುವ ಸಮಯ ಎಂದು ಆ ಜನರಿಗೆ ತಿಳಿದಿದೆ ಎಂದು ಯೇಸು ಭಾವಿಸಿದ್ದನು. ಯೇಸುವಿಗೆ ತಾನು ಯಾರೊಂದಿಗೆ ಮಾತನಾಡುತ್ತಿದ್ದೇನೋ ಆ ಜನರು ಒಳ್ಳೆಯವರು ಮತ್ತು ಪಶ್ಚಾತ್ತಾಪ ಪಡುವ ಅವಶ್ಯಕತೆ ಇಲ್ಲ ಎಂದು ನಂಬುವವರಾಗಿದ್ದರು ಎಂದು ತಿಳಿದಿತ್ತು. ಯೇಸು ಈ ವಿಷಯಗಳನ್ನು ಅವರಿಗೆ ಹೇಳುವ ಅವಶ್ಯಕತೆ ಇರಲ್ಲಿಲ್ಲ. ಇದೆಲ್ಲವೂ ಕಲ್ಪಿತ ಜ್ಞಾನ ಆಗಿದೆ.

ಸೂಚ್ಯ ಮಾಹಿತಿ ಯ ಬಹು ಮುಖ್ಯವಾದ ಅಂಶವೆಂದರೆ, ಆತನು ಮಾತನಾಡುತ್ತಿರುವ ಜನರು ಪಶ್ಚಾತ್ತಾಪ ಪಡದಿದ್ದರೆ ನ್ಯಾಯ ವಿಚಾರಣೆಯ ಸಂದರ್ಭದಲ್ಲಿ ತೂರ್ ಮತ್ತು ಸಿದೋನ್ ಪಟ್ಟಣದ ಜನರಿಗಿಂತ ಬಹು ಘೋರವಾದ ನ್ಯಾಯ ತೀರ್ಪು ಆಗುತ್ತದೆ ಎಂಬುದು.

ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಉಲ್ಲಂಘಿಸುತ್ತಾರೆ? ಅವರು ಊಟ ಮಾಡುವಾಗ ಅವರು ತಮ್ಮ ಕೈ ತೊಳೆದುಕೊಳ್ಳುವುದಿಲ್ಲ. (ಮತ್ತಾಯ 15:2 ULT)

ಹಿರಿಯರಿಂದ ಬಂದ ಸಂಪ್ರದಾಯಗಳ ಪೈಕಿ ಒಂದು ಜನರು ತಾವು ಧಾರ್ಮಿಕ ಸಂಸ್ಕಾರದ ರೀತಿಯಲ್ಲಿ ಸ್ವಚ್ಛವಾಗಿರುವುದಕ್ಕಾಗಿ ಊಟಮಾಡುವ ಮೊದಲು ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಿದ್ದರು. ನೀತಿವಂತರಾಗಿರುವುದಕ್ಕಾಗಿ ಹಿರಿಯರ ಸಂಪ್ರದಾಯವನ್ನು ಪಾಲಿಸಬೇಕು ಎಂದು ಜನರು ಅಂದುಕೊಂಡಿದ್ದರು. ಇದು ಕಲ್ಪಿತ ಜ್ಞಾನ ಆಗಿದೆ, ಯೇಸುವಿನೊಂದಿಗೆ ಮಾತನಾಡುತ್ತಿದ್ದ ಫರಿಸಾಯರು ಈ ವಿಷಯದ ಬಗ್ಗೆ ಆತನು ತಿಳಿದುಕೊಳ್ಳಬೇಕೆಂದು ಬಯಸಿದರು. ಇದನ್ನು ಹೇಳುವ ಮೂಲಕ ಆತನ ಶಿಷ್ಯರು ಸಂಪ್ರದಾಯವನ್ನು ಪಾಲಿಸುತ್ತಿಲ್ಲ ಆದ್ದರಿಂದ ನೀತಿವಂತರಾಗಿಲ್ಲ ಎಂದು ಅವರು ಆರೋಪಿಸುತ್ತಿದ್ದರು. ಇದು ಅವರು ಹೇಳುತ್ತಿರುವುದನ್ನು ಆತನು ಅರ್ಥಮಾಡಿಕೊಳ್ಳಬೇಕೆಂದು ಬಯಸಿದ್ದಂಥ ಸೂಚ್ಯ ಮಾಹಿತಿ ಅಗಿದೆ.

ಭಾಷಾಂತರದ ಕಾರ್ಯತಂತ್ರಗಳು

ಓದುಗರಿಗೆ ಸ್ಪಷ್ಟವಾದ ಮಾಹಿತಿಯೊಂದಿಗೆ ಬರುವಂಥ ಮುಖ್ಯ ಸೂಚ್ಯ ಮಾಹಿತಿಯ ಮೂಲಕ ಸಂದೇಶವನ್ನು ಅರ್ಥಮಾಡಿಕೊಳ್ಳುವಷ್ಟು ಕಲ್ಪಿತ ಜ್ಞಾನ ಇರುವುದಾದರೆ, ಆಗ ಜ್ಞಾನವನ್ನು ವಿವರಿಸದೆ ಹಾಗೆಯೇ ಉಳಿಸಿಕೊಳ್ಳಬಹುದು ಮತ್ತು ಸೂಚ್ಯ ಮಾಹಿತಿಯನ್ನು ಸೂಚ್ಯವಾಗಿಯೇ ಉಳಿಸಿಕೊಳ್ಳಬಹುದು. ಇವುಗಳಲ್ಲಿ ಒಂದು ಇಲ್ಲದಿರುವುದ್ದರಿಂದ ಓದುಗರಿಗೆ ಈ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಈ ಕೆಳಗಿರುವ ಕಾರ್ಯತಂತ್ರಗಳನ್ನು ಬಳಸಿರಿ:

  1. ಓದುಗರಿಗೆ ಕಲ್ಪಿತ ಜ್ಞಾನವಿಲ್ಲದ ಕಾರಣ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸ್ಪಷ್ಟವಾದ ಮಾಹಿತಿಯನ್ನು ಒದಗಿಸಿಕೊಡಬಹುದು.
  2. ಓದುಗರಿಗೆ ಸೂಚ್ಯ ಮಾಹಿತಿಯಿಲ್ಲದ ಕಾರಣ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸ್ಪಷ್ಟವಾದ ಮಾಹಿತಿ ನೀಡಿ ಅರ್ಥವಾಗುವಂತೆ ಮಾಡಬೇಕು. ಆದರೆ ಮೂಲ ಓದುಗರಿಗೆ ಈ ಮಾಹಿತಿಯು ಹೊಸದಾಗಿತ್ತು ಎಂಬ ಅರ್ಥವನ್ನು ಕೊಡದಂತೆ ಪ್ರಯತ್ನಿಸಬೇಕು.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಓದುಗರಿಗೆ ಕಲ್ಪಿತ ಜ್ಞಾನವಿಲ್ಲದ ಕಾರಣ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸ್ಪಷ್ಟವಾದ ಮಾಹಿತಿಯನ್ನು ಒದಗಿಸಿಕೊಡಬಹುದು.

ಯೇಸು ಅವರಿಗೆ, “ನರಿಗಳಿಗೆ ಗುದ್ದುಗಳಿವೆ, ಮತ್ತು ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ, ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಎಂದು ಹೇಳಿದನು. (ಮತ್ತಾಯ 8:20 ULT) ನರಿಗಳು ಗುದ್ದುಗಳಲ್ಲಿ ಮಲಗುತ್ತವೆ, ಮತ್ತು ಪಕ್ಷಿಗಳು ಗೂಡುಗಳಲ್ಲಿ ಮಲಗುತ್ತವೆ ಎಂಬುದು ಕಲ್ಪಿತ ಜ್ಞಾನವಾಗಿದೆ.

ಯೇಸು ಅವರಿಗೆ, “ನರಿಗಳಿಗೆ ವಾಸಿಸುವುದಕ್ಕೆ ಗುದ್ದುಗಳಿವೆ, ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ವಾಸಿಸುವುದಕ್ಕೆ ಗೂಡುಗಳಿವೆ, ಆದರೆ ಮನುಷ್ಯಕುಮಾರನಿಗೆ ತಲೆ ಇಟ್ಟು ನಿದ್ರಿಸಲು ಸ್ಥಳವಿಲ್ಲ” ಎಂದು ಹೇಳಿದನು.

ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತೂರ್, ಸಿದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು (ಮತ್ತಾಯ 11:22 ULT) - ತೂರ್ ಮತ್ತು ಸಿದೋನ್ ಜನರು ತುಂಬಾ ತುಂಬಾ ದುಷ್ಟರಾಗಿದ್ದಾರೆ ಎಂಬುದು ಕಲ್ಪಿತ ಜ್ಞಾನವಾಗಿದೆ. ಇದನ್ನು ಸ್ಪಷ್ಟವಾಗಿ ಹೇಳಬಹುದು.

… ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತುಂಬಾ ದುಷ್ಟರಾಗಿದ್ದ ತೂರ್ ಮತ್ತು ಸಿದೋನ್ ಪಟ್ಟಣಗಳ ಜನರ, ಗತಿಯು ಮೇಲಾಗಿರುವುದು.
ಅಥವಾ:
…ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ದುಷ್ಟ ಪಟ್ಟಣಗಳಾದ ತೂರ್ ಮತ್ತು ಸಿದೋನ್, ಗತಿಯು ಮೇಲಾಗಿರುವುದು.

ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಉಲ್ಲಂಘಿಸುತ್ತಾರೆ? ಏಕೆಂದರೆ ಅವರು ಊಟ ಮಾಡುವಾಗ ಅವರು ತಮ್ಮ ಕೈ ತೊಳೆದುಕೊಳ್ಳುವುದಿಲ್ಲ. (ಮತ್ತಾಯ 15:2 ULT) – ಇದರಲ್ಲಿ ಕಲ್ಪಿತ ಜ್ಞಾನವೆಂದರೆ ಹಿರಿಯರಿಂದ ಬಂದ ಸಂಪ್ರದಾಯಗಳ ಪೈಕಿ ಒಂದು ಜನರು ತಾವು ಧಾರ್ಮಿಕ ಸಂಸ್ಕಾರದ ರೀತಿಯಲ್ಲಿ ಸ್ವಚ್ಛವಾಗಿರುವುದಕ್ಕಾಗಿ ಊಟಮಾಡುವ ಮೊದಲು ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಿದ್ದರು. ನೀತಿವಂತರಾಗಿರುವುದಕ್ಕಾಗಿ ಹಿರಿಯರ ಸಂಪ್ರದಾಯವನ್ನು ಮಾಡಬೇಕಾಗಿತ್ತು. ಆಧುನಿಕ ಕಾಲದ ಓದುಗರು ತಿಳಿದಂತೆ ಊಟಮಾಡುವ ಮೊದಲು ಕೈ ತೊಳೆಯುವುದರಿಂದ ಕೈಗಳಲ್ಲಿರುವ ಕ್ರಿಮಿ, ಬ್ಯಾಕ್ಟೀರಿಯಾಗಳಿಂದ ಮುಕ್ತವಾಗುವುದಕ್ಕಾಗಿ ಅಲ್ಲ.

ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಉಲ್ಲಂಘಿಸುತ್ತಾರೆ? ಏಕೆಂದರೆ ಅವರು ಊಟಮಾಡುವಾಗ ಅವರು ನೀತಿಯ ಕರ್ಮಾಚರಣೆಯ ಪ್ರಕಾರ ವಿಧ್ಯುಕ್ತವಾದ ರೀತಿಯಲ್ಲಿ ಅನುಸರಿಸುವುದಿಲ್ಲ.

(2) ಓದುಗರಿಗೆ ಸೂಚ್ಯ ಮಾಹಿತಿಯಿಲ್ಲದ ಕಾರಣ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸ್ಪಷ್ಟವಾದ ಮಾಹಿತಿ ನೀಡಿ ಅರ್ಥವಾಗುವಂತೆ ಮಾಡಬೇಕು. ಆದರೆ ಮೂಲ ಓದುಗರಿಗೆ ಈ ಮಾಹಿತಿಯು ಹೊಸದಾಗಿತ್ತು ಎಂಬ ಅರ್ಥವನ್ನು ಕೊಡದಂತೆ ಪ್ರಯತ್ನಿಸಬೇಕು.

ಆಗ ಒಬ್ಬ ಶಾಸ್ತ್ರಿಯು ಆತನ ಬಳಿಗೆ ಬಂದು, “ಗುರುವೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನ ಹಿಂಬಾಲಿಸುತ್ತೇನೆ” ಎಂದು ಹೇಳಿದನು. ಯೇಸು ಅವನಿಗೆ “ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿವೆ ಗೂಡುಗಳಿವೆ, ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಎಂದು ಹೇಳಿದನು. (ಮತ್ತಾಯ 8:20 ULT) – ಇಲ್ಲಿ ಯೇಸು ಮನುಷ್ಯಕುಮಾರನಾಗಿದ್ದಾನೆ ಎಂಬುದು ಸೂಚ್ಯ ಮಾಹಿತಿಯಾಗಿದೆ. ಆ ಶಾಸ್ತ್ರಿಯು ಯೇಸುವನ್ನು ಹಿಂಬಾಲಿಸಲು ಬಯಸಿದರೆ ಅವನು ಯೇಸುವಿನಂತೆ ಮನೆ ಇಲ್ಲದೆ ಜೀವಿಸಬೇಕು ಎಂಬುದು ಇನ್ನೊಂದು ಸೂಚ್ಯ ಮಾಹಿತಿಯಾಗಿದೆ.

ಯೇಸು ಅವನಿಗೆ, “ನರಿಗಳಿಗೆ ಗುದ್ದುಗಳಿವೆ ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಗೂಡುಗಳಿವೆ ಮತ್ತು ಮನುಷ್ಯಕುಮಾರನಾದ ನನಗೆ, ವಿಶ್ರಾಂತಿ ಪಡೆಯಲು ಮನೆ ಇಲ್ಲ. ನೀನು ನನ್ನನ್ನು ಹಿಂಬಾಲಿಸಿ ಬಯಸುವುದಾದರೆ ನನ್ನಂತೆಯೇ ನೀನು ಜೀವಿಸಬೇಕು” ಎಂದು ಹೇಳಿದನು.

ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತೂರ್, ಸಿದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು (ಮತ್ತಾಯ 11:22 ULT) – ದೇವರು ಜನರಿಗೆ ನ್ಯಾಯತೀರ್ಪು ಮಾಡುವುದು ಮಾತ್ರವಲ್ಲ ಆತನು ಅವರನ್ನು ಶಿಕ್ಷಿಸುತ್ತಾನೆ ಎಂಬುದು ಸೂಚ್ಯ ಮಾಹಿತಿ. ಇದನ್ನು ಸ್ಪಷ್ಟಪಡಿಸಿ ಹೇಳಬಹುದು.

ನ್ಯಾಯ ವಿಚಾರಣೆಯ ದಿನದಂದು ದೇವರು ತುಂಬಾ ದುಷ್ಟರಾಗಿರುವ ತೂರ್ ಮತ್ತು ಸಿದೋನ್ ಪಟ್ಟಣದ ಜನರನ್ನು ಶಿಕ್ಷಿಸುವನು, ಆದರೆ ನಿಮ್ಮನ್ನು ಶಿಕ್ಷಿಸುವುದಕ್ಕಿಂತ ಅತಿ ಕಡಿಮೆಯಾಗಿ ಶಿಕ್ಷಿಸುವನು.
ಅಥವಾ:
ನ್ಯಾಯ ವಿಚಾರಣೆಯ ದಿನದಲ್ಲಿ ದುಷ್ಟರಾದ ತೂರ್ ಮತ್ತು ಸಿದೋನ್ ಪಟ್ಟಣದ ಜನರಿಗಿಂತ ನಿಮ್ಮನ್ನು ದೇವರು ಬಹು ಘೋರವಾಗಿ ಶಿಕ್ಷಿಸುವನು.

ಆಧುನಿಕ ಕಾಲದ ಜನರಿಗೆ ಸತ್ಯವೇದ ಕಾಲದ ಜನರಿಗೆ ಮತ್ತು ಮೊದಲ ಓದುಗರಿಗೆ ಗೊತ್ತಿರುವ ವಿಷಯಗಳು ತಿಳಿಯದೆ ಇರಬಹುದು. ಇದು ಮಾತನಾಡುವವನು ಅಥವಾ ಬರಹಗಾರನು ಹೇಳುವಂಥದ್ದನ್ನು ಅರ್ಥಮಾಡಿಕೊಳ್ಳಲು ಮತ್ತು ಸೂಚ್ಯ ಮಾಹಿತಿಗಳನ್ನು ತಿಳಿದುಕೊಳ್ಳಲು ಕಷ್ಟವಾಗಬಹುದು. ಭಾಷಾಂತರಗಾರರು ಭಾಷಾಂತರ ಮಾಡುವಾಗ ಮೂಲ ಲೇಖಕನು ಅಥವಾ ಮಾತನಾಡುವವನು ಸೂಚ್ಯವಾಗಿ ಇಟ್ಟಿರುವ ಕೆಲವು ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಬೇಕು.


ಸ್ಪಷ್ಟವಾದ ಮಾಹಿತಿಯನ್ನು ಸೂಚ್ಯವಾಗಿ ಹೇಳುವುದು.

Translation Manual :: Just-in-Time Learning Modules :: Unknowns :: Making Assumed Knowledge and Implicit Information Explicit

ವಿವರಣೆ

ಕೆಲವು ಭಾಷೆಯಲ್ಲಿ ಕೆಲವು ವಿಷಯಗಳನ್ನು ಸಹಜವಾಗಿ ಇರುವಂತೆಯೇ ತಿಳಿಸುತ್ತಾರೆ. ಆದರೆ ಬೇರೆ ಭಾಷೆಗೆ ಭಾಷಾಂತರಿಸಿದಾಗ ಅದು ಬೇರೆ ರೀತಿಯ ಅರ್ಥವನ್ನು ನೀಡಬಹುದು. ಇದಕ್ಕೆ ಕಾರಣ ಕೆಲವು ಭಾಷೆಯಲ್ಲಿ ಕೆಲವು ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಬಹುದು ಇನ್ನೂ ಕೆಲವು ಭಾಷೆಯಲ್ಲಿ ಇದೇ ವಿಷಯಗಳನ್ನು ಸೂಚ್ಯವಾಗಿ ಧ್ವನಿಸುವಂತೆ ತಿಳಿಸಬಹುದು.

ಇದಕ್ಕೆ ಕಾರಣ ಇದೊಂದು ಭಾಷಾಂತರ ಸಮಸ್ಯೆ.

ನೀವು ಭಾಷಾಂತರ ಮಾಡುವಾಗ ಮೂಲ ಭಾಷೆಯಲ್ಲಿ ಇರುವ ಮಾಹಿತಿಯನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿ (ವಾಚ್ಯವಾಗಿ) ತಿಳಿಸಿದರೆ ಅದು ಅಸಹಜವಾಗಿ, ಅಪ್ರಬುದ್ಧವಾಗಿ ಅರ್ಥಕೊಡಬಹುದು. ಇದು ಸಾಮಾನ್ಯವಾಗಿ ಭಾಷಾಂತರವಾದ ಭಾಷೆಯಲ್ಲಿ ವಿವರವಾಗಿ ಮಾಹಿತಿ ನೀಡದಿದ್ದರೆ ಆಗುವ ಪ್ರಮಾದ. ಅದರ ಬದಲು ಭಾಷಾಂತರವಾಗುವ ಭಾಷೆಯಲ್ಲಿ ಸೂಚ್ಯವಾಗಿ ಧ್ವನಿಸುವಂತಹ ಮಾಹಿತಿಯನ್ನು ಹಾಗೆಯೆ ಉಳಿಸಿಕೊಳ್ಳುವುದು ಉತ್ತಮ.

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು

ಮತ್ತು ಅಭಿಮಲೇಕನು ಅಲ್ಲಿಗೆ ಯುದ್ಧಮಾಡುತ್ತಾ ಬಂದು ಬುರುಜಿನ ಬಾಗಿಲಿಗೆ ಬೆಂಕಿಹೊತ್ತಿಸಬೇಕೆಂದು ಅದರ ಸಮೀಪಕ್ಕೆ ಹೋದಾಗ. (ನ್ಯಾಯಸ್ಥಾಪಕರು 9:52 ESV)

ಹೀಬ್ರೂ ಭಾಷೆಯ ಸತ್ಯವೇದದಲ್ಲಿ ವಾಕ್ಯದ ಪ್ರಾರಂಭದಲ್ಲಿ “ಮತ್ತು” ಎಂಬ ಸಂಯುಕ್ತ ಪದವನ್ನು ಬಳಸಿ ಪ್ರಾರಂಭಿಸುವುದು ಸಹಜವಾಗಿರುತ್ತದೆ. ಹೀಗೆ ಬಳಸುವುದರಿಂದ ಹಿಂದಿನ ವಾಕ್ಯದೊಂದಿಗೆ ಸಂಬಂಧ ಬೆಸೆಯುತ್ತದೆ. ಆದರೆ ಇಂಗ್ಲೀಷಿನಲ್ಲಿ ಇಂತಹ ಬಳಕೆ ವ್ಯಾಕರಣ ಸಮ್ಮತವಲ್ಲ, ಓದುಗರಿಗೆ ಅರ್ಥಮಾಡಿಕೊಳ್ಳಲು ಶ್ರಮವೆನಿಸಬಹುದು ಮತ್ತು ಲೇಖಕರು ಅಷ್ಟೇನು ವಿದ್ಯಾವಂತರಲ್ಲ ಎಂಬ ಅಭಿಪ್ರಾಯ ಮೂಡಿಸಬಹುದು.

ಆದುದರಿಂದ ಇಂಗ್ಲೀಷಿನಲ್ಲಿ ಎರಡೂ ವಾಕ್ಯಗಳನ್ನು ಬೆಸೆಯಲು ಪ್ರಾರಂಭದಲ್ಲೇ ಬಳಸುವ ಸಂಯುಕ್ತ ಪದದ ಬಳಕೆಯನ್ನು ಬಿಡುವುದ ಒಳ್ಳೆಯದು. ಹಿಬ್ರೂ ಸತ್ಯವೇದದ ಪ್ರಕಾರ ಬೆಂಕಿಯೊಂದಿಗೆ ಉರಿದು ಹೋಯಿತು ಎಂಬುದು ಸಹಜವಾಗಿ ಹೇಳುವ ಮಾತು. ಇಂಗ್ಲೀಷಿನಲ್ಲಿ ಬೆಂಕಿಯೆಂಬ ಪದ ಕ್ರಿಯೆಯೊಂದಿಗೆ ಸೇರಿಕೊಂಡಿರುವುದರಿಂದ ಎರಡನ್ನೂಸ್ಪಷ್ಟವಾಗಿ ಹೇಳಲು ಬರುವುದಿಲ್ಲ ಇಲ್ಲಿ ಉರಿದು ಹೋಯಿತು ಎಂದು ಹೇಳಿದರೆ ಸಾಕು. ಬೆಂಕಿ ಎಂಬ ಪದವನ್ನು ಸೂಚ್ಯವಾಗಿ ಕೊಟ್ಟರೆ ಸಾಕು.

ಆ ಶತಾಧಿಪತಿಯು ಉತ್ತರಿಸಿ ಮತ್ತು ಹೇಳಿದ್ದೇನಂದರೆ ಕರ್ತನೇ, ನೀನು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ…” (ಮತ್ತಾಯ 8:8 ULT)

ಸತ್ಯವೇದದ ಭಾಷೆಯಲ್ಲಿ ಅಪರೋಕ್ಷ ಉದ್ಧರಣಾ ವಾಕ್ಯಗಳನ್ನು ಎರಡು ಕ್ರಿಯಾಪದಗಳೊಂದಿಗೆ ಬಳಸುವುದು ಸಹಜ. ಒಂದು ಕ್ರಿಯಾಪದ ಉದ್ದೇಶಿಸಿ ಮಾತನಾಡುವುದನ್ನು ಸೂಚಿಸುತ್ತದೆ. ಇನ್ನೊಂದು ಕ್ರಿಯಾಪದ ಮಾತನಾಡುವವನ ಪದಗಳನ್ನು ಸೂಚಿಸುತ್ತದೆ. ಇಂಗ್ಲೀಷ್ ಮಾತನಾಡುವವರು ಈ ರೀತಿಯ ಎರಡೂ ಕ್ರಿಯಾಪದಗಳ ಬಳಕೆ ಮಾಡುವುದನ್ನು ಅಸಹಜ ಮತ್ತು ಗೊಂದಲಮಯ ಎಂದು ಭಾವಿಸುತ್ತಾರೆ ಇಂಗ್ಲೀಷ್ ಮಾತನಾಡುವವರಿಗೆ ಮಾತನಾಡುವುದು ಮತ್ತು ಉತ್ತರಿಸುವುದು ಎರಡನ್ನೂ ಒಟ್ಟಾಗಿ ಸೇರಿಸಿ ಹೇಳುವುದು ಸುಲಭ. ಇಂಗ್ಲೀಷಿನಲ್ಲಿ ಎರಡು ಕ್ರಿಯಾಪದಗಳನ್ನು ಒಂದು ವಾಕ್ಯದಲ್ಲಿ ಬಳಸಿದರೆ ಒಂದು ಅರ್ಥಕೊಡುವ ಬದಲು ಎರಡು ಭಿನ್ನ ಕ್ರಿಯೆ ಬಗ್ಗೆ ಹೇಳಿದಂತೆ ಧ್ವನಿಸುತ್ತದೆ. ಆದುದರಿಂದ ಇಂಗ್ಲೀಷಿನಲ್ಲಿ ಒಂದೇ ಕ್ರಿಯಾಪದ ಬಳಸುವುದು ಉತ್ತಮ.

ಭಾಷಾಂತರದ ತಂತ್ರಗಳು

(1) ಮೂಲಭಾಷೆಯಲ್ಲಿರುವ ಮಾಹಿತಿ ಸ್ಪಷ್ಟವಾಗಿ ಹೇಳುವಂತಾದರೆ ಭಾಷಾಂತರಿಸುವ ಭಾಷೆಯಲ್ಲಿ ಸಹಜವಾಗಿ ಹೊಂದಿಕೊಳ್ಳುವಂತಿದ್ದರೆ ಆಗ ಸ್ಪಷ್ಟವಾಗಿರುವ ಮಾಹಿತಿಯನ್ನು ಹಾಗೆಯೇ ಉಳಿಸಿಕೊಂಡು ಭಾಷಾಂತರಿಸಬೇಕು.

(2) ಭಾಷಾಂತರ ಮಾಡುವ ಭಾಷೆಯಲ್ಲಿ ಸ್ಪಷ್ಟವಾಗಿ ಹೇಳುವ ಮಾಹಿತಿಯು ಸರಿಯಾದ ಅರ್ಥಕೊಡಲು, ಸಹಜತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅನಾವಶ್ಯಕ ಎನಿಸಿದರೆ ಅಥವಾ ಗೊಂದಲವಾಗಿದ್ದರೆ ಅದನ್ನು ಸೂಚ್ಯವಾಗಿ ಉಳಿಸಬೇಕು. ಪ್ರಸ್ತುತ ಇರುವ ವಿಷಯಕ್ಕೆ ಸರಿಯಾಗಿ ಹೊಂದಿಕೊಳ್ಳುವಂತಿದ್ದರೆ ಓದುಗರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಈ ರೀತಿ ಮಾಡುವುದು ಒಳ್ಳೆಯದು. ನೀವು ಓದುಗರನ್ನು ಓದಿರುವ ಕೆಲವು ವಾಕ್ಯಭಾಗಗಳನ್ನು ಹೆಸರಿಸಿ ಪ್ರಶ್ನೆಕೇಳುವುದರ ಮೂಲಕ ದೃಢಪಡಿಸಿಕೊಳ್ಳಬಹುದು.

ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

(1) ಮೂಲಭಾಷೆಯಲ್ಲಿರುವ ಮಾಹಿತಿ ಸ್ಪಷ್ಟವಾಗಿ ಹೇಳುವಂತಾದರೆ ಭಾಷಾಂತರಿಸುವ ಭಾಷೆಯಲ್ಲಿ ಸಹಜವಾಗಿ ಹೊಂದಿಕೊಳ್ಳುವಂತಿದ್ದರೆ ಆಗ ಪ್ರಕಟವಾಗಿರುವ ಮಾಹಿತಿಯನ್ನು ಹಾಗೆಯೇ ಉಳಿಸಿಕೊಂಡು ಭಾಷಾಂತರಿಸಬೇಕು

  • ಈ ತಂತ್ರವನ್ನು ಬಳಸಿದರೆ ವಾಕ್ಯಭಾಗದಲ್ಲಿ ಯಾವ ಬದಲಾವಣೆಗಳು ಆಗದಿರುವುದರಿಂದ ಯಾವ ಉದಾಹರಣೆಗಳನ್ನು ಇಲ್ಲಿ ಕೊಟ್ಟಿಲ್ಲ.

(2) ಭಾಷಾಂತರ ಮಾಡುವ ಭಾಷೆಯಲ್ಲಿ ಪ್ರಕಟವಾಗಿ ಹೇಳುವ ಮಾಹಿತಿಯು ಸರಿಯಾದ ಅರ್ಥಕೊಡಲು, ಸಹಜತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅನಾವಶ್ಯಕ ಎನಿಸಿದರೆ ಅಥವಾ ಗೊಂದಲವಾಗಿದ್ದರೆ ಅದನ್ನು ಸೂಚ್ಯವಾಗಿ ಉಳಿಸಬೇಕು. ಪ್ರಸ್ತುತ ಇರುವ ವಿಷಯಕ್ಕೆ ಸರಿಯಾಗಿ ಹೊಂದಿಕೊಳ್ಳುವಂತಿದ್ದರೆ ಓದುಗರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಈ ರೀತಿ ಮಾಡುವುದು ಒಳ್ಳೆಯದು. ನೀವು ಓದುಗರನ್ನು ಓದಿರುವ ಕೆಲವು ವಾಕ್ಯಭಾಗಗಳನ್ನು ಹೆಸರಿಸಿ ಪ್ರಶ್ನೆಕೇಳುವುದರ ಮೂಲಕ ದೃಢಪಡಿಸಿಕೊಳ್ಳಬಹುದು

ಮತ್ತು ಅಭಿಮಲೇಕನು ಬುರುಜಿನ ಬಾಗಿಲಿನವರೆಗೆ ಬಂದು ಯುದ್ಧಮಾಡಿ ಅದರ ಬಾಗಿಲಿನ ಹತ್ತಿರ ಬಂದು ಬೆಂಕಿಯಿಂದ ಸುಡಲು ನೋಡಿದ** (ನ್ಯಾಯಸ್ಥಾಪಕರು 9:52 ESV)

ಅಭಿಮಲೇಕನು ಬುರುಜಿನ ಬಳಿ ಬಂದು ಅವರೊಂದಿಗೆ ಯುದ್ಧಮಾಡಿದನು, ಬುರುಜಿನ ಬಾಗಿಲನ್ನು ಸುಟ್ಟು ಹಾಕಿದನು ಅಥವಾ …ಅದಕ್ಕೆ ಬೆಂಕಿ ಹಚ್ಚಲು.

ಇಂಗ್ಲೀಷಿನಲ್ಲಿ ಒಂದು ವಾಕ್ಯದ ಅರ್ಥಕ್ರಿಯೆ ಹಿಂದಿನ ವಾಕ್ಯದ ಅರ್ಥ, ಕ್ರಿಯೆಯನ್ನು ಅನುಸರಿಸುತ್ತದೆ. ಇದನ್ನು “ಮತ್ತು” ಎಂಬ ಸಂಯುಕ್ತ ಪದದಿಂದ ಪ್ರಾರಂಭಿಸುವ ಅಗತ್ಯವಿಲ್ಲ. ಅದನ್ನು ಬಿಟ್ಟು ವಾಕ್ಯಮಾಡಬಹುದು. ಇದರೊಂದಿಗೆ ಇಲ್ಲಿನ ವಾಕ್ಯದಲ್ಲಿರುವ “ಬೆಂಕಿ.” ಎಂಬ ಪದವನ್ನು ಸಹ ಬಿಟ್ಟು ವಾಕ್ಯ ಮಾಡಬಹುದು. ಏಕೆಂದರೆ “ಹೊತ್ತಿಸಲು.” “ಸುಡಲು.” ಎಂಬ ಪದವನ್ನು ಬಳಿಸಿದರೆ ಸಾಕು. ಅದು ಬೆಂಕಿಯಿಂದಲೇ ಎಂಬುದು ಅರ್ಥವಾಗುತ್ತದೆ.ಆದುದರಿಂದ ಬೆಂಕಿ ಇಲ್ಲಿ ಗೌಣ, ಅಪ್ರಕಟ. “ಸುಡುವುದು ” ಎಂಬ ಪದಕ್ಕೆ ಪರ್ಯಾಯವಾಗಿ “ಬೆಂಕಿ ಹೊತ್ತಿಸುವುದು.” ಇಂಗ್ಲೀಷಿನಲ್ಲಿ “ಸುಡುವುದು “ ಮತ್ತು “ಬೆಂಕಿ“ ಎಂಬ ಎರಡೂ ಪದಗಳನ್ನು ಒಟ್ಟಿಗೆ ಬಳಸುವಂತಿಲ್ಲ ಆದುದರಿಂದ ಇದರಲ್ಲಿ ಒಂದನ್ನು ಬಿಡಬಹುದು. ಓದುಗರನ್ನು ಸೂಚ್ಯವಾಗಿರುವ ಪದದ ಅರ್ಥವನ್ನು ಅವರಿಗೆ ತಿಳಿಯಿತೆ ಎಂದು ಅವರನ್ನು “ಬಾಗಿಲು ಹೇಗೆ ಸುಟ್ಟುಹೋಯಿತು” ಎಂದು ಪ್ರಶ್ನಿಸಿ ತಿಳಿದುಕೊಳ್ಳಬಹುದು. ಅವರು ಬೆಂಕಿಯಿಂದ ಸುಟ್ಟಿತು ಎಂದು ಉತ್ತರಿಸಿದರೆ ಸೂಚ್ಯವಾಗಿರುವ ಪದ ಅರ್ಥಮಾಡಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ನೀವು ಎರಡನೇ ಆಯ್ಕೆ, ಬೆಂಕಿ ಬಿದ್ದ ಬಾಗಿಲಿಗೆ ಏನಾಗುತ್ತದೆ ? ಎಂದು ಪ್ರಶ್ನಿಸಬಹುದು. ಓದುಗರು “ಸುಟ್ಟುಹೋಗುತ್ತದೆ” ಎಂದು ಉತ್ತರಿಸಿದರೆ ಅವರಿಗೆ ಸೂಚ್ಯವಾಗಿ ತಿಳಿಸಿದ ಪದ ಅರ್ಥವಾಗುತ್ತದೆ ಎಂದು ತಿಳಿಯುತ್ತದೆ.

ಶತಾಧಿಪತಿಯು ಯೇಸುವನ್ನು ಕುರಿತು” ಪ್ರಭುವೇ ನೀನು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ ಎಂದು ಹೇಳಿದ” (ಮತ್ತಾಯ 8:8 ULB)

“ಕರ್ತನೇ ನನ್ನ ಮನೆಗೆ ನೀನು ಬರುವಷ್ಟು ಯೋಗ್ಯತೆ ನನಗಿಲ್ಲ” ಎಂದು ಶತಾಧಿಪತಿ ಉತ್ತರಿಸಿದನು

ಇಂಗ್ಲೀಷಿನಲ್ಲಿ ಶತಾಧಿಪತಿ ಯೇಸುವಿನೊಂದಿಗೆ ಮಾತನಾಡಿದ ಎಂದು ಹೇಳುವುದನ್ನು ಉತ್ತರಿಸಿದ ಎಂಬ ಪದವನ್ನು ಉಪಯೋಗಿಸಿ ” ಹೇಳಿದ ” ಪದ ಬಿಡಲಾಗಿದೆ. ಶತಾಧಿಪತಿ ಹೇಗೆ ಉತ್ತರಿಸಿದ ? ಎಂದು ಪ್ರಶ್ನಿಸಿ ಯೇಸುವಿನೊಂದಿಗೆ ಶತಾಧಿಪತಿ ಮಾತನಾಡಿದ ಎಂದು ಅರ್ಥಮಾಡಿಕೊಂಡಿರುವುದನ್ನು ತಿಳಿದುಕೊಳ್ಳಿ. ಅವನು ಯೇಸುವಿನೊಂದಿಗೆ ಮಾತಾಡಿದ ಎಂದು ತಿಳಿದುಕೊಂಡರೆ ಅದೇ ಅಪ್ರಕಟ ವಿಚಾರಗಳನ್ನು ಓದುಗರು ಅರ್ಥಮಾಡಿಕೊಳ್ಳಬಲ್ಲರು ಎಂದು ತಿಳಿಯುತ್ತದೆ.

ಆತನು ತನ್ನ ಬಾಯಿ ತೆರೆದು ಮತ್ತು ಅವರಿಗೆ ಬೋಧಿಸಿ ಹೇಳಿದ್ದೇನಂದರೆ, (ಮತ್ತಾಯ 5:2 ULT)

ಆತನು ಅವರಿಗೆ ಬೋಧಿಸಲು ಪ್ರಾರಂಭಿಸಿ, ಹೇಳಿದ್ದೇನಂದರೆ (ಅಥವಾ) ಆತನು ಅವರಿಗೆ ಬೋಧಿಸುತ್ತಾ, ಹೀಗೆ ಹೇಳಿದನು,

ಇಂಗ್ಲಿಷಿನಲ್ಲಿ, ಯೇಸು ಮಾತನಾಡುವಾಗ ಬಾಯಿ ತೆರೆದು ಮಾತನಾಡಿದನು ಎಂಬ ಮಾಹಿತಿಯನ್ನು ಸೇರಿಸುವುದು ತುಂಬಾ ವಿಚಿತ್ರವಾಗಿರುತ್ತದೆ. “ಬೋಧಿಸಿದನು” ಮತ್ತು “ಹೇಳಿದನು” ಎಂಬ ಕ್ರಿಯಾಪದಗಳಲ್ಲಿ ಆ ಮಾಹಿತಿಯು ಅಡಕವಾಗಿದೆ, ಆದ್ದರಿಂದ ಆ ಮಾತುಗಳನ್ನು ತೆಗೆದುಹಾಕಿ ಆ ಮಾಹಿತಿಯನ್ನು ನೇರವಾಗಿ ಹೇಳದೆ ಸೂಚ್ಯ ಮಾಹಿತಿಯಾಗಿ ಬಿಟ್ಟುಬಿಡಬೇಕು. “ಆತನು ತನ್ನ ಬಾಯಿಯನ್ನು ತೆರೆದನು” ಎಂಬುದು ಮಾತನಾಡುವುದಕ್ಕೆ ಪ್ರಾರಂಭಿಸಿದನು ಎಂಬುದನ್ನು ಸೂಚಿಸುವ ಮಾತಾಗಿದೆ, ಆದ್ದರಿಂದ ಮಾಹಿತಿಯನ್ನು ಅದರಲ್ಲಿ ಸೇರಿಸಬಹುದು ಅಥವಾ ಅದನ್ನು ಸೂಚ್ಯ ಅರ್ಥಕೊಡುವ ರೀತಿಯಲ್ಲಿಯೇ ಹಾಗೆಯೇ ಬಿಟ್ಟು ಬಿಡಬಹುದು.


ಮಾಹಿತಿಯನ್ನು ಯಾವಾಗ ಸೂಚ್ಯವಾಗಿ ಇಡಬೇಕು ?

Translation Manual :: Just-in-Time Learning Modules :: Unknowns :: When to Keep Information Implicit

ಕೆಲವೊಮ್ಮೆಗಳಿಸಿದ ಜ್ಞಾನವನ್ನು ಮತ್ತು ಅಪ್ರಕಟ ಸಂದೇಶವನ್ನು ಪ್ರಕಟವಾಗಿ ತಿಳಿಸದೆ ಇರುವುದು ಉತ್ತಮ.

ವಿವರಣೆ

ಕೆಲವೊಮ್ಮೆಗಳಿಸಿದ ಜ್ಞಾನವನ್ನು ಮತ್ತು ಸೂಚಕ ಮಾಹಿತಿಯನ್ನು ಪ್ರಕಟವಾಗಿ ತಿಳಿಸಿದೇ ಇರುವುದು ಉತ್ತಮ. ಈ ಪುಟದಲ್ಲಿರುವ ನಿರ್ದೇಶನಗಳು ಯಾವಾಗ ಏನು ಮಾಡಬಾರದು ಎಂದು ತಿಳಿಸುತ್ತದೆ.

ಭಾಷಾಂತರ ತತ್ವಗಳು.

  • ಲೇಖಕರು ಉದ್ದೇಶಪೂರ್ವಕವಾಗಿ ಕೆಲವು ವಿಚಾರಗಳನ್ನು ಕೈಬಿಟ್ಟಿದ್ದರೆ, ಅಸ್ಪಷ್ಟವಾಗಿ ಬಿಟ್ಟಿದ್ದರೆ ಅದನ್ನು ಸರಿಪಡಿಸಲು ಪ್ರಯತ್ನಿಸದಿರಿ.
  • ಮೂಲ ಓದುಗರು ಇದನ್ನು ಅರ್ಥಮಾಡಿಕೊಳ್ಳಲಾರರು ಎಂದು ಲೇಖಕರು ಭಾವಿಸಿದ್ದರೆ ನೀವು ನಿಮ್ಮ ಓದುಗರಿಗೆ ಅದನ್ನು ಸರಿಪಡಿಸಿ ತಿಳಿಸಲು ಪ್ರಯತ್ನಿಸಿದರೆ ಅವರಿಗೆ ಅದು ವಿಸ್ಮಯವಾಗಿ ತೋರಬಹುದು ಮತ್ತು ಮೂಲ ಓದುಗರು ಏಕೆ ಅರ್ಥಮಾಡಿಕೊಳ್ಳಲು ಆಗಲಿಲ್ಲ ಎಂದು ಯೋಚಿಸಬಹುದು.
  • ಇಂತಹ ಮಾಹಿತಿಗಳನ್ನು ಹೆಚ್ಚು ಪ್ರಕಟವಾಗಿ ಹೇಳಲು ಪ್ರಯತ್ನಿಸಬೇಡಿ, ಇದರಿಂದ ಅವರು ಮುಖ್ಯ ವಿಷಯಗಳನ್ನು ಮರೆತುಬಿಡುವ ಸಾಧ್ಯತೆ ಇರುತ್ತದೆ.
  • ಮುಖ್ಯ ಉದ್ದೇಶದಿಂದ ಹೊರತಾಗಿ ಉಳಿಯುವ ಯಾವುದೇ ಸಂದೇಶವನ್ನು ಪ್ರಕಟವಾಗಿ ಹೇಳಬಾರದು ಮತ್ತು ಓದುಗರ ಗಮನವನ್ನು ಮುಖ್ಯ ಉದ್ದೇಶದಿಂದ ದೂರ ಇಡುವುದು.
  • ಗಳಿಸಿದ ಜ್ಞಾನ ಮತ್ತು ಅಪ್ರಕಟಿತ ಮಾಹಿತಿಯನ್ನು ಈಗಾಗಲೇ ನಿಮ್ಮ ಓದುಗರು ಅರ್ಥಮಾಡಿಕೊಂಡಿದ್ದರೆ ಅದನ್ನು ಪ್ರಕಟಿತ ಮಾಹಿತಿಯಾಗಿ ನೀಡಬಾರದು.

###ಸತ್ಯವೇದದಲ್ಲಿನ ಉದಾಹರಣೆಗಳು.

ತಿಂದು ಬಿಡುವಂತದರಿಂದ ತಿನ್ನತಕ್ಕದ್ದು ದೊರಕಿತು ; ಕ್ರೂರವಾದುದರಿಂದ ಮಧುರವಾದುದು ಸಿಕ್ಕಿತು. (ನ್ಯಾಯಸ್ಥಾಪಕರು 14:14 ULB)

ಇದೊಂದು ಒಗಟಿನಂತಿದೆ. ಸಂಸೋನನು ಉದ್ದೇಶಪೂರ್ವಕವಾಗಿ ಈ ಒಗಟನ್ನು ತನ್ನ ಶತ್ರುಗಳು ಅರ್ಥಮಾಡಿಕೊಳ್ಳದೆ ಬಿಡಿಸಲಾರರು ಎಂದು ಅವರಿಗೆ ಹೇಳಿದನು. ತಿಂದು ಬಿಡುವಂತದ್ದು ಸಿಂಹ ಹಾಗೂ ಮಧುರವಾದುದು ಜೇನು ಎಂಬುದನ್ನು ನೀವು ನಿಮ್ಮ ಓದುಗರಿಗೆ ತಿಳಿಸಬಾರದು.

ಯೇಸು ಅವರಿಗೆ, “ಪರಿಸಾಯರ, ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ ಎಂದು ಎಚ್ಚರಿಕೆ ಹೇಳಿದನು. ಅದಕ್ಕೆ ಶಿಷ್ಯರು.” ನಾವು ರೊಟ್ಟಿ ಬುತ್ತಿ ಕಟ್ಟಿಕೊಳ್ಳದೆ ಬಂದೆವಲ್ಲ " ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡರು … (ಮತ್ತಾಯ 16:6,7 ULB)

ಇಲ್ಲಿ ಇರುವ ಸೂಚ್ಯವಾಗಿರುವ ಅರ್ಥವೇನೆಂದರೆ ಶಿಷ್ಯರು ಪರಿಸಾಯರ ಮತ್ತು ಸದ್ದುಕಾಯರ ಸುಳ್ಳುಬೋಧನೆಗಳಿಗೆ ಮರುಳಾಗದೆ ಎಚ್ಚರವಾಗಿರಬೇಕೆಂದು ಅರ್ಥ. ಆದರೆ ಯೇಸುವಿನ ಶಿಷ್ಯರಿಗೆ ಇದು ಅರ್ಥವಾಗಲಿಲ್ಲ. ಅವರು ಯೇಸು ನಿಜವಾದ ಹುಳಿರೊಟ್ಟಿಯ ಬಗ್ಗೆ ಮಾತನಾಡುತ್ತಿದ್ದಾನೆ ಎಂದುಕೊಂಡರು. ಆದುದರಿಂದ "ಹುಳಿ ರೊಟ್ಟಿ " ಎಂಬುದು ಸುಳ್ಳುಬೋಧನೆ ಎಂಬುದನ್ನು ಪ್ರಕಟವಾಗಿ ತಿಳಿಸಬೇಕೆಂಬುದು ಅಷ್ಟು ಸೂಕ್ತವಾಗಿ ಕಂಡುಬರುವುದಿಲ್ಲ. ಯೇಸು ಮತ್ತಾಯ 16:11 ರಲ್ಲಿ ಹೇಳುವಂತೆ ಕೇಳಿ ತಿಳಿಯುವವರೆಗೆ ಯೇಸು ಏನು ಹೇಳಿದ ಎಂಬುದನ್ನು ಆತನ ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ.

“ನಾನು ರೊಟ್ಟಿಯ ಬಗ್ಗೆ ಮಾತನಾಡಲಿಲ್ಲ ಎಂಬುದು ನಿಮಗೆ ಹೇಗೆ ತಿಳಿಯದೆ ಹೋಯಿತು? ಎಚ್ಚರಿಕೆ ಪರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ” ಎಂದು ಅಂದನು. ಆಗ ಅವರಿಗೆ ಯೇಸು ನಿಜವಾದ ಹುಳಿಹಿಟ್ಟಿನ ಬಗ್ಗೆ ಹೇಳುತ್ತಿಲ್ಲ, ಆದರೆ ಪರಿಸಾಯರ ಮತ್ತು ಸದ್ದುಕಾಯರ ಬೋಧನೆಗಳಿಂದ ದೂರವಾಗಿದ್ದು ಎಚ್ಚರವಾಗಿರಿ ಎಂದು ಹೇಳುತ್ತಿದ್ದಾನೆ ಎಂದು ಅರ್ಥ ಮಾಡಿಕೊಂಡರು. (ಮತ್ತಾಯ 16:11,12 ULB)

ಯೇಸು ತಾನು ನಿಜವಾದ ಹುಳಿರೊಟ್ಟಿಯ ಬಗ್ಗೆ ಹೇಳಲಿಲ್ಲ, ಪರಿಸಾಯರ ಮತ್ತು ಸದ್ದುಕಾಯರ ಬೋಧನೆಬಗ್ಗೆ ಎಚ್ಚರವಾಗಿರಲು ಹೇಳಿದ್ದು ಎಂದು ಹೇಳಿದ ಮೇಲೆ ಅರ್ಥಮಾಡಿಕೊಂಡರು. ಆದುದರಿಂದ ಸೂಚ್ಯವಾಗಿರುವ ಮಾಹಿತಿಯನ್ನು ಪ್ರಕಟವಾಗಿ ಹೇಳುವುದು ಮತ್ತಾಯ 16:6.ರಲ್ಲಿ ಹೇಳಿರುವುದು ಸರಿಯಲ್ಲ.

###ಭಾಷಾಂತರ ತಂತ್ರಗಳು.

ಈ ಪುಟದಲ್ಲಿ ಯಾವುದೇ ಭಾಷಾಂತರ ತಂತ್ರಗಳಿಲ್ಲ.

ಭಾಷಾಂತರ ತಂತ್ರಗಳ ಅಳವಡಿಕೆಗೆ ಉದಾಹರಣೆಗಳು

ಈ ಪುಟದಲ್ಲಿ ಯಾವುದೇ ಭಾಷಾಂತರ ತಂತ್ರಗಳ ಅಳವಡಿಕೆಗೆ ಉದಾಹರಣೆಗಳು ಇಲ್ಲ.


ಸತ್ಯವೇದದಲ್ಲಿ ಬರುವ ಅಂತರಗಳು.

Translation Manual :: Just-in-Time Learning Modules :: Unknowns :: Biblical Distance

ವಿವರಣೆಗಳು

ಕೆಳಗೆ ಕೊಟ್ಟಿರುವ ಪದಗಳು ಸತ್ಯವೇದದಲ್ಲಿ ಬಂದಿರುವ ಉದ್ದ ಮತ್ತು ಅಂತರಗಳ ಬಗ್ಗೆ ಬಳಸಿರುವ ಬಹುಪಾಲು ಸಾಮಾನ್ಯ ಪದಗಳಾಗಿವೆ. ಹಾಗೂ ಮೂಲ ಸತ್ಯವೇದದ ಪದಗಳಾಗಿವೆ. ಇವು ಬಹುಪಾಲು ಕೈ ಮತ್ತು ಮುಂಗೈಗಳ ಅಳತೆಯನ್ನು ಆಧರಿಸಿದೆ.

  • ಕೈಯಳತೆ ಒಬ್ಬ ಪುರುಷನ ಅಂಗೈ ಅಗಲದ ಅಳತೆಯಾಗಿದೆ.
  • ಗೇಣು ಅಥವಾ ಒಬ್ಬ ಪುರುಷನ ಅಂಗೈ ಅಗಲಿಸಿ ಕೈ ಬೆರಳುಗಳನ್ನು ಚಾಚಿ ಅಳೆಯುವಂತಾದ್ದು.
  • ಮೊಳ (ಅರ್ಧ ಗಜ 18 ಇಂಚು) ಒಬ್ಬ ಪುರುಷನ ಮುಂಗೈಯಿಂದ ಮಧ್ಯದ ಬೆರಳಿನ ತುದಿಯಿಂದ ಕೈ ಮಂಡಿಯವರೆಗೆ ಅಳತೆ ಮಾಡುವಂತದ್ದು (ಒಂದು ಮೊಳ)

ಉದ್ದನೆಯ ಮೊಳ ಈ ಅಳತೆ ಯೆಹೆಜ್ಕೇಲ 40-48.ರಲ್ಲಿ ಮಾತ್ರ ಬಳಕೆಯಾಗಿದೆ. ಇದು ಸಾಮಾನ್ಯವಾಗಿ ಒಂದು ಕ್ಯುಬಿಟ್ ಮತ್ತು ಒಂದು ಗೇಣು ಇದರ ಅಳತೆ.

stadium ಸ್ತಾದಿಯ (ಬಹುವಚನ stadia ಸ್ತಾದಿಯ – ಒಂದು ಮೈಲು)ಎಂಬುದು 185 ಮೀಟರ್ ಉದ್ದದ ಒಂದು ಓಟವನ್ನು ಕುರಿತು ಹೇಳುವಂತದ್ದು. ಕೆಲವೊಂದು, ಹಳೆಯ ಇಂಗ್ಲೀಷ್ ಭಾಷಾಂತರಗಳಲ್ಲಿ ಈ ಪದವನ್ನು “furlong”, ಎಂಬುದು ಅಗೆದು ಸಿದ್ಧಪಡಿಸಿರುವ ಓಡುವ ಟ್ರಾಕ್ ಬಗ್ಗೆ ಹೇಳಿರುವ ಮಾತು. ಕೆಳಗೆ ಕೊಟ್ಟಿರುವ ಮೆಟ್ರಿಕ್ ಮೌಲ್ಯಗಳ ಪಟ್ಟಿ ಸಮೀಪದ ಮೌಲ್ಯವನ್ನು ಬೆಳೆಸಿದೆಯೇ ಹೊರತು ಸತ್ಯವೇದದಲ್ಲಿರುವ ಅಳತೆಗೆ ನಿಖರವಾದ ಮೌಲ್ಯ ಹೇಳುತ್ತಿಲ್ಲ. ಸತ್ಯವೇದದಲ್ಲಿರುವ ಅಳತೆಗಳು ಬಹುಶಃ ನಿಖರವಾದ ಉದ್ದ ಅಳತೆಗಳನ್ನು ಹೇಳಲು ಸಾಧ್ಯವಿಲ್ಲ ಏಕೆಂದರೆ ಇವು ಕಾಲಕಾಲಕ್ಕೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ. ಕೆಳಗೆ ಕೊಟ್ಟಿರುವ ಸಮಾನ ಅಳತೆಗಳು ಸರಾಸರಿ ಅಳತೆಗಳನ್ನು ನೀಡಲು ಪ್ರಯತ್ನಿಸಿದೆ.

ಮೂಲ ಅಳತೆಗಳು ಮೆಟ್ರಿಕ್ ಅಳತೆಗಳು
ಅಂಗೈ ಅಗಲ (handbreadth) 8 ಸೆಂಟಿಮೀಟರ್ ಗಳು
ಗೇಣು span 23 ಸೆಂಟಿಮೀಟರ್ ಗಳು
cubit (ಮೊಳ) 46 ಸೆಂಟಿಮೀಟರ್ ಗಳು
“long” ಉದ್ದcubit (ಮೊಳ) 54 ಸೆಂಟಿಮೀಟರ್ ಗಳು
stadia ಸ್ತಾದಿಯ – ಒಂದು ಮೈಲು 185 meters

ಭಾಷಾಂತರ ತತ್ವಗಳು

  1. ಸತ್ಯವೇದದಲ್ಲಿ ಬರುವ ಜನರು ಆಧುನಿಕ ಅಳತೆ ಪ್ರಮಾಣಗಳಾದ ಮೀಟರ್, ಲೀಟರ್ ಮತ್ತು ಕಿಲೊಗ್ರಾಂಗಳನ್ನು ಬಳಸಿಲ್ಲ. ಸತ್ಯವೇದದಲ್ಲಿ ಬಳಸಿರುವ ಮೂಲ ಅಳತೆಗಳನ್ನು ಬಳಸುವುದರಿಂದ ಓದುಗರಿಗೆ ಸತ್ಯವೇದವನ್ನು ಬಹು ಹಿಂದೆ ಬರೆಯಲಾಗಿದೆ ಆಗಿನ ಕಾಲದಲ್ಲಿ ಜನರು ಯಾವ ಅಳತೆ ಪ್ರಮಾಣಗಳನ್ನು ಬಳಸುತ್ತಿದ್ದರು ಎಂಬುದು ತಿಳಿಯುತ್ತದೆ.
  2. ಆಧುನಿಕ ಅಳತೆಗಳನ್ನು ಬಳಸುವುದರಿಂದ ಓದುಗರಿಗೆ ವಾಕ್ಯಭಾಗಗಳನ್ನು ಸುಲಭವಾಗಿ ಅರ್ಥಮಾಡಿ -ಕೊಳ್ಳಲು ಸಹಕಾರಿಯಾಗಿರುತ್ತದೆ.
  3. ಯಾವ ಅಳತೆಗಳನ್ನು ಬಳಸಿದರೂ ಒಳ್ಳೆಯದೆ, ಆದರೆ ಹಳೆಯ ಅಳತೆಗಳ ಬಗ್ಗೆ ಬರೆಯುವಾಗ ಅಡಿ ಟಿಪ್ಪಣಿಯಲ್ಲಿ ಅದರ ಬಗ್ಗೆ ವಿವರಕೊಡುವುದು ಅಗತ್ಯ.
  4. ನೀವು ಭಾಷಾಂತರ ಮಾಡುವಾಗ ಸತ್ಯವೇದದಲ್ಲಿನ ಅಳತೆಗಳನ್ನು ಉಪಯೋಗಿಸದಿದ್ದರೆ ಓದುಗರಿಗೆ ನೀವು ಭಾಷಾಂತರಿಸಿ ಹೇಳುತ್ತಿರುವ ಅಳತೆಗಳು ನಿಖರವಾದುದು ಎಂದು ಹೇಳಬಾರದು. ಉದಾಹರಣೆಗೆ ನೀವು ಒಂದು " ಒಂದು ಕ್ಯುಬಿಟ್ ಗೆ " “.46 ಮೀಟರ್” ಅಥವಾ "46 ಸೆಂಟಿಮೀಟರ್ ಗಳು ಎಂದು ಹೇಳಿದರೂ ಅವರು ಇದೆ ಸರಿಯಾದುದು ಎಂದು ತಿಳಿಯುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ “ಅರ್ಧ ಮೀಟರ್,” “45 ಸೆಂಟಿಮೀಟರ್ ಗಳು,” ಅಥವಾ “50 ಸೆಂಟಿಮೀಟರ್ ಗಳು.” ಎಂದು ಬರೆಯುವುದು ಉತ್ತಮ.
  5. ಕೆಲವೊಮ್ಮೆ ಇಂತಹ ಸಂದರ್ಭದಲ್ಲಿ "ಸುಮಾರು " ಎಂಬ ಪದಬಳಸಿ ಹೇಳುತ್ತಿರುವ ಅಳತೆ ನಿರ್ದಿಷ್ಟ ಹಾಗೂ ನಿಖರವಾದುದಲ್ಲ ಎಂದು ತಿಳಿಸುತ್ತದೆ. ಉದಾಹರಣೆಗೆ ಲೂಕ 24:13 ರಲ್ಲಿ " ಎಮ್ಮಾಹು " ಎಂಬ ಸ್ಥಳ ಯೆರುಸಲೇಮಿನಿಂದ ಅರವತ್ತು ಸ್ತಾದಿಯ (ಆರುವರೆ ಮೈಲು) ದೂರದಲ್ಲಿತ್ತು. ಇದನ್ನು ಯೆರುಸಲೇಮಿನಿಂದ " ಸುಮಾರು ಹತ್ತು ಕಿಲೋಮೀಟರ್ " ದೂರದಲ್ಲಿತ್ತು ಎಂದು ಭಾಷಾಂತರಿಸ ಬಹುದು.
  6. ದೇವರು ಜನರನ್ನು ಕುರಿತು ದೂರ, ಅಂತರದಬಗ್ಗೆ ಹೇಳಿದಾಗ ಮತ್ತು ಜನರು ಅದರಂತೆ ಕೆಲಸಮಾಡಿ ಪೂರೈಸಿದ ಅಂತರವನ್ನು ಭಾಷಾಂತರಿಸುವಾಗ "ಸುಮಾರು " ಎಂಬ ಪದಬಳಸ ಬಾರದು. ಏಕೆಂದರೆ ದೇವರು ದೂರ, ಅಂತರದ ಬಗ್ಗೆ ಹೇಳುವಾಗ ನಿರ್ದಿಷ್ಟ ಹಾಗೂ ನಿಖರತೆ ಹೊಂದಿರಲಿಲ್ಲ ಎಂಬ ಅಭಿಪ್ರಾಯ ಮೂಡುತ್ತದೆ.

###ಭಾಷಾಂತರ ತಂತ್ರಗಳು.

  1. ULB ಯಲ್ಲಿರುವ ಅಳತೆಪ್ರಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವ ಅಳತೆ ಪ್ರಮಾಣಗಳು ಮೂಲಲೇಖಕರು ಬಳಸಿದ ಅಳತೆ ಪ್ರಮಾಣಗಳಂತೆಯೇ ಬಳಸಿದ್ದಾರೆ. ಅಂತಹ ಪದಗಳ ಧ್ವನಿ ಉಚ್ಛಾರಣೆ ಮತ್ತು ಅಕ್ಷರ ಜೋಡಣೆ ULB ಗೆ ಸಮಾನವಾಗಿ ಪದಗಳನ್ನು ಬಳಸಬೇಕು. (ನೋಡಿ Copy or Borrow Words)
  2. UDB ಯಲ್ಲಿ ಕೊಟ್ಟಿರುವ ಮೆಟ್ರಿಕ್ ಅಳತೆ ಪ್ರಮಾಣಗಳನ್ನು ಬಳಸಿ. UDB ಭಾಷಾಂತರಗಾರರು ಇವುಗಳನ್ನು ಹೇಗೆ ಭಾಷಾಂತರ ಮಾಡಬೇಕು ಮೆಟ್ರಿಕ್ ಪದ್ಧತಿಯಂತೆ ಹಣದ ಮೌಲ್ಯವನ್ನು ಹೇಗೆ ಪ್ರತಿನಿಧಿಸ ಬೇಕು ಎಂಬುದನ್ನು ಅವರು ಮೊದಲೆ ಮಾಡಿದ್ದಾರೆ.
  3. ಇಲ್ಲವೆ ನಿಮ್ಮ ಭಾಷೆಯಲ್ಲಿ ಈಗಾಗಲೇ ಬಳಕೆಯಲ್ಲಿರುವ ಅಳತೆ ಪ್ರಮಾಣಗಳನ್ನು ಬಳಸಿ. ಹೀಗೆ ಮಾಡುವುದಾದರೆ ನೀವು ಭಾಷಾಂತರಿಸಲು ಬಳಸುತ್ತಿರುವ ಅಳತೆ ಪ್ರಮಾಣಗಳು ಮೆಟ್ರಿಕ್ ಪದ್ಧತಿಗೆ ಎಷ್ಟು ಹತ್ತಿರವಾಗಿ ಸಂಬಂಧಿಸಿದೆ ಮತ್ತು ಪ್ರತಿಯೊಂದು ಅಳತೆಗೂ ಎಷ್ಟು ಮೌಲ್ಯವಿದೆ ಎಂದು ತಿಳಿದುಕೊಳ್ಳಬೇಕು.
  4. ULB ಯಲ್ಲಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಓದುಗರಿಗೆ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ.
  5. ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪರಿಮಾಣಗಳನ್ನು ULB ಯ ವಾಕ್ಯಭಾಗ ಅಥವಾ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಇಲ್ಲಿ ಸೇರಿಸಿಕೊಳ್ಳಬಹುದು.

###ಭಾಷಾಂತರ ಕೌಶಲ್ಯಗಳ ಅಳವಡಿಸಿದ ಬಗ್ಗೆ.

ಎಲ್ಲಾ ಕೌಶಲ್ಯಗಳು ವಿಮೋಚನಾ ಕಾಂಡ 25:10 ರ ವಾಕ್ಯಕ್ಕೆಅಳವಡಿಸಲಾಗಿದೆ.

  • ಅವರು ಜಾಲಿಮರದಿಂದ ಒಂದು ಮಂಜೂಷವನ್ನು ಮಾಡಬೇಕಿತ್ತು. ಅದು ಎರಡೂವರೆ ಮೊಳ ಉದ್ದವೂ, ಒಂದೂವರೆ ಮೊಳ ಅಗಲವೂ, ಒಂದೂವರೆ ಮೊಳ ಎತ್ತರವೂ ಆಗಿರಬೇಕು. (ವಿಮೋಚನಾಕಾಂಡ 25:10 ULB)
  1. ULB ಯಲ್ಲಿ ಕೊಟ್ಟಿರುವ ಅಳತೆಗಳನ್ನು ಬಳಸಿಕೊಳ್ಳಿ. ಇವು ಮೂಲ ಲೇಖಕರು ಬಳಸಿರುವ ಅಳತೆಗಳನ್ನೇ ಹೊಂದಿರುತ್ತವೆ. ಅಂತಹ ಪದಗಳ ಧ್ವನಿ ಉಚ್ಛಾರಣೆ ಮತ್ತು ಅಕ್ಷರ ಜೋಡಣೆ ULB ಗೆ ಸಮಾನವಾಗಿ ಪದಗಳನ್ನು ಬಳಸಬೇಕು. (ನೋಡಿ Copy or Borrow Words)

    • “ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಎರಡೂವರೆ ಮೊಳ ; ಉದ್ದ, ಅದರ ಅಗಲ ಒಂದೂವರೆ ಮೊಳ ಅಗಲ; ಅದರ ಎತ್ತರ ಒಂದೂವರೆ ಮೊಳ;
  2. UDB ಯಲ್ಲಿ ಕೊಟ್ಟಿರುವ ಮೆಟ್ರಿಕ್ ಅಳತೆಗಳನ್ನು ಬಳಸಿ. UDB ಭಾಷಾಂತರಗಾರರು ಇವುಗಳನ್ನು ಹೇಗೆ ಭಾಷಾಂತರಮಾಡಬೇಕು ಮೆಟ್ರಿಕ್ ಪದ್ಧತಿಯಂತೆ ಹಣದ ಮೌಲ್ಯವನ್ನು ಹೇಗೆ ಪ್ರತಿನಿಧಿಸ ಬೇಕು ಎಂಬುದನ್ನು ಅವರು ಮೊದಲೆ ಮಾಡಿದ್ದಾರೆ.

    • " ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಅದರ ಉದ್ದ ಒಂದು ಮೀಟರ್ ;ಅದರ ಅಗಲ ಒಂದು ಮೀಟರ್ ನ ಮೂರನೆ ಎರಡು ಭಾಗ 2/3, ಮತ್ತು ಅದರ ಎತ್ತರ ಮೂರನೆ ಎರಡು ಭಾಗ 2/3, ;
  3. ನಿಮ್ಮ ಭಾಷೆಯಲ್ಲಿ ಈಗಾಗಲೇ ಬಳಸುತ್ತಿರುವ ಅಳತೆಯನ್ನೇ ಬಳಸಿಕೊಳ್ಳಬಹುದು. ಹೀಗೆ ಮಾಡುವುದಾದರೆ ನೀವು ಭಾಷಾಂತರಿಸಲು ಬಳಸುತ್ತಿರುವ ಅಳತೆ ಪ್ರಮಾಣಗಳು ಮೆಟ್ರಿಕ್ ಪದ್ಧತಿಗೆ ಎಷ್ಟು ಹತ್ತಿರವಾಗಿ ಸಂಬಂಧಿಸಿದೆ ಮತ್ತು ಪ್ರತಿಯೊಂದು ಅಳತೆಗೂ ಎಷ್ಟು ಮೌಲ್ಯವಿದೆ ಎಂದು ತಿಳಿದುಕೊಳ್ಳಬೇಕು. ಉದಾಹರಣೆಗೆ; ನೀವು ಒಂದು ಅಡಿಯ ಮೂಲದ ಉದ್ದವನ್ನು ತಿಳಿಸುವ ಕೆಳಗಿನಂತೆ ಭಾಷಾಂತರಿಸಬಹುದು.

    • ”ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಉದ್ದ 3 3/4 ಅಡಿ ; ಅದರ ಅಗಲ 2 1/4 ಅಡಿ; ಅದರ ಎತ್ತರ 2 1/4 feet."
  4. ULB ಯಲ್ಲಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಓದುಗರಿಗೆ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ. ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ವಾಕ್ಯಭಾಗದಲ್ಲಿರುವ ಅಳತೆಯನ್ನು ತಿಳಿಸುತ್ತದೆ,

    • ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಇರಬೇಕಾದ ಉದ್ದ ಎರಡುವರೆ ಕ್ಯುಬಿಟ್ (ಮೊಳ) (ಒಂದು ಮೀಟರ್); ಅದರ ಅಗಲ ಒಂದುವರೆ ಕ್ಯುಬಿಟ್ (ಮೊಳ) (ಒಂದು ಮೀಟರ್ ನ ಮೂರನೇ ಎರಡು ಭಾಗ ಮೂರನೇ ಎರಡು ಮೀಟರ್)" ಮತ್ತು ಅದರ ಎತ್ತರ ಒಂದುವರೆ ಕ್ಯುಬಿಟ್ (ಮೊಳ) (ಒಂದು ಮೀಟರ್ ನ ಮೂರನೇ ಎರಡು ಭಾಗ ಮೀಟರ್))." ಆಗಿರಬೇಕು.
  5. ULB ಯಲ್ಲಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಓದುಗರಿಗೆ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ. ಈ ಕೆಳಗಿನ ಅಳತೆಗಳು ULB ಟಿಪ್ಪಣಿಯಲ್ಲಿನ ಅಳತೆಗಳು.

    • “ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು ಅದರ ಉದ್ದವು ಒಂದು ಮೀಟರ್ 1; ಅದರ ಅಗಲ ಮೂರನೇ ಎರಡು ಭಾಗ 2/3 ಮೀಟರ್ 2; ಮತ್ತು ಅದರ ಎತ್ತರ ಒಂದು ಮೀಟರ್ ನ ಮೂರನೇ ಎರಡು ಭಾಗ 2/3 ಮೀಟರ್ ." ಅಡಿ ಟಿಪ್ಪಣಿಗಳು ಈ ಕೆಳಗಿನಂತೆ ಕಂಡು ಬರುತ್ತವೆ.
      • [1]ಎರಡೂವರೆ ಕ್ಯುಬಿಟ್ (ಎರಡು ವರೆ ಮೊಳ)
      • [2]ಒಂದೂವರೆ ಕ್ಯುಬಿಟ್ ಒಂದೂವರೆ ಮೊಳ.

ಸತ್ಯವೇದದಲ್ಲಿನ ಪರಿಮಾಣಗಳು (ಘನ / ದ್ರವ)

Translation Manual :: Just-in-Time Learning Modules :: Unknowns :: Biblical Volume

####ವಿವರಣೆಗಳು

ಕೆಳಗೆ ಕೊಟ್ಟಿರುವ ಪರಿಮಾಣಗಳು ಸಾಮಾನ್ಯವಾಗಿ ಹೆಚ್ಚು ಬಳಸಲ್ಪಡುವಂತದ್ದು ಮತ್ತು ಇದು ಸತ್ಯವೇದದಲ್ಲಿ ಪಾತ್ರೆ ಅಥವಾ ಡಬ್ಬಿ ಎಷ್ಟು ಅಳತೆಯನ್ನು ಹಿಡಿದಿಡ ಬಲ್ಲದು ಎಂದು ತಿಳಿಸುತ್ತದೆ. ಈ ಪಾತ್ರೆಗಳು ಅಥವಾ ಡಬ್ಬಿ ಮತ್ತು ಅಳತೆ ಪರಿಮಾಣಗಳು ದ್ರವರೂಪ (ಉದಾ: ದ್ರಾಕ್ಷಾರಸ) ಮತ್ತು ಒಣ ವಸ್ತುಗಳು (ಉದಾ : ಕಾಳು ಮತ್ತು ದವಸಧಾನ್ಯಗಳು) ಮೆಟ್ರಿಕ್ ಮೌಲ್ಯಗಳು ಸತ್ಯವೇದದಲ್ಲಿ ಬರುವ ಅಳತೆಗಳಿಗೆ ನಿಖರವಾಗಿ ಸಮವಾಗಿರುವುದಿಲ್ಲ

ಕಾಲಕ್ಕೆ ಅನುಗುಣವಾಗಿ, ಸ್ಥಳದಿಂದ ಸ್ಥಳಕ್ಕೆ ಸತ್ಯವೇದದ ಅಳತೆಗಳಲ್ಲಿ ಮೌಲ್ಯಗಳಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಕೆಳಗೆ ಕೊಟ್ಟಿರುವ ಅಳತೆ ಪರಿಮಾಣಗಳು ಸಮಾನವಾಗಿಲ್ಲದಿದ್ದರೂಸರಾಸರಿ ಅಳತೆ ಪರಿಮಾಣ ಗಳಾಗಿರುತ್ತವೆ.

ವಿಧ

ಒಣ | ಓಮರ್ | 2 ಲೀಟರ್ | ಒಣ | ಏಫಾ | 22 ಲೀಟರ್ | ಒಣ | ಹೊಮೆರ್ | 220 ಲೀಟರ್ | ಒಣ | ಕೋರ್ | 220 ಲೀಟರ್ | ಒಣ | ಕೋರ್ | 220 ಲೀಟರ್ | ಒಣ | ಲೆತೆಕ್ | 114.8 ಲೀಟರ್ | ದ್ರವ | ಮೀಟರ್ | 40 ಲೀಟರ್ | ದ್ರವ | ಬತ್ | 22 ಲೀಟರ್ | ದ್ರವ | ಹಿನ್ | 3.7 ಲೀಟರ್ | ದ್ರವ | ಕಬ್ | 1.23 ಲೀಟರ್ | ದ್ರವ | ಲಾಗ್ | 0.31 ಲೀಟರ್ |

ಭಾಷಾಂತರ ತತ್ವಗಳು.

  • ಸತ್ಯವೇದದಲ್ಲಿ ಬರುವ ಜನರು ಅಧುನಿಕ ಅಳತೆಗಳಾದ ಲೀಟರ್, ಮೀಟರ್ ಮತ್ತು ಕಿಲೋಗ್ರಾಂಗಳನ್ನು ಬಳಸಿಲ್ಲ ಮೂಲ ಕೃತಿಯಲ್ಲಿರುವ ಅಳತೆ ಪ್ರಮಾಣಗಳನ್ನು ಬಳಸುವುದರಿಂದ ಓದುಗರಿಗೆ ಸತ್ಯವೇದದಲ್ಲಿ ಇರುವ ಅಳತೆಗಳು, ಸತ್ಯವೇದ ತುಂಬಾ ಹಿಂದಿನ ದಿನಗಳಲ್ಲಿ ಬರೆದದ್ದು.ಮತ್ತು ಅಂದಿನ ಜನರು ಈ ಅಳತೆಗಳನ್ನೇ ಬಳಸುತ್ತಿದ್ದರು.ಎಂದು ತಿಳಿದುಕೊಳ್ಳುತ್ತಾರೆ.
  • ಇದರೊಂದಿಗೆ ಆಧುನಿಕ ಅಳತೆ ಪರಿಮಾಣ ತಿಳಿಸಿದರೆ ವಾಕ್ಯಭಾಗವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
  • ನೀವು ಯಾವ ಅಳತೆ ಪರಿಮಾಣಗಳನ್ನು ಬಳಸಿದರೂ ಒಳ್ಳೆಯದು.ವಾಕ್ಯಭಾಗದಲ್ಲಿ ಸಾಧ್ಯವಾದರೆ ಅದರ ಬಗ್ಗೆ ವಿವರವಾಗಿ ಹೇಳಬಹುದು ಇಲ್ಲವೆ ಅಡಿ ಟಿಪ್ಪಣಿಯಲ್ಲಿ ತಿಳಿಸಬಹುದು.
  • ನೀವು ಸತ್ಯವೇದದಲ್ಲಿ ಬರುವ ಅಳತೆ ಪರಿಮಾಣಗಳನ್ನು ಉಪಯೋಗಿಸದಿದ್ದರೆ ಓದುಗರಿಗೆ ನೀವು ತಿಳಿಸಿರುವ ಅಳತೆ ಪರಿಮಾಣಗಳ ಬಗ್ಗೆ ನಿಖರವಾದುದು ಎಂದು ವಿವರಣೆ ನೀಡುವುದು ಸಮರ್ಪಕವಾಗಿರುವು ದಿಲ್ಲ. ಉದಾಹರಣೆಗೆ ನೀವು ಒಂದು ಹಿನ್ ಎಂಬುದನ್ನು “3.7 ಲೀಟರ್ ಗಳು,” ಎಂದು ಭಾಷಾಂತರಿಸಿದರೆ ಓದುಗರು ಒಂದು " ಹಿನ್ " ಎಂದರೆ ನಿಖರವಾಗಿ "3.7 ಲೀಟರ್ ಗಳುಹೊರತು “3.6 ಅಥವಾ 3.8. ಲೀಟರ್ ಗಳು,” ಅಲ್ಲ ಎಂದು ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಅದರ ಬದಲು ಹೆಚ್ಚು ಕಡಿಮೆ ಅಳತೆ ತಿಳಿಸುವಂತೆ " ಮೂರು ಮತ್ತು ಅರ್ಧ ಲೀಟರ್ ಗಳು " ಅಥವಾ " ನಾಲ್ಕು ಲೀಟರ್ ಗಳು " ಎಂದು ತಿಳಿಸುವುದು ಉತ್ತಮ.
  • ದೇವರು ಜನರಿಗೆ ಎಷ್ಟು ಅಳತೆ ಪರಿಮಾಣಗಳನ್ನು ಉಪಯೋಗಿಸಬೇಕು ಎಂದು ಹೇಳಿರುತ್ತಾನೋ ಹಾಗೇ ಜನರು ವಿಧೇಯರಾಗಿ ಅಷ್ಟೇ ಅಳತೆಯನ್ನು ನಿಖರವಾಗಿ ಬಳಸಿಕೊಳ್ಳುವರು.ಆದರೆ ಇದನ್ನು “ಸುಮಾರು” ಎಂಬ ಪದವನ್ನು ಬಳಸಿ ಭಾಷಾಂತರ ಮಾಡಬಾರದು. ಇಲ್ಲದಿದ್ದರೆ ಇದು ದೇವರು ನಿಖರವಾದ ಅಳತೆ ಪರಿಮಾಣಗಳ ಬಗ್ಗೆ ಗಮನವಹಿಸಿಲ್ಲ ಎಂಬ ಅಭಿಪ್ರಾಯ ಬರುವಂತೆ ಮಾಡಬಹುದು.

ಒಂದು ಅಳತೆಯ ಪರಿಮಾಣವನ್ನು ಕುರಿತು ಹೇಳಿದಾಗ.

ಭಾಷಾಂತರ ಕೌಶಲ್ಯಗಳು

  1. ULB ಯಿಂದ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವ ಅಳತೆ ಪರಿಮಾಣಗಳು ಸತ್ಯವೇದದ ಮೂಲ ಲೇಖಕರು ಬರೆಯಲು ಬಳಸಿದಂತವು. ಈ ಪದಗಳನ್ನು ULBಯಲ್ಲಿರುವ ಧ್ವನಿ ಉಚ್ಛರಣಾ ಪದಗಳಂತೆ ಅದೇ ರೀತಿ ಬಳಸಬೇಕು ನೋಡಿ. (see Copy or Borrow Words)
  2. UDB ಯಲ್ಲಿ ಕೊಟ್ಟಿರುವ ಮೆಟ್ರಿಕ್ ಪದ್ಧತಿಯಂತೆ ಅಳತೆ ಪರಿಮಾಣಗಳನ್ನು ಬಳಸಬೇಕು. UDBಯ ಭಾಷಾಂತರಗಾರರು ಈಗಾಗಲೇ ಮೆಟ್ರಿಕ್ ಪದ್ಧತಿಯಂತೆ ಎಷ್ಟು ಮೌಲ್ಯ ಆಗಬಹುದು ಎಂಬುದನ್ನು ಪ್ರತಿನಿಧಿಸುವಂತೆ ಸಿದ್ಧಮಾಡಿದ್ದಾರೆ.
  3. ನಿಮ್ಮ ಭಾಷೆಯಲ್ಲಿ ಈಗಾಗಲೇ ಉಪಯೋಗಿಸುತ್ತಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಬಹುದು. ಹಾಗೆ ಮಾಡಬೇಕಾದರೆ ಮೆಟ್ರಿಕ್ ಪದ್ಧತಿಗೆ ನಿಮ್ಮ ಅಳತೆ ಪರಿಮಾಣಗಳು ಎಷ್ಟರಮಟ್ಟಿಗೆ ಸರಿಹೊಂದುತ್ತದೆ ಎಂದು ತಿಳಿದುಕೊಳ್ಳಬೇಕು ಮತ್ತು ಪ್ರತಿಯೊಂದು ಅಳತೆ ಪರಿಮಾಣಗಳನ್ನು ಗುರುತಿಸಬೇಕು.
  4. ನಿಮ್ಮ ಜನರಿಗೆ ಗೊತ್ತಿರುವ ಅಳತೆ, ಪರಿಮಾಣಗಳನ್ನು ULBಯಅಳತೆ ಪರಿಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ.
  5. ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪರಿಮಾಣಗಳನ್ನು ULB ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿದ್ದಂತೆ ಬಳಸಿಕೊಳ್ಳಿ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ.

ಇಲ್ಲಿರುವ ಎಲ್ಲಾ ಕೌಶಲ್ಯಗಳನ್ನು ಯೆಶಾಯ 5:10ರಂತೆ ಈ ಕೆಳಗೆ ಕೊಟ್ಟಿರುವ ರೀತಿಯಲ್ಲಿ ಅಳವಡಿಸಿದೆ.

  • ನಾಲ್ಕು ಹೆಕ್ಟೇರ್ ಭೂಮಿಯು ನಾಲ್ಕು ಕೊಳಗದಷ್ಟೇ ದ್ರಾಕ್ಷಾರಸವನ್ನು ಕೊಡುವುದು., ಒಂದು ಹೋಮರ್ ಬೀಜದಿಂದ ಒಂದು ಎಫಾದಷ್ಟೇ ದವಸವು ಸಿಕ್ಕಿತು (ಯೆಶಾಯ 5:10 ULB)
  1. ULB ಯಿಂದ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವಅಳತೆ ಪರಿಮಾಣಗಳು ಮೂಲ ಲೇಖಕರು ಬಳಸಿದಂತವು. ಈ ಪದಗಳನ್ನು ULBಯಲ್ಲಿರುವ ಧ್ವನಿ ಉಚ್ಛರಣಾ ಪದಗಳಂತೆ ಅದೇ ರೀತಿ ಬಳಸಬೇಕು ನೋಡಿ. (see Copy or Borrow Words)

    • " ನಾಲ್ಕು ಹೆಕ್ಟೇರ್ ದ್ರಾಕ್ಷೆ ತೋಟವು ಒಂದೇ ಒಂದು ಬತ್,ಮತ್ತು ಹೋಮರ್ಬೀಜವು ಒಂದೇ ಒಂದು ಎಫಾ. ದವಸವನ್ನು ನೀಡಿತು."
  2. ULBಯಲ್ಲಿ ಕೊಟ್ಟಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ. ಸಾಮಾನ್ಯವಾಗಿ ಇದರಲ್ಲಿ ಮೆಟ್ರಿಕ್ ಅಳತೆ ಪರಿಮಾಣಗಳನ್ನು ಬಳಸಲಾಗಿದೆ. UDB ಭಾಷಾಂತರಗಾರರು ಈಗಾಗಲೇ ಮೆಟ್ರಿಕ್ ಪದ್ಧತಿಯಂತೆ ಎಷ್ಟು ಮೌಲ್ಯವಾಗಬಹುದು ಎಂದು ಗುರುತಿಸಿ ಇದನ್ನು ಹೇಗೆ ಪ್ರತಿನಿಧಿಸಬೇಕು ಎಂಬುದನ್ನು ತಿಳಿಸಿದ್ದಾರೆ.

    • " ನಾಲ್ಕು ಹೆಕ್ಟೇರ್ ದ್ರಾಕ್ಷೆತೋಟವು ಇಪ್ಪತ್ತೆರಡು ಲೀಟರ್ ಗಳು ಮಾತ್ರ, ದ್ರಾಕ್ಷಾರಸ ಕೊಡುತ್ತದೆಮತ್ತು ಹತ್ತು ಪುಟ್ಟಿಬೀಜವು ಒಂದೇ ಒಂದು ಪುಟ್ಟಿಧಾನ್ಯ ನೀಡಿದೆ."
    • " ನಾಲ್ಕು ಹೆಕ್ಟೇರ್ ದ್ರಾಕ್ಷೆ ತೋಟವು ಇಪ್ಪತ್ತೆರಡು ಲೀಟರ್ ಗಳಷ್ಟು , ದ್ರಾಕ್ಷಾರಸ ನೀಡಿದೆ. ಮತ್ತು 220 ಲೀಟರ್ ಗಳಷ್ಟು ಬೀಜ ಇಪ್ಪತ್ತೆರಡು ಲೀಟರ್ ಗಳಷ್ಟು ಮಾತ್ರ ಧಾನ್ಯ ನೀಡಿದೆ."
  3. ಈಗಾಗಲೇ ನಿಮ್ಮ ಭಾಷೆಯಲ್ಲಿ ಬಳಸಿರುವ ಅಳತೆ ಪರಿಮಾಣಗಳನ್ನು ಬಳಸಿ. ಇದನ್ನು ಮಾಡಲು ಮೆಟ್ರಿಕ್ ಪದ್ಧತಿಯ ಅಳತೆಗೆ ತಕ್ಕಂತೆ ನಿಮಗೆ ಗೊತ್ತಿರುವ ಅಳತೆಗಳನ್ನು ಸರಿ ಹೊಂದಿ ಸಲು ತಿಳಿದಿರಬೇಕು ಮತ್ತು ಪ್ರತಿಯೊಂದು ಅಳತೆ ಪರಿಮಾಣಗಳು ನಿಮಗೆ ಗುರುತಿಸಲು ತಿಳಿದಿರಬೇಕು.

    • " ನಾಲ್ಕು ಹೆಕ್ಟೇರ್ ದ್ರಾಕ್ಷೆ ತೋಟ ಆರು ಗ್ಯಾಲನ್ ದ್ರಾಕ್ಷಾರಸ ನೀಡಿದರೆ ಮತ್ತು ಆರು ಮತ್ತು ಅರ್ಧ/ ಆರೂವರೆ ಬುಶೆಲ್ ಗಳಷ್ಟು ಬೀಜ ಇಪ್ಪತ್ತು ಕ್ವಾರ್ಟ್ಸ್ ನಷ್ಟು ಮಾತ್ರ ಧಾನ್ಯ ನೀಡುತ್ತದೆ."
  4. ನಿಮ್ಮ ಜನರಿಗೆ ಗೊತ್ತಿರುವ ಅಳತೆ, ಪರಿಮಾಣಗಳನ್ನು ULBಯಅಳತೆ ಪರಿಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ. ಕೆಳಗಿನ ಉದಾಹರಣೆಗಳು ಎರಡೂ ಅಳತೆ ಪರಿಮಾಣಗಳು ವಾಕ್ಯಭಾಗಗಳಲ್ಲಿ ಇರುವುದನ್ನು ತೋರಿಸುತ್ತದೆ.

    • “ನಾಲ್ಕು ಹೆಕ್ಟೇರ್ ದ್ರಾಕ್ಷೆ ತೋಟ ಒಂದೇ ಒಂದು” ಬತ್ " (ಆರು ಗ್ಯಾಲನ್ ಗಳು) ನಷ್ಟು ಮಾತ್ರ ದ್ರಾಕ್ಷಾರಸ ನೀಡುತ್ತದೆ., ಒಂದೇಒಂದು ಹೊಮರ್ (ಆರು ಬುಶೆಲ್ ಗಳಷ್ಟು ಬೀಜವು ಒಂದೇ ಒಂದು ಎಫಾ (ಇಪ್ಪತ್ತು ಕ್ವಾರ್ಟ್ಸ್) ದಷ್ಟು ಮಾತ್ರ ಧಾನ್ಯ ನೀಡುತ್ತದೆ."
  5. ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪರಿಮಾಣಗಳನ್ನು ULB ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿದ್ದಂತೆ ಬಳಸಿಕೊಳ್ಳಿ. ಕೆಳಗಿನವುಗಳು ULB ಅಳತೆ ಪರಿಮಾಣಗಳನ್ನು ಅಡಿ ಟಿಪ್ಪಣಿಯಲ್ಲಿ ತೋರಿಸಲಾಗಿದೆ.

    • " ನಾಲ್ಕು ಹೆಕ್ಟೇರ್ ನಷ್ಟು ದ್ರಾಕ್ಷೆ ತೋಟ ಇಪ್ಪತ್ತೆರಡು ಲೀಟರ್ ಗಳಷ್ಟು ಮಾತ್ರ ದ್ರಾಕ್ಷಾರಸ ನೀಡುತ್ತದೆ., 1,ಮತ್ತು 220 ಲೀಟರ್ ಗಳು 2ಬೀಜ ಇಪ್ಪತ್ತೆರಡು ಲೀಟರ್ ನಷ್ಟುಮಾತ್ರ ಧಾನ್ಯ ನೀಡುತ್ತದೆ 3." ಅಡಿ ಟಿಪ್ಪಣಿಗಳು ಹೀಗಿರುತ್ತವೆ
      • [1]ಒಂದು ಬತ್
      • [2]ಒಂದು ಹೋಮರ್
      • [3]ಒಂದು ಎಫಾ

ಒಂದು ಅಳತೆಯ ಪರಮಾಣವನ್ನು ಬಳಸಲು ತಿಳಿದಿದ್ದರೆ.

ಕೆಲವೊಮ್ಮೆಹಿಬ್ರೂಭಾಷೆ ಒಂದು ಅಳತೆಯ ಪರಿಮಾಣವನ್ನು ನಿರ್ದಿಷ್ಟವಾಗಿ ಹೇಳದಿದ್ದರೂ ಸಂಖ್ಯೆಯನ್ನು ಮಾತ್ರ ಉಪಯೋಗಿಸುತ್ತದೆ. ಇಂತಹ ಸಂದರ್ಭದಲ್ಲಿ ಇಂಗ್ಲೀಷ್ ಪ್ರತಿಗಳು ULB ಮತ್ತು UDB, ಪ್ರತಿಗಳು ಪದಗಳ ಮೂಲಕ ಅಳತೆ "ಪರಿಮಾಣ"ಗಳನ್ನು ಗುರುತಿಸುತ್ತವೆ.

  • ಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಸೇರು ಮೆದೆಗೆ ಬಂದಾಗ ಹತ್ತು ಸೇರು ,ಧಾನ್ಯ ಮಾತ್ರ ಸಿಕ್ಕುತ್ತಿತ್ತಲ್ಲವೇ? ಐವತ್ತು ಸೇರು ,ದ್ರಾಕ್ಷಾರಸವನ್ನು ಮೊಗೆಯಬೇಕೆಂದು ತೊಟ್ಟಿಗೆ ಬಂದಾಗ ಇಪ್ಪತ್ತು ಸೇರು . ಮಾತ್ರ ದೊರೆಯುತ್ತದೆ (ಹಗ್ಗಾಯ 2:16 ULB)

####ಭಾಷಾಂತರ ಕೌಶಲ್ಯಗಳು.

  1. ಅಳತೆ/ ಪರಿಮಾಣ ಬಳಸದೆ ಸಂಖ್ಯೆಗಳನ್ನು ಬಳಸಿ ಅಕ್ಷರಷಃ ಭಾಷಾಂತರಿಸಿ.
  2. " ಅಳತೆ " ಪರಿಮಾಣ, ಮೌಲ್ಯ ಎಂಬ ಸಾಮಾನ್ಯ ಪದಗಳನ್ನು ಬಳಸಿ.
  3. ದವಸಧಾನ್ಯಗಳ ಬಗ್ಗೆ ಹೇಳುವಾಗ ಪುಟ್ಟಿ, ಕೊಳಗ ಎಂಬ ಪದಗಳನ್ನು, ದ್ರವರೂಪದ ಬಗ್ಗೆ ಹೇಳುವಾಗ “ಜಾಡಿ” ಎಂಬ ಪದವನ್ನು ಬಳಸಿ.
  4. ಈಗಾಗಲೇ ನಿಮ್ಮ ಭಾಷೆಯಲ್ಲಿ ಅಳತೆ, ಪರಿಮಾಣಗಳಿಗೆ ಬಳಸುತ್ತಿರುವ ಪದಗಳನ್ನೇ ಬಳಸಿಕೊಳ್ಳಿ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ.

ಈ ಎಲ್ಲಾ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ.

  • ಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಸೇರುಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಸೇರು ಮೆದೆಗೆ ಬಂದಾಗ ಹತ್ತು ಸೇರು ,ಧಾನ್ಯ ಮಾತ್ರ ಸಿಕ್ಕುತ್ತಿತ್ತಲ್ಲವೇ? ಐವತ್ತು ಸೇರು ,ದ್ರಾಕ್ಷಾರಸವನ್ನು ಮೊಗೆಯಬೇಕೆಂದು ತೊಟ್ಟಿಗೆ ಬಂದಾಗ ಇಪ್ಪತ್ತು ಸೇರು . ಮಾತ್ರ ದೊರೆಯುತ್ತದೆ (ಹಗ್ಗಾಯi 2:16 ULB)
  1. ಅಳತೆ/ ಪರಿಮಾಣ ಬಳಸದೆ ಸಂಖ್ಯೆಗಳನ್ನು ಬಳಸಿ ಅಕ್ಷರಷಃ ಭಾಷಾಂತರಿಸಿ.

    • ಯಾರಾದರೂ ಒಬ್ಬನು ಇಪ್ಪತ್ತು ಸೇರುಮೆದೆಗೆ ಬಂದಾಗ ಅಲ್ಲಿ ಹತ್ತು ಸೇರು ,ಧಾನ್ಯ ಮಾತ್ರ ಇತ್ತು ಐವತ್ತು ಸೇರು,ಮೌಲ್ಯದ ದ್ರಾಕ್ಷಾರಸವನ್ನು ಮೊಗೆಯಲು ಬಂದಾಗ ಇಪ್ಪತ್ತು ಸೇರು .ದ್ರಾಕ್ಷಾರಸ ಮಾತ್ರ ದೊರೆಯಿತು.
  2. " ಅಳತೆ " ಪರಿಮಾಣ, ಮೌಲ್ಯ ಎಂಬ ಸಾಮಾನ್ಯ ಪದಗಳನ್ನು ಬಳಸಿ.

    • ಯಾರಾದರೂ ಒಬ್ಬನು ಇಪ್ಪತ್ತು ಸೇರುಮೆದೆಗೆ ಬಂದಾಗ ಅಲ್ಲಿ ಹತ್ತು ಸೇರು ,ಧಾನ್ಯ ಮಾತ್ರ ಇತ್ತು ಐವತ್ತು ಸೇರು,ಮೌಲ್ಯದ ದ್ರಾಕ್ಷಾರಸವನ್ನು ಮೊಗೆಯಲು ಬಂದಾಗ ಇಪ್ಪತ್ತು ಸೇರು .ದ್ರಾಕ್ಷಾರಸ ಮಾತ್ರ ದೊರೆಯಿತು.
  3. ದವಸಧಾನ್ಯಗಳ ಬಗ್ಗೆ ಹೇಳುವಾಗ ಪುಟ್ಟಿ, ಕೊಳಗ ಎಂಬ ಪದಗಳನ್ನು, ದ್ರವರೂಪದ ಬಗ್ಗೆ ಹೇಳುವಾಗ “ಜಾಡಿ” ಎಂಬ ಪದವನ್ನು ಬಳಸಿ.

    • ಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಪುಟ್ಟಿಧಾನ್ಯವನ್ನು ಪಡೆಯಲು ಮೆದೆಗೆ ಬಂದಾಗ ಹತ್ತು ಪುಟ್ಟಿ ,ಧಾನ್ಯವನ್ನು ಪಡೆದನು ಹಾಗೆಯೇ ಐವತ್ತು ಜಾಡಿ ದ್ರಾಕ್ಷಾರಸ ಪಡೆಯಲು ಬಂದಾಗ ಇಪ್ಪತ್ತು ಜಾಡಿ.ಮಾತ್ರ ದೊರೆಯಿತು.
  4. ಈಗಾಗಲೇ ನಿಮ್ಮ ಭಾಷೆಯಲ್ಲಿ ಭಾಷಾಂತರ ಮಾಡುವಾಗ ಬಳಸುತ್ತಿರುವ ಅಳತೆಪರಿಮಾಣಗಳನ್ನು ಬಳಸಿಕೊಳ್ಳಿ.

    • ಯಾರಾದರೂ ಮೆದೆಗೆ ಬಂದು ಇಪ್ಪತ್ತು ಲೀಟರ್ ಗಳಷ್ಟು ಧಾನ್ಯ ಪಡೆಯಲು ಬಂದರೆ ಹತ್ತು ಲೀಟರ್ ಗಳಷ್ಟು ಮಾತ್ರ ಮತ್ತು ಯಾರಾದರೂ ದ್ರಾಕ್ಷೆ ತೋಟಕ್ಕೆ, ಐವತ್ತು ಲೀಟರ್ ಗಳಷ್ಟು ದ್ರಾಕ್ಷಾರಸ ಪಡೆಯಲು ಬಂದರೆ ಇಪ್ಪತ್ತು ಲೀಟರ್ ಮಾತ್ರ ದೊರೆಯಿತು

ಸತ್ಯವೇದದಲ್ಲಿನ ತೂಕಗಳು.

Translation Manual :: Just-in-Time Learning Modules :: Unknowns :: Biblical Weight

ವಿವರಣೆ

ಈ ಕೆಳಗೆ ಕೊಟ್ಟಿರುವ ಪದಗಳು ಸತ್ಯವೇದದಲ್ಲಿ ಬರುವ ಸಾಮಾನ್ಯ ತೂಕದ ಅಂಶಗಳು. “ಶೆಕಲ್” ಎಂದರೆ “ತೂಕ,” (11.5 ಗ್ರಾಂ ತೂಕದ ಬೆಳ್ಳಿ) ಇದರಲ್ಲಿ ತೂಕವನ್ನು ವಿವರಿಸಿದೆ. ಕೆಲವು ತೂಕಗಳನ್ನು ಹಣದ ರೂಪದಲ್ಲಿ ಬಳಸಲಾಗಿದೆ. ಕೆಳಗೆಕೊಟ್ಟಿರುವ ಮೆಟ್ರಿಕ್ ಮೌಲ್ಯಗಳನ್ನು ಕೆಳಗೆ ಕೊಟ್ಟಿರುವ ಸತ್ಯವೇದ ಆಧಾರಿತ ತೂಕಕ್ಕೆ ಅಷ್ಟೇನು ಸಮಾನವಾಗಿಲ್ಲ. ಸತ್ಯವೇದದ ಅಳತೆಗಳು ಮೌಲ್ಯ / ಹಣದ ರೂಪದಲ್ಲಿ ಕಾಲಕಾಲಕ್ಕೆ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಭಿನ್ನವಾಗಿರುತ್ತದೆ. ಕೆಳಗೆ ನೀಡಿರುವ ಸಮಾನ ಅಳತೆಯ ಪ್ರಯತ್ನ ಸರಾಸರಿ ಅಳತೆ ಪ್ರಮಾಣವಾಗಿದೆ.

ಮೂಲ ಅಳತೆ

ಶೆಕಲ್ | ಶೆಕೆಲ್|11ಗ್ರಾಂ | - | ಬೆಕ್ | 1/2 ಶೆಕೆಲ್ | 5.7 ಗ್ರಾಂ | - | ಪಿಮ್| 2/3 ಶೆಕೆಲ್ l | 7.6 ಗ್ರಾಂ | - | ಗೇರಾ 1/20 ಶೆಕೆಲ್ | 0.57 ಗ್ರಾಂ | - | ಮಿನ | 50 ಶೆಕೆಲ್ | 550 ಗ್ರಾಂ | 1/2 ಕಿಲೋ ಗ್ರಾಂ | ತಲಾಂತು | 3,000 ಶೆಕೆಲ್ | - | 34 ಕಿಲೋ ಗ್ರಾಂ |

ಭಾಷಾಂತರ ತತ್ವಗಳು

  1. ಸತ್ಯವೇದದಲ್ಲಿ ಬರುವ ಜನರು ಆಧುನಿಕ ಅಳತೆಗಳಾದ ಮೀಟರ್ ಗಳು, ಲೀಟರ್ ಗಳು ಮತ್ತು ಕಿಲೋಗ್ರಾಂಗಳನ್ನು ಬಳಸಿರಲಿಲ್ಲ. ಮೂಲ ಅಳತೆಗಳನ್ನು ಉಪಯೋಗಿಸುವುದರಿಂದ ಓದುಗರು ಸತ್ಯವೇದವು ನಿಜವಾಗಲೂ ತುಂಬಾ ಹಿಂದೆ ಬರೆಯಲ್ಪಟ್ಟದ್ದು ಎಂದು ತಿಳಿಯುವುದಲ್ಲದೆ ಅಂದಿನ ಜನರು ಇಂದಿನ ಅಳತೆಗಳನ್ನು ಬಳಸಲಿಲ್ಲ ಎಂಬುದನ್ನು ತಿಳಿಯುತ್ತಾರೆ.
  2. ಆಧುನಿಕ ಅಳತೆ ಪ್ರಮಾಣಗಳ ಮೂಲಕ ತಿಳಿಸುವುದರಿಂದ ಅಂದಿನ ಅಳತೆಗಳನ್ನು ಸತ್ಯವೇದದ ಮೂಲಕ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
  3. ಯಾವ ಅಳತೆಯನ್ನೇ ಬಳಸಿದರೂ ಅದು ಒಳ್ಳೆಯದೇ ಸಾಧ್ಯವಾದರೆ ವಾಕ್ಯಭಾಗದಲ್ಲಿರುವ ಅಳತೆಗಳನ್ನು ಅರ್ಥವಾಗುವ ರೀತಿಯಲ್ಲಿ ಹೇಳಬೇಕು ಅಥವಾ ಅಡಿ ಟಿಪ್ಪಣಿಯಲ್ಲಿ ವಿವರಿಸಬೇಕು.
  4. ನೀವು ಸತ್ಯವೇದದ ಅಳತೆಗಳನ್ನು ಬಳಸಿದ್ದರೆ ಅದಕ್ಕೆ ಸಮಾನ ಅಳತೆಗಳನ್ನು ಓದುಗರಿಗೆ ನೀಡುವ ಪ್ರಯತ್ನ ಮಾಡಬೇಡಿ. ಉದಾಹರಣೆಗೆ ಒಂದು".ಗೇರಾ ". ಎಂಬುದನ್ನು ಭಾಷಾಂತರ ಮಾಡುವಾಗ ".57 ಗ್ರಾಂ"ಗಳು ಎಂದು ತಿಳಿಸಿದರೆ ಓದುಗರು ಇದು ನಿಖರವಾದ ಮೌಲ್ಯವುಳ್ಳ ಅಳತೆ ಎಂದು ತಿಳಿಯಬಹುದು. ಅದರ ಬದಲು “ಅರ್ಧ ಗ್ರಾಂ.” ಎಂದು ಹೇಳುವುದು ಸರಿಯಾಗಿರಬಹುದು.
  5. ಕೆಲವೊಮ್ಮೆ " ಸುಮಾರು " ಎಂಬ ಪದವನ್ನು ಬಳಸಿ ಉಪಯೋಗಿಸುವ ಅಳತೆ ಪದದ ಅರ್ಥ ಸಮಾನವಲ್ಲ ಎಂದು ತಿಳಿಸುತ್ತದೆ. ಉದಾಹರಣೆಗೆ 2 ನೇ ಸಮುವೇಲ 21:16ರಲ್ಲಿ ಹೇಳಿರುವಂತೆ ಗೊಲಿಯಾತನ ಭರ್ಜಿಯ ತೂಕವು 300 ಶೆಕಲ್ಸ್ ತೂಕದ್ದಾಗಿತ್ತು ಇದನ್ನು “3300 ಗ್ರಾಂ ಗಳು” ಅಥವಾ “3.3 ಕಿಲೋಗ್ರಾಂಗಳು,ಎಂದು ಭಾಷಾಂತರ ಮಾಡುವ ಬದಲು ಅದನ್ನು” ಸುಮಾರು ಮೂರು ಮತ್ತು ಅರ್ಧ ಕಿಲೋಗ್ರಾಂಗಳು " ಎಂದು ಭಾಷಾಂತರಿಸಬೇಕು."
  6. ಸತ್ಯವೇದದಲ್ಲಿ ದೇವರು ಜನರಿಗೆ ಎಷ್ಟು ತೂಕವನ್ನು ಅಳತೆಮಾಡಬೇಕು ಎಂದು ಹೇಳಿದಾಗ ಜನರು ಅದರಂತೆ ತೂಕವನ್ನು ಅಳತೆ ಮಾಡಿದಾಗ ಅದನ್ನು " ಸುಮಾರು " ಎಂಬ ಪದವನ್ನು ಬಳಸಿ ತೂಕದ ಅಳತೆಯನ್ನು ಭಾಷಾಂತರ ಮಾಡಬಾರದು. ಹೀಗೆ ಮಾಡದಿದ್ದರೆ ದೇವರು ನಿಖರವಾದ ಅಳತೆ, ತೂಕದ ಬಗ್ಗೆ ಗಮನ ವಹಿಸದೆ ತೂಕಮಾಡಿದಂತೆ ಅಭಿಪ್ರಾಯ ಮೂಡುತ್ತದೆ.

ಭಾಷಾಂತರ ಕೌಶಲ್ಯಗಳು.

  1. ULBಯಲ್ಲಿರುವ ಅಳತೆಗಳನ್ನು ಬಳಸಿ. ಇದರಲ್ಲಿ ಬಳಸಿರುವ ಅಳತೆ, ಪ್ರಮಾಣಗಳು ಮೂಲ ಲೇಖಕರು ಸತ್ಯವೇದದಲ್ಲಿ ಬಳಸಿದವುಗಳು. ULB ಯಲ್ಲಿ ಬಳಸಿದ ಅಕ್ಷರಗಳು ಮತ್ತು ಅವುಗಳ ಧ್ವನಿ ಉಚ್ಛಾರಣೆಗಳು ಒಂದೇ ರೀತಿಯಾಗಿರಬೇಕೆಂದು ಗಮನವಹಿಸಬೇಕು.(ಪ್ರತಿಮಾಡಿ ಅಥವಾ ಬೇರೇ ಪದಗಳನ್ನು ತಂದುಕೊಳ್ಳಬಹುದು ಈ ಆಧ್ಯಾಯವನ್ನು ನೋಡಿ
  2. UDBಯಲ್ಲಿ ಮೆಟ್ರಿಕ್ ಪದ್ಧತಿಯ ಅಳತೆಗಳನ್ನು ಬಳಸಿ. UDBಯಂತೆ ಭಾಷಾಂತರ ಮಾಡುವವರು ಈಗಾಗಲೇ ಮೆಟ್ರಿಕ್ ಪದ್ಧತಿಯಂತೆ ಅಳತೆ ಮತ್ತು ಮೌಲ್ಯಗಳನ್ನು ನಿಗಧಿಪಡಿಸಿದ್ದಾರೆ.
  3. ಈಗಾಗಲೇ ನಿಮ್ಮ ಭಾಷೆಯಲ್ಲಿ ಬಳಸಿರುವ ಅಳತೆ ಪ್ರಮಾಣಗಳನ್ನು ಬಳಸಿಕೊಳ್ಳಿ. ಈ ರೀತಿ ಮಾಡುವುದಾದರೆ ನೀವು ಬಳಸಿರುವ ಅಳತೆಗಳನ್ನು ತಿಳಿದುಕೊಳ್ಳಬೇಕು ಮತ್ತು ಅವು ಮೆಟ್ರಿಕ್ ಪದ್ಧತಿಯ ಅಳತೆ ಪ್ರಮಾಣಗಳಿಗೆ ಸಮಾನವಾಗಿದೆಯೇ ಎಂದು ಪ್ರತಿಯೊಂದು ಅಳತೆಗಳನ್ನು ಹೋಲಿಸಿ ನೋಡಬೇಕು.
  4. ULBಯಲ್ಲಿರುವ ಅಳತೆ ಪ್ರಮಾಣಗಳನ್ನು ನಿಮ್ಮ ಜನರು ಉಪಯೋಗಿಸುವ ಅಳತೆ ಪ್ರಮಾಣಗಳನ್ನು ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿ ಬಳಸಿರುವ ಅಳತೆಗಳನ್ನು ಬಳಸಿಕೊಳ್ಳಿ.
  5. ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪ್ರಮಾಣಗಳನ್ನು ULB ಅಳತೆ ಪ್ರಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ.

ಎಲ್ಲಾ ಕೌಶಲ್ಯಗಳು ಕೆಳಗೆ ಕೊಟ್ಟಿರುವಂತೆ (ವಿಮೋಚನಾ ಕಾಂಡ38:29 ULB)ರಂತೆ ಅಳವಡಿಸಿದೆ.

  • ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಲೆಕ್ಕ ಎಪ್ಪತ್ತು ತಲಾಂತು ಮತ್ತು 2,400 ಶೆಕಲ್ ಗಳು s. (ವಿಮೋಚನಾ ಕಾಂಡ 38:29 ULB)
  1. ULBಯಿಂದ ಅಳತೆ ಪ್ರಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವ ಎಲ್ಲಾ ಅಳತೆ ಪ್ರಮಾಣಗಳು ಮೂಲಲೇಖಕರು ಬರೆಯಲು ಬಳಸಿದಂತವು. ULBಯಲ್ಲಿ ಬಳಸಿದ ಅಕ್ಷರಗಳು ಮತ್ತು ಅವುಗಳ ಧ್ವನಿ ಉಚ್ಛಾರಣೆಗಳು ಒಂದೇ ರೀತಿಯಾಗಿರಬೇಕೆಂದು ಗಮನ ವಹಿಸಬೇಕು.([ಪ್ರತಿಮಾಡಿ ಅಥವಾ ಬೇರೇ ಪದಗಳನ್ನು ತಂದುಕೊಳ್ಳಬಹುದು] (…/translate-transliterate/01.md)ಈ ಆಧ್ಯಾಯವನ್ನು ನೋಡಿ)
  • ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಲೆಕ್ಕ ಎಪ್ಪತ್ತು ತಲಾಂತು ಮತ್ತು 2,400 ಶೆಕಲ್ ಗಳು s. (ವಿಮೋಚನಾ ಕಾಂಡ 38:29 ULB)
  1. UDB.ಯಲ್ಲಿ ಕೊಟ್ಟಿರುವ ಮೆಟ್ರಿಕ್ ಅಳತೆ ಪ್ರಮಾಣಗಳನ್ನು ಬಳಸಿಕೊಳ್ಳಿ. UDBಯಂತೆ ಭಾಷಾಂತರ ಮಾಡುವವರು ಈಗಾಗಲೇ ಮೆಟ್ರಿಕ್ ಪದ್ಧತಿಯಂತೆ ಅಳತೆ ಮತ್ತು ಮೌಲ್ಯಗಳನ್ನು ನಿಗಧಿಪಡಿಸಿದ್ದಾರೆ

    • " ಕಾಣಿಕೆ ರೂಪದಲ್ಲಿ ಬಂದ ತಾಮ್ರ 2,400 ಕಿಲೋಗ್ರಾಂಗಳಷ್ಟು ತೂಕವಿತ್ತು ."
  2. ನಿಮ್ಮ ಭಾಷೆಯಲ್ಲಿ ಈಗಾಗಲೇ ಬಳಸಿರುವ ಅಳತೆ ಪ್ರಮಾಣಗಳನ್ನು ಬಳಸಿಕೊಳ್ಳಿ. ಈ ರೀತಿ ಮಾಡುವುದಾದರೆ ನೀವು ಬಳಸಿರುವ ಅಳತೆಗಳನ್ನು ತಿಳಿದುಕೊಳ್ಳಬೇಕು ಮತ್ತು ಅವು ಮೆಟ್ರಿಕ್ ಪದ್ಧತಿಯ ಅಳತೆ ಪ್ರಮಾಣಗಳಿಗೆ ಸಮಾನವಾಗಿದೆಯೇ ಎಂದು ಪ್ರತಿಯೊಂದು ಅಳತೆಗಳನ್ನು ಹೋಲಿಸಿ ನೋಡಬೇಕು.

    • ಕಾಣಿಕೆ ರೂಪದಲ್ಲಿ ಬಂದ ತಾಮ್ರದ ತೂಕವು 5,300 ಪೌಂಡ್ ಗಳಷ್ಟಿತ್ತು ."
  3. ULBಯಲ್ಲಿರುವ ಅಳತೆ ಪ್ರಮಾಣಗಳನ್ನು ಉಪಯೋಗಿಸಿರಿ. ನಿಮ್ಮ ಜನರು ಉಪಯೋಗಿಸುವ ಅಳತೆ ಪ್ರಮಾಣಗಳನ್ನು ಮತ್ತು.ಅಡಿ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಬಳಸಿರಿ. ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ವಾಕ್ಯಭಾಗದಲ್ಲಿರುವ ಎರಡೂ ಅಳತೆಗಳನ್ನು ತಿಳಿಸುತ್ತದೆ.

    • “ಕಾಣಿಕೆಯಾಗಿ ಬಂದ ತಾಮ್ರ ಎಪ್ಪತ್ತು ತಲಾಂತುಗಳು (2,380 ಕಿಲೋಗ್ರಾಂಗಳು)ಮತ್ತು 2,400 ಶೆಕಲ್ ಗಳು (26.4 ಕಿಲೋಗ್ರಾಂಗಳು).”
  4. ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪ್ರಮಾಣಗಳನ್ನು ULB ಅಳತೆ ಪ್ರಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ ಅಡಿ ಟಿಪ್ಪಣಿಯಿಂದಾಗಬೇಕು. ಕೆಳಗಿನ ಉದಾಹರಣೆಗಳಲ್ಲಿ ULB ಅಳತೆ ಪ್ರಮಾಣಗಳನ್ನು ಟಿಪ್ಪಣಿಯಲ್ಲಿ ಇದ್ದಂತೆ ತಿಳಿಸುತ್ತದೆ.

    • " ಕಾಣಿಕೆಯಾಗಿ ಬಂದ ತಾಮ್ರ ಎಪ್ಪತ್ತು ತಲಾಂತುಗಳು ಮತ್ತು 2,400ಶೆಕಲ್ ಗಳಷ್ಟು ತೂಕವಿತ್ತು.1"
    • ಅಡಿ ಟಿಪ್ಪಣಿ ಈ ರೀತಿ ತೋರುತ್ತದೆ. [1]ಇದರ ಒಟ್ಟು ಮೊತ್ತ 2,400 ಕಿಲೋಗ್ರಾಂಗಳು

ಸತ್ಯವೇದದಲ್ಲಿನ ಹಣದ ಮೌಲ್ಯ.

Translation Manual :: Just-in-Time Learning Modules :: Unknowns :: Biblical Money

###ವಿವರಣೆ.

ಹಳೆ ಒಡಂಬಡಿಕೆಯ ಕಾಲದಲ್ಲಿ ಜನರು ಲೋಹಗಳನ್ನು ತೂಕ ಮಾಡುತ್ತಿದ್ದರು. ಉದಾಹರಣೆಗೆ ಬೆಳ್ಳಿ, ಬಂಗಾರ ಮುಂತಾದವುಗಳನ್ನು ತೂಕಮಾಡಿಕೊಟ್ಟು ಅದಕ್ಕೆ ಬದಲಾಗಿ ಅಷ್ಟೇ ತೂಕದ ಬೇಕಾದ ವಸ್ತುಗಳನ್ನು ಪಡೆಯುತ್ತಿದ್ದರು. ಕೆಲವುಕಾಲದ ನಂತರ ಲೋಹಗಳನ್ನು ಬಳಸಿ ನಾಣ್ಯಗಳನ್ನು ಮಾಡಲು ತೊಡಗಿದರು. ಪ್ರತಿಯೊಂದು ನಾಣ್ಯಕ್ಕೂ ಅದರದೇ ಆದ ಮೌಲ್ಯವನ್ನು ನಿಗಧಿಪಡಿಸಿದ್ದರು.

ಡಾರಿಕ್ ಅಂತಹ ಒಂದು ನಾಣ್ಯ. ಹೊಸ ಒಡಂಬಡಿಕೆಯ ಕಾಲದಲ್ಲಿ ಜನರು ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಬಳಸುತ್ತಿದ್ದರು. ಕೆಳಗೆ ಕೊಟ್ಟಿರುವ ಎರಡು ಪಟ್ಟಿಗಳಲ್ಲಿ ಹಳೆ ಒಡಂಬಡಿಕೆಯ ಕಾಲದಲ್ಲಿ ಮತ್ತು ಹೊಸ ಒಡಂಬಡಿಕೆಯ ಕಾಲದಲ್ಲಿ ಬಳಸುತ್ತಿದ್ದ ಹಣ ಮತ್ತು ಅವುಗಳ ಮೌಲ್ಯವನ್ನು ತಿಳಿಸಿದೆ. ಹಳೆ ಒಡಂಬಡಿಕೆಯ ಕಾಲದ ಹಣಗಳಿಗೆ ಯಾವ ಲೋಹವನ್ನು ಬಳಸುತ್ತಿದ್ದರು, ಅವು ಎಷ್ಟು ತೂಕ ಉಳ್ಳದ್ದು ಮತ್ತು ಎಷ್ಟು ಮೌಲ್ಯ ಉಳ್ಳದ್ದು ಎಂದು ತಿಳಿಸಿದೆ. ಹೊಸ ಒಡಂಬಡಿಕೆಯ ಕಾಲದ ಹಣಗಳಿಗೆ ಎಷ್ಟು ಮೌಲ್ಯ ಉಳ್ಳದ್ದು ಎಂದು ತಿಳಿಸಿದೆ. ಇದರೊಂದಿಗೆ ಒಂದು ದಿನದ ಸಂಬಳಕ್ಕೆ ಎಷ್ಟು ಹಣ ಎಂಬುದನ್ನು ತಿಳಿಸುತ್ತದೆ.

ಹಳೆ ಒಡಂಬಡಿಕೆ ಕಾಲದ ಅಳತೆ ಲೋಹ |ತೂಕ |

ಡೆರಿಕ್ | ಬಂಗಾರದ ನಾಣ್ಯ | 8.4 ಗ್ರಾಂ | ಶೆಕೆಲ್ | ವಿವಿಧ ಲೋಹಗಳು | 11 ಗ್ರಾಂ | ತಲಾಂತು | ವಿವಿಧ ಲೋಹಗಳು | 33 ಕೇ.ಜಿ

ಹೊಸ ಒಡಂಬಡಿಕೆಯ ಅಳತೆ | ಲೋಹ | ದಿನಗೂಲಿ ----------“ ----------- ದಿನಾರಿಗಳು/ದಿನಾರಿ | ಬೆಳ್ಳಿ ನಾಣ್ಯ | 1 ದಿನ 1 | ಡ್ರಾಕ್ ಮ | ಬೆಳ್ಳಿ ನಾಣ್ಯ | 1 ದಿನ 1 | ಮೈಟ್ | ತಾಮ್ರದ ನಾಣ್ಯ | 1/64 ದಿನ | ಶೆಕೆಲ್ | ಬೆಳ್ಳಿ ನಾಣ್ಯ | 4 ದಿನಗಳು | ತಲಾಂತು| ಬೆಳ್ಳಿ | 6,000 ದಿವಸಗಳು |

ಭಾಷಾಂತರ ತತ್ವಗಳು.

ಆಧುನಿಕ ಯುಗದ ಹಣ ಮೌಲ್ಯವನ್ನು ಇಲ್ಲಿ ಬಳಸಬೇಡಿ. ಏಕೆಂದರೆ ಈ ಮೌಲ್ಯಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಈ ರೀತಿ ಮಾಡಿದರೆ ಸತ್ಯವೇದದ ಭಾಷಾಂತರ ತಪ್ಪಾಗಬಹುದು ಮತ್ತು ಹಳೆಯ ಮೌಲ್ಯಕ್ಕೆ ಹೊಸ ಮೌಲ್ಯ ಹೊಂದದೆ ಹೋಗಬಹುದು.

ಭಾಷಾಂತರ ಕೌಶಲ್ಯಗಳು.

ಏಕೆಂದರೆ ಹಣದ ಮೌಲ್ಯಗಳು ಹಳೆ ಒಡಂಬಡಿಕೆಯಲ್ಲಿ ಅದರ ತೂಕದ ಮೇಲೆ ಅವಲಂಬಿಸಿರುತ್ತದೆ. ಹಳೆ ಒಡಂಬಡಿಕೆಯ ಈ ತೂಕಗಳನ್ನು ಭಾಷಾಂತರಿಸುವಾಗ [ಸತ್ಯವೇದದ ತೂಕಗಳನ್ನು]ನೋಡಿ. ಕೆಳಗಿನ ಕೌಶಲ್ಯಗಳು ಹೊಸ ಒಡಂಬಡಿಕೆಯಲ್ಲಿನ ಹಣದ ಮೌಲ್ಯವನ್ನು ಭಾಷಾಂತರಿಸುವ ಬಗ್ಗೆ ತಿಳಿಸುತ್ತದೆ.

  1. ಸತ್ಯವೇದದಲ್ಲಿನ ಪದಗಳನ್ನು ಮತ್ತು ಅದರ ಪ್ರತಿಯೊಂದು ಅಕ್ಷರಗಳು ಅದರ ಉಚ್ಛಾರಣೆಗೆ ಸಮಾನ ವಾಗಿರುವಂತೆ ನೋಡಿಕೊಳ್ಳಬೇಕು.
  2. ಈ ನಾಣ್ಯಗಳ ಮೌಲ್ಯ ಹಾಗೂ ಯಾವ ಲೋಹದಿಂದ ಮಾಡಿದ್ದು, ಎಷ್ಟು ರೀತಿಯ ನಾಣ್ಯಗಳನ್ನು ಬಳಸಿದರು ಎಂಬುದನ್ನು ವಿವರಿಸಬೇಕು.
  3. ಈ ನಾಣ್ಯಗಳ ವಿವರವನ್ನು ಸತ್ಯವೇದ ಬರೆದ ಕಾಲದಲ್ಲಿ ಜನರು ಹೇಗೆ ಬಳಸಿದರು ಮತ್ತು ಒಂದುದಿನದ ಗಳಿಕೆಯ ಮೌಲ್ಯವೇನು ಎಂಬುದನ್ನು ವಿವರಿಸಬೇಕು.
  4. ಸತ್ಯವೇದದಲ್ಲಿ ಬಳಸಿರುವ ಪದವನ್ನೇ ಬಳಸಿ, ಸಮಾನ ಮೌಲ್ಯದ ಹಣವನ್ನು ಭಾಷಾಂತರದ ವಾಕ್ಯಭಾಗದಲ್ಲಿ ಮತ್ತು ಟಿಪ್ಪಣಿಯಲ್ಲಿ ಬಳಸಿ.
  5. ಸತ್ಯವೇದದಲ್ಲಿನ ಪದವನ್ನೇ ಬಳಸಿ ಟಿಪ್ಪಣಿಯಲ್ಲಿ ವಿವರಿಸಿ.

###ಭಾಷಾಂತರ ಕೌಶಲ್ಯಗಳು

ಭಾಷಾಂತರ ಕೌಶಲ್ಯಗಳನ್ನು ಲೂಕ7:41ಕ್ಕೆ ಕೆಳಗಿನಂತೆ ಅಳವಡಿಸಬೇಕು.

  • ಒಬ್ಬನು ಐನೂರು ದಿನಾರಿ (ಹಣ) ಇನ್ನೊಬ್ಬ ಐವತ್ತು ದಿನಾರಿ (ಹಣ) ಕೊಡಬೇಕಿತ್ತು. (ಲೂಕ 7:41 ULB)
  1. ಸತ್ಯವೇದದಲ್ಲಿನ ಪದಗಳನ್ನು ಮತ್ತು ಅದರ ಪ್ರತಿಯೊಂದು ಅಕ್ಷರಗಳು ಅದರ ಉಚ್ಛಾರಣೆಗೆ ಸಮಾನ ವಾಗಿರುವಂತೆ ನೋಡಿಕೊಳ್ಳಬೇಕು. (ನೋಡಿ Copy or Borrow Words)

    • “ಒಬ್ಬನು ಐನೂರು ದಿನಾರಿ (ಹಣ) , ಇನ್ನೊಬ್ಬ ಐವತ್ತು ದಿನಾರಿ (ಹಣ) .” ಕೊಡಬೇಕಿತ್ತು.(ಲೂಕ 7:41 ULB)
  2. ಈ ನಾಣ್ಯಗಳ ಮೌಲ್ಯ ಹಾಗೂ ಯಾವ ಲೋಹದಿಂದ ಮಾಡಿದ್ದು, ಎಷ್ಟು ರೀತಿಯ ನಾಣ್ಯಗಳನ್ನು ಬಳಸಿದರು ಎಂಬುದನ್ನು ವಿವರಿಸಬೇಕು.

    • ಒಬ್ಬನು ಐನೂರು ಬೆಳ್ಳಿ ನಾಣ್ಯಗಳನ್ನು , ಇನ್ನೊಬ್ಬ ಐವತ್ತು ಬೆಳ್ಳಿ ನಾಣ್ಯಗಳನ್ನು." ಕೊಡಬೇಕಿತ್ತು. (ಲೂಕ 7:41 ULB)
  3. ಈ ನಾಣ್ಯಗಳ ವಿವರವನ್ನು ಸತ್ಯವೇದ ಬರೆದ ಕಾಲದಲ್ಲಿ ಜನರು ಹೇಗೆ ಬಳಸಿದರು ಮತ್ತು ಒಂದುದಿನದ ಗಳಿಕೆಯ ಮೌಲ್ಯವೇನು ಎಂಬುದನ್ನು ವಿವರಿಸಬೇಕು.

    • " ಒಬ್ಬನು ಐನೂರು ದಿನಗಳ ಸಂಬಳ , ಮತ್ತು ಇನ್ನೊಬ್ಬ ಐವತ್ತು ದಿನಗಳ ಸಂಬಳ ಬಾಕಿ ಕೊಡಬೇಕಿತ್ತು ."
  4. ಸತ್ಯವೇದದಲ್ಲಿ ಬಳಸಿರುವ ಪದವನ್ನೇ ಬಳಸಿ, ಸಮಾನ ಮೌಲ್ಯದ ಹಣವನ್ನು ಭಾಷಾಂತರದ ವಾಕ್ಯಭಾಗದಲ್ಲಿ ಮತ್ತು ಟಿಪ್ಪಣಿಯಲ್ಲಿ ಬಳಸಿ.

    • " ಒಬ್ಬನುಐನೂರು ದಿನಾರಿ 1, ಇನ್ನೊಬ್ಬ ಐವತ್ತು ದಿನಾರಿ . 2"ಕೊಡಬೇಕಿತ್ತು (ಲೂಕ 7:41 ULB) :ಅಡಿ ಟಿಪ್ಪಣಿಗಳು ಕೆಳಗೆ ಕೊಟ್ಟಿರುವಂತೆ ಇದೆ.
      • [1]ಐನೂರು ದಿನಗಳ ಸಂಬಳ.
      • [2]ಐವತ್ತು ದಿನಗಳ ಸಂಬಳ
  5. ಸತ್ಯವೇದದಲ್ಲಿನ ಪದವನ್ನೇ ಬಳಸಿ ಟಿಪ್ಪಣಿಯಲ್ಲಿ ವಿವರಿಸಿ.

    • " ಒಬ್ಬ ಐನೂರು ದಿನಾರಿ 1, ಮತ್ತು ಇನ್ನೊಬ್ಬ ಐವತ್ತು ದಿನಾರಿ ." (ಲೂಕ 7:41 ULB)
    • [1]ಒಂದು ದಿನಾರಿ ಬೆಳ್ಳಿನಾಣ್ಯಗಳನ್ನು ಒಂದು ದಿನದಲ್ಲಿ ಮಾಡಿದ ಕೆಲಸಕ್ಕೆ ಗಳಿಸಿದ ಹಣವಾಗಿರುತ್ತದೆ.

ಹಿಬ್ರೂ ತಿಂಗಳುಗಳು.

Translation Manual :: Just-in-Time Learning Modules :: Unknowns :: Hebrew Months

ವಿವರಣೆ

ಸತ್ಯವೇದದಲ್ಲಿ ಉಪಯೋಗಿಸಿರುವ ಹಿಬ್ರೂ ಕ್ಯಾಲೆಂಡರ್ ನಲ್ಲಿ ಹನ್ನೆರಡು ತಿಂಗಳುಗಳು ಇವೆ. ಪಾಶ್ಚಿಮಾತ್ಯ ಕ್ಯಾಲೆಂಡರ್ ಹೊರತುಪಡಿಸಿ ಈ ಕ್ಯಾಲೆಂಡರ್ ಗಳಲ್ಲಿ ಉತ್ತರಾರ್ಧ ಗೋಳಾರ್ಧದಲ್ಲಿ ಮೊದಲ ತಿಂಗಳು ಪ್ರಾರಂಭವಾಗುವುದು ವಸಂತಕಾಲದಿಂದ. ಕೆಲವೊಮ್ಮೆ ಒಂದು ತಿಂಗಳು ಅದರ ಹೆಸರಿನಿಂದ (ಅಬೀಬ್, ಜಿವ್, ಸಿವಾನ್) (Abib, Ziv, Sivan), ಗುರುತಿಸಲ್ಪಟ್ಟರೆ, ಕೆಲವೊಮ್ಮೆ ವಾರ್ಷಿಕ ಹಿಬ್ರೂ ಕ್ಯಾಲೆಂಡರ್ ಕ್ರಮದಲ್ಲಿ ಕರೆಯಲ್ಪಡುತ್ತದೆ. (ಮೊದಲ ತಿಂಗಳು, ಎರಡನೇ ತಿಂಗಳು, ಮೂರನೇ ತಿಂಗಳು) ಎಂಬ ಕ್ರಮದಲ್ಲಿ ಬರುತ್ತದೆ.

ಕಾರಣ ಇದೊಂದು ಭಾಷಾಂತರ ಸಮಸ್ಯೆ.

  • ಓದುಗರಿಗೆ ಅವರು ಇದುವರೆಗೂ ಕೇಳಿರದ ತಿಂಗಳುಗಳ ಹೆಸರುಗಳನ್ನು ಓದಲು, ಕೇಳಲು ಆಶ್ಚರ್ಯ ಪಡಬಹುದು ಮತ್ತು ಅವರಲ್ಲಿ ಬಳಕೆಯಲ್ಲಿರುವ ತಿಂಗಳುಗಳನ್ನು ಈ ತಿಂಗಳುಗಳೊಂದಿಗೆ ಹೇಗೆ ಸಂಬಂಧಪಡಿಸಿ, ಜೋಡಿಸಿ ನೀಡುವುದು ಹೇಗೆ ಎಂದು ಬೆರಗಿನಿಂದ ನೋಡಬಹುದು.
  • " ಮೊದಲ ತಿಂಗಳು ಅಥವಾ ಎರಡನೇ ತಿಂಗಳು ಎಂಬ ಪದಗುಚ್ಛಗಳು ಳನ್ನು ಹಿಬ್ರೂ ಕ್ಯಾಲೆಂಡರ್ ನ ಮೊದಲ ಮತ್ತು ಎರಡನೇ ತಿಂಗಳುಗಳೊಂದಿಗೆ ಉದ್ದೇಶಿಸಿ ಹೇಳಲಾಗುತ್ತಿದೆ ಎಂದು ಓದುಗರು ತಿಳಿಯದಿರಬಹುದು
  • ಕೆಲವೊಮ್ಮೆ ಓದುಗರಿಗೆ ಹಿಬ್ರೂ ಕ್ಯಾಲೆಂಡರ್ ನ ಮೊದಲ ತಿಂಗಳು ಯಾವಾಗ ಪ್ರಾರಂಭವಾಗುತ್ತದೆ ಎಂದು ತಿಳಿಯದೆ ಇರಬಹುದು.
  • ಸತ್ಯವೇದದಲ್ಲಿ ಯಾವುದಾದರೂ ಒಂದು ಘಟನೆ ಒಂದು ನಿರ್ದಿಷ್ಟ ತಿಂಗಳಿನಲ್ಲಿ ನಡೆದಿರುವ ಬಗ್ಗೆ ಹೇಳಬಹುದು. ಆದರೆ ಇಂದಿನ ಓದುಗರಿಗೆ ಯಾವ ಋತು ಯಾವ ಕಾಲವಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟವಾದರೆ ಈ ಘಟನೆಯನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವದಿಲ್ಲ

ಹಿಬ್ರೂ ತಿಂಗಳುಗಳ ಪಟ್ಟಿ.

ಈ ಪಟ್ಟಿಯಲ್ಲಿ ಹಿಬ್ರೂ ತಿಂಗಳುಗಳು ಮತ್ತು ಅವುಗಳ ಬಗ್ಗೆ ವಿವರ ನೀಡುವ ಮಾಹಿತಿ ಇದೆ. ಹಾಗೂ ಇದು ಭಾಷಾಂತರ ಮಾಡಲು ಅನುಕೂಲಕರವಾಗಿದೆ.

Abib -(ಅಬೀಬ್) ಬ್ಯಾಬಿಲೋನ್ ರವರ ಗಡಿಪಾರಾದ ಮೇಲೆ ಈ ತಿಂಗಳನ್ನು ನಿಸಾನ್ ತಿಂಗಳು ಎಂದು ಕರೆಯುತ್ತಾರೆ. ಇದು ಹಿಬ್ರೂ ಕ್ಯಾಲೆಂಡರ್ ನ ಮೊದಲ ತಿಂಗಳು. ಇದು ಇಸ್ರಾಯೇಲ್ ಜನರನ್ನು ಐಗುಪ್ತದೇಶದಿಂದ ಬಿಡುಗಡೆ ಮಾಡಿ ಕರೆತಂದ ತಿಂಗಳನ್ನು ಗುರುತಿಸಿ ಹೇಳುವಂತದ್ದು. ಇದು ವಸಂತಕಾಲದ ಪ್ರಾರಂಭ ಹಾಗೂ ಮಳೆಗಾಲ ಬರುವ ಮೊದಲು ತಾವು ಬೆಳೆದ ಬೆಳೆಯನ್ನು ಪಡೆಯುವ ಸುಗ್ಗಿ ಕಾಲವಾಗಿರುತ್ತದೆ. ಪಾಶ್ಚಾತ್ಯ ಕ್ಯಾಲೆಂಡರ್ ನ ಮಾರ್ಚ್ ತಿಂಗಳ ಉತ್ತರಾರ್ಧ ಮತ್ತು ಏಪ್ರಿಲ್ ತಿಂಗಳ ಪ್ರಾರಂಭವಾಗಿರುತ್ತದೆ. ಫಸ್ಕ ಹಬ್ಬದ ಆಚರಣೆ ಅಬೀಬ್ ಹತ್ತನೇ ದಿನದಂದು ಪ್ರಾರಂಭವಾಗುತ್ತದೆ. ಹುಳಿ ಇಲ್ಲದ ರೊಟ್ಟಿಯ ಹಬ್ಬ ಇದಾದ ಮೇಲೆ ಇರುತ್ತದೆ. ಸುಗ್ಗಿ ಹಬ್ಬ ಈ ಹಬ್ಬಗಳು ಆದ ಕೆಲ ವಾರಗಳ ನಂತರ ಪ್ರಾರಂಭವಾಗುತ್ತದೆ.

Ziv - ಜಿವ್ ಇದು ಹಿಬ್ರೂ ಕ್ಯಾಲೆಂಡರಿನ ಎರಡನೇ ತಿಂಗಳು. ಇದು ಸುಗ್ಗಿಕಾಲದಲ್ಲಿ ಬರುವ ದಿನಗಳು ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಏಪ್ರಿಲ್ ತಿಂಗಳ ಕೊನೆಯ ಭಾಗ ಮತ್ತು ಮೇ ತಿಂಗಳ ಮೊದಲ ಭಾಗದ ದಿನಗಳು.

Sivan - ಸೀವಾನ್ ಇದು ಹಿಬ್ರೂ ಕ್ಯಾಲೆಂಡರಿನ ಮೂರನೇ ತಿಂಗಳು. ಇದು ಸುಗ್ಗಿಕಾಲದ ಕೊನೆಯ ದಿನಗಳು ಮತ್ತು ಬೇಸಿಗೆ ಕಾಲದ ಪ್ರಾರಂಭ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಮೇ ತಿಂಗಳಕೊನೆಯ ದಿನಗಳು.ಮತ್ತು ಜೂನ್ ತಿಂಗಳ ಮೊದಲ ದಿನಗಳು. ವಾರಗಳ ಹಬ್ಬ ಸೀವಾನ್ - ತಿಂಗಳ 6ನೇ ದಿನದಂದು ಆಚರಿಸಲಾಗುವುದು.

Tammuz - ತಮೂಜ್ - ಇದು ಹಿಬ್ರೂ ಕ್ಯಾಲೆಂಡರಿನ ನಾಲ್ಕನೇ ತಿಂಗಳು. ಇದು ಬೇಸಿಗೆ ಕಾಲದಲ್ಲಿ ಬರುತ್ತದೆ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಜೂನ್ ತಿಂಗಳ ಕೊನೆಯ ಭಾಗ ಮತ್ತು ಜುಲೈ ತಿಂಗಳ ಮೊದಲ ಭಾಗದಲ್ಲಿ ಬರುತ್ತದೆ.

Ab - ಅಬ್ - ಇದು ಹಿಬ್ರೂ ಕ್ಯಾಲೆಂಡರಿನ ಐದನೇ ತಿಂಗಳು. ಇದು ಸಹ ಬೇಸಿಗೆ ಕಾಲದಲ್ಲಿ ಬರುತ್ತದೆ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಜುಲೈ ತಿಂಗಳ ಕೊನೆಯ ಭಾಗ ಮತ್ತು ಆಗಸ್ಟ್ ತಿಂಗಳ ಮೊದಲ ಭಾಗ.

Elul - ಎಲೂಲ್ - ಇದು ಹಿಬ್ರೂ ಕ್ಯಾಲೆಂಡರಿನ ಆರನೇ ತಿಂಗಳು ಇದು ಬೇಸಿಗೆ ಕಾಲದ ಕೊನೆಯ ಭಾಗ ಹಾಗೂ ಮಳೆಗಾಲದ ಪ್ರಾರಂಭದ ದಿನಗಳು. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಆಗಸ್ಟ್ ತಿಂಗಳ ಕೊನೆಯ ದಿನಗಳು ಮತ್ತು ಸೆಪ್ಟೆಂಬರ್ ತಿಂಗಳ ಪ್ರಾರಂಭದ ದಿನಗಳು.

Ethanim - ಎತಾನಿಮ್ - ಇದು ಹಿಬ್ರೂ ಕ್ಯಾಲೆಂಡರಿನ ಏಳನೇ ತಿಂಗಳು ಇದು ಮಳೆಗಾಲವಾಗಿದ್ದು ಭೂಮಿಯ ಮಣ್ಣನ್ನು ಮೃದುವಾಗಿಸಿ ಬೀಜಬಿತ್ತಲು ಭೂಮಿಯನ್ನು ಹದವಾಗಿಸುತ್ತದೆ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಸೆಪ್ಟೆಂಬರ್ ತಿಂಗಳ ಕೊನೆಯ ಭಾಗ ಮತ್ತು ಅಕ್ಟೋಬರ್ ತಿಂಗಳ ಪ್ರಾರಂಭದ ದಿನಗಳು. ಈ ತಿಂಗಳನ್ನು “ತೀಸ್ರಿ” ಎಂದು ಕರೆಯುತ್ತಾರೆ. ಇದು ಒಟ್ಟುಗೂಡಿಸುವ ಮತ್ತು ಪಶ್ಚಾತ್ತಾಪದಿಂದ ದೇವರ ಬಳಿಗೆ ಬಂದು ಆಚರಿಸುವ ಹಬ್ಬದ ದಿನಗಳು.

Bul - ಬುಲ್ - ಇದು ಹಿಬ್ರೂ ಕ್ಯಾಲೆಂಡರಿನ ಎಂಟನೇ ತಿಂಗಳು ಇದು ಮಳೆಗಾಲದ ದಿನಗಳು ಮತ್ತು ಈ ದಿನಗಳಲ್ಲಿ ಜನರು ಭೂಮಿಯನ್ನು ಉತ್ತು, ಬೀಜ ಬಿತ್ತುವ ಕಾಲ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಅಕ್ಟೋಬರ್ ತಿಂಗಳ ಕೊನೆಯ ಭಾಗ ಮತ್ತು ನವೆಂಬರ್ ತಿಂಗಳ ಪ್ರಾರಂಭದ ದಿನಗಳಾಗಿರುತ್ತದೆ.

Kislev - ಕಿಸ್ಲೇವ್ - ಇದು ಹಿಬ್ರೂ ಕ್ಯಾಲೆಂಡರಿನ ಒಂಬತ್ತನೇ ತಿಂಗಳು ಇದು ಬಿತ್ತುವ ಕಾಲದ ಕೊನೆಯ ದಿನಗಳು ಮತ್ತು ಚಳಿಗಾಲದ ಪ್ರಾರಂಭದ ದಿನಗಳು. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ನವೆಂಬರ್ ತಿಂಗಳ ಕೊನೆಯ ದಿನಗಳು ಮತ್ತು ಡಿಸೆಂಬರ್ ತಿಂಗಳ ಮೊದಲ ದಿನಗಳು.

Tebeth -ಟಿಬೇತ್ - ಇದು ಹಿಬ್ರೂ ಕ್ಯಾಲೆಂಡರಿನ ಹತ್ತನೇ ತಿಂಗಳು ಇದು ಚಳಿಗಾಲದ ದಿನಗಳು. ಕೆಲವೊಮ್ಮೆ ತುಂತುರು ಮಳೆ ಮತ್ತು ಹಿಮ ಬೀಳುವ ಕಾಲ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಡಿಸೆಂಬರ್ ತಿಂಗಳ ಕೊನೆಯ ದಿನಗಳು. ಮತ್ತು ಜನವರಿ ತಿಂಗಳ ಪ್ರಾರಂಭದ ದಿನಗಳು.

Shebat - ಶೆಬಾಟ್ - ಇದು ಹಿಬ್ರೂ ಕ್ಯಾಲೆಂಡರಿನ ಹನ್ನೊಂದನೇ ತಿಂಗಳು ಈ ತಿಂಗಳು ಅತ್ಯಂತ ಹೆಚ್ಚು ಚಳಿ ಇರುವ ಕಾಲ, ಮತ್ತು ಹೆಚ್ಚು ಮಳೆಯಾಗುವ ಕಾಲ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಜನವರಿ ತಿಂಗಳ ಕೊನೆಯ ದಿನಗಳು ಮತ್ತು ಫೆಬ್ರವರಿ ತಿಂಗಳ ಪ್ರಾರಂಭದ ದಿನಗಳು.

Adar - ಆಧಾರ್ - ಇದು ಹಿಬ್ರೂ ಕ್ಯಾಲೆಂಡರಿನ ಹನ್ನೆರಡನೇ ತಿಂಗಳು ಇದು ಚಳಿಗಾಲ. ಇದು ಪಾಶ್ಚಾತ್ಯ ಕ್ಯಾಲೆಂಡರ್ ನ ಫೆಬ್ರವರಿ ತಿಂಗಳ ಕೊನೆಯ ದಿನಗಳು ಮತ್ತು ಮಾರ್ಚ್ ತಿಂಗಳ ಪ್ರಾರಂಭದ ದಿನಗಳು. ಈ ತಿಂಗಳಿನಲ್ಲಿ “ ಫೋರೀಮ್ ” ಹಬ್ಬವನ್ನು ಆಚರಿಸುತ್ತಾರೆ.

ಸತ್ಯವೇದದಲ್ಲಿನ ಉದಾಹರಣೆಗಳು

ನೀವು **ಅಬೀಬ್** (ಚೈತ್ರ ಮಾಸದ) ಈ ದಿನದಲ್ಲೇ ನೀವು ಐಗುಪ್ತ ದೇಶದಿಂದ ಹೊರಡುವವರಾಗಿದ್ದೀರಿ . (ವಿಮೋಚನಾಕಾಂಡ 13:4 ULB)

ಮೊದಲನೇ ತಿಂಗಳಿನ ಹದಿನಾಲ್ಕನೆಯ ದಿವಸದ, ಸಾಯಂಕಾಲ ಮೊದಲುಗೊಂಡು ಅದೇ ತಿಂಗಳಿನ ಇಪ್ಪತ್ತೊಂದನೆಯ ದಿನದ ಸಾಯಂಕಾಲದವರೆಗೂ ಹುಳಿ ಇಲ್ಲದ ರೊಟ್ಟಿಗಳನ್ನೇ ತಿನ್ನಬೇಕು. , (ವಿಮೋಚನಾಕಾಂಡ 12:18 ULB)

###ಭಾಷಾಂತರ ಕೌಶಲ್ಯಗಳು

ತಿಂಗಳುಗಳ ಬಗ್ಗೆ ಮಾಹಿತಿಗಳನ್ನು ನೀವು ವಿವರವಾಗಿ ತಿಳಿಸುವ ಅಗತ್ಯವಿದೆ (ಗಳಿಸಿದ ಜ್ಞಾನ ಮತ್ತು ಗೌಣವಾದ ಮಾಹಿತಿಗಳು) ಇವುಗಳನ್ನು ಗಮನಿಸಿ.

  1. ಹಿಬ್ರೂ ತಿಂಗಳುಗಳ ಸಂಖ್ಯೆಯನ್ನು ಹೇಳಿ.
  2. ಜನರಿಗೆ ಗೊತ್ತಿರುವ ತಿಂಗಳುಗಳ ಹೆಸರನ್ನೇ ಬಳಸಿ.
  3. ಯಾವ ತಿಂಗಳಿನಲ್ಲಿ ಯಾವ ಕಾಲ / ಋತು ಬರುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿ
  4. ಕಾಲಕ್ಕೆ / ಋತುವಿಗೆ ಸಮಯ, ಕಾಲವನ್ನು ತಿಂಗಳುಗಳಿಗೆ ಅಳವಡಿಸಿ ತಿಳಿಸಬೇಕು.

(ಸಾಧ್ಯವಾದರೆ ಹಿಬ್ರೂ ತಿಂಗಳು ಮತ್ತು ದಿನದ ಬಗ್ಗೆ ಅಡಿ ಟಿಪ್ಪಣಿಯಲ್ಲಿ ವಿವರ ನೀಡಿ).

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.

ಕೆಳಗಿನ ಉದಾಹರಣೆಗಳಲ್ಲಿ ಎರಡು ವಾಕ್ಯಗಳನ್ನು ಬಳಸಲಾಗಿದೆ.

  • ಈ ಸಮಯದಲ್ಲಿ ನೀವು “ ಅಬೀಬ್ ” / ಚೈತ್ರಮಾಸದ , ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು… ಈ ಮಾಸದಲ್ಲೇ ನೀವು ಐಗುಪ್ತ ದೇಶದಿಂದ ಬಿಡುಗಡೆ ಹೊಂದಿ ಬಂದಿರಿ (ವಿಮೋಚನಾ ಕಾಂಡ 23:15 ULB)

  • ಇದು ನಿಮಗೆ ಶಾಶ್ವತವಾದ ನಿಯಮ, ಸ್ವದೇಶಸ್ಥರಾದ ನೀವು ನಿಮ್ಮಲ್ಲಿರುವ ಅನ್ಯ ದೇಶದವರು ಎಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ,ಸಕಲವಿಧವಾದ ಕೆಲಸಗಳನ್ನು ಬಿಟ್ಟು ಉಪವಾಸಮಾಡಿ ನಿಮ್ಮನ್ನು ತಗ್ಗಿಸಿಕೊಂಡು ನನ್ನ ಬಳಿ ಬರಬೇಕು. (ಯಾಜಕ ಕಾಂಡ 16:29 ULB)

  1. ಹಿಬ್ರೂ ತಿಂಗಳುಗಳ ಸಂಖ್ಯೆಯನ್ನು ಹೇಳಿ.

    • ಆ ಸಮಯದಲ್ಲಿ ನೀವು ನನ್ನ ಸನ್ನಿಧಿಯಲ್ಲಿ ವರ್ಷದ ಮೊದಲ ತಿಂಗಳು , ಈ ಉದ್ದೇಶಕ್ಕಾಗಿ ನಿರ್ಧರಿಸಬೇಕು. ನೀವು ಐಗುಪ್ತದೇಶದಿಂದ ಇದೇ ತಿಂಗಳಲ್ಲಿ ಬಿಡುಗಡೆ ಹೊಂದಿ ಬಂದಿರಿ
  2. ಜನರಿಗೆ ಗೊತ್ತಿರುವ ತಿಂಗಳುಗಳ ಹೆಸರನ್ನೇ ಬಳಸಿ.

    • ಆ ಸಮಯದಲ್ಲಿ ಈ ಉದ್ದೇಶಕ್ಕಾಗಿ ನಿಗಧಿಪಡಿಸಿದ ತಿಂಗಳಾದ ಮಾರ್ಚ್ ತಿಂಗಳಲ್ಲಿ , ನನ್ನ ಸನ್ನಿಧಿಗೆ ಬನ್ನಿ. ನೀವು ಐಗುಪ್ತದೇಶದಿಂದ ಇದೇ ತಿಂಗಳಲ್ಲಿ ಬಿಡುಗಡೆ ಹೊಂದಿ ಬಂದಿರಿ
    • ಇದು ನಿಮಗೆ ಶಾಶ್ವತವಾದ ನಿಯಮ ಸೆಪ್ಟೆಂಬರ್ ತಿಂಗಳ ದಿನವನ್ನು ನಾನು ಆಯ್ಕೆಮಾಡಿ , ಯಾವ ಕೆಲಸವನ್ನು ಮಾಡದೆ ನಿಮ್ಮನ್ನು ನನ್ನ ಸನ್ನಿಧಿಯಲ್ಲಿ ತಗ್ಗಿಸಿಕೊಳ್ಳಿ.
  3. ಯಾವ ತಿಂಗಳಿನಲ್ಲಿ ಯಾವ ಕಾಲ / ಋತು ಬರುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿ

    • ಇದು ನಿಮಗೆ ಶಾಶ್ವತವಾದ ನಿಯಮ ಶರತ್ಕಾಲದ, ಏಳನೇ ತಿಂಗಳ ಹತ್ತನೇ ದಿನದಂದು. , ನೀವು ಯಾವ ಕೆಲಸವನ್ನು ಮಾಡದೆ ನನ್ನ ಸನ್ನಿಧಿಯಲ್ಲಿ ತಗ್ಗಿಸಿಕೊಳ್ಳಿ
  4. ಕಾಲಕ್ಕೆ / ಋತುವಿಗೆ ಸಮಯ, ಕಾಲವನ್ನು ತಿಂಗಳುಗಳಿಗೆ ಅಳವಡಿಸಿ ತಿಳಿಸಬೇಕು.

    • ಇದು ನಿಮಗೆ ಶಾಶ್ವತವಾದ ನಿಯಮ ಪೂರ್ವಾರ್ಧ ಶರತ್ಕಾಲದ, ಒಂದು ದಿನವನ್ನು ನಾನು ಆಯ್ಕೆ ಮಾಡಿದ್ದೇನೆ ಆ ದಿನ , 1ಯಾವ ಕೆಲಸವನ್ನು ಮಾಡದೆ ನನ್ನ ಸನ್ನಿಧಿಯಲ್ಲಿ ತಗ್ಗಿಸಿಕೊಳ್ಳಿ. ಅಡಿ ಟಿಪ್ಪಣಿ ಈ ರೀತಿ ಇರುತ್ತದೆ:
      • [1]"ಏಳನೇ ತಿಂಗಳ ಹತ್ತನೆಯ ದಿನದಂದು” ಎಂದು ಇಬ್ರಿಯರು ಹೇಳುತ್ತಾರೆ.

ಸಂಖ್ಯೆಗಳು.

Translation Manual :: Just-in-Time Learning Modules :: Unknowns :: Numbers

ವಿವರಣೆಗಳು.

ಸತ್ಯವೇದದಲ್ಲಿ ಅನೇಕ ಸಂಖ್ಯೆಗಳು ಇವೆ. ಅವುಗಳನ್ನು ಅಕ್ಷರಗಳಲ್ಲಿ ಬರೆಯಬಹುದು. ಉದಾಃ- “ಐದು” ಅಥವಾ “5.” ಎಂದೂ ಬರೆಯಬಹುದು. ಕೆಲವು ಸಂಖ್ಯೆಗಳು ತುಂಬಾ ದೊಡ್ಡದಾಗಿದ್ದು ಉದ್ದಕ್ಕೆ ಬರೆಯುತ್ತಾ ಹೋಗಬೇಕಾಗುತ್ತದೆ. ಉದಾಃ “ಇನ್ನೂರು” (200), " ಇಪ್ಪತ್ತೆರಡು ಸಾವಿರ " (22,000), "ಒಂದು ನೂರು ಮಿಲಿಯನ್ " (100,000,000.)

ಕೆಲವು ಭಾಷೆಯಲ್ಲಿ ಇಂತಹ ಸಂಖ್ಯೆಗಳನ್ನುಅಕ್ಷರದಲ್ಲಿ ಬರೆಯಲು ಅವಕಾಶ ಇರುವುದಿಲ್ಲ. ಭಾಷಾಂತರಗಾರರು ಸಂಖ್ಯೆಗಳನ್ನು. ಭಾಷಾಂತರಿಸಲು ನಿರ್ಧರಿಸುವ ಅಗತ್ಯವಿದೆ, ಸಂಖ್ಯೆಗಳಲ್ಲಿ ಬರೆಯಬೇಕೇ ? ಅಕ್ಷರಗಳಲ್ಲಿ ಬರೆಯಬೇಕೇ ಎಂದು ನಿರ್ಧರಿಸಬೇಕು ಕೆಲವು ಸಂಖ್ಯೆಗಳನ್ನು ನಿಖರವಾಗಿ ಮತ್ತು ಸಂಪೂರ್ಣ ಸಂಖ್ಯೆಯಾಗಿ ಬರೆಯಬೇಕು.

ಹಾಗರಳು ಇಷ್ಮಾಯೇಲನಿಗೆ ಜನ್ಮನೀಡಿದಾಗ ಅಬ್ರಹಾಮನಿಗೆ ಎಂಬತ್ತಾರು ವರ್ಷದವನಾಗಿ ಇದ್ದನು. (ಆದಿಕಾಂಡ16:16 ULB) ಎಂಬತ್ತಾರು (86) ನಿಖರವಾದ ಸಂಖ್ಯೆ.

ಆ ದಿನ ಸುಮಾರು ಮೂರುಸಾವಿರಮಂದಿ ಆ ಜನರೊಳಗೆ ಕೊಲ್ಲಲ್ಪಟ್ಟರು. (ವಿಮೋಚನಾಕಾಂಡ 32:28 ULB)

ಇಲ್ಲಿರುವ 3000/ಮೂರುಸಾವಿರ ಎಂಬುದು ಸಂಪೂರ್ಣಸಂಖ್ಯೆ. ಇದು ಇರುವುದಕ್ಕಿಂತ ಸ್ವಲ್ಪ ಹೆಚ್ಚು ಇಲ್ಲವೆ ಸ್ವಲ್ಪಕಡಿಮೆಯೂ ಇರಬಹುದು “ಸುಮಾರು” ಎಂಬ ಪದ ಇದು ನಿಖರವಾದ ನಿರ್ದಿಷ್ಟವಾದ ಸಂಖ್ಯೆಯಲ್ಲ ಎಂಬುದನ್ನು ತಿಳಿಸುತ್ತದೆ.

ಕಾರಣವೇನೆಂದರೆ ಇದೊಂದು ಭಾಷಾಂತರ ಪ್ರಕರಣ ಕೆಲವು ಭಾಷೆಯಲ್ಲಿ ಈ ಕೆಲವು ಸಂಖ್ಯೆಗಳಿಗೆ ಪದಗಳು ಇರುವುದಿಲ್ಲ

ಭಾಷಾಂತರ ತತ್ವಗಳು

  • ನಿಖರವಾದ ಸಂಖ್ಯೆಗಳನ್ನು ಹೆಚ್ಚು ಹತ್ತಿರವಾಗಿ ಮತ್ತು ವಿಶೇಷವಾಗಿ ನಿರ್ದಿಷ್ಟವಾಗಿ ಭಾಷಾಂತರ ಮಾಡಬೇಕು.
  • ಸಂಪೂರ್ಣವಾದ ಸಂಖ್ಯೆಗಳನ್ನು ಸಾಮಾನ್ಯವಾಗಿ ಭಾಷಾಂತರ ಮಾಡುತ್ತಾರೆ.

###ಸತ್ಯವೇದದಲ್ಲಿನ ಉದಾಹರಣೆಗಳು

ಎರೇದನು 162ವರ್ಷದವನಾದಾಗ ಹನೋಕನನ್ನು ಮಗನಾಗಿ ಪಡೆದನು. ಹನೋಕನು ಹುಟ್ಟಿದ ಮೇಲೆ ಅವನ ತಂದೆಯಾದ ಎರೇದನು ಎಂಟುನೂರುವರ್ಷಗಳವರೆಗೆ ಬದುಕಿದ್ದನು. ನಂತರ ಅವನು ಅನೇಕ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದನು. ಯೆರೇದನು ಒಟ್ಟು 962ವರಷಗಳು ಬದುಕಿ ಮರಣಹೊಂದಿದನು. (ಆದಿಕಾಂಡ 5:18-20 ULB)

162, ಎಂಟುನೂರು ಮತ್ತು 962 ನಿರ್ದಿಷ್ಟ ಸಂಖ್ಯೆಗಳು ಮತ್ತು ಇವುಗಳನ್ನು ಈ ಸಂಖ್ಯೆಗಳಂತೆ ಭಾಷಾಂತರಿಸಬೇಕು.

ಸಹೋದರಿ,ನೀನುಲಕ್ಷಾಂತರ ಮಕ್ಕಳಿಗೆ ತಾಯಿಯಾಗುವಿ(ಆದಿಕಾಂಡ 24:60 ULB)

ಇದೊಂದು ಸಂಪೂರ್ಣ ಸಂಖ್ಯೆ. ಇದು ಅವಳು ನಿರ್ದಿಷ್ಟವಾಗಿ ಇಷ್ಟೇ ಸಂಖ್ಯೆಯ ಮಕ್ಕಳನ್ನು ಪಡೆಯಬೇಕು ಎಂದು ಹೇಳದೆ ಒಂದು ದೊಡ್ಡ ಸಂಖ್ಯೆಯನ್ನು ತಿಳಿಸುವಂತದ್ದು.

ಭಾಷಾಂತರ ತಂತ್ರಗಳು

  1. ಸಂಖ್ಯೆಗಳನ್ನು ತಿಳಿಸಲು ಅಂಕೆಗಳನ್ನು ಬಳಸಿ ಬರೆಯಿರಿ.
  2. ನಿಮ್ಮ ಭಾಷೆಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ. ಅಥವಾ ಗೇಟ್ ವೇ ಭಾಷೆಯ ಪದಗಳನ್ನುಆ ಸಂಖ್ಯೆಗಳಿಗೆ ಬರೆಯಿರಿ.
  3. ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.
  4. ದೊಡ್ಡ ಸಂಖ್ಯೆಗಳನ್ನು ಪದದೊಂದಿಗೆ ಸೇರಿಸಿ ಬರೆಯಿರಿ.
  5. ದೊಡ್ಡ ಸಂಪೂರ್ಣವಾದ ಸಂಖ್ಯೆಗಳಿಗೆ ಸಾಮಾನ್ಯವಾದ ಅಭಿವ್ಯಕ್ತಿಯನ್ನು ಬಳಸಿ ಮತ್ತು ಅಂಕಿಗಳನ್ನು ಆವರಣದಲ್ಲಿ ಬರೆಯಿರಿ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

ನಾವು ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಉದಾಹರಣೆಯಾಗಿ ಬಳಸಿಕೊಳ್ಳುತ್ತೇವೆ.

ಇಗೋ ನೋಡು, ನಾನು ಬಹು ಪ್ರಯಾಸಪಟ್ಟು, ಯೆಹೋವನ ಆಲಯಕ್ಕಾಗಿ 100,000ತಲಾಂತು ಬಂಗಾರವನ್ನು, ಒಂದು ಮಿಲಿಯನ್ (ಹತ್ತು ಲಕ್ಷ)ತಲಾಂತು ಬೆಳ್ಳಿಯನ್ನು ಮತ್ತು ಲೆಕ್ಕವಿಲ್ಲದಷ್ಟು ತಾಮ್ರ ಮತ್ತು ಕಬ್ಬಿಣ ಇವುಗಳನ್ನು ಒದಗಿಸಿದ್ದೇನೆ. (1 ನೇ ಪೂರ್ವಕಾಲ ವೃತ್ತಾಂತ 22:14 ULB)

  1. ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ.

    • ನಾನು ಯೆಹೋವನ ಆಲಯಕ್ಕಾಗಿ ಸಿದ್ಧಮಾಡಿರುವುದು 100,000ತಲಾಂತು ಬಂಗಾರ 1,000,000ತಲಾಂತು ಬೆಳ್ಳಿ ಮತ್ತು ಯೆಥೇಚ್ಚವಾದ ತಾಮ್ರ ಮತ್ತು ಕಬ್ಬಿಣ.
  2. ನಿಮ್ಮ ಭಾಷೆಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ. ಅಥವಾ ಗೇಟ್ ವೇ ಭಾಷೆಯ ಪದಗಳನ್ನು ಆ ಸಂಖ್ಯೆಗಳಿಗೆ ಬರೆಯಿರಿ.

    • ನಾನು ಯೆಹೋವನ ಆಲಯಕ್ಕಾಗಿಒಂದು ನೂರು ಸಾವಿರ ತಲಾಂತು ಬಂಗಾರ ಒಂದು ಮಿಲಿಯನ್ (ಹತ್ತುಲಕ್ಷ) ತಲಾಂತು ಬೆಳ್ಳಿ ಮತ್ತು ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ. ಸಿದ್ಧಮಾಡಿದ್ದೇನೆ.
  3. ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.

    • ನಾನು ಯೆಹೋವನ ಆಲಯಕ್ಕಾಗಿ ಒಂದುನೂರು ಸಾವಿರ (100,000)ತಲಾಂತು ಬಂಗಾರ, ಒಂದು ಮಿಲಿಯನ್ (ಹತ್ತುಲಕ್ಷ) (1,000,000)ತಲಾಂತು ಬೆಳ್ಳಿ ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ. ಸಿದ್ಧಮಾಡಿದ್ದೇನೆ.
  4. ದೊಡ್ಡ ಸಂಖ್ಯೆಗಳನ್ನು ಪದದೊಂದಿಗೆ ಸೇರಿಸಿ ಬರೆಯಿರಿ.

    • ನಾನು ಯೆಹೋವನ ಆಲಯಕ್ಕಾಗಿಒಂದು ನೂರು ಸಾವಿರ ತಲಾಂತು ಬಂಗಾರ ಒಂದು ಸಾವಿರ ತಲಾಂತು ಬೆಳ್ಳಿ ಮತ್ತು ಹೆಚ್ಚಾದ ತಾಮ್ರ ಮತ್ತು ಕಬ್ಬಿಣ. ಸಿದ್ಧಮಾಡಿದ್ದೇನೆ./ಕೂಡಿಸಿದ್ದೇನೆ.
  5. ದೊಡ್ಡ ಸಂಪೂರ್ಣವಾದ ಸಂಖ್ಯೆಗಳಿಗೆ ಸಾಮಾನ್ಯವಾದ ಅಭಿವ್ಯಕ್ತಿಯನ್ನು ಬಳಸಿ ಮತ್ತು ಅಂಕಿಗಳನ್ನು ಆವರಣದಲ್ಲಿ ಬರೆಯಿರಿ.

    • ನಾನು ಯೆಹೋವನ ಆಲಯಕ್ಕಾಗಿಯೆಥೇಚ್ಛವಾದ ಬಂಗಾರ (100,000 ತಲಾಂತುಗಳು), ಮತ್ತು ಹತ್ತು ಪಟ್ಟು ಬೆಳ್ಳಿ (1,000,000 ತಲಾಂತುಗಳು), ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ. ಕೂಡಿಸಿದ್ದೇನೆ.

ಏಕರೂಪನೀತಿ.

ನಿಮ್ಮ ಭಾಷಾಂತರದಲ್ಲಿ ಏಕರೂಪವನ್ನು ಉಳಿಸಿಕೊಳ್ಳಿ. ಸಂಖ್ಯೆಗಳನ್ನು ಹೇಗೆ ಭಾಷಾಂತರಿಸಬೇಕು ಮತ್ತು ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಹೇಗೆ ಭಾಷಾಂತರಿಸಬೇಕು ಎಂದು ನಿರ್ಧರಿಸಬೇಕು.

  • ಏಕರೂಪವನ್ನು ಉಳಿಸಿಕೊಳ್ಳಲು ಅನೇಕ ಮಾರ್ಗಗಳಿವೆ.
  • ಎಲ್ಲಾ ಸಮಯದಲ್ಲೂ ಸಂಖ್ಯೆಗಳನ್ನು ಪ್ರತಿನಿಧಿಸುವಂತೆ ಅಂಕೆಗಳನ್ನು ಬಳಸಿಕೊಳ್ಳಿ. (ಕೆಲವೊಮ್ಮೆ ತುಂಬಾ ಉದ್ದವಾದ ಪದಗಳನ್ನು ಬಳಸಬೇಕಾಗಬಹುದು)
  • ಅಂಕೆಗಳನ್ನು ಬಳಸಿ ಎಲ್ಲಾ ಸಮಯದಲ್ಲೂ ಸಂಖ್ಯೆಗಳನ್ನು ಪ್ರತಿನಿಧಿಸುವಂತೆ ಬರೆಯಿರಿ
  • ನಿಮ್ಮ ಭಾಷೆಯಲ್ಲಿ ಸಂಖ್ಯೆಗಳನ್ನು ಪ್ರತಿನಿಧಿಸುವ ಪದಗಳನ್ನು ಮತ್ತು ಅಂಕಿಗಳಿಗೆ ಸಂಖ್ಯೆಗಳನ್ನು ಬರೆದು ನಿಮ್ಮ ಭಾಷೆಯಲ್ಲಿಯ ಪದಗಳನ್ನು ಬರೆಯಿರಿ.
  • ಚಿಕ್ಕ ಸಂಖ್ಯೆಗಳಿಗೆ ಪದಗಳನ್ನು ದೊಡ್ಡ ಸಂಖ್ಯೆಗಳಿಗೆ ಅಂಕೆಗಳನ್ನು ಬಳಸಿ.
  • ಕೆಲವೇ ಅಕ್ಷರಗಳು ಬಳಸಿ ಬರೆಯುವುದಾದರೆ ಸಂಖ್ಯೆಗಳಿಗೆ ಬಳಸಿಕೊಳ್ಳಿ ದೊಡ್ಡ ಸಂಖ್ಯೆಗಳನ್ನು ಅಂಕೆಗಳಿಂದ ಬರೆಯಿರಿ
  • ಸಂಖ್ಯೆಗಳನ್ನುಪ್ರತಿನಿಧಿಸಲು ಪದಗಳನ್ನು ಬಳಸಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.

ULB ಮತ್ತು UDBಯಲ್ಲಿರುವ ಏಕರೂಪ.

The Unlocked Literal Bible (ULB) and the Unlocked Dynamic Bible (UDB) ಇವುಗಳಲ್ಲಿ ಸಂಖ್ಯೆಗಳಿಗೆ ಪದಗಳನ್ನು ಒಂದು ಅಥವಾ ಎರಡು ಇದ್ದರೆ ಬಳಸಬಹುದು (ಒಂಬತ್ತು, ಹದಿನಾರು, ಮುನ್ನೂರು). ಅವುಗಳಲ್ಲಿ ಒಂದಕ್ಕಿಂತ ಹೆಚ್ಚು ಸಂಖ್ಯೆಗಳಿದ್ದರೆ ಪದಗಳ ಬದಲು ಅಂಕೆಗಳನ್ನೇ ಬಳಸುತ್ತಾರೆ (ಅಂಕೆಗಳು “130” ಎಂಬುದನ್ನು " ಒಂದುನೂರ ಮೂವತ್ತು " ಎಂಬುದನ್ನು ನೂರಮೂವತ್ತು ಎಂದು ಬರೆಯುತ್ತಾರೆ.

ಆದಮ 130ವರ್ಷದವನಾಗಿದ್ದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಸೇತ ಎಂದು ಹೆಸರಿಟ್ಟನು ಸೇತನಿಗೆ ತಂದೆಯಾದ ಮೇಲೆ ಅವನು ಎಂಟುನೂರುವರ್ಷ ಬದುಕಿದ್ದನು. ಅವನು ಅನೇಕ ಗಂಡು,ಹೆಣ್ಣು ಮಕ್ಕಳನ್ನು ಪಡೆದನು ಆದಾಮನು 930ವರ್ಷ ಬದುಕಿ ನಂತರ ಮರಣಹೊಂದಿದನು. (ಆದಿಕಾಂಡ5:3-5 ULB)


ಕ್ರಮಸೂಚಕ ಸಂಖ್ಯೆಗಳು.

Translation Manual :: Just-in-Time Learning Modules :: Unknowns :: Ordinal Numbers

###ವಿವರಣೆ

ಕ್ರಮಸೂಚಕ ಸಂಖ್ಯೆಗಳನ್ನು ಸತ್ಯವೇದದಲ್ಲಿ ಮುಖ್ಯವಾಗಿ ಪಟ್ಟಿಯನ್ನು ಮಾಡುವಾಗ ಅದರಲ್ಲಿರುವ ವಸ್ತುಗಳು / ವಿಷಯದ ಸ್ಥಾನದ ಬಗ್ಗೆ ಹೇಳುವಾಗ ಬಳಸುತ್ತಾರೆ.

ದೇವರು ತನ್ನ ಸಭೆಯಲ್ಲಿ ಮೊದಲನೆಯದಾಗಿ ಅಪೋಸ್ತಲರನ್ನು ಎರಡನೆಯದಾಗಿ ಪ್ರವಾದಿಗಳನ್ನು ಮೂರನೆಯದಾಗಿ ಉಪದೇಶಕರನ್ನು ಇಟ್ಟಿದ್ದಾನೆ ; ಆಮೇಲೆ ಮಹಾತ್ಕಾರ್ಯ ಮಾಡುವ ಶಕ್ತಿಯನ್ನು ಇಟ್ಟಿದ್ದಾನೆ (1 ಕೊರಿಂಥ 12:28 ULB)

ಇದು ದೇವರು ಸಭೆಯಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರನ್ನು ನೇಮಿಸಿದ ಕ್ರಮಸೂಚಕ ಪಟ್ಟಿ.

ಇಂಗ್ಲೀಷ್ ಭಾಷೆಯ ಕ್ರಮಸೂಚಕ ಸಂಖ್ಯೆಗಳು.

ಇಂಗ್ಲೀಷ್ ಭಾಷೆಯ ಕ್ರಮಸೂಚಕ ಸಂಖ್ಯೆಗಳು “-th” ನಿಂದ ಕೊನೆಗೊಳ್ಳುತ್ತವೆ.

ಅಂಕೆ ಸಂಖ್ಯೆ ಕ್ರಮಸೂಚಕ ಸಂಖ್ಯೆ
4 ನಾಲ್ಕು ನಾಲ್ಕನೆ
10 ಹತ್ತು ಹತ್ತನೆ
100 ಒಂದು ನೂರು ಒಂದು ನೂರನೆ
1,000 ಒಂದು ಸಾವಿರ ಒಂದು ಸಾವಿರದ

ಕೆಲವು ಕ್ರಮಸೂಚಕ ಸಂಖ್ಯೆಗಳು ಇಂಗ್ಲೀಷಿನಲ್ಲಿ ಈ ವಿನ್ಯಾಸವನ್ನು ಅನುಸರಿಸುವುದಿಲ್ಲ.

ಅಂಕೆ ಸಂಖ್ಯೆ ಕ್ರಮಸೂಚಕ ಸಂಖ್ಯೆ
1 ಒಂದು ಮೊದಲ
2 ಎರಡು ಎರಡನೆ
3 ಮೂರು ಮೂರನೆ
5 ಐದು ಐದನೆ
12 ಹನ್ನೆರಡು ಹನ್ನೆರಡನೆ

ಕಾರಣ ಇದೊಂದು ಭಾಷಾಂತರದ ಸಮಸ್ಯೆ

ಕೆಲವು ಭಾಷೆಯ ಪಟ್ಟಿಯಲ್ಲಿ ಕ್ರಮವನ್ನು ಸೂಚಿಸುವ ವಿಶೇಷ ಸಂಖ್ಯೆಗಳು ಇರುವುದಿಲ್ಲ. ಅದರ ಬಗ್ಗೆ ನಿಭಾಯಿಸಲು ಅನೇಕ ದಾರಿಗಳಿವೆ.

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು

ಮೊದಲನೆಯ ಚೀಟುಯೆಹೋಯಾರೀಬನಿಗೆ ಬಿದ್ದಿತು ಎರಡನೆಯದುಯೆದಾಯನಿಗೆ, ಮೂರನೆಯದುಹಾರೀಮನಿಗೆ ನಾಲ್ಕನೆಯದು ಸೆಯೋರೀಮನಿಗೆ ಇಪ್ಪತ್ಮೂರನೆಯದು ದೆಲಾಯನಿಗೆ ಮತ್ತು ಇಪ್ಪತ್ತ ನಾಲ್ಕನೆಯದು ಮಾಜ್ಯನಿಗೆ ಬಿದ್ದಿತು. (1 ಪೂರ್ವಕಾಲ ವೃತ್ತಾಂತ 24:7-18 ULB)

ಜನರು ಈ ರೀತಿ ಚೀಟುಹಾಕಿ ಪ್ರತಿಯೊಬ್ಬರನ್ನೂ ಕ್ರಮಸೂಚಕ ಸಂಖ್ಯೆಗಳನ್ನು ನಿರ್ಧರಿಸುತ್ತಿದ್ದರು.

ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಲ್ಲಿ ರತ್ನಗಳನ್ನು ಸೇರಿಸಬೇಕು. ಮೊದಲ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ, ಸ್ಫಟಿಕಗಳನ್ನು ಎರಡನೆಯಸಾಲಿನಲ್ಲಿ ಕೆಂಪುಹರಳು, ನೀಲಪಚ್ಚೆಗಳನ್ನು, ವಜ್ರವನ್ನು ಮೂರನೆಯಸಾಲಿನಲ್ಲಿ ಸುವರ್ಣರತ್ನ, ಗೋಮೇದಿಕ, ಧೂಮ್ರಮಣಿಗಳನ್ನು ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೇರುಲ್ಲ, ವೈಢೂರ್ಯಗಳನ್ನು ಚಿನ್ನದ ಜವೆಯ ಕಲ್ಲಿನಲ್ಲಿ ಸೇರಿಸಬಹುದು. (ವಿಮೋಚನಾ ಕಾಂಡ 28:17-20 ULB)

ಇದು ಅಮೂಲ್ಯ ಕಲ್ಲುಗಳ ಸಾಲುಗಳನ್ನು ವಿವರಿಸುತ್ತದೆ. ಮೊದಲ ಸಾಲು ಬಹುಷಃ ಮೇಲಿನ ಸ್ಥಾನದಲ್ಲಿ ಮತ್ತು ನಾಲ್ಕನೆ ಸ್ಥಾನದಲ್ಲಿ ಇರುವುದು ಬಹುಷಃ ಕೆಳಗಿನ ಸಾಲಿನಲ್ಲಿ ಇವೆ.

ಭಾಷಾಂತರ ತಂತ್ರಗಳು

ನಿಮ್ಮ ಭಾಷೆಯಲ್ಲೂ ಇಂತಹ ಕ್ರಮಸೂಚಕ ಸಂಖ್ಯೆಗಳಿದ್ದು, ಅವುಗಳನ್ನು ಬಳಸುತ್ತಿದ್ದು ಸರಿಯಾದ ಅರ್ಥಕೊಡುತ್ತಿದ್ದರೆ ಅದನ್ನೇ ಬಳಸಲು ಪರಿಗಣಿಸಬಹುದು. ಹಾಗೆ ಇಲ್ಲದಿದ್ದರೆ ಕೆಳಗೆ ಕೊಟ್ಟಿರುವ ಕೆಲವು ವಿಧಾನಗಳನ್ನು ಪರಿಗಣಿಸಬಹುದು.

  1. “ಒಂದು " ಎಂಬುದನ್ನು ಮೊದಲ ವಿಷಯಕ್ಕೆ ಮತ್ತು " ಇನ್ನೊಂದು” ಅಥವಾ "ಮುಂದಿನದು " ಉಳಿದವುಗಳೊಂದಿಗೆ ಬಳಸಬಹುದು
  2. ಮೊದಲು ಎಲ್ಲಾ ವಸ್ತುಗಳ ಒಟ್ಟು ಸಂಖ್ಯೆಯನ್ನು ಹೇಳಬೇಕು ಆಮೇಲೆ ಆ ವಸ್ತುಗಳಿಗೆ ಸಂಬಂಧಿಸಿದವುಗಳನ್ನು ಪಟ್ಟಿಮಾಡಬೇಕು.

ಭಾಷಾಂತರ ವಿಧಾನಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ಮೊದಲು ವಿಷಯ / ವಸ್ತುಗಳ ಒಟ್ಟು ಸಂಖ್ಯೆಯ ಬಗ್ಗೆ ಹೇಳಬೇಕು ಆಮೇಲೆ “ಒಂದು " ಎಂಬುದನ್ನು ಮೊದಲವಸ್ತು ಮತ್ತು " ಇನ್ನೊಂದು” ಅಥವಾ “ಮುಂದಿನದು” ಎಂಬುದನ್ನು ಉಳಿದ ವಸ್ತುಗಳೊಂದಿಗೆ ಬಳಸಬಹುದು.
  • ಮೊದಲನೆಯ ಚೀಟು ಯೆಹೋಯಾರೀಬನಿಗೆ, ಎರಡನೆಯದು ಯೆದಾಯನಿಗೆ, ಮೂರನೆಯದು ಹಾರೀಮನಿಗೆ, ನಾಲ್ಕನೆಯದು ಸೆಯೇರೀಮನಿಗೆ, ಇಪ್ಪತ್ಮೂರನೆಯದು ದೆಲಾಯನಿಗೆ ಮತ್ತು ಇಪ್ಪತ್ತ ನಾಲ್ಕನೆಯದು ಮಾಜ್ಯನಿಗೆ ಬಿದ್ದಿತು. (1 ಪೂರ್ವಕಾಲವೃತ್ತಾಂತ 24:7-18 ULB)

    • ಅಲ್ಲಿ ಒಟ್ಟು ಇಪ್ಪತ್ತ ನಾಲ್ಕು ಚೀಟುಗಳಿದ್ದವು. ಒಂದು ಚೀಟುಯೆಹೋಯಾರೀಬನಿಗೆ ಇನ್ನೊಂದು ಯೆದಾಯನಿಗೆ,  ಮುಂದಿನದು   ಹಾರೀಮನಿಗೆ, … ಅನಂತರದ್ದುದೆಲಾಯನಿಗೆ, ಮತ್ತು ಕೊನೆಯದು ಮಾಜ್ಯನಿಗೆ ಬಿದ್ದಿತು.
    • ಅಲ್ಲಿ ಇಪ್ಪತ್ತ ನಾಲ್ಕು ಚೀಟುಗಳಿದ್ದವು. ಒಂದು ಚೀಟು ಯೆಹೋಯಾರೀಬ ನಿಗೆ. ನಂತರದ್ದು ಯೆದಾಯನಿಗೆ, ನಂತರದ್ದು   ಹಾರೀಮನಿಗೆ, … ಮುಂದಿನದು ದೆಲಾಯನಿಗೆ, ಮತ್ತು ಕೊನೆಯದು ಮಾಜ್ಯನಿಗೆ ಬಿದ್ದಿತು.
  • ಏದೇನ್ ತೋಟದಲ್ಲಿ ಒಂದು ನದಿ ಹುಟ್ಟಿ ಹರಿದು ಆ ತೋಟವನ್ನೆಲ್ಲಾ ನೀರಿನಿಂದ ತೋಯಿಸುತ್ತಿತ್ತು. ನದಿ ನಂತರ ನಾಲ್ಕುಕವಲುಗಳಾಗಿ ವಿಂಗಡಿಸಲ್ಪಟ್ಟು ಹರಿಯಿತು. ಮೊದಲ ನದಿಯ ಕವಲಿನ ಹೆಸರು ಪೀಶೋನ್. ಇದು ಬಂಗಾರ ದೊರೆಯುವ “ ಹವೀಲ “ ದೇಶವನ್ನೆಲ್ಲಾ ಸುತ್ತುವರೆದು ಹರಿಯುವುದು. ಈ ದೇಶದ ಬಂಗಾರವು ಶ್ರೇಷ್ಠವಾದದ್ದು. ಅಲ್ಲಿ ಬದೋಲಕ ಧೂಪವು ಗೋಮೇದಿಕ ರತ್ನವೂ ದೊರೆಯುತ್ತದೆ. ಎರಡನೆಯನದಿಯ ಹೆಸರು ಗೆಹೋನ್. ಈ ನದಿಯು ಕೂಷ್ ದೇಶವನ್ನೆಲ್ಲಾ ಸುತ್ತುವರೆದು ಹರಿಯುವುದು. ಮೂರನೆ ನದಿಯ ಹೆಸರು ಟೈಗ್ರಿಸ್ ಇದು ಅಶೂರ್ ದೇಶದ ಪೂರ್ವಕ್ಕೆ ಹರಿಯುತ್ತದೆ. ನಾಲ್ಕನೆಯದು ಯುಫ್ರೆಟಿಸ್. (ಆದಿಕಾಂಡ 2:10-14 ULB)

    • ಒಂದು ನದಿ ಏದೆನ್ ತೋಟದಿಂದ ಹರಿದು ತೋಟವನ್ನೆಲ್ಲಾ ನೀರಿನಿಂದ ತೋಯಿಸುತ್ತಿತ್ತು. ಅಲ್ಲಿಂದ ಮುಂದೆ ಅದು ನಾಲ್ಕು ಕವಲುಗಳಾಗಿ ವಿಭಾಗವಾಯಿತು. ಒಂದರ ಹೆಸರು ಪೀಶೋನ್. ಈ ನದಿಯೇ ಬಂಗಾರ ದೊರಕುವ ಹವಿಲಾ ದೇಶದ ಮೂಲಕ ಹರಿಯುತ್ತದೆ. ಈ ದೇಶದಲ್ಲಿರುವ ಬಂಗಾರವು ಅತ್ಯಮೂಲ್ಯವಾದುದು. ಅಲ್ಲಿ ಬದೋಲಕ ಧೂಪವು ಗೋಮೇದಿಕ ರತ್ನವೂ ಸಿಗುತ್ತದೆ. ನಂತರ ನದಿಯ ಹೆಸರು ಗೆಹೋನ್. ಈ ನದಿಯು ಕೂಷ್ ದೇಶದಲ್ಲೆಲ್ಲಾ ಹರಿಯುತ್ತದೆ. ಮುಂದಿನ ನದಿಯ ಹೆಸರು ಟೈಗ್ರಿಸ್ ಇದು ಅಶೂರ್ ದೇಶದ ಪೂರ್ವಕ್ಕೆ ಹರಿಯುತ್ತದೆ ಕೊನೆಯ ನದಿಯ ಹೆಸರು ಯೂಫ್ರೆಟಿಸ್
  1. ಎಲ್ಲಾ ವಿಷಯಗಳು ಸಂಖ್ಯೆಗಳನ್ನು ಒಟ್ಟಾಗಿ ಹೇಳಿ ಮತ್ತು ನಂತರ ಅವುಗಳಿಗೆ ಸಂಬಂಧಿಸಿದವುಗಳನ್ನು ಪಟ್ಟಿಮಾಡಿ.
  • ಮೊದಲನೆಯ ಚೀಟು ಯೆಹೋಯಾರೀಬನಿಗೆ, ಎರಡನೆಯದು ಯೆದಾಯನಿಗೆ, ಮೂರನೆಯದುಹಾರೀಮನಿಗೆ, ನಾಲ್ಕನೆಯದು ಸೆಯೇರೀಮನಿಗೆ, ಇಪ್ಪತ್ಮೂರನೆಯದು ದೆಲಾಯನಿಗೆ ಮತ್ತು ಇಪ್ಪತ್ತ ನಾಲ್ಕನೆಯದು ಮಾಜ್ಯನಿಗೆ ಬಿದ್ದಿತು. (1 ಪೂರ್ವಕಾಲ ವೃತ್ತಾಂತ 24:7-18 ULB)
    • ಅವರು ಒಟ್ಟು ಇಪ್ಪತ್ತನಾಲ್ಕು ಚೀಟು ಹಾಕಿದರು. ಆ ಚೀಟು ಗಳು ಯೆಹೋಯಾರೀಬ, ಯೆದಾಯ, ಹಾರೀಮ, ಸೆಯೇರೀಮ, ದೆಲಾಯನಿಗೆ ಮತ್ತು ಮಾಜ್ಯನಿಗೆ ಬಿದ್ದವು.

ಭಿನ್ನರಾಶಿ.

Translation Manual :: Just-in-Time Learning Modules :: Unknowns :: Fractions

ವಿವರಣೆ

ಭಿನ್ನರಾಶಿ ಎಂದರೆ ಒಂದು ಸಂಖ್ಯಯಲ್ಲಿನ ಸಮಾನ ಭಾಗಗಳನ್ನು ಸೂಚಿಸುವಂತದ್ದು, ಕೆಲವೊಮ್ಮೆ ದೊಡ್ಡ ಗುಂಪಿನಲ್ಲಿರುವ ಸಮಾನ ಗುಂಪುಗಳ ಕುರಿತಾಗಿ ಅಥವಾ ಕೆಲವು ವಸ್ತುಗಳ ಬಗ್ಗೆ ಹೇಳಲೂ ಬಳಸಲಾಗುತ್ತದೆ. ಒಂದು ವಿಷಯ ಅಥವಾ ಒಂದು ಗುಂಪನ್ನು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟು ಅಥವಾ ಹೆಚ್ಚು ಭಾಗಗಳಾಗಿ, ಗುಂಪಾಗಿ ವಿಂಗಡಿಸಿ ಮತ್ತು ಭಿನ್ನರಾಶಿ ಒಂದಕ್ಕಿಂತ ಹೆಚ್ಚಿನ ಭಾಗ ಅಥವಾ ಗುಂಪನ್ನು ಸೂಚಿಸಲು ಹೇಳುವುದು.

ಪಾನದ್ರವ್ಯವಾಗಿ ಅರ್ಪಿಸಲು ನೀನು ಒಂದು ಹಿನ್ (ಎರಡು ಸೇರು) ಮೂರನೇ ಒಂದು ಭಾಗ ಕೊಡಬೇಕು. (ಅರಣ್ಯಕಾಂಡ 15:7 ULB)

ಹಿನ್ ಎಂದರೆ ದ್ರಾಕ್ಷಾರಸ ಅಥವಾ ದ್ರವರೂಪದವುಗಳನ್ನು ಅಳತೆ ಮಾಡಲು ಬಳಸುತ್ತಿದ್ದ ಒಂದು ಅಳತೆ ಪಾತ್ರೆ. ಒಂದು ಹಿನ್ ಅಳತೆಯನ್ನು ಮೂರು ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ಮಾತ್ರ ಇನ್ನೊಂದು ಪಾತ್ರೆಯಲ್ಲಿ ತುಂಬಿಸುವುದು.

ಮೂರನೇ ಒಂದು ಭಾಗದ ಹಡಗುಗಳನ್ನು ನಾಶಪಡಿಸಿದರು. (ಪ್ರಕಟಣೆ 8:9 ULB)

ಅಲ್ಲಿ ಅನೇಕ ಹಡುಗುಗಳು ಇದ್ದವು. ಒಂದು ವೇಳೆ ಎಲ್ಲಾ ಹಡಗುಗಳನ್ನು ಮೂರು ಸಮಾನ ಭಾಗಗಳಾಗಿ ವಿಂಗಡಿಸಿದ್ದರೆ ಅದರಲ್ಲಿ ಒಂದು ಗುಂಪಿನ ಹಡಗುಗಳು ನಾಶವಾಗುತ್ತಿದ್ದವು. ಇಂಗ್ಲೀಷ್ ಭಾಷೆಯಲ್ಲಿ ಬಹುಪಾಲು ಭಿನ್ನರಾಶಿ ಪದಗಳು “-th” ಅಕ್ಷರಗಳಿಂದ ಕೊನೆಗೊಳ್ಳುತ್ತವೆ.

ಇಡೀ ಸಂಖ್ಯೆಯನ್ನು ಗುಂಪನ್ನು ಸಮಾನಭಾಗಗಳಾಗಿ ವಿಂಗಡಿಸುವುದನ್ನು [ಭಿನ್ನರಾಶಿ] ಎಂದು ಕರೆಯಲಾಗುವುದು
ನಾಲ್ಕು ನಾಲ್ಕನೆಯ
ಹತ್ತು ಹತ್ತನೆಯ
ಒಂದು ನೂರು ಒಂದು ನೂರನೆಯ
ಒಂದು ಸಾವಿರ ಒಂದು ಸಾವಿರದ

ಇಂಗ್ಲೀಷ್ ಭಾಷೆಯಲ್ಲಿ ಕೆಲವು ಭಿನ್ನರಾಶಿಗಳು ಈ ಮಾದರಿಯನ್ನು ಅನುಸರಿಸುವುದಿಲ್ಲ.

ಇಡೀ ಭಾಗವನ್ನು ಅನೇಕ ಭಾಗಗಳಾಗಿ ವಿಂಗಡಿಸಿರುವುದು ಭಿನ್ನರಾಶಿ
ಎರಡು ಅರ್ಧ
ಮೂರು ಮೂರನೇ
ಐದು ಐದನೇ

ಕಾರಣ ಇದೊಂದು ಭಾಷಾಂತರ ವಿಷಯ ಕೆಲವು ಭಾಷೆಯಲ್ಲಿ ಭಿನ್ನರಾಶಿಯ ಬಳಕೆ ಇಲ್ಲ. ಅವರು ಸರಳವಾಗಿ ಗುಂಪುಗಳ ಬಗ್ಗೆ ಅಥವಾ ವಿಭಾಗಗಳ ಬಗ್ಗೆ ಮಾತನಾಡಬಹುದು ಆದರೆ ಆ ವಿಭಾಗಗಳು ಎಷ್ಟು ದೊಡ್ಡದು ಅಥವಾ ಎಷ್ಟು ವಿಭಾಗಗಳು ಆ ಗುಂಪಿನಲ್ಲಿವೆ ಎಂದು ಹೇಳಲು ಭಿನ್ನರಾಶಿ ಬಳಸುವುದಿಲ್ಲ.

ಸತ್ಯವೇದದ ಕೆಲವು ಉದಾಹರಣೆಗಳು

ಮನಸ್ಸೆ ಕುಲದ ಅರ್ಧ ಜನರಿಗೆಮೋಶೆಯು ಬಾಷಾನಿನಲ್ಲಿ ಸ್ವಾಸ್ಥ್ಯವನ್ನು ಕೊಟ್ಟಿದ್ದನು ಉಳಿದ ಅರ್ಧ ಜನರಿಗೆಯೆಹೋಶುವನು ಯೋರ್ದಾನಿನ ಶ್ಚಿಮದಲ್ಲಿ ಬೇರೆ ಕುಲದವರೊಂದಿಗೆ ಪಾಲು ಕೊಟ್ಟನು. (ಯೆಹೋಶುವ 22:7 ULB)

ಮನಸ್ಸೆಯ ಕುಲವನ್ನು ಎರಡು ಗುಂಪಾಗಿ ವಿಂಗಡಿಸಲಾಯಿತು. ಮನಸ್ಸೆ ಕುಲದ " ಅರ್ಧ ಭಾಗ ಎಂಬ ಪದ ಆ ಗುಂಪಿನ ಭಾಗ ಎಂದು ಸೂಚಿಸುತ್ತದೆ. “ಇನ್ನೊಂದು ಅರ್ಧ” ಎಂಬ ಪದ ಇನ್ನೊಂದು ಗುಂಪನ್ನು ಸೂಚಿಸುತ್ತದೆ.

ಆಗ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರಮಾಡುವುದಕ್ಕಾಗಿ ಅದೇ ವರುಷ ಅದೇ ತಿಂಗಳು ದಿನ ತಾಸಿಗೆ ಸಿದ್ಧವಾಗಿದ್ದ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಟ್ಟನು (ಪ್ರಕಟಣೆ 9:15 ULB)

ಆ ಎಲ್ಲಾ ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪಿನ ಜನರನ್ನು ಸಂಹಾರ ಮಾಡಿದರು.

ಪಾನದ್ರವ್ಯವಾಗಿ ಸಮರ್ಪಿಸಲು ಒಂದು ಹಿನ್ ದ್ರಾಕ್ಷಾರಸದ ನಾಲ್ಕನೇ ಭಾಗವನ್ನು (ಒಂದು ವರೆ ಸೇರು ದ್ರಾಕ್ಷಾರಸ) ತರಬೇಕು. (ಅರಣ್ಯಕಾಂಡ 15:5 ULB)

ಅವರು ಒಂದು ಹಿನ್ ದ್ರಾಕ್ಷಾರಸವನ್ನು ನಾಲ್ಕು ಸಮಾನ ಭಾಗಗಳಾಗಿ ವಿಂಗಡಿಸಿ ಅದರಲ್ಲಿ ಒಂದು ಭಾಗವನ್ನು ಸಿದ್ಧಪಡಿಸಿದರು.

ಭಾಷಾಂತರ ತಂತ್ರಗಳು.

ನಿಮ್ಮ ಭಾಷೆಯಲ್ಲಿ ಭಿನ್ನರಾಶಿಗೆ ಸರಿಯಾದ ಅರ್ಥಕೊಡುವ ಪದವಿದ್ದರೆ ಅದನ್ನು ಬಳಸಿಕೊಳ್ಳಿ. ಇಲ್ಲದಿದ್ದರೆ ಕೆಳಗೆಕೊಟ್ಟಿರುವ ವಿಧಾನಗಳನ್ನು ಬಳಸಬಹುದು.

  1. ವಿಭಾಗಿಸಬೇಕಾದ ಗುಂಪುಗಳ ಸಂಖ್ಯೆಯನ್ನು ಹೇಳಿ ಮತ್ತು ವಿಭಾಗಿಸಿದ ಭಾಗಗಳು ಅಥವಾ ಗುಂಪುಗಳ ಬಗ್ಗೆ ತಿಳಿಸಿ.
  2. ಅಳತೆ (ಉದ್ದ) ತೂಕ ಇವುಗಳ ಬಗ್ಗೆ ಮಾತನಾಡುವಾಗ ನಿಮ್ಮ ಜನರಿಗೆ ತಿಳಿಯುವಂತೆ ಹೇಳಿ ಅಥವಾ UDBಯಲ್ಲಿರುವ ಭಾಗದಂತೆ ಬಳಸಬಹುದು.
  3. ಅಳತೆಗಳ ಬಗ್ಗೆ ಹೇಳುವಾಗ ನಿಮ್ಮ ಭಾಷೆಯ ಜನರು ಉಪಯೋಗಿಸುವ ಪದಗಳನ್ನು ಬಳಸಿ.

ನಿಮ್ಮ ಭಾಷೆಯಲ್ಲಿರುವ ಅಳತೆಗಳು ಮೆಟ್ರಿಕ್ ಪದ್ಧತಿಯಂತೆ ಬಳಸಿಕೊಳ್ಳಲು ಪ್ರತಿಯೊಂದು ಅಳತೆಯನ್ನು ಗುರುತಿಸಿ ಹೇಳಲು ತಿಳಿದುಕೊಳ್ಳುವುದು ಅವಶ್ಯ.

ಈ ಉದಾಹರಣೆಗಳನ್ನು ಭಾಷಾಂತರ ವಿಧಾನಗಳನ್ನು ಅಳವಡಿಸಿರುವ ಬಗ್ಗೆ.

  1. ವಿಭಾಗಿಸಬೇಕಾದ ಗುಂಪುಗಳ ಸಂಖ್ಯೆಯನ್ನು ಹೇಳಿ ಮತ್ತು ವಿಭಾಗಿಸಿದ ಭಾಗಗಳು ಅಥವಾ ಗುಂಪುಗಳ ಬಗ್ಗೆ ತಿಳಿಸಿ.
  • ಆಗ ಮೂರರಲ್ಲಿ ಒಂದು ಭಾಗಸಮುದ್ರ ರಕ್ತಮಯವಾಯಿತು (ಪ್ರಕಟಣೆ 8:8 ULB)

    • ಇದು ಅವರು ಮೂರು ಭಾಗವಾಗಿಸಮುದ್ರವನ್ನುವಿಂಗಡಿಸಿದರು , ಅದರಲ್ಲಿ ಒಂದುಭಾಗ ರಕ್ತಮಯವಾಯಿತು
  • ನೀವು ತರುವಂತದ್ದು ಹೋರಿಯಾದ ಪಕ್ಷದಲ್ಲಿ ಅದರೊಂದಿಗೆ ಧಾನ್ಯ ನೈವೇದ್ಯಕ್ಕಾಗಿ ಮೂರು ಸೇರು ಎಣ್ಣೆ ಬೆರೆಸಿದ ಒಂಬತ್ತು ಸೇರು ಗೋಧಿಹಿಟ್ಟನ್ನು ಪಾನದ್ರವ್ಯಕ್ಕಾಗಿ ಮೂರುಸೇರು ದ್ರಾಕ್ಷಾರಸವನ್ನು ತಂದು ಸಮರ್ಪಿಸಬೇಕು . (ಅರಣ್ಯಕಾಂಢ 15:9 ULB)

    • … ಆಮೇಲೆ ನೀವು ಒಂದು ಎಫಾ ಒಳ್ಳೆ ಹಿಟ್ಟನ್ನು ಹತ್ತು ಭಾಗಗಳಾಗಿ ವಿಂಗಡಿಸಿ ಮತ್ತು ಒಂದು ಹಿನ್ ಎಣ್ಣೆಯನ್ನು ಎರಡು ಭಾಗಗಳಾಗಿ.ವಿಂಗಡಿಸಬೇಕು ಆಮೇಲೆ ಆ ಹಿಟ್ಟಿನಲ್ಲಿ ಮೂರು ಭಾಗಗಳು ಎಣ್ಣೆಯಲ್ಲಿ ಒಂದು ಭಾಗ ಸೇರಿಸಬೇಕು ಇವುಗಳನ್ನು ನೀವು ಆ ಹೋರಿಯೊಂದಿಗೆ ಸಮರ್ಪಿಸಬೇಕು.
  1. ಅಳತೆಗಳನ್ನು ಹೇಳುವಾಗ UDB ಯಲ್ಲಿ ಕೊಟ್ಟಿರುವ ಅಳತೆಗಳನ್ನು ಬಳಸಬೇಕು. ಈಗಾಗಲೇ UDB ಭಾಷಾಂತರಗಾರರು ಮೆಟ್ರಿಕ್ ಪದ್ಧತಿಯಂತೆ ಹೇಳುವ ಅಳತೆ, ಪ್ರಮಾಣಗಳನ್ನು ಹೇಗೆ ಬಳಸಬಹುದು ಎಂಬುದನ್ನು ಅಳವಡಿಸಿದ್ದಾರೆ.
  • ಶೆಕೆಲ್ ನ ಮೂರನೇ ಎರಡು ಭಾಗ (1 ಸಮುವೇಲ 13:21 ULB)

    • ಬೆಳ್ಳಿ ಎಂಟು ಗ್ರಾಂಗಳು (1 ಸಮುವೇಲ 13:21 UDB)
  • ಒಂದು ಎಫಾದ ಹತ್ತನೇ ಮೂರು ಭಾಗ ದಷ್ಟು ಹಿಟ್ಟು ಅರ್ಧ ಹಿನ್ ಎಣ್ಣೆಯೊಂದಿಗೆ ಬೆರೆಸಬೇಕು. (ಅರಣ್ಯಕಾಂಡ 15:9 ULB)

    • ಆರು ಮತ್ತು ಒಂದುವರೆ ಲೀಟರ್ ಚೆನ್ನಾಗಿ ಬೀಸಿದ ಹಿಟ್ಟಿನೊಂದಿಗೆ ಎರಡು ಲೀಟರ್ ಆಲಿವ್ ಎಣ್ಣೆ. (ಅರಣ್ಯಕಾಂಡ 15:9 UDB)
  1. ಅಳತೆಗಳ ಬಗ್ಗೆ ನಿಮ್ಮ ಭಾಷೆಯಲ್ಲಿ ಬಳಸುವ ಪದಗಳನ್ನೇ ಬಳಸಿ. ನಿಮ್ಮ ಭಾಷೆಯಲ್ಲಿರುವ ಅಳತೆಗಳು ಮೆಟ್ರಿಕ್ ಪದ್ಧತಿಯಂತೆ ಬಳಸಿಕೊಳ್ಳಲು ಪ್ರತಿಯೊಂದು ಅಳತೆಯನ್ನು ಗುರುತಿಸಿ ಹೇಳಲು ತಿಳಿದುಕೊಳ್ಳುವುದು ಅವಶ್ಯ.
  • ಒಂದು ಎಫಾದ ಹತ್ತನೇ ಮೂರು ಭಾಗ ಒಳ್ಳೆ ಹಿಟ್ಟನ್ನು ಅರ್ಧ ಹಿನ್ ಎಣ್ಣೆಯೊಂದಿಗೆ ಬೆರೆಸಬೇಕು. (ಅರಣ್ಯಕಾಂಡ 15:9, ULB)
    • ಆರು ಕ್ವಾರ್ಟ್ಸ್ ತೂಕದ ಒಳ್ಳೆಯ ಹಿಟ್ಟನ್ನು ಎರಡು ಕ್ವಾರ್ಟ್ಸ್ ಎಣ್ಣೆಯೊಂದಿಗೆ ಬೆರೆಸಬೇಕು.

ದಶಮಾಂಶ ಸಂಖ್ಯೆಗಳು.

Translation Manual :: Just-in-Time Learning Modules :: Unknowns :: Decimal Numbers

ವಿವರಣೆ.

ದಶಮಾಂಕ ಅಂಶ, ದಶಮಾಂಶ ಅಲ್ಪವಿರಾಮ, ಒಂದು ಸಂಖ್ಯೆಯ ಎಡಭಾಗದಲ್ಲಿ ಗುರುತಿಸಲಾಗುತ್ತದೆ. ಇದನ್ನು ಒಂದು ಇಡೀ ಸಂಖ್ಯೆಯ ಒಂದು ಭಾಗ ಎಂಬುದನ್ನು ತೋರಿಸಲು ಬಳಸಲಾಗುತ್ತದೆ. ಉದಾಹರಣೆಗೆ.1 ಒಂದು ಇಡೀ ಮೀಟರ್ ಅಲ್ಲ. ಆದರೆ ಒಂದು ಮೀಟರ್ ನ (ಹತ್ತನೇ ಭಾಗದ ಒಂದು ಮೀಟರ್) ಮತ್ತು.5 ಎಂಬುದು 5 ಮೀಟರ್ ಅಲ್ಲ ಒ0ದು ಮೀಟರ್ ನ ಹತ್ತನೇ ಭಾಗದ 5 (ಭಾಗ)ಮೀಟರ್

3.7 ಮೀಟರ್ ಗಳು ಒಂದು ಮೀಟರ್ ಎಂದರೆ ಮೂರುಮೀಟರ್ ಮತ್ತು ಒಂದು ಮೀಟರ್ ನ ಏಳು ಭಾಗ. ಇಂತಹ ಸಂಖ್ಯೆಗಳನ್ನು * Unlocked Dynamic Bible* (UDB) ನಲ್ಲಿ ಬಳಸಿದೆ. ಕೆಲವು ದೇಶದಲ್ಲಿ ಜನರು ದಶಮಾಂಶ ಅಲ್ಪವಿರಾಮ ಬಳಸಿದರೆ ಇನ್ನು ಕೆಲವು ದೇಶಗಳಲ್ಲಿ ಜನರು ದಶಮಾಂಶ ಪೂರ್ಣವಿರಾಮವನ್ನು ಬಳಸುತ್ತಾರೆ. ದಶಮಾಂಶ ಅಲ್ಪವಿರಾಮ ಬಳಸುವ ದೇಶದಲ್ಲಿರುವ ಜನರು "3.7 ಮೀಟರ್ " ಎಂಬುದನ್ನು “3,7 ಮೀಟರ್ ಗಳು.” ಎಂದು ಬಳಸುತ್ತಾರೆ ಇನ್ನು ಕೆಲವು ಸಂಸ್ಕೃತಿಯ ಜನರು ಇಂತಹ ಸಮಯದಲ್ಲಿ ಭಿನ್ನರಾಶಿ ಬಳಸುತ್ತಾರೆ (ಭಿನ್ನರಾಶಿ))

Unlocked Dynamic Bible (UDB)ನಲ್ಲಿ ಸಂಖ್ಯೆಯ ದಶಮಾಂಶ ಅಥವಾ ಭಿನ್ನರಾಶಿಯಲ್ಲಿ ಬಳಸಲಾಗಿದೆ. ಅಳತೆಗಳನ್ನು ಮೀಟರ್, ಗ್ರಾಂಗಳನ್ನು ಮತ್ತು ಲೀಟರ್ ಗಳ ಮೂಲಕ ಬರೆಯುವಾಗ ಸಾಮಾನ್ಯವಾಗಿ ದಶಮಾಂಶ ಬಳಸಿ ಬರೆಯುತ್ತಾರೆ.

UDBಯಲ್ಲಿನ ದಶಮಾಂಶ ಸಂಖ್ಯೆ.

ದಶಮಾಂಶ

|.1 ಹತ್ತನೆಯ ಒಂದು ಭಾಗ | | |.2 | ಹತ್ತನೆಯ ಎರಡು ಭಾಗ | | |.3 | ಹತ್ತನೆಯ ಮೂರು ಭಾಗ | | |.4 | ಹತ್ತನೆಯ ನಾಲ್ಕು ಭಾಗ | ಐದನೆಯ ಎರಡು ಭಾಗ | |.5 | ಹತ್ತನೆಯ ಐದು ಭಾಗ | ಒಂದು ಅರ್ಧ | |.6 | ಹತ್ತನೆಯ ಆರು ಭಾಗ | ಐದನೆಯ ಎರಡು ಭಾಗ | |.7 | ಹತ್ತನೆಯ ಏಳು ಭಾಗ | ಐದನೆಯ ಮೂರು ಭಾಗ | |.8 | ಹತ್ತನೆಯ ಎಂಟು ಭಾಗ | ಐದನೆಯ ನಾಲ್ಕು ಭಾಗ | |.9 | ಹತ್ತನೆಯ ಒಂಬತ್ತು ಭಾಗ | | |.25 | ನೂರರಲ್ಲಿ ಇಪ್ಪತ್ತನೆಯ ಭಾಗ | ಕಾಲು ಭಾಗ | |.75 | ನೂರರಲ್ಲಿ ಎಪ್ಪತ್ತೈದನೆಯ ಭಾಗ | ಮುಕ್ಕಾಲು ಭಾಗ |

ಕಾರಣ ಇದೊಂದು ಭಾಷಾಂತರ ತೊಡಕು.

  • ಭಾಷಾಂತರಗಾರರು ಅಳತೆ, ಪ್ರಮಾಣಗಳನ್ನು UDB,ಯಲ್ಲಿರುವಂತೆ ಬಳಸುವುದಾದರೆ ಅವರು ಅದನ್ನು ಅರ್ಥಮಾಡಿಕೊಳ್ಳಲು ಮತ್ತು ಬಳಸಿರುವ ದಶಮಾಂಶಗಳನ್ನು ಸರಿಯಾಗಿ ಬಳಸಲು ತಿಳಿದುಕೊಳ್ಳಬೇಕು.
  • ಭಾಷಾಂತರಗಾರರು ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಸಂಖ್ಯೆಗಳನ್ನು ಬಳಸುವುದನ್ನು ರೂಢಿಸಿಕೊಳ್ಳಬೇಕು.

####ಸತ್ಯವೇದದಲ್ಲಿನ ಉದಾಹರಣೆಗಳು.

ಸಂಖ್ಯೆಗಳ ಭಾಗಗಳನ್ನು Unlocked Literal Bible (ULB) ಸತ್ಯವೇದದಲ್ಲಿ ಭಿನ್ನರಾಶಿಗಳನ್ನು ಬಳಸುತ್ತಾರೆ. Unlocked Dynamic Bible (UDB) ದಶಮಾಂಶಗಳನ್ನು ಅಳತೆಗಳಲ್ಲಿ ಬಳಸುತ್ತಾರೆ. ULB ಮತ್ತು UDB ಸತ್ಯವೇದಗಳ ನಡುವೆ ಇರುವ ಇನ್ನೊಂದು ವ್ಯತ್ಯಾಸವೆಂದರೆ ಸತ್ಯವೇದದಲ್ಲಿನ ದೂರದ ಬಗ್ಗೆ , ಸತ್ಯವೇದದಲ್ಲಿನ ತೂಕ ಮತ್ತು ಸತ್ಯವೇದದಲ್ಲಿನ ದ್ರವ, ಅನಿಲ ಮುಂತಾದ ಪ್ರಮಾಣಗಳು , ಇವುಗಳ ಬಗ್ಗೆ ವಿವಿಧ ಪದ್ಧತಿಗಳನ್ನು ಬಳಸುತ್ತಾರೆ.ಆದುದರಿಂದ ULB ಮತ್ತು UDB ಸತ್ಯವೇದಗಳಲ್ಲಿ ಬಳಸಿರುವ ಸಂಖ್ಯೆಗಳಲ್ಲಿ ಒಂದೇ ಅಳತೆ, ಪ್ರಮಾಣಗಳು ಇರುವುದಿಲ್ಲ.

ಅವರು ಜಾಲಿಮರದಿಂದ ಒಂದು ಮಂಜೂಷವನ್ನು ಮಾಡಬೇಕು. ಅದು ಎರಡೂವರೆ ಮೊಳ ಉದ್ದವೂ ; ಒಂದೂವರೆ ಅಗಲವೂ ಒಂದೂವರೆ ಮೊಳ ಎತ್ತರವೂ ; ಆಗಿರಬೇಕು . (ವಿಮೋಚನಾಕಾಂಡ 25:10 ULB)

ULB ½ “ಅರ್ಧ.” ಎಂಬ ಭಿನ್ನರಾಶಿ ಉಪಯೋಗಿಸುತ್ತದೆ. ಇದನ್ನು ದಶಮಾಂಶ ರೀತಿಯಲ್ಲಿ 0.5 ಎಂದು ಬಳಸಬಹುದು.

ಜನರಿಗೆ ಜಾಲಿಮರದಿಂದ ಒಂದು ಮಂಜೂಷವನ್ನು ಮಾಡಲು ತಿಳಿಸಿ. ಅದರ ಉದ್ದ ಒಂದು ಮೀಟರ್ , 0.7 ಮೀಟರ್ ಅಗಲ, ಮತ್ತು 0.7 ಮೀಟರ್ ಎತ್ತರವಿರಬೇಕು, (ವಿಮೋಚನಾಕಾಂಡ 25:10 UDB)

UDB ದಶಮಾಂಶ 0.7 ಎಂದು ಬಳಸುತ್ತದೆ. ಇದು ಹತ್ತನೇ ಏಳು ಭಾಗಕ್ಕೆ ಸಮವಾದುದು. ಎರಡೂವರೆ ಮೊಳ ಎಂಬುದು ಒಂದು ಮೀಟರ್ ಗೆ ಸಮ. ಒಂದೂವರೆ ಮೊಳ ಎಂಬುದು 0.7 ಮೀಟರ್ ಹತ್ತನೆ ಏಳುಭಾಗ ಮೀಟರ್ ಗೆ ಸಮ.

ಭಾಷಾಂತರದ ಕೌಶಲ್ಯಗಳು

  • ನಿಮ್ಮ ಭಾಷಾಂತರದಲ್ಲಿ ಭಿನ್ನರಾಶಿ ಬಳಸಬೇಕೇ, ದಶಮಾಂಶ ಬಳಸಬೇಕೇ ಇಲ್ಲವೇ ಎರಡೂ ಬಳಸಬಹುದೇ ಎಂಬುದನ್ನು ನೀವೇ ನಿರ್ಧರಿಸಬೇಕು.
  • ULB ಅಥವಾ UDB ಬಳಸಿರುವ ಅಳತೆ, ಪ್ರಮಾಣಗಳಲ್ಲಿ ಯಾವುದನ್ನು ಬಳಸಬೇಕು ಎಂಬುದನ್ನು ನಿರ್ಧರಿಸಬೇಕು.
  • ನೀವು ULB ಯಲ್ಲಿ ಬಳಸಿರುವ ಅಳತೆಗಳನ್ನು ಅಥವಾ UDB ಯಲ್ಲಿ ಬಳಸಿರುವ ಅಳತೆಗಳನ್ನು ಸರಳವಾಗಿ ಭಾಷಾಂತರಿಸಿ.

ಬಳಸಿರುವ UDB ಅಳತೆಗಳನ್ನು ಸರಳವಾಗಿ ಭಾಷಾಂತರಿಸಿ. UDBಗೆ ಭಾಷಾಂತರಿಸಿ.

  1. ನೀವು ULB ಯಲ್ಲಿರುವ ದಶಮಾಂಶ ಮತ್ತು ಅಳತೆಗಳನ್ನು ಬಳಸಲು ನಿರ್ಧರಿಸಿದರೆ ಆಗ ನೀವು ULB ಯಲ್ಲಿರುವ ಭಿನ್ನರಾಶಿಗಳನ್ನು ದಶಮಾಂಶಕ್ಕೆ ಬದಲಾಯಿಸಬಹುದು.
  2. ನೀವು UDBಯಲ್ಲಿರುವ ಭಿನ್ನರಾಶಿಗಳನ್ನು, ಅಳತೆಗಳನ್ನು ಬಳಸಲು ನಿರ್ಧರಿಸಿದರೆ ಆಗ ನೀವು UDB ಯಲ್ಲಿರುವ ದಶಮಾಂಶಗಳನ್ನು ಭಿನ್ನರಾಶಿಗೆ ಬದಲಾಯಿಸಬಹುದು.

ಭಾಷಾಂತರದ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ನೀವು ULB ಯಲ್ಲಿನ ದಶಮಾಂಶ ಮತ್ತು ಅಳತೆಗಳನ್ನುಭಿನ್ನರಾಶಿಗೆ ಬದಲಾಯಿಸಲು ನಿರ್ಧರಿಸಿದರೆ ULB ಯಲ್ಲಿನ ದಶಮಾಂಶಕ್ಕೆ ಬದಲಾಯಿಸಿ.
  • ಎಫೆಹದ ಹತ್ತನೇ ಮೂರು ಭಾಗ (ಒಂಬತ್ತು ಸೇರು) ಎಣ್ಣೆಕಲೆಸಿದ ಗೋಧಿಹಿಟ್ಟನ್ನು, ಒಂದು ಸೇರು ಎಣ್ಣೆಯನ್ನು (ಯಾಜಕ ಕಾಂಡ 14:10 ULB)one logof oil.
    • " 0.3 ಎಫೆಹಅಳತೆಯ ಎಣ್ಣೆಕಲೆಸಿದ ಗೋಧಿಹಿಟ್ಟು ಮತ್ತು ಒಂದು ಸೇರು ಎಣ್ಣೆಯನ್ನು ತರಬೇಕು."
  1. ನೀವು UDBಯಲ್ಲಿರುವ ಭಿನ್ನರಾಶಿಗಳನ್ನು, ಅಳತೆಗಳನ್ನು ಬಳಸಲು ನಿರ್ಧರಿಸಿದರೆ ಆಗ ನೀವು UDB ಯಲ್ಲಿರುವ ದಶಮಾಂಶಗಳನ್ನು ಭಿನ್ನರಾಶಿಗೆ ಬದಲಾಯಿಸಬಹುದು.
  • ಸುಮಾರು 6.5 ಲೀಟರ್ ಗಳು ಆಲಿವ್ ಎಣ್ಣೆ ಕಲೆಸಿದ ಗೋಧಿಹಿಟ್ಟನ್ನು ನೈವೇದ್ಯಕ್ಕಾಗಿ ತರಬೇಕು ಮತ್ತು ಸುಮಾರು ಮೂರನೇ ಒಂದು ಲೀಟರ್ (1/3) ಲೀಟರ್ ಆಲಿವ್ ಎಣ್ಣೆ ತರಬೇಕು. (ಯಾಜಕ ಕಾಂಡ 14:10 UDB)
    • "ಸುಮಾರು 6.5 ಲೀಟರ್ ಗಳಷ್ಟು ಆಲಿವ್ ಎಣ್ಣೆ ಯಿಂದ ಕಲಿಸಿದ ಗೋಧಿಹಿಟ್ಟನ್ನು ಮತ್ತು ಸುಮಾರು ಮೂರನೇ ಒಂದು ಲೀಟರ್ 1/3 ಲೀಟರ್ ಆಲಿವ್ ಎಣ್ಣೆಯನ್ನು ನೈವೇದ್ಯವಾಗಿ ತರಬೇಕು.

ಸಾಂಕೇತಿಕ ಕ್ರಿಯೆ

Translation Manual :: Just-in-Time Learning Modules :: Unknowns :: Symbolic Action

####ವಿವರಣೆಗಳು

ಸಾಂಕೇತಿಕ ಅಭಿನಯವು ಕೆಲವರು ತಾವು ಮಾಡುತ್ತಿರುವ ಕೆಲಸವನ್ನು ಕ್ರಮವಾಗಿ ಮಾಡಲು, ಅಭಿವ್ಯಕ್ತಿಸಲು ಬಳಸುವ ಉದ್ದೇಶ. ಕೆಲವು ಸಂಸ್ಕೃತಿಯಲ್ಲಿ ಜನರು ತಮ್ಮ ತಲೆಯನ್ನು ಮೇಲಿನಿಂದ ಕೆಳಗೆ ತಲೆಹಾಕಿದರೆ / ತೂಗಿದರೆ “ಹೌದು” ಎಂದು ಅರ್ಥ ಹಾಗೆಯೇ ತಲೆಯನ್ನು ಎಡಬಲಕ್ಕೆ ತೂಗಿದರೆ “ಇಲ್ಲ” ಎಂದು ಅರ್ಥ. ಇಂತಹ ಸಾಂಕೇತಿಕ ಅಭಿನಯಗಳು /ಕ್ರಿಯೆಗಳು ಎಲ್ಲಾ ಸಂಸ್ಕೃತಿಯಲ್ಲಿ ಒಂದೇ ರೀತಿಯಾಗಿ ಇರುವುದಿಲ್ಲ. ಕೆಲವೊಮ್ಮೆ ಸತ್ಯವೇದದಲ್ಲಿ ಜನರು ಸಾಂಕೇತಿಕ ಅಭಿನಯವನ್ನು ಮಾಡುತ್ತಾರೆ ಮತ್ತು ಕೆಲವೊಮ್ಮೆ ಅವರು ಸಾಂಕೇತಿಕ ಅಭಿನಯವನ್ನು ಉದ್ದೇಶಿಸಿ ಹೇಳಬಹುದು.

ಸಾಂಕೇತಿಕ ಕ್ರಿಯೆಯ ಬಗ್ಗೆ ಉದಾಹರಣೆಗಳು

ಕೆಲವು ಸಂಸ್ಕೃತಿಯಲ್ಲಿ ಜನರು ತಾವು ಇನ್ನೊಬ್ಬರ ಸ್ನೇಹವನ್ನು ಪಡೆಯಲು ಬಯಸುವುದನ್ನು ತಿಳಿಸಲು ಕೈಕುಲುಕುತ್ತಾರೆ. ಕೆಲವು ಸಂಸ್ಕೃತಿಯಲ್ಲಿ ಜನರು ಕೆಲವರನ್ನು ಕಂಡು ವಂದಿಸುವಾಗ ತಲೆಬಾಗಿ ವಂದಿಸಿ ಗೌರವ ಸೂಚಿಸುತ್ತಾರೆ.

ಕಾರಣ ಇದೊಂದು ಭಾಷಾಂತರ ವಿಷಯ.

ಒಂದು ಅಭಿನಯಕ್ಕೆ/ ನಟನೆಗೆ ಒಂದು ಸಂಸ್ಕೃತಿಯಲ್ಲಿ ಒಂದು ಅರ್ಥವಿದ್ದರೆ ಇನ್ನೊಂದು ಸಂಸ್ಕೃತಿಯಲ್ಲಿ ಬೇರೆ ಅರ್ಥ ಇರಬಹುದು ಇಲ್ಲವೆ ಅರ್ಥವಿಲ್ಲದೆ ಇರಬಹುದು. ಉದಾಹರಣೆಗೆ ಕೆಲವು ಸಂಸ್ಕೃತಿಯಲ್ಲಿ ಹುಬ್ಬುಗಳನ್ನು ಹಾರಿಸಿದರೆ " ನಾನು ಆಶ್ಚರ್ಯಚಕಿತನಾಗಿದ್ದೇನೆ " ಎಂದು ಅಥವಾ " ನೀವು ಏನು ಹೇಳುತ್ತಿದ್ದೀರಿ " ? ಎಂದು ಅರ್ಥ. ಬೇರೆ ಸಂಸ್ಕೃತಿಯಲ್ಲಿ ಇದರ ಅರ್ಥ " ಹೌದು " ಎಂದು. ಸತ್ಯವೇದದಲ್ಲಿ ಬರುವ ಜನರು ಮಾಡಿರುವ ಕೆಲಸಗಳು ಸಂಸ್ಕೃತಿಯಲ್ಲಿ ನಿರ್ದಿಷ್ಟ ಅರ್ಥಗಳಿರುವುದನ್ನು ಗುರುತಿಸಬೇಕು. ನಾವು ಸತ್ಯವೇದವನ್ನು ಓದುವಾಗ ಅಲ್ಲಿ ಬರುವ ಕೆಲವು ಸಾಂಕೇತಿಕ ವಿಷಯಗಳನ್ನು ಮತ್ತು ಅಭಿನಯಗಳ ಬಗ್ಗೆ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಪ್ರತಿಕ್ರಿಯಿಸುತ್ತೇವೆ. ಆದರೆ ಭಾಷಾಂತರಗಾರರು ಸತ್ಯವೇದದಲ್ಲಿ ಬರುವ ವ್ಯಕ್ತಿಗಳು ಯಾವ ಉದ್ದೇಶದಿಂದ, ಅರ್ಥದಿಂದ ಈ ಸಾಂಕೇತಿಕ ಕ್ರೀಯೆ ಮಾಡಿದರು ಎಂಬುದನ್ನುಅರ್ಥಮಾಡಿ ಕೊಳ್ಳಬೇಕು. ಅವರು ಬಳಸುವ ಚಟುವಟಿಕೆ ಅವರ ಸಂಸ್ಕೃತಿಯಲ್ಲಿ ಅವರು ಉದ್ದೇಶಿಸಿದ ಅರ್ಥವನ್ನು ನೀಡಲು ಅಸಮರ್ಥವಾದರೆ ಆ ಕ್ರಿಯೆಯು ಸರಿಯಾದ ಅರ್ಥಕೊಡುವ ಪದಗಳನ್ನು ಬಳಸಿ ಭಾಷಾಂತರಿಸಬೇಕು.

ಸತ್ಯವೇದದಿಂದ ಉದಾಹರಣೆಗಳು

ಯಾಯೀರನೆಂಬುವವನು ಬಂದು ಯೇಸುವಿನ ಪಾದಗಳ ಮೇಲೆ ಬಿದ್ದನು. (ಲೂಕ 8:41 ULB)

ಸಾಂಕೇತಿಕ ಕ್ರಿಯೆ ಇದರ ಅರ್ಥ: ಅವನು ಹೀಗೆ ಮಾಡಿದ್ದು ಅವನಿಗೆ ಯೇಸುವಿನ ಬಗ್ಗೆ ಗೌರವವನ್ನು ತೋರಿಸಲು.

ಇಗೋ, ಬಾಗಿಲಿನಲ್ಲಿ ನಿಂತುಕೊಂಡು ತಟ್ಟುತ್ತಾ. ಇದ್ದೇನೆ. ಯಾರಾದರೂ ನನ್ನ ಶಬ್ದವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟಮಾಡುವೆನು., ಅವನು ನನ್ನ ಸಂಗಡ ಊಟಮಾಡುವನು. (ಪ್ರಕಟಣೆ3:20 ULB)

ಸಾಂಕೇತಿಕ ಕ್ರಿಯೆ ಅರ್ಥ ಯಾರನ್ನಾದರೂ ನಮ್ಮ ಮನೆಯೊಳಗೆ ಬರುವಂತೆ ಆಹ್ವಾನಿಸುವುದಾದರೆ ಅವರು ಬಾಗಿಲಲ್ಲೇ ನಿಂತು ಮನೆಗೆ ಬರುವವರು ಬಾಗಿಲು ತಟ್ಟುತ್ತಿದ್ದಂತೆ ತೆರೆಯಬೇಕು.

ಭಾಷಾಂತರ ಕೌಶಲ್ಯಗಳು

ಓದುಗರು ಸತ್ಯವೇದದಲ್ಲಿನ ಜನರು ಯಾವ ಉದ್ಧೇಶದಿಂದ ಈ ಸಾಂಕೇತಿಕ ಕ್ರಿಯೆ ಮಾಡಿದರೊ ಮತ್ತು ಅದನ್ನು ಅರ್ಥಮಾಡಿಕೊಂಡರೋಅದು ಸರಿಯಾಗಿದ್ದರೆ ಅದನ್ನೇ ಬಳಸಿಕೊಳ್ಳಿ. ಹಾಗೆ ಸಾಧ್ಯವಾಗದಿದ್ದರೆ ಇಲ್ಲಿ ಕೊಟ್ಟಿರುವ ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿಕೊಳ್ಳಿ.

  1. ಇಲ್ಲಿ ಸಂಬಂಧಿಸಿದ ವ್ಯಕ್ತಿ ಏನು ಮಾಡಿದ ಮತ್ತು ಏಕೆ ಮಾಡಿದ ಎಂಬುದರ ಬಗ್ಗೆ ತಿಳಿಹೇಳಿ.
  2. ಆ ವ್ಯಕ್ತಿ ಏನು ಮಾಡಿದ ಎಂದು ಹೇಳಬೇಡಿ. ಆದರೆ ಅವನು ಯಾವ ಅರ್ಥದಲ್ಲಿ ಅದನ್ನು ಮಾಡಿದ ಎಂಬುದನ್ನು ತಿಳಿಸಿ.
  3. ನಿಮ್ಮ ಸಂಸ್ಕೃತಿಗೆ ಅನುಗುಣವಾಗಿ ಅದೇ ಅರ್ಥನೀಡುವ ಕ್ರಿಯೆ ಪದವಿದ್ದರೆ ಬಳಸಿಕೊಳ್ಳಿ.

ಇಂತಹ ಪ್ರಯೋಗಗಳನ್ನು ಪದ್ಯಭಾಗದಲ್ಲಿ, ಸಾಮ್ಯಗಳಲ್ಲಿ ಮತ್ತು ದೈವಸಂದೇಶಗಳಲ್ಲಿ ಬಳಸಬಹುದು. ಕೆಲವೊಮ್ಮೆ ಇಂತಹ ಸನ್ನಿವೇಶಗಳಲ್ಲಿ ಬರುವ ವ್ಯಕ್ತಿಗಳ ಕ್ರಿಯೆ ನಿರ್ದಿಷ್ಟವಾಗಿ, ನಿಜವಾಗಲು ನೇರವಾಗಿ ನಡೆಯುತ್ತಿದ್ದರೆ ಈ ತಂತ್ರ ಪ್ರಯೋಗಿಸಬೇಡಿ.

###ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು

  1. ಆ ವ್ಯಕ್ತಿ ಏನು ಮಾಡಿದ ಮತ್ತು ಏಕೆ ಹೀಗೆ ಮಾಡಿದ ಎಂಬುದನ್ನು ತಿಳಿಸಿ.
  • ಯಾಯೀರ ಯೇಸುವಿನ ಪಾದಗಳ ಮೇಲೆ ಬಿದ್ದನು (ಲೂಕ 8:41 ULB)

    • ಯಾಯೀರನು ಯೇಸುವಿನ ಪಾದಗಳ ಮೇಲೆ ಬಿದ್ದು ತನಗೆ ಯೇಸುವಿನ ಬಗ್ಗೆ ಇರುವ ಗೌರವವನ್ನು ತೋರಿಸಿದ.
  • ಇಗೋ, ನಾನು ಬಾಗಿಲ ಬಳಿ ನಿಂತು ತಟ್ಟುತ್ತಿದ್ದೇನೆ (ಪ್ರಕಟಣೆ 3:20 ULB)

    • ಇಗೋ ನೋಡಿ, ನಾನು ಬಾಗಿಲ ಬಳಿ ನಿಂತುಕೊಂಡಿದ್ದೇನೆ ಮತ್ತು ಬಾಗಿಲು ತಟ್ಟುತ್ತಿದ್ದೇನೆ ನನ್ನನ್ನು ಒಳಗೆ ಕರೆಯಿರಿ ಎಂದು ಕೇಳುತ್ತಿದ್ದೇನೆ.
  1. ಆ ವ್ಯಕ್ತಿ ಏನು ಮಾಡಿದ ಎಂದು ಹೇಳಬೇಡಿ. ಆದರೆ ಅವನು ಯಾವ ಅರ್ಥದಲ್ಲಿ ಅದನ್ನು ಮಾಡಿದ ಎಂಬುದನ್ನು ತಿಳಿಸಿ.
  • ಯಾಯೀರನು ಯೇಸುವಿನ ಪಾದಗಳ ಮೇಲೆ ಬಿದ್ದನು (ಲೂಕ 8:41 ULB)

    • ಯಾಯೀರನು ಯೇಸುವಿನ ಬಗ್ಗೆ ಇದ್ದ ಗೌರವವನ್ನು ತೋರಿಸಿದನು.
  • ಇಗೋ ನಾನು ಬಾಗಿಲ ಬಳಿ ನಿಂತು ತಟ್ಟುತ್ತಿದ್ದೇನೆ (ಪ್ರಕಟಣೆ 3:20 ULB)

    • ನೋಡಿ ನಾನು ಬಾಗಿಲ ಬಳಿ ನಿಂತು ನನ್ನನ್ನು ಒಳಗೆ ಕರೆಯಿರಿ ಎಂದು ಕೇಳುತ್ತಿದ್ದೇನೆ.
  1. ನಿಮ್ಮ ಭಾಷೆಯಲ್ಲಿ ಸಂಸ್ಕೃತಿಯಲ್ಲಿ ಇದೇ ಅರ್ಥವನ್ನು ಕೊಡುವ ಕ್ರಿಯೆಯ / ಅಭಿನಯದ ಪದವನ್ನು ಬಳಸಿ.
  • ಯಾಯೀರನು ಯೇಸುವಿನ ಪಾದಗಳ ಮೇಲೆ ಬಿದ್ದನು (ಲೂಕ 8:41 ULB) ಯಾಯೀರನು ಹೀಗೆ ಮಾಡಿದ್ದರಿಂದ ನಮ್ಮ ಸಂಸ್ಕೃತಿಯಲ್ಲಿ ಪೂರಕ ಪದವನ್ನು ಬಳಸುವ ಅಗತ್ಯವಿಲ್ಲ.

  • ಇಗೋ, ನಾನು ಬಾಗಿಲ ಬಳಿಯಲ್ಲಿ ನಿಂತು ತಟ್ಟುತ್ತಿದ್ದೇನೆ (ಪ್ರಕಟಣೆ 3:20 ULB) ಇಲ್ಲಿ ಯೇಸು ನಿಜವಾಗಲೂ ಬಾಗಿಲ ಬಳಿಯಲ್ಲಿ ನಿಂತುಕೊಂಡಿಲ್ಲ. ಆತನು ತನ್ನ ಜನರೊಂದಿಗೆ ಸಂಬಂಧವನ್ನು ಬೆಳೆಸಲು ಅವರೊಂದಿಗೆ ಮಾತನಾಡುತ್ತಿದ್ದಾನೆ. ಅನೇಕ ಸಂಸ್ಕೃತಿಯಲ್ಲಿ ಜನರು ವಿನಯದಿಂದ ಯಾರನ್ನಾದರೂ ಮನೆಯೊಳಗೆ ಸೇರಿಸಿಕೊಳ್ಳಲು ಗಂಟಲು ಸರಿಪಡಿಸಿಕೊಳ್ಳಲು ಬಳಸಿಕೊಳ್ಳಬಹುದು.

    • ಇಗೋ ನಾನು ಬಾಗಿಲ ಬಳಿ ನಿಂತು ನನ್ನ ಗಂಟಲು ಸರಿಮಾಡಿಕೊಳ್ಳುತ್ತೇನೆ.

Biblical Imagery

Translation Manual :: Just-in-Time Learning Modules :: Biblical Imagery

ಸತ್ಯವೇದದಲ್ಲಿನ ಚಿತ್ರಣಗಳು.

Translation Manual :: Just-in-Time Learning Modules :: Biblical Imagery

ವಿವರಣೆ

ಚಿತ್ರಣ ಎಂಬುದು ಭಾಷೆಯಲ್ಲಿ ಒಂದು ಚಿತ್ರಣದ ಉದಾಹರಣೆಯನ್ನು ಇನ್ನೊಂದು ಚಿತ್ರಣದೊಂದಿಗೆ ಹೋಲಿಸಿ, ಜೊತೆ ಸೇರಿಸಿ ಅದರ ಕಲ್ಪನೆಯನ್ನು ಪ್ರತಿನಿಧಿಸುತ್ತದೆ. ಇವು ಉಪಮೆಗಳನ್ನು, ರೂಪಕಗಳನ್ನು, ಮಿಟೋನಿಮಿ (ಹೇಳ ಬೇಕಾದ ವಸ್ತುವಿಗೆ ಬದಲಾಗಿ ಅದರ ಲಕ್ಷಣವನ್ನು ತಿಳಿಸುವ ಅಲಂಕಾರ ಪದ) ಮಾದರಿಗಳನ್ನು ಒಳಗೊಂಡಿರುತ್ತದೆ.

ಈ ಎಲ್ಲಾ ಸಂಗತಿಗಳು, ಕಾವ್ಯಪ್ರತಿಮೆಗಳು ಮತ್ತು ಉದ್ದೇಶಗಳನ್ನು ಜೊತೆ ಸೇರಿಸಿ ಹೇಳುವಾಗ ವಿಶಾಲವಾದ ಮಾದರಿಯಲ್ಲಿ ಬಳಸಿರುವ ಬಗ್ಗೆ ತಿಳಿದು ಬರುತ್ತದೆ. ಆದರೆ ಕೆಲವೊಮ್ಮೆ ಕೆಲವು ವಿಚಾರಗಳು ಇದಕ್ಕಿಂತ ಭಿನ್ನವಾಗಿರಬಹುದು. ಸತ್ಯವೇದದಲ್ಲಿನ ಪುಟಗಳು ಸತ್ಯವೇದದಲ್ಲಿ ಬಳಸಿರುವ ಕಾವ್ಯಪ್ರತಿಮೆಗಳ ಮಾದರಿಯ ಬಗ್ಗೆ ತಿಳಿಸುತ್ತದೆ. ಸತ್ಯವೇದದಲ್ಲಿ ಕಂಡುಬರುವ ಜೋಡಿ ಮಾದರಿಗಳು ಆಗಿಂದಾಗ್ಗೆ ಇಬ್ರಿಯಾ (ಹಿಬ್ರೂ) ಮತ್ತು ಗ್ರೀಕ್ ಭಾಷೆಗಳಲ್ಲಿ ಕಂಡುಬರುವಂತದ್ದಾಗಿರುತ್ತದೆ.

ಈ ಮಾದರಿಗಳನ್ನು ಕಂಡುಹಿಡಿಯುವುದು ಸುಲಭವಾದ ವಿಷಯ ಏಕೆಂದರೆ ಅನುವಾದ ಮಾಡುವವರಿಗೆ ಎದುರಾಗುವ ಅನುವಾದದ ಸಮಸ್ಯೆಗಳನ್ನು ಪುನಃಪುನಃ ಪುನರುಕ್ತಿಯಾಗುವಂತರ ಮಾಡುತ್ತದೆ. ಅನುವಾದಕರಿಗೆ ಒಮ್ಮೆ ಅನುವಾದದ ಭಾಷಾಂತರದ ಸಮಸ್ಯೆ ಮತ್ತು ಸವಾಲುಗಳನ್ನು ಹೇಗೆ ನಿಭಾಯಿಸಬೇಕು ಎಂದು ಅರಿತುಕೊಂಡರೆ ಅವರು ಯಾವುದೇ ಸಂದರ್ಭದಲ್ಲಿ, ಸನ್ನಿವೇಶದಲ್ಲಿ ಎದುರಾಗುವ ಅನುವಾದದ ಸಮಸ್ಯೆಗಳನ್ನು ಸುಲಲಿತವಾಗಿ ನಿಭಾಯಿಸಲು ಸಮರ್ಥರಾಗುತ್ತಾರೆ, ಸಿದ್ಧರಾಗಿರುತ್ತಾರೆ.

ರೂಪಕ ಮತ್ತು ಉಪಮಾ ಅಲಂಕಾರದಲ್ಲಿನ ಸಮಾನ್ಯ ಮಾದರಿಗಳು.

ರೂಪಕ ಅಲಂಕಾರದಲ್ಲಿ ಯಾವುದಾದರೂ ಒಂದು ವಸ್ತುವಿನ ಬಗ್ಗೆ ಮಾತನಾಡುವಾಗ ಒಂದು ವಸ್ತುವಿಗೂ ಮತ್ತು ಇನ್ನೊಂದು ವಸ್ತುವಿಗೂ ಯಾವ ವ್ಯತ್ಯಾಸವೂ ಇಲ್ಲ ಎಂಬುದು ತಿಳಿದು ಬರುತ್ತದೆ. ಈ ಬಗ್ಗೆ ಮಾತನಾಡುವಾಗ ವ್ಯಕ್ತಿ ತಾನು ಹೇಳಬೇಕೆಂದಿರುವ ವಿಷಯ / ವಸ್ತು / ವ್ಯಕ್ತಿಯ ಬಗ್ಗೆ ಪರಿಣಾಮಕಾರಿಯಾದ ಪ್ರಭಾವ ಬೀರುವಂತೆ ಹೇಳುತ್ತಾನೆ.

ಉದಾಹರಣೆಗೆ “ನನ್ನ ಪ್ರೀತಿ ಕೆಂಪು ಕೆಂಪು ಗುಲಾಬಿ” ಎಂದು ಹೇಳುವಾಗ ನನ್ನ ಪ್ರೇಯಸಿ ಗುಲಾಬಿಯಂತೆ ಸುಂದರ ಹಾಗೂ ಕೋಮಲವಾದವಳು ಎಂದು ತಿಳಿಸುವ ಉದ್ದೇಶವಿದೆ, “ಅವಳು ಸೌಂದರ್ಯದಲ್ಲಿ ಕೆಂಗುಲಾಬಿ” ಎಂದು ತಿಳಿಸುತ್ತಿದ್ದಾನೆ.

ಉಪಮೆ.ಉಪಮಾ ಅಲಂಕಾರದಲ್ಲಿ ರೂಪಕ ಅಲಂಕಾರದಂತೆ ವರ್ಣಿಸಿ ಹೇಳಿದರೂ ಇಲ್ಲಿ ಎರಡು ವಸ್ತು ಅಥವಾ ವ್ಯಕ್ತಿಗಳಲ್ಲಿ ಬಳಸುತ್ತಾರೆ. ಇದರಿಂದ ಇಲ್ಲಿ ಕಾವ್ಯಾಲಂಕಾರದ ಪದಗಳು ಬಳಕೆಯಾಗಿರುವುದನ್ನು ಕಾಣಬಹುದು. ಉಪಮಾ ಅಲಂಕಾರದಲ್ಲಿ ನನ್ನ ಪ್ರೇಯಸಿಯು ಕೆಂಪು ಕೆಂಪು ಗುಲಾಬಿಯಂತೆ ಇದ್ದಾಳೆ. ಎಂದು ಹೇಳುವಲ್ಲಿ ಕಾವ್ಯಪ್ರತಿಮೆಯು (ಕೆಂಗುಲಾಬಿ) ಬಳಕೆಯಾಗಿರುವುದನ್ನು ಕಾಣುತ್ತೇವೆ.

ಸತ್ಯವೇದದಲ್ಲಿನ ಚಿತ್ರಣಗಳು – ಸಾಮಾನ್ಯ ಮಾದರಿಗಳು ಉದ್ದೇಶಗಳು, ರೂಪಕಗಳು ಉಪಮೆಗಳ ನಡುವಿನ ಜೋಡಿ ಮಾದರಿಗಳನ್ನು ಈ ಪುಟಗಳಲ್ಲಿ ಕಾಣಬಹುದು.”"

ಸಾಮಾನ್ಯವಾಗಿ ಕಂಡುಬರುವ ಮಿಟಾನಿಮೀಸ್ (ಲಾಕ್ಷಣಿಕ ಪ್ರಯೋಗಗಳು).

ಮಿಟಾನಿಮೀಸ್ ನಲ್ಲಿ ಒಂದು ವಸ್ತು ಅಥವಾ ಒಂದು ವಿಷಯವನ್ನು ಅದರ ಹೆಸರಿನಲ್ಲಿ ಕರೆಯದೆ ಅಥವಾ ಗುರುತಿಸದೆ ಅದಕ್ಕೆ ಸಂಬಂಧಿಸಿದ, ಸಂವಾದಿಯಾದ, ಸಮಾನಾಂತರದ ಪದವನ್ನು ಬಳಸಲಾಗುತ್ತದೆ.

ಸತ್ಯವೇದದಲ್ಲಿನ ಚಿತ್ರಣಗಳು – ಸಾಮಾನ್ಯ ಮಿಟೋನಿಮೀಸ್ ಸತ್ಯವೇದದಲ್ಲಿನ ಸಾಮಾನ್ಯ ಮಿಟೋನಿಮೀಸ್ ಗಳ.ಪಟ್ಟಿ”"

ಸಾಂಸ್ಕೃತಿಕ ಮಾದರಿಗಳು

ಸಾಂಸ್ಕೃತಿಕ ಮಾದರಿಗಳು ಮಾನಸಿಕ ಚಿತ್ರಣಗಳು ಜೀವನದ ಒಂದು ಅಂಗ ಅಥವಾ ಮಾನವನ ನಡವಳಿಕಎ, ಮನೋಭಾವವನ್ನು ಆದರಿಸಿರುತ್ತದೆ. ಈ ಚಿತ್ರಗಳು ನಮಗೆ ಈ ಬಗ್ಗೆ ಮಾತನಾಡಲು, ಕಲ್ಪಿಸಿಕೊಳ್ಳಲು, ಅಭಿವ್ಯಕ್ತಿಸಲು ಸಹಾಯಮಾಡುತ್ತವೆ. ಉದಾಹರಣೆಗೆ ಅಮೇರಿಕಾದವರು ಕೆಲವೊಮ್ಮೆ ಕೆಲವು ವಿಷಯಗಳ ಬಗ್ಗೆ ಅದರದೇ ಆದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ ವಿವಾಹ ಮತ್ತು ಸ್ನೇಹದ ಬಗ್ಗೆಯೂ ಅವರು ಯಾಂತ್ರಿಕವಾಗಿ ಯೋಚಿಸುತ್ತಾರೆ.

ಅಮೇರಿಕಾದವರು “ಆತನ ಮದುವೆ ಮುರಿದು ಬೀಳುತ್ತಿದೆ” ಅಥವಾ “ಅವರ ಸ್ನೇಹ ಸಂಪೂರ್ಣವೇಗದಿಂದ ಮುಂದುವರೆಯುತ್ತಿದೆ” ಎಂದು ವಾಕ್ಯ ಪ್ರಯೋಗ ಮಾಡುತ್ತಾರೆ. ಸತ್ಯವೇದದಲ್ಲಿ ದೇವರನ್ನು ಕುರಿತು ಹೇಳುವಾಗ ಆತ ಒಳ್ಳೇ ಕುರುಬ, ಆತನ ಜನರು ಕುರಿಗಳು ಎಂದು ವಾಕ್ಯಗಳನ್ನು ಬಳಸಲಾಗಿದೆ. ಇದೊಂದು ಸಾಂಸ್ಕೃತಿಕ ಮಾದರಿ

ಯೆಹೋವನು ನನ್ನ ಕುರುಬ, ನನಗೆ ಕೊರತೆಇಲ್ಲ /ನಾನು ಕೊರತೆ ಅನುಭವಿಸುವುದಿಲ್ಲ. (ದಾವೀದನ ಕೀರ್ತನೆಗಳು 23:1 ULB)

ಆತನು ತನ್ನ ಜನರನ್ನು ಕುರಿಗಳಂತೆ ರಕ್ಷಿಸಿ, ಮಾರ್ಗದರ್ಶಿಸಿ ಅಡವಿಯಿಂದ ಹೊರತಂದು ಮಂದೆಯಾಗಿ ಪೋಷಿಸಿ ನಡೆಸಿದನು. (ದಾವೀದನ ಕೀರ್ತನೆಗಳು 78:52 ULB)

ಸತ್ಯವೇದದಲ್ಲಿ ಬರುವ ಕೆಲವು ಮಾದರಿಗಳನ್ನು ಆದಿಯಲ್ಲಿದ್ದ ಪುರಾತನ ಪೂರ್ವ ದಿಕ್ಕಿನ ದೇಶಗಳವರು ಉಪಯೋಗಿಸಿ ಕೊಳ್ಳುತ್ತಿದ್ದರು. ಇಸ್ಮಾಯೇಲರು ಸಹ ಈ ಸಂಸ್ಕೃತಿಕ ಮಾದರಿಗಳನ್ನು ಅನುಸರಿಸುತ್ತಿದ್ದರು.

“ನೋಡಿ ಸತ್ಯವೇದದಲ್ಲಿನ ಚಿತ್ರಣ– ಸಾಂಸ್ಕೃತಿಕ ಮಾದರಿಗಳು ಸತ್ಯವೇದದಲ್ಲಿನ ಸಾಂಸ್ಕೃತಿಕ ಮಾದರಿಗಳ ಪಟ್ಟಿಗಳು.”"


ಸತ್ಯವೇದದ ಚಿತ್ರಣಗಳು ಸಾಮಾನ್ಯ ಮಿಟೋನಿಮಿಗಳು.

Translation Manual :: Just-in-Time Learning Modules :: Biblical Imagery :: Biblical Imagery - Common Metonymies

ಸತ್ಯವೇದದಲ್ಲಿನ ಕೆಲವು ಮೆಟೋನಿಮಿಸ್ ಗಳನ್ನು ಅಕ್ಷರಾನುಕ್ರಮವಾಗಿ ಈ ಕೆಳಕಂಡಂತೆ ಪಟ್ಟಿಮಾಡಲಾಗಿದೆ. ದೊಡ್ಡ ಅಕ್ಷರಗಳಲ್ಲಿರುವುದು ಒಂದು ಉದ್ದೇಶವನ್ನು ಪ್ರತಿನಿಧಿಸುತ್ತದೆ. ಈ ಪದ ಪ್ರತಿವಾಕ್ಯದಲ್ಲೂ ಬರಬೇಕೆಂಬ ಅವಶ್ಯಕತೆ ಇಲ್ಲ, ಈ ಚಿತ್ರಣಗಳ ಉದ್ದೇಶ ಪದಗಳಲ್ಲಿ ಬಂದು ಆ ಅರ್ಥವನ್ನು ಪ್ರತಿಬಿಂಬಿಸುತ್ತದೆ.

ಒಂದು ಬಟ್ಟಲು ಅಥವಾ ಬೋಗುಣಿ ಅದರಲ್ಲಿ ಇರುವುದನ್ನು ಪ್ರತಿನಿಧಿಸುತ್ತದೆ.

ನನ್ನ ಬಟ್ಟಲುತುಂಬಿಹರಿಯುತ್ತದೆ. (ದಾ.ಕೀ 23:5 ULB)

ಈ ಬಟ್ಟಲಿನಲ್ಲಿರುವುದು ಹೊರಗೆ ಹರಿದು ಚೆಲ್ಲುವಷ್ಟು ತುಂಬಿದೆ.

ಪ್ರತಿಸಲ ನೀವು ಈ ರೊಟ್ಟಿಯನ್ನು ತಿಂದು, ಈ ಪಾತ್ರೆಯಲ್ಲಿ ದ್ರಾಕ್ಷಾರಸ ಪಾನಮಾಡುವಾಗೆಲ್ಲಾ ,ಕರ್ತನ ಮರಣವನ್ನು, ಆತನು ಬರುವ ತನಕ ಪ್ರಸಿದ್ಧಿ ಪಡಿಸುತ್ತೀರಿ. (1 ನೇ ಕೊರಿಂಥ 11:26 ULB)

ದಯವಿಟ್ಟು ಈ ಬಟ್ಟಲಿನಲ್ಲಿ ಪಾನಮಾಡಬೇಡಿ. ಅವರು ಆ ಬಟ್ಟಲಿನಲ್ಲಿ ಇರುವುದನ್ನು ಪಾನಮಾಡುತ್ತಾರೆ.

ಬಾಯಿಮಾತು ಅಥವಾ ಪದಗಳನ್ನು ಪ್ರತಿನಿಧಿಸುತ್ತದೆ.

ಜ್ಞಾನಹೀನನಿಗೆ ಅವನ ಬಾಯಿಂದ ಬರುವ ಮಾತೆ ಅವನನ್ನು ನಾಶಕ್ಕೆ ಗುರಿಮಾಡುತ್ತದೆ. (ಜ್ಞಾನೋಕ್ತಿ 18:7 ULB)

ನಾನು ಬಾಯಮಾತುಗಳಿಂದ ನಿಮ್ಮನ್ನು ಧೈರ್ಯಗೊಳಿಸಿ !ನಿಮ್ಮ ದುಃಖವನ್ನು ಶಮನಗೊಳಿಸುತ್ತೇನೆ. (ಯೋಬಾ 16:5 ULB)

ನೀನು ನನ್ನನ್ನು ದೂಷಿಸಿ ನಿನ್ನ ಬಾಯಿಂದ ಮಾತನಾಡಿದ ಮಾತುಗಳನ್ನು ;ಕೇಳಿದ್ದೇನೆ, ನೀನು ನನ್ನ ವಿರುದ್ಧವಾಗಿ ಆಡಿದ ಮಾತುಗಳನ್ನು ಕೇಳಿದ್ದೇನೆ. ನಾನು ಅವುಗಳನ್ನು ಕೇಳಿದ್ದೇನೆ. (ಯೆಹೆಜ್ಕೇಲ 35:13 ULB)

ಇಲ್ಲಿ ಬರುವ ಉದಾಹರಣೆ ವಾಕ್ಯಗಳಲ್ಲಿ ಬಾಯಿ ಎಂಬ ಪದ ಒಬ್ಬ ಮನುಷ್ಯನ ಮಾತನ್ನು ಪ್ರತಿನಿಧಿಸುತ್ತದೆ.

ಒಬ್ಬ ಮನುಷ್ಯನ ನೆನಪು ಎಂಬುದು ಅವನ ಸಂತತಿಯನ್ನು ಪ್ರತಿನಿಧಿಸುತ್ತದೆ.

ಒಬ್ಬ ವ್ಯಕ್ತಿಯ ನೆನಪು ಆತನ ಸಂತತಿಯನ್ನು ನೆನಪಿಸಿಕೊಳ್ಳುತ್ತದೆ, ಏಕೆಂದರೆ ಆ ಸಂತತಿಯವರೇ ಆತನನ್ನು ಸ್ಮರಿಸಿ ಗೌರವಿಸಬೇಕಿದೆ. ಸತ್ಯವೇದದಲ್ಲಿ ವ್ಯಕ್ತಿಯೋರ್ವನ ನೆನಪಿನ ಶಕ್ತಿ ಸತ್ತು ಹೋದರೆ (ಇಲ್ಲವಾದರೆ) ಆ ವ್ಯಕ್ತಿಗೆ ಯಾವ ಸಂತತಿಯೂ ಇಲ್ಲ.ಅಥವಾ ಆತನ ಸಂತತಿ ಇಲ್ಲವಾಗಿದೆ ಎಂದು ಅರ್ಥ.

ನೀನು ಜನಾಂಗಗಳನ್ನು ಎದುರಿಸಿ, ಯುದ್ಧದ ಮೂಲಕ ನಾಶಮಾಡಿರುವೆ. ದುಷ್ಟರನ್ನು ನಾಶಮಾಡಿದ್ದೀ. ಅವರ ಹೆಸರಿನ ನೆನಪನ್ನು ಯುಗಯುಗಾಂತರಕ್ಕೂ ಅಳಿಸಿಬಿಟ್ಟಿದ್ದೀ. ಶತೃಗಳು ನಿಶ್ಶೇಷವಾದರೂ. ನೀನು ಅವರ ಊರು, ಕೋಟೆಗಳನ್ನು ಕೆಡವಿ ನಾಶಮಾಡಿದಿ. ಅವರ ಸ್ಮರಣೆಯೇ ಇಲ್ಲದಂತೆ ನಾಶಮಾಡಿರುವೆ. (ದಾ.ಕೀ. 9:5-6 ULB)

ಆತನ ಸ್ಮರಣೆಯು ಭೂಮಿಯ ಮೇಲಿನಿಂದ ಅಳಿದು ಹೋಗುವುದು (ಯೋಬ 18:17 ULB)

ದುಷ್ಟಕಾರ್ಯಮಾಡುವ ಕೆಡುಕರಿಗೆ ಕೋಪದಿಂದ ಶಿಕ್ಷಿಸುವನು. ಲೋಕದಲ್ಲಿ ಅವರ ನೆನಪೇ ಉಳಿಯದಂತೆ ನಿರ್ಮೂಲ ಮಾಡುವನು (ದಾ.ಕೀ 4:16 ULB)

ಒಬ್ಬ ವ್ಯಕ್ತಿ ಒಂದು ಗುಂಪನ್ನು ಪ್ರತಿನಿಧಿಸುತ್ತಾನೆ.

ದುಷ್ಟನು ತನ್ನ ಮನೋರಥವು ನೆರವೇರಿತೆಂದು ಕೊಚ್ಚಿಕೊಳ್ಳುತ್ತಾನೆ. ಅವನು ಯೆಹೋವನನ್ನು ಅಲ್ಲಗೆಳೆದು ದುಷ್ಟನನ್ನೂ ಅತಿಯಾಸೆ ಉಳ್ಳವರನ್ನು ಮೆಚ್ಚುತ್ತಾನೆ, ಆಶೀರ್ವದಿಸುತ್ತಾನೆ. (ದಾ.ಕೀ. 10:3 ULB)

ಈ ವಾಕ್ಯಗಳು ನಿರ್ದಿಷ್ಟವಾಗಿ ಒಬ್ಬ ದುಷ್ಟವ್ಯಕ್ತಿಯನ್ನು ಕುರಿತು ಹೇಳಿರುವುದಲ್ಲ ಆದರೆ ಅವನಂತಹ ದುಷ್ಟಜನರನ್ನು ಕುರಿತು ಹೇಳಿರುವಂತದ್ದು.

ಒಬ್ಬ ವ್ಯಕ್ತಿಯ ಹೆಸರು ಆತನ ಸಂತತಿಯವರಿಗೂ ಬರುತ್ತದೆ.

ಗಾದನು – ಸುಲಿಗೆ ಮಾಡುವವರು ದಂಡೆತ್ತಿ ಅವನ ಮೇಲೆ ಬೀಳಲು ಇವನು ಅವರನ್ನು ಹಿಮ್ಮೆಟ್ಟಿಕೊಂಡು ಹೋದನು. ಅಶೇರನಿಗೆ ಧಾನ್ಯ ಸಮೃದ್ಧಿಯಾಗುವುದು, ಅವನಲ್ಲಿ ರಾಜಭೋಗ್ಯವಾದ ಪದಾರ್ಥಗಳು ದೊರಕುವವು. ನಫ್ತಾಲಿ ಬಿಡುಗಡೆಯಾದ ಜಿಂಕೆಯಂತಿದ್ದಾನೆ ಅವನಿಂದ ಇಂಪಾದ ಮಾತುಗಳು ಬರುತ್ತವೆ. (ಆದಿಕಾಂಡ 49:19-21 ULB)

ಗಾದ, ಅಶೇರ, ನಫ್ತಾಲಿಯವರ ಹೆಸರುಗಳು ಅವರಿಗೆ ಮಾತ್ರ ಸೀಮಿತವಾಗಿರದೆ ಅವರ ಸಂತತಿಯವರು ಅದರ ಪ್ರಯೋಜನಗಳನ್ನು ಪಡೆದರು.

ಒಬ್ಬ ವ್ಯಕ್ತಿಯ ಹೆಸರು ಆತನನ್ನು ಆತನಿಗೆ ಸೇರಿದ ಜನರನ್ನು ಪ್ರತಿನಿಧಿಸುತ್ತಾನೆ.

ಅಬ್ರಹಾಮನು ಐಗುಪ್ತದೇಶವನ್ನು ಪ್ರವೇಶಿಸಿದಾಗ ಅಬ್ರಹಾಮನನ್ನು ಅವನ ಸಂಗಡ ಇದ್ದ ಸಾರೆಯಳನ್ನು ನೋಡಿ ಬಹು ಸುಂದರವಾಗಿದ್ದಾಳೆ ಎಂದರು. (ಆದಿಕಾಂಡ 12:14 ULB)

ಅಲ್ಲಿ ಅಬ್ರಹಾಮ ಎಂದರೆ ಅವನೊಂದಿಗೆ ಪ್ರಯಾಣಿಸುತ್ತಿದ್ದ ಎಲ್ಲರೂ ಸಂಬಂಧಪಟ್ಟವರಾದರು. ಇಲ್ಲಿ ಅಬ್ರಹಾಮನ ಮೇಲೆ ಎಲ್ಲವೂ ಕೇಂದ್ರೀಕೃತವಾಗಿದೆ.

ಇರಿಯುವುದು ಎಂದರೆ ಕೊಲ್ಲುವುದು ಎಂದು ಅರ್ಥ.

ಆತನ ಹಸ್ತವು ವೇಗವಾಗಿ ಓಡುವ </u ಸರ್ಪವನ್ನು ಇರಿಯುವುದು. (ಯೋಬ 26:13 ULB)

ಇದರ ಅರ್ಥ ಆತ ಸರ್ಪವನ್ನು ಕೊಂದುಹಾಕಿದ ಎಂದು.

ಇಗೋ ಆತನು ಮೇಘಗಳೊಂದಿಗೆ ಬರುತ್ತಾನೆ. ಎಲ್ಲರ ಕಣ್ಣುಗಳು ಆತನನ್ನು ಕಾಣುವವು ಆತನನ್ನು ಇರಿದವರು ಸಹ ಕಾಣುವರು. (ಪ್ರಕಟಣೆ 1:7 ULB)

“ಆತನನ್ನು ಇರಿದವರು ಯಾರು ? ಎಂಬುದು ಯೇಸುವನ್ನು ಕೊಂದವರನ್ನು ಕುರಿತು ಹೇಳಿರುವುದು”

ಪಾಪಗಳು (ಅಧರ್ಮ) ಪಾಪಕ್ಕೆ ತಕ್ಕ ಶಿಕ್ಷೆಯನ್ನು ಪ್ರತಿನಿಧಿಸುತ್ತದೆ.

ಯೆಹೋವನು ನಮ್ಮೆಲ್ಲರ ದೋಷವನ್ನು ಪಾಪವನ್ನು ತನ್ನ ಮೇಲೆ ಹಾಕಿಕೊಂಡನು (ಯೆಶಾಯ 53:6 ULB)

ಇದರ ಅರ್ಥ ಯಹೋವನು ನಮ್ಮ ಪಾಪಗಳಿಂದ ಉಂಟಾದ ಶಿಕ್ಷೆಯನ್ನು ತಾನು ಅನುಭವಿಸಿದನು.


ಸತ್ಯವೇದದ /ಉದಾಹರಣೆಗಳು – ಸಾಮಾನ್ಯ ಮಾದರಿಗಳು.

Translation Manual :: Just-in-Time Learning Modules :: Biblical Imagery :: Biblical Imagery - Common Patterns

ಈ ಪುಟದಲ್ಲಿ ಸೀಮೀತ ಹಂತದಲ್ಲಿ ಜೊತೆಯಾದ ಉದ್ದೇಶಗಳ ಬಗ್ಗೆ ಚರ್ಚಿಸಲಾಗಿದೆ

(ಸಂಕೀರ್ಣ ಜೋಡಿಯಾದ ಉದ್ದೇಶಗಳ ಬಗ್ಗೆ ಚರ್ಚಿಸಲು ಸತ್ಯವೇದದಲ್ಲಿನ ಪ್ರತಿಮೆಗಳು ಸಾಂಸ್ಕೃತಿಕ ಮಾದರಿಗಳನ್ನು ನೋಡಿ ತಿಳಿಯಬಹುದು)

ವಿವರಣೆ

ಎಲ್ಲಾ ಭಾಷೆಗಳಲ್ಲೂ ಸಾಮಾನ್ಯವಾಗಿ ಎಲ್ಲಾ ರೂಪಕಗಳು ಜೋಡಿ ಉದ್ದೇಶಗಳ ವಿಶಾಲವಾದ ಮಾದರಿಗಳನ್ನು ಒಳಗೊಂಡಿರುತ್ತದೆ.ಇದರಲ್ಲಿ ಒಂದರೊಡನೊಂದರ ಉದ್ದೇಶಗಳನ್ನು ಒಂದೊಂದು ಪ್ರತಿನಿಧಿಸುತ್ತದೆ.

ಉದಾಹರಣೆಗೆ ಕೆಲವು ಭಾಷೆಗಳಲ್ಲಿ ಈ ರೀತಿಯ ಜೋಡಿ ಪ್ರಯೋಗಗಳು ಅನೇಕ ರೀತಿಯಲ್ಲಿ ಕಂಡುಬರುತ್ತದೆ. ಎತ್ತರ ಜೊತೆಗೆ “ಹೆಚ್ಚು,” ಜೋಡಿ ಕಡಿಮೆ ಜೊತೆಗೆ “ಹೆಚ್ಚು ಇರುವುದಿಲ್ಲ” ಅದರಿಂದ ಎತ್ತರ ಹೆಚ್ಚು /ಅಧಿಕವನ್ನು ಪ್ರತಿನಿಧಿಸಿದರೆ ಮತ್ತು ಕಡಿಮೆ ಇರುವುದು ಅಷ್ಟೇನು ಹೆಚ್ಚಲ್ಲ ಎಂಬುದನ್ನು ಪ್ರತಿನಿಧಿಸುತ್ತದೆ.

ಈ ರೀತಿಯ ಪ್ರಕ್ರಿಯೆ ನಡೆಯುವುದು ಏಕೆಂದರೆ ಅಲ್ಲಿ ತುಂಬಾ ಇದೆ ಹೇಳಲು.ರಾಶಿ ಗುಡ್ಡೆಯಾಗಿದೆ ಎಂದು ಬಳಸುತ್ತಾರೆ. ಯಾವುದಾದರೂ ವಸ್ತುವಿನ ಬೆಲೆ ಹೆಚ್ಚಾಗಿದ್ದರೆ ಇದರ ಬೆಲೆ ತುಂಬಾ ಹೆಚ್ಚು ಎಂದು ಕೆಲವು ಭಾಷೆಯಲ್ಲಿ ಜನ ಹೇಳುತ್ತಾರೆ.ಇನ್ನೂ ಕೆಲವೊಮ್ಮೆ ಯಾವುದಾದರೂ ನಗರದ ಜನಸಂಖ್ಯೆ ಹೆಚ್ಚಾಗಿದ್ದರೆ ಈ ನಗರದಲ್ಲಿ ಜನದಟ್ಟಣೆ ಹೆಚ್ಚಾಗಿದೆ /ಏರುತ್ತಿದೆ ಎಂದು ಹೇಳುವುದುಂಟು.

ಅದೇ ರೀತಿ ಯಾರಾದರೂ ತಮ್ಮ ತೂಕವನ್ನು ಕಳೆದುಕೊಂಡು ತೆಳ್ಳಗಾದರೆ ನಾವು ಅವರ ತೂಕ ಕಡಿಮೆ ಯಾಗಿದೆ, ಅವರು ಇಳಿದು ಹೋಗಿದ್ದಾರೆ ಎಂಬ ಪದ ಬಳಕೆಮಾಡುತ್ತೇವೆ. ಅದೇ ರೀತಿ ಸತ್ಯವೇದದಲ್ಲಿ ಕಂಡುಬರುವ ವಿಶೇಷ ಮಾದರಿಗಳು ಹಿಬ್ರೂ ಮತ್ತು ಗ್ರೀಕ್ ಭಾಷೆಗಳಲ್ಲೂ ಕಂಡುಬರುತ್ತವೆ. ಈ ರೀತಿಯ ಮಾದರಿಗಳನ್ನು ಗುರುತಿಸುವುದು ಉಪಯುಕ್ತವಾದುದು, ಏಕೆಂದರೆ ಭಾಷಾಂತರ ಮಾಡುವವರಿಗೆ ಕಂಡುಬರುವ ಇಂತಹ ಸಮಸ್ಯೆಗಳು ಪದೇ ಪದೇ ಕಾಡುವಂಥ ವಿಷಯವಾಗಿದೆ.

ಈ ಭಾಷಾಂತರ ಸವಾಲುಗಳನ್ನು ಹೇಗೆ ಪರಿಹರಿಸಿಕೊಳ್ಳಬಹುದು, ಹೇಗೆ ನಿಭಾಯಿಸ ಬೇಕು ಎಂದು ತಿಳಿದುಕೊಂಡರೆ ಮುಂಬರುವ ಎಲ್ಲಾ ಸಮಸ್ಯೆಗಳನ್ನು ಯಾವ ಸಂದರ್ಭದಲ್ಲಾದರೂ ಸುಲಭವಾಗಿ ನಿರ್ವಹಿಸಲು ಕಲಿತುಕೊಳ್ಳುತ್ತಾರೆ. ಉದಾಹರಣೆಗೆ ಸತ್ಯವೇದದಲ್ಲಿ ಒಂದು ಜೋಡಿ ಪದಪ್ರಯೋಗ ನಡೆಯುವುದುನಡವಳಿಕೆಯೊಂದಿಗೆ ಮತ್ತು ಒಂದು ದಾರಿಒಂದು ರೀತಿಯ ನಡತೆಯೊಂದಿಗೆ. .ದಾ.ಕೀ. 1:1 ರಲ್ಲಿ ಹೇಳಿರುವಂತೆ ದುಷ್ಟಜನರ ಸಲಹೆಯಂತೆ ನಡೆಯುವುದು ದುಷ್ಟಜನರು ಹೇಳಿದಂತೆ ಮಾಡುವುದನ್ನು ಪ್ರತಿನಿಧಿಸುತ್ತದೆ

ಯಾರು ದುಷ್ಟಜನರ ಮಾತಿನಂತೆ ನಡೆಯುವುದಿಲ್ಲವೋ ಅವನು ಆಶೀರ್ವದಿಸಲ್ಪಡುವನು ನಡೆಯುವುದು (ದಾ.ಕೀ1:1 ULB)

ಈ ರೀತಿಯ ವಾಕ್ಯಮಾದರಿ ದಾ.ಕೀ.119:32 ಕಂಡುಬರುತ್ತದೆ ದೇವರ ಆಜ್ಞೆಯಂತೆ ನಡೆದರೆ ಅದು ದೇವರನ್ನು ಅನುಸರಿಸಿದಂತೆ. ಓಡುವುದು ಎಂದರೆ ನಡೆಯುವುದಕ್ಕಿಂತ ವೇಗವಾದುದು. ಅಂದರೆ ದೇವರ ಮಾತಿನಂತೆ ನಡೆಯುವುದು ಹಾಗೂ ದೇವರ ಆಜ್ಞೆಯನ್ನು ಪೂರ್ಣಮನಸ್ಸಿನಿಂದ, ಪೂರ್ಣ ಹೃದಯದಿಂದ ಪಾಲಿಸುವುದು.

ನಾನು ನಿನ್ನ ಆಜ್ಞೆಯಂತೆ ನಿನ್ನ ದಾರಿಯಲ್ಲಿ ಚಲಿಸುತ್ತೇನೆ (ದಾ,ಕೀ. 119:32 ULB)

ಕಾರಣವೆಂದರೆ ಇದು ಭಾಷಾಂತರದ ವಿಷಯ.

ಈ ಮಾದರಿ ಮೂರು ರೀತಿಯ ಸವಾಲುಗಳನ್ನು ಗುರುತಿಸಲು ಪ್ರಯತ್ನಿಸುವ ಪ್ರತಿಯೊಬ್ಬರಿಗೂ ನೀಡುತ್ತದೆ.

  1. ಸತ್ಯವೇದದಲ್ಲಿ ಬಳಸಿರುವ ಕೆಲವು ನಿರ್ದಿಷ್ಟ ರೂಪಕಗಳನ್ನು ನೋಡಿದಾಗ ಎರಡು ಉದ್ದೇಶಗಳು ಒಂದರೊಡನೊಂದು ಜೊತೆಯಾಗಿ ಬರುವುದು ಏನೂ ಅಸಹಜವಾಗಿ ಕಾಣಿಸುವುದಿಲ್ಲ.ಉದಾಹರಣೆಗೆ ತತ್ ಕ್ಷಣವೇ ಅದರ ಅಭಿವ್ಯಕ್ತಿ ಎದ್ದು ಕಾಣುವುದಿಲ್ಲ ಆದರೆ ಅದನ್ನು ನಮ್ಮಲ್ಲಿ ಹುಟ್ಟಿಸುವುದು, ಅದನ್ನು ಅರ್ಥಮಾಡಿಕೊಳ್ಳಲು ವಿವೇಕನೀಡುವುದು ದೇವರು. ದೇವರು ನನ್ನಲ್ಲಿ ಸಾಮರ್ಥ್ಯವನ್ನೂ ಬಲವನ್ನೂ ಬಲವಾದ ನಡುಕಟ್ಟನ್ನು ಪಟ್ಟಿಯಂತೆ ಬಿಗಿದು ರಕ್ಷಣೆ ನೀಡಿದ್ದಾನೆ.” (ದಾ. ಕೀ. 18:32 ULB) ನೈತಿಕ ಗುಣಮಟ್ಟವನ್ನು ತಿಳಿಸಲು ವಸ್ತ್ರಗಳ ಜೋಡಿ, ನಡುಕಟ್ಟು ಎಂಬ ಪದ ಬಳಸಲಾಗಿದೆ. "ನಡುಕಟ್ಟು " " ಬಲವನ್ನು " ಪ್ರತಿನಿಧಿಸಿದರೆ ವಸ್ತ್ರವು ನೀತಿ ವಸ್ತ್ರವನ್ನು ನೈತಿಕಕವಚವನ್ನು ಪ್ರತಿನಿಧಿಸುತ್ತದೆ/ ಸತ್ಯವೇದದಲ್ಲಿನ ಪ್ರತಿಮೆಗಳಲ್ಲಿ ಮಾನವನು ನಿರ್ಮಿಸಿದ ವಸ್ತುಗಳು ಬೀಟಾ – ಮಾನವನಿರ್ಮಿತ

  2. ನಿಗಧಿತ ಭಾಷಾಭಿವ್ಯಕ್ತಿಯ ಬಗ್ಗೆ ನೋಡುವಾಗ ಅನುವಾದ ಮಾಡುವವನು ಹೇಳುತ್ತಿರುವ ವಿಷಯ ಯಾವುದರ ಬಗ್ಗೆ ಪ್ರತಿನಿಧಿಸುತ್ತಿದೆ ಎಂಬುವುದರ ಬಗ್ಗೆ ಸೂಕ್ಷ್ಮವಾಗಿ ಗಮನಿಸುವುದು ಅಗತ್ಯ. ವಾಕ್ಯದ ಸುತ್ತಮುತ್ತ (ಹಿಂದಿನ ಮತ್ತು ಮುಂದಿನ) ಇರುವ ವಾಕ್ಯಗಳ ಬಗ್ಗೆ ತಿಳಿವಳಿಕೆ ಇದ್ದರೆ ಮಾತ್ರ ಪರಿಗಣಿಸಲು ಸಾಧ್ಯ. ಸುತ್ತ ಮುತ್ತ ಇರುವ ವಾಕ್ಯಗಳು ವಿಶೇಷ ಅರ್ಥವನ್ನು ನೀಡುತ್ತದೆ ಉದಾಹರಣೆಗೆ "ದೀಪ " ಎಂಬ ಪದ ದೀಪದ ಪಾತ್ರೆ / ಹಣತೆ, ಎಣ್ಣೆ, ದೀಪದ ಬತ್ತಿ ಇವೆಲ್ಲವೂ ಬೆಳಕು ನೀಡುವುದನ್ನು ತಿಳಿಸುತ್ತದೋ ಅಥವಾ ನಮ್ಮ ಜೀವನವನ್ನು ಪ್ರತಿನಿಧಿಸುತ್ತದೋ ಗಮನಿಸ ಬೇಕಿದೆ.[ಸತ್ಯವೇದದಲ್ಲಿನ ಪ್ರತಿಮೆಗಳು ಸಹಜವಾಗಿ "ಬೆಂಕಿ " ಅಥವಾ " ದೀಪ " ಎಂದರೆ ಜೀವನವನ್ನು ಪ್ರತಿನಿಧಿಸುತ್ತದೆ ಬೀಟಾ – ಫಿನಾಮಿನ

1 ನೇ ಅರಸುಗಳು 7:50,ರಲ್ಲಿ ಬರುವ ದೀಪದ ಕುಡಿಗಳನ್ನು ಸರಿಪಡಿಸುವ ಬಗ್ಗೆ ಇರುವ ವಿಚಾರಗಳು ಸಾಮಾನ್ಯ ದೀಪಕ್ಕೆ ಸಂಬಂಧಪಟ್ಟದ್ದು.

2 ನೇ ಸಾಮುವೇಲ 21:17 ರಲ್ಲಿ ಬರುವ ಇಸ್ರಾಯೇಲರ ದೀಪವು ದಾವಿದ ರಾಜನ ಜೀವನವನ್ನು ಪ್ರತಿನಿಧಿಸುತ್ತದೆ. ಚೆರೋಯರ ಮಗನಾದ ಅಭಿಷ್ಯೆಯು ದಾವೀದನ ಸಹಾಯಕ್ಕೆ ಬಂದು ಫಿಲಿಪ್ಪಿಯವರನ್ನು ಕೊಂದು ಹಾಕಿದರು. ಆಗ ಜನರು " ಇಸ್ರಾಯೇಲರ ದೀಪ ಆರಿಹೋಗದಂತೆ " ನೋಡಿಕೊಳ್ಳಲು ನೀನು ಇನ್ನು ಮುಂದೆ ನಮ್ಮ ಜೊತೆ ಯುದ್ಧಕ್ಕೆ ಬರಬಾರದು ಎಂದು ಹೇಳಿದರು.

ಬಂಗಾರದ ಬಟ್ಟಲುಗಳು, ಕತ್ತರಿಗಳು ದೀಪಗಳುp, ಬೋಗುಣಿಗಳು, ಧೂಪಾರತಿಗಳು, ಅಗ್ಗಿಷ್ಟಿಕೆಗಳು ಶುದ್ಧ ಬಂಗಾರದಿಂದ ಮಾಡಲ್ಪಟ್ಟವು. (1 ಅರಸು 7:50 ULB)

ಇಷ್ಟಿಬೆನೋಜ್ ಎಂಬುವವನು ದಾವೀದನನ್ನು ಕೊಲ್ಲುವುದಕ್ಕೆ ಇದ್ದನು. ಆದರೆ ಚೆರೋಯಳ ಮಗನಾದ ಅಭಿಷ್ಯೆಯು ದಾವೀದನನ್ನು ರಕ್ಷಿಸಿ ಫಿಲಿಪ್ಪಿಯರ ಮೇಲೆ ದಾಳಿ ಮಾಡಿ ಕೊಂದು ಹಾಕಿದನು.

“ಇಸ್ರಾಯೇಲರ ದೀಪವು ಆರಿಹೋಗದಂತೆ” ನೋಡಿಕೊಳ್ಳ ಬೇಕಾಗಿರುವುದರಿಂದ ಇನ್ನು ಮುಂದೆ ನೀನು ನಮ್ಮ ಜೊತೆ ಯುದ್ಧಕ್ಕೆ ಬರಬಾರದು ಎಂದು ಖಂಡಿತವಾಗಿ ಆತನ ಜನರು ಹೇಳಿದರು ದೀಪ ಇಸ್ರಾಯೇಲ್ (2 ನೇ ಸಮುವೇಲ 21:16-17 ULB)

  1. ಈ ರೀತಿ ಬರುವ ಉದ್ದೇಶಗಳ ಜೋಡಿ ವಾಕ್ಯಗಳು ಪದಗಳು ಕೆಲವೊಮ್ಮೆ ಜೊತೆಯಾಗಿ ಸಂಕೀರ್ಣವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತವೆ. ಇವು ಆಗಿಂದಾಗ್ಗೆ ಜೊತೆಯಾಗಿ ಸಾಮಾನ್ಯ ಮಿಟಾನಿಮಿಸ್ ಮಾದರಿಗಳ ಆಧಾರದ ಮೇಲೆ ವಿವರಿಸಲ್ಪಡುತ್ತದೆ. ಸತ್ಯವೇದದಲ್ಲಿನ ಪ್ರತಿಮೆಗಳು ಮತ್ತು ಸಾಂಸ್ಕೃತಿಕ ಉದಾಹರಣೆಗಳನ್ನು ಸಾಮಾನ್ಯ ಮಿಟಾನಿಮಿಸ್ ಗಳನ್ನು ಗಮನಿಸಿ ಮತ್ತು ಸತ್ಯವೇದದಲ್ಲಿನ ಪ್ರತಿಮೆಗಳು – ಉದಾಹರಣೆಗಳು – ಸಾಂಸ್ಕೃತಿಕ ಮಾದರಿಗಳು

ಉದಾಹರಣೆಗೆ 2ನೇ ಸಮುವೇಲ 14:7 " ಉರಿಯುವ ಕೆಂಡ " ಎಂಬುದನ್ನು ಮಗನ ಜೀವನಕ್ಕೆ ಪ್ರತಿಮೆಯಾಗಿ / ಉದಾಹರಣೆಯಾಗಿ ಬಳಸಲಾಗಿದೆ.ತನ್ನ ತಂದೆಯನ್ನು ನೆನಪಿಸಿ ಕೊಳ್ಳುವುದಕ್ಕಾಗಿ ಜನರು ಹೀಗೆ ಪ್ರತಿನಿಧಿಸುತ್ತಾರೆ.

ಇಲ್ಲಿ ಎರಡು ರೀತಿಯ ವಾಕ್ಯಗಳ ಜೋಡಣೆಯಾಗಿದೆ 1 ಮಗನ ಜೀವದೊಂದಿಗೆ ಉರಿಯುವ ಕೆಂಡ 2 ಮಗನನ್ನು ತಂದೆಯ ಸ್ಮರಣೆಯೊಂದಿಗೆ ಜೋಡಿಸಲಾಗಿದೆ.

ಅವರು ತನ್ನ ಸಹೋದರನನ್ನು ಕೊಂದವನೆಲ್ಲಿ? ಅವನನ್ನು ನಮಗೆ ಒಪ್ಪಿಸು, ಆ ಸಹೋದರನ ಪ್ರಾಣಕ್ಕಾಗಿ ಅವನ ಪ್ರಾಣವನ್ನು ತೆಗೆದು ಬಿಟ್ಟು ನಿನ್ನನ್ನು ಬಾಧ್ಯಸ್ಥನಿಲ್ಲದ ಹಾಗೆ ಮಾಡಿಬಿಡುತ್ತವೆ ಅನ್ನುತ್ತಾರೆ. ಅವರು ಅವನ ಭೂಲೋಕದ ಮೇಲಿನಿಂದ ಸಂತಾನವನ್ನು ಅಳಿಸಬೇಕೆಂದಿದ್ದಾರೆ. ಅವರು ನನಗುಳಿದಿರುವ ಒಂದು ಕೆಂಡವನ್ನುಆರಿಸಿ ಬಿಟ್ಟು ನನ್ನ ಗಂಡನ ಹೆಸರನ್ನು ಸಂತಾನವನ್ನು ಭೂಲೋಕದ ಮೇಲಿಂದ ಅಳಿಸ ಬೇಕೆಂದಿದ್ದಾರೆ (2 ನೇ ಸಮುವೇಲ 14:7 ULB)

ಸತ್ಯವೇದದಲ್ಲಿನ ಪ್ರತಿಮೆಗೆಬಳಸಿರುವ ಕೊಂಡಿಗಳ ಪಟ್ಟಿ.

ಕೆಳಗೆ ನಮೂದಿಸಿರುವ ಪುಟಗಳಲ್ಲಿ ಸತ್ಯವೇದದಲ್ಲಿನ ಕೆಲವು ಉದ್ದೇಶಗಳನ್ನು ಉದಾಹರಣೆಯೊಂದಿಗೆ ತಿಳಿಸುತ್ತದೆ. ಇವುಗಳನ್ನು ವಿವಿಧ ಪ್ರತಿಮೆಗಳಿಗೆ ಅನುಗುಣವಾಗಿ ಪಟ್ಟಿ ಮಾಡಲಾಗಿದೆ.


ಸತ್ಯವೇದದ /ಉದಾಹರಣೆಗಳು – ಸಾಮಾನ್ಯ ಮಾದರಿಗಳು.

Translation Manual :: Just-in-Time Learning Modules :: Biblical Imagery :: Biblical Imagery - Common Patterns
ಸತ್ಯವೇದದಲ್ಲಿನ ಚಿತ್ರಣ– ಪ್ರಾಣಿಗಳು.
Translation Manual :: Just-in-Time Learning Modules :: Biblical Imagery :: Biblical Imagery - Common Patterns :: Biblical Imagery - Animals

ಮಾನವನ ಅಂಗಾಂಗಗಳನ್ನು ಮತ್ತು ಮಾನವನ ಲಕ್ಷಣಗಳನ್ನು ಹೊಂದಿರುವ ಕೆಲವು ಸತ್ಯವೇದ ಚಿತ್ರಣಗಳು ಕೆಳಗೆ ಅಕ್ಷರಾನುಕ್ರಮವಾಗಿ ಪಟ್ಟಿಮಾಡಿದೆ. ದೊಡ್ಡ ಅಕ್ಷರಗಳಲ್ಲಿ ಬರೆದಿರುವ ಪದಗಳೆಲ್ಲವೂ ಒಂದು ಉದ್ದೇಶವನ್ನು ಪ್ರತಿನಿಧಿಸುತ್ತದೆ. ಇಂತಹ ಪದ ಚಿತ್ರಣಗಳು ಎಲ್ಲಾ ವಾಕ್ಯಗಳಲ್ಲೂ ಬರಬೇಕೆಂಬುದಿಲ್ಲ ಆದರೆ ಈ ಪದದ ಉದ್ದೇಶ ಅದರಲ್ಲಿ ಪ್ರತಿನಿಧಿತ್ವವಾಗಿರಬೇಕು.

ಒಂದು ಪ್ರಾಣಿಯ ಕೊಂಬು ಅದರ ಬಲವನ್ನು ಪ್ರತಿನಿಧಿಸುತ್ತದೆ.

ಯೆಹೋವನು ನನ್ನ ಬಂಡೆ. ನನ್ನ ಆಶ್ರಯಗಿರಿಯಾಗಿದ್ದಾನೆ. ನನ್ನ ವಿಮೋಚಕನೂ, ನನ್ನ ಗುರಾಣಿಯೂ, ನನ್ನ ರಕ್ಷಣೆಯ ಕೊಂಬು, ನನ್ನ ದುರ್ಗವು. ನನ್ನ ಶರಣನು, ಹಿಂಸೆಯಿಂದ ನನ್ನನ್ನು ರಕ್ಷಿಸುವವನು ಆಗಿದ್ದಾನೆ. (2 ಸಮುವೇಲ 22:3 ULB)

“ನನ್ನ ರಕ್ಷಣೆಯ ಕೊಂಬು” ಬಹು ಶಕ್ತಿಶಾಲಿಯಾಗಿ ನನ್ನನ್ನು ರಕ್ಷಿಸುತ್ತದೆ.

ಅಲ್ಲಿಯೇ ದಾವೀದನ ಕೊಂಬು ಚಿಗುರುವಂತೆ ಮಾಡುವೆನು. (ದಾ.ಕೀ. 132:17 ULB)

“ದಾವೀದನ ಕೊಂಬು” ಎಂದರೆ ದಾವೀದನ ಸೈನ್ಯದ ಬಲ

ಜನರು ಅಪಾಯದಲ್ಲಿರುವುದನ್ನು ಮತ್ತು ರಕ್ಷಣೆ ಇಲ್ಲದೆ ಇರುವುದನ್ನು ಪಕ್ಷಿಗಳು ಪ್ರತಿನಿಧಿಸುತ್ತವೆ.

ಏಕೆಂದರೆ ಕೆಲವು ಪಕ್ಷಿಗಳು ಸುಲಭವಾಗಿ ಬಲೆಯಲ್ಲಿ ಸಿಕ್ಕಿ ಬೀಳುತ್ತವೆ.

ಪಕ್ಷಿಗಳು ಬಲೆಹಾಕಿ ಹಿಡಿಯುವಂತೆ ನನ್ನ ಶತ್ರುಗಳು ಅನಾಯಾಸವಾಗಿ ನನ್ನನ್ನು ವಿನಾಕಾರಣ ಸೆರೆ ಹಿಡಿದರು. (ಪ್ರಲಾಪಗಳು 3:52 ULB) ಬೇಟೆಗಾರನಿಂದ ತಪ್ಪಿಸಿಕೊಂಡು ಓಡುವ ಜಿಂಕೆಯಂತೆ. ಪಕ್ಷಿಯು ತಪ್ಪಿಸಿಕೊಂಡು ಹಾರಿಹೋಗುವಂತೆ ತಪ್ಪಿಸಿಕೋ. (ಜ್ಞಾನೋಕ್ತಿಗಳು 6:5 ULB)

ಹಕ್ಕಿಯ ಬೇಟೆಗಾರನೆಂದರೆ ಪಕ್ಷಿಗಳನ್ನು ಬಲೆಹಾಕಿ ಹಿಡಿಯುವವ, ಅದಕ್ಕಾಗಿ ಬಲೆಗಳನ್ನು ಹಾಕುವವ.

ನಮ್ಮ ಜೀವವು ಹಕ್ಕಿಯ ಬೇಟೆಗಾರನ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದೆ; ಬಲೆಯು ಹರಿದುಹೋಯಿತು, ನಾವು ತಪ್ಪಿಸಿಕೊಂಡೆವು. (ದಾ.ಕೀ. 124:7 ULB)

ಮಾಂಸವನ್ನು ತಿನ್ನುವ ಪಕ್ಷಿಗಳು ಶತ್ರುಗಳು ಹೇಗೆ ಚುರುಕಾಗಿ ನಮ್ಮನ್ನು ಆಕ್ರಮಿಸುತ್ತಾರೋ ಎಂಬುದನ್ನು ಪ್ರತಿನಿಧಿಸುತ್ತದೆ.

ಹಬಕ್ಕೂಕ ಮತ್ತು ಹೋಶೆಯ ಪ್ರವಾದನಾ ಗ್ರಂಥಗಳಲ್ಲಿ ಇಸ್ರಾಯೇಲರ ಶತ್ರುಗಳು ಹದ್ದುಗಳಂತೆ ಆಕ್ರಮಣ ಮಾಡುತ್ತಾರೆ ಎಂದು ಹೋಲಿಸಿ ಹೇಳಿದೆ.

ದೂರದಿಂದ ಕುದುರೆಯ ಮೇಲೆ ಬರುವ ಶತ್ರುಗಳ ಸೈನಿಕರು ಅವನ ಮೇಲೆ ಹದ್ದುಗಳಂತೆ ಎರಗಿ ತಿನ್ನಲು ಹವಣಿಸುತ್ತಾರೆ /ಆಕ್ರಮಿಸುತ್ತಾರೆ. (ಹಬಕೂಕ 1:8 ULB)

ಶತ್ರುವು ಹದ್ದಿನ ಹಾಗೆ ಯೆಹೋವನಾದ ನನ್ನ ನಿವಾಸದ ಮೇಲೆ ಎರಗುತ್ತಾನೆ. …ಇಸ್ರಾಯೇಲರು ಒಳ್ಳೆಯದನ್ನು ನಿರಾಕರಿಸಿದ್ದಾರೆ. ಶತ್ರುಗಳು ಅವರನ್ನು ಹಿಂದಟ್ಟುವನು. (ಹೋಶೆಯ 8:1,3 ULB)

ಯೆಶಾಯ ಪ್ರವಾದನಾ ಗ್ರಂಥದಲ್ಲಿ ಮೂಡಣ ದೇಶದಿಂದ ಹದ್ದು ಎರಗಿ ಬರಲಿ ಎಂದು ಹೇಳಿದ್ದಾನೆ.ನನ್ನ ಸಂಕಲ್ಪವನ್ನು ನೆರವೇರಿಸುವವನು ದೂರದೇಶದಿಂದ ಬರಲಿ ಅಂದರೆ ಇಸ್ರಾಯೇಲರ ಮೇಲೆ ಅವರ ಶತ್ರುಗಳು ಹದ್ದಿನಂತೆ ಎರಗುತ್ತಾರೆ ಎಂದು

ಮೂಡಲಿಂದ ಹದ್ದು ಎರಗಲಿ, ಅಂದರೆ ನನ್ನ ಸಂಕಲ್ಪವನ್ನು ನೆರವೇರಿಸ ತಕ್ಕವನು ದೂರದೇಶದಿಂದ ಬರಲಿ ಎಂದಿದ್ದೇನೆ (ಯೆಶಾಯ 46:11 ULB)

ಪಕ್ಷಿಯ ರಕ್ಕೆಗಳು ರಕ್ಷಣೆಯನ್ನು ಪ್ರತಿನಿಧಿಸುತ್ತವೆ.

ಪಕ್ಷಿಗಳು ತಮ್ಮ ರಕ್ಕೆಗಳನ್ನು ಹರಡಿ ತಮ್ಮ ಮರಿಗಳನ್ನು ರಕ್ಷಿಸುವುದರಿಂದ ಹೀಗೆ ಹೇಳಿದೆ.

ಕಣ್ಣುಗುಡ್ಡಿನಂತೆ ನನ್ನನ್ನು ಕಾಪಾಡು., ನಿನ್ನ ರೆಕ್ಕೆಗಳ ಮರೆಯಲ್ಲಿಟ್ಟುಕೊಂಡು ನನ್ನನ್ನು ಕಾಪಾಡು., ನನ್ನನ್ನು ಸುತ್ತಿಕೊಂಡು ಬಾಧಿಸುತ್ತಿರುವ ದುಷ್ಟರಿಂದಲೂ, ಪ್ರಾಣವೈರಿಗಳಿಂದಲೂ ತಪ್ಪಿಸಿ ಕಾಪಾಡು. (ದಾ.ಕೀ.17:8-9 ULB)

ರೆಕ್ಕೆಗಳು ಹೇಗೆ ರಕ್ಷಣೆಯನ್ನು ಪ್ರತಿನಿಧಿಸುತ್ತದೆ ಎಂಬುದಕ್ಕೆ ಇನ್ನೊಂದು ಉದಾಹರಣೆ ಇದೆ.

ದೇವರೇ, ಕೃಪೆ ತೋರಿಸು, ನನ್ನನ್ನು ಕರುಣಿಸು. ನೀನೇ ನನ್ನ ಆಶ್ರಯಸ್ಥಾನವಲ್ಲವೇ ? ಆಪತ್ತುಗಳು ಕಳೆದು ಹೋಗುವವರೆಗೂ ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು. (ದಾ.ಕೀ. 57:1 ULB)

ಅಪಾಯಕಾರಿ ಪ್ರಾಣಿಗಳು.

ದಾವೀದನು ತನ್ನ ಕೀರ್ತನೆಗಳಲ್ಲಿ ಶತ್ರುಗಳನ್ನು ಸಿಂಹಗಳಿಗೆ ಹೋಲಿಸಿದ್ದಾನೆ.

ನನ್ನ ಜೀವವು ಸಿಂಹಗಳ ನಡುವೆ ಸಿಕ್ಕಿದೆ ; ಬೆಂಕಿ ಕಾರುವ ಮನುಷ್ಯನ ನಡುವೆ ಬಿದ್ದಿದ್ದೇನೆ. ಅವರ ಹಲ್ಲುಗಳು ಶಸ್ತ್ರ ಬಾಣಗಳು. ನಾಲಿಗೆಗಳು ಹದವಾದ ಕತ್ತಿಗಳು. ದೇವರೇ ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ, ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ. (ದಾ.ಕೀ. 57:4 ULB) ಪೇತ್ರನು ಸೈತಾನನನ್ನು ಗರ್ಜಿಸುವ ಸಿಂಹ ಎಂದು ಕರೆದಿದ್ದಾನೆ. ”ಸ್ವಸ್ಥ ಚಿತ್ತರಾಗಿರಿ ಎಚ್ಚರವಾಗಿರಿ”. ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಿದ್ದಾನೆ. (1 ಪೇತ್ರ 5:8 ULB)

ಮತ್ತಾಯನ ಸುವಾರ್ತೆಯಲ್ಲಿ ಯೇಸು ಸುಳ್ಳು ಪ್ರವಾದಿಗಳು ಕುರಿವೇಷ ಧರಿಸಿದ ತೋಳಗಳಂತೆ ಬರುತ್ತಾರೆ. ಅವರಿಂದಾಗುವ ಅಪಾಯಗಳಿಂದ ದೂರವಿರಿ ಎಂದು ಹೇಳಿದ್ದಾನೆ.

”ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರಿ, ಅವರು ಕುರಿವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ. ಅವರು ಒಳಗೆ ಹಿಡುಕೊಂಡು ಹೋಗುವ ತೋಳಗಳೇ. (ಮತ್ತಾಯ 7:15 ULB)

ಮತ್ತಾಯನ ಸುವಾರ್ತೆಯಲ್ಲಿ ಸ್ನಾನಿಕನಾದ ಯೆಹೋವನು ಪರಿಸಾಯರನ್ನು ಸದ್ದುಕಾಯರನ್ನು ವಿಷ ಸರ್ಪಗಳೆಂದು ಕರೆದಿದ್ದಾನೆ. ಏಕೆಂದರೆ ಅವರು ಸುಳ್ಳು ಪ್ರವಾದನೆಗಳಿಂದ ಅಪಾಯ ಉಂಟು ಮಾಡುತ್ತಾರೆ.

ಅವನು ಸದ್ದುಕಾಯರಲ್ಲಿ, ಪರಿಸಾಯರಲ್ಲಿ ಅನೇಕರು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬರುವುದನ್ನು ಕಂಡು ಅವರಿಗೆ " ಎಲೈ ಸರ್ಪಜಾತಿಯವರೇ ಮುಂದೆ ಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಉಪದೇಶ ಮಾಡಿದವರು ಯಾರು? (ಮತ್ತಾಯ 3:7 ULB)

ಹದ್ದುಗಳು ಬಲವನ್ನು ಪ್ರತಿನಿಧಿಸುತ್ತವೆ.

ಶ್ರೇಷ್ಠವರಗಳಿಂದ ನಿನ್ನ ಆಶೆಯನ್ನು ಪೂರ್ಣಗೊಳಿಸುತ್ತಾನೆ. ಹದ್ದಿಗೆ ಬರುವಂತೆಯೇ ನಿನಗೆ ಯೌವನವನ್ನು ತಿರುಗಿ ಬರಮಾಡುತ್ತಾನೆ. (ದಾ.ಕೀ. 103:5 ULB)

ಯೆಹೋವನು ಇಂತೆನ್ನುತ್ತಾನೆ, ಇಗೋ ಮೇವಾಬಿನ ಮೇಲೆ ಎರಗಬೇಕೆಂದುಶತ್ರುವು ರಣಹದ್ದಿನಂತೆ ರೆಕ್ಕೆಗಳನ್ನು ಹರಡಿ ಹಾರುವನು." (ಯೆರೇಮಿಯ 48:40 ULB)

ಕುರಿ ಅಥವಾ ಕುರಿಮಂದೆಗೆ ನಾಯಕನ ಅಗತ್ಯವಿದೆ ಅಥವಾ ಅಪಾಯದಲ್ಲಿದೆ ಎಂದು ಪ್ರತಿನಿಧಿಸುತ್ತದೆ.

ನನ್ನ ಜನರು ಕುರಿಮಂದೆಯಿಂದ ತಪ್ಪಿಸಿಕೊಂಡ ಕುರಿಗಳಂತಾಗಿದ್ದಾರೆ. ಅವರ ಕುರುಬರು /ಪಾಲಕರು ಅವರನ್ನು ದಾರಿ ತಪ್ಪಿಸಿ ಪರ್ವತಗಳಲ್ಲಿ ಅಲೆಯುವಂತೆ ಮಾಡಿದ್ದಾರೆ; (ಯೆರೇಮಿಯ50:6 ULB)

ಆತನು ಕುರಿಗಳನ್ನೋ ಎಂಬಂತೆ ತನ್ನ ಜನರನ್ನು ಹೊರತಂದು ಅಡವಿಯಲ್ಲಿ ಅವರನ್ನು ಪೋಷಿಸಿ ನಡೆಸಿದನು. (ದಾ.ಕೀ. 78:52 ULB)

ಇಸ್ರಾಯೇಲರ ಸಿಂಹಗಳು ಹಿಂದಟ್ಟಿ ಓಡಿಸಿದ ಚದುರಿದ ಹಿಂಡಿನಂತಿದ್ದಾರೆ. ಮೊಟ್ಟಮೊದಲು ಅಶ್ಯೂರದ ಅರಸನು ಅದನ್ನು ಓಡಿಸಿದನು ಕಟ್ಟಕಡೆಗೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅದರ ಎಲುಬುಗಳನ್ನು ಕಡಿದು ತುಂಡು ಮಾಡಿದನು. (ಯೆರೆಮಿಯಾ 50:17 ULB)

ನೋಡಿರಿ ತೋಳಗಳ ನಡುವೆ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸಿ ಕೊಡುತ್ತೇನೆ. ಆದುದರಿಂದ ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರ್ರಿ. ಇದಲ್ಲದೆ ಜನರ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. (ಮತ್ತಾಯ 10:16 ULB)

ಸತ್ಯವೇದದಲ್ಲಿನ ಚಿತ್ರಣಗಳು – ದೇಹದ ಅಂಗಾಂಗಗಳು ಮತ್ತು ಮಾನವನ ಗುಣಲಕ್ಷಣಗಳು.
Translation Manual :: Just-in-Time Learning Modules :: Biblical Imagery :: Biblical Imagery - Common Patterns :: Biblical Imagery - Body Parts and Human Qualities

###ವಿವರಣೆ

ಸತ್ಯವೇದದಲ್ಲಿನ ಮಾನವ ದೇಹದ ಅಂಗಾಂಗಗಳನ್ನು ಮತ್ತು ಗುಣಲಕ್ಷಣಗಳನ್ನು ಕೆಲವು ಪ್ರತಿಮೆಗಳ ಮೂಲಕ ಬಳಸಿರುವುದನ್ನು ಅಕ್ಷರ ಕ್ರಮಾನುಸಾರ ಕೆಳಗೆ ಪಟ್ಟಿಮಾಡಿ ತಿಳಿಸಿದೆ.

ದೊಡ್ಡ ಅಕ್ಷರಗಳಲ್ಲಿ ಕೊಟ್ಟಿರುವ ಎಲ್ಲಾ ಪದಗಳು ಒಂದು ಉದ್ದೇಶವನ್ನು ಹೊಂದಿದೆ. ಪ್ರತಿಮೆ ಹೊಂದಿರುವ ವಾಕ್ಯದಲ್ಲಿ ಈ ಪದಗಳು ಬರಲೇಬೇಕೆಂಬ ಅಗತ್ಯವಿಲ್ಲ ಆದರೆ ಪದದ ಅರ್ಥಮಾತ್ರ ಪ್ರತಿನಿಧಿಸುತ್ತದೆ.

ಶರೀರ ಒಂದು ಗುಂಪು, ಜನಾಂಗವನ್ನು ಪ್ರತಿನಿಧಿಸುತ್ತದೆ.

ನೀವು ಕ್ರಿಸ್ತನ ದೇಹ ಮತ್ತು ಒಬ್ಬೊಬ್ಬರೂ ಆತನ ಅಂಗಗಳಾಗಿದ್ದೀರಿ. (1 ಕೊರಿಂಥ 12:27 ULB)

ಪ್ರೀತಿಯಿಂದ ಸತ್ಯವನ್ನು ಅನುಸರಿಸುತ್ತಾ ಬೆಳೆದು, ಎಲ್ಲಾ ವಿಷಯಗಳಲ್ಲಿಯೂ ಕ್ರಿಸ್ತನ ಐಕ್ಯವನ್ನು ಹೊಂದುತ್ತಾ ಬರಬೇಕು ಆತನೇ ಶಿರಸ್ಸು. ದೇಹವೆಲ್ಲಾ ಆತನ ದೊರೆತನದಲ್ಲಿದ್ದು ತನ್ನಲ್ಲಿರುವ ಎಲ್ಲಾ ನರಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯ ಹೊಂದಿ ಪ್ರೀತಿಯಿಂದ ಐಕ್ಯವಾಗಿದ್ದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತೇವೆ. (ಎಫೇಸ 4:15-16 ULB)

ಈ ವಾಕ್ಯದಲ್ಲಿ ಕ್ರಿಸ್ತನ ದೇಹವು ಕ್ರಿಸ್ತನನ್ನು ಅನುಸರಿಸುವ ಒಂದು ಗುಂಪಿನ ಜನರನ್ನು ಕುರಿತು ಹೇಳಿದೆ.

ಯಾರಾದರೊಬ್ಬರ ಅಸ್ತಿತ್ವವನ್ನು ಪ್ರತಿನಿಧಿಸುತ್ತದೆ.

“ನೀವು ನನಗೆ ಅಂಜುವುದಿಲ್ಲವೋ”, ನನ್ನೆದುರಿಗೆ ನಡುಗುವುದಿಲ್ಲವೋ? (ಯೆರೇಮಿಯ 5:22 ULB)

ಎದುರಿಗೆ ಇರುವುದು ಎಂದರೆ ಒಬ್ಬರ ಮುಂದೆ ಇರುವುದು, ಅಸ್ತಿತ್ವವದಲ್ಲಿರುವುದು ಎಂದು ಅರ್ಥ.

ಮುಖ ಎಂಬುದು ಒಬ್ಬರ ಗಮನ ನೀಡುವಿಕೆಯನ್ನು ಪ್ರತಿನಿಧಿಸುತ್ತದೆ.

ಆದಕಾರಣ ನೀನು ಅವರನ್ನು ಸಂಬೋಧಿಸಿ ಹೀಗೆ ಹೇಳು “ ಕರ್ತನಾದ ಯೆಹೋವನು ಇಂತೆನ್ನುತ್ತಾನೆ ಇಸ್ರಾಯೇಲ್ ವಂಶದವರಲ್ಲಿ ಯಾವಯಾವನು ತನ್ನ ಗೊಂಬೆಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ ತನಗೆ ಪಾಪಕಾರಿಯಾದ ವಿಘ್ನವನ್ನು ತನ್ನ ಮುಂದೆ ಇಟ್ಟುಕೊಂಡು ,ಪ್ರವಾದಿಯನ್ನು ಪ್ರಶ್ನೆಕೇಳುವುದಕ್ಕೆ ಅವನ ಪಾತಕಕ್ಕೆ, ಲೆಕ್ಕವಿಲ್ಲದ ಬೊಂಬೆಗಳಿಗೆ ತಕ್ಕಹಾಗೆ ಯೆಹೋವನಾದ ನಾನು ಉತ್ತರಕೊಡುವೆನು. (ಯೆಹಜ್ಕೇಲ14:4 ULB)

ಮುಖದ ಎದುರಿಗೆ ಏನನ್ನಾದರೂ ಇಡುವುದು ಎಂದರೆ ಅದರ ಕಡೆಗೆ ದೃಷ್ಟಿಸಿ ನೋಡುವುದು.ಅಥವಾ ಅದರ ಕಡೆ ಗಮನಕೊಡುವುದು ಎಂದರ್ಥ.

ಅನೇಕರು ನ್ಯಾಯಾಧಿಪತಿಯ ಕಟಾಕ್ಷವನ್ನು ಕೋರುವುರು. (ಜ್ಞಾನೋಕ್ತಿಗಳು 29:26 ULB)

ಒಬ್ಬ ವ್ಯಕ್ತಿ ಒಬ್ಬನ ಮುಖವನ್ನು ನೋಡಲು ಪ್ರಯತ್ನಿಸುತ್ತಿದ್ದಾನೆ ಎಂದರೆ ಆ ವ್ಯಕ್ತಿ ಇವನ ಕಡೆ ಗಮನ ಕೊಡುತ್ತಾನೆ ಎಂದರ್ಥ.

ದೇವರೇ ಏಕೆ ವಿಮುಖನಾಗಿದ್ದೀ ?ನಮಗಿರುವ ಬಾಧೆಯನ್ನು, ಹಿಂಸೆಯನ್ನು ಏಕೆ ಲಕ್ಷಿಸುವುದಿಲ್ಲ? (ದಾ.ಕೀ. 44:24 ULB)

ಯಾರ ಬಗ್ಗೆಯಾದರೂ ನಾವು ವಿಮುಖರಾದರೆ ನಾವು ಅವರನ್ನು ಅಲಕ್ಷಿಸುತ್ತಿದ್ದೇವೆ ಎಂದರ್ಥ.

ಮುಖ ಬಾಹ್ಯರೂಪವನ್ನು ಪ್ರತಿನಿಧಿಸುತ್ತದೆ.

ಬರವು ಲೋಕದಲ್ಲೆಲ್ಲಾಹರಡಿಕೊಂಡಿರುವಾಗ (ಆದಿಕಾಂಡ 41:56 ULB)

ತನ್ನ ಸಿಂಹಾಸನಕ್ಕೆ ಮರೆಯಾಗಿ ಮುಂಭಾಗದಲ್ಲಿ ಮೋಡವನ್ನು ಕವಿಸಿರುವನು. (ಯೋಬ 26:9 ULB)

ಇದು ವ್ಯಕ್ತಿಯೊಬ್ಬನ ಕಾರ್ಯವನ್ನು ಅಥವಾ ಬಲವನ್ನು ಪ್ರತಿನಿಧಿಸುತ್ತದೆ.

ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ನನ್ನ ಮುಖಾಂತರ ನಾಶ ಮಾಡಿದನು. (1 ಪೂರ್ವಕಾಲ ವೃತ್ತಾಂತ 14:11 ULB)

“ನನ್ನ ಮುಖಾಂತರ ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ಅವರ ಮೇಲೆ ಬಿದ್ದು ನಾಶಮಾಡಿದನು” ಎಂದರೆ.

ನಿನ್ನ ಮುಖಾಂತರನಿನ್ನ ಶತ್ರುಗಳೆಲ್ಲರೂ ನಿನಗೆ ಸಿಕ್ಕುವರು ನಿನ್ನ ಬಲ ಭುಜ ಪರಾಕ್ರಮದಿಂದ ನಿನ್ನನ್ನು ದ್ವೇಷಿಸುವ ಹಗೆಗಳನ್ನು ಹಿಡಿಯುವಿ. (ದಾ.ಕೀ. 21:8 ULB)

“ನಿನ್ನ ಕೈಯಿಂದಲೇ ನಿನ್ನ ಎಲ್ಲಾ ಶತ್ರುಗಳನ್ನು ಹಿಡಿಯುವಿ” ಎಂದರೆ “ನಿನ್ನ ಬಲದಿಂದಲೇ ನಿನ್ನ ಎಲ್ಲಾ ಶತ್ರುಗಳನ್ನು ಸೆರೆಹಿಡಿಯುವಿ ಎಂದು ಅರ್ಥ”.

ಇಗೋ, ಯೆಹೋವನ ಹಸ್ತವುರಕ್ಷಿಸಲಾಗದಂತಹ ಮೋಟುಗೈ ಅಲ್ಲ. (ಯೆಶಾಯ59:1 ULB)

“ಆತನ ಕೈ ಮೋಟುಗೈ ಅಲ್ಲ” ಎಂದರೆ ಆತನು ಬಲಹೀನನಲ್ಲ ಎಂದರ್ಥ.

“ತಲೆ” ಎಂಬ ಪದ ಅರಸನನ್ನು ಪ್ರತಿನಿಧಿಸುತ್ತದೆ.ಯಾರು ಇತರರ ಮೇಲೆ ಅಧಿಕಾರವನ್ನು ಹೊಂದಿರುತ್ತಾನೋ ಅವನು.

ಯೆಹೋವನು ಸಮಸ್ತವನ್ನು ಕ್ರಿಸ್ತನ ಪಾದಗಳ ಕೆಳಗೆ ಹಾಕಿದನು. ಇದಲ್ಲದೆ ಆತನನ್ನು ಎಲ್ಲದರ ಮೇಲೆ ಇರಿಸಿ ಸಭೆಗೆ ಶಿರಸ್ಸಾಗಿ ನೇಮಿಸಿದನು . ಸಭೆಯು ಆತನ ದೇಹವಾಗಿದೆ, ಎಲ್ಲವನ್ನೂ ಎಲ್ಲಾ ಸಂಬಂಧದಲ್ಲಿ ವ್ಯಾಪಿಸಿವಾತನಿಂದ ಅದು ಪರಿಪೂರ್ಣತೆಯುಳ್ಳದ್ದಾಗಿದೆ. (ಎಫೇಸ 1:22 ULB)

ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ನಿಮ್ಮ ಗಂಡಂದರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇಗಂಡನು ಹೆಂಡತಿಗೆ ತಲೆಯಾಗಿರುವನು ಕ್ರಿಸ್ತನೋ ಸಭೆ ಎಂಬ ದೇಹಕ್ಕೆ ರಕ್ಷಕನಾಗಿದ್ದಾನೆ. (ಎಫೇಸ 5:22-23 ULB)

ಯಜಮಾನ ಎಂಬುವವನು ಎಲ್ಲರಿಗೂ ಪೋಷಣೆನೀಡಿ ಕಾರ್ಯತತ್ಪರರಾಗುವಂತೆ ಮಾಡುತ್ತಾನೆ.

ಯಾರೊಬ್ಬರೂ ಇಬ್ಬರು ಯಜಮಾನರಿಗೆ , ಸೇವೆಮಾಡಲಾರರು.ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು., ಇಲ್ಲದೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರ ಮಾಡುವನು. ನೀವು ದೇವರನ್ನು ಹಣವನ್ನು ಎರಡನ್ನೂ ಹೊಂದಿಕೊಂಡು ಸೇವೆ ಮಾಡಲಾರಿರಿ. (ಮತ್ತಾಯ 6:24 ULB)

ದೇವರ ಸೇವೆ ಮಾಡುವುದೆಂದರೆ ದೇವರಿಂದ ಪ್ರೇರೇಪಣೆ ಹೊಂದಿರುವುದು ಎಂದು. ಹಣದ ಸೇವೆ ಮಾಡುವುದೆಂದರೆ ಹಣದ ವ್ಯಾಮೋಹಕ್ಕೆ ಒಳಗಾಗುವುದು ಎಂದು.

ಹೆಸರು – ಒಬ್ಬ ವ್ಯಕ್ತಿಯ ಹೆಸರನ್ನು ಪ್ರತಿನಿಧಿಸುತ್ತದೆ.

ನಿನ್ನ ದೇವರು ನಿನ್ನ ಹೆಸರಿಗಿಂತಲೂ ಸಲೋಮೋನನ ಹೆಸರನ್ನು ಪ್ರಸಿದ್ಧಿಗೆ ತರಲಿ.ರಾಜ್ಯವನ್ನು ನಿನ್ನ ಕಾಲದಲ್ಲಿ ಇದ್ದುದಕ್ಕಿಂತ ಅವನ ಕಾಲದಲ್ಲಿ ಹೆಚ್ಚು ಬಲಪಡಿಸಲಿ ಎಂದು ಅವನನ್ನು ಹರಸಿದ್ದಾನೆ. 1 ಅರಸು 1:47 (ULB)

ಐಗುಪ್ತದಲ್ಲಿ ವಾಸವಾಗಿರುವ ಯೆಹೋದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ ಯೆಹೋವನು ಇಂತೆನ್ನುತ್ತಾನೆ. ಆಹಾ ಕರ್ತನಾದ ಯೆಹೋವನ ಜೀವದಾಣೆ ಎಂದು ನನ್ನ ಹೆಸರನ್ನು ಬಾಯಿಂದ ನುಡಿಯಲಿಕ್ಕೆ ಐಗುಪ್ತದಲ್ಲಿ ಯಾವ ಯೆಹೂದ್ಯನೂ ಇನ್ನು ಇರನು ಎಂಬುದಾಗಿ ನನ್ನ ಮಹಾನಾಮದ ಮೇಲೆ ಆಣೆ ಇಟ್ಟಿದ್ದಾನೆ.…." (ಯೆರೇಮಿಯ 44:26 ULB)

ಒಬ್ಬ ವ್ಯಕ್ತಿಯ ಹೆಸರು ಪ್ರಸಿದ್ಧಿಯಾಗಿದೆ ಎಂದರೆ, ಆ ವ್ಯಕ್ತಿಯ ಹೆಸರು ಶ್ರೇಷ್ಠವಾಗಿದೆ ಎಂದು ಅರ್ಥ.

ಸ್ವಾಮಿ ಕೃಪೆಮಾಡು ; ನಿನ್ನ ಸೇವಕನಾದ ನನ್ನ ಪ್ರಾರ್ಥನೆಗೂ, ನಿನ್ನ ನಾಮಸ್ಮರಣೆಯಲ್ಲಿ ….ಆನಂದಿಸುವ ನಿನ್ನ ಭಕ್ತರ ಪ್ರಾರ್ಥನೆಗೂ ಕಿವಿಗೊಡು.ನಿನ್ನ ಸೇವಕನು ಈ ಹೊತ್ತು ಆ ಮನುಷ್ಯನ ದಯೆಗೆ ಪಾತ್ರನಾಗಿ ಕೃತಾರ್ಥನಾಗುವಂತೆ ಅನುಗ್ರಹಿಸಬೇಕೆಂದು ಪ್ರಾರ್ಥಸಿದನು. ನೆಹೆಮಿಯಾ1:11 (ULB)

ಒಬ್ಬ ವ್ಯಕ್ತಿಯ ಹೆಸರನ್ನು ಗೌರವಿಸ ಬೇಕೆಂದರೆ ಆ ವ್ಯಕ್ತಿಯನ್ನು ಗೌರವಿಸಿದಂತೆ.

ಹೆಸರು ಎಂಬುದು ಒಬ್ಬ ವ್ಯಕ್ತಿಯ ಪ್ರಸಿದ್ಧಿಯನ್ನು ಅಥವಾ ಜನಪ್ರಿಯತೆಯನ್ನು ಪ್ರತಿನಿಧಿಸುತ್ತದೆ.

ಇನ್ನು ಮೇಲೆ ನನ್ನ ಪರಿಶುದ್ಧ ನಾಮವನ್ನು ನಿಮ್ಮ ಬಲಿಗಳಿಂದಲೂ ಬೊಂಬೆಗಳಿಂದಲೂ ನೀವು ಅಪಕೀರ್ತಿಗೆ ಗುರಿಮಾಡುವುದೇ ಇಲ್ಲ. ಯೆಹೆಜ್ಕೇಲ20:39 (ULB)

ದೇವರ ನಾಮವನ್ನು ದೂಷಿಸುವುದ /ಅಪವಿತ್ರ ಮಾಡುವುದು ಎಂದರೆ ಆತನ ಹೆಸರಿನ ಪ್ರಖ್ಯಾತಿಯನ್ನು ಅಪಖ್ಯಾತಿಗೊಳಿಸಿದಂತಾಗುವುದು. ಜನರು ಆತನ ಬಗ್ಗೆ ಯೋಚಿಸಿದಂತೆ ಪ್ರಖ್ಯಾತಗೊಳಿಸಬೇಕು.

ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಘನ ನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು… ಯೆಹೆಜ್ಕೇಲ 36:23 (ULB)

ದೇವರ ನಾಮವನ್ನು ಪವಿತ್ರವಾಗಿಸುವುದು ಎಂದರೆ ಜನರು ದೇವರ ಹೆಸರನ್ನು ಪವಿತ್ರವೆಂದು ತಿಳಿದು ಮಹಿಮೆಪಡಿಸಬೇಕು.

ನಿನ್ನ ಸೇವಕರಾದ ನಾವು ನಿಮ್ಮ ದೇವರಾದ ಯೆಹೋವನ ನಾಮ ಮಹತ್ತಿನ ನಿಮಿತ್ತ ಬಹುದೂರ ದೇಶದಿಂದ ಬಂದಿದ್ದೇವೆ. ನಮ್ಮ ಹಿರಿಯರೋ, ದೇಶನಿವಾಸಿಗಳು ಆತನು ಐಗುಪ್ತದೇಶದಲ್ಲಿ ನಡೆಸಿದ ಮಹತ್ಕಾರ್ಯಗಳ ಬಗ್ಗೆ ಹೇಳುವುದನ್ನು ಕೇಳಿದ್ದೇವೆ. (ಯೆಹೋಶುವ 9:9 ULB)

ಜನರು ಯೆಹೋವನನ್ನು ಕುರಿತು ಕೇಳಿದ ಎಲ್ಲವೂ “ಯೆಹೋವನ ನಾಮಮಹಿಮ” ಮತ್ತು ಪ್ರಖ್ಯಾತಿಯನ್ನು ಕುರಿತು ಕೇಳಿದ್ದು.

ಮೂಗು ಯಾವಾಗಲೂ ಕೋಪವನ್ನು ಪ್ರತಿನಿಧಿಸುತ್ತದೆ.

ನಿನ್ನ ಗದರಿಕೆಯಿಂದಲೂ ಶ್ವಾಸ ಭರದಿಂದಲೂ . ಸಮುದ್ರದ ತಳವು ಕಾಣಿಸಿತು ಭೂಮಂಡಲದ ಅಸ್ತಿವಾರಗಳು ಕಾಣಿಸಿತು. (ದಾ.ಕೀ. 18:15 ULB)

ಶ್ವಾಸ ಭರದಿಂದ ಸಮುದ್ರದ ತಳ ಕಾಣಿಸಿತು. (ವಿಮೋಚನಾ ಕಾಂಡ 15:8 ULB)

ಆತನ ಮೂಗಿನಿಂದ, ಹೊಗೆಯು ಬಂತು: ಆತನ ಬಾಯಿಯಿಂದ ಅಗ್ನಿಜ್ವಾಲೆ ಹೊರಟುಸಿಕ್ಕಿದ್ದೆಲ್ಲವನ್ನೂ ದಹಿಸಿ ಕೆಂಡವನ್ನಾಗಿ ಮಾಡಿತು. (2 ಸಮುವೇಲ 22:9 ULB)

… ಇದು ಯೆಹೋವನ ಘೋಷಣೆ: ನಾನು ಸಿಟ್ಟಿನಿಂದ ಬುಸುಗುಟ್ಟುವೆನು!' (ಯೆಹಜ್ಕೇಲ38:18 ULB)

ಯಾರ ಮೂಗಿನಿಂದ ಹೊಗೆಯಂತೆ ಬಿಸಿಯುಸಿರು ಹೊರಬರುತ್ತದೋ ಅದು ಅವನ ಸಿಟ್ಟಿನ ತೀವ್ರತೆಯನ್ನು ತೋರಿಸುತ್ತದೆ.

ದುರಹಂಕಾರದ ನೋಟ- ದುರಹಂಕಾರದ ನೋಟ ದುರಭಿಮಾನವನ್ನು ಪ್ರತಿನಿಧಿಸುತ್ತದೆ.

ಹಮ್ಮಿನ ಕಣ್ಣುಳ್ಳವರನ್ನು ತಗ್ಗಿಸಿ ಬಿಡವನು ನೀನಲ್ಲವೋ! (ದಾ.ಕೀ 18:27 ULB)

ದುರಹಂಕಾರದ ನೋಟವುಳ್ಳ ಮನುಷ್ಯನು ದುರಭಿಮಾನದಿಂದ ಕೂಡಿರುತ್ತಾನೆ.

ದೀನ ದೃಷ್ಟಿಯುಳ್ಳವನನ್ನು .ದೇವರು ಮೇಲಕ್ಕೆತ್ತಿ ರಕ್ಷಿಸುವನು. (ಯೋಬ 22:29 ULB)

ದೀನ ದೃಷ್ಟಿಯುಳ್ಳ ಮನುಷ್ಯನು ನಿರಹಂಕಾರಿಯೂ, ವಿನಯಶೀಲನೂ ಆಗಿರುತ್ತಾನೆ.

ಎಂಬುದು ಗುಣಲಕ್ಷಣಗಳನ್ನು ಹಂಚಿಕೊಳ್ಳುತ್ತಾರೆ.

ಕುತಂತ್ರದ ಮಗನ ಯೋಜನೆ ಸಾಗದು . ಯಾವ ಕೆಡುಕನೂ ಅವನನ್ನು ತಗ್ಗಿಸಲಾರನು. (ದಾ.ಕೀ 89:22b ULB)

ಕುತಂತ್ರಿಯ ಮಗನು ಕುತಂತ್ರಿ.

ಸೆರೆಹೋದವರ ನರಳಿಕೆ ನಿನ್ನ ಗಮನಕ್ಕೆ ಬರಲಿ. ಸಾಯಲಿರುವ ನಿನ್ನ ಮಕ್ಕಳನ್ನು ನಿನ್ನ ಭುಜ ಮಹತ್ತಿನಿಂದ ಜೀವಂತವಾಗಿಸು. (ದಾ.ಕೀ.79:11 ULB)

ಇಲ್ಲಿ ಸಾಯಲಿರುವ ಮಕ್ಕಳು ಎಂದರೆ ಇತರರು ಕೊಲ್ಲಲು ಯೋಚಿಸಿರುವ ಜನರು.

ನಾವೆಲ್ಲರೂ ಮೊದಲು ಅವಿಧೇಯವಾಗಿದ್ದು, ಶರೀರ ಭಾವದ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರೆವೇರಿಸುತ್ತಾ ನಡೆದು ಇತರರಂತೆ ಸ್ವಭಾವ ಸಿದ್ಧರಾಗಿ ದೇವರ ಕೋಪಕ್ಕೆ ಗುರಿಯಾದವರಾಗಿದ್ದೇವೆ. (ಎಫೇಸ 2:3 ULB)

ಕೋಪಕ್ಕೆ ಗುರಿಯಾದವರು ಎಂದರೆ ದೇವರು ಅವರ ಬಗ್ಗೆ ತುಂಬಾ ಕೋಪಗೊಂಡಿದ್ದಾನೆ ಎಂದರ್ಥ.

ಭಾಷಾಂತರ ತಂತ್ರಗಳು

(ಸತ್ಯವೇದದಲ್ಲಿನ ಕಾವ್ಯಪ್ರತಿಮೆಗಳು - ಸಾಮಾನ್ಯ ರಚನೆಗಳು ಇದರ ಬಗ್ಗೆ ಇರುವ ಭಾಷಾಂತರ ತಂತ್ರಗಳನ್ನು ನೋಡಿ).


ವ್ಯವಸಾಯದ ಬಗ್ಗೆ ಸತ್ಯವೇದದಲ್ಲಿನ ಪ್ರತಿಮೆಗಳು
Translation Manual :: Just-in-Time Learning Modules :: Biblical Imagery :: Biblical Imagery - Common Patterns :: Biblical Imagery - Farming

ಸತ್ಯವೇದದಲ್ಲಿ ವ್ಯವಸಾಯದ ಬಗ್ಗೆ ತಿಳಿಸಿರುವ ಚಿತ್ರಣಗಳ ಉದಾಹರಣೆಗಳನ್ನು ಕೆಳಗಿನಂತೆ ಪಟ್ಟಿಮಾಡಿದೆ. ಇಲ್ಲಿ ಬರುವ ಎಲ್ಲಾ ದೊಡ್ಡ ಅಕ್ಷರಗಳು ಒಂದು ನಿರ್ದಿಷ್ಟ ಉದ್ದೇಶವನ್ನು ಪ್ರತಿನಿಧಿಸುತ್ತದೆ. ಈ ಪದವು ಪ್ರತಿಯೊಂದು ವಾಕ್ಯದಲ್ಲೂ ಬರಬೇಕೆಂದಿಲ್ಲ. ಆದರೆ ಈ ಕಾವ್ಯ ಪ್ರತಿಮೆಯ ಉದ್ದೇಶ ಪ್ರತಿನಿಧಿಸುವಿಕೆ ಅಗತ್ಯವಾಗಿ ಕಂಡು ಬರುತ್ತದೆ.

ತೋಟಗಾರ ದೇವರನ್ನು ಪ್ರತಿನಿಧಿಸಿದರೆ ದ್ರಾಕ್ಷಿ ತೋಟ ಆತನ ಆಯ್ದ ಜನರನ್ನು ಪ್ರತಿನಿಧಿಸುತ್ತದೆ.

ನನ್ನ ಪ್ರಿಯನಾದವನಿಗೆ ಗುಡ್ಡದ ಮೇಲೆ ಫಲವತ್ತಾದ ದ್ರಾಕ್ಷಿ ತೋಟವಿತ್ತು ಅವನು ತೋಟವನ್ನು ಅಗತೆ ಮಾಡಿ ಕಲ್ಲುಗಳನ್ನು ತೆಗೆದುಹಾಕಿ ಒಳ್ಳೆಯ ದ್ರಾಕ್ಷಿ ಸಸಿಗಳನ್ನು ಆಯ್ಕೆಮಾಡಿ ತಂದು ನೆಟ್ಟನು. ಆ ತೋಟದ ಮಧ್ಯದಲ್ಲಿ ಒಂದು ದ್ರಾಕ್ಷಿ ರಸ ತೆಗೆಯುವ ತೊಟ್ಟಿಯನ್ನು, ಒಂದು ಬುರುಜನ್ನು ಕಟ್ಟಿಸಿದನು ಅವನು ಒಳ್ಳೆ ದ್ರಾಕ್ಷಿ ಹಣ್ಣನ್ನು ನಿರೀಕ್ಷಿಸುತ್ತಿದ್ದನು ಆದರೆ ಅವನಿಗೆ ರುಚಿಯಿಲ್ಲದ ಕಾಡು ಹಣ್ಣಿನಂತಹ ದ್ರಾಕ್ಷಿ ದೊರೆಯಿತು. (ಯಶಾಯ 5:1-2)

ಪರಲೋಕ ರಾಜ್ಯವು ಒಬ್ಬ ಭೂಮಿಯ ಒಡೆಯನಿಗೆ ಹೋಲಿಕೆಯಾಗಿದೆ.ಅವನು ಮುಂಜಾನೆಯೇ ತನ್ನ ತೋಟದಲ್ಲಿ ಕೆಲಸ ಮಾಡಲು ಕೂಲಿ ಆಳುಗಳನ್ನು ನೇಮಿಸಿಕೊಳ್ಳಲು ಹೋದನು. (ಮತ್ತಾಯ 20:1 ULB)

ಒಬ್ಬ ಮನುಷ್ಯನಿಗೆ ಬೇಕಾದಷ್ಟು ವ್ಯವಸಾಯ ಭೂಮಿ ಇತ್ತು. ಅದರಲ್ಲಿ ದ್ರಾಕ್ಷಿ ಬಳ್ಳಿಗಳನ್ನು ನೆಟ್ಟು, ಅದರ ಸುತ್ತಲೂ ಬೇಲಿ ಹಾಕಿಸಿ ಅದರಲ್ಲಿ ದ್ರಾಕ್ಷಿಯ ರಸ ತೆಗೆಯುವ ಆಲೆ ಹಾಕಿಸಿ, ಕಾವಲು ಗೋಪುರ ಕಟ್ಟಿಸಿ ದ್ರಾಕ್ಷಿ ಬೆಳೆಯುವ ಒಕ್ಕಲಿಗರಿಗೆ ಕಾಯಲು ತಿಳಿಸಿ, ಬೆಳೆಯ ಬಗ್ಗೆ ಕಾಳಜಿ ವಹಿಸಲು (ಕೂಲಿ ಕೊಟ್ಟು) ತಿಳಿಸಿದನು. ನಂತರ ಕೆಲಸದ ಮೇಲೆ ಹೊರದೇಶಕ್ಕೆ ಹೊರಟು ಹೋದನು. (ಮತ್ತಾಯ 21:33 ULB)

ಭೂಮಿ ಜನರ ಹೃದಯವನ್ನು ಪ್ರತಿನಿಧಿಸುತ್ತದೆ (ಆಂತರಿಕ ಬೆಳವಣಿಗೆ)

ಯೆಹೋವನು ಯೆಹೂದದವರಿಗೂ, ಯೆರುಸಲೇಮಿನವರಿಗೂ ಹೀಗೆ ಹೇಳುತ್ತಾನೆ. ನಿಮ್ಮ ಹೊಲಗಳನ್ನು ಚೆನ್ನಾಗಿ ಉತ್ತು ಸಿದ್ಧಮಾಡಿ. ಮುಳ್ಳುಗಳಲ್ಲಿ ಬಿತ್ತಬೇಡಿ. (ಯೆರೇಮಿಯಾ 4:3 ULB)

ದೇವರ ರಾಜ್ಯದ ವಾಕ್ಯಗಳನ್ನು ಕೇಳಿದ ಕೆಲವರು ಅದನ್ನು ಅರ್ಥಮಾಡಿ ಕೊಳ್ಳಲಾರರು. ಇದು ರಸ್ತೆಯ ಬದಿಯಲ್ಲಿ ಬಿತ್ತಿದ ಬೀಜಗಳು. ಕೆಲವು ಬೀಜಗಳು ಮಣ್ಣಿಲ್ಲದೆ ಬಂಡೆಯಮೇಲೆ ಬಿದ್ದವು, ಅದನ್ನು ತಕ್ಷಣವೇ ಸಂತೋಷದಿಂದ ಸ್ವೀಕರಿಸಿದ ಜನರು ನಂತರ ಮರೆತು ಹೋಗುತ್ತಾರೆ. ಮುಳ್ಳುಗಿಡಗಳಲ್ಲಿ ಬಿದ್ದ ಬೀಜವು ಮುಳ್ಳುಗಿಡಗಳ ಬೆಳವಣಿಗೆಯಿಂದ ಮೊಳೆತು, ಬೆಳೆಯದೆ ಒಣಗಿ ಹೋದವು. ಇವು ವಾಕ್ಯವನ್ನು ಕೇಳಿದ ಜನರು ಈ ಲೋಕದ ಆಕರ್ಷಣೆಗಳಿಗೆ ಗುರಿಯಾಗಿ ಅದರ ಫಲವನ್ನು ಅನುಭವಿಸದೆ, ಐಶ್ವರ್ಯದಿಂದ ಉಂಟಾಗುವ ಮೋಸಕ್ಕೆ ಗುರಿಯಾಗುತ್ತಾರೆ. ಇನ್ನು ಕೆಲವು ಫಲವತ್ತಾದ ಭೂಮಿಯಲ್ಲಿ ಬಿದ್ದು ಒಳ್ಳೆಯ ಫಲವನ್ನು ನೂರರಷ್ಟು ನೀಡಿದವು. ಇವರೇ ವಾಕ್ಯಗಳನ್ನು ಕೇಳಿ ಅದನ್ನು ಅರ್ಥಮಾಡಿಕೊಂಡು ಅದರಂತೆ ನಡೆಯುವವರು. (ಮತ್ತಾಯ 13:19-23 ULB)

ಉಳದೆ ಇರುವ ಭೂಮಿಯನ್ನು ಉತ್ತು ಹದಗೊಳಿಸಿರಿ. ಏಕೆಂದರೆ ಆತನನ್ನು ಮೊರೆ ಹೋಗುವ ಸಮಯ ಬಂದಿದೆ. (ಹೋಶೇಯ 10:12 ULB)

ಬಿತ್ತುವುದು ಕ್ರಿಯೆಗಳನ್ನು ಅಥವಾ ಮನೋಧೋರಣೆಗಳನ್ನು ಪ್ರತಿನಿಧಿಸುತ್ತವೆ ಮತ್ತು ಕೊಯ್ಯವುದು ನ್ಯಾಯತೀರ್ಪು ಅಥವಾ ಪ್ರತಿಫಲವನ್ನು ಪ್ರತಿನಿಧಿಸುತ್ತದೆ.

ನಾನು ಗಮನಿಸಿದಂತೆ ಯಾರೂ ಅಧರ್ಮವನ್ನು ಬಿತ್ತುತ್ತಾರೋ. ಅವರು ಕೇಡನ್ನೇ ಕೊಯ್ಯುವರು. (ಕೇಡಿನ ಫಲವನ್ನು ಪಡೆಯುವರು) (ಯೋಬ 4:8 ULB) ಮೋಸಕ್ಕೆ ಒಳಗಾಗ ಬೇಡಿ. ದೇವರನ್ನು ಅಪಹಾಸ್ಯ ಮಾಡಬಾರದು. ಮನುಷ್ಯನು ತಾನು ಏನನ್ನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರ ಭಾವವನ್ನು ಕುರಿತು ಬಿತ್ತವವನು ಆ ಭಾವದಿಂದ ನಾಶನವನ್ನು ಕೊಯ್ಯುವನು., ಆತ್ಮನನ್ನು ಕುರಿತು ಬಿತ್ತುವವನು ಆತ್ಮದಿಂದ ನಿತ್ಯ ಜೀವವನ್ನು ಕೊಯ್ಯುವನು. (ಗಲಾತ್ಯದವರಿಗೆ ಬರೆದ ಪತ್ರಿಕೆ 6:7-8 ULB)

ಒಳ್ಳೆಯ ಜನರಿಂದ ಕೆಟ್ಟ ಜನರನ್ನು ಪ್ರತ್ಯೇಕಿಸುವುದನ್ನು ತೆನೆ ಒಕ್ಕುವುದು ಮತ್ತು ಅದನ್ನು ಕೇರುವ ಚಿತ್ರಣದ ಮೂಲಕ ಪ್ರತಿನಿಧಿಸ ಬಹುದು.


ಸತ್ಯವೇದದಲ್ಲಿನ ಚಿತ್ರಣಗಳು ಮಾನವ ನಡವಳಿಕೆ
Translation Manual :: Just-in-Time Learning Modules :: Biblical Imagery :: Biblical Imagery - Common Patterns :: Biblical Imagery - Human Behavior

ಮಾನವನ ನಡತೆಯ ಬಗ್ಗೆ ಕೆಲವು ಚಿತ್ರಣಗಳನ್ನು ಸತ್ಯವೇದದಲ್ಲಿ ಇರುವಂತೆ ಪಟ್ಟಿ ಮಾಡಿದೆ. ದೊಡ್ಡ ಅಕ್ಷರಗಳಲ್ಲಿ ಇರುವ ಪದಗಳು ಚಿತ್ರಣವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಪದದಲ್ಲೂ, ವಾಕ್ಯದಲ್ಲೂ ಈ ಪ್ರತಿಮೆ ಇರಬೇಕೆಂಬ ಅವಶ್ಯಕತೆ ಇಲ್ಲ. ಆದರೆ ಅದರ ಉದ್ದೇಶ ಪ್ರತಿನಿಧಿಸುವುದು ಅಗತ್ಯ.

ಕುಗ್ಗಿರುವ, ಬಾಗಿರುವ, ಎಂಬ ಪದಗಳು ನಿರುತ್ಸಾಹದ ಪದಗಳನ್ನು ಪ್ರತಿನಿಧಿಸುತ್ತದೆ.

ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನು ಕುಗ್ಗಿದವರನ್ನೆಲ್ಲಾ ಉದ್ಧರಿಸುವವನು ಆಗಿದ್ದಾನೆ . (ದಾ.ಕೀ 145:14 ULB)

ಜನ್ಮ ನೀಡುವಾಗ ಪಡುವ ವೇದನೆ /ಹೆರಿಗೆ ನೋವು ಪರಿಶ್ರಮವನ್ನು ಪ್ರತಿನಿಧಿಸುತ್ತದೆ. ಇದು ಹೊಸತನವನ್ನು ನೂತನ ಆಗಮನವನ್ನು ಸಾಧಿಸುವುದನ್ನು ಪ್ರತಿನಿಧಿಸುತ್ತದೆ.

ಚೀಯೋನ್ ಯುವತಿ , ಹೆರುವವಳಂತೆ , ಪ್ರಸವ ವೇದನೆಗೆ ಒಳಗಾಗು , ನೀನೀಗ ಪಟ್ಟಣದಿಂದ ಹೊರಟು, ಕಾಡಿನಲ್ಲಿ ವಾಸಿಸುತ್ತಾ ಬಾಬೆಲ್ ಪಟ್ಟಣ ಸೇರುವಿ. ಅಲ್ಲಿ ನಿನ್ನ ಉದ್ಧಾರವಾಗುವುದು. ಅಲ್ಲಿ ಯೆಹೋವನು ಶತ್ರುಗಳಿಂದ ನಿನ್ನನ್ನು ಬಿಡಿಸುವನು. (ಮೀಕಾ 4:10 ULB)

ಜನರ ವಿರುದ್ಧವಾಗಿ ಜನರು, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವುದು. ಅಲ್ಲಲ್ಲಿ ಬರಗಾಲವೂ, ಭೂಕಂಪಗಳು ಉಂಟಾಗುವವು. ಆದರೆ ಇದೆಲ್ಲಾ ನೂತನ ಕಾಲದ ಉದಯದ ಪ್ರಸವ ವೇದನೆಯ ಪ್ರಾರಂಭಪ್ರಸವ ವೇದನೆ. (ಮತ್ತಾಯ 24:7-8 ULB)

ನನ್ನ ಪ್ರಿಯ ಪುಟ್ಟ ಮಕ್ಕಳೇ, ಕ್ರಿಸ್ತನ ಸಾರೂಪ್ಯವು ನಿಮ್ಮಲ್ಲಿ ಉಂಟಾಗುವ ತನಕ ನಿಮಗೋಸ್ಕರ ಪುನಃ ಪ್ರಸವ ವೇದನೆಯನ್ನು ಅನುಭವಿಸುತ್ತೇನೆ. (ಗಲಾತ್ಯದವರಿಗೆ 4:19 ULB)

ಯಾವುದೇ ಒಂದು ವಸ್ತು ವಿಷಯದ ಬಗ್ಗೆ ಮಾತನಾಡುವುದು ಕರೆಯುವುದು ಎಂದರೆ ಆ ಪದದ ಬಗ್ಗೆ ಹೇಳುವುದು ಎಂದು ಅರ್ಥ.

ಪವಿತ್ರಾತ್ಮನು ಇಸ್ರಾಯೇಲರ ರಕ್ಷಕನಾದ ಸದಮಲಸ್ವಾಮಿಯು ನಿನ್ನ ನ್ಯಾಯ ಸ್ಥಾಪಕನಾಗಿದ್ದಾನೆ.ಸರ್ವಲೋಕದ ದೇವರೆಂಬ ನಾಮಧೇಯವನ್ನು ಹೊಂದಿರುವನು. (ಯೆಶಾಯ 54:5b ULB) ಏಕೆಂದರೆ ಇಡೀ ಲೋಕದ ಒಡೆಯನಾಗಿರುವಾತನೇ ಯೆಹೋವ ದೇವರು.

ಜ್ಞಾನವುಳ್ಳ ಹೃದಯವಂತರಿಗೆ ವಿವೇಕವುಳ್ಳವನು ಎಂಬ ಬಿರುದು ಬರುವುದು. (ಜ್ಞಾನೋಕ್ತಿ 16:21a ULB)

ಏಕೆಂದರೆ ನಿಜವಾಗಲೂ ಅವನು ವಿವೇಚಿಸುವವನಾಗಿರುತ್ತಾನೆ.

ಅವನು ಮಹಾ ಪುರುಷನಾಗಿ ಪರಾತ್ಪರನ ಕುಮಾರನೆನೆಸಿ ಕೊಳ್ಳುವನು. (ಲೂಕ 1:32 ULB)

ಏಕೆಂದರೆ ಆತನು ನಿಜವಾಗಲೂ ಮಹೋನ್ನತನಾದ ಪರಾತ್ಪರನ ಪುತ್ರನು.

ಪವಿತ್ರಾತ್ಮನಿಂದ ಹುಟ್ಟಿದ ಮಗನು ದೇವರ ಮಗನೆಂದು ಕರೆಸಿಕೊಂಡನು. (ಲೂಕ 1:35 ULB)

ಏಕೆಂದರೆ ಆತನು ದೇವರ ಮಗನೆಂಬುದು ನಿಜವಾದ ಸಂಗತಿ. ಏಕೆಂದರೆ ಚೊಚ್ಚಲು ಗಂಡುಮಕ್ಕಳೆಲ್ಲಾ, ಕರ್ತನಾದ ಯೆಹೋವನಿಗೆ ಮೀಸಲು ಎಂದು ತಿಳಿಸಿದೆ. (ಲೂಕ 2:23 ULB)

ಇದರ ಅರ್ಥವೇನೆಂದರೆ ನಿಜವಾಗಲೂ ದೇವರಿಗಾಗಿ ಮೀಸಲಾದವನು ಎಂಬುದನ್ನು ಈ ವಾಕ್ಯಗಳು ತಿಳಿಸುತ್ತವೆ.

“ಸ್ವಚ್ಛತೆ” / ಶುದ್ಧವಾದುದು ಎನ್ನುವ ಅಂಶ ದೇವರ ಉದ್ದೇಶಗಳನ್ನು ಸ್ವಿಕರಿಸುವಂತದ್ದನ್ನು ಪ್ರತಿನಿಧಿಸುವಂಥದ್ದು.

ನೋಹನು ಯೊಹೋವನಿಗಾಗಿ ಯಜ್ಞವೇದಿಕೆಯನ್ನು ನಿರ್ಮಿಸಿದನು.

ಅದರ ಮೇಲೆ ಶುದ್ಧವಾದ ಪ್ರಾಣಿಗಳನ್ನು ಶುದ್ಧವಾದ ಪಕ್ಷಿಜಾತಿಗಳನ್ನು ಸರ್ವಾಂಗ ಹೋಮಗಳನ್ನು ಯಜ್ಞದ ಮೂಲಕ ಅರ್ಪಿಸಿದನು. ಅದರ ಸುವಾಸನೆಯು ಎಲ್ಲೆಡೆ ವ್ಯಾಪಿಸಿತು ಗಮಗಮಿಸುತ್ತಿದ್ದ ಸರ್ವಾಂಗ ಹೋಮದ ಪರಿಮಳವನ್ನು ಯೆಹೋವನು ಆಘ್ರಾಣಿಸಿದನು. (ಆದಿಕಾಂಡ 8:20 ULB)

ಕುಷ್ಠ ರೋಗಿಯನ್ನು ಪ್ರತ್ಯೇಕವಾಗಿ ಇರಿಸಿ ಎರಡು ದಿನಗಳಾದ ಮೇಲೆ ಯಾಜಕನು ತಿರುಗಿ ಅವನನ್ನು ಪರೀಕ್ಷಿಸಿದಾಗ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಂಡಿದೆಯಾ ಎಂದು ಪರೀಕ್ಷಿಸುವನು ಚರ್ಮದಲ್ಲಿ ಹರಡಿಕೊಳ್ಳದೆ ಹೆಚ್ಚಾಗಿದ್ದರೆ ಯಾಜಕನು ಅದು ಬರೀ ಗುಳ್ಳೆ ಎಂದು ತಿಳಿದು ಅವನನನ್ನು ಶುದ್ಧನೆಂದು . ಘೋಷಿಸುವನು. ಅದೊಂದು ಚರ್ಮದ ತುರಿಕೆ. ಇಂಥಹವನು ನಂತರ ತನ್ನ ಬಟ್ಟೆಗಳನ್ನು ಒಗೆದು, ಸ್ನಾನಮಾಡಿ ಶುದ್ಧನಾಗುವನು. (ಯಾಜಕ ಕಾಂಡ 13:6 ULB)

ಸ್ವಚ್ಛಗೊಳಿಸುವುದು ಅಥವಾ ಶುದ್ಧಗೊಳಿಸುವುದು ದೇವರ ಉದ್ದೇಶಕ್ಕಾಗಿ ಸ್ವೀಕೃತವಾಗುವ ವಿಷಯವನ್ನು, ಕ್ರಿಯೆಯನ್ನು ಪ್ರತಿನಿಧಿಸುತ್ತದೆ.

ಜನಸಮೂಹಕ್ಕಾಗಿ ಪರಿಹಾರ ಮಾಡಿದ ನಂತರ ಯಾಜಕನು ಹೊರಗೆಬಂದು ಯೆಹೊವನ ಸನ್ನಧಿಯಲ್ಲಿರುವ ಯಜ್ಞವೇದಿಯ ಬಳಿಗೆ ಹೋಗಿ ಅದಕ್ಕಾಗಿ ದೋಷಪರಿಹಾರ ಮಾಡಬೇಕು. ಆ ಹೋರಿಯ ರಕ್ತದಲ್ಲಿಯೂ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಬೇಕು. ಆ ರಕ್ತದಲ್ಲಿ ಸ್ವಲ್ಪವನ್ನು ತೆಗೆದು ಯಜ್ಞವೇದಿಯ ಮೇಲೆ ಏಳು ಸಾರಿ ಬೆರಳಿನಿಂದ ಚಿಮುಕಿಸಿಇಸ್ರಾಯೇಲರಿಂದ ಅದಕ್ಕೆ ಉಂಟಾದ ಅಶುದ್ಧತ್ವವನ್ನು ನಿವಾರಿಸಿ ಅದನ್ನು ಪರಿಶುದ್ಧಗೊಳಿಸಬೇಕು . (ಯಾಜಕ ಕಾಂಡ 6:18-19 ULB)

ಪ್ರತಿಯೊಬ್ಬರು ಈ ದಿನದಲ್ಲಿ ಪರಿಶುದ್ಧರಾಗುವುದಕ್ಕಾಗಿ ನಿಮ್ಮ ದೋಷ ಪರಿಹಾರವಾಗುವುದು ಯೆಹೋವನ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ಪಾಪದೋಷಗಳು ನಿವಾರಣೆಯಾಗುವುದು (ಯಾಜಕ ಕಾಂಡ 16:30 ULB)

ಅಶುದ್ಧತ್ವವೆಂಬುದು ದೇವರ ಉದ್ದೇಶಕ್ಕಾಗಿ ನಿರಾಕರಿಸಲ್ಪಡುವುದನ್ನು ಪ್ರತಿನಿಧಿಸುತ್ತದೆ.

ಭೂಮಿಯ ಮೇಲೆ ಚಲಿಸುವ ಚತುಷ್ಪಾದ ಪ್ರಾಣಿಗಳಲ್ಲಿ ನೀವು ತಿನ್ನಬಹುದಾದ ಪ್ರಾಣಿಗಳೆಂದರೆ ಕಾಲ್ಗೊರಸು ಸೀಳಿರುವ ಮತ್ತು ತನ್ನ ಆಹಾರವನ್ನು ಮೆಲಕು ಹಾಕುವಂತದ್ದಾಗಿರಬೇಕು. ಆದರೆ ಯಾವ ಪ್ರಾಣಿ ಮೆಲಕು ಹಾಕಿದರೂ ಗೊರಸು ಸೀಳಿರದಿದ್ದರೆ ಅದನ್ನು , ತಿನ್ನಬಾರದು. ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲಕು ಹಾಕುವುದಿಲ್ಲವೋ ಅವುಗಳ ಮಾಂಸ ತಿನ್ನಬಾರದು , ಉದಾಹರಣೆಗೆ ಒಂಟೆಯು ಮೆಲಕುಹಾಕುವಂತದ್ದಾದರೂ ಸೀಳುಗೊರಸು ಇಲ್ಲವಾದುದರಿಂದ, ಬೆಟ್ಟದ ಮೊಲವು ಮೆಲಕು ಹಾಕುವಂಥದ್ದು ಆದರೆ ಸೀಳುಗೊರಸು ಇಲ್ಲವಾದುದರಿಂದ, ತಿನ್ನಲು ಅಶುದ್ಧವಾದುದು. ಹಂದಿಯ ಗೊರಸು ಸೀಳಿದೆ ಆದರೆ ಮೆಲಕು ಹಾಕುವುದಿಲ್ಲ ಆದುದರಿಂದ ಅದು ತಿನ್ನಲು ಅಶುದ್ಧ. ಆದುದರಿಂದ ನಿಮಗೆ ಒಂಟೆ ಮುಂತಾದುವು ಅಶುದ್ಧ. (ಯಾಜಕ ಕಾಂಡ11:3-4 ULB)

ಇವುಗಳ ಹೆಣವು ಯಾವ ವಸ್ತುವಿನ ಮೇಲೆ ಬೀಳುವುದೋ ಆ ವಸ್ತುವು ಅಶುದ್ಧವಾಗಿರುವುದು , ಅಂದರೆ ಮರದ ವಸ್ತುವಾಗಲಿ ಬಟ್ಟೆಯಾಗಲೀ, ಚರ್ಮವಾಗಲೀ, ಗೋಣಿಯಾಗಲೀ ಅದು ಅಶುದ್ದವಾಗುವುದು. ಇವು ಯಾವುದೇ ಆಗಿರಲಿ, ಯಾವ ಉಪಯೋಗಕ್ಕೂ ಬರದಿದ್ದರೂ ಅದನ್ನು ನೀರಿನಲ್ಲಿ ಸಾಯಂಕಾಲದವರೆಗೂ ನೆನಸಿಡಬೇಕು. ಸಾಯಂಕಾಲದವರೆಗೂಅಶುದ್ಧವಾಗಿರುತ್ತದೆ, ಸಾಯಂಕಾಲದ ನಂತರ ಶುದ್ಧವಾಗುತ್ತದೆ.. (ಯಾಜಕ ಕಾಂಡ 11:32 ULB)

ಕೆಲವು ವಸ್ತುಗಳನ್ನು ಅಶುದ್ಧಮಾಡುವುದು ದೇವರ ಉದ್ದೇಶಗಳಿಗೆ ಸ್ವೀಕೃತವಾಗಲು ಯೋಗ್ಯವಲ್ಲ ಎಂಬುದನ್ನು ಪ್ರತಿನಿಧಿಸುತ್ತದೆ.

ಯಾರಾದರೂ ಅಶುದ್ಧವಾದುದನ್ನು ಸ್ಪರ್ಷಿಸಿದರೆ ಅವನು ಅಶುದ್ಧನಾಗುತ್ತಾನೆ ,ಎಂದು ಯೆಹೋವನು ತಿಳಿಸಿದ್ದಾನೆ. ಯಾವನಿಗಾದರೂ ಅಶುದ್ಧವಾದ ಕಾಡುಮೃಗ, ಪಶು, ಜಂತು ಇವುಗಳ ಹೆಣವಾಗಲೀ, ಬೇರೆ ಯಾವ ಅಶುದ್ಧವಸ್ತುವಾಗಲೀ ತಗುಲಿದರೆ, ಅವನಿಗೆ ತಿಳಿಯದೆ ತಗುಲಿದರೂ ಅವನು ಅಶುದ್ಧನು , ಹಾಗೂ ದೋಷಿಯಾಗಿರುವನು . (ಯಾಜಕ ಕಾಂಡ 5:2 ULB)

ಯಾವುದರಿಂದಲಾದರೂ ಪ್ರತ್ಯೇಕಿಸಿದರೆ, ಕತ್ತರಿಸಿದರೆ/ ತುಂಡರಿಸಿದರೆ ಸಂಬಂಧಿಸಿದ ವ್ಯಕ್ತಿ, ವಸ್ತುವಿನಿಂದ ಬೇರ್ಪಡಿಸಿದ್ದನ್ನು ಪ್ರತಿನಿಧಿಸುತ್ತದೆ.

ಉಜ್ಜೀಯನು ಜೀವದಿಂದಿರುವವರೆಗೂ ಕುಷ್ಠರೋಗಿಯಾಗಿದ್ದು ಯೆಹೋವನ ಆಲಯಕ್ಕೆ ಬಾರದಂತೆ ಬಹಿಷ್ಕೃತನಾದನು ಅವನಿಗೆ ಬಂದ ಕುಷ್ಠದಿಂದ ಪ್ರತ್ಯೇಕಿಸಲ್ಪಟ್ಟು ಪ್ರತ್ಯೇಕವಾದ ಮನೆಯಲ್ಲಿ ವಾಸಿಸಬೇಕಾಯಿತು.(2 ಪೂರ್ವಕಾಲ ವೃತ್ತಾಂತ 26:21 ULB)

ಕತ್ತರಿಸುವುದು, ತುಂಡರಿಸುವುದು, ಎಂದರೆ ಕೊಲ್ಲುವುದನ್ನು ಪ್ರತಿನಿಧಿಸುತ್ತದೆ.

ನೀವು ಸಬ್ಬತ್ ದಿನವನ್ನು ದೇವರ ದಿನವೆಂದು ಭಾವಿಸಿ ಆಚರಿಸಬೇಕು, ಆತನಿಗಾಗಿ ಮೀಸಲಿಡಬೇಕು. ಸಬ್ಬತ್ ದಿನವನ್ನು ಅಪರಿಶುದ್ಧವೆಂದು ಎನಿಸುವವನಿಗೆ ಮರಣದಂಡನೆ ವಿಧಿಸ ಬೇಕು. ವಾರದ ಆರು ದಿನಗಳು ಕೆಲಸಮಾಡಿ, ಏಳನೆಯ ದಿನ ಕೆಲಸಮಾಡದೆ ಯೆಹೊವನಿಗೆ ಮೀಸಲಿಡಬೇಕು. ಆದಿನ ಕೆಲಸಮಾಡುವನನ್ನು ಕುಲದಿಂದಲೇ ಬಹಿಷ್ಕರಿಸಬೇಕು. . (ವಿಮೋಚನಾ ಕಾಂಡ 31:14-15 ULB)

ಯಾರಾದರೂ ಆದಿನ ತನ್ನನ್ನು ದೇವರ ಮುಂದೆ ತಗ್ಗಿಸಿಕೊಂಡು ಪ್ರಾರ್ಥಿಸದಿದ್ದರೆ ಅವನ . ಕುಲದಿಂದ ಬಹಿಷ್ಕರಿಸಬೇಕು. ಯಾರಾದರೂ ಆದಿನದಲ್ಲಿ . ಕೆಲಸವನ್ನು ಸ್ವಲ್ಪಸಮಯ ಮಾಡಿದರೂ ಇಸ್ರಾಯೇಲ್ ಜನಾಂಗದಿಂದಲೇ ಬಹಿಷ್ಕರಿಸಲ್ಪಡುವನು. (ಯಾಜಕ ಕಾಂಡ 23:29-30 ULB)

ಆದರೆ ಅಂತಹವನು ಜೀವಲೋಕದಿಂದಲೇ ತುಂಡರಿಸಲ್ಪಡುತ್ತಾನೆ (ಯೆಶಾಯ 53:8 ULB)

ಯಾರ ಮುಂದಾದರೂ ಗೌರವ ಪೂರ್ವಕವಾಗಿ ಒಬ್ಬನು ಬಂದು ನಿಂತರೆ ಆತನನ್ನು ಅನುಸರಿಸುತ್ತಾನೆ, ಆತನ ಮಾತಿನಂತೆ ನಡೆಯುತ್ತಾನೆ ಎಂದು ಅರ್ಥ /ಎಂಬುದನ್ನು ಪ್ರತಿನಿಧಿಸುತ್ತದೆ.

ನಿನ್ನ ಪ್ರಜೆಗಳು ಸದಾ ನಿನ್ನ ಮುಂದೆ ನಿಂತುಕೊಂಡು ನಿರಂತರವೂ ಜ್ಞಾನವಾಕ್ಯಗಳನ್ನು ಕೇಳುವ ನಿನ್ನ ಸೇವೆ ಮಾಡುವ ಸೇವಕರು ಧನ್ಯರು. (1 ನೇ ಅರಸು 10:8 ULB)

ನಂಬಿಕೆಯ ಒಡಂಬಡಿಕೆ,ನೀತಿ ಸತ್ಯತೆಗಳು ನಿನ್ನಿಂದ ದೊರೆತವು . (ದಾ.ಕೀ. 89:14 ULB)

ನೀತಿ ನ್ಯಾಯಗಳು ನಿನ್ನ ಸಿಂಹಾಸನದ ಆಸ್ಥಿವಾರಗಳು ನಂಬಿಕೆಯ ಒಡಂಬಡಿಕೆ ಹಾಗೂ ವಿಶ್ವಾಸಗಳು ನಿನ್ನ ಸಾನ್ನಿಧ್ಯ ಧೂತರು, ಪ್ರೀತಿ ಸತ್ಯತೆಗಳೇ ಎಲ್ಲವನ್ನು ವ್ಯಕ್ತೀಕರಣಗೊಳಿಸಿದೆ. (Personification).

ಮದ್ಯಸೇವನೆ ನೋವನ್ನು ಪ್ರತಿನಿಧಿಸಿದರೆ ದ್ರಾಕ್ಷಾರಸ ನ್ಯಾಯತೀರ್ಪನ್ನು ಪ್ರತಿನಿಧಿಸುತ್ತದೆ.

ಅತಿಯಾದ ದ್ರಾಕ್ಷಾರಸ (wine) ಸೇವನೆ ಸಹ ಒಬ್ಬ ವ್ಯಕ್ತಿಯನ್ನು ಬಲಹೀನನನ್ನಾಗಿ ಮತ್ತು ತೂರಾಡುವಂತೆ ಮಾಡುತ್ತದೆ. ದೇವರು ನ್ಯಾಯ ತೀರ್ಪು ಮಾಡಲು ಬಂದಾಗ ಈ ಜನರು ಬಲಹೀನರಾಗಿ, ಧೈರ್ಯಗುಂದಿ ತೂರಾಡುವರು. ಆದುದರಿಂದ ದ್ರಾಕ್ಷಾರಸ (wine) ಎಂಬುದು ದೇವರ ನ್ಯಾಯತೀರ್ಪನ್ನು ಪ್ರತಿನಿಧಿಸುತ್ತದೆ

ನಿನ್ನ ಜನರನ್ನು ಸಂಕಟಕ್ಕೆ ಗುರಿಮಾಡಿರುವೆ. ನೀನು ನಮಗೆ ಬುದ್ಧಿ ಭ್ರಮಣೆ ಉಂಟುಮಾಡುವ ಮದ್ಯವನ್ನು (wine) ದ್ರಾಕ್ಷಾರಸವನ್ನು ಕುಡಿಸಿ ತೂರಾಡುವಂತೆ ಮಾಡಿರುವಿ.. (ದಾ.ಕೀ 60:3 ULB)

ದಾವೀದನ ಕೀರ್ತನೆಯಿಂದ ಇನ್ನೊಂದು ಉದಾಹರಣೆ.

ಆದರೆ ದೇವರೇ ನ್ಯಾಯಾಧಿಪತಿಯು. ಆತನು ನ್ಯಾಯಧೀಶನಾಗಿ ಒಬ್ಬನನ್ನು ಬದಿಗೊತ್ತಿ ಇನ್ನೊಬ್ಬನನ್ನು ನೋಯಿಸುತ್ತಾನೆ. ಯೆಹೋವನ ಕೈಯಲ್ಲಿ ಉಕ್ಕುವ ದ್ರಾಕ್ಷಾರಸದ ಪಾತ್ರೆಯಿದೆ , ಅದರಲ್ಲಿ ಔಷಧೀಯ ಗುಣವುಳ್ಳ ಮೂಲಿಕೆಗಳ ರಸ ಮಿಶ್ರಣವಾಗಿದೆ, ಅದನ್ನು ನಮಗೆ ಹಂಚುತ್ತಾನೆ. ಲೋಕದದಲ್ಲಿರುವ ಎಲ್ಲಾ ದುಷ್ಟರು ಅದರಲ್ಲಿರುವ ದ್ರಾಕ್ಷಾರಸವನ್ನು ಕೊನೆ ಹನಿಯವರೆಗೂ ಕುಡಿದು ಮುಗಿಸಬೇಕಿದೆ. (ದಾ.ಕೀ 75:8 ULB)

ಪ್ರಕಟಣೆ ಗ್ರಂಥದಿಂದ ಒಂದು ಉದಾಹರಣೆ.

ವಿಗ್ರಹ ಆರಾಧನೆ ಮಾಡಿ ದೇಹದ ಮೇಲೆ ಗುರುತು ಹಾಕಿಸಿಕೊಂಡವನು ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರೆಸದೆದ್ರಾಕ್ಷಾರಸ ಹಾಕಿದ ದೇವರ ರೌದ್ರವೆಂಬ ದ್ರಾಕ್ಷಾರಸ ವನ್ನು ಕುಡಿಯುವರು, ಪರಿಶುದ್ಧ ದೇವದೂತರ ಮುಂದೆಯೂ, ಯಜ್ಞದ ಕುರಿಯದಾತನ ಮುಂದೆಯೂ ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆ ಅನುಭವಿಸುವನು. (ಪ್ರಕಟಣೆ 14:10 ULB)

ತಿನ್ನುವುದು ಎಂದರೆ ನಾಶನವನ್ನು ಪ್ರತಿನಿಧಿಸುತ್ತದೆ.

ದೇವರು [ಇಸ್ರಾಯೇಲರನ್ನು]ಐಗುಪ್ತ ದೇಶದಿಂದ ಕರೆತಂದನು ಅವರು ಕಾಡುಕೋಣದಷ್ಟು ಬಲವುಳ್ಳವರು. ಆತನ ವಿರುದ್ಧ ಹೇಳುವ ಶತ್ರು ರಾಜ್ಯಗಳನ್ನು ನಿರ್ಮೂಲ ಮಾಡಿ ಬಿಡುವನು. ಅವರ ಎಲುಬುಗಳನ್ನು ಮುರಿದು ಹಾಕುವನು. ತನ್ನ ಬಾಣಗಳಿಂದ ಅವರನ್ನು ಗಾಯಪಡಿಸುವನು. ಅರಣ್ಯ ಕಾಂಡ 24:8 ULB)

“ತಿನ್ನುವುದು”(“eat up”) ಎಂಬ ಪದದ ಇನ್ನೊಂದು ಅರ್ಥ ಅತ್ಯಾಶೆಯಿಂದ ಮುಕ್ಕುವುದು, ಧ್ವಂಸಮಾಡು, ನಾಶಮಾಡುವುದು ಎಂದು.

ಅವರು ಸದಮಲಸ್ವಾಮಿಯ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದ ಅಗ್ನಿಯ ನಾಲಿಗೆಗಳು ಒಣಕೂಳೆಯನ್ನು ದಹಿಸಿ ಬಿಡುವ ಹಾಗೆ ನಾಶವಾಗುವುದು , ಒಣಹುಲ್ಲು ಬೆಂಕಿಯಲ್ಲಿ ಸುಟ್ಟುಹೋಗುವಂತೆ, ಬೇರುಕೊಳೆತು, ಅವುಗಳ ಹೂವು ಅರಳದೆ ಧೂಳಾಗಿ ತೂರಿಹೋಗುವುದು. (ಯೆಶಾಯ 5:24 ULB)

ಯೆಶಾಯನು ಬರೆದ ಪ್ರವಾದನ ಗ್ರಂಥದಿಂದ ಮತ್ತೊಂದು ಉದಾಹರಣೆ.

ಯೆಹೋವನು ರೆಚೀನನ ವೈರಿಗಳನ್ನು ಅವರಿಗೆ ವಿರುದ್ಧವಾಗಿ ಹೆಚ್ಚಿಸಿದ್ದಾನೆ. ಅವರ ಮುಂದೆ ಪೂರ್ವದಲ್ಲಿ ಆರಾಮ್ಯರನ್ನು ಅವರ ಹಿಂದೆ ಫಿಲಿಪ್ಪಿಯರನ್ನು ಪಶ್ಚಿಮದಲ್ಲಿ ಎಬ್ಬಿಸಿದ್ದಾನೆ. ಇವರು ಇಸ್ರಾಯೇಲರನ್ನು ಬಾಯಿತೆರೆದು ನುಂಗಿಬಿಟ್ಟಿದ್ದಾರೆ . (ಯೆಶಾಯ 9:11-12 ULB)

ಧರ್ಮೋಪದೇಶಕಾಂಡದಿಂದ ಒಂದು ಉದಾಹರಣೆ.

ನನ್ನ ಬಾಣಗಳನ್ನು ರಕ್ತವನ್ನು ಕುಡಿದು ಮತ್ತಿನಿಂದ ತುಂಬುವಂತೆ ಮಾಡುವೆನು. ನನ್ನ ಖಡ್ಗವು ರಕ್ತಮಾಂಸವನ್ನು ಭಕ್ಷಿಸುತ್ತದೆ. ನನ್ನ ಕತ್ತಿಯು ಕೊಲ್ಲಲ್ಪಟ್ಟ ಶತ್ರುಗಳ ರಕ್ತಮಯವಾಗಿದೆ. ಇವು ಶತ್ರುಗಳಲ್ಲಿರುವ ವೀರರ ತಲೆಗಳನ್ನು ಚೆಂಡಾಡುತ್ತದೆ. (ಧರ್ಮೋಪದೇಶ ಕಾಂಡ 32:42 ULB)

ಮೇಲೆ ಬೀಳುವುದು ಅಥವಾ “ ಮೇಲೆ ಇರುವುದು ಎಂಬ ಪದ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ.

ಯೆಹೋವ ದೇವರು ಆ ಮನುಷ್ಯನಿಗೆ ಗಾಢ ನಿದ್ರೆಯನ್ನು ಬರಮಾಡಿ ದನುಆ ಮನುಷ್ಯನು ಗಾಢವಾಗಿ ನಿದ್ರಿಸಿದನು (ಆದಿಕಾಂಡ 2:21 ULB)

ಆತನ ಶ್ರೇಷ್ಠತೆಯು ನಿಮ್ಮನ್ನು ಹೆದರಿಸುವುದಿಲ್ಲವೇ ? ಆತನ ಮೇಲಿರುವ ಭಯವು ನಿಮ್ಮ ಮೇಲೆ ಬೀಳುವುದಿಲ್ಲವೇ? (ಯೋಬಾ13:11 ULB)

ಆಗ ಯೆಹೋವನ ಆತ್ಮವು ನನ್ನಲ್ಲಿ ಪ್ರವೇಶಿಸಲು ನನಗೆ ಹೀಗೆ ಸಾರಬೇಕೆಂದು ಅಪ್ಪಣೆಯಾಯಿತು (ಯೆಹಜ್ಜೇಲ 11:5 ULB)

ಯೆಹೋವನು ನಿನ್ನ ಮೇಲೆ ಕೈ ಎತ್ತಿದ್ದಾನೆ ನೀನು ಕುರುಡನಾಗಿ ಕೆಲವು ಕಾಲ, ಸೂರ್ಯನನ್ನು ಕಾಣದೆ ಇರುವಿ. (ಅಪೋಸ್ತಲರ ಕೃತ್ಯಗಳು13:11 ULB)

ಯಾರನ್ನಾದರೂ ಅನುಸರಿಸುವುದು ಎಂದರೆ ದೇವರೊಂದಿಗೆ ಪ್ರಾಮಾಣಿಕವಾಗಿರುವುದು ಎಂಬುದನ್ನು ಪ್ರತಿನಿಧಿಸುತ್ತಾರೆ.

ಅವರು ಅವನನ್ನು ಯೆಹೋವ ದೇವರಿಂದ ದೂರವಾಗದಂತೆ. ಐಗುಪ್ತ ದೇಶದಿಂದ ಅವರ ಪೂರ್ವಜರನ್ನು ಬಿಡುಗಡೆ ಮಾಡಿ ಕರೆತಂದದ್ದನ್ನು ಮರೆತರು. ತಮ್ಮ ಮನಸ್ಸನ್ನು ಅನ್ಯ ದೇವರುಗಳ ಕಡೆ ತಿರುಗಿಸಿದರು , ಅವನು ತನ್ನ ತಂದೆಯಾದ ದಾವೀದನಂತೆ ನಡೆಯಲಿಲ್ಲ. ಅವರು ಅವರ ದೇವತೆಗಳಿಗೆ ಅಡ್ಡಬಿದ್ದು ನಮಸ್ಕರಿಸಿದರು. ಅವರು ಯೆಹೋವನನ್ನು ಅಷ್ಟೋರೆತ್ ದೇವತೆಗಳನ್ನು, ಬಾಳ ದೇವತೆಗಳನ್ನು ಪೂಜಿಸಿ ಯೆಹೋವನ ಕೋಪವನ್ನು ಹೆಚ್ಚಿಸಿದರು.

ಸಲಮೋನನು ಅನ್ಯದೇವತೆಗಳ ಕಡೆಗೆ ತಿರುಗಿಕೊಂಡು ಅಷ್ಟೋರೆತ್ ಚಿದೋನ್ಯರ ದೇವತೆಗಳನ್ನು ಅಮೋನಿಯರು, ಮಿಲ್ಕೋಮ್ ದೇವತೆಗಳನ್ನು, ಅವುಗಳ ವಿಗ್ರಹಗಳನ್ನು ಪೂಜಿಸ ತೊಡಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.(1 ನೇ ಅರಸು11:5 ULB)

ನಾನು ನಡೆಸಿರುವ ಮಹತ್ಕಾರ್ಯಗಳನ್ನು, ನನ್ನ ಮಹಿಮೆಯನ್ನು ನೋಡಿದರೂ ನನ್ನ ಮಾತಿಗೆ ಕಿವಿಗೊಡದೆ ಪದೇ ಪದೇ ನನ್ನನ್ನು ಪರೀಕ್ಷಿಸಿದ್ದರಿಂದ ನಾನು ಅವರ ಪಿತೃಗಳಿಗೆ ವಾಗ್ದಾನಮಾಡಿದ ದೇಶವನ್ನು ಇವರಲ್ಲಿ ಯಾರೂ ಕಾಣುವುದಿಲ್ಲ.ನನ್ನ ದಾಸನಾದ ಕಾಲೇಬನು ಮನಃ ಪೂರ್ವಕವಾಗಿ ನನ್ನ ಮಾತನ್ನು ಅನುಸರಿಸಿ ನಡೆದುದರಿಂದ ;ಅವನನ್ನೇ ಅವರು ಸಂಚರಿಸುವ ದೇಶದಲ್ಲಿ ಸೇರಿಸುವೆನು. ಅವನ ಸಂತತಿಯವರು ಅದನ್ನು ಸ್ವಾಧೀನ ಪಡಿಸಿಕೊಳ್ಳುವರು. (ಅರಣ್ಯಕಾಂಡ14:23-24 ULB)

ಜೊತೆಯಾಗಿ ಹೋಗುವುದು, ಮುಂದೆ ಹೊಗುವುದು, ಅಥವಾ ಇತರ ಸೇವಕರೊಂದಿಗೆ ರಾಜನನ್ನು ಹಿಂಬಾಲಿಸುವುದು ಎಂದರೆ ಅವನ ಸೇವೆ ಮಾಡುವುದು ಎಂದರ್ಥ.

ಇಗೋ ನಿನ್ನ ರಕ್ಷಣೆಯು ಸಮೀಪವಾಯಿತು. ಯೆಹೋವನು ದಯಪಾಲಿಸುವ ಬಹುಮಾನವು ಆತನೊಂದಿಗೆ , ಆತನು ಅನುಗ್ರಹಿಸುವ ಪ್ರತಿಫಲವು ಆತನ ಮುಂದಿದೆ . (ಯೆಶಾಯ 62:11 ULB)

ನೀತಿಯು ಆತನ ಮುಂದೆ ಹೋಗುತ್ತಾನಾವು ಆತನ ಹೆಜ್ಜೆ ಅನುಸರಿಸಿ ಹೋಗಲು ದಾರಿ ಮಾಡುತ್ತದೆ. (ದಾ.ಕೀ. 85:13 ULB)

INHERITING ಪಿತ್ರಾರ್ಜಿತವಾಗಿ ಪಡೆಯುವುದು ಎಂದರೆ ಆಸ್ತಿಯನ್ನು, ವಸ್ತುವನ್ನು ಶಾಶ್ವತವಾಗಿ ಪಡೆಯುವುದು ಎಂದು ಅರ್ಥ.

ಮಹಿಮೆಯಿಂದ ಕೂಡಿಬರುವ ಮನುಷ್ಯಕುಮಾರನು ತನ್ನ ಬಲಗಡೆಯಲ್ಲಿರುವವರಿಗೆ ತನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾಧಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ಥ್ಯವಾಗಿ ಪಡೆದುಕೊಳ್ಳಿರಿ (ಮತ್ತಾಯ 25:34)

ದೇವರ ಸಂಪೂರ್ಣ ಆಶೀರ್ವಾದವು ದೇವರು ಯಾರನ್ನೂ ಉದ್ದೇಶಿಸಿ ಮಾತನಾಡುತ್ತಿದ್ದಾನೋ ಅವರಿಗೆ ಶಾಶ್ವತವಾಗಿ ನೀಡುವನು.

ಸಹೋದರ ಸಹೋದರಿಯರೇ ನಾನು ಹೇಳುವುದೇನೆಂದರೆ ರಕ್ತಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗಲಾರದು . ಲಯವಾಗುವ ವಸ್ತು ನಿರ್ಲಯ ಪದವಿಗೆ ಬಾಧ್ಯವಾಗುವುದಿಲ್ಲ, ಇದು ಶಾಶ್ವತವಲ್ಲ (1 ಕೊರಿಂಥ 15:50 ULB)

ನಶ್ವರವಾಗುವ ದೇಹವನ್ನು ಹೊಂದಿರುವ ಜನರು ದೇವರ ರಾಜ್ಯವನ್ನು ಅದರ ಸಂಪೂರ್ಣ ರೂಪದಲ್ಲಿ ಶಾಶ್ವತವಾಗಿ ಸ್ವಾಧೀನ ಮಾಡಿಕೊಳ್ಳುವರು.

ಪಿತ್ರಾರ್ಜಿತ ವಾದುದು ಎಂದರೆ ಜನರು ತಮ್ಮ ವಂಶಪಾರಂಪರ್ಯವಾಗಿ ಬಂದವುಗಳನ್ನು ಶಾಶ್ವತವಾಗಿ ಸ್ವಾಸ್ಥ್ಯ ಮಾಡಿಕೊಳ್ಳುವುದು ಎಂದು ಅರ್ಥ

ನೀನು ಅವರನ್ನು ನಿನ್ನ ಸ್ವಕೀಯ ದೇಶವಾಗಿರುವ ಬೆಟ್ಟದ ಸೀಮೆಗೆ ತಂದು ಸ್ಥಾಪಿಸು .(ವಿಮೋಚನಾ ಕಾಂಡ15:17 ULB)

ಯಾವ ಬೆಟ್ಟದಲ್ಲಿ ದೇವರನ್ನು ಶಾಶ್ವತವಾಗಿ ಆರಾಧಿಸಿದರೋ ಅದೇ ಆತನ ಶಾಶ್ವತ ಸ್ಥಳ.

ನಮ್ಮ ಜನರು ಮೊಂಡರೇ, ಆದಾಗ್ಯೂ ನೀನು ನಮ್ಮ ಪಾಪಗಳನ್ನು, ಅಧರ್ಮಗಳನ್ನು ಕ್ಷಮಿಸಿ ನಿನ್ನ ಜನರಾಗುವಂತೆ ನಮ್ಮನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದನು (ವಿಮೋಚನಾ ಕಾಂಡ 34:9 ULB)

ಮೋಶೆಯು ದೇವರ ಬಳಿ ಇಸ್ರಾಯೇಲರ ತಪ್ಪೆಲ್ಲವನ್ನು ಕ್ಷಮಿಸಿ ತನ್ನ ವಿಶೇಷಜನರೆಂದು ಸ್ವೀಕರಿಸುವಂತೆ ಪ್ರಾರ್ಥಿಸುತ್ತಾನೆ, ಹಾಗೆಯೇ ಅವರು ದೇವರ ಶಾಶ್ವತ ಸ್ವಾಸ್ಥ್ಯವಾಗಿರುವುದರಿಂದ ಸ್ವೀಕರಿಸಲು ಕೋರುತ್ತಾನೆ.

ಆತನ ಅತಿಶಯವಾದ ಪ್ರೀತಿಯು, ಮಹಿಮಾತಿಶಯವು ದೇವಜನರೆನಿಸಿ ಕೊಂಡವರಿಗಾಗಿಶಾಶ್ವತ ಸ್ವಾಸ್ಥ್ಯವನ್ನು ಅನುಗ್ರಹಿಸುತ್ತದೆ. (ಎಫೇಸ 1:18 ULB)

ಆತನಿಂದ ಕರೆಸಿಕೊಂಡವರು ನಿರೀಕ್ಷಿಸುವ ಪದವಿ ಎಂಥದೆಂಬುದನ್ನು, ದೇವಜನರೆಂಬ ಸಂತತಿ ಆತನ ಸ್ವಾಸ್ಥ್ಯದ ಮಹಿಮಾತಿಶಯವನ್ನು ಶಾಶ್ವತವಾಗಿ ನಂಬುವವರಾಗುತ್ತಾರೆ.

ಸಂತತಿ ಎಂದರೆ ಒಬ್ಬನು ಶಾಶ್ವತವಾಗಿ ತನ್ನ ಹುಟ್ಟು ಮತ್ತು ಸಂಬಂಧವನ್ನು ಗುರುತಿಸಿಕೊಳ್ಳುವುದು.

ನೀನು ಬಾಧ್ಯನಾಗುವೀ ಎಂಬ ವಾಗ್ದಾನವು ಅಭಿಪ್ರಾಯವಾಗಲೀ, ಅವನ ಸಂತತಿಯವರಾಗಲೀ ಧರ್ಮಶಾಸ್ತ್ರದಿಂದ ಆದಲ್ಲಿ, ನಂಬಿಕೆ ಎಂಬ ನೀತಿಯಿಂದ ಆದದ್ದು . (ರೋಮಪುರದವರಿಗೆ ಬರೆದ ಪತ್ರಿಕೆ 4:13 ULB)

ಈ ವಾಗ್ದಾನವು ಅಬ್ರಹಾಮನ ಸಂತತಿಯವರೆಲ್ಲರಿಗೂ ಅಂದರೆ ಧರ್ಮಶಾಸ್ತ್ರವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರವಲ್ಲದೆ ಅಬ್ರಹಾಮನಲ್ಲಿ ಇದ್ದಂಥಹ ನಂಬಿಕೆಯುಳ್ಳವರಿಗೆ ಶಾಶ್ವತವಾಗಿ ದೊರೆಯುವುದು. ವಿವಿಧ ಸಂದರ್ಭಗಳಲ್ಲಿ ವಿಧವಿಧವಾಗಿ ಮಾತನಾಡಿದ ದೇವರು ಈ ಅಂತ್ಯದಿನದಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತನಾಡಿದ್ದಾನೆ

ವಿವಿಧ ಸಂದರ್ಭಗಳಲ್ಲಿ ವಿಧವಿಧವಾಗಿ ಮಾತನಾಡಿದ ದೇವರು ಈ ಅಂತ್ಯದಿನದಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತನಾಡಿದ್ದಾನೆ ಈತನ ಮೂಲಕವೇ ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಿದನು. (ಇಬ್ರಿಯ 1:2 ULB)

ದೇವರ ಮಗನು ಎಲ್ಲವನ್ನೂ ಶಾಶ್ವತ ಸ್ವಾಸ್ಥ್ಯವನ್ನಾಗಿ ಸ್ವೀಕರಿಸುವನು.

ನಂಬಿಕೆಯಿಂದಲೇ ನೋಹನು ಅದುವರೆಗೂ ಕಾಣದಿದ್ದ ಸಂಗತಿಗಳ ವಿಷಯವಾಗಿ ದೈವೋಕ್ತಿಯನ್ನು ಹೊಂದಿಭಯಭಕ್ತಿಯುಳ್ಳವನಾಗಿ ನೀತಿಯುಳ್ಳವನಾಗಿ ವಿಶ್ವಾಸದಿಂದ ದೇವರ ಸಂತತಿಯಾಗಿ ನಡೆದುಕೊಂಡ (ಇಬ್ರಿಯ 11:7 ULB)

ನೋಹನು ನೀತಿಯನ್ನು ಶಾಶ್ವತ ಸ್ವಾಸ್ಥ್ಯವಾಗಿ ಪಡೆದುಕೊಂಡ.

LYING DOWN ಕೆಳಗೆ ಬೀಳುವುದು ಎಂದರೆ DYING ಸಾಯುವುದು ಎಂದರ್ಥ

ನಿನ್ನ ಆಯುಷ್ ಕಾಲವು ಮುಗಿದು ನೀನು ನಿನ್ನ ಪಿತೃಗಳ ಬಳಿಗೆ ಸೇರುವಾಗ , ನಿನ್ನಿಂದ ಹುಟ್ಟಿದವನನ್ನು ನೆಲೆಗೊಳಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು, (2 ಸಮುವೇಲ 7:12 ULB)

ನೀನು ಸೌಂದರ್ಯದಲ್ಲಿ ಯಾರಿಗೆ ಕಡಿಮೆ ಇಳಿದು ಹೋಗಿ ಸುನ್ನತಿಹೀನರ ನಡುವೆ ಒರಗು !’ ಅವರು ಖಡ್ಗಹತರಾಗಿ ಅವರ ಮಧ್ಯದಲ್ಲಿ ಬೀಳುವರು. ಐಗುಪ್ತ ದೇಶವನ್ನು ಖಡ್ಗಗಳಿಗೆ ಗುರಿಮಾಡಿದೆ, ಅದರ ಶತೃಗಳು ಹೊಂಚುಹಾಕುತ್ತಾ ಇಸ್ರಾಯೇಲರನ್ನು ಮತ್ತೆ ಗುಲಾಮರಂತೆ ಮಾಡಲು ಕಾಯುತ್ತಿದ್ದಾರೆ. (ಯೆಹೆಜ್ಕೇಲ 32:19-20 ULB)

ಆಳುವುದು ಅಥವಾ ಆಡಳಿತ ನಡೆಸುವುದು ಎಂದರೆ ಅಧೀನದಲ್ಲಿಟ್ಟುಕೊಂಡು ನಿಭಾಯಿಸುವುದು.

ಪಾಪವು ಮರಣವನ್ನುಂಟು ಮಾಡುತ್ತಾಅಧಿಕಾರವನ್ನು ನಡೆಸಿದ ಹಾಗೆ ದೇವರ ಕೃಪೆಯು ನಮ್ಮ ಕರ್ತನಾದ ಯೇಸುಕ್ರಿಸ್ತನ ಮೂಲಕ ನೀತಿಯನ್ನು ಕೊಟ್ಟು ನಿತ್ಯ ಜೀವವನ್ನು ಉಂಟುಮಾಡುತ್ತಾ ಅಧಿಕಾರವನ್ನು ನಡೆಸುವುದು (ರೋಮಾಪುರದವರಿಗೆ ಬರೆದ ಪತ್ರಿಕೆ 5:21 ULB)

ನೀವು ನಶಿಸಿಹೋಗುವ ನಿಮ್ಮ ದೇಹದ ಮೇಲೆ ದುರಾಚಾರಗಳ ಪ್ರೇರಣೆ ಆಗದಂತೆ ನೊಡಿಕೊಳ್ಳಿರಿ rule (ರೋಮಾಪುರದವರಿಗೆ ಬರೆದ ಪತ್ರಿಕೆ 6:12 ULB)

ವಿಶ್ರಾಂತಿ ಅಥವಾ ವಿಶ್ರಾಂತಿ ಪಡೆಯುವ ಸ್ಥಳ ಎಂಬುದು ಶಾಶ್ವತವಾದ ಅನುಕೂಲ ಪಡೆಯುವ ಸ್ಥಳ ಎಂದು ಅರ್ಥ.

ನವೋಮಿ ತನ್ನ ಸೊಸೆ ರೂತಳಿಗೆ "ನನ್ನ ಮಗಳೇ, ನೀನು ಪುನಃ ಮದುವೆಯಾಗಿ ಸುಖದಿಂದ ಇರುವುದಕ್ಕೋಸ್ಕರ ಒಂದು ಸ್ಥಳವನ್ನು ಹುಡುಕಲು ಪ್ರಯತ್ನಿಸ ಬೇಕಲ್ಲವೇ ? ,(ರೂತಳು 3:1 ULB)

ಈ ಜನರು ನನ್ನ ಮಾರ್ಗವನ್ನು ತಿಳಿದುಕೊಳ್ಳದೆ ತಪ್ಪಿನಡೆಯುವವರು ಆದುದರಿಂದ ಇವರನ್ನು ನನ್ನ ವಿಶ್ರಾಂತಿಯ ಸ್ಥಳದಲ್ಲಿ ಸೇರಿಸುವುದಿಲ್ಲ.ಎಂದು ಕೋಪದಿಂದ ಪ್ರಮಾಣ ಮಾಡಿದನು (ದಾ.ಕೀ. 95:11 ULB)

ಈ ಸ್ಥಳವನ್ನು ನನ್ನ ನಿವಾಸಕ್ಕಾಗಿ ಆರಿಸಿಕೊಂಡಿದ್ದೇನೆ. ಇದು ನನ್ನ ಶಾಶ್ವತ ವಾಸಸ್ಥಾನಇಲ್ಲೇ ಇರುವೆನು. ಇದು ನನಗೆ ಇಷ್ಟವು.[ಚೀಯೋನ್]. (ದಾ.ಕೀ. 132:14 ULB)

ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಈಶಯನ ಅಂಕುರ ಆದವನನ್ನು ಆಶ್ರಯಿಸುವರು, ಅವನ ವಿಶ್ರಾಂತಿ ಸ್ಥಳವು ವೈಭವವುಳ್ಳದ್ಧಾಗಿರುವುದು. (ಯೆಶಾಯ 11:10 ULB)

ಜಾಗೃತನಾಗು, ಎದ್ದುನಿಲ್ಲು ಎಂಬುದು ಒಂದು ಕ್ರಿಯೆಯನ್ನು ಪ್ರತಿನಿಧಿಸುತ್ತದೆ

ಎದ್ದು ಬಾ ಎದ್ದುಬಂದು ಸಹಾಯಮಾಡು ನಿನ್ನ ಒಡಂಬಡಿಕೆಯ ನಿಮಿತ್ತ ನಮ್ಮನ್ನು ವಿಮೋಚಿಸು. (ದಾ.ಕೀ. 44:26 ULB)

ಏನನ್ನಾದರೂ ನೋಡುವುದು ಎಂದರೆ ಅಲ್ಲಿ ಪ್ರತ್ಯಕ್ಷವಾಗಿ ಇರುವುದು.

ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ ನಿನ್ನ ಪ್ರಿಯನಿಗೆ ಅಧೋಲೋಕ ವನ್ನು ನೋಡಗೊಡಿಸುವುದಿಲ್ಲ see (ದಾ.ಕೀ. 16:10 ULB)

ಯಾವುದಾದರೂ ವಸ್ತುವನ್ನು ಮಾರುವುದೆಂದರೆ ನಮ್ಮಲ್ಲಿರುವ ಒಂದನ್ನು ಬೇರೆಯವರ ವಶಕ್ಕೆ ಕೊಡುವುದು ಎಂದು ಅರ್ಥ

BUYING ಕೊಂಡುಕೊಳ್ಳುವುದು ಎಂದರೆ ಬೇರೆಯವರ ವಶದಲ್ಲಿ ಇರುವುದನ್ನು ಕ್ರಯಕ್ಕೆ ತೆಗೆದುಕೊಳ್ಳು -ವುದು ಎಂದು ಅರ್ಥ.

[ಯೆಹೋವ] sold ಮೇಲೆ ಕೋಪಗೊಂಡು ಅವರನ್ನು ಎರಡು ನದಿಗಳ ಮಧ್ಯದಲ್ಲಿ ಇರುವ ರಾಮ್ ನಹರೈಮ್ ರಾಜ್ಯದ ಅರಸನಾದ ಕೂಷನ್ ರಿಷಾಯಿತಾಯಿಮ್ ಎಂಬುವವನಿಗೆ ಮಾರಿಬಿಟ್ಟನು (ನ್ಯಾಯಸ್ಥಾಪಕರು 3:8 ULB)

ಆಸೀನವಾಗುವುದು ಎಂದರೆ ಆಡಳಿತ ನಡೆಸುವುದು.

ಸಿಂಹಾಸನವು ಕೃಪಾಧಾರದಮೇಲೆ ಸ್ಥಾಪಿತವಾಗಿದೆ ರಾಜ್ಯಭಾರ ಪ್ರವೀಣನು, ಧರ್ಮಾಸಕ್ತನು, ನ್ಯಾಯ ನಿಪುಣನು ಆದವನು ದಾವೀದನ ಗುಡಾರದಲ್ಲಿನ ಸಿಂಹಾಸನದ ಮೇಲೆ ಸತ್ಯಪರನಾಗಿ ಕುಳಿತಿದ್ದಾನೆ (ಯೆಶಾಯ 16:5 ULB)

ನಿಲ್ಲುವುದು ಎಂದರೆ ಯಶಸ್ವಿಯಾಗಿ ನಿಲ್ಲುವುದು

ಯಾವನು ದುಷ್ಟರ ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ ಧರ್ಮನಿಂಧಕರೊಡನೆ ಕೂತುಕೊಳ್ಳದೆ, ಧರ್ಮಶಾಸ್ತ್ರದಲ್ಲಿ ಆನಂದ ಪಡುತ್ತಾ, ಹಗಲಿರುಳು ಧ್ಯಾನಿಸುವನೋ ಅವನೇ ಧನ್ಯನು.stand (ದಾ.ಕೀ. 1:2 ULB)

ನಡೆಯುವುದು ಎಂದರೆ ಉತ್ತಮ ಮಾರ್ಗದಲ್ಲಿ ನಡೆಯುವುದು. ಒಳ್ಳೆಯ ನಡತೆಯನ್ನು ಪ್ರತಿನಿಧಿಸುತ್ತದೆ.

ಯಾರು ದುಷ್ಟರ ಆಲೋಚನೆಯಂತೆ ಪಾಪಾತ್ಮರ ಮಾರ್ಗದಲ್ಲಿ ನಡೆಯುವುದಿಲ್ಲವೋ ಅವನೇ ಧನ್ಯನು (ದಾ.ಕೀ. 1:1 ULB)

ಯೆಹೋವನು ನೀತಿವಂತರ ಮಾರ್ಗವನ್ನು ಲಕ್ಷಿಸಿ ಪರಿಗಣಿಸುವನು (ದಾ.ಕೀ.1:6 ULB)

ಮನೋವ್ಯಥೆಯಿಂದ ಕಣ್ಣಿರು ಸುರಿಸುತ್ತೇನೆ ನನ್ನ ವಾಗ್ದಾನಕ್ಕಾಗಿ ನನ್ನನ್ನು ಬಲಪಡಿಸು. (ದಾ.ಕೀ. 119:28 ULB)

ನೀನು ನನ್ನ ಅಂತರಾತ್ಮವನ್ನು ಬಿಡುಗಡೆಮಾಡು, ಆಗ ಆಸಕ್ತಿಯಿಂದ ನಿನ್ನ ಜ್ಞಾನ ಮಾರ್ಗವನ್ನು ಅನುಸರಿಸುವೆನು. (ದಾ.ಕೀ. 119:32 ULB)

ಸತ್ಯವೇದದಲ್ಲಿನ ಚಿತ್ರಣಗಳು – ಮಾನವ ನಿರ್ಮಿತ ವಸ್ತುಗಳು.
Translation Manual :: Just-in-Time Learning Modules :: Biblical Imagery :: Biblical Imagery - Common Patterns :: Biblical Imagery - Man-made Objects

ಸತ್ಯವೇದದಲ್ಲಿನ ಕಾವ್ಯ ಪ್ರತಿಮೆಗಳು /ಉದಾಹರಣೆಗಳು ಮಾನವನಿರ್ಮಿತ ವಸ್ತುಗಳು/ವಿಷಯಗಳು ಈ ಕೆಳಗಿನಂತೆ ಅಕ್ಷರಾನುಕ್ರಮವಾಗಿ ಪಟ್ಟಿ ಮಾಡಲಾಗಿದೆ. ಇಲ್ಲಿ ದೊಡ್ಡ ಅಕ್ಷರಗಳಲ್ಲಿ ನಮೂದಿಸಿರುವ ಪದಗಳು ಒಂದೊಂದು ಚಿತ್ರಣವನ್ನು ಪ್ರತಿನಿಧಿಸುತ್ತದೆ.

“ಕಾವ್ಯ ಪ್ರತಿಮೆ“ ಅಥವಾ “ಉದಾಹರಣೆ“ ಯ ಪದಗಳು ಎಲ್ಲಾ ವಾಕ್ಯಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಅವಶ್ಯಕತೆ ಇಲ್ಲ. ಆದರೆ ಅದರ ಅರ್ಥ ಅಥವಾ ಭಾವ ಅದರಲ್ಲಿರುತ್ತದೆ.

BRONZE (ಕಂಚು) ಶಕ್ತಿ, ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ.

ಆತನೇ ನನಗೆ ಯುದ್ಧವಿದ್ಯೆಯನ್ನು ಕಲಿಸಿದ್ದರಿಂದ ನಾನು ತಾಮ್ರದ ಬಿಲ್ಲನ್ನಾದರೂ ಬಾಗಿಸಬಲ್ಲೆ, ಉಪಯೋಗಿಸಬಲ್ಲೆ. bronze. (ದಾ.ಕೀ. 18:34 ULB)

CHAINS (ಸರಪಣಿ) ಬಂಧನವನ್ನು, ನಿಯಂತ್ರಣವನ್ನು ಪ್ರತಿನಿಧಿಸುತ್ತದೆ.

ಅವರು ಹಾಕಿದ ಬಂಧನಗಳನ್ನು ಕಿತ್ತು, ಬೇಡಿಗಳನ್ನು sಮುರಿದು ಬಿಸಾಡೋಣ. ಬಂಧನದ ಸರಪಣಿಗಳು . ದಾ.ಕೀ. 2:3

CLOTHING (ವಸ್ತ್ರಗಳು) ವಸ್ತ್ರಗಳು ನೈತಿಕ ಗುಣಗಳನ್ನು ಪ್ರತಿನಿಧಿಸುತ್ತದೆ. (ಭಾವನೆಗಳು, ಮನೋಧೋರಣೆಗಳು, ಪವಿತ್ರಾತ್ಮ, ಜೀವನ)

ನನ್ನ ಮೇಲೆ ನಡುಕಟ್ಟಿನಂತಹ ಕಟ್ಟನ್ನು ಬಿಗಿದು ಬಲವನ್ನು ಸಾಮರ್ಥ್ಯವನ್ನು ತುಂಬಿದ್ದಾನೆ ದೇವರು. ನಡುಕಟ್ಟು. (ದಾ.ಕೀ. 18:32 ULB)

ನೈತಿಕತೆ ಎಂಬುದನ್ನು ಕಾರ್ಯವೆಂಬ ನಡುಕಟ್ಟಿನಿಂದ ಬಿಗಿದು ನನ್ನ ಮಾರ್ಗವನ್ನು ಸರಾಗಮಾಡುವನು. . (ಯೆಶಾಯ 11:5 ULB)

ಅವಮಾನವೇ ನನ್ನ ವಿರುದ್ಧವಾಗಿ ಸಲಹೆ ನೀಡುವವರ ವಸ್ತ್ರವಾಗಲಿ ; ಅವರು ನಾಚಿಕೆ ಎಂಬ ಉಡುಪನ್ನು ಅವರು ಧರಿಸಲಿ ; (ದಾ.ಕೀ. 109:29 ULB)

ನಾನುಆತನ ಶತ್ರುಗಳನ್ನು ನಾಚಿಕೆ ಎಂಬ ವಸ್ತ್ರದಿಂದ ಹೊದಿಸುವೆನು . (ದಾ.ಕೀ. 132:18 ULB)

####ಒಂದು ಬಲೆ /ಜೀರುಗುಣಿಕೆ (ಪಕ್ಷಿಗಳನ್ನು ಬಲೆಬೀಸಿ ಹಿಡಿಯುವ ಸಣ್ಣ ಎಳೆಯ ಬಲೆಗಳು) ಮರಣವನ್ನು ಪ್ರತಿನಿಧಿಸುತ್ತದೆ.

ನಿನ್ನನ್ನು ಬೇಟೆಗಾರನ ಬಲೆಯಿಂದಲೂ, ಮರಣಕರ ವ್ಯಾಧಿಯಿಂದಲೂ ತಪ್ಪಿಸುವವನು ಆತನೇ, (ದಾ.ಕೀ. 91:3 ULB)

ಮರಣಕರವಾದ ಬಲೆ ನನ್ನನ್ನು ಆವರಿಸಿದೆ ಮತ್ತು ಆ ಬಲೆಗಳು ನನ್ನನ್ನು ಮರಣಪಾಶದಂತೆ ಎದುರಿಸಿ ಮರಣಭಯಕ್ಕೆ ಗುರಿಮಾಡಿದೆ. (ದಾ.ಕೀ. 116:3 ULB)

ಕುತಂತ್ರದ ಬಲೆಗಳು ನನ್ನನ್ನು ಬಂಧಿಸಿ ಎದುರಿಸುತ್ತಿದೆ. (ದಾ.ಕೀ. 119:61 ULB)

ದುಷ್ಟರ ಪಾಷಗಳು ನನ್ನನ್ನು ಸುತ್ತಿಕೊಂಡವು . (ದಾ.ಕೀ. 119:110 ULB)

ದುಷ್ಟರು ಬಲೆಯೊಡ್ಡಿದ್ದಾರೆ ನಾನು ನಿನ್ನ ನಿಯಮಗಳನ್ನು ತಪ್ಪಿಹೋಗುವುದಿಲ್ಲ. (ದಾ.ಕೀ 9:16 ULB)

ಅವರು ದೇವರನ್ನು ಅಲಕ್ಷ್ಯ ಮಾಡಿ ಇತರ ಜನಾಂಗಗಳೊಂದಿಗೆ ಬೆರೆತಿದ್ದಾರೆ. ಅನ್ಯ ಜನಾಂಗದವರ ಮೂರ್ತಿಗಳನ್ನು, ವಿಗ್ರಹಗಳನ್ನು ಪೂಜಿಸಿ ಅದರ ಪೂಜಾ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅವರ ಕುಯುಕ್ತಿ ಬಲೆಗಳಲ್ಲಿ ಸಿಕ್ಕಿಕೊಂಡಿದ್ದಾರೆ. (ದಾ.ಕೀ 106:35-36 ULB)

ಅವರೊಡನೆ ಸೇರಿಕೊಂಡು ಅವರ ದುರಾಚಾರಗಳನ್ನು ಕಲಿತುಕೊಂಡು ಅವರ ವಿಗ್ರಹಗಳನ್ನು ಪೂಜಿಸಿದರು., ಅವು ಅವರಿಗೆ ಉರುಳಿನಂತಾದವು.

A TENT “ಗುಡಾರ “ ಮನೆಯನ್ನು ಪ್ರತಿನಿಧಿಸುತ್ತದೆ. ಆ ಗುಡಾರದಲ್ಲಿ ನಿವಾಸಿಗಳಾಗಿ ವಾಸಿಸುವರು.

ಅದರಂತೆ ದೇವರು ಎನ್ನನ್ನು ಎಂದಿಗೂ ಏಳದಂತೆ ಕೆಡವಿ ಬಿಡುವನು, ನಿನ್ನನ್ನು ಹಿಡಿದು ಆ ನಿವಾಸದಿಂದ ಕಿತ್ತು ಬಿಸಾಡುವನು. (ದಾ.ಕೀ. 52:5 ULB)

ದುಷ್ಟರಮನೆ ನಾಶವಾಗುವುದು, ಶಿಷ್ಟರಮನೆ / ಗುಡಾರವು ಏಳಿಗೆಯಾಗುವುದು. (ಜ್ಞಾನೋಕ್ತಿ 14:11 ULB)

ಸಿಂಹಾಸನವು ಕೃಪಾಧಾರದ ಮೇಲೆ, ವಿಶ್ವಾಸ ಪೂರ್ಣ ಒಡಂಬಡಿಕೆಯಿಂದ ಸ್ಥಾಪಿತವಾಗಿದೆ. ಧರ್ಮಾಸಕ್ತನು ನ್ಯಾಯನಿಪುಣನು, ಆದವನು ದಾವೀದನ ಗುಡಾರದಲ್ಲಿನ ಸಿಂಹಾಸನದ ಮೇಲೆ ಸತ್ಯಪರನಾಗಿ ಕುಳಿತುಕೊಳ್ಳುವನು. (ಯೆಶಾಯ 16:5 ULB)


ಸತ್ಯವೇದದ ಚಿತ್ರಣಗಳು– ನೈಸರ್ಗಿಕ ವಿಧ್ಯಾಮಾನ.
Translation Manual :: Just-in-Time Learning Modules :: Biblical Imagery :: Biblical Imagery - Common Patterns :: Biblical Imagery - Natural Phenomena

ಸತ್ಯವೇದದಲ್ಲಿ ಬರುವ ಸ್ವಾಭಾವಿಕ ಫಿನಾಮಿನಾಗಳ ಚಿತ್ರಣಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿದೆ. ದೊಡ್ಡ ಅಕ್ಷರಗಳಲ್ಲಿ ಇರುವ ಪದಗಳು ಚಿತ್ರಣಗಳನ್ನು ಪ್ರತಿನಿಧಿಸುತ್ತದೆ. ಈ ಪದಗಳು ಎಲ್ಲಾ ವಾಕ್ಯಗಳಲ್ಲಿ ಇರಲೇ ಬೇಕು ಎಂಬ ನಿಯಮವಿಲ್ಲ ಆದರೆ ಇದರ ಅರ್ಥ,ಉದ್ದೇಶಗಳನ್ನು ಪದಗಳು ಪ್ರತಿನಿಧಿಸಿದರೆ ಸಾಕು.

“ಬೆಳಕು ವ್ಯಕ್ತಿಯ ಮುಖವನ್ನು ಪ್ರತಿನಿಧಿಸುತ್ತದೆ. (ಇದು ಒಬ್ಬರ ಮುಖ ಮತ್ತು ಪ್ರಸ್ತುತತೆಯನ್ನು ಸೇರಿ ಇರುವಂಥದ್ದನ್ನು ಪ್ರತಿನಿಧಿಸುತ್ತದೆ.

ಯೆಹೋವನೇ ನೀನು, ನಿನ್ನ ಪ್ರಸನ್ನ ಮುಖದಿಂದ ನಮ್ಮನ್ನು ನೋಡು. (ದಾ.ಕೀ. 4:6 ULB)

ನಮ್ಮ ಪಿತೃಗಳಿಗೆ ಕತ್ತಿ ಈ ದೇಶವನ್ನು ಸ್ವಾಧೀನಮಾಡಿಕೊಡಲಿಲ್ಲ. ಅವರ ಭುಜಬಲ ಅವರಿಗೆ ಜಯಕೊಡಲಿಲ್ಲ. ಆದರೆ ನಿನ್ನ ಭುಜಬಲ, ಹಸ್ತ, ಪ್ರಸನ್ನತೆ, ಬೆಳಕು ಇವೇ ಅವರಿಗೆ ಜಯತಂದು ಕೊಟ್ಟಿದ್ದು , ಏಕೆಂದರೆ ನಿನ್ನ ಒಲುಮೆ ಅವರ ಕಡೆಗಿತ್ತು. (ದಾ.ಕೀ. 44:3 ULB)

ನನ್ನ ಮುಖಕಾಂತಿಯನ್ನುಅವರು ಎಂದೂ ಕುಂದಿಸಲೂ ಇಲ್ಲ,ತಿರಸ್ಕರಿಸಲೂ ಇಲ್ಲ .(ಯೋಬ 29:24 ULB)

ಯೆಹೋವನೇ ನಿನ್ನ ಮುಖ ಪ್ರಕಾಶದಲ್ಲಿ ಸಂಚರಿಸುವವರು . (ದಾ.ಕೀ. 89:15 ULB)

LIGHT “ಬೆಳಕು “ ಒಳ್ಳೇತನವನ್ನು ಪ್ರತಿನಿಧಿಸುತ್ತದೆ. ಕತ್ತಲೆ ಕೆಟ್ಟದ್ದನ್ನು ಪ್ರತಿನಿಧಿಸುತ್ತದೆ.

ನಿಮ್ಮ ದೃಷ್ಟಿಕೆಟ್ಟದಾಗಿದ್ದರೆ ನಿಮ್ಮ ದೇಹವೆಲ್ಲಾ ಕತ್ತಲಾಗಿರುವುದು. ಹಾಗಾದರೆ ನಿನ್ನೊಳಗಿರುವ ಬೆಳಕೇ ಕತ್ತಲಾದರೆ ಆ ಕತ್ತಲು ಎಂಥದ್ದಿರಬಹುದು? ಎಷ್ಟಿರಬಹುದು? (ಮತ್ತಾಯ 6:23 ULB)

ನೆರಳು ಅಥವಾ ಕತ್ತಲು ಮರಣವನ್ನು ಪ್ರತಿನಿಧಿಸುತ್ತದೆ.

ನೀನು ನಮ್ಮನ್ನು ಪರಾಜಯಗೊಳಿಸಿ ನಮ್ನ ದೇಶವನ್ನು ನರಿಗಳಿರುವ ಕಾಡನ್ನಾಗಿ ಮಾಡಿದ್ದೇಕೆ? ಕಾರ್ಗತ್ತಲು ನಮ್ಮನ್ನು ಕವಿಯುವಂತೆ ಮಾಡಿದ್ದೇಕೆ? . (ದಾ.ಕೀ. 44:19)

ಬೆಂಕಿ ಮನಸ್ಸಿನ ತೀವ್ರವಾದ ಭಾವನೆಗಳನ್ನು ಪ್ರತಿನಿಧಿಸುತ್ತದೆ. ನಿರ್ದಿಷ್ಟವಾಗಿ ಪ್ರೀತಿ ಮತ್ತು ಕೋಪದಲ್ಲಿ.

ಇದಲ್ಲದೆ ಅಧರ್ಮವು ಹೆಚ್ಚಾಗುವುದರಿಂದ ಬಹುಜನರ ಪ್ರೀತಿಯು ತಣ್ಣಗಾಗಿ ಹೋಗುವುದು . (ಮತ್ತಾಯ 24:12 ULB)

ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು . (ಪರಮಗೀತೆಗಳು 8:7 ULB)

ನನ್ನ ಕೋಪಾಗ್ನಿ ಪ್ರಜ್ವಲಿಸುತ್ತದೆ ಮತ್ತು ಬುಡಸಹಿತವಾಗಿ ಬೆಟ್ಟಗಳನ್ನು ದಹಿಸಿಬಿಡುವುದು. (ಧರ್ಮೋಪದೇಶ ಕಾಂಡ 32:22 ULB)

ಯೆಹೋವನ ಕೋಪಾಗ್ನಿಯು ಇಸ್ರಾಯೇಲರ ವಿರುದ್ಧವಾಗಿ ದಹಿಸಿತು. (ನ್ಯಾಯಸ್ಥಾಪಕರು 3:8 ULB)

ಯೆಹೋವನು ಈ ಬಗ್ಗೆ ಕೇಳಿದಾಗ ತನು ಕೋಪದಿಂದ ರೋಷಗೊಂಡನು ; ಇದರಿಂದ ಆತನ ಕೋಪಾಗ್ನಿಯು ಯಕೋಬನ ವಂಶದವರಲ್ಲಿ ಹೊತ್ತಿಕೊಂಡಿತು ಇಸ್ರಾಯೇಲರ ಮೇಲೆ ಕೋಪದಿಂದ ಕ್ರಮಣ ಮಾಡಿದನು. (ದಾ.ಕೀ. 78:21 ULB)

ಬೆಂಕಿ ಅಥವಾ ದೀಪ ಜೀವನವನ್ನು ಪ್ರತಿನಿಧಿಸುತ್ತದೆ.

ಅವರೆಲ್ಲಾ, 'ಅವನನ್ನು ನಮಗೆ ಒಪ್ಪಿಸು, ತಮ್ಮನ ಪ್ರಾಣಕ್ಕಾಗಿ ಅವನ ಪ್ರಾಣವನ್ನು ತೆಗೆದು ಬಿಡುತ್ತೇವೆ. ನಿನ್ನನ್ನು ಬಾಧ್ಯಸ್ಥನಿಲ್ಲದ ಹಾಗೆ ಮಾಡಿಬಿಡುತ್ತೇವೆ ಎಂದು ಹೇಳಿದರು. ಅವರು ನನಗಿರುವ ಒಂದು ಕೆಂಡವನ್ನು ಆರಿಸಿ ಬಿಟ್ಟು, ನನ್ನ ಗಂಡನ ಹೆಸರನ್ನು ಸಂತಾನವನ್ನು ಭೂಲೋಕದ ಮೇಲಿನಿಂದ ಅಳಿಸಬೇಕೆಂದಿದ್ದಾರೆ 2 ನೇ ಸಮುವೇಲ 14:7 ULB)

ಇಸ್ರಾಯೇಲರ ದೀಪವು ನಂದಿಹೋಗದಂತೆ ನೀನು ಇನ್ನು ಮುಂದೆ ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು ಎಂದು ಖಂಡಿತವಾಗಿ ಹೇಳಿದರು.. (2 ನೇ ಸಮುವೇಲ 21:17 ULB)

ನಾನು ನನ್ನ ಹೆಸರಿಗೋಸ್ಕರ ಆರಿಸಿಕೊಂಡ ಯೆರುಸಲೇಮ್ ಪಟ್ಟಣದಲ್ಲಿ ನನ್ನ ಸೇವಕನಾದ ದಾವೀದನ ದೀಪವು ನನ್ನ ಸನ್ನಿಧಿಯಲ್ಲಿ ಉರಿಯುತ್ತಲೇ ಇರುವಂತೆ ಅವನ ಮಗನಿಗೆ ಒಂದು ಕುಲವನ್ನು ಉಳಿಸುವೆನು. (1 ನೇ ಅರಸರು 11:36 ULB)

ತನ್ನ ಆಜ್ಞೆಯನ್ನು ಮೀರದೆ ಜೀವದಿಂದ ಇರುವವರೆಗೂ ತನ್ನ ಚಿತ್ತಕ್ಕನುಸಾರವಾಗಿ ನಡೆದ ದಾವೀದನ ನಿಮಿತ್ತವಾಗಿ ಯೆಹೋವನು ಯೆರುಸಲೇಮ್ ನಲ್ಲಿನ ಇವನ ದೀಪವನ್ನು ನಂದಿಸಲಿಲ್ಲ. (1 ನೇ ಅರಸರು 15:4 ULB)

ದುಷ್ಟನ ದೀಪವು ನಂದಿಹೋಗುವುದು; ಅವನ ದೀಪದ ಕುಡಿಯು ಬೆಳಗುವುದಿಲ್ಲ ತೂಗುದೀವಿಗೆಯು ನಂದಿಹೋಗುವುದು .ಅವನ ಗುಡಾರದಲ್ಲಿನ ಬೆಳಕು ಕತ್ತಲಾಗುವುದು ; (ಯೋಬ 18:5-6 ULB)

ನೀನೇ ನನ್ನ ದೀಪವನ್ನು ; ಹೊತ್ತಿಸುವವನಲ್ಲವೇ? ನನ್ನ ದೇವರಾದ ಯೆಹೋವನೇ, ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವನು . (ದಾ.ಕೀ. 18:28 ULB)

ಕಳೆಗುಂದಿದ ದೀಪವನ್ನು ನಂದಿಸದೆ ಸಧ್ಧರ್ಮವನ್ನು ಪ್ರಚಾರಪಡಿಸಿ ಸಿದ್ಧಿಗೆ ತರುವನು. (ಯೆಶೆಯ 42:3 ULB)

ವಿಶಾಲವಾದ ಸ್ಥಳವು ಸುರಕ್ಷಣೆ, ಭದ್ರತೆ ಮತ್ತು ನಿಶ್ಚಿಂತೆಯನ್ನು ಪ್ರತಿನಿಧಿಸುತ್ತದೆ.

ಅವರು ನನ್ನ ವಿಪತ್ಕಾಲದಲ್ಲಿ ನನ್ನ ಮೇಲೆ ಆಕ್ರಮಣ ಮಾಡಿದರು. ಆತನು ನನ್ನ ಉದ್ಧಾರಕನಾದನು ಆತನು ನನ್ನನ್ನು ಬಿಡಿಸಿ ವಿಶಾಲಸ್ಥಳದಲ್ಲಿ ಸೇರಿಸಿದನು ; ಏಕೆಂದರೆ ಆತನು ನನ್ನನ್ನು ಮೆಚ್ಚಿ ರಕ್ಷಿಸಿದನು. (ದಾ.ಕೀ. 18:18-19 ULB) ನೀನು ನನ್ನ ಕಾಲುಗಳಿಗೆ ವಿಶಾಲಸ್ಥಳವನ್ನು ಕೊಟ್ಟಿರುವೆ. ಇದರಿಂದ ನನ್ನ ಕಾಲುಗಳು ಕದಲುವುದಿಲ್ಲ., ಜಾರುವುದಿಲ್ಲ. (2 ನೇ ಸಮುವೇಲ 22:37 ULB) ನೀನು ಮನುಷ್ಯರು ತಮ್ಮ ತಲೆಗಳ ಮೇಲೆಯೇ ರಥಗಳು ಹಾಯಿಸುವಂತೆ ಮಾಡಿದೆ. ನಾವು ಬೆಂಕಿಯನ್ನು, ನೀರನ್ನು ದಾಟಬೇಕಾಯಿತು. ಆದರೂ ನಮ್ಮನ್ನು ಇಕ್ಕಟ್ಟಿನಿಂದ ಪಾರುಮಾಡಿ ಸುಸ್ಥಿತಿಗೆ ತಂದಿರುವೆ . (ದಾ.ಕೀ.66:12 ULB)

ಇಕ್ಕಟ್ಟಾದ ಸ್ಥಳ ಅಪಾಯವನ್ನು ಅಥವಾ ಸಂಕಷ್ಟವನ್ನು ಪ್ರತಿನಿಧಿಸುತ್ತಾರೆ.

ನ್ಯಾಯ, ನೀತಿಯನ್ನು ಸ್ಥಾಪಿಸುವ ದೇವರೇ ನಾನು ಮೊರೆಯಿಟ್ಟಾಗ ಸದುತ್ತರ ದಯಪಾಲಿಸು ನನ್ನನ್ನು ಇಕ್ಕಟ್ಟಾದ ಸ್ಥಳದಿಂದ ತಪ್ಪಿಸಿ ಸೂಕ್ತವಾದ ಸ್ಥಳದಲ್ಲಿ ಸೇರಿಸು . ನನ್ನನ್ನು ಕರುಣಿಸಿ ನನ್ನ ಪ್ರಾರ್ಥನೆಯನ್ನು ಆಲಿಸು. (ದಾ.ಕೀ. 4:1 ULB) ವ್ಯಭಿಚಾರಿಯು ಆಳವಾದ ಹಳ್ಳವಿದ್ದಂತೆ. ಜಾರ ಸ್ತ್ರೀಯು ಇಕ್ಕಟ್ಟಾದ ಗುಂಡಿ. (ಜ್ಞಾನೋಕ್ತಿಗಳು 23:27 ULB)

ದ್ರವ ನೈತಿಕಮೌಲ್ಯಗಳನ್ನು ಪ್ರತಿನಿಧಿಸುತ್ತದೆ. (ಭಾವನೆಗಳು, ಮನೋದೋರಣೆಗಳು,ಪವಿತ್ರಾತ್ಮ ಜೀವನ)

ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತೃಗಳ ಮೇಲೆ ಬಿದ್ದು ಅವರನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದನು . (2ನೇ ಸಮುವೇಲ 5:20 ULB)

ತುಂಬಿತುಳುಕುವ ಜಲಪ್ರವಾಹದಿಂದಲೋ ಎಂಬಂತೆ ತನ್ನ ವಿರೋಧಿಗಳನ್ನು ಹಿಂದಿಕ್ಕಿ ಅಂಧಕಾರಕ್ಕೆ ತಳ್ಳುವನು . (ನಹೂಮ 1:8 ULB)

ಮನೋವ್ಯಥೆಯಿಂದ ಕಣ್ಣೀರು ಸುರಿಸುತ್ತೇನೆ. (ದಾ.ಕೀ. 119:28 ULB)

ನಾನು ಸುರಿಯಲ್ಪಟ್ಟ ನೀರಿನಂತೆ ಇದ್ದೇನೆ . (ದಾ.ಕೀ. 22:14 ULB)

ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು. (ಯೋವೇಲ 2:28 ULB)

ನನ್ನ ದೇವರೇ, ನನ್ನ ಆತ್ಮವು ಕುಗ್ಗಿಹೋಗಿದೆ (ದಾ.ಕೀ. 42:6 ULB)

ಯೆಹೋವನು ತನ್ನ ಮಹಾರೌದ್ರವನ್ನು ನಮ್ಮ ಮೇಲೆ ಸುರಿಸಿದ್ದಾನೆ (2 ನೇ ಪೂರ್ವಕಾಲವೃತ್ತಾಂತ 34:21 ULB)

ನೀರು ಯಾರು ಏನು ಹೇಳುತ್ತಾರೆ ಎಂಬುದನ್ನು ಪ್ರತಿನಿಧಿಸುತ್ತದೆ.

ಜಗಳಗಂಟಿಯಾದ ಹೆಂಡತಿಯು ಹನಿಹನಿಯಾಗಿ ತೊಟ್ಟಿಕ್ಕುವ ನೀರಹನಿಯ ಹಾಗೆ ಇರುವಳು. (ಜ್ಞಾನೋಕ್ತಿಗಳು 19:13 ULB)

ಅವನ ತುಟಿಗಳು ಸುಂದರ ಲಿಲ್ಲಿ ಹೂಗಳು, ಹನಿಹನಿ ನೀರು ತೊಟ್ಟಿಕ್ಕುವ ಕಮಲಗಳು ಸುಂದರ ಪುಷ್ಪ.. (ಪರಮಗೀತ 5:13 ULB)

ನನ್ನ ನರಳಾಟವು ಜಲಧಾರೆಯಂತಿದೆ . (ಯೋಬ 3:24 ULB)

ಸತ್ಪುರುಷರ ನುಡಿಯು ಆಳವಾದ ನೀರು ; ಜ್ಞಾನದ ಬುಗ್ಗೆ ಹರಿಯುವ ತೊರೆ (ಜ್ಞಾನೋಕ್ತಿಗಳು 18:4 ULB)

ಜಲಪ್ರವಾಹ ನಾಶವನ್ನು ಪ್ರತಿನಿಧಿಸುತ್ತದೆ.

ನಾನು ಆಳವಾದ ನೀರಿನಲ್ಲಿ , ಬಿದ್ದಿದ್ದೇನೆ ಪ್ರವಾಹವು ನನ್ನನ್ನು ಕೊಚ್ಚಿಕೊಂಡು ಹೋಗುತ್ತದೆ. (ದಾ.ಕೀ 69:2 ULB)

ಪ್ರವಾಹವು ನನ್ನನ್ನು ಕೊಚ್ಚಿಕೊಂಡು ಹೋಗದಿರಲಿ (ದಾ.ಕೀ. 69:15 ULB)

ಮೇಲಣ ಲೋಕದಿಂದ ಕೈ ಚಾಚಿ ಮಹಾಜಲರಾಶಿಯೊಳಗಿಂದ ನನ್ನನ್ನು ಎಳೆದುಕೋ ಸುಳ್ಳಾಣೆ ಇಡುವ ಅನ್ಯ ಜನಗಳ ಕೈಯಿಂದ ನನ್ನನ್ನು ಬಿಡಿಸು. (ದಾ.ಕೀ.144:7 ULB)

ನೀರಿನ ಚಿಲುಮೆ/ಬುಗ್ಗೆ ಯಾವುದಾದರೂ ಮೂಲದ ಬೆಳವಣಿಗೆಯನ್ನು (ಉದಾಹರಣೆಗೆ ಜನಾಂಗದ ಮೂಲ) ಪ್ರತಿನಿಧಿಸುತ್ತದೆ.

ಯೆಹೋವನ ಭಯ ಜೀವದ ಬುಗ್ಗೆ . (ಜ್ಞಾನೋಕ್ತಿಗಳು 14:27 ULB)

ರಕ್ಷಣೆಯನ್ನು ಪ್ರತಿನಿಧಿಸುತ್ತದೆ.

ಯೆಹೋವನಲ್ಲದೆ ನಮ್ಮ ಆಶ್ರಯ ಬಂಡೆ ಯಾರಿದ್ದಾರೆ.? (ದಾ.ಕೀ. 18:31 ULB)

ಯೆಹೋವನೇ,ನನ್ನ ಬಂಡೆಯೂ, ನನ್ನ ಶರಣನು, ನನ್ನ ವಿಮೋಚಕನು. (ದಾ.ಕೀ.19:14 ULB)

ಸತ್ಯವೇದದಲ್ಲಿನ ಚಿತ್ರಣಗಳು– ಸಸ್ಯಗಳು.
Translation Manual :: Just-in-Time Learning Modules :: Biblical Imagery :: Biblical Imagery - Common Patterns :: Biblical Imagery - Plants

ಸತ್ಯವೇದದಲ್ಲಿ ಬಳಕೆಯಾಗಿರುವ ಚಿತ್ರಣಗಳಲ್ಲಿ ಕೆಲವು ಸಸ್ಯಗಳೂ ಇವೆ. ಇವುಗಳನ್ನು ಇಂಗ್ಲೀಷ್ ವರ್ಣಮಾಲೆಅಕ್ಷರಗಳ ಕ್ರಮಾನುಸಾರ ಪಟ್ಟಿ ಮಾಡಿದೆ. ದೊಡ್ಡ ಅಕ್ಷರಗಳಲ್ಲಿ ಇರುವ ಪದಗಳು ಮುಖ್ಯ ಉದ್ದೇಶ, ವಿಷಯವನ್ನು ಪ್ರತಿನಿಧಿಸುತ್ತದೆ. ಈ ಪದಗಳು ಪ್ರತಿಯೊಂದು ವಾಕ್ಯಗಳಲ್ಲೂ ಇರಬೇಕೆಂಬ ಅವಶ್ಯಕತೆ ಇಲ್ಲ ಆದರೆ ಈ ಚಿತ್ರಣಗಳ ಉದ್ದೇಶವನ್ನು ಸೂಚಿಸುವ ಪದಗಳು ಅಲ್ಲಲ್ಲಿ ಪ್ರತಿನಿಧಿಸುತ್ತವೆ.

ಕೊಂಬೆ ಎಂಬ ಪದ ವ್ಯಕ್ತಿಯೊಬ್ಬನ ಸಂತತಿಯ /ವಂಶದ ಬಗ್ಗೆ ಪ್ರತಿನಿಧಿಸುತ್ತದೆ

ಕೆಳಗೆಕೊಟ್ಟಿರುವ ಉದಾಹರಣೆಗಳಲ್ಲಿ ಯೆಶಾಯ ಪ್ರವಾದಿ ತಿಳಿಸಿದಂಥ ಒಂದು ಇಷಯನ ಸಂತತಿ ಮತ್ತು ಯೆರೇಮಿಯ ಬರೆದಿರುವ ದಾವೀದನ ಸಂತತಿ ಬಗ್ಗೆ ಬರೆದಿದ್ದಾನೆ

ಒಂದು ಚಿಗುರು ಇಶಯನಿಂದ ಹೊರಟು ಚಿಗುರೊಡೆಯುವುದು ಅದರ ಬೇರಿನಿಂದ ಹೊರಟ ಕೊಂಬೆ ಚಿಗುರು ಫಲಿಸುವುದು . ಆ ಅಂಕುರದ ಮೇಲೆ ಜ್ಞಾನ ವಿವೇಕ, ಆತ್ಮದಾಯಕ ಆತ್ಮ ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ ತಿಳಿವಳಿಕೆಯನ್ನು, ಯೆಹೋವನ ಭಯವನ್ನು ಹುಟ್ಟಿಸುವ ಆತ್ಮ ನೆಲೆಯಾಗಿರುತ್ತದೆ. (ಯೆಶಾಯ 11:1 ULB) ಯೆಹೋವನು ಹೀಗೆನ್ನುತ್ತಾನೆ – ಇಗೋ - ನಾನು ಮುಂದಿನ ಕಾಲದಲ್ಲಿ ದಾವೀದನೆಂಬ ಮೂಲದಿಂದ ಸದ್ಧರ್ಮೀಯರ ಮೊಳಕೆಯನ್ನು ಚಿಗುರಿಸುವೆನು ಅದು ವಿವೇಕದಿಂದ ನೀತಿ ನ್ಯಾಯಗಳನ್ನು ನಿರ್ವಹಿಸುವಂತದ್ದು . ಅವನು ರಾಜನಾಗಿ ಆಡಳಿತ ನಡೆಸಿ ಪ್ರಗತಿಯನ್ನು, ನೀತಿ ನ್ಯಾಯಗಳನ್ನು ನೆಲಸುವಂತೆ ಮಾಡುವನು. (ಯೆರೇಮಿಯಾ 23:5 ULB)

ಯೋಬನು " ಆತನ ಕೊಂಬೆಗಳು ಕತ್ತರಿಸಲ್ಪಡುವವು" ಎಂದು ಹೇಳಿದರೆ ಅದರ ಅರ್ಥ ಅವನಿಗೆ ಯಾವ ಸಂತತಿಯೂ ಇರುವುದಿಲ್ಲ ಎಂದು.

ಅವನ ಬುಡದ ಬೇರು ಒಣಗುವುದು. ಮೇಲಿನ ರೆಂಬೆಯು ಕತ್ತರಿಸಲ್ಪಟ್ಟು ಬಾಡುವುದು . ಅವನ ಬಗೆಗಿನ ಸ್ಮರಣೆಯು ಭೂಮಿಯಿಂದ ಅಳಿದು ಹೋಗುವುದು. ಅವನ ಹೆಸರು ಎಲ್ಲೂ ಉಳಿಯದಂತೆ ಮರೆತು ಹೊಗುವುದು, (ಯೋಬ 18:17 ULB)

ಸಸ್ಯ ಒಬ್ಬ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ.

ಅದರಂತೆ ದೇವರು ನಿನ್ನನ್ನು ಎಂದಿಗೂ ಏಳದಂತೆ ಆ ಸ್ಥಳದಿಂದ ಕಿತ್ತುಬಿಸಾಡುವನು. ನೀನು ಆ ಸ್ಥಳದಿಂದ ಬೇರು ಸಮೇತವಾಗಿ ಕಿತ್ತು ಹಾಕಲ್ಪಡುವಿ (ದಾ.ಕೀ 52:5 ULB)

ಸಸ್ಯ ಭಾವನೆಯನ್ನು ಅಥವಾ ಮನೋಧೋರಣೆಯನ್ನು ಪ್ರತಿನಿಧಿಸುತ್ತದೆ.

ಯಾವ ಗಿಡದ ಬೀಜವನ್ನು ಹಾಕುತ್ತೇವೋ ಅದೇ ಗಿಡ ಬೆಳೆದು ಫಲ ಕೊಡುತ್ತದೆ. ನಾವು ಯಾವರೀತಿಯ ಮನೋಭಾವದಿಂದ ವರ್ತಿಸುತ್ತೇವೋ ಅದೇ ರೀತಿಯ ಪ್ರತಿಕ್ರಿಯೆ ದೊರೆಯುತ್ತದೆ. ಭಾವನೆಗಳು ಅಥವಾ ಮನೋಭಾವಗಳನ್ನು ಈ ವಾಕ್ಯಗಳಲ್ಲಿ ಗುರುತಿಸಿ ತಿಳಿಸಲ್ಪಟ್ಟಿದೆ.

ನಿಮಗಾಗಿ ನೀತಿಯ ಬೀಜವನ್ನು ಬಿತ್ತಿರಿ ಪ್ರೀತಿಯ ಫಲವನ್ನು ಕೊಯಿಲು ಮಾಡಿ ಇದು ವಿಶ್ವಾಸದ ಒಡಂಬಡಿಕೆಯ ಫಲ . (ಹೋಶಯಾ 10:12 ULB)

ನಾನು ನೋಡಿರುವಂತೆ ಅಧರ್ಮವನ್ನು ಉತ್ತು ಕೇಡನ್ನು ಬಿತ್ತುವವರುಕೇಡನ್ನೇ ಕೊಯ್ಯುವರು , (ಯೋಬ :8 ULB)

ಅವರು ಗಾಳಿಯನ್ನು ಬಿತ್ತುತ್ತಾರೆ ಬಿರುಗಾಳಿಯನ್ನು ಕೊಯ್ದುಕೊಳ್ಳುವರು. (ಹೋಶಯಾ 8:7 ULB)

ನೀವು ನ್ಯಾಯವನ್ನು ವಿಷಭರಿತ ಧರ್ಮದ ಫಲವನ್ನು ಕೈಯ್ಯಿಗೆ ತಂದಿದ್ದೀರಿ (ಅಮೋಸ 6:12 ULB)

ಎಂತಹ ಫಲವನ್ನು ನೀವು ಆ ಸಮಯದಲ್ಲಿ ನಿರೀಕ್ಷಿಸುತ್ತೀರಿ? ನಿಮಗುಂಟಾದ ಫಲವೇನು? ನಾಚಿಕೆಯಲ್ಲವೇ ? (ರೋಮಪುರದವರಿಗೆ 6:21 ULB)

ಮರ ಮನುಷ್ಯನನ್ನು ಪ್ರತಿನಿಧಿಸುತ್ತದೆ.

ಅವನು ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂತಹ ಮರವು ತಕ್ಕಕಾಲದಲ್ಲಿ ಫಲಕೊಡುತ್ತದಲ್ಲ .ಅದರ ಎಲೆಗಳು ಬಾಡುವುದೇ ಇಲ್ಲ ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವುದು. (ದಾ.ಕೀ.1:3 ULB)

ದುಷ್ಟನು ಭೀಕರವಾಗಿ ಸ್ವಸ್ಥಳದಲ್ಲಿ ಹಸಿರಾಗಿ ಬೆಳೆದ ಮರದಂತೆ ವಿಸ್ತರಿಸಿ ಕೊಂಡಿರುವುದನ್ನು ನೋಡಿದೆನು . (ದಾ.ಕೀ.37:35 ULB)

ನಾನು ಹಸಿರಾದ ಆಲೀವ್ ಮರದಂತೆ ದೇವರ ಮನೆಯಲ್ಲಿ ಹರಡಿಕೊಂಡಿದ್ದೇನೆ. (ದಾ.ಕೀ. 52:8 ULB)

ಸತ್ಯವೇದದಲ್ಲಿನ ಚಿತ್ರಣಗಳು – ಸಾಂಸ್ಕೃತಿಕ ಮಾದರಿಗಳು

Translation Manual :: Just-in-Time Learning Modules :: Biblical Imagery :: Biblical Imagery - Cultural Models

ವಿವರಣೆ

ಜೀವನದ ವರ್ತನೆಯ ಬಗೆಗಿನ ಮಾನಸಿಕ ಚಿತ್ರಗಳ ಸಾಂಸ್ಕೃತಿಕ ಮಾದರಿಗಳು. ಈ ಚಿತ್ರಗಳು ಇಲ್ಲಿನ ವಿಷಯಗಳ ಬಗ್ಗೆ ಕಲ್ಪನೆಮಾಡುವುದಕ್ಕೂ ಮಾತನಾಡುವುದಕ್ಕೂ ಸಹಾಯ ಮಾಡುತ್ತದೆ. ಉದಾಹರಣೆಗೆ, ಅಮೇರಿಕಾದವರು ಆಗಿಂದಾಗ್ಗೆ ಮದುವೆ ಮತ್ತು ಸ್ನೇಹದ ಬಗ್ಗೆ ಯಾಂತ್ರಿಕವಾಗಿ ಯೋಚಿಸುತ್ತಾರೆ.

ಅವರು ಒಬ್ಬ ವ್ಯಕ್ತಿಯ ಕುರಿತು “ಅವನ ಮದುವೆ ಮುರಿದು ಹೊಗುತ್ತಿದೆ” ಅಥವಾ ಅವರ ಸ್ನೇಹ ಬಹುವೇಗದಿಂದ ಮುಂದುವರೆಯುತ್ತದೆ ಎಂದು ಹೇಳುತ್ತಾರೆ. ಇಲ್ಲಿನ ಉದಾಹರಣೆಗಳಲ್ಲಿ ಮಾನವರ ಸಂಬಂಧಗಳನ್ನು ಯಾಂತ್ರೀಕರಿಸಿ ಮಾತನಾಡಲಾಗಿದೆ. ಸತ್ಯವೇದದಲ್ಲಿ ಕಂಡುಬರುವ ಸಾಂಸ್ಕೃತಿಕ ಮಾದರಿಗಳನ್ನು ಮಾನಸಿಕ ಚಿತ್ರಗಳನ್ನು ಈ ಕೆಳಗಿನಂತೆ ಪಟ್ಟಿಮಾಡಲಾಗಿದೆ.

ಇಲ್ಲಿರುವ ಮಾದರಿಗಳು ದೇವರ, ಮಾನವರ,ವಸ್ತುಗಳ ಮತ್ತು ಅನುಭವಗಳ ಬಗ್ಗೆ ಇವೆ. ಪ್ರತಿಯೊಂದು ವಿಷಯಕ್ಕೂ ಅದರದೇ ಆದ ಶಿರೋನಾಮೆ ದೊಡ್ಡ ಅಕ್ಷರದಲ್ಲಿ ಬರೆಯಲಾಗಿದೆ. ಆ ಪದ ಎಲ್ಲಾ ವಾಕ್ಯಗಳಲ್ಲಿ ಬರಲೇಬೇಕೆಂಬ ನಿಯಮವಿಲ್ಲ ಆದರೆ ಅದರ ಉದ್ದೇಶ ಕಂಡುಬರುತ್ತದೆ.

ದೇವರನ್ನು ಮಾನವನಂತೆ ಮಾದರಿಗೊಳಿಸಲಾಗಿದೆ.

ಸತ್ಯವೇದದಲ್ಲಿ ಬಹು ಸ್ಪಷ್ಟವಾಗಿ ದೇವರು ಮಾನವನಲ್ಲ ಎಂದು ನಿರಾಕರಿಸಿದರೂ ಆಗಿಂದಾಗ್ಗೆ ದೇವರು ಮಾನವರಂತೆ ಕಾರ್ಯಗಳನ್ನು ಮಾಡುವ ಬಗ್ಗೆ ತಿಳಿಸಿದೆ. ಆದರೆ ದೇವರು ಮಾನವನಲ್ಲ. ಸತ್ಯವೇದದಲ್ಲಿ ದೇವರು ಮಾತನಾಡುತ್ತಾರೆ ಎಂದರೆ ದೇವರಿಗೆ ಮಾನವರಂತೆ ಧ್ವನಿಪೆಟ್ಟಿಗೆ ಇದೆ ಎಂದು ತಿಳಿಯಬಾರದು. ದೇವರ ಬಗ್ಗೆ ಮಾತನಾಡುವಾಗ ಆತನು ತನ್ನ ಕೈಯಿಂದ ಕೆಲಸ ಮಾಡುತ್ತಿದ್ದಾನೆ ಎಂದರೆ ಅವನಿಗೆ ಭೌತಿಕವಾಗಿ ಕೈಗಳಿವೆ ಎಂದು ಅರ್ಥವಲ್ಲ.

ನಮ್ಮ ಯಹೋದೇವರ ಸ್ವರವನ್ನು ನಾವು ತಿರುಗಿ ಕೇಳಿದರೆ ಸತ್ತೇವು. (ಧರ್ಮೋಪದೇಶ ಕಾಂಡ 5:25 ULB)

ನನ್ನ ದೇವರಾದ ಯೆಹೋವನ ಹಸ್ತಪಾಲನೆಯು ನನಗೆ ದೊರಕಿದ್ದರಿಂದ ನಾನು ಧೈರ್ಯ ತಂದುಕೊಂಡೆನು (ಎಜ್ರಾ 7:28 ULB)

ಯಹೋದ್ಯರಾದರೊ ದೇವರ ಕೃಪಾಹಸ್ತ ಪ್ರೇರಣೆಯಿಂದ ಯೂದಾಯಕ್ಕೆ ಬಂದರೂ. ಯೆಹೋವನ ಧರ್ಮಶಾಸ್ತ್ರ ಅನುಸಾರ ಅರಸನಿಂದಲೂ, ಪ್ರಭುಗಳಿಂದಲೂ ಹೊರಟ ಆಜ್ಞೆಯನ್ನು ಕೈಗೊಂಡರು (2 ನೇ ಪೂರ್ವಕಾಲ ವೃತ್ತಾಂತ 30:12 ULB)

“ಕೈ”/ "ಹಸ್ತ " ಎಂಬ ಪದದಲ್ಲಿ ಮೆಟೋನಿಮಿ ಇದೆ. ಏಕೆಂದರೆ ಮಹೋನ್ನತ ದೇವರ "ಹಸ್ತವಿದು " ಅದರಲ್ಲಿ ದೇವರ ಮಹಿಮೆ ಇದೆ. (ಮೆಟೋನಿಮಿ)

ದೇವರನ್ನು ರಾಜಾಧಿರಾಜನಂತೆ ಮಾದರಿಗೊಳಿಸಲಾಗಿದೆ.

ದೇವರು ಭೂಲೋಕಕ್ಕೆಲ್ಲಾ ರಾಜನು ; (ದಾ.ಕೀ. 47:7 ULB) ಈ ರಾಜ್ಯವು ಯಹೋವನದೇ ಎಲ್ಲಾಜನಾಂಗಗಳಿಗೆ ಆತನೇ ಒಡೆಯನು. (ದಾ.ಕೀ. 22:28 ULB) ದೇವರೇ ನಿನ್ನ ಸಿಂಹಾಸನವು , ನೀನು ನಮ್ಮೊಂದಿಗೆ ಎಂದೆಂದೂ ಇರುವಿ ; ರಾಜ್ಯಗಳು . ಜನಾಂಗಗಳು ನ್ಯಾಯಕ್ಕಾಗಿ ಕಳವಳಗೊಂಡು ತತ್ತರಿಸಿದವು. (ದಾ.ಕೀ. 45:6 ULB) ಯೆಹೋವನು ಹೀಗೆನ್ನುತ್ತಾನೆ. ಆಕಾಶವು ನನಗೆ ಸಿಂಹಾಸನವು , ಭೂಮಿಯು ನನಗೆ ಪಾದಪೀಠ , (ಯೆಶಾಯ 66:1 ULB) ದೇವರು ಸರ್ವಾಧಿಪತ್ಯವನ್ನು ದೇಶಗಳ ಮೇಲೆ ಹೊಂದಿದ್ದಾನೆ. ದೇವರು ತನ್ನ ಪರಿಶುದ್ಧ ಸಿಂಹಾಸನದಲ್ಲಿ ,ಕುಳಿತಿದ್ದಾನೆ. ಜನಾಂಗಗಳ ರಾಜಕುಮಾರನು ಜನಾಂಗಗಳಲ್ಲಿ ಶ್ರೇಷ್ಠರಾದವರು ಕೂಡಿಬಂದಿದ್ದಾರೆ ಅವರೆಲ್ಲರೂ ಅಬ್ರಹಾಮನ ದೇವರ ಪ್ರಜೆಯಾಗಿರುವುದಕ್ಕೆ ಕೂಡಿಬರುತ್ತಾರೆ. ಏಕೆಂದರೆ ಭೂಪಾಲಕರೆಲ್ಲಾ ಅವರಿಗೆ ರಕ್ಷಣೆಯಾಗಿ ದೇವರಿಗೆ ಅಧೀನರಾಗಿದ್ದಾರೆ. ಆತನೇ ಸರ್ವೋನ್ನತನು. (ದಾ.ಕೀ. 47:8-9 ULB)

####ದೇವರನ್ನು ಕುರುಬನಂತೆ ಮಾದರೀಕರಿಸಲಾಗಿದೆ ಆತನ ಪ್ರಜೆಗಳನ್ನು ಕುರಿಗಳಂತೆ ಮಾದರಿಗೊಳಿಸಲಾಗಿದೆ.

ಯೆಹೋವನು ನನಗೆ ಕುರುಬನು; ನಾನು ಕೊರತೆ ಪಡೆನು. (ದಾ.ಕೀ. 23:1 ULB)

ಆತನ ಪ್ರಜೆಗಳು ಕುರಿಗಳು.

ಆತನು ನಮ್ಮ ದೇವರು ನಾವು ಆತನು ಪಾಲಿಸುವ ಹಿಂಡು ಆಗಿದ್ದೇವೆ . (ದಾ.ಕೀ. 95:7 ULB)

ಆತನು ತನ್ನ ಪ್ರಜೆಗಳನ್ನು ಕುರಿಗಳಂತೆ.ಮಾರ್ಗದರ್ಶಿಸುತ್ತಾನೆ.

ಆತನು ತನ್ನ ಜನರನ್ನು ಕುರಿಗಳನ್ನೋ ಎಂಬಂತೆ ಹೊರತಂದು ಮಂದೆಯಂತೆಯೇ ಪೋಷಿಸಿ, ಅಡವಿಯಲ್ಲಿ ಮುನ್ನಡೆಸಿದನು . (ದಾ.ಕೀ. 78:52 ULB)

ತನ್ನ ಕುರಿಗಳಿಗಾಗಿ, ಅವುಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನು ಕೊಡಲು ಸಿದ್ಧವಾಗಿದ್ದಾನೆ.

ನಾನೇ ಒಳ್ಳೆ ಕುರುಬ, ನಾನು ನನ್ನ ಕುರಿಗಳನ್ನು ತಿಳಿದಿರುವಂತೆ ಅವು ನನ್ನನ್ನು ತಿಳಿದಿವೆ. ತಂದೆಯು ನನ್ನನ್ನು ತಿಳಿದಿರುವಂತೆಯೇ ನಾನು ನನ್ನ ತಂದೆಯನ್ನು ತಿಳಿದಿದ್ದೇನೆ ಮತ್ತು ನನ್ನ ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡಲು ಸಿದ್ಧನಿದ್ದೇನೆ . ಇದಲ್ಲದೇ ಈ ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗೆ ಇವೆ. ಅವುಗಳನ್ನು ನಾನು ನನ್ನ ಮಂದೆಗೆ ಸೇರಿಸಬೇಕು.ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ.ಆಗ ಅವೆಲ್ಲವೂ ಸೇರಿ ಒಂದೇ ಹಿಂಡು ಆಗುತ್ತವೆ. ಅವುಗಳಿಗೆ ಒಬ್ಬನೇ ಕುರುಬ. (ಯೋಹಾನ 10:14-15 ULB)

####ದೇವರನ್ನು ಯುದ್ಧವೀರನನ್ನಾಗಿ ಮಾದರೀಕರಿಸಲಾಗಿದೆ

ಯೆಹೋವನುಯುದ್ಧವೀರನು ; (ವಿಮೋಚನಾ ಕಾಂಡ 15:3 ULB) ಯೆಹೋವನು ಶೂರನಂತೆ ಹೊರಟು, ಯುದ್ಧವೀರನ ಹಾಗೆ ;ತನ್ನ ರೌದ್ರವನ್ನು ಎಬ್ಬಿಸುವನು . ಆತನು ಶೌರ್ಯವನ್ನು ವ್ಯಾಪಿಸುವಂತೆ ಮಾಡುವನು. ಶೂರನಂತೆ ಆರ್ಭಟಿಸಿ, ಗರ್ಜಿಸಿ ಶತೃಗಳ ಮೇಲೆ ಬಿದ್ದು ; ತನ್ನ ಪರಾಕ್ರಮವನ್ನು ಶತೃಗಳಿಗೆ ತೋರಿಸುವನು ; (ಯೆಶಾಯ 42:13 ULB) ಯೆಹೋವನೇ ನಿನ್ನ ಭುಜಬಲವು ಎಷ್ಟೋಘನವಾದದ್ದು ; ಯೆಹೋವನೇ ನಿನ್ನ ಭುಜಬಲವು ಶತೃಗಳನ್ನು ಪುಡಿಪುಡಿ ಮಾಡುತ್ತದೆ. . (ವಿಮೋಚನಾಕಾಂಡ 15:6 ULB) ಆದರೆ ದೇವರು ಅವರನ್ನು ತನ್ನ ಬಾಣಗಳಿಂದ ಆಕ್ರಮಣಮಾಡುತ್ತಾನೆ; ಇದ್ದಕ್ಕಿದ್ದಂತೆ ಅವರು ಆತನ ಬಾಣಗಳಿಂದ ಗಾಯಗೊಳ್ಳುವರು . (ದಾ.ಕೀ. 65:7 ULB)

ನೀನು ನಿನ್ನ ಬಾಣಗಳನ್ನು ಬಿಲ್ಲಿಗೆ ಹೂಡಿ ಅವರ ಮುಖದೆದುರು ; ಎಸೆದು ಅವರು ಬೆನ್ನು ತೋರಿಸಿ ಓಡುಹೋಗುವಂತೆ ಮಾಡುವಿ. (ದಾ.ಕೀ. 21:12 ULB)

ನಾಯಕನಾದವನನ್ನು ಕುರುಬನಂತೆ ಮಾದರೀಕರಿಸಿ ಇರುವುದರಿಂದ ಆತ ತನ್ನ ಕುರಿಗಳನ್ನು ಮುನ್ನಡೆಸುತ್ತಾನೆ.

ಅನಂತರ ಇಸ್ರಾಯೇಲರ ಎಲ್ಲ ಕುಲದವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಅವನಿಗೆ ನಾವು ನಿನ್ನ ರಕ್ತಸಂಬಂಧಿಗಳಾಗಿದ್ದೇವೆ. ಹಿಂದಿನ ದಿನಗಳಲ್ಲಿ ಸೌಲನ ಆಳ್ವಿಕೆಯಲ್ಲಿ ಇಸ್ರಾಯೇಲರ ದಳಪತಿಯಾಗಿ ಮುನ್ನಡಿಸಿದವನು ನೀನು. ನಿನ್ನನ್ನು ಕುರಿತು ಯಹೋವನು 'ನೀನು ನಿನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನೂ, ಪಾಲಕನೂ, ಕುರುಬನೂ ಆಗಿದ್ದೀಯೆಂದು ಹೇಳಿದನು. (2 ನೇ ಸಾಮುವೇಲ 5:1-2 ULB)

"ನನ್ನ ಕಾವಲಿನ ಕುರಿಗಳನ್ನು ಹುಲ್ಲುಗಾವಲಿನಿಂದ ಚದುರಿಸಿ ಹಾಳುಮಾಡುವ ಕುರುಬನ ಗತಿಯನ್ನು ಏನೆಂದು ಹೇಳಲಿ ಎಂಬುದು ಯಹೋವನ ನುಡಿ (ಯೆರೇಮಿಯಾ 23:1 ULB)

ಯೆಹೋವನು ತನ್ನ ಸ್ವರಕ್ತದಿಂದ ಸಂಪಾದಿಸಿಕೊಂಡ ಸಭೆ ಎಂಬ ಮಂದೆಯನ್ನು ಪರಿಪಾಲಿಸುವುದಕ್ಕಾಗಿ ನಿಮ್ಮನ್ನು ಆರಿಸಿಕೊಂಡಿದ್ದಾನೆ nಎಚ್ಚರಿಕೆಯಿಂದಿರಿ ಕುರುಬರಾಗಿ ದೇವರು ನಿಮ್ಮನ್ನು ನೇಮಿಸಿದ್ದಾನೆ. ತನ್ನ ರಕ್ತಕೊಟ್ಟು ನಿಮ್ಮನ್ನು ಕೊಂಡುಕೊಂಡಿದ್ದಾನೆ. ಹಿಂಡಿನ ವಿಷಯದಲ್ಲಿ ಎಚ್ಚರಿಕೆಯಿಂದಿರಿ ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವವು ಎಂದು ನನಗೆ ತಿಳಿದಿದೆ. ಅವು ಹಿಂಡಿನಲ್ಲಿ ಇರುವ ಕುರಿಗಳನ್ನು ಕನಿಕರಿಸುವುದಿಲ್ಲ ಮಂದೆ. ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವಿರುದ್ಧವಾದ ಬೋಧನೆಗಳನ್ನು ಮಾಡಿ ನನ್ನ ಶಿಷ್ಯರನ್ನು ತಮ್ಮ ಕಡೆಗೆ ಎಳೆದುಕೊಳ್ಳುವರು (ಅಪೋಸ್ತಲ ಕೃತ್ಯಗಳು 20:28-30 ULB)

ಕಣ್ಣನ್ನು ದೀಪ ಎಂದು ಮಾದರೀಕರಿಸಿದೆ.

ಕೆಟ್ಟದೃಷ್ಟಿಯ ಬಗ್ಗೆ ಅನೇಕ ವಿಚಾರಗಳು ಜಗತ್ತಿನಾದ್ಯಂತ ಕಂಡುಬರುತ್ತವೆ. ಇವುಗಳಲ್ಲಿ ಅನೇಕ ಏರುಪೇರುಗಳಿವೆ. ಸತ್ಯವೇದದಲ್ಲಿ ಬಂದಿರುವ ಸಾಂಸ್ಕೃತಿಕ ಪ್ರಾತಿನಿಧ್ಯವು ಈ ಕೆಳಗಿನ ಮಾದರಿಗಳನ್ನು ಒಳಗೊಂದಡಿದೆ. ಜನರು ವಸ್ತುಗಳನ್ನು, ವಿಷಯಗಳನ್ನು ಬೆಳಕಿನಲ್ಲಿ ನೋಡಲು ಪ್ರಯತ್ನಿಸುತ್ತಾರೆ. ಆದರೆ ಬೆಳಕು ಎಂಬುದು ಅವರ ಕಣ್ಣುಗಳ ಮೂಲಕ ವಸ್ತುಗಳ ಮೇಲೆ ಆವರಿಸುವುದರಿಂದ ನೋಡಲು ಸಾಧ್ಯವಾಗುತ್ತದೆ.

ಕಣ್ಣು ದೇಹದ ದೀಪ ವಾಗಿದೆ ಆದುದರಿಂದ ನಿನ್ನ ಕಣ್ಣಿನ ದೃಷ್ಟಿ ಒಳ್ಳೆಯದಾಗಿದ್ದರೆ ನಿನ್ನ ದೇಹವೆಲ್ಲಾ ಬೆಳಕಿನಿಂದ ಬೆಳಗುವುದು . (ಮತ್ತಾಯ 6:22 ULB)

ಕಣ್ಣಿನಿಂದ ಹೊಳೆಯುವ ಬೆಳಕು ಆ ವ್ಯಕ್ತಿಯ ಗುಣವನ್ನು ಪ್ರತಿಬಿಂಬಿಸುತ್ತದೆ.

ದುರಾತ್ಮನು ಕೇಡಿನ ಮೇಲೆ ಮನಸ್ಸಿಡುವನು ನೆರೆಯವರನ್ನು ಕನಿಕರಿಸದೆ ತಿರಸ್ಕರಿಸುವನು . (ಜ್ಞಾನೋಕ್ತಿ 21:10 ULB)

####ದ್ವೇಷ ಮತ್ತು ಶಾಪ ಎಂಬ EVIL EYE ದುಷ್ಟದೃಷ್ಟಿಯಂತೆ ಮಾದರೀಕರಿಸಿದೆ GOOD EYE ಒಳ್ಳೆಯದೃಷ್ಟಿಯನ್ನು ಒಳ್ಳೆಯ ತನದಿಂದ ಮಾದರೀಕರಿಸಿದೆ

ಮನುಷ್ಯನ ಮೂಲ ಪ್ರಾಥಮಿಕ ಭಾವನೆ ಎಂದರೆ ದುಷ್ಟದೃಷ್ಟಿ ದ್ವೇಷ. ಗ್ರೀಕ್ ಭಾಷೆಯಿಂದ “ದ್ವೇಷ” ಎಂಬ ಪದವನ್ನು ಮಾರ್ಕನ ಸುವಾರ್ತೆಯ 7ನೇ ಅಧ್ಯಾಯದಲ್ಲಿ “ಕಣ್ಣು” ಎಂದು ಅನುವಾದ ಮಾಡಿದೆ, ಅಂದರೆ ಇಲ್ಲಿ ದುಷ್ಟ ದೃಷ್ಟಿ ಎಂಬ ಅರ್ಥದಲ್ಲಿ ಅನುವಾದಿಸಿದೆ.

ಮನುಷ್ಯನಿಂದ ಹೊರಡುವಂತದ್ದೇ ಮನುಷ್ಯನನ್ನು ಹೊಲೆ ಮಾಡುವುದು. ಮನುಷ್ಯರ ಹೃದಯದೊಳಗಿಂದ ಕೆಟ್ಟ ಆಲೋಚನೆಗಳು ಹೊರಡುತ್ತವೆ ದ್ವೇಷ …. (ಮಾರ್ಕ 7:20-22 ULB)

ಮತ್ತಾಯ 20:15 ದ್ವೇಷದ ಭಾವನೆಗಳು ಹೇಗೆ ಬರುತ್ತದೆ. ಎಂಬುದನ್ನು ತೋರಿಸುತ್ತದೆ. “ನಿಮ್ಮ ಕಣ್ಣಿನ ದೃಷ್ಟಿ ಕೆಟ್ಟದ್ದೇ?” ಅಂದರೆ ನೀವು “ಹೊಟ್ಟಕಿಚ್ಚು, ದ್ವೇಷವುಳ್ಳವರೇ ?”

ನನ್ನ ಸ್ವಂತ ಆಸ್ತಿಯಿಂದ ನನಗೆ ಬೇಕಾದ ಹಾಗೆ ಬದುಕಬಹುದಲ್ಲವೇ? ನಾನು ಒಳ್ಳೆಯವನಾಗಿರುವುದು ನಿನ್ನ ಕಣ್ಣನ್ನು ಒತ್ತುತ್ತದೋ ? (ಮತ್ತಾಯ 20:15 ULB)

ಒಬ್ಬ ವ್ಯಕ್ತಿಯ ಕಣ್ಣಿನ ದೃಷ್ಟಿ ಕೆಟ್ಟದ್ದಾಗಿದ್ದರೆ ಅವನು ಪರರ ಸೊತ್ತಿನ ಬಗ್ಗೆ ಹೊಟ್ಟೆಕಿಚ್ಚು, ಅಸೂಯೆ ಪಡುವವನಾಗಿರುತ್ತಾನೆ.

ಕಣ್ಣು ದೇಹಕ್ಕೆ ದೀಪವಾಗಿದೆ ನಿನ್ನ ಕಣ್ಣು /ದೃಷ್ಟಿ ಒಳ್ಳೆಯದಾಗಿದ್ದರೆ , ನಿನ್ನ ದೇಹದಲ್ಲಿ ಬೆಳಕಾಗಿರುವುದು. ಆದರೆ ನಿನ್ನ ಕಣ್ಣು /ದೃಷ್ಟಿ ಕೆಟ್ಟದಾಗಿದ್ದರೆ ನಿನ್ನ ದೇಹವೆಲ್ಲಾ ಕೆಟ್ಟದಾಗಿರುವುದು., ಹಾಗಾದರೆ ನಿನ್ನೊಳಗಿರುವ ಬೆಳಕೇ ಕತ್ತಲಾದರೆ ಆ ಕತ್ತಲು ಎಷ್ಟಾಗಿರಬೇಕು. ಯಾರೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರರು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು ಇಲ್ಲವೇ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು ನೀವು ದೇವರನ್ನು ಹಣವನ್ನು ಏಕಕಾಲಕ್ಕೆ ಸೇವೆ ಮಾಡಲು ಸಾಧ್ಯವಿಲ್ಲ . (ಮತ್ತಾಯ 6:22-24 ULB)

ಒಬ್ಬ ಮನುಷ್ಯನು ದ್ವೇಷದಿಂದ ಇದ್ದರೆ ಇತರರನ್ನು ಅವನು ಶಪಿಸುವುದು ಅದರ ಮೇಲೆ ಮಂತ್ರತಂತ್ರಮಾಡುವುದು, ಅವರನ್ನು ಯಾವಾಗಲೂ ಕೆಟ್ಟದೃಷ್ಟಿಯಿಂದ ನೋಡುತ್ತಾನೆ.

ಬುದ್ಧಿಹೀನ ಗಲಾತ್ಯದವರೆ ಕೆಟ್ಟಕಣ್ಣು /ದೃಷ್ಟಿ ನಿಮಗೆ ತೊಂದರೆ ಉಂಟುಮಾಡಿತು. (ಗಲಾತ್ಯದವರಿಗೆ 3:1 ULB)

ಒಳ್ಳೆಯ ದೃಷ್ಟಿಯುಳ್ಳವನು ಯಾರನ್ನು ನೋಡಿದರೂ ಅವರನ್ನು ಆಶೀರ್ವದಿಸುವನು

ಒಂದು ದಿನ ದಾವೀದನು ಆಕೀಷನ ಬಳಿ ಬಂದು ನಿನ್ನ ದೃಷ್ಟಿಯಲ್ಲಿ ನನಗೆ ದಯೆತೋರಿಸುವುದಾದರೆ ಯಾವುದಾದರೂ ಒಂದು ಹಳ್ಳಿಯಲ್ಲಿ ನನಗೆ ಇರಲು ಸ್ಥಳಕೊಡಿಸು ಎಂದನು . (1 ನೇ ಸಮುವೆಲ 27:5 ULB)

####ಜೀವನವನ್ನು “ರಕ್ತ ”ಎಂದು ಮಾದರೀಕರಿಸಿದೆ.

ಈ ಮಾದರಿಯಲ್ಲಿ ಮನುಷ್ಯನ ರಕ್ತ ಅಥವಾ ಪ್ರಾಣಿಯ ರಕ್ತ ಅವರ ಜೀವನವನ್ನು ಪ್ರತಿನಿಧಿಸಿದೆ.

ಆದರೆ ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಬಾರದು, ರಕ್ತವು ಜೀವವಷ್ಟೆ. (ಆದಿಕಾಂಡ 9:4 ULB)

ರಕ್ತವು ಹರಿದರೆ ಅಥವಾ ಚಿಮ್ಮಿದರೆ ನಾವು ಯಾರನ್ನಾದರೂ ಕೊಂದಂತೆ.

ಯಾರು , ಮನುಷ್ಯನ ರಕ್ತವನ್ನು ಸುರಿಸುತ್ತಾರೊ ಅವರ ರಕ್ತವನ್ನು ಮನುಷ್ಯರೇ ಸುರಿಸುವರು, (ಆದಿಕಾಂಡ 9:6 ULB)

ಹೀಗೆ, ಸೇಡುತೀರಿಸಿಕೊಳ್ಳಬೇಕೆಂದು ಯೋಚಿಸುವವರಿಂದ ಅಕಸ್ಮಾತ್ತಾಗಿ ಕೊಂದವನು ಓಡಿ ಹೋಗಿ ನ್ಯಾಯಸಭೆಯ ಮುಂದೆ ನಿಲ್ಲುವನು , (ಯೆಹೋಶುವ 20:9 ULB)

ಸುರಿದ ರಕ್ತವು ಕೂಗುತ್ತದೆ, ಪ್ರಕೃತಿಯೇ ಕೊಂದವನ ಬಗ್ಗೆ ಪ್ರತಿಕಾರ ತೀರಿಸಲು ಕೂಗುತ್ತದೆ. (ಇದು ಪರ್ಸಾನಿಫಿಕೇಶನ್ – ಏಕೆಂದರೆ ರಕ್ತವನ್ನು ವ್ಯಕ್ತಿಯಂತೆ ಚಿತ್ರಿಸಿ,ರಕ್ತ ಕೂಗಲು ಸಾಧ್ಯವೆಂದುತಿಳಿಸಿದೆ) : ವ್ಯಕ್ತೀಕರಣ)

ಯೆಹೋವನು ಕಾಯೀನನನ್ನು ಕುರಿತು, " ನೀನು ಏನು ಮಾಡಿದೆ ? ನಿನ್ನ ತಮ್ಮನ ರಕ್ತವು ಭೂಮಿಯ ಕಡೆಯಿಂದ ನನ್ನನ್ನು ಕೂಗುತ್ತಿದೆ. (ಆದಿಕಾಂಡ 4:10 ULB)

ಒಂದು ನಾಡನ್ನು /ದೇಶವನ್ನು ಸ್ತ್ರೀ ಯಂತೆ ಮಾದರೀಕರಿಸಿದೆ ಅದರಲ್ಲಿ ಪೂಜಿಸುವ ದೇವರುಗಳನ್ನು ಅವಳ ಪತಿಯಂತೆ ಮಾದರೀಕರಿಸಲಾಗಿದೆ.

ಗಿದ್ಯೋನನು ಸತ್ತ ನಂತರ ಇಸ್ರಾಯೇಲರು ದೇವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜಿಸಿದರು ಇದರಿಂದ ಅವರುಬಾಳ್ ಬೇರಿತ್ ದೇವತೆಗಳನ್ನು ತಮ್ಮ ದೇವರನ್ನಾಗಿ ಮಾಡಿಕೊಂಡು ವೇಶ್ಯಾವೃತ್ತಿ ಮಾಡುವವರಂತೆ ಆದರು. ಬಾಳ್ ಬೇರಿತ್ ನನ್ನು ಅವರ ದೇವರನ್ನಾಗಿ ಮಾಡಿಕೊಂಡರು. (ನ್ಯಾಯಸ್ಥಾಪಕರು 8:33 ULB)

####ಇಸ್ರಾಯೇಲ್ ದೇಶವನ್ನು ತಂದೆಯ ಮಗನಂತೆ ಮಾದರೀಕರಿಸಿದೆ.

ಇಸ್ರಾಯೇಲ್ ಬಾಲ್ಯದಲ್ಲಿದ್ದಾಗ ನಾನು ಅದರ ಮೇಲೆ ಪ್ರೀತಿ ಇಟ್ಟು ನನ್ನ ಮಗನೆಂದುಐಗುಪ್ತ ದೇಶದಿಂದ ಕರೆತಂದೆ (ಹೋಶಯ 11:1 ULB)

ಸೂರ್ಯನನ್ನು ರಾತ್ರಿಯೆಂಬ ಪಾತ್ರೆಯಲ್ಲಿ ಇರುವಂತೆ ಮಾದರೀಕರಿಸಿದೆ.

ಅವುಗಳ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿರುತ್ತದೆ. ಅಲ್ಲಿ ಆತನು ಸೂರ್ಯನಿಗೋಸ್ಕರ.ಗುಡಾರವನ್ನು ಏರ್ಪಡಿಸಿದ್ದಾನೆ ಸೂರ್ಯನು ತನ್ನ ಮಂಟಪದೊಳಗಿಂದ ಮದುಮಗನಂತೆ ಹೊರಟುಬರುವನು. ಅವನು ಶೂರನಂತೆ ತನಗೆ ನೇಮಕವಾದ ಮಾರ್ಗದಲ್ಲಿ ಓಡುವುದಕ್ಕೆ ಉಲ್ಲಾಸವಾಗಿದ್ದಾನೆ. (ದಾ.ಕೀ. 19:4-5 ULB)

ದಾ.ಕೀ. 110ರಲ್ಲಿ ಸೂರ್ಯನು ಉದಯವಾಗುವ ಮೊದಲು ತಾಯಿಯ ಗರ್ಭದಲ್ಲಿದ್ದಂತೆ ಎಂದು ಹೇಳಿದೆ

ಗರ್ಭದಿಂದ ಹೊರಬಂದಂತೆ ನಿನ್ನ ಯುವ ಸೈನ್ಯವು ಉದಯಕಾಲದ ಇಬ್ಬನಿಯಂತೆ ಹೊರಬರುವರು. (ದಾ. ಕೀ. 110:3 ULB)

####ವೇಗವಾಗಿ ಚಲಿಸುವವುಗಳನ್ನು ರೆಕ್ಕೆಗಳಿವೆ ಎಂದು ಮಾದರಿಗೊಳಿಸಿದೆ.

ಇವು ವಿಶೇಷವಾದ ಸತ್ಯ ಸಂಗತಿಗಳಾಗಿದ್ದು ಆಕಾಶದಲ್ಲಿ ರೆಕ್ಕೆಗಳೊಡನೆ ಹಾರುತ್ತವೆ. ಸೂರ್ಯನನ್ನು ರೆಕ್ಕೆಗಳುಳ್ಳ ಸೂರ್ಯ ಮಂಡಲ, ಇದು ಹಗಲಿನಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಆಕಾಶದಲ್ಲಿ ಹಾರುತ್ತಿರುತ್ತದೆ. ದಾ.ಕೀ. 139, "ಅರುಣನ ರೆಕ್ಕೆಗಳು " ಎಂದು ಹೇಳುವಲ್ಲಿ ಸೂರ್ಯನನ್ನು ಕುರಿತು ಹೇಳಿದೆ.

ಮಲಾಕಿಯ ಪ್ರವಾದದ ಗ್ರಂಥದ ನಾಲ್ಕನೇ ಅಧ್ಯಾಯದಲ್ಲಿ ದೇವರು ತಾನೇ “ನೀತಿಯೆಂಬ ರೆಕ್ಕೆಯುಳ್ಳ ಸೂರ್ಯನಾಗಿ” ಎಂದು ಹೇಳಿದ್ದಾನೆ. ನಾನು ಅರುಣನ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಿಹೋಗಿ ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡುತ್ತೇನೆ ಎಂದರೆ ಅಲ್ಲಿಯೂ ನಿನ್ನ ಕೈ ನನ್ನನ್ನು ನಡೆಸುವುದು. (ದಾ.ಕೀ. 139:9 ULB)

ನನ್ನ ನಾಮದಲ್ಲಿ ಭಯಭಕ್ತಿ ಇಟ್ಟಿರುವ ನಿಮಗೋ ಧರ್ಮವೆಂಬ ಸೂರ್ಯನು ಸ್ವಸ್ಥತೆ ಉಂಟುಮಾಡುವ ಕಿರಣಗಳನ್ನು ಹೊಂದಿದವನಾಗಿ ಬರುವನು . (ಮಲಾಕಿ 4:2 ULB)

ಗಾಳಿಯು ವೇಗವಾಗಿ ಚಲಿಸುತ್ತದೆ ಏಕೆಂದರೆ ಅದಕ್ಕೆ ರೆಕ್ಕೆಗಳಿವೆ ಎಂದು ಮಾದರೀಕರಿಸಿದೆ.

ವಾಯುವೇ ಆತನ ರೆಕ್ಕೆಗಳೋ ಎಂಬಂತೆ ಇಳಿದು ಪ್ರತ್ಯಕ್ಷನಾದನು . (2 ನೇ ಸಮುವೆಲ. 22:11 ULB)

ಕೆರೋಬಿ ವಾಹನನಾಗಿ ಹಾರಿ ವಾಯುವೇ ಆತನ ರೆಕ್ಕೆಗಳೋ ಎಂಬಂತೆ ಇಳಿದು ಬಂದನು . (ದಾ.ಕೀ. 18:10 ULB)

ವಾಯುವಿನ ರೆಕ್ಕೆಗಳ ಮೇಲೆ ಸಂಚರಿಸುತ್ತೀ (ದಾ.ಕೀ. 104:3 ULB)

ಗಾಳಿ ನಿರರ್ತಕತೆಯನ್ನು ಎಲ್ಲವನ್ನೂ ಹೊಡೆದುಕೊಂಡು ಹೋಗಬಲ್ಲದು ಎಂದು ಮಾದರಿಗೊಳಿಸಿದೆ

ಈ ಮಾದರಿಯಲ್ಲಿ ಗಾಳಿ ಎಲ್ಲವನ್ನು ಹೊಡೆದುಕೊಂಡು ಹೋಗುತ್ತದೆ., ಅವು ಬೆಲೆಯುಳ್ಳದ್ದಲ್ಲ ಆದುದರಿಂದಲೇ ಅವು ಹಾರಿ ಹೋದವು. ದಾ.ಕೀ 1 ಮತ್ತು ಯೋಬ 27ರಲ್ಲಿ ದುಷ್ಟರು ಯೋಗ್ಯರಲ್ಲದ ಕಾರಣ ಹೆಚ್ಚುಕಾಲ ಉಳಿಯುವುದಿಲ್ಲ

ದುಷ್ಟರು ಹಾಗೆ ಅಲ್ಲ, ಆದರೆ ಗಾಳಿ ಬಡುಕೊಂಡು ಹೋಗುವ ಹೊಟ್ಟಿನಂತಿದ್ದಾರೆ . (ದಾ.ಕೀ. 1:4 ULB) ಮೂಡಣದಿಕ್ಕಿನಿಂದ ಬೀಸುವ ಗಾಳಿ ಅವನನ್ನು ಬಡಿದುಕೊಂಡು ಹೋಗುವುದು,,ಮತ್ತು ಅವನು ಹೊರಟುಹೋಗುವನು. , ಅದು ಅವನನ್ನು ಬಡಿದು ಅವನ ಸ್ಥಳದಿಂದ ಹಾರಿಸಿ ಬಿಡುವುದು . (ಯೋಬ27:21 ULB)

ದಾವೀದನ ಮಗನು ಯೆರೂಸಲೇಮನ್ನು ಆಳುವ ಅರಸನಾಗಿದ್ದ, ಸೊಲೊಮೋನನು ಹೇಳಿದ ಮಾತು, ಸಮಸ್ತವೂ ವ್ಯರ್ಥ, ವ್ಯರ್ಥವೇ ವ್ಯರ್ಥ

ಮಂಜಿನ ಹನಿಯಂತೆ , ಗಾಳಿಯಲ್ಲಿರುವ ತಂಪು , ಸಮಸ್ತವೂ ವ್ಯರ್ಥ, ಅನೇಕ ಪ್ರಶ್ನೆಗಳನ್ನುಉಳಿಸಿ ಎಲ್ಲವೂ ಮಾಯವಾಗುತ್ತದೆ. ಮನುಷ್ಯನು ಈ ಲೋಕದಲ್ಲಿ ಸೂರ್ಯಶಾಖದಲ್ಲಿ ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ಯಾವ ಲಾಭವೂ ಇಲ್ಲ? (ಪ್ರಸಂಗಿ 1:2-3 ULB)

ಯೋಬ 30:15, ನನ್ನ ಮಾನವು ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿದೆ ಎಂದಿದ್ದಾನೆ.

ಅಪಾಯವು ನನ್ನನ್ನು ಆವರಿಸಿಕೊಂಡಿದೆ. ನನ್ನ ಗೌರವವು ಗಾಳಿಯಂತೆ ಹೊಡೆದುಕೊಂಡು ಹೋಯಿತು ; ನನ್ನ ಕ್ಷೇಮ ಹಾಗೂ ಅಭಿವೃದ್ಧಿ ಮೇಘದ ಹಾಗೆ.ಸರಿದು ಹೋಯಿತು . (ಯೋಬ 30:15 ULB)

ಮಾನವನ ಯುದ್ಧವನ್ನು ದೈವೀಕ ಯುದ್ಧದಂತೆ ಮಾದರೀಕರಿಸಿದೆ.

ಹಿಂದಿನ ಕಾಲದಲ್ಲಿ ದೇಶದೇಶಗಳ ನಡುವೆ ಯುದ್ದ ನಡೆದಾಗ ಜನರು ಅವರ ದೇವರು ಆ ಯುದ್ಧದಲ್ಲಿ ಭಾಗವಹಿಸುತ್ತಾನೆ ಎಂದು ನಂಬಿದ್ದರು.

ಇದು ಆ ಕಾಲದಲ್ಲಿ ಯೆಹೋವನು ಐಗುಪ್ತರ ದೇವತೆಗಳನ್ನು ಶಿಕ್ಷಿಸಿ, ಐಗುಪ್ತರ ಚೊಚ್ಚಲು ಮಕ್ಕಳನ್ನು ಸಂಹರಿಸುದುದರಿಂದ ಅವರು ಆ ಮಕ್ಕಳ ಶವಗಳನ್ನು ಸಮಾಧಿ ಮಾಡುತ್ತಿದ್ದರು . (ಅರಣ್ಯಕಾಂಡ 33:4 ULB)

ನಿನ್ನ ಇಸ್ರಾಯೇಲ್ ಪ್ರಜೆಗೆ ಸಮಾನವಾದ ಜನಾಂಗವು ಲೋಕದಲ್ಲಿ ಯಾವುದಿದೆ? ನೀನೇ ಹೋಗಿ ಅದನ್ನು ವಿಮೋಚಿಸಿ ಸ್ವಪ್ರಜೆಯನ್ನಾಗಿ ಮಾಡಿಕೊಂಡು ನಿನ್ನ ಹೆಸರನ್ನು ಪ್ರಸಿದ್ಧಿ ಪಡಿಸಿದೀ. ಐಗುಪ್ತರು, ಅನ್ಯಜನರ ಕೈಗೂ ಅವರ ದೇವತೆಗಳ ಕೈಗೂ ಸಿಕ್ಕದಂತೆ ತಪ್ಪಿಸಿ, ರಕ್ಷಿಸಿ ಅವರ ಎದುರಿನಲ್ಲೇ ನಿನ್ನ ದೇಶಕ್ಕೋಸ್ಕರ ಭಯಂಕರವಾದ ಮಹತ್ಕಾರ್ಯಗಳನ್ನು ನಡೆಸಿದಿ. (2 ನೇ ಸಮುವೆಲ 7:23 ULB)

ಆರಮ್ಯರ ಅರಸನ ಸೇವಕರು ಮಂತ್ರಿಗಳು ತಮ್ಮ ಒಡೆಯರಿಗೆ ಇಸ್ರಾಯೇಲರ ದೇವರ ಬೆಟ್ಟಗಳು ದೇವರಾಗಿರುವುದರಿಂದ ಅವರು ನಮ್ಮನ್ನು ಸೋಲಿಸಿದರು. “ ಅವರು ನಮಗಿಂತ ಬಲಶಾಲಿಗಳಾಗಿ ಇರುವುದರಿಂದ ನಾವು ಅವರನ್ನು ಜಯಿಸಲು ಸಾಧ್ಯವಾಗಲಿಲ್ಲ . ನಾವು ಅವರೊಡನೆ ಸೆರೆಮನೆಯಲ್ಲಿ ಯುದ್ಧಮಾಡುವುದಾದರೆ ಖಂಡಿತ ಜಯ ಹೊಂದುವೆವು.” (1 ನೇ ಅರಸುಗಳು 20:23 ULB)

ಜೀವನದಲ್ಲಿ ಎದುರಾಗುವ ನಿರ್ಭಂಧಗಳನ್ನು ದೈಹಿಕ ಮಿತಿಗಳೊಂದಿಗೆ ಮಾದರಿಗೊಳಿಸಿದೆ.

ಕೆಳಗೆ ಪಟ್ಟಿಮಾಡಿರುವ ವಾಕ್ಯಗಳಲ್ಲಿ ದೈಹಿಕ ಮಿತಿಗಳ ಬಗ್ಗೆ ಹೇಳದೆ ಜೀವನದಲ್ಲಿ ಎದುರಾಗುವ ಕಷ್ಟಗಳ ಬಗ್ಗೆ ತಿಳಿಸಿದೆ.

ನಾನು ಆಚೆ ಹೋಗದಂತೆ ನನ್ನ ಸುತ್ತಲೂ ಗೋಡೆ , ಕಟ್ಟಿ ನಾನು ತಪ್ಪಿಸಿ ಕೊಳ್ಳದಂತೆ ಮಾಡಿದ್ದಾನೆ. ನನಗೆ ಭಾರಿ ಬೇಡಿಗಳನ್ನು ಹಾಕಿ ಬಂಧಿಸಿದ್ದಾನೆ. (ಪ್ರಲಾಪಗಳು 3:7 ULB)

ನನ್ನ ದಾರಿಯಲ್ಲಿ ಅಡ್ಡವಾಗಿ ಕೆತ್ತನೆಯ ಕಲ್ಲಿನ ಗೋಡೆಗಳನ್ನು ಕಟ್ಟಿ ನನ್ನ ಹಾದಿಯನ್ನು ಸುತ್ತಿಕೊಂಡುಹೋಗುವ ಹಾಗೆ ಮಾಡಿದ್ದಾನೆ ; (ಪ್ರಲಾಪಗಳು 3:9 ULB)

ಅಳತೆಮಾಡಲ್ಪಟ್ಟ ಸ್ಥಳಗಳು ನನಗೆ ಪ್ರಾಪ್ತವಾಗಿರುವ ಸ್ವಾಸ್ಥ್ಯವು ರಮಣೀಯವಾದುದು ಅದು ನನಗೆ ಸಂತೃಪ್ತಿಕರವಾಗಿದೆ.ದಾ.ಕೀ. 16:6 ULB)

ಅಪಾಯಕರ ಸ್ಥಳಗಳನ್ನು ಇಕ್ಕಾಟ್ಟಾದ ಸ್ಥಳಗಳು ಎಂದು ಮಾದರಗೊಳಿಸಲಾಗಿದೆ.

ದಾ.ಕೀ. 4 ರಲ್ಲಿ ದಾವೀದನು ತನ್ನನ್ನು ರಕ್ಷಿಸುವಂತೆ ದೇವರನ್ನು ಪ್ರಾರ್ಥಿಸುತ್ತಾನೆ.

ನ್ಯಾಯವನ್ನು ಸ್ಥಾಪಿಸುವ ನನ್ನ ದೇವರೇ ನಾನು ಮೊರೆಯಿಟ್ಟಾಗ ಸದುತ್ತರವನ್ನು ದಯಪಾಲಿಸು. ನನ್ನನ್ನು ಇಕ್ಕಟ್ಟಿನಿಂದ ಬಿಡಿಸಿ ಸೂಕ್ತವಾದ ಸ್ಥಳದಲ್ಲಿ ಸೇರಿಸು . ನನ್ನನ್ನು ಕರುಣಿಸಿ ನನ್ನ ಪ್ರಾರ್ಥನೆಯನ್ನು ಆಲಿಸಿ ಅಂಗೀಕರಿಸು. (ದಾ.ಕೀ. 4:1 ULB)

####ಸಂಕಟ/ಯಾತನೆಯ ಸನ್ನಿವೇಶಗಳನ್ನು ನಿರ್ಜನ ಪ್ರದೇಶವಾಗಿ ಮಾದರೀಕರಿಸಿದೆ.

ಯೋಬನು ಸಂಕಟ, ಯಾತನೆಗೆ ಗುರಿಯಾಗಿ ಎಲ್ಲವನ್ನು ಕಳೆದುಕೊಂಡು, ದುಃಖ ಅನುಭವಿಸುತ್ತಿದ್ದಾಗ ನಿರಾಶನಾಗಿ ತಾನು ನಿರ್ಜನ ಪ್ರದೇಶದಲ್ಲಿದ್ದಂತೆ ಮಾತನಾಡಿದ್ದಾನೆ. ನರಿಗಳು ಮತ್ತು ಉಷ್ಟ್ರಪಕ್ಷಿಗಳು ಇಂತಹ ಮರಳುಗಾಡಿನಂತಹ ನಿರ್ಜನ ಪ್ರದೇಶದಲ್ಲಿ ವಾಸಿಸುತ್ತವೆ.

ನನ್ನ ಹೃದಯವು ಕಳವಳದಿಂದ ವಿಶ್ರಾಂತಿಯಿಲ್ಲದೆ ದುಃಖಿಸುತ್ತಿದೆ. ಬಾಧೆಯ ದಿನಗಳು ನನಗೆ ಒದಗಿದೆ. ನನ್ನ ದೇಹವೆಲ್ಲಾ ಕಪ್ಪಾಗಿ ನಾನು ಅಲೆಯುತ್ತಿದ್ದೇನೆ. ಇದು ಸೂರ್ಯನ ತಾಪದಿಂದ ಆದುದಲ್ಲ. ನಾನು ದೂತರ ಸಂಘದಲ್ಲಿ ನಿಂತು ಸಹಾಯಕ್ಕಾಗಿ ಅಂಗಲಾಚುತ್ತೇನೆ ನಾನು ನರಿಯ ತಮ್ಮ, ಉಷ್ಟ್ರಪಕ್ಷಿಗಳ ಗೆಳೆಯನೂ ಆಗಿದ್ದೇನೆ.. (ಯೋಬ 30:27-29 ULB)

####ಆರೋಗ್ಯವಾಗಿ ಸ್ವಸ್ಥವಾಗಿರುವುದು ದೈಹಿಕವಾದ ಸ್ವಚ್ಛತೆಯನ್ನು ಮಾದರಿಗೊಳಿಸಿದೆ. ದುಷ್ಟತನ, ನೀಚತನ ಅಶುದ್ಧತೆಯನ್ನು ಪ್ರತಿನಿಧಿಸುತ್ತದೆ.

ಕುಷ್ಠ ಒಂದು ರೋಗ ಒಬ್ಬ ವ್ಯಕ್ತಿ ಕುಷ್ಠರೋಗವಿದ್ದರೆ ಅವನನ್ನು ಅಶುದ್ಧನೆಂದು ಹೇಳುತ್ತಿದ್ದರು.

ಒಬ್ಬ ಕುಷ್ಠರೋಗಿ ಯೇಸುವಿನ ಬಳಿ ಬಂದು ಆತನಿಗೆ ಅಡ್ಡಬಿದ್ದು “ಸ್ವಾಮಿ - ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ .” ಯೇಸು ಅವನನ್ನು ಮುಟ್ಟಿ “ನನಗೆ ಮನಸ್ಸುಂಟು. ಶುದ್ಧನಾಗು ಅಂದನು.” ಕೂಡಲೆ ಅವನಕುಷ್ಠವಾಸಿಯಾಯಿತು.(ಮತ್ತಾಯ 8:2-3 ULB)

"ಅಶುದ್ಧಆತ್ಮವು "ಸೈತನಾನ ಆತ್ಮ. ಅದು ಅಪವಿತ್ರವಾದದ್ದು

ಅಶುದ್ಧಾತ್ಮವು. /ಅಪವಿತ್ರ ಆತ್ಮವು ಮನುಷ್ಯನನ್ನು ಬಿಟ್ಟುಹೋದಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ. (ಮತ್ತಾಯ 12:43 ULB)

Checking Manual

Checking Manual

###ಅನುವಾದ ಟಿಪ್ಪಣಿಗಳನ್ನು ಪರಿಶೀಲನೆ

Checking Manual :: ###ಅನುವಾದ ಟಿಪ್ಪಣಿಗಳನ್ನು ಪರಿಶೀಲನೆ

ಮೂಲ ಅನುವಾದದಲ್ಲಿ ಅನುವಾದ ಟಿಪ್ಪಣಿಗಳನ್ನು ಹೇಗೆ ಪರಿಶೀಲಿಸುವುದು

ಮೂಲ ಅನುವಾದಕ್ಕೆ ಪ್ರವೇಶ 1.ನೀವು ಪರಿಶೀಲಿಸಲು ಬಯಸುವ ಯೋಜನೆಯನ್ನು (ಸತ್ಯವೇದದ ಪುಸ್ತಕ) ಆಯ್ಕೆ ಮಾಡಿ 1.ನೀವು ಪರಿಶೀಲಿಸಲು ಬಯಸುವ ಟಿಪ್ಪಣಿಗಳ ವರ್ಗ ಅಥವಾ ವರ್ಗಗಳನ್ನು ಆಯ್ಕೆ ಮಾಡಿ 1.ನಿಮ್ಮ ಗೇಟ್ ವೇ ಭಾಷೆಯನ್ನು ಆಯ್ಕೆಮಾಡಿ 1.“ಪ್ರಾರಂಭಿಸು” ಆಯ್ಕೆ ಮಾಡಿ. ಪರಿಶೀಲಿಸಬೇಕಾದ ವಚನನ್ನು ವಿವಿಧ ವರ್ಗಗಳ ಟಿಪ್ಪಣಿಗಳಾಗಿ ವಿಂಗಡಿಸಿ ಎಡಭಾಗದಲ್ಲಿ ಪಟ್ಟಿ ಮಾಡಲಾಗುವುದು, ಪರಿಶೀಲಿಸಲು ಒಂದು ವಚನವನ್ನು ಆಯ್ಕೆ ಮಾಡಿ ಮತ್ತು ನೀಲಿ ಪಟ್ಟಿಯಲ್ಲಿರುವ ಆ ವಚನದ ಟಿಪ್ಪಣಿಯನ್ನು ಓದಿರಿ. ಹೊಸ ವರ್ಗಕ್ಕೆ ತೆರಳುವ ಮೊದಲು ಒಂದೇ ವರ್ಗದಲ್ಲಿರುವ ಎಲ್ಲಾ ಪದ್ಯಗಳನ್ನು ಪರಿಶೀಲಿಸುವುದು ಉತ್ತಮ.

ಕೆಲವು ಟಿಪ್ಪಣಿಗಳು ಪರಿಶೀಲಿಸುವ ನಿರ್ಧಿಷ್ಟ ವಚನಕ್ಕೆ ಅನ್ವಯವಾಗುವ ಹೆಚ್ಚು ಸಾಮಾನ್ಯ ಸಮಸ್ಯೆಗಳನ್ನು ಉಲ್ಲೇಖಿಸುತ್ತದೆ. ಈ ಹೆಚ್ಚು ಸಾಮಾನ್ಯ ಸಮಸ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದು ಪ್ರಸ್ತುತ ವಚನಕ್ಕೆ ಹೇಗೆ ಅನ್ವಯಿಸುತ್ತದೆ ಎಂದು ತಿಳಿಯಲು ಫಲಕದ ಬಲಭಾಗದಲ್ಲಿರುವ ಮಾಹಿತಿಯನ್ನು ಓದಿರಿ.

1.ಟಿಪ್ಪಣಿಯಲ್ಲಿನ ಪದ ಅಥವ ನುಡಿಗಟ್ಟಿಗೆ ಅನುವಾದವನ್ನು ಆಯ್ಕೆ ಮಾಡಿದ ನಂತರ, ”ಉಳಿಸು” ಆಯ್ಕೆ ಮಾಡಿ. 1.ನಡುಗಟ್ಟು ಅಥವ ಪದಕ್ಕೆ ಆಯ್ಕೆ ಮಾಡಲಾದ ಅನುವಾದ ಸನ್ನಿವೇಶದಲ್ಲಿ ಅರ್ಥಪೂರ್ಣವಾಗಿದೆಯೆ ಅಥವ ಇಲ್ಲವೆಂದು ಪರಿಗಣಿಸಿರಿ 1.ಟಿಪ್ಪಣಿ ತಿಳಿಸುವ ಸಮಸ್ಯವನ್ನು ಪರಿಗಣಿಸಿ ಅನುವಾದ ಸರಿಯಾಗಿದೆಯೆ ಅಥವಾ ಇಲ್ಲವೆ ಎಂದು ನಿರ್ಧರಿಸಿ. 1.ಈ ವಿಷಯವನ್ನು ಪರಿಗಣಿಸಿದ ನಂತರ ಅನುವಾದವು ಉತ್ತಮ ಅನುವಾದ ಎಂದು ನೀವು ಭಾವಿಸಿದರೆ, ನಂತರ ”ಉಳಿಸು ಮತ್ತು ಮುಂದುವರಿಸಿ” ಆಯ್ಕೆ ಮಾಡಿ. 1.ವಚನದಲ್ಲಿ ಸಮಸ್ಯ ಅಥವಾ ಪದ ಹಾಗು ನುಡಿಗಟ್ಟಿನ ಅನುವಾದ ಉತಮವಾಗಿಲ್ಲ ಎಂದು ನೀವು ಭಾವಿಸಿದ್ದರೆ, ವಚನವನ್ನು ಉತ್ತಮಗೊಳಿಸಲು ಅದನ್ನು ಬದಲಿಸಿ, ಅಥವಾ ಇಲ್ಲಿನ ಅನುವಾದದಲ್ಲಿ ತಪ್ಪೆಂದು ನೀವು ಭಾವಿಸಿದರೆ ನಿಮ್ಮ ಕೆಲಸವನ್ನು ಪರಿಶೀಲಿಸುವ ಯಾರಿಗಾದರೂ ಹೇಳಿಕೆ ಮೂಲಕ ಹೇಳಿರಿ. ನೀವು ಏನನ್ನಾದರು ಬದಲಿಸಿದ್ದರೆ, ನಿಮ್ಮ ಆಯ್ಕೆಯನ್ನು ಮತ್ತೆ ಮಾಡಬಾಕಾಗಬಹುದು. 1.ನೀವು ಹೇಳಿಕೆ ಅಥವ ತಿದ್ದು ಮಾಡುವುದನ್ನು ಮುಗಿಸಿದ ನಂತರ “ ಉಳಿಸು ಮತ್ತು ಮುಂದುವರಿಸು” ಆಯ್ಕೆ ಮಾಡಿ. ನೀವು ಪದ ಅಥವಾ ನುಡಿಗಟ್ಟುಗೆ ಮಾತ್ರ ಹೇಳಿಕೆ ಹೇಳಲು ಬಯಸಿದರೆ ಅದನ್ನು ಆಯ್ಕೆ ಮಾಡಿ. ನಂತರ ಮುಂದಿನ ಪದಕ್ಕೆ ಹೋಗಲು ಎಡಭಾಗದಲ್ಲಿರುವ ಪಟ್ಟಿಯಲ್ಲಿರುವ ಮುಂದಿನ ವಚನವನ್ನು ಆಯ್ಕೆ ಮಾಡಿ.

ಟಿಪ್ಪಣಿ ವಿಭಾಗದಲ್ಲಿನ ಎಲ್ಲಾ ವಚನಗಳನ್ನು ಆಯ್ಕೆ ಮಾಡಿದ ನಂತರ, ಆವರ್ಗದಲ್ಲಿನ ಅನುವಾದಗಳ ಪಟ್ಟಿಯನ್ನು ಪರಿಶೀಸಬಹುದು. ಈ ಕೆಳಗಿನ ಸೂಚನೆಯು ವಿಮರ್ಶಕರಿಗೆ ಅಥವಾ ಅನುವಾದ ತಂಡಕ್ಕೆ ಮಾತ್ರ. 1.ಎಡಭಾಗದಲ್ಲಿರುವ ಪ್ರತಿ ಅನುವಾದ ಟಿಪ್ಪಣಿ ವರ್ಗದ ಅಡಿಯಲ್ಲಿ ಪ್ರತಿ ಅನುವಾದ ಟಿಪ್ಪಣಿಗಾಗಿ ಮಾಡಿದ ಅನುವಾದ ಪಟ್ಟಿಯನ್ನುನೀವು ನೋಡಲು ಸಾಧ್ಯವಾಗುತ್ತದೆ. ನೀವು ಪರಿಶೀಲಿಸಲು ಬಯಸುವ ಭಾಗವನ್ನು ಆಯ್ಕೆ ಮಾಡಿ. ಅನುವಾದ ತಂಡದ ವಿಭಿನ್ನ ಸದಸ್ಯರು ವಿಭಿನ್ನ ವಿಶೇಷತೆಗಳನ್ನು ಹೊಂದಿರಬಹುದು. ಉದಾಹರಣೆಗೆ, ತಂಡದ ಒಬ್ಬ ಸದಸ್ಯರು ರೂಪಕಗಳನ್ನು ಪರಶೀಲಿಸುವಲ್ಲಿ ಉತ್ತಮರಾಗಿರುತ್ತಾರೆ, ಇನ್ನೊಬ್ಬರು ಕಷ್ಟಕರವಾದ ವ್ಯಾಕರಣಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸರಿಪಡಿಸಲು ಉತ್ತಮರಾಗಿರುತ್ತಾರೆ. ಉದಾಹರಣೆಗೆ **** 1.ಇತರರು ಮಾಡಿದ ಹೇಳಿಕೆಯನ್ನು ನೀವು ಪರಿಶೀಲಿಸಲು ಬಯಸಿದ್ದರೆ, ಮೇಲಿನ ಎಡಭಾಗದಲ್ಲಿರುವ “ಸಲಹಕಾರ” ದ ಬಲಭಾಗದಲ್ಲಿರುವ ಕೊಳುವೆ ಚಿಹ್ನೆಯನ್ನು ಆಯ್ಕೆ ಮಾಡಿ, “ಹೇಳಿಕೆ” ಸೇರಿದಂತೆ ಒಂದು ಪಟ್ಟಿಯು ತೆರೆಯುತ್ತದೆ.

  1. “ಹೇಳಿಕೆ” ಪಕ್ಕದಲ್ಲಿರುವ ಪೆಟ್ಟಿಯನ್ನು ಆಯ್ಕೆ ಮಾಡಿ. ಇದು ಹೇಳಿಕೆ ಇಲ್ಲದ ಎಲ್ಲಾ ವಚನಗಳನ್ನು ಕಣ್ಮರೆಯಾಗುತ್ತದೆ. 1.ಹೇಳಿಕೆಯನ್ನು ಓದಲು, ಪಟ್ಟಿಯಲ್ಲಿರುವ ಮೊದಲನೆಯ ವಚನವನ್ನು ಆಯ್ಕೆ ಮಾಡಿ.
  2.      “ಹೇಳಿಕೆ” ಆಯ್ಕೆ ಮಾಡಿ
    
  3.      ಹೇಳಿಕೆಯನ್ನು ಓದಿರಿ, ಮತ್ತು ಇದರ ಬಗ್ಗೆ ನೀವು ಏನು ಮಾಡುತ್ತೀರಿ ಎಂದು ನಿರ್ಧರಿಸಿ.
    

1.ನೀವು ವಚನದಲ್ಲಿ ಬದಲಿಸಲು ನಿರ್ಧರಿಸಿದ್ದರೆ, ನಂತರ “ರದ್ದು ಮಾಡು” ಆಯ್ಕೆ ಮಾಡಿ. ನಂತರ “ವಚನ ಬದಲಿಸು” ಆಯ್ಕೆ ಮಾಡಿ.ಇದು ಸಣ್ಣ ಸಣ್ಣ ಪರದೆ ತರೆಯುತ್ತದೆ, ಅಲ್ಲಿ ನೀವು ವಚನವನ್ನು ಬದಲಾಯಿಸಬಹುದು. 1.ನೀವು ಬದಲಿಸುವುದನ್ನು ಪೂರ್ಣಗೊಳಿಸಿದ ನಂತರ, ಬದಲಾವಣೆಗೆ ಕಾರಣವನ್ನು ಆರಿಸಿರಿ, ತದನಂತರ “ಉಳಿಸು” ಆಯ್ಕೆ ಮಾಡಿ. ನಿಮಗಾಗಿ ಉಳಿದಿರುವ ಎಲ್ಲಾ ಹೇಳಿಕೆಯಲ್ಲಿ ಕಾರ್ಯನಿರ್ವಹಿಸುವವರೆಗೆ ಈ ಪ್ರಕ್ರಿಯೆಯನ್ನು ಮುಂದುವರೆಸಿರಿ.

ನೀವು ಟಿಪ್ಪಣಿ ವರ್ಗ ಅಥವಾ ಸತ್ಯವೇದ ಪುಸ್ತಕವನ್ನು ಪರಿಶೀಲಿಸಿದ ನಂತರ, ಇನ್ನೂ ಕೆಲವು ವಚನಗಳು ಹಾಗು ಟಿಪ್ಪಣಿ ಪರಿಶೀಲನೆಯ ಬಗ್ಗೆ ನೀವು ಪ್ರಶ್ನೆಗಳನ್ನು ಹೊಂದಿರಬಹುದು. ಅನುವಾದ ತಂಡದಲ್ಲಿ ಇತರರೊಂದಿಗೆ ಕಷ್ಟಕರವಾದ ವಚನವನ್ನು ಚರ್ಚಿಸಲು ನೀವು ಬಯಸಬಹುದು, ಒಟ್ಟಿಗೆ ಪರಹಾರಗಳನ್ನು ಕಂಡುಹಿಡಿಯಲು ಪ್ರಯತ್ನಿಸಬಹುದು, ಹೆಚ್ಚು ಸತ್ಯವೇದ ಅನುವಾದ ಸಂಪನ್ಮೂಲಗಳನ್ನು ಅಧ್ಯಾಯನ ಮಾಡಿ, ಅಥವಾ ಪ್ರಶ್ನೆಗಳನ್ನು ಸತ್ಯವೇದ ಅನುವಾದ ತಜ್ಞರಿಗೆ ಉಲ್ಲೇಖಿಸಿ.


ಅಂಗೀಕೃತ ಶೈಲಿ

Checking Manual :: ಅಂಗೀಕೃತ ಶೈಲಿ

ಅಂಗೀಕೃತ ಶೈಲಿಯಲ್ಲಿನ ಅನುವಾದ

ಹೊಸ ಅನುವಾದವನ್ನು ನೀವು ಓದುತ್ತಿರುವಾಗ, ಈ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿರಿ. ಇದರಿಂದ ಭಾಷೆಯ ಸಮುದಾಯಕ್ಕೆ ಅಂಗೀಕೃತ ಶೈಲಿಯಲ್ಲಿ ಅನುವಾದ ಮಾಡಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ಈ ಪ್ರಶ್ನೆಗಳು ಸಹಾಯ ಮಾಡುತ್ತವೆ.

  1. ಭಾಷೆಯ ಸಮುದಾಯದಲ್ಲಿರುವ ಚಿಕ್ಕವರು ದೊಡ್ಡವರು ಮತ್ತು ವೃದ್ಧರು ಎಲ್ಲರು ಸುಲಭವಾಗಿ ಅರ್ಥ ಮಾಡಿಕೊಳ್ಳುವ ವಿಧಾನದಲ್ಲಿ ಅನುವಾದವನ್ನು ಮಾಡಲಾಗಿದೆಯೋ? (ಯಾರಾದರು ಮಾತನಾಡುವ ಸಂದರ್ಭದಲ್ಲಿ ದೊಡ್ಡವರಿಗಾಗಿ ಅಥವಾ ಚಿಕ್ಕವರಿಗಾಗಿ ತಮ್ಮ ಮಾತುಗಳನ್ನು ಬದಲಾಯಿಸಿಕೊಳ್ಳುವ ಅವಕಾಶವಿರುತ್ತದೆ. ಈ ಅನುವಾದವು ಚಿಕ್ಕವರನ್ನು ಮತ್ತು ದೊಡ್ಡವರನ್ನು ಸೇರಿಸಿಕೊಂಡು ಅವರಿಗೆ ಅರ್ಥವಾಗುವಂತೆ ಪದಗಳನ್ನು ಉಪಯೋಗಿಸಿ ಮಾಡಲ್ಪಟ್ಟಿದಿಯೋ?)
  2. ಈ ಅನುವಾದದ ಶೈಲಿ ಹೆಚ್ಚಾಗಿ ಸಾಂಪ್ರದಾಯಿಕವಾಗಿ ಮಾಡಿದ್ದಾರೋ ಅಥವಾ ಅನೌಪಚಾರಿಕವಾಗಿ ಮಾಡಿದ್ದಾರೋ? (ಸ್ಥಳೀಯ ಜನರು ಪದಗಳನ್ನು ಉಪಯೋಗಿಸಿ ಮಾತನಾಡುವ ಪದ್ಧತಿಯಲ್ಲಿದೆಯೋ, ಅಥವಾ ಅದು ಸ್ವಲ್ಪ ಹೆಚ್ಚಾಗಿರಬೇಕೋ ಅಥವಾ ಸ್ವಲ್ಪ ಪದ್ಧತಿಯ ವಿಧಾನವು ಕಡಿಮೆ ಮಾಡಬೇಕೋ?)
  3. ಇತರ ಬೇರೊಂದು ಭಾಷೆಯ ಪದಗಳನ್ನು ಈ ಅನುವಾದದಲ್ಲಿ ಬಳಸಿದ್ದಾರೋ, ಅಥವಾ ಈ ಪದಗಳು ಆ ಭಾಷೆಯ ಜನರಿಗೆ ಅರ್ಥವಾಗುತ್ತವೋ?
  4. ಹೆಚ್ಚಿನ ಭಾಷೆಯನ್ನಾಡುವ ಜನರು ಸ್ವೀಕೃತ ಮಾಡುವ ಹಾಗೆ ಅವರ ಭಾಷೆಯ ಸರಿಯಾದ ಪದ್ಧತಿಯನ್ನು ರಚನಾಕಾರರು ಉಪಯೋಗಿಸಿದ್ದಾರೋ? (ಆ ಪ್ರಾಂತ್ಯದಲ್ಲಿ ಕಂಡು ಬಂದ ನಿಮ್ಮ ಭಾಷೆಯ ಪದಗಳೊಂದಿಗೆ ರಚನಾಕಾರರು ಪರಿಚಿತರಾಗಿದ್ದಾರೋ? ಸಮುದಾಯ ಭಾಷೆಯನ್ನಾಡುವ ಜನರೆಲ್ಲರು ಚೆನ್ನಾಗಿ ಅರ್ಥಮಾಡಿಕೊಳ್ಳುವ ಭಾಷೆಯ ವಿಧಾನವನ್ನು ರಚನಾಕಾರರು ಉಪಯೋಗಿಸಿದ್ದಾರೋ, ಅಥವಾ ಒಂದು ಚಿಕ್ಕ ಪ್ರಾಂತ್ಯದಲ್ಲಿ ಬಳಸುವ ಪದ್ಧತಿಯನ್ನು ಮಾತ್ರ ಉಪಯೋಗಿಸಿದ್ದಾರೋ?)

ಅನುವಾದವು ತಪ್ಪಾದ ಶೈಲಿಯಲ್ಲಿ ಭಾಷೆಯನ್ನು ಉಪಯೋಗಿಸುವುದಾದರೆ, ಅದರ ಬಗ್ಗೆ ಗಮನ ಹರಿಸಿ, ಅದನ್ನು ಎತ್ತಿ ಹಿಡಿಯಿರಿ. ಇದರಿಂದ ನೀವು ಅದರ ಕುರಿತಾಗಿ ಅನುವಾದ ತಂಡದೊಂದಿಗೆ ಚರ್ಚೆ ಮಾಡಬಹುದು.


ಅಧಿಕಾರದ ಪರಿಶೀಲನೆ ಮತ್ತು ಅದರ ಪ್ರಕ್ರೀಯೆಯ ಪರಿಶೀಲನೆ

Checking Manual :: ಅಧಿಕಾರದ ಪರಿಶೀಲನೆ ಮತ್ತು ಅದರ ಪ್ರಕ್ರೀಯೆಯ ಪರಿಶೀಲನೆ

ವಿವರಣೆ

ಹೊಣೆಗಾರಿಕೆ

ಬೈಬಲ್ ಸಭೆಯ ಚರಿತ್ರೆಗೆ (ಚರಿತ್ರೆಯೆಲ್ಲಾ ಸಂಘಟನೆಗಳಿಗೂ) ಮತ್ತು ವಿಶ್ವಕ್ಕೂ (ಪ್ರಪಂಚದಲ್ಲಿರುವ ಎಲ್ಲಾವುದಕ್ಕೂ) ಸಂಬಂಧ ಹೊಂದಿರುತ್ತದೆ. ಸಭೆಯ ಪ್ರತಿಯೊಂದು ಭಾಗವು ಸಭೆಯಲ್ಲಿರುವ ಇನ್ನೊಂದು ಭಾಗಕ್ಕೆ, ಅಂದರೆ ನಾವು ಆ ವಾಕ್ಯವನ್ನು ಹೇಗೆ ವ್ಯಾಖ್ಯಾನ ಮಾಡುತ್ತಿದ್ದೇವೆ, ಹೇಗೆ ಪ್ರಕಟನೆ ಮಾಡುತ್ತಿದ್ದೇವೆ ಮತ್ತು ಬೈಬಲ್ ಹೇಳುವ ವಿಷಯಗಳಿಗೆ ಹೇಗೆ ಜೀವನ ಮಾಡುತ್ತಿದ್ದೇವೆ ಎನ್ನುವ ವಿಷಯಗಳಲ್ಲಿ ಸಭೆ ಹೊಣೆಯಾಗಿರಬೇಕು. ಬೈಬಲ್ ಅನುವಾದಕ್ಕೆ ಸಂಬಂಧಪಟ್ಟ ವಿಷಯಕ್ಕೆ ಬರುವಾಗ, ಪ್ರಪಂದಲ್ಲಿರುವ ಪ್ರತಿಯೊಂದು ಭಾಷೆಗೆ ಬೈಬಲ್.ನಲ್ಲಿರುವ ಪ್ರತಿಯೊಂದು ವಿಷಯವನ್ನು ವ್ಯಕ್ತಪಡಿಸುವ ಸ್ವಂತ ವಿಧಾನ ಒಂದಿರುತ್ತದೆ. ಆದರೂ, ಅವರು ಆ ಅರ್ಥವನ್ನು ಹೇಗೆ ವ್ಯಕ್ತಪಡಿಸುತ್ತಿರುವ ಸಭೆಯ ಒಂದು ಒಂದು ಭಾಗ ಆ ಭಾಷೆಯನ್ನು ಮಾತನಾಡುವ ಸಭೆಯ ಮತ್ತೊಂದು ಭಾಗಕ್ಕೆ ಹೊಣೆಗಾರಿಕೆಯಾಗಿರಬೇಕು. ಆ ಕಾರಣದಿಂದಲೇ, ಬೈಬಲ್ ಅನುವಾದ ಮಾಡುವ ಪ್ರತಿಯೊಬ್ಬರೂ ಅದನ್ನು ಬೇರೊಬ್ಬರು ಹೇಗೆ ಅನುವಾದ ಮಾಡಿದ್ದಾರೆಂದು ಅಧ್ಯಯನ ಮಾಡಲೇ ಬೇಕು. ಅವರು ತಪ್ಪದೇ ಬೈಬಲ್ ಭಾಷೆಗಳಲ್ಲಿ ತುಂಬಾ ಹೆಚ್ಚಾದ ಪರಿಣಿತಿಯನ್ನು ಪಡೆದಂಥವರಿಂದ ಸರಿಮಾಡಿಕೊಳ್ಳುವುದಕ್ಕೆ ಸಿದ್ಧರಿರಬೇಕು ಮತ್ತು ಅವರಿಂದ ಸಲಹೆಗಳನ್ನು ಪಡೆದುಕೊಳ್ಳಬೇಕು. ಅಷ್ಟೇ ಅಲ್ಲದೆ, ಅದನ್ನು ಸಭೆ ಹೇಗೆ ಅರ್ಥಮಾಡಿಕೊಂಡಿದೆ ಮತ್ತು ಇತಿಹಾಸದ ಮೂಲಕ ಬೈಬಲನ್ನು ಹೇಗೆ ವ್ಯಾಖ್ಯಾನಿಸಿದೆ ಎಂದೆನ್ನುವ ವಿಷಯಗಳನ್ನು ಸಹ ಅವರು ಅರ್ಥಮಾಡಿಕೊಳ್ಳಬೇಕು.

ಅಧಿಕಾರ ಮತ್ತು ಸಾಮರ್ಥ್ಯ

ಮೇಲೆ ಅರ್ಥಮಾಡಿಕೊಂಡಿರುವ ಪ್ರಕಾರ, ಪ್ರತಿಯೊಂದು ಭಾಷೆಯನ್ನು ಮಾತನಾಡುವ ಸಭೆಯು ತಮ್ಮ ಭಾಷೆಯಲ್ಲಿ ಅನುವಾದ ಮಾಡಿರುವ ಬೈಬಲ್ ಎಷ್ಟರಮಟ್ಟಿಗೆ ಉತ್ತಮವಾಗಿದೆಯೋ ಇಲ್ಲವೋ ಎಂದು ಅಥವಾ ಚೆನ್ನಾಗಿದೆಯೋ ಇಲ್ಲವೋ ಎಂದು ತಮಗೋಸ್ಕರ ತಾವೇ ನಿರ್ಣಯಿಸಿಕೊಳ್ಳುವ ಅಧಿಕಾರ ಹೊಂದಿಕೊಂಡಿರುತ್ತದೆ. ಪರಿಶೀಲನೆ ಮಾಡುವುದಕ್ಕೆ ಮತ್ತು ಬೈಬಲ್ ಅನುವಾದವನ್ನು ಅನುಮೋದನೆ ಮಾಡುವದಕ್ಕೆ ಇರುವ ಅಧಿಕಾರ ಸಾಮರ್ಥ್ಯದಿಂದ ಬೇರ್ಪಡಿಸಲಾಗಿರುತ್ತದೆ, ಅಥವಾ ಬೈಬಲ್ ಅನುವಾದವನ್ನು ಪರಿಶೀಲನೆ ಮಾಡುವ ಪ್ರಕ್ರೀಯೆಯಿಂದ (ಈ ವಿಧಾನವನ್ನು ಇನ್ನೂ ಹೆಚ್ಚಾಗಿ ಮಾಡಲಾಗಿರುತ್ತದೆ) ಸಾಮರ್ಥ್ಯವನ್ನು ತೆಗೆದುಹಾಕಲಾಗಿರುತ್ತದೆ. ಬೈಬಲ್ ಅನುವಾದದ ಗುಣಮಟ್ಟವನ್ನು ನಿರ್ಧರಿಸುವ ಅಧಿಕಾರವು ಅನುವಾದದ ಭಾಷೆಯನ್ನು ಮಾತನಾಡುವ ಸಭೆಗೆ ಸಂಬಂಧಪಟ್ಟಿರುತ್ತದೆ, ತಮ್ಮ ಪ್ರಸ್ತುತ ಸಾಮರ್ಥ್ಯ, ಅನುಭವ ಮೇಲೆ ಆಧಾರಪಟ್ಟಿರುತ್ತದೆ, ಅಥವಾ ಬೈಬಲ್ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಕೊಡುವ ಸಂಪನ್ಮೂಲಗಳನ್ನು ಉಪಯೋಗಿಸುವದರ ಮೇಲೆ ಆಧಾರಪಟ್ಟಿರುತ್ತದೆ. ಆದ್ದರಿಂದ, ಭಾಷೆಯನ್ನು ಮಾತನಾಡುವ ಸಮುದಾಯದಲ್ಲಿರುವ ಸಭೆಯು ಪರಿಶೀಲನೆ ಮಾಡುವ ಅಧಿಕಾರವನ್ನು ಮತ್ತು ತಮ್ಮ ಬೈಬಲ್ ಅನುವಾದವನ್ನು ಅವರೇ ಅನುಮೋದನೆ ಮಾಡಿಕೊಳ್ಳುವುದಕ್ಕು, unfoldingWord ಉಪಕರಣಗಳನ್ನು ಉಪಯೋಗಿಸುವುದಕ್ಕು ಹಕ್ಕನ್ನು ಪಡೆದುಕೊಂಡಿರುತ್ತದೆ. ಇದರಲ್ಲಿ translationAcademy ಯ ಘಟಕಗಳು ಹೊಂದಿರುತ್ತವೆ, ಉತ್ತಮವಾದ ವಿಧಾನವನ್ನು ಉಪಯೋಗಿಸಿ ತಮ್ಮ ಬೈಬಲ್ ಅನುವಾದದ ಗುಣಮಟ್ಟವನ್ನು ಪರಿಶೀಲನೆ ಮಾಡುವುದಕ್ಕೆ ಪ್ರತಿಯೊಂದು ಸಭೆಯು ಸಾಮರ್ಥ್ಯವನ್ನು ಹೊಂದಿರುತ್ತದೆಯೆಂದು ನಿಶ್ಚಯಗೊಳಿಸುಕೊಳ್ಳುವುದಕ್ಕೆ ಈ ಘಟಕಗಳನ್ನು ತಯಾರು ಮಾಡಲಾಗಿರುತ್ತದೆ. ಬೈಬಲ್ ಪರಿಣಿತಿಯನ್ನು ಪಡೆದವರು ಬೈಬಲ್ ಕುರಿತಾಗಿ ಹೇಳಿರುವ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೂ ಮತ್ತು ಇತರ ಭಾಷೆಗಳಲ್ಲಿ ಅದನ್ನು ಸಭೆಯ ಇತರ ಭಾಗಗಳಲ್ಲಿರುವವರು ಹೇಗೆ ಅನುವಾದ ಮಾಡಿದ್ದಾರೆಂದು ತಿಳಿದುಕೊಳ್ಳುವುದಕ್ಕೆ ಪ್ರತಿಯೊಂದು ಭಾಷೆಯ ಸಮುದಾಯದಲ್ಲಿರುವ ಸಭೆಗೆ ಈ ಉಪಕರಣಗಳನ್ನು ಕೊಡಲು ತಯಾರಿಸಲಾಗಿರುತ್ತದೆ.

ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಇರುವ ಪ್ರಕ್ರೀಯೆಯ ಕುರಿತಾಗಿ ಕೈಪಿಡಿಯಲ್ಲಿ ಇನ್ನೂ ಹೆಚ್ಚಾಗಿ ವಿವರಿಸಲ್ಪಟ್ಟಿರುತ್ತದೆ.


ಅನುವಾದ ಪದಗಳ ಪರಿಶೀಲನೆ

Checking Manual :: ಅನುವಾದ ಪದಗಳ ಪರಿಶೀಲನೆ

ಮೂಲ ಅನುವಾದದಲ್ಲಿ ಅನುವಾದ ಪದಗಳ ಪರಿಶೀಲನೆ ಹೇಗೆ ಮಾಡಬೇಕು

  • ಮೂಲ ಅನುವಾದ ದೊಳಗೆ ಸೈನ್ ಇನ್ ಆಗಿರಿ
  • ನೀವು ಪರಿಶೀಲನೆ ಮಾಡಬೇಕೆಂದೆನ್ನುವ (ಬೈಬಲ್ ಪುಸ್ತಕವನ್ನು) ಪ್ರಾಜೆಕ್ಟನ್ನು ಆಯ್ಕೆ ಮಾಡಿಕೊಳ್ಳಿರಿ
  • ನೀವು ಪರಿಶೀಲನೆ ಮಾಡಬೇಕೆನ್ನುವ ಪದಗಳ ಅಥವಾ ಶಬ್ದಗಳ ವರ್ಗ ಅಥವಾ ವರ್ಗ ಗಳನ್ನು ಆಯ್ಕೆಮಾಡಿಕೊಳ್ಳಿರಿ
  • ನಿಮ್ಮ ಉಪಯೋಗಿಸಲ್ಪಡುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿರಿ
  • “ಪ್ರಾರಂಭಿಸು” ಒತ್ತಿರಿ
  • ಬೈಬಲ್ ವಾಕ್ಯದ ಬಲ ಬದಿಯಲ್ಲಿ ಕಾಣಿಸುವ ಸೂಚನೆಗಳನ್ನು ಅನುಸರಿಸುವದರ ಮೂಲಕ ಎಡ ಬದಿಯಲ್ಲಿರುವ ಶಬ್ದಗಳ ಪಟ್ಟಿಯ ಮೂಲಕ ಕೆಲಸ ಮಾಡಿರಿ.
  • ಮೂಲ ಶಬ್ದವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ನೀವು ನೀಲಿ ಬಾರ್.ನಲ್ಲಿ ಬರುವ ಚಿಕ್ಕ ವ್ಯಾಖ್ಯಾನವನ್ನು ಓದಬಹುದು, ಅಥವಾ ಬಲ ಬದಿಯಲ್ಲಿ ಪ್ಯಾನೆಲ್.ನಲ್ಲಿರುವ ದೊಡ್ಡ ನಿರ್ವಚನವನ್ನು ನೋಡಬಹುದು.
  • ಪಟ್ಟಿಯಲ್ಲಿ ವಾಕ್ಯವನ್ನಾಗಲಿ ಅಥವಾ ಶಬ್ದವನ್ನಾಗಲಿ ಅನುವಾದಕ್ಕಾಗಿ ಆಯ್ಕೆ ಮಾಡಿದನಂತರ (ಹೈಲೆಟ್ ಮಾಡಿದನಂತರ), “ಉಳಿಸಿ” ಎನ್ನುವದನ್ನು ಒತ್ತಿರಿ.
  • ಅನುವಾದ ಪದಕ್ಕಾಗಿ ಆಯ್ಕೆ ಮಾಡಲ್ಪಟ್ಟಿರುವ ಪದವು ಈ ಸಂದರ್ಭದಲ್ಲಿ ಅರ್ಥವನ್ನು ಕೊಡುತ್ತಿದೆಯೋ ಇಲ್ಲವೋ ಎಂದು ಗಮನಿಸಿರಿ.
  • ಅನುವಾದ ಪದಕ್ಕೆ ಅನುವಾದವು ಒಳ್ಳೇಯ ಅನುವಾದವೆಂದು ನೀವು ಆಲೋಚನೆ ಮಾಡಿದರೆ, “ಉಳಿಸಿ ಮತ್ತು ಮುಂದೆವರಿಸಿ” ಎನ್ನುವದನ್ನು ಒತ್ತಿರಿ.
  • ಪದಕ್ಕಾಗಿ ಅಥವಾ ಮಾತಿಗಾಗಿ ಮಾಡಿರುವ ಅನುವಾದವು ಸರಿಯಲ್ಲವೆಂದು ಅಥವಾ ವಾಕ್ಯದೊಂದಿಗೆ ಏನಾದರೂ ಸಮಸ್ಯೆಯಿದೆಯೆಂದು ನೀವು ಆಲೋಚನೆ ಮಾಡಿದರೆ, ತಕ್ಷಣವೇ ಅದನ್ನು ಸರಿಪಡಿಸುವದಕ್ಕಾಗಿ ಆ ವಾಕ್ಯವನ್ನು ತಿದ್ದುಪಡಿ ಮಾಡಿರಿ, ಅಥವಾ ನೀವು ಇಲ್ಲಿರುವ ಅನುವಾದದ ವಿಷಯದಲ್ಲಿ ನಿಮ್ಮ ಆಲೋಚನೆಯು ತಪ್ಪಾಗಿರಬಹುದೆಂದು ನಿಮ್ಮ ಕೆಲಸವನ್ನು ಪರಿಶೀಲನೆ ಮಾಡುವವರಿಗೆ ನಿಮ್ಮ ವ್ಯಾಖ್ಯೆಯನ್ನು ಹೇಳಿರಿ.
  • ನೀವು ತಿದ್ದುಪಡಿ ಮಾಡಿರುವದಾದರೆ, ನೀವು ನಿಮ್ಮ ಆಯ್ಕೆಯನ್ನು ಮತ್ತೊಂದುಬಾರಿ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ.
  • ನೀವು ತಿದ್ದುಪಡಿ ಮಾಡುವುದನ್ನು ಅಥವಾ ವ್ಯಾಖ್ಯೆಯನ್ನು ಮಾಡುವದನ್ನು ಮುಗಿಸಿದನಂತರ, “ಉಳಿಸಿ ಮತ್ತು ಮುಂದುವರೆಸಿ” ಎನ್ನುವದನ್ನು ಒತ್ತಿರಿ. ನೀವು ಕೇವಲ ಅನುವಾದ ಪದಗಳ ಕುರಿತಾಗಿ ಮಾತ್ರವೇ ವ್ಯಾಖ್ಯೆ ಮಾಡುವುದಕ್ಕೆ ಪ್ರಾಧಾನ್ಯತೆ ಕೊಡುವುದಾದರೆ, ಅದಕ್ಕಾಗಿ ಭಾಗವನ್ನು ತಯಾರಿಸಬೇಡಿರಿ, ಆದನಂತರ ಮುಂದಕ್ಕೆ ಹೋಗುವುದಕ್ಕೆ ಎಡಬದಿಯಲ್ಲಿರುವ ಪಟ್ಟಿಯಲ್ಲಿನ ಇನ್ನೊಂದು ವಾಕ್ಯವನ್ನು ಒತ್ತಿರಿ.

ಅನುವಾದ ಪದಗಳ ಬಂದಿರುವ ಪ್ರತಿಯೊಂದು ವಾಕ್ಯಕ್ಕಾಗಿ ಆಯ್ಕೆ ಮಾಡಿದನಂತರ, ಆ ವಾಕ್ಯಕ್ಕಾಗಿರುವ ಪಟ್ಟಿಯನ್ನು ಪರಿಶೀಲನೆ ಮಾಡಬಹುದು. ಕೆಳಗಿರುವ ಸೂಚನೆಗಳೆಲ್ಲವು ಪುನರ್ಪರಿಶೀಲನೆ ಮಾಡುವವರಿಗೆ ಅಥವಾ ಅನುವಾದ ತಂಡದವರಿಗೆ ಕೊಡಲ್ಪಟ್ಟಿವೆ.

  • ಎಡಬದಿಯಲ್ಲಿರುವ ಅನುವಾದ ಪದಗಳ ಪ್ರತಿಯೊಂದು ಕೆಳಗಿನ ಪ್ರತಿಯೊಂದು ಅನುವಾದ ಪದಗಳಿಗಾಗಿ ಮಾಡಲ್ಪಟ್ಟಿರುವ ಅನುವಾದಗಳ ಪಟ್ಟಿಕೆಗಳನ್ನು ನೀವೀಗ ನೋಡಬಹುದು. ನೀವು ಅನುವಾದ ಪದಗಳ ನ್ನು ವಿವಿಧವಾದ ವಿಧಾನಗಳಲ್ಲಿ ಅನುವಾದ ಮಾಡಿರುವದನ್ನು ನೋಡುವುದಾದರೆ, ಪ್ರತಿಯೊಂದು ಸಂದರ್ಭಕ್ಕೋಸ್ಕರ ಗುರಿಯ ಭಾಷೆಯ ಸರಿಯಾದ ಪದಗಳನ್ನು ಬಳಸಿದ್ದಾರೋ ಇಲ್ಲವೋ ಎಂದು ನೋಡುವುದಕ್ಕೆ ವ್ಯತ್ಯಾಸಗಳಿರುವ ಪದಗಳನ್ನು ನೀವು ಪರಿಶೀಲನೆ ಮಾಡಬೇಕು.
  • ಇತರರಿಂದ ಮಾಡಲ್ಪಟ್ಟಿರುವ ಇತರ ಎಲ್ಲಾ ವ್ಯಾಖ್ಯೆಗಳನ್ನು ಪರಿಶೀಲನೆ ಮಾಡಬೇಕು. ಅದನ್ನು ಮಾಡುವುದಕ್ಕೆ, ಮೇಲಿನ ಎಡಬದಿಯಲ್ಲಿರುವ “ಕಾರ್ಯಕ್ರಮಗಳ ಪಟ್ಟಿ”ಗೆ ಬಲಬದಿಯಲ್ಲಿರುವ ಲಾಳಿಕೆಯ ಗುರುತನ್ನು ಒತ್ತಿರಿ. ಆಗ ಪಟ್ಟಿಕೆ ತೆರೆಯಲ್ಪಡುವದು, ಅದರಲ್ಲಿ “ವ್ಯಾಖ್ಯೆಗಳ” ಮಾತುಗಳು ಕೂಡ ಒಳಗೊಂಡಿರುತ್ತವೆ.
  • “ವ್ಯಾಖ್ಯೆಗಳು” ಪಕ್ಕದಲ್ಲಿಯೇ ಇರುವ ಪೆಟ್ಟಿಗೆಯನ್ನು ಒತ್ತಿರಿ. ಅವುಗಳಲ್ಲಿ ವ್ಯಾಖ್ಯೆಗಳಿರದ ಎಲ್ಲಾ ಮಾತುಗಳು ಕಾಣಿಸಿಕೊಳ್ಳದಂತೆ ಇದು ಮಾಡುತ್ತದೆ.
  • ವ್ಯಾಖ್ಯೆಗಳನ್ನು ಓದುವುದಕ್ಕೆ, ಪಟ್ಟಿಯಲ್ಲಿ ಮೊದಲ ವ್ಯಾಖ್ಯೆಯನ್ನು ಒತ್ತಿರಿ.
  • “ವ್ಯಾಖ್ಯೆ” ಎನ್ನುವದರ ಮೇಲೆ ಒತ್ತಿರಿ.
  • ವ್ಯಾಖ್ಯೆಯನ್ನು ಓದಿರಿ, ಮತ್ತು ಅದರ ಕುರಿತಾಗಿ ನೀವು ಮಾಡುವುದನ್ನು ನಿರ್ಣಯಿಸಿಕೊಳ್ಳಿರಿ.
  • ಆ ಮಾತನ್ನು ನೀವು ತಿದ್ದುಪಡಿ ಮಾಡಬೇಕೆಂದು ನೀವು ನಿರ್ಣಯಿಸಿಕೊಂಡರೆ, “ರದ್ದು ಮಾಡಿ” ಎನ್ನುವದನ್ನು ಒತ್ತಿ ಮತ್ತು “ಮಾತನ್ನು ತಿದ್ದುಪಡಿಸಿರಿ” ಎನ್ನುವದನ್ನು ಒತ್ತಿರಿ. ಆಗ ಅದು ಆ ಮಾತನ್ನು ತಿದ್ದುಪಡಿಸುವುದಕ್ಕೆ ಒಂದು ಚಿಕ್ಕ ಪರದೆಯನ್ನು ತೆರೆಯುತ್ತದೆ.
  • ನೀವು ತಿದ್ದುಪಡಿಯನ್ನು ಮಾಡಿ ಮುಗಿಸಿದ ಮೇಲೆ, ಅದನ್ನು ಬದಲಾಯಿಸುವ ಕಾರಣವನ್ನು ಆಯ್ಕೆ ಮಾಡಿರಿ, ಮತ್ತು “ಉಳಿಸಿ” ಎನ್ನುವದನ್ನು ಒತ್ತಿರಿ.
  • ನಿಮಗೆ ಕೊಡಲ್ಪಟ್ಟಿರುವ ವ್ಯಾಖ್ಯೆಗಳೆಲ್ಲವುದರ ಮೇಲೆ ನೀವು ಕೆಲಸ ಮಾಡುವವರೆಗೂ ಈ ಕ್ರಮವನ್ನು ಮುಂದೆವರಿಸಿರಿ.

ಆ ಸಂದರ್ಭದಲ್ಲಿ ಕೆಲವೊಂದು ಅನುವಾದ ಪದಗಳ ಗೋಸ್ಕರ ಉಪಯೋಗಿಸಿದ ಅನುವಾದವು ಸರಿಯಾಗಿಲ್ಲವೆಂದು ನಿಮಗೆ ನಿಶ್ಚಯವಿಲ್ಲದಿದ್ದರೆ, ಅನುವಾದ ತಂಡವು ಮಾಡುವ ಅನುವಾದವು ಅನುವಾದ ಪದಗಳ ಹಾಳೆಯನ್ನು ನೋಡುವುದಕ್ಕೆ ಅದು ಸಹಾಯಕರವಾಗಿರಬಹುದು. ಅನುವಾದ ತಂಡದ ಮೇಲೆ ನೀವು ಇತರರೊಂದಿಗೆ ಕಠಿಣ ಪದಕ್ಕೋಸ್ಕರ ಚರ್ಚೆ ಮಾಡಬಹುದು ಮತ್ತು ಎಲ್ಲರು ಸೇರಿ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನ ಮಾಡಬಹುದು. ಕೆಲವೊಂದು ಸಂದರ್ಭಗಳಲ್ಲಿ ನೀವು ವಿವಿಧ ಪದಗಳನ್ನು ಉಪಯೋಗಿಸಿಕೊಳ್ಳಬಹುದು, ಅಥವಾ ಅನುವಾದ ಪದಗಳ ಪದವನ್ನು ಅನುವಾದ ಮಾಡುವುದಕ್ಕೆ ಬೇರೊಂದು ಮಾರ್ಗವನ್ನು ಕಂಡುಹಿಡಿಯಬಹುದು, ಅಂದರೆ ದೊಡ್ಡ ವಾಕ್ಯವನ್ನು ಬಳಸಿ ಅನುವಾದ ಮಾಡಬಹುದು.


ಉತ್ತಮವಾದ ವಿನ್ಯಾಸವನ್ನು ಪರಿಶೀಲನೆ ಮಾಡುವುದು ಹೇಗೆ?

Checking Manual :: ಉತ್ತಮವಾದ ವಿನ್ಯಾಸವನ್ನು ಪರಿಶೀಲನೆ ಮಾಡುವುದು ಹೇಗೆ?

ಅನುವಾದವು ಸುಲಭವಾಗಿ ಮಾಡಬಲ್ಲ, ಅರ್ಥಮಾಡಿಕೊಳ್ಳ ಮತ್ತು ಸಾಧ್ಯವಾದಷ್ಟು ಓದುವುದಕ್ಕೆ ಸುಲಭವಾಗಿರುವ ಹಾಗೆ ಬೈಬಲ್ ಪುಸ್ತಕದ ಅನುವಾದದನಂತರ, ಇಲ್ಲದೇ ಅದರ ಮಧ್ಯದಲ್ಲಿ ಅಥವಾ ಅದಕ್ಕೆ ಮುಂಚಿತವಾಗಿಯೂ ನೀವು ಮಾಡುವ ಪರಿಶೀಲನೆಗಳು ಇರುತ್ತವೆ. ಈ ವಿಷಯಗಳ ಮೇಲೆ ಪ್ರಮಾಣದ ಮಾದರಿಗಳು ಇಲ್ಲಿ ಕ್ರಮವುಳ್ಳ ಮತ್ತು ಪ್ರಕಾಶನ ಕೆಳಗೆ ಒಂಗೂಡಿಸಲ್ಪಟ್ಟಿವೆ, ಆದರೆ ಅನುವಾದ ತಂಡವು ಅನುವಾದದ ವಿಧಾನದ ಕುರಿತಾಗಿ ಆಲೋಚನೆ ಮಾಡುವ ಮತ್ತು ನಿರ್ಣಯ ತೆಗೆದುಕೊಳ್ಳುವ ವಿಷಯಗಳಿವೆ.

ಅನುವಾದ ಮಾಡುವದಕ್ಕೆ ಮುಂಚಿತವಾಗಿ

ನೀವು ಅನುವಾದ ಮಾಡುವುದಕ್ಕೆ ಮುಂಚಿತವಾಗಿ ಈ ಕೆಳಗೆ ಕೊಡಲ್ಪಟ್ಟಿರುವ ವಿಷಯಗಳ ಕುರಿತಾಗಿ ಅನುವಾದ ತಂಡವು ನಿರ್ಣಯಗಳು ತೆಗೆದುಕೊಳ್ಳಬೇಕಾಗಿರುತ್ತದೆ.

  1. ವರ್ಣಮಾಲೆ ([ಸರಿಯಾದ ವರ್ಣಮಾಲೆ] (…/alphabet/01.md)ಯನ್ನು ನೋಡಿರಿ)
  2. ನುಡಿಗಟ್ಟುಗಳು ([ಸರಿಯಾದ ನುಡಿಗಟ್ಟುಗಳು] (…/spelling/01.md) ನೋಡಿರಿ)
  3. ಚಿಹ್ನೆಗಳು ([ಸರಿಯಾದ ಚಿಹ್ನೆಗಳು] (…/punctuation/01.md) ನೋಡಿರಿ)

ಅನುವಾದ ಮಾಡುವಾಗ

ನೀವು ಕೆಲವೊಂದು ಅಧ್ಯಾಯಗಳನ್ನು ಅನುವಾದ ಮಾಡಿದನಂತರ, ಅನುವಾದ ತಂಡವು ಅನುವಾದ ಮಾಡುವಾಗ ಕಂಡುಕೊಂಡ ಕೆಲವೊಂದು ಸಮಸ್ಯೆಗಳನ್ನು ಪರಿಷ್ಕಾರ ಮಾಡುವುದಕ್ಕೆ ಈ ನಿರ್ಣಯಗಳಲ್ಲಿ ಕೆಲವೊಂದನ್ನು ತಿರುಗಿ ಸರಿಪಡಿಸಬಹುದು. ನಿಮಗೆ ಪ್ಯಾರ ಟೆಕ್ಸ್ಟ್ ಲಭ್ಯದಲ್ಲಿರುವುದಾದರೆ, ಈ ಸಮಯದಲ್ಲಿ ಪ್ಯಾರ ಟೆಕ್ಸ್ಟ್.ನಲ್ಲಿ ಸರಿಯಾದ ಪರಿಶೀಲನೆಗಳನ್ನು ಮಾಡಬಹುದು. ಇದರಿಂದ ನೀವು ನುಡಿಗಟ್ಟುಗಳ ಕುರಿತಾಗಿ ಮತ್ತು ಚಿಹ್ನೆಗಳ ಕುರಿತಾಗಿ ಹೆಚ್ಚಿನ ನಿರ್ಣಯಗಳನ್ನು ತೆಗೆದುಕೊಳ್ಳಬೇಕೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು.

ಪುಸ್ತಕವನ್ನು ಪೂರ್ತಿಗೊಳಿಸಿದನಂತರ

ಪುಸ್ತಕವನ್ನು ಸಂಪೂರ್ತಿಗೊಳಿಸಿದನಂತರ, ಎಲ್ಲಾ ವಚನಗಳು ಅಲ್ಲಿವೆಯೆಂದು ನಿರ್ಧಾರ ಮಾಡಿಕೊಳ್ಳುವುದಕ್ಕೆ ನೀವು ಪರಿಶೀಲನೆ ಮಾಡಬಹುದು, ಮತ್ತು ನೀವು ಆಯಾ ವಿಭಾಗಗಳ ಹೆಸರುಗಳನ್ನು ಕೂಡ ನಿರ್ಣಯಿಸಬಹುದು. ನೀವು ಅನುವಾದ ಮಾಡುತ್ತಿರುವಾಗ ವಿಭಾಗಗಳ ಹೆಸರುಗಳನ್ನು ಬರೆಯುವ ಆಲೋಚನೆಗಳಿಗೆ ಇದು ಸಹಾಯಕರವಾಗಿರುತ್ತದೆ.

  1. ರಚನೆ (ಸಂಪೂರ್ಣ ರಚನೆಯನ್ನು ನೋಡಿರಿ)
  2. ವಿಭಾಗಗಳ ಹೆಸರುಗಳು (ವಿಭಾಗಗಳ ಹೆಸರುಗಳುನೋಡಿರಿ)

ಕೈ ಪಿಡಿ ಪರಿಶೀಲನೆಯ ಪರಿಚಯ

Checking Manual :: ಕೈ ಪಿಡಿ ಪರಿಶೀಲನೆಯ ಪರಿಚಯ

ಅನುವಾದ ಪರಿಶೀಲನೆ ಮಾಡುವ ಕೈ ಪಿಡಿ

ನಿಖರತೆಗಾಗಿ, ಸ್ಪಷ್ಟತೆಗಾಗಿ, ಮತ್ತು ಸ್ವಾಭಾವಿಕತೆಗಾಗಿ ಇತರ ಭಾಷೆಗಗಳಲ್ಲಿ ಮಾಡಿದ ಬೈಬಲ್ ಅನುವಾದಗಳನ್ನು ಹೇಗೆ ಪರಿಶೀಲನೆ ಮಾಡಬೇಕೆಂದು ಈ ಕೈ ಪುಸ್ತಕವು ವಿವರಿಸುತ್ತದೆ. (ಗೇಟ್ ವೇ ಭಾಷೆಯನ್ನು ಪರಿಶೀಲನೆ ಮಾಡುವುದಕ್ಕಿರುವ ಪದ್ಧತಿಗಾಗಿ, Gateway Language Manual ನೋಡಿರಿ)). ಈ ಅನುವಾದ ಪರಿಶೀಲನೆ ಮಾಡುವ ಕೈ ಪುಸ್ತಕವು ಕೂಡ ಅನುವಾದವನ್ನು ಅನುಮೋದನೆ ಮಾಡುವ ಪ್ರಾಮುಖ್ಯತೆಯ ಕುರಿತಾಗಿ ಮತ್ತು ಭಾಷೆಯ ಪ್ರಾಂತ್ಯದ ಸಭೆಯ ನಾಯಕರಿಂದ ಅನುವಾದ ಪದ್ಧತಿಯ ಕುರಿತಾಗಿಯು ಚರ್ಚೆ ಮಾಡುತ್ತದೆ

ಅನುವಾದ ತಂಡವು ತಮ್ಮ ಕೆಲಸಗಳನ್ನು ಒಬ್ಬರನ್ನೊಬ್ಬರು ಪರಿಶೀಲನೆ ಮಾಡುವುದಕ್ಕೆ ಉಪಯೋಗಿಸುವ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಕೈ ಪುಸ್ತಕವು ನಿಯಮಗಳೊಂದಿಗೆ ಆರಂಭವಾಗುತ್ತದೆ. ಈ ಪರಿಶೀಲನೆಗಳಲ್ಲಿ [ಬಾಯಿ ಮಾತಿನಿಂದ ಪರಿಶೀಲನೆ ಮಾಡುವವರು ಇರುತ್ತಾರೆ] (…/peer-check/01.md) ಮತ್ತು [ತಂಡದವರೆಲ್ಲರು ಬಾಯಿ ಮಾತಿನಿಂದ ಪರಿಶೀಲನೆ ಮಾಡುವ ಭಾಗಗಳು ಇರುತ್ತವೆ] (…/team-oral-chunk-check/01.md). translationCore ಸಾಫ್ಟ್.ವೇರ್ ಮೂಲಕ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಅನುವಾದ ತಂಡವು ಉಪಯೋಗಿಸಬೇಕಾದ ಕೆಲವು ನಿಯಮಗಳನ್ನು ಕೊಡಲ್ಪಟ್ಟಿರುತ್ತವೆ. ಇವುಗಳಲ್ಲಿ [ಅನುವಾದ ಪದಗಳ ಪರಿಶೀಲನೆ] (…/important-term-check/01.md) ಮತ್ತು [ಅನುವಾದ ಸೂಚನೆಗಳನ್ನು ಪರಿಶೀಲನೆ] ಒಳಗೊಂಡಿರುತ್ತವೆ (…/trans-note-check/01.md).

ಇದೆಲ್ಲಾ ಆದನಂತರ, ಸ್ಪಷ್ಟತೆಗಾಗಿ ಮತ್ತು ಸ್ವಾಭಾವಿಕತೆಗಾಗಿ [ಭಾಷೆಯ ಸಮುದಾಯದೊಂದಿಗೆ] ಅನುವಾದವನ್ನು ಪರಿಶೀಲನೆ ಮಾಡುವ ಅವಶ್ಯಕತೆ ಅನುವಾದ ತಂಡಕ್ಕೆ ಇರುತ್ತದೆ. ಇದಕ್ಕೆ ಕಾರಣ ಅನುವಾದ ತಂಡಕ್ಕೆ ಗೊತ್ತಿರದ ಕೆಲವೊಂದು ವಿಷಯಗಳನ್ನು ಇನ್ನೂ ಇತರ ಭಾಷೆಯನ್ನು ಮಾತನಾಡುವವರು ಸಲಹೆಗಳನ್ನು ನೀಡುವುದರಿಂದ ಇದು ತುಂಬಾ ಪ್ರಾಮುಖ್ಯ. ಕೆಲವೊಂದುಬಾರಿ ಅನುವಾದ ತಂಡವು ಅನುವಾದವನ್ನು ಒಂದು ರೀತಿಯಲ್ಲಿ ಅಂದರೆ ಅರ್ಥವಾಗದ ರೀತಿಯಲ್ಲಿ ಮಾಡುತ್ತಿರುತ್ತಾರೆ, ಯಾಕಂದರೆ ಅವರು ಮೂಲ ಭಾಷೆಯನ್ನೂ ಭಾಷೆಯಲ್ಲಿನ ಅಕ್ಷರಾರ್ಥವಾಗಿ ಅನುವಾದ ಮಾಡುತ್ತಾರೆ. ಭಾಷೆಯನ್ನು ಮಾಡುವ ಇತರರು ಅದನ್ನು ಸರಿಪಡಿಸಲು ಸಹಾಯಕವಾಗಿರುತ್ತಾರೆ. ಇಂಥ ಸಮಯದಲ್ಲೇ ಅನುವಾದ ತಂಡವು ಇನ್ನೊಂದು ಪರಿಶೀಲನೆ ಮಾಡಬಹುದು, ಅದೇನಂದರೆ ಸಭಾಪಾಲಕರೊಂದಿಗೆ ಪರಿಶೀಲನೆ ಮಾಡಿಸುವುದು ಅಥವಾ [ಸಭಾ ನಾಯಕರ ಪರಿಶೀಲನೆ] ಮಾಡುವುದು (…/language-community-check/01.md). ಸಭಾಪಾಲಕರು ಗೇಟ್ ವೆ ಭಾಷೆಯಲ್ಲಿ ಬೈಬಲ್ ಕುರಿತಾಗಿ ಹೆಚ್ಚಾಗಿ ತಿಳಿದಿರುವುದರಿಂದ, ಅವರು ಅನುವಾದವು ನಿಖರತೆಯಾಗಿ ಇದೆಯೋ ಇಲ್ಲವೋ ಎಂದು ಗೇಟ್ ವೆ ಬೈಬಲ್.ಗಾಗಿ ಪರಿಶೀಲನೆ ಮಾಡುತ್ತಾರೆ. ಅನುವಾದ ತಂಡವು ನೋಡದ ಕೆಲವೊಂದು ತಪ್ಪುಗಳನ್ನು ಅವರು ಕೂಡ ಕಂಡುಹಿಡಿಯುತ್ತಾರೆ, ಯಾಕಂದರೆ ಅನುವಾದ ತಂಡವು ಆ ಕೆಲಸದಲ್ಲಿ ಅಷ್ಟು ಹತ್ತಿರವಾಗಿ ಅಥವಾ ಹೆಚ್ಚಾಗಿ ಕೆಲಸಮಾಡಿರುವುದಿಲ್ಲ. ಅಷ್ಟೇ ಅಲ್ಲದೆ, ಅನುವಾದ ತಂಡದಲ್ಲಿರದ ಭಾಷೆಯನ್ನು ಮಾತನಾಡದ ಸಭಾಪಾಲಕರಿಗೆ ಇರುವ ಬೈಬಲ್ ಜ್ಞಾನವು ಅಥವಾ ಅನುಭವವು ಅನುವಾದ ತಂಡಕ್ಕೆ ಇರದಿರಬಹುದು. ಈ ವಿಧಾನದಲ್ಲಿ, ಸಂಪೂರ್ಣ ಭಾಷೆಯ ಸಮುದಾಯದವರು ಭಾಷಾಂತರ ಮಾಡುವ ಭಾಷೆಯಲ್ಲಿ ಬೈಬಲ್ ಅನುವಾದವು ನಿಖರತೆಯಾಗಿದೆ, ಸ್ಪಷ್ಟವಾಗಿದೆ ಮತ್ತು ಸ್ವಾಭಾವಿಕವಾಗಿದೆಯೆಂದು ನಿಶ್ಚಯಪಡಿಸುವುದಕ್ಕೆ ಎಲ್ಲರು ಕೆಲಸ ಮಾಡುವರು.

ಬೈಬಲ್ ಅನುವಾದ ನಿಖರತೆಯನ್ನು ಪರಿಶೀಲನೆ ಮಾಡುವ ಇನ್ನಿತರ ವಿಧಾನವು ಏನಂದರೆ ನಲ್ಲಿ [ಶಬ್ದವನ್ನು ಜೋಡಣೆ] ಮಾಡುವ (…/accuracy-check/01.md) ಸಾಧನೆಯನ್ನು ಉಪಯೋಗಿಸಿ ಬೈಬಲ್ ಭಾಷೆಯ ವಾಸ್ತವಿಕ ಭಾಷೆಯಗಳನ್ನು ಜೋಡಿಸುವುದಾಗಿರುತ್ತದೆ. ಈ ಎಲ್ಲಾ ಪರಿಶೀಲನೆಗಳನ್ನು ಮಾಡಿದಾದನಂತರ ಮತ್ತು ಅನುವಾದವನ್ನು ಜೋಡಣೆ ಮಾಡಿದನಂತರ, ಸ್ಥಳೀಯ ಸಭೆಯ ನಾಯಕರ ಗುಂಪು ಅನುವಾದವನ್ನು [ಪುನರ್ ಪರಿಶೀಲನೆಯನ್ನು] (…/alignment-tool/01.md) ಮಾಡುವರು ಮತ್ತು ಅವರ [ಅನುಮೋದನೆಯನ್ನು] (…/vol2-steps/01.md) ತಿಳಿಸುವರು. ಯಾಕಂದರೆ ಸಭೆಯ ಅನೇಕಮಂದಿ ನಾಯಕರು ಅನುವಾದ ಮಾಡಿರುವ ಭಾಷೆಯನ್ನು ಮಾತನಾಡುವುದಿಲ್ಲ, ತಿದ್ದುಪಡಿ ಮಾಡುವುದಕ್ಕೆ [ಅನುವಾದಕ್ಕೆ ತಿರುಗಿ ಹೋಗುವುದಕ್ಕೆ] (…/level3-approval/01.md) ಕೆಲವೊಂದು ನಿಯಮಗಳು ಕೂಡ ಇದ್ದಾವೆ, ಇದರಿಂದ ಜನರು ಮಾತನಾಡದ ಭಾಷೆಯಲ್ಲಿ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಜನರಿಗೆ ಅನುಮತಿಯನ್ನು ಕೊಡುತ್ತವೆ.


ಕ್ರಮಬದ್ಧ ಪರಿಶೀಲನೆಯ ಹಂತಗಳು

Checking Manual :: ಕ್ರಮಬದ್ಧ ಪರಿಶೀಲನೆಯ ಹಂತಗಳು

ಕ್ರಮಬದ್ಧ ಪರಿಶೀಲನೆಯ ಹಂತಗಳು

ಕ್ರಮಬದ್ಧ ಪರಿಶೀಲನೆಯ ಮಾಡುವಾಗ ಸಭೆಯ ಪ್ರತಿನಿಧಿಗಳು ಈ ಹಂತಗಳನ್ನು ಅನುಸರಿಸಬೇಕು. ಪರೀಕ್ಷಕನು, ಅನುವಾದಕನಿಗು ಅಥವ ಅನುವಾದ ತಂಡಕ್ಕು ನೇರ ಸಂಪರ್ಕ ಹೊಂದಿದ್ದಾನೆ ಎಂದು ಈ ಎಲ್ಲಾ ಹಂತಗಳು ಊಹಿಸುತ್ತದೆ, ಮತ್ತು ಆತನು ಮುಖಮುಖಿಯಾಗಿ ಪ್ರಶ್ನೆಗಳನ್ನು ಕೇಳಬಹುದು ಯಾಕಂದರೆ ಪರೀಕ್ಷಕ ಮತ್ತು ಅನುವಾದ ತಂಡವು ಒಟ್ಟಾಗಿ ಪರಿಶೀಲಿಸುತ್ತದೆ. ಇದು ಸಾಧ್ಯವಾಗದಿದ್ದರೆ, ಪರೀಕ್ಷಕನು ವಿಮರ್ಶೆಗಾಗಿ ಅನುವಾದ ತಂಡಕ್ಕೆ ಪ್ರಶ್ನೆಗಳನ್ನು ಬರೆಯಬಹುದು. ಇದು ಮುದ್ರಿತ ಅನುವಾದ ಕರಡು ಪ್ರತಿಯ ಅಂಚಿನಲ್ಲಿರಬಹುದು, ಅಥವಾ ಸ್ಪ್ರೆಡ್ ಶೀಟಲ್ಲಿರಬಹುದು ಅಥವಾ ಮೂಲ ಅನುವಾದದ ಹೇಳಿಕೆ ವೈಶಿಷ್ಟ್ಯವನ್ನು ಬಳಸಬಹುದು.

ಪರಿಶೀಲಿಸುವ ಮೊದಲು

1.ಯಾವ ಕಥೆಗಳನ್ನು ಅಥವಾ ಸತ್ಯವೇದದ ಯಾವ ಭಾಗವನ್ನು ಪರಿಶೀಲಿಸುತ್ತಿದ್ದಿರಿ ಎಂಬುವುದನ್ನು ಮೊದಲೇ ಕಂಡುಹಿಡಿಯಿರಿ. 1.ನಿಮಗೆ ಅರ್ಥವಾಗುವ ಯಾವುದೇ ಭಾಷೆಯಲ್ಲಿ ಮತ್ತು ಹಲವಾರು ಅವೃತ್ತಿಗಳಲ್ಲಿ ಈ ಭಾಗವನ್ನು ಓದಿರಿ, ಸಾಧ್ಯವಾದರೆ ಮೂಲ ಭಾಷೆಯಲ್ಲಿ ಓದಿರಿ. 1.ULT ಮತ್ತು UST ಯಲ್ಲಿ ಈ ಭಗವನ್ನು ಓದಿರಿ ಮತ್ತು ಟಿಪ್ಪಣಿಗಳು ಹಾಗು ಅನುವಾದ ಪದಗಳನ್ನು ಓದಿರಿ. 1.ಅನುವಾದಿಸಲು ಕಷ್ಟ ಎಂದು ನೀವು ಭಾವಿಸುವ ಯಾವುದೇ ಭಾಗಗಳನ್ನು ಗಮನಿಸಿ. 1.ಅನುವಾದದ ಸಹಾಯ ಮತ್ತು ವ್ಯಾಖ್ಯಾನಗಳಲ್ಲಿ ಈ ಭಾಗಗಳನ್ನು ಸಂಶೋಧಿಸಿ, ಮತ್ತು ನೀವು ಕಂಡುಹಿಡಿದ ವಿಷಯದ ಬಗ್ಗೆ ಟಿಪ್ಪಣಿ ಬರೆಯಿರಿ.

ಪರಿಶೀಲಿಸುವಾಗ

1.**ವಾಕ್ಯದ ಭಾಗವನ್ನು ಹೊಂದಿಸಿ **. ವಾಕ್ಯ ಭಾಗವನ್ನು ಹೊಂದಿಸಲು ಮೂಲ ಭಾಷೆಯೊಂದಿಗೆ ಮೂಲ ಅನುವಾದದಲ್ಲಿ ಸಾಲುಗೂಡಿಕೆ ಸಾಧನವನ್ನು ಬಳಸಿ. ಹೊಂದಾಣಿಕೆ ಪ್ರಕ್ರಿಯೆಯ ಪರಿಣಾವವಾಗಿ, ಅನುವಾದದ ಭಾಗಗಳ ಕುರಿತು ನಿಮ್ಮಲ್ಲಿ ಅನೇಕ ಪ್ರಶ್ನೆಗಳಿರುತ್ತದೆ. ಮೂಲ ಅನುವಾದದಲ್ಲಿ ವ್ಯಾಖ್ಯೆ ವೈಶಿಷ್ಟದೊಂದಿಗೆ ಇವುಗಳ ಟಿಪ್ಪಣಿ ಬರೆಯಿರಿ. ಇದರಿಂದ ನೀವು ಅನುವಾದ ತಂಡವನ್ನು ಭೇಟಿಯಾದಾಗ ಅವರನ್ನು ಕೇಳಬಹುದು , ಅಥವ ನೀವು ಭೇಟಿಯಾಗವ ಮೊದಲು ಅನುವಾದ ತಂಡದವರು ಅದನ್ನು ನೋಡಿ ಚರ್ಚಿಸಬಹುದು. ಸಾಲುಗೂಡಿಕೆಯ ಸಾಧನದ ಮಾಹಿತಿಗಾಗಿ,ಸಾಲುಗೂಡಿಕೆ ಸಾಧನವನ್ನುನೋಡಿರಿ. 1.ಪ್ರಶ್ನೆ ಕೇಳಿರಿ. ನೀವು ಅನುವಾದ ತಂಡದೊಂದಿಗೆ ಇರುವಾಗ ಮತ್ತು ಅನುವಾದದಲ್ಲಿ ಸಮಸ್ಯ ಇರಬಹುದೆಂದು ನೀವು ಭಾವಿಸುವ ಯಾವುದನ್ನಾದರೂ ಪರಿಹರಿಸಲು ನೀವು ಬಯಸಿದ್ದಾಗ, ಅನುವಾದದಲ್ಲಿ ಸಮಸ್ಯ ಇದೆ ಎಂದು ಅನುವದಕರಿಗೆ ಹೇಳಬೇಡಿರಿ. ನೀವು ಉದ್ದೇಶಿತ ಭಾಷೆಯನ್ನು ಮಾತನಾಡದಿದ್ದರೆ, ಸಮಸ್ಯೆ ಇದೆಯೋ ಇಲ್ಲವೋ ಎಂದು ನಿಮಗೆ ತಿಳಿಯುವುದಿಲ್ಲ. ಸಮಸ್ಯೆ ಇರಬಹುದೆಂದು ನೀವು ಮಾತ್ರ ಅನುಮಾನಿಸುತ್ತೀರಿ. ನೀವು ಉದ್ದೇಶಿತ ಭಾಷೆಯನ್ನು ಮಾತನಾಡುತ್ತಿದ್ದರೂ ಸಹ, ಏನಾದರು ತಪ್ಪಾಗಿದೆ ಎಂದು ಹೇಳಿಕೆ ನೀಡುವುದಕ್ಕಿಂತ ಪ್ರಶ್ನೆಯನ್ನು ಕೇಳುವುದು ಹೆಚ್ಚು ಸಭ್ಯವಾಗಿದೆ. ನೀವು ಅವರಿಗೆ “ಅದನ್ನು ಈ ರೀತಿ ಹೇಳುವುದರ ಬಗ್ಗೆ ನೀವು ಏನು ಯೋಚಿಸುತ್ತೀರಿ”? ಎಂದು ಕೇಳಬಹುದು, ನಂತರ ಅದನ್ನು ಅನುವಾದಿಸಲು ಪರ್ಯಾಯ ಮಾರ್ಗವನ್ನು ಸೂಚಿಸಿರಿ. ನಂತರ ಒಟ್ಟಿಗೆ ನೀವು ವಿಭಿನ್ನ ಅನುವಾದ ವಿಚಾರಗಳನ್ನು ಚರ್ಚಿಸಬಹುದು, ಮತ್ತು ಒಂದು ಅನುವಾದ ಪರ್ಯಾಯವು ಇನ್ನೊಂದಕ್ಕಿಂತ ಉತ್ತಮವೆಂದು ನೀವು ಭಾವಿಸುವ ಕಾರಣಗಳನ್ನು ನೀವು ನೀಡಬಹುದು. ನಂತರದಲ್ಲಿ, ಅನುವಾದ ತಂಡದವರು ಪರ್ಯಯಗಳನ್ನು ಅನುವಾದಗಳನ್ನು ಪರಿಗಣಿಸಿ ಯಾವುದು ಉತ್ತಮವೆಂದು ನಿರ್ಧರಿಸಬೇಕು. ಪ್ರಶ್ನೆಗಳನ್ನು ಕೇಳಲು ವಿಷಯಗಳಿಗಾಗಿ, ಮತ್ತು ಸತ್ಯವೇದ ಅನುವಾದವನ್ನು ಪರಿಶೀಲಿಸುವಾಗ, [ಪರಿಶೀಲಿಸಬೇಕದ ವಸ್ತುಗಳ ಪ್ರಕಾರಗಳು] (…/vol2-things-to-check/01.md)ನೋಡಿ.

  1. ಉದ್ದೇಶಿತ ಭಾಷೆ ಮತ್ತು ಸಂಸ್ಕೃತಿಯನ್ನು ಶೋಧಿಸು. ನೀವು ಕೇಳುವ ಪ್ರಶ್ನೆಗಳು ಉದ್ದೇಶಿತ ಭಾಷೆಯಲ್ಲಿ ನುಡಿಗಟ್ಟಿನ ಅರ್ಥವನ್ನು ಕಂಡುಹಿಡಿಯುವುದು. ನುಡಿಗಟ್ಟು ಎಂದರೆನು ಮತ್ತು ಅದನ್ನು ಹೇಗೆ ಬಳಸಲಾಗುವುದು ಎಂಬುವುದರ ಕುರಿತು ಯೋಚಿಸಲು ಅನುವಾದಕರಿಗೆ ಸಹಾಯ ಮಾಡುವ ಪ್ರಶ್ನೆಗಳೆ ಉತ್ತಮ ಪ್ರಶ್ನೆಗಳಾಗಿವೆ. ಉಪಯುಕ್ತ ಪ್ರಶ್ನೆಗಳು,” ಈ ನಿಮ್ಮ ಭಾಷೆಯಲ್ಲಿ ಯಾವ ಸಂದರ್ಭಗಳಲ್ಲಿ ಬಳಸಲಾಗುತ್ತದೆ?” ಅಥವ “ಯಾರು ಸಾಮಾನ್ಯವಾಗಿ ಈ ರೀತಿಯ ವಿಷಯಗಳನ್ನು ಹೇಳುತ್ತಾರೆ, ಮತ್ತು ಏಕೆ ಹೇಳುತ್ತಾರೆ?” ಎಂಬುವುದು. ಸತ್ಯವೇದಲ್ಲಿರುವ ವ್ಯಕ್ತಿಯಂತೆ ಇರುವ ಹಳ್ಳಿಯ ವ್ಯಕ್ತಿಯೊಬ್ಬನು ಏನು ಹೇಳುತ್ತಾರೆಂದು ಯೋಚಿಸಲು ಅನುವಾದಕರಿಗೆ ಇದು ಉಪಯುಕ್ತವಾಗಿತ್ತು. 1.ಅನುವಾದಕರಿಗೆ ಕಲಿಸು. ಉದ್ದೇಶಿತ ಭಾಷೆ ಮತ್ತು ಸಂಸ್ಕೃತಿಯಲ್ಲಿನ ಒಂದು ನುಡುಗಟ್ಟಿನ ಅರ್ಥವನ್ನು ನೀವು ಶೋಧಿಸಿದ ನಂತರ, ಮೂಲ ಭಾಷೆ ಮತ್ತು ಸಂಸ್ಕೃತಿಯಲ್ಲಿ ಈ ಪದದ ಅರ್ಥವೇನೆಂದು ನೀವು ಅನುವಾದಕರಿಗೆ ಹೇಳಬಹುದು. ಅನುವದದಲ್ಲಿನ ನುಡಿಗಟ್ಟು ಅಥವಾ ಆತನು ಯೊಚಿಸಿದ ನುಡಿಗಟ್ಟು ಒಂದೇ ಅರ್ಥವನ್ನು ಹೊಂದಿದೆಯೆ ಅಥವ ಇಲ್ಲವೇ ಎಂಬುವುದನ್ನು ನೀವು ಒಟ್ಟಿಗೆ ನಿರ್ಧರಿಸಬಹುದು.

####ಅನುವಾದವನ್ನು ನೇರವಾಗಿ ಪರಿಶೀಲಿಸಲಾಗುತ್ತದೆ

ನೀವು ಉದ್ದೇಶಿತ ಭಾಷೆಯನ್ನು ಮಾತನಾಡುವವರಾಗಿದ್ದರೆ, ನೀವು ಅನುವಾದವನ್ನು ಕೇಳಬಹುದು ಅಥವ ಓದಬಹುದು ಮತ್ತು ಅದರ ಬಗ್ಗೆ ನೇರವಾಗಿ ಅನುವಾದ ತಂಡವನ್ನು ಕೇಳಬಹುದು.

ಲಿಖಿತವಾಗಿರುವ ಹಿಂದಿನ ಅನುವಾದವನ್ನು ಬಳಸುವುದು

ನೀವು ಉದ್ದೇಶಿತ ಭಾಷೆಯನ್ನು ಮಾತನಾಡದಿದ್ದರೆ, ನೀವು ಅದನ್ನು ಹೊಂದಿಸಲು ಸಾಧ್ಯವಾಗುವುದಿಲ್ಲ. ಆದರೆ ನೀವು ಗೇಟ್ ವೇ ಭಾಷೆಯನ್ನು ಮಾತನಾಡುವ ಸತ್ಯವೇದದ ವಿದ್ವಾಂಸರಾಗಿರಬಹುದು ಮತ್ತು ಅನುವಾದ ತಂಡಕ್ಕೆ ಅನುವಾದವನ್ನು ಸುಧಾರಿಸಲು ನೀವು ಸಹಾಯ ಮಾಡಬಹುದು. ಅಂತಹ ಸಂದರ್ಭದಲ್ಲಿ, ನೀವು ಗೇಟ್ ವೇ ಭಾಷೆಯಲ್ಲಿ ಹಿಂದಿನ ಅನುವಾದದಿಂದ ಕೆಲಸ ಮಾಡಬೇಕಾಗುತ್ತದೆ. ಇದನ್ನು ಅನುವಾದದಿಂದ ಪ್ರತ್ಯೇಕವಾಗಿ ಬರೆಯಬಹುದು, ಅಥವಾ ಇದನ್ನು ಸಾಲುಗಳ ನಡುವೆ ಬರೆಯಬಹುದು, ಅಂದರೆ, ಅನುವಾದದ ಪ್ರತಿಯೊಂದು ಸಾಲಿನ ಅಡಿಯಲ್ಲಿ ಹಿಂದಿನ ಅನುವಾದದ ರೇಖೆಯೊಂದಿಗೆ ಬರಯಬಹುದು. ಸಾಲುಗಳ ನಡುವೆ ಬರೆಯುವಾಗ ಅನುವಾದವನ್ನು ಹಿಂದಿನ ಅನುವಾದೊಂದಿಗೆ ಹೋಲಿಸುವುದು ಸುಲಭ, ಮತ್ತು ಪ್ರತ್ಯೇಕವಾಗಿ ಬರೆಯಲಾದ ಹಿಂದಿನ ಅನುವಾದವನ್ನು ಓದುವುದು ಸುಲಭ. ಪ್ರತಿಯೊಂದು ವಿಧಾನವು ತನ್ನದೇ ಆದ ಶಕ್ತಿಯನ್ನು ಹೊಂದಿದೆ. ಹಿಂದಿನ ಅನುವಾದವನ್ನು ಮಾಡುವ ವ್ಯಕ್ತಿಯು ಅನುವಾದವನ್ನು ಮಾಡುವಲ್ಲಿ ಭಾಗಿಯಾಗದ ವ್ಯಕ್ತಿಯಾಗಿರಬೇಕು. ಹೆಚ್ಚಿನ ವಿವರಗಳಿಗಾಗಿ ಹಿಂದಿನ ಅನುವಾದ ನೋಡಿರಿ.

1.ಸಾಧ್ಯವಾದರೆ, ಅನುವಾದನನ್ನು ಅಥವ ಅನುವಾದ ತಂಡವನ್ನು ಮುಖಮುಖಿಯಾಗಿ ಭೇಟಿಯಾಗುವ ಮೊದಲು ಹಿಂದಿನ ಅನುವಾದವನ್ನು ಲಿಖಿತಿ ರೂಪದಲ್ಲಿ ಪರಿಶೀಲಿಸಿ. ವಾಕ್ಯ ಭಾಗದ ಬಗ್ಗೆ ಪರಿಶೀಲಿಸಲು ಮತ್ತು ಹಿಂದಿನ ಅನುವಾದದ ಹೇಳಿಕೆಯ ಕಾರಣದಿಂದ ಉದ್ಭವಿಸುವ ಪ್ರಶ್ನೆಗಳ ಕುರಿತು ಹೆಚ್ಚಿನ ಸಂಶೋಧನೆ ಮಾಡಲು ಇದು ನಿಮಗೆ ಸಮಯವನ್ನು ನೀಡುತ್ತದೆ. ನೀವು ಅನುವಾದ ತಂಡದೊಂದಿಗೆ ಭೇಟಿಯಾಗುವಾಗ ಇದು ಸಾಕಷ್ಟು ಸಮಯವನ್ನು ಉಳಿಸುತ್ತದೆ, ಏಕೆಂದರೆ ಹಿಂದಿನ ಅನುವಾದದ ಲಿಖಿತ ರೂಪವನ್ನು ಪರಿಶೀಲಿಸಿದ ಕಾರಣ ನೀವು ಎಲ್ಲಾವನ್ನು ಮಾತನಾಡುವ ಅಗತ್ಯವಿರುವುದಿಲ್ಲ. ನೀವು ಒಟ್ಟಿಗೆ ಭೇಟಿಯಾದಾಗ, ನೀವು ಇನ್ನೂ ಉತ್ತಮವಾಗಿ ಮಾಡಲು ಶಕ್ತರಾಗುತ್ತೀರಿ ಏಕೆಂದರೆ ಸಮಸ್ಯೆಗಳ ವಿಷಯದಲ್ಲಿ ನೀವು ಹೆಚ್ಚಿನ ಸಮಯವನ್ನು ಕಳೆಯಬಹುದು. 1.ಹಿಂದಿನ ಅನುವಾದದ ಮೂಲಕ ನೀವು ಕೆಲಸಮಾಡುವಾಗ, ನೀವು ಅನುವಾದಕನಿಗೆ ಕೇಳಲು ಬಯಸುವ ಪ್ರಶ್ನೆಗಳ ಟಿಪ್ಪಣಿಗಳನ್ನು ಮಾಡಿ. ಸಂಭವನೀಯ ಸಮಸ್ಯೆಗಳ ಬಗ್ಗೆ ಯೋಚಿಸಲು ಅಥವಾ ಅದರ ಸ್ಪಷ್ಟಿಕರಣಕ್ಕಾಗಿ ಇದು ಸಹಾಯಕಾರಿಯಾಗುತ್ತದೆ. 1.ಅನುವಾದಕನಿಗೆ ಅನುವಾದದ ನಕಲನ್ನು ಕೇಳಿ, ಇದರಿಂದ ನೀವು ಅನುವಾದವನ್ನು ಹಿಂದಿನ ಅನುವದದೊಂದಿಗೆ ಹೋಲಿಸಬಹುದು ಮತ್ತು ಉದ್ದೇಶಿತ ಭಾಷೆಗಳು ಬಳಸುವ ಕನೆಕ್ಟರ್ಸ್ ಮತ್ತು ಹಿಂದಿನ ಅನುವಾದದಲ್ಲಿ ಗೋಚರಿಸಿದ ಇತರ ವೈಶಿಷ್ಟ್ಯಗಳನ್ನು ಗಮನಿಸಿ. ಅನುವಾದವನ್ನು ನೋಡುವುದರಿಂದ, ಹಿಂದಿನ ಅನುವಾದವು ಅನುವಾದವನ್ನು ನಿಖರವಾಗಿ ಪ್ರತಿನಿಧಿಸದ ಸ್ಥಳಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಉದಾಹರಣೆಗೆ ಅನುವಾದದಲ್ಲಿ ಬಳಸುವ ಅದೇ ಪದಗಳು, ಆದರೆ ಹಿಂದಿನ ಅನುವಾದದಲ್ಲಿ ಅವು ವಿಭಿನ್ನವಾಗಿರುತ್ತದೆ. ಈ ಸಂದರ್ಭದಲ್ಲಿ, ಹಿಂದಿನ ಅನುವಾದ ಏಕೆ ವಿಭಿನ್ನವಾಗಿದೆ ಮತ್ತು ಅದನ್ನು ಸರಿಪಡಿಸಬೇಕಾಗಿದೆಯೆ ಎಂದು ಅನುವಾದಕನಿಗೆ ಕೇಳುವುದು ಒಳ್ಳೆಯದು.

ಅನುವಾದಕರೊಂದಿಗೆ ಭೇಟಿಯಾಗುವ ಮೊದಲು ಹಿಂದಿನ ಅನುವಾದವನ್ನು ಪರಿಶೀಲಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಒಟ್ಟಿಗೆ ಕೆಲಸಮಾಡುವಾಗ ಪ್ರಶ್ನೆಗಳು ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿರಿ ನಂತರ ನೀವು ಅನುವಾದಕರೊಂದಿಕೆ ಕೆಲಸ ಮಾಡಿರಿ. ಆಗಾಗ್ಗೆ ಅನುವಾದವನ್ನು ಹಿಂದಿನ ಅನುವಾದಕ್ಕೆ ಹೋಲಿಸುವಾಗ ಅನುವಾದಕನು ಅನುವಾದದ ಸಮಸ್ಯೆಗಳನ್ನು ಸಹ ಕಂಡುಕೊಳ್ಳುತ್ತಾನೆ.

ಮೌಖಿಕ ಹಿಂದಿನ ಅನುವಾದವನ್ನು ಬಳಸುವುದು

ಯಾವುದೇ ಹಿಂದಿನ ಲಿಖಿತ ಅನುವಾದವಿಲ್ಲದಿದ್ದರೆ, ಉದ್ದೇಶಿತ ಭಾಷೆಯನ್ನು ತಿಳಿದಿರುವ ಹಾಗೆಯೇ ನೀವು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ನಿಮಗಾಗಿ ಮೌಖಿಕವಾಗಿ ಹಿಂದಿನ ಅನುವಾದ ಮಾಡುವ ಹಾಗೆ ಯಾರನ್ನಾದರು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಆ ವ್ಯಕ್ತಿಯು ಅನುವಾದ ಕಾರ್ಯದಲ್ಲಿ ಭಾಗಿಯಾಗದವನಾಗಿರಬೇಕು. ನೀವು ಮೌಖಿಕ ಹಿಂದಿನ ಅನುವಾದವನ್ನು ಕೇಳುತ್ತಿರುವಾಗ ತಪ್ಪಾದ ಅರ್ಥವನ್ನು ತಿಳಿಸುವ ಪದಗಳನ್ನು ಮತ್ತು ನಡುಗಟ್ಟುಗಳ ಟಿಪ್ಪಣಿ ಮಾಡಿ. ವ್ಯಕ್ತಿಯು ವಾಕ್ಯ ಭಾಗವನ್ನು ಸಣ್ಣ ಭಾಗಗಳಲ್ಲಿ ಭಾಷಾಂತರಿಸಬೇಕು, ಪ್ರತಿ ವಿಭಾಗಗಳ ನಡುವೆ ವಿರಾಮವಿರಬೇಕು .ಹೀಗೆ ನೀವು ಎಲ್ಲಾ ವಿಭಾಗವನ್ನು ಕೇಳಿದ ನಂತರ ಪ್ರಶ್ನೆಗಳನ್ನು ಕೇಳಬಹುದು.

ಪರಿಶೀಲನೆಯ ನಂತರ

ಪರಿಶೀಲನಾ ಅಧಿವೇಶನದ ನಂತರ ಕೆಲವು ಪ್ರಶ್ನೆಗಳನ್ನು ನಂತರಕ್ಕೆ ನಿಗದಿಪಡಿಸಬೇಕಾಗುತ್ತದೆ. ಈ ಪ್ರಶ್ನೆಗಳ ಉತ್ತರವನ್ನು ಚರ್ಚಿಸಲು ಮತ್ತೇ ಭೇಟಿಯಾಗಲು ಸಮಯವನ್ನು ಯೋಜಿಸಲು ಮರೆಯದಿರಿ. ಅವುಗಳು :

1.ನೀವು ಅಥವಾ ಬೇರೊಬ್ಬರು ಸಂಶೋಧನೆ ಮಾಡಬೇಕಾದ ಪ್ರಶ್ನೆಗಳು, ಸಾಮಾನ್ಯವಾಗಿ ನೀವು ಕಂಡುಹಿಡಿಯಬೇಕಾದ ಸತ್ಯವೇದದ ಪಠ್ಯ, ಸತ್ಯವಾದದ ಪದಗಳು ಅಥವ ನುಡಿಗಟ್ಟಿನ ಅರ್ಥಗಳು, ಅಥವಾ ಸತ್ಯವೇದದ ಜನರ ನಡುವಿನ ಸಂಬಂಧ ಅಥವಾ ಸತ್ಯವೇದದ ಸ್ಥಳಗಳ ಸ್ವರೂಪ. 1.ಉದ್ದೇಶಿತ ಭಾಷೆಯ ಇತರ ಭಾಷಿಕರನ್ನು ಕೇಳುವ ಪ್ರಶ್ನೆಗಳು. ಕೆಲವು ನುಡಿಗಟ್ಟುಗಳು ಸರಿಯಾಗಿ ಸಂಪರ್ಕ ನಡೆಸುತ್ತಿದೆಯೆ ಅಥವಾ ಉದ್ದೇಶಿತ ಭಾಷೆಯಲ್ಲಿ ಕೆಲವು ಪದಗಳ ಸಾಂಸ್ಕೃತಿಕ ಹಿನ್ನಲೆಯನ್ನು ಸಂಶೋಧಿಸಲು ಇದು ಅಗತ್ಯವಾಗಿದೆ. ಇವುಗಳು ಅನುವಾದ ತಂಡವು ಜನರು ತಮ್ಮ ಸಮುದಾಯಕ್ಕ ಹಿಂತಿರುಗಿದಾಗ ಅವರು ಕೇಳಬೇಕಾದ ಪ್ರಶ್ನೆಗಳಾಗಿವೆ

###ಪ್ರಮುಖ ಪದಗಳು

ಅನುವಾದ ತಂಡವು ಅನುವಾದಿಸುತ್ತಿರುವ ಸತ್ಯವೇದ ಭಾಗದಿಂದ ಪ್ರಮುಖ ಪದಗಳ ಪಟ್ಟಿಯನ್ನು (ಅನುವಾದ ಪದಗಳೆಂದು ಪರಿಗಣಿಸುವ ಪ್ರಮುಖ ಪದಗಳು) ಮತ್ತು ಪ್ರತಿಯೊಂದು ಪ್ರಮುಖ ಪದಗಳಿಗೆ ಬಳಸಲು ಅವರು ನಿರ್ಧರಿಸಿದ ಉದ್ದೇಶಿತ ಭಾಷೆಯಲ್ಲಿನ ಪದಗಳನ್ನು ಇಟ್ಟುಕೊಂಡಿದೆಯೆ ಎಂದು ಖಚಿತಪಡಿಸಿಕೊಳ್ಳಿ. ನೀವು ಮತ್ತು ಅನುವಾದ ತಂಡವು ಸತ್ಯವೇದ ಅನುವಾದ ಮುಂದುವರಿಸುವಾಗ, ಬಹುಶಃ ಉದ್ದೇಶಿತ ಭಾಷೆಯ ಪದಗಳನ್ನು ಮಾರ್ಪಡಿಸಿ ಪಟ್ಟಿಗೆ ಸೇರಿಸಬೇಕಾಗಬಹುದು. ನೀವು ಭಾಷಾಂತರಿಸುವ ವಾಕ್ಯ ಭಾಗದಲ್ಲಿ ಪ್ರಮುಖ ಪದಗಳಿದ್ದಾಗ ನಿಮ್ಮನ್ನು ಎಚ್ಚರಿಸಲು ಪ್ರಮುಖ ಪದಗಳ ಪಟ್ಟಿಯನ್ನು ಬಳಸಿ. ಸತ್ಯವೇದದಲ್ಲಿ ಪ್ರಮುಖ ಪದಗಳು ಇದ್ದಾಗೆಲ್ಲಾ, ಅನುವಾದವು ಆ ಪ್ರಮುಖ ಪದಕ್ಕಾಗಿ ಆಯ್ಕೆ ಮಾಡಲಾದ ಪದಗಳನ್ನು ಬಳಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಪ್ರತಿ ಬಾರಿಯೂ ಅದು ಅರ್ಥಪೂರ್ಣವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಅದು ಅರ್ಥಪೂರ್ಣವಾಗದಿದ್ದರೆ, ಕೆಲವು ಸ್ಥಳಗಳಲ್ಲಿ ಮಾತ್ರ ಅದು ಏಕೆ ಅರ್ಥಪೂರ್ಣವಾಗಿದೆ ಎಂದು ನೀವು ಚರ್ಚಿಸಬೇಕಾಗುತ್ತದೆ. ಆಗ ನೀವು ಆಯ್ಕೆ ಮಾಡಿದ ಪದಗಳನ್ನು ಅಥವ ಬದಲಾಯಿಸಬೇಕಾಗಬಹುದು, ಅಥವ ಪ್ರಮುಖ ಪದಗಳು ಬಳಸುವ ವಿಭಿನ್ನ ವಿಧಾನಗಳಿಗೆ ಹೊಂದುಕೊಳ್ಳಲು ಉದ್ದೇಶಿತ ಭಾಷೆಯಲ್ಲಿ ಒಂದಕ್ಕಿಂತ ಹೆಚ್ಚು ಪದಗಳನ್ನು ಬಳಸಲು ನಿರ್ಧರಿಸಬಹುದು. ಇದನ್ನು ಮಾಡಲು ಒಂದು ಉಪಯುಕ್ತ ಮಾರ್ಗವೆಂದರೆ ಸ್ಪ್ರೆಡ್ ಶೀಟಲ್ಲಿ ಪ್ರತಿಯೊಂದು ಪ್ರಮುಖ ಪದವನ್ನು ಟ್ರ್ಯಾಕ್ ಮಾಡುವುದು, ಮೂಲ ಭಾಷೆಯ ಪದ, ಉದ್ದೇಶಿತ ಭಾಷೆಯ, ಪರ್ಯಾಯ ಪದ ಮತ್ತು ಸತ್ಯವೇದದ ಭಾಗದಲ್ಲಿ ನೀವು ಬಳಸುವ ಪ್ರತಿ ಪದ. ಈ ಅನುವಾದ ಸ್ಟುಡಿಯೋದ ಮುಂದಿನ ಆವೃತಿಗಳಲ್ಲಿರುತ್ತದೆ ಎಂದು ಭಾವಿಸುತ್ತೇವೆ.

ನೀವು ಸತ್ಯವೇದ ಕ್ರಮಬದ್ಧ ಪರಿಶೀಲನೆಯ ಪೂರ್ಣಗೊಳಿಸಿದಾಗ, ಪ್ರಶ್ನೆಗೆ ಉತ್ತರಿಸಿ: ಕ್ರಮಬದ್ಧ ಪರಿಶೀಲನೆಯ ಪ್ರಶ್ನೆಗಳು.


ಕ್ರಮಬದ್ಧವಾದ ಅನುವಾದ ಅನುಮೋದನೆ

Checking Manual :: ಕ್ರಮಬದ್ಧವಾದ ಅನುವಾದ ಅನುಮೋದನೆ

ಕ್ರಮಬದ್ಧವಾದ ಅನುವಾದ ಅನುಮೋದನೆ

ನಾನು ಸಭೆಯ ಗುಂಪಿಗೆ ಅಥವಾ ಬೈಬಲ್ ಅನುವಾದ ಸಂಸ್ಥೆಯ ಪ್ರತಿನಿಧಿಯಾಗಿ ಬೈಬಲ್ ಅನುವಾದ ಸಂಸ್ಥೆಯ ಹೆಸರನ್ನು ಅಥವಾ ಸಭೆಯ ಗುಂಪಿನ ಹೆಸರನ್ನು ಇಲ್ಲಿ ತುಂಬಿಸಿರಿ ಭಾಷೆಯ ಸಮುದಾಯಕ್ಕೆ ಭಾಷೆಯ ಸಮುದಾಯದ ಹೆಸರನ್ನು ಇಲ್ಲಿ ಬರೆಯಿರಿ ಸೇವೆ ಮಾಡುತ್ತಿದ್ದೇನೆ. ಅನುವಾದವನ್ನು ಅನುಮೋದನೆ ಮಾಡುತ್ತೇನೆ, ಮತ್ತು ಈ ಕೆಳಗಿನವು ದೃಢೀಕರಿಸುತ್ತಿದ್ದೇನೆ :

  1. ಮಾಡುವ ಅನುವಾದವು ನಂಬಿಕೆ ಪ್ರಮಾಣವನ್ನು ಮತ್ತು ಅನುವಾದದ ಮಾರ್ಗದರ್ಶನದ ನಿಯಮಗಳಿಗೆ ಅನುರೂಪವಾಗಿರುತ್ತದೆ.
  2. ಅನುವಾದವು ನಿಖರವಾಗಿರುತ್ತದೆ ಮತ್ತು ಭಾಷಾಂತರ ಮಾಡಿದ ಭಾಷೆಯಲ್ಲಿ ಸ್ಪಷ್ಟವಾಗಿರುತ್ತದೆ
  3. ಅನುವಾದದಲ್ಲಿ ಭಾಷೆಯ ಅಂಗೀಕೃತ ಶೈಲಿ ಉಪಯೋಗಿಸಲಾಗಿರುತ್ತದೆ.
  4. ಸಮುದಾಯವು ಅನುವಾದವನ್ನು ದೃಢೀಕರಿಸುತ್ತದೆ.

ಎರಡನೇ ಬಾರಿ ಅನುವಾದ ತಂಡದೊಂದಿಗೆ ಭೇಟಿಯಾದನಂತರವು ಸಮಸ್ಯೆಗಳು ಪರಿಷ್ಕಾರವಾಗದೇ ಇದ್ದಲ್ಲಿ, ದಯವಿಟ್ಟು ಅವುಗಳನ್ನು ಇಲ್ಲಿ ಬರೆಯಿರಿ.

ಸಹಿ ಮಾಡಲಾಗಿದೆ: ಇಲ್ಲಿ ನಿಮ್ಮ ಸಹಿಹಾಕಿರಿ

ಸ್ಥಾನ : ಇಲ್ಲಿ ನಿಮ್ಮ ಸ್ಥಾನವನ್ನು ಬರೆಯಿರಿ

ಗೇಟ್ ವೆ ಭಾಷೆಗಳಿಗಾಗಿ, ನೀವು [ಮೂಲ ವಾಕ್ಯಭಾಗಗಳ ವಿಧಾನ] ವನ್ನು ಅನುಸರಿಸಬೇಕಾದ ಅವಶ್ಯಕತೆಯಿದೆ (…/…/process/source-text-process/01.md) ಇದರಿಂದ ನಿಮ್ಮ ಅನುವಾದವು ಮೂಲ ವಾಕ್ಯಗಳಾಗಿ ಮಾರ್ಪಡುವುದು.


ಕ್ರಮಬದ್ಧವಾದ ಅಪರಿಶಿಲನೆ - ಸಭೆಗಳ ಗುಂಪುಗಳಿಂದ ಅನುಮೋದನೆ

Checking Manual :: ಕ್ರಮಬದ್ಧವಾದ ಅಪರಿಶಿಲನೆ - ಸಭೆಗಳ ಗುಂಪುಗಳಿಂದ ಅನುಮೋದನೆ

ಕ್ರಮಬದ್ಧವಾದ ಪರಿಶೀಲನೆ

ಭಾಷೆಯ ಸಮುದಾಯದಲ್ಲಿರುವ ಸಭೆಯ ನಾಯಕರಿಂದ ಆಯ್ಕೆ ಮಾಡಲ್ಪಟ್ಟ ಜನರಿಂದ ಕ್ರಮಬದ್ಧವಾದ ಪರಿಶೀಲನೆಯು ನಡೆಸಲ್ಪಡುವದು. ಈ ಜನರು ಭಾಷಾಂತರ ಮಾಡುವ ಭಾಷೆಯನ್ನು ಮಾತನಾಡುವವರಾಗಿರುತ್ತಾರೆ, ಇವರು ಬೈಬಲಿನ ಕುರಿತು ಜ್ಞಾನವಿದ್ದವರಾಗಿ ಅಭಿಪ್ರಾಯಗಳು ಸಭಾ ನಾಯಕರಿಂದ ಗೌರವಿಸಲ್ಪಡುತ್ತವೆ. ಸಾಧ್ಯವಾದಲ್ಲಿ, ಅವರು ವಾಕ್ಯಾನುಸಾರವಾದ ಭಾಷೆಗಳಲ್ಲಿ, ವಿಷಯಗಳಲ್ಲಿ ಮತ್ತು ಅನುವಾದದ ನಿಯಮಗಳಲ್ಲಿ ತರಬೇತಿ ಹೊಂದಿದವರಾಗಿರಬೇಕು . ಯಾವಾಗ ಈ ಜನರು ಅನುವಾದವನ್ನು ಅನುಮೋದಿಸುವರೋ ಆಗ ಸಭಾ ನಾಯಕರು ಆ ಗ್ರಂಥ ಜನರ ಮಧ್ಯೆದಲ್ಲಿ ಉಪಯೋಗಿಸುವ ಹಾಗೆ ಅದನ್ನು ವಿತರಣೆ ಮಾಡುವುದಕ್ಕಾಗಿ ಅನುಮತಿ ಕೊಡುವರು ಮತ್ತು

ಈ ಜನರು ಭಾಷೆಯ ಸಮುದಾಯದಲ್ಲಿರದಿದ್ದರೆ, ಅನುವಾದ ತಂಡವು [ಅನುವಾದ ಹಿನ್ನೆಲೆಯನ್ನು] (…/vol2-backtranslation/01.md) ಸಿದ್ಧಗೊಳಿಸುತ್ತದೆ. ಇದರಿಂದ ಭಾಷೆಯ ಸಮುದಾಯದ ಹೊರಗಿರಿವ ಬೈಬಲ್ ತಜ್ಞರು ಕ್ರಮಬದ್ಧವಾದ ಪರಿಶೀಲನೆಯನ್ನು ಮಾಡುವರು.

ಕ್ರಮಬದ್ಧವಾದ ಪರಿಶೀಲನೆ ಮಾಡುವವರು ಮುಂಚಿತವಾಗಿ [ನಿಖರತೆ ಪರಿಶೀಲನೆ] (…/accuracy-check/01.md) ಮಾಡಿದವರಾಗಿರಬಾರದು. ಕ್ರಮಬದ್ಧವಾದ ಪರಿಶೀಲನೆ ಕೂಡ ನಿಖರತೆ ಪರಿಶೀಲನೆಯ ಹಾಗೆಯೇ ಇರುತ್ತದೆ, ಈ ಎರಡು ವಿಭಿನ್ನವಾದ ಪರಿಶೀಲನೆಗಳನ್ನು ಇತರ ಜನರು ಮಾಡಿದಾಗ ಅನುವಾದ ಹೆಚ್ಹಿನ ಮಟ್ಟಿಗೆ ಪ್ರಯೋಜನವು ಉಂಟಾಗುವುದು.

ಕ್ರಮಬದ್ಧವಾದ ಪರಿಶೀಲನೆಯ ಉದ್ದೇಶವು ಏನಂದರೆ ಮೂಲ ಬೈಬಲ್ ಲೇಖನ ಭಾಗಗಳ ಸಂದೇಶವು ಅನುವಾದದಲ್ಲಿ ನಿಖರತೆಯಾಗಿ ಇದೆಯೋ ಇಲ್ಲವೋ ಎಂದು ನಿಶ್ಚಯಪಡಿಸಿಕೊಳ್ಳುವುದಾಗಿರುತ್ತದೆ ಮತ್ತು ಪ್ರಪಂಚದಾದ್ಯಂತ ಇತಿಹಾಸದ ಮೂಲಕ ಸಭೆಯ ಸಿದ್ಧಾಂತದ ವಿಷಯದಲ್ಲಿ ಪ್ರಭಾವವನ್ನು ಬೀರುತ್ತದೆ. ಕ್ರಮಬದ್ಧವಾದ ಪರಿಶೀಲನೆ ಮಾಡಿದಾದನಂತರ, ಭಾಷಾಂತರ ಮಾಡುವ ಭಾಷೆಯನ್ನು ಮಾತನಾಡುವ ಸಭೆಯ ನಾಯಕರು ಆ ಅನುವಾದವು ತಮ್ಮ ಜನರಿಗಾಗಿ ನಂಬತಕ್ಕದ್ದಾಗಿದೆಯೆಂದು ಅನುಮೋದನೆ ಮಾಡುತ್ತಾರೆ.

ಭಾಷೆಯ ಸಮುದಾಯದಲ್ಲಿ ಪ್ರತಿಯೊಂದು ಸಭೆಯ ಗುಂಪಿನಿಂದ ನಾಯಕರು ಕ್ರಮಬದ್ಧವಾದ ಪರಿಶೀಲನೆ ಮಾಡುವ ಕೆಲವೊಂದು ಜನರನ್ನು ಈ ಗುಂಪಿನಿಂದ ಆಯ್ಕೆ ಮಾಡಿಕೊಳ್ಳುವುದು ಇನ್ನೂ ಉತ್ತಮ. ಆ ವಿಧಾನದಲ್ಲಿ, ಸಭೆಯ ನಾಯಕರೆಲ್ಲರೂ ಅನುವಾದ ಯೋಗ್ಯವಾಗಿದೆ ಮತ್ತು ಸಮುದಾಯದ ಸಭೆಗಳೆಲ್ಲರಿಗೆ ಉಪಯೋಗಕರವಾಗಿದೆಯೆಂದು ಅನುಮೋದನೆ ಮಾಡುವವರಾಗಿರಬೇಕು.

ಕ್ರಮಬದ್ಧವಾದ ಪರಿಶೀಲನೆಗಾಗಿ ನಾವು ಶಿಫಾರಸು ಮಾಡುವ ಉಪಕರಣ ಯಾವುದೆಂದರೆ ಜೋಡಣೆ ಮಾಡುವ ಉಪಕರಣ. ಹೆಚ್ಚಿನ ಸಂಗತಿಗಳಿಗಾಗಿ , [ಜೋಡಣೆಮಾಡುವ ಉಪಕರಣ]ಕ್ಕೆ ನೋಡಿರಿ (…/alignment-tool/01.md).

ಪರಿಶೀಲನೆ ಮಾಡುವುದಕ್ಕೆ ವಿವಿಧ ವಿಧಾನಗಳನ್ನು ಹೆಚ್ಚಿನ ಮಟ್ಟಿಗೆ ಕಲಿತುಕೊಳ್ಳುವುದಕ್ಕೆ, [ಪರಿಶೀಲನೆ ಮಾಡಲು ಅನೇಕ ವಿಧಾನಗಳು] ನೋಡಿರಿ (…/vol2-things-to-check/01.md).

ಕ್ರಮಬದ್ಧವಾದ ಪರಿಶೀಲನೆಯೊಂದಿಗೆ ಮುಂದುವರಿಯಬೇಕಾದರೆ, [ಕ್ರಮಬದ್ಧವಾದ ಪರಿಶೀಲನೆಗೆ ಹಂತಗಳು] ನೋಡಿರಿ (…/vol2-steps/01.md).


ಕ್ರಮಬದ್ಧವಾದ ಪರಿಶೀಲನೆಗಾಗಿ ಪ್ರಶ್ನೆಗಳು

Checking Manual :: ಕ್ರಮಬದ್ಧವಾದ ಪರಿಶೀಲನೆಗಾಗಿ ಪ್ರಶ್ನೆಗಳು

ಕ್ರಮಬದ್ಧವಾದ ಪರಿಶೀಲನೆಗಾಗಿ ಪ್ರಶ್ನೆಗಳು

ಕ್ರಮಬದ್ಧವಾದ ಪರಿಶೀಲನೆ ಮಾಡುವವರು ಹೊಸ ಅನುವಾದವನ್ನು ಓದುತ್ತಿರುವಾಗ ಕೆಲವು ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು .

ಅನುವಾದದ ಭಾಗಗಳನ್ನು ನೀವು ಓದಿದನಂತರ ಅಥವಾ ವಾಕ್ಯಭಾಗಗಳ ಮುಖಾಂತರ ಸಮಸ್ಯೆಗಳನ್ನು ಅರಿತನಂತರ ನೀವು ಈ ಪ್ರಶ್ನಗಳಿಗೆ ಉತ್ತರಗಳನ್ನು ಕೊಡಬಹುದು. ಮೊದಲ ಗುಂಪಿನಲ್ಲಿ ಕೇಳುವ ಪ್ರಶ್ನೆಗಳಿಗೆ ನಿಮ್ಮ ಉತ್ತರ “ಇಲ್ಲ” ಎಂದು ಇರುವುದಾದರೆ, ದಯವಿಟ್ಟು ಇನ್ನೂ ಹೆಚ್ಚಾಗಿ ವಿವರಿಸಿರಿ, ಅದರಲ್ಲಿ ನಿಮಗೆ ಸರಿಯಾಗಿಲ್ಲವೆಂದೆಣಿಸಿದ ಪ್ರತ್ಯೇಕಭಾಗಗಳನ್ನು ಸೇರಿಸಿರಿ, ಮತ್ತು ಅನುವಾದ ತಂಡವು ಇದನ್ನು ಹೇಗೆ ಸರಿಪಡಿಸಬೇಕೆಂದು ನಿಮ್ಮ ಸಲಹೆಗಳನ್ನು ನೀಡಿರಿ.

ಅನುವಾದ ತಂಡದ ಮುಖ್ಯ ಗುರಿ ಮೂಲ ವಾಕ್ಯದಲ್ಲಿರುವ ಅರ್ಥವನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಸ್ವಾಭಾವಿಕವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸುವುದಾಗಿರುತ್ತದೆ. ಕೆಲವೊಂದು ಉಪವಾಕ್ಯಗಳನ್ನು ಬದಲಾಯಿಸುವ ಅವಶ್ಯಕತೆ ಇರಬಹುದು ಮತ್ತು ಮೂಲ ಭಾಷೆಯಲ್ಲಿರುವ ಕೆಲವು ಏಕ ಪದಗಳನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಹೆಚ್ಚಿನ ಮಾತುಗಳಿಂದ ವ್ಯಕ್ತಪಡಿಸುವ ಅವಶ್ಯಕತೆಯು ಇರಬಹುದು. ಈ ಎಲ್ಲಾ ವಿಷಯಗಳು ಇತರ ಭಾಷೆಯ ಅನುವಾದಗಳಲ್ಲಿ ಸಮಸ್ಯೆಗಳಾಗಿ ಇರದೇ ಇರಬಹುದು. ಅನುವಾದಕರು ಒಂದೇ ಒಂದು ಸಮಯದಲ್ಲಿ ಈ ಎಲ್ಲಾ ತಿದ್ದುಪಡಿಗಳನ್ನು ತಪ್ಪಿಸಬಹುದು ಅದು ಯುಎಲ್.ಟಿ ಮತ್ತು ಯುಎಸ್.ಟಿ ಗೇಟ್ ವೆ ಅನುವಾದಗಳಿಗಾಗಿ ಮಾತ್ರವೇ. ಯುಎಲ್.ಟಿಯ ಉದ್ದೇಶವು ಏನಂದರೆ ಇತರ ಭಾಷೆಯ ಅನುವಾದಕರು ಮೂಲ ಬೈಬಲ್ ಭಾಷೆಗಳಲ್ಲಿ ಅರ್ಥವನ್ನು ಹೇಗೆ ವ್ಯಕ್ತಪಡಿಸಿದ್ದಾರೆಂದು ತಿಳಿಸುವುದಾಗಿರುತ್ತದೆ, ಮತ್ತು ಯುಎಸ್.ಟಿ ಉದ್ದೇಶವು ಏನಂದರೆ ಇತರ ಭಾಷೆಯಲ್ಲಿ ನಾಣ್ಣುಡಿಯನ್ನು ಉಪಯೋಗಿಸುವುದಕ್ಕೆ ತುಂಬಾ ಸ್ವಾಭಾವಿಕವಾಗಿದ್ದರೂ ಅದೇ ಅರ್ಥವನ್ನು ಸುಲಭವಾದ ರೂಪದಲ್ಲಿ, ಸ್ಪಷ್ಟವಾಗಿ ವ್ಯಕ್ತಪಡಿಸುವುದಾಗಿರುತ್ತದೆ. ಗೇಟ್ ವೆ ಭಾಷೆಯ ಅನುವಾದಕರು ಆ ಎಲ್ಲಾ ವಿಧಾನಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅವಶ್ಯಕತೆಯುಂಟು. ಆದರೆ ಇತರ ಭಾಷೆಯ ಅನುವಾದಕಾರಿಗೆ ಯಾವಾಗಲು ಸ್ವಾಭಾವಿಕವಾಗಿ, ಸ್ಪಷ್ಟವಾಗಿ ಮತ್ತು ನಿಖರತೆಯಾಗಿ ಇರಬೇಕು.

ಅನುವಾದಕರು ವಾಸ್ತವಿಕವಾದ ಸಂದೇಶದಿಂದ ವಾಸ್ತವಿಕವಾದ ಪ್ರೇಕ್ಷಕರು ಅರ್ಥಮಾಡಿಕೊಳ್ಳುವ ಮಾಹಿತಿಯನ್ನು ಸೇರಿಸರಬಹುದೆಂದು, ಆದರೆ ಮೂಲ ಲೇಖಕರು ಅದನ್ನು ಸ್ಪಷ್ಟವಾಗಿ ವ್ಯಕ್ತಪಡಿಸದೇ ಇರಬಹುದೆಂದು ಮನಸ್ಸಿನಲ್ಲಿ ನೆನಪಿಟ್ಟುಕೊಳ್ಳಿರಿ. ವಾಕ್ಯವನ್ನು ಅರ್ಥಮಾಡಿಕೊಳ್ಳಬೇಕಾದ ಅವಶ್ಯಕತೆ ಪ್ರೇಕ್ಷಕರಿಗೆ ಇದೆಯೆಂದೆನ್ನುವಾಗ, ವಿವರವಾಗಿ ಬರೆಯುವುದಕ್ಕೆ ಮಾಹಿತಿಯನ್ನು ಸೇರಿಸುವುದು ಒಳ್ಳೇಯದು. ಇದರ ಕುರಿತಾಗಿ ಹೆಚ್ಚಿನ ವಿವರಣೆಗಳಿಗಾಗಿ, [ಸೂಚ್ಯ ಮತ್ತು ಸ್ಪಷ್ಟವಾದ ಮಾಹಿತಿ] (…/…/translate/figs-explicit/01.md) ನೋಡಿರಿ.

ಕ್ರಮಬದ್ಧವಾದ ಪರಿಶೀಲನೆಗೆ ಪ್ರಶ್ನೆಗಳು

  1. ನಂಬಿಕೆಯ ಹೇಳಿಕೆ ಮತ್ತು ಅನುವಾದದ ಮಾರ್ಗದರ್ಶನದ ಸೂತ್ರಗಳ ಆಧಾರದ ಮೇಲೆ ಅನುವಾದವನ್ನು ಮಾಡಿದ್ದಾರೋ?

  2. ಅನುವಾದ ತಂಡವು ಮೂಲ ಭಾಷೆಯ ಕುರಿತಾಗಿ ಮತ್ತು ಭಾಷಾಂತರ ಮಾಡುವ ಭಾಷೆಯ ಕುರಿತಾಗಿ ಮತ್ತು ಅದರ ಸಂಸ್ಕೃತಿಯ ಕುರಿತಾಗಿ ಚೆನ್ನಾಗಿ ಅರ್ಥಮಾಡಿಕೊಳ್ಳುವಂತೆ ವಿವರಿಸಿ ತೋರಿಸಿ ಹೇಳಿದ್ದಾರೋ?

  3. ಭಾಷೆಯ ಸಮುದಾಯದವರು ಮಾಡಿದ ಅನುವಾದ ತಮ್ಮ ಭಾಷೆಯಲ್ಲಿ ಸ್ಪಷ್ಟವಾಗಿದೆ ಮತ್ತು ಸ್ವಾಭಾವಿಕವಾಗಿದೆಯೆಂದು ಅನುಮೋದನೆ ಮಾಡಿದ್ದಾರೋ?

  4. ಅನುವಾದವು [ಸಂಪೂರ್ಣವಾಗಿ] (…/complete/01.md) ಮಾಡಲ್ಪಟ್ಟಿದೆಯೋ? (ಮೂಲ ವಾಕ್ಯದಲ್ಲಿರುವಂತೆಯೇ ಎಲ್ಲಾ ವಾಕ್ಯಗಳು, ಸಂದರ್ಭಗಳು ಮತ್ತು ಮಾಹಿತಿಯು ಹೊಂದಿದೆಯೋ)?

  5. ಅನುವಾದಕರು ಈ ಕೆಳಕಂಡ ಯಾವ ಅನುವಾದದ ಪದ್ಧತಿಗಳನ್ನು ಅನುಸರಿಸಿದ್ದಾರೆ?

  6. ಶಬ್ದದಿಂದ ಶಬ್ದ ಅನುವಾದ, ಮೂಲ ಅನುವಾದದ ರೂಪಕ್ಕೆ ತುಂಬಾ ಹತ್ತಿರವಾಗಿದ್ದು ಅನುವಾದ ಮಾಡಿದ್ದಾರೆ.

  7. ಮಾತಿನಿಂದ ಮಾತಿಗೆ ಅನುವಾದ, ಸ್ವಾಭಾವಿಕವಾದ ಭಾಷೆಯ ಮಾತುಗಳ ಉಪಯೋಗಿಸಿ ಮಾಡಿದ್ದಾರೆ.

  8. ಅರ್ಥ ಕೇಂದ್ರೀಕೃತವಾದ ಅನುವಾದ, ಸ್ಥಳೀಯ ಭಾಷೆಯನ್ನು ಗುರಿಯನ್ನಾಗಿ ಇಟ್ಟುಕೊಂಡು ಮಾಡಿದ ಅನುವಾದ.

  9. ಅನುವಾದಕರು ಸಮುದಾಯಕ್ಕನುಗುನಾವಾದ ಶೈಲಿಯನ್ನು ಅನುಸರಿಸಿದ್ದಾರೆಂದು [ಪ್ರಶ್ನೆ 4ರಲ್ಲಿ ಹೇಳಲ್ಪಟ್ಟಿರುವಹಾಗೆ] ಸಮುದಾಯದ ನಾಯಕರು ಭಾವಿಸುತ್ತಿದ್ದಾರೋ?

  10. ಅನುವಾದಕರು ಉಪಯೋಗಿಸಿದ ಪ್ರಾಂತೀಯ ಭಾಷೆಯು ಆ ಪ್ರಾಂತ್ಯದಲ್ಲಿರುವ ಸಮುದಾಯದ ಜನರ ಜೊತೆಯಲ್ಲಿ ಸಂಭಾಷಿಸುವುದಕ್ಕೆ ಉತ್ತಮವಾದ ಭಾಷೆಯೆಂದು ಸಮುದಾಯದ ನಾಯಕರು ಭಾವಿಸುತ್ತಿದ್ದಾರೋ? ಉದಾಹರಣೆಗೆ, ಅನುವಾದಕರು ಆ ಪ್ರಾಂತ್ಯದ ಭಾವನೆಗಳನ್ನು, ಮಾತುಗಳನ್ನು ಮತ್ತು ಆ ಭಾಷೆಯ ಸಮುದಾಯದಲ್ಲಿರುವ ಹೆಚ್ಚಿನ ಜನರಿಂದ ಗುರುತಿಸುವಂತಹ ಒತ್ತಕ್ಷರಗಳನ್ನು ಚೆನ್ನಾಗಿ ಉಪಯೋಗಿಸಿದ್ದಾರೋ? ಈ ಪ್ರಶ್ನೆಯನ್ನು ಇನ್ನೂ ಹೆಚ್ಚಾಗಿ ತಿಳಿಸುವ ಅನೇಕ ವಿಧಾನಗಳಿಗಾಗಿ, [ಸ್ವಿಕೃತವಾದ ಶೈಲಿ]ಯನ್ನು ನೋಡಿರಿ (…/acceptable/01.md).

  11. ನೀವು ಅನುವಾದವನ್ನು ಓದುತ್ತಿರುವಾಗ, ಅನುವಾದಕ್ಕೆ ಅಡ್ಡಿಪಡಿಸುವ ಸ್ಥಳೀಯ ಸಮುದಾಯದಲ್ಲಿ ಸಂಸ್ಕೃತಿಯ ಸಮಸ್ಯೆಗಳ ಕುರಿತು ಆಲೋಚನೆ ಮಾಡಿರಿ. ಮೂಲ ವಾಕ್ಯವು ಹೇಳುವ ಸ್ಪಷ್ಟವಾದ ಭಾವನೆಯನ್ನು ವ್ಯಕ್ತಪಡಿಸುವಂತೆಯೇ ಅನುವಾದದ ತಂಡವು ಈ ವಾಕ್ಯಭಾಗಗಳನ್ನು ಅನುವಾದ ಮಾಡಿದ್ದಾರೋ, ಮತ್ತು ಸಂಸ್ಕೃತಿಯ ಪರವಾದ ಸಮಸ್ಯೆಗಳ ಕಾರಣದಿಂದ ಜನರು ಅಪಾರ್ಥ ಮಾಡಿಕೊಳ್ಳುವ ವಿಷಯಗಳನ್ನು ತಪ್ಪಿಸಿ ಅನುವಾದ ಮಾಡಿದ್ದಾರೋ?

  12. ಈ ಕ್ಲಿಷ್ಟಕರವಾದ ವಾಕ್ಯಭಾಗಗಳಲ್ಲಿ, ಮೂಲ ವಾಕ್ಯಗಳಲ್ಲಿರುವ ಸಂದೇಶವನ್ನೇ ವ್ಯಕ್ತಗೊಳಿಸುವ ಹಾಗೆಯೇ ಭಾಷೆಯನ್ನೂ ಅನುವಾದಕರು ಉಪಯೋಗಿಸಿದ್ದಾರೆಂದು ಸಮುದಾಯದ ನಾಯಕರು ಭಾವಿಸಿದ್ದಾರೋ?

  13. ನಿಮ್ಮ ನಿರ್ಣಯದಲ್ಲಿ ಅಥವಾ ತೀರ್ಪಿನಲ್ಲಿ, ಮೂಲ ವಾಕ್ಯದಲ್ಲಿರುವ ಸಂದೇಶದಂತೆಯೇ ಅನುವಾದದಲ್ಲಿ ಸಂದೇಶವನ್ನು ವ್ಯಕ್ತಗೊಳಿಸಿದ್ದಾರೋ? ಅನುವಾದದಲ್ಲಿ ಯಾವುದೇ ವಾಕ್ಯಭಾಗದಲ್ಲಿ ಮೂಲ ಸಂದೇಶವನ್ನು “ವ್ಯಕ್ತಗೊಳಿಸಲಿಲ್ಲ” ಎಂದು ನಿಮಗೆ ತಿಳಿದರೆ, ದಯವಿಟ್ಟು ಕೆಳಗಿರುವ ಎರಡನೇ ಪ್ರಶ್ನೆಗಳ ಗುಂಪಿಗೆ ಉತ್ತರವನ್ನು ಕೊಡಿರಿ.

ಈ ಎರಡನೇ ಗುಂಪಿನಲ್ಲಿ ಯಾವುದೇ ಪ್ರಶ್ನೆಗಳಿಗೆ “ಹೌದು” ಎಂದು ನೀವು ಉತ್ತರ ಕೊಡುವುದಾದರೆ, ಅದರ ಕುರಿತಾಗಿ ಹೆಚ್ಚಿನ ರೀತಿಯಲ್ಲಿ ವಿವರಿಸಿರಿ, ಇದರಿಂದ ಅನುವಾದ ತಂಡಕ್ಕೆ ವು ಸಮಸ್ಯೆ ಯಾವುದೆಂದು ಸ್ಪಷ್ಟವಾಗಿ ತಿಳಿದುಬರುತ್ತದೆ , ಅನುವಾದದಲ್ಲಿ ಯಾವ ವಾಕ್ಯಭಾಗಕ್ಕೆ ತಿದ್ದುಪಡಿ ಬೇಕಾಗಿರುತ್ತದೆಯೆಂದು ಅವುಗಳನ್ನು ಯಾವರೀತಿ ತಿದ್ದುಪಡಿ ಮಾಡಬೇಕೆಂದು ತಿಳಿದುಕೊಳ್ಳುತ್ತಾರೆ.

  1. ಅನುವಾದದಲ್ಲಿ ಸಿದ್ಧಾಂತದ ಕುರಿತಾಗಿ ಯಾವುದರು ತಪ್ಪುಗಳು ಇವೆಯೋ ಎಂದು ತಿಳಿದುಕೊಳ್ಳಿರಿ?
  2. ನಿಮ್ಮ ಕ್ರೈಸ್ತ ಸಮುದಾಯದಲ್ಲಿ ಹೊಂದಿರುವ ನಂಬಿಕೆಗೆ ಸಂಬಂಧಿತವಾದ ವಿಷಯಗಳಿಗೆ ಅಥವಾ ರಾಷ್ಟ್ರೀಯ ಭಾಷೆಯ ಅನುವಾದಕ್ಕೆ ಸಂಬಂಧಪಟ್ಟ ವಿಷಯಗಳಿಗೆ ವಿರುದ್ಧವಾಗಿ ಯಾವುದೇ ವಿಷಯಗಳು ಅನುವಾದದಲ್ಲಿ ಕಂಡುಬಂದಿವಿಯೋ?
  3. ಮೂಲ ವಾಕ್ಯಭಾಗದಲ್ಲಿರದ ವಿಷಯಗಳನ್ನು ಅಥವಾ ಮಾಹಿತಿಯನ್ನು ಅನುವಾದ ತಂಡವು ಹೆಚ್ಚಾಗಿ ಏನಾದರು ಸೇರ್ಪಡೆ ಮಾಡಿದ್ದಾರೋ? (ನೆನಪಿನಲ್ಲಿಟ್ಟುಕೊಳ್ಳಿರಿ, ವಾಸ್ತವಿಕವಾದ ಸಂದೇಶವು ಕೂಡ [ಸೂಚ್ಯ ಮಾಹಿತಿ]ಯನ್ನು ಹೊಂದಿರುತ್ತದೆ (…/…/translate/figs-explicit/01.md).)
  4. ಅನುವಾದ ತಂಡವು ಮೂಲ ವಾಕ್ಯಭಾಗದಲ್ಲಿರುವ ವಿಷಯಗಳಲ್ಲಿ ಅಥವಾ ಸಂದೇಶದಲ್ಲಿರುವ ಆಲೋಚನೆಗಳನ್ನು ಅಥವಾ ಮಾಹಿತಿಯನ್ನು ಏನಾದರು ಬಿಟ್ಟಿದೆಯೋ?

ಅನುವಾದದೊಂದಿಗೆ ಏನಾದರೂ ಸಮಸ್ಯೆಗಳು ಇದ್ದರೆ, ಈ ಎಲ್ಲಾ ಸಮಸ್ಯೆಗಳನ್ನು ಪರಿಷ್ಕಾರ ಮಾಡಿಕೊಳ್ಳುವುದಕ್ಕೆ ಅನುವಾದ ತಂಡವನ್ನು ಭೇಟಿ ಮಾಡುವುದಕ್ಕೆ ಪ್ರಣಾಳಿಕೆಗಳನ್ನು ಮಾಡಿರಿ. ನೀವು ಅವರನ್ನು ಭೇಟಿ ಮಾಡಿದಾದನಂತರ, ಅನುವಾದವು ಚೆನ್ನಾಗಿದೆಯೆಂದು ನಿಶ್ಚಯ ಮಾಡಿಕೊಳ್ಳುವುದಕ್ಕೆ ಅನುವಾದ ತಂಡವು ಸಮುದಾಯದ ನಾಯಕರುಗಳೊಂದಿಗೆ ಪರಿಶೀಲನೆ ಮಾಡಿದ ತಮ್ಮ ಅನುವಾದವನ್ನು ಪರಿಶೀಲನೆ ಮಾಡಬೇಕಾದ ಅವಶ್ಯಕತೆಯಿದೆ. ಇದಾದನಂತರ ಮತ್ತೊಂದುಬಾರಿ ನಿಮ್ಮೊಂದಿಗೆ ಭೇಟಿಯಾಗಬಹುದು.

ನೀವು ಅನುವಾದವನ್ನು ಅನುಮೋದನೆ ಮಾಡುವುದಕ್ಕೆ ಸಿದ್ಧವಾಗಿರುವಾಗ, ಇಲ್ಲಿಗೆ ಹೋಗಿರಿ: [ಕ್ರಮಬದ್ಧವಾದ ಅನುಮೋದನೆ] (…/vol2-things-to-check/01.md).


ಜೋಡಣೆಯ ಸಾಧನೆ

Checking Manual :: ಜೋಡಣೆಯ ಸಾಧನೆ

ಕ್ರಮಬದ್ಧವಾದ ಪರಿಶೀಲನೆಯನ್ನು ಮಾಡುವುದಕ್ಕೆ ಜೋಡಣೆಯ ಸಾಧನೆಯನ್ನು ಉಪಯೋಗಿಸಿಕೊಳ್ಳುವ ಕ್ರಮದಲ್ಲಿ :

  1. ಟ್ರಾನ್ಸ್.ಲೇಶನ್.ಕೋರ್.ನಲ್ಲಿ ನೀವು ಪರಿಶೀಲನೆ ಮಾಡಬೇಕಾದ ಬೈಬಲ್ ಪುಸ್ತಕದ ಅನುವಾದವನ್ನು ಲೋಡ್ ಮಾಡಿರಿ.
  2. ಪದ ಜೋಡಣೆಯ ಸಾಧನೆಯನ್ನು ಆಯ್ಕೆ ಮಾಡಿಕೊಳ್ಳಿರಿ.
  3. ಎಡಬದಿಯಲ್ಲಿರುವ ಅಧ್ಯಾಯಗಳು ಮತ್ತು ವಚನಗಳ ಪರಿವಿಡಿಯನ್ನು ಉಪಯೋಗಿಸಿಕೊಂಡು ವಚನಗಳ ಮೂಲಕ ಪರಿಶೀಲನೆ ಮಾಡಿರಿ.
  • ವಚನವನ್ನು ತೆರೆಯುವುದಕ್ಕೆ ಪರಿವಿಡಿಯ ಪಟ್ಟಿಯಲ್ಲಿರುವ ವಚನದ ಮೇಲೆ ನೀವು ಒತ್ತಿದಾಗ (ಕ್ಲಿಕ್ ಮಾಡಿದಾಗ), ವಾಕ್ಯದ ಪದಗಳು ಲಂಬ ರೇಖೆಯ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ, ಅವುಗಳು ಅಧ್ಯಾಯಗಳು ಮತ್ತು ವಚನಗಳು ಪಟ್ಟಿಯ ಬಲಬದಿಗೆ ಮೇಲಿನಿಂದ ಕೆಳಗಡೆಗೆ ಇರುತ್ತವೆ, ಪ್ರತಿಯೊಂದು ಪದವು ಒಂದೊಂದು ಪ್ರತ್ಯೇಕ ಪೆಟ್ಟಿಗೆಯಲ್ಲಿರುತ್ತದೆ.
  • ಆ ವಚನಕ್ಕಾಗಿ ಮೂಲ ಭಾಷೆಯ ಪದಗಳ ಅಥವಾ ಮಾತುಗಳ (ಗ್ರೀಕ್, ಇಬ್ರಿ, ಅಥವಾ ಅರಾಮಿಕ್) ವಾಕ್ಯವು ಕೂಡ ಅನುವಾದ ಮಾಡುವ ಭಾಷೆಯ ಪದಗಳ ಪಟ್ಟಿಯ ಬಲಬದಿಯಲ್ಲಿ ಪ್ರತ್ಯೇಕವಾದ ಪೆಟ್ಟಿಗೆಯಲ್ಲಿರುತ್ತದೆ. ಮೂಲ ಭಾಷೆಯ ಪದಗಳ ಪೆಟ್ಟಿಗೆಗಳ ಕೆಳಗೆ ಚುಕ್ಕೆಗಳ ಸಾಲು ಇರುತ್ತದೆ.
  1. ಪ್ರತಿಯೊಂದು ವಚನದಲ್ಲಿ, ಅದೇ ಅರ್ಥವನ್ನು ವ್ಯಕ್ತಪಡಿಸುವ ಮೂಲ ಭಾಷೆಯ ಪದಗಳ ಕೆಳಗೆ ಪದ ಬ್ಯಾಂಕಿನಲ್ಲಿರುವ ಅನುವಾದ ಮಾಡುವ ಭಾಷೆಯ ಪದಗಳನ್ನು ಎಳೆದಿಡಿರಿ.
  • ಪದವನ್ನು ಅಥವಾ ಮಾತನ್ನು ಆರಿಸಿಕೊಳ್ಳಲು, ವಾಕ್ಯಕ್ಕೆ ಸಂಬಂಧಪಟ್ಟಿರುವ ಮೂಲ (ನಿಜವಾದ) ವಾಕ್ಯದ ಪದ ಪೆಟ್ಟಿಗೆಯ ಕೆಳಗಿರುವ ಉದ್ದವಾದ ಸ್ಥಳದೊಳಗೆ ಅನುವಾದ ಮಾಡುವ ಭಾಷೆಯ ಪ್ರತಿಯೊಂದು ವಾಕ್ಯದ ಪೆಟ್ಟಿಗೆಯನ್ನು ನೀವು ಎಳೆಯುತ್ತಿರುವಾಗ ಅದನ್ನು ಕ್ಲಿಕ್ ಮಾಡಿ, ಹಾಗೆಯೇ ಒತ್ತಿ ಇಟ್ಟುಕೊಂಡಿರಬೇಕು.
  • ಮೂಲ ಭಾಷೆಯ ವಾಕ್ಯಗಳ ಪೆಟ್ಟಿಗೆಯ ಮೇಲೆ ಅನುವಾದ ಮಾಡಿದ ವಾಕ್ಯಗಳನ್ನು ಇಟ್ಟಾಗ, ಚುಕ್ಕೆಗಳ ಸಾಲು ನೀಲಿ ಸಾಲುಗಳಾಗಿ ಕಾಣಿಸಿಕೊಳ್ಳುತ್ತವೆ, ಆಗ ನೀವು ಆ ವಾಕ್ಯವು ಅಲ್ಲಿಗೆ ಎಳೆಯಲ್ಪಟ್ಟಿದೆಯೆಂದು ತಿಳಿದುಕೊಳ್ಳಬಹುದು. ಅನುವಾದ ಮಾಡುವ ಭಾಷೆಯ ಮಾತುಗಳು ಬೇರೊಂದಕ್ಕೆ ಸಂಬಂಧಪಟ್ಟಿವೆಯೆಂದು ನೀವು ನಿರ್ಣಯಿಸಿಕೊಂಡರೆ ಅಥವಾ ತಪ್ಪು ಮಾಡಿದರೆ, ನೀವು ಸುಮ್ಮನೆ ಅದನ್ನು ತಿರುಗಿ ಸಂಬಂಧಿತ ಸ್ಥಳದಲ್ಲಿ ಹಾಕಿರಿ. ಗುರಿ ಭಾಷೆಯ ಪದಗಳು ಅಥವಾ ಮಾತುಗಳು ಕೂಡ ತಿರುಗಿ ಆ ಪಟ್ಟಿಯೊಳಗೆ ಹಾಕಲ್ಪಡುತ್ತವೆ.
  • ವಾಕ್ಯದಲ್ಲಿ ಪುನರಾವರ್ತನೆಯಾದ ಮಾತುಗಳು ಇರುವಾಗ, ಮೂಲ ಭಾಷೆಯ ವಾಕ್ಯಕ್ಕೆ ಅರ್ಥ ಕೊಡುವ ಭಾಗಕ್ಕೆ ಸಂಬಂಧಪಟ್ಟ ಮಾತುಗಳನ್ನೇ ಎಳೆಯಲು ನಿರ್ಣಯಿಸಿಕೊಳ್ಳಿರಿ. ಆದನಂತರ ಆ ವಾಕ್ಯದ ಅರ್ಥವು ಪುನರಾವರ್ತನೆ ಆಗುವ ಪ್ರತಿಯೊಂದು ಮೂಲ ವಾಕ್ಯದಲ್ಲಿ ಪುನರಾವರ್ತನೆಯಾಗುವ ಪದಗಳನ್ನು ಮಾತ್ರ ಎಳೆಯಿರಿ.
  • ವಾಕ್ಯದಲ್ಲಿ ಅನುವಾದ ಮಾಡುವ ಭಾಷೆಯ ಪದಗಳು ಒಂದಕ್ಕಿಂತ ಹೆಚ್ಚಾಗಿ ಕಂಡುಬಂದರೆ, ಪದದ ಪ್ರತಿಯೊಂದು ಉದಾಹರಣೆಯು ಪದದನಂತರ ಒಂದು ಸಣ್ಣ ಸಂಖ್ಯೆಯನ್ನು ಹೊಂದಿರುತ್ತದೆ. ಈ ಸಂಖ್ಯೆಯಿಂದ ನೀವು ಸರಿಯಾದ ಕ್ರಮದಲ್ಲಿ ಮೂಲ ಪದವನ್ನು ಸರಿಪಡಿಸುವುದಕ್ಕೆ ಪುನರಾವೃತವಾದ ಅನುವಾದ ಮಾಡುವ ಪದವನ್ನು ಜೋಡಿಸಲು ನಿಮಗೆ ಸಹಾಯಕವಾಗಿರುತ್ತದೆ.
  • ಸಮತೋಲನವಾದ ಅರ್ಥಗಳನ್ನು ಹೊಂದಿರುವ ಮಾತುಗಳ/ಪದಗಳ ಗುಂಪನ್ನು ಮಾಡುವ ಕ್ರಮದಲ್ಲಿ ಅನುವಾದ ಮಾಡುವ ಭಾಷೆಯ ಪದಗಳನ್ನು ಅಥವಾ/ಮತ್ತು ಮೂಲ ಭಾಷೆಯ ಪದಗಳನ್ನು ಸಂಯೋಜಿಸುವ ಅವಶ್ಯಕತೆ ಇರಬಹುದು. ಜೋಡಣೆಯ ಮುಖ್ಯ ಉದ್ದೇಶವು ಏನಂದರೆ ಅನುವಾದ ಮಾಡುವ ಭಾಷೆಯ ಪದಗಳ ಅತೀ ಚಿಕ್ಕ ಗುಂಪನ್ನು ಒಂದೇ ಅರ್ಥವಿರುವ ಮೂಲ ಭಾಷೆಯ ಪದಗಳ ಅತೀ ಚಿಕ್ಕ ಗುಂಪಿಗೆ ಸರಿಹೋಗುತ್ತವೋ ಇಲ್ಲವೋ ಎಂದು ನೋಡುವುದಾಗಿರುತ್ತದೆ.

ಒಂದು ವಾಕ್ಯಕ್ಕಾಗಿ ಈ ವಿಧಾನವನ್ನು ಸಂಪೂರ್ಣಗೊಳಿಸಿದನಂತರ, ಅನುವಾದ ಮಾಡುವ ಪದಗಳ ಬ್ಯಾಂಕಿನಲ್ಲಿ ಅಥವಾ ಮೂಲ ಭಾಷೆಯ ಫಲಕದಲ್ಲಿ ಪದಗಳು ಏನಾದರೂ ಉಳಿದುಹೋಗಿದ್ದಾವೋ ಇಲ್ಲವೋ ಎಂದು ನೋಡುವುದಕ್ಕೆ ಸುಲಭವಾಗಿರಬೇಕು.

  • ಅನುವಾದ ಮಾಡುವ ಭಾಷೆಯ ಪದಗಳು ಏನಾದರು ಉಳಿದುಹೋಗಿದ್ದರೆ, ಅನುವಾದದಲ್ಲಿ ಸಂಬಂಧಪಡದಿರುವ ಏನೋ ಒಂದು ಮಾತುಗಳು ಸೇರಿಸಲ್ಪಟ್ಟಿವೆಯೆಂದು ಇದರ ಅರ್ಥವಾಗಿರಬಹುದು. ಉಳಿದ ಪದಗಳು ಅಳವಡಿಸುಕೊಳ್ಳುವ ಮಾಹಿತಿಯನ್ನು ವ್ಯಕ್ತಪಡಿಸುವದಾದರೆ, ಅವು ಹೆಚ್ಚುವರಿಯಾಗಿ ಬಂದ ಮಾತುಗಳಲ್ಲ ಮತ್ತು ಅವುಗಳು ವಾಕ್ಯಕ್ಕೆ ಅನುಗುಣವಾಗಿ ಜೋಡಣೆ ಮಾಡಬೇಕಾಗಿರುತ್ತದೆ ಅಥವಾ ಅವರು ವಿವರಿಸುವ ಮಾತುಗಳಿಗೆ ಜೋಡಿಸಬೇಕಾಗಿರುತ್ತದೆ.
  • ಒಂದುವೇಳೆ ಮೂಲ ಭಾಷೆಯ ಪದಗಳು ಉಳಿದುಹೋದರೆ, ಉಳಿದುಹೋಗಿರುವ ಈ ಮಾತುಗಳಿಗೆ ಅನುವಾದವನ್ನು ಅನುವಾದದಲ್ಲಿ ಸೇರಿಸಬೇಕಾಗಿರುತ್ತದೆಯೆಂದರ್ಥ.
  • ಮೂಲ ವಾಕ್ಯದ ಅನುವಾದದಲ್ಲಿ ಕೆಲವು ಪದಗಳಿಗೆ ಅನುವಾದ ಮಾಡಲಿಲ್ಲವೆಂದು ಅಥವಾ ಕಾಣಿಸುತ್ತಿಲ್ಲವೆಂದು ನೀವು ಕಂಡುಹಿಡಿಯುವುದಾದರೆ, ಯಾರಾದರೊಬ್ಬರು ಅನುವಾದವನ್ನು ತಿದ್ದುಪಡಿ ಮಾಡಬೇಕಾದ ಅವಶ್ಯಕತೆಯಿರುತ್ತದೆ . ಅನುವಾದದಲ್ಲಿ ತಪ್ಪು ಏನಿದೆಯೆಂದು ಬೇರೊಬ್ಬರಿಗೆ ಹೇಳುವುದಕ್ಕೆ ನೀವು ಒಂದು ವ್ಯಾಖ್ಯೆಯನ್ನು ಮಾಡಬೇಕಾಗುತ್ತದೆ, ಅಥವಾ ನೀವು ನೇರವಾಗಿ ಜೋಡಣೆಯ ಸಾಧನೆಯಲ್ಲಿ ಅನುವಾದವನ್ನು ತಿದ್ದುಪಡಿ ಮಾಡಬಹುದು.

ಜೋಡಣೆಯ ತತ್ವ

ಜೋಡಣೆಯ ಸಾಧನೆಯು ಒಂದರಿಂದ ಒಂದಕ್ಕೆ, ಒಂದರಿಂದ ಹಲವು , ಹಲವುಗಳಿಂದ ಒಂದಕ್ಕೆ, ಮತ್ತು ಅನೇಕವಾದವುಗಳಿಂದ ಅನೇಕವಾದ ಜೋಡಣೆಗಳಿಗೆ ಸಹಕಾರ ಮಾಡುತ್ತದೆ. ಎರಡು ಭಾಷೆಗಳಿಂದ ವ್ಯಕ್ತವಾಗಿರುವ ಅರ್ಥದ ಸರಿಯಾದ ಜೋಡಣೆಯನ್ನು ಹೊಂದಿಕೊಳ್ಳುವ ಅವಶ್ಯಕತೆಯ ಮೇಲೆ, ಒಂದು ಅಥವಾ ಅನೇಕವಾದ ಅನುವಾದ ಭಾಷೆಯ ಪದಗಳು ಒಂದು ಅಥವಾ ಅನೇಕವಾದ ಮೂಲ ಭಾಷೆಯ ಪದಗಳಿಗೆ ಜೋಡಣೆಯಾಗುತ್ತವೆ ಎಂದರ್ಥ, ಏನಾದರೊಂದು ವಿಷಯವನ್ನು ತಿಳಿಯಪಡಿಸುವದಕ್ಕೆ ಮೂಲ ಭಾಷೆಗಿಂತಲೂ ಅನುವಾದ ಮಾಡುವ ಭಾಷೆಯಲ್ಲಿ ಕಡಿಮೆ ಪದಗಳಾಗಲಿ ಅಥವಾ ಹೆಚ್ಚುವರಿ ಪದಗಳನ್ನಾಗಲಿ ಉಪಯೋಗಿಸಿದ್ದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಡಿರಿ, ಯಾಕಂದರೆ ಅದು ಸಹಜವಾಗಿ ಬರುವುದುಂಟು. ಜೋಡಣೆಯ ಸಾಧನೆಯೊಂದಿಗೆ, ನಾವು ಕೇವಲ ಮಾತುಗಳನ್ನು ಅಥವಾ ಪದಗಳನ್ನು ಮಾತ್ರವಲ್ಲದೆ, ನಿಜವಾಗಿ ಅರ್ಥವನ್ನು ಕೂಡ ಜೋಡಣೆ ಮಾಡುತ್ತಿದ್ದೇವೆ. ಮೂಲ ಬೈಬಲ ಅರ್ಥವನ್ನು ಚೆನ್ನಾಗಿ ವ್ಯಕ್ತಪಡಿಸುವುದೇ ಪ್ರಾಮುಖ್ಯ, ಈ ಕೆಲಸ ಮಾಡುವುದಕ್ಕೆ ಎಷ್ಟು ಪದಗಳನ್ನು ಬಳಸಿದರೂ ಸಮಸ್ಯೆಯಿಲ್ಲ. ಮೂಲ ಭಾಷೆಯ ಅರ್ಥವನ್ನು ವ್ಯಕ್ತಪಡಿಸುವ ಅನುವಾದ ಭಾಷೆಯ ಪದಗಳನ್ನು ಜೋಡಣೆ ಮಾಡುವುದರ ಮೂಲಕ ಅನುವಾದದಲ್ಲಿ ಮೂಲ ಭಾಷೆಯ ಅರ್ಥವು ಇದೆಯೋ ಇಲ್ಲವೋ ಎಂದು ನಾವು ನೋಡಬಹುದು.

ಯಾಕಂದರೆ ವಾಕ್ಯವನ್ನು ನಿರ್ಮಾಣ ಮಾಡುವುದಕ್ಕೆ ಪ್ರತಿಯೊಂದು ಅನುವಾದ ಮಾಡುವ ಭಾಷೆಯು ವಿಭಿನ್ನವಾದ ಅಗತ್ಯತೆಗಳನ್ನು ಹೊಂದಿಕೊಂಡಿರುತ್ತದೆ ಮತ್ತು ಕೊಡಬೇಕಾದ ಸ್ಪಷ್ಟತೆಯ ಮಾಹಿತಿಯನ್ನು ಹೊಂದಿರುತ್ತದೆ, ಮೂಲ ಭಾಷೆಯಲ್ಲಿರುವ ಯಾವುದೇ ಪದಗಳಿಗೆ ಸಂಬಂಧಪಡದ ಅನುವಾದ ಮಾಡುವ ಭಾಷೆಯ ಕೆಲವು ಪದಗಳು ಅನೇಕಬಾರಿ ಬರುತ್ತಾ ಇರುತ್ತವೆ. ವಾಕ್ಯಕ್ಕೆ ಅರ್ಥವನ್ನು ಕೊಡುವ ಕ್ರಮದಲ್ಲಿ ಈ ಪದಗಳು ವಾಕ್ಯಕ್ಕೆ ಬೇಕಾದ ಮಾಹಿತಿಯನ್ನು ಕೊಡುವುದಾದರೆ, ಅಥವಾ ಆ ವಾಕ್ಯವನ್ನು ಅರ್ಥಮಾಡಿಕೊಳ್ಳುವುದಕ್ಕೋಸ್ಕರ ಬೇಕಾದ ವಿವರಣಾತ್ಮಕ ಮಾಹಿತಿಯನ್ನು ಕೊಡುತ್ತಿರುವುದಾದರೆ, ಕೊಡಲ್ಪಟ್ಟಿರುವ ಅನುವಾದ ಮಾಡುವ ಭಾಷೆಯಲ್ಲಿನ ಪದಗಳನ್ನು ಅಳವಡಿಸಿಕೊಳ್ಳುವ ವಿಧಾನದಲ್ಲಿ ಅಥವಾ ವಿವರಣೆ ಕೊಡುವುದಕ್ಕೆ ಅವು ಸಹಾಯ ಮಾಡುವ ಪದ್ಧತಿಯಲ್ಲಿ ಮೂಲ ಭಾಷೆಯ ಪದಗಳೊಂದಿಗೆ ಜೋಡಣೆ ಮಾಡಬೇಕು.

ಸೇರಿಸಬೇಕಾದ ಮತ್ತು ಸೇರಿಸಬಾರದ ನಿಯಮಗಳು

  • ಒಂದೇ ಒಂದು ಮೂಲ ಭಾಷೆಯ ಪದಕ್ಕೆ ಅನೆಕವಾದ ಅನುವಾದ ಭಾಷೆಯ ಪದಗಳನ್ನು ಜೋಡಣೆ ಮಾಡುವುದಕ್ಕೆ, ಕೇವಲ ಅನುವಾದ ಮಾಡುವ ಭಾಷೆಯ ಪದಗಳನ್ನು ಮೂಲ ಭಾಷೆಯ ಪದದ ಕೆಳಗಿರುವ ಪೆಟ್ಟಿಗೆಯ ಮೇಲೆ ಎಳೆದು ಹಾಕಿರಿ.
  • ಮೂಲ ಭಾಷೆಯ ಪದಗಳ ಸೇರ್ಪಡೆಗೆ ಅನುವಾದ ಭಾಷೆಯ ಪದ(ಗಳನ್ನು) ಜೋಡಿಸಬೇಕಾದ ಅವಶ್ಯಕತೆ ಬಂದಾಗ, ಮೊಟ್ಟ ಮೊದಲು ಇತರ ಮೂಲ ಭಾಷೆಯ ಪದವಿರುವ ಪೆಟ್ಟಿಗೆಯೊಳಗೆ ಮೂಲ ಭಾಷೆಯ ಪದಗಳಿಗೆ ಸಂಬಂಧಪಟ್ಟ ಪದಗಳಲ್ಲಿ ಒಂದು ಎಳೆದು ಹಾಕಿರಿ. ಇದರಿಂದ ಅನೇಕ ಮೂಲ ಭಾಷೆಯ ಪದಗಳು ಅಲ್ಲಿಯೇ ಬೆರೆತುಕೊಂಡಿರುತ್ತವೆ.
  • ಮುಂಚೆ ಸೇರ್ಪದಡೆ ಭಾಷೆಯ ಪದಗಳನ್ನು ಪುನ ಹೊರ ತೆಗೆಯಬೇಕಾದರೆ, ಬಲಬದಿಗೆ ಇರುವ ಮೂಲ ಭಾಷೆಯ ಪದವನ್ನು ಬಲಕ್ಕೆ ಎಳೆಯಿರಿ. ಒಂದು ಚಿಕ್ಕ ಹೊಸ ಜೋಡಣೆಯ ಪೆಟ್ಟಿಗೆಯು ಕಾಣಿಸಿಕೊಳ್ಳುತ್ತದೆ, ಮತ್ತು ಹೊರಗೆ ತೆಗೆಯಬೇಕೆಂದೆನ್ನುವ ಮೂಲ ಭಾಷೆಯ ಪದಗಳೆಲ್ಲವೂ ಇನ್ನೊಂದು ಪೆಟ್ಟಿಗೆಯಲ್ಲಿ ಹಾಕಿರಿ.
  • ಕಡೂ ಎಡಬದಿಗೆ ಇರುವ ಮೂಲ ಭಾಷೆಯ ಪದವನ್ನು ಕೂಡ ಎಳೆಯುವುದರ ಮೂಲಕ ಹೊರಗೆ ತೆಗೆಯಬಹುದು ಮತ್ತು ಅದನ್ನು ಅದರ ಎಡಬದಿಯಲ್ಲಿರುವ ಮೂಲ ಭಾಷೆಯ ಪದದ ಪೆಟ್ಟಿಗೆಯೊಳಗೆ ತಕ್ಷಣವೇ ಹಾಕಬಹುದು.
  • ಅನುವಾದ ಭಾಷೆಯ ಪದಗಳಲ್ಲಿ ಯಾವ ಪದವಾದರೂ ಮೂಲ ಭಾಷೆಯ ಪದದೊಂದಿಗೆ ಜೋಡಣೆ ಮಾಡಲ್ಪಟ್ಟಿದ್ದರೆ, ಅದು ಪದಗಳ ಪಟ್ಟಿಗೆ ತಿರುಗಿ ಹೋಗಿ ಸೇರಿಕೊಳ್ಳುತ್ತದೆ.
  • ಮೂಲ ಭಾಷೆಯ ಪದಗಳು ಸರಿಯಾದ ಕ್ರಮದಲ್ಲಿಯೇ ಉಳಿದುಕೊಂಡಿರಬೇಕು. ಒಂದುವೇಳೆ ಮೂರು ಪದಗಳನ್ನು ಬೆರೆತುಪಡಿಸಿದ್ದರೆ ಅಥವಾ ಮೂರಕ್ಕಿಂತ ಇನ್ನೂ ಹೆಚ್ಚಾದ ಪದಗಳನ್ನು ಬೆರೆತುಗೊಳಿಸಿದ್ದರೆ, ಕಡೂ ಬಲಬದಿಗೆ ಇರುವ ಮೂಲ ಭಾಷೆಯ ಪದಗಳನ್ನು ಮೊದಲು ಹೊರಗೆ ತೆಗೆಯಬಹುದು. ಮೊಟ್ಟಮೊದಲು ಮಧ್ಯದಲ್ಲಿರುವ ಪದ(ಗಳನ್ನು) ಹೊರತೆಗೆಯುವುದರ ಮೂಲಕ ಮೂಲ ಭಾಷೆಯ ಪದಗಳಗಳ ಕ್ರಮವು ತಪ್ಪಿಹೋಗಬಹುದು. ಒಂದುವೇಳೆ ಆ ರೀತಿ ನಡೆದಾಗ, ಮೂಲ ಭಾಷೆಯ ಪದಗಳು ತಮ್ಮ ಕ್ರಮದಲ್ಲಿಯೇ ಉಳಿದುಕೊಳ್ಳುವುದಕ್ಕೆ ಆ ಪೆಟ್ಟಿಗೆಯಲ್ಲಿರುವ ಪದಗಳನ್ನು ಹೊರ ತೆಗೆಯಿರಿ.

ಜೋಡಣೆ ಮಾಡಿದನಂತರ

ನೀವು ಅನುವಾದದ ಕುರಿತಾಗಿ ಪ್ರಶ್ನೆಗಳನ್ನು ಮತ್ತು ವ್ಯಾಖ್ಯೆಗಳನ್ನು ಮಾಡಿ ಬೈಬಲ್ ಪುಸ್ತಕವನ್ನು ಜೋಡಣೆ ಮಾಡಿ ಮುಗಿಸಿದನಂತರ, ಅನುವಾದ ತಂಡಕ್ಕೆ ಪ್ರಶ್ನೆಗಳನ್ನು ಕಳುಹಿಸುವ ಸಮಯವಿದು ಅಥವಾ ಅನುವಾದ ತಂಡದೊಂದಿಗೆ ಭೇಟಿ ಮಾಡಿ ಚರ್ಚೆ ಮಾಡುವ ಸಮಯವಿದು. ಈ ಪದ್ಧತಿಯನ್ನು ಸಂಪೂರ್ಣಗೊಳಿಸುವುದಕ್ಕೆ ಕೆಲವೊಂದು ಸೂತ್ರಗಳಿಗಾಗಿ ನೀವು ಎಲ್ಲಿ ಬಿಟ್ಟಿದ್ದೀರೋ ಅಲ್ಲಿಗೆ ತಿರುಗಿ ಹೋಗಿ ನೋಡಿರಿ. [ಕ್ರಮಬದ್ಧವಾದ ಪರಿಶೀಲನೆಗೆ ಮೆಟ್ಟಿಲುಗಳು] (…/vol2-backtranslation/01.md) ಪುಟ.


ತಂಡದ ಮೌಖಿಕ ಗಾತ್ರದ ಪರಶೀಲನೆ

Checking Manual :: ತಂಡದ ಮೌಖಿಕ ಗಾತ್ರದ ಪರಶೀಲನೆ

ತಂಡವಾಗಿ ಒಂದು ಭಾಗದ ಅನುವಾದವನ್ನು ಪರಿಶೀಲಿಸಲು, ತಂಡವು ಮೌಖಿಕ ಗಾತ್ರದ ಪರಿಶೀಲನೆಯನ್ನು ಮಾಡಬೇಕು. ಇದನ್ನು ಮಾಡಲು ಪ್ರತಿಯೊಬ್ಬ ಅನುವಾದಕನು ತನ್ನ ಅನುವಾದವನ್ನು ತಂಡದ ಉಳಿದವರಿಗೆ ಕೇಳುವ ಹಾಗೆ ಜೋರಾಗಿ ಓದುತ್ತಾನೆ. ಪ್ರತಿ ಭಾಗದ ಕೊನೆಯಲ್ಲಿ ಭಾಷಾಂತರಕಾರನು ಓದುವುದನ್ನು ನಿಲ್ಲಿಸುತ್ತಾನೆ, ಇದರಿಂದ ತಂಡವು ಆ ಭಾಗದ ಬಗ್ಗೆ ಚರ್ಚಿಸಲು ಸಾಧ್ಯವಾಗುತ್ತದೆ. ಅನುವಾದಕನು ಪಠ್ಯವನ್ನು ಮೌಖಿಕವಾಗಿ ಓದುತ್ತಿರುವಾಗ, ಪ್ರತಿಯೊಂದು ಲಿಖಿತ ಅನುವಾದವನ್ನು ಎಲ್ಲಾರು ನೋಡಬಹುದಾದ ರೀತಿಯಲ್ಲಿ ಯೋಜಿಸಲಾಗಿದೆ.

ತಂಡದ ಸದಸ್ಯರ ಕರ್ತವ್ಯಗಳನ್ನು ವಿಂಗಡಿಸಲಾಗಿದೆ – ತಂಡದ ಪ್ರತಿ ಸದಸ್ಯರು ಒಂದು ಸಮಯದಲ್ಲಿ ಕೆಳಗಿನ ಪಾತ್ರಗಳಲ್ಲಿ ಒಂದನ್ನು ಮಾತ್ರ ನಿರ್ವಹಿಸುವುದು ಮುಖ್ಯ.

1.ತಂಡದ ಒಬ್ಬರು ಅಥವ ಹೆಚ್ಚಿನ ಸದಸ್ಯರು ಸ್ವಾಭಾವಿಕತೆಯನ್ನು ಕೇಳುತ್ತಾರೆ. ಅದರಲ್ಲಿ ಏನಾದರು ಅಸ್ವಾಭಾವಿಕವಾಗಿದ್ದರೆ, ಕೊನೆಯ ಭಾಗವನ್ನು ಓದುವಾಗ, ಅದನ್ನು ಹೇಳಲು ಸಹಜವಾದ ಮಾರ್ಗವನ್ನು ಶಿಫಾರಸು ಮಾಡುತ್ತಾರೆ. 1.ತಂಡದ ಒಬ್ಬರು ಅಥವ ಹೆಚ್ಚಿನ ಸದಸ್ಯರು ಮೂಲ್ಯ ಪಠ್ಯದಲ್ಲಿ ಸೇರಿಸಿದ, ಕಾಣೆಯಾದ ಅಥವ ಬದಲಾದದ್ದನ್ನು ಅನುಸರಿಸುತ್ತಾರೆ. ಭಾಗವನ್ನು ಓದುವ ಕೊನೆಯಲ್ಲಿ ಮೂಲ್ಯ ಪಠ್ಯದಲ್ಲಿ ಸೇರಿಸಿದ, ಕಾಣೆಯಾದ ಅಥವ ಬದಲಾವಣೆಯ ಬಗ್ಗೆ ತಂಡವನ್ನು ಎಚ್ಚರಿಸುತ್ತಾರೆ. 1.ತಂಡದ ಇನ್ನೊಬ್ಬ ಸದಸ್ಯನು ಅನುವಾದ ವರದಿಯ ಕ್ರಮವನ್ನು ಅನುಸರಿಸುತ್ತಾ ಮೂಲ್ಯ ಪಠ್ಯದದಲ್ಲಿನ ಹೈಲೈಟ್ ಮಾಡಿದ ಎಲ್ಲಾ ಪ್ರಮುಖ ಪದಗಳನ್ನು ಗಮನಿಸುತ್ತಾರೆ. ಓದುವಲ್ಲಿ ಹೊರಹೊಮ್ಮುವ ಸಮಸ್ಯಗಳೊಂದಿಗೆ ಅನುವಾದದಲ್ಲಿ ಸಾಮರಸ್ಯವಿಲ್ಲದ ಅಥವ ಸೂಕ್ತವಲ್ಲದ ಪ್ರಮುಖ ಪದಗಳ ಬಗ್ಗೆ ತಂಡವು ಚರ್ಚಿಸುತ್ತದೆ. ಈ ಕ್ರಮವು ಲಭ್ಯವಿಲ್ಲದಿದ್ದರೆ, ತಂಡದ ಸದಸ್ಯರು ಪ್ರಮುಖ ಪದಗಳನ್ನು ತಂಡದ ಅದರ ದಾಖಲಾತಿಯಲ್ಲಿ (ಸ್ಪ್ರೆಡ್ ಶೀಟ್) ನಲ್ಲಿ ನೋಡಬಹುದು.

ತಂಡವು ತಮ್ಮ ಅನುವಾದಗಳಲ್ಲಿ ತೃಪ್ತರಾಗುವವರೆಗೆ ಈ ಹಂತಗಳನ್ನು ಅಗತ್ಯವಿರುವಂತೆ ಪುನರಾವರ್ತಿಸಬಹುದು.

ಈ ಸಮಯದಲ್ಲಿ, ಅನುವಾದವನ್ನು ಮೊದಲ ಕರಡು ಪ್ರತಿ ಎಂದು ಪರಿಗಣಿಸಲಾಗುತ್ತದೆ, ಮತ್ತು ತಂಡವು ಈ ಕೆಳಗಿನವುಗಳನ್ನು ಮಾಡಬೇಕಾಗುತ್ತದೆ.

1.ಅನುವಾದ ತಂಡದ ಯಾರಾದರೂ ಅನುವಾದ ಸ್ಟುಡಿಯೋಗೆ ಪಠ್ಯವನ್ನು ನಮೂದಿಸಬೇಕು. ಕರಡು ಪ್ರತಿಯನ್ನು ಮಾಡುವ ಪ್ರಾರಂಭದಿಂದಲೆ ತಂಡವು ಅನುವಾದ ಸ್ಟುಡಿಯೋವನ್ನು ಬಳಸುತ್ತಿದ್ದರೆ, ಈ ಹಂತದಲ್ಲಿ ತಂಡವು ಮಾಡಬೇಕಾದ ಬದಲಾವಣೆಗಳನ್ನು ಮಾತ್ರ ನಮೂದಿಸಬೇಕಾಗಿದೆ. 1.ತಂಡವು ಮಾಡಿದ ಎಲ್ಲಾ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ಒಳಗೊಂಡಂತೆ ಅನುವಾದದ ಹೊಸ ಆಡಿಯೊ ರೆಕಾರ್ಡಿಂಗ್ ಮಾಡಬೇಕು. ಅನುವಾದ ಸ್ಟುಡಿಯೋ ಫೈಲ್ ಹಾಗು ಆಡಿಯೋ ರೆಕಾರ್ಡಿಂಗ್ ಅನ್ನು ಬಾಗಿಲು43 ರಲ್ಲಿ ತಂಡದ ಬಂಡಾರಕ್ಕೆ ಅಪ್ಲೋಡ್ ಮಾಡಬೆಕು


ನಿಖರತೆ ಮತ್ತು ಸಮುದಾಯದ ಅನುಮೋದನೆ

Checking Manual :: ನಿಖರತೆ ಮತ್ತು ಸಮುದಾಯದ ಅನುಮೋದನೆ

ನಿಖರತೆಯ ಅನುಮೋದನೆಗಾಗಿ ಮತ್ತು ಸಮುದಾಯದ ಮೌಲ್ಯಮಾಪನಗಾಗಿ ದಾಖಲೆ

ನಮ್ಮ ಭಾಷೆಯ ಸಮುದಾಯದಲ್ಲಿ ಸಭಾ ನಾಯಕರುಗಳಾಗಿರುವ ನಾವು ಈ ಕೆಳಗಿನವುಗಳನ್ನು ಅನುಮೋದನೆ ಮಾಡುತ್ತಿದ್ದೇವೆ : 5.

  1. ಅನುವಾದವು ನಂಬಿಕೆಯ ವ್ಯಾಖ್ಯೆಯನ್ನು ಮತ್ತು ಅನುವಾದ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡಿರುತ್ತದೆ.
  2. ಅನುವಾದ ಮಾಡುವ ಭಾಷೆಯಲ್ಲಿ ನಿಖರತೆ, ಸ್ಪಷ್ಟತೆ ಮತ್ತು ಸಹಜವಾಗಿದೆ.
  3. ಅನುವಾದವು ಭಾಷೆಯ ಸ್ವೀಕೃತವಾದ ಶೈಲಿಯನ್ನು ಉಪಯೋಗಿಸಿದೆ.
  4. ಅನುವಾದದಲ್ಲಿ ಸರಿಯಾದ ಸೂಕ್ತವಾದ ವರ್ಣಮಾಲೆಯನ್ನು ಮತ್ತು ನುಡಿಗಟ್ಟಿನ ಪದ್ಧತಿಯನ್ನು ಉಪಯೋಗಿಸಲಾಗಿದೆ.
  5. ಸಮುದಾಯವು ಅನುವಾದವನ್ನು ಅನುಮೋದನೆ ಮಾಡಲಾಗಿದೆ.
  6. ಸಮುದಾಯ ಮೌಲ್ಯಮಾಪನದ ರೂಪ ಸಂಪೂರ್ಣಗೊಳಿಸಲಾಗಿದೆ.
    12 ಇನ್ನೂ ಏನಾದರೂ ಸಮಸ್ಯೆಗಳು ಉಳಿದುಕೊಂಡಿದ್ದರೆ, ಕ್ರಮಬದ್ಧೀದ್ಧ ಪರಿಶೀಲಕರ ಗಮನಕ್ಕೋಸ್ಕರ ಅವುಗಳನ್ನು ಇಲ್ಲಿ ಬರೆಯಿರಿ.

ನಿಖರತೆಯ ಪರಿಶೀಲಕರ ಹೆಸರುಗಳು ಮತ್ತು ಸ್ಥಾನಗಳು :

  • ಹೆಸರು :
  • ಸ್ಥಾನ :
  • ಹೆಸರು :
  • ಸ್ಥಾನ :
  • ಹೆಸರು :
  • ಸ್ಥಾನ :
  • ಹೆಸರು :
  • ಸ್ಥಾನ :
  • ಹೆಸರು :
  • ಸ್ಥಾನ :
  • ಹೆಸರು :
  • ಸ್ಥಾನ :

ನಿಖರತೆಯ ಪರಿಶೀಲನೆ

Checking Manual :: ನಿಖರತೆಯ ಪರಿಶೀಲನೆ

ಸಭಾಪಾಲಕರ ಮೂಲಕ ಮತ್ತು ಸಭೆಯ ನಾಯಕರುಗಳ ಮೂಲಕ ನಿಖರತೆಗಾಗಿ ಅನುವಾದವನ್ನು ಪರಿಶೀಲನೆ ಮಾಡಬಹದು

ಹೊಸ ಅನುವಾದವು ನಿಖರವಾಗಿದೆಯೋ ಇಲ್ಲವೋ ಎಂದು ನೋಡುವುದು ತುಂಬಾ ಪ್ರಾಮುಖ್ಯವಾದ ವಿಷಯ. ಮೂಲ ಭಾಷೆಯಲ್ಲಿ ಇರುವ ಅರ್ಥವನ್ನೇ ಅನುವಾದದಲ್ಲಿ ಉಪಯೋಗಿಸಿರುವದಾದರೆ ಆ ಅನುವಾದವು ನಿಖರತೆಯಾಗಿದೆಯೆಂದರ್ಥ. ಬೇರೊಂದು ಮಾತುಗಳಲ್ಲಿ ಹೇಳಬೇಕಾದರೆ, ಮೂಲ ರಚನಾಕಾರರು ಉದ್ದೇಶಿಸಿ ಹೇಳಬೇಕಾದ ಸಂದೇಶವನ್ನೇ ನಿಖರತೆಯ ಅನುವಾದವು ಕೂಡ ಅದೇ ಸಂದೇಶವನ್ನೇ ಹೇಳಿರುತ್ತದೆ. ಅನುವಾದದಲ್ಲಿ ಹೆಚ್ಚಿನ ಪದಗಳು ಬಳಸುವದರಿಂದಲೂ ಅಥವಾ ಕಡಿಮೆ ಪದಗಳು ಬಳಸುವದರಿಂದಲೂ ಅಥವಾ ಬೇರೊಂದು ಕ್ರಮದಲ್ಲಿ ಆಲೋಚನೆಗಳನ್ನು ಇಡುವುದರಿಂದಲೂ ಅದು ನಿಖರತವಾಗಿರಲು ಸಾಧ್ಯವಿದೆ. ಅನುವಾದ ಮಾಡಬೇಕಾದ ಭಾಷೆಯಲ್ಲಿ ಸ್ಪಷ್ಟವಾಗಿ ಮೂಲ ಸಂದೇಶವನ್ನು ತಿಳಿಸುವ ಕ್ರಮದಲ್ಲಿ ಇದು ಅನೇಕಬಾರಿ ತುಂಬ ಅವಶ್ಯಕವಾಗಿರುತ್ತದೆ.

ಅನುವಾದ ತಂಡದ ಸದಸ್ಯರೆಲ್ಲರೂ ಒಬ್ಬರಿಗೊಬ್ಬರು ಮೌಖಿಕ ಪಾಲುದಾರ ಪರಿಶೀಲನೆಯಲ್ಲಿ ಅನುವಾದವನ್ನು ನಿಖರತೆಗಾಗಿ ಪರಿಶೀಲನೆ ಮಾಡಿದಾಗ್ಯೂ, ಅನೇಕ ಜನರಿಂದ, ವಿಶೇಷವಾಗಿ ಸಭಾಪಾಲಕರಿಂದ ಮತ್ತು ಸಭೆಯ ನಾಯಕರುಗಳಿಂದ ಪರಿಶೀಲನೆ ಮಾಡಲ್ಪಡುವಾಗ ಆ ಅನುವಾದವನ್ನು ಇನ್ನೂ ಹೆಚ್ಚಾಗಿ ಉತ್ತಮವಾಗಿರಲು ಸಾಧ್ಯವಾಗುತ್ತದೆ, ಪ್ರತಿಯೊಂದು ವಾಕ್ಯಭಾಗವನ್ನು ಅಥವಾ ಪುಸ್ತಕವನ್ನು ಒಬ್ಬ ಸಭಾ ನಾಯಕನಿಂದ ಪರಿಶೀಲನೆ ಮಾಡಿಸಬಹುದು, ಅಥವಾ, ಅನೇಕಮಂದಿ ನಾಯಕರು ಲಭ್ಯವಿರುವದಾದರೆ, ಪ್ರತಿಯೊಂದು ವಾಕ್ಯಭಾಗವನ್ನು ಅಥವಾ ಪುಸ್ತಕವನ್ನು ಅನೇಕಮಂದಿ ಸಭಾ ನಾಯಕರುಗಳಿಂದ ಪರಿಶೀಲನೆ ಮಾಡಿಸಬಹುದು. ಒಬ್ಬ ವ್ಯಕ್ತಿಗಿಂತಲೂ ಹೆಚ್ಚಾದ ಜನರು ಒಂದು ಕಥೆಯನ್ನು ಅಥವಾ ಒಂದು ವಾಕ್ಯಭಾಗವನ್ನು ಪರಿಶೀಲನೆ ಮಾಡಿದಾಗ ಅದು ತುಂಬಾ ಸಹಾಯಕರವಾಗಿರುತ್ತದೆ, ಯಾಕಂದರೆ ಅನೇಕಬಾರಿ ಬೇರೆ ಬೇರೆ ಜನರು ಬೇರೆ ಬೇರೆ ವಿಷಯಗಳನ್ನು ಕಂಡುಹಿಡಿಯುತ್ತಾರೆ.

ನಿಖರತೆಯ ಪರಿಶೀಲನೆಯನ್ನು ಮಾಡುವ ಸಭೆಯ ನಾಯಕರು ಅನುವಾದ ಭಾಷೆಯನ್ನು ಮಾತನಾಡುವವರಾಗಿರಬೇಕು, ಆ ಸಮುದಾಯದಲ್ಲಿ ಗೌರವವನ್ನು ಪಡೆದಿರುವವರಾಗಿರಬೇಕು, ಮತ್ತು ಅವರ ಭಾಷೆಯಲ್ಲಿ ಸತ್ಯವೇದದ ಕುರಿತಾಗಿ ಚೆನ್ನಾಗಿ ಗೊತ್ತಿರಬೇಕು .ವಾಕ್ಯಭಾಗವನ್ನಾಗಲಿ ಅಥವಾ ಪುಸ್ತಕವನ್ನಾಗಲಿ ಅನುವಾದ ಮಾಡಿದವರು ಮತ್ತು ಪರಿಶೀಲನೆ ಮಾಡುವವರು ಒಂದೇಯಾಗಿರಬಾರದು. ಅನುವಾದ ತಂಡಕ್ಕೆ ಸಹಾಯಕರಾಗಿರುವ ನಿಖರತೆಯ ಪರಿಶೀಲಕರು ಮೂಲ ರಚನೆಯಲ್ಲಿರುವುದೇ ಅನುವಾದವು ಕೂಡ ಹೇಳುತ್ತಿದೆಯೆಂದು ಮತ್ತು ಮೂಲ ಸಂದೇಶದಲ್ಲಿರದ ವಿಷಯಗಳು ಯೂವುದೇ ಸೇರಿಸಲ್ಪಟ್ಟಿಲ್ಲವೆಂದು ಧೃಡೀಕರಣೆ ಮಾಡಬೇಕು. ಏನೇಯಾಗಲಿ, ನಿಖರತೆಯ ಅನುವಾದಗಳು ಕೂಡ [ಸ್ಪಷ್ಟತೆಯ ಮಾಹಿತಿಯನ್ನು] ಒಳಗೊಂಡಿರಬೇಕೆಂದು ಮನಸ್ಸಿನಲ್ಲಿಟ್ಟುಕೊಂಡಿರಬೇಕು (…/…/translate/figs-explicit/01.md).

ಭಾಷೆಯ ಸಮುದಾಯ ಪರಿಶೀಲನೆ ಮಾಡುವ ಭಾಷೆಯ ಸಮುದಾಯ ಸದಸ್ಯರು ಅನುವಾದವನ್ನು ಪರಿಶೀಲನೆ ಮಾಡುವಾಗ ಸಹಜ ಅನುವಾದಕ್ಕಾಗಿ ಮತ್ತು ಸ್ಪಷ್ಟತೆಗೋಸ್ಕರ ಖಂಡಿತವಾಗಿ ಮೂಲ ವಾಕ್ಯಗಳನ್ನು ನೋಡಬಾರದು. ಆದರೆ ನಿಖರತೆಯ ಪರೀಕ್ಷೆಗೋಸ್ಕರ, ನಿಖರತೆಯ ಪರಿಶೀಲಕರು ತಪ್ಪದೇ ಮೂಲ ವಾಕ್ಯಗಳನ್ನು ನೋಡಲೇಬೇಕು, ಇದರಿಂದ ಅವರು ಹೊಸ ಅನುವಾದದೊಂದಿಗೆ ಹೋಲಿಸಿಕೊಳ್ಳಬಹುದು.

ಸಭೆಯ ನಾಯಕರು ಮಾಡುವ ನಿಖರತೆಯ ಪರಿಶೀಲನೆಯು ಈ ಕೆಳಗಿನ ಹಂತಗಳನ್ನು ಪರಿಶೀಲನೆ ಮಾಡಬೇಕು:

  1. ಸಾಧ್ಯವಾದರೆ ನೀವು ಪರಿಶೀಲನೆ ಮಾಡುವ ಬೈಬಲ್ ವಾಕ್ಯಭಾಗಗಳಿಗಾಗಿ ಅಥವಾ ಕಥೆಗಳಿಗಾಗಿ ಮೊದಲೇ ಆರಿಸಿಕೊಳ್ಳಿರಿ ನೀವು ಅರ್ಥಮಾಡಿಕೊಳ್ಳುವ ಯಾವುದೇ ಭಾಷೆಯಲ್ಲಿನ ಅನೇಕ ವಿಧವಾದ ಅನುವಾದಗಳನ್ನು ಓದಿರಿ. ಯುಎಲ್.ಟಿ ಮತ್ತು ಯುಎಸ್.ಟಿಗಳಲ್ಲಿನ ಭಾಗಗಳನ್ನು ಓದಿರಿ, ಅದರ ಜೊತೆಯಲ್ಲಿ ಅನುವಾದದ ಪದಗಳನ್ನು ಮತ್ತು ವಿಷಯದ ಅಂಶಗಳನ್ನು ಓದಿರಿ. ನೀವು ಇವುಗಳನ್ನು ಟ್ರಾನ್ಸ್.ಲೇಶನ್ ಸ್ಟುಡಿಯೋನಲ್ಲಿ ಅಥವಾ ಬೈಬಲ್ ವೀವರ್.ನಲ್ಲಿ ಇವುಗಳನ್ನು ಓದಿರಿ.

  2. ನಿಖರತೆಯ ಪರಿಶೀಲಕರಾದ ಪ್ರತಿಯೊಬ್ಬರೂ ಅನುವಾದವನ್ನು ತಾವೇ ಮೂಲ ಭಾಷೆಯಲ್ಲಿರುವ ಕಥೆಯನ್ನು ಅಥವಾ ಬೈಬಲ್ ವಾಕ್ಯಭಾಗವನ್ನು ಹೋಲಿಸಿಕೊಳ್ಳುತ್ತಾ ಓದಲೇ ಬೇಕು (ಅಥವಾ ರಿಕಾರ್ಡ್ ಆಗಿರುವುದನ್ನು ಕೇಳಬೇಕು). ಪರಿಶೀಲಕರು ಇದನ್ನು ಟ್ರಾನ್ಸ್.ಲೇಶನ್ ಸ್ಟುಡಿಯೋನಲ್ಲಿ ಮಾಡಬಹುದು. ಅನುವಾದಕರಾಗಿ ಕೆಲವರಿಗೆ ಇದು ಉಪಯೋಗಕರವಾಗಿರಬಹುದು, ಯಾಕಂದರೆ ಅನುವಾದಕರು ಅನುವಾದವನ್ನು ಗಟ್ಟಿಯಾಗಿ ಬಾಯಿ ತೆರೆದು ಓದುತ್ತಿರುವಾಗ ಪರಿಶೀಲಕರು ಮೂಲ ಬೈಬಲ್ ಅಥವಾ ಬೈಬಲ್.ಗಳನ್ನು ನೋಡಿ ತಪ್ಪುಗಳನ್ನು ಕಂಡುಹಿಡಿಯಬಹುದು. ಪರಿಶೀಲಕರು ಅನುವಾದವನ್ನು ಓದುತ್ತಿರುವಾಗ (ಅಥವಾ ಕೇಳುತ್ತಿರುವಾಗ) ಮತ್ತು ಅದನ್ನು ಮೂಲ ಭಾಷೆಗೆ ಹೋಲಿಸಿಕೊಂಡು ನೋಡುತ್ತಿರುವಾಗ, ಆತನು ಈ ಕೆಳಗಿನ ಕೆಲವು ಪ್ರಶ್ನೆಗಳನ್ನು ತನ್ನ ಮನಸ್ಸಿನಲ್ಲಿಡಬೇಕು:

  • ಅನುವಾದದಲ್ಲಿ ಮೂಲ ಅರ್ಥಕ್ಕೆ ಬೇರೆ ಇತರ ಪದಗಳನ್ನು ಅಥವಾ ಮಾತುಗಳನ್ನು ಸೇರಿಸಿದ್ದಾರೋ? (ಮೂಲ ಅರ್ಥವು ಕೂಡ [ಸ್ಪಷ್ಟವಾದ ಮಾಹಿತಿ]ಯನ್ನು ಒಳಗೊಂಡಿರಬೇಕು] (…/…/translate/figs-explicit/01.md).)
  • ಅನುವಾದದಲ್ಲಿ ಮೂಲ ಅರ್ಥಕ್ಕೆ ಸಂಬಂಧಪಟ್ಟ ಯಾವುದೇ ಒಂದು ಭಾಗವು ಅನುವಾದ ಮಾಡದೇ ಬಿಡಲ್ಪಟ್ಟಿದಿಯೋ?
  • ಯಾವ ಕಾರಣದಿಂದಾಗಲಿ ಅನುವಾದದಲ್ಲಿ ಅರ್ಥವು ಬದಲಾಯಿಸಲ್ಪಟ್ಟಿದಿಯೋ?
  1. ಬೈಬಲ್ ವಾಕ್ಯಭಾಗದ ಅನುವಾದವನ್ನು ಅನೇಕಸಲ ಕೇಳುವುದಕ್ಕೆ ಅಥವಾ ಓದುವುದಕ್ಕೆ ಇದು ತುಂಬಾ ಸಹಾಯಕರವಾಗಿರುತ್ತದೆ. ನೀವು ಮೊದಲಬಾರಿಗೆ ವಾಕ್ಯವನ್ನಾಗಲಿ ಅಥವಾ ಬೈಬಲ್ ವಾಕ್ಯಭಾಗವನ್ನಾಗಲಿ ಓದುತ್ತಿರುವಾಗ ಎಲ್ಲವನ್ನು ಗಮನಿಸುವುದಕ್ಕೆ ಆಗದಿರಬಹುದು. ಇದು ವಿಶೇಷವಾಗಿ ಮೂಲ ಭಾಷೆಯಲ್ಲಿರುವುದಕ್ಕಿಂತಲೂ ವಿಭಿನ್ನವಾಗಿ ವಾಕ್ಯದ ಇತರ ಭಾಗಗಳು ಅಥವಾ ಆಲೋಚನೆಗಳನ್ನು ಅನುವಾದದಲ್ಲಿ ಸೇರಿಸಿದಾಗ ನಡೆಯುತ್ತದೆ. ನೀವು ವಾಕ್ಯದ ಒಂದು ಭಾಗಕ್ಕಾಗಿ ಪರಿಶೀಲನೆ ಮಾಡಿ, ಆದಮೇಲೆ ವಾಕ್ಯದ ಮತ್ತೊಂದು ಭಾಗವನ್ನು ಓದುವುದಾಗಲಿ ಅಥವಾ ಅದನ್ನು ಕೇಳುವುದಾಗಲಿ ಮಾಡಬೇಕಾಗಿರುತ್ತದೆ. ಎಲ್ಲಾ ಭಾಗಗಳನ್ನು ಕಂಡುಕೊಳ್ಳುವುದಕ್ಕೆ ಎಷ್ಟುಸಲ ಬೇಕಾದರೆ ಅಷ್ಟುಸಲ ವಾಕ್ಯವನ್ನು ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಿದಾಗ, ತರುವಾಯ ಭಾಗಕ್ಕೆ ನೀವು ಮುಂದಕ್ಕೆ ಹೋಗಬಹುದು. ಅನುವಾದವು ಸಂಪೂರ್ಣವಾದಾಗ ಪರಿಶೀಲನೆ ಮಾಡುವುದಕ್ಕೆ ಹೆಚ್ಚಿನ ವಿಧಾನಗಳಿಗಾಗಿ, ಸಂಪೂರ್ಣ ಎನ್ನುವುದನ್ನು ನೋಡಿರಿ.

  2. ಪರಿಶೀಲಕರು ಏನಾದರೂ ತಿದ್ದುಪಡಿ ಮಾಡಬೇಕೆಂದರು ಅಥವಾ ಏನಾದರು ಸಮಸ್ಯೆ ಇರುವುದನ್ನು ಕಂಡುಕೊಂಡರು ಅಲ್ಲಿ ಆ ಲೋಚನೆಗಳನ್ನು ಬರೆದುಕೊಳ್ಳಬೇಕು. ಪ್ರತಿಯೊಬ್ಬ ಪರಿಶೀಲಕರು ಈ ಆಲೋಚನೆಗಳನ್ನು ಅನುವಾದ ತಂಡದೊಂದಿಗೆ ಚರ್ಚಿಸಬೇಕು. ಈ ಆಲೋಚನೆಗಳು ಅಥವಾ ತಿದ್ದುಪಡಿಗಳು ಮುದ್ರಿಸಿದ ಅನುವಾದ ಹಾಳೆಯ ಮೇಲೆಯೇ ಇರುವುದು ಒಳ್ಳೇಯದು, ಅಥವಾ ಅವುಗಳನ್ನು ಇನ್ನೊಂದು ಹಾಳೆಯ ಮೇಲೆ ಬರೆದುಕೊಳ್ಳಬಹುದು, ಅಥವಾ ಟ್ರಾನ್ಸ್.ಲೇಶನ್.ಕೋರ್ ಎನ್ನುವ ವ್ಯಾಖ್ಯೆಯ ಅಧಾರವನ್ನು ಉಪಯೋಗಿಸಿಕೊಳ್ಳಬಹುದು.

  3. ಪರಿಶೀಲಕರಾದ ಪ್ರತಿಯೊಬ್ಬರೂ ವ್ಯಕ್ತಿಗತವಾಗಿ ಅಧ್ಯಾಯವನ್ನು ಅಥವಾ ಬೈಬಲ್ ಪುಸ್ತಕವನ್ನು ಪರಿಶೀಲನೆ ಮಾಡಿದಮೇಲೆ, ಅವರೆಲ್ಲರು ಅನುವಾದಕರನ್ನು ಅಥವಾ ಅನುವಾದ ತಂಡವನ್ನು ಭೇಟಿ ಮಾಡಬೇಕು ಮತ್ತು ಎಲ್ಲರು ಸೇರಿ ಪುಸ್ತಕವನ್ನಾಗಲಿ ಅಥವಾ ಅಧ್ಯಾಯವನ್ನಾಗಲಿ ಪುನರಾವಲೋಕನ ಮಾಡಬೇಕು. ಸಾಧ್ಯವಾದರೆ, ಮಾಡಿದ ಅನುವಾದವನ್ನು ಪ್ರೊಜೆಕ್ಟ್ ಮಾಡಿ ಗೋಡೆಯ ಮೇಲೆ ತೋರಿಸಿದರೆ, ಎಲ್ಲರು ನೋಡುವುದಕ್ಕೆ ಅವಕಾಶವಿರುತ್ತದೆ. ಪ್ರತಿಯೊಬ್ಬ ಪರಿಶೀಲಕನು ಎತ್ತಿ ತೋರಿಸುವ ಸಮಸ್ಯೆಯಾಗಲಿ ಅಥವಾ ಯಾವುದೇ ಪ್ರಶ್ನೆಯಾಗಲಿ ಒಂದೇಯಾಗಿದ್ದಾರೆ, ತಿದ್ದುಪಡಿ ಮಾಡುವುದಕ್ಕೆ ಪರಿಶೀಲಕರು ಇತರ ಪರಿಶೀಲಕರ ಪ್ರಶ್ನೆಗಳನ್ನು ಅಥವಾ ಸಲಹೆಗಳನ್ನು ಕೇಳಿ ತಿಳಿದುಕೊಳ್ಳಬೇಕು, ಅವರು ಬಹುಶಃ ಇತರ ಪ್ರಶ್ನೆಗಳನ್ನು ಎತ್ತಿ ತೋರಿಸಬಹುದು ಅಥವಾ ಬೇರೊಂದು ಹೊಸ ವಿಧಾನಗಳಲ್ಲಿ ಆಲೋಚನೆಗಳು ಹೇಳಬಹುದು. ಇದು ಒಳ್ಳೇಯದು. ಪರಿಶೀಲಕರು ಮತ್ತು ಅನುವಾದ ತಂಡವು ಸೇರಿ ಕೆಲಸ ಮಾಡುವಾಗ, ಬೈಬಲ್ ವಾಕ್ಯಭಾಗದ ಅಥವಾ ಕಥೆಯ ಅರ್ಥವನ್ನು ತಿಳಿಸುವುದಕ್ಕೆ ಉತ್ತಮವಾದ ವಿಧಾನವನ್ನು ಕಂಡುಕೊಳ್ಳಲು ದೇವರು ಅವರಿಗೆ ಸಹಾಯ ಮಾಡಬಹುದು.

  4. ಪರಿಶೀಲಕರು ಮತ್ತು ಅನುವಾದ ತಂಡವು ಮಾಡಬೇಕಾದ ತಿದ್ದುಪಡಿಯನ್ನು ಮಾಡಬೇಕೆಂದು ನಿರ್ಣಯಿಸಿಕೊಂಡಾದ ಮೇಲೆ, ಅನುವಾದ ತಂಡವು ಅನುವಾದವನ್ನು ತಿದ್ದುಪಡಿ ಮಾಡುತ್ತಾರೆ. ಎಲ್ಲರು ಮಾರ್ಪಡಿಸುವದಕ್ಕೆ ಒಪ್ಪಿಕೊಳ್ಳುವ ಆ ಸಮಯದಲ್ಲೇ ಅವರು ಇದನ್ನು ಮಾಡಬಹುದು.

  5. ಅನುವಾದ ತಂಡ ಅನುವಾದವನ್ನು ತಿದ್ದುಪಡಿ ಮಾಡಿದನಂತರ, ಅದು ಆ ಭಾಷೆಯ ಸಮುದಾಯದ ಜನರಿಗೆ ಸ್ವಾಭಾವಿಕವಾಗಿ ಇದೆಯೋ ಇಲ್ಲವೋ ಎಂದು ಒಬ್ಬರಿಗೊಬ್ಬರು ಅದನ್ನು ಗಟ್ಟಿಯಾಗಿ ಓದಿಕೊಳ್ಳಬೇಕು ಅಥವಾ

  6. ಅರ್ಥಮಾಡಿಕೊಳ್ಳುವುದಕ್ಕೆ ಕಷ್ಟವಾಗಿರುವ ಬೈಬಲ್ ವಾಕ್ಯಭಾಗಗಳು ಅಥವಾ ವಾಕ್ಯಗಳು ಇರುವುದಾದರೆ, ಅನುವಾದ ತಂಡವು ಅಂಥ ಕ್ಲಿಷ್ಟಕರ ಭಾಗಗಳನ್ನು ಗುರುತಿಸಿಕೊಂಡಿರಬೇಕು. ಉತ್ತರವನ್ನು ಪಡೆದುಕೊಳ್ಳುವುದಕ್ಕೆ ಅನುವಾದವು ಅಥವಾ ವ್ಯಾಖ್ಯನಗಳು ಸಹಾಯವಾಗುವಂತೆ ಬೈಬಲ್.ನಲ್ಲಿ ಪರಿಶೋಧನೆ ಹೆಚ್ಚಾಗಿ ಮಾಡುವುದಕ್ಕೆ ಅನುವಾದ ತಂಡವು ಈ ಸಮಸ್ಯೆಗಳನ್ನು ಸದಸ್ಯರಿಗೆ ಒಪ್ಪಿಸಬೇಕು, ಅಥವಾ ಅವರು ಬೇರೆ ಪರಿಶೋಧಕರಿಂದ ಅಥವಾ ಸಲಹೆಗಾರರಿಂದ ಹೆಚ್ಚಿನ ಸಹಾಯಕ್ಕಾಗಿ ಕೇಳಿಕೊಳ್ಳಬಹುದು. ಸದಸ್ಯರು ಅರ್ಥವನ್ನು ಕಂಡುಕೊಂಡಾಗ, ಅವರ ಭಾಷೆಯಲ್ಲಿ ಆ ಅರ್ಥವನ್ನು ಸ್ವಾಭಾವಿಕವಾಗಿ ಮತ್ತು ಸ್ಪಷ್ಟವಾಗಿ ಹೇಗೆ ವ್ಯಕ್ತಪಡಿಸಬೇಕೆಂದು ನಿರ್ಣಯಿಸುವುದಕ್ಕೆ ಮತ್ತೊಮ್ಮೆ ಅನುವಾದ ತಂಡವು ಭೇಟಿ ಮಾಡಬಹುದು.

ಹೆಚ್ಚುವರಿ ಪ್ರಶ್ನೆಗಳು

ಅನುವಾದದಲ್ಲಿ ಅನಿಖರತೆಯು ಏನಾದರೂ ಇದ್ದರೆ ಅದನ್ನು ಕಂಡುಕೊಳ್ಳುವುದಕ್ಕೋಸ್ಕರ ಈ ಪ್ರಶ್ನೆಗಳು ಕೂಡ ತುಂಬಾ ಸಹಾಯಕರವಾಗಿರುತ್ತವೆ:

  • ಮೂಲ ಭಾಷೆಯ ಅನುವಾದದಲ್ಲಿರುವ ಪ್ರತಿಯೊಂದು ಅರ್ಥವು ಹೊಸ ಅನುವಾದ ಮಾಡುವ ಭಾಷೆಯಲ್ಲಿ (ಸ್ಥಳೀಯ ಭಾಷೆಯಲ್ಲಿ) ಸರಾಗವಾಗಿ ಕ್ರೋಡೀಕರಣ ಮಾಡಿದ್ದಾರೋ?
  • ಹೊಸ ಅನುವಾದದ ಅರ್ಥವು ಮೂಲ ಅನುವಾದದ ಸಂದೇಶವನ್ನು (ಅಕ್ಷರಾರ್ಥವಾಗಿ ಅಲ್ಲ) ಅನುಸರಿಸಿಕೊಂಡು ಬರುತ್ತಿದಿಯೋ? (ಕೆಲವೊಮ್ಮೆ ಮೂಲ ಅನುವಾದದಲ್ಲಿರುವದಕ್ಕಿಂತಲೂ ಆಲೋಚನೆ ವಿಧಾನವು ಅಥವಾ ಪದಗಳ ಸಂಗ್ರಹಣೆ ಹೊಸ ಅನುವಾದದಲ್ಲಿ ಬೇರೆಯಾಗಿರಬಹುದು, ಅದು ಮುಂಚೆ ಮಾಡಿರುವ ಅನುವಾದಕ್ಕಿಂತ ಉತ್ತಮವಾಗಿದ್ದು, ನಿಖರವಾಗಿರಬಹುದು.)
  • ಮೂಲ ಭಾಷೆಯ ಅನುವಾದದಲ್ಲಿ ಹೇಳಲ್ಪಟ್ಟಿರುವ ವಿಷಯಗಳನ್ನೇ ಪ್ರತಿಯೊಂದು ಕಥೆಯಲ್ಲಿ ಪರಿಚಯಮಾಡಿದ ಜನರು ಇದ್ದಾರೋ? (ಮೂಲ ಭಾಷೆಗೆ ಅದನ್ನು ಹೋಲಿಸಿಕೊಳ್ಳುವಾಗ ಹೊಸ ಅನುವಾದ ಸಂಘಟನೆಗಳಲ್ಲಿರುವ ಜನರನ್ನು ನೋಡುವುದಕ್ಕೆ ಸುಲಭವಾಗುತ್ತಿದಿಯೋ?)
  • ಮೂಲ ಅನುವಾದದಲ್ಲಿ ನಿಮಗೆ ಅರ್ಥವಾಗದಿರುವ ಉಪಯೋಗಿಸಿದ ಪದಗಳಿಗೆ ಸರಿಹೊಂದದಂತೆ ಹೊಸ ಅನುವಾದದಲ್ಲಿ ಅನುವಾದ ಪದಗಳನ್ನು ಉಪಯೋಗಿಸಿದ್ದಾರೋ? ಇಂಥಹ ವಿಷಯಗಳ ಕುರಿತಾಗಿ ಆಲೋಚನೆ ಮಾಡಿರಿ: ಮೂಲ ಭಾಷೆಯಿಂದ ಯಾವ ಪದಗಳನ್ನು ಉಪಯೋಗಿಸದೇ ಯಾಜಕನ (ದೇವರಿಗೆ ಯಜ್ಞಗಳನ್ನು ಸಮರ್ಪಿಸುವವನು) ಕುರಿತಾಗಿ ಅಥವಾ ದೇವಾಲಯದ (ಯೆಹೂದ್ಯರು ಯಜ್ಞಗಳನ್ನು ಅರ್ಪಿಸುವ ಸ್ಥಳ) ಕುರಿತಾಗಿ ಜನರು ಮಾತನಾಡಿದರೆ ಹೇಗಿರುತ್ತದೆ?
  • ಮೂಲ ಭಾಷೆಯ ಹೆಚ್ಚಿನ ಕ್ಲಿಷ್ಟಕರ ಮಾತುಗಳನ್ನು ಅರ್ಥಮಾಡಿಕೊಳ್ಳುವದಕ್ಕೆ ಹೊಸ ಅನುವಾದದಲ್ಲಿ ಬೇರೆ ಮಾತುಗಳು ಉಪಯೋಗಿಸಲ್ಪಟ್ಟಿದ್ದಾವೋ? (ಮೂಲ ಭಾಷೆಯ ಅನುವಾದ ಅರ್ಥವನ್ನು ಹೋಗಲಾಡಿಸದೇ, ಉತ್ತಮ ಅರ್ಥವನ್ನು ತೆಗೆದುಕೊಂಡು ಬರುವ ವಿಧಾನದಲ್ಲಿ ಹೊಸ ಅನುವಾದದ ಮಾತುಗಳು ಇದ್ದಾವೋ?)
  • ವಾಕ್ಯವು ನಿಖರತೆಯಾಗಿ ಇದೆಯೋ ಇಲ್ಲವೋ ಎಂದು ನಿರ್ಣಯಿಸಿಕೊಳ್ಳುವುದಕ್ಕೆ ಮತ್ತೊಂದು ವಿಧಾನ ಏನಂದರೆ ಅನುವಾದದ ಕುರಿತಾಗಿ ಗ್ರಹಿಕೆಯ ಪ್ರಶ್ನೆಗಳನ್ನು ಕೇಳುವುದು, “ಯಾರು ಏನನ್ನು, ಯಾವಾಗ, ಎಲ್ಲಿ, ಹೇಗೆ ಮತ್ತು ಯಾತಕ್ಕೆ ಮಾಡಿದರು” ಎನ್ನುವ ಪ್ರಶ್ನೆಗಳು ಕೇಳಬಹುದು. ಈ ರೀತಿ ಸಹಾಯ ಮಾಡುವುದಕ್ಕೆ ಸಿದ್ಧಮಾಡಲ್ಪಟ್ಟ ಪ್ರಶ್ನೆಗಳು ಇಲ್ಲಿವೆ. (ಅನುವಾದದ ಪ್ರಶ್ನೆಗಳನ್ನು ನೋಡುವುದಕ್ಕೆ ಇಲ್ಲಿಗೆ ಹೋಗಿರಿ: http://ufw.io/tq/.) ಆ ಪ್ರಶ್ನೆಗಳಿಗೆ ಉತ್ತರಗಳು ಮೂಲ ಭಾಷೆಯ ಅನುವಾದದ ಕುರಿತಾಗಿ ಕೇಳುವ ಆ ಪ್ರಶ್ನೆಗಳಿಗೆ ಉತ್ತರ ಕೊಡುವಂತೆಯೇ ಇರಬೇಕು. ಒಂದುವೇಳೆ ಆ ರೀತಿಯಾಗಿ ಇಲ್ಲದಿದ್ದರೆ, ಅನುವಾದದಲ್ಲಿ ಸಮಸ್ಯೆ ಇದ್ದಂತೆಯೇ ಅರ್ಥ.

ಇನ್ನಿತರ ಹೆಚ್ಚಿನ ಅಂಶಗಳನ್ನು ಪರಿಶೀಲನೆ ಮಾಡಬೇಕಾದರೆ, [ಪರಿಶೀಲನೆ ಮಾಡುವುದಕ್ಕೆ ಇನ್ನಿತರ ಅಂಶಗಳು] (…/vol2-things-to-check/01.md) ಎನ್ನುವದನ್ನು ನೋಡಿರಿ.


ನಿಖರವಾದ ಪರಿಶೀಲನೆ

Checking Manual :: ನಿಖರವಾದ ಪರಿಶೀಲನೆ

ಸಭಾ ನಾಯಕರಿಂದ ನಿಖರತೆಯ ಪರಿಶೀಲನೆ

ಸ್ವಭಾವಿಕತೆಗೋಸ್ಕರ ಮತ್ತು ಸ್ಪಷ್ಟತೆಯಗೋಸ್ಕರ ಸಮುದಾಯದ ಸದಸ್ಯರಿಂದ ಅನುವಾದವು ಪರಿಶೀಲನೆ ಮಾಡಿದಾದನಂತರ, ನಿಖರತೆಗಾಗಿ ಆ ಅನುವಾದವು ಸಭಾ ನಾಯಕರಿಂದ ಪರಿಶೀಲನೆ ಮಾಡಲ್ಪಡುವುದು. ನಿಖರತೆಯ ಪರಿಶೀಲನೆಯನ್ನು ಮಾಡುವ ಸಭಾ ನಾಯಕರಿಗೆ ಈ ಕೆಳಗಿನಂತೆ ಮಾರ್ಗಸೂಚಿಗಳು ಇರುತ್ತವೆ. ಅವರು ಅನುವಾದ ಮಾಡಲ್ಪಟ್ಟ ಭಾಷೆಯನ್ನು ತಿಳಿದವರಾಗಿರಬೇಕು ಅಥವಾ ಮಾತೃ ಭಾಷೆಯನ್ನಾಡುವವರಾಗಿರಬೇಕು ಮತ್ತು ಮೂಲ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವವರಾಗಿರಬೇಕು. ಇವರು ಅನುವಾದ ಮಾಡಿದವರಾಗಿರಬಾರದು, ಅಂದರೆ ಅನುವಾದ ಮಾಡಿದವರು ಪರಿಶೀಲಕರು ಒಬ್ಬರೇ ಆಗಿರಬಾರದು. ಅವರು ಸತ್ಯವೇದವನ್ನು ಚೆನ್ನಾಗಿ ಅರಿತ ಸಭಾ ನಾಯಕರಾಗಿರಬೇಕು. ಸಹಜವಾಗಿ ಈ ಪುನಪರಿಶೀಲಕರೆಲ್ಲರು ಸಭಾಪಾಲಕರಾಗಿರುತ್ತಾರೆ. ಈ ಸಭಾ ನಾಯಕರು ಸಾಧ್ಯವಾದಷ್ಟು ಮಟ್ಟಿಗೆ ಭಾಷೆಯ ಸಮುದಾಯದಲ್ಲಿ ವಿಭಿನ್ನವಾದ ಸಭೆಯ ಸಂಬಂಧಗಳನ್ನು ತಿಳಿಸಬೇಕಾಗಿರುತ್ತದೆ.

ಈ ಪುನಪರಿಶೀಲಕರು ಈ ಕೆಳಗಿನ ನಿಯಮಗಳನ್ನು ಅನುಸರಿಸಬೇಕು:

  1. ಅವರು ಅನುವಾದವನ್ನು ಪರಿಶೀಲನೆ ಮಾಡುವಾಗ ಈ ಒಪ್ಪಂದದಲ್ಲಿರುವಂತೆಯೇ ಅನುವಾದವು ಇದೆಯೆಂದು ಖಚಿತಪಡಿಸುವುದಕ್ಕೆ [ಅನುವಾದ ಮಾರ್ಗಸೂಚಿಗಳು] (…/…/intro/translation-guidelines/01.md) ಓದಬೇಕು.
  2. ಅನುವಾದದಲ್ಲಿ ಕಂಡುಬರುವ ಅನುವಾದದ ಕುರಿತಾಗಿ ಅಥವಾ ಅನುವಾದದ ತಂಡದ ಕುರಿತಾಗಿ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳಬೇಕು.
  3. [ಸ್ವೀಕಾರಾರ್ಹ ಶೈಲಿ] (…/…/translate/qualifications/01.md) ನಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ಉದ್ದೇಶಿತ ಪ್ರೇಕ್ಷಕರಿಗೆ ಸ್ವೀಕಾರಾರ್ಹವಾದ ಶೈಲಿಯಲ್ಲಿ ಅನುವಾದವನ್ನು ಮಾಡಲಾಗಿದೆ ಎಂದು ಪರಿಶೀಲಿಸಿ.
  4. [ನಿಖರತೆ ಪರಿಶೀಲನೆ] (…/acceptable/01.md) ನಲ್ಲಿನ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಅನುವಾದವು ಮೂಲ ಪಠ್ಯದ ಅರ್ಥವನ್ನು ನಿಖರವಾಗಿ ಸಂವಹಿಸುತ್ತದೆ ಎಂದು ಪರಿಶೀಲಿಸಿ.
  5. [ಸಂಪೂರ್ಣ ಅನುವಾದ] (…/accuracy-check/01.md) ನಲ್ಲಿನ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಅನುವಾದ ಪೂರ್ಣಗೊಂಡಿದೆ ಎಂದು ಪರಿಶೀಲಿಸಿ.
  6. ನಿಮ್ಮ ನಂತರ, ನಿಖರತೆ ಪರೀಕ್ಷಕ, ಹಲವಾರು ಅಧ್ಯಾಯಗಳನ್ನು ಅಥವಾ ಬೈಬಲ್‌ನ ಒಂದು ಪುಸ್ತಕವನ್ನು ಪರಿಶೀಲಿಸಿದ್ದೀರಿ, ಅನುವಾದ ತಂಡವನ್ನು ಭೇಟಿ ಮಾಡಿ ಮತ್ತು ನೀವು ಕಂಡುಹಿಡಿದ ಪ್ರತಿಯೊಂದು ಸಮಸ್ಯೆಯ ಬಗ್ಗೆ ಕೇಳಿ. ಪ್ರತಿ ಸಮಸ್ಯೆಯನ್ನು ಪರಿಹರಿಸಲು ಅವರು ಅನುವಾದವನ್ನು ಹೇಗೆ ಹೊಂದಿಸಬಹುದು ಎಂಬುದನ್ನು ಅನುವಾದ ತಂಡದೊಂದಿಗೆ ಚರ್ಚಿಸಿ. ಅನುವಾದವನ್ನು ಸರಿಹೊಂದಿಸಲು ಮತ್ತು ಸಮುದಾಯದೊಂದಿಗೆ ಅದನ್ನು ಪರೀಕ್ಷಿಸಲು ಸಮಯ ಸಿಕ್ಕ ನಂತರ, ನಂತರದ ಸಮಯದಲ್ಲಿ ಅನುವಾದ ತಂಡದೊಂದಿಗೆ ಮತ್ತೆ ಭೇಟಿಯಾಗಲು ಯೋಜನೆಗಳನ್ನು ಮಾಡಿ.
  7. ಅವರು ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಎಂದು ಪರಿಶೀಲಿಸಲು ಅನುವಾದ ತಂಡದೊಂದಿಗೆ ಮತ್ತೆ ಭೇಟಿ ಮಾಡಿ.
  8. [ನಿಖರತೆ ದೃ ೀಕರಣಗಳು] (…/complete/01.md) ಪುಟದಲ್ಲಿ ಅನುವಾದ ಉತ್ತಮವಾಗಿದೆ ಎಂದು ದೃ ೀಕರಿಸಿ.

ಪರಿಶೀಲನೆಯ ಗುರಿ

Checking Manual :: ಪರಿಶೀಲನೆಯ ಗುರಿ

ಯಾಕೆ ಪರಿಶೀಲನೆ ಮಾಡಬೇಕು?

ಅನುವಾದದ ತಂಡನಿಖರವಾದ , ಸ್ವಾಭಾವಿಕವಾದ, ಸ್ಪಷ್ಟವಾದ ಮತ್ತು ಸಭೆಯಿಂದ ಸ್ವೀಕೃತವಾದ ಅನುವಾದವನ್ನು ಮಾಡುವುದೇ ಪರಿಶೀಲನೆ ಮಾಡುವ ಗುರಿಯಾಗಿರುತ್ತದೆ. ಅನುವಾದ ತಂಡವು ಕೂಡ ಈ ಗುರಿಯನ್ನು ತಲುಪಬೇಕಾದ ಅವಶ್ಯಕತೆ ಇರುತ್ತದೆ. ಇದು ತುಂಬಾ ಸುಲಭವಾಗಿ ಕಾಣಿಸಿಕೊಳ್ಳಬಹುದು, ಆದರೆ ಇದನ್ನು ಮಾಡುವುದು ತುಂಬಾ ಕಷ್ಟ, ಮತ್ತು ಅನೇಕ ಜನರು ಇದಕ್ಕೆ ಬೇಕಾಗಿರುತ್ತಾರೆ, ಇದನ್ನು ಸಾಧಿಸುವುದಕ್ಕೆ ಅನುವಾದವನ್ನು ಅನೇಕಬಾರಿ ತಿದ್ದುಪಡಿ ಮಾಡಬೇಕಾಗಿರುತ್ತದೆ. ಈ ಕಾರಣಕ್ಕಾಗಿ ನಿಖರತೆಯ, ಸ್ವಾಭಾವಿಕವಾದ, ಸ್ಪಷ್ಟವಾದ ಮತ್ತು ಸಭೆಯಿಂದ ಸ್ವೀಕೃತವಾದ ಅನುವಾದವನ್ನು ಮಾಡುವುದಕ್ಕೆ ಅನುವಾದ ತಂಡದವರಿಗೆ ಸಹಾಯ ಮಾಡುವುದರಲ್ಲಿ ಪರಿಶೀಲಕರು ತುಂಬಾ ಪ್ರಾಮುಖ್ಯವಾದ ಪಾತ್ರೆಯನ್ನು ವಹಿಸುತ್ತಾರೆ.

ನಿಖರತೆ

ಪರಿಶೀಲಕರಾಗಿರುವ ಸಭಾಪಾಲಕರು, ಸಭಾ ನಾಯಕರು, ಮತ್ತು ಸಭೆಗಳ ಜಾಲ ವ್ಯವಸ್ಥಾಪಕಗಳ ನಾಯಕರು ಸರಿಯಾದ ನಿಖರತೆಯ ಅನುವಾದ ಮಾಡುವುದಕ್ಕೆ ಅನುವಾದ ತಂಡಕ್ಕೆ ಸಹಾಯ ಮಾಡುವರು. ಅವರು ಇದನ್ನು ಮೂಲ ಭಾಷೆಯ ಅನುವಾದದೊಂದಿಗೆ ಹೋಲಿಸಿಕೊಳ್ಳುತ್ತಾ ಮಾಡುವರು ಮತ್ತು, ಸಾಧ್ಯವಾದಲ್ಲಿ ಬೈಬಲ್ ಅಸಲಿ ಭಾಷೆಯೊಂದಿಗೆ ಹೋಲಿಸಿಕೊಳ್ಳುತ್ತಾ ಪರಿಶೀಲನೆ ಮಾಡುತ್ತಾರೆ. (ನಿಖರತೆಯ ಅನುವಾದಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, [ನಿಖರತೆಯ ಅನುವಾದಗಳನ್ನು ಮಾಡಿರಿ] (…/…/translate/guidelines-accurate/01.md) ಎನ್ನುವ ಶೀರ್ಷಿಕೆಯನ್ನು ನೋಡಿರಿ.)

ಸ್ಪಷ್ಟವಾದ

ಭಾಷೆಯ ಸಮುದಾಯದ ಸದಸ್ಯರಾಗಿರುವ ಪರಿಶೀಲಕರು ಸ್ಪಷ್ಟವಾದ ಅನುವಾದವನ್ನುಂಟು ಮಾಡುವದಕ್ಕೆ ಅನುವಾದ ತಂಡಕ್ಕೆ ಸಹಾಯ ಮಾಡುವರು. ಅವರು ಮಾಡಿದ ಅನುವಾದವನ್ನು ಕೇಳಿಕೊಳ್ಳುತ್ತಾ ಇದನ್ನು ಮಾಡುವರು ಮತ್ತು ಅವರಿಗೆ ಗೊತ್ತಾಗದ ಅಥವಾ ಅರ್ಥವಾಗದ ಅಥವಾ ಗಲಿಬಿಲಿ ಇರುವ ಅನುವಾದಗಳನ್ನು ಗುರುತಿಸುವರು. ಆಗ ಅನುವಾದ ತಂಡದವರು ಅವುಗಳನ್ನು ಗಮನಿಸಿ ಬಗೆಹರಿಸುವರು, ಇದರಿಂದ ಅವು ಸ್ಪಷ್ಟವಾಗುತ್ತವೆ. (ಸ್ಪಷ್ಟವಾದ ಅನುವಾದಗಳ ಕುರಿತಾಗಿ ಇನ್ನಿತರ ಹೆಚ್ಚಿನ ಮಾಹಿತಿಗಾಗಿ, [ಸ್ಪಷ್ಟವಾದ ಅನುವಾದಗಳನ್ನು ಮಾಡಿರಿ] (…/…/translate/guidelines-clear/01.md) ಎನ್ನುವ ಶೀರ್ಷಿಕೆಯನ್ನು ನೋಡಿರಿ.

ಸ್ವಾಭಾವಿಕವಾದ

ಭಾಷೆಯ ಸಮುದಾಯದ ಸದಸ್ಯರಾಗಿರುವ ಪರಿಶೀಲಕರು ಸ್ವಾಭಾವಿಕವಾದ ಅನುವಾದವನ್ನು ಮಾಡುವದಕ್ಕೆ ಅನುವಾದ ತಂಡಕ್ಕೆ ಸಹಾಯ ಮಾಡುವರು. ಅವರು ಮಾಡಿದ ಅನುವಾದವನ್ನು ಕೇಳಿಕೊಳ್ಳುತ್ತಾ ಇದನ್ನು ಮಾಡುವರು ಮತ್ತು ಅನುವಾದವು ವಿಭಿನ್ನವಾಗಿ ಎಲ್ಲೆಲ್ಲಿ ಕೇಳಿಸುತ್ತದೋ ಅಲ್ಲಲ್ಲಿ ಮತ್ತು ಅವರ ಭಾಷೆಯನ್ನು ಮಾಡುವವರು ಮಾತನಾಡುವ ವಿಧಾನದಲ್ಲಿ ಶಬ್ದ ಕೇಳಿಸದ ಸ್ಥಳಗಳನ್ನು ಗುರುತಿಸುವರು. ಆಗ ಅನುವಾದ ತಂಡದವರು ಆ ಸ್ಥಳಗಳನ್ನು ಗಮನಿಸಿ ಅವುಗಳನ್ನು ಬಗೆಹರಿಸುವರು, ಇದರಿಂದ ಅವು ಸ್ವಾಭಾವಿಕವಾದ ಭಾಷೆಯಲ್ಲಿ ಕೇಳಿಸಿಕೊಳ್ಳುತ್ತವೆ. (ಸ್ವಾಭಾವಿಕವಾದ ಅನುವಾದಗಳ ಕುರಿತಾಗಿ ಇನ್ನಿತರ ಹೆಚ್ಚಿನ ಮಾಹಿತಿಗಾಗಿ, [ಸ್ವಾಭಾವಿಕವಾದ ಅನುವಾದಗಳನ್ನು ಮಾಡಿರಿ] (…/…/translate/guidelines-natural/01.md) ಎನ್ನುವ ಶೀರ್ಷಿಕೆಯನ್ನು ನೋಡಿರಿ.

ಸಭೆ ನಿರ್ಧಾರಣೆ ಮಾಡಿದೆ

ಭಾಷೆಯ ಸಮುದಾಯದಲ್ಲಿ ಸಭೆಯ ಸದಸ್ಯರಾಗಿರುವ ಪರಿಶೀಲಕರು ಆ ಸಮುದಾಯದಲ್ಲಿರುವ ಸಭೆಯಿಂದ ಸ್ವೀಕೃತವಾಗುವ ಮತ್ತು ನಿರ್ಧಾರಣೆ ಅನುವಾದವನ್ನು ಮಾಡುವದಕ್ಕೆ ಅವರು ಅನುವಾದ ತಂಡಕ್ಕೆ ಸಹಾಯ ಮಾಡುವರು. ಅವರು ಆ ಭಾಷೆಯ ಸಮುದಾಯದಿಂದ ಇತರ ಸಭೆಗಳ ನಾಯಕರೊಂದಿಗೆ ಮತ್ತು ಸದಸ್ಯರೊಂದಿಗೆ ಸೇರಿ ಈ ಕೆಲಸವನ್ನು ಮಾಡುವರು ಮತ್ತು ಈ ಅನುವಾದವು ಚೆನ್ನಾಗಿದೆಯೆಂದು ಒಪ್ಪಿಕೊಳ್ಳುವರು, ಆದನಂತರ ಸಮುದಾಯದಲ್ಲಿರುವ ಸಭೆಗಳಿಂದ ಅಂದು ಸ್ವೀಕರಿಸಲ್ಪಡುತ್ತದೆ ಮತ್ತು ಉಪಯೋಗಿಸಲ್ಪಡುತ್ತದೆ. (ಸಭೆಯಿಂದ ಅನುಮೋದನೆ ಹೊಂದಿದ ಅನುವಾದಗಳ ಕುರಿತಾಗಿ ಇನ್ನಿತರ ಹೆಚ್ಚಿನ ಮಾಹಿತಿಗಾಗಿ, [ಸಭೆಯಿಂದ ಅನುಮೋದನೆ ಮಾಡಿದ ಅನುವಾದಗಳನ್ನು ಮಾಡಿರಿ] (…/…/translate/guidelines-church-approved/01.md) ಎನ್ನುವ ಶೀರ್ಷಿಕೆಯನ್ನು ನೋಡಿರಿ.


ಪರಿಶೀಲಿಸಬೇಕಾದ ವಿಷಯಗಳುಳ

Checking Manual :: ಪರಿಶೀಲಿಸಬೇಕಾದ ವಿಷಯಗಳುಳ

ಪರಿಶೀಲಿಸಬೇಕಾದ ವಿಷಯಗಳು

1.ನಿಮಗೆ ಸರಿ ತೋರದ ವಿಷಯದ ಬಗ್ಗೆ ನೀವು ಕೇಳಬಹುದು, ಆಗ ಅನುವಾದದ ತಂಡದವರು ಅದನ್ನು ವಿವರಿಸುತ್ತಾರೆ. ಅವರಿಗು ಸಹ ಅದು ಸರಿ ತೋರದಿದ್ದರೆ, ಅವರು ಅನುವಾದವನ್ನು ಸರಿಪಡಿಸಬಹುದು. ಸಾಮಾನ್ಯವಾಗಿ:

  1. ಮೂಲ ಪಠ್ಯದ ಅರ್ಥದ ಭಾಗವಾಗಿರದ, ಸೇರಿಸಿದಂತೆ ಕಂಡುಬರುವ ಯಾವುದಾದರು ಇದ್ದಲ್ಲಿ ಅದನ್ನು ಪರಿಶೀಲಿಸಿರಿ. (ನೆನಪಿಡಿ, ಮೂಲ ಅರ್ಥವು [ಸೂಚ್ಯ ಮಾಹಿತಿಯನ್ನು] ಒಳಗೊಂಡಿದೆ(…/…/translate/figs-explicit/01.md).) 1.ಮೂಲ ಪಠ್ಯದ ಅರ್ಥದ ಭಾಗವಾಗಿದ್ದು ಅದು ಅನುವದದಲ್ಲಿ ಸೇರಿಸಲಾಗದೆ ಬಿಟ್ಟುಹೋಗುವ ಕಂಡುಬರುವ ಯಾವುದನ್ನು ಪರಿಶೀಲಿಸಿರಿ . 1.ಮೂಲ ಪಠ್ಯದ ಅರ್ಥಕ್ಕಿಂತ ಭಿನ್ನವಾಗಿ ಕಂಡುಬರುವ ಯಾವುದೇ ಅರ್ಥವಿದ್ದರೂ ಅದನ್ನು ಪರಿಶೀಲಿಸಿರಿ.

1.ಈ ವಾಕ್ಯಭಾಗದ ಮುಖ್ಯ ಅಂಶ ಅಥವ ವಿಷಯ ಸ್ಪಷ್ಟವಾಗಿದೆ ಎಂದು ಖಚಿತಪಡಿಸಕೊಳ್ಳಲು ಪರಿಶೀಲಿಸಿ. ಈ ವಾಕ್ಯಭಾಗದ ಏನು ಹೇಳುತ್ತದೆ ಎಂಬುವುದನ್ನು ಸಂಕ್ಷಿಪ್ತವಾಗಿ ಹೇಳಲು ಅನುವಾದ ತಂಡವನ್ನು ಕೇಳಿರಿ. ಅವರು ಚಿಕ್ಕ ವಿಷಯವನ್ನು ಪ್ರಾಧಾನವಾಗಿ ಆರಿಸಿದರೆ, ಅವರು ಈ ಭಾಗವನ್ನು ಅನುವಾದಿಸಿದ ರೀತಿಯನ್ನು ಸರಿಪಡಿಸಬೇಕಾಗಬಹುದು. 1.ವಾಕ್ಯಭಾಗದ ವಿವಿಧ ಭಾಗಗಳು ಸರಿಯಾದ ರೀತಿಯಲ್ಲಿ ಸಂಬಂಧ ಕಲ್ಪಿಸುತ್ತದೆಯೇ ಎಂದು ಪರಿಶೀಲಿಸಿರಿ.– ಕಾರಣಗಳು, ಸೇರ್ಪಡೆಗಳು, ಫಲಿತಾಂಶಗಳು, ಸಮಾಪ್ತಿ, ಇತ್ಯಾದಿ, ಉದ್ದೇಶಿತ ಭಾಷೆಯಲ್ಲಿ ಸತ್ಯವೇದದ ಭಾಗವು ಸರಿಯಾದ ಸಂಪರ್ಕದಿಂದ ಗುರುತಿಸಲಾಗಿದೆಯೋ ಎಂದು ಗಮನಿಸಿ. 1.ಕೊನೆಯ ವಿಭಾಗದಲ್ಲಿ ವಿವರಿಸಿದಂತೆ ಅನುವಾದ ಪದಗಳ ಸ್ಥಿರತೆಗಾಗಿ ಪರಿಶೀಲಿಸಿ ನ್ಯಾಯಸಮ್ಮತಗೊಳಿಸುವಿಕೆಯ ಪರಿಶೀಲನೆಯ ಹಂತಗಳು. ಪ್ರತಿ ಪದವನ್ನು ಆ ಸಂಸ್ಕೃತಿಯಲ್ಲಿ ಹೇಗೆ ಬಳಸಲಾಗುತ್ತದೆ ಎಂದು ಕೇಳಿರಿ - ಯಾರು ಈ ಪದಗಳನ್ನು ಉಪಯೋಗಿಸುತ್ತಾರೆ, ಮತ್ತು ಯಾವ ಸಂದರ್ಭದಲ್ಲಿ ಎಂದು ನೋಡಿರಿ ಇನ್ನು ಇತರ ಯಾವ ಪದಗಳು ಹೋಲುತ್ತದೆ ಮತ್ತು ಒಂದೇ ರೀತಿಯ ಪದಗಳ ನಡುವಿನ ವ್ಯತ್ಯಾಸವೇನು ಎಂದು ಕೇಳಿರಿ. ಕೆಲವು ಪದಗಳು ಅನಗತ್ಯ ಅರ್ಥಗಳನ್ನು ಹೊಂದಿರಬಹುದೇ, ಯಾವ ಪದ ಉತ್ತಮವಾಗಿರಬಹುದು ಅಥವ ಬೇರೆ ಪದಗಳನ್ನು ಬೇರೆ ಸಂದರ್ಭಗಳಲ್ಲಿ ಬಳಿಸಬಹುದೆ ಎಂದು ನೋಡಲು ಇದು ಅನುವಾದಕರಿಗೆ ಸಹಾಯ ಮಾಡುತ್ತದೆ 1.ಅಲಂಕಾರಗಳನ್ನು ಪರಿಶೀಲಿಸಿ. ಸತ್ಯವೇದದಲ್ಲಿ ಅಲಂಕಾರಗಳು ಎಲ್ಲಿವೆ, ಇದನ್ನು ಅನುವಾದಿಸಿದ ರೀತಿಯನ್ನು ನೋಡಿರಿ ಮತ್ತು ಅದು ಒಂದೇ ಅರ್ಥವನ್ನು ಸಂಪರ್ಕಿಸುತ್ತದೆಯೆ ಎಂದು ಖಚಿತಪಡಿಸಿಕೊಳ್ಳಿ. 1.ಪ್ರೀತಿ, ಕ್ಷಮೆ, ಸಂತೋಷ ಮುಂತಾದ ಅಮೂರ್ತ ವಿಚಾರಗಳನ್ನು ಹೇಗೆ ಅನುವಾದಿಸಲಾಗಿದೆ ಎಂದು ಪರಿಶೀಲಿಸಿರಿ. ಇವುಗಳಲ್ಲಿ ಹಲವು ಪ್ರಮುಖ ಪದಗಳಿವೆ. 1.ಉದ್ದೇಶಿತ ಸಂಸ್ಕೃತಿಯವರು ಅರಿಯದ ವಿಷಯಗಳ ಅಥವ ಅಭ್ಯಾಸಗಳ ಅನುವಾದವನ್ನು ಪರಿಶೀಲಿಸಿರಿ. ಅನುವಾದ ತಂಡಕ್ಕೆ ಈ ಚಿತ್ರವನ್ನು ತೋರಿಸುವುದು ಮತ್ತು ಅವುಗಳನ್ನು ವಿವರಿಸುವುದು ಬಹಳ ಸಹಾಯಕವಾಗಿದೆ. 1.ಆತ್ಮ ಪ್ರಪಂಚದ ಬಗ್ಗೆ ಮತ್ತು ಉದ್ದೇಶಿತ ಸಂಸ್ಕೃತಿಯಲ್ಲಿ ಅವುಗಳನ್ನು ಹೇಗೆ ಅರ್ಥೈಸಲಾಗುತ್ತದೆ ಎಂಬುವುದರ ಬಗ್ಗೆ ಚರ್ಚಿಸಿರಿ. ಅನುವಾದದಲ್ಲಿ ಬಳಸಲಾದವುಗಳು ಸರಿಯಾದ ವಿಷಯವನ್ನು ಸಂಪರ್ಕಿಸುತ್ತದೆಯೆ ಎಂದು ಖಚಿತಪಡಿಸಿಕೊಳ್ಳಿ 1.ಅರ್ಥಮಾಡಿಕೊಳ್ಳಲು ಅಥವ ಅನುವಾದಿಸಲು ಬಹಳ ಕಷ್ಟವೆಂದು ನೀವು ಭಾವಿಸಿದ ಭಾಗವನ್ನು ಪರಿಶೀಲಿಸಿರಿ

ಈ ಎಲ್ಲಾ ವಿಷಯಗಳನ್ನು ಪರಿಶೀಲಿಸಿದ ನಂತರ ಮತ್ತು ತಿದ್ದುಪಡಿಗಳನ್ನು ಮಾಡಿದ ನಂತರ, ಎಲ್ಲಾ ಸಹಜ ರೀತಿಯಲ್ಲಿದೆ ಮತ್ತು ಸರಿಯಾದ ಸಂಬಂಧ ಕಲ್ಪಿಸಿದೆ ಎಂದು ಖಚಿತಪಡಿಸಲು ಅನುವಾದ ತಂಡವು ಪರಸ್ಪರ ಅಥವಾ ಸಮುದಾಯದ ಇತರ ಸದ್ಯಸರಿಗೆ ಆ ಭಾಗವನ್ನು ಜೋರಾಗಿ ಓದಲು ಹೇಳಲಿ. ತಿದ್ದುಪಡಿಗಳು ಅಸ್ವಾಭಾವಿಕ ವ್ಯತ್ಯಾಸಗಳನ್ನು ಉಂಟುಮಾಡಿದರೆ, ಅವರು ಅನುವಾದಕ್ಕೆ ಹೆಚ್ಚುವರಿ ಹೊಂದಾಣಿಕೆ ಮಾಡುವ ವರೆಗೂ ಅದನ್ನು ಸರಿಪಡಿಸಬೇಕಾಗುತ್ತದೆ.


ಪೂರಕ ಅನುವಾದ ಮಾಡುವ ಅನುವಾದಕ

Checking Manual :: ಪೂರಕ ಅನುವಾದ ಮಾಡುವ ಅನುವಾದಕ

ಪೂರಕ ಅನುವಾದವನ್ನು ಯಾರು ಮಾಡಬೇಕು?

ಉತ್ತಮ ಅನುವಾದವನ್ನು ಮಾಡಲು, ವ್ಯಕ್ತಿಯು ಮೂರು ಅರ್ಹತೆಯನ್ನು ಹೊಂದಿರಬೇಕು.

1.ಪೂರಕ ಅನುವಾದ ಮಾಡುವ ವ್ಯಕ್ತಿಯು ಸ್ಥಳಿಯ ಉದ್ದೇಶಿತ ಭಾಷೆಯ ಮಾತೃಭಾಷೆ ಮಾತನಾಡುವನು ಹಾಗೆಯೆ ವ್ಯಾಪಕ ಸಂಪರ್ಕಿಸುವ ಭಾಷೆಯನ್ನು ಚೆನ್ನಾಗಿ ಮಾತನಾಡುವ ವ್ಯಕ್ತಿಯಾಗಿರಬೇಕು. ಲಿಖಿತ ರೂಪದ ಪೂರಕ ಭಾಷೆಯನ್ನು ಮಾಡಲು, ಆತನಿಗೆ ಎರಡು ಭಾಷೆಗಳು ಉತ್ತಮವಾಗಿ ಓದಲು ಹಾಗು ಬರೆಯಲು ತಿಳಿದಿರಬೇಕು . 1.ಈ ವ್ಯಕ್ತಿಯು ತಾನು ಅನುವಾದಿಸುತ್ತಿರುವ ಸ್ಥಳಿಯ ಉದ್ದೇಶಿತ ಭಾಷ ಅನುವಾದವನ್ನು ಮಾಡುವುದರಲ್ಲಿ ಭಾಗಿಯಾಗದ ವ್ಯಕ್ತಿಯಾಗಿರಬೇಕು. ಇದಕ್ಕೆ ಕಾರಣವೇನೆಂದರೆ ಸ್ಥಳೀಯ ಉದ್ದೇಶಿತ ಬಾಷಾ ಅನುವಾದವನ್ನು ಮಾಡಿದ ಯಾರಾದರು ಅವರು ಅನುವಾದವನ್ನು ಅರ್ಥೈಸಲು ಉದ್ದೇಶಿಸಿದ್ದನ್ನು ತಿಳಿದಿದ್ದಾರೆ, ಮತ್ತು ಆ ಅರ್ಥವು ಪೂರಕ ಅನುವಾದದಲ್ಲಿ ಅದು ಮೂಲ ಅನುವಾದದಂತೆ ಕಾಣುತ್ತದೆ. ಆದರೆ ಸ್ಥಳಿಯ ಉದ್ದೇಶಿತ ಭಾಷೆಯ ಅನುವಾದದಲ್ಲಿ ಕೆಲಸ ಮಾಡುವ ಸ್ಥಳಿಯ ಉದ್ದೇಶಿತ ಭಾಷೆಯನ್ನು ಮಾತನಾಡುವವರು ಅನುವಾದವನ್ನು ಅರ್ಥಮಾಡಿಕೊಳ್ಳವ ಸಾಧ್ಯತೆಯಿದೆ ಅಥವಾ ಅದರ ಎಲ್ಲಾ ಭಾಗಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅನುವಾದದಿಂದ ಸ್ಥಳಿಯ ಉದ್ದೇಶಿತ ಭಾಷೆಯ ಇತರ ತಿಳಿಯುವಂತಹ ಇತರ ಅರ್ಥಗಳನ್ನು ಪರೀಕ್ಷಕನು ತಿಳಿಯಲು ಬಯಸುತ್ತಾನೆ, ಇದರಿಂದ ಆ ಸ್ಥಳಗಳಲ್ಲಿ ಸರಿಯಾದ ಅರ್ಥವನ್ನು ಹೆಚ್ಚು ಸ್ಪಷ್ಟವಾಗಿ ಸಂಪರ್ಕಿಸಲು ಅನುವಾದ ತಂಡದೊಂದಿಗೆ ಕೆಲಸ ಮಾಡಬಹುದು. ಪೂರಕ ಅನುವಾದವನ್ನು ಮಾಡುವ ವ್ಯಕ್ತಿಯು ಸತ್ಯವೇದವನ್ನು ಚೆನ್ನಾಗಿ ತಿಳಿಯದ ವ್ಯಕ್ತಿಯಾಗಿರಬೇಕು. ಇದಕ್ಕೆ ಕಾರಣವೆಂದರೆ, ಪೂರಕ ಅನುವಾದಕನು ಉದ್ದೇಶಿತ ಭಾಷಾ ಅನುವಾದವನ್ನು ನೋಡುವುದರಿಂದ ಅವನು ಅರ್ಥಮಾಡಿಕೊಳ್ಳುವ ಅರ್ಥವನ್ನು ಮಾತ್ರ ನೀಡಬೇಕು ಹೊರತಾಗಿ ಇತರ ಭಾಷೆಯಲ್ಲಿ ಸತ್ಯವೇದ ಓದುವುದರಿಂದ ಆತನಿಗಿರುವ ಜ್ಞಾನದಿಂದಲ್ಲ.


ಪೂರಕ ಅನುವಾದದ ಪ್ರಕಾರಗಳು

Checking Manual :: ಪೂರಕ ಅನುವಾದದ ಪ್ರಕಾರಗಳು

ಯಾವ ರೀತಿಯ ಪೂರಕ ಅನುವಾದವಿದೆ?

####ಮೌಖಿಕ

ಮೌಖಿಕ ಪೂರಕ ಅನುವಾದವೆಂದರೆ ಪೂರಕ ಅನುವಾದಕನು ಉದ್ದೇಶಿತ ಭಾಷೆಯಲ್ಲಿ ಅನುವಾದವನ್ನು ಓದುತ್ತಿದ್ದಂತೆ ಅಥವಾ ಕೇಳುತ್ತಿದ್ದಂತೆ ಅನುವಾದ ಪರೀಕ್ಷಕನನ್ನು ವ್ಯಾಪಕ ಸಂಪರ್ಕಿತ ಭಾಷೆಯಲ್ಲಿ ಮಾತನಾಡುತ್ತಾನೆ. ಅವನು ಸಾಮಾನ್ಯವಾಗಿ ಒಂದು ಸಮಯದಲ್ಲಿ ಒಂದು ವಾಕ್ಯವನ್ನು ಮಾಡುತ್ತಾನೆ, ಚಿಕ್ಕದಾಗಿದ್ದರೆ ಒಂದೇ ಸಮಯದಲ್ಲಿ ಎರಡು ವಾಕ್ಯವನ್ನು ಮಾಡುತ್ತಾನೆ. ಅನುವಾದ ಪರೀಕ್ಷಕನು ತಪ್ಪಾಗಿರುವ ವಾಕ್ಯವನ್ನು ಕೇಳಿಸಿಕೊಳ್ಳುವಾಗ, ಮೌಖಿಕ ಪೂರಕ ಅನುವಾದವನ್ನು ಮಾಡುವ ವ್ಯಕ್ತಿಯನ್ನು ವಾಕ್ಯ ಓದುವುದನ್ನು ತಡೆದು ಅದರಲ್ಲಿನ ಸಮಸ್ಯೆಗಳ ಬಗ್ಗೆ ಆತನು ಅವರಿಗೆ ಪ್ರಶ್ನೆಗಳನ್ನು ಕೇಳಬಹುದು. ಅನುವಾದ ತಂಡದ ಒಂದು ಅಥವ ಹೆಚ್ಚಿನ ಸದಸ್ಯರು ಹಾಜರಿರಬೇಕು ಆದರಿಂದ ಅವರು ಅನುವಾದದ ವಿಷಯದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬಹುದು.

ಮೌಖಿಕ ಪೂರಕ ಅನುವಾದದ ಒಂದು ಪ್ರಯೋಜನವೇನೆಂದರೆ ಪೂರಕ ಅನುವಾದಕನು ಅನುವಾದ ಪರೀಕ್ಷಕನಿಗೆ ತಕ್ಷಣ ಲಭ್ಯವಿರುತ್ತಾರೆ ಮತ್ತು ಪೂರಕ ಅನುವಾದದ ಕುರಿತು ಅನುವಾದ ಪರೀಕ್ಷಕರ ಪ್ರಶ್ನೆಗೆ ಉತ್ತರಿಸಬಹುದು. ಮೌಖಿಕ ಪೂರಕ ಅನುವಾದದಲ್ಲಿರುವ ಲಾಭವೆಂದರೆ, ಅನುವಾದ ಮಾಡುವ ಉತ್ತಮ ಮಾರ್ಗದ ಬಗ್ಗೆ ಯೋಚಿಸಲು ಅನುವಾದಕನಿಗೆ ಬಹಳ ಕಡಿಮೆ ಸಮಯವಿರುತ್ತದೆ ಮತ್ತು ಅನುವಾದದ ಅರ್ಥವನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸದಿರಬಹುದು. ಪೂರಕ ಅನುವಾದವನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸಿದ್ದಕ್ಕಿಂತ ಅನುವಾದ ಪರೀಕ್ಷಕನು ಹೆಚ್ಚಿನ ಪ್ರಶ್ನೆಗಳನ್ನು ಕೇಳುವ ಅಗತ್ಯವನ್ನು ಇದು ಉಂಟುಮಾಡುತ್ತದೆ. ಮತ್ತೊಂದು ಅನಾನುಕೂಲವೆಂದರೆ, ಅನುವಾದವನ್ನು ಮೌಲ್ಯಮಾಪನೆ ಮಾಡಲು ಪರೀಕ್ಷಕರಿಗೆ ಬಹಳ ಕಡಿಮೆ ಸಮಯ ಸಿಗುತ್ತದೆ. ಅವನಿಗೆ ಒಂದು ವಾಕ್ಯವನ್ನು ಕೇಳಿ ಇನ್ನೊಂದು ವಾಕ್ಯವನ್ನು ಕೇಳುವ ಮೊದಲು ಯೋಚಿಸಲು ಕೆಲವೇ ಸೆಕೆಂಡ್ ಇರುತ್ತದೆ. ಈ ಕಾರಣದಿಂದ, ಪ್ರತಿ ವಾಕ್ಯದ ಬಗ್ಗೆ ಯೋಚಿಸಲು ಸಮಯವಿದ್ದಾಗ ಕಂಡುಹಿಡಿಯಬಹುದಾದ ಎಲ್ಲಾ ಸಮಸ್ಯೆವನ್ನು ಈಗ ಕಂಡುಹಿಡಿಯಲಾಗುವುದಿಲ್ಲ.

ಲಿಖಿತ

ಲಿಖಿತ ರೂಪದ ಪೂರಕ ಅನುವಾದದಲ್ಲಿ ಎರಡು ವಿಧಗಳಿವೆ. ಇವೆರಡ ನಡುವಿನ ವ್ಯತ್ಯಾಸಕ್ಕಾಗಿ,ಲಿಖಿತ ರೂಪದ ಪೂರಕ ಅನುವಾದ ನೋಡಿ. ಲಿಖಿತ ಪೂರಕ ಅನುವಾದವು ಮೌಕಿಕ ಪೂರಕ ಅನುವಾದಕ್ಕಿಂತ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಮೊದಲನಯದಾಗಿ, ಪೂರಕ ಅನುವಾದವನ್ನು ಬರೆದಾಗ, ಅನುವಾದ ತಂಡವು ಅನುವಾದವನ್ನು ತಪ್ಪಾಗಿ ಅರ್ಥೈಸಿಕೊಂಡ ಯಾವುದೇ ಸ್ಥಳಗಳಿವೆಯೇ ಎಂದು ನೋಡಲು ಅದನ್ನು ಓದಬಹುದು. ಪೂರಕ ಅನುವಾದಕರು ಅನುವಾದವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ಶ್ರೋತೃಗಳು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ, ಮತ್ತು ಅನುವಾದ ತಂಡವು ಆ ಸಮಯದಲ್ಲಿ ಅವರ ಅನುವಾದವನ್ನು ಪರಿಷ್ಕರಿಸುವ ಅಗತ್ಯವಿರುತ್ತದೆ.

ಎರಡನೆಯದಾಗಿ, ಪೂರಕ ಅನುವಾದವನ್ನು ಬರೆದಾಗ, ಅನುವಾದ ಪರೀಕ್ಷಕನು ಅನುವಾದ ತಂಡದೊಂದಿಗೆ ಭೇಟಿಯಾಗುವ ಮೊದಲು ಪೂರಕ ಅನುವಾದವನ್ನು ಓದಬಹುದು ಮತ್ತು ಪೂರಕ ಅನುವಾದದಿಂದ ಉದ್ಭವಿಸುವ ಯಾವುದೇ ಪ್ರಶ್ನೆಯನ್ನು ಸಂಶೋಧಿಸಲು ಸಮಯ ತೆಗೆದುಕೊಳ್ಳಬಹುದು. ಅನುವಾದ ಪರೀಕ್ಷಕನು ಸಮಸ್ಯೆಯನ್ನು ಸಂಶೋಧಿಸುವ ಅಗತ್ಯವಿಲ್ಲದಿದ್ದರೂ ಸಹ, ಲಿಖಿತ ರೂಪದ ಪೂರಕ ಅನುವಾದವು ಅನುವಾದದ ಬಗ್ಗೆ ಯೋಚಿಸಲು ಹೆಚ್ಚು ಸಮಯವನ್ನು ನೀಡುತ್ತದೆ. ಅವರು ಅನುವಾದದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಗುರುತಿಸಬಹುದು ಮತ್ತು ಪರಿಹರಿಸಬಹುದು ಮತ್ತು ಕೆಲವೊಮ್ಮೆ ಸಮಸ್ಯೆಗಳಿಗೆ ಉತ್ತಮ ಪರಿಹಾರವನನ್ನು ಸಹ ಪಡೆಯಬಹುದು.ಏಕೆಂದರೆ ಪ್ರತಿ ವಾಕ್ಯದ ಬಗ್ಗೆ ಯೋಚಿಸಲು ಕೆಲವೇ ಸೆಕೆಂಡುಗಳಿಂತಲೂ ಪ್ರತಿಯೊಂದರ ಬಗ್ಗೆ ಯೋಚಿಸಲು ಅವರಿಗೆ ಹೆಚ್ಚು ಸಮಯ ಸಿಗುತ್ತದೆ

ಮೂರನೆಯದಾಗಿ, ಪೂರಕ ಅನುವಾದವನ್ನು ಬರೆದಾಗ, ಅನುವಾದ ಪರೀಕ್ಷಕನು ಅನುವಾದ ತಂಡದೊಂದಿಗೆ ಭೇಟಿಯಾಗುವ ಮೊದಲು ತನ್ನ ಪ್ರಶ್ನೆಗಳನ್ನು ಲಿಖಿತ ರೂಪದಲ್ಲಿ ಸಿದ್ಧಪಡಿಸಬಹುದು. ಅವರು ಸಭೆ ಸೇರುವ ಮೊದಲು ಸಮಯವಿದ್ದರೆ ಮತ್ತು ಸಂಪರ್ಕಿಸಲು ಮಾರ್ಗವಿದ್ದರೆ, ಪರೀಕ್ಷಕನು ಅನುವಾದಿಸಲು ತನ್ನ ಲಿಖಿತ ರೂಪದ ಪ್ರಶ್ನೆಗಳನ್ನು ತಂಡಕ್ಕೆ ಕಳುಹಿಸಬಹುದು. ಇದನ್ನು ಅವರು ಓದಬಹುದು ಮತ್ತು ಪರೀಕ್ಷಕನು ತಪ್ಪೆಂದು ಭಾವಿಸಿದರೆ ಅನುವಾದದ ಭಾಗಗಳನ್ನು ಬದಲಾಯಿಸಬಹುದು. ಅನುವಾದ ತಂಡದವರು ಮತ್ತು ಪರೀಕ್ಷಕರು ಒಟ್ಟಿಗೆ ಭೇಟಿಯಾದಾಗ ಹೆಚ್ಚಿನ ಸತ್ಯವೇದಡ ಸಂಗತಿಗಳನ್ನು ಪರಿಶೀಲಿಸಲು ಸಹಾಯಮಾಡುತ್ತದೆ , ಯಾಕೆಂದರೆ ಭೇಟಿಯಾಗುವ ಮೊದಲೇ ಅನುವಾದದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಸಾಧ್ಯವಾಯಿತು. ಸಭೆಯಾಗಿ ಸೇರುವಾಗ ಅವರು ಉಳಿದ ಸಮಸ್ಯೆಗಳ ಮೇಲೆ ಮಾತ್ರ ಗಮನ ಹರಿಸುತ್ತಾರೆ. ಇವು ಸಮಾನ್ಯವಾಗಿ ಅನುವಾದ ತಂಡವು ಪರೀಕ್ಷಕರ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳದ ಸ್ಥಳವಾಗಿದೆ ಅಥವಾ ಪರೀಕ್ಷಕರು ಉದ್ದೇಶಿತ ಭಾಷೆಯ ಬಗ್ಗೆ ಅರ್ಥಮಾಡಿಕೊಳ್ಳದೆ, ಇಲ್ಲದಿರುವ ಸಮಸ್ಯೆಗಳನ್ನು ಇದೆ ಎಂದು ಭಾವಿಸುತ್ತಾರೆ.

ಸಭೆ ಸೇರುವ ಮುಂಚೆ ಪರೀಕ್ಷಕ ತನ್ನ ಪ್ರಶ್ನೆಗಳನ್ನು ತಂಡಕ್ಕೆ ಕಳುಹಿಸಲು ಸಮಯವಿಲ್ಲದಿದ್ದರೂ ಸಹ, ಅವರು ಇನ್ನು ಸಭೆಯಲ್ಲಿ ಹೆಚ್ಚಿನ ವಿಷಯಗಳನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ, ಇಲ್ಲದಿದ್ದರೆ ಪರಿಶೀಲಿಸಲು ಸಾಧ್ಯವಾಗುವುದರಿಂದ ಪರೀಕ್ಷಕ ಈಗಾಗಲೆ ಪೂರಕ ಅನುವಾದವನ್ನು ಓದಿರುತ್ತಾರೆ ಮತ್ತು ಈಗಾಗಲೆ ಅವರ ಪ್ರಶ್ನೆಗಳನ್ನು ಸಿದ್ದಪಡಿಸಿರುತ್ತಾರೆ . ಈ ಪೂರಕ ಸಿದ್ಧತಾ ಸಮಯವನ್ನು ಹೊಂದಿದ್ದರಿಂದ, ಅವರು ಮತ್ತು ಅನುವಾದ ತಂಡವು ತಮ್ಮ ಸಭೆಯ ಸಮಯವನ್ನು ಮೌಖಿಕ ರೂಪದ ಪೂರಕ ಅನುವಾದ ಮಾಡುವಾಗ ಅಗತ್ಯವಿರುವಷ್ಟು ನಿಧಾನಗತಿವಾಗಿ ಸಂಪೂರ್ಣ ಅನುವಾದವನ್ನು ಓದುವುದಕ್ಕಿಂತ ಹೆಚ್ಚಾಗಿ ಅನುವಾದದ ಸಮಸ್ಯೆಯ ಪ್ರದೇಶಗಳನ್ನು ಮಾತ್ರ ಚರ್ಚಿಸಲು ಬಳಸಬಹುದು.

ನಾಲ್ಕನೆಯದಾಗಿ, ಲಿಖಿತ ಪೂರಕ ಅನುವಾದವು ಒಂದು ಸಮಯದಲ್ಲಿ ಹಲವು ಗಂಟೆಗಳ ಕಾಲ ಮೌಖಿಕ ಅನುವಾದವನ್ನು ಕೇಳುವುದನ್ನು ಮತ್ತು ತಿಳಿದುಕೊಳ್ಳುವುದನ್ನು ಕೇಂದ್ರೀಕರಿಸದಂತೆ ಪರೀಕ್ಷಕನ ಒತ್ತಡವನ್ನು ತಡೆಯುತ್ತದೆ. ಪರೀಕ್ಷಕನು ಮತ್ತು ಅನುವಾದ ತಂಡವು ಗದ್ದಲದ ವಾತವರಣದಲ್ಲಿ ಭೇಟಿಯಾಗುತ್ತಿದ್ದರೆ, ಅವನು ಪ್ರತಿ ಪದವನ್ನು ಸರಿಯಾಗೆ ಕೇಳುತ್ತಾನ ಎಂದು ಖಚಿತಪಡಿಸಿಕೊಳ್ಳುವ ತೊಂದರೆಯಿಂದ ಪರೀಕ್ಷಕನು ಹೆಚ್ಚಾಗಿ ಬಳಲುವನು. ಏಕಾಗ್ರತೆಯ ಮಾನಸಿಕ ಒತ್ತಡದಿಂದ ಪರೀಕ್ಷಕನು ಸತ್ಯವೇದ ಪಠ್ಯವನ್ನು ಸರಿಪಡಿಸುವ ಫಲತಾಂಶದಲ್ಲಿ ಕೆಲವು ಸಮಸ್ಯೆಗಳನ್ನು ತಪ್ಪಿಸುವ ಸಾಧ್ಯತೆಗಳಿರುತ್ತವೆ . ಈ ಕಾರಣಕ್ಕಾಗಿ ಸಾಧ್ಯವಾದಗೆಲ್ಲಾ ಲಿಖಿತ ರೂಪದ ಪೂರಕ ಅನುವಾದವನ್ನು ನಾವು ಶಿಫಾರಸ್ಸು ಮಾಡುತ್ತೇವೆ.


ಪೂರಕ ಅನುವಾದದ ಲಿಖಿತ ಪ್ರಕಾರಗಳು

Checking Manual :: ಪೂರಕ ಅನುವಾದದ ಲಿಖಿತ ಪ್ರಕಾರಗಳು

ಪೂರಕ ಅನುವಾದಗಳಲ್ಲಿ ಎರಡು ವಿಧಗಳಿವೆ

ಇಂಟರ್ ಲೀನಿಯರ್ (ವಿವಿಧ ಭಾಷೆಗಳಲ್ಲಿ ಪಠ್ಯದ ಪರ್ಯಾಯ ಸಾಲುಗಳನ್ನು ಹೊಂದಿರುವ ಪಠ್ಯ ಕ್ರಮ) ಪೂರಕ ಅನುವಾದ

ಇಂಟರ್ ಲೀನಿಯರ್ ಪೂರಕ ಅನುವಾದದಲ್ಲಿ ಪೂರಕ ಅನುವಾದಕನು ಆ ಪದದ ಕೆಳಗೆ ಉದ್ದೇಶಿತ ಭಾಷಾ ಅನುವಾದದ ಪ್ರತಿಯೊಂದು ಪದಕ್ಕೂ ಅನುವಾದವನ್ನು ಇಡುತ್ತಾನೆ. ಉದ್ದೇಶಿತ ಭಾಷೆಯ ಅನುವಾದದ ಪ್ರತಿಯೊಂದು ಸಾಲಿನ ನಂತರ ವ್ಯಾಪಕ ಸಂಪರ್ಕಿಸುವ ಭಾಷೆಯ ಒಂದು ಸಾಲಿನ ಪಾಠ್ಯಕ್ಕೆ ಕಾರಣವಾಗುತ್ತದೆ. ಈ ರೀತಿಯ ಪೂರಕ ಅನುವಾದದ ಪ್ರಯೋಜನವೆಂದರೆ, ಉದ್ದೇಶಿತ ಭಾಷೆಯ ಪ್ರತಿಯೊಂದು ಪದವನ್ನು ಅನುವಾದ ತಂಡವು ಹೇಗೆ ಅನುಭವಿಸುತ್ತಿದೆ ಎಂಬುವುದನ್ನು ಪರೀಕ್ಷಕನು ಸುಲಭವಾಗಿ ನೋಡಬಹುದು. ಈ ರೀತಿಯ ಪೂರಕ ಅನುವಾದದ ಅನಾನುಕೂಲವೆಂದರೆ, ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ಪಠ್ಯದ ಸಾಲು ಪ್ರತ್ಯೇಕ ಪದಗಳ ಅನುವಾದದಿಂದ ಕೂಡಿದೆ. ಇದರಿಂದ ಪಠ್ಯವನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಕಷ್ಟವಾಯಿತು, ಮತ್ತು ಪೂರಕ ಅನುವಾದದ ಇತರ ವಿಧಾನಕ್ಕಿಂತ ಅನುವಾದ ಪರೀಕ್ಷಕನ ಮನಸಿನಲ್ಲಿ ಹೆಚ್ಚಿನ ಪ್ರಶ್ನೆಗಳನ್ನು ಮತ್ತು ತಪ್ಪು ಗ್ರಹಿಕೆಯನ್ನು ಉಂಟುಮಾಡಬಹುದು. ನಾವು ಈ ಕಾರಣದಿಂದಲೇ ಸತ್ಯವೇದ ಅನುವಾದದಲ್ಲಿ ಪದದಿಂದ ಪದ ಅನುವಾದವನ್ನು ಶಿಫಾರಿಸು ಮಾಡುವುದಿಲ್ಲ.

ಉಚಿತ ಪೂರಕ ಅನುವಾದ

ಪೂರಕ ಅನುವಾದಕಾರನು ಉದ್ದೇಶಿತ ಭಾಷೆ ಅನುವಾದದಿಂದ ಪ್ರತ್ಯೇಕ ಜಾಗದಲ್ಲಿ ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿ ಅನುವಾದ ಮಾಡುವುದು ಉಚಿತ ಪೂರಕ ಅನುವಾದವಾಗಿದೆ. ಈ ವಿಧಾನದ ಅನಾನುಕೂಲವೆಂದರೆ ಪೂರಕ ಅನುವಾದವು ಉದ್ದೇಶಿತ ಭಾಷಾ ಅನುವಾದಕ್ಕೆ ಸಂಭಂಧಿಸಿಲ್ಲ. ಪೂರಕ ಅನುವಾದಕನು ಸತ್ಯವೇದವನ್ನು ಅನುವಾದಿಸುವಾಗ ಈ ಅನಾನುಕೂಲತೆಯನ್ನು ನಿವಾರಿಸಲು ಸಹಾಯ ಮಾಡಬಹುದು, ಹೇಗೆಂದರೆ, ವಚನ ಸಂಖ್ಯೆ ಮತ್ತು ವಿರಾಮ ಚಿಹ್ನೆಯನ್ನು ಪೂರಕ ಅನುವದಕ್ಕೆ ಸೇರಿಸುವ ಮೂಲಕ ಮಾಡಬಹುದು. ಎರಡು ಅನುವಾದಗಳಲ್ಲಿ ವಚನ ಸಂಖ್ಯೆಗಳನ್ನು ಉಲ್ಲೇಖಿಸುವ ಮೂಲಕ ಮತ್ತು ಸರಿಯಾದ ಸ್ಥಳಗಳಲ್ಲಿ ವಿರಾಮ ಚಿಹ್ನೆಗಳನ್ನು ಎಚ್ಚರಿಕೆಯಿಂದ ಪುನರುತ್ಪಾದಿಸುವ ಮೂಲಕ, ಅನುವಾದ ಪರೀಕ್ಷಕನು ಪೂರಕ ಭಾಷಾಂತರದ ಯಾವ ಭಾಗವನ್ನು ಉದ್ದೇಶಿತ ಭಾಷಾ ಅನುವಾದದ ಯಾವ ಭಾಗವನ್ನು ಪ್ರತಿನಿಧಿಸುತ್ತದೆ ಎಂಬುವುದನ್ನು ಟ್ರ್ಯಾಕ್ ಮಾಡಬಹುದು. ಈ ವಿಧಾನದ ಪ್ರಯೋಜನವೆಂದರೆ ಪೂರಕ ಅನುವಾದವು ವ್ಯಾಪಕ ಸಂಪರ್ಕಿಸು ಭಾಷೆಯ ವ್ಯಾಕರಣ ಮತ್ತು ಪದ ಕ್ರಮವನ್ನು ಬಳಸಬಹುದು, ಮತ್ತು ಆದ್ದರಿಂದ ಅನುವಾದ ಪರೀಕ್ಷಕನಿಗೆ ಓದಲು ಮತ್ತು ಅರ್ಥಮಾಡಕೊಳ್ಳಲು ಸುಲಭವಾಗಬೇಕು. ವ್ಯಾಪಕ ಸಂಪರ್ಕಿಸುವ ಭಾಷೆಯ ವ್ಯಾಕರಣ ಮತ್ತು ಪದ ಕ್ರಮವನ್ನ ಬಳಸುವಾಗಲೂ, ಪೂರಕ ಅನುವಾದಕಾರನು ಪದಗಳನ್ನು ಅಕ್ಷರಶಃ ಅನುವಾದಿಸಲು ನೆನಪಿಟ್ಟುಕೊಳ್ಳಬೇಕು. ಇದು ಪರೀಕ್ಷಕನಿಗೆ


ಪೂರಕ ಅನುವಾದವನ್ನು ಉತ್ತಮವಾಗಿ ರಚಿಸಲು ಮಾರ್ಗಸೂಚಿಗಳು

Checking Manual :: ಪೂರಕ ಅನುವಾದವನ್ನು ಉತ್ತಮವಾಗಿ ರಚಿಸಲು ಮಾರ್ಗಸೂಚಿಗಳು

###ಪದಗಳು ಮತ್ತು ಉಪವಾಕ್ಯಯ ಬಳಕೆಯನ್ನು ಉದ್ದೇಶಿತ ಭಾಷಯಲ್ಲಿ ತೋರಿಸಿ

ಈ ಘಟಕದ ಉದ್ದೇಶಕ್ಕಾಗಿ, ”ಉದ್ದೇಶಿತ ಭಾಷೆ” ಸತ್ಯವೇದದ ಕರಡು ಪ್ರತಿಯನ್ನು ಮಾಡಿದ ಭಾಷೆಯನ್ನು ಸೂಚಿಸುತ್ತದೆ, ಮತ್ತು “ವ್ಯಾಪಕ ಸಂಪರ್ಕ ಭಾಷೆ” ಎನ್ನುವುದು ಪೂರಕ ಅನುವಾದ ಮಾಡುವ ಭಾಷೆಯನ್ನು ಸೂಚಿಸುತ್ತದೆ.

a. ಸಂದರ್ಭಕ್ಕೆ ತಕ್ಕಂತೆ ಪದದ ಅರ್ಥವನ್ನು ಬಳಸಿ

ಒಂದು ಪದವು ಕೇವಲ ಒಂದೇ ಮೂಲ ಅರ್ಥವನ್ನು ಹೊಂದಿದ್ದರೆ, ಪೂರಕ ಅನುವಾದಕನು ವ್ಯಾಪಕ ಸಂಪರ್ಕ ಭಾಷೆಯಲ್ಲಿನ ಮೂಲ ಅರ್ಥವನ್ನು ಪ್ರತಿನಿಧಿಸುವ ಪದವನ್ನು ಪೂರಕ ಅನುವಾದ ಉದ್ದಕ್ಕೂ ಬಳಸಬೇಕು. ಅದಾಗ್ಯೂ, ಉದ್ದೇಶಿತ ಭಾಷೆಯಲ್ಲಿನ ಒಂದು ಪದವು ಒಂದಕ್ಕಿಂತ ಹೆಚ್ಚು ಅರ್ಥವನ್ನು ಹೊಂದಿದ್ದರೆ, ಸಂದರ್ಭಕ್ಕೆ ಅನುಗುಣವಾಗಿ ಅರ್ಥವ ಬದಲಾಗುತ್ತದೆ, ನಂತರ ಪೂರಕ ಅನುವಾದಕನು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ಪದ ಅಥವ ನುಡಿಗಟ್ಟನ್ನು ಬಳಸಬೇಕು, ಅದು ಪದವನ್ನು ಸನ್ನೀವೇಶದಲ್ಲಿ ಬಳಸಿದ ವಿಧಾನವನ್ನು ಉತ್ತಮವಾಗಿ ಪ್ರತಿನಿಧಿಸುತ್ತದೆ. ಅನುವಾದ ಪರೀಕ್ಷಕನಿಗೆ ಗೊಂದಲವನ್ನು ತಪ್ಪಿಸಲು, ಪೂರಕ ಅನುವಾದಕನು ಮೊದಲ ಬಾರಿಗೆ ಈ ಪದವನ್ನು ಬೇರೆ ರೀತಿಯಲ್ಲಿ ಬಳಸಿದಾಗ ಇತರ ಅರ್ಥವನ್ನು ಆವರಣ ಚಿಹ್ನೆಯಲ್ಲಿ ಹಾಕಬಹುದು, ಇದರಿಂದಾಗಿ ಅನುವಾದಕ ಪರೀಕ್ಷಕನು ಪದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥವನ್ನು ಹೊಂದಿರುವುದನ್ನು ನೋಡಬಹುದು ಮತ್ತು ಅರ್ಥಮಾಡಿಕೊಳ್ಳಬಹುದು. ಉದಾಹರಣೆಗೆ, ಪೂರಕ ಅನುವಾದದಲ್ಲಿ ಉದ್ದೇಶಿತ ಭಾಷೆಯ ಪದವನ್ನು “ಹೋಗು” ಎಂದು ಅನುವಾದಿಸಿದ್ದರೆ “ಬನ್ನಿ(ಹೋಗಿ)” ಎಂದು ಅವರು ಬರೆಯಬಹುದು, ಆದರೆ ಹೊಸ ಸನ್ನಿವೇಶದಲ್ಲಿ ಇದನ್ನು “ ಬನ್ನಿ” ಎಂದು ಉತ್ತಮವಾಗಿ ಅನುವಾದಿಸಲಾಗುತ್ತದೆ.

ಉದ್ದೇಶಿತ ಭಾಷಾ ಅನುವಾದವು ಒಂದು ನಾಣ್ಣುಡಿಯನ್ನು ಬಳಸಿದರೆ, ಪೂರಕ ಅನುವಾದದ ಅನುವಾದಕನು ನಾಣ್ಣುಡಿಯನ್ನು ಅಕ್ಷರಶಃ ಅನುವಾದಿಸಿದರೆ (ಪದಗಳ ಅರ್ಥಕ್ಕೆ ಅನುಗುಣವಾಗಿ) ಅನುವಾದ ಪರೀಕ್ಷಿಕನಿಗೆ ಇದು ಹೆಚ್ಚು ಸಹಾಯಕವಾಗುತ್ತದೆ, ಆದರೆ ನಾಣ್ಣುಡಿಯ ಅರ್ಥವನ್ನು ಆವರಣದ ಚಿಹ್ನೆಯಲ್ಲಿ ಸೇರಿಸಿ. ಈ ರೀತಿಯಲ್ಲಿ, ಉದ್ದೇಶಿತ ಭಾಷಾ ಅನುವಾದವು ಆ ಸ್ಥಳದಲ್ಲಿ ಒಂದು ನಾಣ್ಣುಡಿಯನ್ನು ಬಳಸುವುದನ್ನು ಅನುವಾದ ಪರೀಕ್ಷಕರು ನೋಡಬಹುದು ಮತ್ತು ಅದರ ಅರ್ಥವನ್ನು ಸಹ ತಿಳಿದುಕೊಳ್ಳಬಹುದು. ಪೂರಕ ಅನುವಾದಕನು ನಾಣ್ಣುಡಿಯನ್ನು ಈ ರೀತಿಯಾಗಿ ಅನುವಾದಿಸಬಹುದು, “ಆತನು ಬಕೆಟ್ ಒದ್ದನು (ಅವನು ಸತ್ತನು).” ನಾಣ್ಣುಡಿಗಳು ಒಂದಕ್ಕಿಂತ ಹೆಚ್ಚು ಬಾರಿ ಕಂಡುಬಂದಲ್ಲಿ, ಪೂರಕ ಅನುವಾದದ ಅನುವಾದಕನು ಪ್ರತಿ ಬಾರಿಯು ಅದನ್ನು ವಿವರಿಸುವ ಅಗತ್ಯವಿರುವುದಿಲ್ಲ, ಆದರೆ ಅದನ್ನು ಅಕ್ಷರಶಃ ಅನುವಾದಿಸಬಹುದು ಅಥವ ಅದರ ಅರ್ಥವನ್ನು ವಿವರಿಸಬಹುದು.

b. ಅಲಂಕಾರಗಳನ್ನು ಒಂದೇ ರೀತಿ ಇರಿಸಿ

ಪೂರಕ ಅನುವಾದದಲ್ಲಿ, ಪೂರಕ ಅನುವಾದಕರು ವ್ಯಾಪಕ ಸಂಪರ್ಕಿಸುವ ಭಾಷೆಯ ಅಲಂಕಾರಗಳನ್ನು ಪ್ರತಿನಿಧಿಸಬೇಕು. ಇದರರ್ಥ ಪೂರಕ ಅನುವಾದಕ ನಾಮಪದವನ್ನು ನಾಮಪದಗಳೊಂದಿಗೆ, ಕ್ರಿಯಾಪದವನ್ನು ಕ್ರಿಯಪದಗಳೊಂದಿಗೆ ಮತ್ತು ಮಾರ್ಪಡಕಗಳನ್ನು ಮಾರ್ಪಡಕಗಳೊಂದಿಗೆ ಅನುವಾದಿಸಬೇಕು. ಉದ್ದೇಶಿತ ಭಾಷೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುವುದನ್ನು ನೋಡಲು ಅನುವಾದ ಪರೀಕ್ಷಕರಿಗೆ ಇದು ಸಹಾಯ ಮಾಡುತ್ತದೆ

c. ಉಪವಾಕ್ಯವನ್ನು ಒಂದೇ ರೀತಿ ಇರಿಸಿ

ಪೂರಕ ಅನುವಾದದಲ್ಲಿ, ಪೂರಕ ಅನುವಾದಕನು ಉದ್ದೇಶಿತ ಭಾಷೆಯ ಪ್ರತಿಯೊಂದು ಉಪವಾಕ್ಯವನ್ನು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿ ಒಂದೇ ರೀತಿಯ ಉಪವಾಕ್ಯಗಳೊಂದಿಗೆ ಪ್ರತಿನಿಧಿಸಬೇಕು. ಉದಾಹರಣೆಗೆ, ಉದ್ದೇಶಿತ ಭಾಷೆಯ ಉಪವಾಕ್ಯವು ಆಜ್ಞೆಯನ್ನು ಬಳಸಿದರೆ, ಪೂರಕ ಅನುವಾದವು ಸಲಹೆ ಅಥವ ವಿನಂತಿ ಬಳಸದೆ ಆಜ್ಞೆಯನ್ನೆ ಬಳಸಬೇಕು. ಅಥವಾ ಉದ್ದೇಶಿತ ಭಾಷೆಯ ಉಪವಾಕ್ಯವು ವಾಕ್ಚಾತುರ್ಯದ ಪ್ರಶ್ನೆಯನ್ನು ಬಳಸಿದರೆ, ಪೂರಕ ಅನುವಾದವು ಸಹ ಹೇಳಿಕೆ ಅಥವಾ ಇತರ ಅಭಿವ್ಯಕ್ತಿಗಿಂತ ಪ್ರಶ್ನೆಯನ್ನು ಬಳಸುತ್ತದೆ.

d.ವಿರಾಮಚಿಹ್ನೆಯನ್ನು ಒಂದೇ ರೀತಿ ಇರಿಸಿ

ಉದ್ದೇಶಿತ ಭಾಷಾ ಅನುವಾದದಲ್ಲಿರುವಂತೆ ಪೂರಕ ಅನುವಾದಕರು ಅದೇ ರೀತಿಯಲ್ಲಿ ವಿರಾಮಚಿಹ್ನೆಯನ್ನು ಬಳಸಬೇಕು. ಉದಾಹಾಣಗೆ ಉದ್ದೇಶಿತ ಭಾಷೆಯಲ್ಲಿ ಅಲ್ಪವಿರಾಮ ಇದ್ದರೆ, ಪೂರಕ ಅನುವಾದಕನು ಸಹ ಪೂರಕ ಅನುವಾದದಲ್ಲಿ ಅಲ್ಪವಿರಾಮ ಬಳಸಬೇಕು. ಪೂರ್ಣ ವಿರಾಮ ಚಿಹ್ನೆ, ಆಶ್ಚರ್ಯಕರ ಚಿಹ್ನೆಗಳು, ಉಲ್ಲೇಖ ಗಳು ಮತ್ತು ಎಲ್ಲಾ ಚಿಹ್ನೆಗಳು ಎರಡು ಅನುವಾದಲ್ಲಿ ಒಂದೇ ರೀತಿಯಲ್ಲಿರಬೇಕು. ಈ ರೀತಿಯಲ್ಲಿ ಪೂರಕ ಅನುವಾದದ ಯಾವ ಭಾಗಗಳು ಉದ್ದೇಶ ಭಾಷೆಯ ಯಾವ ಭಾಗಗಳನ್ನು ಪ್ರತಿನಿಧಿಸುತ್ತದೆ ಎಂಬುವುದನ್ನು ಅನುವಾದ ಪರೀಕ್ಷಕರು ಸುಲಭಾವಾಗಿ ನೋಡಬಹುದು. ಸತ್ಯವೇದದ ಪೂರಕ ಅನುವಾದವನ್ನು ಮಾಡುವಾಗ, ಎಲ್ಲಾ ಅಧ್ಯಾಯಗಳು ಮತ್ತು ವಚನ ಸಂಖ್ಯೆಗಳು ಸರಿಯಾದ ಸ್ಥಳದಲ್ಲಿವೆಯೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.

e. ಸಂಕೀರ್ಣ ಪದಗಳ ಪೂರ್ಣ ಅರ್ಥವನ್ನು ವ್ಯಕ್ತಪಡಿಸು

ಕೆಲವೊಮ್ಮೆ ಉದ್ದೇಶಿತ ಭಾಷೆಯಲ್ಲಿನ ಪದಗಳು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿರುವ ಪದಗಳಿಗಿಂತ ಹೆಚ್ಚು ಸಂಕೀರ್ಣವಾಗಿರುತ್ತದೆ. ಈ ಸಂದರ್ಭದಲ್ಲಿ, ಪೂರಕ ಅನುವಾದವು ಉದ್ದೇಶಿತ ಭಾಷೆಯ ಪದವನ್ನು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿ ದೀರ್ಘ ನುಡಿಗಟ್ಟಿನೊಂದಿಗೆ ಪ್ರತಿನಿಧಿಸುವ ಅಗತ್ಯವಿದೆ. ಅನುವಾದ ಪರೀಕ್ಷಕನು ಸಾಧ್ಯವಾದಷ್ಟು ಅರ್ಥವನ್ನು ನೋಡಲು ಇದು ಸಹಾಯವಾಗುತ್ತದೆ. ಉದ್ದೇಶಿತ ಭಾಷೆಯಲ್ಲಿ ಒಂದು ಪದವನ್ನು ಭಾಷಾಂತರಿಸಲು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ಒಂದು ನುಡಿಗಟ್ಟನ್ನು ಬಳಸುವುದು ಅಗತ್ಯವಾಗಿರಬಹುದು (ಉದಾಹರಣೆಗೆ “ಮೇಲಕ್ಕೆ ಹೋಗು” ಅಥವ “ಮಲಗಿಕೊಳ್ಳಿ”). ಅನೇಕ ಭಾಷೆಗಳಲ್ಲಿ ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ಸಮಾನ ಪದಗಳಿಂತ ಹೆಚ್ಚಿನೆ ಮಾಹಿತಿಯನ್ನು ಒಳಗೊಂಡಿರುವ ಪದಗಳನ್ನು ಹೊಂದಿವೆ. ಈ ಸಂದರ್ಭದಲ್ಲಿ, ಪೂರಕ ಅನುವಾದಕರು ಹೆಚ್ಚುವರಿ ಮಾಹತಿಯನ್ನು ಆವರಣ ಚಿಹ್ನೆಯಲ್ಲಿ ಒಳಗೊಂಡಿದ್ದರ ಹೆಚ್ಚು ಸಹಾಯವಾಗುತ್ತದೆ , ಉದಾಹರಣೆಗೆ “ನಾವು(ಅಂತರ್ಗತ)”,ಅಥವಾ “ನೀವು(ಸ್ತ್ರೀಲಿಂಗ, ಬಹುವಚನ)”.

2.ವಾಕ್ಯ ಮತ್ತು ತಾರ್ಕಿಕ ರಚನೆಗಾಗಿ ವ್ಯಾಪಕ ಸಂಪರ್ಕಿಸುವ ಭಾಷೆಯನ್ನು ಬಳಸಿ

ಪೂರಕ ಅನುವಾದವು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ವಾಕ್ಯ ರಚನೆಯನ್ನು ಬಳಸಬೇಕೆ ಹೊರತಾಗಿ ಉದ್ದೇಶಿತ ಭಾಷೆಯಲ್ಲಿ ಬಳಸುವ ರಚನೆಯಲ್ಲಾ. ಇದರರ್ಥ ಪೂರಕ ಅನುವಾದವು ವ್ಯಾಪಕ ಸಂಪರ್ಕ ಭಾಷೆಯಲ್ಲಿನ ಸ್ವಾಭಾವಿಕ ಪದ ಕ್ರಮವನ್ನು ಬಳಸಬೇಕೇ ಹೊರತಾಗಿ ಉದ್ದೇಶಿತ ಭಾಷೆಯಲ್ಲಿ ಬಳಸುವ ಪದ ಕ್ರಮವಲ್ಲ. ಪೂರಕ ಅನುವಾದವು ಪರಸ್ಪರ ನುಡಿಗಟ್ಟುಗಳಿಗೆ ಸಂಬಂಧಿಸಿದ ವಿಧಾನವನ್ನು ಮತ್ತು ವ್ಯಾಪಕ ಸಂಪರ್ಕಿಸುವ ಭಾಷೆಯ ಸ್ವಾಭಾವಿಕವಾದ ಕಾರಣ ಅಥವಾ ಉದ್ದೇಶದಂತಹ ತಾರ್ಕಿಕ ಸಂಬಂಧಗಳನ್ನು ಸೂಚಿಸುವ ವಿಧಾನವನ್ನು ಸಹ ಬಳಸಬೇಕು.


ಪ್ರಕಾಶಪಡಿಸುವಿಕೆ

Checking Manual :: ಪ್ರಕಾಶಪಡಿಸುವಿಕೆ

Door43 ಮತ್ತು unfoldingWord.Bible ಮೇಲೆ ಪ್ರಕಾಶಕ ಮಾಡುವುದು

  • ಅನುವಾದ ಮತ್ತು ಪರಿಶೀಲನೆ ಮಾಡುವ ವಿಧಾನಗಳೆಲ್ಲವುಗಳ ಮೂಲಕ, ಅನುವಾದವು ನೀವು ಆಯ್ಕೆ ಮಾಡಿಕೊಂಡಿರುವ Door43 ವೆಬ್.ಸೈಟ್ ಎನ್ನುವ ಹೆಸರಿನ ಕೆಳಗೆ ಇರುವ ಭಂಡಾರದಲ್ಲಿ ನಿರ್ವಹಿಸಲ್ಪಡುವುದು ಮತ್ತು ಅಪ್ ಲೋಡ್ ಮಾಡಲಾಗುವುದು. ನೀವು ಕಳುಹಿಸಿದ ಮಾಹಿತಿಯನ್ನು ಅಪ್ ಲೋಡ್ ಮಾಡಿರಿ ಎಂದು ಅವರಿಗೆ ಹೇಳಿದಾಗ, translationStudio ಮತ್ತು translationCore ಮಾಹಿತಿಯನ್ನು ಕಳುಹಿಸಿಕೊಡುವವು.
  • door43 ಮೇಲೆ ಅನುವಾದದಲ್ಲಿ ತಿದ್ದುಪಡಿಗಳನ್ನು ಸಿದ್ಧಪಡಿಸಿದ ಮತ್ತು ಪರಿಶೀಲನೆಯನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿದಾಗ, ಪರಿಶೀಲಕರು ಅಥವಾ ಸಭಾ ನಾಯಕರು ಪ್ರಕಾಶನಕ್ಕೆ ಚಾಲನೆ ನೀಡಬಹುದು ಎಂದು ತಮ್ಮ ಅನಿಸಿಕೆಯನ್ನು unfoldingWord ಗೆ ವ್ಯಕ್ತಪಡಿಸುವರು, ಮತ್ತು ಅನುವಾದವು ನಂಬತಕ್ಕದ್ದಾಗಿದೆಯೆಂದು ಸಭಾಪಾಲಕರು, ಸಮುದಾಯ, ಮತ್ತು ಸಭೆಯ ಗುಂಪಿನ ನಾಯಕರು ಅನುಮೋದನೆ ಮಾಡಿದ್ದಾರೆಂದು ತಿಳಿಸುವ ಪತ್ರಗಳೊಂದಿಗೆ unfoldingWord ಗೆ ಕೊಡುವರು. ಪ್ರತಿಯೊಂದು ಅನುವಾದದ ಮಾಹಿತಿ ನಂಬಿಕೆಯ ವ್ಯಾಖ್ಯೆಗಳ ವೇದಾಂತದೊಂದಿಗೆ ಮತ್ತು ಅನುವಾದದ ಮಾರ್ಗದರ್ಶನಗಳ ಪದ್ಧತಿಗಳೊಂದಿಗೆ ಹೊಂದಿಕೊಂಡಿರಬೇಕು. unfoldingWord ಎನ್ನುವುದು ಅನುಮೋದನೆಗಳನ್ನು ಅಥವಾ ಅನುವಾದಗಳ ನಿಖರತೆಯನ್ನು ಪರಿಶೀಲನೆ ಮಾಡುವುದಕ್ಕೆ ಯಾವ ಪದ್ಧತಿಯನ್ನು ಹೊಂದಿರುವುದಿಲ್ಲ, ಇದರಿಂದ ಸಭೆಯ ಗುಂಪುಗಳ ನಾಯಕತ್ವದ ಸಮಗ್ರತೆಯ ಮೇಲೆ ಆತುಕೊಂಡಿರುತ್ತಾರೆ.
  • ಈ ಎಲ್ಲಾ ಅನುಮೋದನೆಗಳನ್ನು ಪಡೆದುಕೊಂಡನಂತರ, unfoldingWord ಎನ್ನುವುದು door43 ಮೇಲೆ ಇರುವಂತಹ ಅನುವಾದದ ನಕಲು ತಯಾರು ಮಾಡುತ್ತದೆ, ಒಂದು ನಕಲು ಪತ್ರವನ್ನು ಡಿಜಿಟಲ್ ರೂಪದಲ್ಲಿ unfoldingWord (https://unfoldingword.bible ನೋಡಿರಿ) ವೆಬ್ ಸೈಟ್ ಮೇಲೆ ಪ್ರಕಾಶಪಡಿಸಲಾಗುತ್ತದೆ. ಮುದ್ರಿಸುವುದಕ್ಕೆ ಸಿದ್ದವಾಗಿರುವ ಪಿಡಿಎಫ್ ಫೈಲನ್ನು ಕೊಡಲಾಗುವುದು ಮತ್ತು ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಲಭ್ಯದಲ್ಲಿಡಲಾಗುತ್ತದೆ. door43ರ ಮೇಲೆ ಇಟ್ಟಿರುವ ಪರಿಶೀಲನೆ ಮಾಡಿಟ್ಟಿರುವ ಅನುವಾದವನ್ನು ಬದಲಾಯಿಸುವುದಕ್ಕೆ ಸಾಧ್ಯತೆಗಳಿರುತ್ತವೆ, ಹೆಚ್ಚಿನ ಪರಿಶೀಲನೆಗೆ ಮತ್ತು ತಿದ್ದುಪಡಿಗೆ ಅವಕಾಶವನ್ನು ಕೊಡಲಾಗಿರುತ್ತದೆ.
  • unfoldingWord ಅನುವಾದಕ್ಕೆ ಉಪಯೋಗಿಸಲ್ಪಟ್ಟ ಮೂಲ ಪುಸ್ತಕದ ಆವೃತಿಯ ಸಂಖ್ಯೆ ತಿಳಿದುಕೊಂಡಿರಬೇಕಾದ ಅವಶ್ಯಕತೆಯಿದೆ. ಈ ಸಂಖ್ಯೆಯನ್ನು ಅನುವಾದಕ್ಕೆ ಉಪಯೋಗಿಸಲ್ಪಟ್ಟ ಆವೃತಿಯ ಸಂಖ್ಯೆಯೊಳಗೆ ಸಂಯೋಜಿಸಬೇಕು. ಇದರಿಂದ ಮೂಲ ವಾಕ್ಯದ ಸ್ಥಿತಿಯನ್ನು ತುಂಬಾ ಸುಲಭವಾಗಿ ತಿಳಿದುಕೊಳ್ಳುವುದಕ್ಕೆ ಅವಕಾಶ ಮತ್ತು ಅನುವಾದವನ್ನು ಬದಲಾಯಿಸಬಹುದು ಮತ್ತು ತಿದ್ದುಪಡಿ ಮಾಡಬಹುದು. ಆವೃತಿಯ ಸಂಖ್ಯೆಗಳ ಕುರಿತಾದ ಮಾಹಿತಿಗಾಗಿ, [ಮೂಲ ವಾಕ್ಯಗಳು ಮತ್ತು ಆವೃತಿಯ ಸಂಖ್ಯೆಗಳು] ಎನ್ನುವದನ್ನು ನೋಡಿರಿ (…/…/intro/translation-guidelines/01.md).

ಪರಿಶೀಲಕರನ್ನು ಪರಿಶೀಲನೆ ಮಾಡುವುದು

ವಿಷಯವನ್ನು ಉಪಯೋಗಿಸುವ ಸಭೆಯ ಮೂಲಕ ನಿರ್ಧಾರಣೆಯಾಗುವಂತೆಯೇ ಈ ದಾಖಲಾತಿಯಲ್ಲಿ ವಿವರಿಸಲ್ಪಟ್ಟ ವಿಷಯಗಳ ವಿಧಾನವನ್ನು ಮತ್ತು ಅವುಗಳನ್ನು ಪರಿಶೀಲನೆ ಮಾಡುವುದೆನ್ನುವುದು ವಿಷಯವನ್ನು ಪರಿಷ್ಕರಿಸುವುದರ ಮೇಲೆ ಮತ್ತು ಪುನರ್ ಪರಿಶೀಲನೆ ಮಾಡುವುದರ ವಿಧಾನದ ಮೇಲೆ ಆಧಾರವಾಗಿರುತ್ತದೆ . ಹೆಚ್ಚಿನ ಸಂಖ್ಯೆಯ ಜನರಿಂದ ಹೆಚ್ಚಿನ ಮಾಹಿತಿಗಳನ್ನು ತೆಗೆದುಕೊಳ್ಳುವ ಜನರ ಪ್ರತಿಕ್ರೀಯೆಯನ್ನು ಪ್ರೋತ್ಸಾಹಗೊಳಿಸಿಲಾಗುವುದು ಪ್ರೋತ್ಸಾಹ ಮಾಡಲಾಗಿದೆ (ಮತ್ತು ಕಾರ್ಯ ಸಾಧ್ಯವಾದ ಅನುವಾದ ಮಾಡುವ ಸಾಫ್ಟ್ ವೇರಿನಲ್ಲಿ ತೋರಿಸಲಾಗಿದೆ). ಆ ಕಾರಣದಿಂದಲೇ, ವಿಷಯದ ಅನುವಾದಗಳೆಲ್ಲವು ಅನಿರ್ದಿಷ್ಟವಾಗಿ ಅನುವಾದದ ವೇದಿಕೆಯ ಮೇಲೆ (http://door43.org ನೋಡಿರಿ) ವಿಷಯದ ಅನುವಾದಗಳು ಲಭ್ಯವಾಗಿರಲು ಮುಂದುವರಿಸಲಾಗಿರುತ್ತದೆ. ಇದರಿಂದ ಉಪಯೋಗಿಸುವವರು ಅವುಗಳನ್ನು ಇನ್ನಷ್ಟು ಹೆಚ್ಚಾಗಿ ಸುಧಾರಣೆ ಮಾಡಬಹುದು. ಈ ವಿಧಾನದಲ್ಲಿ ಹಂತ ಹಂತವಾಗಿ ಅನುವಾದದ ಗುಣಮಟ್ಟವನ್ನು ಹೆಚ್ಚಿಸುವ ಆಲೋಚನೆಯಲ್ಲಿ ವಾಕ್ಯಾನುಸಾರವಾದ ವಿಷಯಗಳನ್ನು ರಚಿಸಲು ಸಭೆಯೆಲ್ಲರು ಸೇರಿ ಕೆಲಸ ಮಾಡಬಹುದು.


ಭಾಷೆಯ ಸಮುದಾಯ ಮೌಲ್ಯಮಾಪನದ ಪ್ರಶ್ನೆಗಳು

Checking Manual :: ಭಾಷೆಯ ಸಮುದಾಯ ಮೌಲ್ಯಮಾಪನದ ಪ್ರಶ್ನೆಗಳು

ಸಮುದಾಯ ಪರಿಶೀಲಕರ ಕೆಲಸಕ್ಕಾಗಿ ಇದನ್ನು ಪರಿಶೀಲನೆ ಮಾಡುವ ಪಟ್ಟಿಯಂತೆ ಈ ಪುಟವನ್ನು ನೀವು ಉಪಯೋಗಿಸಬಹುದು, ಮತ್ತು ಇದನ್ನು ನೀವು ಮುದ್ರಿಸಬಹುದು, ಆ ಪರೀಶೀಲನ ಪಟ್ಟಿಯನ್ನು ಅನುವಾದದ ತಂಡ ಮತ್ತು ಸಮುದಾಯದ ನಾಯಕರು ತುಂಬತಕ್ಕದ್ದು , ಮತ್ತು ಈ ಅನುವಾದಕ್ಕಾಗಿ ಉಪಯೋಗಿಸಿದ ಪರಿಶೀಲನೆ ಪದ್ಧತಿ ದಾಖಲಾತಿಯಾಗಿಯೂ ಇದನ್ನು ಇಟ್ಟುಕೊಳ್ಳಬಹುದು.

ಅನುವಾದ ತಂಡದ ಸದಸ್ಯರಾಗಿರುವ ನಾವು ಭಾಷೆಯ ಸಮುದಾಯ ಸದಸ್ಯರೊಂದಿಗೆ _____________________ ಅನುವಾದವನ್ನು ಪರಿಶೀಲನೆ ಮಾಡಿದ್ದೇವೆಂದು ಅನುಮೋದನೆ ಮಾಡಬಹುದು.

  • ನಾವು ಹಿರಿಯರ ಜೋತೆಯಲ್ಲಿ ಮತ್ತು ಚಿಕ್ಕವರ ಜೊತೆಯಲ್ಲಿ, ಮತ್ತು ಸ್ತ್ರೀ ಪುರುಷರ ಜೊತೆಯಲ್ಲಿಯೂ ಅನುವಾದವನ್ನು ಪರಿಶೀಲನೆ ಮಾಡಿದ್ದೇವೆ.
  • ನಾವು ಸಮುದಾಯದೊಂದಿಗೆ ಅನುವಾದವನ್ನು ಪರಿಶೀಲನೆ ಮಾಡುತ್ತಿರುವಾಗ ಅನುವಾದ ಪ್ರಶ್ನೆಗಳನ್ನು ಉಪಯೋಗಿಸಿದ್ದೇವೆ.
  • ಸಮುದಾಯದ ಸದಸ್ಯರು ಅಥವಾ ಜನರು ಅನುವಾದವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳದ ಸ್ಥಳಗಳಲ್ಲಿ ಸುಲಭವಾಗಿ, ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದಕ್ಕೆ ನಾವು ಅನುವಾದವನ್ನು ತಿದ್ದುಪಡಿ ಮಾಡಿದ್ದೇವೆ.

ದಯೆವಿಟ್ಟು ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಿ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವುದರ ಮೂಲಕ ಕ್ರೈಸ್ತ ಸಮುದಾಯದಲ್ಲಿರುವವರಿಗೆ ವ್ಯಾಪಕ ಮಟ್ಟಿಗೆ ಸಹಾಯ ಮಾಡುವವರಾಗಿರುತ್ತೇವೆ, ಇದರ ಮೂಲಕ ಅನುವಾದ ಮಾಡುವ ಭಾಷೆಯ ಸಮುದಾಯದ ಜನರು ಅನುವಾದವು ಸ್ಪಷ್ಟವಾಗಿದೆ, ನಿಖರತೆಯಾಗಿದೆ, ಮತ್ತು ಸ್ವಾಭಾವಿಕವಾಗಿದೆಯೆಂದು ತಿಳಿದುಕೊಳ್ಳುವರು.

  • ಸಮುದಾಯದ ಪ್ರತಿಸ್ಪಂದನೆಯು ಸಹಾಯಕರವಾಗಿರುವ ಕೆಲವು ವಾಕ್ಯಭಾಗಗಳನ್ನು ಪಟ್ಟಿ ಮಾಡಿರಿ. ಅವರಿಗೆ ಸ್ಪಷ್ಟವಾಗಿರುವಂತೆ ಈ ವಾಕ್ಯಭಾಗಗಳನ್ನು ನೀವು ಹೇಗೆ ಮಾರ್ಪಾಟು ಮಾಡಿದ್ದೀರಿ?



  • ಕೆಲವೊಂದು ಪ್ರಾಮುಖ್ಯವಾದ ಪದಗಳಿಗೆ ಅಥವಾ ಶಬ್ದಗಳಿಗೆ ವಿವರಣೆಯನ್ನು ಬರೆಯಿರಿ, ಮೂಲ ಭಾಷೆಯಲ್ಲಿ ಉಪಯೋಗಿಸಲ್ಪಟ್ಟ ಪದಗಳಿಗೆ ಅಥವಾ ಶಬ್ದಗಳಿಗೆ ಅವು ಎಷ್ಟು ಸಮಾನವಾಗಿರುತ್ತವೆಯೆಂದು ವಿವರಣೆ ಕೊಡಿರಿ. ನೀವು ಈ ಪದಗಳನ್ನು ಯಾಕೆ ಆಯ್ಕೆ ಮಾಡಿಕೊಂಡಿದ್ದೀರೆಂದು ಪರಿಶೀಲಕರು ಅರ್ಥಮಾಡಿಕೊಳ್ಳಲು ಇದು ಸಹಾಯಕರವಾಗಿರುತ್ತದೆ.



  • ವಾಕ್ಯಭಾಗಗಳನ್ನು ಗಟ್ಟಿಯಾಗಿ ಓದುತ್ತಿರುವಾಗ ಭಾಷೆಯಲ್ಲಿ ಯಾವ ಅಡೆತಡೆ ಇಲ್ಲದೇ ಉತ್ತಮವಾಗಿಯಿದೆಯೆಂದು ಸಮುದಾಯದವರು ಪರಿಶೀಲನೆ ಮಾಡಿದ್ದಾರೋ? (ನಿಮ್ಮ ಸ್ವಂತ ಸಮುದಾಯದಿಂದ ಬಂದ ಲೇಖಕರು ಬರೆದಿರುವ ಭಾಷೆಯಂತೆಯೇ ಈ ಭಾಷೆ ಇದೆಯೋ?)



ಈ ಅನುವಾದವು ಸ್ಥಳೀಯ ಸಮುದಾಯಕ್ಕೆ ಎಷ್ಟರ ಮಟ್ಟಿಗೆ ಸ್ವೀಕೃತವಾಗಿದೆಯೆನ್ನುವದರ ಕುರಿತಾಗಿ ಸಾರಾಂಶ ವ್ಯಾಖ್ಯೆಯನ್ನು ಮಾಡುವುದಕ್ಕೆ ಸಮುದಾಯದ ನಾಯಕರು ತಮ್ಮ ಸ್ವಂತ ಮಾಹಿತಿಯನ್ನು ಸೇರಿಸುವುದಕ್ಕೆ ಇಷ್ಟಪಡಬಹುದು. ಬೃಹತ್ ಸಭೆಯ ನಾಯಕತ್ವಕ್ಕೆ ಈ ಮಾಹಿತಿಯು ಲಭ್ಯದಲ್ಲಿರಬೇಕು. ಮತ್ತು ಇದಕ್ಕೆ ಮುಂಚಿತವಾಗಿಯೇ ಮಾಡಿರುವ ಪರಿಶೀಲನೆ ಪದ್ಧತಿಯಲ್ಲಿ ನಿಶ್ಚಿತತೆಯನ್ನು ಹೊಂದಿಕೊಳ್ಳುವುದಕ್ಕೆ ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಇದು ಅವರಿಗೆ ಸಹಾಯಕವಾಗಿರುವುದು. ಅವರು ನಿಖರತೆಯ ಪರಿಶೀಲನೆಯನ್ನು ಮಾಡುವಾಗ ಮತ್ತು ಕೊನೆಯ ಕ್ರಮಬದ್ಧವಾದ ಪರಿಶೀಲನೆ ಮಾಡುವಾಗ ಸ್ಥಳೀಯ ಕ್ರೈಸ್ತ ಸಮುದಾಯದಿಂದ ಅನುಮೋದನೆ ಮಾಡಲ್ಪಟ್ಟಿರುವ ಅನುವಾದವನ್ನು ಮೌಲ್ಯೀಕರಿಸುವುದಕ್ಕೆ ಇದು ಅವರಿಗೆ ಸಹಾಯ ಮಾಡುತ್ತದೆ.


ಭಾಷೆಯ ಸಮುದಾಯದ ಪರಿಶೀಲನೆ

Checking Manual :: ಭಾಷೆಯ ಸಮುದಾಯದ ಪರಿಶೀಲನೆ

ಭಾಷೆಯ ಸಮುದಾಯದ ಪರಿಶೀಲನೆ

ತಂಡವಾಗಿ ಪರಿಶೀಲನೆಗಳನ್ನು ಮಾಡಿದ ಮೇಲೆ ಪರಿಶೀಲನೆ ಮತ್ತು ಹೇಳಲ್ಪಟ್ಟಿರುವ ಹಂತಗಳನ್ನು ಅನುವಾದ ತಂಡ ಸಂಪೂರ್ಣಗೊಳಿಸಿದ ಅನುವಾದವನ್ನು ಭಾಷಾಂತರ ಸಮುದಾಯದ ಮೂಲಕ ಪರಿಶೀಲನೆ ಮಾಡಿಸುವುದಕ್ಕೆ ಸಿದ್ಧವಾಗಿರುತ್ತದೆ. ಭಾಷಾಂತರ ಮಾಡುವ ಭಾಷೆಯಲ್ಲಿ ಸ್ಪಷ್ಟವಾಗಿ ಮತ್ತು ಸ್ವಾಭಾವಿಕವಾಗಿರುವಂತೆ ಸಮುದಾಯವು ಅನುವಾದ ತಂಡಕ್ಕೆ ಸಹಾಯ ಮಾಡುತ್ತಾರೆ. ಇದನ್ನು ಮಾಡುವುದಕ್ಕೆ, ಅನುವಾದ ವರ್ಗದವರು ಸಮುದಾಯದ ಪರಿಶೀಲನೆಯ ವಿಧಾನದಲ್ಲಿ ತರಬೇತಿ ಹೊಂದಿದ ಜನರನ್ನು ಆಯ್ಕೆ ಮಾಡಿಕೊಳ್ಳಬೇಕು. ಅನುವಾದ ಮಾಡಿದ ಜನರೇ ಇಲ್ಲಿಯೂ ಕೆಲಸ ಮಾಡಬಹುದು.

ಈ ಜನರು ಸಮುದಾಯವಿರುವ ಪ್ರತಿಯೊಂದು ಕಡೆಗೆ ಹೋಗಿ, ಮತ್ತು ಭಾಷೆಯ ಸಮುದಾಯದಲ್ಲಿರುವ ಸದಸ್ಯರೊಂದಿಗೆ ಅನುವಾದವನ್ನು ಪರಿಶೀಲನೆ ಮಾಡುತ್ತಾರೆ. ಈ ಪರಿಶೀಲನೆಯನ್ನು ಅನೇಕರ ಜೊತೆಯಲ್ಲಿ ಅಂದರೆ ಯೌವನಸ್ಥರು, ವೃದ್ಧರು, ಸ್ತ್ರೀ ಪುರುಷರು ಮತ್ತು ಆ ಭಾಷೆಯ ಪ್ರಾಂತ್ಯದಲ್ಲಿನ ಅನೇಕ ವಿಭಾಗಗಳಲ್ಲಿನ ಪ್ರಸಂಗಿಗಳು ಮತ್ತು ಇನ್ನೂ ಅನೇಕರಿಂದ ಮಾಡಿಸಿದರೆ ಇನ್ನೂ ಒಳ್ಳೇಯದು, ಇದರ ಮೂಲಕ ಆ ಅನುವಾದವು ಎಲ್ಲರು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯಕವಾಗುವುದು.

ಅನುವಾದದ ಸ್ಪಷ್ಟತೆಗಾಗಿ ಮತ್ತು ಸ್ವಾಭಾವಿಕತೆಗಾಗಿ ಪರಿಶೀಲನೆ ಮಾಡುವುದಕ್ಕೆ, ಅದನ್ನು ಮೂಲ ಭಾಷೆಗೆ ಹೋಲಿಸಿ ನೋಡಿದರೆ ಯಾವ ಪ್ರಯೋಜನವೂ ಇರುವುದಿಲ್ಲ. ಸಮುದಾಯದೊಂದಿಗೆ ಮಾಡುವ ಈ ಪರಿಶೀಲನೆಗಳಲ್ಲಿ, ಯಾರೂ ಕೂಡ ಮೂಲ ಭಾಷೆಯ ಬೈಬಲನ್ನು ನೋಡಬಾರದು. ಜನರು ಸಹಜವಾಗಿ ನಿಖರತೆಗಾಗಿ ಪರಿಶೀಲನೆ ಮಾಡುವಂತೆ ಇತರ ಪರಿಶೀಲನೆಗಳಿಗಾಗಿಯೂ ಮೂಲ ಭಾಷೆಯ ಬೈಬಲನ್ನು ನೋಡುತ್ತಾರೆ, ಆದರೆ ಈ ಪರಿಶೀಲನೆಗಳ ಸಮಯದಲ್ಲಿ ಅದನ್ನು ನೋಡುವುದಿಲ್ಲ .

ಸ್ವಾಭಾವಿಕತೆಗಾಗಿ ಪರಿಶೀಲನೆ ಮಾಡುವುದಕ್ಕೆ, ಭಾಷೆಯ ಸಮುದಾಯದ ಸದಸ್ಯರಿಗೆ ವಾಕ್ಯ ಭಾಗವನ್ನು ಕೇಳಿಸಬಹುದು ಅಥವಾ ಅದನ್ನು ನೀವು ಓದಿಸಲೂ ಬಹುದು. ನೀವು ಆ ಅನುವಾದವನ್ನು ಕೇಳಿಸುವುದಕ್ಕೆ ಮುಂಚಿತವಾಗಿ ಅಥವಾ ಓದುವುದಕ್ಕೆ ಮುಂಚಿತವಾಗಿ, ಅವರ ಭಾಷೆಯಲ್ಲಿ ಸ್ವಾಭಾವಿಕವಾಗಿರದವುಗಳನ್ನು ಅವರು ಒಂದುವೇಳೆ ಕೇಳಿಸಿಕೊಂಡರೆ ಅವರು ನಿಮ್ಮನ್ನು ನಿಲ್ಲಿಸಬೇಕೆಂದು ಕೇಳುವ ಜನರಿಗೆ ಹೇಳಿರಿ. [ಸ್ವಾಭಾವಿಕತೆಗಾಗಿ ಅನುವಾದವನ್ನು ಹೇಗೆ ಪರಿಶೀಲನೆ ಮಾಡಬೇಕು ಎನ್ನುವದರ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ, [ಸ್ವಾಭಾವಿಕ ಅನುವಾದ] (…/natural/01.md) ನೋಡಿರಿ.] ಅವರು ನಿಮ್ಮನ್ನು ನಿಲ್ಲಿಸಿದಾಗ, ಯಾವುದು ಸ್ವಾಭಾವಿಕವಲ್ಲ ಎನ್ನುವುದನ್ನು ಅವರಿಗೆ ಕೇಳಿರಿ, ಮತ್ತು ಅವರು ಹೇಳುವ ಮಾತುಗಳನ್ನು ಗುರುತಿಸಿಕೊಂಡು, ಅವುಗಳನ್ನು ಇನ್ನೂ ಸ್ವಾಭಾವಿಕವಾಗಿ ಮಾಡಲು ಪ್ರಯತ್ನಿಸಿ ಅವರು ಕೊಡುವ ಉತ್ತರವನ್ನು ದಾಖಲು ಮಾಡಿಕೊಳ್ಳಿರಿ ಅಥವಾ ಆ ಪದ ಅಥವಾ ಮಾತನ್ನು ವಾಕ್ಯ ಮತ್ತು ಅಧ್ಯಾಯದ ಸಮೇತವಾಗಿ ಬರೆದುಕೊಳ್ಳಿರಿ. ಇದರಿಂದ ಅನುವಾದ ತಂಡವು ಅನುವಾದದಲ್ಲಿರುವ ಮಾತನ್ನು ಅಥವಾ ಪದವನ್ನು ಅವರ ವಿಧಾನದಲ್ಲಿ ಉಪಯೋಗಿಸುವುದನ್ನು ಪರಿಗಣಿಸಬೇಕು.

ಸ್ಪಷ್ಟತೆಗಾಗಿ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ, ಪ್ರತಿಯೊಂದು * ಬೈಬಲ್ ಕಥೆಗಾಗಿ * ಮತ್ತು ನೀವು ಉಪಯೋಗಿಸುವಂತಹ ಪ್ರತಿಯೊಂದು ಬೈಬಲ್ ಅಧ್ಯಾಯಕ್ಕಾಗಿ ಪ್ರಶ್ನೋತ್ತರಗಳ ಪಟ್ಟಿ ಒಂದಿದೆ. ಭಾಷೆಯ ಸಮುದಾಯದವರು ಆ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಗಳನ್ನು ಕೊಡುವಾಗ, ಆ ಅನುವಾದವು ತುಂಬಾ ಸ್ಪಷ್ಟವಾಗಿದೆಯೆಂದು ನೀವು ತಿಳಿದುಕೊಳ್ಳುವಿರಿ. (See http://ufw.io/tq/ for the questions.)

ಈ ಪ್ರಶ್ನೆಗಳನ್ನು ಉಪಯೋಗಿಸುವುದಕ್ಕೆ, ಈ ಕೆಳಗಿನ ಹಂತಗಳನ್ನು ಅನುಸರಿಸಿರಿ :

  1. ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಭಾಷೆಯ ಅನುವಾದದ ಇಬ್ಬರು ಅಥವಾ ಮೂವರ ಸದಸ್ಯರಿಗೆ ಅನುವಾದ ವಾಕ್ಯಭಾಗವನ್ನು ಓದಿ ಕೇಳಿಸಿರಿ. ಭಾಷೆಯ ಸಮುದಾಯದ ಈ ಸದಸ್ಯರು ಮುಂಚಿತವಾಗಿ ಅನುವಾದ ಮಾಡುವುದರಲ್ಲಿ ಭಾಗವಹಿಸಿಬಾರದು. ಮತ್ತೊಂದು ಮಾತಿನಲ್ಲಿ ಹೇಳಬೇಕಾದರೆ, ಪ್ರಶ್ನೆಗಳನ್ನು ಕೇಳಿಸಿಕೊಂಡ ಸಮುದಾಯದ ಸದಸ್ಯರು ಮುಂಚಿತವಾಗಿ ಬೈಬಲ್ ಜ್ಞಾನವನ್ನು ಪಡೆದಿರುವವರಾಗಿರಬಾರದು ಅಥವಾ ಅನುವಾದದ ಕೆಲಸದಲ್ಲಿದ್ದು ಪ್ರಶ್ನೆಗಳಿಗೆ ಉತ್ತರಗಳನ್ನು ಮುಂಚಿತವಾಗಿ ತಿಳಿದುಕೊಂಡಿರುವವರಾಗಿರಬಾರದು. ಬೈಬಲ್ ವಾಕ್ಯಭಾಗವನ್ನು ಅಥವಾ ಬೈಬಲ್ ಕಥೆಯ ಅನುವಾದವನ್ನು ಓದುವುದರಿಂದ ಅಥವಾ ಕೇಳುವುದರಿಂದ ಮಾತ್ರವೇ ಅವರು ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡಬೇಕೆಂದು ನಮ್ಮ ಬಯಕೆ. ಹೀಗೆ ಮಾಡುವುದರಿಂದಲೇ ನಾವು ಅನುವಾದವು ಸ್ಪಷ್ಟವಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುತ್ತೇವೆ. ಈ ಕಾರಣಕ್ಕಾಗಿಯೇ, ಸಮುದಾಯದ ಸದಸ್ಯರು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವಾಗ ಸತ್ಯವೇದವನ್ನು ನೋಡಬಾರದು.

  2. ವಾಕ್ಯಭಾಗಕ್ಕಾಗಿ ಕೆಲವೊಂದು ಪ್ರಶ್ನೆಗಳನ್ನು ಸಮುದಾಯದ ಸದಸ್ಯರಿಗೆ ಕೇಳಿರಿ. ಒಂದುಬಾರಿ ಒಂದು ಪ್ರಶ್ನೆಯನ್ನು ಕೇಳಿರಿ. ಸಮುದಾಯದ ಸದಸ್ಯರು ಅನುವಾದವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದರೆ ಒಂದು ವಾಕ್ಯಭಾಗಕ್ಕಾಗಿ ಅಥವಾ ಒಂದೊಂದು ಕಥೆಗಾಗಿ ಎಲ್ಲಾ ಪ್ರಶ್ನೆಗಳನ್ನು ಉಪಯೋಗಿಸಬೇಕಾದ ಅವಶ್ಯಕತೆಯಿಲ್ಲ.

  3. ಪ್ರತಿಯೊಂದು ಪ್ರಶ್ನೆಯನ್ನು ಕೇಳಿದನಂತರ, ಭಾಷೆಯ ಸಮುದಾಯದ ಸದಸ್ಯನು ಉತ್ತರ ಕೊಡುವನು. ಆ ವ್ಯಕ್ತಿ ಕೇವಲ “ಹೌದು” ಅಥವಾ “ಇಲ್ಲ” ಎಂದು ಉತ್ತರ ಕೊಡುವುದಾದರೆ, ಪ್ರಶ್ನೆ ಕೇಳುವವರು ಇನ್ನೊಂದು ಪ್ರಶ್ನೆಯನ್ನು ಕೇಳಬೇಕು, ಇದರಿಂದ ಆತನು ಅನುವಾದವನ್ನು ಚೆನ್ನಾಗಿ ಮಾಡಿದ್ದಾರೆಂದು ನಿಶ್ಚಯಿಸಿಕೊಳ್ಳುವನು. ಕೇಳಬೇಕಾದ ಇನ್ನೊಂದು ಪ್ರಶ್ನೆ ಹೇಗಿರಬೇಕೆಂದರೆ, “ಅದರ ಕುರಿತಾಗಿ ನಿಮಗೆ ಹೇಗೆ ಗೊತ್ತು?” ಅಥವಾ “ಅನುವಾದದಲ್ಲಿನ ಯಾವ ಭಾಗವು ಅದನ್ನು ನಿಮಗೆ ಹೇಳುತ್ತದೆ?” ಎಂದು ಅವರಿಗೆ ಪ್ರಶ್ನಿಸಬೇಕು.

  4. ಆ ವ್ಯಕ್ತಿ ಕೊಡುವ ಉತ್ತರವನ್ನು ಬೈಬಲ್ ವಾಕ್ಯ ಮತ್ತು ಅಧ್ಯಾಯದೊಂದಿಗೆ ಬರೆದಿಟ್ಟುಕೊಳ್ಳಿರಿ ಅಥವಾ ನೀವು ಮಾತನಾಡುವ “ಓಪನ್ ಬೈಬಲ್ ಕಥೆಗಳು” ಸಂಖ್ಯೆಯನ್ನು ಮತ್ತು ಕಥೆಯನ್ನು ಬರೆದಿಟ್ಟುಕೊಳ್ಳಿರಿ ಅಥವಾ ಅದನ್ನು ರಿಕಾರ್ಡ್ ಮಾಡಿಟ್ಟುಕೊಳ್ಳಿರಿ. ಪ್ರಶ್ನೆಗಾಗಿ ಕೊಡಲ್ಪಟ್ಟಿರುವ ಉತ್ತರದೊಂದಿಗೆ ಆ ವ್ಯಕ್ತಿ ಹೇಳುವಂಥ ಉತ್ತರವು ಸರಿಯಾಗಿದ್ದಾರೆ, ಆ ವಿಷಯದಲ್ಲಿ ಅನುವಾದವು ಸರಿಯಾದ ಮಾಹಿತಿಯನ್ನು ಹೊಂದಿರುತ್ತದೆಯೆಂದು ಅರ್ಥ. ಸರಿಯಾದ ಉತ್ತರವಾಗಿ ಕೊಡಲ್ಪಟ್ಟಿರುವ ಉತ್ತರದೊಂದಿಗೆ ಆ ವ್ಯಕ್ತಿ ಹೇಳುವ ಉತ್ತರವು ಸರಿಯಾಗಿ ಇಲ್ಲದಿದ್ದಲ್ಲಿ, ಅದು ಪ್ರಾಥಮಿಕವಾಗಿ ಒಂದೇ ಮಾಹಿತಿಯನ್ನು ಕೊಡಬೇಕಾಗಿರುತ್ತದೆ. ಕೆಲವೊಂದುಬಾರಿ ಕೊಡಲ್ಪಟ್ಟಿರುವ ಉತ್ತರವು ದೊಡ್ಡದಾಗಿರಬಹುದು . ಆ ವ್ಯಕ್ತಿ ಕೊಡುವ ಉತ್ತರವು ಕೊಡಲ್ಪಟ್ಟಿರುವ ಉತ್ತರದಲ್ಲಿ ಒಂದು ಭಾಗವನ್ನೇ ಹೇಳಿರುವದಾದರೆ, ಅದು ಕೂಡ ಸರಿಯಾದ ಉತ್ತರವೇ.

  5. ಕೊಡಲ್ಪಟ್ಟಿರುವ ಉತ್ತರಗಿಂತ ಆ ವ್ಯಕ್ತಿ ಕೊಡುವ ಉತ್ತರವು ಬೇರೆಯಾಗಿದ್ದಾರೆ ಅಥವಾ ವಿಭಿನ್ನವಾಗಿದ್ದರೆ, ಅಥವಾ ಆ ವ್ಯಕ್ತಿ ಪ್ರಶ್ನೆಗೆ ಉತ್ತರವನ್ನು ಕೊಡದೇ ಇದ್ದರೆ, ಆ ಮಾಹಿತಿಯನ್ನು ಸರಿಯಾಗಿ ತಿದ್ದುಪಡಿಸುವುದಕ್ಕೆ ಅನುವಾದ ತಂಡವು ಅನುವಾದದ ಭಾಗವನ್ನು ತಿರುಗಿ ಪರಿಶೀಲನೆ ಮಾಡಬೇಕು. ಇದರಿಂದ ಮಾಹಿತಿಯು ಇನ್ನೂ ಹೆಚ್ಚಾಗಿ ಸ್ಪಷ್ಟವಾಗಿ ಮಾಡುವುದಕ್ಕೆ ಸಾಧ್ಯವಾಗುವುದು.

  6. ಭಾಷೆಯ ಸಮುದಾಯದಲ್ಲಿರುವ ಪ್ರತಿಯೊಬ್ಬರೊಂದಿಗೆ, ಸಾಧ್ಯವಾದರೆ ಯೌವನಸ್ಥರೊಂದಿಗೆ, ಸ್ತ್ರೀ ಪುರುಷರೊಂದಿಗೆ ಮತ್ತು ವೃದ್ಧರೊಂದಿಗೆ ಮತ್ತು ಭಾಷೆಯ ಸಮುದಾಯದ ವಿವಿಧ ಪ್ರಾಂತ್ಯಗಳೊಂದಿಗೆ ಅದೇ ಪ್ರಶ್ನೆಗಳನ್ನು ಕೇಳುವುದನ್ನು ಮರೆಯಬೇಡಿರಿ, ಅದೇ ಪ್ರಶ್ನೆಗಳಿಗೆ ಅನೇಕಮಂದಿ ಉತ್ತರವನ್ನು ಕೊಡುವುದಕ್ಕೆ ಕಷ್ಟಪಡುತ್ತಿದ್ದರೆ, ಬಹುಶಃ ಅನುವಾದದಆ ವಾಕ್ಯಭಾಗದಲ್ಲಿ ಸಮಸ್ಯೆ ಇದ್ದಿರಬಹುದು. ಆ ಜನರಿಗೆ ಕಷ್ಟವಾಗಿರುವ ಅಥವಾ ಸರಿಯಾಗಿ ಅರ್ಥವಾಗದಿರುವ ಭಾಗಗಳನ್ನು ಗುರುತಿಸಿಕೊಂಡಿರಿ, ಇದರಿಂದ ಅನುವಾದ ತಂಡದವರು ಆ ಭಾಗವನ್ನು ಸರಿಯಾಗಿ ತಿದ್ದುಪಡಿ ಮಾಡಿ, ಅದನ್ನು ಇನ್ನೂ ಹೆಚ್ಚಾದ ಸ್ಪಷ್ಟತೆಗೆ ತರುವರು.

  7. ವಾಕ್ಯಭಾಗದ ಅನುವಾದವನ್ನು ಅನುವಾದ ತಂಡವು ತಿದ್ದುಪಡಿಸಿದನಂತರ, ಆ ವಾಕ್ಯಭಾಗಕ್ಕಾಗಿ ಅದೇ ಪ್ರಶ್ನೆಗಳನ್ನು ಇತರ ಸದಸ್ಯರೊಂದಿಗೆ ಕೇಳಿರಿ. ಅಂದರೆ ಮುಂಚಿತವಾಗಿ ಆ ವಾಕ್ಯಭಾಗದ ಪರಿಶೀಲನೆಯಲ್ಲಿ ಭಾಗವಹಿಸದವರೊಂದಿಗೆ ಆ ಪ್ರಶ್ನೆಗಳನ್ನು ಕೇಳಿರಿ. ಅವರು ಆ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವುದಾದರೆ, ಆ ವಾಕ್ಯಭಾಗದ ಅನುವಾದವು ಈಗ ಸರಿಯಾಗಿದೆ ಎಂದರ್ಥ.

  8. ಭಾಷೆಯ ಸದಸ್ಯರು ಆ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಕೊಡುವವರೆಗೂ, ಅನುವಾದವು ಸರಿಯಾದ ಮಾಹಿತಿಯನ್ನು ಸ್ಪಷ್ಟವಾಗಿ ಹೇಳುತ್ತಿದೆಯೆಂದು ತೋರಿಸುವವರೆಗೂ ಬೈಬಲ್ ಅಧ್ಯಾಯವನ್ನು ಅಥವಾ ಬೈಬಲ್ ಪ್ರತಿಯೊಂದು ಕಥೆಯನ್ನು ಈ ವಿಧಾನದೊಂದಿಗೆ ಪುನರಾವರ್ತನೆ ಮಾಡಿರಿ. ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಡುವುದಕ್ಕೆ ಮುಂಚಿತವಾಗಿ ಅನುವಾದವನ್ನು ಭಾಷೆಯ ಸಮುದಾಯದ ಸದಸ್ಯರು ಕೇಳದೆ ಇರುವಾಗ ಸಭೆಯ ನಾಯಕರ ನಿಖರತೆಯ ಪರಿಶೀಲನೆಗೆ ಅನುವಾದವು ಸಿದ್ಧವಾಗಿರುತ್ತದೆ.

  9. ಸಮುದಾಯ ಮೌಲ್ಯಮಾಪನ ಪುಟಕ್ಕೆ ಹೋಗಿರಿ ಮತ್ತು ಅಲ್ಲಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡಿರಿ. ([ಭಾಷೆಯ ಸಮುದಾಯ ಮೌಲ್ಯಮಾಪನ ಪ್ರಶ್ನೆಗಳು] (…/community-evaluation/01.md)) ನೋಡಿರಿ.)

ಸ್ಪಷ್ಟವಾದ ಅನುವಾದವನ್ನು ಮಾಡುವುದರ ಕುರಿತಾಗಿ ಇನ್ನೂ ಹೆಚ್ಚಾದ ಮಾಹಿತಿಗಾಗಿ, [ಸ್ಪಷ್ಟತೆ] ಯನ್ನು ನೋಡಿರಿ (…/clear/01.md). ಸಮುದಾಯದೊಂದಿಗೆ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ನೀವು ಉಪಯೋಗಿಸುವ ಅನುವಾದ ಪ್ರಶ್ನೆಗಳಿಗಿಂತ ಇತರ ವಿಧಾನಗಳು ಇವೆ. ಇನ್ನಿತರ ವಿಧಾನಗಳಿಗೋಸ್ಕರ, [ಇತರ ವಿಧಾನಗಳು] ನೋಡಿರಿ (…/other-methods/01.md).


ಮೌಖಿಕ ಪಾಲುದಾರ ಪರಿಶೀಲನೆ

Checking Manual :: ಮೌಖಿಕ ಪಾಲುದಾರ ಪರಿಶೀಲನೆ

ಮೌಖಿಕ ಪಾಲುದಾರ ಪರಿಶೀಲನೆ ಮಾಡುವುದು ಹೇಗೆ

ಈ ಸಮಯದಲ್ಲಿ, ಮೊದಲನೆಯ ರಚನೆ ಎಂದು ಕರೆಯಲ್ಪಡುವ ಘಟಕದಲ್ಲಿ ಕೊಡಲ್ಪಟ್ಟಿರುವ ನಿಯಮಗಳನ್ನು ಅನುಸರಿಸಿ ನಿಮ್ಮ ಅನುವಾದದಲ್ಲಿ ಕನಿಷ್ಠ ಮೊದಲನೆಯ ಅಧ್ಯಾಯವನ್ನಾದರೂ ನೀವು ಈಗಾಗಲೇ ಪೂರ್ತಿಮಾಡಿರಬಹುದು. ಅದನ್ನು ಪರಿಶೀಲಿಸಲು, ಅದರಲ್ಲಿ ಯಾವುದಾದರು ತಪ್ಪುಗಳು ಅಥವಾ ಸಮಸ್ಯೆಗಳು ಇಲ್ಲದ ಹಾಗೆ ಮತ್ತು ಅದನ್ನು ಅತ್ಯುತ್ತಮವಾಗಿ ಮಾಡಲು ಈ ಹಂತದಲ್ಲಿ ನಿಮಗೆ ಬೇರೆಯವರ ಸಹಾಯ ಬೇಕಾಗಿರುತ್ತದೆ. ಅನುವಾದಕರು ಅಥವಾ ಅನುವಾದದ ತಂಡದವರು ಪರಿಶುದ್ಧ ಗ್ರಂಥದಲ್ಲಿ ಹೆಚ್ಚಿನ ಕಥೆಗಳು ಅಥವಾ ಅಧ್ಯಾಯಗಳು ಅನುವಾದ ಮಾಡುವುದಕ್ಕೆ ಮುಂಚೆಯೇ ಅವರ ಅನುವಾದವನ್ನು ಪರಿಶೀಲಿಸಬೇಕು, ಅದರಿಂದ ಅನುವಾದ ಕ್ರಮದಲ್ಲಿ ಅವರ ತಪ್ಪುಗಳನ್ನು ಆದಷ್ಟು ಬೇಗನೆ ಅವರು ತಿಳಿದುಕೊಂಡು ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳುವರು. ಅನುವಾದ ಮುಗಿಸುವುದಕ್ಕೆ ಮುಂಚೆ ಈ ಕ್ರಮದ ಅನೇಕ ಹಂತಗಳನ್ನು ಹಲವಬಾರಿ ಮಾಡುವ ಅಗತ್ಯತೆ ಇರಬಹುದು. ಮೌಖಿಕ ಪಾಲುದಾರ ಪರಿಶೀಲನೆ ಮಾಡುವುದಕ್ಕೆ ಈ ಕೆಳಕಂಡ ಹಂತಗಳನ್ನು ಅವಲಂಬಿಸಿ.

  • ಈ ವಾಕ್ಯ ಭಾಗದ ಕೆಲಸವನ್ನು ಮಾಡದ ನಿಮ್ಮ ಪಾಲುದಾರನಿಗೆ (ಅನುವಾದದ ತಂಡದಲ್ಲಿರುವ ಒಬ್ಬರು) ನಿಮ್ಮ ಅನುವಾದವನ್ನು ಓದಿ ಕೇಳಿಸಿರಿ.
  • (ಮೂಲ ಭಾಷೆಯ ಪ್ರತಿಯನ್ನು ನೋಡದೆ) ಮೊದಲು ಸಹಜತ್ವಕ್ಕಾಗಿ ನಿಮ್ಮ ಪಾಲುದಾರನು ಕೇಳಬೇಕು ಮತ್ತು ನಿಮ್ಮ ಭಾಷೆಯಲ್ಲಿ ಯಾವ ಭಾಗಗಳು ಸಹಜವಾಗಿಲ್ಲವೋ ಎಂದು ನಿಮಗೆ ಹೇಳಬೇಕು. ನೀವಿಬ್ಬರು ಸೇರಿ ನಿಮ್ಮ ಭಾಷೆಯಲ್ಲಿ ಅದನ್ನು ಹೇಗೆ ಸಹಜವಾಗಿ ಹೇಳಬಹುದೆಂದು ಆಲೋಚಿಸಬೇಕು.
  • ನಿಮ್ಮ ಅನುವಾದದಲ್ಲಿ ಸ್ವಾಭಾವಿಕತೆ ಇಲ್ಲದ ಭಾಗಗಳನ್ನು ಇನ್ನು ಸ್ವಾಭಾವಿಕವಾಗಿ ಬದಲಾಯಿಸಲು ಆ ಆಲೋಚನೆಗಳನ್ನು ಉಪಯೋಗಿಸಿ. ಹೆಚ್ಚಿನ ಮಾಹಿತಿಗಾಗಿ, ಸಹಜತ್ವ ನೋಡಿರಿ.
  • ನಿಮ್ಮ ಪಾಲುದಾರನಿಗೆ ಮತ್ತೊಮ್ಮೆ ಆ ಭಾಗವನ್ನು ಓದಿ ಕೇಳಿಸಿರಿ. ಈ ಬಾರಿ, ಪಾಲುದಾರನು ಮೂಲ ಪ್ರತಿಯನ್ನು ನೋಡುತ್ತಾ ಹಾಗೂ ಅನುವಾದವನ್ನು ಕೇಳುತ್ತ ನಿಖರತೆಯನ್ನು ಪರಿಶೀಲಿಸಬೇಕು. ಮೂಲ ಕಥೆ ಅಥವಾ ಪರಿಶುದ್ಧ ಗ್ರಂಥದ ಭಾಗದ ಅರ್ಥವನ್ನು ಅನುವಾದ ನಿಖರವಾಗಿ ತಿಳಿಯಪಡಿಸುತ್ತಿದೆ ಎಂದು ನಿಶ್ಚಯವಾಗಿರುವುದು ಈ ಹಂತದ ಉದ್ದೇಶ್ಯವಾಗಿದೆ.
  • ಮೂಲ ಪ್ರತಿಯನ್ನು ಹೋಲಿಸುತ್ತ ಯಾವುದಾದರು ಸೇರಿಸಲ್ಪಟ್ಟಿದ್ದರೆ, ತೆಗೆದುಹಾಕಲ್ಪಟ್ಟಿದ್ದರೆ ಅಥವಾ ಬದಲಾಯಿಸಿ ಹೇಳಲ್ಪಟ್ಟಿದ್ದರೆ ಅದನ್ನು ನಿಮ್ಮ ಪಾಲುದಾರನು ನಿಮಗೆ ಹೇಳಬಹುದು.
  • ಅನುವಾದದ ಆ ಭಾಗವನ್ನು ಸರಿಪಡಿಸಿ.
  • ಅನುವಾದ ತಂಡದಲ್ಲಿರದ ಸಮುದಾಯದ ಬೇರೆ ಸದಸ್ಯರೊಂದಿಗೆ ನಿಖರತೆಗಾಗಿ ಪರಿಶೀಲನೆ ಮಾಡುವುದು ಸಹ ಸಹಾಯಕರವಾಗಿರುತ್ತದೆ. ಅನುವಾದದ ಭಾಷೆಯನ್ನು ಮಾತಾಡುವವರಾಗಿರಬೇಕು, ಸಮುದಾಯದಲ್ಲಿ ಗೌರವಿಸಲ್ಪಟ್ಟಿರಬೇಕು ಮತ್ತು ಸಾದ್ಯವಾದರೆ, ಮೂಲ ಭಾಷೆಯಲ್ಲಿ ಸತ್ಯವೇದವನ್ನು ಅರಿತಿರಬೇಕು. ಸತ್ಯವೇದದ ವಾಕ್ಯ ಭಾಗಗಳು ಅಥವಾ ಕಥೆಗಳ ಅರ್ಥವನ್ನು ಅನುವಾದ ಮಾಡುವುದಕ್ಕೆ ಅತ್ಯುತ್ತಮವಾದ ಮಾರ್ಗವನ್ನು ಆಲೋಚಿಸಲು ಈ ಪರಿಶೀಲಕರು ಅನುವಾದ ತಂಡದವರಿಗೆ ಸಹಾಯಕರವಾಗಿರುತ್ತಾರೆ. ಒಬ್ಬರಿಗಿಂತ ಹೆಚ್ಚಿನ ಜನ ಸತ್ಯವೇದದ ಭಾಗವನ್ನು ಈ ವಿಧವಾಗಿ ಪರಿಶೀಲಿಸುವುದು ಸಹಾಯಕರವಾಗಿರುತ್ತದೆ, ಯಾಕಂದರೆ ಬೇರೆ ಬೇರೆ ಪರಿಶೀಲಕರು ಬೇರೆ ಬೇರೆ ಅಂಶಗಳನ್ನು ಗಮನಿಸುತ್ತಾರೆ.
  • ನಿಖರತೆಗಾಗಿ ಪರಿಶೀಲಿಸುವುದನ್ನು ಕುರಿತು ಹೆಚ್ಚಿನ ಮಾಹಿತಿಗಾಗಿ, ನಿಖರತೆಗಾಗಿ-ಪರಿಶೀಲನೆ ನೋಡಿರಿ.
  • ನಿಮಗೆ ಯಾವುದಾದರು ಅಂಶದಲ್ಲಿ ನಿಶ್ಚಯತೆ ಇಲ್ಲದಿದ್ದರೆ, ಅನುವಾದ ತಂಡದ ಬೇರೆ ಸದಸ್ಯರನ್ನು ಕೇಳಿರಿ.

ವಿಭಾಗದ ಶೀರ್ಷಿಕೆಗಳು

Checking Manual :: ವಿಭಾಗದ ಶೀರ್ಷಿಕೆಗಳು

ವಿಭಾಗದ ಶೀರ್ಷಿಕೆಗಳು

ಅನುವಾದ ತಂಡವು ಮಾಡಬೇಕಾದ ಅನೇಕ ನಿರ್ಣಯಗಳಲ್ಲಿ ಒಂದು ನಿರ್ಣಯ ಏನೆಂದರೆ ವಿಭಾಗದ ಶೀರ್ಷಿಕೆಗಳನ್ನು ಉಪಯೋಗಿಸಬೇಕೋ ಇಲ್ಲವೋ ಎಂಬುದು . ವಿಭಾಗದ ಶೀರ್ಷಿಕೆಗಳು ಹೊಸ ವಿಷಯದೊಂದಿಗೆ ಆರಂಭವಾಗುವ ಬೈಬಲಿನ ಪ್ರತಿಯೊಂದು ಭಾಗಕ್ಕೂ ಕೊಡುವ ಶೀರ್ಷಿಕೆಯಾಗಿರುತ್ತದೆ. ವಿಭಾಗದ ಶೀರ್ಷಿಕೆಯ ಮೂಲಕ ಆ ಭಾಗದಲ್ಲಿ ಏನಿದೆಯೆಂದು ಜನರು ತುಂಬಾ ಸುಲಭವಾಗಿ ತಿಳಿದುಕೊಳ್ಳುತ್ತಾರೆ. ಕೆಲವೊಂದು ಬೈಬಲ್ ಅನುವಾದಗಳು ಅವುಗಳನ್ನು ಉಪಯೋಗಿಸುತ್ತಾರೆ, ಕೆಲವೊಂದು ಅನುವಾದಗಳು ಉಪಯೋಗಿಸುವುದಿಲ್ಲ. ಹೆಚ್ಚಿನ ಜನರು ಉಪಯೋಗಿಸುವ ರಾಷ್ಟ್ರೀಯ ಭಾಷೆಯಲ್ಲಿ ಬೈಬಲನ್ನು ಅನುಸರಿಸುವುದಕ್ಕೆ ನೀವು ಬಯಸುತ್ತಿರಬಹುದು. ಆದರೆ ಭಾಷೆಯ ಸಮುದಾಯದ ಜನರು ಯಾವ ಅನುವಾದವನ್ನು ಉಪಯೋಗಿಸಬೇಕೆಂದು ಬಯಸುತ್ತಿದ್ದಾರೆನ್ನುವದನ್ನು ನೀವು ಕಂಡುಹಿಡಿಯಬೇಕಾದ ಅವಶ್ಯಕತೆ ಇದೆ.

ವಿಭಾಗದ ಶೀರ್ಷಿಕೆಗಳನ್ನು ಉಪಯೋಗಿಸುವುದೆನ್ನುವುದು ಹೆಚ್ಚಿನ ಕೆಲಸವನ್ನು ತೆಗೆದುಕೊಳ್ಳುತ್ತದೆ, ಯಾಕಂದರೆ ನೀವು ಪ್ರತಿಯೊಂದು ಹೆಸರನ್ನು ಬೈಬಲ್ ವಾಕ್ಯಭಾಗದೊಂದಿಗೆ ಬರೆಯಬೇಕು ಅಥವಾ ಅನುವಾದ ಮಾಡಬೇಕು. ಇದರಿಂದ ನಿಮ್ಮ ಬೈಬಲ್ ಅನುವಾದವು ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳುವ ಅವಶ್ಯಕತೆ ಇರುತ್ತದೆ. ಆದರೆ ವಿಭಾಗದ ಶೀರ್ಷಿಕೆಗಳು ನಿಮ್ಮ ಓದುಗರಿಗೆ ತುಂಬಾ ಸಹಾಯಕವಾಗಿರುತ್ತವೆ. ವಿಭಾಗಗಳ ಶೀರ್ಷಿಕೆಗಳು ಸುಲಭವಾಗಿ ಬೈಬಲ್ ಮಾತನಾಡುವ ವಿವಿಧ ವಿಷಯಗಳನ್ನು ಕಂಡುಕೊಳ್ಳುವುದಕ್ಕೆ ಸಹಾಯಕವಾಗುವವು. ಒಬ್ಬ ವ್ಯಕ್ತಿ ಯಾವುದರೊಂದರ ವಿಷಯದ ಕುರಿತಾಗಿ ಬೈಬಲಿನಲ್ಲಿ ಹುಡುಕುತ್ತಿದ್ದರೆ, ಆತನಿಗೆ ಬೇಕಾದ ವಿಷಯವು ಸಿಗುವವರೆಗೂ ಆತನು ವಿಭಾಗದ ಶೀರ್ಷಿಕೆಗಳನ್ನು ಓದಿ ಮುಂದಕ್ಕೆ ಸಾಗುತ್ತಾ ಹೋಗಬಹುದು. ಆದರ ನಂತರ ಆತನು ವಿಭಾಗದ ಹೆಸರನ್ನು ಓದಬಹುದು.

ನೀವು ವಿಭಾಗದ ಶೀರ್ಷಿಕೆಗಳನ್ನು ಉಪಯೋಗಿಸುವುದಕ್ಕೆ ನಿರ್ಣಯಿಸಿಕೊಂಡರೆ, ಆಗ ನೀವು ಯಾವರೀತಿ ಉಪಯೋಗಿಸಬೇಕೆಂದು ನಿರ್ಣಯಿಸಿಕೊಳ್ಳಬೇಕಾಗಿರುತ್ತದೆ. ಆದ ಮೇಲೆ, ಭಾಷೆಯ ಸಮುದಾಯದ ಜನರು ಯಾವ ರೀತಿಯ ವಿಭಾಗದ ಶೀರ್ಷಿಕೆಗಳನ್ನು ಉಪಯೋಗಿಸುವರೆಂದು ನೀವು ಕಂಡುಕೊಳ್ಳಬೇಕಾಗಿರುತ್ತದೆ, ಮತ್ತು ನೀವು ಜಾತೀಯ ಭಾಷೆಯ ವಿಭಾಗದ ಹೆಸರನ್ನು ಅನುಸರಿಸಲು ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತದೆ. ಪರಿಚಯಿಸಲ್ಪಟ್ಟ ವಾಕ್ಯಭಾಗವಲ್ಲದೇ ಜನರು ಚೆನ್ನಾಗಿ ಅರ್ಥಮಾಡಿಕೊಳ್ಳುವ ವಿಭಾಗದ ಹೆಸರನ್ನು ಉಪಯೋಗಿಸಲು ನಿರ್ಣಯಿಸಿಕೊಳ್ಳಲು ನಿಶ್ಚಯಿಸಿಕೊಳ್ಳಿರಿ. ವಿಭಾಗದ ಶೀರ್ಷಿಕೆ ವಾಕ್ಯಭಾಗದಲ್ಲಿರಬಾರದು. ಇದು ಕೇವಲ ವಿವಿಧವಾದ ವಾಕ್ಯಭಾಗಗಳಿಗೆ ಮಾರ್ಗಸೂಚಿಯಾಗಿರಬೇಕು. ವಿಭಾಗದ ಹೆಸರಿಗೆ ಮುಂಚೆ ಮತ್ತು ತದನಂತರ ತೆರವು ಕೊಡುವುದರ ಮೂಲಕ ಮತ್ತು ವಿಭಿನ್ನವಾದ ಅಕ್ಷರ ಶೈಲಿಯನ್ನು ಉಪಯೋಗಿಸುವದರ ಮೂಲಕ ಅಥವಾ ಅಕ್ಷರಗಳ ಗಾತ್ರವನ್ನು ವಿಭಿನ್ನವಾಗಿ ಬಳಸುವುದರ ಮೂಲಕ ನೀವು ಇದನ್ನು ಸ್ಪಷ್ಟಪಡಿಸಬಹುದು. ರಾಷ್ಟ್ರೀಯ ಭಾಷೆಯಲ್ಲಿ ಬೈಬಲನ್ನು ಹೇಗೆ ಅನುವಾದ ಮಾಡಿದ್ದಾರೋ ನೋಡಿರಿ, ಮತ್ತು ಭಾಷೆಯ ಸಮುದಾಯದೊಂದಿಗೆ ವಿಭಿನ್ನವಾದ ಪದ್ಧತಿಗಳನ್ನು ಉಪಯೋಗಿಸಿ ಪರಿಶೀಲನೆ ಮಾಡಿರಿ.

ವಿವಿಧವಾದ ವಿಭಾಗದ ಶೀರ್ಷಿಕೆಗಳು

ಅನೇಕ ವಿಧವಾದ ವಿಭಾಗದ ಶೀರ್ಷಿಕೆಗಳು ಇವೆ. ಇಲ್ಲಿ ಕೆಲವು ವಿಧವಾದ ಶೀರ್ಷಿಕೆಗಳಿವೆ, ಮಾರ್ಕ.2:1-12 ವಾಕ್ಯಭಾಗಕ್ಕಾಗಿ ಶೀರ್ಷಿಕೆ ಹೇಗೆ ಕಾಣಿಸಿಕೊಳ್ಳಬೇಕೆಂದು ಉದಾಹರಣೆ ಈ ಕೆಳಗಿನಂತಿವೆ:

  • ಸಾರಾಂಶ ವಾಕ್ಯ : “ಪಾರ್ಶ್ವವಾಯುವಿರುವ ವ್ಯಕ್ತಿಯು ಸ್ವಸ್ಥತೆ ಮಾಡುವುದರ ಮೂಲಕ, ಯೇಸು ಗುಣಪಡಿಸುವದರೊಂದಿಗೆ ಪಾಪಗಳನ್ನು ಕ್ಷಮಿಸುವುದಕ್ಕೆ ತನ್ನ ಅಧಿಕಾರವದೆ ಎಂದು ತೋರಿಸಿಕೊಂಡರು.” ಇದು ವಿಭಾಗದ ಮುಖ್ಯ ಅಂಶವನ್ನು ಸಾರಾಂಶಗೊಳಿಸಲು ಪ್ರಯತ್ನಿಸುತ್ತದೆ, ಮತ್ತು ಇದರಿಂದ ಒಂದೇ ಒಂದು ಸಂಪೂರ್ಣ ವಾಕ್ಯದಲ್ಲಿ ಹೆಚ್ಚಿನ ಮಾಹಿತಿಯನ್ನು ಕೊಡುತ್ತದೆ.
  • ವಿವರಣಾತ್ಮಕವಾದ ವ್ಯಾಖ್ಯೆ : “ಯೇಸು ಪಾರ್ಶ್ವವಾಯುವಿನ ವ್ಯಕ್ತಿಯನ್ನು ಗುಣಪಡಿಸಿದ್ದು.” ಇದು ಕೂಡ ಒಂದು ಸಂಪೂರ್ಣವಾದ ವಾಕ್ಯ, ಆದರೆ ಆ ಭಾಗದಲ್ಲಿ ಏನು ಬರುತ್ತದೆಯೆಂದು ಓದುಗರಿಗೆ ತಿಳಿಸುವುದಕ್ಕೆ ಬೇಕಾದಷ್ಟು ಮಾಹಿತಿಯನ್ನು ಕೊಡುತ್ತದೆ.
  • ಪ್ರಸಕ್ತ ಉಲ್ಲೇಖ : “ಪಾರ್ಶವಾಯು ಗುಣವಾಯಿತು.” ಇದು ತುಂಬಾ ಚಿಕ್ಕದಾಗಿರುತ್ತದೆ, ಕೇವಲ ಕೆಲವು ಮಾತುಗಳ ಶೀರ್ಷಿಕೆಯನ್ನು ನೀಡುತ್ತದೆ. ಇದು ಬಿಡುವನ್ನು ಅಥವಾ ಸ್ಥಳವನ್ನು ಉಳಿತಾಯ ಮಾಡುತ್ತದೆ, ಆದರೆ ಇದು ಈಗಾಗಲೇ ಬೈಬಲ್ ಕುರಿತಾಗಿ ಚೆನ್ನಾಗಿ ಅರಿತ ಜನರಿಗೋಸ್ಕರ ಉಪಯೋಗವಾಗುತ್ತಿರಬಹುದು.
  • ಪ್ರಶ್ನೆ : “ಯೇಸುವಿಗೆ ಗುಣಪಡಿಸುವುದಕ್ಕೆ ಮತ್ತು ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವಿದೆಯೋ?” ವಿಭಾಗದಲ್ಲಿರುವ ಮಾಹಿತಿಯು ಉತ್ತರಗಳನ್ನು ಕೊಡುವಂತೆ ಇದು ಪ್ರಶ್ನೆಯನ್ನು ರೂಪಿಸುತ್ತದೆ. ಸತ್ಯವೇದದ ಕುರಿತಾಗಿ ಹೆಚ್ಚಿನ ಪ್ರಶ್ನೆಗಳನ್ನು ಹೊಂದಿಕೊಂಡಿರುವ ಜನರು ಇದರಿಂದ ಹೆಚ್ಚಿನ ಸಹಾಯವನ್ನು ಪಡೆದುಕೊಳ್ಳುವರು.
  • ವ್ಯಾಖ್ಯೆಯ “ಕುರಿತಾಗಿ” : “ಯೇಸು ಗುಣಪಡಿಸಿದ ಪಾರ್ಶ್ವವಾಯು ರೋಗದ ವ್ಯಕ್ತಿಯ ಕುರಿತಾಗಿ.” ವಿಭಾಗವು ಯಾವುದರ ಕುರಿತಾಗಿ ಮಾತನಾಡುತ್ತಿದಿಯೋ ನಿಮಗೆ ಹೇಳುವುದಕ್ಕೆ ಪ್ರಯತ್ನಪಡುವ ಸ್ಪಷ್ಟತೆಯನ್ನು ಇದು ನಮಗೆ ಕೊಡುತ್ತದೆ. ಲೇಖನ ಭಾಗದಲ್ಲಿರುವ ಮಾತುಗಳಿಗೆ ಅಥವಾ ಪದಗಳಿಗೆ ಸಂಬಂಧಪಡದ ಹೆಸರನ್ನು ಸುಲಭವಾಗಿ ನೋಡಿ ಓದುವುದಕ್ಕೆ ಇದು ಸಹಾಯಕರವಾಗಿರುತ್ತದೆ.

ನೀವು ನೋಡುತ್ತಿದ್ದಂತೆಯೇ, ಅನೇಕ ವಿಧವಾದ ವಿಭಾಗದ ಶೀರ್ಷಿಕೆಗಳನ್ನು ಮಾಡಬಹುದು, ಆದರೆ ಅವುಗಳೆಲ್ಲವುಗಳ ಉದ್ದೇಶವು ಒಂದೇಯಾಗಿರುತ್ತದೆ. ಬೈಬಲ್ ವಿಭಾಗದ ಮುಖ್ಯ ವಿಷಯದ ಕುರಿತಾದ ಮಾಹಿತಿಯನ್ನು ಆ ಶೀರ್ಷಿಕೆಗಳೆಲ್ಲವು ಕೊಡುತ್ತವೆ. ಕೆಲವು ಚಿಕ್ಕದಾಗಿರಬಹುದು ಮತ್ತು ಕೆಲವೊಂದು ವಾಕ್ಯಗಳಲ್ಲಿ ದೊಡ್ಡದಾಗಿರಬಹುದು. ಕೆಲವೊಂದು ಕೇವಲ ಶೀರ್ಷಿಕೆಯ ಮಾಹಿತಿಯನ್ನು ಕೊಡಬಹುದು, ಮತ್ತು ಕೆಲವೊಂದು ಇನ್ನೂ ಹೆಚ್ಚಿನ ಮಾಹಿತಿಯನ್ನು ಕೊಡಬಹುದು. ನೀವು ವಿವಿಧವಾದ ಶೀರ್ಷಿಕೆಗಳೊಂದಿಗೆ ಪ್ರಯೋಗ ಮಾಡಬೇಕೆನ್ನುವ ಬಯಕೆ ಇರಬಹುದು, ಮತ್ತು ಜನರಿಗೆ ಹೆಚ್ಚಾಗಿ ಸಹಾಯಕರವಾಗಿರುವ ಆಲೋಚನೆಯನ್ನು ಅವರನ್ನೇ ಕೇಳಿ ತಿಳಿದುಕೊಳ್ಳಿರಿ.


ಸಂಪೂರ್ಣ ಅನುವಾದ

Checking Manual :: ಸಂಪೂರ್ಣ ಅನುವಾದ

ಸಂಪೂರ್ಣ ಅನುವಾದ

ಅನುವಾದ ಮಾಡುವುದನ್ನು ಸಂಪೂರ್ಣಗೊಳಿಸಲಾಗಿದೆಯೆಂದು ನಿರ್ಧಾರ ಮಾಡುವುದೇ ಈ ವಿಭಾಗದ ಉದ್ದೇಶವಾಗಿದೆ . ಈ ವಿಭಾಗದಲ್ಲಿ ಹೊಸ ಅನುವಾದವನ್ನು ಮೂಲ ಅನುವಾದಕ್ಕೆ ಹೋಲಿಸಿ ನೋಡಬೇಕಾಗಿರುತ್ತದೆ. ಎರಡು ಅನುವಾದಗಳನ್ನು ನೀವು ಹೋಲಿಸಿ ನೋಡುವಾಗ, ಈ ಪ್ರಶ್ನೆಗಳನ್ನು ನಿಮ್ಮಲ್ಲಿ ನೀವೇ ಕೇಳಿಕೊಳ್ಳಿರಿ:

  1. ಅನುವಾದದಲ್ಲಿ ಏನಾದರೂ ಒಂದು ಭಾಗವು ಕಾಣಿಸಿಕೊಂಡಿಲ್ಲವೋ? ಮತ್ತೊಂದು ಅರ್ಥದಲ್ಲಿ ಹೇಳಬೇಕಾದರೆ, ಅನುವಾದ ಮಾಡಲ್ಪಟ್ಟ ಪುಸ್ತಕದಲ್ಲಿರುವ ಪ್ರತಿಯೊಂದು ಸಂಘಟನೆಯು ಅನುವಾದದಲ್ಲಿ ಸೇರಿಸಲ್ಪಟ್ಟಿದೆಯೋ?
  2. ಅನುವಾದ ಮಾಡಲ್ಪಟ್ಟ ಪುಸ್ತಕದಲ್ಲಿರುವ ಪ್ರತಿಯೊಂದು ವಾಕ್ಯವು ಅನುವಾದದಲ್ಲಿ ಸೇರಿಸಲ್ಪಟ್ಟಿದೆಯೋ? (ಮೂಲ ಭಾಷೆಯ ಅನುವಾದದಲ್ಲಿ ವಾಕ್ಯದ ಸಂಖ್ಯೆಯನ್ನು ನೀವು ನೋಡುವಾಗ, ಎಲ್ಲಾ ಸಂಖ್ಯೆಗಳ ವಾಕ್ಯಭಾಗಗಳು ಅನುವಾದ ಮಾಡುವ ಭಾಷೆಯಲ್ಲಿ ಸೇರಿಸಲ್ಪಟ್ಟಿವೆಯೋ?) ಅನುವಾದಗಳಲ್ಲಿ ಕೆಲವೊಂದು ಬಾರಿ ವಚನಗಳಿಗೆ ಸಂಬಂಧಪಟ್ಟು ಸಂಖ್ಯೆಗಳ ವ್ಯತ್ಯಾಸವಿರುತ್ತದೆ. ಉದಾಹರಣೆಗೆ, ಕೆಲವೊಂದು ಅನುವಾದಗಳಲ್ಲಿ ಕೆಲವು ವಚನಗಳು ಒಂದೇ ಸಂಖ್ಯೆಯಲ್ಲಿಯೇ ಸೇರಿಸಲ್ಪಟ್ಟಿರುತ್ತವೆ ಅಥವಾ ಕೆಲವೊಂದುಬಾರಿ ಕೆಲವೊಂದು ವಚನಗಳು ಪುಟದ ಕೆಳಭಾಗದಲ್ಲಿ ಬರೆಯಲ್ಪಟ್ಟಿರುತ್ತವೆ. ಮೂಲ ಅನುವಾದನೆಗೆ ಮತ್ತು ಗುರಿ ಅನುವಾದನೆಗೆ ಮಧ್ಯದಲ್ಲಿ ಈ ರೀತಿಯ ವ್ಯತ್ಯಾಸಗಳಿದ್ದರೂ, ಗುರಿ ಭಾಷೆಯ ಅನುವಾದವು ಸಂಪೂರ್ಣವಾಗಿದೆಯೆಂದು ಪರಿಗಣಿಸಲಾಗುತ್ತದೆ. ಇನ್ನಿತರ ಮಾಹಿತಿಗಾಗಿ, [ಸಂಪೂರ್ಣ ರಚನೆ] (…/verses/01.md) ನೋಡಿರಿ.
  3. ವಾಕ್ಯಗಳೇನಾದರು ಬಿಡಲ್ಪಟ್ಟಿರುವ ಸ್ಥಳಗಳು ಅನುವಾದಗಳಲ್ಲಿ ಇದ್ದಾವೋ, ಅಥವಾ ಮೂಲ ಅನುವಾದ ಭಾಷೆಗಿಂತಲೂ ವಿಭಿನ್ನವಾದ ಸಂದೇಶವಿದ್ದಂತೆ ಕಾಣಿಸಿಕೊಂಡಿದಿಯೋ? (ಪದಗಳ ಪ್ರಯೋಗ ಮತ್ತು ಕ್ರಮವು ವಿಭಿನ್ನವಾಗಿರಬಹುದು, ಆದರೆ ಅನುವಾದಕರು ಉಪಯೋಗಿಸಿದ ಭಾಷೆಯು ಮೂಲ ಭಾಷೆಯ ಅನುವಾದವು ಕೊಡುವ ಸಂದೇಶವನ್ನೇ ಕೊಡತಕ್ಕದ್ದು.)

ಅನುವಾದವು ಸಂಪುರ್ಣವಾಗಿಲ್ಲವೆಂದು ಕಾಣಿಸಿಕೊಂಡರೆ, ಆ ಸ್ಥಳದಲ್ಲಿ ಅದಕ್ಕೆ ಸಂಬಂಧಪಟ್ಟ ಟಿಪ್ಪಣಿಗಳನ್ನು ಬರೆಯಿರಿ, ಇದರಿಂದ ನೀವು ಆ ವಿಷಯಗಳ ಕುರಿತಾಗಿ ಅನುವಾದ ತಂಡದೊಂದಿಗೆ ಚರ್ಚೆ ಮಾಡಬಹುದು.


ಸಂಪೂರ್ಣ ಪರಿಶೀಲನೆ ವಾಕ್ಯ ರಚನೆ

Checking Manual :: ಸಂಪೂರ್ಣ ಪರಿಶೀಲನೆ ವಾಕ್ಯ ರಚನೆ

ನಿಮ್ಮ ಉದ್ದೇಶಿತ ಭಾಷೆಯ ಅನುವಾದವು ಮೂಲ ಭಾಷೆಯ ಸತ್ಯವೇದದಲ್ಲಿ ರುವ ಎಲ್ಲಾ ವಚನವನ್ನು ಒಳಗೊಂಡಿರುವುದು ಮುಖ್ಯ. ಯಾವುದೇ ವಚನಗಳು ಕಾಣೆಯಾಗಿರುವುದನ್ನು ನಾವು ಬಯಸುವುದಿಲ್ಲ. ಆದರೆ ಕೆಲವು ಸತ್ಯವೇದಗಳಲ್ಲಿ ಇತರ ಸತ್ಯವೇದದಲ್ಲಿಲ್ಲದ ವಚನಗಳನ್ನು ಹೊಂದಲು ಉತ್ತಮ ಕಾರಣಗಳಿವೆ ಎಂದು ನೆನಪಿಡಿ.

ವಚನಗಳು ಬಿಟ್ಟುಹೋಗಿರಲು ಕಾರಣಗಳು

  1. ಪಠ್ಯ ರೂಪಾಂತರಗಳು – ನಂತರ ಸೇರಿಸಲಾದ ಕೆಲವು ವಚನಗಳು ಸತ್ಯವೇದದ ಮೂಲವಾಗಿದ್ದವು ಎಂದು ಅನೇಕ ಸತ್ಯವೇದದ ವಿದ್ವಾಂಸರು ನಂಬುವುದಿಲ್ಲ. ಆದುದರಿಂದ ಕೆಲವು ಸತ್ಯವೇದದ ಅನುವಾದಕರು ಈ ವಚನಗಳನ್ನು ಸೇರಿಸುವುದಿಲ್ಲ ಅಥವ ಅಡಿಪಟ್ಟಿಗಳಾಗಿ ಮಾತ್ರ ಸೇರಿಸುತ್ತಾರೆ. (ಈ ಬಗ್ಗೆ ಹೆಚ್ಚಿನ ಮಾಹಿತಿಗಾಗೆ ಪಾಠ್ಯ ರೂಪಾಂತರ ನೋಡಿರಿ.) ಈ ವಚನಗಳನ್ನು ಸೇರಿಸುತ್ತೀರೋ ಅಥವಾ ಇಲ್ಲವೋ ಎಂಬುವುದನ್ನು ನಿಮ್ಮ ಅನುವಾದ ತಂಡವು ನಿರ್ಧರಿಸಬೇಕು
  2. ವಿಭಿನ್ನ ಸಂಖ್ಯೆ- ಕೆಲವು ಸತ್ಯವೇದವು ಇತರ ಸತ್ಯವೇದಗಿಂತ ಬೇರೆ ವಚನ ಸಂಖ್ಯೆಯ ವ್ಯವಸ್ಥೆಯನ್ನು ಬಳಸುತ್ತದೆ. (ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,ಅಧ್ಯಾಯ ಮತ್ತು ವಚನ ಸಂಖ್ಯ) ನೋಡಿರಿ. ನಿಮ್ಮ ಅನುವಾದ ತಂಡವು ಯಾವ ವ್ಯವಸ್ಥೆಯನ್ನು ಬಳಸಬೇಕೆಂದು ನಿರ್ಧರಿಸುವ ಅಗತ್ಯವಿದೆ.
  3. ವಚನಗಳ ಸೇತುವೆಗಳು – ಸತ್ಯವೇದದ ಕೆಲವು ಅನುವಾದದಲ್ಲಿ, ಎರಡು ಅಥವ ಹೆಚ್ಚಿನ ವಚನಗಳನ್ನು ಮರುಜೋಡಿಸಲಾಗಿದೆ ಇದರಿಂದ ಮಾಹಿತಿಯ ಕ್ರಮವು ಹೆಚ್ಚು ತಾರ್ಕಿಕ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಇದು ಸಂಭವಿಸಿದಾಗ ವಚನ ಸಂಖ್ಯೆಗಳು 4-5 ಅಥವ 4-6 ಹಾಗೆ ಸಂಯೋಜಿಸಲಾಗುತ್ತದೆ. ಕೆಲೆವೊಮ್ಮೆ UST ಇದನ್ನು ಮಾಡುತ್ತದೆ. ಏಕೆಂದರೆ ಎಲ್ಲಾ ವಚನ ಸಂಖ್ಯೆಗಳು ಗೋಚರಿಸುವುದಿಲ್ಲ ಅಥವಾ ಅವು ಎಲ್ಲಿ ಇರಬೇಕೆಂದು ನೀವು ನಿರೀಕ್ಷಿಸುತ್ತೀರೋ ಅಲ್ಲಿ ಅವು ಗೋಚರವಾಗುವುದಿಲ್ಲ, ಕೆಲವು ವಚನಗಳು ಕಾಣೆಯಾಗಿರುವಂತೆ ಕಾಣಿಸಬಹುದು. ಆದರೆ ಆ ವಚನಗಳಲ್ಲಿನ ವಿಷಯಗಳು ಹಾಗೆ ಇರುತ್ತದೆ.(ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,ವಚನಗಳ ಸೇತುವೆಗಳು) ನೋಡಿರಿ. ನಿಮ್ಮ ಅನುವಾದ ತಂಡವು ವಚನ ಸೇತುವೆಗಳನ್ನು ಬಳಸಬೇಕೆ ಅಥವಾ ಬೇಡವೇ ಎಂಬುವುದನ್ನು ನಿರ್ಧರಿಸುವ ಅಗತ್ಯವಿದೆ.

ಕಾಣೆಯಾದ ವಚನಗಳಿಗಾಗಿ ಪರಿಶೀಸಲಾಗುತ್ತದೆ

ನಿಮ್ಮ ಅನುವಾದದಲ್ಲಿ ಬಿಟ್ಟು ಹೋಗಿರುವ ವಚನಗಳನ್ನು ಪರಿಶಿಲಿಸಲು, ಪುಸ್ತಕವನ್ನು ಪರಿಶೀಲಿಸಿದ ನಂತರ, ಅನುವಾದವನ್ನು ಪ್ಯಾರಟೆಕ್ಸ್ಟ್ಗ್ ಗೆ ಅಮದಮಾಡಿ. ನಂತರ “ಅಧ್ಯಾಯ/ವಚನಗಳ ಸಂಖ್ಯೆಗಳು” ಪರಿಶೀಲಿಸಿ .ಪ್ಯಾರಟೆಕ್ಸ್ಟ್ ಬಿಟ್ಟುಹೋಗಿರುವ ವಚನಗಳನ್ನು ನಿಮಗೆ ತೋರಿಸಿಕೊಡುತ್ತದೆ , ಪುಸ್ತಕದ ಎಲ್ಲೆಡಯ ಪಟ್ಟಿಯನ್ನು ನೀಡುತ್ತದೆ. ಮೇಲಿನ ಮೂರು ಕಾರಣಗಳಲ್ಲಿ ಒಂದಾದ ಕಾರಣ ನೀವು ಆ ಪ್ರತಿಯೊಂದು ಸ್ಥಳಗಳನ್ನು ನೋಡಬಹುದು ಮತ್ತು ವಚನದ ಉದ್ದೇಶಪೂರ್ವಕವಾಗಿ ಕಾಣೆಯಾಗಿದೆ ಎಂದು ನಿರ್ಧರಿಸಬಹುದು, ಅಥವಾ ವಚನವು ತಪ್ಪಾಗಿ ಬಿಟ್ಟುಹೋಗಿದ್ದರೆ ನೀವು ಮತ್ತೆ ವಚನವನ್ನು ಅನುವಾದಿಸಬೇಕಾಗಿದೆ.


ಸಮಂಜಸವಾದ ಕಾಗುಣಿತಗಳು

Checking Manual :: ಸಮಂಜಸವಾದ ಕಾಗುಣಿತಗಳು

ಶ್ರೋತೃಗಳು ಅನುವಾದವನ್ನು ಸುಲಭವಾಗಿ ಓದಿ ಅರ್ಥಮಾಡಿಕೊಳ್ಳಬೇಕಾದರೆ, ನೀವು ಪದಗಳನ್ನು ಸಮಂಜಸವಾಗಿ ಉಚ್ಚರಿಸುವುದು ಬಹಳ ಮುಖ್ಯ. ಉದ್ದೇಶಿತ ಭಾಷೆಯಲ್ಲಿ ಬರವಣಿಗೆ ಅಥವಾ ಕಾಗುಣಿತ ಸಂಪ್ರದಾಯವಿಲ್ಲದಿದ್ದರೆ ಇದು ಕಷ್ಟಕರವಾಗುತ್ತದೆ. ಅನುವಾದದ ವಿವಿಧ ಭಾಗದಲ್ಲಿ ಹಲವಾರು ಜನರು ಕೆಲಸ ಮಾಡುತ್ತಿರುವಾಗ, ಅವರು ಪರಸ್ಪರ ಒಂದೇ ಪದವನ್ನು ವಿಭಿನ್ನವಾಗಿ ಉಚ್ಚರಿಸಬಹುದು. ಆ ಕಾರಣಕ್ಕಾಗಿ, ಅನುವಾದದ ತಂಡವು ಪದಗಳನ್ನು ಉಚ್ಚರಿಸಲು ಹೇಗೆ ಯೋಜಿಸುತ್ತದೆ ಎಂಬುವುದರ ಕುರಿತು ಮಾತನಾಡಲು ಅನುವಾದಡ ತಂಡ ಅನುವಾದವನ್ನು ಪ್ರಾರಂಭಿಸುವ ಮೊದಲು ಒಟ್ಟಿಗೆ ಭೇಟಿಯಾಗುವುದು ಬಹಳ ಮುಖ್ಯ

ಉಚ್ಚರಿಸಲು ಕಷ್ಟಕರವಾದ ಪದಗಳ ಬಗ್ಗೆ ತಂಡವಾಗಿ ಚರ್ಚಿಸಿರಿ. ಪದಗಳಲ್ಲಿ ಪ್ರತಿನಿಧಿಸಲು ಕಷ್ಟವಾಗಿರುವ ಶಬ್ದಗಳಿದ್ದರೆ ನೀವು ಬಳಸುತ್ತಿರುವ ಬರವಣೆಗೆಯ ವ್ಯವಸ್ಥೆಯಲ್ಲಿ ನೀವು ಬದಲಾವಣೆ ಮಾಡಬೇಕಾಗಬಹುದು (ನೋಡಿಆಲ್ಫಾet/Orthography. ಪದಗಳಲ್ಲಿನ ಶಬ್ದಗಳನ್ನು ವಿಭಿನ್ನ ರೀತಿಯಲ್ಲಿ ಪ್ರತಿನಿಧಿಸಬಹುದಾದರೆ, ಅವುಗಳನ್ನು ಹೇಗೆ ಉಚ್ಚರಿಸಬೇಕೆಂದು ತಂಡವು ಬೇಕಾಗುತ್ತದೆ. ವರ್ಣಮಾಲೆಯ ಕ್ರಮಕ್ಕನುಗುಣಾಗಿ ಉಪಯೋಗಿಸಲು ತೀರ್ಮಾನಿಸಿದ ಕಾಗುಣಿತಗಳ ಪಟ್ಟಿಯನ್ನು ಮಾಡಿರಿ. ಭಾಷಾಂತರಿಸುವಾಗ ಸಮಾಲೊಚಿಸುವುದಕ್ಕಾಗಿ ತಂಡದ ಪ್ರತಿಯೊಬ್ಬರು ಈ ಪಟ್ಟಿಯ ನಕಲನ್ನು ಹೊಂದಿದ್ದಾರೆಂದು ಖಚಿತಪಡಿಸಿಕೊಳ್ಳಿ. ಇತರ ಕಷ್ಟಕರವಾದ ಪದಗಳನ್ನು ಪಟ್ಟಿಗೆ ಸೇರಿಸಿರಿ, ಮತ್ತು ಎಲ್ಲರಪಟ್ಟಿಗೆ ಆಎಲ್ಲಾ ಕಾಗುಣಿತಗಳು ಸೇರಿಸೆಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿರಿ. ನಿಮ್ಮ ಕಾಗುಣಿತ ಪಟ್ಟಿಯನ್ನು ನಿರ್ವಹಿಸಲು ಸ್ಪ್ರೆಡ್ಶೀಟ್ ಬಳಸುವುದು ಸಹಾಯಕರವಾಗಬಹುದು. ಇದನ್ನು ಸುಲಭವಾಗಿ ನವಿಕರಿಸಬಹುದು ಮತ್ತು ವಿದ್ಯುನ್ಮಾನವಾಗಿ ಹಂಚಿಕೊಳ್ಳಬಹುದು ಅಥವ ನಿಯತಕಾಲಿಕವಾಗಿ ಮುದ್ರಿಸಬಹುದು.

ಸತ್ಯವೇದದಲ್ಲಿರುವ ಜನರ ಮತ್ತು ಸ್ಥಳಗಳ ಹೆಸರುಗಳು ಉಚ್ಚರಿಸಲು ಕಷ್ಟಕರವಾಗಿರುತ್ತದೆ ಏಕೆಂದರೆ ಅವುಗಳಲ್ಲಿ ಉದ್ದೇಶಿತ ಭಾಷೆಯಲ್ಲಿ ತಿಳಿದಿರುವುದಿಲ್ಲ. ಇವುಗಳನ್ನು ನಿಮ್ಮ ಕಾಗುಣಿತ ಪಟ್ಟಿಯಲ್ಲಿ ಸೇರಿಸಲು ಮರಿಯಬಾರದು

ಕಾಗುಣಿತವನ್ನು ಪರೀಕ್ಷಿಸಲು ಕಂಪ್ಯೂಟರ್ ಉತ್ತಮ ಸಹಾಯವಾಗಬಹುದು. ನೀವು ಗೇಟ್ ವೇ ಭಾಷೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅದರಲ್ಲಿ ವರ್ಡ್ ಪ್ರೊಸೆಸರ್ ಶಬ್ದಕೋಶವನ್ನು ಮೊದಲೇ ಹೊಂದಿರುತ್ತದೆ. ನೀವು ಬೇರೆ ಭಾಷೆಯಲ್ಲಿ ಅನುವಾದಿಸುತ್ತಿದ್ದರೆ, ತಪ್ಪಾಗಿ ಬರೆಯಲಾದ ಪದಗಳನ್ನು ಸರಿಪಡಿಸಲು ನೀವು ವರ್ಡ್ ಪ್ರೊಸೆಸರ್ನ ’ಹುಡುಕಾಟ ಮತ್ತು ಬದಲಿ’ ಆಯ್ಕೆಯನ್ನು ಬಳಸಬಹುದು. ಪ್ಯಾರಾ ಪಠ್ಯವು ಎಲ್ಲಾ ರೂಪಾಂತರ ಕಾಗುಣಿತಗಳನ್ನು ಹೊಂದಿರುವ ಕಾಗುಣಿತ ಪರಿಶೀಲನಾ ವೈಶಿಷ್ಟ್ಯವನ್ನು ಹೊಂದಿದೆ. ಇದು ನಿಮಗೆ ಇವುಗಳನ್ನು ಪ್ರಸ್ತುತಪಡಿಸುತ್ತದೆ ಮತ್ತು ನಂತರ ನೀವು ಯಾವ ಕಾಗುಣಿತಗಳನ್ನು ಬಳಸಲು ನಿರ್ಧರಿಸಿದ್ದೀರಿ ಎಂಬುವುದನ್ನು ನೀವು ಆಯ್ಕೆ ಮಾಡಬಹುದು.


ಸೂಕ್ತವಾದ ವರ್ಣಮಾಲೆ

Checking Manual :: ಸೂಕ್ತವಾದ ವರ್ಣಮಾಲೆ

ಅನುವಾದಕ್ಕಾಗಿ ವರ್ಣಮಾಲೆ

ನೀವು ಅನುವಾದವನ್ನು ಓದುತ್ತಿರುವಾಗ, ಪದಗಳು ಯಾವ ರೀತಿ ಉಪಯೋಗಿಸಲ್ಪಟ್ಟಿವೆ ಎನ್ನುವದರ ಕುರಿತಾಗಿ ನಿಮಗೆ ನೀವೇ ಈ ಪ್ರಶ್ನೆಗಳನ್ನು ಹಾಕಿಕೊಳ್ಳಿರಿ. ಒಳ್ಳೇಯ ಭಾಷೆಯನ್ನು ವ್ಯಕ್ತಪಡಿಸುವುದಕ್ಕೆ ಸೂಕ್ತವಾದ ವರ್ಣಮಾಲೆಯನ್ನು ಉಪಯೋಗಿಸಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳಲು ಮತ್ತು ಸರಿಯಾದ ವಿಧಾನದಲ್ಲಿ ಪದಗಳು ಬರೆದಿದ್ದಾರೋ ಇಲ್ಲವೋ ಎಂದು ನಿರ್ಧಾರ ಮಾಡಿಕೊಳ್ಳಲು ಈ ಪ್ರಶ್ನೆಗಳು ಸಹಾಯ ಮಾಡುತ್ತವೆ. ಇದರಿಂದ ಅನುವಾದವನ್ನು ಓದುವುದಕ್ಕೆ ತುಂಬಾ ಸುಲಭವಾಗಿರುತ್ತದೆ.

  1. ಹೊಸ ಅನುವಾದದ ಭಾಷೆಯ ಶಬ್ದಗಳನ್ನು ವ್ಯಕ್ತಗೊಳಿಸುವುದಕ್ಕೆ ವರ್ಣಮಾಲೆಯು ಅಥವಾ ಅಕ್ಷರಗಳು ಸರಿಹೊಂದುವುದೋ ? (ಬೇರೊಂದು ಶಬ್ದವನ್ನು ಮಾಡುವುದಕ್ಕೋಸ್ಕರ ಒಂದೇ ಗುರುತನ್ನು ಉಪಯೋಗಿಸುತ್ತಾ ಅರ್ಥದಲ್ಲಿ ವಿಭಿನ್ನತೆಯನ್ನು ಉಂಟು ಮಾಡುವ ಶಬ್ದಗಳು ಏನಾದರೂ ಇದ್ದಾವೋ? ಇದರಿಂದ ಪದಗಳನ್ನು ಓದುವುದಕ್ಕೆ ಕಷ್ಟವಾಗುವಂತೆ ಬರೆಯಬೇಕಾಗುತ್ತದೋ? ಈ ಅಕ್ಷರಗಳನ್ನು ಹೊಂದಾಣಿಕೆ ಮಾಡಲು ಹೆಚ್ಚುವರಿ ಗುರುತುಗಳೇನಾದರೂ ಬಳಸಿ, ವ್ಯತ್ಯಾಸವನ್ನು ತೋರಿಸಬಹುದೋ?)
  2. ಪುಸ್ತಕದಲ್ಲಿ ಉಪಯೋಗಿಸಿಲಾಗಿರುವ ಕಾಗುಣಿತವು ಸರಿಯಾಗಿದೆಯೋ? (ವಿಭಿನ್ನವಾದ ಪರಿಸ್ಥಿತಿಗಳಲ್ಲಿ ಪದಗಳು ಹೇಗೆ ಮಾರ್ಪಾಟು ಆಗುತ್ತವೆಯೆಂದು ತೋರಿಸುವುದಕ್ಕೆ ಲೇಖಕರು ಏನಾದರೂ ಅನುಸರಿಸಬೇಕಾದ ನಿಯಮಗಳು ಇದ್ದಾವೋ? ಅವುಗಳನ್ನು ವಿವರಿಸಬಹುದೇ, ಇದರಿಂದ ಇತರರು ಕೂಡ ಸುಲಭವಾಗಿ ಭಾಷೆಯನ್ನು ಹೇಗೆ ಓದಬೇಕು ಮತ್ತು ಹೇಗೆ ಬರೆಯಬೇಕೆಂದು ತಿಳಿದುಕೊಳ್ಳುವರು)
  3. ಭಾಷೆಯ ಸಮುದಾಯದ ಜನರು ಗುರುತಿಸುವ ರೀತಿಯಲ್ಲಿ ಅನುವಾದಕರು ಮಾತುಗಳನ್ನು, ಕಾಗುಣಿತಗಳನ್ನು, ಅಭಿವ್ಯಕ್ತಿಗಳನ್ನು ಮತ್ತು ನುಡಿಗಟ್ಟುಗಳನ್ನು ಉಪಯೋಗಿಸಿದ್ದಾರೋ?

ಅಕ್ಷರವಾಗಲಿ ಅಥವಾ ನುಡಿಗಟ್ಟಾಗಲಿ ಸರಿಯಾಗಿಲ್ಲವೆಂದು ಕಂಡುಬಂದರೆ, ಅದರ ಕುರಿತಾಗಿ ಬರೆದುಕೊಳ್ಳಿರಿ, ಇದರಿಂದ ನೀವು ಸರಿಯಿಲ್ಲದ ವಿಷಯಗಳ ಕುರಿತಾಗಿ ಅನುವಾದ ತಂಡದೊಂದಿಗೆ ಚರ್ಚಿಸಬಹುದು.


ಸ್ಪಷ್ಟವಾಗಿರುವ ಅನುವಾದ

Checking Manual :: ಸ್ಪಷ್ಟವಾಗಿರುವ ಅನುವಾದ

ಸ್ಪಷ್ಟವಾಗಿರುವ ಅನುವಾದ

ಅನುವಾದವು ತುಂಬಾ ಸ್ಪಷ್ಟವಾಗಿರಬೇಕು. ಇದರ ಅರ್ಥವೇನೆಂದರೆ, ಆ ಅನುವಾದವನ್ನು ಓದಿದವರು ಅಥವಾ ಅದನ್ನು ಕೇಳಿದವರು ತುಂಬಾ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಇರಬೇಕು. ನಿಮ್ಮಷ್ಟಕ್ಕೆ ನೀವು ಓದಿದಾಗ ಆ ಅನುವಾದವು ಸ್ಪಷ್ಟವಾಗಿದೆಯೋ ಇಲ್ಲವೋ ಎಂದು ನಿಮಗೆ ಅರ್ಥವಾಗುವ ಸಾಧ್ಯತೆಯಿರುತ್ತದೆ. ಭಾಷೆಯ ಸಮುದಾಯದಲ್ಲಿ ಒಬ್ಬರನ್ನು ಕೂಡಿಸಿಕೊಂಡು ಅವರಿಗೆ ಗಟ್ಟಿಯಾಗಿ ಓದಿ ಹೇಳಿದರೆ ಇನ್ನೂ ಉತ್ತಮ. ನೀವು ಅನುವಾದವನ್ನು ಓದುತ್ತಿರುವಾಗ ಆ ಅನುವಾದವು ಸ್ಪಷ್ಟವಾಗಿದೆಯೋ ಇಲ್ಲವೋ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿರಿ, ಅಥವಾ ನೀವು ಓದುತ್ತಿರುವಾಗ ಯಾರು ಕೇಳುತ್ತಿದ್ದಾರೋ ಅವರನ್ನು ಕೇಳಿರಿ, ಪರೀಕ್ಷೆ ಮಾಡುವ ಈ ಭಾಗದಲ್ಲಿ ಹೊಸ ಅನುವಾದವನ್ನು ಮೂಲ ಭಾಷೆಯ ಅನುವಾದಕ್ಕೆ ಹೋಲಿಸಿ ನೋಡಬೇಡಿರಿ. ಎಲ್ಲಾದರೊಂದಲ್ಲಿ ನಿಮಗೆ ಸಮಸ್ಯೆ ಕಂಡುಬಂದರೆ, ಆ ಸಮಸ್ಯೆಯ ಕುರಿತಾಗಿ ಬರೆದುಕೊಳ್ಳಿರಿ, ಇದರಿಂದ ಈ ಅನುವಾದವನ್ನು ಓದಿ ಮುಗಿಸದಾದನಂತರ ಬೇರೊಂದು ಸಮಯದಲ್ಲಿ ಆ ಅನುವಾದದೊಂದಿಗೆ ಇರುವ ಸಮಸ್ಯೆಯ ಕುರಿತಾಗಿ ಚರ್ಚೆ ಮಾಡಬಹುದು.

  1. ಸಂದೇಶವು ಅರ್ಥವಾಗುವಂತೆ ಅನುವಾದದಲ್ಲಿ ಪದಗಳನ್ನು ಮತ್ತು ಮಾತುಗಳನ್ನು ಬಳಸಿರಿ? (ಪದಗಳು ಅರ್ಥವಾಗದಂತೆ ಇದ್ದಾವೋ, ಅಥವಾ ಅನುವಾದದ ಅರ್ಥವು ಏನೆಂಬುವುದನ್ನು ನಿಮಗೆ ಸುಲಭವಾಗಿ ಹೇಳುತ್ತಿದ್ದಾವೋ?
  2. ಅನುವಾದದಲ್ಲಿ ಉಪಯೋಗಿಸಿದ ಪದಗಳು ಮತ್ತು ಮಾತುಗಳು ನಿಮ್ಮ ಸಮುದಾಯದ ಸದಸ್ಯರು ಉಪಯೋಗಿಸುತ್ತಾರೋ, ಅಥವಾ ಅನುವಾದ ಮಾಡುವವರು ಇತರ ಬೇರೊಂದು ಭಾಷೆಯಿಂದ ಪದಗಳನ್ನು ಉಪಯೋಗಿಸಿ ಬರೆದಿದ್ದಾನೋ? (ನಿಮ್ಮ ಭಾಷೆಯಲ್ಲಿ ಯಾವುದಾದರೊಂದು ಪ್ರಾಮುಖ್ಯ ವಿಷಯಗಳನ್ನು ಹೇಳಬೇಕಾದರೆ ನಿಮ್ಮ ಪ್ರಜೆಗಳು ಮಾತನಾಡುವ ಶೈಲಿ ಹೀಗಿರುವುದೋ?)
  3. ನೀವು ಅನುವಾದ ಮಾಡಿದ ವಾಕ್ಯಗಳನ್ನು ಸುಲಭವಾಗಿ ಓದುತ್ತಿದ್ದೀರೋ, ಲೇಖಕರು ತದನಂತರ ಹೇಳುವ ಸಂಗತಿಗಳನ್ನು ಅರ್ಥಮಾಡಿಕೊಳ್ಳುತ್ತಿದ್ದೀರೋ? (ಅನುವಾದಕರು ಕಥೆಯನ್ನು ಹೇಳುವುದಕ್ಕೆ ಒಳ್ಳೇಯ ಶೈಲಿಯನ್ನು ಉಪಯೋಗಿದ್ದಾರೋ? ಮೊದಲು ಯಾವ ಭಾಗ ಬರಬೇಕು ಮತ್ತು ತದನಂತರ ಯಾವುದು ಬರಬೇಕೋ ಎಲ್ಲಾ ಚೆನ್ನಾಗಿ ಗಮನಿಸಿ ಅರ್ಥವಾಗುವಂತೆ ಆತನು ವಿಷಯಗಳನ್ನು ಹೇಳುತ್ತಿದ್ದಾನೋ? ಎಂದು ಗಮನಿಸಿ

ಹೆಚ್ಚುವರಿ ಸಹಾಯ:

  • ಅನುವಾದ ವಾಕ್ಯಗಳು ಸ್ಪಷ್ಟವಾಗಿವೆಯೆಂದು ಹೇಳುವುದಕ್ಕೆ ಅಥವಾ ನಿರ್ಧಾರ ಮಾಡುವುದಕ್ಕೆ ಬೇರೊಂದು ವಿಧಾನವೇನೆಂದರೆ ಕೆಲವು ವಾಕ್ಯಗಳನ್ನು ಗಟ್ಟಿಯಾಗಿ ಓದುವುದು ಮತ್ತು ಒಂದು ವಾಕ್ಯಭಾಗವನ್ನು ಓದಿದನಂತರ, ಅದನ್ನು ತಿರಿಗಿ ಹೇಳುವುದಕ್ಕೆ ಕೇಳಿದವರನ್ನು ಕೇಳುವುದು. ನೀವು ಗಟ್ಟಿಯಾಗಿ ಓದಿದ ಸಂದೇಶವನ್ನು ಆ ವ್ಯಕ್ತಿ ಸುಲಭವಾಗಿ ಹೇಳಿದರೆ, ಆ ಅನುವಾದವು ಸ್ಪಷ್ಟವಾಗಿದೆ ಎಂದರ್ಥ. ಅನುವಾದವನ್ನು ಪರೀಕ್ಷೆ ಮಾಡುವ ಇತರ ವಿಧಾನಗಳಿಗಾಗಿ, ನೋಡಿರಿ [ಇತರ ಪದ್ಧತಿಗಳು] (…/other-methods/01.md).
  • ಅನುವಾದವು ಸ್ಪಷ್ಟವಾಗಿರದ ಸ್ಥಳಗಳು ಕಂಡುಬಂದಾಗ, ಆ ಸ್ಥಳಗಳಲ್ಲಿಯೇ ಅದರ ಕುರಿತಾಗಿ ಬರೆಯಿರಿ, ಇದರಿಂದ ನೀವು ಅನುವಾದ ತಂಡದೊಂದಿಗೆ ಚರ್ಚೆ ಮಾಡಬಹುದು.

NO TITLE FOUND!

Checking Manual :: NO TITLE FOUND!

Translation Checking

Introduction

Why do we do Translation Checking?

As part of the translation process, it is necessary that several people check the translation to make sure that it is clearly communicating the message that it should communicate. A beginning translator who was told to check his translation once said, “But I speak my native language perfectly. The translation is for that language. What more is needed?” What he said was true, but there are two more things to keep in mind.

First, he may not have understood the source text correctly, and so someone who knows what it should say might be able to correct the translation. This could be because he did not correctly understand a phrase or expression in the source language. In this case, someone else who understands the source language well can correct the translation.

Or it could be that he did not understand something about what the Bible meant to communicate at a certain place. In this case, someone who knows the Bible well, such as a Bible teacher or a Bible translation checker, can correct the translation.

Secondly, although the translator may know very well what the text should say, the way he translated it might mean something else to a different person. That is, another person might think that the translation is talking about something other than what the translator intended. Or the person hearing or reading the translation might not understand what the translator was trying to say.

It often happens when one person writes a sentence and then another person reads it (or sometimes even if the first person reads it again later), that they understand it to say something different from what the writer meant. Take the following sentence as an example.

“John took Peter to the temple and then he went home.”

In his mind when he wrote it, the writer meant that Peter went home, but the reader thought that the writer probably meant that it was John who went home. The sentence needs to be changed so that it is more clear.

Finally, a translation team is very close to and involved in their work, and so they sometimes do not see mistakes that others can see more easily. For these reasons, it is always necessary to check what someone else understands from the translation so that you (the translator) can make it more accurate and more clear.

This Checking Manual is a guide to the process of checking. It will guide you through several kinds of checks that will allow you to fix these problems. We believe that having many people doing a variety of different checks will result in a faster checking process, allow broad church participation and ownership, and produce better translations.

For more examples of the things that need to be checked, see Types of Things to Check.

Credits: Quotation used by permission, © 2013, SIL International, Sharing Our Native Culture, p. 69.


ಸಮಂಜಸವಾದ ವಿರಾಮ ಚಿಹ್ನೆಗಳು

Checking Manual :: ಸಮಂಜಸವಾದ ವಿರಾಮ ಚಿಹ್ನೆಗಳು

“ವಿರಾಮ ಚಿಹ್ನೆ” ಎನ್ನುವದು ಒಂದು ವಾಕ್ಯವನ್ನು ಯಾವರೀತಿ ಓದಬೇಕು ಅಥವಾ ಯಾವ ರೀತಿ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸುವ ಗುರುತುಗಳನ್ನು ಸೂಚಿಸುತ್ತದೆ. ಅಲ್ಪ ವಿರಾಮ ಅಥವಾ ಪೂರ್ಣ ವಿರಾಮ ಚಿಹ್ನೆ ಮತ್ತು ಮಾತನಾಡುವ ವ್ಯಕ್ತಿಯ ಮಾತುಗಳ ಸುತ್ತಲು ಇರುವ ಉಲ್ಲೇಖನ ಗುರುತುಗಳಂತೆ ಅಲ್ಲಲ್ಲಿ ನಿಲ್ಲಿಸಿ ಓದುವುದಕ್ಕೆ ಇರುವ ಗುರುತುಗಳೆಲ್ಲವನ್ನು ಉದಾಹರಣೆಗಳಲ್ಲಿ ನೋಡಬಹುದು . ಓದುಗಾರರು ಅನುವಾದವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮತ್ತು ಓದುವುದಕ್ಕೆ ಸುಲಭವಾಗಿರುವಂತೆ ಮಾಡುವ ಕ್ರಮದಲ್ಲಿ, ನೀವು ಸಮಂಜಸವಾದ ವಿರಾಮ ಚಿಹ್ನೆಗಳನ್ನು ಉಪಯೋಗಿಸುವದು ತುಂಬಾ ಪ್ರಾಮುಖ್ಯ.

ಅನುವಾದ ಮಾಡುವುದಕ್ಕೆ ಮುಂಚಿತವಾಗಿ, ಅನುವಾದ ತಂಡವು ಅನುವಾದದಲ್ಲಿ ನೀವು ಉಪಯೋಗಿಸುವ ವಿರಾಮ ಚಿಹ್ನೆಗಳ ವಿಧಾನಗಳ ಕುರಿತು ನಿರ್ಣಯಿಸುವ ಅವಶ್ಯಕತೆ ಇರುತ್ತದೆ. ರಾಷ್ಟ್ರೀಯ ಭಾಷೆಯು ಉಪಯೋಗಿಸುವ ಅಥವಾ ಅದಕ್ಕೆ ಸಂಬಂಧಪಟ್ಟ ಭಾಷೆಯ ಬೈಬಲ್ ಉಪಯೋಗಿಸುವ ವಿರಾಮ ಚಿಹ್ನೆಗಳ ವಿಧಾನವನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರಬಹುದು. ಒಂದುಸಲ ತಂಡವು ವಿಧಾನದ ಕುರಿತಾಗಿ ನಿರ್ಣಯಿಸಿದಾಗ, ಪ್ರತಿಯೊಬ್ಬರು ಅದನ್ನೇ ಅನುಸರಿಸತಕ್ಕದ್ದು . ವಿವಿಧ ವಿರಾಮ ಚಿಹ್ನೆಗಳ ಗುರುತುಗಳನ್ನು ಸರಿಯಾಗಿ ಉಪಯೋಗಿಸುವು ಉದಾಹರಣೆಗಳ ಮಾರ್ಗದರ್ಶಕ ಹಾಳೆಯನ್ನು ತಂಡದಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ಕೊಡುವುದು ತುಂಬಾ ಸಹಾಯಕರವಾಗಿರುತ್ತದೆ.

ಮಾರ್ಗದರ್ಶಕ ಹಾಳೆ ಇದ್ದಾಗ್ಯೂ , ವಿರಾಮ ಚಿಹ್ನೆಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದಿರುವುದು ಅನುವಾದಕರು ಮಾಡುವ ಸಹಜವಾದ ತಪ್ಪು . ಈ ಕಾರಣದಿಂದಲೇ, ಒಂದು ಪುಸ್ತಕವನ್ನು ಅನುವಾದ ಮಾಡಿದಾದನಂತರ, ಅದನ್ನು ParaTExt (ಸಾಹಿತ್ಯಿಕ ವ್ಯಾಖ್ಯಾಯನ) ಒಳಗೆ ತೆಗೆದುಕೊಂಡು ಬರಬೇಕೆಂದು ನಾವು ಶಿಫಾರಸು ಮಾಡುತ್ತೇವೆ. ParaTExt ನೊಳಗೆ ಭಾಷಾಂತರ ಮಾಡುವ ಭಾಷೆಯಲ್ಲಿ ವಿರಾಮ ಚಿಹ್ನೆಗಳಿಗಾಗಿ ನೀವು ಕೆಲವೊಂದು ನಿಯಮಗಳನ್ನು ಇಡಬಹುದು, ಇದಾದನಂತರ ಅದರಲ್ಲಿರುವ ವಿವಿಧ ವಿರಾಮ ಚಿಹ್ನೆಗಳನ್ನು ಪರಿಶೀಲನೆ ಮಾಡಿರಿ. ParaTExt ವಿರಾಮ ಚಿಹ್ನೆಗಳ ತಪ್ಪುಗಳನ್ನು ಕಂಡುಹಿಡಿಯುತ್ತದೆ. ಆಗ ನೀವು ಅವುಗಳನ್ನು ಸರಿಪಡಿಸಬಹುದು. ಈ ಎಲ್ಲಾ ವಿರಾಮ ಚಿಹ್ನೆಗಳ ಪರಿಶೀಲನೆಯನ್ನು ಮಾಡಿದಾದನಂತರ, ಅನುವಾದದಲ್ಲಿ ಸರಿಯಾಗಿ ವಿರಾಮ ಚಿಹ್ನೆಗಳನ್ನು ಉಪಯೋಗಿಸಿದ್ದಾರೆಂದು ನಿಶ್ಚಯತೆಯನ್ನು ಪಡೆದುಕೊಂಡಿರಬೇಕು.


ಸಮುದಾಯ ಪರೀಕ್ಷೆಗೆ ಬೇರೆ ಪದ್ಧತಿಗಳು

Checking Manual :: ಸಮುದಾಯ ಪರೀಕ್ಷೆಗೆ ಬೇರೆ ಪದ್ಧತಿಗಳು

ಪರೀಕ್ಷಿಸಲು ಬೇರೆ ವಿಧಾನಗಳು

ಪ್ರಶ್ನಿಸುವುದರ ಜೊತೆಯಲ್ಲಿ, ಅನುವಾದ ಸ್ಪಷ್ಟವಾಗಿದಿಯೋ, ಓದುವುದಕ್ಕೆ ಸುಲಭವಾಗಿದಿಯೋ ಮತ್ತು ಕೇಳುವವರಿಗೆ ಸಹಜವಾಗಿ ಧ್ವನಿಸುತ್ತಿದೆಯೋ ಎಂದು ಪರೀಕ್ಷಿಸಲು ಬೇರೆ ವಿಧಾನಗಳಿವೆ. ಕೆಳಕಂಡ ವಿಧಾನಗಳನ್ನು ನೀವು ಪ್ರಯತ್ನಿಸಬಹುದು:

  • ಪುನಃ ಹೇಳುವ ವಿಧಾನ: ನೀವು, ಅನುವಾದಕರು ಅಥವಾ ಪರೀಕ್ಷಿಸುವವರು, ಒಂದು ಭಾಗವನ್ನು ಅಥವಾ ಕಥೆಯನ್ನು ಓದಬಹುದು ಮತ್ತು ಹೇಳಲ್ಪಟ್ಟ ವಾಕ್ಯಭಾಗವನ್ನು ಬೇರೆಯೊಬ್ಬರು ಪುನಃ ಹೇಳಲು ಹೇಳಿ. ಆ ವ್ಯಕ್ತಿ ಆ ವಾಕ್ಯಭಾಗವನ್ನು ಸುಲಭವಾಗಿ ಪುನಃ ಹೇಳಿದರೆ, ಆ ಭಾಗವು ಸ್ಪಷ್ಟವಾಗಿದೆ ಎಂದರ್ಥ. ಆ ವ್ಯಕ್ತಿ ಹೇಳದೆ ಬಿಟ್ಟಿರುವ ಭಾಗವನ್ನು ಅಥವಾ ತಪ್ಪಾಗಿ ಹೇಳಿರುವ ಭಾಗವನ್ನು, ಅದರ ಅಧ್ಯಾಯ ಮತ್ತು ವಚನದ ಜೊತೆಗೆ ಗುರುತು ಮಾಡಿಕೊಳ್ಳಿರಿ. ಅನುವಾದಕರ ತಂಡದವರು ಅನುವಾದದ ಆ ಭಾಗವನ್ನು ಇನ್ನು ಸ್ಪಷ್ಟವಾಗಿ ಮಾಡಲು ಪುನರಾವರ್ತಿಸಬೇಕಾಗುತ್ತದೆ. ಅನುವಾದದಲ್ಲಿರುವ ರೀತಿಯಲ್ಲಿಯೇ ಬೇರೆ ರೀತಿಯಲ್ಲಿ ಆ ವ್ಯಕ್ತಿ ಹೇಳಿದ್ದರೆ ಅದನ್ನು ಸಹ ಗುರುತು ಮಾಡಿಕೊಳ್ಳಿರಿ. ಅನುವಾದದಲ್ಲಿ ಉಪಯೋಗಿಸಿರುವ ರೀತಿಗಿಂತ ಈ ಇನ್ನು ಸಹಜವಾಗಿರಬಹುದು. ಅನುವಾದದ ತಂಡದವರು ಈ ಪದ್ಧತಿಗಳನ್ನು ಉಪಯೋಗಿಸಿ ಅನುವಾದವನ್ನು ಇನ್ನು ಸಹಜವಾಗಿ ಮಾಡಬಹುದು.

  • ಓದುವ ವಿಧಾನ: ನಿಮ್ಮನ್ನು ಬಿಟ್ಟು ಬೇರೆ ಯಾರಾದರು, ಅನುವಾದಕರು ಅಥವಾ ಪರೀಕ್ಷಿಸುವವರು, ಅನುವಾದದ ಭಾಗವನ್ನು ನಿಮಗಾಗಿ ಓದಬಹುದು ಮತ್ತು ನೀವು ಅದನ್ನು ಕೇಳುತ್ತ ಆ ವ್ಯಕ್ತಿ ಎಲ್ಲಿ ನಿಲ್ಲಿಸಿದನೆಂದು ಅಥವಾ ಎಲ್ಲಿ ತಪ್ಪು ಮಾಡಿದ್ದಾನೆಂದು ಗುರುತು ಮಾಡಿಕೊಳ್ಳಬೇಕು. ಅನುವಾದವನ್ನು ಓದುವುದು ಮತ್ತು ಅರ್ಥ ಮಾಡಿಕೊಳ್ಳುವುದು ಎಷ್ಟು ಸುಲಭ ಅಥವಾ ಎಷ್ಟು ಕಷ್ಟವೆಂದು ಇದು ತೋರಿಸುತ್ತದೆ. ಅನುವಾದದಲ್ಲಿ ಓದುವವನು ಎಲ್ಲಿ ನಿಲ್ಲಿಸಿದನು ಅಥವಾ ಎಲ್ಲಿ ತಪ್ಪು ಮಾಡಿದ್ದನೆಂದು ನೋಡಿರಿ ಮತ್ತು ಅನುವಾದದ ಆ ಭಾಗವು ಯಾಕೆ ಕಷ್ಟಕರವಾಯಿತೆಂದು ಗಮನಿಸಿರಿ. ಅನುವಾದದ ಆ ಭಾಗವನ್ನು ಸುಲಭವಾಗಿ ಓದುವುದಕ್ಕೆ ಮತ್ತು ಅರ್ಥ ಮಾಡಿಕೊಳ್ಳುವುದಕ್ಕೆ ಅನುವಾದದ ತಂಡದವರು ಅನುವಾದವನ್ನು ಪುನರಾವರ್ತಿಸಬೇಕಾಗಬಹುದು.

  • ಪರ್ಯಾಯ ಅನುವಾದ ನೀಡುವುದು: ಅನುವಾದದ ಕೆಲವು ಭಾಗಗಳಲ್ಲಿ ಮೂಲ ಪದ ಅಥವಾ ಮಾತನ್ನು ವ್ಯಕ್ತಪಡಿಸಲು ಉತ್ತಮ ಮಾರ್ಗ ಅನುವಾದದ ತಂಡದವರಿಗೆ ಸಿಗದಿರಬಹುದು. ಅಂತಹ ಸಂಧರ್ಭದಲ್ಲಿ, ಅದನ್ನು ಬೇರೆಯವರು ಹೇಗೆ ಅನುವಾದ ಮಾಡುತ್ತಾರೋ ಎಂದು ಕೇಳಿ ತಿಳಿದುಕೊಳ್ಳಿರಿ. ಮೂಲ ಭಾಷೆ ಅರ್ಥ ಆಗದವರಿಗೆ, ನೀವು ಹೇಳಲು ಪ್ರಯತ್ನಿಸುತ್ತಿರುವ ಸಂಗತಿಗಳನ್ನು ವಿವರಿಸಿರಿ ಮತ್ತು ಅವರು ಹೇಗೆ ಅದನ್ನು ಹೇಳುತ್ತಾರೆಂದು ನೋಡಿರಿ. ಬೇರೆ ಬೇರೆ ಅನುವಾದಗಳು ಒಂದೇ ರೀತಿಯಲ್ಲಿದ್ದರೆ, ಒಂದೇ ಆಲೋಚನೆಯನ್ನು ಹೇಳು ಎರಡು ಅನುವಾದಗಳಲ್ಲಿ ಯಾವ ಪರ್ಯಾಯ ಅನುವಾದ ತುಂಬಾ ಸ್ಪಷ್ಟವಾಗಿದಿಯೋ ಎಂದು ಜನರು ಎನ್ನಿಸಿಕೊಳ್ಳಲು ಅವಕಾಶವನ್ನು ಕೊಡಿರಿ.

  • ಸಮೀಕ್ಷಕನ ಕೊಡುಗೆ: ನೀವು ಗೌರವಿಸುವ ಇತರ ಜನರು ನಿಮ್ಮ ಅನುವಾದವನ್ನು ಓದಲಿ. ಎಲ್ಲಿ ಬದಲಾವಣೆಗಳು ಮಾಡಬಹುದೆಂದು ಗುರುತು ಮಾಡಲು ಅವರಿಗೆ ಹೇಳಿರಿ. ಅತ್ಯುತ್ತಮವಾದ ಪದಗಳಿಗಾಗಿ, ತುಂಬಾ ಸಹಜವಾದ ಮಾತುಗಳಿಗಾಗಿ ಮತ್ತು ಕಾಗುಣಿತಗಳ ಸವರಣೆಗಳನ್ನು ನೋಡಿರಿ.

  • ಚರ್ಚೆ ಗುಂಪುಗಳು: ಅನುವಾದವನ್ನು ಜನರ ಗುಂಪಿನಲ್ಲಿ ಗಟ್ಟಿಯಾಗಿ ಓದಲು ಜನರಿಗೆ ಹೇಳಿರಿ ಮತ್ತು ಸ್ಪಷ್ಟತೆಗಾಗಿ ಪ್ರಶ್ನೆಗಳನ್ನು ಕೇಳುವಂತೆ ಜನರಿಗೆ ಅವಕಾಶ ನೀಡಿರಿ. ಅವರು ಉಪಯೋಗಿಸುವ ಪದಗಳನ್ನು ಗಮನಿಸಿರಿ, ಯಾಕಂದರೆ ಕಠಿಣವಾದ ಸಂಗತಿಗಳನ್ನು ವಿವರಿಸುತ್ತಿರುವಾಗ ಪರ್ಯಾಯ ಪದಗಳು ಮತ್ತು ಪರ್ಯಾಯ ಮಾತುಗಳನ್ನು ಅವರು ಉಪಯೋಗಿಸುವ ಸಾಧ್ಯತೆಗಳಿವೆ ಮತ್ತು ಈ ಪರ್ಯಾಯ ಪದಗಳು ಮತ್ತು ಪರ್ಯಾಯ ಮಾತುಗಳು ಅನುವಾದದಲ್ಲಿ ಉಪಯೋಗಿಸಿದವುಗಳಿಗಿಂತ ಉತ್ತಮವಾಗಿರುತ್ತವೆ. ಅವುಗಳನ್ನು ಅಧ್ಯಾಯ ಮತ್ತು ವಚನದ ಜೊತೆಗೆ ಬರೆದುಕೊಳ್ಳಿರಿ. ಅನುವಾದವನ್ನು ಉತ್ತಮಗೊಳಿಸಲು ಅನುವಾದ ತಂಡದವರು ಇವುಗಳನ್ನು ಉಪಯೋಗಿಸಬಹುದು. ಅನುವಾದದಲ್ಲಿ ಜನರಿಗೆ ಅರ್ಥ ಆಗದ ಭಾಗಗಳನ್ನು ಗುರುತು ಮಾಡಿಕೊಳ್ಳಿರಿ ಯಾಕಂದರೆ ಅನುವಾದಕರ ತಂಡದವರು ಆ ಭಾಗಗಳನ್ನು ಸ್ಪಷ್ಟಮಾಡಬಹುದು.


ಸ್ವಯಂ ಮೌಲ್ಯಮಾಪನೆಗೆ ಅನುಸರಿಸಬೇಕಾದ ನಿಯಮಗಳು

Checking Manual :: ಸ್ವಯಂ ಮೌಲ್ಯಮಾಪನೆಗೆ ಅನುಸರಿಸಬೇಕಾದ ನಿಯಮಗಳು

ಅನುವಾದದ ಗುಣಮಟ್ಟದ ಸ್ವಯಂ ಮೌಲ್ಯಮಾಪನ

ಅನುವಾದದ ಗುಣಮಟ್ಟವನ್ನು ಸಭೆ ವಿಶ್ವಾಸಾರ್ಹವಾಗಿ ನಿರ್ಧರಿಸುವ ಪ್ರಕ್ರಿಯೆಯನ್ನು ವಿವರಿಸುವುದು ಈ ವಿಭಾಗದ ಉದ್ದೇಶವಾಗಿದೆ. ಬಳಸಬಹುದಾದ ಪ್ರತಿಯೊಂದು ಕಾಲ್ಪನಿಯ ಪರಿಶೀಲನೆಯನ್ನು ವಿವರಿಸುವ ಬದಲಿಗೆ, ಈ ಕೆಳಗಿನ ಮೌಲ್ಯಮಾಪನವು ಅನುವಾದವನ್ನು ಪರಿಶೀಲಿಸುವ ಕೆಲವು ಪ್ರಮುಖ ತಂತ್ರಗಳನ್ನು ಸೂಚಿಸುವ ಉದ್ದೇಶವನ್ನು ಹೊಂದಿದೆ. ಅಂತಿಮವಾಗಿ ಯಾವ ರೀತಿಯ ಪರಿಶೀಲನೆ ಬಳಸಲಾಗುತ್ತದೆ, ಯಾವಾಗ ಮತ್ತು ಯಾರಿಂದ ಎಂಬುವುದನ್ನು ಸಭೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.

ಮೌಲ್ಯಮಾಪನವನ್ನು ಹೇಗೆ ಬಳಸುವುದು

ಈ ಮೌಲ್ಯಮಾಪನ ವಿಧಾನವು ಎರಡು ರೀತಿಯ ಹೇಳಿಕೆಯನ್ನು ಬಳಸಿಕೊಳ್ಳುತ್ತದೆ. ಕೆಲವು “ಹೌದು/ಇಲ್ಲ” ಹೇಳಿಕೆಗಳಾಗಿವೆ, ಅಲ್ಲಿ ನಕಾರಾತ್ಮಕ ಪ್ರತಿಕ್ರಿಯೆಯು ಪರಿಹರಿಸಬೇಕಾದ ಸಮಸ್ಯೆಯನ್ನು ಸೂಚಿಸುತ್ತದೆ. ಇತರ ವಿಭಾಗಗಳು ಸಮಾನ-ತೂಕದ ವಿಧಾನವನ್ನು ಬಳಸುತ್ತವೆ, ಅದು ಅನುವಾದ ತಂಡಗಳಿಗೆ ಅನುವಾದದ ಬಗ್ಗೆ ಹೇಳಿಕೆಯನ್ನು ನೀಡುತ್ತದೆ. ಪ್ರತಿ ಹೇಳಿಕೆಯನ್ನು 0-2 ಪ್ರಮಾಣದಲ್ಲಿ ಪರಿಶೀಲನೆ ಮಾಡುವ ವ್ಯಕ್ತಿಯು(ಅನುವಾದದ ತಂಡದಿಂದ ಪ್ರಾರಂಭಿಸಿ) ಸ್ಕೋರ್ ಮಾಡಬೇಕು.

0 -ಒಪ್ಪದಿರುವುದು

1 -ಸ್ವಲ್ಪಮಟ್ಟಿಗೆ ಒಪ್ಪುತ್ತೇನೆ

2 -ಬಲವಾಗಿ ಒಪ್ಪುತ್ತೇನೆ

ಮಿಮರ್ಶೆಯ ಕೊನೆಯಲ್ಲಿ, ಒಂದು ವಿಭಾಗದಲ್ಲಿನ ಎಲ್ಲಾ ಪ್ರತಿಕ್ರಿಯೆಗಳ ಒಟ್ಟು ಮೌಲ್ಯವನ್ನು ಸೇರಿಸಬೇಕು ಮತ್ತು ಪ್ರತಿಕ್ರಿಯೆಗಳು ಅನುವಾದದ ಸ್ಥಿತಿಯನ್ನು ನಿಖಾರವಾಗಿ ಪ್ರತಿಬಿಂಬಿಸಿದರೆ, ಈ ಮೌಲ್ಯವು ಅನುವಾದಿತ ಅಧ್ಯಾಯವು ಉತ್ತಮ ಗುಣಮಟ್ಟದ್ದಾಗಿದೆ ಎಂಬ ಸಂಭವನೀತೆಯ ಅಂದಾಜನ್ನು ವಿಮರ್ಶಕರಿಗೆ ನೀಡುತ್ತದೆ. ಅನುಸರಿಸಬೇಕಾದ ನಿಯಮಗಳನ್ನು ಸರಳವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಎಲ್ಲಿ ಕೆಲಸದ ಸುಧಾರಣೆ ಅಗತ್ಯವಿದೆ ಎಂಬುವುದನ್ನು ವಸ್ತುನಿಷ್ಠ ವಿಧಾನದೊಂದಿಗೆ ವಿಮರ್ಶಕರಿಗೆ ಒದಗಿಸುತ್ತದೆ. *ಉದಾಹರಣೆಗೆ, ಅನುವಾದವು “ನಿಖರತೆ”ಯಲ್ಲಿ ಉತ್ತಮವಾಗಿದ್ದರೂ “ಸ್ವಾಭಾವಿಕತೆ” ಮತ್ತು “ಸ್ಪಷ್ಟತೆ” ಯಲ್ಲಿ ಕಳಪೆಯಾಗಿದ್ದರೆ, ಅನುವಾದ ತಂಡವು ಹೆಚ್ಚಿನ ಪರಿಶೀಲನೆಯನ್ನು ಮಾಡಬೇಕಾಗುತ್ತದೆ. *

ಅನುವಾದಿತ ಸತ್ಯವೇದದ ವಿಷಯದ ಪ್ರತಿ ಅಧ್ಯಾಯಕ್ಕೂ ಅನುಸರಿಸಬೇಕಾದ ನಿಯಮಗಳು ಬಳಸಲು ಉದ್ದೇಶಿಸಲಾಗಿದೆ. ಅನುವಾದ ತಂಡವು ಇತರ ಪರಿಶೀಲನೆ ಮಾಡಿದ ನಂತರ ಪ್ರತಿ ಅಧ್ಯಾಯದ ಮೌಲ್ಯಮಾಪನವನ್ನು ಮಾಡಬೇಕು, ತದನಂತರ 2ನೆಯ ಹಂತದ ಪರೀಕ್ಷಿಕರು ಇದನ್ನು ಮತ್ತೆ ಮಾಡಬೇಕು, ಮತ್ತು ನಂತರ 3ನೆಯ ಹಂತದ ಪರೀಕ್ಷಿಕರು ಈ ಪರಿಶೀಲನಾಪಟ್ಟಿಯೊಂದಿಗೆ ಅನುವಾದವನ್ನು ಪ್ರವೇಶಿಸಬಹುದು. ಪ್ರತಿಹಂತದಲ್ಲೂ ಅಧ್ಯಾಯದ ಹೆಚ್ಚು ವಿವರವಾದ ಮತ್ತು ವ್ಯಾಪಕವಾದ ಪರಿಶೀಲನೆಯನ್ನು ಸಭೆ ನಿರ್ವಹಿಸುವುದರಿಂದ, ಅಧ್ಯಾಯದ ಅಂಶಗಳನ್ನು ಮೊದಲ ನಾಲ್ಕು ವಿಭಾಗಗಳಿಂದ (ಅವಲೋಕನ, ನೈಸರ್ಗಿಕತೆ, ಸ್ಪಷ್ಟತೆ,ನಿಖರತೆ) ನವೀಕರಿಸಬೇಕು, ಅನುವಾದ ಹೇಗೆ ಸುಧಾರಿಸಿದೆ ಎಂಬುವುದನ್ನು ನೋಡಲು ಸಭೆ ಮತ್ತು ಸಮಾಜಕ್ಕೆ ಅವಕಾಶ ಮಾಡಿಕೊಡುತ್ತದೆ.

####ಸ್ವಯಂ ಮೌಲ್ಯಮಾಪನ

ಪ್ರಕ್ರಿಯೆಯನ್ನು ಐದು ಭಾಗವಾಗಿ ವಿಂಗಡಿಸಲಾಗಿದೆ: ಅವಲೋಕನ (ಅನುವಾದದ ಬಗ್ಗೆ ಮಾಹಿತಿ), ಸ್ವಾಭಾವಿಕತೆ,ಸ್ಪಷ್ಟತೆ,ನಿಖರತೆ, ಮತ್ತು ಸಭೆಯ ಅನುಮೋದನೆ.

1. ಅವಲೋಕನ

*ಕೆಳಗಿನ ಪ್ರತಿ ಹೇಳಿಕೆಗೆ “ಇಲ್ಲ” ಅಥವ “ಹೌದು” ಎಂದು ವೃತ್ತ ಮಾಡಿರಿ. *

ಇಲ್ಲ/ಹೌದು ಈ ಅನುವಾದವು ಅರ್ಥ ಆಧಾರಿತ ಅನುವಾದವಾಗಿದ್ದು, ಮೂಲ್ಯ ಪಠ್ಯದ ಅರ್ಥವನ್ನು ಉದ್ದೇಶಿತ ಭಾಷೆಯಲ್ಲಿ ನೈಸರ್ಗಿಕ, ಸ್ಪಷ್ಟ ಮತ್ತು ನಿಖಾರವಾದ ರೀತಿಯಲ್ಲಿ ತಿಳಿಸಲು ಪ್ರಯತ್ನಿಸುತ್ತದೆ.

ಇಲ್ಲ/ಹೌದು ಅನುವಾದವನ್ನು ಪರಿಶೀಲಿಸುವಲ್ಲಿ ತೊಡಗಿರುವವರು ಉದ್ದೇಶಿತ ಭಾಷೆಯ ಪ್ರಥಮ -ಭಾಷೆ ಮಾತನಾಡುವವರಗಿರುತ್ತಾರೆ

ಇಲ್ಲ/ಹೌದು ಈ ಅಧ್ಯಾಯದ ಅನುವಾದವು ನಂಬಿಕೆಯ ಹೇಳಿಕೆಯೊಂದಿಗೆ ಒಪ್ಪಂದದಲ್ಲಿರುತ್ತದೆ .

ಇಲ್ಲ/ಹೌದು ಈ ಅಧ್ಯಾಯದ ಅನುವಾದವನ್ನು ಅನುವಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮಾಡಲಾಗಿದೆ

2.ಸ್ವಾಭಾವಿಕತೆ:”ಇದು ನನ್ನ ಭಾಷೆ”

*ಕೆಳಗಿನ ಪ್ರತಿ ಹೇಳಿಕೆಗೆ “0” ಅಥವಾ “1” ಅಥವಾ “2” ವೃತ್ತಿಸಿ. *

ಹೆಚ್ಚಿನ ಸಮಾಜಿಕ ಪರಿಶೀಲನೆ ಮಾಡುವ ಮೂಲಕ ಈ ಭಾಗವನ್ನು ಬಲಪಡಿಸಬಹುದು.(ನೋಡಿ [ಸಮಾಜಿಕ ಭಾಷ ಪರಿಶೀಲನೆ] (…/language-community-check/01.md))

0 1 2 ಈ ಭಾಷೆಯನ್ನು ಮಾತನಾಡುವವರು ಮತ್ತು ಈ ಅಧ್ಯಾಯವನ್ನು ಕೇಳಿದವರು, ಇದನ್ನು ಭಾಷೆಯ ಸರಿಯಾದ ರೂಪವನ್ನು ಬಳಸಿ ಅನುವಾದಿಸಲಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ.

0 1 2 ಈ ಅಧ್ಯಾಯದಲ್ಲಿ ಬಳಸಲಾದ ಪ್ರಮುಖ ಪದಗಳು ಈ ಸಂಸ್ಕೃತಿಗೆ ಸರಿಹೊಂದುತ್ತದೆ ಮತ್ತು ಸ್ವೀಕಾರಾರ್ಹವಾಗಿದೆ ಎಂದು ಈ ಭಾಷೆಯನ್ನು ಮಾತನಾಡುವವರು ಒಪ್ಪಿಕೊಳ್ಳುತ್ತಾರೆ.

0 1 2 ಈ ಅಧ್ಯಾಯದಲ್ಲಿನ ವಿವರಣೆಗಳು ಅಥವಾ ಕಥೆಗಳು ಈ ಭಾಷೆಯನ್ನು ಮಾತನಾಡುವ ಜನರಿಗೆ ಅರ್ಥಮಾಡಿಕೊಳ್ಳಲು ಸುಲಭವಾಗಿದೆ.

0 1 2 ಈ ಅಧ್ಯಾಯದಲ್ಲಿನ ಪಠ್ಯದ ವಾಕ್ಯ ರಚನೆ ಮತ್ತು ಕ್ರಮವು ಸ್ವಾಭಾವಿಕವಾಗಿದೆ ಮತ್ತು ಕ್ರಮಬದ್ಧವಾಗಿರುತ್ತದೆ ಎಂದು ಈ ಭಾಷೆಯನ್ನು ಮಾತನಾಡುವವರು ಒಪ್ಪಿಕೊಳ್ಳುತ್ತಾರೆ.

0 1 2 ಸ್ವಾಭಾವಿಕತೆಗೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ಅನುವಾದವನ್ನು ರಚಿಸುವಲ್ಲಿ ನೇರವಾಗಿ ಭಾಗಿಯಾಗಿಲ್ಲದ ಸಮುದಾಯದ ಸದಸ್ಯರು ಸೇರಿದ್ದಾರೆ.

0 1 2 ಸ್ವಾಭಾವಿಕತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳನ್ನು, ಅಥವ ಸತ್ಯವೇದದ ಬಗ್ಗೆ ಪರಿಚಯವಿಲ್ಲದ ಕನಿಷ್ಠ ವಿಶ್ವಾಸಿಗಳನ್ನು ಸಹ ಒಳಗೊಂಡಿದೆ, ಆದ್ದರಿಂದ ಪಾಠ್ಯವನ್ನು ಕೇಳುವ ಮೊದಲು ಅದು ಏನನ್ನು ಸೂಚಿಸುತ್ತದೆ ಎಂದು ಅವರಿಗೆ ತಿಳಿದಿರುವುದಿಲ್ಲ.

0 1 2 ಸ್ವಾಭಾವಿಕತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯು ವಿವಿಧ ವಯಸ್ಸಿನ ಮಾತುಗಾರರನ್ನು ಒಳಗೊಂಡಿದೆ.

0 1 2 ಸ್ವಾಭಾವಿಕತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ಪುರುಷರು ಮತ್ತು ಮಹಿಳೆಯರನ್ನು ಸೇರಿದ್ದಾರೆ.

3.ಸ್ಪಷ್ಟತೆ: ”ಅರ್ಥ ಸ್ಪಷ್ಟವಾಗಿದೆ”

*ಕೆಳಗಿನ ಪ್ರತಿ ಹೇಳಿಕೆಗೆ ”0” ಅಥವ “1” ಅಥವ ”2” ವೃತ್ತಿಸಿ. *

ಹೆಚ್ಚಿನ ಸಮಾಜಿಕ ಪರಿಶೀಲನೆ ಮಾಡುವ ಮೂಲಕ ಈ ವಿಭಾಗವನ್ನು ಬಲಪಡಿಸಬಹುದು. (ನೋಡಿಸಮಾಜಿಕ ಭಾಷ ಪರಿಶೀಲನೆ)

0 1 2 ಸ್ಥಳೀಯ ಭಾಷಿಕರು ಅರ್ಥಮಾಡಿಕೊಳ್ಳಲು ಸುಲಭವಾದ ಭಾಷೆಯನ್ನು ಬಳಸಿ ಈ ಅಧ್ಯಾಯವನ್ನು ಅನುವಾದಿಸಲಾಗಿದೆ.

0 1 2 ಈ ಅಧ್ಯಾಯದಲ್ಲಿನ ಹೆಸರುಗಳು, ಸ್ಥಳಗಳು ಮತ್ತು ಕ್ರಿಯಪದಗಳ ಅನುವಾದವು ಸರಿಯಾಗಿದೆ ಎಂದು ಈ ಭಾಷೆಯ ಭಾಷಿಕರು ಒಪ್ಪುತ್ತಾರೆ.

0 1 2 ಈ ಅಧ್ಯಾಯದಲ್ಲಿನ ಅಲಂಕಾರಗಳು ಈ ಸಂಸ್ಕೃತಿಯ ಜನರಿಗೆ ಅರ್ಥವಾಗುವ ಹಾಗೆ ಇರುತ್ತದೆ.

0 1 2 ಈ ಅಧ್ಯಾಯವನ್ನು ಸರಿಯಾದ ಅರ್ಥವನ್ನು ನೀಡುವ ರೀತಿಯಲ್ಲಿ ರಚಿಸಲಾಗಿದೆ ಎಂದು ಈ ಭಾಷೆಯ ಭಾಷಿಕರು ಒಪ್ಪುತ್ತಾರೆ.

0 1 2 ಸ್ಪಷ್ಟತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ಈ ಅಧ್ಯಾಯದ ಅನುವಾದವನ್ನು ರಚಿಸುವಲ್ಲಿ ನೇರವಾಗಿ ಭಾಗಿಯಾಗಿಲ್ಲದ ಸಮುದಾಯದ ಸದಸ್ಯರು ಸೇರಿದ್ದಾರೆ.

** 0 1 2** ಸ್ಪಷ್ಟತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳನ್ನು, ಅಥವ ಸತ್ಯವೇದದ ಬಗ್ಗೆ ಪರಿಚಯವಿಲ್ಲದ ಕನಿಷ್ಠ ವಿಶ್ವಾಸಿಗಳನ್ನು ಸಹ ಒಳಗೊಂಡಿದೆ, ಆದ್ದರಿಂದ ಪಾಠ್ಯವನ್ನು ಕೇಳುವ ಮೊದಲು ಅದು ಏನನ್ನು ಸೂಚಿಸುತ್ತದೆ ಎಂದು

0 1 2 ಸ್ಪಷ್ಟತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯು ವಿವಿಧ ವಯಸ್ಸಿನ ಮಾತುಗಾರರನ್ನು ಒಳಗೊಂಡಿದೆ.

0 1 2 ಸ್ಪಷ್ಟತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ಪುರುಷರು ಮತ್ತು ಮಹಿಳೆಯರನ್ನು ಸೇರಿದ್ದಾರೆ.

4.ನಿಖರತೆ:”ಅನುವಾದವು ಮೂಲ ಪಠ್ಯವನ್ನು ಸಂಪರ್ಕಿಸುತ್ತದೆ”

  • ಕೆಳಗಿನ ಪ್ರತಿ ಹೇಳಿಕೆಗೆ ”0” ಅಥವ “1” ಅಥವ ”2” ವೃತ್ತಿಸಿ *

ಹೆಚ್ಚಿನ ಸಮಾಜಿಕ ಪರಿಶೀಲನೆ ಮಾಡುವ ಮೂಲಕ ಈ ವಿಭಾಗವನ್ನು ಬಲಪಡಿಸಬಹುದು. (ನೋಡಿಸಮಾಜಿಕ ಭಾಷ ಪರಿಶೀಲನೆ)

0 1 2 ಅನುವಾದದಲ್ಲಿ ಎಲ್ಲಾ ಪದಗಳು ಇರುವುದನ್ನು ಖಚಿತಪಡಿಸಿಕೊಳ್ಳಲು ಈ ಅಧ್ಯಾಯದ ಮೂಲ ಪಠ್ಯದಲ್ಲಿನ ಎಲ್ಲಾ ಪ್ರಮುಖ ಪದಗಳ ಸಂಪೂರ್ಣ ಪಟ್ಟಿಯನ್ನು ಬಳಸಲಾಗುತ್ತದೆ.

0 1 2 ಈ ಅಧ್ಯಾಯದಲ್ಲಿ ಎಲ್ಲಾ ಪ್ರಮುಖ ಪದಗಳನ್ನು ಸರಿಯಾಗಿ ಅನುವಾದಿಸಲಾಗಿದೆ.

0 1 2 ಈ ಅಧ್ಯಾಯದಲ್ಲಿನ ಎಲ್ಲಾ ಪ್ರಮುಖ ಪದಗಳನ್ನು ಹಾಗು ಇತರ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಪದಗಳನ್ನು ಏಕರೂಪವಾಗಿ ಅನುವಾದಿಸಲಾಗಿದೆ.

0 1 2 ಟಿಪಣ್ಣಿಗಳು ಮತ್ತು ಅನುವಾದ ಪದಗಳನ್ನು ಒಳಗೊಂಡಂತೆ ಅನುವಾದ ಸವಾಲುಗಳನ್ನು ಗುರುತಿಸಲು ಮತ್ತು ಪರಿಹರಿಸಲು ಇಡೀ ಅಧ್ಯಾಯದಲ್ಲಿ ವೇದಾಭ್ಯಾಸಕ್ಕೆ ಸಂಬಂಧಿಸಿದ ಸಂಪನ್ಮೂಲಗಳನ್ನು ಬಳಸಲಾಗುತ್ತದೆ.

0 1 2 ಮೂಲ ಪಠ್ಯದಲ್ಲಿನ ಐತಿಹಾಸಿಕ ವಿವರಗಳನ್ನು (ಹೆಸರುಗಳು, ಸ್ಥಳಗಳು ಮತ್ತು ಘಟಣೆಗಳನ್ನು) ಅನುವಾದದಲ್ಲಿ ಸಂರಕ್ಷಿಸಲಾಗಿದೆ.

0 1 2 ಅನುವಾದಿತ ಅಧ್ಯಾಯದಲ್ಲಿನ ಅಲಂಕಾರಗಳ ಅರ್ಥವನ್ನು ಮೂಲ ಉದ್ದಶಕ್ಕೆ ಹೋಲಿಸಲಾಗಿದೆ ಮತ್ತು ಜೋಡಿಸಲಾಗಿದೆ.*

0 1 2 ಅನುವಾದಿಸುವಾಗ ಭಾಗಿಯಾಗದ ಸ್ಥಳಿಯ ಭಾಷಿಕರಿಂದ ಅನುವಾದವನ್ನು ಪರೀಕ್ಷಿಸಲಾಗಿದೆ ಮತ್ತು ಅನುವಾದವು ಮೂಲ ಪಠ್ಯದ ಉದ್ದೇಶಿತ ಅರ್ಥವನ್ನು ನಿಖರವಾಗಿ ಸಂಪರ್ಕಿಸುತ್ತದೆ ಎಂದು ಅವರು ಒಪ್ಪಿಕೊಂಡಿದ್ದಾರೆ.

0 1 2 ಈ ಅಧ್ಯಾಯದ ಅನುವಾದವನ್ನು ಕನಿಷ್ಠ ಎರಡು ಮೂಲ ಪಠ್ಯಗಳಿಗೆ ಹೋಲಿಸಲಾಗಿದೆ.

0 1 2 ಈ ಅಧ್ಯಾಯದಲ್ಲಿನ ಯಾವುದೇ ಅರ್ಥದ ಬಗ್ಗೆ ಎಲ್ಲಾ ಪ್ರಶ್ನೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಪರಿಹಾರಿಸಲಾಗಿದೆ.

0 1 2 ಪದಗಳ ಸರಿಯಾದ ವಾಖ್ಯಾನ ಮತ್ತು ಉದ್ದೇಶವನ್ನು ಪರೀಕ್ಷಿಸಲು ಈ ಅಧ್ಯಾಯದ ಅನುವಾದವನ್ನು ಮೂಲ ಪಠ್ಯಕ್ಕೆ (ಹೀಬ್ರೂ, ಗ್ರೀಕ್, ಅರಾಮಿಕ್) ಹೋಲಿಸಲಾಗಿದೆ.

5.ಸಭೆಯ ಅನುಮೊದನೆ: ”ಸ್ವಾಭಾವಿಕತೆ, ಸ್ಪಷ್ಟತೆ, ಮತ್ತು ಅನುವಾದದ ನಿಖರತೆಯನ್ನು ಆ ಭಾಷೆ ಮಾತನಾಡುವ ಸಭೆಯು ಅನುಮೋದಿಸಿದೆ”

*ಹೆಚ್ಚಿನ ಸಮಾಜಿಕ ಪರಿಶೀಲನೆ ಮಾಡುವ ಮೂಲಕ ಈ ವಿಭಾಗವನ್ನು ಬಲಪಡಿಸಬಹುದು. (ನೋಡಿಸಮಾಜಿಕ ಭಾಷ ಪರಿಶೀಲನೆ) *

ಇಲ್ಲಾ/ಹೌದು ಈ ಅನುವಾದವನ್ನು ಪರಿಶೀಲಿಸಿದಂತ ಸಭಾ ನಾಯಕರು ಉದ್ದೇಶಿತ ಭಾಷೆಯ ಸ್ಥಳಿಯ ಭಾಷಿಕರು ಹಾಗೆಯೇ ಮೂಲ ಪಠ್ಯ ಲಭ್ಯವಿರುವ ಭಾಷೆಗಳನ್ನು ಸಹ ಚೆನ್ನಾಗಿ ಅರ್ಥಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.

ಇಲ್ಲಾ/ಹೌದು ಭಾಷಾ ಸಮುದಾಯದ ಜನರು, ಪುರುಷರು ಮತ್ತು ಮಹಿಳೆಯರ, ವೃದ್ಧರು ಮತ್ತು ಯುವಕರು ಈ ಅಧ್ಯಾಯದ ಅನುವಾದವನ್ನು ಪರಿಶೀಲಿಸಿದ್ದಾರೆ ಮತ್ತು ಅದು ಸಹಜ ಹಾಗು ಸ್ಪಷ್ಟವಾಗಿದೆ ಎಂದು ಒಪ್ಪುತ್ತಾರೆ.

ಇಲ್ಲಾ/ಹೌದು ಎರಡು ವಿಭಿನ್ನ ಸಭೆಯ ಸಭಾ ನಾಯಕರು ಈ ಅದ್ಯಾಯದ ಅನುವಾದವನ್ನು ಪರಿಶೀಲಿಸಿದ್ದಾರೆ ಮತ್ತು ನಿಖರವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಇಲ್ಲಾ/ಹೌದು ಕನಿಷ್ಠ ಎರಡು ವಿಭಿನ್ನ ಸಭೆಯ ನಾಯಕರು ಅಥವ ಅವರ ಪ್ರತಿನಿಧಿಗಳು ಈ ಅಧ್ಯಾಯದ ಅನುವಾದವನ್ನು ಪರಿಶೀಲಿಸಿದ್ದಾರೆ ಮತ್ತು ಈ ಭಾಷೆಯಲ್ಲಿ ಸತ್ಯವೇದದ ಈ ಅಧ್ಯಾಯವು ನೆಚ್ಚಿನ ಅನುವಾದವಾಗಿದೆ ಎಂದು ದೃಢಪಡಿಸಿದ್ದಾರೆ.


ಸ್ವಾಭಾವಿಕ ಅನುವಾದ

Checking Manual :: ಸ್ವಾಭಾವಿಕ ಅನುವಾದ

ಸ್ವಾಭಾವಿಕ ಅನುವಾದ

ಸತ್ಯವೇದವನ್ನು ಸ್ವಾಭಾವಿಕವಾಗಿ ಅನುವಾದ ಮಾಡುವುದು ಎಂದರೆ:

ಅನುವಾದ ಮಾಡಿರುವುದು ಒಬ್ಬ ವಿದೇಶೀಯನು ಮಾಡಿರುವಂತೆ ಅಲ್ಲ ಲಕ್ಷ್ಯ ಭಾಷೆಯ ಸಮಾಜದ ಒಬ್ಬ ಸದಸ್ಯರು ಬರೆದಂತೆ ಇರಬೇಕು. ಲಕ್ಷ್ಯ ಭಾಷೆಯ ಮಾತುಗಾರರು ಅದನ್ನು ಹೇಳಿದಂತೆಯೇ ಅನುವಾದವು ವಿಷಯಗಳನ್ನು ಹೇಳಬೇಕು. ಅನುವಾದ ಸ್ವಾಭಾವಿಕವಾಗಿದ್ದಾಗ, ಅರ್ಥಮಾಡಿಕೊಳ್ಳುವುದು ಸುಲಭವಾಗಿರುತ್ತದೆ.

ಅನುವಾದ ಸ್ವಾಭಾವಿಕವಗಿದ್ದೆಯೋ ಎಂದು ಪರೀಕ್ಷಿಸಲು, ಮೂಲ ಭಾಷೆಯೊಂದಿಗೆ ಅದನ್ನು ಹೋಲಿಸುವುದು ಸಹಾಯಕರವಾಗಿರುವದಿಲ್ಲ. ಸ್ವಾಭಾವಿಕ ಈ ಪರೀಕ್ಷೆಯಲ್ಲಿ, ಯಾರು ಮೂಲ ಭಾಷೆಯಲ್ಲಿ ಸತ್ಯವೇದವನ್ನು ನೋಡಬಾರದು. ನಿಖರತೆಗಾಗಿ ಪರೀಕ್ಷೆ ಮತ್ತು ಇನ್ನಿತರ ಪರೀಕ್ಷೆಗಳಿಗಾಗಿ ಜನರು ಮೂಲ ಭಾಷೆಯಲ್ಲಿ ಸತ್ಯವೇದವನ್ನು ನೋಡುತ್ತಾರೆ ಆದರೆ ಈ ಪರೀಕ್ಷೆಯಲ್ಲಿ ನೋಡುವುದಿಲ್ಲ.

ಅನುವಾದ ಸ್ವಾಭಾವಿಕವಾಗಿರಲು ನೀವು ಅಥವಾ ಭಾಷಾ ಸಮುದಾಯದ ಬೇರೊಬ್ಬರು ಅದನ್ನು ಗಟ್ಟಿಯಾಗಿ ಓದಬೇಕು ಅಥವಾ ಅದರ ರಿಕಾರ್ಡಿಂಗನ್ನು ನುಡಿಸಬೇಕು. ಬರವಣಿಗೆಯಲ್ಲಿ ಅದನ್ನು ನೋಡುತ್ತಿರುವಾಗ ಅನುವಾದದ ಸ್ವಾಭಾವಿಕತ್ವವನ್ನು ಪರೀಕ್ಷಿಸುವುದು ಕಷ್ಟಕರವಾಗಿರುತ್ತದೆ. ಆದರೆ ನಿಮ್ಮ ಜನರು ಭಾಷೆಯನ್ನು ಕೇಳಿದಾಗ, ಅದು ಸರಿಯಾಗಿದ್ದೆಯೋ ಇಲ್ಲವೋ ಎಂದು ಅವರು ತಕ್ಷಣವೇ ತಿಳಿಯುತ್ತಾರೆ.

ಲಕ್ಷ್ಯ ಭಾಷೆಯನ್ನು ಮಾತಾಡುವ ಮೊತ್ತೊಬ್ಬ ವ್ಯಕ್ತಿಗೆ ಅಥವಾ ಜನರ ಗುಂಪಿಗೆ ಅದನ್ನು ನೀವು ಗಟ್ಟಿಯಾಗಿ ಓದಿ ಹೇಳಬಹುದು. ನೀವು ಅದನ್ನು ಓದುವುದಕ್ಕೆ ಪ್ರಾರಂಭಿಸುವುದಕ್ಕಿಂತ ಮೊದಲು, ನಿಮ್ಮ ಭಾಷೆಯ ಸಮುದಾಯದಲ್ಲಿ ಕೇಳದಿರುವ ಮಾತುಗಳನ್ನು ಅವರು ಕೇಳಿಸಿಕೊಂಡಾಗ ನೀವು ಓದುವುದನ್ನು ನಿಲ್ಲಿಸುವಂತೆ ಅದನ್ನು ಕೇಳುತ್ತಿರುವ ಜನರಿಗೆ ಸೂಚಿಸಿರಿ. ಯಾರಾದರು ನಿಮ್ಮನ್ನು ನಿಲ್ಲಿಸಿದರೆ, ಆ ಸಂಗತಿಯನ್ನು ಇನ್ನು ಸ್ವಾಭಾವಿಕವಾಗಿ ಯಾವ ರೀತಿಯಲ್ಲಿ ಹೇಳಬಹುದೆಂದು ನೀವು ಒಟ್ಟಿಗೆ ಚರ್ಚೆ ಮಾಡಬಹುದು.

ಅನುವಾದ ಕುರಿತು ಮಾತಾಡುತ್ತಿರುವಾಗ, ನಿಮ್ಮ ಗ್ರಾಮದಲ್ಲಿ ಇದೆ ರೀತಿಯದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಮಾತಾಡುತ್ತಾರೆಂದು ಒಂದು ಸನ್ನಿವೇಶವನ್ನು ನೆನಪು ಮಾಡಿಕೊಳ್ಳುವುದು ಸಹಾಯಕರವಾಗಿರುತ್ತದೆ. ಆ ವಿಷಯವನ್ನು ಕುರಿತು ನಿಮಗೆ ತಿಳಿದಿರುವ ಜನರು ಹೇಗೆ ಮಾತಾಡುತ್ತಾರೆಂದು ಊಹಿಸಿಕೊಳ್ಳಿ ಮತ್ತು ಗಟ್ಟಿಯಾಗಿ ಅದೇ ರೀತಿಯಲ್ಲಿ ಹೇಳಿ. ಆ ರೀತಿಯಲ್ಲಿ ಹೇಳಿರುವುದು ಒಳ್ಳೆಯದೆಂದು ಮತ್ತು ಸ್ವಾಭಾವಿಕವಾದ ರೀತಿಯೆಂದು ಬೇರೆಯವರು ಅಂಗೀಕರಿಸಿದರೆ, ಅನುವಾದವನ್ನು ಆ ರೀತಿಯಲ್ಲೇ ಮಾಡಿರಿ.

ಅನುವಾದ ಭಾಗವನ್ನು ಹಲವಾರು ಬಾರಿ ಓದುವುದು ಅಥವಾ ನುಡಿಸುವುದು ಸಹ ಸಹಾಯಕರವಾಗಿರುತ್ತದೆ. ಅವರು ಕೇಳುತ್ತಿರುವ ಪ್ರತಿಯೊಂದು ಬಾರಿ ಅದರಲ್ಲಿ ಅವರು ವ್ಯತ್ಯಾಸವನ್ನು ಕಾಣಬಹುದು – ಆ ಸಂಗತಿಗಳನ್ನು ಇನ್ನು ಸ್ವಾಭಾವಿಕವಾಗಿ ಹೇಳಬಹುದು.


ಹಿಂದಿನ ಅನುವಾದ

Checking Manual :: ಹಿಂದಿನ ಅನುವಾದ

ಹಿಂದಿನ ಅನುವಾದ ಎಂದರೇನು?

ಹಿಂದಿನ ಅನುವಾದವು ಸ್ಥಳಿಯ ಉದ್ದೇಶಿತ ಭಾಷೆಯಿಂದ (OL) ಸತ್ಯವೇದದ ಪಠ್ಯವನ್ನು ವಿಶಾಲವಾಗಿ ತಿಳಿಸುವ ಭಾಷೆಗೆ (GL) ಅನುವಾದಿಸುವುದು. ಇದನ್ನು “ಹಿಂದಿನ ಅನುವಾದ” ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಸ್ಥಳಿಯ ಉದ್ದೇಶಿತ ಭಾಷಾ ಅನುವಾದವನ್ನು ರಚಿಸಲು ಮಾಡಿದ್ದಕ್ಕಿಂತ ವಿರುದ್ಧ ದಿಕ್ಕಿನಲ್ಲಿರುವ ಅನುವಾದವಾಗಿದೆ. ಉದ್ದೇಶಿತ ಭಾಷೆ ಮಾತನಾಡದ ಯಾರಿಗಾದರು ಉದ್ದೇಶ ಭಾಷ ಅನುವಾದ ಏನೆಂದು ತಿಳಿಯಲು ಅವಕಶ ನೀಡುವುದೇ ಹಿಂದಿನ ಅನುವಾದದ ಉದ್ದೆಶವಾಗಿದೆ.

ಹಿಂದಿನ ಅನುವಾದವನ್ನು ಸಂಪೂರ್ಣವಾಗಿ ಸಾಮಾನ್ಯ ಶೈಲಿಯಲ್ಲಿ ಮಾಡಲಾಗುವುದಿಲ್ಲ, ಆದಾಗ್ಯೂ, ಏಕೆಂದರೆ ಇದು ಅನುವಾದದ ಭಾಷೆಯಲ್ಲಿ ಸ್ವಭಾವಿಕತೆಯನ್ನು ಉದ್ದೇಶವಾಗಿ ಹೊಂದಿಲ್ಲ (ಈ ಸಂದರ್ಭದಲ್ಲಿ ಇದು ವಿಶಾಲವಾಗಿ ತಿಳಿಸುವ ಭಾಷೆಯಾಗಿದೆ). ಬದಲಾಗಿ, ಸ್ಥಳಿಯ ಭಾಷಾಂತರದ ಪದಗಳನ್ನು ಮತ್ತು ಅಭಿವ್ಯಕ್ತಿಯನ್ನು ಅಕ್ಷರಶಃ ರೀತಿಯಲ್ಲಿ ಪ್ರತಿನಿಧಿಸುವುಸು ಹಿಂದಿನ ಅನುವಾದದ ಗುರಿಯಾಗಿದೆ , ಆದರೆ ವ್ಯಾಪಕ ಸಂಪರ್ಕದ ಭಾಷೆಯ ವ್ಯಾಕರಣ ಮತ್ತು ಪದ ಕ್ರಮವನ್ನು ಸಹ ಬಳಸುತ್ತದೆ. ಈ ರೀತಿಯಾಗಿ, ಅನುವಾದ ಪರೀಕ್ಷಕನು ಉದ್ದೇಶಿತ ಭಾಷೆಯ ಪಠ್ಯದಲ್ಲಿನ ಪದಗಳನ್ನು ಸ್ಪಷ್ಟವಾಗಿ ನೋಡಬಹುದು ಮತ್ತು ಹಿಂದಿನ ಅನುವಾದವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಅದನ್ನು ವೇಗವಾಗಿ ಹಾಗು ಸುಲಭವಾಗಿ ಓದಬಹುದು.


ಹಿಂದಿನ ಅನುವಾದದ ಉದ್ದೇಶ

Checking Manual :: ಹಿಂದಿನ ಅನುವಾದದ ಉದ್ದೇಶ

####ಹಿಂದಿನ ಅನುವಾದ ಏಕೆ ಅಗತ್ಯ?

ಹಿಂದಿನ ಭಾಷಾಂತರದ ಉದ್ದೇಶವೆಂದರೆ, ಉದ್ದೇಶಿತ ಭಾಷೆಯನ್ನು ಅರ್ಥಮಾಡಿಕೊಳ್ಳದ ಸತ್ಯವೇದದ ಸಲಹೆಗಾರ ಅಥವಾ ಪರೀಕ್ಷಕನು ,ಅವನು ಅಥವ ಅವಳು ಉದ್ದೇಶಿತ ಭಾಷೆಯನ್ನು ಅರ್ಥಮಾಡಿಕೊಳ್ಳದಿದ್ದರೂ ಸಹ ಉದ್ದೇಶಿತ ಭಾಷಾ ಅನುವಾದದಲ್ಲಿ ಏನಿದೆ ಎಂಬುವುದನ್ನು ನೋಡಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ಪರೀಕ್ಷಕನು ಹಿಂದಿನ ಅನುವಾದವನ್ನು “ನೋಡಬಹುದು” ಮತ್ತು ಉದ್ದೇಶಿತ ಭಾಷೆಯನ್ನು ತಿಳಿಯದೆ ಉದ್ದೇಶಿತ ಭಾಷೆಯ ಅನುವಾದವನ್ನು ಪರಿಶೀಲಿಸಬಹುದು. ಆದುದರಿಂದ ಹಿಂದಿನ ಅನುವಾದದ ಭಾಷೆಯು, ಹಿಂದಿನಅನುವಾದವನ್ನು ಭಾಷಾಂತರ ಮಾಡುವ ವ್ಯಕ್ತಿಗು (ಹಿಂದಿನ ಅನುವಾದಕ) ಮತ್ತು ಪರೀಕ್ಷಿಕನು ವ್ಯಾಪಕ ಸಂಪರ್ಕಿಸುವ ಭಾಷೆಯಾಗಿರಬೇಕು. ಇದರರ್ಥ ಹಿಂದಿನ ಅನುವಾದಕರು ಉದ್ದೇಶಿತ ಭಾಷೆಯ ಪಠ್ಯವನ್ನು ಬಳಸಲಾದ ವ್ಯಾಪಕ ಸಂಪರ್ಕಿಸುವ ಅದೇ ಭಾಷೆಗೆ ಅನುವಾದಿಸಬೇಕಾಗುತ್ತದೆ.

ಕೆಲವು ಜನರು ಇದನ್ನು ಅನಗತ್ಯವೆಂದು ಪರಿಗಣಿಸಬಹುದು, ಏಕೆಂದರೆ ಸತ್ಯವೇದದ ಪಠ್ಯವು ಈಗಾಗಲೇ ಮೂಲ ಭಾಷೆಯಲ್ಲಿ ಅಸ್ತಿತ್ವದಲ್ಲಿದೆ. ಆದರೆ ಹಿಂದಿನ ಅನುವಾದದ ಉದ್ದೇಶವನ್ನು ನೆನಪಿನಲ್ಲಿಡಿ: ಉದ್ದೇಶಿತ ಭಾಷ ಅನುವಾದದಲ್ಲಿ ಏನು ಅಡಕವಾಗಿದೆ ಎಂದು ತಿಳಿದುಕೊಳ್ಳಲು ಪರೀಕ್ಷಕರಿಗೆ ಅನುಮತಿಸುವುದು. ಮೂಲ ಭಾಷೆಯ ಪಠ್ಯವನ್ನು ಓದುವುದರಿಂದ ಮಾತ್ರ ಉದ್ದೇಶಿತ ಭಾಷಾ ಅನುವಾದದಲ್ಲಿ ಏನಿದೆ ಎಂದು ನೋಡಲು ಪರಿಕ್ಷಕನಿಗೆ ಅನುಮತಿಸುವುದಿಲ್ಲ. ಆದ್ದರಿಂದ ಹಿಂದಿನ ಅನುವಾದಕನು ಹೊಸ ಅನುವಾದವನ್ನು ವ್ಯಾಪಕ ಸಂಪರ್ಕ ಭಾಷೆಯಲ್ಲಿ ಮತ್ತೆ ಮಾಡಬೇಕು. ಅದು ಉದ್ದೇಶಿತ ಭಾಷಾ ಅನುವಾದವನ್ನು ಮಾತ್ರ ಆಧರಿಸುತ್ತದೆ. ಈ ಕಾರಣಕ್ಕಾಗಿ,ಹಿಂದಿನ ಅನುವಾದ ಮಾಡಿರುವ ವ್ಯಕ್ತಿ ತನ್ನ ಹಿಂದಿನ ಅನುವಾದವನ್ನು ಮಾಡುವಾಗ ಮೂಲ ಭಾಷೆಯ ಪಠ್ಯವನ್ನು ನೋಡಲು ಸಾಧ್ಯವಿರುವುದಿಲ್ಲ, ಆದರೆ ಉದ್ದೇಶಿತ ಪಠ್ಯ ಮಾತ್ರ ನೋಡಲು ಸಾಧ್ಯ. ಈ ರೀತಿಯಲ್ಲಿ, ಉದ್ದೇಶಿತ ಭಾಷಾ ಅನುವಾದದಲ್ಲಿ ಇರುವ ಯಾವುದೇ ಸಮಸ್ಯೆವನ್ನು ಪರೀಕ್ಷಕನು ಗುರುತಿಸಬಹುದು ಮತ್ತು ಅದನ್ನು ಪರಿಹರಿಸಲು ಅನುವಾದಕರೊಂದಿಗೆ ಕೆಲಸ ಮಾಡಬಹುದು.

ಅನುವಾದವನ್ನು ಪರಿಶೀಲಿಸಲು ಪರೀಕ್ಷಕರು ಉದ್ದೇಶಿತ ಅನುವಾದವನ್ನು ಪರಿಶೀಲಿಸುವ ಮೊದಲೇ ಉದ್ದೇಶಿತ ಭಾಷೆಯನ್ನು ಸುಧಾರಿಸಲು ಹಿಂದಿನ ಅನುವಾದವು ತುಂಬಾ ಉಪಯುಕ್ತವಾಗಿದೆ. ಅನುವಾದ ತಂಡವು ಹಿಂದಿನ ಅನುವಾದವನ್ನು ಓದುವಾಗ, ಹಿಂದಿನ ಅನುವಾದಕರು ತಮ್ಮ ಅನುವಾದವನ್ನು ಹೇಗೆ ಅರ್ಥಮಾಡಿಕೊಂಡಿದ್ದಾರೆ ಎಂಬುವುದನ್ನು ಅವರು ನೋಡಬಹುದು. ಕೆಲವೊಮ್ಮೆ, ಅವರು ಉದ್ದೇಶಿಸಿದ್ದಕ್ಕಿಂತ ವಿಭಿನ್ನವಾದ ರೀತಿಯಲ್ಲಿ ಹಿಂದಿನ ಅನುವಾದಕರು ತಮ್ಮ ಅನುವಾದವನ್ನು ಅರ್ಥಮಾಡಿಕೊಂಡಿಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ, ಅವರು ಅನುವಾದವನ್ನು ಬದಲಾಯಿಸಬಹುದು ಇದರಿಂದ ಅವರು ಉದ್ದೇಶಿಸಿದ ಅರ್ಥವನ್ನು ಹೆಚ್ಚು ಸ್ಪಷ್ಟವಾಗಿ ತಿಳಿಸಬಹುದು. ಅನುವಾದ ತಂಡವು ಹಿಂದಿನ ಅನುವಾದವನ್ನು ಪರೀಕ್ಷಕರಿಗೆ ನೀಡುವ ಮೊದಲು ಅದನ್ನು ಬಳಸಲು ಸಾಧ್ಯವಾದಾಗ, ಅವರು ತಮ್ಮ ಅನುವಾದಕ್ಕೆ ಹಲವು ಸುಧಾರಣೆಗಳನ್ನು ಮಾಡಬಹುದು. ಅವರು ಹೀಗೆ ಮಾಡುವಾಗ, ಪರೀಕ್ಷಿಕರು ತಮ್ಮ ಪರೀಶೀಲನೆಯನ್ನು ಹೆಚ್ಚು ವೇಗವಾಗಿ ಮಾಡಬಹುದು, ಏಕೆಂದರೆ ಅನುವಾದ ತಂಡವು ಪರೀಕ್ಷಕನೊಂದಿಗೆ ಭೇಟಿಯಾಗುವ ಮೊದಲು ಅನುವಾದದಲ್ಲಿನ ಅನೇಕ ಸಮಸ್ಯೆಗಳನ್ನು ಸರಿಪಡಿಸಲಾಗುತ್ತದೆ.